diff --git a/PanjuMagazine_Data/article_1.txt b/PanjuMagazine_Data/article_1.txt new file mode 100644 index 0000000000000000000000000000000000000000..2bc6ec678ce12feed0d3f515c587f619a40e6989 --- /dev/null +++ b/PanjuMagazine_Data/article_1.txt @@ -0,0 +1,58 @@ +ಎರಡನೆಯ ಅಂಕದ ಮೊದಲನೆಯ ದೃಶ್ಯದಲ್ಲಿ ಅರಮನೆಯ ಹೆಬ್ಬಾಗಿಲ ಬಳಿ ಕಾವಲು ಕಾಯುತ್ತಾ ನಡುರಾತ್ರಿಯಲ್ಲಿ ಕೆಂಚಣ್ಣನಿರುವಾಗ ಹೊನ್ನಯ್ಯನೊಂದಿಗೆ ರಾಜಕುಮಾರ ಬಸವಯ್ಯ ಆಗಮಿಸುತ್ತಾನೆ. ಆ ಸಂದರ್ಭದ ಮದ್ಯರಾತ್ರಿಯ ಮೌನದಲ್ಲಿ ಬೆಳದಿಂಗಳ ಮಾಯೆಯನು ನೋಡಿ ಬಸವಯ್ಯನ ಮನಸ್ಸು ಸೌಂದರ್ಯೋಪಾಸನೆಯ ವರ್ಣನೆಯನ್ನು ಹೀಗೆ ಮಾಡುತ್ತಾನೆ : +ನೋಡಿದೋ ಎಂತಹ ಶಾಂತಿ ಕಡಲಾಡುತಿದೆ ! +ಎಂತಹ ಸೊಬಗು ಸುರೆಯಾಗಿಹುದು ಈ ನಮ್ಮ +ತಿರೆಯಲ್ಲಿ ! ಈ ಪ್ರಕೃತಿ ಸೌಂದರ್ಯವೆಮ್ಮನು +ಕೈಬೀಸಿ ಕರೆಯುತಿದೆ ಉತ್ತಮ ಪ್ರಪಂಚಕ್ಕೆ. +………………………………………………………. +ಸತ್ತಮೇಲೆಮೆಗೆ ಪುರಸತ್ತು ; +ಆದರೀ ಚೆಲ್ವು ಸಿಗುವುದೇ? ಯಾವನಿಗೆ ಗೊತ್ತು ? +ಮುಂತಾಗಿ ಮಾತಾಡುತ್ತಾ ಮೈಮರೆತಿರುವಾಗ ಭೂತವು ಬರುವುದನ್ನು ಕೆಂಚಣ್ಣ ನೋಡುತ್ತಾನೆ. ಹೊನ್ನಯ್ಯನು ಬಸವಯ್ಯನಿಗೆ ತೋರಿಸಲು ತನ್ನ ತಂದೆಯ ಆಕಾರವೇ ಬಂದು ಎದುರು ನಿಂತಿರುವುದನ್ನು ಕಂಡು ಭಾವೋದ್ವೇಗಗೊಂಡು, +ಶಿವಶಿವಾ ಕಾಪಾಡು ! +ದೆವ್ವವೋ ? ದೇವತೆಯೋ ? ಯಾರಾದರಾಗಿರು ! +ಶುಭವು ನಿನ್ನುದ್ದೇಶವೋ ? ಅಶುಭವುದ್ದೇಶವೊ ? +ನಾನರಿಯೆ ! ಆಕಾರದಲಿ ನೀನು ನನ್ನ ಆ +ತಂದೆಯನೆ ಹೋಲುತಿಹೆ. ಅದರಿಮದೆ ನುಡಿಸುವೆ ; +ಬಸವೇಂದ್ರ ಭೂಮಿಪನೆ, ಓ ತಂದೆ, ಓ ದೊರೆಯೆ, +ಬಿದನೂರನಾಳಿದ ಸ್ವಾಮಿಯೇ, ಬೇಡುವೆನು ; +ಪಡಿನುಡಿಯನಿತ್ತೆನ್ನ ಮನದ ಸಮದೇಹವನು +ಪರಿಹರಿಸು. ಪುಣ್ಯಾತ್ಮನಾದ ನೀನಿಂತೇಕೆ +ದಿಕ್ಕಿರದ ಮಡಿದವನ ಆತ್ಮದಂದದಲಿ +ಪ್ರೇತರುಪದಿ ರಾತ್ರಿಯನು ಸುತ್ತುತ್ತಿರುವೆ ? +ಇದರರ್ಥವೇನರುಹು ! ದುಃಖದಿಂದೆನ್ನೆದೆ +ಸಿಡಿಯುತಿದೆ. ಓ ನನ್ನ ತಂದೆ, ಮಾತಾಡು ! +ನೀನೆನ್ನ ತಂದೆಯೇ ದಿಟವಾದರೆನಗೆ ನುಡಿ ! +ಏಕಿಂತು ತೊಳಲುತಿಹೆ ? ಬಯಕೆಯೇನಿಹುದಿಲ್ಲಿ ? +ನಿನಗಾವ ರೀತಿಯಲಿ ನಾನು ನೆರವಾಗಬಲ್ಲೆ ? +ಹೇಳು ! ನುಡಿ ! ಮಾತಾಡು ! +ಇಂತಹ ನುಡಿಗಳನ್ನು ಕೇಳಿದ ಭೂತವು ಬಸವಯ್ಯನೆಡೆಗೆ ಸನ್ನೆ ಮಾಡುತ್ತದೆ. ಆವೇಶಗೊಂಡ ಬಸವಯ್ಯನು ಹೊನ್ನಯ್ಯ ಮತ್ತು ಕೆಂಚಣ್ಣ ಇಬ್ಬರೂ ಅವನ ಕೈ ಹಿಡಿದರೂ ಬಿಡಿಸಿಕೊಂಡು ಭೂತದೆಡೆಗೆ ಹೋಗುವನು. ಇಲ್ಲಿ ಗಮನಿಸಬೇಕಾದ ಅಂಶವೊಂದನ್ನುನಾವು ಗಮನಿಸುವುದು ಔಚಿತ್ಯಪೂರ್ಣವಾಗಿದೆ. ಷೇಕ್ಸ್-ಪೀಯರ್ ‍ನ ಮೂಲ ಕೃತಿಯಾದ ಹ್ಯಾಮ್ಲೆಟ್‍ದಲ್ಲಿ ಭೂತಾಕೃತಿ ಮತ್ತು ರಾಜಕುಮಾರ ಇಬ್ಬರೂ ಸಂಭಾಷಿಸುವ ದೃಶ್ಯವಿದೆ. ಆದರೆ ಮಹಾಕವಿಗಳು ಇಲ್ಲಿ ಕೇವಲ ಭೂತವು ಕೈಬೀಸಿ ಕರೆಯುವುದಕ್ಕಷ್ಟೇಸೀಮಿತಗೊಳಿಸಿದ್ದಾರೆ. ಯಾಕೆಂದರೆ ಕರುನಾಡಿನ ಪ್ರೇಕ್ಷಕರು/ಓದುಗರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಸೃಷ್ಟಿಸಿರಬಹುದು ಮತ್ತು ಕಥನ ಕುತೂಹಲವನ್ನು ಕಾಯ್ದುಕೊಳ್ಳುವ ಸಲುವಾಗಿ ಹೀಗೆ ಮಾಡಿರಬಹುದೆಂದು ನಾವುಅರಿತುಕೊಳ್ಳಬಹುದು. ಮುಂದಿನ ದೃಶ್ಯಾವಳಿಗಳಲ್ಲಿ ಭೂತವು ಬಸವಯ್ಯನಿಗೆ ಏನು ಹೇಳಿತೆಂಬುದನ್ನು ರಾಜಕುಮಾರ ಬಸವಯ್ಯನು ರುದ್ರಾಂಬೆ ಮತ್ತು ಮಂತ್ರಿ ಲಿಂಗಣ್ಣನವರ ಮುಂದೆ ಹೇಳುವಾಗ ನಾವು ತಿಳಿದುಕೊಳ್ಳಬಹುದು. +ಎರಡನೇಯ ದೃಶ್ಯದಲ್ಲಿ ನಿಂಬಯ್ಯನ ಮನೆಯ ಕೊಠಡಿಯೊಂದರಲ್ಲಿ ಆತನ ಮಗನಾದ ಸೋಮಯ್ಯನು ತನ್ನ ಮಿತ್ರನಾದ ಶಿವಯ್ಯನೊಡನೆ ಮಾತಾಡುತ್ತಾ ಕುಳಿತದ್ದಾನೆ. ಈ ಶಿವಯ್ಯನು ಈ ರಂಗಕೃತಿಯ ಕಥಾನಕ ಮತ್ತೊಂದು ಪ್ರಮುಖ ಪಾತ್ರವಾಗಿದೆ.ರುದ್ರಾಂಬೆಯ ಪ್ರೇಮಕ್ಕಾಗಿ ಹಂಬಲಿಸುತ್ತಿರುವ ಭಗ್ನಪ್ರೇಮಿ. ತನ್ನ ಉದ್ದೇಶ ಸಾಧನೆಗಾಗಿ ಏನನ್ನಾದರೂ ಮಾಡಲು ಹಿಂಜರಿಯದ ದುಷ್ಟಕಪಟಿ. ಬಸವಯ್ಯನಿರುವತನಕ ತನಗೆ ರುದ್ರಾಂಬೆಯು ಸಿಗುವುದಿಲ್ಲವಾದ್ದರಿಂದ ಸೋಮಯ್ಯನಿಂದ ರಾಜಕುಮಾರಬಸವಯ್ಯನ ಕೊಲೆ ಮಾಡಿಸಲು ಸಂಚು ರೂಪಿಸುವುದರೊಂದಿಗೆ ತನಗೆ ರುದ್ರಾಂಬೆ ಸಿಗುವಂತೆ, ಬಸವಯ್ಯನ ಮರಣಾನಂತರ ರಾಣಿಯ ದತ್ತುಪುತ್ರನಾಗಿ ಸೋಮಯ್ಯನಿಗೆ ರಾಜ್ಯದಾಡಳಿತವನ್ನು ಕೊಡಿಸಬೇಕೆನ್ನುವ ಭ್ರಮೆಯಲ್ಲಿರುವವನು. ಈವಿಚಾರವಾಗಿ ಸೋಮಯ್ಯನ ತಲೆತುಂಬುತ್ತಿರುವಾಗ, ಸ್ವಂತ ಬುದ್ಧಿಯಿಲ್ಲದ ಸೋಮಯ್ಯನು ಆತನ ಮಾತಿಗೆ ಮಾನಸಿಕವಾಗಿ ಸಿದ್ಧನಾಗುತ್ತಿರುವಾಗ ತಿಮ್ಮಜಟ್ಟಿ ಪ್ರವೇಶಿಸಿ ತೀರಿಹೋದ ದೊರೆಯು ಭೂತವಾಗಿ ಕಾಣಿಸಿಕೊಂಡಿರುವ ಸಂಗತಿಯಿಂದಆರಂಭಿಸಿ ಅದು ರಾಜಕುಮಾರ ಬಸವಯ್ಯನೊಂದಿಗೆ ಮಾತಾಡಿದುದನ್ನು ಸನ್ಯಾಸಿಯಿಂದ ತಿಳಿದುಕೊಂಡಿರುವುದನ್ನು ವಿವರಿಸುತ್ತಾನೆ. ಇದರಲ್ಲಿ ಏನೋ ತಂತ್ರವಿದೆಯೆಂದು ಸೋಮಯ್ಯ ಮತ್ತು ಶಿವಯ್ಯ ನಿರ್ಧರಿಸಿ, ಅದನ್ನು ನಿಂಬಯ್ಯ ಮತ್ತು ರಾಣಿಚೆಲುವಾಂಬಿಕೆಯ ಹತ್ತಿರ ತಿಳಿಸಲು ಮತ್ತು ಅರಮನೆಯ ಕಡೆಗೆ ಓಡುತ್ತಾರೆ. +ಮೂರನೇಯ ದೃಶ್ಯದಲ್ಲಿ ಬಿದನೂರಿನ ಅರಮನೆಯಲ್ಲಿ ರಾಣಿ ಚೆಲುವಾಂಬೆ ಮತ್ತು ನಿಂಬಯ್ಯ ಮಾತಾಡುತ್ತಿದ್ದಾರೆ. ಭೂತದ ಕಥೆಯನ್ನು ನಂಬದ ನಿಂಬಯ್ಯನು ‘ಬಸವಯ್ಯನೂಹೆಯಾತ್ಮಕೆ ದೇಹವನು ನೀಡೆ ಯಾರೊ ಸೃಜಿಸಿದ ಸಂಚು !ನಮ್ಮನೆಂತಾದರೂ ಅಪರಾದಿಗಳು ಎಂದು ಮೂಲೆಗೊತ್ತಲು ನೆಯ್ದ ಜಾಲವಿದು.’ ಎಂದು ತರ್ಕಿಸುತ್ತಾನೆ. ಆ ಬಲೆಯು ಸುತ್ತಿಸುಳಿಯುವ ಮೊದಲೆ ಅದನ್ನು ತುಂಡುಗೈಯಲು ಅಣಿಯಾಗುತ್ತಾನೆ. ಅದರೊಂದಿಗೆ ಮುಂದಿನ ಉಪಾಯವನ್ನು ಹೀಗೆಸೂಚಿಸುತ್ತಾನೆ. +ಹಿಂದುಮುಂದನು ನೋಡದೆಯೆ ಈಗ +ಬಸವಯ್ಯ ಲಿಂಗಣ್ಣರನು ಹಿಡಿದು ಸೆರೆಮನೆಯೊಳಿಡಬೇಕು +ಎಂದು ಹೇಳುತ್ತಾನೆ. ಇದರಿಂದ ಜನರು ದಂಗೆಯೇಳಬಹುದೆಂಬ ರಾಣಿಯು ದಿಗಿಲುಗೊಳ್ಳುವಳು. ಜನರನ್ನು ಕುರಿಗಳೆಂದು ತಿಳಿದುಕೊಂಡು ನಿಕೃಷ್ಟವಾಗಿ ಕಾಣುವ ದುಷ್ಟಬುದ್ಧಿಯ ಕೆಚ್ಚು ಆತನದು. ಅದೇ ವೇಳೆಗೆ ಸೋಮಯ್ಯ ಮತ್ತು ಶಿವಯ್ಯ ಬಂದುಭೂತದ ವರ್ತಮಾನವನ್ನು ತಿಮ್ಮಜಟ್ಟಿ ಹೇಳಿರುವುದನ್ನು ಕೇಳಿ ಬಸವಯ್ಯ ಮತ್ತು ಲಿಂಗಣ್ಣನವರು ಪಿತೂರಿಯಲ್ಲಿ ತೊಡಗಿರುವುದು ನಿಂಬಯ್ಯನಿಗೆ ಮತ್ತಷ್ಟು ಮನದಟ್ಟಾಗುತ್ತದೆ. ಹೀಗೆ ತನ್ನ ಮಾನಸಿಕ ಸ್ಥಿಮಿತವನು ಕಳೆದುಕೊಂಡ ನಿಂಬಯ್ಯನುಸೋಮಯ್ಯ ಮತ್ತು ಶಿವಯ್ಯನಿಗೆ ಸೇನೆ ಸಿದ್ದಗೊಳಿಸುವಂತೆ ಹೇಳಿ ಕಳಿಸುತ್ತಾನೆ. ರಾಣಿ ಚೆಲುವಾಂಬೆಯು ‘ಪ್ರೀಯನೇ, ಎಚ್ಚರಿಕೆಯಿಂದ ಮುಂಬರಿಯಬೇಕು’ ಎಂದು ಎಚ್ಚರಿಸುತ್ತಾಳೆ. ಸೈನಿಕರಲ್ಲಿ ಭಕ್ತಿಯನ್ನುದ್ರೇಕಗೊಳಿಸಲು ತಾನೂ ಹೊರಡುತ್ತಾನೆ. +ನಾಲ್ಕನೇಯ ದೃಶ್ಯದಲ್ಲಿ ಮಂತ್ರಿ ಲಿಂಗಣ್ಣನ ಮನೆಯಲ್ಲಿ ರುದ್ರಾಂಬೆ, ಬಸವಯ್ಯ, ಹೊನ್ನಯ್ಯ ಎಲ್ಲರೂ ಭೂತದರ್ಶನವಾಗಿ, ಅದು ಸ್ಪಷ್ಟವಾಗಿ ನುಡಿದ ಮಾತುಗಳನ್ನು ಮೊದ-ಮೊದಲಿಗೆ ನಂಬದ ಮಂತ್ರಿ ಲಿಂಗಣ್ಣನವರು ಈಗ ಎಲ್ಲರೂ ತಾವುನೋಡಿರುವುದನ್ನು ಹೇಳಿದ ನಂತರವಷ್ಟೇ ನಂಬಿದ್ದಾರೆ. +ಚೆಲುವಾಂಬೆ ನಿಂಬಯ್ಯರಿಬ್ಬರೂ ಸೇರಿ +ಔಷಧಿಯ ನೆವದಿಂದೆ ನನಗೆ ವಿಷವನು ಕುಡಿಸಿ +ಕೊಂದರು +ಎಂದು ಭೂತವು ಹೇಳಿರುವುದು ತನ್ನ ತಂದೆಯ ಪ್ರೇತವೇ ಹೌದೆಂದು ಹೇಳಿದುದನ್ನು, ಅದರೊಂದಿಗೆ ‘ಲಿಂಗಣ್ಣ ಮಂತ್ರಿಯದು ಸರಳಹೃದಯವು, ಮಗೂ, ಆತನರಿಯನು ನಿಜವ’ ಎಂದು ಹೇಳಿದುದನ್ನೂ ಸಹ ಅರುಹಿದಾಗ ರುದ್ರಾಂಬೆಯು ಕಡುಕೋಪದಿಂದ‘ನರಕವಿಂತುಟು ನಾಕ ವೇಷದಲಿ ಬಹುದೆಂದು ನಾನರಿದುದಿಲ್ಲ’ ಎನ್ನುತ್ತಾಳೆ. ಲಿಂಗಣ್ಣ ಮಂತ್ರಿಗಳಿಗೆ ಅಂದಿನ ಚಿತ್ರ ಕಣ್ಣೇದುರು ಬಂದು ರೋಧಿಸುತ್ತಾನೆ. +ನೀನು ಮದ್ದನು ಒಲ್ಲೆನೆಂದರೂ ನಾನೆಯೆ +ಬಲವಂತದಿಂದ ಕುಡಿಸಿದೆನಲ್ಲಾ ಶಿವಶಿವಾ ! +ಅವರಲ್ಲ ಅವರಲ್ಲ, ನಾನೆ ಕೊಲೆ ಪಾತಕನು ! +ಎಂದು ರೋಧಿಸುತ್ತಾನೆ. ಹೀಗಿರುವಾಗ ಇದಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳಬೇಕೆಂದು ಯೋಚಿಸುತ್ತಾ ಹೊನ್ನಯ್ಯನನ್ನು ಮುಂದಿನ ಸಿದ್ಧತೆಗೆ ಕಳುಹಿಸುವುದರೊಂದಿಗೆ ರಾಣಿ ಚೆಲುವಾಂಬೆ, ದುರುಳ ನಿಂಬಯ್ಯನನ್ನು ಸೆರೆಯಾಳಾಗಿಸಿಕೊಳ್ಲುವವಿಚಾರವಾಗಿ ರಾಜಕುಮಾರ ಬಸವಯ್ಯನ ಹತ್ತಿರ ಯೋಚಿಸುತ್ತಿರುವಾಗ ದಿಡೀರನೆ ನಿಂಬಯ್ಯನ ಮಗ ಸೋಮಯ್ಯ ಮತ್ತು ಉಪಸೇನಾಧಿಪತಿ ರುದ್ರಯ್ಯ ಸೈನ್ಯದೊಡನೆ ಬಂದು ಇವರನ್ನು ಬಂಧಿಸುತ್ತಾರೆ. ಬಸವಯ್ಯನು ಪ್ರತಿಭಟಿಸುತ್ತಿರಲು ಮಂತ್ರಿಲಿಂಗಣ್ಣನವರು ಪರಿಸ್ಥಿತಿಯನ್ನು ಅರಿತುಕೊಂಡು ಉಪಾಯದಿಂದ ನಂತರ ಪಾರಾಗಲು ಅವಕಾಶವಿರುವುದರಿಂದ ಪ್ರತಿಭಟಿಸದೇ ಅವರ ಹಿಂದೆ ಹೋಗುವುದೊಳಿತು ಎಂದು ಹೇಳಲು ಸೆರೆಯಾಳಾಗಿ ಹೋಗುವರು. ಇದನ್ನು ನೋಡಿದ ರುದ್ರಾಂಬೆಯು ತನ್ನತಂದೆ ಮತ್ತು ತನ್ನ ಇನಿಯನ್ನೂ ಬಿಡುಗಣ್ಣಾಗಿ ನೋಡುತ್ತಾ ಕಂಬನಿದುಂಬಿ ನಿಲ್ಲುವುದರೊಂದಿಗೆ ಎರಡನೇಯ ಅಂಕ ಸಮಾಪ್ತಿಯಾಗುತ್ತದೆ. +ಇಲ್ಲಿ ಮೊದಲನೆಯ ಅಂಕದಲ್ಲಿ ಉಲ್ಲೇಖವಾಗುತ್ತ ಹೋಗುವ ಘಟನೆಯ ನಂತರದ ಹೋರಾಟವು ಎರಡನೇಯ ಅಂಕದಲ್ಲಿ ತೀವ್ರತೆ ಮತ್ತು ಅನೀರಿಕ್ಷಿತ ಬೆಳವಣಿಗೆಗಳಿಗೆ ದಾರಿ ಮಾಡಿಕೊಡುತ್ತದೆ. ಇಂತಹ ರಾಜಕಾರಣವನ್ನು ವಿಶ್ವದಲ್ಲಿ ಇಂದಿಗೂ ಮಿಲಿಟರಿಸರ್ವಾಧಿಕಾರಿಗಳ ಆಡಳಿತವಿರುವ ಮತ್ತು ಕೆಲವೊಂದು ಆಪ್ರಿಕನ್ ಮತ್ತು ಅರಬ್ ದೇಶಗಳಲ್ಲಿ ಕಾಣುತ್ತಿದ್ದೇವೆ. ಆದರೆ ಭಾರತೀಯರಾದ ನಾವು ಇಂತಹ ಕ್ಷಿಪ್ರಕ್ರಾಂತಿಯ ಕಾರ್ಯಾಚರಣೆ/ಬದಲಾವಣೆಗಳನ್ನು ಇತಿಹಾಸದಲ್ಲಿಯೇ ಅನುಭವಿಸಿ ಈಗಪ್ರಜಾಪ್ರಭುತ್ವವೆಂಬ ವಿಶ್ವದ ಅತ್ಯುತ್ತಮವಾದ ಮಹಾಮಾರ್ಗದಲ್ಲಿ ಮುನ್ನಡೆದಿದ್ದೇವೆ. ಅದು ಒಂದೆಡೆ ಇರಲಿ ಈಗ ನಮ್ಮ ಬಿದನೂರು ಸಂಸ್ಥಾನದ ಕಥಾನಕಕ್ಕೆ ಬರೋಣ. ಇಲ್ಲಿ ಬಸವಯ್ಯನ ಸಂಶಯಕ್ಕೆ ಪೂರಕವಾಗಿ, ತನ್ನ ತಂದೆಯಕೊಲೆಯಾಗಿರುವುದನ್ನು ಭೂತವು ಹೇಳಿರುವುದು ಸಮರ್ಥನೀಯ ಮತ್ತು ನಿರೀಕ್ಷಿತವಾಗಿದ್ದರೂ ಬಸವಯ್ಯ ಮತ್ತು ಲಿಂಗಣ್ಣ ಮಂತ್ರಿಗಳು ಬಂಧಿಯಾಗುವುದು ಅನಿರೀಕ್ಷಿತವಾಗಿ ರಂಗಕೃತಿಯ ಓದುಗರಿಗೆ/ಪ್ರೇಕ್ಷಕಪ್ರಭುಗಳಲ್ಲಿ ಉದ್ವಿಗ್ನ, ಕುತೂಹಲ ಮತ್ತುರೋಮಾಂಚನ (ಥ್ರಿಲ್ಲಿಂಗ್) ನೀಡುತ್ತದೆ. ಮುಂದಿನ ಬೆಳವಣಿಗೆಗಳಿಗಾಗಿ ಉಸಿರನ್ನು ಬಿಗಿಹಿಡಿದು ಕುಳಿತುಕೊಳ್ಳುವಂತೆ ಮಹಾಕವಿಗಳು ಆಗಿನ ಕಾಲದಲ್ಲಿಯೇ ಸಸ್ಪೆನ್ಸ್ ಥ್ರೀಲ್ಲರ್ ಸೃಷ್ಟಿಸಿದ್ದಾರೆಂಬುದು ಕುತೂಹಲದ ಸಂಗತಿ. +ಮೂರನೇಯ ಅಂಕದಲ್ಲಿ ಬಂಧಿಗಳಾಗಿರುವ ಮಂತ್ರಿ ಲಿಂಗಣ್ಣ ಮತ್ತು ರಾಜಕುಮಾರ ಬಸವಯ್ಯರು ಬಿಡುಗಡೆಯಾಗುವುದು ಅದಕ್ಕೆ ಶಿವಯ್ಯನು ರುದ್ರಾಂಬೆಯನ್ನು ಪಡೆಯುವ ಉದ್ದೇಶದಿಂದ ಸಹಕರಿಸುವುದು. ರುದ್ರಾಂಬೆಯ ತಂದೆ ಮಂತ್ರಿ ಲಿಂಗಣ್ಣನನ್ನುಬಿಡುಗೊಳಿಸಲು ಸಹಾಯ ಮಾಡಿದರೆ ಅವಳ ಪ್ರೇಮವನ್ನು ಸಂಪಾದಿಸಬಹುದೆಂದು ಅವಳ ಹತ್ತಿರ ಬಂದು ಪರಿಸ್ಥಿತಿಯನ್ನು ತನಗೆ ಬೇಕಾದಂತೆ ಹೇಳುತ್ತಾ ಅವಳ ಮನಸ್ಸು ತನ್ನ ಕಡೆಗೆ ತಿರುಗಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಿಸಿದರೂ ಅವಳುಇತನಿಗೆ ಅಣ್ಣನಂತಿರುವೆಯೆಂದು ಹೇಳುತ್ತಾಳೆ. ಅನೇಕ ಮಾತುಗಳಾದ ನಂತರವೂ ಆತನು ನೇರವಾಗಿ ‘ನಿನ್ನ ಪ್ರೇಮದ ಮುಖವ ನನ್ನೆಡೆಗೆ ತಿರುಗಿಸುವೆಯಾ?’ ಎಂದು ಕೇಳುತ್ತಾನೆ. ಇಲ್ಲಿಯವರೆಗೂ ಆತ ತೋರಿಸಿದ ಅನುಕಂಪದ ಹಿಂದಿರುವ ಉದ್ದೇಶತಿಳಿದು ಬೆಚ್ಚಿಬಿದ್ದರೂ ಅಧೀರಳಾಗದೇ ‘ಬಾಂಧವರ ಜೀವವನು ಉಳಿಸಿಕೊಳ್ಳುವ ಸುಳ್ಳು ಪಾಪವಾಗದು’ ಎಂದು ಮನದಲ್ಲಿಯೇ ನಿರ್ಧರಿಸಿ ಅದನ್ನು ತೋರ್ಪಡಿಸಿಕೊಳ್ಳದೇ ‘ಆಗಲಿ ನಿನ್ನಾಶೆಯಂತೆಯೆ ನಡೆಯುವೆನು. ಸೆರೆಯಿಂದೆ ಎಂತಾದರೂಅವರಿಬ್ಬರನು ಹೊರಗೆಡಹು’ ಎಂದು ಹೇಳುತ್ತಾಳೆ. ಇದರಿಂದ ಸಂತಸಗೊಮಡ ಶಿವಯ್ಯನು ರುದ್ರಾಂಬೆಯು ತನ್ನನ್ನು ಒಪ್ಪಿಕೊಂಡಳೆಂದು ತಿಳಿದುಕೊಂಡು ಅವರಿಬ್ಬರನ್ನು ಬಿಡುಗಡೆಗೊಳಿಸುವ ಕೆಲಸಕ್ಕೆ ಯೋಚಿಸುತ್ತಾ ಹೊರಡುವಾಗ ಆಗಮಿಸುವಹೊನ್ನಯ್ಯನು ತೃಣಾನಂದ ಪರಮಹಂಸ ಸನ್ಯಾಸಿಯ ಸಹಾಯದಿಂದ ಅವರನ್ನು ಸೆರೆಯಿಂದ ಬಿಡಿಸಬಹುದೆಂದು ಹೇಳುತ್ತಾ ಆತನ ಸಹಾಯವನ್ನು ಪಡೆಯಲು ಹೇಳುತ್ತಾ ಶಿವಯ್ಯನು ಹೊರಡುವನು. ಆತ ಹೋದ ನಂತರ ರಾಜಕುಮಾರ ಶಿವಯ್ಯನಆಪ್ತಮಿತ್ರನಾದ ಶಿವಯ್ಯನು ತನ್ನ ಗೆಳೆಯನ ಪ್ರೇಯಸಿ ರುದ್ರಾಂಬೆಗೆ ಹೇಳುವ ಮಾತು ಹೃದಯಂಗಮವಾಗಿದೆ. +ಧೈರ್ಯದಿಂದಿರು, ತಂಗಿ, ಈಶ್ವರನ ದಯೆಯಿರಲು +ಎಲ್ಲ ಮಂಗಳವಹುದು, ಈ ದುಃಖಮಾಲೆಗಳು +ಸುಖಕೆ ಸೋಪಾನಗಳು. ಜಗದೀಶ್ವರನ ಕೃಪೆಗೆ +ನೂರು ಮಾರ್ಗಗಳಿಹವು ; ನೂರು ವೇಷಗಳಿಹವು. +ಸುಖವೆಂಬುದಾತನೊಲ್ಮೆಗೆ ಚಿಹ್ನೆಯಾಗುವೊಡೆ +ದುಃಖವೂ ಅಂತೇಯೇ ಎಂದರಿಯುವುದು, ತಂಗಿ ! +ಅದರಿಂದೆ ಕಾರುಣಿಕ ಈಶ್ವರನ ಕಾರ್ಯದಲಿ +ಶ್ರೇಯಸ್ಸೆ ತುದಿಯ ಗುರಿ ಎಂಬುದನು ನಂಬಿ +ನೆಚ್ಚುಗೆಡದಿರು. ಎಲ್ಲ ಮಂಗಳವಾಗುವುದು ! +ಈ ಮಾತುಗಳಲ್ಲಿ ಹೊನ್ನಯ್ಯನ ಒಳ್ಳೆಯ ಸ್ವಭಾವ ಮತ್ತು ಸರಳತೆ, ಸ್ನೇಹಪರತೆ, ಕಾಳಜಿ, ಧೈರ್ಯಹೇಳುವಂತಹ ಸದ್ಗುಣಗಳನ್ನು ಕಾಣಬಹುದು. ಹೋಗುವುದಕ್ಕಿಂತ ಮೊದಲು ರುದ್ರಾಂಬೆಗೆ ಹೇಳುವ ಎಚ್ಚರಿಕೆಯ ಮಾತು ರಾಜಕಾರಣದ ವಿಪ್ಲವಗಳಲ್ಲಿಹೇಗೆ ಎಚ್ಚರಾಗಿರಬೇಕೆಂಬುದನ್ನು ಅರಿತುಕೊಳ್ಳಬಹುದು. ‘ನಾವು ಅವರನು ಸಾಗಿಸಿದ ತರುವಾಯ ನಿನಗೇನಾದರೂ ಕೇಡಾಗಬಹುದು. ಮೈಮರೆಸಿಕೊಳ್ಳಲು ಸಿದ್ಧಳಾಗಿರಬೇಕು’ ಎಂದು ಹೇಳುತ್ತಾನೆ. +ಮುಂದಿನ ದೃಶ್ಯ 2ರಲ್ಲಿ ಆರಂಭದಲ್ಲಿಯೇ ಶಿವಯ್ಯನು ಸನ್ಯಾಸಿಯಿಂದ ಬೀಳ್ಕೊಡುತ್ತಿದ್ದಾನೆ. ಬಸವಯ್ಯ ಮತ್ತು ಲಿಂಗಣ್ಣರನ್ನು ರಾತ್ರಿ ವೇಳೆ ಸೆರೆಮನೆಯಿಂದ ಬಿಡುಗಡೆ ಮಾಡಲು ಬೇಕಾಗುವ ಎಲ್ಲವನ್ನೂ ಮಾತಾಡಿಕೊಳ್ಳುವುದರೊಂದಿಗೆ ಸನ್ಯಾಸಿಯು ಈಕಾರ್ಯವನ್ನು ಮಾಡಲು ಒಪ್ಪಿಕೊಂಡಿದ್ದಾನೆ. ಶಿವಯ್ಯ ಹೋದ ನಂತರ ಸನ್ಯಾಸಿ ಬೇಟಿಯಾಗಲು ತಿಮ್ಮಜಟ್ಟಿಯು ಬರುತ್ತಾನೆ. ಇಂದಿನ ರಾತ್ರಿ ಸೆರೆಮನೆಯಲ್ಲಿ ಲಿಂಗಣ್ಣ ಮತ್ತು ಬಸವಯ್ಯರನ್ನು ಕೊಲ್ಲಲು ತನಗೆ ಸುಫಾರಿಯನ್ನು ಚೆಲುವಾಂಬೆ ಮತ್ತುನಿಂಬಯ್ಯರು ನೀಡಿರುವುದನ್ನು ಹೇಳುತ್ತಾ, ತಾನು ಜೀವನಪೂರ್ತಿ ಕೊಲೆಗಾರನಾಗಿಯೇ ಇರುವುದಕ್ಕಾಗಿ ಪಶ್ಚಾತ್ತಾಪ ಪಡುತ್ತಾ ಇದರಿಂದ ತನಗೆ ಮುಕ್ತಿ ನೀಡಬೇಕೆಂದು ಬೇಡಿಕೊಳ್ಳುತ್ತಾನೆ. ತಾನು ಹೇಳಿದಂತೆ ಮಾಡಿದರೆ ಮುಕ್ತಿ ನೀಡುವೆನೆಂದುಹೇಳುವುದರೊಂದಿಗೆ ಸೆರೆಯಲ್ಲಿರುವ ಇಬ್ಬರನ್ನೂ ಬಿಡುಗಡೆಗೆ ಇಂದಿನ ರಾತ್ರಿ ಸಹಕರಿಸುವ ಉಪಾಯವನ್ನು ಹೇಳುವುದರೊಂದಿಗೆ ನಿನ್ನ ಸಹಚರರಿಗೆ ತಿನಿಸಲು ಮದ್ದನ್ನು ಕೊಟ್ಟು ಕಳುಹಿಸಿಕೊಡುತ್ತಾನೆ. +ಮುಂದಿನ 3ನೇಯ ದೃಶ್ಯದಲ್ಲಿ ಸನ್ಯಾಸಿಯ ಪಾತ್ರ ಬಹಳ ಚಾಣಾಕ್ಷತನದಿಂದ ಗಮನ ಸೆಳೆಯುತ್ತದೆ. ಸೆರೆಮನೆಯ ಕಾವಲುಗಾರ ಸಿಂಗಣ್ಣನನ್ನು ತನ್ನ ಮಾತುಗಳಿಂದ ಕೈಲಾಸವನ್ನು ತೋರಿಸುವುದರೊಂದಿಗೆ ಶಿವನೊಂದಿಗೆ ಮಾತನಾಡುವ ಧೈರ್ಯಕ್ಕೆಬೇಕಾಗಿರುವ ಬ್ರಹ್ಮಜ್ಞಾನಾಮೃತ ಎಂಬ ಗುಳಿಗೆಯನ್ನು ನುಂಗಿಸಿ, ಅವನು ಎಚ್ಚರತಪ್ಪಿ ಬೀಳುವಂತೆ ಮಾಡಿ ಸೆರೆಮನೆಯ ಬೀಗದ ಕೈ ಸಿಕ್ಕನಂತರ ಸಿಳ್ಳೆ (ಸಿಲ್ಪಿ/ಸೀಟಿ/ವಿಸಲ್) ಸಂಕೇತ ನೀಡಿ ದೂರದಲ್ಲಿ ಕಾದಿದ್ದ ಶಿವಯ್ಯ ಮತ್ತು ಹೊನ್ನಯ್ಯರನ್ನು ಕರೆದುಒಳಗಿರುವ ಇಬ್ಬರನ್ನೂ ಬಿಡಿಸಿಕೊಂಡು ಬರಲು ಹೇಳಿ ತಾನು ದೂರದಲ್ಲಿ ಇವರಿಗೋಸ್ಕರ ಕಾದು ನಿಲ್ಲುತ್ತಾನೆ. +ಮುಂದಿನ 4ನೇಯ ದೃಶ್ಯದಲ್ಲಿ ಸೆರೆಮನೆಯ ಒಂದು ಕೋಣೆಯಲ್ಲಿ ದಣಿದು ಬಸವಳಿದು ಬಸವಯ್ಯನು ಮಲಗಿರಲು ಅವನನ್ನು ಬಿಡಿಸಿಕೊಂಡು ಹೋಗಲು ಶಿವಯ್ಯ ಒಳಗೆ ಬಂದಿದ್ದಾನೆ. ಮಂತ್ರಿ ಲಿಂಗಣ್ಣನ ಕೋಣೆಗೆ ಹೊನ್ನಯ್ಯನನು ಕಳಿಸಿ ತಾನು ಇಲ್ಲಿಗೆಬಂದಿದ್ದಾನೆ. ಸೆರೆಮನೆಯಲ್ಲಿಯೂ ನಿಶ್ಚಿಂತನಾಗಿ ಮಲಗಿಕೊಂಡಿರುವ ಬಸವಯ್ಯನನ್ನು ನೋಡಿ ಗಾಬರಿಯಾಗುತ್ತಾನೆ. ಆ ಕ್ಷಣವೇ ಶಿವಯ್ಯನಲ್ಲಿರುವ ದುಷ್ಟಬುದ್ಧಿ ಜಾಗೃತಗೊಂಡು ಬಸವಯ್ಯನ ರುಂಡವನ್ನು ಹಾರಿಸಬೇಕೆಂದು ತನ್ನ ಒರೆಯಲ್ಲಿದ್ದ ಖಡ್ಗವನ್ನುಹೊರಗೆಳೆಯಲು ರುದ್ರಾಂಬೆಯನ್ನು ಕಂಡಂತಾಗಿ ತನಗೆ ತಾನೆ ‘ಹೀನಬುದ್ಧಿಯ ಶಿವಯ್ಯನೇ’ ಎಂದು ಎಚ್ಚರಗೊಂಡವನಾಗಿ ಕಠಾರಿಯನ್ನು ಬಲವಾಗಿ ಕೆಳಗೆ ಬಿಸಾಡುವನು. ಆ ಸದ್ದಿಗೆ ಬಸವಯ್ಯನು ಎಚ್ಚರಗೊಂಡಾಗ ‘ಲಿಂಗಣ್ಣ ಮಂತ್ರಿಗಳೂಬಿಡುಗಡೆಯಾಗಿ ನಿನಗಾಗಿ ಹೊರಗೆ ಕಾದಿದ್ದಾರೆ’ ಎಂದು ಹೇಳುತ್ತಾ ಆತನನ್ನು ವೇಗವಾಗಿ ಶಿವಯ್ಯನು ಕರೆದುಕೊಂಡು ಹೋಗುತ್ತಾನೆ. ಇಲ್ಲಿ ಮಹಾಕವಿಗಳು ಶಿವಯ್ಯನು ಕಠಾರಿಯನ್ನು ಹೊರಗೆಳೆದು ತನ್ನ ದಾರಿಗೆ ಅಡ್ಡವಾಗಿರುವ ಬಸವಯ್ಯನನ್ನು ಕೊಲ್ಲಲುಯತ್ನಿಸುತ್ತಿರುವಾಗ ಮನುಷ್ಯನ ಒಳತೋಟಿಯ ದ್ವಂದ್ವಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. +ಮುಂದಿನ ದೃಶ್ಯ 5ರಲ್ಲಿ ಸೆರೆಮನೆಗೆ ತುಸು ದೂರದಲ್ಲಿ ಮರಗಳ ಗುಂಪಿನಲ್ಲಿ ಹೊನ್ನಯ್ಯನು ಲಿಂಗಣ್ಣಮಂತ್ರಿ ಹಾಗೂ ಸನ್ಯಾಸಿಗಳು ಬಸವಯ್ಯನನ್ನು ಕರೆದು ತರಲು ಹೋಗಿರುವ ಶಿವಯ್ಯನಿಗಾಗಿ ಕಾದಿದ್ದಾರೆ. ಆ ನಾಲ್ವರನ್ನು ಈ ರಾಜ್ಯದ ಗಡಿ ದಾಟಿಸಿಹೈದರಾಲಿಯ ಹತ್ತಿರಕ್ಕೆ ಕಳುಹಿಸಲು ನಾಲ್ಕು ಕುದುರೆಗಳ ವ್ಯವಸ್ಥೆಯನ್ನು ಸನ್ಯಾಸಿಯು ಮಾಡಿದ್ದಾನೆ. ಬಸವಯ್ಯ ಮತ್ತು ಶಿವಯ್ಯ ಬರುವುದು ತಡವಾದುದರಿಂದ ಹೊನ್ನಯ್ಯ ಮತ್ತು ಲಿಂಗಣ್ಣ ಮಂತ್ರಿಯನ್ನು ಕುಂಸಿಯ ಮಾರ್ಗವಾಗಿ ಹೋಗುವಂತೆಹೇಳುತ್ತಾನೆ. ಅವರು ಬಂದನಂತರ ಅವರಿಬ್ಬರನ್ನೂ ಇದೇ ಮಾರ್ಗವಾಗಿ ಕಳುಹಿಸಿ ಕೊಡುವುದಾಗಿ ಹೇಳುತ್ತಾನೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬರುವ ಶಿವಯ್ಯ ಮತ್ತು ಬಸವಯ್ಯರಿಬ್ಬರಿಗೂ ಸನ್ಯಾಸಿಯು ಮುಂದಿನ ಸಹಾಯಕ್ಕಾಗಿಶಿವಮೊಗ್ಗೆಗೆ ಸೈನ್ಯದೊಂದಿಗೆ ಬಂದು ಬಿಡಾರ ಹೂಡಿರುವ ಹೈದರಾಲಿಗೆ ಕೊಡುವಂತೆ ಪತ್ರವೊಂದನ್ನು ಬಸವಯ್ಯನ ಕೈಗೆ ಕೊಡುತ್ತಾ ಮುಂದೆ ಹೋದ ಅವರಿಬ್ಬರನ್ನು ಹಿಂಬಾಲಿಸಲು ಹೇಳುತ್ತಾನೆ. ಅಷ್ಟರಲ್ಲಿ ಕೆಮ್ಮಿನ ಸದ್ದು ಕೇಳಲು ಸೆರೆಯಲ್ಲಿರುವಬಸವಯ್ಯ ಮತ್ತು ಲಿಂಗಣ್ಣರನ್ನು ಕೊಲ್ಲುವುದಕ್ಕಾಗಿ ತಿಮ್ಮಜಟ್ಟಿಯ ಕೊಲೆಗಾರರು ಬರುವುದರ ಸೂಚನೆಯನ್ನರಿತು ಸನ್ಯಾಸಿಯು ಮರೆಯಾಗುವನು. +(ಮುಂದುವರೆಯುತ್ತದೆ) \ No newline at end of file diff --git a/PanjuMagazine_Data/article_10.txt b/PanjuMagazine_Data/article_10.txt new file mode 100644 index 0000000000000000000000000000000000000000..d2c28d15cb666748ed33837ed654fcfd17ebfeec --- /dev/null +++ b/PanjuMagazine_Data/article_10.txt @@ -0,0 +1,51 @@ + + +ಮೊದಲ ಕೋಳಿ ಕೂಗಿತು. “ಅಯ್ಯೋ ಬೆಳಕ ಆತು. ಇಂದ ಬ್ಯಾರೆ ಅಮವಾಸಿ ಐತಿ ಹಾರಿಗೆಡಿಲಿ, ಈ ನಿದ್ದಿ ಒಂದ ನನಗ ದೆವ್ವ ಕಾಡಿದಂಗ ಕಾಡ್ತೈತಿ ನೋಡ, ಅಮವಾಸಿ ಅಡಗಿ ಮಾಡಬೇಕಾದ್ರ ಸೂರ್ಯಾ ನೆತ್ತಿ ಮ್ಯಾಲ ಬರ್ತಾನ” ಎಂದು ಗಡಬಡಿಸಿ ಹಾಸಗಿಯಿಂದ ಮ್ಯಾಲೆದ್ದು ನೀಲವ್ವ ಕಣ್ಣುಜ್ಜತೊಡಗಿದಳು. ತನ್ನ ಮಗ್ಗಲ ಮಲಿಗಿದ್ದ ಲಕ್ಕಪ್ಪ ಇನ್ನ ‘ಗೊರ್.. .. ಗೊರ್’ ಗೊರಕಿ ಹೊಡಿತಿದ್ದ. ಹಿಂದಿನ ಜನ್ಮದಾಗ ಇಂವ ರಾಕ್ಷಿಯಾಗಿ ಇಟ್ಟದ್ನೋ ಏನೋ ಎಂದು ಗಂಡನ ಗೊರಕಿ ಶಬ್ದಾ ಕೇಳಿ ವಟಗುಡುತ್ತ ಮೆಲ್ಲಕ ಮ್ಯಾಲೆದ್ದು ಚಿಮನಿಗೆ ಒಂದ ಕಡ್ಡಿ ಗೀರಿ ಅದರ ಮೋತಿಗೆ ಇಟ್ಟಳು. ಮಲ್ಲಿಯ ಗಗ್ಗರಿ ಮಣಕಾಲ ದಾಟಿ ಮ್ಯಾಲ ಹೋಗಿತ್ತು. ದೌಳಾಕಿ ಹೆಂಗ ಮಲಗ್ಯಾಳ ನೋಡ ಮದಿವಿ ಮಾಡಿ ಕೊಟ್ಟರ ವರ್ಷಒಪ್ಪತ್ನ್ಯಾಗ ಮಕ್ಕಳಾ ಹಡಿತಾಳ ಮೈಮ್ಯಾಲ ಅರಬಿ ಕಬರಿಲ್ಲದ ಮಲಗ್ಯಾಳ ತಂದಿ ಇದ್ದಂಗ ಮಕ್ಕಳು ಅಂತ ನೀಲವ್ವ ಮಗಳ ಗಗ್ಗರಿ ಸರಿ ಪಡಿಸುತ್ತ ಒಟಗುಡಿದಳು. ಮಗಳ ನುಣುಪಾದ ತೊಡೆ ಕಂಡು ತನ್ನ ಹರೆಯದ ನೆನಪು ಎದೆಯಿಂದ ಚಿಮ್ಮಿ ಬಂತು. ತನ್ನ ದೇಹದ ಮೀಸಲಾ ಮೂರಿದ ಕಿವುಡ ರಂಗ ನೆನಪಾದ. ರಂಗನಿಗೂ ತನ್ನ ಗಂಡನಿಗೂ ಎಷ್ಟೊಂದು ವ್ಯಾತ್ಯಾಸ ಇದೆ. ರಂಗ ತನ್ನ ದೇಹ ಸಾಗರದಲ್ಲಿ ಸುಸ್ತಾಗುವರೆಗೂ ಈಜಾಡಿ ದಡ ಸೇರುತ್ತಿದ್ದ. ಆದ್ರೆ ಗಂಡ ಎನ್ನುವ ಈ ಪ್ರಾಣಿ ಮೂರ ಹೊತ್ತು ಕೂಳು ತಿಂದು ಹುಣ್ಣಿಗೆ ಅಮವಾಸಿಗೊಮ್ಮೆ ಸವಾರಿ ನೆಡುಸುತ್ತದ್ದ. ಅದು ಇವನದು ಹೆಂತಾ ಸವಾರಿ? ಎರಡ ನಿಮಷನ್ಯಾಗ ಸುಸ್ತಾಗಿ ಗೊರಕಿ ಹೊಡೆಯೋ ಅಸಾಯಕ ಶೂರ. ಎಂದು ತನ್ನ ಮನದನ್ನ ರಂಗ ಮತ್ತು ತನ್ನ ಗಂಡನ ಪುರುಷತ್ವ ಮನಸ್ನ್ಯಾಗ ತೂಗಿ ನೋಡುತ್ತಿದ್ದಳು. ಆಗ ಇವಳ ಮನದಾಗಿನ ಮಾತ ಆಲಿಸುತ್ತ ಚಿಮನಿ ನಗತೊಡಗಿತು. +ದಂದಕ್ಯಾಗ ಕಟ್ಟಿದ ಎಮ್ಮಿಗೊಡ್ಡ ಮಲಕ ಆಡಸ್ಕೋತ ಮಲಗಿತ್ತು. ಒಳಚಿಲಕಾ ತಗದ ಹೊರಗ ಒಂದಹೆಜ್ಜಿ ಮುಂದ ಹೋಗಿ ಗ್ವಾಡಿ ಮಗ್ಗಲ ಕುಳಿತು ಕಾಲಮಡದ ಮ್ಯಾಲೆದ್ದು ಥೂ ಥೂ ಥೂ ಅಂತ ಮೂರ ಸಾರ್ತಿ ಉಗಳಿ ಅತ್ತಾಗ ಇತ್ತಾಗ ನೋಡಿದ್ಳು. ಇನ್ನ ಯಾವ ಮನಿಯಾಗೂ ದೀಪ ಹೊತ್ತಿಕೊಂಡಿದ್ದಿಲ್ಲ. ‘ಈ ಹಾಳಾದ ಕೋಳಿ ಇಷ್ಯಾಕ ಲಗೂನ ಕೂಗೇತಿ’ ಎಂದು ಕೂಗಿದ ಕೋಳಿ ಬೈಯುತ್ತ ಒಳಗ ಬಂದು ಮತ್ತೆ ಮಲಗ ಬೇಕನಿಸಿತು. ಇನ್ನ ಮ್ಯಾಲ ಮಲಗಿದ್ರು ಕಳ್ಳ ನಿದ್ದಿ ಹತ್ತೈತಿ ಅನ್ನೂದ ಗೊತ್ತಾಗಿ ಒಲಿಕಡೆ ಹೋಗಿ ಒಲಿ ಬೂದಿ ತಗದು ನೀರು ಕಾಸಾಕ ಒಂದ ಗುಂಡಗಿ ಒಲಿಮ್ಯಾಗ ಇಟ್ಟಳು. ಮತ್ತೆ ರಂಗನ ನೆನಪು ಗಾಣದೆತ್ತಿನಂತೆ ಅವಳ ಮನತುಂಬ ಸುತ್ತತೊಡಗಿತು. + ***** +ಅಂದು ಮಟಮಟ ಮದ್ಯಾನ ಪಡಸಾಲ್ಯಾಗ ಕುಂತ ನೀಲವ್ವ ಒಬ್ಬಾಕೆ ಮನಿಯಾಗ ಅಕ್ಕಿ ಹಸಣ ಮಾಡುತ್ತ ಕುಂತಿದ್ಳು. ಎದರು ಮನಿ ಗೌಡರ ಆಳು ಕಿವುಡ ರಂಗ ದೆವ್ವಿನಂತ ಕೊಡ್ಡದ ತೆಲಿಮ್ಯಾಲ ‘ದಿಪ್ಪ.. ದಿಪ್ಪ’ ಅಂತ ಕೊಡಲಿಯಿಂದ ಏಟ ಹಾಕುತ್ತಿದ್ದ. ಆಗ ದೊಡ್ಡಾಕಿ ಆದ ನೀಲಿಗೆ ಕಿವುಡ ರಂಗನ ಕಟ್ಟಮಸ್ತವಾದ ತೋಳು, ವಿಶಾಲವಾದ ಎದೆ, ಚಿಗರು ಮೀಸೆ ಅವನ ಎರಿ ಹೊಲದಂತ ಮೈ ಬಣ್ಣ ಅವಳ ಮನಸಿನಲ್ಲಿ ಗುಮಾನಿ ಗದ್ದಲ ನಡಿಸಿತ್ತು. ಅವನು ಕಟಗಿ ಒಡೆಯುವುದನ್ನು ಅಕ್ಕಿ ಹಸಣು ಮಾಡುತ್ತ ವಾರೆಗಣ್ಣಿನಿಂದ ಕದ್ದು ಕದ್ದು ನೋಡುತ್ತಿದ್ದಳು. ದೊಡ್ಯಾಕಿ ಆಗಿ ಒಂದು ವರ್ಷ ತುಂಬಿದ ಅವಳ ದೇಹ ಅನ್ಯ ಲಿಂಗದ ಆಲಿಂಗನಕ್ಕೆ ತೈಯಾರಾಗಿ ಕುಳತಿತ್ತು. ಇದರಿಂದ ನೀಲವ್ವನ ನೋಟಗಳು ತೀಕ್ಷ್ಣವಾಗಿದ್ದವು. ದೊಡ್ಯಾಕಿ ಆಗುವ ಮೋದಲಿನಿಂದಲೂ ಕಿವುಡ ರಂಗ ಅವಳ ಸತಾಯಿಸುತ್ತಿದ್ದ, ಕಟ್ಟಿಮ್ಯಾಲ ಕುಂತು ತೆಲಿ ಹಿಕ್ಕೊಳುವಾಗ ಸುಮ್ಮ ಸುಮ್ಮನೆ ಜಡೆ ಜಗ್ಗಿ ಹೋಗುತ್ತಿದ್ದ, ಮನಿಮುಂದ ಕುಳಿತು ಮುಸರಿ ತಿಕ್ಕುವಾಗ ತಾನು ಕೊಡ ಹೊತ್ತು ನೀರು ತರುತ್ತಿದ್ದ ಕೊಡದಾಗಿನ ನೀರು ನೀಲಿಯ ಮೋತಿಗೆ ಗೊಜ್ಜಿ ನಕ್ಕೊಂತ ಹೋಗುತ್ತಿದ್ದ. “ಯವ್ವಾ ಈ ಕಿವುಡ ನನಗ ನೀರ ಗೊಜ್ಜಿದ” ಎಂದು ನೀಲಿವ್ವ ತನ್ನ ತಾಯಿ ದುಂಡವ್ವಗ ಪಿರ್ಯಾದಿ ಹೇಳಿದರೆ ದುಂಡವ್ವ ನಕ್ಕೋತ ಅಂವಗ ಕಿವಡಾ ಅಚಿತಿ ಅದಕ ಅಂವ ಹಂಗ ಮಾಡ್ತಾನ ಎಂದು ಇವರ ಕುಚೆಷ್ಟೆಯತ್ತ ಬಾಳ ತೆಲಿ ಕೆಡಿಸಿಕೊಳ್ಳುತ್ತಿರಲಿಲ್ಲ. ನೀಲಿ ಎದುರಿಗೆ ಬಂದರೆ ದಾರಿ ಕಟ್ಟಿ ಗಲ್ಲ ಹಿಂಡುತ್ತಿದ್ದ. ಆ ನೋವು ತಾಳದೆ ‘ಕಿವುಡಾ.. ಬಾಡ್ಯಾ’ ಎಂದು ಇಡೀ ಊರೆ ಕೇಳುವ ಹಾಗೆ ನೀಲವ್ವ ರಂಗನನ್ನು ಬೈಯುತ್ತಿದ್ದಳು. ಓನ್ಯಾಗ ಅಲ್ಲಲ್ಲಿ ಕುಳಿತ ಮುದುಕ್ಯಾರು “ಬಿಡಬ್ಯಾಡಲಾ ಅಕೀನ ಬೇರಕಿ ಎಣ್ಣೀನ ಎತ್ತಾಗ ಓಡಸ್ಕೊಂಡ ಹೋಗು” ಎಂದು ಚಾಷ್ಟಿ ಮಾಡುತ್ತಿದ್ದರು. ನೀಲವ್ವನ ತಾಯಿ ದುಂಡವ್ವ “ನನ್ನ ಮಗಳ ಓಡಸ್ಕೊಂಡ ಹೋಗಬೇಕಾದ್ರ ಅಂವನ ಚೆನ್ನ ಬಾಳ ಗಟ್ಟಿ ಇರಬೇಕು” ಎಂದು ನಕಲಿ ಮಾಡಿ ಓನಿಯ ಎಲ್ಲ ಮುದಿಕಿಯರೊಟ್ಟಿಗೆ ತಾನೂ ನಗುತ್ತಿದ್ದಳು. + +ಕಿವುಡ ರಂಗನಿಗೂ ನೀಲಿಗೂ ಆಗಾಗ ಒಂದಿಷ್ಟು ಕೋಳಿ ಜಗಳ ಇದ್ದೇ ಇತ್ತು. ಓನಿಯ ಮಂದಿ ಮಳ್ಳ ಹುಡುಗ್ರತ್ತ ತೆಲಿ ಕೆಡಸ್ಕೊತಿದ್ದಿಲ್ಲ. ನೋಡಿ ನೋಡದಂತೆ, ಕೇಳಿ ಕೇಳದಂತೆ ಇರುತ್ತಿದ್ದರು. ಕಿವುಡ ರಂಗ ಆ ಓನಿ ಮಂದಿ ಮನಸ್ಸ ಗೆದ್ದಿದ್ದ. ಅದರಾಗ ಊರ ಗೌಡರ ಮನೆ ಆಳ ಮನಷ್ಯಾ ಅನ್ನು ಗೌರವ ಅವನಿಗಿತ್ತು. ಅತ್ತಾಗ ಹ್ವಾದ್ರು ರಂಗಾ ಇತ್ತಾಗ ಹ್ವಾದ್ರು ರಂಗ ಅಂತ ಕರಿತಿದ್ರು. ಹಿರ್ಯಾರಿಗೆ ಕಿರ್ಯಾರ್ಗೆ ನೆಡತಿ ಹಚ್ಚಿ ಕಾಕಾ, ದೊಡ್ಡಪ್ಪ, ಅಕ್ಕಾ, ದೊಡ್ಡವ್ವ, ಚೀಗವ್ವಾ, ಮಾಂವಾ ಅಂತ ಕರಿತಿದ್ದ. ಹಿಂಗಾಗಿ ರಂಗನ ಮ್ಯಾಲ ಆ ಓನಿ ಮಂದಿ ಅಷ್ಟ ಅಲ್ಲ ಊರ ಮಂದಿನೂ ಬಾಳ ಜಿಂವ ಜಿಂವ ಮಾಡ್ತಿದ್ರು. + +ನಡತೆಯಿಂದ ದುಂಡವ್ವಗ ಅಕ್ಕಾ ಅಂತ ರಂಗ ಕರೀತಿದ್ದ. ರಂಗ ಜಾತಿಯಿಂದ ವಾಲಿಕಾರನಾದರೂ ಅವನ ನಡೆ ನುಡಿ ಸ್ವಭಾವ ಚಲೋ ಇರುದ್ರಿಂದ ದುಂಡವ್ವ ತಮ್ಮನ ಸ್ಥಾನ ಕೊಟ್ಟಿದ್ಳು. ರಂಗ ಹುಟ್ಟ ಪರದೇಸಿ ಮಗಾ ಆಗಿದ್ದ. ‘ದಿಕ್ಕಿಲ್ಲದವ್ರಿಗೆ ದೇವ್ರ ಗತಿ’ ಅನ್ನುವಂಗ ಇಡೀ ಓನಿ ಮಂದಿ, ರಂಗನ್ನ ಮಗನತರಾ ಕಾಣತಿದ್ರು. ಒಂದಿನ ಜೋರಾಗಿ ಹೊಡೆದ ಮಳಿಗೆ ಊರ ಮುಂದಿನ ಬಗಸಿ ಹಳ್ಳ ತುಂಬಿ ಬರಟಾ ಹರಿತಿತ್ತು. ಹೊಲದಿಂದ ಮನಿಕಡೆ ಬರ್ತಿದ್ದ ರಂಗನ ಅವ್ವ ಅಪ್ಪನ ಆ ಬಗಸಿ ಹಳ್ಳ ನುಂಗಿತ್ತು. ಆಗ ರಂಗ ಮೂರ ವರ್ಷದ ಹುಡಗ. ರಂಗನ ಅಜ್ಜಿ ಯಮನವ್ವ ಊರಾಗ ಅವರಿವ ಮನೆ ಕಸಾ ಮುಸರಿ ಬೆಳಗಿ ಅವರ ಇವರ ಕೊಟ್ಟ ತಂಗಳನ್ನ ಸೀರಿ ಸೆರಗನ್ಯಾಗ ಮುಚಗೊಂದ ಬಂದು ರಂಗಗ ಉಣಸಿ ತಿನಿಸಿ ದೊಡ್ಡಾಂವನ್ನ ಮಾಡಿದ್ಳು. ಊರ ಗೌಡರಿಗೆ ದೈನಾಸ ಪಟ್ಟ ಮೊಮ್ಮಗನ್ನ ನಿಮ್ಮನ್ಯಾ ದನಾ ಕಾಯಾಕ ಇಟಗೊರ್ರೀ.. ನಾ ಇಂದೋ ನಾಳೆನೋ ಉದರಿ ಹೋಗೋ ಮರಾ.. ಎಂದು ಒಂದಿನ ಮಲ್ಲನ ಗೌಡರ ಮುಂದ ಯಮನವ್ವ ಕಣ್ಣೀರಿಟ್ಟಾಗ ಮಲ್ಲನಗೌಡರ ಮನಸು ಕರಗಿತು. ಆಯ್ತು ನಾಳಿಯಿಂದ ಕಳಿಸಿಕೊಡು ನಿನ್ನ ಮೊಮ್ಮಗನ್ನ ಎಂದು ಗೌಡ್ರು ಹೇಳಿದಾಗ ಯಮನವ್ವಗ ತನ್ನ ಮೊಮ್ಮಗಗ “ಸರಕಾರಿ ನೌಕರಿ” ಸಿಕ್ಕಷ್ಟು ಸಂತೋಷವಾಯ್ತು. ರಂಗನೂ ಗೌಡರ ಮನಿ ಕೆಲಸಕ್ಕ ಹೋಗು ಮೊದಲ ಊರ ಹನಮಪ್ಪಗ ಎರಡ ಜೋಡಗಾಯಿ ಒಡಸ್ಕೊಂಡ “ನನ್ನಿಂದ ಗೌಡರ ಮನಿಯ್ಯಾಗ ಯಾವ ತಪ್ಪು ಆಗದಂಗ ನೀನ ಕಾಯಪೋ” ಎಂದು ಹನಮಪ್ಪನ ಕಿವಿಮ್ಯಾಲ ಇಟ್ಟಿದ್ದ. + +ಯಮನವ್ವ ಯಾವಾಗಲೂ ಸಿಂಧೂರ ಲಕ್ಷ್ಮಣನ ಕತಿ ಹೇಳಿ ರಂಗನ ಬೆಳಸಿದ್ಳು. ರಂಗಗ ಸಿಂಧೂರ ಲಕ್ಷ್ಮಣ್ಣ ಅಂದ್ರ ಒಂದು ರೀತಿ ಅಭಿಮಾನ. ಊರಗ ಹನಮಪ್ಪನ ಗುಡಿಯಾಗ ಕಪ್ಪು ಬಿಳಪಿನ ಚೌಕಟ್ಟಿನಲ್ಲಿ ಬಂದಿಯಾಗಿದ್ದ ಸಿಂಧೂರ ಲಕ್ಷ್ಮಣನ ಪೋಟೋ ಆಗಾ ನೋಡಿ ತಾನೂ ಇವನಂಗ ಆಗ ಬೇಕು ಅಂತ ಚಿಗರು ಮೀಸಿಮ್ಯಾಲ ಕೈ ಇಟ್ಟು ಕೊಳ್ಳುತ್ತಿದ್ದ. ಸಿಂಧೂರ ಲಕ್ಷ್ಮಣನ ನಾಕಾ ಯಾವೂರಾಗರ ಆಡಾಕತ್ಯಾರ ಅಂತ ಸುದ್ದಿ ತಿಳದ್ರ ಸಾಕ ಬಂವ್ ಅಂತ ಸೈಕಲ್ಲ ಹತ್ತಿ ಹೊಕ್ಕಿದ್ದ. ಮುಂದಿನ ಸಾಲಗ ಕುಂತ ಇಡೀ ರಾತ್ರಿ ನಾಟಕ ನೋಡಿ ಬಂದು ಊರಾಗ ಅಲ್ಲಲ್ಲಿ ತನ್ನ ವಾರಿಗೆ ಗೆಳಿಯರಾದ ಕೋತರ ಬಸ್ಯಾ, ಹೂಗಾರ ಶರಣಯ್ಯನ ಮುಂದ ನಾಟಕದ ಡೈಲಾಗ ಹೊಡೆಯುತ್ತ ಚಿಗರು ಮೀಸಿ ತಿರಿಯುತ್ತ ಗಹಗಹಿಸಿ ನಗುತ್ತಿದ್ದ. + +ಇವನ ಡೈಲಾಗ ಕೇಳಿದ ಗೆಳಿಯಾರು ಚಪ್ಪಾಳಿ ತಟ್ಟಿ ನೀ ಸೇಮಟು ಸೇಮ ಸಿಂದೂರ ಲಕ್ಷ್ಮಣನ ಹಂಗ ಅದಿ ಅಂತ ಶರಣಯ್ಯ ಹೇಳಿದಾಗಂತು ರಂಗಗ ಆಕಾಶ ಬಾಳ ದೂರೇನ ಉಳದಿರ್ಲಿಲ್ಲ. + +ಸಾಲಿ ಹಿಂದು ಮುಂದ ಹಾಯದ ರಂಗನ ಬದುಕು ಮಲ್ಲನಗೌಡರ ದನದ ಕೊಟ್ಟಿಗೆಯಲ್ಲಿ ಮುಂದು ವರದಿತ್ತು. ತನ್ನ ಸಾಕಿ ಬೆಳಸಿದ ಯಮನವ್ವ ಸತ್ತ ಮೇಲಂತೂ ಖಾಯಂ ಗೌಡರ ದನದ ಮನಿಯೇ ಅವನ ಅರಮನಿಯಾಯಿತು. ತಂದಿ ತಾಯಿ ಪ್ರೀತಿ ಕಾಣದ ರಂಗ ಯಮನವ್ವಜ್ಜಿನ ತಂದಿ ತಾಯಿ ಎಂದು ನಂಬಿತ್ತು. ಅಕೀನೂ ಸತ್ತ ಮ್ಯಾಲ ರಂಗಗ ಯಾರಂದ್ರ ಯಾರೂ ದಿಕ್ಕಿಲ್ಲದಂಗಾತು. ಇದ್ದ ಒಂದ ಹಾಳಮಣ್ಣಿನ ಕೋಣಿ ಮಳೆಗೆ ಮುಗ್ಗರಿ ಬಿದ್ದು ನೆಲಸಮವಾಗಿತ್ತು. ಗೌಡ್ರ ಮನೆ ದನಾ,ಕೊಟ್ಟಿಗೆ ಬಿಟ್ರೆ ರಂಗನಿಗೆ ಮುಂದಿನೂರು ಗೊತ್ತಿರಲಿಲ್ಲ. + +ರಂಗನ ಸಂಬಾಯಿತ ಬುದ್ದಿಗೆ ಗೌಡತಿ ಮನೆ ಮಗನಂತೆ ಕಾಣುತ್ತಿದ್ದಳು. ಆದ್ರೆ ಮಲ್ಲನ ಗೌಡರಿಗೆ ಇದು ಹಿಡಿಸುತ್ತಿರಲಿಲ್ಲ. “ಚಪ್ಪಲ್ಲು ಬಂಗಾರದ್ದು ಎಂದು ಜಗಲಿ ಮ್ಯಾಲ ಇಡಾಕ ಅಕೈತೇನು” ಒಂದು ಸಾರಿ ಗೌಡತಿಯನ್ನು ಹಚ್ಚಿ ಜಾಡಿಸಿದ್ದ. ಅಂದಿನಿಂದ ರಂಗ ಬರೀ ಕಟಗಿ ಒಡಿಯೋದಿದ್ರೆ ಅಷೇ ಗೌಡರ ಮನಿಕಡೆ ಬರ್ತಿದ್ದ. ಉಳಿದ ಸಮಯ ಅದೆ ದನದ ಕೊಟ್ಟಿಗೆಯಲ್ಲಿ ದನಕ್ಕೆ ನೀರು ಕುಡಿಸುವುದು, ಹೆಂಡಿಮಾಡುವುದು. ಕೆಲಸ ಇಲ್ಲದಿದ್ದಾಗ ತನ್ನ ವಾರಿಗೆ ಗೆಳೆಯರೊಂದಿಗೆ ಅಲ್ಲಿಲ್ಲಿ ಕಟ್ಟಿಗೆ ಕುಳಿತು ಹರಟೆ ಹೊಡೆಯುವುದು ಮಾಡುತ್ತಿದ್ದ. ರಂಗ ಹರಟೆ ಹೊಡೆಯುವುದನ್ನು ಸಹಿಸದ ಸೆಟ್ಟರ ಸುಭಾಷ ಕುದ್ದಾಗಿ ಗೌಡರ ಕಿವಿಯಲ್ಲಿ ಊದಿ ರಂಗನಿಗೆ ಚಾಸ್ತಿ ಮಾಡಿಸಿ ನಕ್ಕಿದ್ದ. ಅಂದಿನಿಂದ ತಾನಾತು ತನ್ನ ಕೆಲಸಾತು ಯಾವ ಗೊಡವಿಗೂ ಹೋಗದೆ ರಂಗ ಸುಮ್ಮನಿದ್ದ. + +ಅಂದು ಗೌಡತಿ ಮನಿಯಾಗ ಒಂದೂ ಕಟಿಗಿಲ್ಲ ಒಂದಿಷ್ಟ ಕಟಗಿ ಒಡದ ಕೊಟ್ಟ ಹೋಗಬಾ ಎಂದು ರಂನನ್ನು ಕರಸಿದ್ದಳು. ಗೌಡರ ಮನಿಯಂಗಳದಲ್ಲಿ ಉರುಉರು ಬಿಸಿಲಿಲ್ಲಿ ರಂಗ ದೆವ್ವಿನಂತ ಕೊಡ್ಡದ ಜೋಡಿ ತಳಕಿಗೆ ಬಿದ್ದಿದ್ದ. ರಂಗ ಕಟಗಿ ವಡೆಯುವುದನ್ನು ಕದ್ದು ಕದ್ದು ನೀಲಿ ನೋಡುತ್ತ ಅಕ್ಕಿಯಲ್ಲಿ ಹಳ್ಳ ಹುಡುಕುತ್ತಿದ್ದಳು. ಆಗಷ್ಷೆ ಹತ್ತನೇತೆ ಪಾಸಗಿದ್ದ ನೀಲಿಯ ಮನಸ್ಸು ಹಕ್ಕಿಯಂತೆ ಎಲ್ಲಂದರಲ್ಲಿ ಹಾರಾಡಬೇಕು ಅಂತ ಅನಿಸುತ್ತಿತ್ತು. ರಂಗ ಮೊದಲಿನ ಗತೆ ನನ್ಯಾಕ ಕಾಡಸ್ತಿಲ್ಲ, ಜಡಿಹಿಡಿದು ಜಗ್ಗುತ್ತಿಲ್ಲ, ಕೊಡಹೊತ್ತು ನೀರುತರುವಾಗ ನನಗೇಕೆ ಮಾರಿಗೆ ನೀರು ಚಿಮುಕಿಸುತ್ತಿಲ್ಲ, ದಾರಿಗಟ್ಟಿ ನನ್ನ ಗಲ್ಲ ಏಕೆ ಹಿಂಡುತ್ತಿಲ್ಲ ಎಂದು ನೀಲಿಯ ಮನದಲ್ಲಿ ಚಡಪಡಿಸಿದಳು. ರಂಗನ ಕಬ್ಬಿನದಂತ ಕೈ ಸ್ಪರ್ಶ ನೀಲಿಗೆ ಈಗ ಬೇಕೆನಿಸುತ್ತಿತ್ತು. + +ದಬ್ ದಬ್ ಕಟ್ಟಿಗೆ ಒಡೆಯುತ್ತಿದ್ದ ರಂಗನ ಎದೆಯಲ್ಲಿ ಬೆವರು ಹರಿಯುತ್ತಿತ್ತು. ಮೈಯಲ್ಲ ತೈಲಮಯವಾಗಿತ್ತು. ತುಂಬಿದ ತೋಳುಗಳು ಮಿರಮಿರನೆ ಮಿನಗುತ್ತಿದ್ದವು. ಅವನ ಚಿಗುರು ಮೀಸಯಲ್ಲಿ ಬೇವರ ಹನಿ ಜಿನಗುತ್ತಿತ್ತು. ಯಾವಾಗೂ ತನ್ನ ಮನೆಯ ಕಡೆ ಕಣ್ಣು ಹರಿಬಿಡುವ ಅವನ ಕಣ್ಣುಗಳೇಕೆ ಇಂದು ಇತ್ತ ವಾಲುತ್ತಿಲ್ಲ ಎಂದು ನೀಲಿಗೆ ಸಿಟ್ಟು ಬರತೊಡಗಿತು. ಹೆಂಗೋ ಧೈರ್ಯಮಾಡಿ ಜೋರಾಗಿ ‘ಕಿವುಡಾ’ ಎಂದು ಕಿರುಚಿದಳು.ಆಗ ರಂಗ ಇವಳತ್ತ ಗಮನಿಸದೆ ಕಟಿಗೆ ಒಡೆಯುತ್ತಲೇ ಇದ್ದ. ಇಷ್ಟ ದಿನಾ ಈ ಮೂಳ ನಾ ಬ್ಯಾಡ ಅಂದ್ರೂ ಕಾಡಸ್ತಿದ್ದ ಈಗೇನಾಗೇತಿ ಇಂವದ ದಾಡಿ ಎಂದು ಮನದಲ್ಲಿಯೆ ರಂಗನ್ನು ಬೈಯುತತ್ತಿದ್ದಳು. + +ಅವಳಿಗೆ ರಂಗನ ಮೊದಲಿನ ಚೆಷ್ಡೆ ಬೇಕಿನಿಸುತ್ತಿತ್ತು. ಮತ್ತೆ ಮತ್ತೆ ಕಿವುಡಾ ಎಂದು ಮೆಲ್ಲನೆ ಗುಣಗಿದಾಗ ರಂಗÀ ಬೆವರು ವರೆಸಿಕೊಳ್ಳುತ್ತ ನೀಲಿಯನ್ನು ನೋಡಿ ಚಿಗುರು ಮೀಸೆ ನೆವರುತ್ತ ನೀಲಿಯನ್ನು ನೋಡಿ ಮುಗುಳ್ನಕ್ಕ. ಆಗ ನೀಲಿ ನವಿಲಾದಳು. ಗರಿಗೆದರಿದಳು. ಅವನನ್ನೇ ನೋಡುತ್ತ ಎಷ್ಷೋ ಹೊತ್ತು ಕುಳಿತಳು. ರಂಗ ಆಗಾಗ ಇವಳತ್ತ ನೋಟ ಹರಿಸುತ್ತಿದ್ದ.ನೀಲಿ ಗಿಳಿಮರಿಯಂತೆ ನಗುತ್ತಿದ್ದಳು. ಮತ್ತೊಮ್ಮೆ ಮೆಲ್ಲಗೆ ಕಿವುಡಾ ಎಂದು ಉಲಿದಾಗ ರಂಗ ಕಣ್ಣು ಹೊಡೆದು ನಕ್ಕ. ಆಗ ನೀಲಿಯ ಮೈಯಲ್ಲಿ ಕರೆಂಟು ಪಾಸಾದಂತೆ ಆಯಿತು. ಬಾಗಿಲ ಹತ್ತಿರ ಬಂದು ಮೇಕೆ ಮರಿಯ ಬೆನ್ನು ಸವರುತ್ತ ರಂಗನಿಗೆ ತಾನೂ ಕಣ್ಣು ಹೊಡೆದು ಪ್ರೀತಿಯ ಗುಡಿಗೆ ದೀಪ ಹಚ್ಚಿಟ್ಟಳು. + ******* +ಗೌಡ್ರು ಪ್ರತಿ ವರ್ಷವೂ ಭಾರತಾ ಹುಣ್ಣಿಗೊಮ್ಮೆ ಸವದತ್ತಿ ಯಲ್ಲಮ್ಮ ಗುಡ್ಡಕ್ಕ ಎತ್ತಿನ ಬಂಡಿ ಕಟ್ಟಿಕೊಂಡು ಹೋಗುತ್ತಿದ್ದರು. ಹುಣ್ಣಿಮೆ ನಾಳೆ ಇದೆ ಎಂದಾಗ ಅವರ ಎತ್ತಿನ ಬಂಡಿ ಇಂದೆ ಸಜ್ಜಾಗಿ ಹೋಗುವ ತಯಾರಿಯಲ್ಲಿ ಇರುತ್ತಿತ್ತು. ಊರ ಗೌಡ್ರ ಬಂಡಿ ಹೂಡ್ಯಾರಂದ್ರ ನಾವ್ಯಾಕ ಸುಮ್ನಿರುದು ಅಂತ ಊರಾಗಿನ ಮಂದಿನೂ ಬಂಡಿ ಕೊಳ್ಳಗಟ್ಟತ್ತಿದ್ರು. ಇಪ್ಪತ್ತರಿಂದ ಇಪ್ಪತೈದು ಬಂಡಿ ಸಾಲುಗಟ್ಟಿ ಎಲ್ಲಮ್ಮನ ಗುಡ್ಡದ ಹಾದಿ ಹಿಡಿತಿದ್ದವು. ಗೌಡರ ಬಂಡಿ ಪ್ರತಿ ವರ್ಷನೂ ಮುಂದ ಹೋಗಬೇಕು ಅನ್ನುವ ಸಂಪ್ರದಾಯ ಇತ್ತು. ಗೌಡರ ಬಂಡಿ ಹಿಂದ ಸೆಟ್ಟರ ಬಂಡಿ, ಅದರ ಹಿಂದ ಐಗೋಳ ತಿಪ್ಪಯ್ಯನ ಬಂಡಿ, ಕಡೆ ಕಡೆಗೆ ಹೋಲ್ಯಾರು ದಾಸರು ಬಂಡಿಗೋಳು ಬರ್ತಿದ್ದವು. + ಎಳ್ಳ ಹಚ್ಚಿದ ಸಜ್ಜಿರೊಟ್ಟಿ, ಹುಳಿಬಾನ, ಗುರೆಳ್ಳ ಹಿಂಡಿ, ಸಿಂಗಾದ ಹಿಂಡಿ, ಹುರದ ಕರಚಿಕಾಯಿ ಒಂದ ವಾರ ಇರಾಕಲೆ ಮನಿಯಾಗ ಹೆಣ್ಣಮಕ್ಕಳು ಸಿದ್ದಮಾಡಕೋತಿದ್ರು.ತೆಳ್ಳಗ ಬಿಳಿಜ್ವಳದರೋಟ್ಟನೂ ಮಾಡಿ ಪುಟ್ಟಿಗಂಟ್ಲೆ ತುಂಬಿ ಇಡತಿದ್ರು.ಬೇಕ ಬ್ಯಾಡಾದ್ದು ಎಲ್ಲವನ್ನು ಕಟ್ಟಿಕೊಂಡು ಇಳಿ ಸಂಜಿ ಹೊತ್ತಿಗೆ ಊರಿಂದ ಬಂಡಿಗೋಳು ಹೋರಡಲು ಸಿದ್ದಾದವು. +ಎತ್ತುಗಳ ಮೈ ತೊಳೆದು, ಕೊಂಬು ಸವರಿ, ಬಣ್ಣ ಬಣ್ಣದ ರಿಬ್ಬನ್ನು ಕಟ್ಟಿ, ಕಾಲಿಗೆ ನಾಲು ಕಟ್ಟಿಸಿ, ಮೈತುಂಬ ಜೂಲಾ ಹಾಕಿ ಶೃಂಗಾರ ಮಾಡಿದ್ದರು. ಎತ್ತುಗಳು ಹುರುಪುನಿಂದ ನಲಿಯುತ್ತಿದ್ದವು. ರಂಗನೂ ಎತ್ತುಗಳ ಮೈ ತೊಳೆದು ಕಾರ ಹುಣ್ಣಿಮೆಯಂದು ಅಲಂಕಾರ ಮಾಡಿದಂತೆ ಅಲಂಕಾರ ಮಾಡಿದ್ದ. ಆನೆ ಎತ್ತರದ ಗೌಡರ ಎತ್ತುಗಳು ಊರಿಗೆ ದೊಡ್ಡವು. ಎಲ್ಲರ ಕಣ್ಣುಗಳು ಆ ಎತ್ತಿನತ್ತಲೆ ಇರುತ್ತಾವೆ ಎಂದು ಅವುಗಳ ಕಾಲಿಗೆ ನೆದರು ಆಗಬಾರದೆಂದು ಮುಂಗಾಲಿಗೆ ಕರಿ ದಾರ ಕಟ್ಟಿದ್ದ. +ರಂಗ ಗುಡ್ಡಕ್ಕೆ ಹೋಗುವುದು ಕಚಿತ ಪಡಿಸಿಕೊಂಡು ನೀಲಿಯೂ ಗುಡ್ಡದೆಲ್ಲಮನಿಗೆ ನಾನೂ ಹೊಕ್ಕೀನಿ ಎಂದು ನಾಕಾರು ದಿನದಿಂದಲೆ ದುಂಡವ್ವನಿಗೆ ಗಂಟು ಬಿದ್ದಿದ್ದಳು. ದುಂಡವ್ವ ಮುಂದಿನ ವರ್ಷ ಹೋಗೂವಂತೆ ಈ ವರ್ಷ ಬ್ಯಾಡ ಎಂದು ಎಷ್ಟೂ ಹೇಳಿದರೂ ಊಟ ಬಿಟ್ಟು ಹಟಮಾಡಿ ಕುಳಿತಾಗÀ “ಹುಡಗಿ ಅಷ್ಟ ಜಿಂವಾ ತಿಂತೈತಿ ಕಳಿಸಿಕೊಡು, ಬೇಕಾದ್ರ ನಮ್ಮ ಗಾಡ್ಯಾಗ ಬರವಳ್ಳು” ಎಂದು ಗೌಡನ ಹೆಂಡತಿ ದುಂಡವ್ವಗ ಅಂದಾಗ ಗೌಡತಿ ಮಾತ ಮೀರದೆ ದುಂಡವ್ವ ಒಪ್ಪಗೊಂಡ್ಳು. + +ಹಕ್ಕಿಗಳು ಗೂಡು ಸೇರುವ ಹೊತ್ತಿಗೆ ಊರಿಂದ ಒಂದೊಂದೆ ಗಾಡಿಗಳು ಮೆಲ್ಲಕ ಸಾಗಿದವು. ಗೌಡರ ಬಂಡಿ ಹೊಡೆಯುವ ರಂಗ ಗೌಡರು ತಂದು ಕೊಟ್ಟ ಹೊಸಾ ಬಟ್ಟೆ ತೊಟ್ಟುಕೊಂಡು ರಾಜಕುಮಾರನಂತೆ ಕಾಣುತ್ತಿದ್ದ. ತೆಲೆಯ ಕರಾಪು ನೀಟಾಗಿ ಮಾಡಿಸಿಕೊಂಡು ನೀಲಿಯ ಮುದ್ದಾದ ಕಣ್ಣುಗಳಿಗೆ ಮನ್ಮಥನಂತೆ ಕಾಣುತಿದ್ದ. ಊರ ಬಂಡಿಗೊಳಕಿಂತ ತನ್ನ ಬಂಡಿ ಮುಂದ ಹೊಂಟದ್ದು ರಂಗನಿಗೊಂದು ದೊಡ್ಡ ಹೆಮ್ಮೆ ವತ್ತಟ್ಟಿಗಾದರೆ, ತನ್ನ ಮನದಲ್ಲಿ ದಿನಾಲೂ ನಿದ್ದೆಗೆಡಿಸುವ ದೇವತೆ ನೀಲಿ ತನ್ನ ಬಂಡಿಯಲ್ಲಿ ಬಂದದ್ದು ರಂಗನಿಗೊಂದು ಸಂಭ್ರಮ ತಂದಿತ್ತು. +“ಉಧೋ.. ಉಧೋ ಉಧೋ ಎಲ್ಲಮ್ಮ ನಿನ್ನಾಲಕೂಧೋ.. ಜೋಗಳ ಬಾಯಿ ಸತ್ಯವ್ವ ನಿನ್ನಾಲ್ಕೂಧೋ.. ಪರಶುರಾಮಾ ನಿನ್ನಾಲ್ಕೂಧೋ” ಎಂದು ಬಂಡಿಯಲ್ಲಿದ್ದವರು ದೇವಿ ಯಲ್ಲಮ್ಮ ತಾಯಿಯನ್ನು ಭಕ್ತಿಭಾವದಿಂದ ನೆನೆಯುತ್ತಿದ್ದರು. ರಂಗನೂ ಎತ್ತುಗಳ ಬಾಲ ಮುಟ್ಟುತ್ತ ಹುಸ್ಯಾ.. ಹುಸ್ಯಾ.. ಅನ್ನುತ್ತ ಬಂಡಿ ಓಡಿಸುವ ಖುಷಿಯಲ್ಲಿರುತ್ತಿದ್ದ. ಸದಾ ರಂಗನ ದ್ಯಾನದಲ್ಲಿರುವ ನೀಲಿ ರಂಗ ಬಂಡಿ ಹೊಡೆಯುವ ಗತ್ತು, ಎತ್ತುಗಳನ್ನು ಓಡಿಸುವ ರೀತಿ ನೋಡುತ್ತ ಬಂಡಿಯಲ್ಲಿ ಪುಟ್ಟ ಗುಬ್ಬಿಯಂತೆ ಅಡಗಿ ಕುಳತಿದ್ದಳು. ಬಂಡಿಯಲ್ಲಿ ಗೌಡ ಮತ್ತು ಗೌಡತಿ ಇದ್ದದ್ದರಿಂದ ನೀಲಿಯನ್ನು ತಿರುಗಿ ನೋಡುವ ಸಹಾಸ ರಂಗ ಮಾಡುತ್ತಿರಲಿಲ್ಲ. +ರಾತ್ರಿಯಾದಗಂತೂ ಹಿಟ್ಟು ಚೆಲ್ಲಿದಂತ ಬೆಳದಿಂದಳ ಬೆಳಕಲ್ಲಿ ಬಂಡಿಗಳು ರಸ್ತೆಯ ಮೇಲೆ ಸಾಲು ಸಾಲಾಗು ಸಾಗುತ್ತಿದ್ದವು. ಎದುರಿಗೆ ಬರುವ ಮೋಟಾರ ವಾಹನ ಬೇಳಕು ಗಾಡಿಯನ್ನು ಪ್ರವೇಶಿಸಿ ಗಾಡಿಯಲ್ಲಿದ್ದವರ ಕಣ್ಣು ಕುಕ್ಕಿಸುತ್ತಿದ್ದವು. ರಂಗನಿಗೆ “ನೀದಾನ ಹೋಗ್ಲೀ ಏನೂ ಅರ್ಜೆಂಟ್ ಇಲ್ಲ” ಎಂದು ಗೌಡ ಆಗಾಗ ಹೇಳುತ್ತಲೇ ಇರುತ್ತಿದ್ದ. +ಮೂಡನದಲ್ಲಿ ಬೆಳ್ಳಿ ಚುಕ್ಕಿ ಮೂಡುವ ಹೋತ್ತಿಗೆ ಬಂಡಿಗಳು ಗುಡ್ಡ ಹೊಕ್ಕವು. ಎಲ್ಲರೂ ಬಂಡಿ ಕೊಳ್ಳ ಹರಿದು, ಎತ್ತುಗಳಿಗೆ ಕನಕಿ ಹಾಕಿ, ಜಳಕಾ ಮಾಡಿ ದೇವಿಯ ದರುಶನಕ್ಕೆ ತೈಯಾರಾದರು. ನೀಲಿ ಸೀರಿ ಉಟ್ಟುಕೊಂಡು ಮದುವಣಗಿತ್ತಿಯಂತೆ ತಯಾರಾಗಿ ನಿಂತಾಗ ಎತ್ತಿಗೆ ಕನಕಿ ಹಾಕುತ್ತಿದ್ದ ರಂಗ ಅವಳ ಚಲುವಿಗೆ ಬೆರಗಾಗಿ ಅವಳನ್ನೇ ನೋಡುತ್ತ ನಿಂತು ಕೊಂಡ. ನೀಲಿ ರಂಗನನ್ನು ನೋಡುತ್ತ ಕಣ್ಣು ಸನ್ನೆ ಮಾಡಿ ನೀನೂ ಗುಡಿಗೆ ಬಾ ಎಂದು ಕರೆದಳು. ರಂಗ ಇಲ್ಲ ಅನ್ನುವ ರೀತಿ ಗೋಣು ಅಲ್ಲಾಡಿಸಿದ. ಗೌಡರೊಟ್ಟಿ ಅಂವ ಬರಬಾರದು ಅನ್ನುವ ರೀತಿನೀತಿ ನೀಲಿ ಅರಿತುಕೊಂಡಿದ್ದಳು. ಎಲ್ಲರು ದೇವರ ದರುಷಣ ಪಡೆದು ತಮಗೆ ತೋಚಿದತ್ತ ಅತ್ತಿತ್ತ ಹೋದರು. ನೀಲಿ ಗೌಡತಿಯ ಕಣ್ಣು ತಪ್ಪಿಸಿ ರಂಗನನ್ನು ಹುಡುಕಿಕೊಂಡು ರಂಗನ ಸನಿಹ ಬಯಸಿದಳು. ಎಷ್ಟೋ ಹೊತ್ತು ಕದ್ದು ಮುಚ್ಚಿ ಕೈ ಕೈ ಹಿಡಿದು ಅಡ್ಡಾಡಿದರು. ತಮ್ಮ ಪ್ರೀತಿ ಪ್ರಣಯದ ಸಲ್ಲಾಪದ ಸವಿ ಆ ಜಾತ್ರೆಯಲ್ಲಿಯೇ ಹಿತವಾಗಿ ಅನುಭವಿಸದರು.ತನ್ನ ಪ್ರೀತಿಯ ಸಂಕೇತಕೆಂದು ಹನಮಂತನ ತಾಯಿತವನ್ನು ರಂಗನ ಕೊರಳಿಗೇ ತಾನೇ ಕಟ್ಟಿ ರಂಗನ ಕೆನ್ನೆಗೊಂದು ಮುತ್ತನ್ನು ಒತ್ತಿದಳು. ರಂಗನೂ ಒಂದು ಉಂಗುರ ಅವಳ ಬೆರಳಿಗೆ ತೊಡಿಸಿ ಅವಳ ಕೆನ್ನೆಗೆ ಮುತ್ತಿನ ಮಳೆ ಸುರಿಸಿದನು. ಇವರ ಕಳ್ಳಾಟವನ್ನು ಸೆಟ್ಟರ ಸುಭಾಷಪ್ಪ ಹೇಗೋ ನೋಡಿಬಿಟ್ಟಿದ್ದ. ಊರಿಗೆ ಹೋಗಿ ಈ ಮಗನಿಗೆ ತಕ್ಕ ಚಾಸ್ತಿ ಮಾಡಬೇಕೆಂದು ಮನದಲ್ಲಿಯೇ ತನ್ನ ಕೋಪ ತಾಪವನ್ನು ಅದುಮಿಟ್ಟುಕೊಂಡಿದ್ದ. +ಊರಿಗೆ ಬಂದ ಮೇಲೆ ಕುಂತಲ್ಲಿ ನಿಂತಲ್ಲಿ ರಂಗನನ್ನೇ ದ್ಯಾನಿಸತೊಡಗಿದಳು.ದುಂಡವ್ವ ಮಗಳು ಗುಡ್ಡಕ್ಕ ಹೋಗಿ ಬಂದಾಗಿಂದ ಯಾಕೋ ಸಪ್ಪಗ ಆಗ್ಯಾಳ, ನೂರೆಂಟ ಮಂದಿ ಸೆರಗ ತಾಗಿರಬೇಕು. ಇಲ್ಲಂದ್ರ ನೀರಗೀರ ಬದಲಾಗಿ ಮೈಯಾಗ ಸ್ವಲ್ಪ ದುಗಾಡ ಬಂದಂಗ ಆಗೂದ ಸರಳ ಅಂತ ಅರ್ಥೈಸಿಕೊಂಡು ಸುಮ್ಮನಾದಳು. +ರಂಗ ಆಗಾಗ ಗೌಡರು ಮತ್ತು ಗೌಡತಿ ಕೊಟ್ಟ ಕೂಡಿಟ್ಟ ಹಣದಲ್ಲಿ ಒಂದು ಮೊಬೈಲ ಕರಿದಿಸಿ ನೀಲಿಗೆ ಗೊತ್ತಾಗುವಂತೆ ನಾನು ಮೊಬೈಲು ಕರಿದಿಸಿದಿನ್ನಿ ನೋಡು ಅನ್ನುವಂಗೆ ದಿಮಾಕಿಲೆ ಕಿವಿ ಮ್ಯಾಲೆ ಇಟಗೊಂದು ಯಾರೊಟ್ಟಿಗೋ ಮಾತಾಡುತ್ತ ಕಲಸ ಬಗಸಿ ಇಲ್ಲದೆ ಗೌಡರ ದನದ ಕೊಟ್ಟಿಗೆಯಲ್ಲಿ ಇರುವುದು ಬಿಟ್ಟು ನೀಲಿಯ ಮನೆಮುಂದು ಹಾದು ಗೌಡರ ಮನಿಯಂಗಳದಲ್ಲಿ ಬಂದು ನಿಂತು + ‘ಅವ್ವಾರ.. ಅವ್ವಾರ.. ಅಂತ ಎರಡು ಬಾರಿ ಜೋರಾಗಿ ದನಿ ಮಾಡಿದ. ಒಳಗಿದ್ದ ಗೌಡ್ತಿ ಏನಾತು ಅಂತ ದುಡುದುಡು ಹೋರಗ ಬಂದಳು. ಏನಾರ ಕೆಲಸ ಐತೇನ ಅಂತ ಬಂದ್ಯಾರಿ ಅಂತ ಕೈಯಾಗಿದ್ದ ಮೋಬೈಲ ಗೌಡ್ತಿಗೆ ಕಾಣದಂತೆ ಮರಿ ಮಾಡಿ ಕೇಳಿದ. ಕೆಲಸಿದ್ರ ನಾ ಹೇಳಿ ಕಳಸ್ತದ್ದೀಲ್ಲೇನ, ಬರೂದ ಬಂದಿ ಮನಿಗೆ ನಾಕ ಕೊಡ ನೀರ ತಂದ ಹೋಗು ಅಂತ ಹೇಳುತ್ತ ಗೌಡ್ತಿ ಒಳಗ ನಡದ್ಳು. ಬಾಗಿಲ್ಲಿನಿಂತು ತಲೆ ಬಾಚಿಕೊಳ್ಳುತ್ತಿದ್ದ ನೀಲಿ ಸಂಬ್ರಮದಿಂದ ರಂಗನ್ನು ನೋಡುತ್ತ, ಅವನ ಕೈಯೊಳಗಿರುವ ಮೊಬೈಲ ನೋಡಿ ಖುಷಿಯಾದಳು. ಇನ್ನ ಮ್ಯಾಲ ಎಷ್ಷಬೇಕೋ ಅಷ್ಟ ಪೋನನ್ಯಾಗ ಮಾತಾಡಬಹುದು ಅಂತ ಹಿರಿ ಹಿರಿ ಹಿಗ್ಗಿದಳು. ರಂಗ ನೀರಿಗೆ ಹೋಗುವುದೇ ತಡ ತಾನೂ ಒಂದ ಕೊಡ ತಗಿದುಕೊಂಡು ಬಿರಬಿರನೇ ನಳದತ್ತ ನಡೆದಳು. ನಳದಲ್ಲಿ ಯಾವ ಗುಬ್ಬಿ ಸುಳಿವೂ ಇರಲಿಲ್ಲ. ಏನೋ ರಂಗ ಮೊಬೈಲ ತಗೊಂದಿಯಂತ ಬಾಳ ಜೋರಾತ ಬಿಡು ನಿಂದು ನಂಬರ ಏನೈತಿ ಹೇಳು ಎಂದು ಏರುದನಿಯಲ್ಲಿ ನೀಲಿ ರಂಗನನ್ನು ಸತಾಯಿಸಿದಳು. ನನಗ ಇದರಾಗ ನಂದರ ತಗ್ಯಾಕ ಬರೂದಿಲ್ಲ ನೀನ ತಕ್ಕೋ ಲಾಷ್ಟ ನಂಬರ್ 63 ಐತಿ ನೋಡ ಎಂದು ಹೇಳಿದ. ರಂಗನ ಪೆದ್ದ ತನ ನೋಡಿ ನೀಲಿ ನಸುನಗುತ್ತ ಅವನ ಕೈಯಾಗೀನ ಪೋನು ತಗೊಂಡು ತನ್ನ ಮನಿಯಲ್ಲಿರುವ ನಂಬಿರಗೊಂದು ಮಿಸ್ ಕಾಲ ಮಾಡಿ ಅವನ ಮೋತಿಗೊಂದಿಷ್ಟು ನೀರು ಗೊಜ್ಜಿ ನಕ್ಕೋತ ಮನಿಕಡೆ ಹೊಂಟಳು. ನೀಲಿ ಹೋಗುವುದನ್ನು ತದೇಕಚಿತ್ತದಿಂದ ರಂಗ ನಳದಲ್ಲಿ ನಿಂತೆ ನೋಡತೊಡಗಿದ. ಅವಳ ಮಿನಗುವ ಕಣ್ಣು, ತುಂಬಿದ ಎದೆ, ಬಳಕುವ ಮೈ, ಮಾರೂದ್ದ ಇರುವ ನೀಲಿಯ ಜಡೆ ಅವಳ ಬೆನ್ನ ಹಿಂದೆ ಇರುವ ವಿಶಾಲ ಏರುಗಳಿಗೆ ತಾಗಿದಾಗ ರಂಗನ ಮನಸು ಮಹೋತ್ಸವಕ್ಕೆ ಸಿದ್ದಾಗು ಹುರುಪಿನಲ್ಲಿ ಲೀನವಾಗುತ್ತಿತ್ತು. +ಪೋನಿನಲ್ಲಿ ಇಂದು ಏನೇ ಆಗಲಿ ನಿನ್ನ ಅರಮನಿಗೆ ಬರುತ್ತೇನೆ ಎಂದು ಹೇಳಿ ಪೋನು ಕಟ್ಟು ಮಾಡಿಟ್ಟ ನೀಲಿಯ ಮಾತು ಕೇಳಿ ರಂಗನಿಗೆ ಭಯವಾಯ್ತು. ಒಂದು ಕೈ ನೋಡೆ ಬಿಡಬೇಕು ಅಂತ ಅವನ ಮನಸು ಹುರುಪುಗೊಂಡು ಹುಮ್ಮಸದಿ ನಲಿಯುತ್ತಿತ್ತು. +ಮಟಮಟ ಮದ್ಯಾನ ಒಂದು ದಿನ ನೀಲಿ ರಂಗನಿರುವ ದನದ ಕೊಟಗಿಯತ್ತ ಹೆಜ್ಜೆ ಹಾಕಿದಳು. ಹಸಿದ ಹುಲಿ ಜಿಂಕೆಯ ದಾರಿಯನ್ನೆ ಕಾಯುವಂತೆ ರಂಗ ಕಾದು ಕುಳತಿದ್ದ. ದೂರದಲ್ಲಿ ಬರುವ ನೀಲಿ ಧೈರ್ಯ ಕಂಡು ಬೆರಗಾದ. ಹೆಣ್ಣು ಮನಸು ಮಾಡಿದರೆ ಏನೆಲ್ಲ ಮಾಡಬಲ್ಲಳು ಅನ್ನುದಕ್ಕೆ ಇವಳೆ ಸಾಕ್ಷಿ ಎಂದು ರಂಗ ನೀಲಿಯನ್ನು ನೋಡುತ್ತಲೇ ಮೈ ಮರತ. ನೀಲಿ ಬಿಸಿಲ್ಲಿ ಬಂದದ್ದಕ್ಕೆ ಅವಳ ಮೈ ಬೆವರುಗೊಂಡು ಅವಳ ಸೌಂದರ್ಯವನ್ನು ದ್ವಿಗುಣಗೊಳಿಸಿತ್ತು. ಆ ಮಟಮಟ ಮದ್ಯಾನದಲ್ಲಿ ಆ ಎರಡು ದೇಹಗಳು ಹಾವುಗಳು ಮೈಮರೆತು ತಳಕು ಬಿದ್ದಂತೆ ಗೌಡರ ದನದ ಕೊಟಗೆಯಲ್ಲಿ ತಳಕು ಬಿದ್ದು ಎಷ್ಷೋ ದಿನ ಎದಿಯಲ್ಲಿ ಅಡಗಿದ ಆಸೆಯನ್ನು ತೀರಸಿಕೊಂಡವು. ನಿನ್ನ ಬಿಟ್ಟು ನಾ ಬದುಕಲಾರೆ ಅನ್ನುವ ನೀಲಿಯ ಮುಗ್ದ ಮಾತಿಗೆ ನಾನೂ ನಿನ್ನ ಬಿಟ್ಟಿರಲಾರೆ ಎಂದು ರಂಗ ಹೇಳುತ್ತ ನೀಲಿಯನ್ನು ತನ್ನ ತೋಳತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ಮುತ್ತಿನ ಅಭಿಷೇಕ ಮಾಡುತ್ತಿದ್ದ. ರಂಗನ ತೆಕ್ಕೆಯಲ್ಲಿ ಗುಬ್ಬು ಮರಿಯಂತೆ ಬೆಚ್ಚಗೆ ಕುಳಿತು ಅವನ ಮುತ್ತಿನ ಗುಟುಕು ಸ್ವಿಕರಿಸುತ್ತ ನೀಲಿ ತನ್ಮಯಗೊಂಡಳು.ಪ್ರತಿಯಾಗಿ ರಂಗನಿಗೂ ಸಾಕುಬೇಕನ್ನುವಷ್ಟು ಮುತ್ತು ಹನಿಸಿದಳು. +ರಂಗ ಮತ್ತು ನೀಲಿಯ ಈ ಪ್ರೀತಿಯ ದಿನದಿಂದ ದಿನಕ್ಕೆ ಬೆಳೆದು ಹೆಮ್ಮರವಾಯಿಯು. ಶೆಟ್ಟರ ಸುಭಾಸ ಒಂದು ದಿನ ಗುಟ್ಟಾಗಿ ಗೌಡರ ಕಿವಿಯಲ್ಲಿ ಈ ಸುದ್ದಿ ಊದಿದಾಗ ಗೌಡರ ಮನಸಿಗೆ ಬರಸಿಡಿಲು ಹೊಡದಂತಾಯಿತು. ಇದಕ್ಕೊಂದು ಕೊನೆ ಕಾಣಿಸಬೇಕೆಂದು ಗೌಡ ಆತುರಾತುರವಾಗಿ ನಿರ್ಣಯ ತಗಿದುಕೊಂಡು ಕೈಯಲ್ಲಿದ್ದ ಮೋಬೈಲ್ಲ ಕಿವಿಗೆ ಇಟ್ಟುಕೊಂಡು ತಾಸುಗಟ್ಟಲೆ ಮಾತಾಡಿದ. ಗೂಡರು ಯಾರೊಂದಿಗೆ ಮಾತಾಡುತ್ತಿದ್ದಾರೆ ಎಷ್ಟು ಹೊತ್ತು ಮಾತಾಡುತ್ತಿದ್ದಾರೆ ಎಂದು ಶೆಟ್ಟರ ಸುಭಾಸ ಬೆರಗಾಗಿದ್ದ. ಗೌಡರು ಪೋನು ಇಟ್ಟವರೇ ಸುಭಾಸನತ್ತ ಬಂದು ಈ ವಿಷ್ಯಾ ಯಾರಮುಂದು ಬಾಯ ಬಿಡಬೇಡ ನೀಲಿ ನಮ್ಮ ಸ್ವಂತ ಅಕ್ಕನ ಮಗಳು ಎಂದು ಜೋರಾಗಿ ಸುಭಾಸನೆದರು ಗುಡಗಿದರು. ಸುಭಾಸ ಗೋನಾಡಿಸುತ್ತ ಆಯ್ತು ಅನ್ನುವ ರೀತಿ ತಲೆ ಅಲ್ಲಾಡಿಸಿದ. ಆದರೆ ಊರಲ್ಲಿ ಸಣ್ಣಗೆ ನೀಲಿ ರಂಗನಿಗೆ ಹೊಟ್ಟಿಲೆ ಆಗ್ಯಾಳ ಅನ್ನುವ ಗುಮಾನಿ ಸುದ್ದಿ ಹರಡಿತ್ತು. ಅದು ಸತ್ಯವು ಆಗಿತ್ತು. +ಕಿವುಡ ರಂಗ ತನ್ನ ಪ್ರೀತಿಯ ವಿಷಯ ಯಾರಿಗೂ ಗೊತ್ತೆ ಇಲ್ಲ ಅನ್ನುವ ರೀತಿ ರಾಜಾರೋಷವಾಗಿ ಸಿಳ್ಳೆ ಹಾಕುತ್ತ ಊರಲ್ಲಿ ದನಾ ಕಾಯುತ್ತ ಅಡ್ಡಾಡುತ್ತಿದ್ದ. ಅಂದು ಗೌಡರ ದನಗಳು ಹೊಟ್ಟೆ ತುಂಬ ಮೈದು ಅಂಬಾ ಎನ್ನುತ್ತ ಕಿರುಗುಡ್ಡದಿಂದ ಇಳಿದು ಊರ ಹೊಕ್ಕವು. ದನಗಳ ಹಿಂದೆ ಬರುತ್ತಿದ್ದ ಕಿವುಡ ರಂಗ ಬರಲೇ ಇಲ್ಲ. +ನೀಲಿ ರಂಗ ಪೋನಿನ ಹಾದಿ ಕಾದು ಕಾದು ಕಣ್ಣೀರಿಟ್ಟಳು. ನೀಲಿಯ ಹೊಟ್ಟೆಯಲ್ಲಿ ಬೆಳಯುವ ಪಿಂಡವನ್ನು ಚಿವುಟು ಹಾಕಿ. ವರ್ಷ ತುಂಬುವುದರೊಳಗೆ ಒಂದು ಗಂಡು ಹುಡುಕಿ ಮದುವೆ ಮಾಡಿದರು. + +***** +ಗಂಡನ ಗೋರಕಿಯ ಶಬ್ದ ಎಮ್ಮಿ ಕರಾ ಉರಲ ಹಕ್ಕೊಂಡಾಗ ಗೊರ್ ಗೊರ್ ಎಂದು ಮಾಡುವಂತೆ ನೀಲಿಗೆ ಕೇಳಿಸಿದಾಗ ತನಕ್ನ ಅಂಜಿ ಹಾರಿಗೆಡಿಲಿ ಹೆಂಗ ನಿದ್ದಿ ಮಾಡತೈತಿ ನೋಡ ಅಂತ ಒಲೆಯಲ್ಲಿ ಕಟಗಿತುಂಡು ಹಾಕುತ್ತ ಉಪ್ ಉಪ್ ಅಂತ ಒಲೆ ಊದುತ್ತ ಆ ಹುಗಿ ಹಿಡಿದ ಮನೆಯಲ್ಲಿ ಕಿವುಡ ರಂಗನ ನೆನಪು ಅಂದು ಎದೆಯಲ್ಲಿ ಚುಚ್ಚಿದಂತಾಗಿ ನೀಲಿ ಕಣ್ಣೊರಿಸಿಕೊಂಡಳು. + + + + + + \ No newline at end of file diff --git a/PanjuMagazine_Data/article_100.txt b/PanjuMagazine_Data/article_100.txt new file mode 100644 index 0000000000000000000000000000000000000000..f0e8a3747bd74d14385c9633d2479fa8f0b76039 --- /dev/null +++ b/PanjuMagazine_Data/article_100.txt @@ -0,0 +1,29 @@ +ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ ಮುದಲ್ ವಿಜಯ್ ಬೆಂಗಳೂರು ಅವರು ಯುವ ಸಾಹಿತಿ ಗಣಪತಿ ಹೆಗಡೆ ಅವರ ಚೊಚ್ಚಲ ಕಾದಂಬರಿ ಮೌನಸೆರೆಗೆ ಮುನ್ನುಡಿಯ ರೂಪದಲ್ಲಿ ನೀಡಿರುವ ಪ್ರಮಾಣ ಪತ್ರ. ಈ ಹಿನ್ನಲೆಯಲ್ಲಿ ಕಾದಂಬರಿ ಮೊದಲಿನಿಂದ ಕೊನೆಯವರೆಗೂ ಯಾವುದೇ ಅಡೆತಡೆಗಳು ಇಲ್ಲದೇ ಓದಿಸಿಕೊಂಡು ಹೋಗುವುದರಿಂದ ಇಲ್ಲಿ ಮುದಲ್ ವಿಜಯ್ ಅವರ ಪ್ರಮಾಣ ಪತ್ರ ಸತ್ಯವಾಗಿಸುತ್ತದೆ. +ಇತ್ತೀಚಿನ ದಿನಗಳಲ್ಲಿ ಹೊಸ ಸಂವೇದನೆಗಳ‌ ಹಾವಳಿಯಲ್ಲಿ ಕಳೆದು ಹೋಗುತ್ತಿರುವ ಪಾರಂಪರಿಕ ಮಾನವೀಯ ಸೆಲೆಗಳು, ಪತನವಾಗುತ್ತಿರುವ ಸಾಮಾಜಿಕ ನೆಲೆಗಳು, ನಶಿಸಿ ಹೋಗುತ್ತಿರುವ ಕೌಟುಂಬಿಕ ಮೌಲ್ಯಗಳ ನಡುವೆ ಇವೆಲ್ಲವನ್ನು ಪುನರ್ ಸ್ಥಾಪಿಸುವ ಪ್ರಯತ್ನವಾಗಿ ಮೌನಸೆರೆ ಮೂಡಿ ಬಂದಿದೆ. ಈ ಕಾದಂಬರಿಯ ಕಥೆ ಹಳೆಯ ಕಾಲದ ಕೃಷ್ಣಮೂರ್ತಿ ಪುರಾಣಿಕ, ಸಾಯಿ ಸುತೆ ಮುಂತಾದವರು ಬರೆದ ಕೌಟುಂಬಿಕ ಕಾದಂಬರಿಗಳನ್ನು ನೆನಪಿಸಿದರೂ ಕೌಟುಂಬಿಕ ಕಥಾವಸ್ತು ಎನ್ನುವುದು ಕಾಲಾತೀತವಾದದ್ದು. ಮತ್ತು ಪ್ರತಿಕಾಲಕ್ಕೂ ಘಟಿಸುವಂಥದ್ದು. ಕಥೆ ಕೌಟುಂಬಿಕ ವಾಗಿದ್ದರೂ ಕೂಡ ಅದಕ್ಕೆ ಒಂದು ಸಾಮಾಜಿಕ ಆಯಾಮ ತಂದು ಕೊಡುವಲ್ಲಿ, ಲವಲವಿಕೆಯಿಂದ ಕಥೆ ಹೇಳುವಲ್ಲಿ ಲೇಖಕನ ಚಿಂತನೆ ಅನುಭವ ಮತ್ತು ಕೈಚಳಕ ಕೆಲಸ ಮಾಡುತ್ತದೆ. ಈ ದೃಷ್ಟಿಯಲ್ಲಿ ಗಣಪತಿ ಹೆಗಡೆಯವರು ಗೆದ್ದಿದ್ದಾರೆ ಎಂದೇ ಹೇಳಬೇಕು. +ಮೌನಸೆರೆ ಇದೊಂದು ಬಡ ಕುಟುಂಬದ ಸುತ್ತ ಹೆಣೆಯಲಾದ ಕಥೆ, ಇದರೊಂದಿಗೆ ಇದಕ್ಕೆ ಪೂರಕವಾದ ಹಲವು ಘಟನೆಗಳು ಕಥೆಗಳು ಹಳ್ಳಕೊಳ್ಳದಂತೆ ಸೇರಿ ಒಂದು ನದಿಯಾಗಿ ಸಮುದ್ರ ಸೇರುವುದೇ ಕಾದಂಬರಿ. ಹಾಗೆಯೇ ಮೌನಸೆರೆ ಸಹ ಮುಖ್ಯವಾದ ಕಥೆಯೊಂದಿಗೆ ಹೊಂದಿಕೊಂಡು ಬೇರೆ ಬೇರೆ ಕುಟುಂಬಗಳ ಘಟನಾವಳಿಗಳ ಬೆರೆಸಿಕೊಂಡು ನದಿಯಾಗಿ ಶಾಂತ ರೀತಿಯಲ್ಲಿ ತಮ್ಮ ಗಮ್ಯ ಸೇರುವಲ್ಲಿ ಯಶಸ್ವಿಯಾಗುತ್ತದೆ. ಮೌನಸೆರೆ ಮುಖ್ಯವಾಗಿ ಒಂದು ಮಹಿಳಾ ಪ್ರಧಾನ ಕಾದಂಬರಿಯಾಗಿದ್ದು, ವೈಶಾಲಿ ಈ ಕಾದಂಬರಿಯ ಮುಖ್ಯ ಭೂಮಿಕೆ. ಭೂಮಿಕೆ ಎನ್ನುವ ಪದ ಈ ಸಂದರ್ಭದಲ್ಲಿ ನನಗೆ ಹೊಳೆಯಲೂ ಕಾರಣವೂ ಇಲ್ಲದಿಲ್ಲ. ವೈಶಾಲಿ ಪಾತ್ರ ಇಲ್ಲಿ ಭೂಮಿಯಂತೆ ಸಹನಾಮೂರ್ತಿ, ತ್ಯಾಗ ಮೂರ್ತಿಯಾಗಿ ಅನಾವರಣಗೊಂಡಿರುವುದು. ಶಂಕರಪ್ಪ ಮತ್ತು ಶಾರದ ಎನ್ನುವ ಕೂಲಿಮಾಡಿ ಬದುಕುವ ದಂಪತಿಗಳ ಹಿರಿಯ ಮಗಳು ವೈಶಾಲಿ. ಬಡತನದ ಕಾರಣ ತನ್ನ ಶಿಕ್ಷಣವನ್ನೂ ಮೊಟಕುಗೊಳಿಸಿ ಆಡಿ ಬೆಳೆಯಬೇಕಾದ ವಯಸ್ಸಿನಲ್ಲಿ ಸಂಸಾರದ ನೊಗ ಹೊರಬೇಕಾಗಿ ಬಂದು.. ಮುಂದೆ ಮುದಿ ತಂದೆ ತಾಯಿಗಳ ಆರೋಗ್ಯ ಆರೈಕೆಯ ಭಾರ, ತಮ್ಮ ವೀರೇಶ ಮತ್ತು ತಂಗಿ ವಿಶಾಲಾಕ್ಷಿಗೆ ಶಿಕ್ಷಣ ಕೊಡಿಸುವ ಸಲುವಾಗಿ ನಡೆಸುವ ತ್ಯಾಗ ಹೋರಾಟದ ಜೀವನ ಕಥೆಯ ಮುಖ್ಯ ಭಾಗವಾದರೂ ಅವಳ ಅಸೆ ಬಯಕೆ ಕನಸು ಪ್ರೇಮಭಾವನೆಗಳೆಲ್ಲ ಮೌನವಾಗಿ ಮುದುಡುವ ಸುಮಗಳಾಗಿ ಹೋಗುವ ದುರಂತ ಸಾರುವುದು ಕಥನದಲ್ಲಿ ವ್ಯಕ್ತವಾಗುವ ವಿಷಾದ ಭಾವ. ಈ ಕುಟುಂಬದ ಕಥೆಯ ಜೊತೆ ಜೊತೆಯಾಗಿ ಸಾಗುವ ಇನ್ನೊಂದು ಕಥೆ ಕಾಳೇಗೌಡ ಕುಟುಂಬದ್ದು. ವೈಶಾಲಿ ತಂದೆ ಶಂಕರಪ್ಪ ಕೂಲಿ ಕೆಲಸಕ್ಕೆ ಹೋಗುವ ಮನೆಯೇ ಕಾಳೇಗೌಡನದು. ಬಡತನದ ಕಾರಣ ವೈಶಾಲಿ ಕೂಡ ಅದೇ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಪರಿಸ್ಥಿತಿ. ಮೊದಲೇ ದರ್ಪ ದರ್ಬಾರ ಅತ್ಯಾಚಾರಗಳಿಂದ ಮೆರೆದ ಗೌಡಕಿ ಮನೆತನ. ಕಾಳೇಗೌಡ ಮತ್ತವನ ಮಗ ಸೋಮೇಗೌಡ ಎಂದರೇನೇ ಜನ ಬೆಚ್ಚಿ ಬೀಳುವಂತಹ ಸಮಯದಲ್ಲಿ ವೈಶಾಲಿ ಅಲ್ಲಿ ಮನೆ ಗೆಲಸಕ್ಕೆ ಸೇರಿಕೊಳ್ಳುವುದು ವೈಶಾಲಿಗೆ ಮುಂದೇನು ಅನಾಹುತ ಕಾದಿದೆಯೋ ಎನ್ನುವ ಆತಂಕ ಓದುಗರಲ್ಲಿ ಮೂಡುವುದು ಸಹಜ. ಆದರೆ ಕಾದಂಬರಿಕಾರ ಇದಕ್ಕೊಂದು ಹೊಸ ತಿರುವು ಕೊಡುವಲ್ಲಿ ಗೆಲ್ಲುತ್ತಾರೆ. “ಯೌವನ ತುಂಬಿದ ಸುರಹೊನ್ನೆಯ ಅವಳ ದೇಹಸಿರಿ, ಚಂದ್ರನ ಬೆಳದಿಂಗಳನ್ನೇ ಹೊದ್ದುಕೊಂಡು ನಿಂತ ಮೈಕಾಂತಿ, ನಕ್ಷತ್ರದಂತೆ ಅರಳಿನಿಂತ ಕಂಗಳು, ಒಪ್ಪ ಓರಣವಾಗಿ ಹೆರಳುಗಳನ್ನು ಸಿಂಗರಿಸಿಕೊಂಡ ಮುಂಗುರುಳಿನ ನರ್ತನ ಸಂಪಿಗೆ ಎಸಳಂತಿರುವ ನಾಸಿಕ, ಕೆಂದುಟಿಯಲ್ಲಿ ಅರಳಿದ ಮಲ್ಲಿಗೆಯಂತಹ ಶುಭ್ರವಾದ ಹೂನಗೆ, ದುಂಡನೆಯ ಮುಖದಲ್ಲಿ ಸಾವಿರ ಸಾವಿರ ನೈದಿಲೆಯ ಸೊಬಗಿನ ಅನಾವರಣ….” +ಮೂಲತಃ ಪ್ರಣಯ ಕವಿಯೂ ಆಗಿರುವ ಕಾದಂಬರಿಕಾರರು ಕವಿಯಾಗಿ ಕಥಾನಾಯಕಿಯ ಸ್ವರ್ಗೀಯ ಸೌಂದರ್ಯವನ್ನು ಬಣ್ಣಿಸುವುದು ಹೀಗೆ. ಹೀಗೆ ಕವಿಯಾಗಿ ವೈಶಾಲಿಯ ಸೌಂದರ್ಯವನ್ನು ವರ್ಣಿಸುವ ಕಾದಂಬರಿಕಾರ ಇಡೀ ಕಾದಂಬರಿಯನ್ನು ಕಾವ್ಯಮಯವಾಗಿ ಕಟ್ಟಿರುವುದು ಈ ಕಾದಂಬರಿಯ ಹೆಗ್ಗಳಿಕೆ ಎಂದೇ ಹೇಳಬಹುದು. ಒಂದು ಹೆಣ್ಣನ್ನು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಹಲವಾರು ರೂಪಗಳಲ್ಲಿ ಅವಳ ಪ್ರೇಮ ತ್ಯಾಗ ಬಲಿದಾನಗಳನ್ನು ಈ ಕಾದಂಬರಿ ಅನಾವರಣಗೊಳಿಸಿದೆ. ಬದುಕಲ್ಲಿ ಅದೆಷ್ಟೋ ಹೆಣ್ಣುಗಳೊಂದಿಗೆ ಆಟವಾಡಿ ಬಿಸಾಕಿದ ಸೋಮೇಗೌಡನ ಮನಸ್ಸು ಇಂದು ಮನ್ವಂತರದ ಘಟ್ಟದಲ್ಲಿರುವುದು ಕಾದಂಬರಿಕಾರ ಗುರುತಿಸುವ ಮೂಲಕ ವೈಶಾಲಿಯ ಅಲೌಕಿಕ ಸೌಂದರ್ಯದ ಅನುಭೂತಿ ಮತ್ತು ಅದರ ಪರಿಣಾಮವಾಗಿ ಸೋಮೇಗೌಡನ ಸ್ವಭಾದಲ್ಲಿನ ಬದಲಾವಣೆಯ ಮುನ್ಸೂಚನೆ ನೀಡುತ್ತಾರೆ. +” ವೈಶಾಲಿ ಕಂಡಾಗಿಂದ ಸೋಮೇಗೌಡನ ಮನಸೇಕೋ ಇಂತಹ ಕ್ಷುಲಕ ವಿಚಾರದಿಂದ ಸ್ವಲ್ಪ ಹಿಂದೆ ಸರಿದಂತೆ ಭಾಸವಾಗುತ್ತಿತ್ತು. ಅವನಂತರಂಗವೇಕೋ ನಿಷ್ಕಲ್ಮಶ ಭಾವದ ಕುದುರೆಯೇರಿ ಸಾಗುತ್ತಿತ್ತು ಮನಸೇಕೋ ಹೇಳದೆ ಕೇಳದೆ ವೈಶಾಲಿಯತ್ತ ವಾಲುತ್ತಿತ್ತು. ಅನಿರುದ್ಧ ಸಮಾಜದಲ್ಲಿ ಎಲ್ಲರಂತೆ ತಾನೂ ಸಂಭಾವಿತ ವ್ಯಕ್ತಿಯಾಗಿ ಜೀವನದಲ್ಲಿ ಕ್ರಿಯಾಶೀಲನಾಗಬೇಕು, ಪ್ರೀತಿ ತುಂಬಿದ ಕಂಗಳಾದಾಗ, ಈ ಲೋಕದ ಸೃಷ್ಟಿಯೂ ರಮ್ಯವಾಗಿಯೇ ಕಾಣಬಹುದೇನೋ, ತಾನ್ಯಾಕೆ ಎಲ್ಲರಿಂದಲೂ ವ್ಯತಿರಿಕ್ತವಾದ ಭಾವನೆ ಹೊಂದಿ ಬಾಳಬೇಕು,? ತನಗೊಬ್ಬನಿಗೆ ಹೀಗೇಕೆ, ?ತಾನು ಅರಿಸಿಕೊಂಡ ಈ ಜೀವನ ಕ್ಷಣಿಕ ಎನಿಸಿದರೂ ಶಾಶ್ವತವಾಗಿ ಇಲ್ಲಿಯೇ ಇರುವಂತಹ ದುರಾಸೆ ಏಕೆ,? ಇವೇ ಇತ್ಯಾದಿ ಪ್ರಶ್ನೆಗಳ ಸುರಿಮಳೆ ಸುರಿಯತ್ತಲೇ ಇತ್ತು… “ +“ಸೋಮೇಗೌಡನಿಗೆ. ಅದೆಷ್ಟೋ ಹೆಣ್ಣುಗಳ ದೇಹ ರುಚಿಯನ್ನು ಕಂಡು ಅನುಭವವಿದ್ದರೂ ವೈಶಾಲಿಯ ಕಂಡಾಗಿಂದ ಅನುಪಮ ಸೌಂದರ್ಯದ ಜೊತೆಗೆ ಅನುರಾಗದ ಅನುರುಕ್ತದ ಸೆಲೆಯೊಂದು ಮನದಲ್ಲಿ ಸುಳಿದಾಡಿತ್ತು. ಎದೆಯ ತುಂಬೆಲ್ಲ ಅವಳ ಚೆಲುವಿನ ಲತೆ ಹಬ್ಬಿತ್ತು. ಅವಳ ಚೆಲುವೊಂದೇ ಅಲ್ಲದೆ ಅವಳ ಮನೆಯಲ್ಲಿನ ಪರಿಸ್ಥಿತಿ, ಅವಳ ಅಂತರಂಗದ ಬೇಗೆ, ಅವಳ ಕನಸುಗಳಿಗೆ ಆಸರೆಯ ಮರ ತಾನೇಕೆ ಆಗಬಾರದು ಎಂಬುದರ ಪರಿವರ್ತನೆ ಅವನಲ್ಲಿ ಬೆಳದಿಂಗಳ ತಂಪು ಪಸರಿಸಿತ್ತು. ನೊಂದ ಮನಸಿಗೆ ತಂಪಾದ ಶಶಿ ತಾನೇಕೆ ಆಗಬಾರದು ಎನ್ನುವ ಸೋಮೇಗೌಡನ ಬದಲಾವಣೆಯ ಯೋಚನೆ ಮೌನಸೆರೆಯಾಗಿ ಒಂದು ಅದೃಶ್ಯ ಜೀವ ತಂತುವಾಗಿ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ.ವೈಶಾಲಿಯಲ್ಲಿ ಅನುರುಕ್ತನಾಗುವ ಸೋಮೇಗೌಡ ಪ್ರೇಮ ನಿವೇದನೆಯ ಅವಕಾಶಕ್ಕಾಗಿ ಕಾಯುವಾಗಲೇ ಅವನ ಪ್ರೇಮದ ಅನುಭೂತಿಯ ಅನುಭವ ಹೊಂದುತ್ತಾಳೆ. ವೈಶಾಲಿ ಮತ್ತು ಅವನ ಪ್ರೇಮ ನಿವೇದನೆಗಾಗಿ ಮೌನವಾಗಿಯೇ ಹಾತೊರೆಯುತ್ತಾಳೆ. +ವೈಶಾಲಿ ಸೋಮೆಗೌಡ ಇಬ್ಬರೂ ಮೌನದಲಿ ಬಂಧಿಯಾಗುತ್ತಾರೆ. ಈ ಮೌನ ಮುರಿದು ಪ್ರೇಮ ನಿವೇದಿಸುವ ಸಂದರ್ಭಕ್ಕಾಗಿ ಇಬ್ಬರೂ ಕಾಯುತ್ತಿರುತ್ತಾರೆ. ಮತ್ತು ಇಂತಹ ಸಂದರ್ಭ ಅವರ ಹತ್ತಿರ ಹತ್ತಿರ ಬರುತ್ತಲೇ ಕೈಜಾರಿ ಹೋಗುವುದು ಮತ್ತು ಸೋಮೆಗೌಡ ತನ್ನ ಮನದಿಚ್ಛೆಯನ್ನು ವೈಶಾಲಿ ಮುಂದೆ ನಿವೇದಿಸಿ ಅವರ ಪ್ರೇಮ ಸಂಗಮವಾಗುವುದೇ ಎನ್ನುವ ಕೌತುಕದ ಪ್ರಶ್ನೆ ಕಾದಂಬರಿ ಕೊನೆಯವರೆಗೂ ಕಾಪಾಡಿಕೊಂಡು ಬಂದ ಒಂದು ಪ್ರೇಮದೆಳೆ ಇಡೀ ಕಾದಂಬರಿ ಮುಗಿಯವವರೆಗೂ ಓದಿಸಿಕೊಂಡು ಹೋಗಲು ಸಹಕರಿಸುತ್ತದೆ. ಸೋಮೇಗೌಡ ಕೆಟ್ಟವೆನೆಂದು ಗೊತ್ತಿದ್ದರೂ ಅವನ ಬಗ್ಗೆ ಯೋಚಿಸುವ ವೈಶಾಲಿ – “ಮನುಷ್ಯ ಎಲ್ಲಾ ಸಮಯದಲ್ಲೂ ಕೆಟ್ಟವನಾಗಲಾರ.. ಎಲ್ಲ ಸಮಯವೂ ಕೆಟ್ಟತನಕ್ಕೆ ಸ್ಪಂದನೆ ನೀಡುವುದಿಲ್ಲ. ಪ್ರತಿ ಮನುಷ್ಯನಲ್ಲಿ ಒಳ್ಳೆಯತನ ಕೆಟ್ಟತನ ಎರಡೂ ನೆಲೆಸಿರುತ್ತವೆ…. ಸಹವಾಸ ದೋಷದಿಂದ ಮನುಷ್ಯ ಒಳ್ಳೆಯತನ ಕೆಟ್ಟತನದ ಪಯಣಿಗನಾಗುತ್ತಾನೆ. ಈ ನಡುವೆ ಒಳಿತನ್ನು ಬಯಸುವ ಮನಸ್ಸು ಮನುಷ್ಯನನ್ನು ಬದಲಾಯಿಸುತ್ತದೆ.. ಎನ್ನುವ ನಿರ್ಧಾರ ಕಾದಂಬರಿಕಾರರು ಸೋಮೆಗೌಡನ ಮುಖಾಂತರ ವ್ಯಕ್ತಪಡಿಸುತ್ತಾರೆ. ಈ ಬದಲಾವಣೆ ಪ್ರಕ್ರಿಯೆಯೇ ಸೋಮೆಗೌಡನಲ್ಲಿ ಆಸಕ್ತಳಾಗಳು ಕಾರಣ ವಾಗುತ್ತದೆ. +ಕೊನೆಗಾದರೂ ಸೋಮೇಗೌಡ ತನ್ನ ಪ್ರೇಮ ನಿವೇದಿಸಿದನೇ? ವೈಶಾಲಿ ಮತ್ತು ಸೋಮೇಗೌಡ ಒಂದಾದರೆ? ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇಡೀ ಕಾದಂಬರಿಯನ್ನು ಓದಲೇಬೇಕು. ತನ್ನ ಕುಟುಂಬಕ್ಕಾಗಿ ಇಡೀ ತನ್ನ ಜೀವನವನ್ನೆ ತ್ಯಾಗ ಮಾಡಿದ ವೈಶಾಲಿಯ ಜೀವನ ಕೊನೆಗೆ ಏನಾಯ್ತು.,? ಪುರುಷ ಪ್ರಧಾನ ಸಮಾಜ ಅವಳನ್ನು ಹೇಗೆ ನಡೆಸಿಕೊಂಡಿತು..? ಕಾದಂಬರಿ ಕಥಾವಸ್ತು ಸ್ತ್ರೀ ಪ್ರಧಾನವೇ ಆದರೂ ವೈಶಾಲಿಯ ತಂದೆ ಶಂಕರಪ್ಪ, ಸೋಮೇಗೌಡ, ಮೈದುನ ಮನೋಜ, ದೂರದ ಸಂಬಂಧಿ ಗೋಪಾಲ.. ನೆರೆಯ ಅಂಕಲ್..ಮತ್ತಿತ್ತರು ಕೆಟ್ಟ ಪುರುಷ ಸಂತತಿಯ ಸಮಾಜದ ನಡುವೆ ಉಪಕಾರಿಗಳಾಗಿ ಮಾನವಂತರಾಗಿ ಭರವಸೆ ಮೂಡಿಸುತ್ತಾರೆ. ಮತ್ತು ಕಥಾನಾಯಕಿಗೆ ಪೂರಕವಾಗಿ ಸಹಾಯಕರಾಗಿ ಪೋಷಕರಾಗಿ ಬರುವಂತೆ ಮಾಡುತ್ತಾರೆ. ಇವುಗಳ ನಡುವೆ ಶ್ರೀಮಂತ ಹುಡುಗನನ್ನ ಪ್ರೀತಿಸಿ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ವಿಶಾಲಾಕ್ಷಿ, ತನಗಾಗಿ ಜೀವ ತೆಯ್ದು ಬದುಕು ಕಟ್ಟಿಕೊಟ್ಟ ಮನೆಯನ್ನು ಮರೆತು ವಿದೇಶದಲ್ಲಿ ಜೀವನ ಆರಂಭಿಸುವ ತಮ್ಮ ವೀರೇಶ.., ಸೋಮೆಗೌಡನ ಪತ್ನಿ ಯಮುನಾ, ಅಶೋಕ ಮುಂತಾದ ಪಾತ್ರಗಳು ತಮ್ಮ ವೈಯಕ್ತಿಕ ಸುಖಕ್ಕಾಗಿ ಏನು ಬೇಕಾದರೂ ಮಾಡಬಹುದು ಎನ್ನುವುದು ನಿರೂಪಿಸುತ್ತವೆ. +ಮೊದಲೇ ಹೇಳಿದಂತೆ ಇಡೀ ಕತೆ ಸ್ತ್ರೀ ಪ್ರಧಾನವಾಗಿದ್ದು ಕಥಾನಾಯಕಿಯ ಪ್ರೇಮ ತ್ಯಾಗದ ಸುತ್ತ ಹೆಣೆಯಲ್ಪಟ್ಟಿದ್ದು. ಪುರುಷ ಸಮಾಜದ ಇನ್ನೊಂದು ಕರಾಳ ಮುಖ ಅನಾವರಣಗೊಳಿಸುತ್ತಾರೆ. ಅವಳ ಜೀವನದಲ್ಲಿ ಪ್ರವೇಶ ಮಾಡಿದ ಇನ್ನೊಬ್ಬ ಗಂಡಸು ಅಶೋಕನ ಮುಖಾಂತರ ಮತ್ತು ಇತ್ತ ಸೋಮೆಗೌಡನ ಹೆಂಡ್ತಿಯಾಗಿ ಬರುವ ಚಾರಿತ್ರ ಹೀನ ಯಮುನಾಳಂಥವರು ತಮ್ಮ ಸ್ವಾರ್ಥ ಸಾಧನೆಗೊಸ್ಕರ ತಮ್ಮ ಕೆಟ್ಟ ಗುಣಗಳಿಂದ ಜೀವನವನ್ನು ಹೇಗೆ ನರಕಾಗಿಸುತ್ತಾರೆ ಎನ್ನುವುದು ಲೇಖಕರ ಅಂತರಂಗದ ಪ್ರಶ್ನೆ. +ಇತ್ತ ಸೋಮೆಗೌಡ ಅತ್ತ ವೈಶಾಲಿ ಸುಳ್ಳು ಸಂಬಂಧಗಳಲ್ಲಿ ಸಿಲುಕಿ ಜೀವನ ದುರಂತ ಮಾಡಿಕೊಳ್ಳುವುದು ನಮ್ಮ ಕಣ್ಣು ಮುಂದೆ ಕಟ್ಟುವಂತೆ ಹೃದಯಕ್ಕೆ ತಟ್ಟುವಂತೆ ಬರೆಯುತ್ತಾರೆ. ಈ ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟು ದೂರಾಗುವ ಸತಿಪತಿಗಳ ನಡುವೆ ವೈಶಾಲಿ ಮತ್ತು ಸೋಮೇಗೌಡ ಮತ್ತೊಮ್ಮೆ ಒಂದಾಗುವ ಸಾಧ್ಯತೆಯನ್ನು ಹುಟ್ಟು ಹಾಕುತ್ತಾರೆ. ಈಗಲಾದರೂ ಇವರು ಒಂದಾಗಬಹುದಾ ಎನ್ನುವ ಕುತೂಹಲ ಓದುಗರಲ್ಲಿ ಮತ್ತೆ ಚಿಗುರುವಂತೆ ಮಾಡುತ್ತಾರೆ. ಕವಿ ಮೂಲತಃ ಹೆಣ್ಣು ಹೃದಯಿಯಾಗಿರುತ್ತಾನೆ ಎನ್ನುವುದು ಈ ಕಾದಂಬರಿ ಓದಿದಾಗ ಅರ್ಥವಾಗುವ ಮಾತು. ಹೆಂಗರುಳಿನ ಲೇಖಕ ಗಣಪತಿ ಹೆಗಡೆಯವರು ಈ ವೈಶಾಲಿ ಎನ್ನುವ ಹೆಣ್ಣಿನ ಮುಖಾಂತರ ಹೆಣ್ಣು ಕ್ಷಮಯಾ ಧರಿತ್ರಿ ಸಹನಾ ಮೂರ್ತಿ, ತ್ಯಾಗ ಜೀವಿ, ಅವಳ ಹಿರಿಮೆ ಗರಿಮೆಯನ್ನು ಕಾದಂಬರಿಯುದ್ದಕ್ಕೂ ಸ್ತ್ರೀಪರ ಕಾಳಜಿಯಾಗಿ ಒಡಮೂಡಿಸಿರುವುದು ಉದಾಹರಣೆಯಾಗಿ ಈ ಕೆಳಗಿನ ವ್ಯಾಖ್ಯಾನಗಳು ನೋಡಬಹುದು. ಈ ವ್ಯಾಖ್ಯಾನಗಳು. +೧) +ಪಟ್ಟ ಈ ಕ್ರೂರ ಸಮಾಜದಲ್ಲಿ ಹೆಣ್ಣಿನ ಅಂತರಂಗದ ಅಳುವಿನಲ್ಲಿ ಪಾಲುದಾರರೇ ಇರುವುದಿಲ್ಲ. ಅವಳೊಂದು ವೈಭೋಗದ ವಸ್ತುವಾಗಿದ್ದು, ಈ ಸಮಾಜದ ದುರಂತವೇ ಅಥವಾ ಒಗ್ಗಟ್ಟಿಲ್ಲದೆ, ತನ್ನ ಮನಸ್ಥಿತಿಯ ಚಂಚಲತೆಯನ್ನು ಉಪಯೋಗಿಸಿಕೊಂಡ ಗಂಡು, ಅವಳನ್ನು ತನ್ನ ಉಪಯೋಗಕ್ಕೆ ಉಪಯೋಗಿಸಿಕೊಂಡನೆ,? ಅಬಲತೆಯ ಪಟ್ಟ ಕಟ್ಟಿ ತಾನು ಬಲಿಷ್ಠ ಎಂಬ ಅಹಂಕಾರದ ಪ್ರಭಾವವೇ, ?ಒಂದೆಲ್ಲ, ಎರಡಲ್ಲ ಎಲ್ಲಿಯವರೆಗೆ ಹೆಣ್ಣು ಹೆಣ್ಣಿಗೆ ಆಸರೆಯಾಗಿ ನಿಲ್ಲಲು ಶುರು ಮಾಡುವುದಿಲ್ಲವೋ, ಅಲ್ಲಿಯವರೆಗೆ ಹೆಣ್ಣು ಅಬಲೆಯೇ. ಈ ಮಾತು ಸ್ವಾತಂತ್ರ್ಯಾ ಪೂರ್ವದ್ದು ಅಂತ ಅನ್ನಿಸಬಹುದು, ಆದರೆ ಇಂದಿನ ಇಂತಹ ಮುಂದುವರೆದ ಸಮಾಜ ಆಧುನಿಕ ವಿಚಾರಗಳ ಹೊತ್ತ ದೈನಂದಿನ ಬದುಕಲ್ಲೂ ಕಾಣುತ್ತಿರುವ ವೈಪರೀತ್ಯಗಳ ಹಾಗೂ ಅಸಂಬದ್ಧ ಘಟನೆಗಳನ್ನು ‘ಕಾಣುತ್ತೇವೆ. ಹೆಣ್ಣಿಗೆ ಎರಡನೇ ಮದುವೆಗೆ ಅವಕಾಶವಿಲ್ಲ. ಒಮ್ಮೆ ಅವಕಾಶವಿದ್ದರೂ ಅದೊಂದು ರೀತಿಯಲ್ಲಿ ಅಸಂಬದ್ಧ ಸಂಪ್ರದಾಯ. ಸಮಾಜದ ಕಟ್ಟಳೆಯನ್ನು ಮೀರಿದವಳು ಎನ್ನಿಸಿಕೊಳ್ಳುವ ದುರಂತ. ಆದರೆ ಅದೇ ಗಂಡು ಅರವತ್ತು ವಯೋವೃದ್ಧನಾದರೂ ಇಪ್ಪತ್ತು ವರ್ಷದ ಕನೈಯನ್ನು ವಿವಾಹವಾದಾಗ ಅವನ ರಸಿಕತೆಯನ್ನು ಈ ಸಮಾಜ ಎತ್ತಿ ಹಿಡಿಯುತ್ತದೆ ಈ ಜನತೆ. ಗಂಡ ಸತ್ತ ಮೇಲೆ ಅಮಂಗಲೆಯವಳು, ಅವಳಿಗೆ ಮಂಗಳ ಕಾರ್ಯಗಳಿಗೆ ಅವಕಾಶವಿಲ್ಲ. ಅದು ಕೂಡಾ ಇನ್ನೊಂದು ಹೆಣ್ಣೆ ಸಮರ್ಥಿಸಿಕೊಂಡಿದ್ದು, ಗಂಡ ಹೆಂಡತಿ ಸತ್ತ ಮೇಲೆ ಇನ್ನೊಂದು ಮದುವೆಗೆ ಅರ್ಹನೇ! +ಇಂತಹ ತಾರತಮ್ಯದ ಸಂಬಂಧಗಳ ಅಥವಾ ಪದ್ಧತಿಗಳ ನಡುವೆ ಈ ಸಮಾಜದ ಜನ ಬದುಕುತ್ತಿರುವಾಗ ಇಲ್ಲಿ ಗಂಡು ಪ್ರಧಾನ ಅಥವಾ ಪುರುಷ ಪ್ರಧಾನ್ಯತೆ ಎದ್ದು ಕಾಣುತ್ತಿರುವುದು ವಾಸ್ತವಿಕತೆ. ಇಂತಹ ಅಗೋಚರ ಸಂಬಂಧವೆಲ್ಲವನ್ನು ದಾಟಿ ವೈಶಾಲಿ ಸಾಗಬೇಕಿರುವ ದಾರಿ ಬಹಳ ಉದ್ದವಾಗಿದೆ. +೨) +ಹೌದು, ಸಂಸಾರದ ಕಣ್ಣು ಹೆಣ್ಣು, ಅವಳು ಅವನಿಯ ಮನಸಿಗಳು, ಅವರ ಮನಸೊಂದು ಸೂಕ್ಷ್ಮವಾದ ದರ್ಪಣ, ಒಂದು ಚೂರು ಕೈ ತಪ್ಪಿದರೂ ದರ್ಪಣ ಮಾತ್ರ ಚೂರು-ಚೂರು, ಬಾಳಲ್ಲಿ ಕಾಣುವ ಕನಸುಗಳು ಹರಿದು ಹೋಗಿ ದಿಕ್ಕಿಲ್ಲದೆ ಅನಾಥವಾಗಿ ಬಿಡುತ್ತವೆ. ಸಪ್ತಪದಿ ತುಳಿದು ಬರುವ ಹೆಣ್ಣು ಹೊಸ್ತಿಲಿನ ಲಕ್ಷ್ಮಿಯಾಗಿ ಮನೆಯ ಸೇರುತ್ತಾಳೆ. ಹೆತ್ತು ಹೊತ್ತವರನ್ನು ಬಿಟ್ಟು ಅಪರಿಚಿತಳಾಗಿ ಮಾಯಾಂಗನೆ. ತನ್ನ ಕಣ್ಣಿನಿಂದಲೇ ಎಲ್ಲವನ್ನೂ ಮಾತಾಡುವ ಕಲೆ ಅವಳಲ್ಲಿದೆ. ಎಂಥವರನ್ನೂ ಮೋಡಿ ಮಾಡುವ ಚಾಕಚಕ್ಯತೆ ಅವಳ ಅಂತರತದಲ್ಲಿದೆ. ಹಾಗಿರುವ ಹೆಣ್ಣು, ಗಂಡ, ಅತ್ತೆ, ಮಾವ, ಮೈದುನ, ನಾದಿನಿ ಹೀಗೇ ಹೊಸದಾದ ಸಂಬಂಧದಲ್ಲಿ ಕಾಣುವ, ಹೊಂದಿಕೊಂಡು ಬಾಳುವ ಮತ್ತು ಅದರಲ್ಲಿ ತನ್ನ ನೋವು ನಲಿವುಗಳನ್ನು ಗಂಡ ಎನ್ನುವ ಅಪರಿಚಿತನೊಂದಿಗೆ ನಂಬಿಕೆಯಿಟ್ಟು ಸಾಗುವ, ಅವಳು ನಿಜಕ್ಕೂ ಅದ್ಭುತ ಮನಸಿಗಳು. ತನ್ನ ಆಸೆ ಆಕಾಂಕ್ಷೆಗಳನ್ನು ತನ್ನಲ್ಲಿಯೇ ಅದುಮಿಟ್ಟು ನಗುವಿನ ಮುಖವಾಡದೊಂದಿಗೆ ದಿನಗಳನ್ನು ಕಳೆಯುವ ನಿಸ್ವಾರ್ಥಿ ಹೃದಯವಂತಳು. +೩) +ಹುಟ್ಟಿದಂದಿನಿಂದಲೇ ಹೆಣ್ಣಿನ ಜನ್ಮಕ್ಕೊಂದು ನಾಚಿಕೆ, ಮುಜುಗರ, ತಾಳ್ಮೆ, ಬಹುಬೇಗನೇ ಉಂಟಾಗುತ್ತವೆ. ಹೊಂದಾಣಿಕೆ, ಅಪ್ಯಾಯತೆ, ಆಪ್ತತೆ, ಮೈಗೂಡಿದಂತಹ ಅಂಶಗಳು, ಅವಳಲ್ಲಿ ಭಾವನಾತ್ಮಕ ಭಾವುಕ ಪರಿಣಾಮಗಳು ಸಂವೇದನಾಶೀಲತೆ ಅತೀ ವೇಗದಲ್ಲಿ ಉಂಟಾಗುವ ಪ್ರಕ್ರಿಯೆ ಅವಳ ಅಂತಃಕರಣದಲ್ಲಿ ಅರಿವಾಗದೆ ಪ್ರೇಮ ಉಂಟಾಗುತ್ತದೆ. ಪ್ರೀತಿ ಉಂಟಾಗುತ್ತದೆ. ಅದು ಬಹುಕಾಲ ಉಳಿದು ಬಿಡುತ್ತದೆ. ಅರಳಿದ ಭಾವನೆಗಳಿಗೆ ಪುಷ್ಟಿ ಕೊಡುವ ಅವಳ ಮನಸ್ಸು ನಿಜಕ್ಕೂ ಕೋಮಲ, ಮೌನದಲ್ಲಿಯ ಭಾವನೆ ಕೆಲವೊಮ್ಮೆ ಮೌನದಲ್ಲಿಯೇ ಕರಗಿ ಹೋಗುವುದೂ ಉಂಟು. ಹೃದಯದಲ್ಲಿ ಬುಗಿಲೆದ್ದ ಆತಂಕಗಳಿಗೆ ಅವಳೇ ಪರಿಹಾರವನ್ನು ಕಂಡುಕೊಳ್ಳುತ್ತಾಳೆ. ತನ್ನ ನೊಂದ ಮನಸ್ಸಿಗೆ ತಾನೇ ಸಾಂತ್ವನ ಹೇಳಿಕೊಳ್ಳುತ್ತಾಳೆ. ಬದುಕು ಡೋಲಾಯಮಾನವಾದರೂ ಅಳುಕದೆ, ಅಂಜದೆ ಎದುರಿಸುವ ಎದೆಗಾರಿಕೆ ಅವಳು ಶತಾಯಗತವಾಗಿ ರೂಢಿಸಿಕೊಳ್ಳುತ್ತಾಳೆ. ತನ್ನ ಸಹಕುಟುಂಬದಲ್ಲಿ ಅಮಾವಾಸ್ಯೆ ಬಂದು ಕವಿದರೂ, ಹುಣ್ಣಿಮೆಯ ಸಂಭ್ರನ ಕಾಣುವ ಅವಳ ಮನಸಿಗೆ ಎಂತಹವನೂ ತಲೆ ಬಾಗಲೇಬೇಕು. ಅವಳ ಧೀರತನ, ಅಂತರಂಗದ ಸೂಕ್ಷ್ಮತೆ, ಹೃದಯವಂತಿಕೆ, ಸಹನೆ ಹೀಗೆ ಪ್ರತಿ ಅಂಶಗಳೂ ಇಲ್ಲಿ ಅಮೂಲಾಗ್ರವಾಗಿ ಜೊತೆಯಾಗುತ್ತವೆ. ಎದೆಯ ಸರೋವರದಲ್ಲಿ ಅವಳ ನೆನಪಿನ ತಾವರೆಗಳು ಅದೆಷ್ಟೋ ಹುಟ್ಟಿ ಬಾಡಿ ಹೋಗುತ್ತವೆಯೋ ಕಾಣುವರಾರು,? ಕನಸುಗಳ ನಡುವೆ ಏಕಾಂತದ ರಾತ್ರಿಗಳೆಷ್ಟೋ, ಅರಿತವರಾರು,? ಕಣ್ಣು ಮುಚ್ಚಿದರೂ ನಿದ್ದೆಯೇ ಬಾರದೆ ಹಾಸಿಗೆಯಲ್ಲಿ ಹೊರಳಾಡುವ ಕ್ಷಣಗಳೆಷ್ಟೋ, ಬಲ್ಲವರಾರು,? ಹೀಗೆ ಅನೇಕ ಕಣ್ಣೀರಿನ ಹನಿಗಳು ಜಾರಿ ಹೋದರೂ ನೋಡದೇ ಹೋದವರೆಷ್ಟೋ,! ಅರಿವಾಗುವುದರಲ್ಲಿಯೇ ಅವಳ ಬದುಕೇ ನಶಿಸಿ ಹೋಗುವಷ್ಟು ಜೀವನ ಸವೆದು ಹೋಗುತ್ತದೆ. +೪) +ಹೆಣ್ಣು ಹಾಗೆಯೇ. ಅವಳ ಅಂತರಂಗವೇ ಸೂಕ್ಷ್ಮತಂತು, ಸಹಿಸಿಕೊಳ್ಳುವ ಶಕ್ತಿ ಬಹಳ ಕಡಿಮೆ, ಹಾಗಂತ ತಾಳ್ಮೆಯಿಲ್ಲ ಅಂತ ಅರ್ಥವಲ್ಲ. ಇಂತಹ ಸ್ಥಿತಿಯಲ್ಲಿ ಅವಳ ಕಣ್ಣೀರುಗಳೇ ಅವಳಿಗೆ ಪೂರ್ತಿ ಸ್ವಾಂತನಗೈಯ್ಯುತ್ತವೆ. +೫) +ಬದುಕೊಂದು ಹೂವಂತೆ. ಬೇರು ಹಸಿಯಾಗಿದ್ದಾಗ ಗಿಡದ ತುಂಬೆಲ್ಲಾ ಹಸಿರಿನ ತೋರಣ ಹೂವಿನ ಮಾಲೆ, ಆದರೆ ಗಿಡದ ಬೇರು ಸಾವಿನ ದಡದಲ್ಲಿ ನಿಂತು ಚೀರುವಾಗ ಅರಳಿದ ಹೂಗಳು ಬುಡಸಮೇತ ಕೊಂಡಿ ಕಳಚಿಕೊಳ್ಳುತ್ತವೆ. ಅರಳಬೇಕಿದ್ದ ಮೊಗ್ಗುಗಳು ಅಲ್ಲಿಯೇ ಕಮರಿ ಪರಿಮಳದಿಂದ ವಂಚಿತವಾಗುತ್ತವೆ. ನಗಬೇಕಿರುವ ಹೂ ತುಟಿಗಳು ನಗಲಾಗದೇ ಬಿರುಕು ಬಿಟ್ಟಾಗ ಬದುಕು ನೀರಸ ಅನ್ನಿಸಿ ಬಿಡುತ್ತದೆ. ಚೆಲುವಿನ ವನವೆಲ್ಲಾ ಬೋಳಾಗಿ ಸ್ಮಶಾನದ ಗೋರಿಯಂತೆ ಕಾಣುತ್ತವೆ ಆದರೂ ಚಿಕ್ಕ ತಂಪಿನ ಆಸರೆಗಾಗಿ ಮಣ್ಣೊಳಗೆ ಇಳಿಬಿಡುವ ಬೇರು ಎಲ್ಲಾದರೂ ಹನಿ ತಂಪನ್ನು ಹೀರಿ ತನ್ನಿಡೀ ಕುಟುಂಬದ ಪೋಷಣೆಗೆ ದಾರಿ ದೀಪವಾಗುತ್ತದೆ. +೫) +ಹೆಣ್ಣು ಕಾಲು ಜಾರಿದರೆ ‘ಜಾರಿಣಿ’ ಎಂಬ ಪಟ್ಟ ಅದೇ ಗಂಡು ಜಾರಿದರೆ ‘ರಸಿಕ’ ಎಂಬ ಬಿರುದು, ಪುರುಷ, ಪ್ರಧಾನವಾದ ಸಮಾಜದಲ್ಲಿ ಹೆಣ್ಣು ಸ್ಪರ್ಧೆಗಿಳಿದು ಎಲ್ಲ ರಂಗದಲ್ಲಿ ಗೆಲ್ಲುತ್ತಿದ್ದರೂ ಅದನ್ನು ಹೆಣ್ಣೇ ಒಪ್ಪದೆ ಇರುವುದು ಕೂಡಾ ಅವಳ ದುರಂತವೇ.! ಸಂಬಂಧಗಳ ಹುಟ್ಟು ಹಾಕುವುದು ಹೆಣ್ಣು, ಬೆಳೆಸುವುದು ಹೆಣ್ಣು, ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಹೊರುವವಳು ಹೆಣ್ಣು, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ಹೆಂಡತಿಯಾಗಿ, ತಾಯಿಯಾಗಿ ಬಾಂಧವ್ಯವ ಕಟ್ಟುವವಳು ಹೆಣ್ಣು. ಆದರೂ ಅವಳ ಕನಸುಗಳು ಮಾತ್ರ ಇರುಳು ಕಾಣದೆ ಕನಸಾಗಿಯೇ ಉಳಿದುಬಿಡುತ್ತವೆ. ಅವಳೊಂದು ಭೋಗದ ವಸ್ತುವಾಗಿ, ದಾಸಿಯಾಗಿ ಬದುಕುವ ದಾರುಣತೆ…. +೬) +ಪತಿಯೇ ಪರಮದೈವ ಎಂದು ತಿಳಿಯುವ ಹೆಣ್ಣು ತಾಯಿಯಾಗಿ, ಸತಿಯಾಗಿ ಗಂಡಿನ ಸರ್ವ ಆಸರೆಯ ಮೆಟ್ಟಿಲಾಗಿ, ಬೆನ್ನೆಲುಬಾಗಿ ನಿಂತು ಗಂಡಿನ ಏಳಿಗೆಗೆ ಪ್ರತೀ ಹಂತದಲ್ಲೂ ದಾರಿ ದೀವಿಗೆಯಂತೆ ಬೆಳಗುವವಳು ಹೆಣ್ಣು. ಇಂತಹ ಹೆಣ್ಣು ಇಂದು ಪುರುಷ ಪ್ರಧಾನವಾದ ಸಮಾಜದ ನಿರ್ಮಾಣಕ್ಕೂ ಕೈ ಜೋಡಿಸಿರುವವಳೇ ಭಾರತದಂತಹ ನಾಗರೀಕತೆಯ ಸಮಾಜದಲ್ಲಿ ಹೆಣ್ಣಿನ ಅಮೂಲ್ಯ ಪಾತ್ರ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಒಂದು ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಅವಳಿಗೆ ಕೊನೆಯಲ್ಲಿ ನಿರಾಸೆ ಅಸಮಾಧಾನದ ಉಡುಗೊರೆ, ಅವಳ ಮೌನದ ರೋದನೆಯಲ್ಲಿ ಕಾಣದ ಕಂಬನಿಗಳೆಷ್ಟೋ, ಅನುರಾಗವನ್ನು ಕಳೆದುಕೊಂಡ ತಬ್ಬಲಿಯ ಭಾವನೆಗಳೆಷ್ಟೋ, ಎಲ್ಲವೂ ಕೇವಲ ಗಂಡಿನಿಂದಲೇ ಅಲ್ಲದೆ ಇನ್ನೊಂದು ಹೆಣ್ಣಿನಿಂದಲೇ ಇವೆಲ್ಲ ಅವಘಡಗಳಿಗೆ ಕಾರಣವಾಗುತ್ತಿರುವುದು ಮಾತ್ರ ಶೋಚನಿಯವೇ. +೭) +ಒಟ್ಟಿನಲ್ಲಿ ತುಂಬಿದ ಸಂಸಾರದಲ್ಲಿ ಯಮುನಾಳ ಆಗಮನದಿಂದಾಗಿ ಅಸಂತೋಷದ ಸೆಲೆ ಕಾಣಿಸಿಕೊಂಡಿದ್ದಂತೂ ಸತ್ಯವಾಗಿತ್ತು. ಅಲ್ಲೊಂದು ಅನ್ನೋನ್ಯತೆ ಬೆಳೆಯಬೇಕಾದರೆ ಗಂಡಿನಷ್ಟೇ ಮುಖ್ಯವಾದ ಪಾತ್ರ ಹೆಣ್ಣಿನದೂ ಸಹ. ಅವಳ ಸಹಮತ, ಪ್ರೀತಿ, ಕಾಳಜಿ, ಕಳಕಳಿಯೊಂದಿದ್ದರೆ ಬೇಕಾದ್ದನ್ನೂ ಸಾಧಿಸಬಲ್ಲ ಅವನು. ಇಲ್ಲದಿರೆ ಬೇರು ಕಳಚಿದ ಹೆಮ್ಮರದಂತೆ, ಎಲೆ ಉದುರಿದ ಗಿಡಗಳಂತೆ ಅಂದವಿರುವುದಿಲ್ಲ. ಅನುರಾಗ, ಸಂಪ್ರೀತಿಯ ಕೊಳಗಳಲ್ಲಿ ಸಾಂತ್ವನ ಹೊಂದಾಣಿಕೆಯೆಂಬ ನೈದಿಲೆಗಳು ಅರಳಿದಾಗ ಸಂಸಾರ ಎಂಬ ಚಂದ್ರಬಿಂಬ ಹೊಳೆಯುತ್ತದೆ. ಇಂತಹ ಸಂಸಾರ ನೂರ್ಕಾಲ ಕಳೆದರೂ ಎಂದಿಗೂ ಹೊರ ಪ್ರಪಂಚದಲ್ಲಿ ತಮ್ಮ ಬಲ ಹೀನತೆಯನ್ನು ತೋರ್ಪಡಿಸುವುದಿಲ್ಲ. ಚಿಕ್ಕಪುಟ್ಟ ತಾರತಮ್ಯಗಳಿದ್ದರೂ ಪರಸ್ಪರ ಸಂವೇದನಾತ್ಮಕ ಚರ್ಚೆಯಿಂದ ಬಗೆಹರಿಸಿಕೊಂಡು ಮುನ್ನಡೆಯಬೇಕು. ಪ್ರಾಣಿಗಳು ಎಂದಿಗೂ ತಮ್ಮ ಮಕ್ಕಳೊಂದಿಗೆ ದ್ವೇಷ ಸಾಧಿಸುವುದಿಲ್ಲ. ಒಂದೈದು ನಿಮಿಷ ಕಿತ್ತಾಡಿಕೊಂಡರೂ ನಂತರದ ಕ್ಷಣದಲ್ಲಿ ಅದನ್ನು ಮರೆತು ಮತ್ತೆ ಸಾಮರಸ್ಯ ಬೆಳೆಸಿಕೊಳ್ಳುತ್ತವೆ. ಹಗೆಯನ್ನು ಹಗೆಯನ್ನಾಗಿಯೇ ಮುಂದುವರೆಸಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮನುಷ್ಯ ಮಾತ್ರ ಇದಕ್ಕೆ ತದ್ವಿರುದ್ಧವೇ. ಘಟಿಸುವ ಘಟನಾವಳಿಗೆ ಅನುಗುಣವಾಗಿ ಇಂತಹ ಅನೇಕ ಚಿಂತನೆಗಳು ಹರಿ ಬಿಡುವಲ್ಲಿ ಕಾದಂಬರಿಕಾರರ ಶ್ರಮ ಸಾರ್ಥಕತೆ ಪಡೆದಿದೆ. ನಿರೂಪಣಾ ಶೈಲಿ ಮತ್ತು ಪಾತ್ರ ಪೋಷಣೆಯಲ್ಲಿ ಗೆದ್ದಿದ್ದಾರೆ .ಆದರೆ ಕಥೆ ನಡೆಯವ ಪರಿಸರ ಬಹುಶಃ ಉತ್ತರ ಕನ್ನಡ ಭಾಗದ್ದು ಅನಿಸಿದರೂ ಅದಕ್ಕೆ ಒಂದು ಪ್ರಾದೇಶಿಕ ಪರಿಸರ ತಂದುಕೊಡವಲ್ಲಿ ಸ್ವಲ್ಪ ಮಟ್ಟಿಗೆ ಸೋತಿದೆ ಎಂದೆನಿಸುತ್ತದೆ. +ಪಾತ್ರಗಳ ಮುಖಾಂತರವಾದರೂ ನೆಲದ ಭಾಷೆಯನ್ನು ಪರಿಸರವನ್ನು ತಂದುಕೊಡುವ ಮೂಲಕ ಕಾದಂಬರಿಯನ್ನು ಇನ್ನೂ ಆಪ್ತವಾಗಿ ನೈಜವಾಗಿ ಕಟ್ಟಿಕೊಡಬಹುದಾಗಿತ್ತು ಅನಿಸುತ್ತದೆ. ಒಟ್ಟಿನಲ್ಲಿ ಒಂದು ಸದುಭಿರುಚಿಯ ಕೌಟುಂಬಿಕ ಕಥೆ ಹೊಂದಿದ ಕಾದಂಬರಿ ಆಕಸ್ಮಿಕ ಘಟನೆಗಳಿಂದ ಅನಿರೀಕ್ಷಿತ ತಿರುವುಗಳಿಂದ ಕುತೂಹುಲ ಮೂಡಿಸುತ್ತ ಓದುಗನನ್ನು ಮೊದಲಿನಿಂದ ಕೊನೆಯವರೆಗೂ ಹಿಡಿದಿಡುತ್ತದೆ. ಕಥಾನಾಯಕಿಯ ಅಂತಿಮ ನಿರ್ಧಾರ ಸರಿ ಅನಿಸಿದರೂ ಓದುಗರಲ್ಲಿ ವಿಷಾದ ಅಲೆಗಳನ್ನು ಎಬ್ಬಿಸುತ್ತದೆ. ಲೇಖಕರ ಅನುಭವದಂತೆ ಆ ಪಾತ್ರ ವಾಸ್ತವತೆಗೆ ಹತ್ತಿರವಾಗಿಯೇ ಇದ್ದರೂ ಕೂಡ ಇನ್ನಷ್ಟು ಅದಕ್ಕೆ ಕಾವು ಕೊಟ್ಟು ಗಟ್ಟಿಗೊಳಿಸಬಹುದಾಗಿತ್ತು. ಕೊನೆಯವರೆಗೂ ಮೌನ ಸೆರೆಯಾಗಿಯೇ ಸರಿದು ಹೋಗುವ ವೈಶಾಲಿಯ ಜೀವನದಲ್ಲಿ ಹೋರಾಟದ ಮನೋಭಾವ ಕಿಚ್ಚು ಬಿತ್ತಿ ಅಶೋಕನಂಥ ದುರುಳರಿಗೆ ಸರಿದಾರಿಗೆ ತರುವ ನಿರ್ಧಾರಕ್ಕೆ ಅಣಿಗೊಳಿಸಬಹುದಾಗಿತ್ತು. ಇವೆಲ್ಲ ನನ್ನ ವೈಯಕ್ತಿಕ ಅಭಿಪ್ರಾಯವಾದರೂ ಲೇಖಕರು ವಾಸ್ತವ ಸ್ಥಿತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಇದು ಗಣಪತಿಯವರ ಮೊದಲ ಕಾದಂಬರಿ ಎಂದು ಎಲ್ಲೂ ಅನಿಸುವುದಿಲ್ಲ. ಒಂದು ಪಳಗಿದ ಲೇಖನಿಯಿಂದ ಮಾಗಿದ ಮನಸ್ಸಿನಿಂದ ಮೂಡಿದ ಕಥಾಹಂದರ ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರಣಕ್ಕೆ ಅವರನ್ನು ಅಭಿನಂದಿಸುತ್ತ ಪ್ರಸ್ತುತ ಉತ್ತಮ ಕಾದಂಬರಿಗಳ ಕೊರತೆಯ ಕಾಲದಲ್ಲಿ ಇನ್ನಷ್ಟು ಉತ್ತಮ ಕೃಷಿ ಮಾಡುವ ಮೂಲಕ ಅವರ ಹೆಸರು ಅಜರಾಮರವಾಗಲಿ ಎಂದು ಹಾರೈಸುತ್ತೇನೆ. +-ಅಶ್ಫಾಕ್ ಪೀರಜಾದೆ \ No newline at end of file diff --git a/PanjuMagazine_Data/article_1000.txt b/PanjuMagazine_Data/article_1000.txt new file mode 100644 index 0000000000000000000000000000000000000000..e039a8870931b9559f4b60660da5fac61d91d858 --- /dev/null +++ b/PanjuMagazine_Data/article_1000.txt @@ -0,0 +1,5 @@ +ಹೇಗೆ ಕರೆಯಲಿ ಎಂದು ತಿಳಿಯದೆ ಹಾಗೆ ಶುರು ಮಾಡ್ತಾ ಇದ್ದೀನಿ. ಎಂದಿನಂತೆ 'ಮುದ್ದು' ಎಂದು ಕರೆಯೋಣ ಅಂದ್ಕೊಂಡೆ, ಅದ್ಯಾಕೋ ಹಾಗೆ ಕರೆಯಬೇಕು ಅನಿಸಲಿಲ್ಲ. ಹೊರಡುವಿಕೆಯ ಹೊಸ್ತಿಲ ಬಳಿ ನಿಂತು ಹಿಂತಿರುಗಿ ನಿನ್ನ ನೋಡಿ, ಹೇಳಲು ನಿಂತರೆ ಮತ್ತೆ ಹೋಗಬೇಕು ಅನಿಸೋದಿಲ್ಲ ! ಅದಕ್ಕೆ ಹಿಂದಕ್ಕೆ ತಿರುಗಿ ನೋಡದೆ ಹೊರಟಿದ್ದೀನಿ . ಆದರು ಹೊರಡುವ ಮುನ್ನ ನಿನಗೆ ಹೇಳದೆ ಹೋಗಬೇಕು ಅಂತ ಕೂಡ ಅನಿಸಲಿಲ್ಲ. +ಬಹುಶಃ ಒಂದ್ಹತ್ತು ವರುಷವಾಗಿದೆಯಲ್ಲವೇ ನಮ್ಮಿಬ್ಬರ ಪರಿಚಯವಾಗಿ !? ಪರಿಚಯ ಗೆಳೆತನವಾಗಿ, ಗೆಳೆತನ ಅಭಿಮಾನವಾಗಿ, ಅಭಿಮಾನ ಪ್ರೀತಿಯಾಗಿದ್ದು ಹೇಗೆ ಮತ್ತು ಯಾವಾಗ ಎಂದು ಅರಿವಾಗಲೇ ಇಲ್ಲ. 'ಪ್ರೀತಿ ಈ ವಯಸ್ಸಿನಲ್ಲೇ' ಅಂತ ನಗುತ್ತಾರೆನೋ ಅಲ್ವೇ ಕೇಳಿದವರು ? 'ಬದುಕಲ್ಲಿ ಎಲ್ಲಾದರಲ್ಲೂ ಸಂತೃಪ್ತರು ನಾವು ಯಾವುದಕ್ಕೂ ಕಡಿಮೆ ಇಲ್ಲ' ಎಂದುಕೊಂಡೇ ಇದ್ದ ನಾವು ಅಧ್ಹೇಗೆ ಈ ಪರಿಯಾಗಿ ಹೊಂದಿಕೊಂಡೆವೋ!! ಅದೆಲ್ಲೋ ಒಂದು ಕಡೆ ಮನಸಲ್ಲಿ ಒಂದು ಖಾಲಿ ಜಾಗ ಇರುತ್ತದೆಯಂತೆ. ಆ ಖಾಲಿ ಜಾಗ ಇರೋದು ಕೂಡ ಗೊತ್ತಿರೋದಿಲ್ಲವಂತೆ. ನಮ್ಮನ್ನ ನಾವು ತೆರೆದುಕೊಳ್ತಾ , ಹಂಚಿಕೊಳ್ತಾ ಮನಸ್ಸಿನ ಅಂತಹ ಒಂದು ಖಾಲಿ ಜಾಗದಲ್ಲಿ ಭದ್ರವಾಗಿ ನೆಲೆಯೂರಿ ಬಿಟ್ಟಿದ್ವಿ ಇಬ್ಬರೂ . ಅವಿಶ್ರಾಂತ ಕೆಲಸದ ನಡುವೆಯೂ, ಬದುಕಿನ ಅನೇಕ ಜವಾಬ್ದಾರಿಗಳ ನಡುವೆಯೂ, ನಮ್ಮ ಎಲ್ಲ ಪರಿಮಿತಿಗಳ ನಡುವೆಯೂ ನಮ್ಮಿಬ್ಬರಿಗೆಂದೇ ಒಂದಷ್ಟು 'ಸ್ಪೇಸ್' ಮಾಡಿಕೊಂಡಿದ್ವಿ. ವೃತ್ತಿಯ ಒತ್ತಡಗಳು, ಮನೆಯ ಆಗುಹೋಗುಗಳು, ಮಕ್ಕಳ ಏಳುಬೀಳುಗಳು, ಇನ್ಯಾರದೋ ಒಂದಷ್ಟು ಕಥೆಗಳು, ನಮ್ಮದೇ ತಲೆಹರಟೆಗಳು, ಇವೆಲ್ಲದರ ಜೊತೆಗೆ ಒಂದಷ್ಟು ಪ್ರೀತಿಯ ಮಾತುಗಳು, ಈ ಪರಿಯ ಅದೆಷ್ಟು ಪ್ರೀತಿ ಹಂಚಿಕೊಂಡೆವು ಅಲ್ವೇ! ನಿಗದಿತ ಸಮಯಕ್ಕಿಂತ ಒಂದೆರಡು ಕ್ಷಣಗಳು ನೀ ತಡವಾಗಿ ಕರೆ ಮಾಡಿದರೆ ಮನಸ್ಸು ಚಡಪಡಿಸುತ್ತಿತ್ತು ! ಹಾಗೆ ಅದೆಷ್ಟು ಜಗಳ ಅಡಿದ್ದೆವೋ ನೆನಪಿಲ್ಲ! ಎಲ್ಲೋ ಇರುವ ನೀನು ನೊಂದರೆ ಮನ ತಲ್ಲಣಗೊಳ್ತಾ ಇತ್ತು. ನೀ ನಕ್ಕರೆ ಮನ ಸಂಭ್ರಮಿಸುತ್ತಿತ್ತು. ಇಷ್ಟೆಲ್ಲ ಪ್ರೀತಿಯ ನಡುವೆ ಒಂದು ದಿನ ಕೂಡ ಬೇಟಿಯಾಗಿರಲಿಲ್ಲ ! ಮನಸ್ಸು ಮಾಡಿದ್ದರೆ ಅದೇನು ದೊಡ್ಡ ವಿಷಯವಾಗಿರಲಿಲ್ಲ. ಆದರೂ ಅದ್ಯಾಕೋ ಹಾಗೆ ಉಳಿದುಬಿಟ್ಟೆವು. ದಿಗಂತದ ಅಂಚಿನ ಜೀವಗಾನದ ಮಿಡಿತಕ್ಕಾಗಿ ಕಾಯುತ್ತಾ,ಕನವರಿಸುತ್ತಾ .ಅಹ್ ! +ಈಗ ಹೊರಟ್ಟಿದ್ದೇಕೆ ಅಂದ್ಯಾ ? ಉಹೊಂ, ಹೇಳುವುದಿಲ್ಲ ಬಿಡು. ಕೆಲವು ಕಾರಣಗಳು ಹೇಳಲಾಗದು. ಪ್ರೀತಿ ಹೇಗೆ ಆಯ್ತು ಎನ್ನುವುದು ಹೇಗೆ ಕೆಲವರಿಗೆ ಕ್ಷುಲಕ ಎನಿಸಿಬಿಡುತ್ತದೆಯೋ ಹಾಗೆ ಕೆಲವು ಕಾರಣಗಳೂ ಕೂಡ ಉಳಿದವರಿಗೆ ಕ್ಷುಲಕ ಎನಿಸಿಬಿಡುತ್ತದೆ. ನೀ ಹೇಳಿದ್ದೂ ಒಂದು ಕಾರಣವೇ ಅನಿಸಿಬಿಡುತ್ತದೆ. ಆ ಸ್ಥಾನದಲ್ಲಿದ್ದಾಗ ಮಾತ್ರ ಆ ಕಾರಣ genuine ಅನಿಸುವುದು . ಅದಕ್ಕೆ ಹೊರಟುಬಿಟ್ಟಿದ್ದೇನೆ . ಹೋಗುವಾಗ ಎಂದಿನಂತೆ ನಿನ್ನ ನಿಷ್ಕಲ್ಮಶ ಗೆಳೆತನದ ಮೂಟೆ ಹೊತ್ತು ಹೋಗ್ತಾ ಇದ್ದೇನೆ. ನಿನ್ನ ನಗುವಿನ ಸದ್ದು ಕಿವಿಯಲ್ಲಿ ಹಾಗೆ ಇದೆ. 'ಒಯ್ , ಏನ್ ಸರ್ ಹೆಂಗಿದೆ ಮೈಗೆ' ಅನ್ನೋ ನಿನ್ನ ಡೈಲಾಗ್ ಕೇಳಿ ಹೋಗಬೇಕು ಅನಿಸಿಸರೂ ನೀ ಎಲ್ಲಿ ಅಳುವೆಯೋ ಎಂಬ ಭಯವಿದೆ. ನನ್ನ ಬಗ್ಗೆ ನಿನಗೆ ಕಾಳಜಿ ಇಲ್ವಾ ಎಂದು ನೀ ನನ್ನ 'ಕೊರಳಪಟ್ಟಿ(!!)' ಹಿಡಿದರೆ ಮತ್ತೆ ಹೋಗಲು ಸಾಧ್ಯವಾಗದೇನೋ ಎಂಬ ಸ್ವಾರ್ಥ ಕೂಡ ಇದೆ. ಅದಕ್ಕೆ ಕರೆ ಮಾಡದೆ ಹೋಗ್ತಾ ಇದೀನಿ . ನನಗೆ ಗೊತ್ತು, ನೀ ನಾ ಕೇಳದೆ ನಾ ಹೇಳದೆ ಎಂದೂ ನನಗೆ ಕರೆ ಮಾಡುವುದಿಲ್ಲ ಎಂದು!! ಹಂಚಿಕೊಂಡ ಪ್ರೀತಿ, ಗೆಳೆತನ, ಜಗಳ ಎಲ್ಲವನ್ನ ಜತನವಾಗಿ ನನ್ನ ಜೊತೆಯೇ ತೆಗೆದುಕೊಂಡು ಹೋಗ್ತಾ ಇದೀನಿ. ಹೋಗುವ ಮುನ್ನ ಎಂದಿನಂತೆ ಕಣ್ಣಿಗೇನೂ ಕಾಣದೇ ಇದ್ದರೂ ಸ್ಪರ್ಶವೇ ಇಲ್ಲದಿದ್ದರೂ ಮಾತನಾಡುತ್ತಲೇ ಮೌನವಾಗಿ ತಬ್ಬಿಹಿಡಿದ ನಿನ್ನ ನೆತ್ತಿಯ ಪರಿಮಳವ ಉಸಿರ ತುಂಬ ಎಳೆದುಕೊಂಡು ಹೊರಡಲೇ !? +ಹೋಗಿಬರಲೇ … + \ No newline at end of file diff --git a/PanjuMagazine_Data/article_1001.txt b/PanjuMagazine_Data/article_1001.txt new file mode 100644 index 0000000000000000000000000000000000000000..ec5014628e321076ad28aa0dd8f9316e9927769e --- /dev/null +++ b/PanjuMagazine_Data/article_1001.txt @@ -0,0 +1,45 @@ +ಧಾರವಾಡ ಸವಿ ನೆನಪುಗಳು +ಕಾಡಕತ್ತವಾ +ಧಾರವಾಡ ಮಳೆಯಂಗ +ಆದರೇನು ಮಾಡುವುದೂ +ಮಳೆಗಾಲಕ್ಕೆ ಇನ್ನೂ ಎರಡು ತಿಂಗಳ ಬಾಕಿ ಅದ +ಅಲ್ಲಿವರೆಗೂ +ಹಾಳಾದ ಈ ಬಿಸಿಲಿನ ಕಾಟಕ್ಕೆ +ನಡುನಡುವೆ ನೆನಪುಗಳ +ಬೆವರಿನ ಜಳಕ…! +ಹೀಗಿತ್ತು ಧಾರವಾಡದ ಬದುಕು +ಬೇಕಾಗಿದ್ದು ಎಲ್ಲ ಇತ್ತು +ಹಸಿವು ಇತ್ತು, ಓದಿನ ಖುಷಿ ಇತ್ತು +ಹಣದ ಕೊರತೆ ಇತ್ತು +ಬದುಕಿನ ಚಿಂತಿ ಇತ್ತು +ಆದರೂ ಏನಾದರೂ ಮಾಡಬೇಕು ಎನ್ನುವ ಛಲ ಇತ್ತು +ಒಳ್ಳೆಯ ಗೆಳೆಯರು ಬಳಗ ಇತ್ತು +ಚಿಂತನೆ ಇತ್ತು ಚಿಂತಿಸುವ +ಜೀವಗಳಿದ್ದವು +ರಾತ್ರಿ ಕನಸುಗಳಿಗೆ ಜೊತೆಯಾಗುವ ನನಸಿನ ಸರಮಾಲೆ ಇತ್ತು…! +ಧಾರವಾಡ ಬಿಟ್ಟ ಬಂದ ನಂತರವೂ ಬಿಡದೆ ಕಾಡುವ ಮೋಹವಿತ್ತು +ಧಾರವಾಡ ಹಳೆ ಗೆಳತಿಯಂಗ ಕಾಡಾತ್ತೀತು +ಆಕಿ ನಗು, ಹುಡುಗಾಟ, ಹುಡುಕಾಟವಿತ್ತು ತಿರುಗಾಟ ಅವಳ ಜೊತಿಗೀನ +ನಾಟಕ ಮಜಲುನ ಮಜವಿತ್ತು ಬದುಕಿಗೆ ಬೇಕಾದ ವಿಚಾರ +ಸಂಕೀರ್ಣವಿತ್ತು ಜೊತೆಗೆ ಅವಳು ಸಂಕೀರಣವಾಗಿದ್ದಳು +ದಾರಿಗೆ ಚೆಲ್ಲಿದ ಹೂನಗೆ +ಚೈತ್ರದ ಚಿರುಗು ಇತ್ತು +ಶಿಶಿರಕ್ಕೆ ಎಲೆ ಉದುರಿಸೋ ಮುನಿಸಿತ್ತು +ಮೌನವಿತ್ತು ಜೊತೆಗೆ ಚಿಲಿಪಿಲಿ ಕಲರವವಿತ್ತು…! +ಖಾಲಿ ತಲೆಯಲ್ಲಿ ಸಿದ್ದಾಂತದ ನೆಲೆಯೂರಿತ್ತು ಎಡ ಬಲ +ವಿಚಾರದ ಹುಚ್ಚಾಟದಾಗ +ಕ್ರಾಂತಿಯ ಕಿಡಿಯ ಬೆಳಕಿತ್ತು +ಜೊತೆಗೆ ಸಾಂಸ್ಕ್ರತಿಯ ಸವಿತ್ತು +ಬದುಕಿಗೆ ಎನಬೇಕಾಗಿತ್ತು ಅದು ಇತ್ತು ಇದು ಇತ್ತು ನಾವು ಪಡಕೂಂಡುವಿ +ಧಾರವಾಡನ ನಾವು ಕಳಕೊಂಡವಿ ಬಿಟ್ಟವಿ +ಜೀವನ ಬೆನ್ನಹತ್ತಿ ಸಂಸಾರದಾ ಬಿದ್ದಿವಿ…! +ನಾನು ಮುದುಕನಾದೆ +ಧಾರವಾಡಕ್ಕೆ ಮಾತ್ರ ಇನ್ನು ಹರೆಯ ನಿತ್ಯ ಬರುವ ಜೀವಗಳಿಗೆ +ತನ್ನ ಮಡಿಲೂಳಗೆ +ಬರಮಾಡಿಕೊಂಡು +ತನ್ನಲ್ಲಿ ಇರುವದನ್ನು ಹಂಚಿಬಿಡುವ ನಿಸ್ವಾರ್ಥ +ಗುಣವಿದೆ ಈ ಮಣ್ಣಿಗೆ +ಇನ್ನು ಹರೆಯ ಬೆಳಯುತಲಿದೆ +ವಸಂತಕ್ಕೆ ಮೈನೇರದ ವಧುವಿನಂತೆ…! +( ಧಾರವಾಡ ಶಹರವನ್ನು ಇಷ್ಟು ಪದಗಳಲ್ಲಿ ಬಂಧಿಸಿಡಲು ಅಸಾಧ್ಯವೆ ಇದು ಆದಾವ ಮೂಲೆಗೂ ಸಾಲದು..) +-ವೃಶ್ಚಿಕ ಮುನಿ \ No newline at end of file diff --git a/PanjuMagazine_Data/article_1002.txt b/PanjuMagazine_Data/article_1002.txt new file mode 100644 index 0000000000000000000000000000000000000000..e64c10fd353981ca31f0763b73647258d7d208d8 --- /dev/null +++ b/PanjuMagazine_Data/article_1002.txt @@ -0,0 +1,9 @@ +ನಲ್ಮೆಯ ದೀಪ್ˌ +ನಮ್ಮಿಬ್ಬರ ಪ್ರೀತಿಯ ಅನುಸಂಧಾನಕ್ಕೆ ಮತ್ತೆ ಮತ್ತೆ ನೆಪವೊಡ್ಡುತ್ತ ನಿನ್ನ ಪ್ರೀತಿಯ ಬೀಜ ನನ್ನ ಮನಸ್ಸಿನ ಕನ್ನೆಲದ್ದಲ್ಲಿ ಬಿದ್ದು ಗಿಡವಾದ ಕ್ಷಣವನ್ನು ಸರಳವಾಗಿ ವಿವರಿಸಲಾಗುತ್ತಿಲ್ಲ, ಮದುವೆಯಾಗಿ ಪ್ರೀತಿಸಿದವರು ನಾವು. ನಮ್ಮ ಒಂದು ದಶಕದ ಹಾದಿಯ ದಿನಗಳು ಬರಿ ದಿನಗಳಲ್ಲˌ ಮಳೆಯ ಹನಿಗಳು. ಅದನ್ನು ನಾನ್ನಲ್ಲದೆ ಇನ್ಯಾರು ಸಂಭ್ರಮಿಸುತ್ತಾರೆ. ನನ್ನ ಬದುಕಿನ ಪ್ರತಿ ನಿಮಿಷದ ಉಲ್ಲಾಸ ನೀನುˌ ಪ್ರತಿ ದಿನ ಎದ್ದ ಕೂಡಲೆ ನನ್ನ ಮನದಲ್ಲಿ ಮೂಡುವ ಪ್ರೀತಿಯ ಗೀತೆ ನೀನುˌ ನೀನು ಜೊತೆಯಲ್ಲಿದ್ದರೆ ಪೂರ್ಣ ಎಂಬ ಭಾವ ನನ್ನದು. ಜಗತ್ತಿನ ಎಲ್ಲ ಅಚ್ಚರಿಗಳನ್ನು, ಪುಟ್ಟ ಪುಟ್ಟ ಖುಷಿಗಳನ್ನು ಬದುಕಿಗೆ ನೀಡಿದವನು ನೀನು. ನಾವಿಬ್ಬರು ಸಾಗಿದ ಬದುಕಿನ ಹಾದಿಯಲ್ಲಿ ನನ್ನನ್ನು ನಿನ್ನ ಸಂವೇದನೆಯ ಉಲಿಯ ಉಯ್ಯಾಲೆಯಲ್ಲಿ ಕೂರಿಸಿ ಜೀಕುತ್ತಾ ಬೆಳಕಿನ ಬೆರಗು ಮೂಡಿಸುವ ಕಲೆಗಾರ. ತಾಯಿಯಂತೆ ನನ್ನನ್ನು ಪುಟ್ಟ ಮಗುವಾಗಿ ಸಲಹುವ ನೀನು ಎಷ್ಟೊಂದು ಸಹನಾಮಯಿ. ಜೀವನದ ಹಾದಿ ಎಷ್ಟೇ ಕಠಿಣವಾಗಿದ್ದರು ಕನಸುಗಳನ್ನು ಹೊತ್ತು ನಿನ್ನೊಂದಿಗೆ ನಡೆಯುವಾಗ ಅದು ಎಷ್ಟೊಂದು ಹಿತ. ನಿನ್ನ ಜೊತೆಗಿನ ಪಯಣ ನನಗೆ ವಸಂತದ ಖುಷಿಯನ್ನು ನೆನಪಿಸುತ್ತದೆ. ನಮ್ಮಿಬ್ಬರ ಪ್ರೇಮದ ಕಾವ್ಯವಾಗಿ “ಆಲಿಪ್ತ” ಬದುಕಿಗೆ ಅಡಿಯಿಟ್ಟಿದ್ದಾಳೆ. +ಬಾಣಂತನದ ನೆಪದಲ್ಲಿ ನಿನ್ನನ್ನು ಬಿಟ್ಟಿದ್ದ ಆ ಆರು ತಿಂಗಳು ಅನಿವಾರ್ಯದ ಮಿಡುಕಾಟವಾಗಿತ್ತು , ಆಗೆಲ್ಲ ನಿನ್ನ ಆರದ ಪ್ರೀತಿಯ ಸಾಂಗತ್ಯವ ನೆನೆಯುತ್ತ ನಮಿಬ್ಬರ ಪೋಟೋಗಳನ್ನು ಕೆದಕಿ ಕೂರುತ್ತಿದ್ದೆˌನೆನಪು ಎಷ್ಟು ಸುಖದಾಯಕ. ಸಮುದ್ರದಂತೆ ಉಕ್ಕುವ ನಿನ್ನ ಪ್ರೀತಿ ಎಂದು ಬತ್ತದ ಅಂತರ್ಜಲ. ನನ್ನೆಲ್ಲಾ ಅತ್ಯುತ್ತಮಗಳಲ್ಲಿ ನಿನ್ನ ಪ್ರಭಾವ ದಟ್ಟವಾಗಿದೆ. ನನ್ನೆಲ್ಲಾ ಬಯಕೆಗಳ ಸಾಂಗತ್ಯ ನೀನು. ನನ್ನ ಅಸ್ತಿತ್ವದ ಇರುವಿಕೆಗೊಂದು ಐಹಿಕ ಕಾರಣ ನೀನು. ನದಿಯ ಹರಿವಿನ ಗುಂಟ ತೇಲುವ ದೋಣಿಯಂತೆ ನಮ್ಮ ಬದುಕಿನ ಪಯಣˌ ಕೆಲವೊಮ್ಮೆ ಅದು ಗಂಭೀರˌ ಆಳ ಸುಳಿಗಳಿಂದ ಕೂಡಿದ್ದರು ನಿನ್ನ ಸಂಯಮದಿಂದ ಅದು ಹಗುರಾಗಿದೆ. ನಾನು ಹೊಸ ಮಾಲೆಯನ್ನು ಕಟ್ಟುತ್ತೇನೆˌ ಮುಡಿಯಲು ನೀನಿಲ್ಲದಿದ್ದರೆ ಅದು ಬಾಡಿ ಹೋಗುವುದಿಲ್ಲವೇ ಎಂದು ಕಾವ್ಯ ದನಿಯ ಮಾಧುರ್ಯದಲ್ಲೇ ನನ್ನನ್ನು ಗೆದ್ದಿರುವ ನೀನು ನನ್ನ ಬದುಕಿನ ಅಪೂರ್ವ ಗೆಳೆಯ. ನೀನೊಬ್ಬ ಸಂಯಮಶೀಲ ಸಂತ. ಬದುಕಲ್ಲಿ ಪ್ರೀತಿಯ ಆಯಾಮಗಳನ್ನು ಅರ್ಥೈಸಿದ ಗಣಿತಜ್ಞ. ಶೂನ್ಯದೊಳಗೆ ರೂಪಕಗಳ ನವಿಲುಗರಿಯನ್ನಿಟ್ಟವನು ನೀ. ಪ್ರತಿ ಜಗಳಗಳ ಕೊನೆಯಲ್ಲು ನಮ್ಮ ಪ್ರೀತಿ ಮಂಡಿಯೂರಿ ಕನಸ ಸ್ವಾತಿಮುತ್ತಾಗುತ್ತ ಗಟ್ಟಿಗೊಳ್ಳುವ ಪರಿ ನನಗೆ ಇಂದಿಗೂ ಸೋಜಿಗವೆ. +ಅನಂತದೊಳಗೆ ಬಣ್ಣಗಳು ಮೂಡುವಂತೆˌ ನನ್ನ ಕೈಯ ಹಿಡಿದು ನಡೆದು ಹೊಸತನದ ಹಾಡು ಮೂಡಿಸುವ ಕನಸುಗಾರ ನೀನು. ಆಲಿಪ್ತ ಹುಟ್ಟಿ ಮಳೆಯ ಖುಷಿಯನ್ನು ನೆನಪಿಸಿದ್ದಾಳೆಂದು ಅವಳನ್ನು “ಹನಿ” ಎಂದು ಕರೆವ ನೀನುˌ ಅವಳು ಹುಟ್ಟಿದ ದಿನ ಭಾವುಕನಾಗಿ ನನ್ನನ್ನು ತಬ್ಬಿ ಹಣೆಗೆ ಹೂ ಮುತ್ತಿಟ್ಟು thanks for the best gift ಎಂದು ಮುಗ್ಧವಾಗಿ ಹೇಳಿದ್ದು ಇಂದಿಗೂ ನೆನಪಾಗಿ ಮಧುರವಾಗಿ ನೇವರಿಸುವುದಲ್ಲದೆˌ ನಿನ್ನ ಪ್ರೀತಿಯನ್ನು ಮತ್ತೊಮ್ಮೆ ಪರಿಚಯಿಸುತ್ತದೆ. ನಮ್ಮ ಪ್ರೀತಿ ನಿತ್ಯಮದುವಣಗಿತ್ತಿ ಅದು ಸಿರಿಗಿರಿಗಳೆತ್ತರದ ಕಣಿವೆ ಕಣಿಗಾತಿ ಚಲುವು. ದೀಪ್, ನಿನ್ನ ಪ್ರೀತಿ ಮೂಲಭೂತವಾಗಿ ಬಣ್ಣ, ರಸ, ರೂಪ, ಗಂಧಗಳನ್ನು ಮೋಹಿಸುವ ಸಂವೇದೀಸುವ ಚಕಿತಚೇತನ. ನಿನ್ನ ಎದೆಯಬೆಳುದಿಂಗಳನು ನನ್ನ ಮುಡಿಗೆ ಮುಡಿಸಿ ಚಿಗುರ ಹೊನ್ನಿನ ಕಾಂತಿ ಹೊಳೆದಂತೆ ಮಾಡುವೆ. ನಿನ್ನ ಪರಿಚಿತ ಪ್ರೀತಿ ಅನುಭವಿಸಿ ಅನುಭಾವಿಸಿದ ಮರುಕ್ಷಣ ನನ್ನ ಅಯಸ್ಕಾಂತದಂತೆ ಆಕರ್ಷಿಸುವುದು ನಿನ್ನ humorous nature, ಸುಮ್ಮನಿದ್ದರು ಜೀವಚೈತನ್ಯ ಹೊಮ್ಮಿಸುವ ನಿನ್ನ subtle humor ನನ್ನನ್ನು ಮತ್ತಷ್ಟು ಜೀವಂತಗೊಳಿಸುತ್ತದೆ. ನಮ್ಮಿಬ್ಬರ ಪ್ರೀತಿಯ ಓದು ಕಡಲನ್ನು, ಆಕಾಶವನ್ನು ನೋಡಿದಂತೆ. ಪೂರ್ತಿಯಾಗಿ ತುಂಬಿಕೊಳ್ಳಲಾಗದ ಅವುಗಳ ಅಗಾಧತೆ ನಮ್ಮನ್ನು ಆವರಿಸುವುದಲ್ಲದೆ, ನಮ್ಮಲ್ಲಿ ದೊಡ್ಡ ಜಗತ್ತೊಂದನ್ನು ಸೃಷ್ಟಿಸುತ್ತದೆ. +ಕಣ್ತುಂಬಿಕೊಂಡಾಗಲೆಲ್ಲ ಹೊಸ ಅರ್ಥಗಳನ್ನು ಧ್ವನಿಸುತ್ತವ ಅದರ ಸೌಂದರ್ಯ, ನಿಗೂಢತೆ ನಮ್ಮನ್ನು ಪ್ರತಿಕ್ಷಣ ಕಾಡದೇ ಇರದು. ಬದುಕಿನ ಪಯಣದಲ್ಲಿ ನಮ್ಮ ಪ್ರೀತಿ ಕತೆಯಲ್ಲ, ಮಾಹಿತಿಯಲ್ಲ, ಅನುಭವಗಳ ಜೋಡಣೆಯಲ್ಲ, ಕಾದಂಬರಿಯಲ್ಲ, ಭಾವಗೀತೆಯಲ್ಲ, ತತ್ತ್ವವಲ್ಲ, ನೆನಪುಗಳ ಮೊತ್ತ ಕೂಡ ಅಲ್ಲ, ಆದರೆ ಇವೆಲ್ಲವೂ ಹೌದು. ಈ ಎಲ್ಲದರಿಂದ ಒಂದೊಂದು ಅಂಶವನ್ನು ತೆಗೆದುಕೊಂಡು ತನ್ನದೇ ಕೌದಿಯನ್ನು ಅದು ಹೊಲಿದುಕೊಂಡು ನಮ್ಮನ್ನು ಬೆಚ್ಚಗಿರಿಸುತ್ತದೆ, ಮುದಗೊಳಿಸುತ್ತದೆ. ಗೀಜಗನ ಹಕ್ಕಿಯೊಂದು ಎಲ್ಲಿಂದಲೋ ನಾರಿನ ಎಳೆಗಳನ್ನು ತಂದು ನೇಯ್ದ ಚಿತ್ತಾಪಹಾರಿ ಗೂಡಿನ ತರಹದ ಪ್ರೀತಿ ನಮ್ಮದು. ತಂದು ಹೊಲಿದ ನಾರುಬೇರು ಎಲ್ಲಿಯದಾದರೂ ಗೂಡು ಮಾತ್ರ ಗೀಜಗನದೇ. ನಮ್ಮಿಬ್ಬರ ಮೂಲಆಕರ್ಷಣೆಯೇ ನಮ್ಮಿಬ್ಬರ ಲವಲವಿಕೆ, ನಾಳೆಗಳ ಬಗ್ಗೆ ನಂಬಿಕೆ ಹುಟ್ಟಿಸುತ್ತ, ಕನಸುಕಾಣುತ್ತ ಬದುಕನ್ನು ಜೀವದಾಯಿಯಾಗಿಸುತ್ತ ಪ್ರತಿಕ್ಷಣಗಳಿಗೂ ಹುರುಪುತುಂಬಿ, ಕೊಂಚ ಉತ್ಸಾಹ, ಜೀವಂತಿಕೆಯನ್ನು ಪೊರೆಯುತ್ತಿರುತ್ತೇವೆ. +ರಾಗ ಭಾವ ವಿಶೇಷಸ್ವರಗಳೋಲಾಟವೋ ಸುಖದುಃಖದಾಲಿಂಗನವೊ ಸವಿಯೂಟಸವಿಕೂಟ ಕುಣಿತ ಗೆಲವು ಅಚ್ಚೊತ್ತಿಮನ ಸಂತೋಷ ಉದಾತ್ತ ತುಂಬಿತೋ ಬಯಲು ತುಂಬಿ ಬಂದಿತು ಹೃದಯ ತುಂಬಿತುಳುಕಿತ್ತು ಜೀವ ಎನ್ನುವಂತೆ. ಸರಸ ವಿರಸ ಎಲ್ಲವೂ ಮಿಳಿತಗೊಂಡು ಹದವಾಗಿರುವ ದಾಂಪತ್ಯ ನಮ್ಮದು. ಬಾಳ ಪಯಣದಲ್ಲಿ ನಾವು ಹೊಂದಿಕೊಂಡು ಬೆಳೆದ್ದಿದ್ದೇವೆ. ನಾವಿಬ್ಬರು ಯೋಚಿಸುವ ದಾಟಿಯಲ್ಲು ಒಂದೇ ತೆರೆನಾದ ಕಾವ್ಯ ದನಿಯಿದೆˌ ಚಲನಶೀಲತೆಯಿದೆ. ಆಡದೇ ಅರ್ಥೈಸುತ್ತ ಪ್ರೀತಿಯ ಅನುಭವಕ್ಕೆ ತೆರೆದುಕೊಂಡಿದ್ದೇವೆ. ನಿನ್ನ ಜೊತೆಗಿನ ಬದುಕು ಪ್ರೀತಿಯ ಸಾಮರಸ್ಯದ ರೂಪಕದಂತೆ. ಬಾಳಪಥವನೊಮ್ಮೆ ಧ್ಯಾನಿಸುತ್ತ ಹಿಂದೆ ನೋಡಿದರೆ ಈ ಜಗತ್ತಿನಲ್ಲಿ ಭೇಟಿಯಾದ ಶ್ರೇಷ್ಠ ವ್ಯಕ್ತಿಯ ಜೊತೆ ಜೀವನವನ್ನು ಪ್ರೀತಿಯನ್ನು ಹಂಚಿಕೊಂಡಿದ್ದೇನೆ ಎಂದು ಅರಿವಾಗದೆ ಇರುವುದಿಲ್ಲ. +ಆಡದೆ ಉಳಿದಿಹ ಮಾತುಗಳು ಇನ್ನು ನೂರಿವೆ ದೀಪ್. +ನಿನ್ನವಳು +ಚುಮ್ಮಿ \ No newline at end of file diff --git a/PanjuMagazine_Data/article_1003.txt b/PanjuMagazine_Data/article_1003.txt new file mode 100644 index 0000000000000000000000000000000000000000..0a946931b3121a0bd168c8455aa9dc65ff447ec1 --- /dev/null +++ b/PanjuMagazine_Data/article_1003.txt @@ -0,0 +1,18 @@ +ನಾನು ನಾಲ್ಕು ವರ್ಷದ ಮಗುವಿನ ತಾಯಿ..ಅಂದರೆ ನನಗು ನಾಲ್ಕೇ ವರ್ಷ!! ಹೌದು ಒಂದು ಮಗುವಿನೊಂದಿಗೆ ತಾಯಿಯೂ ಹುಟ್ಟುತ್ತಾಳೆ .. ನನ್ನ ತಾಯ್ತನದ ಜನನವು ಹಾಗೆ ಆದದ್ದು .. ಮಗು ಬೆಳೆಸುವದೇನು ಸಹಜದ ಕಲೆಯಲ್ಲ…ಆದರೆ ಅದರ ತಯಾರಿಯನ್ನ ಬಹಳ ಮುಂಚಿನಿಂದ ಮಾಡಬೇಕಾಗುತ್ತೆ ..ಒಂದು ಮಾನಸಿಕ ತಯಾರಿಯದ್ದು ಮತ್ತೊಂದು ದೈಹಿಕ ತಯಾರಿಯದ್ದು +ಮಾನಸಿಕವಾಗಿ ಹೆಣ್ಣು ತಾಯ್ತನಕ್ಕೆ ಬಹಳ ಬೇಗ ಸಜ್ಜುಗೊಳ್ಳುತ್ತಾಳೆ ಅನ್ನೋ ನಂಬಿಕೆ ಇದೆ..ನಾನು ಹೇಳುತ್ತೇನೆ ಅದು ಸುಳ್ಳು, ಆಕೆಗೂ ಸಮಯ ಬೇಕು..ಅಲ್ಪ ಸಲ್ಪದ ತರಬೇತಿಯು ಬೇಕು..ಮನೆಯಲ್ಲಿ ಹಿರಿಯರಿದ್ದಾರೆ ಸರಿ, ಇಲ್ಲವಾದರೆ ಕಷ್ಟವಿದೆ. ಹಾಗಾಗಿಯೇ ನಮ್ಮಲ್ಲಿ ಸೀಮಂತದ ನಂತರ ಜನನದ ತನಕದ ಗಡುವನ್ನ ತಾಯಿ ಮನೆಯಲ್ಲಿ ಕಳೆಯುವ ಆಚರಣೆ ಬೆಳೆದು ಬಂದದ್ದು. ಅಮ್ಮ ಅಜ್ಜಿ ಮನೆಗೆ ಬರೋ ನೆಂಟರಿಷ್ಟರು ಹೆರಿಗೆಗೆ ಮತ್ತು ಮಗುವಿನ ಲಾಲನೆ ಪಾಲನೆಯ ಬಗ್ಗೆ ಮಾತಾಡುತ್ತಾ ನಮಗೆ ಅರಿವಿಲ್ಲದಂತೆ ಸಜ್ಜುಗೊಳಿಸುತ್ತಾರೆ. ಆದರೆ ಇದು ತುಣುಕು ಕುಟುಂಬಗಳ ಯುಗ, ತಂದೆತಾಯಿಯರಿಲ್ಲದೆ, ಇದ್ದರು ಆಫೀಸಿನಲ್ಲಿ ಕೆಲಸ ಮಾಡುತ್ತಲೇ, ಹೆರಿಗೆಯ ದಿನಗಳನ್ನ ಹತ್ತಿರ ನೋಡುವ ದಿನಗಳು !! +ಮಗುವಿನ ಆಗಮನವು ಅಷ್ಟೇ, ಮನೆಗೆ ಹೊಸದೊಂದು ಸದಸ್ಯನ ಆಗಮನ ನೀವು ಇಬ್ಬರಿದ್ದಿರಿ..ಈಗ ನಿಮ್ಮಿಬ್ಬರ ನಡುವೆ ಮತ್ತೊಂದು ಹೊಸಾ ವ್ಯಕ್ತಿ ಬರುತ್ತಾನೆ/ಳೆ, ನಿಮ್ಮಿಬ್ಬರಿಗಿಂತಲೂ ಭಿನ್ನವಿರಬಹುದು ವ್ಯಕ್ತಿಯ ವ್ಯಕ್ತಿತ್ವ ..ಇದನ್ನ ಅರ್ಥೈಸಿಕೊಳ್ಳಬೇಕು ಮತ್ತು ಗೌರವಿಸಬೇಕು. +ಕೆಳಗೆ ಕೆಲ ಸಣ್ಣ ( ಇನ್ ಫ್ಯಾಂಟ್ ) ಶಿಶುಗಳ ಆರೈಕೆ ಬಗ್ಗೆ ಸಲಹೆಗಳಿವೆ .. +೧)ಕೆಲ ಮಕ್ಕಳು ಚೆನ್ನಾಗಿ ನಿದ್ರಿಸುತ್ತವೆ, ಹಸಿವಾದಾಗ ಮಾತ್ರ ಅವು ಅಳುತ್ತವೆ, ಆದರೆ ಕೆಲ ಮಕ್ಕಳಿಗೆ ನಿದ್ರೆ ಕಮ್ಮಿ ಅಳು ಜಾಸ್ತಿ, ಇಂತಹ ಸಮಯದಲ್ಲಿ ಸರಿಯಾಗಿ ೩ ಗಂಟೆಗೊಮ್ಮೆ ಹಾಲು ಕುಡಿಸಬೇಕು. +೨)ಮೊದಮೊದಲು ಮಗುವಿಗೆ ಅಮ್ಮನ ಹಾಲು ಕೂಡ ಕೋಲಿಕ್ (ಗ್ಯಾಸ್) ಆಗುವ ಸಂಭವ ಇರುತ್ತದೆ..ಆದ್ದರಿಂದ ಪ್ರತಿ ಬಾರಿ ಮಗು ಹಾಲು ಕುಡಿದ ನಂತರ ಮರೆಯದೆ ಹೆಗಲ ಮೇಲೆ ಹಾಕಿಕೊಂಡು ತೇಗಿಸಬೇಕು, ತೇಗಿನೊಡನೆ ಜಾಸ್ತಿಯಾದ ಹಾಲು ಹೊರಹೋಗಿ ಮಗು ಆರೋಗ್ಯವಾಗಿ ಬೆಳೆಯುತ್ತದೆ. +೩)೩ ತಿಂಗಳವರೆಗೆ ಮಗು ಕಕ್ಕುವುದು ಮತ್ತು ನಿದ್ರಾಹೀನತೆ ಇರುತ್ತದೆ..ಇದು ತುಂಬಾ ಸೂಕ್ಷ್ಮ ಕಾಲ..ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೆ ಮಗುವಿಗೆ ಕೊಡಲೇ ಬಾರದು .. +೪)ಮಲಗಿಕೊಂಡು ಹಾಲು ಕುಡಿಸಬಾರದು ಅಕಸ್ಮಾತ್ ತಾಯಿಗೆ ಮಂಪರು ಹತ್ತಿದರೆ ಅಪಾಯ ಆದಷ್ಟು ತೋಳಿನಲ್ಲಿ ಎತ್ತಿಕೊಂಡು ಕುಡಿಸಿ ನಂತರ ಮಲಗಿಸುವುದು ಒಳ್ಳೆಯದು (feeding positions pictures attached). + +೫)ಸರಿಯಾಗಿ ತಪ್ಪದೆ ವ್ಯಾಕ್ಸಿನೇಷನ್ ಮಾಡಿಸಿ..ಮಗುವಿಗೆ ಬರಬಹುದಾದ ಕಾಯಿಲೆಗಳನ್ನ ತಡೆಗಟ್ಟಿ.. ಈಗ ಗರ್ಭಕೊರಳಿನ ಕ್ಯಾನ್ಸರಿನಿಂದ ಹಿಡಿದು ಸಾಮಾನ್ಯ ಜ್ವರದವರೆಗು ಚುಚ್ಚುಮದ್ದುಗಳು ಲಭ್ಯವಿವೆ… ವೈದ್ಯರ ಸಲಹೆಯಂತೆ ಮಗುವಿನ ವಯಸ್ಸಿಗೆ ತಕ್ಕ ಹಾಗೆ ಕೊಡಿಸಬಹುದು. +೬)ಹೆಚ್ಚೆಚ್ಚು ಸಮಯ ನಿಮ್ಮ ಮಗುವಿನೊಂದಿಗೆ ಕಳೆಯಿರಿ ..ಸ್ನಾನದ ನಂತರ ಬರಿ ಮೈಯಲ್ಲಿದ್ದಾಗ ದಿನಕ್ಕೊಮ್ಮೆ ಮಗುವನ್ನು ತೆಕ್ಕೆಯಲ್ಲಿ ಮೃದುವಾಗಿ ಮುದ್ದಿಸಿ.. ತಾಯಿಯ ದೇಹದ ಶಾಖ ಮತ್ತು ಬೆಚ್ಚನೆಯ ಸ್ಪರ್ಶ ಅವಕ್ಕೆ ಆನಂದವನ್ನು ನೀಡುತ್ತದೆ ಮತ್ತು ಬಧ್ರತೆಯ ಭಾವ ನೀಡುತ್ತದೆ..ಇತ್ತೀಚಿನ ಕೆಲ ಸಂಶೋಧನೆಗಳು ಇದನ್ನ ದೃಢ ಪಡಿಸಿವೆ. +೭)ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ಗಾಭರಿ ಬೀಳುವ ಅವಶ್ಯಕತೆ ಇಲ್ಲ..ತಾಯಿಯು ಹಾಲು ಕುಡಿಸುವಾಗ ಆದಷ್ಟು ಶಾಂತವಾಗಿಯೂ ಬಹಳಷ್ಟು ಗಾಳಿ ಬೆಳಕು ಬರುವ ಸದ್ದುಗದ್ದಳಗಲಿಲ್ಲದ ಜಾಗದಲ್ಲಿ ಕುಳಿತು ಹಾಲುಡಿಸುವುದು ಒಳ್ಳೆಯದು. +೮)ತುಂಬಾ ಜೋರಾದ ಶಬ್ದ, ಮಿಂಚು(ಫ್ಲಾಶ್) ಬೆಳಕು ಇವೆಲ್ಲಾ ನಿಷಿಧ್ಧ ..ಮಗು ಗಾಭರಿಯಾಗಬಹುದು. +೯)ತಾಯಿಯು ಹಾಲು ತರಕಾರಿ ಮುಂತಾದ ಪುಷ್ಟಿಕ ಆಹಾರ ಸಮೃದ್ಧವಾಗಿ ತೆಗೆದುಕೊಳ್ಳಬೇಕು ಹಾಲು ವೃದ್ಧಿಯಾಗುವದರ ಜೊತೆಗೆ ಆಕೆಯ ಆರೋಗ್ಯಕ್ಕೂ ಒಳ್ಳೆಯದು. +೧೦)ಮಗುವಿನ ಬೆಳವಣಿಗೆಯನ್ನ ಪ್ರತಿ ತಿಂಗಳಿಗೂ ದಾಖಲಿಸುತ್ತಾ ಹೋಗಿ..ಇದು ತುಂಬಾ ಖುಷಿ ಕೊಡುತ್ತದೆ..ಅದರ ತೂಕ ಅಂಗುಲದ ಅಳತೆ ವ್ಯತ್ಯಾಸ ಬೆಳವಣಿಗೆಯನ್ನ ದೃಢ ಪಡಿಸುತ್ತದೆ. +೧೧)ಮಗು ಇರುವ ಮನೆಯಲ್ಲಿ ಇರಲೇ ಬೇಕಾದದ್ದು, ವೈದ್ಯರ ದೂರವಾಣಿ ಸಂಖ್ಯೆ, ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ವೈದ್ಯರಿಂದ ಪ್ರಮಾನಿಸಲ್ಪಟ್ಟ ಔಷಧಿಗಳು … +ಮಕ್ಕಳು ಅರಳುವ ಮೊಗ್ಗುಗಳು ಅವುಗಳ ಆರೈಕೆ ಮತ್ತು ನಡವಳಿಕೆಗಳು ನಮ್ಮ ಮೇಲೆ ಅವಲಂಬಿತ ಹಾಗಾಗಿ ನಮ್ಮ ಮನೆಯ ಅಂಗಳಕ್ಕೆ ಬಂದಿಳಿದ ಬೆಳಕುಗಳನ್ನ ತಾಳ್ಮೆ ಮತ್ತು ಪ್ರೀತಿ ಇಂದ ನೋಡಿಕೊಳ್ಳೋಣ … +-ಮಹಿಮಾ ಸಂಜೀವ್ \ No newline at end of file diff --git a/PanjuMagazine_Data/article_1004.txt b/PanjuMagazine_Data/article_1004.txt new file mode 100644 index 0000000000000000000000000000000000000000..8f4d9606073ec1ebf81beb6a980da5ea2138abf3 --- /dev/null +++ b/PanjuMagazine_Data/article_1004.txt @@ -0,0 +1,47 @@ + +ಅಂದು ಮಟಮಟ ಮದ್ಯಾಹ್ನ ಆಕಾಶದಲ್ಲಿ ಸೂರ್ಯ ಸೀಮೆ ಎಣ್ಣೆ ಸುರುವಿಕೊಂಡು ಅತ್ತೆಯ ಕಾಟ ಸಹಿಸಿಕೊಳ್ಳದ ಸೊಸೆ ಆತ್ಮಹತ್ತೆ ಮಾಡಿಕೊಂಡು ಧಗಧಗಿಸುವಂತೆ ಉರಿಯುತ್ತಿದ್ದ. ಡಾಂಬರ ರಸ್ತೆ ಸ್ಮಾಶಾನ ಮೌನವಾಗಿ ಮಲಗಿತ್ತು. ಗಿಡಮರಗಳು ಮಿಲ್ಟಟ್ರೀ ಯೋಧರಂತೆ ವಿಶ್ರಾಮ್ ಸ್ಥಿತಿಯಲ್ಲಿ ನಿಂತುಕೊಂಡಿದ್ದವು. ಒಂದು ಎಲೆಯೂ ಅಲಗಾಡುತ್ತಿರಲಿಲ್ಲ. ಗಾಳಿ ಭೂಮಂಡಲದಿಂದ ಗಡಿಪಾರಾಗಿ ಹೋದಂತೆ ಇತ್ತು. ಅಂತ ಭಯಂಕರ ರಸ್ತೆಯ ಮೇಲೆ ಒಂದು ಮೋಟಾರಿನ ಸುಳಿವಿಲ್ಲ. ಅಪ್ಪಿತಪ್ಪಿ ಆ ದಾರಿಗುಂಟ ಬರುವ ಮೋಟಾರುಗಳು ತಾವು ಸೇರಬೇಕಾದ ಜಾಗ ಸೇರುತ್ತವೆ ಎಂಬ ಯಾವ ಭರವಸೆ ಇರಲಿಲ್ಲ. ರಸ್ತೆಯಲ್ಲಿ ದೊಡ್ಡ ದೊಡ್ಡ ಹುಂಡಿಗಳು, ಕಲ್ಲು ಚೂರುಗಳು, ಆ ರಸ್ತೆಗೆ ಒಂದಿಷ್ಟು ಮೇರಗು ತಂದಿದ್ದವು. ಸರಕಾರದವರು ಈ ರಸ್ತೆಯ ಬಗ್ಗೆ ತಲಿ ಕೆಡಿಸಿಕೊಂಡಿರಲಿಲ್ಲ. ಜನರಿಗೂ ಅಷ್ಟೇ ಈ ರಸ್ತೆಯನ್ನು ದುರಸ್ತಿ ಮಾಡಬೇಕೆಂಬ ಅರಿವೇ ಇರಲಿಲ್ಲ. ಈ ರಸ್ತೆಯ ಎರಡೂ ಬದಿಯಲ್ಲಿರುವ ದೊಡ್ಡ ದೊಡ್ಡ ಮರಗಳನ್ನು ಆಡು-ಕುರಿ ಮೇಸುವ ಮಂದಿ ಕಡೆದು ಬೋಳು ಬೋಳು ಮಾಡಿದ್ದರು. ಉರುವಲಿಗೆ ಕೆಲವರು ಬುಡಸಮೇತ ಕಡೆದು ಹಸನುಗೊಳಸಿದ್ದರು. +ಹತ್ತು ವರ್ಷದ ಹಿಂದೆ ಮಟಮಟ ಮದ್ಯಾಹ್ನ ಈ ರಸ್ತೆ ಮೇಲೆ ತನ್ನ ಹೆಂಡತಿಯನ್ನು ಸೈಕಲ್ ಮೇಲೆ ಕುರಿಸಿಕೊಂಡು ಹೋಗುತ್ತಿದ್ದವನನ್ನು ನಾಕಾರು ಕಿಡಗೇಡಿ ಯುವಕರು ಚನ್ನಾಗಿ ಬಡೆದು ಅವನ ಹೆಂಡತಿಯನ್ನು ಆ ಯುವಕನ ಕಣ್ಣಮುಂದೆಯೇ ನಾಲ್ವರೂ ಅನುಭವಿಸಿ ತಮ್ಮ ಆಸೆ ತೀರಿಸಿಕೊಳ್ಳುತಿದ್ದರು. ‘ಬಿಡ್ರೋ ನನ್ನ ಹೆಂತಿಗೇನೂ ಮಾಡಬ್ಯಾಡ್ರೀ’ ಅಂತ ಆಕ್ರಂದನ ಇಡುತ್ತಿದ್ದವನ ಬಾಯಿಗೆ ಬಟ್ಟೆ ತುರುಕಿ, ಮತ್ತಷ್ಟು ಹಿಗ್ಗಾ ಮುಗ್ಗಾ ತಳಸಿದರು. ನಾಲ್ವರ ಹೊಡೆತವನ್ನು ಉಂಡ ದೇಹ ಹಣ್ಣು ಹಣ್ಣಾಗಿ ನಿತ್ರಾನಕ್ಕೆ ಬಿದ್ದಿತು. ಇಪ್ಪತ್ತೆರಡರ ತುಂಬು ಚಲುವೆಯಾದ ಆ ಯುವತಿ ಅವರ ಕಾಟಕ್ಕೆ ಕಿರಚಾಡಿ ಚೀರಾಡಿ ಗೋಗರೆದರೂ ಅವಳ ಸಂಕಟವನ್ನು ಅಲ್ಲಿ ಕೇಳುವವರೂ ಯಾರೂ ಇರಲಿಲ್ಲ. ತಮಗೆ ಅನುಭವಿಸಿ ಸಾಕಾದ ಮೇಲೆ ಅವಳನ್ನು ಕುತ್ತಿಗೆ ಹಿಚುಕಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವಳ ಗಂಡನ ಮೇಲೆ ಮಲಗಿಸಿ ಪರಾರಿಯಾಗಿದ್ದರು. ಅವರ ಹೊಡೆತದಿಂದ ಪ್ರಜ್ಞೆತಪ್ಪಿ ಬಿದ್ದಿದ್ದ ಯುವಕ ಪ್ರಜ್ಞೆ ಬಂದ ಮೇಲೆ ಹೆಂಡತಿಯ ಶವ ನೋಡಿ ಮತಿ ಭ್ರಮೆಗೊಂಡು ಹುಚ್ಚನಂತೆ ನಗುತ್ತ ಕುಣಿಯುತ್ತ ಕಿರಚುತ್ತ ಹಾಗೆ ಅದೇ ರಸ್ತೆ ಮೇಲೆ ನಡೆಯುತ್ತ ಎತ್ತಲೊ ಹೊರುಟು ಹೋದ. + +ದನಾ ಕಾಯುವ ಹುಡುಗರು ಹೊಯ್ಕೊಂಡು ಜನರನ್ನು ಕೂಡಿಸಿದರು. ಈ ಸುದ್ದಿ ಅವರಿವರಿಂದ ತಿಳಿದ ಪೋಲಿಸರು ಅಲ್ಲಿಗೆ ಬಂದು ಸತ್ತ ಹೆಣದಸುತ್ತ ನಕ್ಷೆಯ ಚಿತ್ರ ಬರೆದು ಅರಕೇರಿಯ ಹಿರಿಯರನ್ನು ಚೌಕಾಸಿ ಮಾಡಿದರು. ದನಾಕಾಯುವ ಹುಡಗರನ್ನು ಕರೆದು ಹೆದರಿಸಿ ಬೆದರಿಸಿ ಕೇಳಿದರೂ ಅಪರಾಧಿಗಳು ಯಾರೆಂಬುವುದು ತೀಳಿಯಲಿಲ್ಲ. ಹೆಣ ಯಾವೂರದ್ದು ಎಂದು ತಳಿಯಲು ಹರಸಹಾಸ ಮಾಡಿದರೂ ಗೊತ್ತಾಗಲಿಲ್ಲ. ಅದೇ ಜಾಗದಲ್ಲಿ ಹೆಣಕ್ಕೆ ಕೊಳ್ಳಿ ಕೊಟ್ಟು ಜೀಪು ಹತ್ತಿದರು. ಅರಕೇರಿ, ತೋಳಮಟ್ಟಿ, ಭೀರಕಬ್ಬಿ ಊರು ಜನರಿಗೆ ಈ ರೀತಿ ಅಪರಾಧ ಎಸಗಿದವರಾರು ಅಂತ ಅಂದಿನಿಂದ ಅನುಮಾನ ಕಾಡತೊಡಗಿತು. + +ಅಂದಿನಿಂದ ಯಾವ ಊರಿನವರು ಆ ರಸ್ತೆಯ ಮೇಲೆ ಒಬ್ಬೊಬ್ಬರೇ ಹೋಗಿಲ್ಲ. ಸತ್ತವಳು ದೆವ್ವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆ ಎಂದು ಎಲ್ಲರೂ ನಂಬಿದ್ದಾರು. ಹಿಂಗಾಗಿ ಈ ರಸ್ತೆಗೆ ‘ದೆವ್ವರಸ್ತೆ’ ಅಂತ ಅರಕೇರಿ ಊರವರು ನಾಮಕರಣ ಮಾಡಿದ್ದರು. + +ಅರಕೇರಿ ಊರವರಂತು ಈ ರಸ್ತೆಯ ಮೇಲೆ ಒಬ್ಬೊಬ್ಬರೆ ಎಂದೂ ಹೋದ ಉದಾಹರಣೆಯೇ ಇರಲಿಲ್ಲ. ಹಠಸಾದಿಸಿ ಹೋದವರ ಪೈಕಿ ಕುದರಿ ಬಸ್ಯಾನ ಬಿಟ್ರ ಯಾರೂ ಜೀವಂತ ಮರಳಿ ಬಂದಿರಲಿಲ್ಲ. ಹೋಗುವುದಾದರೆ ನಾಕಾರ ಜನ ಕೂಡಿ ಹ್ವಾದ್ರ ಬಚಾವ್ ಅಕ್ಕಿದ್ರು. ಈ ರಸ್ತೆಯಲ್ಲಿ ಭಯಂಕರವಾದ ಒಂದು ದೆವ್ವ ಐತಿ ಅಂತ ಇಡೀ ಅರಕೇರಿ ಊರೇ ಮಾತಾಡುತ್ತಿತ್ತು. ಸುತ್ತಮುತ್ತಲಿದ್ದ ತೋಳಮಟ್ಟಿ, ಬೀರಕಬ್ಬಿ, ಹಳ್ಳಿ ಜನರೂ ಈ ರಸ್ತೆಯಲ್ಲಿ ಇರುವ ದೆವ್ವಿನ ಕಥಿ ತಿಳಿದು ಹೆದರಿದ್ದರು. ಅದರಾಗ ಕುದರಿ ಬಸ್ಯಾ ಆ ದಾರಿಯೊಳಗ ಒಬ್ಬ ಹೋಗಿ ಆ ಊರಾಗ ಗಿನ್ನಿಸ್ ದಾಖಲೇ ಮಾಡಿದ್ದ. ಬಸ್ಯಾನಷ್ಟ ಧೈರ್ಯದ ಗಂಡು ಸುತ್ತ ಹತ್ತ ಹಳ್ಯಾಗ ಇಲ್ಲ ಅಂತ ಇಡೀ ಊರಿಗೂರೆ ಮಾತಾಡ್ತಿತ್ತು. ಅಂದಿನಿಂದ ಬಸ್ಯಾ ತುಂಬಾ ಗತ್ತಿನಿಂದ ಊರಾಗ ಒಂದ ರೀತಿ ಹವಾ ಮೆಂಟೇನ್ ಮಾಡಿದ್ದ. ಕುಂತಲ್ಲಿ ನಿಂತಲ್ಲಿ ಆ ರಸ್ತೆಯಲ್ಲಿ ತಾನೊಬ್ಬನೆ ಮಟಮಟ ಬದ್ಯಾಹ್ನ ಹೋದದ್ದು. ದೆವ್ವ ಮೆಲ್ಲಕ ಬಂದು ಅವನ ಮುಂಡಿಮ್ಯಾಲ ಕೈ ಹಾಕಿ ‘ಎಲ್ಲಿಗಿ ಹ್ವಂಟಿಯಪ್ಪ ಬಸಣ್ಣಾ’ ಅಂತ ಮಾತಾಡಿಸುತ್ತ ಅವನಿಗೆ ತಿನ್ನಲು ಗ್ವಂಜಾಳ ತೆನಿ ಕೊಟ್ಟು ಮಂಗಮಾಯವಾದದ್ದು ಕಥಿ ಹೇಳತಿದ್ದ. ಬಸ್ಯಾ ಎಲ್ಲೆ ಹ್ವಾದ್ರು ಬಂದ್ರು ಅವನ ಸುತ್ತಮುತ್ತ ನಾಕಾರ ಮಂದಿ ಜಮಾ ಅಕ್ಕಿದ್ರು. ಒಂದಿನ ಮತೋ ಮಾತಿಗೆ ‘ದೆವ್ವಾ ನೋಡಾಕ ಹ್ಯಾಂಗ ಇತ್ತೋ ಬಸಣ್ಣಾ’ ಅಂತ ಕುಡ್ಡಮಲ್ಲ ಅಂಜಕೋತ ಕೇಳಿದ. ಸುತ್ತಲಿದ್ದವರು ಲೇ ಮಳ್ಳಸೂಳಿಮಗನ ಅದ ಹ್ಯಾಂಗಾರ ಯಾಕ ಇರ್ವಲ್ದು ಬಿಡವಲ್ದು ಅದನ ಕಟಗೊಂಡ ನೀ ಏನ ಮಾಡಾಂವ ಅದರ ಸುದ್ದಿ ಎತ್ತಿದರ ಚಡ್ಯಾಗ ಉಚ್ಚಿ ಬರ್ತಾವ ಅಂತ ಕುಡ್ಡಮಲ್ಲನ ಗದರ್ಸಿ ಬಾಯಿ ಮುಚ್ಚಿದ್ರು. ಆಗ ಕುದರಿ ಬಸ್ಯಾ ಅವರ ಪುಕ್ಕಲತನ ನೋಡಿ ನಗತೊಡಗಿದ. + + ***** + +ಅಲ್ಲಿ ಇಲ್ಲಿ ಸಿಕ್ಕದ್ದ ತೀನಕೋತ ಹೆಂತಿ ಸತ್ತಾಗಿಂದ ಹುಚ್ಚನಾಗಿ ತಿರಗತಿದ್ದ ಆ ಸೈಕಲ್ ಸವಾರನಿಗೆ ಅರಕೇರಿ ಮಂದಿ ಪಾಪ ಅಂತ ಕರುಣೆ ತೋರಿಸಿ ಆ ಹುಚ್ಚನಿಗೆ ನೆನಪಾದಗೊಮ್ಮೆ ಕೂಳ ಕೊಡತಿದ್ರು. ನಾಕಾರ ಮಂದಿ ಕೂಡಿ ಎದರಿಗೆ ಬಂದ್ರೆ ‘ನನ್ನ ಹೆಂತಿಗೆ ಏನೂ ಮಾಡಬ್ಯಾಡ್ರೋ’ ಅಂತ ಅಳುತ್ತ ಅವರತ್ತ ಕಲ್ಲು ಎಸಿಯುತ್ತಿದ್ದ ಆ ಹುಚ್ಚ. ಕೆಲವರು ಹುಚ್ಚನ ನೋಡಿ ನಗತ್ತಿದ್ರು. ಕೆಲವರು ಎಲ್ಲಿ ಸೂಳಿಮಗಾಲೇ ನೀ ಅಂತ ಪಡಾಪಡಾ ಹೊಡಿತಿದ್ರು. ಹುಚ್ಚ ತನ್ನ ಹೆಂತಿ ಸತ್ತ ಜಾಗದಲ್ಲಿ ಸಿಕ್ಕ ವಸ್ತುಗಳನ್ನೆಲ್ಲ ತಂದು ಕೂಡಿ ಕೂಡಿ ಹಾಕಿದ್ದ. ರಾತ್ರಿಯಾದರೆ ಚಳಿ ಇರಲಿ ಮಳಿ ಇರಲಿ ಅವನ ವಸ್ತಿ ಅದೇ ಜಾಗದಲ್ಲಿ. + +ಹುಚ್ಚನ ಹೆಂಡತಿ ದೆವ್ವಾಗಿ ಊರ ಜನರಿಗೆ ಸಾಕಷ್ಟು ತೊಂದರೆ ಕೊಡುವುದಲ್ಲದೆ ಮೂರ ಜನರನ್ನು ಬಲಿ ತಗಿದುಕೊಂಡಿದ್ದು ಊರಿನವರು ಯಾರೂ ಮರತಿರಲಿಲ್ಲ. ಬೈಕ ಮ್ಯಾಲೆ ಮಟಮಟ ಮದ್ಯಾನ ಹೋಗುತ್ತಿದ್ದಾಗ ಅದೇ ಜಾಗದಲ್ಲಿ ಬಿದ್ದು ಪಾಟೀಲ ಶಿವಪ್ಪ ಹೆಣವಾಗಿದ್ದ. ಊರ ಮಂದಿ ಗಬಗುಡುತ್ತ ಬಂದುರು. ಮದುವಿಯಾಗಿ ಒಂದ ವರ್ಷದಾಗ ಶಿವಪ್ಪ ಸತ್ತಿದ್ದಕ್ಕ ಅವನ ಹೆಂಡತಿ ಉಳ್ಳಾಡಿ ಅಳುತ್ತಿದ್ದಳು. ಜಾಲಿಗಿಡದ ಕೆಳಗೆ ಕುಳಿತ ಹುಚ್ಚನೂ ಆಕಾಶ ಹರಿದು ಬೀಳುವಂತೆ ಭೂಮಿ ಹೋಳಾಗುವಂತೆ ಅಳತೊಡಗಿದ್ದ. ಹುಚ್ಚ ಅಳುವುದನ್ನು ಊರಜನರೂ ಯಾರೂ ಗಮನಿಸಲಿಲ್ಲ. + +ಶಿವಪ್ಪನ ಹೆಣ ಎತ್ತಿಕೊಂಡು ಹೋಗಿ ಮಣ್ಣು ಮಾಡಿ ಮನೆಗೆ ಹೋದರು. ಶಿವಪ್ಪ ಸತ್ತು ಆರೆ ಆರು ತಿಂಗಳಲ್ಲಿ ಮತ್ತದೆ ಜಾಗದಲ್ಲಿ ಎತ್ತಿನ ಬಂಡಿಯಲ್ಲಿ ಬರುತ್ತಿದ್ದ ನಿಂಗ ಬಂಡಿಗಾಲಿ ಉಚ್ಚಿಬಿದ್ದು ತೆಲೆಬುರುಡೆ ಬಿಚ್ಚಿ ಸತ್ತಿದ್ದ. ಅಯ್ಯೋ ಊರಿಗೆ ಏನೋ ಅನಾಹುತ ಕಾದಿದೆ ಎಂದು ಊರ ಜನರು ತಮ್ಮತಮ್ಮೊಳಗೆ ಮಾತಾಡಿಕೊಂಡರು. ನಿಂಗನ ಹೆಣಾ ಎತ್ತಿಕೊಂಡು ಹೋಗುವಾಗ ಮಳೆ ಧೋ ಎಂದು ಸುರಿಯ ತೋಡಗಿತು. ಜಾಲಿಯ ಗಿಡದ ಬುಡಕ್ಕೆ ಕುಳತಿದ್ದ ಹುಚ್ಚ ನಡಗುತ್ತ ಹಲ್ಲು ಕಿಸಿಯುತ್ತಿದ್ದ. + +ನಿಂಗ ಸತ್ತ ಎರಡು ವರ್ಷ ಆದ ಮೇಲೆ ಮೇಲಿನ ಮನಿ ಸಂಗಪ್ಪ ಅದೇ ಸ್ಥಳದಲ್ಲಿ ಎಡಿವಿ ಬಿದ್ದು ಸತ್ತಿದ್ದು ಇಡೀ ಊರಿಗೆ ಭಯ ಹುಟ್ಟಿತ್ತು. ಈ ಜಾಗ ಸ್ವಲ್ಪ ಸುಮಾರಿದೆ ನೋಡಿಕೊಂಡು ಹೋಗ್ರಿ ಅಂತ ಮನೆಗೆ ಬಂದ ಬೀಗರಿಗೆ ಹೇಳುವ ಪರಸ್ಥಿತಿ ಬಂದಿತ್ತು. ಈ ಕಾಲದಾಗೂ ಏನ ದೆವ್ವಾ ಭೂತಿಗೆ ಹೇದರ್ತಿರಿ ಅಂತ ಯಾರಾದ್ರೂ ತಿರಿಗೆ ಮಾತಾಡಿದ್ರೆ. ‘ಹಂಗ್ಯಾಲ್ಲಾ ಅನಬ್ಯಾಡ ಸುಮ್ನಿರ್ರೀ ನಮ್ಮೂರಾಗÀ ಇದ್ದದ್ದ ಕರೇ ಐತಿ’ ಅಂತ ತಮ್ಮೂರ ಪ್ರತಿಷ್ಟೆ ಹೆಚ್ಚಿಸಿಕೊಳ್ಳುತ್ತಿದ್ದರು. + +ಈ ದೆವ್ವಿಗೆ ಒಂದು ಗತಿ ಕಾಣಸ್ಬೇಕು ಹಿಂಗ ನಾಂವ ಹೆದ್ರಕೋತ ಹ್ವಾದ್ರ ಅದು ಹೆದ್ರಸ್ಕೋತ ಹೊಕ್ಕೈತಿ. ಬಾಳೆ ಬದುಕ ಮಾಡೂದ ಹ್ಯಾಂಗ ಅಂತ ಊರಮಂದಿ ಅಲ್ಲಲ್ಲಿ ಕುಂತಾಗ ನಿಂತಾಗ ವಿಚಾರಮಾಡಿದ್ರು. ಹಿಂತಾದ್ಕ ಗಂಡ ಗಿರಾಕಿ ಅಂದ್ರ ಗಾಳಿಸಿದ್ದಪ್ಪ ಒಬ್ಬನ. ಹೆಂತೆಂತ ದೆವ್ವಾ ಭೂತಾ ಬಿಡಿಸ್ಯಾನ ಆದ್ರ ಆವನ ಫೀಜೂ ಬಾಳ ಅಕೈತಿ. ಆದ್ರೂ ಪರವಾಗಿಲ್ಲ ಅಂವನ ಕರಸೇ ಬಿಡೂನ ಅಂತ ಇಡೀ ಊರೆ ತೀರ್ಮಾನಿಸಿತು. ಗಾಳಿ ಸಿದ್ದಪ್ಪ ಕಾರಿನಲ್ಲಿ ಬರ್ ಎಂದು ಬಂದು ಊರಾಗ ಇಳದ. ಜನರು ಅವನನ್ನು ಸಾಕ್ಷಾತ ದೇವ್ರಂತೆ ಭಯ ಭಕ್ತಿಯಿಂದ ನೋಡತೊಡಗಿದರು. ಬಾಗುವವರನ್ನು ಕಂಡರೆ ಬಾಗಿಸುವ ಕಲೆ ಮಂತ್ರದ ಸಿದ್ದಪ್ಪನಿಗೆ ಯಾರಾದರೂ ಹೇಳಿ ಕೊಡಬೇಕೆ? ಊರ ಗೌಡರ ಮನೆಯಲ್ಲಿ ಚಾ ವ್ಯವಸ್ಥೆ ಬರ್ಜರಿ ಆಯಿತು. ಬಾಯಿಗೊಂದು ಕಲಕತ್ತಾ ಪಾನ್ ಬಂದು ಬಿದ್ದಿತು. ಬಾಯಾಡಿಸುತ್ತ ಹೂಂ.. ನಡಿರಿ ಜಾಗ ತೋರ್ಸರಿ ಅಂತ ಊರಿನವರಿಗೆ ಕೇಳಿದ. ಹುಚ್ಚ ಕಂಬಾರ ಗುಡಿಸಲ ಹತ್ತಿರ ಸಿಕ್ಕ ಸಿಕ್ಕ ಹಾಳಿ ಆರಿಸುತ್ತ ಸಿದ್ದಪ್ಪನನ್ನು ನೋಡಿ ಹಲ್ಲು ಕಿಸಿದು ನಗತೊಡಗಿದ. ಅವನ ಕೊರಳಲ್ಲಿ ಹಾಕಿದ ರುದ್ರಾಕ್ಷಿ ಮಾಲೆ ಯನ್ನು ದಿಟ್ಟಿಸಿ ನೋಡಿ ಕೇ ..ಕೇ ಹಾಕತೊಡಗಿದ. ಅಲ್ಲಿದ್ದ ಯಾವನೋ ಅಂವ್ನ ಅತ್ತಾಗ ಅಟ್ಟರಿ ಅಂತ ಅಂದಾಗ ಅಲ್ಲಿದ್ದವರಲ್ಲೊಬ್ಬ ಹುಚ್ಚನನ್ನು ಬೆದರಿಸಿದರು. ಚೀರುತ್ತ ಕಿರಚುತ್ತ ಕೈಯಲ್ಲೊಂದು ಮುರಕು ತಾಟು ಇಡಿದುಕೊಂಡು ಹನಮಪ್ಪನ ಗುಡಿ ಕಡೆಗೆ ಕೇ..ಕೇ.. ಹಾಕುತ್ತ ಹೋದ. + +ಸಿದ್ದಪ್ಪ ಹುಚ್ಚನನ್ನು ನೋಡಿ ನೋಡದಂತೆ ಮುನ್ನೆಡದ. ಊರ ಜನರು ತೋರಿಸಿದ್ದ ಜಾಗಕ್ಕೆ ಬಂದು ಸುತ್ತೆಲ್ಲ ಕಣ್ಣಾಡಿಸಿದ. ಜಾಲಿ ಗಿಡದ ಕೇಳಗೆ ರಾಶಿ ಹಾಕಿದ ವಸ್ತುಗಳನ್ನು ದಿಟ್ಟಿಸಿದ. ಇದೇನು ಎಂದು ಗಾಳಿಸಿದ್ದಪ್ಪ ಕೇಳಿದ. ಕುಡ್ಡಮಲ್ಲ ಇವು ನಮ್ಮೂರ ಹುಚ್ಚನ ಆಸ್ತಿ ಎಂದು ಹೇಳಿದ. ಅಲ್ಲಿದ್ದವರೆಲ್ಲರೂ ನಕ್ಕರು. ಗಾಳಿಸಿದ್ದಪ್ಪ ದಕ್ಷಿಣ ದಿಕ್ಕಿಗೆ ಮುಖಮಾಡಿ ಕೂಳಿತು ಮುಂದೆ ಬೆಂಕಿ ಮಾಡಿಕೊಂಡು ಅದಕ್ಕೆ ನೀರು ಚಿಮಿಕಿಸ ತೊಡಗಿದೆ. ಅವನು ನೀರು ಚಿಮಿಕಿಸಿದಾಗೊಮ್ಮೆ ಬೆಂಕಿ ‘ದಗ್ ದಗ್’ ಎಂದು ಉರಿಯುತ್ತಿತ್ತು. ಜನರು ಬಾಯಿ ಮೇಲೆ ಕೈ ಇಟ್ಟುಕೊಂಡು ಅವನ ಮಂತ್ರ ಶಕ್ತಿಗೆ ಶರಣಾಗಿದ್ದರು. + +‘ಈ ಭೂತಾನ ಈ ಊರ ಸೀಮಿಯಿಂದ ಅಲ್ಲ ರಾಜ್ಯದಿಂದ ಗಡಿ ಪಾರ ಮಾಡ್ತಿನಿ’ ಎಂದು ಹೇಳುತ್ತ ಗಾಳಿಸಿದ್ದಪ್ಪ ತನ್ನ ಇದ್ದಬಿದ್ದ ಎಲ್ಲ ಮಂತ್ರವನ್ನು ಆ ದಾರಿಯಲ್ಲಿ ಒಟಗುಡಿ ಖಾಲಿ ಮಾಡಿಕೊಂಡು ಹತ್ತು ಸಾಯಿರದ ಒಂದು ಕಟ್ಟು ಭದ್ರವಾಗಿ ಜೋಬಿಗೆ ಇಳಿಸಿಕೊಂಡು ಕಿತೆ ಎಂದಿದ್ದ. + +***** + +ಎಲ್ಲಾರೂ ದೆವ್ವಾ ಹಾಳಾಗಿ ಹೋತ ಅಂತ ಜಲ್ಲ ಬಿಟ್ಟು ಆ ರಸ್ತೆ ಮ್ಯಾಲ ಒಂದಿಷ್ಟದಿನ ಊರ ಮಂದಿ ಯಾವಗ ಬೇಕಾದ ಅಡ್ಯಾಕ ಸುರೂ ಮಾಡಿದ್ರು. ಹೆಂಗಸ್ರು ಕೂಸು-ಕುನ್ನಿ ತಗೊಂದು ಹೊಲಮನಿ ಬಾಳೆ ಮಾಡಕ ಹತ್ತಿದ್ರು. ಕುಡ್ಡ ಮಲ್ಲ ‘ಮಟಾ ಮಟಾ ಮದ್ಯಾನದಾಗ ಒಬ್ಬ ಬÀಂದ್ಯಾ ನೋಡು’ ಅಂತ ಕುದರಿ ಬಸ್ಯಾಗ ಚಾಷ್ಟಿ ಮಾಡಿದ. ಕುದರಿ ಬಸ್ಯಾನ ಹವಾ ಎಲ್ಲಾ ‘ಟುಸ್’ ಆಗಿ ಹೋತು. ಇವ್ನೌನ ಈ ಗಾಳಿ ಸಿದ್ದ ಬಂದ ನನ್ನ ಡಿಮಾಂಡ ಹಾಳ ಮಾಡಿದನೋಡ ಅಂತ ಬಸ್ಯಾ ಸಿದ್ದನ ಬೈದ. ಇಡೀ ಊರ ಗಾಳಿಸಿದ್ದನ ಮಂತ್ರದ ವಿದ್ಯೆ ಕೊಂಡಾಡಿದ್ದೆ ಕೊಂಡಾಡಿದ್ದು. ಹೆಂಗಸರಂತು “ಈಗ ಊರ ತಣ್ಣಗ ಆತನೋಡವ್ವಾ ಬಿದ್ದಾಡಿ ಮೂರ ಮಂದಿ ನುಂಗಿ ನೀರ ಕುಡದ್ಳು. ಗಾಳಿ ಬಿಡಸು ಮಾವ್ ಒದ್ದು ದೇಶ್ಯಾ ಬಿಟ್ಟ ಅಟ್ಟಿದ, ಈಗ ಎಲ್ಲಿ ಮೆಟ್ಟ ಹುಡಕ್ಯಾಳೊ ಹಾದರಗಿತ್ತಿ” ಅಂತ ಅಲ್ಲಿ ಕುಡಿದ ಹೆಂಗಸರು ದೆವ್ವಿನ ಬಗ್ಗೆ ಮಾತಾಡಿ ನಗುತ್ತಿದ್ದರು. ಊರು ತುಂಬಾ ಖುಷಿಯಲ್ಲಿ ಮೂಳಗಿತ್ತು. + +****** + +ಪ್ರತಿ ವರ್ಷವೂ ಊರ ಹನಮಪ್ಪನ ಓಕಳಿ ಬಾಳ ಸಡಗರದಿಂದ ನಡಿತಿತ್ತು. ಪ್ರತಿ ವರ್ಷದಂತೆ ಮನಿ ಮನಿಗೆ ಹೋಗಿ ಪಟ್ಟಿ ಎತ್ತಿ ಕಾಳು ಕಡಿ ಒಂದಿಷ್ಟ ಹಣ ಅರಕೇರಿ ಊರ ಹಿರಿಯ್ಯಾರು ಗ್ವಾಳಿ ಮಾಡಿದ್ರು. ಈ ವರ್ಷ ಓಕಳಿಗೆ ಕಂಪನಿ ನಾಟಕಾ ತರಿಸ್ಸಿ ಹನಮಪ್ಪನ ಸೆಡಗ್ರಾ ಹೆಚ್ಚ ಮಾಡಬೇಕಂತ ಊರ ಹಿರಿಯಾರೆಲ್ಲ ತೀರ್ಮಾನ ಮಾಡಿದ್ರು. ಕಂಪನಿ ನಾಟಕ ಯಾಕ ತರ್ಸೂದು ಊರಾಗ ನಾಟಕಾ ಮಾಡು ಹುಡುಗೂರ ರಗಡ ಅದಾರ. ನಾಟಕಾ ಕಲಿಸೂ ಕಂಬಾರ ಮಾಸ್ತರ ಏನೂ ಕೆಲಸ ಇಲ್ಲದ ಕುಂತಾನ. ಅಂವ ಮನಸ್ಸ ಮಾಡಡಿದ್ರ ತಿಂಗಳ ಒಪ್ಪತ್ನ್ಯಾಗ ತಾಲೀಮ ನೆಡಸಿ ಮಾತ ಗಟ್ಟಿಮಾಡಸ್ತಾನ ಅಂತ ಕುದರಿ ಬಸ್ಯಾ ನಡು ಬಾಯಿ ಹಾಕಿದ. ಊರ ಹಿರಿಯ್ಯಾರಿಗೆ ಬಸ್ಯಾನ ಮಾತು ಬರೊಬ್ಬರಿ ಅನಿಸ್ತು. ಆದ್ರಾತು ನಾಟಕದ ಹುಡಗೂರ್ನ ಗ್ವಾಳಿ ಮಾಡಿ, ಮಾಸ್ತರ್ನ ಒಪ್ಪಿಸಿ ತಾಬಡತೊಬ್ಡ ನಾಟಕ ತಾಲೀಮ ಕೊಡಸು ಜವಾಬ್ದಾರಿ ಮಾಡಬೇಕು ಅಂತ ಊರ ಹಿರ್ಯಾರು ಮಾತಾಡಕೊಂಡ್ರು. ಅವರಂದು ಕೊಂಡಂತೆ ಎಲ್ಲವೂ ಬರೊಬ್ಬರಿಯಾಗಿ ಸಾಗಿತು. ದಿನವಿಡಿ ಕಂಬಾರ ಮಾಸ್ತರ ಪೆಟಗಿ ಮ್ಯಾಲ ‘ಕುಂತ ಕೂಞï ಕುಟ್ಟ’ ಬಾರಿಸೂತ್ತ ನಾಟಕ ಕಲಿಸಿದ್ದ. + +ಓಕಳಿ ಕೇವಲ ನಾಕೇ ನಾಕು ದಿನ ಇತ್ತು. ಮತ್ತೊಮ್ಮೆ ಊರ ಹಿರಿಯಾರು ಸಭೆ ಸೇರಿದರು. ಈ ರಸ್ತೆ ಬಾಳ ಹಾಳಾಗಿ ಹೋಗೇತಿ. ಪಂಚಾಯ್ತಿಯಿಂದ ರಸ್ತೆ ದೂರಸ್ತಿ ಕೆಲಸ ಮಾಡಸಿದ್ರ. ಊರಿಗೆ ಬರೂ-ಹೋಗುವ ಬೀಗ್ರು ಬಿಜ್ಜರಿಗೆ ಯಾವ ತೊಂದ್ರಿನೂ ಆಗೂದಲಿಲ್ಲ ಅಂತ ಎಲ್ಲರೂ ವಿಚಾರಿಸಿದರು. ಊರ ಹಿರಿಯರ ಮಾತಿನಂತೆ ಮನಿಗೆ ಒಂದು ಗಂಡಾಳ ಸಲಕಿ ಗುದ್ಲಿ ಹಿಡಿದು ಬಂದು ಟ್ಯಾಕ್ಟರ್ ಹತ್ತಿದರು. ಹಿರೆ ಗುಡ್ಡದ ಒತ್ತಿನಲ್ಲಿರುವ ದೇಸಾಯಿ ವೀರಭದ್ರಪ್ಪನ ದಿಬ್ಬಿಗೆ ಕೈ ಹಾಕಿ ಒಂದು ಜೆಸಿಬಿ ಮಣ್ಣು ಎಳೆಯತೋಡಗಿತು. ನಾಕಾರು ಟ್ಯಾಕ್ಟರಗಳು ಹಿಂದೆ ಮುಂದೆ ಪಾಳಿ ಹಚ್ಚಿಕೊಂಡು ಬಂದು ಬರ್ ಎಂದು ಓಡತೊಡಗಿದವು. ಒಂದೆ ದಿನದಲ್ಲಿ ರಸ್ತೆಗೊಂದು ಕಳೆ ಬಂದಿತು. + +ಹುಚ್ಚ ಮಲಗುತಿದ್ದ ಜಾಗದಲ್ಲಿ ಮಣ್ಣು ಸುರಿದು ಅವನ ಸ್ಥಳವನ್ನು ತೆರವು ಮಾಡಿದ್ದರು. ಅವನು ಕುಡಿಟ್ಟ ಚಿಪ್ಪಾಡಿಯಂತ ಸಾಮುನುಗಳಿಗೆ ಬೆಂಕಿ ಹಚ್ಚಿ ಕಿಡಗೆಡಿಗಳು ಮಜಾತಗಿದುಕೊಂಡಿದ್ದರು. ಪಾಪ ಹುಚ್ಚ ಎರಡು ದಿನದಿಂದ ಹನಮಪ್ಪನ ಗುಡಿಯ ಹಿಂದೆ ಮುಂದೆ ಅಡ್ಡಾಡುತ್ತ ಹನಮಪ್ಪನ ಗುಡಿಯ ಎದರಿಗಿರುವ ಬೇವಿನ ಮರದ ಕೇಳಗೆ ಮಲಗಿದ್ದ. ಸುತ್ತಲೂ ತನ್ನ ಸಂಪತ್ತು ಹರವಿಕೊಂಡು ಕುಳತಿದ್ದನ್ನು ಸಹಿಸದ ಕುಡ್ಡಮಲ್ಲ ಹುಚ್ಚನನ್ನು ಹಿಡಿದು ರಪಾ ರಪಾ ತಳಿಸಿ ‘ಒಂದ್ಯಾಡ ದಿನ ಎತ್ತಾಗರಾ ಹಾಳಿಗಿ ಹೋಗು ಬಿಗ್ರು ಬಿಜ್ಜರು ಬರ್ತಾರ ಗುಡಿಮುಂದ ತಿಪ್ಪಿ ಮಾಡಿ ಕುಂತಿಯಲ’್ಲ ಅಂತ ಇದ್ದ ಒಂದೆ ಕಣ್ಣು ಕಿಸಿದು ಹುಚ್ಚನನ್ನು ಅಲ್ಲಿಂದ ಅಟ್ಟಿದ. ಕುಡ್ಡ ಮಲ್ಲ ಹುಚ್ಚನ ಜೋಡಿ ತಗಲಿಗೆ ಬಿದ್ದು ಸಿಟ್ಟಿಗೆದ್ದದ್ದು ನೋಡಿ ಕುದರಿ ಬಸ್ಯಾ ಕೊಕ್ಕಾಡ್ಸಿ ನಗತ್ತಿದ್ದ. ಹುಚ್ಚ ಉರಿಉರಿ ಬಿಸಲಲ್ಲಿ ಎದ್ದು ಊರಿನ ಯಾವೂದೋ ಮೂಲೆ ಸೇರಿದ. + +ಹನಮಪ್ಪನಿಗೆ ಅಂದು ಮೊದಲು ತುಪ್ಪದ ಅಭಿಷೇಕ ನಂತರ ಹಾಲಿನ ಅಭಿಷೇಕ ಮಾಡಿದರು. ಹೊನ್ನಬಣ್ಣದ ಬಟ್ಟೆ ಸುತ್ತಿ, ತೆಲೆಯ ಮೇಲೆ ರೂಮಾಲೂ ಸುತ್ತಿ ಹೂ ಹಣ್ಣುಗಳಿಂದ ಅಲಂಕರಿಸಿದ್ದರು. ಗುಡಿಯ ಸುತ್ತಮುತ್ತಲೂ ಬಾಳೆ ಕಂಬ ತಳಿರು ತೋರಣ ಕಟ್ಟಿ ಅಲಂಕರಿಸಿದ್ದರು. ಇಡೀ ಊರಿಗೆ ಊರೆ ಮನೆಯಲ್ಲಿ ಹೋಳಿಗೆ ಕಡಬು ಮಾಡಿಕೊಂಡು ಹನಮಪ್ಪನಿಗೆ ಎಡೆ ಹಿಡಿದು ತಾವೂ ತಮ್ಮ ತಮ್ಮ ಹೊಟ್ಟಗೆ ಸಮರ್ಪಿಸಿಕೊಂಡಿದ್ದರು. ಸಣ್ಣ ಸಣ್ಣ ಹುಡುಗರು ಹೊಸ ಬಟ್ಟೆ ತೊಟ್ಟು ಹನಮಪ್ಪನ ಓಕಳಿಗೊಂದು ಕಳೆ ತಂದಿದ್ದರು. ಓಕಳಿ ಹೊಂಡ ತುಂಬಿ ಪುಟ್ಟ ಆಗಸದಂತೆ ಕಾಣುತ್ತಿತ್ತು. ಇಳಿ ಹೊತ್ತಿಗೆ ಹನುಮನ ಪಲ್ಲಕ್ಕಿ ಗುಡಿಯ ಸುತ್ತ ಐದು ಸುತ್ತಿದ ಮೇಲೆ ಪುಂಡ ಹುಡುಗರು ಹೆಣ್ಣು ವೇಷ ಧರಿಸಿಕೊಂಡು ಕೈಯಲ್ಲಿ ಕಾರಿ ಕಂಟಿ ಹಿಡಿದುಕೊಂಡು ಒಬ್ಬರಿಗೊಬ್ಬರು ನೀರು ಉಗ್ಗುತ್ತ, ನೀರು ಉಗ್ಗಿದವರಿಗೆ ಕಾರಿ ಕಂಟಿಯಿಂದ ಶವ್ ಶವ್ ಬಾರಿಸುತ್ತ ಹನುಮಪ್ಪನ ಓಕಳಿ ಸಾಗಿತ್ತು. ಮನೆಯ ಕುಂಬಿ ಮೇಲೆ , ಕಟ್ಟಿಯ ಮೇಲೆ ಅಲ್ಲಿ ಇಲ್ಲಿ ನಿಂತು ಓಕಳಿನ್ನು ಜನರು ನೋಡುತ್ತ ಹನುಮಪ್ಪನ ಲೀಲೆಯನ್ನು ಸ್ಮರಿಸಿದರು. + +ಕುದರಿ ಬಸ್ಯಾ ನಾಟಕದ ಗಡಬಿಡಿಯಲ್ಲಿ ಬಿದ್ದಿದ್ದ. ನಾಟಕ ಪಾತ್ರಧಾರಿಗಳಿಗೆ “ಚಲೋತಂಗ ಅಭಿನಯಾ ಮಾಡ್ರಿ ನಿಮ್ಮ ನಾಟಕ ನೋಡಾಕ ಪರವೂರವರೂ, ಬೀಗ್ರು ,ಬಿಜ್ಜರೂ ಬಂದಿರ್ತಾರ ನಿಂವ ಏನಾರ ಕ್ಯಾಕಿಸಗಿ ಮಾಡಿದ್ರ ಊರ ಮರ್ಯಾದಿ ಹಾಳ ಅಕೈತಿ” ಇಂತ ನಾಟಕ ಪಾತ್ರ ಧಾರಿಗಳಿಗೆ ತಿಳವಳಿಕೆ ಹೇಳುತ್ತಿದ್ದ. ಬಸ್ಯಾ ಹೇಳಿದ್ದಕ್ಕೆ ಎಲ್ಲರೂ ಹೂಂ .. ಎಂದು ತಲೆದೂಗಿದರು. + +ಸರಿಯಾಗಿ ಹತ್ತುಗಂಟೆಗೆ ನಾಟಕ ಪ್ರಾರಂಭವಾಯಿತು. ಊರ ಜನರು ತಮ್ಮ ತಮ್ಮ ಜಾಗವನ್ನು ಭದ್ರಗೊಳಿಸಿಕೊಂಡರು. ನಾಟಕದ ನಾಂದಿಗೀತೆ ಪ್ರಾರಂಬವಾಗೋ ಹೊತ್ತಿಗೆ ಕರೆಂಟ ಕೈ ಕೊಟ್ಟಿತು. ಎಲ್ಲರೂ ಕರೆಂಟ ಕೊಡುವವನ ತಾಯಿ ತಂಗಿಯ ಹೆಸರು ಹಿಡಿದು ಬೈದು ಸಮಾಧಾನವಾದರು. ಡಿಸೈಲ್ ಕೂಡಾ ಕಾಲಿ ಆದದ್ದು ಅರಿವಿಗೆ ಬಂತು. ಕುದರಿ ಬಸ್ಯಾ ‘ಬರ್’ ಎಂದು ಬೈಕ ಚಲೂ ಮಾಡಿ ಶರವೇಗದಲ್ಲಿ ಓಡಿಸುತ್ತ ನಾಕು ಕಿಲೋಮೀಟರ ದೂರಲ್ಲಿರುವ ಪೆಟ್ರೋಲ್ ಬಂಕಿನತ್ತ ನಡೆದ. ಅವನ ಬೈಕ ಇಪ್ಪತ್ತು ಮಾರ ದೂರ ಹೋಗುತ್ತಲೇ ಕರೆಂಟ್ ಬಂದವು. ನಾಟಕ ಸುರುವಾಯಿತು. ಎಣ್ಣಿ ತರಲು ಹೋದ ಬಸ್ಯಾ ಎರಡು ಗಂಟೆಯಾದರೂ ಬರಾದೆ ಇದ್ದಾಗ ಕುಡ್ಡಮಲ್ಲನಿಗೆ ಯಾಕೋ ಅನುಮಾನ ಬರತೊಡಗಿತು. ಬೆಳಕು ಹರಿಯೋ ಹೊತ್ತಾದರೂ ಬಸ್ಯಾ ಬಾರದಿದ್ದಕ್ಕೆ ಅರ್ಧ ಜನರು ಗಾಭರಿಯಾಗಿದ್ದರು. ನಾಕಾರುಜನ ಬೈಕ ಹತ್ತಿ ಪೆಟ್ರೋಲ ಬಂಕತ್ತ ಬಂವ್ ಎಂದು ಹೋದರು. ದಾರಿಯಲ್ಲಿ ಕಪ್ಪಗೆ ಹರಕು ಬಟ್ಟೆ ಕಾಕಿಕೊಂಡು ಏನೋ ಒಂದು ಡಬ್ಬ ಬಿದ್ದದ್ದನ್ನು ಕಂಡು ಬೈಕಿನಲ್ಲಿದ್ದವರು “ಅಯ್ಯಯ್ಯೋ ದೆವ್ವಾ” ಎಂದು ಗಾಬರಿಯಾಗಿ ಹೆದರುತ್ತ ಊರಿಗೆ ಬಂದರು. ಅಷ್ಟೊತ್ತಿಗೆ ನಾಟಕ ಮುಗದಿತ್ತು. ಅಲ್ಲಿ ಯಾರೂ ಇರಲಿಲ್ಲ. ಇವರು ಬರುವುದನ್ನೆ ಕಾಯ್ದು ಕುಳತಿದ್ದ ಕುಡ್ಡ ಮಲ್ಲ ಏನಾತು ಎಂದು ಕೇಳಿದ .ದಾರಿಯಲ್ಲಿ ದೆವ್ವ ಮಲಿಗೇತಿ ಎಂದು ಹೇಳಿದ್ದು ಕೇಳಿ ಕುಡ್ಡ ಮಲ್ಲನಿಗೆ ಗಾಬರಿಯಾಗುವ ಬದಲೂ ಅನುಮಾನ ಹೆಚ್ಚಾತು ಹತ್ತು ಹದಿನೈದು ಮಂದಿ ಒಟ್ಟಗಿ ಹೋಗಿ ನೋಡಿದರೆ ಅಲ್ಲಿ ಬಸ್ಯಾ ಹೆಣವಾಗಿ ಬಿದ್ದಿದ್ದ. ಅವನ ಕೊರಳಿಗೆ ಹಗ್ಗದಿಂದ ಬಿಗಿದು ಗಂಭೀರವಾಗಿ ಕೊಲೆ ಮಾಡಲಾಗಿತ್ತು. ಅದನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಬಸ್ಯಾನ ದೇಹದಲ್ಲಿ ಹುಚ್ಚ ಹಾಕಿಕೊಳ್ಳುವ ಹರಕು ಬಟ್ಟೆಗಳು ಇದ್ದವು. ಬಸ್ಯಾ ಓಕಳಿಗೆಂದು ಹೊಲಸಿದ ಹೊಸ ಬಟ್ಟೆ, ಅವನು ಹತ್ತಿ ಬಂದ ಬೈಕು ಯಾವುದೂ ಕಾಣಲಿಲ್ಲ. ಇವನ ಮೇಲೇಕೆ ಹುಚ್ಚನ ಬಟ್ಟೆಗಳು ಬಂದವು ಎಂಬ ಸಂದೇಹ ಇಡೀ ಊರನ್ನೇ ಬೆಚ್ಚಿಬೀಳಿಸಿತು. ಊರು ಜನರು ಹುಚ್ಚನನ್ನು ಹುಡುಕಾಡಿದರು. ಹುಚ್ಚನ ಸುಳಿವು ಎಲ್ಲೂ ಸಿಗಲಿಲ್ಲ. + +ಆ ಹೆಣ್ಣಿನ ಅತ್ಯಾಚಾರ ಮಾಡಿ ಕೋಲೆ ಮಾಡಿದವರೇ ಈ ನಾಕುಜನ ಯಾಕಾಗಿರಬಾರದು? ಈ ಕೊಲೆ ಆ ಹುಚ್ಚನೇ ಯಾಕೆ ಮಾಡಿರಬಾರದು? ಎಂದು ಆ ಹೆಣದ ಮುಂದೆ ನಿಂತು ಕುಡ್ಡ ಮಲ್ಲ ತರ್ಕಿಸುತ್ತಿದ್ದ ಆಗ ಆಕಾಶದಲ್ಲಿ ಸೂರ್ಯ ಬೆಂಕಿಯಂತೆ ಉರಿಯುತ್ತಲೇ ಇದ್ದ. +****** + \ No newline at end of file diff --git a/PanjuMagazine_Data/article_1005.txt b/PanjuMagazine_Data/article_1005.txt new file mode 100644 index 0000000000000000000000000000000000000000..8356adc3447822d3a3bb1295eadb78b5f71425d2 --- /dev/null +++ b/PanjuMagazine_Data/article_1005.txt @@ -0,0 +1,27 @@ + +ಗುರು ಕಾಡು ದಾಟಿ ಹೊಳೆಯ ದಂಡೆಗೆ ಬಂದು ಹಸಿಮಣ್ಣು ಕಂಡರೂ ಅದರ ಮೇಲೆ ಕುಳಿತುಕೊಂಡ. ಕಾಡಿನ ಗವ್ವೆನ್ನುವ ಧ್ವನಿ, ನದಿಯ ಜುಳುಜುಳು ನಾದ, ಹಕ್ಕಿಗಳ ಕಲರವ ಯಾವುದೂ ಅವನ ಕಿವಿ ಸೇರುತ್ತಿರಲಿಲ್ಲ. ತಾನು ಇಷ್ಟು ದಿನ ನಂಬಿಕೊಂಡು ಬಂದಿದ್ದ ಬದುಕು ಹೀಗೆ ತನ್ನನ್ನೇ ತಿನ್ನುವ ರಾಕ್ಷಸವಾಗುತ್ತದೆ ಎಂದು ಅವನು ಅಂದುಕೊಂಡಿರಲಿಲ್ಲ. +ನದಿ ತನ್ನ ಪಾಡಿಗೆ ತಾನು ಹರಿಯುತ್ತಿತ್ತು. ಅದರ ಗುರಿ ಸಮುದ್ರ ಸೇರುವುದು ಎಂದು ಯಾರೋ ಹೇಳಿದ್ದನ್ನು ಕೇಳಿ ಗಹಗಹಿಸಿ ನಕ್ಕಿದ್ದ. ಅದಕ್ಕೇನ್ ತಲಿ ಏತೇನ್ಲೇ? ಎಂದು ಹಲ್ಲು ಕಿಸಿಯುತ್ತಲೇ ಕೇಳಿದ್ದ. ನದಿ ನೋಡಿ, ಇರುವೆ ನೋಡಿ, ಆಮೆ ಮೊಲದ ಕತೆ ಕೇಳಿ, ಐದು ಸಾವಿರ ವರ್ಷ ಹಳೆಯ ರಾಮಾಯಣದ ಉದಾಹರಣೆಯಿಂದ ಬಾಳುವುದು ಮುರ್ಖತನ. ಚಿಕ್ಕವರು ತಾವು ಹೇಳಿದಂತೆ ಕೇಳಲೆಂದು ಹಿರಿಯರು ಹುಟ್ಟಿಸಿದ ಕಟ್ಟುಕತೆಗಳು ಅವು. ತಾವೇ ಅನುಸರಿಸಲಾಗದ್ದನ್ನು ನಮ್ಮ ಮೇಲೆ ಹೇರುವ ತಿಳಿಗೇಡಿಗಳು ಅವರು. ಐದನೇ ವಯಸ್ಸಿನಲ್ಲಿ ಹರಿಶ್ಚಂದ್ರನ ಕತೆ ಕೇಳಿ ಅಂವೆಂಥಾ ಹುಚ್ಚೋ ಯಪ್ಪಾ? ರಾಜ್ಯಾ ನಾಯೇನ್ ಕೊಡುದುಲ್ಲಂದಿದ್ರ ಅರಾಮಾಗಿ ಇರ್‍ತಿದ್ದಾ ಎಂದು ತೊದಲು ತೊದಲಾಗಿ ನುಡಿದಿದ್ದ. ಅದನ್ನು ಊರಿಗೆಲ್ಲ ಹೇಳಿ ಅವನಪ್ಪ ಖುಷಿಪಟ್ಟಿದ್ದ. ಶಾಲೆಯ ಹೊರಗೆ ಸಿಗುವ ಅನುಭವಾಮೃತವನ್ನು ತ್ಯಜಿಸಿ ಶಾಲೆಯ ಒಳಗಡೆ ಉಪಯೋಗಕ್ಕೆ ಬಾರದ ಸೂತ್ರಗಳನ್ನು ಬಾಯಿಪಾಠ ಮಾಡುವುದು ಶಿಕ್ಷೆಯಾಗಿತ್ತು ಅವನಿಗೆ. ಅಪ್ಪ ಅಮ್ಮ ಬೈಗುಳ, ಹೊಡೆತಗಳಿಗಂಜಿ ಪ್ರತಿಸಾರಿ ಎಂಟ್ಹತ್ತು ದಿನ ಓದಿ ೪೦-೪೩ ಅಂಕ ಪಡೆದು ಪಾಸಾಗುತ್ತಿದ್ದ. ಉಳಿದೆಲ್ಲ ದಿನಗಳು ಅವನ ಉಡಾಳತನಕ್ಕೆ ಕಡಿಮೆ ಬೀಳುತ್ತಿದ್ದವು. ಏಳನೇ ಇಯತ್ತೆ ಇರುವಾಗ ಬೀಡಿ; ಎಂಟನೇ ಇಯತ್ತೆಗೆ ಸಿಗರೇಟು, ಗುಟಕಾ; ಒಂಭತ್ತನೆಯದಕ್ಕೆ ಲೈಂಗಿಕ ಪುಸ್ತಕ, ಸಿನಿಮಾ; ಹತ್ತನೆಯ ಇಯತ್ತೆಗೆ ಸೂಳೆಯ ಸಹವಾಸ, ಕುಡಿತ ಎಲ್ಲ ಕರತಲಾಮಲಕವಾಗಿತ್ತು. ನಾಳೆ ಯಾವೋನು ನೋಡಿದ್ದಾನೆ, ಮುಂದೆ ಬಿದ್ದಿರುವ ಇವತ್ತನ್ನು ಮನಸ್ಪೂರ್ತಿ ಅನುಭವಿಸಬೇಕು ಎಂಬುದೊಂದೇ ಅವನ ತರ್ಕ. ಸಿಕ್ಕ ಅವಕಾಶಗಳನ್ನೆಲ್ಲ ದೋಚುವುದೊಂದೇ ಅವನ ಉದ್ದೇಶ. ಶಾಲೆ ಕಲಿತು ಮಾರ್ಕ್ಸ್ ತೆಗೆದು ಐದಾರು ವರ್ಷ ಕಾಲೇಜಿನಲ್ಲಿ ಕಾಲಹರಣ ಮಾಡಿ, ಓದಿ ಓದಿ ಚಸ್ಮ ಹಾಕಿಕೊಂಡು, ಸಿಕ್ಕಸಿಕ್ಕವರ ಕಾಲು ಬಿದ್ದು ಯಾರದೋ ಕೈಕೆಳಗೆ ಹೇಳಿದಂತೆ ಕೆಲಸ ಮಾಡಿಕೊಂಡು ಸ್ವಗೌರವವಿಲ್ಲದೇ ನಾಯಿಯಂತೆ ಬದುಕುವುದು ಅವನಿಗೆ ಹೇಸಿಗೆ ತರುವ ಕನಸು. ನಾಳೆ ನಾನು ಸತ್ತು ಹೋದರೆ ಇಂದು ಸಿಗಬಹುದಾಗಿದ್ದ ಮಜವನ್ನು ಕಳೆದುಕೊಂಡ ಪಶ್ಚಾತ್ತಾಪ ನನ್ನ ಆತ್ಮಕ್ಕಂಟಿಕೊಳ್ಳುತ್ತದೆ ಎಂಬುದು ಅವನ ದೃಢವಿಶ್ವಾಸ. +ಸ್ವಾರ್ಥವಿಲ್ಲದೇ ಯಾರೂ ಏನೂ ಮಾಡುವುದಿಲ್ಲ. ಅಪ್ಪ ಅಮ್ಮ ಹುಟ್ಟಿಸಿದ್ದು, ಶಾಲೆ ಕಲಿಸುವುದೆಲ್ಲ ತಮ್ಮ ಮುಪ್ಪಿನಲ್ಲಾಗಲಿ ಎಂಬ ಉದ್ದೇಶದಿಂದ. ಹೆತ್ತಮ್ಮ ಕೂಡ ಕೆಲಸ ಬಿಟ್ಟ ಮರುದಿನ ಊಟಕ್ಕೆ ಹಾಕುವುದಿಲ್ಲ ಎಂದು ಅವನು ಅಪ್ಪಗೋಳಿಗೆ ಹೇಳಿದರೆ ಅವರು ಬರೀ ನಕ್ಕು ಬಿಡುತ್ತಿದ್ದರು. +ಅಪ್ಪಗೋಳು ನವೋದಯ ಕೋಚಿಂಗ್ ಕೇಂದ್ರದಲ್ಲಿ ಎರಡು ಸಾವಿರ ರೂಪಾಯಿಗೆ ಗಣಿತ ಪಾಠ ಮಾಡುತ್ತಿದ್ದ ಗದಿಗಯ್ಯ ಹಿರೇಮಠರು. ತಾನು ಮಾಡುವುದಕ್ಕೆಲ್ಲ ಬರೀ ನಗೆಯೊಂದರಿಂದಲೇ ಉತ್ತರಿಸುತ್ತಿದ್ದ ಅವರೆಂದರೆ ಗುರೂಗೆ ಬಹಳ ಗೌರವ. ಬಹುಶಃ ಅವನು ಗೌರವ ನೀಡುತ್ತಿದ್ದ ಏಕೈಕ ವ್ಯಕ್ತಿಯೆಂದರೆ ಅಪ್ಪಗೋಳು. ತನ್ನ ಜೀವನದಲ್ಲಿ ನಡೆಯುತ್ತಿದ್ದ ಎಲ್ಲವನ್ನು ಅವನು ಅವರಿಗೆ ಹೇಳುತ್ತಿದ್ದ. ದಿನಕ್ಕೊಂದು ಬಾರಿಯಾದರೂ ಅವರ ಮನೆಗೆ ಹೋಗಿ ಮಾತನಾಡಿ ಬರದಿದ್ದರೆ ಅವನಿಗೆ ಊಟ ರುಚಿಸುತ್ತಿದ್ದಿಲ್ಲ. ಅವನು ದಿನವೂ ದಾರು ಕುಡಿಯಲು, ಉಳಿದ ಬಾಟಲಿ ಇಡಲು, ಲೈಂಗಿಕ ಪುಸ್ತಕಗಳನ್ನು ಬಚ್ಚಿಡಲು ಅವರ ಮನೆ ಸುರಕ್ಷಿತ ತಾಣ. ಇನ್ನೇನು ತಾನು ಮಜಾ ಉಡಾಯಿಸುತ್ತಿದ್ದ ಬಣ್ಣಬಣ್ಣದ ಹುಡುಗಿಯರನ್ನು ಮಾತ್ರ ಅಲ್ಲಿಗೆ ಕರೆದುಕೊಂಡು ಬಂದಿಲ್ಲ. ಅದು ಗೌರವದಿಂದಲೋ ಅಥವಾ ಆ ಯೋಚನೆ ಆತನಿಗೆ ಹೊಳೆದೇ ಇಲ್ಲವೋ ಹೇಳುವುದು ಕಷ್ಟ. +ಅವನ ಮನೆ ಎದುರಿಗೆ ಕಾಣುವ ಚಿಕ್ಕ ಬೋಳಿನಲ್ಲಿ ನೂರು ಮೀಟರು ನಡೆದು ಎಡಕ್ಕೆ ಹೊರಳಿ, ಮೂರು ಮೆಟ್ಟಿಲು ಇಳಿದು, ಬಲಕ್ಕೆ ತಿರುಗಿ ಎರಡು ಪಾವಟಿಗೆ ಇಳಿದು ನೇರ ಹೋದರೆ ತಿಪ್ಪೆಯ ಎದುರಿಗೆ ಕಾಣುವ ಕರಿ ಹಂಚಿನ ಹಾಳು ಮನೆಯಲ್ಲಿ ಅಪ್ಪಗೋಳ ವಾಸ. ಎದುರಿನ ತಿಪ್ಪೆ, ಬಲಕ್ಕೆ ಫರ್ಲಾಂಗು ದೂರದಲ್ಲಿ ಹರಿಯುತ್ತಿದ್ದ ಊರ ಕೊಳಚೆ ಹೊತ್ತೊಯ್ಯುವ ಹಳ್ಳ ಇವುಗಳಿಂದ ಮನೆ ಘಮಾಡಿಸುತ್ತಿತ್ತು. ಮನೆ ಒಳಗೆ ಕಾಲಿಟ್ಟೊಡನೆ ಮಬ್ಬು ಬೆಳಕಿನಲ್ಲಿ ಚೆಲ್ಲಾಪಿಲ್ಲಿಯಾಗಿ ಒಂದರ ಮೇಲೊಂದು ಬಿದ್ದಿರುವ ನೂರಾರು ಕನ್ನಡ, ಇಂಗ್ಲೀಷ, ಹಿಂದಿ ಭಾಷೆಯ ಡಿಸ್ಕವರಿ ಆಪಫ್ ಇಂಡಿಯಾ, ಗೈಡ್, ದೇವದಾಸ, ಶ್ರೀ ರಾಮಾಯಣ ದರ್ಶನಂ, ಪರ್ವ, ಬಸವಣ್ಣವರ ವಚನಗಳು, ಮಹಾಲಕ್ಷ್ಮೀ ವ್ರತದಿಂದ ಗುರು ತಂದು ಚೆಲ್ಲಾಡಿದ ಲೈಂಗಿಕ ಪುಸ್ತಕಗಳವರೆಗೆ ತರಾವರಿ ವಿಷಯದ ಪುಸ್ತಕಗಳು. ಬಾಗಿಲಿಗೆ ಹತ್ತಿಕೊಂಡೇ ಸ್ವಚ್ಛಗೊಳಿಸಿ ಎರಡು ಮಳೆಗಾಲವಾದರೂ ಕಳೆದಿರುವ ತೆಳ್ಳನೆಯ ಗಾದಿ, ಮೇಲೆ ಎತ್ತಲೋ ಮುಖ ಮಾಡಿ ಬಿದ್ದಿರುವ ದಿಂಬು, ಮಡಚದೇ ಬಿದ್ದಿರುವ ಸೊಲ್ಲಾಪುರಿ ಚಾದರು. ಎಡಗಡೆ ಮೂಲೆಯಲ್ಲೊಂದು ಬಚ್ಚಲು, ಅಲ್ಲಿ ಬೂದು ಬಣ್ಣಕ್ಕೆ ತಿರುಗಿರುವ ಎರಡು ಬಕೆಟಗಳು, ಒಂದೇ ಒಂದು ಜಗ್ಗು. ಆ ಜಗ್ಗಿನ ವಿಶೇಷತೆಯೆಂದರೆ ಬೆಳಿಗ್ಗೆ ಸಂಡಾಸಕ್ಕೆ ಅದು ಟಂಬ್ರೇಲ ಆಗುತ್ತಿತ್ತು, ಜಳಕಕ್ಕೆ ಜಗ್ಗು, ನೀರು ಕುಡಿಯುವುದಕ್ಕೆ ತಂಬಿಗೆ. ಸಂಡಾಸ್ಕ ಹೋಗಿ ಬಂದ್ ಮ್ಯಾಲ ತೊಳದ್ ಇಡ್ತೇನಲ್ಲಲೇ, ಅದ್ಕೇನಾಗ್ತೇತಿ? ಯಾವದ್ರೊಳಗೂ ಭೇದಭಾವ ಮಾಡ್ಬಾರದ್ ಎಂಬ ಅವರ ಉತ್ತರಕ್ಕೆ ಹೆದರಿ ಮನೆಯಿಂದ ಬಚ್ಚಿ ಒಂದು ಗ್ಲಾಸನ್ನು ತನ್ನ ಕುಡಿಯುವ ಕಾಯಕಕ್ಕೆ ತಂದು ಇಟ್ಟುಕೊಂಡಿದ್ದ. ಬಚ್ಚಲ ಬದಿಗೆ ಒಂದು ಗ್ಯಾಸ ಒಲೆ, ಬದಿಗೆ ಸಿಲೆಂಡರು, ಅವುಗಳ ಸುತ್ತಲೆಲ್ಲ ಚೆಲ್ಲಿರುವ ಭಾಂಡೆ, ತಾಟು, ಚಮಚಗಳು. ಗೋಡೆಗೆ ನೆಟ್ಟಿರುವ ಗೂಟುಗಳ ತುಂಬ ಜೋತು ಬಿದ್ದಿರುವ ಪ್ಯಾಂಟು, ಶರಟು, ಚಡ್ಡಿ, ಬನಿಯನ, ಟವೆಲ್ಲುಗಳು. ಇನ್ನೊಂದು ಗೋಡೆಯ ಗೂಟಗಳ ಮೇಲಿರುವ ಫಳಿಯ ಮೇಲೆ ಟ್ರಂಕು, ಸೂಟಕೇಸು, ಪೇಪರು, ಮತ್ತೇನೇನೋ ಸುಡುಗಾಡು ಶುಂಠಿ. ಮಧ್ಯ ಒಂದು ಚಿಕ್ಕ ಮಾಡಿನಲ್ಲಿ ಬಸವಣ್ಣನ, ಅಕ್ಕಮಹಾದೇವಿಯ ಫೋಟೋಗಳು, ಬಸವಣ್ಣನ ಮೂರ್ತಿ, ಬಟ್ಟಲದಲ್ಲಿ ಕೂತಿರುವ ಲಿಂಗ, ವಿಭೂತಿ, ಕರ್ಪೂರ, ಊದಕಡ್ಡಿಗಳು. ಮತ್ತೊಂದು ಮೂಲೆಯಲ್ಲಿ ಧೂಳಿನ ಬಣ್ಣಕ್ಕೆ ತಿರುಗಿರುವ ಒಂದು ಫ್ಯಾನು, ಕಪ್ಪು ಹಂಚಿಗೆ ಆಧಾರ ನೀಡಿರುವ ತೊಳೆಯ ಕೆಳಗೆ ಜೋತು ಬಿದ್ದಿರುವ ಎಣ್ಣೆಗೆಂಪು ಬಣ್ಣಕ್ಕೆ ತಿರುಗಿರುವ ಅರವತ್ತರ ಬಲ್ಬು. ಅವರ ಮನೆ ಎಷ್ಟು ಕೊಳಕಾಗಿದೆಯೋ ಅಷ್ಟೇ ಸ್ವಚ್ಛ ಅವರ ಮನಸ್ಸು. ಎಂದಿಗೂ ಯಾರ ಬಗೆಗೂ ಕೇಡು ಮಾತಾಡಿದವರಲ್ಲ, ಯಾವುದರಲ್ಲೂ ಭೇದ ಬಗೆದವರಲ್ಲ, ತಾನಾಯಿತು, ತನ್ನ ಪುಸ್ತಕಗಳಾದವು. ಎಷ್ಟೋ ಬಾರಿ ಮನೆಗೆ ಕೀಲಿ ಹಾಕಿಕೊಳ್ಳದೇ ಕೆಲಸಕ್ಕೆ ಹೋಗಿದ್ದು ಇದೆ. ಯಾವುದರ ಬಗೆಗೂ ಪರಿವೆಯೇ ಇಲ್ಲ ಅವರಿಗೆ. ಹಾಗೆಂದೇ ಅವರ ಮೇಲೆ ಗುರೂಗೆ ಅಪಾರ ಗೌರವ, ನಂಬಿಕೆ. +ಅವನು ಮೊಟ್ಟಮೊದಲ ಬಾರಿ ಸೂಳೆಯ ಜೊತೆಗೆ ಸಂಗ ಮಾಡಿದುದನ್ನು ಅವನು ರಸವತ್ತಾಗಿ ಹೇಳಿದರೆ, ಅವರು ಯಾವುದೇ ಭಾವಾತಿರೇಕವಿಲ್ಲದೆ, ನಿರ್ಲಿಪ್ತರಾಗಿ ಕೇಳಿ ನಕ್ಕು ಬಿಟ್ಟಿದ್ದರು. ವರ್ಷದಿಂದ ಓದುತ್ತಿದ್ದ ಲೈಂಗಿಕ ಪಸ್ತಕಗಳಿಂದ ಪ್ರೇರಿತಗೊಂಡು ಅದರ ರುಚಿ ಅನುಭವಿಸಬೇಕು ಎಂದು ನಿರ್ಧರಿಸಿದ ದಿನ ಹೋಗಿ ಮೂಕನನ್ನು ಭೇಟಿಯಾಗಿ ವ್ಯವಸ್ಥೆ ಮಾಡಲು ಕೇಳಿಕೊಂಡ. ಮೂಕ ಮಾಡದ ಕಾರ್ಯವೇ ಇಲ್ಲ ಜಗತ್ತಿನಲ್ಲಿ, ಸಿಗರೇಟು, ದಾರು, ಮದುವೆಯಾಗಿ ಮೂರು ಮಕ್ಕಳು ಹುಟ್ಟಿದರೂ ಸೂಳೆಯ ಸಹವಾಸ ಬಿಟ್ಟವನಲ್ಲ. ಅವನಿಗೆ ವಯಸ್ಸು ನಲವತ್ತು. ದಿನಾ ರಾತ್ರಿ ಗುರುವಿನ ತಂದೆ ನಡೆಸುತ್ತಿದ್ದ ಕಿರಾಣಿ ಅಂಗಡಿಯಲ್ಲಿ ಬಂದು ಊರ ಸುದ್ದಿಯನ್ನೆಲ್ಲ ಸಂಜ್ಞೆಯ ಮಾತುಗಳಲ್ಲೇ ಹೇಳಿ ಗದ್ದಲ ಎಬ್ಬಿಸುತ್ತಿದ್ದ. ಅಂದು ಗುರು ಒಬ್ಬನೇ ಅಂಗಡಿಯಲ್ಲಿ ಇದ್ದ. ಮೂಕ ಬಂದು ಸ್ವಲ್ಪ ಹೊತ್ತಿನ ತರುವಾಯ ಮೂಗಿನ ಮೇಲೆ ತೋರುಬೆರಳಿನಿಂದ ಎರಡು ಸಲ ಮೆಲ್ಲಗೆ ಹೊಡೆದುಕೊಂಡು ತನ್ನ ಆಶೆ ತಿಳಿಸಿ ಎಷ್ಟು ಎಂದು ಕೈಸನ್ನೆಯಲ್ಲೇ ಕೇಳಿದ. ಅದಕ್ಕೆ ಒಂದೊಂದು ಸಾರಿ ಮೂರು, ನಾಲ್ಕು, ಐದು ಬೆರಳುಗಳನ್ನು ತೋರಿಸಿ ಗಾಳಿಯಲ್ಲಿ ಎರಡು ಸಾರಿ ಸೊನ್ನೆ ಮೂಡಿಸಿದ. ಗುರು ಎರಡನೇ ಭಾನುವಾರ ಹೋಗಬೇಕೆಂದು ಹೇಳಿದ್ದಕ್ಕೆ, ಸರ್ಕಲ್ ಇನ್ಸಪೆಕ್ಟರ ಆಫೀಸಿನ ಹಿಂದೆ ರಾತ್ರಿ ಎಂಟು ಗಂಟೆಗೆ ಬಂದು ಸೇರಲು ಸನ್ನೆ ಮಾಡಿದ. ಗುರು ನಕ್ಕು ಗಲ್ಲೆಯಿಂದ ಹತ್ತರ ಮೂರು ನೋಟು ಎತ್ತಿಕೊಂಡು ಕಿಸೆಗೆ ತುರುಕಿಕೊಂಡ. +ಎರಡನೆಯ ಭಾನುವಾರಕ್ಕೆ ಸರಿಯಾಗಿ ೪೮೦ ರೂಪಾಯಿ ಅವನ ಹತ್ತಿರ ಗೋಳೆ ಆದವು. ೪೦೦ ರೂಪಾಯಿ ಕೊಟ್ಟು, ಉಳಿದುದರಲ್ಲಿ ಒಂದು ಬಾಟಲಿ, ಒಂದಿಷ್ಟು ಸಿಗರೇಟು, ಗುಟ್ಖಾಗಳನ್ನೆಲ್ಲ ಖರೀದಿಸಿ, ಅಪ್ಪಗೋಳ ಮನೆಗೆ ಹಾಜರಾಗಿ ಎರಡು ಪೆಗ್ ಗುಟುಕರಿಸಿ, ಅದರಿಂದ ಲೈಂಗಿಕ ಶಕ್ತಿ ಅರ್ಧಗಂಟೆಗೂ ಮಿಕ್ಕಿ ನಿಲ್ಲುತ್ತದೆಂದು ಯಾರೋ ಹೇಳಿದ್ದು ನೆನಪಿತ್ತು ಅವನಿಗೆ, ಚೆನ್ನಾಗಿ ತಯಾರಾಗಿ ಹೊರಟ. ಮೂಕ ಹೇಳಿದ ಜಾಗಕ್ಕೆ ಬಂದು ನಿಂತ. ಮೂಕ ಸೈಕಲ ಇಳಿದು ಅತ್ತಿತ್ತ ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ಒಂದಿಷ್ಟು ದೂರ ನಡೆದು ಯಾವುದೋ ಮನೆ ಹೊಕ್ಕ. ಮೂಕ ರೇಟು ಹೊಂದಿಸಿ ಸೈಕಲ ಹತ್ತಿ ಹೊರಟುಹೋದ. ಇವನನ್ನು ಕಂಡ ಹೆಂಗಸು ಏನೋ ಚಿಟಮ್ಯಾ ಏನರೆ ಮಾಡಾಕ ಬರ್‍ತೇತಿ ನಿನಗ? ಎಂದಿದ್ದಕ್ಕೆ ಅರ್‍ಬಿರೇ ಕಳಿ ತಾನ ಗೊತ್ತಾಗ್ತೇತಿ ಎಂದು ಹೇಳಿ ಎದೆಯುಬ್ಬಿಸಿ ನಿಂತ. ಅವನ ಹಾಲುಗಲ್ಲ, ಉದ್ದನೆಯ ಮುದ್ದಾದ ಮೂಗು, ಜೆಲ್ ಹಚ್ಚಿ ಕೈಯಿಂದಲೇ ಹೊಸ ಫ್ಯಾಶನ್ನಿನಲ್ಲಿ ಹಿಕ್ಕಿದ ಕೂದಲು, ಹದಿನೈದಕ್ಕೆ ಹೆಚ್ಚೆನ್ನುವಂತೆ ಇದ್ದ ಎತ್ತರ, ಬಾಡಿ ಬಿಲ್ಡರನಂತೆ ಅಚ್ಚುಕಟ್ಟಾದ ಮಾಂಸ ಖಂಡಗಳು, ಅಳತೆ ಹಚ್ಚಿ ಮಾಡಿಸಿದಂತಿದ್ದ ಮೈಕಟ್ಟು ಕಂಡು ಅವಳ ಬಾಯಲ್ಲೂ ನೀರೂರಿರಬೇಕು. ಬೆತ್ತಲಾದ ಅವಳ ದೇಹ ಕಂಡು ನಾಲ್ಕನೆಯ ಇಯತ್ತೆ ಇರುವಾಗ ನಿದ್ದೆ ಹತ್ತದ ಒಂದು ದಿನ ಹೊರಳಿದರೆ ಕಂಡ ತಾಯಿಯ ಬೆತ್ತಲಾದ ದೇಹ, ನಂತರ ನಡೆದ ಕಾಮದಾಟ ನೆನಪಿಗೆ ತಂದುಕೊಂಡು ಅದನ್ನೆಲ್ಲ ಇಲ್ಲಿ ಪ್ರಯೋಗಿಸಿಬಿಟ್ಟ. +ಮೂಕನಿಗೆ ಊರಿನ ಎಲ್ಲ ಒಳ್ಳೆಯ ಕೆಟ್ಟ ಕೆಲಸಗಳ ಸುದ್ದಿ ತಲುಪುತ್ತಿತ್ತು. ಊರಲ್ಲಿ ಎಲ್ಲಿ ಏನು ನಡೆಯುತ್ತಿದೆ ಎಂದು ಅವನಿಗೆ ಕರಾರುವಕ್ಕಾಗಿ ತಿಳಿದಿರುತ್ತಿತ್ತು. ಹಾಗೆಯೇ ಅವನ ಕೈಸನ್ನೆಗಳ ಮೂಲಕ ಊರೆಲ್ಲ ಹರಡುತ್ತಲೂ ಇತ್ತು. ಹಾಗಿರುವಾಗ ಗುರುವಿನ ಸೂಳೆ ಪ್ರಸಂಗ ಅವನ ತಂದೆಯ ಕಿವಿ ತಲುಪಲು ವಾರವೂ ಬೇಕಾಗಲಿಲ್ಲ. ಮೈಮುರಿ ಹೊಡೆತಗಳು ಬಾಸುಂಡೆಗಳಾಗಿ ಮತ್ತೊಂದು ವಾರದವರೆಗೆ ಮಾಯಲೂ ಇಲ್ಲ. +ತಾನು ಹರಿವ ಹಾದಿಯಲ್ಲಿ ಅಡ್ಡ ಬಂದ ಗುಡ್ಡವನ್ನು ಕಂಡು ಎದೆಗುಂದದೆ ನದಿ ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ರಭಸದಿಂದ ಮುನ್ನುಗ್ಗಿ ಗುಡ್ಡ ಕೊರೆದು ಭೋರ್ಗರೆವ ಜಲಪಾತ ಸೃಷ್ಟಿಸುವಂತೆ ಗುರು ಅಪ್ಪನ ಹೊಡೆತಕ್ಕೆ ಕುಗ್ಗದೇ ಹೊಸ ಅನುಭವಗಳ ಹುಡುಕಾಟಕ್ಕೆ ವೇಗ ಮುಟ್ಟಿಸಿದ. ಗಲ್ಲಿಯ ಕೊನೆಯಲ್ಲಿ ದಿನಾಲೂ ಅವನು ಹೋಗುವ ಸಮಯಕ್ಕೆ ಆಶೆಯ ಕಂಗಳಿಂದ ದಿಟ್ಟಿಸುವ ರಮ್ಯ, ಹೊಲಕ್ಕೆ ಹೋಗಿ ಹುಲ್ಲು, ಶೇಂಗಾ ಹೊತ್ತು ಬರುವ ಸುಶೀಲ, ಆರೆಂಟು ಮನೆಯ ಕಸಮುಸುರೆ ಮಾಡುವ ಅದೇ ಆಗ ಯೌವನಕ್ಕೆ ಕಾಲಿಟ್ಟಿರುವ ಗಂಗಮ್ಮ ಇತ್ಯಾದಿ ಅನೇಕರನ್ನು ಜೋಕುಗಳ ಒಗೆದು ಬಲೆಗೆ ಬೀಳಿಸಿ ಮಜ ಉಡಾಯಿಸಿದ. ಎಲ್ಲೆಲ್ಲೋ ಜಾಗ, ಸಮಯ ಹೊಂದಿಸಿಕೊಂಡು ಖರ್ಚಿಲ್ಲದೆ ರಾಸಲೀಲೆ ಮುಂದುವರೆಸಿದ. +ಎಸ್ಸೆಸ್ಸೆಲ್ಸಿಯಲ್ಲಿ ಡುಬ್ಕಿ ಹೊಡೆದು ಪಾನಪಟ್ಟಿ ಅಂಗಡಿ ಇಟ್ಟು ವ್ಯಾಪಾರಕ್ಕೆ ತೊಡಗಿಕೊಂಡ. ಎರಡು ವರ್ಷಗಳ ಸತತ ಪ್ರಯತ್ನದ ಮೂಲಕ ಅದನ್ನು ಪಾಸು ಮಾಡಿಕೊಂಡು, ಮುಂದಿನ ಮೂರು ವರ್ಷಗಳಲ್ಲಿ ಪಿಯೂಸಿ ಮುಗಿಸಿ, ಬಿ.ಎಗೆ ಸೇರಿಕೊಂಡ. ಪಟ್ಟಿ ಅಂಗಡಿಯಲ್ಲಿ ವ್ಯಾಪಾರವೂ ಕುದುರಿ, ಫೈನಾನ್ಸಿನಲ್ಲಿ ಸಾಲ ಮಾಡಿ ಒಂದು ಝರಾಕ್ಸ ಕೊಂಡುಕೊಂಡ. ಜೋರು ಹಿಡಿದ ವ್ಯಾಪಾರಕ್ಕೆ ಕಂಪ್ಯೂಟರ ಖರೀದಿ ಮಾಡಿ ಖರೀದಿ ಪತ್ರ, ಕರಾರು ಪತ್ರ, ಸೋಡಚೀಟಿ, ಮೃತ್ಯುಪತ್ರ, ಬಿಎಡ್ ಹುಡುಗರ ಪ್ರಾಜೆಕ್ಟಗಳನ್ನು ಡಿಟಿಪಿ ಮಾಡಲು ಶುರುಮಾಡಿದ. ಹಣ ಬರುತ್ತಾ ಹೋಯಿತು, ಮಜ ಹೆಚ್ಚುತ್ತಾ ಹೋಯಿತು. ಅವನ ಚಾಣಾಕ್ಷತನ ಹುಡುಗಿಯರ ಸಂಗ ಮಾಡುವುದಕ್ಕೆ ಉಪಯೋಗವಾದದ್ದಕ್ಕಿಂತ ವ್ಯಾಪಾರಕ್ಕೆ ಸಹಾಯವಾಗತೊಡಗಿತು. ನಾಲ್ಕಾರು ವಕೀಲರ ಕೈಕೆಳಗೆ ಕಾರಕೂನನಾಗಿ ಕೆಲಸ ಮಾಡುತ್ತ ಇಂಥ ಖರೀದಿ ಪತ್ರ, ಕರಾರು ಪತ್ರ, ಆರ್ ಟಿ ಓ ಕೆಲಸ, ಪೋಲೀಸ ಕೆಲಸಗಳನ್ನೆಲ್ಲ ಮಾಡಿಕೊಡುತ್ತಿದ್ದ ಮಹಾರುದ್ರ ಅವನಿಗೆ ಹೆಚ್ಚೆಚ್ಚು ಕೆಲಸಗಳನ್ನು ಕೊಡುತ್ತ ಹೋದ. +ಹೀಗಿರುವಾಗ ಒಂದು ರಾತ್ರಿ ಅಂಗಡಿ ಬಂದ ಮಾಡುವ ಹತ್ತೂವರೆ ಸುಮಾರಿಗೆ ಮಾರುದ್ರ ಬಂದು ಒಳಗಿನಿಂದಲೇ ಶಟರು ಎಳೆದ. ಶರಟಿನ ಒಳಗೆ ತುರುಕಿಕೊಂಡಿದ್ದ ಕಾಗದಗಳನ್ನು ಹೊರತೆಗೆದ. ಅದರಲ್ಲಿ ಒಂದು ನೋಂದಣಿ ಮಾಡಿಸಿದ ಖರೀದಿ ಪತ್ರ, ಒಂದಿಷ್ಟು ಖಾಲಿ ಸ್ಟ್ಯಾಂಪಿನ ಕಾಗದಗಳು. ಸುತ್ತಿಕೊಂಡು ಕೈಯಲ್ಲಿ ಹಿಡಿದುಕೊಂಡಿದ್ದ ಚೀಲದಲ್ಲಿ ನಾಲ್ಕೆಂಟು ಶಿಕ್ಕಾಗಳು, ಇಂಕಪ್ಯಾಡ, ಕೆಂಪು, ಕರಿ, ಹಸಿರು, ನೀಲಿ ಬಣ್ಣದ ಪೆನ್ನುಗಳು. ಅವನ್ನೆಲ್ಲ ಹೊರತೆಗೆದು ಅವಕ್ಕಾಗಿ ನಿಂತಿದ್ದ ಗುರುಗೆ ಅವರು ಮಾಡಬೇಕಾದ ಕೆಲಸ ತಿಳಿಹೇಳಿದ. ಬಹಳ ಸರಳ ಕೆಲಸ. ಇಷ್ಟೆಲ್ಲ ಪರಿಕರಗಳ ಸಹಾಯದಿಂದ ಖರೀದಿ ಪತ್ರದ ನಕಲು, ಅಸಲಿನ ಹಾಗೆ ಕಾಣುವಂತೆ ತಯಾರಿಸುವುದು. ಗುರುವಿನ ಕೆಲಸ ಬರೀ ಅಸಲನ್ನು ನೋಡಿ ಖಾಲಿ ಸ್ಟ್ಯಾಂಪಿನ ಮೇಲೆ ಟೈಪು ಮಾಡಿಕೊಡುವುದು ಹಾಗೂ ಗುಟ್ಟನ್ನು ಬಿಟ್ಟು ಕೊಡದೇ ಇರುವುದು. ಅದಕ್ಕೆ ಅವನು ನೀಡುವ ಹಣ ಐದು ಸಾವಿರ. ಒಂದು ಸಾರಿ ಗುರು ಒಪ್ಪಿಕೊಂಡರೆ ಅವನ ಹತ್ತಿರ ಬೇಕಾದಷ್ಟು ಕೆಲಸಗಳಿವೆ. ವರ್ಷದೊಳಗೆ ಗುರು ಲಕ್ಷ ಲಕ್ಷ ಗಳಿಸಬಹುದು. ಗಾಬರಿಗೊಂಡ ಗುರುವಿಗೆ ಧೈರ್ಯ ತುಂಬಿದ್ದು ಮಾರುದ್ರನ ಒಂದೇ ಮಾತು. ತನಗೆ ಏನೂ ಗೊತ್ತಿಲ್ಲ, ಯಾರೋ ಬಂದರು ಹೀಗೆ ಟೈಪು ಮಾಡು ಎಂದರು ಮುಂದೆ ಏನಾಯಿತೋ ತನಗೇನೂ ಗೊತ್ತಿಲ್ಲ ಎಂದುಬಿಡುವುದು. ಅಷ್ಟಕ್ಕೂ ಅವನು ಮಾಡುತ್ತಿರುವುದು ಅಷ್ಟೇ ತಾನೇ? ನಿಜವಾದ ರಿಸ್ಕ ತೆಗೆದುಕೊಳ್ಳುತ್ತಿರುವವನು ಮಾರುದ್ರ. ಅವನೇ ನಕಲಿ ಸಹಿ ಮಾಡಿ, ನಕಲಿ ಶಿಕ್ಕಾ ಹಾಕಿ ಫೋಟೋಗಳನ್ನೆಲ್ಲ ಕಂಪ್ಯೂಟರಿನಲ್ಲಿ ನಕಲು ಮಾಡಿ ತಯಾರು ಮಾಡುವುದು. ಅಂಥ ಅವಕಾಶ ಗುರು ಬಿಟ್ಟಾನೆಯೇ? ಎರಡೂ ಕೈಯಿಂದ ಬಾಚಿಕೊಂಡ. ಹಣದ ಹೊಳೆ ಹರಿಯುತ್ತ ಹೋಯಿತು. +ಮತ್ತೆ ಯಾರೋ ಅಪ್ಪನ ಕಿವಿ ಚುಚ್ಚಿದ್ದರು. ಆ ದಿನ ರಾತ್ರಿ ಗುರು ಬಂದದ್ದು ಎರಡು ಗಂಟೆಗೆ. ಬೆಳಿಗ್ಗೆ ಎದ್ದು ಹಲ್ಲುಜ್ಜಿ, ಮುಖ ತೊಳೆದು ಚಹಾ ಕೇಳಿದೊಡನೆ ಕೂಡಲೇ ಶುರುವಾದ ಅಪ್ಪನ ಬೈಗುಳಗಳ ಮಳೆ ಗುರುವಿನ ಸಹನೆಯ ಕಟ್ಟೆಯೊಡೆಯುವವರೆಗೆ ಸುರಿಯುತ್ತಲೇ ಇತ್ತು. ನಡುನಡುವೆ ತಾಯಿ ಕೂಡ ನೂರೆಂಟು ಬೈದಳು. ತಡೆದುಕೊಂಡ ಸಿಟ್ಟು ಕಟ್ಟೆಯೊಡೆದು ಅಪ್ಪನನ್ನೇ ಬೈಯಲು ಗುರು ಶುರುಮಾಡಿದ. ಗುಡುಗು, ಸಿಡಿಲು, ಮಿಂಚುಗಳು ಜೋರಾದವು. ಬೈಗುಳ, ವಾಗ್ವಾದ, ಜಗಳ ಮಿತಿಮೀರಿ ಗುರುವಿನ ಮತಿಗೆಟ್ಟು ಕೋಪದ ಭರದಲ್ಲಿ ಅಪ್ಪನ ಕಪಾಳಕ್ಕೆ ಛಟೀರೆಂದು ಹೊಡೆದ. ಆಘಾತಗೊಂಡ ಅಪ್ಪ ದಿಗ್ಭ್ರಾಂತನಾಗಿ ನೆಲಕ್ಕೆ ಕುಸಿದು ಕುಳಿತ. ರುದ್ರಕಾಳಿಯಾದ ತಾಯಿ, ಅಪ್ಪಗ ಹೊಡ್ಯೂವಷ್ಟ ದೊಡ್ಡಾಂವಾದೇನ್ಲೇ ಭಾಡ್ಯಾ. ನಡಿ ಹೊರಗ್, ಮನಿ ಒಳಗ ಕಾಲಿಟ್ಯಂದ್ರ ಕಾಲ ಕಿತ್ತ ಕೈಯಾಗ ಕೊಡತೇನ್. ನಿನ್ ಬಾಯಾಗ ಹುಳಾ ಬಿದ್ದ ಸಾಯಾ.. ಎಂದು ಚೀರಿದವಳೇ ರಟ್ಟೆ ಹಿಡಿದು ಅಕ್ಷರಶ: ಹೊರಗೆ ದೂಡಿದಳು. +ಸಿಟ್ಟಿನಿಂದ ಜರ್ಜರಿತನಾದ ಗುರು ಎಲ್ಲಿ ಹೋಗಬೇಕೆಂದು ತಿಳಿಯದೆ ಕಾಲೇಜಿನಡೆಗೆ ನಡೆದ. ಕೆದರಿದ ಕೂದಲು, ಚುರ್ರೆನ್ನುವ ಹೊಟ್ಟೆ, ಎತ್ತ ಬೇಕತ್ತ ಮಡಚಿದ ಬಟ್ಟೆಗಳು ಯಾವುದರ ಪರಿವೆಯೂ ಇಲ್ಲ. ನೇರ ಕ್ಲಾಸಿಗೆ ಹೋಗಬೇಕೆಂದುಕೊಂಡವನಿಗೆ ಕಮ್ಯುನಿಟಿ ಹಾಲಿನಿಂದ ಯಾರೋ ಹಾಡುತ್ತಿರುವ ದನಿ ಕೇಳಿಸಿತು. ಅಲ್ಲಿ ಹೋಗಿ ಖಾಲಿ ಕಂಡ ಕೊನೆ ಸಾಲಿನ ಕುರ್ಚಿಯ ಮೇಲೆ ಕೂತ. ನಾಲ್ಕಾರು ಜನ ಅಪಸ್ವರದಲ್ಲಿ ಹಾಡುವುದ ಕೇಳಿ ತಲೆಕೆಟ್ಟು ಹೊರಟುನಿಂತ. ಎದ್ದವನನ್ನು ಯಾರೋ ಕೈ ಜಗ್ಗಿ ಕುಳ್ಳಿರಿಸಿದಂತೆ ಮಧುರವಾದ ಅವಳ ಹಾಡು ಅವನನ್ನು ಸೆಳೆಯಿತು. ಮನದ ಕ್ಲೇಶವೆಲ್ಲ ಹಬೆಯಾಗಿ ಹಾರಿ ಹೋಗುವಂಥ ದನಿ. +ಮೊದಲ ಬಾರಿಗೆ ನದಿಯಲ್ಲಿ ಈಜುಬಿದ್ದ ನೆನಪು. ಗೋಲಗುಮ್ಮಟದ ಉದ್ಯಾನದಲ್ಲಿ ಹುಲ್ಲುಹಾಸಿನ ಮೇಲೆ ಜಗತ್ತಿನ ಖಬರಿಲ್ಲದೆ ಮಲಗಿದ ನೆನಪು, ಅಮ್ಮ ಮುಡಿದ ಮೊಲ್ಲೆಯ ಸುವಾಸನೆಯ ನೆನಪು, ಹೊಲದಲ್ಲಿ ಕುಳಿತು ಮೊದಲ ಬಾರಿಗೆ ಸೂರ್ಯೋದಯ ಕಂಡ ನೆನಪು, ದೀಪಾವಳಿಯ ದಿನ ಬೆಳಿಗ್ಗೆ ನಾಲ್ಕಕ್ಕೆದ್ದು ಸುವಾಸನೆಯ ಎಣ್ಣೆಯಿಂದ ಮೈಯ್ಯುಜ್ಜಿಸಿಕೊಂಡು ಚಂದನದ ಸಾಬೂನಿನಿಂದ ಅಭ್ಯಂಗಸ್ನಾನ ಮಾಡಿ ಪಟಾಕಿ ಹಾರಿಸಿ ನಲಿದಾಡಿದ ನೆನಪು, ಹುಟ್ಟುಹಬ್ಬದ ದಿನ ಅಪ್ಪ ಹೊಟೇಲಿಗೆ ಕರೆದುಕೊಂಡು ಹೋಗಿ ಬಾಸುಂದಿ ತನ್ನಿಸಿದ ನೆನಪು, ಅಜ್ಜಿಯ ತೊಡೆಯ ಮೇಲೆ ಕುಳಿತು ಚಂದ್ರಮನ ಕತೆ ಕೇಳುತ್ತ ಕೈತುತ್ತು ಉಂಡ ನೆನಪು, ಮಾವಸಿ ಮಗಳ ಮದುವೆಯಲ್ಲಿ ರಾತ್ರಿಯಡಿ ದೊಡ್ಡವರ ಭಯವಿಲ್ಲದೇ ಹುಡುಗರ ಜೊತೆಗೂಡೆ ಆಟವಾಡಿದ ನೆನಪು ಎಲ್ಲ ಒಮ್ಮೆಲೆ ಒತ್ತರಿಸಿ ಬಂದು ವ್ಯಾಕುಲಗೊಂಡ ಮನವನ್ನು ಆಹ್ಲಾದಗೊಳಿಸಿದವು. ಜಗತ್ತನ್ನೆಲ್ಲ ಮರೆತು ಗಾಳಿಯಲ್ಲಿ ಹಾಯಾಗಿ ತೇಲುತ್ತಿರುವ ಭಾಸ. +ಮುಚ್ಚಿದ ಕಂಗಳನ್ನು ತೆರೆದು ನೋಡಿದರೆ ಮೈದಿನ ಎದುರಿಗೆ ಮಗ್ನವಾಗಿ ಕಣ್ಮುಚ್ಚಿ ಹುಡುಗಿಯ ಮೊಗ ಚುಂಬಕದಂತೆ ಸೆಳೆದಂತಾಯಿತು. ಮಬ್ಬು ಹಸಿರು ಬಣ್ಣದ ಚೂಡಿದಾರ, ಅದರ ಮೇಲೆ ಕೆಂಪು ನೀಲಿ ಬಣ್ಣದ ದುಪಟ್ಟಾ, ನೆಟ್ಟನೆಯ ಮೂಗು, ಚಿಕ್ಕ ಕೆಂಬಣ್ಣದ ತುಟಿಗಳು, ಗಟ್ಟಿಯಾಗಿ ಹಿಂದಕ್ಕೆ ಹಿಕ್ಕಿದ ಕೂದಲಿನ ಹುಡುಗಿ ಹೃದಯದಲ್ಲಿ ಹೂದೋಟ ಹುಟ್ಟಿದ ಅನುಭವ ನೀಡಿದಳು. ಹಾಡಿನ ಲಯಕ್ಕೆ ಕೈಯಲುಗಿಸುವ ರೀತಿ, ಕಣ್ಮುಚ್ಚಿ ತಲ್ಲೀನಳಾಗಿ ಸ್ವರಗಳನ್ನು ಉಸುರುವ ಭಾವ ಅವನಲ್ಲಿ ಹೊಸ ಸಂವೇದನೆಗಳನ್ನು ಹುಟ್ಟಿಸಿದವು. +ಹಾಡು ಯಾಕಾದರೂ ಮುಗಿಯಿತೋ ಎಂದು ಖೇದವಾಯಿತು. ಉಳಿದ ಆಯಸ್ಸನ್ನೆಲ್ಲ ಅವಳ ಹಾಡು ಕೇಳುತ್ತಲೇ ಇರಬೇಕೆಂಬ ಆಶೆಯಾಯಿತು. ಅವಳು ಮುಗುಳ್ನಕ್ಕು ಧನ್ಯವಾದ ಹೇಳಿ ವೇದಿಕೆ ಇಳಿಯುವುದನ್ನು ವೀಕ್ಷಿಸುವ ಗುಂಗಿನಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ ಅವನಿಗೆ ಕೇಳಿಸಲೇ ಇಲ್ಲ. ಎದ್ದು ಅವಳು ಕುಳಿತ ಜಾಗಕ್ಕೆ ಹೋಗಿ ಅವಳನ್ನು ಅಭಿನಂದಿಸಬೇಕೆಂದು ಮನಸ್ಸಾದುದನ್ನು ಹೇಗೆ ತಡೆಹಿಡಿದುಕೊಂಡನೋ? ಅಲ್ಲಿಂದ ಕದಲಲಿಲ್ಲ, ನೋಟ ಮಾತ್ರ ಅವಳ ಮೇಲೆಯೇ ಕೀಲಿಸಿತ್ತು. ಕಾರ್ಯಕ್ರಮ ಮುಗಿದ ಮೇಲೆ ಮಾಯಕ್ಕೊಳಗಾದವನಂತೆ ಅವಳಿಗೆ ತಿಳಿಯದ ಹಾಗೆ ಅವಳನ್ನು ಹಿಂಬಾಲಿಸಿದ. ಅವಳು ತನ್ನ ಮನೆಯೊಳಕ್ಕೆ ಹೋಗುತ್ತಿದ್ದಂತೆ ನಿದ್ರೆಯಿಂದ ಎಚ್ಚರಗೊಂಡವನಂತೆ ಗಕ್ಕನೆ ನಿಂತುಬಿಟ್ಟ. ಎಲ್ಲಿ ಬಂದನೆಂದು ತಿಳಿದುಕೊಳ್ಳಲು ಸುತ್ತೆಲ್ಲ ಕಣ್ಣಾಡಿಸಿದ. ಅಪರಿಚಿತ ಜಾಗ. ಹೇಗೆ ಬಂದೆ, ತಿರುಗಿ ಹೋಗುವುದು ಹೇಗೆ ಒಂದೂ ಹೊಳೆಯಲಿಲ್ಲ. ಮನಸ್ಸನ್ನು ಹತೋಟಿಗೆ ತರಲೆಂದು ನಡೆಯಲು ಪ್ರಾರಂಭಿಸಿದ. ಅಡ್ಡ ಒಂದು ರಸ್ತೆ ಬಂತು. ಆಚೀಚೆ ನೋಡಿದರೆ ಎದುರಿಗೆ ಒಂದು ಹೊಟೇಲು ಕಾಣಿಸಿತು. ಏನೂ ಹೊಳೆಯದೇ ಒಳಗೆ ಹೋಗಿ ಕುಳಿತು ಚಹಾ ತರಲು ಹೇಳಿದ. +ಚಹಾ ಕುಡಿದು ಹೊರಬಂದು ನೋಡುತ್ತಾನೆ ಎದುರಿಗೆ ಟೀವಿ ಅಂಗಡಿ. ಹೆಸರು ಗಣೇಶ ಎಲೆಕ್ಟ್ರಾನಿಕ್ಸ. ತಟ್ಟನೆ ಹೊಳೆಯಿತು. ಅಲ್ಲಿಂದ ಆ ಹುಡುಗಿ ಒಳಹೊಕ್ಕ ಮನೆ ನೋಡಿದ. ವಿಳಾಸ ಗೊತ್ತಾಯಿತು. ಮನೆಯ ಬಾಗಿಲಿಗೆ ರಾಜಪ್ಪ ಅಮ್ಮಿನಭಾವಿ ಎಂಬ ಬೋರ್ಡ ಇತ್ತು. ಹೆಸರು ಮನಸ್ಸಿನಾಳಕ್ಕಿಳಿಯಿತು. +ಮನೆಗೆ ಹೋಗುವಂತಿರಲಿಲ್ಲ ಎಂದು ನೇರ ಅಪ್ಪಗೋಳ ರೂಮಿಗೆ ಹೋಗಿ ಮಲಗಿಕೊಂಡ. ಕಣ್ಣ ಮುಂದೆ ಬರೀ ಅವಳ ಬಿಂಬ, ಕಿವಿಯಲ್ಲಿ ಅವಳ ಹಾಡು, ಅವಳ ಮುಖ, ನಡೆ, ಕೈ, ಎಲ್ಲವೂ ಒಂದಾದ ಮೇಲೊಂದು ಅವನ ಹೃದಯದಲ್ಲಿ ಕೋಲಾಹಲ ಎಬ್ಬಿಸಿ ಒದ್ದಾಡುತ್ತಲೇ ಇದ್ದ. ಯಾಕೋ ಏನಾತು? ಎಂದು ಅಪ್ಪಗೋಳ ಕೇಳೀದ್ದಕ್ಕೆ ತಲಿ ಹೊಡ್ಯಾತೇತ್ರಿ ಎಂದಷ್ಟೇ ನುಡಿದು ಹುಡುಗಿಯ ನೆನಪೊಳಗೆ ನುಸುಳಿಕೊಂಡ. ಕುಡಿಯುವ, ತಿನ್ನುವ ಮನಸ್ಸಿಲ್ಲ, ನಿದ್ದೆ ಬರಲೊಲ್ಲ, ಹೇಗಾದರೂ ಮಾಡಿ ಅವಳನ್ನು ಕಂಡು ಮಾತನಾಡಿಸಬೇಕು ಎಂಬುದೊಂದೇ ಬಯಕೆ. ಹೃದಯವೆಲ್ಲ ಖಾಲಿಯಾಗಿ ಅಲ್ಲಿ ಅವಳು ತುಂಬಿಕೊಳ್ಳಬೇಕೆಂಬ ವೇದನೆ. +ಎಲ್ಲೋ ಹೊರಹೋಗಿದ್ದ ಅಪ್ಪಗೋಳ ರಾತ್ರಿ ಹತ್ತೂವರೆಗೆ ಬಂದು ಊಟಾ ಮಾಡ್ತಿಯೇನೋ? ಎಂದರು. ಅವನು ಅಡ್ಡಕ್ಕೆ ತಲೆ ಅಲ್ಲಾಡಿಸಿದ. ಅವರು ತಮ್ಮ ಪಾಡಿಗೆ ತಾವು ತಿಂದು ಓದಲು ಕುಳಿತರು. ರಾತ್ರಿ ಯಾವಾಗಲೋ ಅಲ್ಲೇ ಎಲ್ಲೋ ಬಿದ್ದಿದ್ದ ಚಾಪೆಯನ್ನು ಅವನ ಬಲಕ್ಕೆ ಹಾಸಿಕೊಂಡು ನಿದ್ದೆಹೋದರು. +ರಾತ್ರಿಯಿಡೀ ನಿದ್ದೆ, ಎಚ್ಚರ, ಅವಳು ಒಂದಕ್ಕೊಂದು ತಡಕಾಡಿಕೊಂಡು ಸೂರ್ಯನ ಕಿರಣ ಅವನ ತಾಕುತ್ತಲೇ ಎದ್ದು ಅವಳ ಗಲ್ಲಿಗೆ ಹೋದ. ಅತ್ತಿಂದಿತ್ತ ಅಲೆದಾಡಿ ಏನೂ ತೋಚದೇ ಎದುರಿನ ಹೊಟೇಲಿಗೆ ಹೋಗಿ ಒಂದು ಚಹಾ ಗುಟುಕರಿಸಿದ. ಮತ್ತೆ ಅಲ್ಲೇ ತಿರುಗಾಡುವುದನ್ನು ಯಾರಾದರೂ ಕಂಡು ಕೇಳಿದರೆ ಹೇಳುವುದೇನು ಎಂದು ಹೆದರಿ ಎತ್ತಲೋ ನಡೆದುಬಿಟ್ಟ. ಅವಳು ಹೊರಗೆ ಬಂದಾಳು, ನನ್ನ ನೋಡಿ ನಕ್ಕಾಳು, ಮಾತನಾಡಿಸಿಯಾಳು ಎಂಬಾಶೆ ಅವನ ತಿದಿಯೊತ್ತುತ್ತಲೇ ಇತ್ತು. ಅವಳನ್ನು ಎಷ್ಟೋ ವರ್ಷಗಳಿಂದ ಬಲ್ಲವರಂತೆ ಎದುರಿಗೆ ಬಂದರೆ ಆರಾಮಿದಿ? ಎಂದು ಕೇಳಬೇಕು ಎಂದು ಇಪ್ಪತ್ತು ಸಾರಿಯಾದರೂ ಅಂದುಕೊಂಡ. ಅವಳು ಕಾಣಲೇ ಇಲ್ಲ. +ದಿನವೇರಿದಂತೆ ತಾನು ಹುಚ್ಚನಂತೆ ಅಲೆಯುತ್ತಿದ್ದೇನೆ ಎಂಬ ಪ್ರಜ್ಞೆ ಮರುಕಳಿಸಿ ಅವಳ ಮನೆಗೆ ಫೋನು ಹಚ್ಚಬೇಕೆಂದು ಹವಣಿಸಿದ. ಧೈರ್‍ಯ ಸಾಲದೇ ಸುಮ್ಮನಾದ. ಮರುದಿನ ಮನೆಗೆ ಹೋಗಿ ಮೌನವಾಗಿ ತನಗೆ ಬೇಕಾದ ಬಟ್ಟೆಬರೆಗಳನ್ನೆಲ್ಲ ಒಂದು ಬ್ಯಾಗಿನಲ್ಲಿ ತುರುಕಿಕೊಂಡು ಒಯ್ದು ಅಪ್ಪಗೋಳ ಮನೆಯಲ್ಲಿ ಇಟ್ಟ. ಮನೆಯಲ್ಲಿ ನಡೆದ ಪುರಾಣ ಹೇಳಿ ತನಗೊಂದು ಮನೆ ಸಿಗುವವರೆಗೂ ಇಲ್ಲೇ ಇರುವೆ ಎಂದ. ಅವರು ನಕ್ಕರು. ಅವನು ಮನೆ ಹುಡುಕಲಿಲ್ಲ. ಹುಡುಗಿಯ ಮನೆ, ಕಾಲೇಜು, ಅವಳು ಹೋದಲ್ಲೆಲ್ಲ ತಿರುಗಾಡಿದ. ಎರಡು ವಾರ ಅದೇ ಒದ್ದಾಟದಲ್ಲಿ ಕಳೆದವು. +ಅದೆಲ್ಲಿಂದ ಧೈರ್‍ಯ ಬಂತೋ ಒಂದು ದಿನ ಅವಳಿಗೊಂದು ಚೀಟಿ ಬರೆದ. ನಿಮ್ಮನ್ನು ಮಾತನಾಡಿಸಬೇಕು ಎಂಬುದೊಂದೇ ಸಾಲು. ಅವಳು ಕಾಲೇಜಿಂದ ಬರುವ ದಾರಿಯಲ್ಲಿ ಅಡ್ಡಗಟ್ಟಿ ಅವಳ ಕೈಗೆ ಇಟ್ಟು ತಿರುಗಿ ನೋಡದೇ ಸರಸರನೆ ನಡೆದುಹೋದ. ಅವಕ್ಕಾಗಿ ತೆರೆದು ನೋಡಿದ ಅವಳು ನಕ್ಕು ಮುಷ್ಟಯಲ್ಲಿ ಮಡಚಿ ಗಟಾರಿನಲ್ಲಿ ಎಸೆದು ನಡೆದುಬಿಟ್ಟಳು. +ಮರುದಿನ ಅದೇ ಜಾಗದಲ್ಲಿ ನಿಂತಿದ್ದ ಅವನ ಕಂಡು ನಕ್ಕಳು. ಗುರುಗೊಂದೂ ತೋಚದೇ ನಿಂತುಕೊಂಡ. ನೀವ್ಯಾರ್ರಿ ನನ್ನ ಜೋಡಿ ಮಾತಾಡಾಕ? ಎಂದು ನೇರವಾಗಿ ಕೇಳಿದಳು. ಮಾತು ಹೊರಬರಲೊಲ್ಲದು, ಪೆಚ್ಚನಂತೆ ಹಲ್ಲು ತೋರಿದ. ಅವನು ಕೊಟ್ಟ ಚೀಟಿಯನ್ನು ಅವನ ಕೈಗೆ ಕೊಟ್ಟು ನಡೆದು ಹೋಗಿಬಿಟ್ಟಳು. +ಎಷ್ಟೋ ಹೊತ್ತು ಹಾಗೇ ಹೃದಯಾಘಾತಕ್ಕೊಳಗಾದವನಂತೆ ನಿಂತಿದ್ದವನಿಗೆ ಎತ್ತ ಹೋಗಬೇಕೆಂದು ದಾರಿ ತೋಚಲಿಲ್ಲ. ಯಾಕೋ ಶಟರು ಹಾಕಿಕೊಂಡು ಅಂಗಡಿಯ ಒಳಗೆ ಕುಳಿತುಕೊಂಡು ಅತ್ತುಬಿಡಬೇಕೆಂದು ಆಶೆ ಒತ್ತರಿಸಿ ಬರತೊಡಗಿತು. ಸತ್ತವನಂತೆ ಹೆಜ್ಜೆ ಹಾಕುತ್ತಾ ಅಂಗಡಿಯ ದಾರಿ ಹಿಡಿದು ಹೊರಟ. ಅವಳು ನೀವ್ಯಾರ್ರಿ ಎಂದು ಕೇಳಿದುದು ಗಂಟೆಯಂತೆ ಅವನ ತಲೆಯಲ್ಲಿ ಹೊಡೆಯತೊಡಗಿತು. ನಾನು ಯಾರು, ನನಗೆ ಯಾವ ಗುರುತಿದೆ, ನನ್ನ ಜೀವನದ ತುಂಬ ನಾನು ಮಾಡಿದುದಾದರೂ ಏನು? ನಾನು ಕುಡುಕ, ಕಚ್ಚೆಹರುಕ, ನಕಲಿ ದಾಖಲೆಗಳ ಸೃಷ್ಟಿಸುವ ಕಳ್ಳ, ನನಗೆ ಒಂದು ಹುಡುಗಿಯನ್ನು ಪ್ರೀತಿಸುವ ಅರ್ಹತೆಯಿದೆಯೇ? ಪ್ರೀತಿ? ನನಗೆ ಅವಳನ್ನು ಮಾತನಾಡಿಸುವ ಅರ್ಹತೆಯೂ ಇಲ್ಲ. ಅವಳು ಹೇಳಿದುದು ಸರಿ. ನಾನು ಯಾರು ಎಂಬುದೇ ನನಗೆ ಗೊತ್ತಿಲ್ಲ. ನಾನು ಹಂದಿಯಂತೆ, ನಾಯಿಯಂತೆ ಬಾಳುತ್ತಿರುವೆ. ನನ್ನನ್ನು ಯಾರೂ ಗೌರವಿಸುವುದಿಲ್ಲ, ಯಾರೂ ನನ್ನನ್ನು ಮಾತನಾಡಿಸುವುದಿಲ್ಲ. +ಅಂಗಡಿ ಇನ್ನೂ ಫರ್ಲಾಂಗು ದೂರ ಇರುವಾಗಲೇ ಅಂಗಡಿಯು ವಿಚಿತ್ರವಾಗಿ ಕಾಣುತ್ತಿದ್ದಂತೆ ಅನ್ನಿಸಿತು. ಗಕ್ಕನೆ ನಿಂತುಕೊಂಡ. ಅಂಗಡಿಯ ಮುಂದೆ ಯಾರನ್ನೋ ಕಾಯುತ್ತಿರುವ ಪೋಲೀಸರು. ಯಾರನ್ನೋ ಅಂದರೆ ನನ್ನನ್ನೆ? ಮೈಯೆಲ್ಲಾ ಬೆವರಿತು. ಮಿಂಚಿನಂತೆ ಹೊರಳಿ ಬೆನ್ನು ತಿರುಗಿಸಿ ಹೊರಟವ ಬಂದು ತಲುಪಿ ದಾರಿ ಕಾಣದೇ ಕುಳಿತುಕೊಂಡಿದ್ದು ಅದೇ ಹೊಳೆದಂಡೆಯ ಹಸಿಮಣ್ಣಿನ ಮೇಲೆ. ಗಿಡದ ಬುಡದಿಂದ ಹೊರಬಂದು ದಾರಿ ತಪ್ಪಿದ ಕೆಂಪಿರುವೆಯೊಂದು ಅವನ ನಿತಂಬಕ್ಕೆ ಕಚ್ಚಿಬಿಟ್ಟಿತು. ಮುಖ ಕಿವುಚಿ ನಿತಂಬದ ಮೇಲೊಂದು ಹೊಡೆದುಕೊಂಡ. ಎದುರಿಗೆ ನೋಡಿದರೆ ಮೆಲ್ಲಗೆ ನದಿ ಕಪ್ಪಿಟ್ಟು ಕಿರಿದಾಗುತ್ತ ಸಾಗಿತು, ದಂಡೆಯಲ್ಲೆಲ್ಲ ಕೊಳಚೆ ಸೇರತೊಡಗಿತು. ಕಪ್ಪು ಹಳ್ಳದ ರೂಪ ಪಡೆದುಕೊಂಡ ಹೊಳೆಯ ಮಧ್ಯ ಅಪ್ಪಗೋಳ ಸ್ಪಷ್ಟವಾದ ಬಿಂಬ, ಹಳ್ಳದ ಹರಿವಿಗೆ ಸ್ವಲ್ಪ ಕಸಿವಿಸಿಯಾದ ಬಿಂಬ ನಕ್ಕು ಕೈಚಾಚಿದಂತಾಯಿತು. ಗುರುವಿನ ಕಣ್ಣಲ್ಲಿ ನೀರಾಡಿದವು. ಮೆಲ್ಲಗೆ ಎದ್ದು ಅಪ್ಪಗೋಳ ಬಾಹುಗಳಲ್ಲಿ ಅಡಗಿಕೊಳ್ಳಲೆಂಬಂತೆ ಹಳ್ಳದ ಒಳಗೆ ಸಾಗತೊಡಗಿದ… + \ No newline at end of file diff --git a/PanjuMagazine_Data/article_1006.txt b/PanjuMagazine_Data/article_1006.txt new file mode 100644 index 0000000000000000000000000000000000000000..f0e8a3747bd74d14385c9633d2479fa8f0b76039 --- /dev/null +++ b/PanjuMagazine_Data/article_1006.txt @@ -0,0 +1,29 @@ +ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ ಮುದಲ್ ವಿಜಯ್ ಬೆಂಗಳೂರು ಅವರು ಯುವ ಸಾಹಿತಿ ಗಣಪತಿ ಹೆಗಡೆ ಅವರ ಚೊಚ್ಚಲ ಕಾದಂಬರಿ ಮೌನಸೆರೆಗೆ ಮುನ್ನುಡಿಯ ರೂಪದಲ್ಲಿ ನೀಡಿರುವ ಪ್ರಮಾಣ ಪತ್ರ. ಈ ಹಿನ್ನಲೆಯಲ್ಲಿ ಕಾದಂಬರಿ ಮೊದಲಿನಿಂದ ಕೊನೆಯವರೆಗೂ ಯಾವುದೇ ಅಡೆತಡೆಗಳು ಇಲ್ಲದೇ ಓದಿಸಿಕೊಂಡು ಹೋಗುವುದರಿಂದ ಇಲ್ಲಿ ಮುದಲ್ ವಿಜಯ್ ಅವರ ಪ್ರಮಾಣ ಪತ್ರ ಸತ್ಯವಾಗಿಸುತ್ತದೆ. +ಇತ್ತೀಚಿನ ದಿನಗಳಲ್ಲಿ ಹೊಸ ಸಂವೇದನೆಗಳ‌ ಹಾವಳಿಯಲ್ಲಿ ಕಳೆದು ಹೋಗುತ್ತಿರುವ ಪಾರಂಪರಿಕ ಮಾನವೀಯ ಸೆಲೆಗಳು, ಪತನವಾಗುತ್ತಿರುವ ಸಾಮಾಜಿಕ ನೆಲೆಗಳು, ನಶಿಸಿ ಹೋಗುತ್ತಿರುವ ಕೌಟುಂಬಿಕ ಮೌಲ್ಯಗಳ ನಡುವೆ ಇವೆಲ್ಲವನ್ನು ಪುನರ್ ಸ್ಥಾಪಿಸುವ ಪ್ರಯತ್ನವಾಗಿ ಮೌನಸೆರೆ ಮೂಡಿ ಬಂದಿದೆ. ಈ ಕಾದಂಬರಿಯ ಕಥೆ ಹಳೆಯ ಕಾಲದ ಕೃಷ್ಣಮೂರ್ತಿ ಪುರಾಣಿಕ, ಸಾಯಿ ಸುತೆ ಮುಂತಾದವರು ಬರೆದ ಕೌಟುಂಬಿಕ ಕಾದಂಬರಿಗಳನ್ನು ನೆನಪಿಸಿದರೂ ಕೌಟುಂಬಿಕ ಕಥಾವಸ್ತು ಎನ್ನುವುದು ಕಾಲಾತೀತವಾದದ್ದು. ಮತ್ತು ಪ್ರತಿಕಾಲಕ್ಕೂ ಘಟಿಸುವಂಥದ್ದು. ಕಥೆ ಕೌಟುಂಬಿಕ ವಾಗಿದ್ದರೂ ಕೂಡ ಅದಕ್ಕೆ ಒಂದು ಸಾಮಾಜಿಕ ಆಯಾಮ ತಂದು ಕೊಡುವಲ್ಲಿ, ಲವಲವಿಕೆಯಿಂದ ಕಥೆ ಹೇಳುವಲ್ಲಿ ಲೇಖಕನ ಚಿಂತನೆ ಅನುಭವ ಮತ್ತು ಕೈಚಳಕ ಕೆಲಸ ಮಾಡುತ್ತದೆ. ಈ ದೃಷ್ಟಿಯಲ್ಲಿ ಗಣಪತಿ ಹೆಗಡೆಯವರು ಗೆದ್ದಿದ್ದಾರೆ ಎಂದೇ ಹೇಳಬೇಕು. +ಮೌನಸೆರೆ ಇದೊಂದು ಬಡ ಕುಟುಂಬದ ಸುತ್ತ ಹೆಣೆಯಲಾದ ಕಥೆ, ಇದರೊಂದಿಗೆ ಇದಕ್ಕೆ ಪೂರಕವಾದ ಹಲವು ಘಟನೆಗಳು ಕಥೆಗಳು ಹಳ್ಳಕೊಳ್ಳದಂತೆ ಸೇರಿ ಒಂದು ನದಿಯಾಗಿ ಸಮುದ್ರ ಸೇರುವುದೇ ಕಾದಂಬರಿ. ಹಾಗೆಯೇ ಮೌನಸೆರೆ ಸಹ ಮುಖ್ಯವಾದ ಕಥೆಯೊಂದಿಗೆ ಹೊಂದಿಕೊಂಡು ಬೇರೆ ಬೇರೆ ಕುಟುಂಬಗಳ ಘಟನಾವಳಿಗಳ ಬೆರೆಸಿಕೊಂಡು ನದಿಯಾಗಿ ಶಾಂತ ರೀತಿಯಲ್ಲಿ ತಮ್ಮ ಗಮ್ಯ ಸೇರುವಲ್ಲಿ ಯಶಸ್ವಿಯಾಗುತ್ತದೆ. ಮೌನಸೆರೆ ಮುಖ್ಯವಾಗಿ ಒಂದು ಮಹಿಳಾ ಪ್ರಧಾನ ಕಾದಂಬರಿಯಾಗಿದ್ದು, ವೈಶಾಲಿ ಈ ಕಾದಂಬರಿಯ ಮುಖ್ಯ ಭೂಮಿಕೆ. ಭೂಮಿಕೆ ಎನ್ನುವ ಪದ ಈ ಸಂದರ್ಭದಲ್ಲಿ ನನಗೆ ಹೊಳೆಯಲೂ ಕಾರಣವೂ ಇಲ್ಲದಿಲ್ಲ. ವೈಶಾಲಿ ಪಾತ್ರ ಇಲ್ಲಿ ಭೂಮಿಯಂತೆ ಸಹನಾಮೂರ್ತಿ, ತ್ಯಾಗ ಮೂರ್ತಿಯಾಗಿ ಅನಾವರಣಗೊಂಡಿರುವುದು. ಶಂಕರಪ್ಪ ಮತ್ತು ಶಾರದ ಎನ್ನುವ ಕೂಲಿಮಾಡಿ ಬದುಕುವ ದಂಪತಿಗಳ ಹಿರಿಯ ಮಗಳು ವೈಶಾಲಿ. ಬಡತನದ ಕಾರಣ ತನ್ನ ಶಿಕ್ಷಣವನ್ನೂ ಮೊಟಕುಗೊಳಿಸಿ ಆಡಿ ಬೆಳೆಯಬೇಕಾದ ವಯಸ್ಸಿನಲ್ಲಿ ಸಂಸಾರದ ನೊಗ ಹೊರಬೇಕಾಗಿ ಬಂದು.. ಮುಂದೆ ಮುದಿ ತಂದೆ ತಾಯಿಗಳ ಆರೋಗ್ಯ ಆರೈಕೆಯ ಭಾರ, ತಮ್ಮ ವೀರೇಶ ಮತ್ತು ತಂಗಿ ವಿಶಾಲಾಕ್ಷಿಗೆ ಶಿಕ್ಷಣ ಕೊಡಿಸುವ ಸಲುವಾಗಿ ನಡೆಸುವ ತ್ಯಾಗ ಹೋರಾಟದ ಜೀವನ ಕಥೆಯ ಮುಖ್ಯ ಭಾಗವಾದರೂ ಅವಳ ಅಸೆ ಬಯಕೆ ಕನಸು ಪ್ರೇಮಭಾವನೆಗಳೆಲ್ಲ ಮೌನವಾಗಿ ಮುದುಡುವ ಸುಮಗಳಾಗಿ ಹೋಗುವ ದುರಂತ ಸಾರುವುದು ಕಥನದಲ್ಲಿ ವ್ಯಕ್ತವಾಗುವ ವಿಷಾದ ಭಾವ. ಈ ಕುಟುಂಬದ ಕಥೆಯ ಜೊತೆ ಜೊತೆಯಾಗಿ ಸಾಗುವ ಇನ್ನೊಂದು ಕಥೆ ಕಾಳೇಗೌಡ ಕುಟುಂಬದ್ದು. ವೈಶಾಲಿ ತಂದೆ ಶಂಕರಪ್ಪ ಕೂಲಿ ಕೆಲಸಕ್ಕೆ ಹೋಗುವ ಮನೆಯೇ ಕಾಳೇಗೌಡನದು. ಬಡತನದ ಕಾರಣ ವೈಶಾಲಿ ಕೂಡ ಅದೇ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಪರಿಸ್ಥಿತಿ. ಮೊದಲೇ ದರ್ಪ ದರ್ಬಾರ ಅತ್ಯಾಚಾರಗಳಿಂದ ಮೆರೆದ ಗೌಡಕಿ ಮನೆತನ. ಕಾಳೇಗೌಡ ಮತ್ತವನ ಮಗ ಸೋಮೇಗೌಡ ಎಂದರೇನೇ ಜನ ಬೆಚ್ಚಿ ಬೀಳುವಂತಹ ಸಮಯದಲ್ಲಿ ವೈಶಾಲಿ ಅಲ್ಲಿ ಮನೆ ಗೆಲಸಕ್ಕೆ ಸೇರಿಕೊಳ್ಳುವುದು ವೈಶಾಲಿಗೆ ಮುಂದೇನು ಅನಾಹುತ ಕಾದಿದೆಯೋ ಎನ್ನುವ ಆತಂಕ ಓದುಗರಲ್ಲಿ ಮೂಡುವುದು ಸಹಜ. ಆದರೆ ಕಾದಂಬರಿಕಾರ ಇದಕ್ಕೊಂದು ಹೊಸ ತಿರುವು ಕೊಡುವಲ್ಲಿ ಗೆಲ್ಲುತ್ತಾರೆ. “ಯೌವನ ತುಂಬಿದ ಸುರಹೊನ್ನೆಯ ಅವಳ ದೇಹಸಿರಿ, ಚಂದ್ರನ ಬೆಳದಿಂಗಳನ್ನೇ ಹೊದ್ದುಕೊಂಡು ನಿಂತ ಮೈಕಾಂತಿ, ನಕ್ಷತ್ರದಂತೆ ಅರಳಿನಿಂತ ಕಂಗಳು, ಒಪ್ಪ ಓರಣವಾಗಿ ಹೆರಳುಗಳನ್ನು ಸಿಂಗರಿಸಿಕೊಂಡ ಮುಂಗುರುಳಿನ ನರ್ತನ ಸಂಪಿಗೆ ಎಸಳಂತಿರುವ ನಾಸಿಕ, ಕೆಂದುಟಿಯಲ್ಲಿ ಅರಳಿದ ಮಲ್ಲಿಗೆಯಂತಹ ಶುಭ್ರವಾದ ಹೂನಗೆ, ದುಂಡನೆಯ ಮುಖದಲ್ಲಿ ಸಾವಿರ ಸಾವಿರ ನೈದಿಲೆಯ ಸೊಬಗಿನ ಅನಾವರಣ….” +ಮೂಲತಃ ಪ್ರಣಯ ಕವಿಯೂ ಆಗಿರುವ ಕಾದಂಬರಿಕಾರರು ಕವಿಯಾಗಿ ಕಥಾನಾಯಕಿಯ ಸ್ವರ್ಗೀಯ ಸೌಂದರ್ಯವನ್ನು ಬಣ್ಣಿಸುವುದು ಹೀಗೆ. ಹೀಗೆ ಕವಿಯಾಗಿ ವೈಶಾಲಿಯ ಸೌಂದರ್ಯವನ್ನು ವರ್ಣಿಸುವ ಕಾದಂಬರಿಕಾರ ಇಡೀ ಕಾದಂಬರಿಯನ್ನು ಕಾವ್ಯಮಯವಾಗಿ ಕಟ್ಟಿರುವುದು ಈ ಕಾದಂಬರಿಯ ಹೆಗ್ಗಳಿಕೆ ಎಂದೇ ಹೇಳಬಹುದು. ಒಂದು ಹೆಣ್ಣನ್ನು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಹಲವಾರು ರೂಪಗಳಲ್ಲಿ ಅವಳ ಪ್ರೇಮ ತ್ಯಾಗ ಬಲಿದಾನಗಳನ್ನು ಈ ಕಾದಂಬರಿ ಅನಾವರಣಗೊಳಿಸಿದೆ. ಬದುಕಲ್ಲಿ ಅದೆಷ್ಟೋ ಹೆಣ್ಣುಗಳೊಂದಿಗೆ ಆಟವಾಡಿ ಬಿಸಾಕಿದ ಸೋಮೇಗೌಡನ ಮನಸ್ಸು ಇಂದು ಮನ್ವಂತರದ ಘಟ್ಟದಲ್ಲಿರುವುದು ಕಾದಂಬರಿಕಾರ ಗುರುತಿಸುವ ಮೂಲಕ ವೈಶಾಲಿಯ ಅಲೌಕಿಕ ಸೌಂದರ್ಯದ ಅನುಭೂತಿ ಮತ್ತು ಅದರ ಪರಿಣಾಮವಾಗಿ ಸೋಮೇಗೌಡನ ಸ್ವಭಾದಲ್ಲಿನ ಬದಲಾವಣೆಯ ಮುನ್ಸೂಚನೆ ನೀಡುತ್ತಾರೆ. +” ವೈಶಾಲಿ ಕಂಡಾಗಿಂದ ಸೋಮೇಗೌಡನ ಮನಸೇಕೋ ಇಂತಹ ಕ್ಷುಲಕ ವಿಚಾರದಿಂದ ಸ್ವಲ್ಪ ಹಿಂದೆ ಸರಿದಂತೆ ಭಾಸವಾಗುತ್ತಿತ್ತು. ಅವನಂತರಂಗವೇಕೋ ನಿಷ್ಕಲ್ಮಶ ಭಾವದ ಕುದುರೆಯೇರಿ ಸಾಗುತ್ತಿತ್ತು ಮನಸೇಕೋ ಹೇಳದೆ ಕೇಳದೆ ವೈಶಾಲಿಯತ್ತ ವಾಲುತ್ತಿತ್ತು. ಅನಿರುದ್ಧ ಸಮಾಜದಲ್ಲಿ ಎಲ್ಲರಂತೆ ತಾನೂ ಸಂಭಾವಿತ ವ್ಯಕ್ತಿಯಾಗಿ ಜೀವನದಲ್ಲಿ ಕ್ರಿಯಾಶೀಲನಾಗಬೇಕು, ಪ್ರೀತಿ ತುಂಬಿದ ಕಂಗಳಾದಾಗ, ಈ ಲೋಕದ ಸೃಷ್ಟಿಯೂ ರಮ್ಯವಾಗಿಯೇ ಕಾಣಬಹುದೇನೋ, ತಾನ್ಯಾಕೆ ಎಲ್ಲರಿಂದಲೂ ವ್ಯತಿರಿಕ್ತವಾದ ಭಾವನೆ ಹೊಂದಿ ಬಾಳಬೇಕು,? ತನಗೊಬ್ಬನಿಗೆ ಹೀಗೇಕೆ, ?ತಾನು ಅರಿಸಿಕೊಂಡ ಈ ಜೀವನ ಕ್ಷಣಿಕ ಎನಿಸಿದರೂ ಶಾಶ್ವತವಾಗಿ ಇಲ್ಲಿಯೇ ಇರುವಂತಹ ದುರಾಸೆ ಏಕೆ,? ಇವೇ ಇತ್ಯಾದಿ ಪ್ರಶ್ನೆಗಳ ಸುರಿಮಳೆ ಸುರಿಯತ್ತಲೇ ಇತ್ತು… “ +“ಸೋಮೇಗೌಡನಿಗೆ. ಅದೆಷ್ಟೋ ಹೆಣ್ಣುಗಳ ದೇಹ ರುಚಿಯನ್ನು ಕಂಡು ಅನುಭವವಿದ್ದರೂ ವೈಶಾಲಿಯ ಕಂಡಾಗಿಂದ ಅನುಪಮ ಸೌಂದರ್ಯದ ಜೊತೆಗೆ ಅನುರಾಗದ ಅನುರುಕ್ತದ ಸೆಲೆಯೊಂದು ಮನದಲ್ಲಿ ಸುಳಿದಾಡಿತ್ತು. ಎದೆಯ ತುಂಬೆಲ್ಲ ಅವಳ ಚೆಲುವಿನ ಲತೆ ಹಬ್ಬಿತ್ತು. ಅವಳ ಚೆಲುವೊಂದೇ ಅಲ್ಲದೆ ಅವಳ ಮನೆಯಲ್ಲಿನ ಪರಿಸ್ಥಿತಿ, ಅವಳ ಅಂತರಂಗದ ಬೇಗೆ, ಅವಳ ಕನಸುಗಳಿಗೆ ಆಸರೆಯ ಮರ ತಾನೇಕೆ ಆಗಬಾರದು ಎಂಬುದರ ಪರಿವರ್ತನೆ ಅವನಲ್ಲಿ ಬೆಳದಿಂಗಳ ತಂಪು ಪಸರಿಸಿತ್ತು. ನೊಂದ ಮನಸಿಗೆ ತಂಪಾದ ಶಶಿ ತಾನೇಕೆ ಆಗಬಾರದು ಎನ್ನುವ ಸೋಮೇಗೌಡನ ಬದಲಾವಣೆಯ ಯೋಚನೆ ಮೌನಸೆರೆಯಾಗಿ ಒಂದು ಅದೃಶ್ಯ ಜೀವ ತಂತುವಾಗಿ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ.ವೈಶಾಲಿಯಲ್ಲಿ ಅನುರುಕ್ತನಾಗುವ ಸೋಮೇಗೌಡ ಪ್ರೇಮ ನಿವೇದನೆಯ ಅವಕಾಶಕ್ಕಾಗಿ ಕಾಯುವಾಗಲೇ ಅವನ ಪ್ರೇಮದ ಅನುಭೂತಿಯ ಅನುಭವ ಹೊಂದುತ್ತಾಳೆ. ವೈಶಾಲಿ ಮತ್ತು ಅವನ ಪ್ರೇಮ ನಿವೇದನೆಗಾಗಿ ಮೌನವಾಗಿಯೇ ಹಾತೊರೆಯುತ್ತಾಳೆ. +ವೈಶಾಲಿ ಸೋಮೆಗೌಡ ಇಬ್ಬರೂ ಮೌನದಲಿ ಬಂಧಿಯಾಗುತ್ತಾರೆ. ಈ ಮೌನ ಮುರಿದು ಪ್ರೇಮ ನಿವೇದಿಸುವ ಸಂದರ್ಭಕ್ಕಾಗಿ ಇಬ್ಬರೂ ಕಾಯುತ್ತಿರುತ್ತಾರೆ. ಮತ್ತು ಇಂತಹ ಸಂದರ್ಭ ಅವರ ಹತ್ತಿರ ಹತ್ತಿರ ಬರುತ್ತಲೇ ಕೈಜಾರಿ ಹೋಗುವುದು ಮತ್ತು ಸೋಮೆಗೌಡ ತನ್ನ ಮನದಿಚ್ಛೆಯನ್ನು ವೈಶಾಲಿ ಮುಂದೆ ನಿವೇದಿಸಿ ಅವರ ಪ್ರೇಮ ಸಂಗಮವಾಗುವುದೇ ಎನ್ನುವ ಕೌತುಕದ ಪ್ರಶ್ನೆ ಕಾದಂಬರಿ ಕೊನೆಯವರೆಗೂ ಕಾಪಾಡಿಕೊಂಡು ಬಂದ ಒಂದು ಪ್ರೇಮದೆಳೆ ಇಡೀ ಕಾದಂಬರಿ ಮುಗಿಯವವರೆಗೂ ಓದಿಸಿಕೊಂಡು ಹೋಗಲು ಸಹಕರಿಸುತ್ತದೆ. ಸೋಮೇಗೌಡ ಕೆಟ್ಟವೆನೆಂದು ಗೊತ್ತಿದ್ದರೂ ಅವನ ಬಗ್ಗೆ ಯೋಚಿಸುವ ವೈಶಾಲಿ – “ಮನುಷ್ಯ ಎಲ್ಲಾ ಸಮಯದಲ್ಲೂ ಕೆಟ್ಟವನಾಗಲಾರ.. ಎಲ್ಲ ಸಮಯವೂ ಕೆಟ್ಟತನಕ್ಕೆ ಸ್ಪಂದನೆ ನೀಡುವುದಿಲ್ಲ. ಪ್ರತಿ ಮನುಷ್ಯನಲ್ಲಿ ಒಳ್ಳೆಯತನ ಕೆಟ್ಟತನ ಎರಡೂ ನೆಲೆಸಿರುತ್ತವೆ…. ಸಹವಾಸ ದೋಷದಿಂದ ಮನುಷ್ಯ ಒಳ್ಳೆಯತನ ಕೆಟ್ಟತನದ ಪಯಣಿಗನಾಗುತ್ತಾನೆ. ಈ ನಡುವೆ ಒಳಿತನ್ನು ಬಯಸುವ ಮನಸ್ಸು ಮನುಷ್ಯನನ್ನು ಬದಲಾಯಿಸುತ್ತದೆ.. ಎನ್ನುವ ನಿರ್ಧಾರ ಕಾದಂಬರಿಕಾರರು ಸೋಮೆಗೌಡನ ಮುಖಾಂತರ ವ್ಯಕ್ತಪಡಿಸುತ್ತಾರೆ. ಈ ಬದಲಾವಣೆ ಪ್ರಕ್ರಿಯೆಯೇ ಸೋಮೆಗೌಡನಲ್ಲಿ ಆಸಕ್ತಳಾಗಳು ಕಾರಣ ವಾಗುತ್ತದೆ. +ಕೊನೆಗಾದರೂ ಸೋಮೇಗೌಡ ತನ್ನ ಪ್ರೇಮ ನಿವೇದಿಸಿದನೇ? ವೈಶಾಲಿ ಮತ್ತು ಸೋಮೇಗೌಡ ಒಂದಾದರೆ? ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇಡೀ ಕಾದಂಬರಿಯನ್ನು ಓದಲೇಬೇಕು. ತನ್ನ ಕುಟುಂಬಕ್ಕಾಗಿ ಇಡೀ ತನ್ನ ಜೀವನವನ್ನೆ ತ್ಯಾಗ ಮಾಡಿದ ವೈಶಾಲಿಯ ಜೀವನ ಕೊನೆಗೆ ಏನಾಯ್ತು.,? ಪುರುಷ ಪ್ರಧಾನ ಸಮಾಜ ಅವಳನ್ನು ಹೇಗೆ ನಡೆಸಿಕೊಂಡಿತು..? ಕಾದಂಬರಿ ಕಥಾವಸ್ತು ಸ್ತ್ರೀ ಪ್ರಧಾನವೇ ಆದರೂ ವೈಶಾಲಿಯ ತಂದೆ ಶಂಕರಪ್ಪ, ಸೋಮೇಗೌಡ, ಮೈದುನ ಮನೋಜ, ದೂರದ ಸಂಬಂಧಿ ಗೋಪಾಲ.. ನೆರೆಯ ಅಂಕಲ್..ಮತ್ತಿತ್ತರು ಕೆಟ್ಟ ಪುರುಷ ಸಂತತಿಯ ಸಮಾಜದ ನಡುವೆ ಉಪಕಾರಿಗಳಾಗಿ ಮಾನವಂತರಾಗಿ ಭರವಸೆ ಮೂಡಿಸುತ್ತಾರೆ. ಮತ್ತು ಕಥಾನಾಯಕಿಗೆ ಪೂರಕವಾಗಿ ಸಹಾಯಕರಾಗಿ ಪೋಷಕರಾಗಿ ಬರುವಂತೆ ಮಾಡುತ್ತಾರೆ. ಇವುಗಳ ನಡುವೆ ಶ್ರೀಮಂತ ಹುಡುಗನನ್ನ ಪ್ರೀತಿಸಿ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ವಿಶಾಲಾಕ್ಷಿ, ತನಗಾಗಿ ಜೀವ ತೆಯ್ದು ಬದುಕು ಕಟ್ಟಿಕೊಟ್ಟ ಮನೆಯನ್ನು ಮರೆತು ವಿದೇಶದಲ್ಲಿ ಜೀವನ ಆರಂಭಿಸುವ ತಮ್ಮ ವೀರೇಶ.., ಸೋಮೆಗೌಡನ ಪತ್ನಿ ಯಮುನಾ, ಅಶೋಕ ಮುಂತಾದ ಪಾತ್ರಗಳು ತಮ್ಮ ವೈಯಕ್ತಿಕ ಸುಖಕ್ಕಾಗಿ ಏನು ಬೇಕಾದರೂ ಮಾಡಬಹುದು ಎನ್ನುವುದು ನಿರೂಪಿಸುತ್ತವೆ. +ಮೊದಲೇ ಹೇಳಿದಂತೆ ಇಡೀ ಕತೆ ಸ್ತ್ರೀ ಪ್ರಧಾನವಾಗಿದ್ದು ಕಥಾನಾಯಕಿಯ ಪ್ರೇಮ ತ್ಯಾಗದ ಸುತ್ತ ಹೆಣೆಯಲ್ಪಟ್ಟಿದ್ದು. ಪುರುಷ ಸಮಾಜದ ಇನ್ನೊಂದು ಕರಾಳ ಮುಖ ಅನಾವರಣಗೊಳಿಸುತ್ತಾರೆ. ಅವಳ ಜೀವನದಲ್ಲಿ ಪ್ರವೇಶ ಮಾಡಿದ ಇನ್ನೊಬ್ಬ ಗಂಡಸು ಅಶೋಕನ ಮುಖಾಂತರ ಮತ್ತು ಇತ್ತ ಸೋಮೆಗೌಡನ ಹೆಂಡ್ತಿಯಾಗಿ ಬರುವ ಚಾರಿತ್ರ ಹೀನ ಯಮುನಾಳಂಥವರು ತಮ್ಮ ಸ್ವಾರ್ಥ ಸಾಧನೆಗೊಸ್ಕರ ತಮ್ಮ ಕೆಟ್ಟ ಗುಣಗಳಿಂದ ಜೀವನವನ್ನು ಹೇಗೆ ನರಕಾಗಿಸುತ್ತಾರೆ ಎನ್ನುವುದು ಲೇಖಕರ ಅಂತರಂಗದ ಪ್ರಶ್ನೆ. +ಇತ್ತ ಸೋಮೆಗೌಡ ಅತ್ತ ವೈಶಾಲಿ ಸುಳ್ಳು ಸಂಬಂಧಗಳಲ್ಲಿ ಸಿಲುಕಿ ಜೀವನ ದುರಂತ ಮಾಡಿಕೊಳ್ಳುವುದು ನಮ್ಮ ಕಣ್ಣು ಮುಂದೆ ಕಟ್ಟುವಂತೆ ಹೃದಯಕ್ಕೆ ತಟ್ಟುವಂತೆ ಬರೆಯುತ್ತಾರೆ. ಈ ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟು ದೂರಾಗುವ ಸತಿಪತಿಗಳ ನಡುವೆ ವೈಶಾಲಿ ಮತ್ತು ಸೋಮೇಗೌಡ ಮತ್ತೊಮ್ಮೆ ಒಂದಾಗುವ ಸಾಧ್ಯತೆಯನ್ನು ಹುಟ್ಟು ಹಾಕುತ್ತಾರೆ. ಈಗಲಾದರೂ ಇವರು ಒಂದಾಗಬಹುದಾ ಎನ್ನುವ ಕುತೂಹಲ ಓದುಗರಲ್ಲಿ ಮತ್ತೆ ಚಿಗುರುವಂತೆ ಮಾಡುತ್ತಾರೆ. ಕವಿ ಮೂಲತಃ ಹೆಣ್ಣು ಹೃದಯಿಯಾಗಿರುತ್ತಾನೆ ಎನ್ನುವುದು ಈ ಕಾದಂಬರಿ ಓದಿದಾಗ ಅರ್ಥವಾಗುವ ಮಾತು. ಹೆಂಗರುಳಿನ ಲೇಖಕ ಗಣಪತಿ ಹೆಗಡೆಯವರು ಈ ವೈಶಾಲಿ ಎನ್ನುವ ಹೆಣ್ಣಿನ ಮುಖಾಂತರ ಹೆಣ್ಣು ಕ್ಷಮಯಾ ಧರಿತ್ರಿ ಸಹನಾ ಮೂರ್ತಿ, ತ್ಯಾಗ ಜೀವಿ, ಅವಳ ಹಿರಿಮೆ ಗರಿಮೆಯನ್ನು ಕಾದಂಬರಿಯುದ್ದಕ್ಕೂ ಸ್ತ್ರೀಪರ ಕಾಳಜಿಯಾಗಿ ಒಡಮೂಡಿಸಿರುವುದು ಉದಾಹರಣೆಯಾಗಿ ಈ ಕೆಳಗಿನ ವ್ಯಾಖ್ಯಾನಗಳು ನೋಡಬಹುದು. ಈ ವ್ಯಾಖ್ಯಾನಗಳು. +೧) +ಪಟ್ಟ ಈ ಕ್ರೂರ ಸಮಾಜದಲ್ಲಿ ಹೆಣ್ಣಿನ ಅಂತರಂಗದ ಅಳುವಿನಲ್ಲಿ ಪಾಲುದಾರರೇ ಇರುವುದಿಲ್ಲ. ಅವಳೊಂದು ವೈಭೋಗದ ವಸ್ತುವಾಗಿದ್ದು, ಈ ಸಮಾಜದ ದುರಂತವೇ ಅಥವಾ ಒಗ್ಗಟ್ಟಿಲ್ಲದೆ, ತನ್ನ ಮನಸ್ಥಿತಿಯ ಚಂಚಲತೆಯನ್ನು ಉಪಯೋಗಿಸಿಕೊಂಡ ಗಂಡು, ಅವಳನ್ನು ತನ್ನ ಉಪಯೋಗಕ್ಕೆ ಉಪಯೋಗಿಸಿಕೊಂಡನೆ,? ಅಬಲತೆಯ ಪಟ್ಟ ಕಟ್ಟಿ ತಾನು ಬಲಿಷ್ಠ ಎಂಬ ಅಹಂಕಾರದ ಪ್ರಭಾವವೇ, ?ಒಂದೆಲ್ಲ, ಎರಡಲ್ಲ ಎಲ್ಲಿಯವರೆಗೆ ಹೆಣ್ಣು ಹೆಣ್ಣಿಗೆ ಆಸರೆಯಾಗಿ ನಿಲ್ಲಲು ಶುರು ಮಾಡುವುದಿಲ್ಲವೋ, ಅಲ್ಲಿಯವರೆಗೆ ಹೆಣ್ಣು ಅಬಲೆಯೇ. ಈ ಮಾತು ಸ್ವಾತಂತ್ರ್ಯಾ ಪೂರ್ವದ್ದು ಅಂತ ಅನ್ನಿಸಬಹುದು, ಆದರೆ ಇಂದಿನ ಇಂತಹ ಮುಂದುವರೆದ ಸಮಾಜ ಆಧುನಿಕ ವಿಚಾರಗಳ ಹೊತ್ತ ದೈನಂದಿನ ಬದುಕಲ್ಲೂ ಕಾಣುತ್ತಿರುವ ವೈಪರೀತ್ಯಗಳ ಹಾಗೂ ಅಸಂಬದ್ಧ ಘಟನೆಗಳನ್ನು ‘ಕಾಣುತ್ತೇವೆ. ಹೆಣ್ಣಿಗೆ ಎರಡನೇ ಮದುವೆಗೆ ಅವಕಾಶವಿಲ್ಲ. ಒಮ್ಮೆ ಅವಕಾಶವಿದ್ದರೂ ಅದೊಂದು ರೀತಿಯಲ್ಲಿ ಅಸಂಬದ್ಧ ಸಂಪ್ರದಾಯ. ಸಮಾಜದ ಕಟ್ಟಳೆಯನ್ನು ಮೀರಿದವಳು ಎನ್ನಿಸಿಕೊಳ್ಳುವ ದುರಂತ. ಆದರೆ ಅದೇ ಗಂಡು ಅರವತ್ತು ವಯೋವೃದ್ಧನಾದರೂ ಇಪ್ಪತ್ತು ವರ್ಷದ ಕನೈಯನ್ನು ವಿವಾಹವಾದಾಗ ಅವನ ರಸಿಕತೆಯನ್ನು ಈ ಸಮಾಜ ಎತ್ತಿ ಹಿಡಿಯುತ್ತದೆ ಈ ಜನತೆ. ಗಂಡ ಸತ್ತ ಮೇಲೆ ಅಮಂಗಲೆಯವಳು, ಅವಳಿಗೆ ಮಂಗಳ ಕಾರ್ಯಗಳಿಗೆ ಅವಕಾಶವಿಲ್ಲ. ಅದು ಕೂಡಾ ಇನ್ನೊಂದು ಹೆಣ್ಣೆ ಸಮರ್ಥಿಸಿಕೊಂಡಿದ್ದು, ಗಂಡ ಹೆಂಡತಿ ಸತ್ತ ಮೇಲೆ ಇನ್ನೊಂದು ಮದುವೆಗೆ ಅರ್ಹನೇ! +ಇಂತಹ ತಾರತಮ್ಯದ ಸಂಬಂಧಗಳ ಅಥವಾ ಪದ್ಧತಿಗಳ ನಡುವೆ ಈ ಸಮಾಜದ ಜನ ಬದುಕುತ್ತಿರುವಾಗ ಇಲ್ಲಿ ಗಂಡು ಪ್ರಧಾನ ಅಥವಾ ಪುರುಷ ಪ್ರಧಾನ್ಯತೆ ಎದ್ದು ಕಾಣುತ್ತಿರುವುದು ವಾಸ್ತವಿಕತೆ. ಇಂತಹ ಅಗೋಚರ ಸಂಬಂಧವೆಲ್ಲವನ್ನು ದಾಟಿ ವೈಶಾಲಿ ಸಾಗಬೇಕಿರುವ ದಾರಿ ಬಹಳ ಉದ್ದವಾಗಿದೆ. +೨) +ಹೌದು, ಸಂಸಾರದ ಕಣ್ಣು ಹೆಣ್ಣು, ಅವಳು ಅವನಿಯ ಮನಸಿಗಳು, ಅವರ ಮನಸೊಂದು ಸೂಕ್ಷ್ಮವಾದ ದರ್ಪಣ, ಒಂದು ಚೂರು ಕೈ ತಪ್ಪಿದರೂ ದರ್ಪಣ ಮಾತ್ರ ಚೂರು-ಚೂರು, ಬಾಳಲ್ಲಿ ಕಾಣುವ ಕನಸುಗಳು ಹರಿದು ಹೋಗಿ ದಿಕ್ಕಿಲ್ಲದೆ ಅನಾಥವಾಗಿ ಬಿಡುತ್ತವೆ. ಸಪ್ತಪದಿ ತುಳಿದು ಬರುವ ಹೆಣ್ಣು ಹೊಸ್ತಿಲಿನ ಲಕ್ಷ್ಮಿಯಾಗಿ ಮನೆಯ ಸೇರುತ್ತಾಳೆ. ಹೆತ್ತು ಹೊತ್ತವರನ್ನು ಬಿಟ್ಟು ಅಪರಿಚಿತಳಾಗಿ ಮಾಯಾಂಗನೆ. ತನ್ನ ಕಣ್ಣಿನಿಂದಲೇ ಎಲ್ಲವನ್ನೂ ಮಾತಾಡುವ ಕಲೆ ಅವಳಲ್ಲಿದೆ. ಎಂಥವರನ್ನೂ ಮೋಡಿ ಮಾಡುವ ಚಾಕಚಕ್ಯತೆ ಅವಳ ಅಂತರತದಲ್ಲಿದೆ. ಹಾಗಿರುವ ಹೆಣ್ಣು, ಗಂಡ, ಅತ್ತೆ, ಮಾವ, ಮೈದುನ, ನಾದಿನಿ ಹೀಗೇ ಹೊಸದಾದ ಸಂಬಂಧದಲ್ಲಿ ಕಾಣುವ, ಹೊಂದಿಕೊಂಡು ಬಾಳುವ ಮತ್ತು ಅದರಲ್ಲಿ ತನ್ನ ನೋವು ನಲಿವುಗಳನ್ನು ಗಂಡ ಎನ್ನುವ ಅಪರಿಚಿತನೊಂದಿಗೆ ನಂಬಿಕೆಯಿಟ್ಟು ಸಾಗುವ, ಅವಳು ನಿಜಕ್ಕೂ ಅದ್ಭುತ ಮನಸಿಗಳು. ತನ್ನ ಆಸೆ ಆಕಾಂಕ್ಷೆಗಳನ್ನು ತನ್ನಲ್ಲಿಯೇ ಅದುಮಿಟ್ಟು ನಗುವಿನ ಮುಖವಾಡದೊಂದಿಗೆ ದಿನಗಳನ್ನು ಕಳೆಯುವ ನಿಸ್ವಾರ್ಥಿ ಹೃದಯವಂತಳು. +೩) +ಹುಟ್ಟಿದಂದಿನಿಂದಲೇ ಹೆಣ್ಣಿನ ಜನ್ಮಕ್ಕೊಂದು ನಾಚಿಕೆ, ಮುಜುಗರ, ತಾಳ್ಮೆ, ಬಹುಬೇಗನೇ ಉಂಟಾಗುತ್ತವೆ. ಹೊಂದಾಣಿಕೆ, ಅಪ್ಯಾಯತೆ, ಆಪ್ತತೆ, ಮೈಗೂಡಿದಂತಹ ಅಂಶಗಳು, ಅವಳಲ್ಲಿ ಭಾವನಾತ್ಮಕ ಭಾವುಕ ಪರಿಣಾಮಗಳು ಸಂವೇದನಾಶೀಲತೆ ಅತೀ ವೇಗದಲ್ಲಿ ಉಂಟಾಗುವ ಪ್ರಕ್ರಿಯೆ ಅವಳ ಅಂತಃಕರಣದಲ್ಲಿ ಅರಿವಾಗದೆ ಪ್ರೇಮ ಉಂಟಾಗುತ್ತದೆ. ಪ್ರೀತಿ ಉಂಟಾಗುತ್ತದೆ. ಅದು ಬಹುಕಾಲ ಉಳಿದು ಬಿಡುತ್ತದೆ. ಅರಳಿದ ಭಾವನೆಗಳಿಗೆ ಪುಷ್ಟಿ ಕೊಡುವ ಅವಳ ಮನಸ್ಸು ನಿಜಕ್ಕೂ ಕೋಮಲ, ಮೌನದಲ್ಲಿಯ ಭಾವನೆ ಕೆಲವೊಮ್ಮೆ ಮೌನದಲ್ಲಿಯೇ ಕರಗಿ ಹೋಗುವುದೂ ಉಂಟು. ಹೃದಯದಲ್ಲಿ ಬುಗಿಲೆದ್ದ ಆತಂಕಗಳಿಗೆ ಅವಳೇ ಪರಿಹಾರವನ್ನು ಕಂಡುಕೊಳ್ಳುತ್ತಾಳೆ. ತನ್ನ ನೊಂದ ಮನಸ್ಸಿಗೆ ತಾನೇ ಸಾಂತ್ವನ ಹೇಳಿಕೊಳ್ಳುತ್ತಾಳೆ. ಬದುಕು ಡೋಲಾಯಮಾನವಾದರೂ ಅಳುಕದೆ, ಅಂಜದೆ ಎದುರಿಸುವ ಎದೆಗಾರಿಕೆ ಅವಳು ಶತಾಯಗತವಾಗಿ ರೂಢಿಸಿಕೊಳ್ಳುತ್ತಾಳೆ. ತನ್ನ ಸಹಕುಟುಂಬದಲ್ಲಿ ಅಮಾವಾಸ್ಯೆ ಬಂದು ಕವಿದರೂ, ಹುಣ್ಣಿಮೆಯ ಸಂಭ್ರನ ಕಾಣುವ ಅವಳ ಮನಸಿಗೆ ಎಂತಹವನೂ ತಲೆ ಬಾಗಲೇಬೇಕು. ಅವಳ ಧೀರತನ, ಅಂತರಂಗದ ಸೂಕ್ಷ್ಮತೆ, ಹೃದಯವಂತಿಕೆ, ಸಹನೆ ಹೀಗೆ ಪ್ರತಿ ಅಂಶಗಳೂ ಇಲ್ಲಿ ಅಮೂಲಾಗ್ರವಾಗಿ ಜೊತೆಯಾಗುತ್ತವೆ. ಎದೆಯ ಸರೋವರದಲ್ಲಿ ಅವಳ ನೆನಪಿನ ತಾವರೆಗಳು ಅದೆಷ್ಟೋ ಹುಟ್ಟಿ ಬಾಡಿ ಹೋಗುತ್ತವೆಯೋ ಕಾಣುವರಾರು,? ಕನಸುಗಳ ನಡುವೆ ಏಕಾಂತದ ರಾತ್ರಿಗಳೆಷ್ಟೋ, ಅರಿತವರಾರು,? ಕಣ್ಣು ಮುಚ್ಚಿದರೂ ನಿದ್ದೆಯೇ ಬಾರದೆ ಹಾಸಿಗೆಯಲ್ಲಿ ಹೊರಳಾಡುವ ಕ್ಷಣಗಳೆಷ್ಟೋ, ಬಲ್ಲವರಾರು,? ಹೀಗೆ ಅನೇಕ ಕಣ್ಣೀರಿನ ಹನಿಗಳು ಜಾರಿ ಹೋದರೂ ನೋಡದೇ ಹೋದವರೆಷ್ಟೋ,! ಅರಿವಾಗುವುದರಲ್ಲಿಯೇ ಅವಳ ಬದುಕೇ ನಶಿಸಿ ಹೋಗುವಷ್ಟು ಜೀವನ ಸವೆದು ಹೋಗುತ್ತದೆ. +೪) +ಹೆಣ್ಣು ಹಾಗೆಯೇ. ಅವಳ ಅಂತರಂಗವೇ ಸೂಕ್ಷ್ಮತಂತು, ಸಹಿಸಿಕೊಳ್ಳುವ ಶಕ್ತಿ ಬಹಳ ಕಡಿಮೆ, ಹಾಗಂತ ತಾಳ್ಮೆಯಿಲ್ಲ ಅಂತ ಅರ್ಥವಲ್ಲ. ಇಂತಹ ಸ್ಥಿತಿಯಲ್ಲಿ ಅವಳ ಕಣ್ಣೀರುಗಳೇ ಅವಳಿಗೆ ಪೂರ್ತಿ ಸ್ವಾಂತನಗೈಯ್ಯುತ್ತವೆ. +೫) +ಬದುಕೊಂದು ಹೂವಂತೆ. ಬೇರು ಹಸಿಯಾಗಿದ್ದಾಗ ಗಿಡದ ತುಂಬೆಲ್ಲಾ ಹಸಿರಿನ ತೋರಣ ಹೂವಿನ ಮಾಲೆ, ಆದರೆ ಗಿಡದ ಬೇರು ಸಾವಿನ ದಡದಲ್ಲಿ ನಿಂತು ಚೀರುವಾಗ ಅರಳಿದ ಹೂಗಳು ಬುಡಸಮೇತ ಕೊಂಡಿ ಕಳಚಿಕೊಳ್ಳುತ್ತವೆ. ಅರಳಬೇಕಿದ್ದ ಮೊಗ್ಗುಗಳು ಅಲ್ಲಿಯೇ ಕಮರಿ ಪರಿಮಳದಿಂದ ವಂಚಿತವಾಗುತ್ತವೆ. ನಗಬೇಕಿರುವ ಹೂ ತುಟಿಗಳು ನಗಲಾಗದೇ ಬಿರುಕು ಬಿಟ್ಟಾಗ ಬದುಕು ನೀರಸ ಅನ್ನಿಸಿ ಬಿಡುತ್ತದೆ. ಚೆಲುವಿನ ವನವೆಲ್ಲಾ ಬೋಳಾಗಿ ಸ್ಮಶಾನದ ಗೋರಿಯಂತೆ ಕಾಣುತ್ತವೆ ಆದರೂ ಚಿಕ್ಕ ತಂಪಿನ ಆಸರೆಗಾಗಿ ಮಣ್ಣೊಳಗೆ ಇಳಿಬಿಡುವ ಬೇರು ಎಲ್ಲಾದರೂ ಹನಿ ತಂಪನ್ನು ಹೀರಿ ತನ್ನಿಡೀ ಕುಟುಂಬದ ಪೋಷಣೆಗೆ ದಾರಿ ದೀಪವಾಗುತ್ತದೆ. +೫) +ಹೆಣ್ಣು ಕಾಲು ಜಾರಿದರೆ ‘ಜಾರಿಣಿ’ ಎಂಬ ಪಟ್ಟ ಅದೇ ಗಂಡು ಜಾರಿದರೆ ‘ರಸಿಕ’ ಎಂಬ ಬಿರುದು, ಪುರುಷ, ಪ್ರಧಾನವಾದ ಸಮಾಜದಲ್ಲಿ ಹೆಣ್ಣು ಸ್ಪರ್ಧೆಗಿಳಿದು ಎಲ್ಲ ರಂಗದಲ್ಲಿ ಗೆಲ್ಲುತ್ತಿದ್ದರೂ ಅದನ್ನು ಹೆಣ್ಣೇ ಒಪ್ಪದೆ ಇರುವುದು ಕೂಡಾ ಅವಳ ದುರಂತವೇ.! ಸಂಬಂಧಗಳ ಹುಟ್ಟು ಹಾಕುವುದು ಹೆಣ್ಣು, ಬೆಳೆಸುವುದು ಹೆಣ್ಣು, ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಹೊರುವವಳು ಹೆಣ್ಣು, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ಹೆಂಡತಿಯಾಗಿ, ತಾಯಿಯಾಗಿ ಬಾಂಧವ್ಯವ ಕಟ್ಟುವವಳು ಹೆಣ್ಣು. ಆದರೂ ಅವಳ ಕನಸುಗಳು ಮಾತ್ರ ಇರುಳು ಕಾಣದೆ ಕನಸಾಗಿಯೇ ಉಳಿದುಬಿಡುತ್ತವೆ. ಅವಳೊಂದು ಭೋಗದ ವಸ್ತುವಾಗಿ, ದಾಸಿಯಾಗಿ ಬದುಕುವ ದಾರುಣತೆ…. +೬) +ಪತಿಯೇ ಪರಮದೈವ ಎಂದು ತಿಳಿಯುವ ಹೆಣ್ಣು ತಾಯಿಯಾಗಿ, ಸತಿಯಾಗಿ ಗಂಡಿನ ಸರ್ವ ಆಸರೆಯ ಮೆಟ್ಟಿಲಾಗಿ, ಬೆನ್ನೆಲುಬಾಗಿ ನಿಂತು ಗಂಡಿನ ಏಳಿಗೆಗೆ ಪ್ರತೀ ಹಂತದಲ್ಲೂ ದಾರಿ ದೀವಿಗೆಯಂತೆ ಬೆಳಗುವವಳು ಹೆಣ್ಣು. ಇಂತಹ ಹೆಣ್ಣು ಇಂದು ಪುರುಷ ಪ್ರಧಾನವಾದ ಸಮಾಜದ ನಿರ್ಮಾಣಕ್ಕೂ ಕೈ ಜೋಡಿಸಿರುವವಳೇ ಭಾರತದಂತಹ ನಾಗರೀಕತೆಯ ಸಮಾಜದಲ್ಲಿ ಹೆಣ್ಣಿನ ಅಮೂಲ್ಯ ಪಾತ್ರ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಒಂದು ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಅವಳಿಗೆ ಕೊನೆಯಲ್ಲಿ ನಿರಾಸೆ ಅಸಮಾಧಾನದ ಉಡುಗೊರೆ, ಅವಳ ಮೌನದ ರೋದನೆಯಲ್ಲಿ ಕಾಣದ ಕಂಬನಿಗಳೆಷ್ಟೋ, ಅನುರಾಗವನ್ನು ಕಳೆದುಕೊಂಡ ತಬ್ಬಲಿಯ ಭಾವನೆಗಳೆಷ್ಟೋ, ಎಲ್ಲವೂ ಕೇವಲ ಗಂಡಿನಿಂದಲೇ ಅಲ್ಲದೆ ಇನ್ನೊಂದು ಹೆಣ್ಣಿನಿಂದಲೇ ಇವೆಲ್ಲ ಅವಘಡಗಳಿಗೆ ಕಾರಣವಾಗುತ್ತಿರುವುದು ಮಾತ್ರ ಶೋಚನಿಯವೇ. +೭) +ಒಟ್ಟಿನಲ್ಲಿ ತುಂಬಿದ ಸಂಸಾರದಲ್ಲಿ ಯಮುನಾಳ ಆಗಮನದಿಂದಾಗಿ ಅಸಂತೋಷದ ಸೆಲೆ ಕಾಣಿಸಿಕೊಂಡಿದ್ದಂತೂ ಸತ್ಯವಾಗಿತ್ತು. ಅಲ್ಲೊಂದು ಅನ್ನೋನ್ಯತೆ ಬೆಳೆಯಬೇಕಾದರೆ ಗಂಡಿನಷ್ಟೇ ಮುಖ್ಯವಾದ ಪಾತ್ರ ಹೆಣ್ಣಿನದೂ ಸಹ. ಅವಳ ಸಹಮತ, ಪ್ರೀತಿ, ಕಾಳಜಿ, ಕಳಕಳಿಯೊಂದಿದ್ದರೆ ಬೇಕಾದ್ದನ್ನೂ ಸಾಧಿಸಬಲ್ಲ ಅವನು. ಇಲ್ಲದಿರೆ ಬೇರು ಕಳಚಿದ ಹೆಮ್ಮರದಂತೆ, ಎಲೆ ಉದುರಿದ ಗಿಡಗಳಂತೆ ಅಂದವಿರುವುದಿಲ್ಲ. ಅನುರಾಗ, ಸಂಪ್ರೀತಿಯ ಕೊಳಗಳಲ್ಲಿ ಸಾಂತ್ವನ ಹೊಂದಾಣಿಕೆಯೆಂಬ ನೈದಿಲೆಗಳು ಅರಳಿದಾಗ ಸಂಸಾರ ಎಂಬ ಚಂದ್ರಬಿಂಬ ಹೊಳೆಯುತ್ತದೆ. ಇಂತಹ ಸಂಸಾರ ನೂರ್ಕಾಲ ಕಳೆದರೂ ಎಂದಿಗೂ ಹೊರ ಪ್ರಪಂಚದಲ್ಲಿ ತಮ್ಮ ಬಲ ಹೀನತೆಯನ್ನು ತೋರ್ಪಡಿಸುವುದಿಲ್ಲ. ಚಿಕ್ಕಪುಟ್ಟ ತಾರತಮ್ಯಗಳಿದ್ದರೂ ಪರಸ್ಪರ ಸಂವೇದನಾತ್ಮಕ ಚರ್ಚೆಯಿಂದ ಬಗೆಹರಿಸಿಕೊಂಡು ಮುನ್ನಡೆಯಬೇಕು. ಪ್ರಾಣಿಗಳು ಎಂದಿಗೂ ತಮ್ಮ ಮಕ್ಕಳೊಂದಿಗೆ ದ್ವೇಷ ಸಾಧಿಸುವುದಿಲ್ಲ. ಒಂದೈದು ನಿಮಿಷ ಕಿತ್ತಾಡಿಕೊಂಡರೂ ನಂತರದ ಕ್ಷಣದಲ್ಲಿ ಅದನ್ನು ಮರೆತು ಮತ್ತೆ ಸಾಮರಸ್ಯ ಬೆಳೆಸಿಕೊಳ್ಳುತ್ತವೆ. ಹಗೆಯನ್ನು ಹಗೆಯನ್ನಾಗಿಯೇ ಮುಂದುವರೆಸಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮನುಷ್ಯ ಮಾತ್ರ ಇದಕ್ಕೆ ತದ್ವಿರುದ್ಧವೇ. ಘಟಿಸುವ ಘಟನಾವಳಿಗೆ ಅನುಗುಣವಾಗಿ ಇಂತಹ ಅನೇಕ ಚಿಂತನೆಗಳು ಹರಿ ಬಿಡುವಲ್ಲಿ ಕಾದಂಬರಿಕಾರರ ಶ್ರಮ ಸಾರ್ಥಕತೆ ಪಡೆದಿದೆ. ನಿರೂಪಣಾ ಶೈಲಿ ಮತ್ತು ಪಾತ್ರ ಪೋಷಣೆಯಲ್ಲಿ ಗೆದ್ದಿದ್ದಾರೆ .ಆದರೆ ಕಥೆ ನಡೆಯವ ಪರಿಸರ ಬಹುಶಃ ಉತ್ತರ ಕನ್ನಡ ಭಾಗದ್ದು ಅನಿಸಿದರೂ ಅದಕ್ಕೆ ಒಂದು ಪ್ರಾದೇಶಿಕ ಪರಿಸರ ತಂದುಕೊಡವಲ್ಲಿ ಸ್ವಲ್ಪ ಮಟ್ಟಿಗೆ ಸೋತಿದೆ ಎಂದೆನಿಸುತ್ತದೆ. +ಪಾತ್ರಗಳ ಮುಖಾಂತರವಾದರೂ ನೆಲದ ಭಾಷೆಯನ್ನು ಪರಿಸರವನ್ನು ತಂದುಕೊಡುವ ಮೂಲಕ ಕಾದಂಬರಿಯನ್ನು ಇನ್ನೂ ಆಪ್ತವಾಗಿ ನೈಜವಾಗಿ ಕಟ್ಟಿಕೊಡಬಹುದಾಗಿತ್ತು ಅನಿಸುತ್ತದೆ. ಒಟ್ಟಿನಲ್ಲಿ ಒಂದು ಸದುಭಿರುಚಿಯ ಕೌಟುಂಬಿಕ ಕಥೆ ಹೊಂದಿದ ಕಾದಂಬರಿ ಆಕಸ್ಮಿಕ ಘಟನೆಗಳಿಂದ ಅನಿರೀಕ್ಷಿತ ತಿರುವುಗಳಿಂದ ಕುತೂಹುಲ ಮೂಡಿಸುತ್ತ ಓದುಗನನ್ನು ಮೊದಲಿನಿಂದ ಕೊನೆಯವರೆಗೂ ಹಿಡಿದಿಡುತ್ತದೆ. ಕಥಾನಾಯಕಿಯ ಅಂತಿಮ ನಿರ್ಧಾರ ಸರಿ ಅನಿಸಿದರೂ ಓದುಗರಲ್ಲಿ ವಿಷಾದ ಅಲೆಗಳನ್ನು ಎಬ್ಬಿಸುತ್ತದೆ. ಲೇಖಕರ ಅನುಭವದಂತೆ ಆ ಪಾತ್ರ ವಾಸ್ತವತೆಗೆ ಹತ್ತಿರವಾಗಿಯೇ ಇದ್ದರೂ ಕೂಡ ಇನ್ನಷ್ಟು ಅದಕ್ಕೆ ಕಾವು ಕೊಟ್ಟು ಗಟ್ಟಿಗೊಳಿಸಬಹುದಾಗಿತ್ತು. ಕೊನೆಯವರೆಗೂ ಮೌನ ಸೆರೆಯಾಗಿಯೇ ಸರಿದು ಹೋಗುವ ವೈಶಾಲಿಯ ಜೀವನದಲ್ಲಿ ಹೋರಾಟದ ಮನೋಭಾವ ಕಿಚ್ಚು ಬಿತ್ತಿ ಅಶೋಕನಂಥ ದುರುಳರಿಗೆ ಸರಿದಾರಿಗೆ ತರುವ ನಿರ್ಧಾರಕ್ಕೆ ಅಣಿಗೊಳಿಸಬಹುದಾಗಿತ್ತು. ಇವೆಲ್ಲ ನನ್ನ ವೈಯಕ್ತಿಕ ಅಭಿಪ್ರಾಯವಾದರೂ ಲೇಖಕರು ವಾಸ್ತವ ಸ್ಥಿತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಇದು ಗಣಪತಿಯವರ ಮೊದಲ ಕಾದಂಬರಿ ಎಂದು ಎಲ್ಲೂ ಅನಿಸುವುದಿಲ್ಲ. ಒಂದು ಪಳಗಿದ ಲೇಖನಿಯಿಂದ ಮಾಗಿದ ಮನಸ್ಸಿನಿಂದ ಮೂಡಿದ ಕಥಾಹಂದರ ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರಣಕ್ಕೆ ಅವರನ್ನು ಅಭಿನಂದಿಸುತ್ತ ಪ್ರಸ್ತುತ ಉತ್ತಮ ಕಾದಂಬರಿಗಳ ಕೊರತೆಯ ಕಾಲದಲ್ಲಿ ಇನ್ನಷ್ಟು ಉತ್ತಮ ಕೃಷಿ ಮಾಡುವ ಮೂಲಕ ಅವರ ಹೆಸರು ಅಜರಾಮರವಾಗಲಿ ಎಂದು ಹಾರೈಸುತ್ತೇನೆ. +-ಅಶ್ಫಾಕ್ ಪೀರಜಾದೆ \ No newline at end of file diff --git a/PanjuMagazine_Data/article_1007.txt b/PanjuMagazine_Data/article_1007.txt new file mode 100644 index 0000000000000000000000000000000000000000..c105b7dd53a2f29f1700130662744b98b50d8c73 --- /dev/null +++ b/PanjuMagazine_Data/article_1007.txt @@ -0,0 +1,10 @@ +ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ವರ್ಷಕ್ಕೊಮ್ಮೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮೇಷ್ಟ್ರು “ಎಲ್ರೂ ನಾಳೆ ನೀಟಾಗಿ ನಿಮಗಿಷ್ಟವಾದ ಡ್ರೆಸ್ ಹಾಕ್ಕೊಂಡ್ ಬನ್ನಿ” ಅನ್ನುತ್ತಿದ್ದರೆ, ನಮ್ಮ ಮುಖ ಇಷ್ಟಗಲವಾಗಿ ಅಲ್ಲೇ ಹಲ್ಕಿರಿದು ನಿಂತು ಬಿಡುತ್ತಿದ್ದೆವು. ಮತ್ತೆ ಫೋಟೋ ತೆಗೆಯೋ ದಿನ ಮಾತ್ರ ಅದು ನಡೆಯುತ್ತೋ, ಓಡುತ್ತೋ, ನಿಂತಲ್ಲೇ ಎಲ್ಡು ಬಾರಿ ಸರಿಯಾದ ಟೈಮು ತೋರ್ಸುತ್ತೋ, ಬಿಡುತ್ತೋ, ಒಟ್ನಲ್ಲಿ ಎಲ್ಲಿಂದಲೋ ಒಂದ ವಾಚ್ ಕಟ್ಗ್ಯಂಡು ಅದು ಫೋಟೋದಲ್ಲಿ ಕಾಣೋ ಹಂಗೆ ನಿಂತು ಫೋಸ್ ಕೊಡುತ್ತಿದ್ದೆವು. ಫೋಟೋ ಪ್ರಿಂಟ್ ಕೈ ಸೇರೋವರ್ಗೆ ಅದರ ಬಗ್ಗೆ ಕುತೂಹಲವಂತೂ ಇದ್ದೇ ಇರೋದು. ಆಮೇಲಾಮೇಲೆ ಕಾಲೇಜ್ ಹಂತದಲ್ಲಿ ಗೆಳೆಯರು ಎಲ್ಲೆಲ್ಲಿಂದಲೋ ರೀಲ್ ಕ್ಯಾಮೆರಾಗಳನ್ನು ಹುಡಿಕ್ಯಂಡು, ರೀಲ್ ಹಾಕ್ಸಿ ಫೋಟೋ ತೆಗೆಯೋದು ಶುರುವಾಯ್ತು. ಅವು ಚೆನ್ನಾಗಿ ಬಂದಿದ್ದಾವೋ ಇಲ್ವೊ? ಅನ್ನೋದು ಅವುಗಳನ್ನು ಪ್ರಿಂಟ್ ಹಾಕಿಸದಾಗ್ಲೇ ಅವುಗಳ ಹಣೇಬರಹ ಗೊತ್ತಾಗೋದು. ಅದರಲ್ಲೂ ಹುಡುಗೀರ ಪಕ್ಕದಲ್ಲಿ ನಿಂತು ತೆಗೆಸಿಕೊಂಡ ಫೋಟೋಗಳು ಬ್ಲರ್ರಾಗಿದ್ದರಂತೂ ಆ ಫೋಟೋ ಗತಿಯಂತೇ ನೋಡಿದ ಮುಖಗಳು ಸೊಟ್ಟಾಗಿರ್ತಿದ್ದವು. +ಟ್ರಿಪ್ಪಿಗೆ ಹೋದಾಗ, ಗೆಳೆಯರ ಜೊತೆ ಅಪರೂಪಕ್ಕೆ ಸಿಕ್ಕಾಗ ಕಳೆದ ಕ್ಷಣಗಳ ಒಂದಷ್ಟು ನೆನಪುಗಳಿಗೋಸ್ಕರವಾಗೇ ಫೋಟೋಗಳು ಜೊತೆಗಿರ್ತಾವೆ. ಬರುಬರುತ್ತಾ ಡಿಜಿಟಲ್ ಮಯವಾದ ಫೋಟೋಗಳು ಹೆಚ್ಚೆಚ್ಚು ಆಕರ್ಷಕವಾಗತೊಡಗಿದವು. ಫೋಟೋಗಳನ್ನು ನೋಡಿದರೆ, ಕ್ಯಾಮೆರಾಗಳನ್ನು ಹಿಡಿದವರನ್ನು ನೋಡಿದರೆ ನನಗೂ ಫೋಟೋ ತೆಗೆವ ಆಸೆ. ಯಾವಾಗ ನೋಡ್ತೀನೋ, ಯಾವಾಗ ಅನ್ನಿಸ್ತಿತ್ತೋ ಅಷ್ಟೇ ಖರೆ, ಆಗ ಮಾತ್ರ ಚೂರು ಮನಸ್ಸು ಕೆದರಿದಂತಾಗೋದು. ಮತ್ತೆ ಮರೆತುಬಿಡುತ್ತಿದ್ದೆ. ಮರೆಯೋದಕ್ಕೂ ಒಂದು ಕಾರಣ ಇತ್ತು. ಅದು ದುಡ್ಡಿಂದು. ಸ್ನೇಹಿತರ, ಅವರಿವರ ಕೈಯಲ್ಲಿ ಕ್ಯಾಮೆರಾ ನೋಡ್ದಾಗೆಲ್ಲಾ “ಎಷ್ಟು ಬೀಳುತ್ತೇ ರೇಟು?” ಅನ್ನುವುದು. ರೇಟು ಕೇಳಿ ಸುಮ್ಮನಾಗುವುದು. ಅಷ್ಟು ದುಡ್ಡು ಜೋಡಿಸುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಅದಕ್ಕೆ ಮನಸ್ಸು ಮಾಡೋದೇ ದೊಡ್ಡ ಕಷ್ಟವಾಗಿತ್ತು. ಈಗಿನ ಸವಲತ್ತುಗಳು, ಡಿಜಿಟಲ್, 3ಜಿ ಯುಗದಲ್ಲಿ ಮೊಬೈಲುಗಳು ಖರೀದಿಸಿ ತಿಂಗಳಾಗುತ್ತಲೇ ಹಳತಾಗಿ ಹೊಸ ವರ್ಷನ್ ಗಳಿಗೆ ಮನಸ್ಸು ಹಾತೊರೆಯುತ್ತೆ. ಅಂಥಾದ್ದರಲ್ಲಿ ನಾನು ಅವರಿವರು ತೆಗೆದ ಚಿತ್ರಗಳನ್ನು ನೋಡಿ ಖುಷಿಪಡುತ್ತಲೇ ದೊಡ್ಡ ದೊಡ್ಡ ಫೋಟೋ ಮುಂದೆ, ಅಲ್ಲಿ ಇಲ್ಲಿ ನಿಂತ್ಗಂಡು ಫೋಟೋ ತೆಗುಸ್ಕಂಡು ನೋಡೋದೇ ಆಗಿತ್ತು. +ಇತ್ತೀಚೆಗೆ ಒಂದೆರಡು ವರ್ಷದಿಂದ ಸ್ನೇಹಿತರಾದ ಶಿವಶಂಕರ್ ಬಣಗಾರ್ ಇವರ ಮತ್ತು ಇನ್ನಿತರ ಛಾಯಚಿತ್ರಗಾರರು ತೆಗೆದ ಸೂರ್ಯಾಸ್ತ, ಸೂರ್ಯೋದಯ, ಪ್ರಕೃತಿ ಪಕ್ಷಿಗಳು, ಗ್ರಾಮ್ಯ ಸಹಜ ಬದುಕಿನ, ರೈತಾಪಿ ಜನಗಳ, ನೈಜವಾದ ಫೋಟೋಗಳನ್ನು ಫೇಸ್ಬುಕ್ಕಲ್ಲಿ ನೋಡೋದು, ಅವುಗಳಿಗೆ ಚುಟುಕು ಬರೆದು ಫೇಸ್ಬುಕ್ಕಿಗೆ ಹಾಕುವುದು ಮಾಡುತ್ತಿದ್ದೆ. ಬರುಬರುತ್ತಾ ಈ ಫೋಟೋಗ್ರಫೀ ಹುಚ್ಚು ಹೆಚ್ಚುತ್ತಾ ಹೋಯ್ತು. ಒಂದಿನ ನಿರ್ಧರಿಸಿ ಕಳೆದ ವರ್ಷ ಚಿಕ್ಕದಾದ ಕ್ಯಾಮೆರಾ ತೆಗೆದುಕೊಂಡೆ. ಮೊದಮೊದಲು ಯಾವ ಚಿತ್ರ, ಯಾವ ಸೆಟ್ಟಿಂಗು, ಊಹೂಂ.. ಒಂದೂ ಗೊತ್ತಿರಲಿಲ್ಲ. ಈಗ್ಲೂ ಜಾಸ್ತಿ ಗೊತ್ತಿಲ್ಲ. ಇಷ್ಟ ಬಂದ ಹಾಗೆ ಒಂದೊಂದೇ ಚಿತ್ರ ತೆಗೆಯುತ್ತಾ ಹೋದೆ. ಒಂದು ಹಂತಕ್ಕೆ ಹದವೆನ್ನುವುದು ಕೈಗಂಟಿತು. ಬೆಳಿಗ್ಗೆ ಎದ್ದವನೇ ಕೊಳ್ಳಾಗ ಕ್ಯಾಮೆರಾ ನೇತಾಕಿಕೊಂಡು ಸುತ್ತುವುದು, ಸೂರ್ಯೋದಯ, ಸೂರ್ಯಾಸ್ತದ ಚಿತ್ರಗಳನ್ನು ತೆಗೆಯಲು ಶುರು ಮಾಡಿದೆ. ನಂತರ ಪಕ್ಷಿಗಳ ಬಗ್ಗೆ ಕುತೂಹಲ ಹುಟ್ಟಿತು. ಅವುಗಳ ಬೆನ್ನು ಬಿದ್ದೆ. ಕ್ಯಾಮೆರಾ ಕೊಳ್ಳುವುದಕ್ಕೂ ಮುಂಚೆ ಒಮ್ಮೆ ಬಣಗಾರರ ಜೊತೆ ಹಂಪಿ, ಕಮಲಾಪುರ, ಪೊಂಪಯ್ಯಸ್ವಾಮಿ ಮಳೇಮಠ್ ( ಇವರೂ ಸಹ ಉತ್ತಮ ಛಾಯಗ್ರಾಹಕರು. 2015ನೇ ಜನವರಿಯಲ್ಲಿ ಇವರ ವನ್ಯಜೀವನ ವಿಭಾಗದಲ್ಲಿ ಇವರ ಛಾಯಾಚಿತ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ) ಇವರ ನಿಸರ್ಗಧಾಮಕ್ಕೆ ಒಮ್ಮೆ ಭೇಟಿ ನೀಡಿದ್ದೆ. ಅದಾದ ನಂತರ ಸುಮಾರು ಬಾರಿ ಅವರೊಂದಿಗೆ ತಿರುಗಿದ್ದೇನೆ. ಆಗೆಲ್ಲಾ ಬಣಗಾರ್ ಪಕ್ಷಿ ಸಂಕುಲದ ಬಗೆಗಿನ ವಿಸ್ತೃತವಾದ ಮಾಹಿತಿ ನೀಡಿದರು. ದುರಾದೃಷ್ಟವಶಾತ್ ನನಗಿನ್ನೂ ಅದು ಪೂರ್ತಿ ತಲೆಹೊಕ್ಕಿಲ್ಲ. ಈ ಪಕ್ಷಿ ವೀಕ್ಷಣೆಗೆ ಸಂಬಂಧಿಸಿದಂತೆ ನನ್ನ ಸಹೋದರನ ಸಹಪಾಠಿ ಹಗರಿಬೊಮ್ಮನಹಳ್ಳಿಯ ವಿಜಯ ಇಟಿಗಿ ಇವರಿಗೆ ನನಗಿಂತ ಹೆಚ್ಚೇ ಮಾಹಿತಿ ಇದೆ. +ಈ ಮಧ್ಯೆ ಸುಮಾರು ಫೋಟೋಗಳನ್ನು ಫೇಸ್ಬುಕ್ಕಿನಲ್ಲಿ ಹಾಕಿದೆ. ನೋಡುವ ಸ್ನೇಹಿತರ ಮೆಚ್ಚುಗೆ ವ್ಯಕ್ತಪಡಿಸಿದಂತೆಲ್ಲಾ ಖುಷಿಯಾಗಿ ಮತ್ತೆ ಮತ್ತೆ ಒಳ್ಳೆಯ ಸಂಧರ್ಭಗಳನ್ನು ಹುಡುಕಿ ಮುಳುಗು ಸಂಜೆಯ, ಬೆಳಗು ಮುಂಜಾನೆಯ, ಪಕ್ಷಿಗಳ, ಜನಜೀವನದ ಒಂದಷ್ಟು ಫೋಟೋಗಳು ಬಹಳ ಮೆಚ್ಚುಗೆ ಪಾತ್ರವಾದವು. ಸ್ನೇಹಿತ ಸಿರಾಜ್ ಬಿಸರಳ್ಳಿ ಅದೊಮ್ಮೆ ನಿಮ್ಮವೇ ಛಾಯಚಿತ್ರಗಳ ಒಂದು ಪ್ರದರ್ಶನವನ್ನು ಏರ್ಪಡಿಸಿದರೆ ಹೇಗೆ? ಅಂದರು. ಪೇಚಿಗೆ ಸಿಲುಕಿಬಿಟ್ಟೆ. ಮೊದಲೇ ಪ್ರದರ್ಶನಗಳ ಬಗ್ಗೆ, ಕಾರ್ಯಕ್ರಮಗಳ ಪ್ರೋಟೋಕಾಲ್ ಬಗ್ಗೆ ಹೆಚ್ಚು ಮಾಹಿತಿ ಮತ್ತು ಅನುಭವವಿರದ ನಾನು ಹಿಂದೇಟು ಹಾಕುತ್ತಿದ್ದೆ. ಮೊನ್ನೆ ನಮ್ಮ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆವ ದಿನಾಂಕ ನಿಗದಿಯಾಯಿತು. ಮೊದಮೊದಲು ಈ ವಿಚಾರವನ್ನು ಗೆಳೆಯ ಸಿರಾಜ್ ಮತ್ತು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮತ್ತು ನನ್ನ ಸ್ನೇಹಿತರಾದ ನಾಗರಾಜರಲ್ಲಿ ಪ್ರಸ್ತಾಪಿಸಿದೆ. ಅವರು ಹ್ಞೂಂ. ಅಂದಿದ್ದೇ ಬಂತು. ಅಲ್ಲಿವರೆಗೆ ಯೋಚನೆ ಮಾಡಿರದ ನಾನು ಯಾವ ಚಿತ್ರ, ಯಾವ ಸೈಜು, ಪ್ರಿಂಟು ಎಲ್ಲಿ ಹಾಕ್ಸೋದು? ಪ್ರದರ್ಶನದ ಹೆಂಗೆ? ಕೇಳಿ ಕೇಳಿಯೇ ಅವಸರವಸರವಾಗಿ ರೆಡಿ ಮಾಡ್ಕೊಂಡೆ. ಆಕರ್ಷಕ ಶೀರ್ಷಿಕೆಗಳನ್ನು ಸಹ ಕೊಟ್ಟು ಕ್ರೀಡಾಕೂಟದ ಉದ್ಘಾಟನೆ ದಿನದಂದು “ನಮ್ಮ ಕೊಪ್ಪಳ” ಎಂಬ ವಿಷಯಾಧರಿತ ಛಾಯಾಚಿತ್ರ ಪ್ರದರ್ಶನಕ್ಕೆ ಅಣಿಗೊಳಿಸಿದೆನು. +ಅದಕ್ಕೂ ಮುಂಚೆ ಆಗಿದ್ದೆಂದರೆ, ನನ್ನ ಉದ್ಧೇಶ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ನೌಕರ ವರ್ಗದಲ್ಲಿನ ಒಂದು ಬಗೆಯ ಹವ್ಯಾಸದ ಚಿತ್ರಣವನ್ನು ತೆರೆದಿಡುವುದಷ್ಟೇ ಆಗಿತ್ತು. ಅದರಿಂದಾಗಿ ಲಾಭ ಅಥವಾ ಪ್ರತ್ಯೇಕವಾದ ರೆಕಗ್ನಿಷನ್ ಗಾಗಲೀ ಅಲ್ಲ. ಅಲ್ಲಿದ್ದ ಜಾಗಕ್ಕೆ ಎಷ್ಟು ಚಿತ್ರಗಳನ್ನು ಜೋಡಿಸುವುದು ಹೇಗೆ? ಎಂದು ನೋಡಿಕೊಂಡು ಬಂದೆ. ಮೊದಲೇ ನಮ್ಮ ಭಾಗದ ಜನರ ಭಾಷೆ ಒರಟು ಆದ್ರೆ ಸ್ವಚ್ಛ ಮತ್ತು ನೆಟ್ಟಗೆ. ಅಲ್ಲಿಗೆ ಬಂದ ಒಬ್ಬ ಗೆಳೆಯ “ಬರ್ರೀ ಸರ್ರಾ…. ನಿಮ್ ಫೋಟಕ್ಕ ಲೈಟ್ ಸೀರೀಸ್ ಹಾಕ್ಸೋನು” ಅಂದ. ಇನ್ನು ಕೆಲವರು “ನಿಮ್ಮದೊಂದು ಫೋಟೋ ಹಾಕಿ ಒಂದ್ ಬ್ಯಾನರ್ ಹಾಕಬೇಕಿತ್ ನೋಡ್ರಿ” ಅಂದ್ರು. ಒಂದನ್ನು ಈ ಕಿವೀಲಿ ಕೇಳಿ ಆ ಕಿವೀಲಿ ಬಿಟ್ಟೆ ಇನ್ನೊಂದನ್ನು ಸಲಹೆ ಅಂದುಕೊಂಡೆ. ಮಾರನೇ ದಿನ ಎಲ್ಲಾ ಫೋಟೋಗಳನ್ನು ಜೋಡಿಸುವಷ್ಟರಲ್ಲಿ ಒಬ್ಬೊಬ್ಬರೇ ಜೊತೆಗೂಡಿ ಖುಷಿಯಿಂದ ಸಹಕರಿಸಿದರು. ಉದ್ಘಾಟನೆಗೆ ಬಂದ ಅತಿಥಿಗಳು ಕಾರ್ಯಕ್ರಮದ ನಂತರ ಫೋಟೋಗಳನ್ನು, ಅವುಗಳ ಬುಡಕ್ಕೆ ನೀಡಿದ ಶೀರ್ಷಿಕೆ ನೋಡಿ ಖುಷಿಪಟ್ಟು ಹಾರೈಸಿದರು. ಬಂದ ನೌಕರ ವರ್ಗದವರೆಲ್ಲರೂ ನಿಂತು ನೋಡಿ “ಅರೆರೇ,,,, ಇವು ನಮ್ ಕ್ವಪ್ಳದಾಗ ತೆಗಿದಿದ್ವಾ? ಎಷ್ಟ್ ಬೇಷಿದಾವಲ್ರಿ?” ಅಂದರು. +ನಾನು ದೂರದಲ್ಲೇ ನಿಂತು ನೋಡುವವರನ್ನು ಗಮನಿಸುತ್ತಿದ್ದೆನು. “ಅದೇನ್ ಕೆಟ್ಟ ಹುಚ್ಚೋ ಏನ್ ಕತೀನೋ, ಸುಡುಗಾಡು ಫೇಸ್ಬುಕ್ನ್ಯಾಗೆ ಫೋಟೋ ಹಾಕ್ಯಂಬದು, ಅವುನ್ನ ನೋಡ್ನೋಡಿ ಬ್ಯಾಸ್ರ ಬಂದ್ ಬಿಟ್ಟೈತ್ನೋಡ್ರಿ” “ಕೆಲ್ಸ ಬೊಗ್ಸಿ ಬಿಟ್ಟು ಇದೊಳ್ಳೆ ಐಲು ಬಡ್ಕಂಡು ತಿರುಗ್ತಾನ” ಹೀಗೆ ಒಬ್ಬೊಬ್ಬ ಗೆಳೆಯರು ಹಿಂದೆ ಮತ್ತು ಎದುರಿಗೆ ಅಂದದ್ದು ನೆನಪಾಯ್ತು. ಮತ್ತದೇ ದಿನಾ ಕ್ರೀಡಾಕೂಟದಲ್ಲಿ ಭಾಗವಹಿಸಿದವರಲ್ಲೊಬ್ಬ ಹಿರಿಯರು ದಿನಾ ಬೆಳಿಗ್ಗೆ ಎದ್ದು ರಾಕೆಟ್ ಹಿಡ್ದು ಮೈಯಾಗಿನ ನೆಣ ತೆಗ್ದು “ಈ ಸಲ ಸ್ಟೇಟ್ ಲೆವೆಲ್ ಗೆ ಇನ್ನೇನು ಹೊಂಟೆ” ಅನ್ನೋ ಹಂಗೆ (ಅದೆಷ್ಟನೇ ಬಾರಿ ಟ್ರೈ ಮಾಡಿದ್ರೋ ಏನೋ) ಶೆಟಲ್ ಕಸರತ್ತು ಮಾಡಿದ್ರೂ ಆ ದಿನ ಎರಡು ಮೂರ್ನೇ ರೌಂಡ್ ಗೆ ಔಟಾಗಿ ಅಂಗಿಯೊಳಗೆ ತೂರ್ಕ್ಯಂಡು ಹೊರಗೆ ನಿಂತಿದ್ರು. ಕೈಯಲ್ಲಾಗ್ಲೇ ಟೇಬಲ್ ಟೆನ್ನಿಸ್ ಬ್ಯಾಟ್ ಹಿಡಿದಿದ್ರು. “ಏನ್ ಸಾರ್, ಶೆಟಲ್ ಬಿಟ್ಟು ಟಿ.ಟಿ. ಹಿಡ್ದೀರಿ?” ಅಂದೆ. “ಹೌದೌದ್, ನಂದು ಇಂಗ್ಲೀಷ್ ಟಿ.ಟಿ. ನಿಮ್ದು ಕನ್ನಡ ತೀಟಿ” ಅಂತ ಕಟೆದರು. ಅಲ್ಲಿಗೆ ಯಾವ ಉದ್ದೇಶದಿಂದ ಹೇಳುತ್ತಿದ್ದಾರೆನ್ನುವುದು ಖಾತ್ರಿಯಾಯ್ತು. +ಅದಾಗಿ ಮರುದಿನ ದಿನಪತ್ರಿಕೆಗಳಲ್ಲಿ ಕ್ರೀಡಾಕೂಟದಲ್ಲಿ ವಿಶೇಷವಾಗಿ “ಮನಸೂರೆಗೊಂಡ ಛಾಯಚಿತ್ರ ಪ್ರದರ್ಶನ” ಎಂಬ ಸುದ್ದಿ ನನ್ನ ಹೆಸರಿನ ಸಮೇತ ಬಂತು ನೋಡಿ. ಎಲ್ಲೋ ಯಾರೋ ತೆಗೆದ ಛಾಯಚಿತ್ರಗಳನ್ನು ಖುಷಿಪಟ್ಟು ನೋಡುತ್ತಿದ್ದವನು ತೆಗೆದ ಫೋಟೋಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡ ವೀಕ್ಷಕರ ಚಿತ್ರಗಳು ನನ್ನನ್ನು ಎಲ್ಲಾ ಮೂದಲಿಕೆಗಳಿಂದ ಹೊರ ತಂದವು. ಅದೇ ಸಂಜೆ ಸಾಹಿತ್ಯ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಸನ್ಮಾನಿಸಿದ ನಂತರ ಸ್ನೇಹಿತ ಮತ್ತು ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಇವರು ಕ್ರೀಡಾಕೂಟದಲ್ಲಿ ವಿಶೇಷವಾಗಿ ಆಕರ್ಷಿಸಿ ಛಾಯಚಿತ್ರ ಪ್ರದರ್ಶಿಸಿದ ನನ್ನನ್ನು ಅತಿಥಿಗಳಿಂದ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು. ಎದುರಿಗೆ ಚಪ್ಪಾಳೆ ಸದ್ದು. ಆದರೆ, ಆ ಚಪ್ಪಾಳೆಯಲ್ಲಿ ಸದ್ದು ಮಾಡದೇ ಮನೆಯ ಗೋಡೆಯ ಮೇಲೆ ಚೌಕಟ್ಟಿನ ಫೋಟೋದೊಳಗೆ ನಗುತ್ತಿದ್ದ ಅಪ್ಪ ನೆನಪಾಗಿದ್ದ. ಯಾಕಂದ್ರೆ ಅಪ್ಪ ಅಂಥವೇ ಫೋಟೋಗಳಿಗೆ ಫ್ರೇಮ್ ಹಾಕುವ ಕೆಲಸ ಮಾಡುತ್ತಿದ್ದ. ನಾನು ಗ್ಲಾಸು, ಫ್ರೇಮುಗಳನ್ನು ಹೊತ್ತು ತರುತ್ತಿದ್ದೆ; ಚಿಕ್ಕವನಿದ್ದಾಗ. + +ಹವ್ಯಾಸ ಗುರುತಿಸಿದ ಆರಂಭದಲ್ಲೇ ಈ ತರಹದ ಸನ್ಮಾನಗಳು ಹುಮ್ಮಸ್ಸು ನೀಡುತ್ತವೆ. ಗೆಳೆಯ ನಾಗರಾಜ ಜುಮ್ಮಣ್ಣವರ್ ಖುಷಿಪಟ್ಟೇ ಇದನ್ನೆಲ್ಲಾ ಮಾಡಿದ್ದರು. ನನಗೆ ಮಾತ್ರ ಮಾಹಿತಿ ಇದ್ದಿಲ್ಲ. ಆದರೆ, ಸನ್ಮಾನ ಮಾಡುವವರ ಸಾಲಿನಲ್ಲೋ ಅಥವಾ ಹಿಂದೆ ನನಗೆ ಶಾಲು ಹೊದೆಸುವ ಸಮಯದಲ್ಲಿ ಕುಳಿತಾಗ ಯಾರೋ ಅಂದರು “ಹ್ಹ ಹ್ಹ ಹ್ಹ… ಛಾಯಚಿತ್ರ ಅಂತಪ್ಪ…. ಹಾಕ್ರಿ ಹಾಕ್ರಿ…”. ಅಷ್ಟೇ. ಆದರೆ, ಇಷ್ಟು ಮಾತ್ರ ಸತ್ಯ ವೇದಿಕೆ ಮೇಲಿದ್ದ ಕೆಲ ಅತಿಥಿಗಳು ಛಾಯಚಿತ್ರಗಳ ಪ್ರದರ್ಶನ ನೋಡಿದವರಲ್ಲ. ಆವತ್ತು ರಾತ್ರಿ ಗೆಳೆಯರ ಜೊತೆ ಊಟಕ್ಕೆ ಹೋದಾಗ ಊಟ ಮಾಡಲಾಗದೇ ಹ್ಹ.ಹ್ಹ.ಹ್ಹ. ಧ್ವನಿ ಕೇಳಿದ್ದಕ್ಕೋ, ಅಪ್ಪನ ನೆನಪಾಗಿದ್ದಕ್ಕೋ ಅಥವಾ ಬದುಕಿದ್ದ ಅವ್ವನನ್ನು ಸಮಾರಂಭಕ್ಕೆ ಕರೆದೊಯ್ಯಲಿಲ್ಲವೆಂಬುದಕ್ಕೋ ಒಟ್ಟಿನಲ್ಲಿ ಬಯಲಲ್ಲಿ ನಿಂತು ಬಿಕ್ಕಳಿಸಿಬಿಟ್ಟೆ. ಎಲ್ಲರೂ ಊಟ ಮುಗಿಸಿ ಹೊರಟ ನಂತರ ಎಷ್ಟೋ ಹೊತ್ತು ನಾನು ಆ ಢಾಬಾ ಪಕ್ಕದ ರಸ್ತೆಯಲ್ಲಿ ನಿಂತೇ ಇದ್ದೆ, ಬೆಂಕಿಯ ತುಂಡೊಂದನ್ನು ಬಾಯಿಗಿಟ್ಟು; ಕಂಡಲ್ಲಿ, ಕಂಡವರ ಎದುರಲ್ಲಿ ಕಣ್ಣೀರು ಕೆಡವಿದ ತಪ್ಪಿನ ಪ್ರಾಯಶ್ಚಿತ್ತವಾಗಿ. +***** \ No newline at end of file diff --git a/PanjuMagazine_Data/article_1008.txt b/PanjuMagazine_Data/article_1008.txt new file mode 100644 index 0000000000000000000000000000000000000000..b3ed0f4ca0a552b06073de05460afd0b0654c296 --- /dev/null +++ b/PanjuMagazine_Data/article_1008.txt @@ -0,0 +1,8 @@ + +ಹೆಲ್ದೀ ಲೈಫ್ ಅನ್ನೋದು ಈಗ ಉಳ್ಳವರ ಅಥವಾ ಪೇಟೆಯವರ ಸ್ವತ್ತಾಗಿ ಮಾತ್ರ ಉಳಿದಿಲ್ಲ.. ಬದಲಾಗಿ ಹಳ್ಳಿಯ ಮೂಲೆ ಮೂಲೆಗೂ ಅದರ ಛಾಪು ಪಸರಿಸಿದೆ..ನನ್ ಹೊಟ್ಟೆ ಸಣ್ಣಗಾಗಬೇಕು, ನನ್ ಟೆನ್ಶನ್ ಕಡಿಮೆಯಾಗಬೇಕು, ಬಳುಕುವ ಸೊಂಟ ನಂಗಿರಬೇಕು ಎಂಬ ಬೇಕುಗಳ ನಡುವೆಯೇ, ಜನರಲ್ಲಿ ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅರಿವು ಮೂಡಿದೆ. ರೋಗ ಬಂದ್ಮೇಲೆ ಕಡಿಮೆ ಮಾಡೋದಿಕ್ಕೆ ಸಾಹಸ ಪಡೋದಕ್ಕಿಂದ, ಬರದೇ ಇದ್ದ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕೆಂಬ ಮನಸ್ಥಿತಿಯೂ ಇಂದು ಹೆಚ್ಚಾಗ್ತಾ ಇದೆ. ಆರೋಗ್ಯಕರ ಜೀವನ ನಮ್ಮದಾಗಬೇಕಾದ್ರೆ ಬೆಳಗಿನ ನಿದ್ರೆಗೆ ಸ್ವಲ್ಪ ಕತ್ತರಿ ಹಾಕೋಣ ಬನ್ನಿ.. +ಕೆಲವೊಂದು ವರ್ಷಗಳ ಹಿಂದಷ್ಟೇ ಬೆಳಿಗ್ಗೆ ವಾಕಿಂಗ್ ಹೋಗೋದು ಅಂದ್ರೆ ಅದು ಪೇಟೆಯ ಮಂದಿಗೆ ಮಾತ್ರ ಲಾಯಕ್ಕು ಅನ್ನೋ ಮಾತಿತ್ತು.. ಹಳ್ಳಿಯಜನರಿಗೆ ಅದರ ಅವಶ್ಯಕತೆಯೂ ತುಂಬಾ ಬರ್‍ತಾ ಇರಲಿಲ್ಲ..ಆದರೆ ಈಗ ಜೀವನಶೈಲಿಯೂ ಬದಲಾಗಿದೆ.. ಇಡೀ ದಿನ ಆಫೀಸಿನಲ್ಲಿ ಕೂತು ಕೂತು ಹೊಟ್ಟೆಯ ಭಾಗ ಉಬ್ಬಿದರೆ, ಏನೇನೋ ಕೆಲಸ ಅಂತ ಮನಸ್ಸಿಗೊಂದಿಷ್ಟು ಟೆನ್ಷನ್.. ಇದೆಲ್ಲದರ ಮಧ್ಯೆನೂ ನಾ ಸುಂದರವಾಗಿ ಕಾಣಬೇಕೆಂಬ ಬಯಕೆಆ॒ದ್ದರಿಂದಲೇ ಶುರುವಾಗಿದೆ ವಾಕಿಂಗ್ ಬಗೆಗಿನ ಅರಿವು.. ವಾಕಿಂಗ್ ಅನ್ನೋದು ಚಿಕ್ಕ ಮಕ್ಕಳಿಂದ ಹಿಡಿದು, ಯುವಕ ಯುವತಿಯರು, ಆಂಟಿ ಅಂಕಲ್, ಅಲ್ಲದೇ ಅಜ್ಜ ಅಜ್ಜಿಯವರೆಗೂ ನಿದ್ರೆಯನ್ನು ಕೆಡಿಸಿದೆ ಎಂದರೆ ಲೆಕ್ಕಾ ಹಾಕಿ ವಾಕಿಂಗ್‌ನ ಫವರು ಏನೆಂದು.. +ಇಂದು ವಾಕಿಂಗ್‌ನ ಪರಿಮಳ ದಿಲ್ಲಿಯಿಂದ ಹಳ್ಳಿಗೂ ಹರಿದಿದೆ. ಬೆಳಿಗ್ಗೆ ಹಂಗೇ ಸುಮ್ನೆ ಕಣ್ ಹಾಯ್ಸಿದ್ರೆ ಸಾಕು..ರಸ್ತೆಯಲ್ಲಿ ಒಂದಿಷ್ಟು ಜನ ಬ್ರಿಸ್ಕ್ ವಾಕ್ ಮಾಡ್ತಾ ಇದ್ರೆ, ಮೈದಾನದಲ್ಲಿ ತಾ ಮುಂದೆ ತಾ ಮಂದೆ ಎಂದು ನಡೆದಾಡುವ ಜನರು.. ಅವರ ಮಧ್ಯದಲ್ಲಿಯೇ ಇರುವಷ್ಟು ದಿನ ಆರೋಗ್ಯದಿಂದ ಬದುಕಬೇಕೆಂದು ಮನಸ್ಥಿತಿ ಹೊತ್ತು ನಿಧಾನವಾಗಿ ಸಾಗುತ್ತಿರುವ ಹಿರಿಯಜೀವಗಳು.. ಜೀವನದಲ್ಲಿ ಎಲ್ಲಾ ಇದ್ದೂ ಮನಸ್ಸು ನೆಮ್ಮದಿಯಿಂದ ಇಲ್ಲದಿದ್ದರೆ ಏನು ಪ್ರಯೋಜನ ಎಂದು, ಮಾನಸಿಕ ಉಲ್ಲಾಸಕ್ಕಾಗಿ ಬರುವ ಇನ್ನೊಂದಿಷ್ಟು ಜನರು.. ಅಪ್ಪ ಅಮ್ಮ ಬರ್‍ತಾರೆ ಅಂತ ಜೊತೆಗೇ ಬರೋ ಮಕ್ಕಳು.. ಒಟ್ಟಾರೆ ಎಲ್ಲರೂ ಒಂದಲ್ಲ ಒಂದು ಆರೋಗ್ಯದ ದೃಷ್ಟಿಯಿಂದ ಉದ್ದೇಶವನ್ನು ಹೊತ್ತೇ ಬಂದವರು.. +ಹಿಂದೆಲ್ಲಾ ಗದ್ದೆಯಲ್ಲಿ, ತೋಟದಲ್ಲಿ ಮೈಬಗ್ಗಿಸಿ ದುಡಿಯೋದ್ರಿಂದೋ ಏನೋ, ಗಟ್ಟಿ ಮುಟ್ಟಾಗಿ ಸಂಚೂರಿ ಬಾರ್‍ಸೋವರೆಗೂ ಬದುಕುಳಿಯುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ..ಆದ್ರೆ ಇಂದು ಇಪ್ಪತ್ತು ವರ್ಷವಾದವನೂ ಬೆನ್ನುನೋವು, ಮಂಡಿನೋವು ಎಂದು ಬಳಲಿದರೆ ಆಶ್ಚರ್ಯಪಡಬೇಕಾದ್ದೇನಿಲ್ಲ.. ಎಲ್ಲಾ ರೋಗ ಬರೋಕ್ಕಿಂತ ಮುಂಚೆ ಒಳ್ಳೇ ಅಭ್ಯಾಸವನ್ನು ರೂಢಿಸಿಕೊಳ್ಳೋ ಮನಸ್ಥಿತಿ ಇತ್ತೀಚಿಗೆ ಬೆಳೀತಾ ಇದೆ.. +ನಿಯಮಿತವಾಗಿ ವಾಕಿಂಗ್ ಮಾಡೋದ್ರಿಂದ, ಬೊಜ್ಜು, ಕಾಲುನೋವು, ಸಂಧಿವಾತ, ಬೆನ್ನುಬಾಗುವುದು, ಗ್ಯಾಸ್‌ಟ್ರಿಕ್ ಮುಂತಾದ ಎಷ್ಟೋ ಭೌತಿಕವಾದ ಖಾಯಿಲೆಗಳು ಕಡಿಮೆಯಾಗೋದಲ್ದೇ, ಮಾನಸಿಕತೆಗೆ ಸಂಬಂಧಿಸಿದ ಸಿಟ್ಟು, ಟೆನ್ಷನ್, ಗೊಂದಲಗಳೆಲ್ಲಾ ದೂರವಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ..ನಸುಕಿನ ಚುಮುಚುಮು ಚಳಿಯ ಶಕ್ತಿಯೇ ಅಂತದ್ದು, ಸೂರ್‍ಯನ ಎಳೆಬಿಸಿಲಿನಿಂದ ವಿಟಮನ್‌ಗಳೂ ದೊರಕುತ್ತವೆ.. ಒಂದು ಗಂಟೆ ವಾಕಿಂಗ್ ಮಾಡೋದ್ರಿಂದ ಇಡೀ ದಿನವೂ ಚಟುವಟಿಕೆಯಿಂದಲೇ ಕೂಡಿರುತ್ತದೆ.. ಯಾವುದೇ ಕೆಲಸ ಮಾಡೋದಿಕ್ಕೆ ಹೋದ್ರೂ ಏಕಾಗ್ರತೆಯಿರುತ್ತದೆಯೆಂದ್ರೆ, ಅತಿಶಯೋಕ್ತಿಯಾಗಲಾರದು… +ಈ ವಾಕಿಂಗ್‌ನಿಂದ ಆರೋಗ್ಯಕರ ಜೀವನದ ಜೊತೆಗೆ ಸಾಮಾಜಿಕ ಸಂಬಂಧವೂ ಬೆಳೆಯುತ್ತದೆ.. ವಾಕಿಂಗ್ ಮಾಡುತ್ತಲೇ ಪರಿಚಯವಾದ ಅದೆಷ್ಟೋ ಮಂದಿ ದಿನ ಕಳೆದಂತೆ, ಸ್ನೇಹಿತರಾಗಿಬಿಡುತ್ತಾರೆ.. ಚುಮ್ಮೆನ್ನುವ ಆ ಚಳಿಯ ವಾತಾವರಣದ ಸವಿಯ ಜೊತೆಗೆ ಮನಸ್ಸೊಂದಷ್ಟು ಹೊತ್ತು, ಕಲ್ಪನೆಯಲ್ಲಿ ಮುಳುಗುವುದೆಂದರೆ, ತಪ್ಪಾಗಲಾರದು..ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಾಕಿಂಗ್ ಮಾಡೋದ್ರಿಂದ ರೋಗದಿಂದ ದೂರ ಇರಬಹುದೆಂದೇ ಹೇಳುತ್ವೆ..ನೋಡಿ ವಾಕಿಂಗ್ ಎಂದರೆ ದೇಹಕ್ಕೂ ಮನಸ್ಸಿಗೂ ಬೊಂಬಾಟ್‌ಭೋಜನವಿದ್ದಂತೆ. +***** \ No newline at end of file diff --git a/PanjuMagazine_Data/article_1009.txt b/PanjuMagazine_Data/article_1009.txt new file mode 100644 index 0000000000000000000000000000000000000000..f1ad773acafff3341f9d04eafc33a36f6bc2f942 --- /dev/null +++ b/PanjuMagazine_Data/article_1009.txt @@ -0,0 +1,29 @@ +೧. ಅರಬ್ಬನ ಅಶ್ಲೀಲ ಬಯ್ಗುಳವೂ ದೇವರ ಸಂದೇಶವೂ +ಒಂದು ದಿನ ಪ್ರವಾದಿ ಮೊಹಮ್ಮದ್‌ರು ಮಸೀದಿಯೊಂದರಲ್ಲಿ ಬೆಳಗಿನ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅವರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಪೈಕಿ ಇಸ್ಲಾಂನಲ್ಲಿ ಮೇಲೇರಬಯಸುತ್ತಿದ್ದ ಅರಬ್ಬನೊಬ್ಬನಿದ್ದ. ಆ ದಿನ ಕೊರಾನ್‌ನಲ್ಲಿ “ನಾನೇ ನಿಮ್ಮ ನಿಜವಾದ ದೇವರು” ಎಂಬ ಅರ್ಥವಿರುವ ಫೆರೋನ ಹೇಳಿಕೆ ಉಳ್ಳ ಶ್ಲೋಕವನ್ನು ಮಹಮ್ಮದ್‌ರು ಪಠಿಸುತ್ತಿದ್ದಾಗ ಅದನ್ನು ಕೇಳಿದ ಅರಬ್ಬನು ಕೋಪೋದ್ರಿಕ್ತನಾಗಿ ಪ್ರಾರ್ಥನೆಯನ್ನು ನಿಲ್ಲಿಸಿ ಬೊಬ್ಬೆ ಹೊಡೆದ: “ಸೂಳೆಮಗ*, ಬಡಾಯಿಕೋರ!” ಪ್ರವಾದಿಗಳು ತಮ್ಮ ಪ್ರಾರ್ಥನೆ ಮುಗಿಸಿದ ಕೂಡಲೆ ಅವರ ಸಹಚರರು ಅರಬ್ಬನಿಗೆ ಛೀಮಾರಿ ಹಾಕಲಾರಂಭಿಸಿದರು: “ನಿನ್ನ ಪ್ರಾರ್ಥನೆ ನಿಷ್ಪ್ರಯೋಜಕವಾದದ್ದು. ನೀನು ಬೇಡದ ಪದಗಳನ್ನು ಹೇಳಿ ಪ್ರಾರ್ಥನೆಯನ್ನು ಮಧ್ಯೆ ನಿಲ್ಲಿಸಿದೆ. ಅಷ್ಟೇ ಅಲ್ಲದೆ ದೇವರ ಪ್ರವಾದಿಯ ಎದುರಿನಲ್ಲಿ ಅಶ್ಲೀಲ ಭಾಷೆಯನ್ನು ಉಪಯೋಗಿಸಿದೆ.” ಅರಬ್ಬನು ಹೆದರಿಕೆಯಿಂದಲೂ ಸಂಕೋಚದಿಂದಲೂ ನಡುಗುತ್ತಾ ನಿಂತಿದ್ದ. ಆಗ ಗೇಬ್ರಿಯಲ್‌ ಪ್ರತ್ಯಕ್ಷನಾಗಿ ಪ್ರವಾದಿಗೆ ಹೇಳಿದ, “ದೇವರು ನಿನಗೆ ತನ್ನ ಸಲಾಮ್‌ ಕಳುಹಿಸಿದ್ದಾನೆ. ಈ ಜನ ಮುಗ್ಧ ಅರಬ್ಬನನ್ನು ದಂಡಿಸುವುದನ್ನು ನಿಲ್ಲಿಸಬೇಕೆಂಬುದು ಅವನ ಇಚ್ಛೆ. ಅವನ ಪ್ರಾಮಾಣಿಕ ಶಪಿಸುವಿಕೆ ಅನೇಕರು ಜಪಮಾಲೆ ಉಪಯೋಗಿಸಿ ಮಾಡುವ ಧಾರ್ಮಿಕಶ್ರದ್ಧೆಯ ಪ್ರಾರ್ಥನೆಗಿಂತ ಹೆಚ್ಚಿನ ಪ್ರಭಾವವನ್ನು ನನ್ನ ಮೇಲೆ ಬೀರಿದೆ!” +(* ಇಂಗ್ಲಿಷ್‌ ಪಾಠದಲ್ಲಿ ‘ಸನ್‌ ಆಫ್‌ ಎ ಬಿಚ್‌’ ಎಂಬುದಾಗಿ ಇದೆ) +***** +೨. ಬೀಗ ತಯಾರಕನ ಕತೆ +ತಾನು ಮಾಡದ ಅಪರಾಧಗಳನ್ನು ಮಾಡಿರುವುದಾಗಿ ಯಾರೋ ಮಾಡಿದ ಸುಳ್ಳು ಆಪಾದನೆಯಿಂದಾಗಿ ಕತ್ತಲಿನ ಕೂಪವಾಗಿದ್ದ ಸೆರೆಮನೆಯಲ್ಲಿ ಸೆರೆವಾಸ ಅನಭವಿಸುತ್ತಿದ್ದ ಬೀಗತಯಾರಕನೊಬ್ಬ ಒಂದಾನೊಂದು ಕಾಲದಲ್ಲಿ ಇದ್ದ. ಅವನನ್ನು ಬಹುವಾಗಿ ಪ್ರೀತಿಸುತ್ತಿದ್ದ ಆತನ ಹೆಂಡತಿ ಸ್ವಲ್ಪ ಕಾಲ ಅವನು ಸೆರೆವಾಸ ಅನುಭವಿಸಿದ ನಂತರ ರಾಜನ ಹತ್ತರ ಹೋಗಿ ಅವನು ದಿನಕ್ಕೆ ಈದು ಬಾರಿ ಮಾಡಬೇಕಾ ಪ್ರಾರ್ಥನೆಗಳನ್ನು ಸರಿಯಾಗಿ ಮಾಡಲು ಅನುಕೂಲವಾಗುವಂತೆ ಪ್ರಾರ್ಥನಾ ನೆಲಹಾಸೊಂದನ್ನು ಅವನಿಗೆ ಕೊಡಲು ಅನುಮತಿ ನೀಡಬೇಕಾಗಿ ಮೊರೆಯಿಟ್ಟಳು. ಈ ವಿನಂತಿ ನ್ಯಾಯಸಮ್ಮತವಾಗಿದೆ ಎಂಬುದಾಗಿ ತೀರ್ಮಾನಿಸಿದ ರಾಜ ಪ್ರಾರ್ಥನಾ ನೆಲಹಾಸನ್ನು ಅವನಿಗೆ ಕೊಡಲು ಅನುಮತಿ ನೀಡಿದ. ಕೃತಜ್ಞತಾಪೂರ್ವಕವಾಗಿ ಆ ನೆಲಹಾಸನ್ನು ಹೆಂಡತಿಯಿಂದ ಸ್ವೀಕರಿಸಿದ ಬೀಗತಯಾರಕ ಬಲು ಶ್ರದ್ಧೆಯಿಂದ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದ. ಇಂತು ಬಹುಕಾಲ ಸೆರೆವಾಸ ಅನುಭವಿಸಿದ ಬೀಗತಯಾರಕ ಒಂದು ದಿನ ಜೈಲಿನಿಂದ ತಪ್ಪಿಸಿಕೊಂಡ. ತಪ್ಪಿಸಿಕೊಂಡದ್ದು ಹೇಗೆ ಎಂಬುದಾಗಿ ಜನ ಕೇಳಿದಾಗ ಅವನು ಹೇಳಿದ, ‘ಅನೇಕ ವರ್ಷಗಳ ಕಾಲ ಜೈಲಿನಿಂದ ಮುಕ್ತಿ ದೊರೆಯಲಿ ಎಂಬುದಾಗಿ ಪ್ರಾರ್ಥಿಸಿದ ನಂತರ ಅದಕ್ಕಾಗಿ ಮಾಡಬೇಕಾದ್ದೇನು ಎಂಬುದು ಸ್ಪಷ್ಟವಾಗಿ ಕಣ್ಣೆದುರೇ ಗೋಚರಿಸಿತು. ಪ್ರಾರ್ಥನ ನೆಲಹಾಸುವಿನಲ್ಲಿ ನನ್ನ ಹೆಂಡತಿ ನನ್ನ ಬಂಧಿಸಿದ್ದ ಬೀಗದ ವಿನ್ಯಾಸವನ್ನು ಹೆಣೆದಿದ್ದದ್ದು ಒಂದು ದಿನ ಇದ್ದದ್ದಕ್ಕಿದ್ದಂತೆ ಗೋಚರಿಸಿತು. ಈ ಅರಿವು ಮೂಡಿದಾಕ್ಷಣ ಸೆರೆಮನೆಯಿಂದ ಹೊರಬರಲು ಅಗತ್ಯವಾದ ಎಲ್ಲ ಮಾಹಿತಿ ಈಗಾಗಲೇ ತನ್ನ ಹತ್ತಿರವಿದೆ ಎಂಬುದು ಅರ್ಥವಾಯಿತು. ತದನಂತರ ನಾನು ನನ್ನ ಕಾವಲಿನವರ ಮಿತ್ರತ್ವ ಗಳಿಸಲು ಆರಂಭಿಸಿದೆ. ಸೆರೆಮನೆಯಿಂದ ತಪ್ಪಿಸಿಕೊಳ್ಳಲು ತನಗೆ ಸಹಕರಿಸುವಂತೆ ಅವರ ಮನವೊಲಿಸಿದ್ದಲ್ಲದೆ ತನ್ನೊಂದಿಗೆ ಅವರೂ ಹೊರಬಂದು ಈಗ ನಡೆಸುತ್ತಿರುವುದಕ್ಕಿಂತ ಉತ್ತಮ ಜೀವನ ನಡೆಸಬಹುದು ಎಂಬುದನ್ನೂ ಮನವರಿಕೆ ಮಾಡಿದೆ. ಪಹರೆಯವರಾಗಿದ್ದರೂ ತಾವೂ ಸೆರೆಮನೆಯಲ್ಲಿಯೇ ಜೀವನ ಸವೆಸಬೇಕು ಎಂಬ ಅರಿವು ಅವರಿಗಾದದ್ದರಿಂದ ಅವರು ನನ್ನೊಂದಿಗೆ ಸಹಕರಿಸಲು ಒಪ್ಪಿದರು. ಅವರಿಗೂ ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗುವ ಇಚ್ಛೆ ಇದ್ದರೂ ಹೇಗೆ ಎಂಬುದು ತಿಳಿದಿರಲಿಲ್ಲ. ಬೀಗ ತಯಾರಕ ಹಾಗೂ ಅವನ ಪಹರೆಯವರು ತಯಾರಿಸಿದ ಕಾರ್ಯಯೋಜನೆ ಇಂತಿತ್ತು: ಪಹರೆಯವರು ಲೋಹದ ತುಂಡುಗಳನ್ನು ತರಬೇಕು. ಅವನ್ನು ಉಪಯೋಗಿಸಿ ಮಾರುಕಟ್ಟೆಯಲ್ಲಿ ಮಾರಬಹುದಾದ ವಸ್ತುಗಳನ್ನು ಬೀಗ ತಯಾರಕ ತಯಾರಿಸಬೇಕು. ಇಂತು ಅವರೀರ್ವರೂ ಜೊತೆಗೂಡಿ ತಪ್ಪಿಸಿಕೊಂಡು ಹೋಗಲು ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸಬೇಕು. ಅವರು ಸಂಪಾದಿಸಬಹುದಾದ ಅತ್ಯಂತ ಬಲಯುತವಾದ ಲೋಹದ ತುಂಡಿನಿಂದ ಸೆರೆಮನೆಯ ಬೀಗ ತೆರಯಬಹುದಾದ ಬೀಗದಕೈ ಒಂದನ್ನು ಬೀಗ ತಯಾರಕ ತಯಾರಿಸಬೇಕು. +ಎಲ್ಲವೂ ಯೋಜನೆಯಂತೆ ಜರಗಿ ಬೀಗದಕೈ ಸಿದ್ಧವಾದ ನಂತರ ಒಂದು ರಾತ್ರಿ ಪಹರೆಯವರು ಮತ್ತು ಬೀಗ ತಯಾರಕ ಸೆರೆಮನೆಯ ಬೀಗ ತೆರೆದು ಹೊರನಡೆದರು. ಬೀಗ ತಯಾರಕನ ಹೆಂಡತಿ ಅವನಿಗಾಗಿ ಕಾಯುತ್ತಿದ್ದಳು. ಅವನು ಪ್ರಾರ್ಥನೆಯ ನೆಲಹಾಸನ್ನು ಸೆರೆಮನೆಯಲ್ಲಿಯೇ ಬಿಟ್ಟಿದ್ದನು, ಅದನ್ನು ಅರ್ಥೈಸಬಲ್ಲ ಜಾಣ ಕೈದಿಯೊಬ್ಬನಿಗೆ ಅದು ಮುಂದೆಂದಾದರೂ ನೆರವಾದೀತು ಎಂಬ ನಂಬಿಕೆಯಿಂದ. ಈ ರೀತಿ ಬೀಗ ತಯಾರಕ ಅವನ ಪ್ರೀತಿಯ ಹೆಂಡತಿಯೊಂದಿಗೆ ಸಂತೋಷದಿಂದ ಪುನಃ ಸೇರಿಕೊಂಡನು. ಮಾಜಿ ಪಹರೆಯವರು ಅವನ ಮಿತ್ರರಾದರು. ಎಲ್ಲರೂ ಸಾಮರಸ್ಯದಿಂದ ಬಾಳಿದರು. +***** +೩. ಮರಳು ಹೇಳಿದ ಕತೆ +ದೂರದ ಪರ್ವತಶ್ರೇಣಿಯೊಂದರಲ್ಲಿ ಹುಟ್ಟಿದ ತೊರೆಯೊಂದು ಎಲ್ಲ ರೀತಿಯ ಗ್ರಾಮಾಂತರ ಪ್ರದೇಶಗಳ ಮೂಲಕ ಹರಿದು ಅಂತಿಮವಾಗಿ ಮರುಭೂಮಿಯೊಂದರ ಮರಳಿನ ರಾಶಿಯನ್ನು ತಲುಪಿತು. ಇತರ ಎಲ್ಲ ಅಡೆತಡೆಗಳನ್ನು ದಾಟಿದ ರೀತಿಯಲ್ಲಿಯೇ ಇದನ್ನೂ ದಾಟಲು ತೊರೆ ಪ್ರಯತ್ನಿಸಿತಾದರೂ ಸಾಧ್ಯವಾಗಲಿಲ್ಲ. ಅದು ಎಷ್ಟು ವೇಗವಾಗಿ ಮರಳನ್ನು ದಾಟಲು ಪ್ರಯತ್ನಿಸುತ್ತಿತ್ತೋ ಅಷ್ಟೇ ವೇಗವಾಗಿ ಅದರ ನೀರು ಮಾಯವಾಗುತ್ತಿತ್ತು. ಮರುಭೂಮಿಯನ್ನು ಅದು ದಾಟಬೇಕೆಂಬುದು ದೈವೇಚ್ಛೆ ಎಂಬುದಾಗಿ ಅದು ನಂಬಿದ್ದರೂ ಹೇಗೆ ಎಂಬುದು ಅದಕ್ಕೆ ತಿಳಿಯಲೇ ಇಲ್ಲ. ಆಗ ಮರುಭೂಮಿಯೊಳಗಿನಿಂದಲೇ ಹೊಮ್ಮಿದ ಗುಪ್ತಧ್ವನಿಯೊಂದು ಪಿಸುಗುಟ್ಟಿತು, “ಗಾಳಿ ಮರುಭೂಮಿಯನ್ನು ದಾಟುತ್ತದೆ, ಅಂತೆಯೇ ತೊರೆಯೂ ಕೂಡ.” +ಈ ಹೇಳಿಕೆಗೆ ತೊರೆ ಇಂತು ಆಕ್ಷೇಪಿಸಿತು: “ನಾನು ಎಷ್ಟೇ ವೇಗವಾಗಿ ಮರಳಿಗೆ ಢಿಕ್ಕಿ ಹೊಡೆದರೂ ಮರಳು ನೀರನ್ನೆಲ್ಲ ಹೀರುತ್ತದೆ, ಗಾಳಿಯಾದರೋ ಮರಳಿನ ಮೇಲಿನಿಂದ ಹಾರಬಲ್ಲದ್ದಾದ್ದರಿಂದ ಮರುಭೂಮಿಯನ್ನು ದಾಟುತ್ತದೆ.” +“ನಿನಗೆ ರೂಢಿಯಾಗಿರುವಂತೆ ಮರಳಿಗೆ ಢಿಕ್ಕಿ ಹೊಡೆದರೆ ನೀನು ಮರುಭೂಮಿಯನ್ನು ದಾಟಲಾರೆ. ನೀನು ಮಾಯವಾಗುವೆ ಅಥವ ಜೌಗು ಭೂಮಿಯ ಕೆಸರು ಆಗುವೆ. ಗಮ್ಯ ಸ್ಥಾನಕ್ಕೆ ಗಾಳಿ ನಿನ್ನನ್ನು ಒಯ್ಯಲು ಬಿಡು.” +“ಅಂತಾಗುವುದು ಹೇಗೆ?” +“ನಿನ್ನನ್ನು ಹೀರಲು ಗಾಳಿಗೆ ಅವಕಾಶ ನೀಡು.” +ಈ ಸಲಹೆ ನದಿಗೆ ಒಪ್ಪಿಗೆ ಆಗಲಿಲ್ಲ. ಈ ಹಿಂದೆ ಅದನ್ನು ಯಾರೂ ಹೀರಿರಲಿಲ್ಲ. ತನ್ನ ವೈಯಕ್ತಿಕತೆ ಕಳೆದುಕೊಳ್ಳಲು ಅದಕ್ಕೆ ಇಷ್ಟವೂ ಇರಲಿಲ್ಲ. ಒಮ್ಮೆ ಅದು ಕಳೆದು ಹೋದರೆ ಅದನ್ನು ಪುನಃ ಮರಳಿ ಪಡೆಯಲು ಸಾಧ್ಯವೇ ಎಂಬುದು ಯಾರಿಗೆ ಗೊತ್ತಿದೆ? +ಮರಳು ಹೇಳಿತು, “ಗಾಳಿ ಈ ಕಾರ್ಯವನ್ನು ಬಲು ಹಿಂದಿನಿಂದಲೂ ಮಾಡುತ್ತಿದೆ. ಅದು ನೀರನ್ನು ಹೀರಿ ಮರುಭೂಮಿಯ ಮೇಲಿನಿಂದ ಅದನ್ನು ಒಯ್ದು ಪುನಃ ಕೆಳಕ್ಕೆ ಬೀಳಲು ಬಿಡುತ್ತದೆ. ಮಳೆಯ ರೂಪದಲ್ಲಿ ನೆಲಕ್ಕೆ ಬಿದ್ದ ನೀರು ಪುನಃ ತೊರೆಯಾಗುತ್ತದೆ.” +“ನೀನು ಹೇಳುತ್ತಿರುವುದು ನಿಜವೋ ಅಲ್ಲವೋ ಎಂಬುದು ನನಗೆ ತಿಳಿಯುವುದಾದರೂ ಹೇಗೆ?” +“ನಾನು ಹೇಳುತ್ತಿರುವುದು ನಿಜ. ನೀನು ಅದನ್ನು ನಂಬದೇ ಇದ್ದರೆ ಜೌಗು ಭೂಮಿಯಲ್ಲಿನ ಕೆಸರಿಗಿಂತ ಭಿನ್ನವಾದದ್ದೇನೂ ಆಗುವುದಿಲ್ಲ. ಅಂತಾಗಲೂ ಬಹಳ, ಬಹಳ ವರ್ಷಗಳು ಬೇಕಾಗುತ್ತವೆ. ಆ ಸ್ಥಿತಿ ನದಿಯದ್ದರಂತಂತೂ ಇರುವುದಿಲ್ಲ.” +“ಇಂದು ನಾನು ಯಾವ ತೊರೆ ಆಗಿದ್ದೇನೆಯೋ ಆ ತೊರೆಯಂತೂ ಆಗಿರುವುದಿಲ್ಲ.” +“ ಇಲ್ಲಿಯೇ ಇದ್ದರೂ ಗಾಳಿಯೊಂದಿಗೆ ಹೋದರೂ ನೀನು ಈಗಿನ ತೊರೆಯ ಸ್ಥಿತಿಯಲ್ಲಂತೂ ಇರುವುದಿಲ್ಲ. ನಿನ್ನ ಇಂದಿನ ತೋರಿಕೆಯ ಹಿಂದೆ ಅಡಗಿರುವ ಮೂಲಭೂತ ಸಾರವನ್ನು ಗಾಳಿ ಒಯ್ಯುತ್ತದೆ. ಅದು ಪುನಃ ತೊರೆಯ ರೂಪ ಧರಿಸುತ್ತದೆ. ನಿನ್ನನ್ನು ನೀನು ತೊರೆ ಅಂದುಕೊಳ್ಳುತ್ತಿರುವುದು ಏಕೆಂದರೆ ನಿನ್ನ ಮೂಲಭೂತ ಸಾರ ಏನೆಂಬುದು ನಿನಗೇ ತಿಳಿದಿಲ್ಲ.” +***** +೪. ಅಪಾತ್ರ +ಈ ಲೋಕದಲ್ಲಿ ನಾನು ಬಾಲ್ಯದಿಂದಲೂ ಒಬ್ಬ ಅಪಾತ್ರನಾಗಿದ್ದೇನೆ. ನನ್ನನ್ನು ಯಾರೂ, ನನ್ನ ತಂದೆಯೂ, ಅರ್ಥ ಮಾಡಿಕೊಂಡಿಲ್ಲ ಎಂಬುದು ನನಗೆ ತಿಳಿದಿತ್ತು. +ಒಮ್ಮೆ ನನ್ನ ತಂದೆ ಹೇಳಿದ್ದರು, “ಹುಚ್ಚಾಸ್ಪತ್ರೆಗೆ ದಾಖಲು ಮಾಡುವಷ್ಟು ಹುಚ್ಚ ನೀನಲ್ಲ, ವಿರಕ್ತರ ನಿವಾಸಕ್ಕೆ ದಾಖಲು ಮಾಡಬಹುದಾದ ಸನ್ಯಾಸಿಯೂ ನೀನಲ್ಲ. ನೀನೆಂಬುದು ನನಗೆ ತಿಳಿಯುತ್ತಿಲ್ಲ.” +ನಾನು ಉತ್ತರಿಸಿದ್ದೆ, “ಅಪ್ಪಾ, ಈ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾನು ನಿಮಗೆ ತಿಳಿಸಬಲ್ಲೆ. ಬಾತುಕೋಳಿಯ ಮೊಟ್ಟೆಯೊಂದನ್ನು ಕಾವು ಕೊಟ್ಟು ಮರಿ ಮಾಡಲೋಸುಗ ಒಮ್ಮೆ ಹೇಂಟೆಯ ಅಡಿಯಲ್ಲಿ ಇಡಲಾಯಿತು. ಮೊಟ್ಟೆಯೊಡೆದು ಬಾತುಕೋಳಿಯ ಮರಿ ಹೊರ ಬಂದಾಗ ಅದು ತಾಯಿ ಹೇಂಟೆಯ ಜೊತೆಯಲ್ಲಿ ಕೊಳವೊಂದರ ವರೆಗೆ ನಡೆಯಿತು. ಕೊಳದ ನೀರಿನಲ್ಲಿ ಬಾತುಕೋಳಿಯ ಮರಿ ಬಲು ಖುಷಿಯಿಂದ ಒಂದು ಮುಳುಗು ಹಾಕಿತು. ತಾಯಿ ಹೇಂಟೆಯಾದರೋ ದಡದಲ್ಲಿಯೇ ನಿಂತುಕೊಂಡು ಮರಿಯನ್ನು ಕರೆಯುತ್ತಿತ್ತು. ಅಪ್ಪಾ, ಈಗ ನಾನು ಸಾಗರದಲ್ಲಿ ಮುಳುಗು ಹಾಕಿ ಅದೇ ನನ್ನ ಮನೆ ಎಂಬುದನ್ನು ಕಂಡುಕೊಂಡಿದ್ದೇನೆ. ನೀವು ದಡದಲ್ಲಿಯೇ ನಿಂತುಕೊಂಡಿರಲು ಇಚ್ಛಿಸುವಿರಾದೆ ಅದು ನನ್ನ ತಪ್ಪೇ? ನನ್ನ ಮೇಲೆ ನೀವು ತಪ್ಪು ಹೊರಿಸುವಂತಿಲ್ಲ.” +***** +೫. ಎಲ್ಲವನ್ನೂ ಕಳೆದುಕೊಳ್ಳುವುದು +ನಗರಕ್ಕೆ ಹೋಗುವ ದಾರಿಯಲ್ಲಿ ಹುಬ್ಬು ಗಂಟಿಕ್ಕಿಕೊಂಡು ನಡೆಯುತ್ತಿದ್ದವನೊಬ್ಬನನ್ನು ಒಬ್ಬ ಮೌಲಾ ನೋಡಿದ. “ನಿನ್ನ ಸಮಸ್ಯೆ ಏನು?” ಕೇಳಿದ ಮುಲ್ಲಾ. ಆ ಮನುಷ್ಯ ಒಂದು ಹರಕಲು ಚೀಲ ಎತ್ತಿ ತೋರಿಸುತ್ತಾ ಹೇಳಿದ, “ಈ ವಿಶಾಲ ಜಗತ್ತಿನಲ್ಲಿ ನನ್ನದು ಅಂದುಕೊಳ್ಳಬಹುದಾದದ್ದೆಲ್ಲವನನ್ನು ಹಾಕಿದರೂ ಈ ದರಿದ್ರ ಚೀಲ ತುಂಬುವುದಿಲ್ಲ.” ಮೌಲಾ “ಛೆ, ಅಯ್ಯೋ ಪಾಪ,” ಅಂದವನೇ ಚೀಲವನ್ನು ಆ ಮನುಷ್ಯನ ಕೈನಿಂದ ಕಸಿದುಕೊಂಡು ನಗರದತ್ತ ರಸ್ತೆಯಲ್ಲಿ ಓಡಿ ಹೋದ. ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ ಆ ಮನುಷ್ಯ ಹಿಂದೆಂದಿಗಿಂತಲೂ ಸಂಕಟಪಡುತ್ತಾ ಬಿಕ್ಕಿಬಿಕ್ಕಿ ಅಳುತ್ತಾ ಪ್ರಯಾಣ ಮುಂದುವರಿಸಿದ. ಚೀಲದೊಂದಿಗೆ ಓಡಿ ಹೋಗಿದ್ದ ಮೌಲಾ ರಸ್ತೆಯಲ್ಲಿದ್ದ ಒಂದು ತಿರುವು ಆದ ನಂತರ ಚೀಲವನ್ನು ರಸ್ತೆಯ ಮಧ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಅದರ ಮಾಲಿಕನಿಗೆ ಕಾಣುವಂತೆ ಇಟ್ಟು ಪೊದೆಯೊಂದರ ಹಿಂದೆ ಅಡಗಿ ಕುಳಿತ. ರಸ್ತೆಯ ಮಧ್ಯದಲ್ಲಿ ಇದ್ದ ತನ್ನ ಚೀಲವನ್ನು ಕಂಡೊಡನೆ ಆ ಮನುಷ್ಯ ಸಂತೋಷದಿಂದ ನಗುತ್ತಾ ಬೊಬ್ಬೆ ಹೊಡೆದ, “ನನ್ನ ಚೀಲ. ನಿನ್ನನ್ನು ನಾನು ಕಳೆದುಕೊಂಡೆ ಎಂಬುದಾಗಿ ಆಲೋಚಿಸಿದ್ದೆ.” ಪೊದೆಯ ಹಿಂದೆ ಅಡಗಿ ಕುಳಿತಿದ್ದ ಮೌಲಾ ಲೊಚಗುಟ್ಟುತ್ತಾ ತನಗೆ ತಾನೇ ಹೇಳಿಕೊಂಡ, “ಒಬ್ಬನನ್ನು ಸಂತೋಷಪಡಿಸುವ ಒಂದು ವಿಧಾನ ಇದು!” +***** \ No newline at end of file diff --git a/PanjuMagazine_Data/article_101.txt b/PanjuMagazine_Data/article_101.txt new file mode 100644 index 0000000000000000000000000000000000000000..dbfcadac084b9829c0a4ab9bfc8d2bb686b7e61c --- /dev/null +++ b/PanjuMagazine_Data/article_101.txt @@ -0,0 +1,33 @@ +ನಾನು ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುತ್ತಾ ಕೂರುವುದಿಲ್ಲ; ಆದರೆ ನನ್ನನ್ನೇ ಕೇಳಿಕೊಳ್ಳುತ್ತಿರುತ್ತೇನೆ. ಸಾಧ್ಯವಾದಷ್ಟೂ ಪ್ರಶ್ನೆಗಳೇ ಹುಟ್ಟದಂತೆ ನೋಡಿಕೊಳ್ಳುತ್ತಿರುತ್ತೇನೆ! ಇದೊಂದು ಸುಖವಾದ ಮತ್ತು ನಿರಾಯಾಸ ಸ್ಥಿತಿ. ಇದಕ್ಕೆ ವಿಶೇಷವಾದ ಜ್ಞಾನವೇನೂ ಬೇಡ; ಎಂಥದೋ ಅಲೌಕಿಕವೋ; ಅಧ್ಯಾತ್ಮಸಿದ್ಧಿಯೋ ಎಂಬಂಥ ಹೆಸರಿಡುವುದೂ ಬೇಡ. ಲೌಕಿಕದಲ್ಲೇ ಇದ್ದು, ಮುಳುಗಿ, ಎದ್ದು ಬದುಕು ನಡೆಸಿದರೂ ಸುಖ ಮತ್ತು ನೆಮ್ಮದಿಯನ್ನು ಹೊಂದಬಹುದು. ಅದಕ್ಕಾಗಿ ಪೂಜೆ, ಪುರಸ್ಕಾರ, ದೇವರು, ಧರ್ಮ, ಅಧ್ಯಾತ್ಮ ಅಂತ ಲೋಕೋತ್ತರಕೆ ಕೈ ಚಾಚುವ ಅಗತ್ಯವಿಲ್ಲ. ಕೈ ಚಾಚಿದರೆ ತಪ್ಪೇನೂ ಇಲ್ಲ. ಅವರವರ ಸ್ವಾತಂತ್ರ್ಯ. ನಿರ್ಬಂಧಗಳಿಗೆ ಒಳಪಟ್ಟ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನವೇ ದಯಪಾಲಿಸಿದೆ. ಹಾಗಾಗಿ ಅವರವರ ಇಷ್ಟಾನಿಷ್ಟವಿದು. ಒಟ್ಟಾರೆ ಲೌಕಿಕದಲಿದ್ದೇ ಲೋಕೋತ್ತರವಾಗುವ ಸಾಧ್ಯತೆಯನ್ನು ನಾವೇ ನಮ್ಮನುಭವದ ಮೂಲಕ ಆವಿಷ್ಕರಿಸಿಕೊಳ್ಳಬೇಕೆಂಬುದು ಇಂಥಲ್ಲಿ ನನ್ನ ಮಾತು. ಪ್ರಶ್ನೆಗಳೇ ಹುಟ್ಟದಂಥ ಸ್ಥಿತಿಗೆ ಕೊಂಡೊಯ್ಯುವಂಥ ಸಾಮರ್ಥ್ಯ ಇರುವುದು ಆಧ್ಯಾತ್ಮಿಕ ಗುರುಗಳಿಗೆ. ಅಂಥ ಅರ್ಹತೆ ಮತ್ತು ಯೋಗ್ಯತೆಗಳನ್ನು ಶಿಷ್ಯರೆನಿಸಿಕೊಂಡವರೂ ಹೊಂದಿರಬೇಕು. ಇರಲಿ. +ಈ ಲೌಕಿಕ ಸುಖ ಮತ್ತು ನೆಮ್ಮದಿಗಳಿಗಾಗಿ ಸ್ವಲ್ಪ ನಮ್ಮೊಳಗನ್ನು ಮತ್ತು ನಮ್ಮನ್ನು ಸುತ್ತುವರಿದ ಸಮುದಾಯವನ್ನು ಅರಿಯಬೇಕು. ಈ ವಿಷಯದಲ್ಲಿ ಮನೋವಿಜ್ಞಾನವು ಸಹಾಯಕ್ಕೆ ಬರಬಹುದು. ನನ್ನ ಆತ್ಮೀಯರೊಬ್ಬರು ಯಾವುದೋ ಸಂಗತಿಯನ್ನು ಕುರಿತು ಮಾತಾಡುತ್ತಾ, ‘ಅದೇ ಸರ್, ನೀವು ಪದೇ ಪದೇ ನಮ್ಮೊಳಗು, ನಮ್ಮಾಳದಲ್ಲಿ, ಒಳಗಿನೊಳಗೇ ಅಂತ ಬರೀತಿರ್ತೀರಲ್ಲಾ, ಆ ಥರ!’ ಎಂದು ಪಾಯಿಂಟೌಟ್ ಮಾಡಿದರು. ಹೌದೆಂದು ಗೋಣಾಡಿಸಿದೆ. ನಮ್ಮಲ್ಲಿ ಸೂಕ್ಷ್ಮತೆ ಇದ್ದರೆ, ಒಂದಷ್ಟು ಏಕಾಂತ ಕಂಡುಕೊಂಡರೆ ನನ್ನೊಳಗಿರುವ ನಾನನ್ನು ಸದೆಬಡಿಯಬಹುದು ಅಥವಾ ಪಳಗಿಸಬಹುದು! ಇದನ್ನೇ ಅಂತರ್ಯಾತ್ರೆ ಎನ್ನುವುದು. ಹೊರಗೆ ಎಷ್ಟೇ ಸುತ್ತಾಡಿದರೂ ಯಾರೊಂದಿಗೆ ಎಷ್ಟೇ ಆಪ್ತವಾಗಿದ್ದರೂ ಕೊನೆಗೂ ಉಳಿಯುವುದು ನಾನೇ! ಹುಟ್ಟಿನಿಂದ ಸಾಯುವವರೆಗೆ ನಾನಷ್ಟೇ ನನ್ನೊಂದಿಗಿರಲು ಸಾಧ್ಯ; ನಾನಷ್ಟೇ ನನ್ನೊಂದಿಗಿರುವವನೊಂದಿಗೆ ಜವಾಬು-ದಾರಿ. ಆತ ಕೇಳುವ ಪ್ರಶ್ನೆಗೆ ಉತ್ತರಿಸುವವ ನಾನೇ. ನನ್ನೆಲ್ಲ ಪ್ರಶ್ನೆ, ಸಮಜಾಯಿಷಿ ಮತ್ತು ಸಮಾಧಾನಗಳು ಅವನೊಂದಿಗಷ್ಟೇ! ಇದಕಾಗಿಯೇ ರಹಸ್ಯದರ್ಶಿಗಳು, ಸಂತರು, ಗುರುಗಳು, ದಾರ್ಶನಿಕರು, ಆತ್ಮಾನುಸಂಧಾನಿಗರು ಧ್ಯಾನಸ್ಥರಾಗುವರು; ಅಂತರಂಗದ ನಿಜ ಪಯಣದಲಿ ದಾರಿ ಹುಡುಕುತ್ತಾ ಸಾಗುವರು. ಕಂಡಷ್ಟನ್ನು ಉಣಿಸುವರು; ಕಂಡುಂಡದ್ದನ್ನು ಕಾಣಿಸುವರು. ಆದರೆ ನಾವು ಜನ್ಮಪೂರ್ತಿ ಇನ್ನೊಬ್ಬರ ಮೆಚ್ಚುಗೆಗೆ, ಅಭಿಪ್ರಾಯಗಳಿಗೆ ಅದರಲ್ಲೂ ಸದಭಿಪ್ರಾಯಗಳಿಗೆ ಕಾಯುತ್ತಾ ಕೂರುತ್ತೇವೆ. One who believes in himself has no need to convince other (ಸ್ಪಷ್ಟತೆಯಲ್ಲಿದ್ದವನು ಇತರರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿಲ್ಲ) ಎಂಬ ಮಾತು ಲಾವೋತ್ಸೆಯದು. ಶತಮಾನಗಳಷ್ಟು ಹಳೆಯದು ಕೂಡ. ಆದರೂ ನಾವು ಲೋಕಸಂಸಾರಿಗಳು. ನಮ್ಮ ಆತ್ಮಸಂತೋಷಕಿಂತ ಇನ್ನೊಬ್ಬರನ್ನು ಮೆಚ್ಚಿಸಲು ಹೊರಡುವುದೇ ಹೆಚ್ಚು. ನಮ್ಮ ಆಧುನಿಕ ಶಿಕ್ಷಣ, ಧ್ಯೇಯ-ಗುರಿ, ಮಾಡುವ ಉದ್ಯೋಗ, ಸ್ಥಾನಮಾನ, ಅಧಿಕಾರ-ಅಹಂಕಾರ, ಪದವಿ, ಪುರಸ್ಕಾರ, ಪ್ರಶಸ್ತಿ ಎಲ್ಲವೂ ಇದನ್ನೇ ಕೇಂದ್ರೀಕರಿಸಿವೆ. ‘ಬಾಸ್ ಅನ್ನು ಒಪ್ಪಿಸಿ, ಅವರ ಮನಸ್ಸಂತೋಷಪಡಿಸುವುದೇʼ ವೃತ್ತಿಯ ಪರಮೋಚ್ಚ ಕಾಯಕವಾಗಿರುತ್ತದೆ. ಇದು ವೃತ್ತಿಯ ಮಾತಾಯಿತು. ಆಮೇಲಾದರೂ ನಾವು ನಮ್ಮೊಂದಿಗಿರುವಾಗ ಸ್ವಲ್ಪ ಹೊತ್ತು ನಮ್ಮದೇ ಆದ ಸ್ವಂತ ಸಮಯ ಎಂಬುದನ್ನು ಕಾಯ್ದಿರಿಸಿಕೊಂಡು, ಆತ್ಮಾವಲೋಕನಕೆ ಇಳಿಯುವ, ಆತ್ಮಾನಂದ ಹೊಂದುವ ರಸಗಳಿಗೆಗೆ ಮನಸು ಮಾಡಬೇಕು. ಆತ್ಮವಂಚನೆಗೈಯದೇ ನನಗೆ ನಾನೇ ಮುಖಾಮುಖಿಯಾಗಬೇಕು. ಇದಕ್ಕೆ ಬಿಡುವೂ ಬೇಕು; ಅಂತರ್ದನಿಯೊಂದಿಗೆ ಸಂವಾದಿಸುವಂಥ ಧೈರ್ಯ-ಸ್ಥೈರ್ಯಗಳೂ ನಮ್ಮಲ್ಲಿರಬೇಕು. ಈ ಹಿನ್ನೆಲೆಯಿಂದ ಜ್ಞಾನೋದಯ ಎಂದರೆ ಏನು? ಎಂಬ ಪ್ರಶ್ನೆ ಮಾತ್ರ ನನ್ನನ್ನು ಚಿಕ್ಕಂದಿನಿಂದ ಕಾಡುತ್ತಲೇ ಇದೆ. +‘ಬೋಧೀವೃಕ್ಷದ ಕೆಳಗೆ ಬುದ್ಧರಿಗೆ ಜ್ಞಾನೋದಯವಾಯಿತು’ ಎಂದು ನಾವೆಲ್ಲರೂ ಚಿಕ್ಕಂದಿನಿಂದಲೂ ಓದಿಕೊಂಡವರು. ಇದನ್ನೇ ಪರೀಕ್ಷೆಯಲ್ಲಿ ಬರೆದೂ ಬಂದವರು. ಆದರೆ ಸ್ನಾತಕೋತ್ತರ ತರಗತಿಯವರೆಗೂ ‘ಜ್ಞಾನೋದಯ ಎಂದರೆ ಏನು?’ ಎಂದು ಯಾವ ಶಿಕ್ಷಕರೂ ನನ್ನನ್ನು ಹಿಡಿದು ನಿಲ್ಲಿಸಿ ಕೇಳಲಿಲ್ಲ. ವಿಚಿತ್ರವಾದರೂ ಸತ್ಯವೆಂದರೆ ನಮಗಾರಿಗೂ ಈ ಒಂದು ಸಾಲಿನ ಪ್ರಶ್ನೆಗೆ ಒಂದೇ ಸಾಲಿನ ಉತ್ತರ ಗೊತ್ತೂ ಇಲ್ಲ! ‘ಆಸೆಯೇ ದುಃಖಕ್ಕೆ ಮೂಲ’ ಎಂಬುದು ಬುದ್ಧರಿಗಾದ ಜ್ಞಾನೋದಯ ಎನ್ನುತ್ತೇವೆ. ಆದರೆ ‘ಈ ಮಾತನ್ನು ಬುದ್ಧದೇವರು ಎಲ್ಲಿಯೂ ಹೇಳಿಯೇ ಇಲ್ಲ; ಇದು ಕೇವಲ ಆತನ ಹೆಸರಿನಲ್ಲಿ ಚಲಾವಣೆಯಾದ ಕಲ್ಪಿತ ವಾಕ್ಯ’ ಎಂಬುದನ್ನು ಬಹುಶ್ರುತ ವಿದ್ವಾಂಸರಾದ ಶ್ರೀ ಎಸ್ ನಟರಾಜ ಬೂದಾಳು ಅವರು ಪ್ರತಿಪಾದಿಸುತ್ತಾರೆ. ಅದು ಏನೇ ಇರಲಿ, ಗೌತಮ ಬುದ್ಧರು ನೀಡಿದ ಪ್ರವಚನಗಳ ಒಟ್ಟು ಮೊತ್ತದ ಸಾರವನ್ನು ಹೀಗೆ ಸಂಗ್ರಹಿಸಿ, ಬಹಳ ಹಿಂದಿನಿಂದಲೇ ಜನಪ್ರಿಯಗೊಳಿಸಿರುವುದಂತೂ ನಿಜ. ನಮ್ಮ ಆಸೆ, ಆಕಾಂಕ್ಷೆ ಮತ್ತು ಸೀಮಿತ ಚಿಂತನೆಗಳೇ ದುಃಖಕ್ಕೆ ಮೂಲ ಎಂಬುದೇ ಆತನ ಉಪದೇಶಾಮೃತದ ಸಾರ. +ಅಂದರೆ, ತನ್ನನ್ನು ತಾನು ಅರಿಯುವುದು ನಿಜವಾದ ಜ್ಞಾನೋದಯ ಎಂದರೆ ಒಪ್ಪುತ್ತದೆ. ‘ತನ್ನ ತಾನರಿದೊಡೆ ನುಡಿಯೆಲ್ಲ ತತ್ತ್ವ ನೋಡಾ’ ಎಂದಿಲ್ಲವೇ ಅಲ್ಲಮಪ್ರಭುಗಳು. ಅಜ್ಞಾನದ ಅರಿವಾದರೆ ಅದೇ ಜ್ಞಾನೋದಯ ಎಂದರೂ ಸರಿಯೇ. ಆದರೆ ಈ ಅಜ್ಞಾನ ಯಾವುದು? ಇದನ್ನು ಅರಿಯಲು ಜ್ಞಾನ ಬೇಕಲ್ಲವೇ? ಅವರವರ ದೃಷ್ಟಿಯಲ್ಲಿ ಅವರವರ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಜ್ಞಾನೋದಯದ ವ್ಯಾಖ್ಯಾನ ಬೇರೆಯೇ ಆಗಬಹುದು. ಇದನ್ನು ಸಾರ್ವತ್ರಿಕ ಮಾಡಲಾಗದು. ಏಕೆಂದರೆ ನನ್ನ ಹುಟ್ಟು, ಬಾಲ್ಯ, ಪರಿಸರ, ಬೆಳೆಸಿದ ತಾಯ್ತಂದೆಯರು, ಬಂಧು ಬಳಗ, ಕೊಟ್ಟ ಶಿಕ್ಷಣ, ನೆರೆ ಹೊರೆ, ಎದುರಾದ ಅನುಭವಗಳು ಪ್ರತಿಯೊಬ್ಬರಿಗೂ ವಿಭಿನ್ನ. ಅನುಭವ ಮತ್ತು ತಿಳಿವಿನ ಹಿನ್ನೆಲೆಯಲ್ಲಿ ತಮ್ಮದೇ ಆದ ಜೀವನದರ್ಶನವೊಂದನ್ನು ರೂಪಿಸಿಕೊಂಡಿರುತ್ತಾರೆ. ಅವರವರ ಮಟ್ಟಿಗೆ ಅದು ಸರಿಯೇ. +ಇಷ್ಟಕೂ ನಮ್ಮ ಅಭಿಪ್ರಾಯಗಳೂ ಕಾಲಾನಂತರ ಬದಲಾಗಬಹುದು. ಓದುವಾಗ ಇದ್ದ ಮನಸ್ಥಿತಿಯು ದುಡಿಯುವಾಗ ಇಲ್ಲದಿರಬಹುದು. ಅಂತೆಯೇ ಬದುಕಿನ ದೃಷ್ಟಿಕೋನಗಳಾಗಲೀ ಆದ್ಯತೆಗಳಾಗಲೀ ಬದಲಾಗುತ್ತಿರುತ್ತವೆ. ಫ್ಯಾಷನ್ನುಗಳು ಬದಲಾದ ಹಾಗೆ, ಬಾಳುವೆಯ ಪ್ಯಾಷನ್ಗಳೂ ಬದಲಾಗುತ್ತಿರುತ್ತವೆ. ಏನೋ ಆಗಬೇಕೆಂದು ಹೊರಟು ಇನ್ನೇನೋ ಆಗಿರುತ್ತೇವೆ. ನಾವು ಓದಿಕೊಂಡು ಬಂದದ್ದಕ್ಕೂ ಮಾಡುತ್ತಿರುವ ವೃತ್ತಿಗೂ ತಾಳಮೇಳವೇ ಇಲ್ಲದಿರಬಹುದು. ಹುಚ್ಚುಚ್ಚು ಆಸೆ ಆಕಾಂಕ್ಷೆಗಳು ನಮ್ಮನ್ನು ಮುತ್ತಿ, ಅದರ ಈಡೇರಿಕೆಗಾಗಿ ಏನೆಲ್ಲಾ ಕಳೆದುಕೊಂಡಿರಲೂಬಹುದು. ಕಾಲಕ್ರಮೇಣ, ಕಾಲಕಳೆದಂತೆಲ್ಲಾ, ನಾವು ಬದುಕಿನ ನೋವು ನಲಿವುಗಳಿಗೆ ಮುಕ್ತವಾಗಿ ತೆರೆದುಕೊಂಡಂತೆಲ್ಲಾ ಅನುಭವ ಶ್ರೀಮಂತಿಕೆಯಿಂದ ಪಕ್ವಗೊಂಡಂತೆಲ್ಲಾ ‘ಏನೆಲ್ಲ ಭ್ರಮೆಗಳಲ್ಲಿ ಬದುಕನ್ನು ಸವೆಸಿದೆವಲ್ಲಾ!’ ಎಂದು ನೊಂದುಕೊಳ್ಳಲೂ ಬಹುದು; ಅಥವಾ ನಕ್ಕು ಸುಮ್ಮನಾಗಲೂ ಬಹುದು. +ಕಾವ್ಯ, ಕತೆ, ಕಾದಂಬರಿ, ಪ್ರಬಂಧವೊಂದನ್ನು ಹತ್ತಾರು ವರುಷಗಳ ನಂತರ ಮತ್ತೊಮ್ಮೆ ಓದಿದರೆ ನಮಗಾಗುವ ಅನುಭವ ವಿಶೇಷವೇ ಬೇರೆ. ಅದೇ ಕಾದಂಬರಿ ಅಥವಾ ಸಾಹಿತ್ಯಕೃತಿ. ಆದರೆ ಅನಿಸಿದ, ತಿಳಿದ, ರಸಾನಂದ ಪಡೆದ ಸ್ವರೂಪದಲ್ಲಿ ವ್ಯತ್ಯಾಸವುಂಟಾಗುತ್ತದೆ. ಅದೇ ರೀತಿ ಎಷ್ಟೋ ವರುಷಗಳ ನಂತರ ಎರಡನೆಯ ಬಾರಿ ಸಿನಿಮಾ ನೋಡಿದರೂ ಆಗುವ ಅನುಭವದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅಂದರೆ ನಾವು ಬೆಳೆದಂತೆಲ್ಲಾ, ಬದಲಾದಂತೆಲ್ಲಾ ನಮ್ಮ ಬದುಕಿನ ಅನುಭವವೂ ಬೇರೆ ಬೇರೆಯಾಗುವುದು. ತೀರ್ಮಾನಗಳಲ್ಲಿ ಮಾರ್ಪಾಡಾಗಬಹುದು, ತಿದ್ದುಪಡಿಗಳಾಗಬಹುದು. ಸಂಪೂರ್ಣ ತದ್ವಿರುದ್ಧ ಅಭಿಪ್ರಾಯಗಳಲ್ಲಿ ನೆಲೆ ನಿಲ್ಲಬಹುದು. ಹಾಗಾಗಿ, ಜ್ಞಾನೋದಯ ಎಂದರೆ ಏನು? ಎಂಬುದಕ್ಕೆ ಒಂದು ಸಾಲಿನ ಉತ್ತರ ಸಾಧ್ಯವಿಲ್ಲ. ಭ್ರಮೆಗಳನ್ನು ಕಳಚುತ್ತಾ ಸಾಗುವುದು ಸಹ ಜ್ಞಾನೋದಯವೇ ಆಗಬಹುದು. ಆಗ, ಭ್ರಮೆಗಳೆಂದರೆ ಯಾವುವು? ಎಂಬ ಪ್ರಶ್ನೆ ಎದುರಾಗುವುದು. ಆಗಿನದು ಕೇವಲ ಭ್ರಮೆ ಎಂಬ ತಿಳಿವು ಮೂಡುವುದೂ ಜ್ಞಾನೋದಯವೇ! ಇದು ಒಂದು ದಿನದ ಮಾತಲ್ಲ; ಪ್ರತಿ ದಿನವೂ ನಮಗೆ ಹೊಸದೇ. ಹೊಸ ಅನುಭವ ಪ್ರಮಾಣಗಳೇ. ಕನಸು ಕಾಣುವಷ್ಟು ಹೊತ್ತೂ ನಮಗೆ ಅದು ಭ್ರಮೆಯಲ್ಲ; ಆದರೆ ಎಚ್ಚೆತ್ತ ಮೇಲೆ ಕನಸು ಕಂಡದ್ದು, ಅದಷ್ಟನ್ನು ನಿಜವೆಂದು ನಂಬಿದ್ದು ಭ್ರಮೆ ಎನಿಸಿಕೊಳ್ಳುತ್ತದೆ. ತತ್ತ್ವಚಿಂತಕರು ಹೇಳುವಂತೆ, ಈ ಬದುಕನ್ನು ಶಾಶ್ವತವೆಂದುಕೊಳ್ಳುವುದೇ ದೊಡ್ಡ ಭ್ರಮೆ! ನನ್ನದು ಭ್ರಮೆಯೋ? ಅಲ್ಲವೋ? ಎಂದು ಯಾರನ್ನೋ ಹುಡುಕಿಕೊಂಡು ಹೋಗಿ ಕೇಳುವುದು ಇನ್ನೊಂದು ಭ್ರಮೆ. ಹಾಗಾಗಿ, ಸದಾ ನನ್ನಲ್ಲೇ ನೆಲೆಯಾಗಿ ಇರುವ ಇನ್ನೊಬ್ಬನನ್ನು ಏಕಾಂತದಲ್ಲಿ ಕೇಳಿಕೊಳ್ಳಬೇಕು. ಹಾಗೆ ಕೇಳಿಕೊಂಡಾಗ ಲಭಿಸುವ ವಿಶೇಷ ಅನುಭೂತಿಯೇ ಜ್ಞಾನದ ಉದಯ. ಕೆಲವರು ಕಾರು ಓಡಿಸುವಾಗ ನಾನು ವಿಮಾನದ ಪೈಲಟ್ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ರಸ್ತೆಗೆ ಇವರ ಭ್ರಮೆ ಗೊತ್ತಿರುವುದಿಲ್ಲ! ‘ಭ್ರಮೆಗಳೇ ಬದುಕಾಗಬಾರದು ಎಂದೆ; ಕೆಲವರು ಇದನ್ನೂ ಒಂದು ಭ್ರಮೆ ಎನ್ನಬಹುದೇ? ಎಂದರು!’ +ಹುಟ್ಟಿನಿಂದ ಸಾಯುವವರೆಗೆ ನಾವು ನಮ್ಮೊಂದಿಗೆ ಮಾತ್ರ ಇರುತ್ತೇವೆ ಎಂಬುದನ್ನು ಜ್ಞಾಪಿಸಿಕೊಳ್ಳುತ್ತಿರಬೇಕು. ನಾವು ಏನು? ನಮ್ಮ ಬಯಕೆ ಬವಣೆಗಳೇನು? ನಮ್ಮ ತಪ್ಪು ಒಪ್ಪುಗಳೇನು? ನಮ್ಮ ಆರೋಗ್ಯದ ಸ್ಥಿತಿಯೇನು? ನಮಗೇನು ಇಷ್ಟ? ಕಷ್ಟ? ಎಂಬುದು ನಮಗೆ ಮಾತ್ರ ಗೊತ್ತಿರುವಂಥದು. ನಮ್ಮೊಳಗೆ ತುಡಿಯುವ ಮತ್ತು ಮಿಡಿಯುವ ಸಂಗತಿಗಳು ಯಾವುವು? ಎಂಬುದು ನಮಗಲ್ಲದೇ ಇನ್ನಾರಿಗೆ ಗೊತ್ತಾಗಲು ಸಾಧ್ಯ? ನಾವು ಬಾಯಿಬಿಟ್ಟು ಹೇಳಿಕೊಳ್ಳುವತನಕ! ಇಷ್ಟಕೂ ಎಲ್ಲವನೂ ಬಾಯಿಬಿಟ್ಟು ಹೇಳಲಾಗದು! ಹೇಳಿದರೆ ಅದರ ಮಹತ್ವ ಹೊರಟು ಹೋಗುವುದು. ಅಥವಾ ಹೇಳಲು ಆಗದೇ ಒದ್ದಾಡುವುದು. ಇದು ಒಂದಲ್ಲ ಒಂದು ಬಗೆಯಲ್ಲಿ ಎಲ್ಲರಿಗೂ ಆಗಿರುವ ಅನುಭವ. ಹಾಗಿರುವಾಗ ನಮ್ಮ ಶಕ್ತಿ ಸಾಮರ್ಥ್ಯಗಳು ನಮಗಷ್ಟೇ ಗೊತ್ತು; ಹಾಗೆಯೇ ನಂನಮ್ಮ ಇತಿಮಿತಿಗಳು ಕೂಡ! +ತುಂಬ ಸಲ ಅಂದುಕೊಳ್ಳುತ್ತಿರುತ್ತೇನೆ: ‘ಭ್ರಮೆಗಳನ್ನು ಕಳಚುತ್ತಾ ಹೋಗುವುದೇ ನಿಜ ಜ್ಞಾನೋದಯ.’ ಏನೇನೋ ಅಂದುಕೊಂಡದ್ದು, ಅದು ಹಾಗಲ್ಲ ಎಂಬ ವಾಸ್ತವ ಸತ್ಯದ ಅರಿವು. ಇದನ್ನೇ ಜ಼ೆನ್ಮಾರ್ಗವು ಖಾಲಿಯಾಗುವುದು ಎಂದಿದೆ. ತುಂಬಿಸಿಟ್ಟುಕೊಂಡದ್ದನ್ನು ಖಾಲಿಮಾಡಿಕೊಳ್ಳುವುದೇ ನಿಜವಾದ ವಿವೇಕದ ಅರಿವು. ಯಾರೂ ತುಳಿಯದ ಹಾದಿಯಲ್ಲಿ ಅರಳಿದ ಹೂವೊಂದು ತಾನೇ ಮರವೆಂದು ಭಾವಿಸಿದಂತೆ! ಹೂವಾಗಲು ಗಿಡಮರ ಬೇಕು; ಆದರೆ ಹೂವೇ ಮರವಲ್ಲ! ಇದು ಸತ್ಯದ ಸಾಕ್ಷಾತ್ಕಾರ. ಆ ಗಿಡದ, ಆ ಮರದ ಮೂಲಕವೇ ಹೂವರಳಿದರೂ ಅದೇ ಗಿಡವಲ್ಲ; ಹೂವಿನಲ್ಲಿ ಗಿಡದ ಅಂಶಗಳೆಲ್ಲವೂ ಸುಪ್ತವಾಗಿ ಅವಿತಿವೆ. ಹೂವಾಗಲು ಆ ಗಿಡದ ಎಲ್ಲವನೂ ಬಳಸಿಕೊಂಡಿದೆ. ಆ ಗಿಡವೂ ಅಷ್ಟೇ: ಹೂವಿನ ಮೂಲಕ ಗುರುತಿಸಿಕೊಂಡಿದೆ. ಹೂ ಬಿಟ್ಟು ತನ್ನನ್ನು ಕಾಣಿಸಿಕೊಂಡಿದೆ. ಆದರೆ ಹೂವು ಗಿಡವಲ್ಲ ಎಂಬುದೇ ಭ್ರಮೆ ಹರಿದ ವಾಸ್ತವ. ಆ ಹೂವು ಅರಳಿ, ಕಾಯಾಗಿ, ಹಣ್ಣಾಗಿ, ಕೊನೆಗೆ ಗಾಳಿ ತೂಗುವ ಭಾರಕ್ಕೆ ಅಲ್ಲೇ ಬಿದ್ದು, ಅದೇ ಗಿಡಮರಕ್ಕೆ ಗೊಬ್ಬರವಾಗುವಂತೆ ನಮ್ಮೀ ಬದುಕು! ಎಲ್ಲಿಂದ ಬಂದೆವೋ ಅಲ್ಲಿಗೇ ಹೋಗುತ್ತೇವೆ. ಎಲ್ಲಿಗೆ ಹೋಗುತ್ತೇವೆಂಬುದು ಗೊತ್ತಿಲ್ಲದಿದ್ದರೂ ಮತ್ತು ಎಲ್ಲಿಂದ ಬಂದೆವೆಂಬುದು ಸಹ ಗೊತ್ತಿಲ್ಲದಿದ್ದರೂ! ಇದೊಂಥರ ವಿಚಿತ್ರ ಅಧ್ಯಾತ್ಮ. ಅನುಭವಕ್ಕೆ ಬರುತ್ತದೆ; ಆದರೆ ಸ್ಥಿರೀಕರಿಸಲು ಆಗದು. ಅದಕ್ಕೆ ಇದನ್ನು ಅನುಭಾವ ಎಂದದ್ದು. ಇದನ್ನೇ ಬಸವಣ್ಣನವರು ‘ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ ಲಿಂಗವೆಂಬ ಎಲೆಯಾಯಿತು. ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತು. ಆಚಾರವೆಂಬ ಕಾಯಾಯಿತು. ನಿಷ್ಪತ್ತಿಯೆಂಬ ಹಣ್ಣಾಯಿತು. ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡನು’ ಎಂದು ಕಾವ್ಯಾಧ್ಯಾತ್ಮವನ್ನು ಪ್ರತಿಮಾತ್ಮಕವಾಗಿ ಕಟ್ಟಿ ಕೊಡುತ್ತಾರೆ. +ಇದು ಗಹನವಾದ ತತ್ತ್ವಶಾಸ್ತ್ರೀಯ ನೆಲೆಯ ಜ್ಞಾನೋದಯ ಎನಿಸಬಹುದು. ಸಾಮಾನ್ಯರಿಗೆ ಭಾರವೋ ಹೊರೆಯೋ ಆಗಬಹುದು. ಲೌಕಿಕ ನೆಲೆಯಲ್ಲೂ ಜ್ಞಾನೋದಯವನ್ನು ಅರ್ಥೈಸಬಹುದು. ಉದಾಹರಣೆಗೆ, ಒಂದು ನೂರು ರೂಪಾಯಿಯನ್ನು ಕೊಟ್ಟು ಹೊಟೆಲಿನಲ್ಲಿ ಒಂದು ಸಲ ಊಟ ಮಾಡಿದೆವು ಎಂದಿಟ್ಟುಕೊಳ್ಳೋಣ. ಎಷ್ಟು ಬಗೆಯ ಐಟಂಗಳು, ಅವುಗಳನ್ನು ಸಿದ್ಧಪಡಿಸಲು ಬಳಸಿದ ಆಹಾರ ಪದಾರ್ಥಗಳು, ದವಸ ಧಾನ್ಯಗಳು, ತರಕಾರಿಗಳು, ಹಾಲು, ಮೊಸರು, ತುಪ್ಪ, ಎಣ್ಣೆ ಮೊದಲಾದವುಗಳು. ವಗ್ಗರಣೆಗೆ ಬಳಸಿದ ಸಾಸುವೆ, ಉದ್ದಿನಬೇಳೆ, ಕಡಲೇಬೇಳೆ ಮುಂತಾದ ದಿನಸಿ ಪದಾರ್ಥಗಳು. ಇವನ್ನು ಬೆಳೆದವರು ಯಾರು? ಎಲ್ಲಿ ಬೆಳೆದರು? ಹೇಗೆ ಸಾಗಾಣಿಕೆಯಾಯಿತು? ನಾವೇನಾದರೂ ಆಲೋಚನೆ ಮಾಡುತ್ತೇವೆಯೇ? ‘ಊಟ ಚೆನ್ನಾಗಿತ್ತು; ಕೊಟ್ಟ ದುಡ್ಡಿಗೆ ಮೋಸವಿಲ್ಲ’ ಎಂದುಕೊಂಡು ಜಾಗ ಖಾಲಿ ಮಾಡುತ್ತೇವೆ. ಇದು ನಮ್ಮ ಲೌಕಿಕ ಜೀವನ. ಆದರೆ ನಾವು ಬಿಡುವಾಗಿದ್ದಾಗ, ಲೋಕ ಚಿಂತನೆ ಮಾಡುವಾಗ ಇದನ್ನು ಕೇಳಿಕೊಂಡರೆ ಎಷ್ಟೆಲ್ಲ ಸಂಗತಿಗಳು ಮನದಟ್ಟಾಗುತ್ತವೆ! ಭತ್ತ ಬೆಳೆದ ರೈತ, ಆತನ ಶ್ರಮ, ಭೂಮಿ, ಮಳೆ, ಬೆಳೆ, ಬಿತ್ತನೆ ಬೀಜದಿಂದ ಹಿಡಿದು ನಾಟಿ ಮಾಡುವುದು, ಕಳೆ ಕೀಳುವುದು, ನೀರುಣಿಸುವುದು, ಕಟಾವು ಮಾಡುವುದು, ಅದಕ್ಕೆ ತೊಡಗಿಸಿಕೊಂಡ ಶ್ರಮಜೀವಿಗಳು, ಭತ್ತವನ್ನು ತುಂಬಿ, ರೈಸ್ಮಿಲ್ಲಿಗೆ ಸಾಗಿಸಿ, ಅಲ್ಲಿ ಅಕ್ಕಿಯಾಗಿಸಿ, ಮೂಟೆಗಳಲ್ಲಿ ತುಂಬಿ ಮಾರುಕಟ್ಟೆಗೆ ಸಾಗಿಸುವತನಕ ಹಿಡಿದ ಕೆಲಸಗಳು. ಇನ್ನು ಖಾದ್ಯ ಪದಾರ್ಥ ತಯಾರಿಸಲು ಬಳಸಿದ ತರಕಾರಿಗಳದು ಇನ್ನೊಂದು ಬಗೆಯ ರೋಚ-ಕತೆ. ಈಗಂತೂ ಎಲ್ಲಿಯೋ ಬೆಳೆದದ್ದನ್ನು ಇನ್ನೆಲ್ಲಿಗೋ ಸಾಗಣೆ ಮಾಡುವ ಸಾರಿಗೆ ಸೌಕರ್ಯಗಳಿರುವ ದಿನಮಾನ. ಅಂದರೆ ನಾವು ಒಂದು ಊಟಕ್ಕಾಗಿ ನೂರು ರೂಪಾಯಿಯಷ್ಟು ಹಣವನ್ನು ಕೊಟ್ಟು ಅಥವಾ ತೆತ್ತು (ಇವೆರಡಕ್ಕೂ ಬೇರೆ ಅರ್ಥಗಳಿವೆ.) ಉಂಡು ಬರುತ್ತೇವೆ. +ಆದರೆ ಅದಕ್ಕಾಗಿ ಬಳಕೆಯಾದ ಪದಾರ್ಥಗಳೆಷ್ಟು? ಸಿದ್ಧಪಡಿಸಿದವರ ಶ್ರಮವೆಷ್ಟು? ಹೊಟೆಲಿಗೆ ಬಂಡವಾಳ ಹಾಕಿದ ಮಾಲೀಕನ ಪೂರ್ವಸಿದ್ಧತೆ, ಕಟ್ಟಡ ಬಾಡಿಗೆಗೆ ಕೊಟ್ಟಿರುವ ಮಾಲೀಕ, ಬೋರ್ಡು ಬರೆದು ಕೊಟ್ಟವ, ಅಡುಗೆ ಭಟ್ಟ, ಸಪ್ಲೈಯರು, ಕ್ಲೀನರು, ತರಕಾರಿ ತಂದು ಕೊಡುವವರು ಮತ್ತು ಹೆಚ್ಚುವವರು, ಪಾತ್ರೆ ತೊಳೆಯುವವರು, ಫರ್ನೀಚರು ತಂದಿಟ್ಟವರು, ತ್ಯಾಜ್ಯ ವಿಲೇವಾರಿ ಮಾಡುವವರು – ಹೀಗೆ ಎಲ್ಲದಕ್ಕೂ ಸಂಬಳ, ಸಂಭಾವನೆ ಮತ್ತು ಶುಲ್ಕ ಕೊಡುತ್ತಾರೇನೋ ಸರಿ. ಇದು ವ್ಯಾಪಾರ ಮತ್ತು ವ್ಯವಹಾರ. ಲೋಕ ನಡೆಯುತ್ತಿರುವುದೇ ಹೀಗೆ. ಇದರಲ್ಲೇನು ವಿಶೇಷ? ಎಂದು ನೀವು ಕೇಳಬಹುದು. ಆದರೆ ನನ್ನ ಆಲೋಚನೆಯಿರುವುದು: ಹಣದಾಚೆಗೂ ಇರುವ ಪಾರಸ್ಪರಿಕ ಸಂಬಂಧಗಳಲ್ಲಿ! ನಾವು ದುಡ್ಡು ಕೊಟ್ಟು ತಿಂದು ಬಂದು ಬಿಡುತ್ತೇವೆ; ಒಂದೇ ಮಾತಿನಲ್ಲಿ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಫೀಡ್ಬ್ಯಾಕು ಕೊಟ್ಟು ಬಿಡುತ್ತೇವೆ. ಆದರೆ ಈ ಎಲ್ಲದರ ಪ್ರೋಸೆಸು ಇಷ್ಟು ಸರಳವೇ? ಎಲ್ಲಿಯೋ ಬೆಳೆದ ದವಸ ಧಾನ್ಯ ಪದಾರ್ಥಗಳು ಒಂದು ಕಡೆ ಸೇರಿ, ನಮ್ಮ ಹಸಿವನ್ನೂ ರುಚಿಯನ್ನೂ ತಣಿಸುವ ವಿದ್ಯಮಾನದ ಹಿಂದೆ ಇರುವ ಸದ್ದಿಲ್ಲದ ಪವಾಡಕ್ಕೆ ನಾನು ಮೂಕವಿಸ್ಮಿತ. ಕೇವಲ ದುಡ್ಡು ಕೊಟ್ಟ ಮಾತ್ರಕೇ ಲೋಕದ ವಿದ್ಯಮಾನ ಅರ್ಥವಾಗಿ ಬಿಡುತ್ತದೆಂಬ ದುರಹಂಕಾರದಲ್ಲಿ ನನಗೆ ನಂಬಿಕೆಯಿಲ್ಲ. ಹಣದಾಚೆಗೂ ಇರುವ ಅವಿನಾಭಾವವನ್ನು ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೇನೆ. ‘ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ! ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ! ಗುಹೇಶ್ವರಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ!?’ ಎಂದು ಅಲ್ಲಮಪ್ರಭುದೇವರು ಉತ್ತರ ಗೊತ್ತಿದ್ದರೂ ಸೋಜಿಗದಿಂದ ಪ್ರಶ್ನಿಸಿಕೊಳ್ಳುವ ಧಾಟಿಯನ್ನು ಮನದಟ್ಟು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. +ಒಂದು ಪೆನ್ನಿನ ಬೆಲೆ ಹತ್ತು ರೂಪಾಯಿ. ಆದರೆ ಹತ್ತು ರೂಪಾಯಿಯಲ್ಲಿ ನಾನು ಒಂದು ಪೆನ್ನನ್ನು ತಯಾರಿಸಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ಇಲ್ಲಿಯೇ ಇರುವ ವ್ಯತ್ಯಾಸ: ಪೆನ್ನಿನ ಬೆಲೆಯು ಪೆನ್ನಿನ ಮೌಲ್ಯವಲ್ಲ! ಹತ್ತಲ್ಲ, ನೂರಲ್ಲ, ಸಾವಿರ ರೂಪಾಯಿ ವ್ಯಯಿಸಿದರೂ ನಾನು ಅಂಥದೇ ಪೆನ್ನನ್ನು ತಯಾರಿಸಲು ಸಾಧ್ಯವಾಗದು. ಏಕೆಂದರೆ ಅದಕೊಂದು ತಯಾರಿಕಾ ಘಟಕ ಬೇಕು. ಕಚ್ಚಾವಸ್ತು ಬೇಕು. ಮೌಲ್ಡ್ ಮಾಡುವ ಆಧುನಿಕ ಪರಿಕರಗಳು ಬೇಕು. ಬೇಕಾದರೆ ಇನ್ನೊಂದು ಅಂಗಡಿಗೆ ಹೋಗಿ ಅಂಥದೇ ಪೆನ್ನನ್ನು ಖರೀದಿ ಮಾಡಿ ಬರಬಹುದು. ಆದರೆ ನಾನೇ ಸ್ವತಃ ತಯಾರಿಸಲು ಆಗದು! ಇಲ್ಲಿಯೇ ನಮ್ಮ ತಿಳಿವಿಗೆ ಬರುವುದೆಂದರೆ, ಹತ್ತು ರೂಪಾಯಿಯು ಪೆನ್ನಿನ ವ್ಯಾಪಾರೀ ಬೆಲೆಯೇ ವಿನಾ ಪೆನ್ನಿನ ಮೌಲ್ಯವನ್ನು ಹೇಳುವುದಿಲ್ಲ!! ಎಲ್ಲಿಯವರೆಗೆ ನಾವು ನಮ್ಮ ಬದುಕಿನ ಮೌಲ್ಯವನ್ನು ಅರಿಯುವುದಿಲ್ಲವೋ ಅಲ್ಲಿಯವರೆಗೂ ನಾವು ಅಜ್ಞಾನಿಗಳೇ. ಎಲ್ಲವನ್ನೂ ಹಣದಿಂದ ಅಳೆಯಲು ಹೊರಟ ಲೌಕಿಕನ ದುಃಸ್ಥಿತಿಯಿದು. ಲೋಕವೇ ಸಂತೆಯ ವ್ಯಾಪಾರದಲ್ಲಿ ಮಗ್ನವಾಗಿದೆ; ಮೋಜುಮಸ್ತಿಗಳ ಕತ್ತಲ ಕೂಪದಲ್ಲಿ ನಗ್ನವಾಗಿದೆ. ಮೌಲ್ಯಗಳ ಅರಿವಿಲ್ಲದ ಮಂದಿ, ಬದುಕನ್ನು ಕೇವಲವಾಗಿ ಪರಿಗಣಿಸಿದ್ದಾರೆ. ನಿನ್ನ ಬಳಿ ದುಡ್ಡಿಲ್ಲದಿರುವುದರಿಂದ ಸಂನ್ಯಾಸತ್ವದ ಮಾತಾಡುತ್ತಿರುವೆಯೆಂದು ಅಣಕಿಸುತ್ತಿದೆ. ಎಲ್ಲವೂ ವ್ಯಾಪಾರದ ವಸ್ತುವಾಗಿ, ಸಂಬಂಧಗಳು ಸಡಿಲಾಗಿ, ಯಾವುದನ್ನೂ ಗೌರವಿಸದ ಅತಂತ್ರ ಸ್ಥಿತಿಗೆ ನಮ್ಮ ಇಂದಿನ ವಾಣಿಜ್ಯಮಯ ಜಗತ್ತು ದೂಡಿದೆ. ಈ ಮನಸ್ಥಿತಿಯಿಂದಾಗಿ ಜನ ಮರುಳು, ದುಡ್ಡು ಮಾಡಲು ಹೊರಡುತ್ತದೆ; ನೀತಿಮೌಲ್ಯಗಳನ್ನು ಗಾಳಿಗೆ ತೂರಿ! ದುಡ್ಡಿಲ್ಲದಿದ್ದರೆ ಕಾಲಕಸ ಎಂಬರಿವು ಒಂದು ಕಡೆ; ದುಡ್ಡು ಮಾಡಿ ಎಲ್ಲವನೂ ಕೊಳ್ಳುವ ಹಪಾಹಪಿ ಇನ್ನೊದೆಡೆ. ಇವೆರಡರ ನಡುವೆ ಇರುವ ಅಶಾಶ್ವತ ಬದುಕು ಅಣಕಿಸಿ ನಗುತ್ತಿರುತ್ತದೆ; ಮನುಜ! ನೀನೇ ಗ್ಯಾರಂಟಿಯಿಲ್ಲ. ಬೆಳಗ್ಗೆ ಮನೆ ಬಿಟ್ಟು ಹೋದವನು ಮತ್ತೆ ಮನೆಗೆ ಬರುವುದೇ ಖಚಿತವಿಲ್ಲ. ಎಲ್ಲೆಲ್ಲಿಯೂ ಅಪಘಾತಗಳು, ಅವಘಡಗಳು, ಅನಾಹುತಗಳೇ ವರದಿಯಾಗುತ್ತಿರುವುದರಿಂದ ಕ್ಷೇಮವಾಗಿ ಮನೆ ತಲಪಿದರೆ ಪ್ರತಿದಿನವೂ ಹೊಸ ಜನ್ಮವೇ. ಸುರಕ್ಷಿತವಾಗಿ ಮನೆ ಸೇರಿದರೆ ಅಂದಿನ ದಿನದ ಜನ್ಮ ಸಾರ್ಥಕ ಎಂದಾಗಿದೆ. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನʼ ಎಂದಿಲ್ಲವೇ ಕವಿ ಬೇಂದ್ರೆಯವರು! +ಜೊತೆಗೆ ಎಲ್ಲೆಲ್ಲೂ ಆಡಂಬರವೇ ಮನೆ ಮಾಡಿದೆ. ಸ್ವಪ್ರತಿಷ್ಠೆ ಇನ್ನೊಂದೆಡೆ. ಸರೀಕರ ಮುಂದೆ ತಲೆಯೆತ್ತಿ ನಿಲ್ಲಲು ಹರಸಾಹಸ ಪಡುವ, ಅದಕಾಗಿ ಏನು ಬೇಕಾದರೂ ಮಾಡುವ ಜಾಯಮಾನಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮನ್ನು ಇನ್ನೊಬ್ಬರ ಮೂಲಕ ಗುರುತಿಸಿಕೊಳ್ಳುವ ರೋಗವೇ ಎಲ್ಲ ಕಡೆಯಲ್ಲೂ! ಇನ್ನೊಬ್ಬರು ನಮ್ಮನ್ನು ಮೆಚ್ಚಿದರೆ ಖುಷಿ; ಇನ್ನೊಬ್ಬರು ತೆಗಳಿದರೆ ಮಸಿ. ಇನ್ನೊಬ್ಬರಿಂದ ಹೊಗಳಿಸಿಕೊಳ್ಳಲು ನಿರಂತರ ಪ್ರಯತ್ನ ಪಡುತ್ತೇವೆ. ಮೊದಲೇ ಸಾಲ ಮಾಡಿ ಮನೆ ಕಟ್ಟಿಸಿಕೊಳ್ಳುತ್ತಿರುವಾಗ ಮತ್ತೂ ಸಾಲ ಮಾಡಿ ಅಲಂಕಾರಕ್ಕೆ ದುಂದುವೆಚ್ಚ ಮಾಡುತ್ತೇವೆ. ಮನೆಯು ವಾಸಯೋಗ್ಯವಾಗಿರಬೇಕು, ಪ್ರಥಮತಃ ಅನುಕೂಲಕರವಾಗಿರಬೇಕು. ವಾಸಿಸುವ ನಮ್ಮ ಅಗತ್ಯ ಮತ್ತು ಅದ್ಯತೆಗಳಿಗೆ ಅದು ಪೂರಕವಾಗಿರಬೇಕು. ಎಂದೋ ಒಂದು ದಿನ ಬಂದು, ಇದ್ದು ಹೋಗುವ ನೆಂಟರಿಷ್ಟರು ಶ್ಲಾಘಿಸಲೆಂದು ಸಿಂಗಾರ ಬಂಗಾರ ಮಾಡಲು ಹಾತೊರೆಯುತ್ತೇವೆ. ಈ ವೈಭವವು ಕೆಲವೊಮ್ಮೆ ವಿಶೇಷವಾಗಿಯೂ ವಿಚಿತ್ರವಾಗಿಯೂ ಇದ್ದು, ನೋಡಿದವರ ಗಮನ ಸೆಳೆಯುವಂತಿರಬೇಕೆಂದು ಬಯಸುತ್ತೇವೆ. ತರ್ಟೀ ಫಾರ್ಟೀ ಸೈಟಲ್ಲಿ ಮನೆ ಕಟ್ಟಿಕೊಂಡು ವಾಹನ ನಿಲ್ಲಲು ಜಾಗವಿಲ್ಲದಂತೆ ಮಾಡಿಕೊಂಡಿರುತ್ತೇವೆ. ಮನೆಯ ವರಾಂಡದಲ್ಲೇ ದೊಡ್ಡದೊಂದು ಶಿವನ ವಿಗ್ರಹವನಿಟ್ಟು, ತಲೆ ಮೇಲೆ ಗಂಗೆ ತೊಟ್ಟಿಕ್ಕುವಂತೆ ನೋಡಿಕೊಂಡು, ಬಂದವರು ‘ಮನೆಗೆ ಬಂದರೋ? ದೇಗುಲಕ್ಕೆ ಬಂದರೋ’ ತಿಳಿಯದಂತೆ ಪೆಕರು ಮಾಡಿ, ‘ಹೆಂಗೆ ನಾವು?’ ಅಂತ ಹುಬ್ಬು ಕುಣಿಸುತ್ತೇವೆ. ‘ನಿಮ್ಮ ಮನೆಯಲ್ಲಿ ಮೂರು ವಾಹನಗಳಿವೆಯಲ್ಲಾ? ಎಲ್ಲಿ ನಿಲ್ಲಿಸುತ್ತೀರಿ?’ ಎಂದು ಕೇಳಿದರೆ ಮನೆಯ ಮುಂದಿನ ಇನ್ನೊಂದು ಸೈಟಿನತ್ತ ಬೆರಳು ತೋರುತ್ತಾರೆ. ಇಂಥ ಮೂರ್ಖರಿಗೆ ಜ್ಞಾನೋದಯವಾಗುವುದೇ ಇಲ್ಲ. +ನಾವು ಅರಮನೆಯನ್ನೇ ಕಟ್ಟಿಸಿಕೊಳ್ಳಬಹುದು; ಅಥವಾ ಅರಮನೆಯಂತೆಯೇ ಸಿಂಗರಿಸಬಹುದು. ಆದರೆ ಗೃಹಪ್ರವೇಶದಂದು ಬಂದವರು ಉಂಡು, ತಿಂದು, ಮುಟ್ಟಿ, ತಟ್ಟಿ, ಹೊಗಳಿ, ಮುಯ್ಯಿ ಕೈಗಿಟ್ಟು ಹೊರಟು ಬಿಡುತ್ತಾರೆ. ದಿನವೂ ವಾಸ ಮಾಡುವುದು ನಾವು ತಾನೆ? ಅನುಕೂಲವೇ ಇಲ್ಲದಿದ್ದ ಮೇಲೆ ಅಲಂಕಾರ ಕಟ್ಟಿಕೊಂಡು ಏನು ಮಾಡುವುದು? ಒಂದು ದಿನದ ಬಾಳಿಗೆ ವರುಷದ ಕೂಳು ಕಳೆದುಕೊಂಡರು ಎಂಬ ಗಾದೆಯಂತಾಗುವುದು. ಇನ್ನೊಬ್ಬರು ನಲವತ್ತು ಇಂಟು ಅರುವತ್ತರ ಸೈಟಲ್ಲಿ ಮನೆ ಕಟ್ಟಿಕೊಂಡು, ವಾಹನ ನಿಲ್ಲಿಸಲು ಜಾಗ ಮಾಡಿಕೊಳ್ಳದೇ ಪರದಾಡುತ್ತಿದ್ದಾರೆ. ನಾವು ನೂರಾರು ವರುಷ ಬಾಳಿಕೆ ಬರುವಂಥ ಮನೆ ಕಟ್ಟಿಸಿಕೊಳ್ಳಲು ಹೊರಡುತ್ತೇವೆ; ನಾವೇ ನೂರು ವರುಷ ಬಾಳಿಕೆ ಬರುವುದಿಲ್ಲ ಎಂಬುದನ್ನು ಮರೆಯುತ್ತೇವೆ. ಗರಿಷ್ಠವೆಂದರೆ ಹತ್ತು ವರುಷ ವಾಸ ಮಾಡುತ್ತೇವೆ. ಆಮೇಲೆ ಟೆಂಟು ಎತ್ತಿ ಬೇರೆ ಕಡೆ ನೆಲೆಸುತ್ತೇವೆ; ವಲಸೆ ಹೋಗುತ್ತೇವೆ. ಮಕ್ಕಳಿಗಾಗಿ ಎಂದು ಮನೆ ಕಟ್ಟಿಸಿ, ಎರಡೆರಡು ಸೈಟು ತೆಗೆದಿಡುತ್ತಾರೆ. ಮಕ್ಕಳು ಊರು ಬಿಡುವುದಲ್ಲ; ದೇಶವೇ ಬಿಟ್ಟು ಹೋಗಿರುತ್ತಾರೆ. ಅವರಿಗೆ ಬೇಡ; ಇವರಿಗೆ ಬೇಕು. +ಈ ಎಲ್ಲ ನಾಟಕ, ಶೋಕಿ, ಕೃತಕತೆ, ತೋರಿಕೆ, ಅಭಿನಯ, ಸಮಯನಷ್ಟಗಳು ನಮ್ಮನ್ನು ಅಂತರಾವಲೋಕನಕ್ಕೆ ಹಚ್ಚುವುದೇ ಇಲ್ಲ. ಯಾರೋ ಬಂದು ಒಂದು ಕೆಡುನುಡಿಯನ್ನಾಡಿದರೆ ಸಾಕು, ದಿನವೆಲ್ಲಾ ನೆನಪಿಸಿಕೊಂಡು ಕ್ರುದ್ಧರಾಗುತ್ತೇವೆ; ‘ಹಾಗೆ ಅನ್ನಬಹುದಾ?’ ಎಂದು ಕಂಡ ಕಂಡವರ ಬಳಿ ಹೋಗಿ ಸಮಜಾಯಿಷಿ ನಿರೀಕ್ಷಿಸುತ್ತೇವೆ. ನಮಗೆ ಈ ಜನ್ಮಕ್ಕೆ ಬುದ್ಧಿ ಬರುವುದಿಲ್ಲ. ಓದುವ ಡಿಗ್ರಿಗಳೂ ಸಿಲಬಸ್ಸುಗಳೂ ಬದಲಾಗಿರಬಹುದು, ಮಾಡುವ ವೃತ್ತಿಗಳೂ ಬೇರೆಯಾಗಿರಬಹುದು, ಓಡಾಡುವ ವಾಹನಗಳು ಅಪ್ಗ್ರೇಡಾಗಿರಬಹುದು. ಆದರೆ ಮನುಷ್ಯನ ಮನಸ್ಸು ಮಾತ್ರ ಅಂದು ಹೇಗಿತ್ತೋ ಇಂದೂ ಹಾಗೇ ಇದೆ. ಇನ್ನೊಬ್ಬರನ್ನು ಮೆಚ್ಚಿಸಲು ಹೋಗಿ, ಇನ್ನೊಬ್ಬರನ್ನು ಹೊಟ್ಟೆಯುರಿಸಲು ಹೋಗಿ ನಾವೇ ಬತ್ತಲಾಗುತ್ತೇವೆ. ಕತ್ತಲಲಿ ಕೂತು ಯಾರಾದರೂ ಬಂದು ದೀಪ ಹಚ್ಚಬಾರದೇ? ಎಂದು ವ್ಯರ್ಥಾಲಾಪ ಮಾಡುತ್ತೇವೆ. ನಮ್ಮನ್ನು ಇನ್ನೊಬ್ಬರು ಒಳ್ಳೆಯವರೆಂದು ಕರೆಯಲೆಂದು ಆಶಿಸುತ್ತೇವೆ. ಒಳ್ಳೆಯ ಕೆಲಸ ಮಾಡಿದ ಮೇಲೆ ಶ್ಲಾಘನೆ ಬಯಸುತ್ತೇವೆ; ಶ್ಲಾಘಿಸದಿದ್ದರೆ ಸಿಟ್ಟಾಗುತ್ತೇವೆ. ಇನ್ನೊಬ್ಬರನ್ನು ಇಷ್ಟಪಡುತ್ತೇವೆ; ಅವರು ನಮ್ಮನ್ನು ಇಷ್ಟಪಡದಿದ್ದರೆ ದೂರುತ್ತೇವೆ; ಕೃತಘ್ನರು ಎಂದು ಜರಿಯುತ್ತೇವೆ. ನಮ್ಮ ನೋವು ನಲಿವುಗಳನ್ನು ಇನ್ನೊಬ್ಬರ ಮುಖೇನವೇ ಕಂಡುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಎಂದು ಕೇಳಿಕೊಳ್ಳುವುದೇ ಇಲ್ಲ. ಯಾಕೆ ಆ ಇನ್ನೊಬ್ಬರನ್ನು ಅವಲಂಬಿಸುವುದು? ಯಾಕೆ ಅವರನ್ನು ಮೆಚ್ಚಿಸಲು ಹೊರಡುವುದು? ಜನಾರ್ಧನನನ್ನು ಮೆಚ್ಚಿಸಿದರೂ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಗಾದೆ ನಮಗೆ ಗೊತ್ತಿದ್ದರೂ! +ಈಗಂತೂ ಪ್ರತಿಯೊಂದಕೂ ಪ್ರತಿಯೊಬ್ಬರಿಗೂ ಅಭಿವ್ಯಕ್ತಿಸುವ ತಹತಹ. ಆಧುನಿಕ ಸಂವಹನ ಮಾಧ್ಯಮಗಳಿಂದಾಗಿ ನಾವೆಲ್ಲರೂ ಸುಲಭವಾಗಿ ನಂನಮ್ಮ ಭಾವನೆ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ. ಅದರಲ್ಲೂ ಈ ವಾಟ್ಸಾಪ್ ಯೂನಿವರ್ಸಿಟಿಯಲ್ಲಂತೂ ಎಲ್ಲರೂ ಎರಡೆರಡು ಡಿಗ್ರಿಗಳನ್ನು ಮಾಡಿದವರೇ! ಇನ್ನು ಕೆಲವರಂತೂ ಇಂಥ ವರ್ಚುವಲ್ ವಿವಿಗಳಲ್ಲಿ ಎರಡೆರಡು ಪಿಹೆಚ್ಡಿಗಳನ್ನೂ ಮಾಡಿ, ನೀವೂ ಮಾಡಿ ಎಂದು ಪ್ರೊವೋಕ್ ಮಾಡುವವರೇ! ಸ್ವಂತದ್ದನ್ನು ಬರೆಯಲು ಬರದವರು ಅಥವಾ ಬರೆಯಲು ಇಚ್ಛಿಸದವರು ತಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹೊಂದುವ ಇತರರ ಮಾತು, ಮನಸ್ಸು, ಮಂಥನಗಳನ್ನು ಮೆಚ್ಚಿ ತಮ್ಮಿಷ್ಟದವರಿಗೆ ಕಳಿಸಿ ಬಿಡುವ ಫಾರ್ವರ್ಡು ವೀರರೇ ನಾವಾಗಿದ್ದೇವೆ. ಹೀಗಿರುವಾಗ ಲೈಕು, ಕಮೆಂಟುಗಳಲ್ಲೇ ನಾವು ವ್ಯಕ್ತಿಗಳನ್ನು ಅಳೆದು ಬಿಡುವ, ವ್ಯಕ್ತಿತ್ವಗಳನ್ನು ವಿಮರ್ಶಿಸಿ ಕೈ ತೊಳೆದುಕೊಳ್ಳುವ ಅಪಾಯಕಾರಿ ಬೆಳವಣಿಗೆಯಲ್ಲಿ ಕೈ ಜೋಡಿಸುವವರೇ. ಕಳಿಸಿದ ಮೆಸೇಜು ಮತ್ತು ವಿಡಿಯೋಗಳನ್ನು ಮೆಚ್ಚಿದರೆ ನಮಗವರು ಸ್ನೇಹಿತರು; ಇಲ್ಲದಿರ್ದೊಡೆ ಅಸಹಿಷ್ಣುಗಳು. ನೋಡಿಯೂ ಏನನ್ನೂ ಪ್ರತಿಕ್ರಿಯಿಸದವರನ್ನು ವ್ಯಂಗ್ಯಿಸುವ, ಹಂಗಿಸುವ ಪರಿ ಬೇರೆ. +‘ನಮ್ಮ ಬಗ್ಗೆ ಅವರಿಗೆ ಎಷ್ಟು ಗೊತ್ತು? ಎಷ್ಟು ಸರಿಯಾಗಿ ಗೊತ್ತು? ನಾವೇನು ಎಂಬುದನ್ನೇ ಕಷ್ಟಪಟ್ಟು ಕಂಡುಕೊಂಡಿರುವಾಗ, ಅವರಿಗೆ ಈ ಕಷ್ಟ ಏನು ಗೊತ್ತು?’ ನಮ್ಮ ಜೀವನದ ರುಚಿಯಭಿರುಚಿಯಾಗಲೀ, ಧ್ಯೇಯ ಗುರಿ, ಕನಸು-ಕನವರಿಕೆಗಳಾಗಲೀ ಛಲ-ಬಲಗಳಾಗಲೀ ಅವರಿಗೇ ಗೊತ್ತಿಲ್ಲದಿರುವಾಗ ‘ಅವರೇನು, ನಮ್ಮ ಬಗ್ಗೆ ಕಮೆಂಟಿಸುವುದು?’ ಕಮೆಂಟಿಸಲಿ, ತೊಂದರೆಯಿಲ್ಲ. ಆದರೆ ಅದಕ್ಕೇಕೆ ತಲೆ ಕೆಡಿಸಿಕೊಳ್ಳುವುದು? ಹತ್ತಾರು ವರುಷಗಳ ಕಾಲ ಜೊತೆಯಲ್ಲಿದ್ದವರಿಗೂ ಒಮ್ಮೊಮ್ಮೆ ಅವರು ನಮಗೆ ಮತ್ತು ನಾವು ಅವರಿಗೆ ಅರ್ಥವಾಗಿರುವುದಿಲ್ಲ! ‘ಇದೇಕೆ ಹೀಗೆ? ಇಂದು ಈತ ಅಥವಾ ಈಕೆ ವಿಚಿತ್ರವಾಗಿ ಆಡುತ್ತಿದ್ದಾರೆ?’ ಎಂಬ ಅನುಮಾನ ಬಂದೇ ಬಂದಿರುತ್ತದೆ ಒಂದು ದಿನ, ಆ ಒಂದು ಕ್ಷಣ. ಅಂದ ಮೇಲೆ ಯಾರೋ ನಮ್ಮನ್ನು ಹೇಗೆ ಅರಿತಾರು? ಇಷ್ಟಕೂ ಅವರೇಕೆ ನಮ್ಮನು ಅರಿಯಬೇಕು? ನಮ್ಮನ್ನು ಅರಿಯುವುದೇ ಅವರ ಕೆಲಸವೇ? ಅಲ್ಲವಲ್ಲ. ನಮ್ಮನ್ನು ನೋಡಿದ ಬೇರೆಯವರು ಏನೆಂದುಕೊಳ್ಳುವರೋ? ಎಂದು ಯೋಚಿಸಬಾರದು. ಏಕೆಂದರೆ ಅವರು ನಮ್ಮ ಬಗ್ಗೆ ಯೋಚಿಸದೆಯೂ ಇರಬಹುದು! ಇನ್ನೊಬ್ಬರು ಏನೆಂದುಕೊಳ್ಳುವರೋ ಎಂದೇ ಎಲ್ಲರೂ ಯೋಚಿಸುವುದರಿಂದ ಯಾರೂ ಯಾರ ಬಗ್ಗೆಯೂ ಯೋಚಿಸುತ್ತಿರುವುದಿಲ್ಲ ಎಂಬುದು ತರ್ಕದ ಮಾತು! +ಅಂದರೆ ನಮ್ಮನ್ನು ಇನ್ನೊಬ್ಬರ ಮೂಲಕ ಅರ್ಥಮಾಡಿಕೊಳ್ಳುವ ವ್ಯರ್ಥ ಸಾಹಸವೇ ಎಲ್ಲರ ಪ್ರತಿನಿತ್ಯದ ರೋತೆ. ನಮ್ಮನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಈ ರೋತೆಯು ನಮ್ಮನ್ನು ಕಾಡುವುದಿಲ್ಲ. ಈ ಲೋಕದಲ್ಲಿ ಮತ್ತೊಬ್ಬರನ್ನು ಸಂತೃಪ್ತಿಗೊಳಿಸಿ, ಸಂಭ್ರಮಿಸಿ, ಅವರಿಂದ ಭೇಷ್ ಎನಿಸಿಕೊಳ್ಳಲು ಏನೇನೋ ದುಸ್ಸಾಹಸ ಮಾಡುತ್ತೇವೆ. ಅವರೊಮ್ಮೆ ಆಡಿದ ಕೆಡುನುಡಿಗೆ ವ್ಯಗ್ರರಾಗುತ್ತೇವೆ. ಅಷ್ಟು ಮಾಡಿದೆ, ಇಷ್ಟು ನೀಡಿದೆ ಎಂದು ಹೇಳಿಕೊಂಡು ತಿರುಗುತ್ತೇವೆ. ಇದು ಅಪ್ರಬುದ್ಧತೆ. ನೆನಪಿನಲ್ಲಿಟ್ಟುಕೊಳ್ಳಬೇಕು: ಅಯೋಗ್ಯರೂ ಅನರ್ಹರೂ ಆದವರಿಂದ ಹೊಗಳಿಸಿಕೊಳ್ಳುವುದೂ ಒಂದು ಬಗೆಯ ಡಿಸ್ಕ್ವಾಲಿಫಿಕೇಷನ್ನು ಎಂಬ ಅರಿವನ್ನು! ಯಾವನೋ ಒಬ್ಬ ದುರಾಚಾರಿ ನಮ್ಮನ್ನು ಇಷ್ಟಪಡುತ್ತಾನೆಂದರೆ ಅದು ಅವನ ದೊಡ್ಡತನ; ಆದರೆ ಅದು ನನ್ನ ಅಯೋಗ್ಯತೆ! ದುಷ್ಟರೂ ದುರುಳರೂ ದುರ್ಮಾರ್ಗಿಗಳೂ ಆದವರು ನಮ್ಮನ್ನೇಕೆ ಹೊಗಳಬೇಕು? ಏನಾದರೊಂದು ಸ್ವಾರ್ಥ ಮತ್ತು ಅವಕಾಶವಾದೀತನ ಇದ್ದೇ ಇರುತ್ತದೆಂದರ್ಥ. ನಾವು ಮೋಸಹೋಗುತ್ತಿದ್ದೇವೆಂದೇ ಸರಿಯರ್ಥ. ನೀನು ನನ್ನನ್ನು ಪಾರು ಮಾಡಿದರೆ ನಾನು ನಿನ್ನನ್ನು ಪಾರು ಮಾಡುವೆ ಎಂಬ ಒಳಸೂತ್ರ! ಇದನ್ನೇ ಪಾರಸ್ಪರಿಕ ಒಪ್ಪಂದ ಎಂದು ಕರೆಯುವುದು. ಭ್ರಷ್ಟಾಚಾರದಲ್ಲಿ, ದುಷ್ಟದಂಧೆಗಳಲ್ಲಿ ಇರುವ ಪ್ರಾಮಾಣಿಕತೆ ಮತ್ತು ನಿಯತ್ತುಗಳು ನೇರವಾದ ನ್ಯಾಯಬದ್ಧ ಮಾರ್ಗಗಳಲ್ಲಿ ಇರುವುದಿಲ್ಲ. ಐವತ್ತು ರೂಪಾಯಿ ಹಣ ಪಾವತಿ ಮಾಡಿದ್ದಕ್ಕೆ ರಸೀದಿ ಕೇಳುತ್ತೇವೆ; ಆದರೆ ಅವ್ಯವಹಾರಗಳ ಡೀಲಿಂಗಿಗಾಗಿ ಸಾವಿರ, ಲಕ್ಷಗಳನ್ನು ಯಾರಿಗೂ ಕಾಣದಂತೆ, ಮುಖ ಮುಚ್ಚಿಕೊಂಡು ಕೊಟ್ಟು ಬಂದಿರುತ್ತೇವೆ; ಯಾವ ರಸೀದಿಯನ್ನೂ ಕೇಳದೆ! ಅಂದರೇನಾಯಿತು? ನಮ್ಮದೆಲ್ಲಾ ಅನುಕೂಲ ಸಿಂಧು ಅವಕಾಶವಾದೀ ಬದುಕು; ಸದಾ ಆತ್ಮವಂಚನೆಯಲ್ಲೇ ಕೈ ತೊಳೆವ ಗಲೀಜು ಕೊಳಕು. ಲೋಕ ಇರುವುದೇ ಹೀಗೆ; ಅದರಲ್ಲಿ ನಾನೂ ಒಬ್ಬ ಎಂದುಕೊಂಡು ಸುಮ್ಮನಾಗುತ್ತೇವೆ. ಹತ್ತರಲ್ಲಿ ಹನ್ನೊಂದಾಗುತ್ತೇವೆ. +ನಾವೇಕೆ ಸದಾ ಇನ್ನೊಬ್ಬರನ್ನು ಮೆಚ್ಚಿಸಲು ಹೊರಡುತ್ತೇವೆ? ಇನ್ನೊಬ್ಬರಿಗಾಗಿ ಬದುಕುತ್ತೇವೆ? ಇನ್ನೊಬ್ಬರ ಕಣ್ಣ ಕನ್ನಡಿಯ ಬಿಂಬಕೇ ಏಕೆ ಜೋತು ಬೀಳುತ್ತೇವೆ? ಜೀವನಪರ್ಯಂತ ನಾವು ಅವರೇನನ್ನುತ್ತಾರೆ? ಇವರೇನನ್ನುತ್ತಾರೆ? ಎಂದು ಅಳಲು ಪಡುವುದೇ ಆದರೆ ನಮ್ಮ ಜೀವನದ ಶಿಲ್ಪಿ ನಾವಾಗಿರುವುದಿಲ್ಲ; ಇನ್ನೊಬ್ಬರು ನಮ್ಮ ಜೀವನವನ್ನು ನಿಯಂತ್ರಿಸುವುದಾದರೆ ಆ ಮಟ್ಟಿಗೆ ನಾವು ಬಂಧಿಗಳೇ! ಹೊರಗಿದ್ದೂ ಜೈಲುಪಾಲಾದವರೇ. ಇಲ್ಲೊಂದು ಸಂಗತಿ ಮುಖ್ಯವಾಗುತ್ತದೆ. ಒಳ್ಳೆಯವರು ಮೆಚ್ಚಿದರೆ ಮನಸಿಗೆ ಖುಷಿಯಾಗುತ್ತದೆ. ನಾವು ಹೋಗುತ್ತಿರುವ ದಾರಿ ಸರಿಯಿದೆ ಎಂದು ಖಾತ್ರಿಯಾಗುತ್ತದೆ. ಕೆಟ್ಟವರನ್ನು ಮೆಚ್ಚಿಸಲು ಹೋದರೆ ಘಾಸಿಯಾಗುತ್ತದೆ. ಅವರೊಂದಿಗೆ ನಮ್ಮನೂ ಸೇರಿಸಿ ಲೋಕದ ತಕ್ಕಡಿ ತೂಗುತ್ತದೆ. ಹೂವಿನ ಜೊತೆ ನಾರು ಸ್ವರ್ಗಕ್ಕೆ ಹೋಗುವುದು ಬೇಕೋ? ಹಾವಿನ ಜೊತೆ ಅದನ್ನು ಹೊಡೆದು ಕೊಂದ ಕೋಲೂ ಭಸ್ಮವಾಗಬೇಕೋ? ಇದು ಅಂತಿಮವಾಗಿ ನಮ್ಮದೇ ತೀರ್ಮಾನ. ನಮ್ಮದೇ ಹೊಣೆ ಕೂಡ. +ಉಳಿಯೇಟನ್ನು ಸಹಿಸಿಕೊಂಡ ಕಲ್ಲು ವಿಗ್ರಹವಾದರೆ, ಸಹಿಸಿಕೊಳ್ಳದ ಕಲ್ಲು ದೇಗುಲದ ಮೆಟ್ಟಿಲಾಗುವಂತೆ, ನಾವು ನಮಗೋಸ್ಕರ ಬದುಕಬೇಕು. ‘ನಮಗೋಸ್ಕರ ಬದುಕುವುದು ಯಾವಾಗ?’ ಉತ್ತರ ಸ್ಪಷ್ಟವಿದೆ: ‘ಭ್ರಮೆಗಳನ್ನು ತೊರೆದಾಗ!’ ಲಕ್ಷ ಕೋಟಿ ವರುಷಗಳಿಂದಲೂ ಇರುವ ಈ ಅನಂತ ಅಪಾರ ಅಸೀಮ ವಿಶ್ವದಲಿ ನಮ್ಮ ಸೌರವ್ಯೂಹವಿರುವ ಈ ಬ್ರಹ್ಮಾಂಡ. ಇಂಥ ಬ್ರಹ್ಮಾಂಡಗಳು ಲಕ್ಷ ಕೋಟಿ, ಅಸಂಖ್ಯಾತ ಇವೆ. ಭೂಮಿಗಿಂತಲೂ ಗುರು ದೊಡ್ಡದು. ಗುರುಗ್ರಹಕಿಂತಲೂ ಸೂರ್ಯನೆನಿಸಿಕೊಂಡ ನಕ್ಷತ್ರ ಸಾವಿರ ಪಾಲು ದೊಡ್ಡದು. ಇಂಥ ಸೂರ್ಯನೂ ಇನ್ನಿತರ ಹಲವು ನಕ್ಷತ್ರಗಳಿಗೆ ಹೋಲಿಸಿದರೆ ವಿಪರೀತ ಚಿಕ್ಕದು! ಅಂಥ ಭಾರೀ ನಕ್ಷತ್ರಗಳೇ ವಿಶ್ವ ಎಂದು ಕರೆಯುವ ಆಡುಂಬೊಲದಲಿ ಕೋಟ್ಯನುಕೋಟಿ ಇರುವಾಗ ಕೇವಲ ಐವತ್ತು, ಅರುವತ್ತು ಅಬ್ಬಬ್ಬಾ ಎಂದರೆ ಎಪ್ಪತ್ತು, ಎಂಬತ್ತು ವರುಷಗಳಲಷ್ಟೇ ಜೀವಿಸಿ ಕಂತೆ ಒಗೆಯುವ ನಮ್ಮ ಮನುಷ್ಯ ಜನ್ಮ ಎಷ್ಟು ಕ್ಷಣಿಕ! ಅಖಂಡ ವಿಶ್ವದ ಲೆಕ್ಕದಲ್ಲಿ ನಮ್ಮ ಈ ಅಗಾಧ ಭೂಮಿಯೇ ಒಂದು ಧೂಳಿನ ಕಣವಾಗಿರುವಾಗ ನಮ್ಮದೇನು ಲೆಕ್ಕ!? ಅನಂತ ಕೋಟಿ ಬ್ರಹ್ಮಾಂಡ ನಾಯಕನಟನ ಮುಂದೆ ನಮ್ಮದೇನು ದುಃಖ? ಇದಕಿಂತ ದೊಡ್ಡದೇ ಜೀವನ ನಾಟಕ !? +ಅಹಂಭಾವ, ಅಹಂಕಾರ, ಕ್ಷುದ್ರತೆ, ಕ್ಷುಲ್ಲಕತೆ, ಕತೆವ್ಯಥೆ ಎಲ್ಲವೂ ಅರ್ಥವಿಲ್ಲದ ಬರೀ ವ್ಯರ್ಥ ಎಂಬುದನ್ನು ಕಂಡುಕೊಳ್ಳುವುದೇ ನಿಜವಾದ ಭ್ರಮನಿರಸನ. ನಾನೇ ದೊಡ್ಡವ, ನನ್ನದೇ ಮನೆವಾಳ್ತನ, ನನ್ನಿಂದಲೇ ಎಲ್ಲ, ನಾನಿಲ್ಲದಿದ್ದರೆ ಇಲ್ಲವೇ ಇಲ್ಲ! ಎಂಬುದೇ ನಿಜವಾದ ಭ್ರಮೆ. ಇರುವತನಕ ನಾಕು ದಿನ, ಆತ್ಮೀಯರೆನಿಸಿಕೊಂಡ ನಾಕು ಜನ. ನೀನು ಏನೇನು ಅಂದೆ; ಏನೇನು ತಿಂದೆ! ಇಷ್ಟೇ ಜೀವನ. ಏನೇನು ಅಂದೆ: ಮಾತು, ಧಾತು, ಆಗೇನಾಯ್ತು? ಏನೇನು ತಿಂದೆ: ಮಾವು, ಬೇವು, ದುಗುಡದ ನೋವು! ಭ್ರಮೆ ಕಳಚಿದ ಜೀವನದಲಿ ಕೊನೆಗೂ ಉಳಿಯುವುದಿಷ್ಟೆ: ನನ್ನ ದುಃಖಕೂ ಸಂತಸಕೂ ಕಟ್ಟಿಕೊಂಡು ಒದ್ದಾಡುತಿರುವ ಭ್ರಮಾ ಬದುಕಿಗೂ ನಾನೇ ಜವಾಬು-ದಾರ. ಮಿಕ್ಕಿದ್ದೆಲ್ಲ ಅಷ್ಟಕಷ್ಟೆ! ಬರೀ ಚೇಷ್ಟೆ; ಕುಚೇಷ್ಟೆ!! +ಗೌತಮ ಬುದ್ಧರು ಜ್ಞಾನೋದಯಗೊಂಡ ಮೇಲೆ ಹೇಳಿದ್ದನ್ನು ಸಂಗ್ರಹಿಸಿ ನಿರೂಪಿಸುವುದಾದರೆ, ಜಗತ್ತು ಮಾತ್ರವಲ್ಲ, ವಿಶ್ವದ ಸಕಲವೂ ನಿರಂತರ ಬದಲಾವಣೆ ಮತ್ತು ಬೆಳವಣಿಗೆಗೆ ಒಳಪಟ್ಟಿದ್ದು, ಯಾವುದೂ ತನ್ನ ಮೂಲ ಸ್ವರೂಪದಲ್ಲಿ ಕಾಣ ಸಿಗುವುದಿಲ್ಲ. ಇದನ್ನು ಲೋಕಪ್ರವಾಹವೆಂದೇ ಕರೆಯುವುದು. ಇದನ್ನು ಅರ್ಥ ಮಾಡಿಕೊಳ್ಳಲು ಸೋತಾಗಿನ ಮನಸ್ಥಿತಿಯೇ ದುಗುಡ. ಅರ್ಥ ಮಾಡಿಕೊಂಡು ನಾವೂ ಬದಲಾದರೆ ಆಗ ದುಃಖ, ದುಗುಡಕ್ಕೆ ಎಡೆಯಿಲ್ಲ. ಲೋಕದಲ್ಲಿ ಯಾವುದೂ ತಂತಾನೇ ಸ್ವತಂತ್ರವಲ್ಲ; ಎಲ್ಲವೂ ಸಂಯೋಜಿತಗೊಂಡದ್ದು ಎಂಬುದು ಬುದ್ಧರ ಉಪದೇಶ ಸಾರ. ಇದನ್ನು ಪತಂಜಲಿ ಮುನಿಯೂ ತನ್ನ ಯೋಗಸೂತ್ರಗಳಲ್ಲಿ ವಿವರಿಸಿದ್ದಾರೆ. +ಜೀವನವೆಂಬುದೊಂದು ವಿಕಾಸಶೀಲ ಶಕ್ತಿ, ಇಂಥ ಶಕ್ತಿಗೆ ಅಸ್ತಿತ್ವ ಮತ್ತು ಅನಸ್ತಿತ್ವ ಎಂಬ ಎರಡು ಆಯಾಮಗಳಿವೆ. ಶಕ್ತಿಯು ಅಸ್ತಿತ್ವದಲ್ಲಿ ಬರುತ್ತದೆ ಮತ್ತೆ ಅನಸ್ತಿತ್ವದಲ್ಲಿ ಹೊರಟು ಹೋಗುತ್ತದೆ. ದೀಪ ಶಾಂತವಾದ ಮೇಲೆ ಬೆಳಕು ಎಲ್ಲಿ ಹೋಯಿತು? ಎಲ್ಲಿಂದ ಬಂತೋ ಅಲ್ಲಿಗೆ! ದ್ವಂದ್ವದ ನಡುವೆ ಶಕ್ತಿಯು ವಿಸ್ತಾರಗೊಳ್ಳುವುದು. ಕತ್ತಲು ಮತ್ತು ಬೆಳಕು ಎರಡೂ ಒಂದರಿಂದಲೇ ಉಂಟಾಗಿರುವುದು. ಕತ್ತಲು ಎಂಬುದು ಕಡಿಮೆ ಬೆಳಕಷ್ಟೇ. ಬೆಳಕು ಎಂಬುದು ಕಡಿಮೆ ಕತ್ತಲಿಗಿಟ್ಟಿರುವ ಹೆಸರಷ್ಟೆ. ವಿಜ್ಞಾನದ ಸಹಾಯ ಪಡೆದರೆ ತಿಳಿಯುವುದು: ಕತ್ತಲು ನಮಗೆ, ಪಕ್ಷಿಗಳಿಗಲ್ಲ. ಅವುಗಳ ಕಣ್ಣು ಅಷ್ಟು ಸೂಕ್ಷö್ಮ ಬೆಳಕನ್ನೂ ತಿಳಿಯಬಲ್ಲದು. ಯೋಗ ಹೇಳುವುದು-ಎರಡನ್ನೂ ಅರಿತುಕೊಳ್ಳಿ, ಹಿಡಿಯಬೇಡಿ! ಇದನ್ನೇ ಗೌತಮ ಬುದ್ಧರು ಮಧ್ಯಮಮಾರ್ಗ ಎಂದರು. ಪ್ರತಿಯೊಂದರಲೂ ಎರಡು ತುದಿಗಳಿರುತ್ತವೆ; ಇವು ಅತಿಗಳು ಕೂಡ. ಎರಡು ಅತಿಗಳಲ್ಲೂ ದುಃಖವಿದೆ. ಸೋಲೆಂಬುದು ಜೀವನದ ಒಂದರ ತುದಿಯಾದರೆ, ಗೆಲುವು ಎಂಬುದು ಇನ್ನೊಂದರ ತುದಿ. ಇವೆರಡರಲ್ಲೂ ಆತಂಕ ಮತ್ತು ಭಯಗಳಿವೆ. ಸೋತವರಿಗೆ ಯಾವಾಗ ಗೆಲ್ಲುವೆನೋ? ಎಂಬ ತವಕ; ಗೆದ್ದವರಿಗೆ ಮತ್ತೆ ಯಾವಾಗ ಸೋಲುವೆನೋ? ಎಂಬ ಚಿಂತೆ. ಇವೆರಡರ ಮಧ್ಯ ಯಾವುದು? ಯಾವ ಪಂದ್ಯದಲ್ಲೂ ಭಾಗವಹಿಸದೇ ಇರುವುದು! ಅಥವಾ ಗೆದ್ದರೂ ಸೋತರೂ ನಿರ್ಲಿಪ್ತವಾಗಿರುವುದು. ಅದಕಾಗಿ ಪತಂಜಲಿ ಮುನಿಯು ಹೇಳಿದ್ದು: ಎರಡನ್ನೂ ಅರಿತುಕೊಳ್ಳೋಣ; ಆದರೆ ಆ ಎರಡಕ್ಕೂ ಜೋತು ಬೀಳದಿರೋಣ. +ಚೇತನ ಮತ್ತು ಅಚೇತನಗಳು ಅಸ್ತಿತ್ವದ ಎರಡು ರೂಪಗಳು. ಇವೆರಡೂ ರೂಪಾಂತರಗೊಳ್ಳುತ್ತವೆ. ಚೇತನದಿಂದ ಅಚೇತನ, ಅಚೇತನದಿಂದ ಚೇತನ ಆಗಬಹುದು. ಪ್ರತಿನಿತ್ಯ ಇದಾಗುತ್ತಲೇ ಇದೆ. ಪಂಚಭೂತಗಳಿಂದಾದ ಶರೀರ ಎನ್ನುವುದು ಇದಕ್ಕೇ. ‘ಚೇತನಮೂರ್ತಿಯು ಆ ಕಲ್ಲು; ತೆಗೆ! ಜಡವೆಂಬುದು ಬರಿ ಸುಳ್ಳು!!’ ಎಂದರು ರಸಋಷಿ ಕುವೆಂಪು ಅವರು. ಈ ವಿಶ್ವದ ಪ್ರತಿಯೊಂದೂ ಹೀಗೆ ರೂಪಾಂತರಗೊಳ್ಳುವ ಸಂಯೋಜನೆಯೇ! ಎರಡು ಕಲ್ಲುಗಳಲ್ಲೂ ಬೆಂಕಿಯಿದೆ. ಅವನ್ನು ಘರ್ಷಿಸಿದರೆ ಅದು ಹೊರ ಬರುವುದು. ಹೀಗೆ ಎಲ್ಲದರಲ್ಲೂ ಶಕ್ತಿಯಾಗಲೀ, ಆ ಶಕ್ತಿಯ ಪರಿಣಾಮವಾಗಲೀ ಸುಪ್ತವಾಗಿ ಇರುವುದು. +ಈ ಸೃಷ್ಟಿಯ ಪ್ರತಿಯೊಂದೂ ಅಂತಸ್ಸಂಬಂಧವಿರತಕ್ಕವು. ಒಂದು ಹೂ ಅರಳಿದ್ದರೂ ಅದು ನಮ್ಮೊಂದಿಗೆ ಕೂಡಿದೆ. ಒಬ್ಬ ವ್ಯಕ್ತಿ ನರಳುತ್ತಿದ್ದಲ್ಲಿ ನಾವು ಸಂತೋಷದಿಂದಿರಲಾಗದು. ಪ್ರತಿಯೊಂದೂ ಕೂಡಿದೆ, ನಾವೆಲ್ಲರೂ ಕೂಡಿದ್ದೇವೆ. ಯೋಗವೆಂದರೆ ಕೂಡುವುದು; ಕೂಡಿಸುವುದು. ಯೋಗವಿಜ್ಞಾನವು ಸಕಾರಾತ್ಮಕ ಮತ್ತು ರಚನಾತ್ಮಕ. ಒಡೆಯುವುದು, ನಾಶ ಮಾಡುವುದು ಹಾಗೂ ಬೇರ್ಪಡಿಸುವುದು ಯೋಗವಲ್ಲ. ಇಷ್ಟಕ್ಕೂ ಕೂಡುವ ಅಥವಾ ಬೇರ್ಪಡುವ ಎರಡೂ ಯಾವುದೋ ಒಂದರ ಬೇರೆ ಬೇರೆ ರೂಪಗಳಷ್ಟೇ. ಬೇರೆ ಬೇರೆಯಂತೆ ತೋರುವುದು ನಮ್ಮ ದೃಷ್ಟಿಭ್ರಮೆ, ಕಾಣ್ಕೆಯ ಮಿತಿ. +ಮೇಲ್ನೋಟಕ್ಕೆ ಕಾಣುವ ದ್ವೈತಗುಣವು ಅಂತರಂಗದಲ್ಲಿ ಅದ್ವೈತವೇ ಆಗಿರುತ್ತದೆ. ನಮ್ಮೆಲ್ಲರೊಳಗೆ ನಡೆಯುವ ಚಿಂತನೆಗಳು ನಮ್ಮೆಲ್ಲರವು. ವಿಚಾರಗಳು ತರಂಗಗಳಂತೇ. ನಮ್ಮನ್ನು ನಾವು ಬೇರೆ ಎಂದು ಬೇರ್ಪಡಿಸಿ ನೋಡುವುದು ಮೂರ್ಖತನ. ಆ ಕಾರಣಕ್ಕಾಗಿಯೇ ಹಿರಿಯರು ಕೆಲವು ಸೌಮ್ಯೋಕ್ತಿಗಳನ್ನು ಬಳಸುತ್ತಿದ್ದರು. ಅಪ್ರಿಯ ಸತ್ಯವನ್ನು ಪ್ರಿಯವಾದ ಧಾಟಿಯಲ್ಲಿ ಹೇಳುತ್ತಿದ್ದರು. ಬೈಗುಳವೇ ಶಾಪ; ಹಾರೈಕೆಯೇ ವರ. ಕೆಟ್ಟಹಾರೈಕೆ ಅಥವಾ ಶಾಪವು ಇಡೀ ವಾತಾವರಣವನ್ನೇ ಅಲ್ಲೋಲಕಲ್ಲೋಲ ಮಾಡಬಲ್ಲದು. ನಮ್ಮಿಂದ ಬರುವ ಮಾತಿನ ತೀವ್ರತೆ ಮನಸ್ಸುಗಳನ್ನು ನೇರವಾಗಿ ಪ್ರಭಾವಿಸುವುದು. ಮಾತೇ ಮುತ್ತು; ಮಾತೇ ಮೃತ್ಯು ಎನ್ನುವುದು ಇದಕ್ಕೇ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ಹೇಳಿದ್ದು ಈ ದಿಸೆಯಲ್ಲೇ. +ಅಣುವಿನಲ್ಲಿ ಏನಿದೆಯೋ ಅದು ವಿರಾಟದಲ್ಲೂ ಇದೆ. ಕ್ಷುದ್ರದಲ್ಲೇನಿದೆಯೋ ಅದೂ ವಿರಾಟದಲ್ಲಿದೆ. ನೀರಹನಿಯಲ್ಲಿ ಏನಿದೆಯೋ ಅದೇ ಸಾಗರದಲ್ಲೂ ಇದೆ. ಸಾಗರವೆಂಬುದು ಒಂದೊಂದು ಹನಿಯ ಸಂಗ್ರಹವಷ್ಟೇ. ಕೀಳರಿಮೆ ಅಥವಾ ಹೀನಭಾವ ಹುಚ್ಚುತನ, ಅರ್ಧಸತ್ಯ. ತನ್ನನ್ನು ತಾನು ಏನೂ ಅಲ್ಲವೆಂದು ತಿಳಿಯುವುದೂ ಅವಿವೇಕ; ಹಾಗೆಯೇ ತನ್ನನ್ನು ತಾನು ಬಲು ದೊಡ್ಡವನು ಎಂದು ತಿಳಿಯುವುದೂ ಅರ್ಧಸತ್ಯದ ಅವಿವೇಕ! ನಾನು ಸಾಗರವಾಗುವೆನೆಂಬ ಜಂಭ ಕಿಂಚಿತ್ತೂ ನೀರಬಿಂದುವಿಗಿಲ್ಲ; ನಾನು ಸಾಗರವೇ ಎಂದು ಯಾವುದೂ ಸಂಭ್ರಮಿಸಬೇಕಾಗಿಲ್ಲ. ಏಕೆಂದರೆ ಸಾಗರ ಅಂತ ನಾವು ಕರೆದುಕೊಳ್ಳುತ್ತಿರುವುದು ಅಂಥ ಒಂದೊಂದು ನೀರಹನಿಯ ಸಂಗ್ರಹವನ್ನು. +ಕೊಡುವುದೇ ಹೊಂದುವುದಾಗಿದೆ; ಅಳಿಯುವುದೇ ಆಗುವುದಾಗಿದೆ. ನೀರಹನಿ ತನ್ನನ್ನು ತಾನು ಅಂಬುಧಿಗೆ ಅರ್ಪಿಸಿಕೊಂಡಾಗ ಸಾಗರವು ಹನಿಗೆ ದೊರಕಿಬಿಡುವುದು, ತತ್ಕ್ಷಣ ಹನಿಯು ಸಾಗರವಾಗುವುದು. ಸ್ವಯಂಪ್ರಭೆಯಿಂದ ಉರಿಯುವ ಆಕಾಶಕಾಯವೊಂದು ಉರಿದುರಿದು ಬೂದಿಯಾಗುವುದು; ಕಪ್ಪುರಂಧ್ರ ಏರ್ಪಡುವುದು. ಆಮೇಲೇನಾಗುವುದು? ಅನಂತವಿಶ್ವದಲ್ಲಿ ವಿಶ್ವವೇ ಆಗುವುದು. ಅಂದರೆ ಅಳಿಯುವುದೇ ಆಗುವುದಾಗಿದೆ. ಬರಿದಾಗುವುದೇ, ಬಯಲಾಗುವುದೇ ಉಳಿಯುವುದಾಗಿದೆ-ಸಹಜವಾಗಿದೆ. ಹಾಗೆಯೇ ಇನ್ನೊಂದಾಗುವುದೇ ಸೃಷ್ಟಿಪ್ರಕ್ರಿಯೆಯ ಮುಂದುವರಿಕೆಯಾಗಿದೆ. ಓಶೋ ರಜನೀಶರು ಇದನ್ನು ಸ್ಥೂಲವಾಗಿ ‘ವೈರಾಗ್ಯ ಮತ್ತು ಸಾಕ್ಷಿತ್ವʼ ಎಂದು ಕರೆಯುವರು. ವಿರಾಗ ಎಂದರೆ ರಾಗರಹಿತಸ್ಥಿತಿಯಲ್ಲ, ರಾಗಗಳನ್ನು ದೂರವಿಟ್ಟು ವೀಕ್ಷಿಸುವುದು. ನಿರ್ವಾಣ ಎಂದರರ್ಥ: ಮೃತ್ಯು ಯಾರಿಗೆ ಮೃತ್ಯುವಾಗಿ ಉಳಿದಿಲ್ಲವೋ ಅಂಥ ಸ್ಥಿತಿ. ಬದುಕಿನಂಥದೇ ಸ್ಥಿತಿ ಸಾವು. ಸಾವನ್ನು ಬದುಕಿನಷ್ಟೇ ಸರಾಗವಾಗಿ, ಸಾಕ್ಷೀಭಾವದಿಂದ ಸ್ವೀಕರಿಸುವುದು. ಇದೇ ಯೋಗದ ಪರಮಸೂತ್ರ; ಅಂತಿಮಸೂತ್ರ. ಅದಾವ ದಿನ ನಾನು ಎಂಬುದಿಲ್ಲ ಎಂಬುದು ಗೊತ್ತಾಗುವುದೋ ಅದೇ ದಿನ ಗೊತ್ತಾಗುವುದು: ಮೃತ್ಯು ಯಾರದ್ದು? ಸಾಯುವವರು ಯಾರು? ಸಿದ್ಧಾರ್ಥನೆಂಬುವ ಬುದ್ಧತ್ವ ಹೊಂದಿದರೆಂದರೆ ಸಂಪೂರ್ಣಾರ್ಥದಲ್ಲಿ ಯೋಗಿಯಾದರು ಎಂದೇ. ಇದೇ ಬುದ್ಧರಿಗೆ ಜ್ಞಾನೋದಯವಾದ ಸಾರಸರ್ವಸ್ವ: ನಾನು ಎಂಬುದಿಲ್ಲ; ಇರುವುದೇನಿದ್ದರೂ ಸೃಷ್ಟಿ ಸ್ಥಿತಿ ಲಯ. ನಾನೆಂಬುದು ಸೃಷ್ಟಿಯಾದರೆ ಅದು ಜೀವವಿಕಾಸ. ಲಯವಾಗುವತನಕ ಬದುಕುವುದಿದೆಯಲ್ಲ, ಅದೇ ಸ್ಥಿತಿ. ಲಯವೆಂದರೆ ಸಂಪೂರ್ಣ ನಾಶವಲ್ಲ. ಕೇವಲ ರೂಪಾಂತರ ಅಷ್ಟೇ. +ನಾನತ್ವ ಸತ್ತ ಮೇಲೆ ಇನ್ನೆಲ್ಲಿದೆ ಇನ್ನೊಂದು ಮೃತ್ಯು? ನಿಜವಾಗಿ ಸಾಯಬೇಕಾದದ್ದು ಸಾವಲ್ಲ, ಬದುಕಿನುದ್ದಕ್ಕೂ ಕಾಡುವ, ಅಂತರಂಗದಲ್ಲಿದ್ದೇ ಆಟವಾಡುವ ನಾನತ್ವ. ಎಲ್ಲಿಯವರೆಗೆ ಮಂದಿ ಸಾವಿಗೆ ಹೆದರುವರೋ ಅಲ್ಲಿಯವರೆಗೆ ನಾನತ್ವ ಅಳಿಯುವುದಿಲ್ಲ. ಹೀಗೆ ಜ್ಞಾನೋದಯಗೊಂಡಿದ್ದರಿಂದಲೇ ಗೌತಮ ಬುದ್ಧರು, ಅಂಗುಲಿಮಾಲನಂಥ ರಾಕ್ಷಸನ ಎದುರು ನಿರ್ಭೀತಿಯಿಂದ ನಿಂತದ್ದು! ಮೊತ್ತ ಮೊದಲ ಬಾರಿಗೆ ಆ ಅಂಗುಲಿಮಾಲನಿಗೆ ಅಚ್ಚರಿಯೂ ದಿಗಿಲೂ ಆದದ್ದು ಏತಕ್ಕೆಂದರೆ, ಇದುವರೆಗೂ ಯಾರೊಬ್ಬರೂ ಅವನ ಮುಂದೆ ಜೀವದ ಹಂಗು ತೊರೆದು ಸಾವಿನ ಭಯವೇ ಇಲ್ಲದೇ ಎದುರು ನಿಂತವರೊಬ್ಬರೂ ಇರಲಿಲ್ಲ, ಅದಕ್ಕೆ. ಅಂದರೆ ಬುದ್ಧರಿಗೆ ನಾನತ್ವ ಇಲ್ಲದೇ ಇದ್ದುದರಿಂದ ಇದು ಸಾಧ್ಯವಾಯಿತು. ಆ ಜ್ಞಾನೋದಯಗೊಂಡವರ ಬಳಿಯೂ ಸುತ್ತಮುತ್ತಲೂ ಸುತ್ತುತಿದ್ದ ಪ್ರಭಾವಲಯ, ಅದು ಸಕಾರಾತ್ಮಕವಾದ ವರ್ತುಲ! ಅದಕ್ಕೆ ಆ ದುಷ್ಟನು ವಶವರ್ತಿಯಾದ. ಪೂರ್ಣ ಶರಣಾಗತನಾದ. ಆತನ ನಕಾರಾತ್ಮಕ ಸ್ವಭಾವಗಳು ಬುದ್ಧರ ಸಕಾರಾತ್ಮಕ ಅಲೆಗಳ ಮುಂದೆ ಸೋತು ಹೋಯಿತು; ಸತ್ತು ಹೋಯಿತು. +ಇಷ್ಟೇ: ಜ್ಞಾನೋದಯಗೊಂಡವರು ಸುಮ್ಮನಿರುತ್ತಾರೆ. ಸುಮ್ಮನಿರುವುದು ಹೇಗೆಂದು ಅರಿತಿರುತ್ತಾರೆ. ಏಕೆಂದರೆ ಅವರಿಗೆ ಜಗತ್ತು ಮತ್ತು ವಿಶ್ವವು ಅರ್ಥವಾಗಿರುತ್ತದೆ. ಅದರಲ್ಲಿ ತನ್ನ ಸ್ಥಾನ ಶೂನ್ಯ ಎಂಬುದೇ ಈ ಅರಿವು. ಈ ದಿಸೆಯಲ್ಲಿ ಶಂಕರಾಚಾರ್ಯರು ಹೇಳಿದ ಕಿವಿಮಾತನ್ನು ಪರಾಂಬರಿಸಬೇಕು: ನಾನು ಎಂಬುದು ಅಷ್ಟು ಪ್ರಿಯವಾಗಿದ್ದರೆ ಒಂದೋ ಅದನ್ನು ಶೂನ್ಯವಾಗಿಸು; ಅಥವಾ ಇಡೀ ವಿಶ್ವವನ್ನೇ ಆವರಿಸುವಷ್ಟು ಅದನ್ನು ದೊಡ್ಡದಾಗಿಸು!’ ನಿಸ್ಸಂಶಯವಾಗಿ ನಾನು ಎಂಬುದು ಎಲ್ಲರಿಗೂ ಪ್ರಿಯವೇ. ಹಾಗಾಗಿ ಅದನ್ನು ಶೂನ್ಯವಾಗಿಸಬೇಕು ಅಥವಾ ವಿಶ್ವಕ್ಕೇ ಪಸರಿಸಬೇಕು. ಇರುವುದು ಇವೆರಡೇ ದಾರಿ. ಅಧ್ಯಾತ್ಮದಲ್ಲಿ ಇದು ಕೇವಲ ದಾರಿಯಲ್ಲ; ಗುರಿ ಕೂಡ! +ದೈವಸಾಕ್ಷಾತ್ಕಾರ, ಭಗವಂತನ ಚರಣಾರವಿಂದಕ್ಕರ್ಪಿತ, ಲೋಕದಿಂದ ಮುಕ್ತಿ, ಸ್ವರ್ಗದಭಿಲಾಷೆ, ಅಧ್ಯಾತ್ಮಸಿದ್ಧಿ ಎಂಬ ಪದಪುಂಜಗಳೆಲ್ಲ ಅಹಮ್ಮಿನ ಅನ್ಯರೂಪಗಳು; ಅನೂಹ್ಯ ರೂಪಗಳು! ಈ ಕಾರಣದಿಂದಲೇ ಅಲ್ಲಮ ಪೇಚಾಡಿಕೊಳ್ಳುವುದು ‘ಶಬ್ದದ ಲಜ್ಜೆಯ ನೋಡಾ!’ ಇಂಥವನ್ನೆಲ್ಲ ಗೆದ್ದವರು, ಮೀರಿದವರು ಯೋಗಿಗಳು. ಗೆಲ್ಲುವುದೆಂದರೆ, ಮೀರುವುದೆಂದರೆ ಅರಿಯುವುದು. ವಿಶ್ವಸತ್ಯವನ್ನು ಅರಿಯಲು ಸಂನ್ಯಾಸಿಯೇ ಆಗಬೇಕಿಲ್ಲ; ಸಂಸಾರದಿಂದ ವಿಮುಖಗೊಳ್ಳಬೇಕಿಲ್ಲ! ನಮ್ಮ ಕನ್ನಡ ನಾಡಿನ ಶಿವಶರಣರು ಇದನ್ನು ಸಾಧಿಸಿ ತೋರಿದರು. +ಪತಂಜಲಿ ಮುನಿಯು ಯೌಗಿಕ ಪರಿಭಾಷೆಯಲ್ಲೂ ಗೌತಮ ಬುದ್ಧರು ವೈಜ್ಞಾನಿಕ ಪರಿಭಾಷೆಯಲ್ಲೂ ಹೇಳಿದ್ದು ಆಧ್ಯಾತ್ಮಿಕ ಸತ್ಯವನ್ನೇ! ಯಾವುದೂ ಸರ್ವ ಸ್ವತಂತ್ರವಲ್ಲ. ತನಗೆ ತಾನೇ ಸ್ವತಂತ್ರವೆಂದು ಕಾಣುವುದೆಲ್ಲಾ ಇನ್ನೊಂದರ ಸಂಯೋಜನೆ. ಪ್ರತಿಯೊಂದೂ ಅಂತಸ್ಸಂಬಂಧಿತ. ನಿನ್ನಲ್ಲಿ ಕಾಣುವ ಕೆಟ್ಟತನ ನನ್ನದೂ ಹೌದು; ನನ್ನಲ್ಲಿ ನೀನು ಕಾಣುವ ಒಳ್ಳೆಯತನ ನಿನ್ನದೂ ಹೌದು. ಇದೇ ಸಮಭಾವ. ‘ಹಗಲು ಮಾತ್ರ ಪರಮಾತ್ಮನದ್ದಲ್ಲ; ರಾತ್ರಿಯೂ ಆತನದೇ. ಈ ನಿಲವೇ ಧಾರ್ಮಿಕತೆʼ ಎಂದರು ಓಶೋ ರಜನೀಶರು. +ಕೊನೆಗೂ ಹೇಳಬಹುದಾದದ್ದು: ಜ್ಞಾನೋದಯ ಎಂಬುದು ಮಾರಾಟದ ಸರಕಲ್ಲ. ಅಂತಿಮವಾದ ಗಮ್ಯವೂ ಅಲ್ಲ! ಅದೊಂದು ಸಾಕ್ಷಾತ್ಕಾರದ ಹಾದಿ ಮತ್ತು ಸಾಕ್ಷೀಭಾವವೆಂಬ ಸದಾ ಹರಿವ ನದಿ. ದಡದಲ್ಲಿ ನಿಂತು ನೋಡುವುದೋ, ಮಿಂದೇಳುವುದೋ, ಮನಸೋ ಇಚ್ಛೆ ಈಜಾಡುವುದೋ ಅವರವರಿಗೆ ಬಿಟ್ಟದ್ದು. ಒಟ್ಟಿನಲ್ಲಿ ಇದು ಅನುಭಾವದ ಸೆಲೆ. ಅನುಸರಿಸುವ ಅಲೆಯಲ್ಲ. ಯಾರದೋ ಬಲವಂತಕ್ಕೆ ವಶವರ್ತಿಯಾಗುವುದಲ್ಲ. ಗಿಡದಲ್ಲಿ ಹೂ ಅರಳುವಂತೆ, ಪರಿಮಳ ಹೊರಸೂಸುವಂತೆ ಆತ್ಮಕಾಗುವ ವಿವೇಕೋದಯವಿದು. ಗೋಡೆಯೆಂದುಕೊಂಡದ್ದು ಬಾಗಿಲಾಗುವಿಕೆ; ಬಾಗಿಲು ತೆರೆದು ಹೊರಗಣ ನೀಲಾಕಾಶಕ್ಕೆ ಜಿಗಿಯುವಿಕೆ! ಎಲ್ಲರೂ ಹೇಳಿಕೊಟ್ಟ, ಎಲ್ಲರಿಂದ ಬಂಧಿಸಲ್ಪಟ್ಟ ಜೀವನಭ್ರಮೆಗಳನ್ನು ದಾಟುವಿಕೆ. ಒಂದರ್ಥದಲ್ಲಿ ಇನ್ನೊಮ್ಮೆ ತಾಯಗರ್ಭದಿಂದ ಹೊರಬರುವಿಕೆ. ಅಲ್ಲೆಲ್ಲಿಯೋ ಹಿಮಾಲಯದಲಿ, ಇನ್ನೆಲ್ಲೋ ಕಾಶಿ ರಾಮೇಶ್ವರದಲಿ, ಭರತಭೂಮಿ ಬಿಟ್ಟು ಪರಪಂಚ ಸುತ್ತುವಿಕೆಯಲಿ, ಸುಮ್ಮನೆ ಅಲೆಯುತ ಅರಸುತಿರುವಲಿ ಜ್ಞಾನೋದಯವಿಲ್ಲ ಎಂಬ ವಿವೇಕ ಮೂಡುವ ಗಳಿಗೆಯದು. ‘ಬರದೇ ಇರುವುದು ಬರುವುದಿಲ್ಲ; ಬರುವುದು ಬರದೇ ಇರುವುದಿಲ್ಲ!’ ಎಂಬುದೇ ಜ್ಞಾನೋದಯ. ಯಾವುದೂ ನನ್ನ ನಿಯಂತ್ರಣದಲಿಲ್ಲ ಎಂಬುದು ಇನ್ನೊಂದು ಜ್ಞಾನೋದಯ!! ಅಂದರೆ ಎರಡೆರಡು ಜ್ಞಾನೋದಯಗಳಿರುತ್ತವೆಂದಲ್ಲ. ಆಗಾಗ್ಗೆ ಬದುಕಿನ ನಿತ್ಯಸತ್ಯಗಳು ಹೀಗೆ, ಮನಸಿಗೆ ಹಾಗೇ ಅನಿಸುವ ವಿಶ್ವಋತನಿಯಮಗಳು ಅರ್ಥವಾಗುತ್ತಿರುತ್ತವೆ. ಹೀಗೆ ಜ್ಞಾನೋದಯಗೊಂಡವರು ಚರಿತ್ರೆಯ ಪುಟಗಳಲ್ಲಿ ಅಮರರಾಗಿದ್ದಾರೆ. ಒಳಗಣ್ಣು ತೆರೆದು ನೋಡಿದರೆ ನಮ್ಮರಿವಿಗೆ ಬರುವಷ್ಟು ಸುತ್ತಮುತ್ತಲೂ ಇರುತ್ತಾರೆ. ಇದನ್ನು ಕಂಡು ಹಿಡಿಯಬೇಕಿಲ್ಲ; ಕಂಡುಕೊಳ್ಳಬೇಕು. ಇಂಗ್ಲಿಷಿನ ಈ ಮಾತೇ ಇದರ ಮುಕ್ತಾಯ: The Word LISTEN contains the same letters as the word SILENT! +-ಡಾ. ಹೆಚ್ ಎನ್ ಮಂಜುರಾಜ್ \ No newline at end of file diff --git a/PanjuMagazine_Data/article_1010.txt b/PanjuMagazine_Data/article_1010.txt new file mode 100644 index 0000000000000000000000000000000000000000..efdf65120d92d70323b27071abd80e1646730c5e --- /dev/null +++ b/PanjuMagazine_Data/article_1010.txt @@ -0,0 +1,33 @@ +ಸಿಲಿಕಾನ್ ಸಿಟಿ ಬೃಹತ್ ಬೆಂಗಳೂರು ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ “ಮಧುವನ” ಕಾಲೋನಿಯ “ಅನಿರೀಕ್ಷಿತಾ” ಅಪಾರ್ಟಮೆಂಟಿನಲ್ಲಿ ವಾಸಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ರಾಹುಲ್ ಪಕ್ಕದ ಕಾಲೋನಿಯಲ್ಲಿ “ಸರಳ ಯೋಗ ಸಂಸ್ಥೆ”ಯವರು ಆಯೋಜಿಸಿದ್ದ ಹತ್ತು ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸಲು ತನ್ನ ಹೆಸರನ್ನು ನೊಂದಾಯಿಸಿದ್ದ. “ಧ್ಯಾನ, ಪ್ರಾಣಾಯಾಮ, ಭಕ್ತಿಯೋಗ, ಆಹಾರ ಪದ್ಧತಿ, ವ್ಯಕ್ತಿತ್ವ ವಿಕಸನ ಮತ್ತು ಸಾರ್ಥಕ ಜೀವನಕ್ಕಾಗಿ ಯೋಗ. ಅಲರ್ಜಿ, ಅಸ್ಥಮಾ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸಂಧಿವಾತಗಳಂಥಹ ರೋಗಗಳನ್ನು ದೂರವಿಡುವುದಕ್ಕೆ ಯೋಗ. ಪೂಜ್ಯ ವಿವೇಕಾನಂದ ಗುರೂಜಿಯವರ ಅಮೃತವಾಣಿಯ ಆಶೀರ್ವಚನವಿದೆ.” ಯೋಗ ಸಂಸ್ಥೆಯ ಕಾರ್ಯಕರ್ತರ ಹೇಳಿಕೆಗಳು ಎಲೆಕ್ಟ್ರಾನಿಕ್ ಸಿಟಿಯ ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ಇಂಜಿನಿಯರ್ ರಾಹುಲನ ಮನಸ್ಸಿನಲ್ಲಿ ಕುತೂಹಲ ಮೂಡಿಸಿದ್ದವು. ದಿನಾಲೂ ಸಂಜೆ ಆರರಿಂದ ಏಳುವರೆಯವರೆಗೆ ತರಬೇತಿಯ ಕ್ಲಾಸುಗಳು ಇದ್ದವು. ಬೆಳಿಗ್ಗೆ ಆರರಿಂದ ಮಧ್ಯಾಹ್ನ ನಾಲ್ಕಕ್ಕೆ ರಾಹುಲನ ಕಂಪನಿಯ ಕೆಲಸ ಮುಗಿಯುತ್ತಿದ್ದರಿಂದ, ಯೋಗ ಸಂಸ್ಥೆಯ ವೇಳಾಪಟ್ಟಿ ಹೊಂದಿಕೆಯಾಗುತ್ತಿದ್ದರಿಂದ ಶಿಬಿರದ ಫೀಸು ಒಂದು ಸಾವಿರ ಕೊಟ್ಟು ಯೋಗ ತರಬೇತಿಗೆ ಸೇರುವ ಉತ್ಸಾಹ ತೋರಿಸಿದ್ದ. ಮೂವತ್ತರ ಬಿಸಿರಕ್ತದ ತರುಣ ರಾಹುಲ್ ಮದುವೆಯಾಗಿ ಈಗಷ್ಟೇ ಆರು ತಿಂಗಳುಗಳಾಗಿವೆ. ಜೊತೆಗಾತಿ ಸುಪರ್ಣಾ ಸಹ ಎಲೆಕ್ಟ್ರಾನಿಕ್ ಸಿಟಿಯ ಇನ್ನೊಂದು ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಇಂಜಿನಿಯರ್. ಗಂಡನೊಂದಿಗೇ ಯೋಗ ತರಬೇತಿ ಶಿಬಿರಕ್ಕೆ ಸೇರಬೇಕೆನ್ನುವ ತುಡಿತ ಅವಳ ಮನಸ್ಸಿನಲ್ಲಿದ್ದಿತ್ತಾದರೂ ಕಂಪನಿಯ ಕಚೇರಿಯ ವೇಳಾಪಟ್ಟಿ ಹೊಂದಾಣಿಕೆಯಾಗುತ್ತಿರಲಿಲ್ಲವಾದ್ದರಿಂದ ಆಕೆ ಸುಮ್ಮನಿರಬೇಕಾಯಿತು. +ಯೋಗ ಗುರೂಜಿ ಶ್ರೀ ವಿವೇಕಾನಂದರು ಸಮಯ ಪರಿಪಾಲನೆಯಲ್ಲಿ ತುಂಬಾ ಶಿಸ್ತಿನ ವ್ಯಕ್ತಿಯಾಗಿರುವರೆಂಬುದನ್ನು ಮೊದಲೇ ತಿಳಿದುಕೊಂಡಿದ್ದ ರಾಹುಲ್ ತರಬೇತಿಯ ಮೊದಲ ದಿನದಂದು ಅರ್ಧ ಗಂಟೆ ಮೊದಲೇ ಶಿಬಿರದ ಸ್ಥಳದಲ್ಲಿದ್ದ. ಅಲ್ಲಿ ಅವನಿಗೆ ತುಂಬಾ ಅಚ್ಚರಿಯ ಸಂಗತಿಯೊಂದು ಕಾದಿತ್ತು. ಅಲ್ಲೇನೋ ಒಂದು ರೀತಿಯ ಹಬ್ಬದ ವಾತಾವರಣವಿದ್ದಂತೆ ಢಾಳಾಗಿ ಎದ್ದು ಕಾಣುತ್ತಿತ್ತು. ಬಿಳಿಯುಡುಗೆಯಲ್ಲಿ ಮಿಂಚುತ್ತಿದ್ದ ಯೋಗ ತರಬೇತಿ ಕೇಂದ್ರದ ಹಿರಿಯ ಸತ್ಸಂಗಿಗಳು ಸಂಭ್ರಮದಿಂದ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಓಡಾಡುತ್ತಿದ್ದರು. ತರಬೇತಿಗಾಗಿ ಬರುತ್ತಿದ್ದ ಶಿಬಿರಾರ್ಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದರು. ರಾಹುಲ್ ಸ್ವಾಗತ ಸಮಿತಿಯ ಕೌಂಟರಿನತ್ತ ಹೋಗುತ್ತಿದ್ದಂತೆ ನಗುಮೊಗದಿಂದ ಅವನನ್ನು ಸ್ವಾಗತಿಸಿದ ಸ್ವಯಂ ಸೇವಕರು, ಅವನಿಗೆ ನೇಮ್ ಟ್ಯಾಗ್, ಬರೆದುಕೊಳ್ಳಲು ಕಿರು ಪುಸ್ತಕ ಮತ್ತು ಪೆನ್ನೊಂದನ್ನು ಕೊಟ್ಟು ತರಬೇತಿಯ ಹಾಲಿಗೆ ಕಳುಹಿಸಿದ್ದರು. ಪ್ರತಿಯೊಂದಕ್ಕೂ ಅಲ್ಲಿ ತುಂಬಾ ಶಿಸ್ತಿರುವುದನ್ನು ರಾಹುಲ್ ಗಮನಿಸಿದ. ಪಾದರಕ್ಷೆಗಳನ್ನು ಅವುಗಳಿಗಾಗಿ ಮೀಸಲಿಟ್ಟಿದ್ದ ಸ್ಥಳದಲ್ಲಿಯೇ ನೀಟಾಗಿ ಬಿಡಬೇಕಾಗಿತ್ತು. +ಸುಮಾರು ಎರಡು ನೂರಕ್ಕಿಂತಲೂ ಹೆಚ್ಚಿನ ಶಿಬಿರಾರ್ಥಿಗಳು ಕುಳಿತುಕೊಳ್ಳುವುದಕ್ಕೆ ಅನುಕೂಲ ಕಲ್ಪಿಸಲಾಗಿತ್ತು ಹಾಲಿನಲ್ಲಿ. ಒಳಗೆ ಬಂದ ಶಿಬಿರಾರ್ಥಿಗಳನ್ನು ಸಾಲಾಗಿ ಕುಳಿತುಕೊಳ್ಳಲು ಸ್ವಯಂ ಸೇವಕರು ಮಾರ್ಗದರ್ಶನ ನೀಡುತ್ತಿದ್ದರು. ಹಾಲಿನ ಮಧ್ಯೆದಲ್ಲಿ ಮೂವರು ವ್ಯಕ್ತಿಗಳು ಸರಾಗವಾಗಿ ಅಡ್ಡಾಡುವಷ್ಟು ಜಾಗಬಿಟ್ಟು ಎರಡೂ ಕಡೆಗೆ ಶಿಬಿರಾರ್ಥಿಗಳನ್ನು ಕೂಡ್ರಿಸುತ್ತಿದ್ದರು. ಒಂದು ಕಡೆಗೆ ಪುರುಷ, ಮತ್ತೊಂದು ಕಡೆಗೆ ಸ್ತ್ರೀ ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹಾಲಿನ ಕೊನೆಗೆ ಎತ್ತರಕ್ಕೆ ವೇದಿಕೆಯನ್ನು ನಿರ್ಮಿಸಿ ಗುರೂಜಿಯವರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಮಾಡಿದ್ದರು. ತಾಜಾ ಹೂವುಗಳ ಪರಿಮಳದಿಂದ ಹಾಲ್ ಘಮಘಮಿಸುತ್ತಿತ್ತು. ಶಾಸ್ತ್ರೀಯ ಸಂಗೀತದ ಹಾಡಿನ ಮೆಲುಧ್ವನಿಯೊಂದು ಹಾಲಿನಲ್ಲಿ ನಿಧಾನವಾಗಿ ಉಲಿಯುತ್ತಿತ್ತು. ಶಾಂತತೆಯಿಂದಿರಲು ಹಾಲಿಗೆ ಕಳುಹಿಸುವ ಮುನ್ನವೇ ಶಿಬಿರಾರ್ಥಿಗಳಿಗೆಲ್ಲಾ ತಾಕೀತುಮಾಡಿ ಕಳುಹಿಸುತ್ತಿದ್ದರು ಸ್ವಯಂ ಸೇವಕರು. ಹಾಲಿನಲ್ಲಿ ಸೂಜಿ ಬಿದ್ದರೂ ಶಬ್ದವಾಗುವಂತೆ ಶಾಂತತೆ ಇತ್ತು. ಯಾರೊಬ್ಬರೂ ಮಾತಾಡದೇ ಸಂಗೀತದ ಆಸ್ವಾದನೆಗೆ ಮುಂದಾಗುತ್ತಿದ್ದರು ಶಿಬಿರಾರ್ಥಿಗಳು ಹಾಲನ್ನು ಪ್ರವೇಶಿಸುತ್ತಿದ್ದಂತೆ. +ಸ್ವಯಂ ಸೇವಕರು ಹೇಳಿದ ಸ್ಥಾನದಲ್ಲಿ ಕುಳಿತ ರಾಹುಲ್ ನಂತರ ತನ್ನ ಅಕ್ಕ ಪಕ್ಕ, ಹಾಲಿನ ಇತರೆಡೆ ದೃಷ್ಟಿ ಹಾಯಿಸಿದ್ದ. ಆಗಲೇ ಸುಮಾರು ನೂರರಷ್ಟು ಶಿಬಿರಾರ್ಥಿಗಳು ಅಲ್ಲಿ ಕುಳಿತಿದ್ದದುದು ಕಂಡು ಬಂತು ಅವನಿಗೆ. ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಹೆಚ್ಚೆಂದು ಗೊತ್ತಾಗಲು ಅವನಿಗೆ ಹೆಚ್ಚಿನ ಸಮಯವೇನು ಬೇಕಾಗಲಿಲ್ಲ. ಪ್ರತಿಶತ ಅರವತ್ತಕ್ಕಿಂತ ಮೇಲ್ಪಟ್ಟು ಹೆಂಗಸರೇ ಅಲ್ಲಿ ಜಮಾಯಿಸಿದ್ದರು. ಹದಿನೆಂಟು, ಇಪ್ಪತ್ತರ ವಯಸ್ಸಿನಿಂದ ಹಿಡಿದು ಎಂಭತ್ತರ ವಯಸ್ಸಿನವರು ಅಲ್ಲಿ ಸೇರಿದ್ದರು. ತನ್ನಂತೆ ಹಲವಾರು ಗಂಡಸರು ಜುಬ್ಬಾ, ಪಾಯಿಜಾಮಾ ಹಾಕಿಕೊಂಡು ಬಂದಿದ್ದರು. ಕೆಳಗೆ ಕುಳಿತುಕೊಳ್ಳುವುದಕ್ಕೆ ಈ ಡ್ರೆಸ್ ಅನುಕೂಲಕರವಾಗಿದ್ದರಿಂದ ತನ್ನ ಆಯ್ಕೆ ಸರಿಯಾಗಿದೆ ಎಂದು ಅಂದುಕೊಂಡ ಮನದಲ್ಲೇ. ಹೆಂಗಸರಲ್ಲಿ ಬಹಳಷ್ಟು ಜನ ಚೂಡಿಯಲ್ಲಿದ್ದರೆ ಬಹುತೇಕ ತರುಣಿಯರು ತಮ್ಮ ದೈನಂದಿನ ಟೈಟ್ ಡ್ರೆಸ್ಸಿನಲ್ಲಿಯೇ ಇದ್ದರು. +ಆರು ಗಂಟೆಗೆ ಇನ್ನೇನು ಐದು ನಿಮಿಷಗಳು ಬಾಕಿ ಇರುವಾಗಲೇ ಶ್ವೇತ ವಸ್ತ್ರಧಾರಿಗಳಾದ ಗುರೂಜಿಯವರು ವೇದಿಕೆಯ ಮೇಲಿದ್ದ ತಮ್ಮ ಆಸನದಲ್ಲಿ ವಿರಾಜಮಾನರಾದರು. ಐವತ್ತರ ಹರೆಯದ, ನೀಳವಾದ ಕೇಶರಾಶಿಯ ಜೊತೆಗೆ ನೀಳವಾದ ಗಡ್ಡಧಾರಿ ಅವರಾಗಿದ್ದರು. ಬಹಳಷ್ಟು ಬೆಳುಪಾಗಿದ್ದ ಕೂದಲುಗಳನ್ನು ತಿದ್ದಿ, ತೀಡಿ ಬಾಚಿದ್ದರು. ತುಟಿಯಂಚಿನಲ್ಲಿ ಮುಗುಳು ನಗೆ ಲಾಸ್ಯವಾಡುತ್ತಿದ್ದುದರಿಂದ ಅವರನ್ನು ಹಸನ್ಮುಖಿಗಳೆಂದು ಗುರುತಿಸಬಹುದಾಗಿತ್ತು. ಅವರ ಆತ್ಮೀಯ ನಗೆಯ ಮೋಡಿಗೆ ಒಳಗಾಗದಿರಲು ಕಷ್ಟವೆನಿಸಬಹುದೇನೋ? “ಈ ರೀತಿಯ ನಗುಮೊಗದಿಂದಲೇ ಗುರೂಜಿಯವರು ಹಲವರ ಮನಸ್ಸುಗಳನ್ನು ಗೆಲ್ಲುತ್ತಾರೆ” ಎಂದು ಯಾರೋ ಹೇಳಿದ್ದನ್ನು ರಾಹುಲ್ ನೆನಪಿಸಿಕೊಂಡ. +ಸರಿಯಾಗಿ ಆರು ಗಂಟೆಗೆ ಗುರೂಜಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ್ದರು. ಮೊದಲು ತಮ್ಮ ಪರಿಚಯ, ನಂತರ ಸ್ವಯಂ ಸೇವಕರು ಅಂದರೆ ಹಿರಿಯ ಸಾಧಕರ ಪರಿಚಯ ತದನಂತರ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಜನರ ಪರಿಚಯ ಮುಂದುವರೆದಿತ್ತು. ರಾಹುಲ್ ಪ್ರತಿಯೊಬ್ಬರ ಮಾತುಗಳನ್ನು ಗಮನವಿಟ್ಟು ಆಲಿಸತೊಡಗಿದ್ದ. ಇಂದಿನ ಬಿಡುವಿಲ್ಲದ ವೇಗೋತ್ಕರ್ಷದ ಜೀವನದಿಂದ ಚಿಂದಿಯಾಗುತ್ತಿರುವ ಮನುಷ್ಯ ಜೀವನಕ್ಕೆ ಪುನಶ್ಚೇತನ ನೀಡಲು ಬಹಳಷ್ಟು ಜನ ಅಂದಿನ ಶಿಬಿರಕ್ಕೆ ಸೇರಿದ್ದರು. ಮಾಹಿತಿ ತಂತ್ರಜ್ಞಾನದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಬಹಳಷ್ಟು ಉದ್ಯೋಗಿಗಳು ಅಲ್ಲಿ ಜಮಾಯಿಸಿರುವುದು ವಿಶೇಷವಾಗಿತ್ತು. +“ಈ ಜಗತ್ತಿನ ಪ್ರತಿಯೊಬ್ಬ ಮಾನವ ಜೀವಿಯಲ್ಲಿ ಅಗಾಧವಾದ ಮತ್ತು ಅನನ್ಯವಾದ ಶಕ್ತಿ ಹುದುಗಿದೆ. ಈ ಶಕ್ತಿ ಸಕಾರಾತ್ಮಕವಾಗಿ ಹೂವಿನಂತೆ ಅರಳಿ ಸುವಾಸನೆ ಬೀರಿದರೆ ಮಾತ್ರ ಈ ಪ್ರಪಂಚ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೃಪ್ತಿಯಿಂದ ಕೂಡಿದ ಸುಸಂಸ್ಕೃತ ಸಮಾಜವಾಗಬಲ್ಲದು. ಉತ್ತಮ ಆರೋಗ್ಯ, ಮಾನಸಿಕ ಸಮನ್ವತೆಗಳ ಜೊತೆಗೆ, ಗುರಿ ಮುಟ್ಟುವ ಛಲ, ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಧೈರ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಮಾನವ ತನ್ನ ಕಲ್ಪನೆಯ ಕನಸುಗಳನ್ನು ಸಾಮರ್ಥ್ಯ ಮತ್ತು ಶ್ರದ್ಧೆ ಎಂಬ ಸೇತುವೆಗಳಿಂದ ಸಾಕಾರಗೊಳಿಸಿಕೊಳ್ಳಬಹುದು. ಪ್ರಯತ್ನ, ಪರಿಶ್ರಮಗಳನ್ನು ಶ್ರದ್ಧೆಯಿಂದ ಸಕಾರಾತ್ಮಕವಾಗಿ ಬಳಸಿಕೊಂಡರೆ ಅಭಿವೃದ್ಧಿ ಕಟ್ಟಿಟ್ಟ ಬುತ್ತಿ. ಹತ್ತು ದಿನಗಳ ಈ ತರಬೇತಿ ಶಿಬಿರದಲ್ಲಿ ಇವೆಲ್ಲವುಗಳಿಗೆ ಒತ್ತು ನೀಡಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. ಆದ್ದರಿಂದ ಶಿಬಿರಾರ್ಥಿಗಳು ಲಕ್ಷ್ಯವಿಟ್ಟು ಪಾಠಗಳನ್ನು ಕೇಳಿಸಿಕೊಳ್ಳಬೇಕು.” ಗುರೂಜಿಯವರು ತುಂಬಾ ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗಿ ಹೇಳಿದ್ದರು. +“ಯೂ ಡರ್ಟಿ ಬಿಚ್, ನೀನು ಮೋಸಗಾತಿ. ನನಗೆ ಮೊದಲಿನಿಂದಲೂ ನಿನ್ನ ಮೇಲೆ ಅನುಮಾನವಿತ್ತು. ನೀನು ಇಂಥಹ ನೀಚ ಕೃತ್ಯಕ್ಕೆ ಇಳಿಯಬಹುದು ಎಂದು ನಾನು ಅಂದುಕೊಂಡಿದ್ದು ಇಂದು ನಿಜವಾಗಿ ಬಿಟ್ಟಿತು. ತುಡುಗು ದನಕ್ಕೆ ಕದ್ದು ಮೇಯುವುದರಲ್ಲೇ ಹೆಚ್ಚಿನ ಖುಷಿಯಂತೆ. ಥೂ, ನಿನ್ನಂಥಹವಳು ಬದುಕಿರಬಾರದು. ಇಲ್ಲದಿದ್ದರೆ ನಿನ್ನಂಥಹವಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ನಿನ್ನ ವಂಚನೆಗೆ ಜೀವನರ್ಯಂತ ಮನಸಲ್ಲೇ ನಾನು ಕೊರಗಿ ಸಾಯುವುದಕ್ಕಿಂತ ಜೇಲಲ್ಲಿ ಜೀವನ ಕಳೆದರೂ ಪರವಾಗಿಲ್ಲ, ನೀನು ಮಾತ್ರ ಬದುಕಿರಬಾರದು. ಅಹ್ಹ…. ಅಹ್ಹ…. ನೀನು ಜೀವದಿಂದ ಇರಬಾರದು. ಅಹ್ಹ….ಅಹ್ಹ….ಇದೋ ನೋಡು ಈ ಚಾಕುವಿನ ರುಚಿ. ಹೇಗಿದೆ…..? ನಿನ್ನ ರಕ್ತ ಕುಡಿಯುವ ತವಕ. ಬೇಡ, ಬೇಡ. ನಿನ್ನ ರಕ್ತ ಹಾಗೇ ಹರಿದು ಭೂಮಿಯಾಯಿಯ ತಳ ಸೇರಲಿ. ಇದೋ ನೋಡು….” ಎಂದೆನ್ನುತ್ತಾ ದೆವ್ವ ಹಿಡಿದವರಂತೆ ತೇಕುತ್ತಾ ಮೇಲಿಂದ ಮೇಲೆ ಚಾಕುವಿನಿಂದ ಅವಳ ಎದೆ, ಹೊಟ್ಟೆ, ಕುತ್ತಿಗೆ, ತೊಡೆ, ತಲೆಗೆ ತಿವಿದಿದ್ದ. ಅಟ್ಟಹಾಸದ ನಗು ಎಲ್ಲೆಡೆ ವಿಜೃಂಭಿಸತೊಡಗಿತ್ತು. +“ರೀ ರಾಹುಲ್, ಇದೇಕೆ ಈ ರೀತಿ ಒಮ್ಮಿಂದೊಮ್ಮೆಲೇ ವಿಕಾರವಾಗಿ ಚೀರುತ್ತಿರುವಿರಿ? ಏದುಸಿರು ಬಿಡುತ್ತಿರುವಿರಲ್ಲಾ, ಲಂಗ್ಸ್ನಲ್ಲಿ ಇನ್ಫೆಕ್ಷನ್ ಆಗಿದೆಯೇ ಹೇಗೆ? ಕೆಟ್ಟ ಕನಸು-ಗಿನಸು ಏನಾದರೂ ಬಿದ್ದಿತ್ತೇ ಹೇಗೆ…? ಮೊದಲು ಸ್ವಲ್ಪ ಈ ನೀರು ಕುಡಿದು ದೀರ್ಘವಾಗಿ ಉಸಿರಾಡಿಸಿರಿ ಕೊಂಚ ಹೊತ್ತು ನನ್ನೆದೆಯ ಮೇಲೆ ತಲೆ ಇಟ್ಟು” ಎಂದು ಹೇಳುತ್ತಾ ಸುಪರ್ಣಾ ರಾಹುಲನನ್ನು ತನ್ನೆದೆಗೆ ಒತ್ತಿ ಹಿಡಿದುಕೊಂಡು ಪಕ್ಕದ ಟೀಪಾಯ್ ಮೇಲಿದ್ದ ಬಾಟಲಿನಿಂದ ನೀರನ್ನು ಕುಡಿಸತೊಡಗಿದಳು. ಹಾಗೇ ಅವನ ಎದೆಯನ್ನು ನವಿರಾಗಿ ತೀಡತೊಡಗಿದಳು. +ಮಡದಿ ಸುಪರ್ಣಾಳ ಎದೆಗೊರಗಿದ್ದ ರಾಹುಲ್ ಕಣ್ ಕಣ್ ಬಿಡತೊಡಗಿದ್ದ. ಹೆಂಡತಿಯ ಮಾತಿನಂತೆ ಕೊಂಚ ನೀರನ್ನು ಗುಟುಕರಿಸುತ್ತಾ ಕಣ್ರೆಪ್ಪೆ ಬಡಿಯದೇ ಸುಪರ್ಣಾಳ ಮುಖ ದಿಟ್ಟಿಸತೊಡಗಿದ್ದ. +“ಅದೇನು ಈ ರೀತಿ ನೋಡುತ್ತಿದ್ದೀರಿ? ನನಗೊಂದೂ ಅರ್ಥವಾಗುತ್ತಿಲ್ಲ….? ನೀವು ಚೀರಾಡುತ್ತಿದ್ದುದನ್ನು ನೆನೆಸಿಕೊಂಡರೆ ನನ್ನ ಹೃದಯ ನಿಂತು ಹೋಗುವಂತಾಗುತ್ತಿದೆ. ನನಗೆ ತುಂಬಾ ಗಾಬರಿ, ಭಯವಾಗತೊಡಗಿತ್ತು. ಹೇಗೋ ಮ್ಯಾನೇಜ್ ಮಾಡಿಕೊಂಡು ಧೈರ್ಯ ತೆಗೆದುಕೊಂಡೆ ನನ್ನಲ್ಲೇ. ಏನಾಯಿತು ಅಂತ ಸ್ವಲ್ಪ ಬಿಡಿಸಿ ಹೇಳಿದರೆ ನಾನು ನಿರಾಳವಾಗಿ ಉಸಿರಾಡಬಹುದು…” ಸುಪರ್ಣಾಳ ಮಾತಿನಲ್ಲಿ ಆತಂಕವಿತ್ತು. +“ಅಂದರೆ ನಾನು ಇದುವರೆಗೂ ಮಾಡಿದ್ದು ಕನಸಿನಲ್ಲಿಯೇ? ಅಂದರೆ….ಅಂದರೆ ನಾನು ಸುಪರ್ಣಾಳನ್ನು ಕೊಚ್ಚಿ ಹಾಕಿದ್ದು ಕನಸಿನಲ್ಲಿಯೇ….? ಕನಸಿನಲ್ಲಿ ನನ್ನಿಂದ ಹತಳಾದವಳಿಂದಲೇ ನನಗೆ ಉಪಚಾರವಾಗುತ್ತಿದೆಯಲ್ಲಾ? ಇವಳ ನಡತೆಯಲ್ಲಿ ಢಾಂಬಿಕತೆಯ ಸೋಗು ಕಾಣುತ್ತಿರುವ ಹಾಗಿಲ್ಲ..? ಅಂದರೆ ಇವಳ ಪ್ರೇಮಿ ತಪ್ಪಿಸಿಕೊಂಡದ್ದು ಕನಸಿನಲ್ಲಿಯೇ? ಕನಸಿನಲ್ಲಿ ನಾನಾಡಿದ ಮಾತುಗಳು ಇವಳ ಕಿವಿಗೆ ಬಿದ್ದಿವೆಯೇ ಹೇಗೆ?….ಅಂದರೆ….ಅಂದರೆ….ಕೇಳಿಸಿಕೊಂಡಿದ್ದರೆ ನನ್ನ ಬಗ್ಗೆ ಇವಳ ಅಭಿಪ್ರಾಯ ಹೇಗಿರಬಹುದು? ಏನೂ ಆಗಿಲ್ಲವೆಂಬಂತೆ ಸ್ವಾಭಾವಿಕವಾದ ಉಪಚಾರ, ಆರೈಕೆಯಲ್ಲಿ ಇವಳು ತೊಡಗಿದವಳಂತೆ ಕಾಣುತ್ತಿದೆ….? ಇದೂ ಒಂದು ರೀತಿಯ ಸೋಗೇ ಹೇಗೆ? ಅಯ್ಯೋ ದೇವರೇ, ನಾನಾಡಿದ ಮಾತುಗಳು ಇವಳ ಎದೆಯನ್ನು ತಲುಪಿರದಂತೆ ನೋಡಿಕೋ.” ರಾಹುಲ್ ಮನಸ್ಸಿನಲ್ಲಿ ಏನೇನೋ ಲೆಕ್ಕಾಚಾರ ಮಾಡಿಕೊಳ್ಳತೊಡಗಿದ್ದ ಸುಮ್ಮನೇ. +“ಏನ್ರೀ, ಮಾತೇ ಆಡುತ್ತಿಲ್ಲವಲ್ಲ? ತುಂಬಾ ಭಯವಾಗುತ್ತಿದೆಯೇ ಹೇಗೆ?” ಎಂದೆನ್ನುತ್ತಾ ಸುಪರ್ಣಾ ರಾಹುಲನ ಕಣ್ಗಳಲ್ಲಿ ದೃಷ್ಟಿ ನೆಟ್ಟಿದ್ದಳು. ಅವಳ ತೀಕ್ಷಣ ನೋಟ ಅವನಿಗೆ ಸಹಿಸದಂತಾಗಿತ್ತು. ಕತ್ತಿಯ ಅಲುಗಿನಂತೆ ಅವನೆದೆಯನ್ನು ಸೀಳತೊಡಗಿತ್ತು. +“ಸುಪು, ನಾನೇನು ಮಾತಾಡಿದೆ? ನನಗೊಂದೂ ನೆನಪಿಲ್ಲ.” +“ರಾಹುಲ್, ನೀವು ಅದೇನನ್ನೋ ಗೊಣಗಿಕೊಳ್ಳುತ್ತಿದ್ದಿರಿ. ನನಗೆ ನಿಮ್ಮ ಮಾತುಗಳು ಅರ್ಥವೇ ಆಗಲಿಲ್ಲ. ಆದರೆ ನಿಮ್ಮ ಮುಖದಲ್ಲಿ ರೌದ್ರವ ಕಳೆ ತುಂಬಿತ್ತು.” +“ಅಂದರೆ ನನ್ನ ಮಾತುಗಳು ನಿನಗೆ ಗೊತ್ತಾಗಲಿಲ್ಲವೇ?” +“ಹೌದ್ರೀ. ಆದರೆ ನಿಮ್ಮ ಮುಖದಲ್ಲಿನ ಭಾವನೆಗಳು ಭಯಂಕರವಾಗಿದ್ದವು.” +“ಸುಪಿ, ಅದೇನೋ ಕೆಟ್ಟ ಕನಸು ಬಿದ್ದಿತ್ತು ಕಣೇ. ಕನಸು ಏನೆಂದು ಮಿದುಳಿನ ಪರದೆಯಲ್ಲಿ ಸರಿಯಾಗಿ ಮೂಡುತ್ತಿಲ್ಲ. ಅನಾವಶ್ಯಕವಾಗಿ ನಿನ್ನ ನಿದ್ದೆ ಕೆಡಿಸಿದೆ. ಸಾರಿ ನಿನಗೆ ತುಂಬಾ ಡಿಸ್ಟರ್ಬ ಮಾಡಿಬಿಟ್ಟೆ. ಸದ್ಯ ನಿಶ್ಚಿಂತೆ ಇಂದ ಮಲಗು.” +“ಸ್ವಲ್ಪ ಚಹ-ಗಿಹ ಮಾಡಿಕೊಡಲೇ? ನೀವು ತುಂಬಾ ಆಯಾಸಗೊಂಡವರಂತೆ ಕಾಣುತ್ತಿರುವಿರಿ” ಎಂದೆನ್ನುತ್ತಾ ಸುಪರ್ಣಾ ರಾಹುಲನ ತಲೆಗೂದಲಲ್ಲಿ ಆತ್ಮೀಯವಾಗಿ ಕೈಯಾಡಿಸುತ್ತಾ ಅವನನ್ನು ಗಟ್ಟಿಯಾಗಿ ತನ್ನೆದೆಗೆ ಒತ್ತಿಕೊಂಡಿದ್ದಳು. +“ಆಯ್ತು ಸುಪು, ಚಹ ಮಾಡಿಕೊಡು” ಎಂದೆನ್ನುತ್ತಾ ರಾಹುಲ್ ಗೋಡೆ ಗಡಿಯಾರದ ಕಡೆಗೆ ನೋಡಿದಾಗ ರಾತ್ರಿ ಎರಡು ಗಂಟೆಯಾಗಿತ್ತು. ಸುಪರ್ಣಾ ನವಿರಾಗಿ ರಾಹುಲನ ಹಣೆ, ಕೆನ್ನೆ, ತುಟಿಗಳಿಗೆ ಮುತ್ತಿಡುತ್ತಾ ಅವನ ತಲೆಯನ್ನು ದಿಂಬಿನ ಮೇಲೆ ಇಟ್ಟು ಅಡಿಗೆ ಮನೆಯತ್ತ ಹೆಜ್ಜೆ ಹಾಕಿದ್ದಳು. ಬಳ್ಳಿಯಂತೆ ಬಳುಕುವ ಅವಳ ನಡು, ಹಿಂಬಾಗದ ಲಾಸ್ಯ ರಾಹುಲನ ಮನಸ್ಸನ್ನು ಸೆಳೆಯತೊಡಗಿದ್ದವು. ಅಂಗಾತ ಮಲಗಿ ದೀರ್ಘವಾಗಿ ಉಸಿರು ಹಾಕಿದ ರಾಹುಲ್. +“ಗುರೂಜಿ, ಈ ಯೋಗ ತರಬೇತಿ ಶಿಬಿರಕ್ಕೆ ಸೇರಿದಾಗಿನಿಂದಲೂ ನನ್ನ ಮನಸ್ಸಿನಲ್ಲಿನ ದ್ವಂದ್ವದ ಬಗ್ಗೆ ವಿವರಿಸಬೇಕೆಂದು ನಾನು ಹಂಬಲಿಸುತ್ತಿದ್ದೇನೆ. ಮೊದಲ ದಿನದಂದು ನಾನು ಸೂಕ್ಷ್ಮವಾಗಿ ನನ್ನ ಮನಸ್ಸಿನಲ್ಲಿನ ಹೊಯ್ದಾಟದ ಬಗ್ಗೆ ಹೇಳಿಕೊಂಡಿದ್ದೆ ಕಿರುಪರಿಚಯದಲ್ಲಿ. ಗುರೂಜಿ, ತಾವೀಗ ಫ್ರೀಯಾಗಿದ್ದರೆ ಎಲ್ಲವನ್ನೂ ವಿವರಿಸಲೇ?” ಗುರೂಜಿಯವರ ಪಾದಗಳಿಗೆ ನಮಸ್ಕರಿಸುತ್ತಾ ಹೇಳಿದ್ದ ರಾಹುಲ್ ಯೋಗ ತರಬೇತಿ ಶಿಬಿರಕ್ಕೆ ಸೇರಿದ್ದ ಆರನೆಯ ದಿನ ಬೆಳಿಗ್ಗೆ ಅಂದರೆ ಶನಿವಾರದ ದಿನದಂದು. ಅಂದು ಶಿಬಿರಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಗುರೂಜಿಯವರಿಂದ ಪರಿಹಾರ ಪಡೆಯುವುದಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿತ್ತು. ರಾಹುಲನ ಆಫೀಸಿಗೆ ರಜೆ ಬೇರೆ ಇತ್ತಲ್ಲವೇ? ಅಂದು ಸುಪರ್ಣಾಳ ಗೆಳತಿಯೊಬ್ಬಳು ಮನೆಗೆ ಬರುತ್ತಿದ್ದುದರಿಂದ ಅವಳು ಅವನೊಂದಿಗೆ ಬರುವುದು ತಪ್ಪಿದ್ದರಿಂದ ರಾಹುಲ್ ಮನದಲ್ಲೇ ಖುಷಿಪಟ್ಟಿದ್ದ. ಏಕೆಂದರೆ ತನ್ನ ಮನಸ್ಸಿನಲ್ಲಿದ್ದುದನ್ನು ಗುರೂಜಿಯವರ ಹತ್ತಿರ ನಿರ್ಭೀತನಾಗಿ ಹೇಳಬಹುದೆಂದು. +“ರಾಹುಲ್, ನಿನ್ನ ಮನಸ್ಸಿನಲ್ಲಿ ಅದೇನು ಸಮಸ್ಯೆ ಇದ್ದರೂ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳು. ಸಮಸ್ಯೆಯ ಮೂಲ ಸಿಕ್ಕರೆ ತಾನೆ ಪರಿಹಾರ ಹುಡುಕಬಹುದು. ಮನಸ್ಸನ್ನು ತೆರೆದಿಡು.” ಗುರೂಜಿ ತುಂಬಾ ಪ್ರಸನ್ನರಾಗಿ ಹೇಳಿದರು. ಅವರ ಆತ್ಮೀಯ, ಹೃದಯಕ್ಕೆ ತಲುಪುವಂತಿದ್ದ ಮುಕ್ತ ಮಾತುಗಳಿಂದ ಉತ್ತೇಜಿತನಾದ ರಾಹುಲ್ ತನ್ನದೆಯೊಳಗೆ ಹುದುಗಿದ್ದ, ಒಳಗೊಳಗೇ ಕುದಿಯುತ್ತಿದ್ದ ತುಮುಲವನ್ನು ಬಯಲಿಗಿಡತೊಡಗಿದ. +“ಗುರೂಜಿ, ಈಗ್ಗೆ ಆರು ತಿಂಗಳ ಹಿಂದೆಯಷ್ಟೇ ನನ್ನ ಮದುವೆಯಾಗಿದೆ. ಮದುವೆಯಾಗುವುದಕ್ಕೆ ಮುಂಚೆ ದಾಂಪತ್ಯ ಜೀವನದ ಬಗ್ಗೆ ಇದ್ದ ಉತ್ಸಾಹದ ಬುಗ್ಗೆ ಬತ್ತಿ ಹೋಗುತ್ತಿದೆಯೇನೋ ಎಂದು ಅನಿಸುತ್ತಿದೆ. ಸಂಸಾರದಲ್ಲಿ ಸ್ವಾರಸ್ಯವೇ ಇಲ್ಲದಂತಾಗಿದೆ. ಮದುವೆಯ ಉದ್ದೇಶಕ್ಕೆ ಅರ್ಥವಿಲ್ಲದಂತಾಗಿದೆ. ಇದೆಲ್ಲಾ ನನ್ನ ಅತಂತ್ರ ಮನಸ್ಸಿನಿಂದಲೇ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೂ ಒಂದು ಗಟ್ಟಿಯಾದ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. +ಸುಪರ್ಣಾಳನ್ನು ವಧು ಪರೀಕ್ಷೆಗೆಂದು ನೋಡಲು ಹೋದ ದಿನವೇ ನಮ್ಮ ಮತ್ತು ಆಕೆಯ ತಂದೆ-ತಾಯಿಗಳಿಗೆ ಎಲ್ಲಾ ರೀತಿಯಿಂದ ಪರಸ್ಪರ ಒಪ್ಪಿಗೆಯಾಗಿತ್ತು. ಎಲ್ಲರೂ ತಮ್ಮ ಮನದಲ್ಲಿದ್ದುದನ್ನು ಹಂಚಿಕೊಂಡು ಖುಷಿಪಟ್ಟಿದ್ದರು. ಸುಪರ್ಣಾ ನನ್ನ ಜೊತೆಗೆ ಕೊಂಚ ಮಾತಾಡಲು ಆಸೆ ವ್ಯಕ್ತಪಡಿಸಿದಾಗ, ಅವಳೊಂದಿಗೆ ಏಕಾಂತದಲ್ಲಿ ಮಾತಾಡುವುದಕ್ಕೆ ಅವಕಾಶ ತಾನಾಗಿ ಒದಗಿ ಬಂದಿದ್ದರಿಂದ ನನ್ನ ಖುಷಿಗೆ ಮಿತಿಯೇ ಇರಲಿಲ್ಲ. ತುಂಬು ಲವಲವಿಕೆ, ಉತ್ಸಾಹ ಇಬ್ಬರಲ್ಲೂ. ತುಸು ಸಮಯದ ಗುಣಾಕಾರ, ಭಾಗಾಕಾರ, ಮೌನದ ನಂತರ ಇಬ್ಬರೂ ಮಾತಿಗಿಳಿದಿದ್ದೆವು. +“ರಾಹುಲ್, ಒಂದು ವಿಷಯವನ್ನು ನಿಮಗೆ ತಿಳಿಸಬೇಕಾಗಿದೆ. ನಂತರ ನೀವು ನಿಮ್ಮ ನಿರ್ಧಾರ, ಅಭಿಪ್ರಾಯ ಪರಾಮರ್ಶಿಸಿದರೆ ನನ್ನ ಅಭ್ಯಂತರವೇನಿಲ್ಲ….” ಸುಪರ್ಣಾ ತನ್ನ ಮಾತನ್ನು ಶುರುಮಾಡಿದ್ದಳು. +“ಸುಪರ್ಣಾ, ಅದೇನಿದ್ದರೂ ಹೇಳಿರಿ” ಎಂದಿದ್ದೆ ನಾನು. ನನ್ನಲ್ಲೂ ಒಂದು ರೀತಿಯ ತವಕ ಇತ್ತು ಆಕೆ ಅದೇನು ಹೇಳುತ್ತಾಳೆಂದು. +“ರಾಹುಲ್, ನೇರವಾಗಿ ವಿಷಯವನ್ನು ತಿಳಿಸಿಬಿಡುತ್ತೇನೆ. ಕಾಲೇಜಿನಲ್ಲಿ ಇದ್ದಾಗ ನಾನು ಸುಜನ್ ಎಂಬ ಹುಡುಗನನ್ನು ಪ್ರೀತಿಸಿದ್ದೆ. ಅವನೂ ನನ್ನನ್ನು ಮನಸಾರೆ ಪ್ರೀತಿಸಿದ್ದ. ನಾವು ಪ್ರೀತಿಸುತ್ತಿದ್ದ ವಿಚಾರ ನಮ್ಮಿಬ್ಬರ ಮನೆಯವರಿಗೆ ಹೇಗೋ ತಿಳಿದು ಹೋಗಿತ್ತು. ನಮ್ಮಿಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ಇಬ್ಬರ ಮನೆಯವರ ಸಮ್ಮತಿ ಇರಲಿಲ್ಲ. ಜಾತಿಯ ಅಟ್ಟಹಾಸ ಈಗಲೂ ಮುಂದುವರಿದಿದೆ ಅಲ್ಲವೇ ನಮ್ಮ ದೇಶದಲ್ಲಿ? ಇಬ್ಬರಿಗೂ ಬೋಧನೆಯಾಗಿತ್ತು. ತಮ್ಮ ಹಿತೋಪದೇಶಗಳನ್ನು ಧಿಕ್ಕರಿಸಿ ನಾವು ಮದುವೆಯಾದದ್ದೇ ಆದರೆ ಅದರ ಪರಿಣಾಮ ಘನ ಘೋರವಾಗಬಹುದು ಎಂದು ತಿಳಿಸಿದ್ದರು. ಇದನ್ನೆಲ್ಲಾ ಪರಾಮರ್ಶಿಸಿದ ನಾನು ಅದೊಂದು ದಿನ ಸುಜನ್ನ ಜೊತೆಗೆ ಚರ್ಚೆಗೆ ಮುಂದಾಗಿದ್ದೆ. “ಸುಜನ್, ನಮ್ಮ ಪ್ರೀತಿಗೇಕೋ ಅಡೆ-ತಡೆಗಳು ಬಹಳ ಎಂದೆನಿಸುತ್ತಿದೆ. ನಮ್ಮಿಬ್ಬರ ಸ್ವಾರ್ಥಕ್ಕಾಗಿ ನಾವು ಮದುವೆಯಲ್ಲಿ ಮುಂದುವರಿದರೆ ಇಬ್ಬರ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲಿಕ್ಕೆ ಸಾಧ್ಯವಿಲ್ಲವೆಂದು ನನಗನಿಸುತ್ತಿದೆ ಹಾಗೇ ನಾವೂನೂ ಸಹ. ಅದಕ್ಕಾಗಿ ನಾನೊಂದು ಮಾತನ್ನು ಹೇಳಬೇಕೆಂದಿದ್ದೇನೆ” ಎಂದು ನಾನು ಹೇಳುವಷ್ಟರಲ್ಲಿ ಸುಜನ್, “ಸುಪರ್ಣಾ, ನಿಮ್ಮ ಮನಸ್ಸಿನಲ್ಲಿ ಏನಿದೆಯೆಂದು ನಾನು ಅರಿಯನೇ? ಹಿರಿಯರ ಮನ ನೋಯಿಸಿ ನಾವಿಬ್ಬರೇ ಸುಖ ಕಂಡುಕೊಂಡರೆ ಅದಕ್ಕೆ ಅರ್ಥವಿದೆಯೇ? ಆಗಲಿ, ನಮ್ಮಿಬ್ಬರ ಪ್ರಾಂಜಲ ಪ್ರೀತಿಗೆ ತಿಲಾಂಜಲಿ ಇತ್ತು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯೋಣ. ಹಿರಿಯರ ಇಚ್ಛೆಗೆ ಸ್ಪಂದಿಸುತ್ತಿರುವ ನಮ್ಮಿಬ್ಬರಿಗೂ ಒಳ್ಳೆಯ ಸಂಗಾತಿಗಳು ಸಿಗಲಿ ಎಂದು ಹಾರೈಸುವೆ” ಎಂದು ಹೇಳಿದ್ದ ಸುಜನ್. ಅದುವರೆಗೆ ಅವನೆಂದೂ ನನ್ನ ಕೈ ಮುಟ್ಟಿ ಸಹ ಮಾತಾಡದವನು ನನ್ನ ಕೈ ಕುಲುಕಿ ನನ್ನ ಭಾವೀ ಜೀವನಕ್ಕೆ ಶುಭ ಕೋರಿದ್ದ. ನಾನೂ ಅವನನ್ನು ಫಾಲೋ ಮಾಡಿದ್ದೆ. +ಈ ವಿಷಯವನ್ನು ಇಂದೇ ನಿಮಗೆ ತಿಳಿಸಿದರೆ ಒಳ್ಳೆಯದೆಂದು ನನ್ನ ಮನಸ್ಸಿಗೆ ಅನಿಸಿದ್ದರಿಂದ ಮುಚ್ಚಿಡದೇ ಎಲ್ಲವನ್ನೂ ಹೇಳಿದ್ದೇನೆ. ಇದನ್ನು ಕೇಳಿದ ಮೇಲೆ ನಿಮಗೆ ಹೇಗೆ ಅನ್ನಿಸುತ್ತಿದೆಯೋ ಹಾಗೇ ನೀವು ತೀರ್ಮಾನ ತೆಗೆದುಕೊಳ್ಳಬಹುದು. ನನ್ನ ಪಾಲಿನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಆದರೆ ಒಂದು ಮಾತಂತೂ ಸತ್ಯ. ನಾನು ಗಂಗೆಯಷ್ಟೇ ಪವಿತ್ರಳು. ಈ ಮೊದಲೇ ಹೇಳಿದಂತೆ ನಾವು ಪರಸ್ಪರ ಪ್ರೀತಿಸುತ್ತಿದ್ದರೂ ಎಂದೂ ದೈಹಿಕ ಕಾಮನೆಗಾಗಿ ಆಸೆ ಪಟ್ಟವರಲ್ಲ.” ಸುಪರ್ಣಾ ತನ್ನೆದೆಯಲ್ಲಿದ್ದ ಮಾತುಗಳನ್ನು ಹೊರಗಿಟ್ಟಿದ್ದಳು. ತುಸು ಹೊತ್ತು ನಮ್ಮಿಬ್ಬರ ನಡುವೆ ಮೌನ ಆವರಿಸಿತ್ತು. ಅವಳೇನು ನನ್ನ ಮಾತಿಗೆ ಅವಸರ ವ್ಯಕ್ತಪಡಿಸಲಿಲ್ಲ. ಅವಳ ಮಾತುಗಳು, ಓಪನ್ನೆಸ್ ನನಗೆ ತುಂಬಾ ಇಷ್ಟವಾಗಿದ್ದವು. ಅವಳು ನನಗೆ ತುಂಬಾ ಮೆಚ್ಚುಗೆಯಾಗಿ ಬಿಟ್ಟಳು. ಈಗಿನ ಕಾಲದ ಎಷ್ಟೋ ಜನ ಹುಡುಗಿಯರು ಮದುವೆಗೆ ಮುಂಚೆ ಬಾಯ್ ಫ್ರೆಂಡ್ಸ್, ಡೇಟಿಂಗ್ ಎಂದು ಎಲ್ಲವನ್ನೂ ಮುಗಿಸಿಕೊಂಡು ಮದುವೆಯಾಗುವಾಗ ಪತಿವ್ರತೆಯರಂತೆ ನಾಟಕವಾಡುತ್ತಿರುವುದು ನನಗೆ ತಿಳಿಯದ ವಿಷಯವೇನಾಗಿರಲಿಲ್ಲ. ನನ್ನ ಕಾಲೇಜಿನ ಬಹಳಷ್ಟು ಹುಡುಗಿಯರು ಇದಕ್ಕೆ ಹೊರತಾಗಿರಲಿಲ್ಲವೆಂಬುದು ನನಗೆ ತಿಳಿದೇ ಇದೆ. +“ಸುಪರ್ಣಾ, ನಿಮ್ಮ ಮಾತುಗಳು ನನಗೆ ತುಂಬಾ ಹಿಡಿಸಿಬಿಟ್ಟವು. ನನ್ನದು ಅಚಲ ನಿರ್ಧಾರ” ಎಂದು ತಿಳಿಸಿ ಅವಳ ಮನಸ್ಸಿಗೆ ಸಂತಸ ನೀಡಿದ್ದೆ. +ಆದರೆ ಏಕೋ, ಏನೋ, ಮದುವೆಯಾದ ನಂತರ ನನ್ನ ಮನಸ್ಸಿನಲ್ಲಿ ಯಾವಾಗಲೂ ಅವಳ ನಡತೆಯ ಬಗ್ಗೆ ಸಂಶಯ ಮೂಡತೊಡಗಿದೆ. ಸುಪರ್ಣಾ ನಾಟಕವಾಡುತ್ತಿದ್ದಾಳೆ ಎಂದು ಅನಿಸತೊಡಗಿದೆ. ಅವಳ ನಡತೆಯಲ್ಲಿ ಅನುಮಾನಿಸುವಂಥಹದ್ದೇನು ನನಗೆ ಕಂಡು ಬಂದಿರದಿದ್ದರೂ ಸುಮ್ಮನೇ ನನ್ನ ಮನಸ್ಸು ಗೊಂದಲದ ಗೂಡಾಗಿಬಿಟ್ಟಿದೆ. ಅವಳು ನನಗೆ ಮೋಸ ಮಾಡುತ್ತಿದ್ದಾಳೆ. ಕದ್ದು ಮುಚ್ಚಿ ಮಾಜಿ ಲವರ್ನೊಂದಿಗೆ ಮಾತಾಡುತ್ತಿದ್ದಾಳೆ, ಭೆಟ್ಟಿಯಾಗುತ್ತಿದ್ದಾಳೆ, ಸಂದರ್ಭ ನೋಡಿಕೊಂಡು ಕೂಡುತ್ತಿದ್ದಾಳೆ ಎಂಬ ಭ್ರಮೆ ನನ್ನ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿದೆ. ಈಗ್ಗೆ ಹದಿನೈದು ದಿನಗಳ ಹಿಂದೆ ಸುಪರ್ಣಾ ಸುಜನ್ನೊಂದಿಗೆ ಅನೈತಿಕತೆಯಲ್ಲಿ ತೊಡಗಿದಂತೆ, ನಾನು ಅವಳನ್ನು ಅಟ್ಟಾಡಿಸಿಕೊಂಡು ಕೊಚ್ಚಿಹಾಕಿದಂತೆ, ಆಕೆಯ ಪ್ರಿಯಕರ ನನ್ನ ಚಾಕುವಿನ ಏಟಿನಿಂದ ತಪ್ಪಿಸಿಕೊಂಡು ಓಡಿ ಹೋದಂತೆ ಘನಘೋರವಾದ ಕನಸನ್ನು ಕಂಡಿದ್ದೆ. ಬೆದರಿದ್ದ ನನ್ನನ್ನು ಸುಪರ್ಣಾ ತಾಯಿ ಮಗುವನ್ನು ಸಂತೈಸುವಂತೆ ಸಂತೈಸಿದ್ದಳು. ಅವಳ ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆಗಳಿಲ್ಲವೆಂದು ನನ್ನ ಮನಸ್ಸು ಹೇಳುತ್ತಿದ್ದರೂ, ಏಕೋ ಏನೋ ಅದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ನಾನೆಲ್ಲಿ ಮಾನಸಿಕ ರೋಗಿಯಾಗಿ ಬಿಡುತ್ತೇನೋ ಎಂದು ಭಯವಾಗತೊಡಗಿದೆ ಇತ್ತೀಚಿಗೆ. ಮಾನಸಿಕ ನೆಮ್ಮದಿ ಅರಸಿ ನಾನು ನಿಮ್ಮ ಶಿಬಿರಕ್ಕೆ ಸೇರಿದ್ದೇನೆ. ಗುರೂಜಿ, ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ಸೂಚಿಸಬೇಕಾಗಿ ವಿನಂತಿ.” +“ರಾಹುಲ್, ನಂಬಿಕೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬಹು ಮುಖ್ಯವಾದದ್ದು. ನಂಬಿಕೆ, ನಿಷ್ಠೆ ಪರಸ್ಪರ ಪೂರಕ ಅನ್ಯೋನ್ಯ ದಾಂಪತ್ಯ ಜೀವನಕ್ಕೆ. ಸಾಮರಸ್ಯವಿರದ ಸಂಸಾರ ಅದೆಂಥಹದೋ? ನಿನ್ನ ಹೆಂಡತಿಗೆ ತನ್ನ ಮಾಜಿ ಪ್ರೇಮಿಯೊಡನೆ ಕದ್ದು-ಮುಚ್ಚಿ ವ್ಯವಹಾರ ನಡೆಸುವ ಯೋಚನೆಯಿದ್ದರೆ ಆಕೆ ಆ ವಿಷಯವನ್ನು ನಿನ್ನೊಂದಿಗೆ ಹೇಳುತ್ತಿರಲೇ ಇಲ್ಲ. ಯಾರಾದರೂ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುತ್ತಾರೆಯೇ? ಉಹೂಂ ಇಲ್ಲ ತಾನೇ? ನೀನೇ ಹೇಳುತ್ತಿರುವಿಯಲ್ಲಾ, ಆಕೆಯ ನಡತೆಯಲ್ಲಿ ಯಾವುದೇ ಕೆಟ್ಟ ಭಾವನೆಗಳಿಲ್ಲವೆಂದು. ತಪ್ಪು ಅದೇನಿದ್ದರೂ ನಿನ್ನ ಮನಸ್ಸಿನಲ್ಲಿಯೇ ಇದೆ. ನಿನ್ನ ಅಂತರಾತ್ಮವನ್ನು ಮೊದಲು ಶೋಧಿಸು. ನಿನ್ನ ಮನಸ್ಸನ್ನು ಮೊದಲು ಅರಿತುಕೋ. ನಿನ್ನ ಮನಸ್ಸನ್ನು ಪರಿಶುದ್ಧ ಮಾಡಿಕೋ. ಪ್ರಾಣಾಯಾಮ, ಧ್ಯಾನಗಳಿಂದ ನಿನ್ನ ದೇಹ, ಮನಸ್ಸುಗಳೆರಡನ್ನೂ ಶುದ್ಧವಾಗಿಸಿಕೋ. ಈ ಧ್ಯಾನದಿಂದ ನಿನ್ನ ಅಂತರಂಗವನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ತುಂಬಿರುವ ಅನುಮಾನದ ಮೂಲವನ್ನು ಮೊದಲು ಕಿತ್ತೊಗೆದು ಬಿಡು. ಎಲ್ಲಾ ತನ್ನಿಂದ ತಾನೇ ಸರಿ ಹೋಗುತ್ತದೆ. ಅದಕ್ಕೇ ಹಿರಿಯರು, “ಅನುಮಾನಂ ಪೆಡಂಭೂತಂ” ಎಂದು ಹೇಳಿದ್ದಾರೆ. ಅನುಮಾನದ ಬೇಗೆಯಲ್ಲಿ ಅದೆಷ್ಟೋ ಸಂಸಾರಗಳು ಹಾಳಾಗುತ್ತಿರುವುದನ್ನು ನೀನು ದಿನನಿತ್ಯ ನೋಡುತ್ತಿರಬಹುದು. ನಾವು ಹೇಳಿಕೊಟ್ಟಿರುವ ಧ್ಯಾನವನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಾ ಹೋದಂತೆ ನಿನ್ನನ್ನು ನೀನು ಅರ್ಥಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಧ್ಯಾನದ ಆಳ ನಿನ್ನ ಮನಸ್ಸನ್ನು ಪರಿಶುದ್ಧನನ್ನಾಗಿ ಮಾಡುತ್ತದೆ. ಮೊದಲೇ ನಾನು ಹೇಳಿದಂತೆ ಪ್ರಯತ್ನ, ಪರಿಶ್ರಮ, ಶ್ರದ್ಧೆ ಇರಲಿ. ತನ್ನಿಂದ ತಾನೇ ಎಲ್ಲಾ ಒಳ್ಳೆಯದಾಗುತ್ತದೆ. ಶುಭವಾಗಲಿ” ಎಂದು ಗುರೂಜಿ ರಾಹುಲನಿಗೆ ಧೈರ್ಯ ನೀಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡಿದ್ದರು. +ಆರು ತಿಂಗಳ ನಂತರ ಶ್ರೀ ವಿವೇಕಾನಂದ ಗುರೂಜಿ ಮತ್ತೊಮ್ಮೆ ತಮ್ಮ ಸಂಸ್ಥೆಯ ಶಿಬಿರವನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಯೋಜಿಸಿದ್ದರು. ತರಬೇತಿಯ ಮೊದಲ ದಿನ ರಾಹುಲ್ ಗುರೂಜಿಯವರ ಸಾನಿಧ್ಯದಲ್ಲಿದ್ದ. ಒಬ್ಬನೇ ಇರಲಿಲ್ಲ. ಜೊತೆಗೆ ಮನದನ್ನೆ, ಮುದ್ದಿನ ಮಡದಿ ಸುಪರ್ಣಾಳೂ ಸಹ ಇದ್ದಳು. ಗುರೂಜಿಯವರ ಪಾದಪದ್ಮಗಳಲ್ಲಿ ನಮಿಸುತ್ತಾ, ಗುರೂಜಿ, ಈಕೆ ನನ್ನ ಹೆಂಡತಿ ಸುಪರ್ಣಾ. ಶಿಬಿರಕ್ಕೆ ಸೇರುತ್ತಿದ್ದಾಳೆ ತಮ್ಮ ಆಶೀರ್ವಾದದಿಂದ...’ ಎಂದು ಹೇಳುತ್ತಿರುವಷ್ಟರಲ್ಲಿ,ರಾಹುಲ್, ನನಗಷ್ಟೂ ಗೊತ್ತಾಗುವುದಿಲ್ಲವೇ? ನಿನ್ನ ಮುಖದಲ್ಲಿನ ಮಂದಹಾಸ ನೋಡುತ್ತಿದ್ದಂತೆ ನನಗೆಲ್ಲಾ ಅರ್ಥವಾಗಿ ಹೋಯಿತು. ನೀನೀಗ ನಿನ್ನ ಬಾಳ ಸಂಗಾತಿಯೊಂದಿಗೆ ತುಂಬಾ ಖುಷಿಯ ಜೀವನವನ್ನು ಅನುಭವಿಸುತ್ತಿರುವಿ ಅಲ್ಲವಾ? ಜೀವನರ್ಯಂತ ಇದೇ ರೀತಿ ನಿಮ್ಮ ಬಾಳದೋಣಿ ಸಾಗಲಿ’ ಎಂದು ಹಾರೈಸಿ, ಆಶೀರ್ವದಿಸುತ್ತಾ ಗುರೂಜಿ ಇಬ್ಬರ ತಲೆಯ ಮೇಲೆ ನವಿರಾಗಿ ಕೈಯಾಡಿಸುತ್ತಾ, ಏನಮ್ಮಾ ಸುಪರ್ಣಾ, ನಾನು ಹೇಳಿದ್ದು ನಿಜ ತಾನೇ?”’ ಎಂದಾಗ ಸುಪರ್ಣಾಳ ಮುಖ ಕೆಂಪೇರತೊಡಗಿತ್ತು. ಇಬ್ಬರ ಹೃದಯಗಳಲ್ಲಿ ಸಂಭ್ರಮದ ಅಲೆಗಳು ಪುಟಿದೇಳತೊಡಗಿದ್ದವು. +-ಶೇಖರಗೌಡ ವೀ ಸರನಾಡಗೌಡರ್ \ No newline at end of file diff --git a/PanjuMagazine_Data/article_1011.txt b/PanjuMagazine_Data/article_1011.txt new file mode 100644 index 0000000000000000000000000000000000000000..0519ecba6ea913e21689ec692e81e9e4973fbf73 --- /dev/null +++ b/PanjuMagazine_Data/article_1011.txt @@ -0,0 +1 @@ + \ No newline at end of file diff --git a/PanjuMagazine_Data/article_1012.txt b/PanjuMagazine_Data/article_1012.txt new file mode 100644 index 0000000000000000000000000000000000000000..338ff9475620da358077654c22b34c4052a0d9f2 --- /dev/null +++ b/PanjuMagazine_Data/article_1012.txt @@ -0,0 +1,5 @@ + + + + + \ No newline at end of file diff --git a/PanjuMagazine_Data/article_1013.txt b/PanjuMagazine_Data/article_1013.txt new file mode 100644 index 0000000000000000000000000000000000000000..940a81c836c6e83c93ea5a8ee4bd9880c694f322 --- /dev/null +++ b/PanjuMagazine_Data/article_1013.txt @@ -0,0 +1,16 @@ +ಕಳೆದ ೪-೫ ದಿನಗಳಿಂದ ಕುಸುಮಳ ಮನಸ್ಸು ಕುದಿಯಲು ಶುರುವಾಗಿದೆ. ಪ್ರತಿ ವರುಷ ಸುಮಾರು ಈ ಹೊತ್ತಿಗೆ ಅವಳ ಮನಸ್ಸು ಬಾಂಡಲೆಯಲ್ಲಿ ಕುದಿಯುತಿರುವ ಎಣ್ಣೆಯಂತಾಗುತ್ತದೆ. ಕೊತ ಕೊತ ಕುದಿವ ಮನಸ್ಸಿನಲ್ಲಿ ಅನೇಕನೇಕ ಭಾವನೆಗಳು. ಸುಮಾರು ಒಂದು ವಾರದ ನಂತರ " ಆ ದಿನ" ಬಂದಾಗ ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಸಿಡಿದು ಮನೆಯವರಿಗೆಲ್ಲಾ ಎರಚುವುದು ಅಥವಾ ಮೂಕ ಕಣ್ಣೆರಿನಲ್ಲಿ ಕೊನೆಗಾಣುವುದು. ಮಾರನೆಯ ದಿನದಿಂದ ಮಾಮೂಲು ದಿನಚರಿ ಶುರು. ಒಂದೆರಡು ದಿನ ನೋವು ಮನಸ್ಸನ್ನು ಕಾಡುತ್ತಿದ್ದರೂ ಹಿಂದಿನ ವಾರದಷ್ಟಿಲ್ಲ. +ತನ್ನ ಮದುವೆಯ ದಿನ, ವಿವಾಹ ವಾರ್ಷಿಕೋತ್ಸವ ಬಂತೆಂದರೆ ಹೀಗೆ ಆಡುವ ಮನಸ್ಸಿನ ಮೇಲೆ ಕುಸುಮಳಿಗೆ ಬಹಳ ಮುನಿಸಿದೆ. ಗಂಡ ರಾಜೀವನಿಗೆ ಅದು ಮಾಮೂಲಿ ದಿನ. ಆಫೀಸಿದ್ದು ಬಿಟ್ಟರಂತೂ ಅವನು ಪರಮ ಸುಖಿ. ಮಕ್ಕಳಿಂದ ಶುಭ ಹಾರೈಕೆ ಪಡೆದು, ಹೆಂಡತಿ ಮಾಡಿದ ಪಾಯಸ ತಿಂದು ಹೊರಟು ಬಿಟ್ಟರೆ ಅವನು ಬಚಾವ್. ಮನೆಗೆ ಬಂದ ಮೇಲೆ ತುಂಬಾ ಕೆಲಸ, ಬಹಳ ಸುಸ್ತು ಎಂಬ ಸಬೂಬು ಮಾಮೂಲು. ಕೆಲವೊಮ್ಮೆ ಮಕ್ಕಳ ಬಲವಂತಕ್ಕೆ ಹೋಟೆಲ್ಲಿಗೆ ಹೊಗುವುದು ಇದೆ. ಆದರೆ ಬೆಳೆಯುತ್ತಾ ಹೋದಂತೆ ಅವರುಗಳು ತಮ್ಮಷ್ಟಕ್ಕೆ ತಾವು ಗೆಳಯರ ಜತೆ ಹೊರಗಡೆ ತಿನ್ನುವುದು ರೂಢಿಯಾದ ಮೇಲೆ ಅಪ್ಪ ಅಮ್ಮನ ಮದುವೆಯ ದಿನ ಅವರಿಗೆ ಅಷ್ಟು ಮಹತ್ವವೆನಿಸಲಿಲ್ಲ. ಶನಿವಾರ ಭಾನುವಾರ ಬಿದ್ದಾಗ ವಿಧಿಯಿಲ್ಲದೆ ಹೆಂಡತಿಯ ಬಾಯಿಗೆ ಹೆದರಿ ದೇವಸ್ಥಾನಕ್ಕೆ ಕರೆದೊಯ್ಯುತ್ತಾನೆ. ವಾಪಸ್ಸು ಬರುವಾಗ ಅಲ್ಲೇ ಚಾಟ್ ತಿಂದು ಮನೆಗೆ ಬಂದರೆ ಅವನು ತನ್ನ ಕರ್ತವ್ಯ ಮುಗಿಸಿದಂತೆ ನಿರಾಳವಾಗುತ್ತಾನೆ. +ಆದರೆ ಕುಸುಮ ಹಾಗಲ್ಲ. ಅದು ತನ್ನ ಬದುಕನ್ನು ಬದಲಾಯಿಸಿದ ದಿನ, ತನ್ನನ್ನು ಗಂಡ ಓಲೈಸಬೇಕು, ಉಡುಗೊರೆ ನೀಡಬೇಕು, ರಾಣಿಯ ಹಾಗೆ ನೋಡಿಕೊಳ್ಳಬೇಕು. ತಾವಿಬ್ಬರು ಇಡೀ ದಿನ ಹೊರಗಡೆ ಸುತ್ತಬೇಕು. ಇದೆಲ್ಲಾ ಅವಳ ಆಸೆ. ಖಾಸಗಿ ಕಂಪನಿಯಲ್ಲಿ ಕೆಲಸ, ಬೆಳಗಾದರೆ ಬೇಯಿಸು, ತಿನ್ನು, ಓಡು, ಕೆಲಸ ಮಾಡು, ಕೆಲವೊಮ್ಮೆ ಜಗಳವಾಡು, ಸರಿ ಹೋಗು, ಅಳು, ನಗು, ಈ ರೀತಿಯ ಏಕತಾನತೆಯ ಮಧ್ಯೆ ವಾರ್ಷಿಕೋತ್ಸವ, ಹುಟ್ಟು ಹಬ್ಬ ಇವೆಲ್ಲಾ ಆಚರಿಸುವುದರಿಂದ ಮನಸ್ಸಿಗೆ ಮುದ, ಬದುಕಬೇಕೆಂಬ ಆಸೆ ಜಾಸ್ತಿಯಾಗುವುದೆಂದು ಅವಳ ನಂಬಿಕೆ. ಆ ದಿನಗಳಂದು ಅವಳು ಬಹಳ ಭಾವುಕಳಾಗಿ ಬಿಡುತ್ತಾಳೆ. ಕಣ್ಣಲ್ಲಿ ಸಣ್ಣ ಸಣ್ಣ ವಿಷಯಕ್ಕೊ ನೀರು ಬಂದು ಬಿಡುತ್ತದೆ. ತನ್ನ ಭಾವನೆಗಳನ್ನು ಗಂಡ ಬೇಕೆಂದೇ ಕಡೆಗಾಣಿಸುತ್ತಿದ್ದಾನೆ ಎಂಬುದು ಅವಳ ಮನಸ್ಸಿನಲ್ಲಿ ಬೇರೂರಿದೆ. ಸಿಟ್ಟಿನಿಂದ ಕೂಗಾಡಿದರೆ ಸುಮ್ಮನಿರುವನಲ್ಲ ರಾಜೀವ. ಅವಳಿಗಿಂತ ಜೋರು ದನಿಯಲ್ಲಿ ಅಬ್ಬರಿಸುತ್ತಾನೆ. ತನ್ನ ಹುಟ್ಟು ಹಬ್ಬದ ದಿನ ಅವನಿಗೆ ಯಾರಾದರೂ ಶುಭ ಕೋರಿದರೆ ಅವನಿಗಿಷ್ಟವಾಗುವುದಿಲ್ಲ. ಇನ್ನು ಟ್ರೀಟ್, ಉಡುಗೊರೆ ಎಂದರಂತೂ ಬೆಂಕಿಯಾಗುತ್ತಾನೆ. ನೀನು ನನ್ನ ತರಹ ಇರಲಾರೆಯಾ ಎಂದು ಪರೋಕ್ಷವಾಗಿ ಸೂಚಿಸುತ್ತಿರುತ್ತಾನೆ. +ಮಾರ್ದವ್ಯತೆ ಕಮ್ಮಿ ಹಾಗು ಭಾವನೆಗಳಿಗೆ ಬೆಲೆ ಜಾಸ್ತಿ ಕೊಡದವ ಎಂಬುದನ್ನು ಬಿಟ್ಟರೆ ಅವನು ಒಳ್ಳೆಯವನೆ. ಮನೆಗೆ ಸಾಮಾನು ತರುವುದರಲ್ಲಿ, ಯಾರಿಗಾದರೂ ಆರೋಗ್ಯ ಕೆಟ್ಟರೆ ದವಾಖಾನೆಗೆ ಕರೆದೊಯ್ಯುವುದರಲ್ಲಿ, ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋಗುವುದರಲ್ಲಿ, ತುಂಬಾ ಅಲ್ಲದಿದ್ದರೂ ಎಷ್ಟು ಬೇಕೋ ಅಷ್ಟು ಮಾತಾಡುವುದರಲ್ಲಿ, ಗುರು ಹಿರಿಯರಿಗೆ ಮರ್ಯಾದೆ ಕೊಡುವುದರಲ್ಲಿ ಅವನು ಎತ್ತಿದ ಕೈ." ಒಳ್ಳೆ ಗಂಡ" ಎಂದು ಯಾರದರೂ ಒಪ್ಪುವ ಹಾಗಿದ್ದ ಅವನು. ಕುಸುಮ ಖಾಯಿಲೆ ಬಿದ್ದಾಗ ಅವಳನ್ನು ನೋಡಿಕೊಂಡ ರೀತಿ ಕಂಡು ಅವನತ್ತೆ ಅಂದರೆ ಕುಸುಮಳ ತಾಯಿ ಬಹಳ ಮೆಚ್ಚಿಕೊಂಡಿದ್ದರು. ೫೯ ದಾಟಿದ ಮಡದಿಗೆ ಅಡುಗೆಯವರನ್ನಿಟ್ಟುಕೊಳ್ಳಲು ತಾಕೀತು ಮಾಡಿದವನೂ ರಾಜೀವನೆ. ಇಷ್ಟೆಲ್ಲಾ ಗುಣಗಳಿರುವ ರಾಜೀವನನ್ನು ತೆಗಳಲು ಕುಸುಮಳಿಗೆ ಅಪರಾಧವೆನಿಸುತ್ತಿತ್ತು. +ಕಚೇರಿ ಮುಗಿದ ಮೇಲೆ ಮನೆಗೆ ಬಂದು ಆರಾಮಾವಾಗಿ ಟೀವಿಯ ಮುಂದೆ ಕೂರುವ ರಾಜೀವನಿಗೆ ಮಡದಿಯ ಮನಸ್ಸಿನಲ್ಲಿ ಆಗುತ್ತಿರುವ ತುಮುಲಗಳ ಅರಿವಿಲ್ಲ. ಅವನ ಮನಸ್ಸಿನಲ್ಲಿ ಹೆಂಡತಿ ವಿನಾಕಾರಣ ತಲೆ ಕೆಡಿಸಿಕೊಳ್ಳುವಳು, ಎಲ್ಲಾ ವಿಷಯಗಳಿಗೂ ಭಾವುಕಳಾಗುವಳು,ಇಲ್ಲ ಸಲ್ಲದ್ದು ಯೋಚಿಸಿ ನೆಮ್ಮದಿ ಹಾಳುಮಾಡಿಕೊಳ್ಳುವಳು, ತನ್ನ ಗೆಳತಿಯರು, ಸಂಬಂಧಿಕರಿಗೆ ತನ್ನನ್ನು ಹೋಲಿಸಿಕೊಳ್ಳುತ್ತಾ ಬೇಸರ ಮಾಡಿಕೊಳ್ಳುವಳು. ಕುಸುಮಳ ಪ್ರಕಾರ ರಾಜೀವನ ಬದುಕು ಸಿಂಪಲ್. ಏಳು, ತಿನ್ನು, ಕೆಲಸ ಮಾಡು, ಮನೆಗೆ ಬಾ, ಊಟ ಮಾಡು, ಮಲಗು. ತನ್ನ ಜತೆಯವರು, ಸಂಬಂಧಿಕರು, ಓರಿಗೆಯವರು, ಕಛೇರಿಯವರು, ಇವರ ಬಗ್ಗೆ ಅವನು ಚಿಂತಿಸಿದವನೇ ಅಲ್ಲ. ಕೆಲವರು ಮಾಡಿದ ಮನಸ್ಸಿನ ಗಾಯಗಳು ಅವನ ಜೀವನದಲ್ಲೂ ಇದೆ. ಆದರೆ ಅದನೆಲ್ಲಾ ಅವನು ಹೇಗೆ ಪರಿಗಣಿಸುತ್ತಾನೆ, ಅದನ್ನು ಕುರಿತು ಯೋಚಿಸುತ್ತಾನ, ಕೊರಗುತ್ತಾನಾ ಎಂಬುದು ಅವಳಿಗೆ ತಿಳಿದಿಲ್ಲ. ಅದಕ್ಕೆ ಕಾರಣ ರಾಜೀವ ಹೆಚ್ಚು ಮಾತಿನವನಲ್ಲ. ಅದರಲ್ಲೂ ತನಗೇನು ಇಷ್ಟ, ತನಗೇನು ನೋವುಂಟು ಮಾಡುತ್ತದೆ ಎಂಬುದು ಅವನು ಹಂಚಿಕೊಂಡೇ ಇಲ್ಲ. +ಈಗ ಮದುವೆಯ ೩೦ ನೇ ವಾರ್ಷಿಕೋತ್ಸವ ಬರುತ್ತಿದೆ. ೨ ತಿಂಗಳ ಮುನ್ನ ಮಗಳ ಮದುವೆ ಆಗಿದೆ. ಅತ್ತೆ ಮಾವ ಆದ ಮೇಲೂ ನಮ್ಮ ಬದುಕಿನ ಬಗ್ಗೆ, ನಮ್ಮ ಖುಶಿಯ ಬಗ್ಗೆ ಯೋಚಿಸಬಹುದೇ? ಮಕ್ಕಳ ಬದುಕೇ ನಮ್ಮ ಬದುಕು ಎಂದು ಜೀವನ ಸಾಗಿಸಬೇಕೆ? ಈ ಸಲ ಆ ದಿನ ಭಾನುವಾರ. ಹಿರಿ ಮಗಳು ಅತ್ತೆ ಮನೆಯಲ್ಲಿ. ಕಿರಿಯವಳು ಹಾಸ್ಟಲ್. ಮನೆಯಲ್ಲಿ ತಾವಿಬ್ಬರೇ. ಈ ಸಲವಾದರೂ ರಾಜೀವ ಏನಾದರೂ ಪ್ರೋಗ್ರಾಮ್ ಹಾಕುವನೇನೋ ಎಂದು ಕುಸುಮಳಿಗೆ ಆಸೆ. ಅವನಿಗೆ ಹೇಳದೆ ಹೊಸ ಸೀರೆ ತಂದು, ರವಿಕೆ ಹೊಲಿಸಿ ರೆಡಿ ಮಾಡಿಕೊಂಡಿದಾಳೆ. ಈ ಸಲವಾದರೂ ರಾಜೀವ ಏನಾದರೂ ಪ್ರೋಗ್ರಾಮ್ ಹಾಕುವನೇನೋ ಎಂದು ಕುಸುಮಳಿಗೆ ಆಸೆ. ಅವನಿಗೆ ಹೇಳದೆ ಹೊಸ ಸೀರೆ ತಂದು, ರವಿಕೆ ಹೊಲಿಸಿ ರೆಡಿ ಮಾಡಿಕೊಂಡಿದಾಳೆ. ಆ ದಿನ ಪೂರ್ತಿ ಅಡುಗೆ ಮನೆಗೆ ರಜೆ ಹಾಕುವುದು. ಬೆಳಗ್ಗೆ ಸಿಂಗರಿಸಿಕೊಂಡು ತಾನು ರಾಜೀವನೊಟ್ಟಿಗೆ ಹೊರಟರೆ ಇನ್ನು ಮನೆಗೆ ರಾತ್ರಿಯೆ ಬರುವುದು. ಇಡೀ ದಿನ ದೇವಸ್ಠಾನ, ಚಲನ ಚಿತ್ರ, ಹೋಟೆಲು. ಇನ್ನು ಅವನ ಮೂಡಿದ್ದರೆ ತನಗೆರಡು ಸೀರೆ. ಬಣ್ಣ ಬಣ್ಣದ ಕನಸು ಹೊತ್ತ ಕುಸುಮಳಿಗೆ ಸ್ವಲ್ಪ ಇರಿಸು ಮುರಿಸಾಗಿದ್ದು ಬೆಳಗ್ಗೆಯೇ ಚಿಕ್ಕ ಮಗಳು ಬಂದಿಳಿದಿದ್ದು. ಮಗಳು ಬಂದಳೆಂದು ಖುಶಿಯಾದರೂ, ತನ್ನ ಕಾರ್ಯಕ್ರಮಗಳೆಲ್ಲಾ ರದ್ದು ಎಂದು ಬೇಸರವೂ ಆಯಿತು. ಮಗಳು ಬಂದದ್ದು ರಾಜೀವನಿಗೆ ಬಹಳ ಸಂತಸ. +. ದೊಡ್ಡವಳಿಗೆ ಮದುವೆ ಮಾಡಿದಾಗಲಿಂದ ಒಂದು ರೀತಿಯ ಶೂನ್ಯ ಭಾವ ಮನಸ್ಸಿನಲ್ಲಿ. ಚಿಕ್ಕವಳೂ ದೂರ ಹೋದ ಮೇಲೆ ಮನಸ್ಸು ಭಾರವಾಗಿತ್ತು. ಅವಳು ಬಂದಳೆಂದು ಭಾನುವಾರದ ವಾರ್ತಾಪತ್ರಿಕೆ ಬದಿಗೊತ್ತಿ ಅವಳೊಡನೆ ಹರಟುತ್ತಾ ಕುಳಿತ. ಅಡುಗೆ ಮನೆ ಸೇರಿದ ಕುಸುಮಳ ಮನಸ್ಸು ಸರಿ ಇರಲಿಲ್ಲ. +ಇವತ್ತು ಅಡುಗೆ ಮನೆಗೆ ರಜ ಹಾಕಲು ಯೋಚಿಸಿದ್ದಾಗ ಹೀಗೆ ಆಯಿತಲ್ಲ.ಒಂದು ದಿನದ ಯಾಂತ್ರಿಕತೆಯಿಂದ ತಪ್ಪಿಸಿಕೊಳ್ಳೋಣ ಎಂದರೆ ಮಗಳು " ಅಮ್ಮ, ಇವತ್ತು ಏನು ಸ್ಪೆಷಲ್ ಮಾಡುತ್ತೀಯಾ? ಹಾಸ್ಟಲ್ ಊಟ ಮಾಡಿ ಬಾಯಿ ಕೆಟ್ಟು ಹೋಗಿದೆ" ಎಂದಾಗ ಮೌನವಾಗಿ ತಲೆ ಆಡಿಸಿದಳಷ್ಟೆ. +ಅಡುಗೆ, ಊಟ, ಮಾತು ಮುಗಿಯುವ ವೇಳೆಗೆ ಸಂಜೆ ಆಗಿತ್ತು. ಮಗಳ ಗೆಳತಿಯರ ದಂಡು ಬಂದಾಗ ಅವರಿಗೆಲ್ಲಾ ಬಜ್ಜಿ ಸಪ್ಲೈ ಮಾಡಿ, ಅವರಿಂದ ಮನೆಯಲ್ಲಿ ಶುಭಾಶಯಗಳನ್ನು ಸ್ವೀಕರಿಸಿ ಮಗಳನ್ನು ರಾತ್ರಿ ಬಸ್ಸಿಗೆ ಹತ್ತಿಸಿ ಬಂದಾಗ ರಾತ್ರಿ ೮ ಘಂಟೆ. ಈಗಲಾದರೂ ರಾಜೀವನ ಕಡೆಯಿಂದ "ಎಲ್ಲಾದರೂ ಹೊರಗೆ ಹೋಗೋಣವೇ" ಎಂದು ಬರುತ್ತದೆಯೋ ಎಂದು ಕಾದಳು. ಆರಾಮವಾಗಿ ಟೀವಿ ಹಚ್ಚಿ ಕುಳಿತ ಅವನು. ತಡೆಯಲಾಗದೆ ಇವಳೇ ಬಾಯಿ ಬಿಟ್ಟಳು." ಈ ದಿನ ದೇವಾಲಯಕ್ಕೂ ಹೋಗಲಿಲ್ಲ ನಾವು. ಮನೆಯಲ್ಲಿ ಬರೀ ಸಾರು, ಪಲ್ಯ ಮಿಕ್ಕಿದೆ. ಏನು ಮಾಡಲಿ" ಹೆಂಡತಿಯ ಮನದಲ್ಲಾಗುತ್ತಿರುವ ತುಮುಲದ ಅರಿವಿರವದ ಅವನು ಆರಾಮವಾಗಿ ನುಡಿದ" ಹೋಗಲಿ ಬಿಡು. ಪುಟ್ಟಿ ಬಂದಿದ್ದು ಇವತ್ತು ತುಂಬಾ ಚೆನ್ನಾಗಿತ್ತು. ದೊಡ್ಡವಳು ಗಂಡನ ಮನೆಗೆ ಹೊರಟ ಮೇಲೆ ನನಗೆ ಮಂಕು ಬಡಿದ ಹಾಗಾಗಿತ್ತು. ಭಾನುವಾರ ಯಾಕಾದರೂ ಬರುತ್ತೊ ಅನ್ನಿಸುತ್ತಿತ್ತು. ಮನೆಗೆ ಬಂದರೆ ಅವಳದೇ ನೆನಪು. ಅವಳಂತೂ ಮದುವೆಯಾದ ಮೇಲೆ ನಮ್ಮನ್ನು ಮರೆತೇ ಬಿಟ್ಟುದ್ದಾಳೆ" ನಗಾಡಿದ. +"ಏಕೆ ಬೇಸರ? ಮನೆಯಲ್ಲಿ ನಾನಿಲ್ಲವೇ? ಇಷ್ಟು ವರುಷ ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆಯಲ್ಲಿ ನಾವು ಜತೆಯಲ್ಲಿ ಸಮಯ ಕಳೆಯಲೇ ಇಲ್ಲ. ಈಗ ಆ ಆಸೆಗಳನೆಲ್ಲಾ ಪೂರೈಸಿಕೊಳ್ಳಬಹುದಲ್ಲ" ಮನದಲ್ಲಿ ಮೂಡಿದ ಮಾತುಗಳನ್ನು ಬಲವಂತವಾಗಿ ನುಂಗಿದಳು. "ಸರಿ ಊಟ ಎಷ್ಟೊತ್ತಿಗೆ? " ತನ್ನ ಪ್ರಶ್ನೆಗೆ ಅವನು "ಹೊರಗೆ ಹೋಗೋಣವಾ? ಎನ್ನುತ್ತಾನೇನೊ ಎಂದು ಕಾದಳು." ಅಯ್ಯೋ, ಸಾಕಮ್ಮ. ನನಗೆ ಹಸಿವೇ ಇಲ್ಲ. ಅನ್ನ ಸಾರು ತಿಂದು ಮಲಗುವ" ಒಂದು ವಾರದಿಂದ ಆಸೆ ಪಟ್ಟಿದ್ದು, ಬೆಳಗ್ಗಿಂದ ಆದ ಸುಸ್ತು, ಬೇಸರ, ನಿರಾಸೆ ಅವಳ ಮನಸ್ಸನ್ನು ರೊಚ್ಚಿಗೆಬ್ಬಿಸಿತು. ಮಾತಿಗೆ ಮಾತು ಬೆಳೆದು, ಎರಡೊ ಕಡೆಯ ನೆಂಟರು, ಅಪ್ಪ, ಅಮ್ಮ, ಹಿಂದಿನ ಜಗಳಗಳು, ವಿರಸಗಳು, ಎಲ್ಲಾ ನೆನಪಿಗೆ ಬಂದು ಪರಿಸ್ತಿತಿ ವಿಕೋಪಕ್ಕೆ ಹೋಯಿತು. ಅವಳ ಮಾತಿಗೆ ಅವನೂ ಪ್ರತಿಉತ್ತರ ನೀಡಿ ಜಗಳ ಜಾಸ್ತಿಯಾಯಿತು. ವಿವಾಹ ವಾರ್ಷಿಕೋತ್ಸವ ಎಂದು ನೂರು ಆಸೆ ಕಟ್ಟಿಕೊಂಡಿದ್ದ ಹೆಂಡತಿಯ ಮನಸ್ಸು ಅವನಿಗೆ ಅರ್ಥವಾಗಲೇ ಇಲ್ಲ. ಸುಮ್ಮನೆ ಜಗಳ ಮಾಡುತ್ತಿದ್ದಾಳೆ ಎಂದು ಅವನೂ ಮಾತಿಗೆ ಮಾತು ಬೆಳೆಸಿದ. ಸುಮಾರು ಕಿರುಚಾಟವಾದ ಮೇಲೆ ಇಬ್ಬರೂ ಸುಮ್ಮನಾದರೂ. ಮೆಲ್ಲಗೆ ಅಳುತ್ತ ಅಡುಗೆ ಮನೆ ಸೇರಿದ ಹೆಂಡತಿಯನ್ನು ನೋಡಿ ರಾಜೀವನ ಕರುಳು ಚುರುಕ್ಕೆಂದಿತು. +"ಚೆ, ತನಗೇಕೆ ಕೆಲವು ವಿಷಯಗಳು ಹೊಳೆಯುವುದೇ ಇಲ್ಲ. ಇಷ್ಟು ವರುಷಗಳಾದರೂ ಮಡದಿಗೆ ಏನು ಬೇಕು ಎಂದು ಗ್ರಹಿಸಲಾಗದಷ್ಟು ಮನಸ್ಸು ಒರಟಾಗಿದೆಯೇ. ಪಾಪ, ವರುಷವಿಡೀ ಮನೆಯಲ್ಲಿ, ಹೊರಗಡೆ ದುಡಿಯುತ್ತಾಳೆ.ಸರಿಯಾಗಿ ಪ್ಲಾನ್ ಮಾಡಿ ಅವಳನ್ನು ಎಲ್ಲಾದರೂ ಕರೆದೊಯ್ಯಬಹುದಿತ್ತು. ಏನಾದರೂ ಕೊಡಿಸಬಹುದಿತ್ತು. ತಾನೆಷ್ಟು ಸ್ವಾರ್ಥಿಯಾದೆ. ತನ್ನ ಬಗ್ಗೆ ಮಾತ್ರ ಯೋಚಿಸಿ ತಾನು ಆರಾಮವಾಗಿದ್ದರೆ ಸಾಕು ಎಂದು ಸುಮ್ಮನಿದ್ದುಬಿಟ್ಟೆನಲ್ಲ." ಎದ್ದು ಅಳುತ್ತಿದ್ದ ಅವಳನ್ನು ಸಮಾಧಾನಗೊಳಿಸಿ ರಮಿಸಿ ಎಬ್ಬಿಸಿದ." ಬಾ, ಒಟ್ಟಿಗೆ ಊಟ ಮಾಡೊಣ. ಮೂಲೆ ಬೇಕರಿಯಿಂದ ಚಿಪ್ಸ್ ತರಲಾ? ಹಾಗೇ ಸ್ವಲ್ಪ ಕೇಕ್ ಕೂಡ?" +ಅವನ ಮಾತಿಗೆ ಕುಸುಮಳ ಬೇಸರ ಇನ್ನೂ ಹೆಚ್ಚಿತು. " ಇವತ್ತಿನ ದಿನವೂ ಆ ಕೋಸಿನ ಪಲ್ಯ ತಿನ್ನಬೇಕಾ? ನೀವು ಊಟ ಮಾಡಿ. ನನಗೆ ಹಸಿವಿಲ್ಲ" +" ಇಷ್ಟೊತ್ತಿಗೆ ಯಾವ ಹೋಟೆಲೂ ತೆಗೆದಿರುವುದಿಲ್ಲ. ಈಗ ಮನೆಯಲ್ಲಿರುವುದು ತಿನ್ನೋಣ. ಮುಂದಿನ ಭಾನುವಾರ ಲಂಚಿಗೆ ಹೋಗೋಣ. ಈಗ ಪ್ಲೀಸ್ ಏಳು" +" ಯಾಕೆ ತೆರೆದಿರುವುದಿಲ್ಲ. ಇನ್ನು ಒಂಬತ್ತೂ ಮುಕ್ಕಾಲು. ಮಾರ್ಕೆಟ್ ಬಳಿ ಇರುವ ಹೊಸ ಹೋಟೆಲ್ ತೆಗೆದಿರುತ್ತದೆ. ಅವಳ ಮಾತಿಗೆ ಅವನು ಒಪ್ಪಿ ಇಬ್ಬರೂ ರೆಡಿಯಾಗಿ ಹೊರಟರು. ಹೋಟೆಲ್ಲಿನ ಹತ್ತಿರ ಬಂದಾಗ ಹತ್ತೂ ಕಾಲಾಗಿತ್ತು." ಊಟ ಇಲ್ಲ ಸಾರ್. ಪೂರಿ, ದೋಸೆ ಇದೆ ಅಷ್ಟೆ" ಎಂದ ಸರ್ವರ್ ಗೆ ೨ ಪ್ಲೇಟ್ ಪೂರಿ ತರಲು ಹೇಳಿ ಕುಳಿತರು. ಅಲ್ಲಿ ನೆರೆದಿದ್ದ ಜನ, ಅವರ ನಗು, ಕೇಕೆ, ಮಾತು ಅವಳಿಗೆ ಮತ್ತಷ್ಟು ಬೇಸರವಾಯಿತು. ಎಲ್ಲಾ ಎಷ್ಟು ಖುಶಿಯಾಗಿದ್ದಾರೆ. ತಾವಿಬ್ಬರೇ ಏಕೆ ಹೀಗೆ, ಏನಾದರೂ ಮನಸ್ತಾಪ ಇಲ್ಲವೇ ಘನ ಗಾಂಭೀರ್ಯ. ಕೆಲವು ದಂಪತಿಗಳು ಒಟ್ಟಿಗೆ ಕೂತು ನಗಾಡುತ್ತ ಊಟ ಮಾಡುತ್ತಿದ್ದರು. ಕೆಲವರು ದೊಡ್ಡ ಗುಂಪಿನಲ್ಲಿ ಗದ್ದಲ ಮಾಡುತ್ತ, ಪಟ ತೆಗೆಯುತ್ತಾ ಐಸ್ ಕ್ರೀಮ್ ಸವಿಯುತ್ತಿದ್ದರು. ಯುವ ಜೋಡಿಗಳು ಒಬ್ಬರನ್ನೊಬ್ಬರು ಒತ್ತಿ ಕುಳಿತು ಹರಟುತ್ತಿದ್ದರು. ತಾವಿಬ್ಬರು? ಎದುರು ಬದಿರು ಕುಳಿತು, ಈಗಷ್ಟೆ ಆಡಿದ ಜಗಳದಿಂದ, ಮಾತು ಕತೆಯಿಂದ ಚೇತರಿಸಿಕೊಳ್ಳುತ್ತಾ ಬೇಸರದಿಂದ ಕಾಟಾಚಾರಕ್ಕೆ ಬಂದಂತೆ ಇದ್ದೇವೆ. +ಪೂರಿ, ಚಟ್ನಿ, ಕೋಸಿನ ಪಲ್ಯ ತಂದಿಟ್ಟ ಬೇರರ್. "ಸಾಗು ಖಾಲಿ ಆಗಿದೆ ಸಾರ್. ಅದಕ್ಕೆ ಈ ಪಲ್ಯ" ಅವನ ಮಾತು ಕೇಳಿದ ರಾಜೀವನ ಮೊಗದ ಮೇಲೆ ನಗು ಮೂಡಿದರೆ ಕುಸುಮಳ ಮನಸ್ಸು, ಮುಖದ ಮೇಲೆ ವಿಷಾದ ಮೂಡಿತು. ಎದುರಿಗಿಟ್ಟಿದ್ದ ತಟ್ಟೆಯಲ್ಲಿದ್ದ ಕೋಸಿನ ಪಲ್ಯ ಅವಳನ್ನು ಅಣಕಿಸುತ್ತಿತ್ತು. + \ No newline at end of file diff --git a/PanjuMagazine_Data/article_1014.txt b/PanjuMagazine_Data/article_1014.txt new file mode 100644 index 0000000000000000000000000000000000000000..e69de29bb2d1d6434b8b29ae775ad8c2e48c5391 diff --git a/PanjuMagazine_Data/article_1015.txt b/PanjuMagazine_Data/article_1015.txt new file mode 100644 index 0000000000000000000000000000000000000000..1895891e6e3d0f3a425a362605067c77d399ad36 --- /dev/null +++ b/PanjuMagazine_Data/article_1015.txt @@ -0,0 +1,18 @@ + +ನೀರಿದ್ದಲ್ಲೆಲ್ಲಾ ಹೋಗದಾದ್ರೆ ಹೋಗ್ಲೇಬೇಡ ಅನ್ನೋ ಅಮ್ಮ, ಹುಡುಗ್ರು.. ಏನೋ ಆಸೆ ಪಟ್ತಿದಾರೆ ಸೇಫಾಗಿ ಹೋಗ್ಬರ್ಲಿ ಬಿಡು ಅನ್ನೋ ಅಪ್ಪ, ಹುಚ್ಚುಕೋಡಿ ಮನಸು.. ಇದು ಹದಿನಾರರ ವಯಸು ಎಂಬೋ ಕವಿವಾಣಿಯ ತರಹದ ಹುಚ್ಚು ಮನಸಿನ ಸ್ವಲ್ಪ ಹೆಚ್ಚೇ ಧೈರ್ಯದ , ರೋಚಕ ಕನಸುಗಳ ಹುಡುಗರು… ಯಾವುದೇ ಚಾರಣ ಅಂದಾಗ ಈ ಮೂರು ಚಿತ್ರಗಳು ಮನಸ್ಸಿಗೆ ಬಂದೇ ಬರುತ್ತೆ. ಚಾರಣದಲ್ಲಿ ಸಾಹಸ ಮತ್ತು ಸಾವುಗಳ ನಡುವೆ ಕೂದಲೆಳೆಯ, ಕೆಲವಕ್ಷರಗಳ ವ್ಯತ್ಯಾಸವಷ್ಟೇ. ಕುಮಾರಪರ್ವತದಿಂದ ಕೊಡಚಾದ್ರಿಯವರೆಗಿನ ಚಾರಣಗಳಲ್ಲಿ, ಜಲಪಾತದ ಜಾರುಗಳಲ್ಲಿ, ನೀರ ಮಡುಗಳಲ್ಲಿ ಹೀಗೇ ಆಗುತ್ತೆ ಅಂತ ಹೇಳುವಷ್ಟು ದೊಡ್ಡ ಚಾರಣಿಗ ನಾನಲ್ಲದಿದ್ದರೂ ಚಾರಣದ ಮೈ ಜುಮ್ಮೆನ್ನಿಸಿದ ಕ್ಷಣಗಳ, ತಲ್ಲಣಗಳನ್ನು ಅನುಭವಿಸಿ, ಕೇಳುತ್ತಲೇ ಬೆಳೆಯುತ್ತಿರೋ ನೂರಾರರಲ್ಲೊಬ್ಬ. ಚಾರಣದ ಅಸಂಖ್ಯ ಸಾಧ್ಯತೆಗಳ ಮಧ್ಯೆ ಸಾವಿಗೆರವಾಗೋ ಕೆಲವು ಕಾಮನ್ ಸಂಗತಿಗಳ ಬಗ್ಗೆ ಹೀಗೊಂದು ಲೇಖನ. +ಎಡಕುಮೇರಿ: +ಟ್ರಿಕ್ಕಿಂಗ್ ಅಂತ ಸುಮಾರ್ ಗೊತ್ತು. ಆದ್ರೆ ರೈಲ್ವೆ ಟ್ರೆಕ್ಕಿಂಗ ಅಂದ್ರೆ.. ಅದು ಎಡಕುಮೇರಿನೇ ಸರಿ. ಜೀವಮಾನದ ಅಧ್ಬುತ ಅನುಭವ ಅಂತ ಎಡಕುಮೇರಿ ಚಾರಣ ಮುಗಿಸಿದ ಗೆಳೆಯರೊಬ್ಬರು ಹೇಳ್ತಿದ್ದರು. ರೈಲೇ ಮುಚ್ಚಿ ಹೋಗುವಷ್ಟು ಉದ್ದುದ್ದದ ಸುರಂಗಗಳು, ಅದರಾಚೆಯ ಹಸಿರ ಸ್ವರ್ಗದ ಚಿತ್ರಣವನ್ನು ಅಲ್ಲಿ ಹೋಗೇ ಅನುಭವಿಸಬೇಕು ಎಂಬುದು ಅವರ ಅಂಬೋಣ. ಮುಗಿಯದ ಕತ್ತಲ ಕೂಪದಂತಹ ಸುರಂಗಗಳು, ಉದ್ದುದ್ದದ, ಕೆಳಗೆ ನೋಡಿದರೆ ತಲೆತಿರುಗುವಷ್ಟೆತ್ತರದ ಬ್ರಿಡ್ಜ್ ಗಳ ನಡುವೆ ನಿಂತು ಪ್ರಕೃತಿಯ ಸೌಂದರ್ಯ ಸವಿಯುವುದೇನೋ ಚಂದ. ಆದರೆ ಈ ಬ್ರಿಜ್ಗಳಲ್ಲೋ, ಸುರಂಗದಲ್ಲೋ ಇದ್ದಾಗ ಟ್ರೈನ್ ಬಂದರೆ ? !!! ನಮ್ಮ ಗೆಳೆಯರದ್ದೂ ಅದೇ ಕತೆ ಆಗಿತ್ತು. ಸುರಂಗದ ಮಧ್ಯ ಇದ್ದಾಗ ರೈಲ್ ಪ್ರವೇಶ. ಟ್ರಾಕಿನ ಅಕ್ಕ ಪಕ್ಕ ಇರೋ ಸ್ವಲ್ಪವೇ ಜಾಗದಲ್ಲಿ ಗೋಡೆಗೆ ಒರಗಿ ಸಾಧ್ಯವಾದಷ್ಟೂ ಮುದುರಿ ನಿಂತಿದ್ದರಂತೆ. ಕೈಕಾಲು ಆಚೀಚೆ ಅಲ್ಲಾಡಿಸಲಾಗದಂತ ಪರಿಸ್ಥಿತಿ! ಏನಾದರೂ ಅಲ್ಲಾಡಿದರೆ ಆ ಅಂಗ ಕತ್ತರಿಸಿ ಹೋಗುವ ಇಲ್ಲಾ ಜೀವವೇ ಹೋಗುವ ಅಪಾಯ ! ಹೋದ ಆರು ಜನರಲ್ಲಿ ಒಬ್ಬ ಎತ್ತ ಹೋದ ಎಂದೇ ಗೊತ್ತಾಗಿರಲಿಲ್ಲವಂತೆ. ರೈಲ್ ಹೋಗಿ ನಾಲ್ಕೈದು ನಿಮಿಷದ ನಂತರ ಅವನ ಧ್ವನಿ ಕೇಳಿದ ಮೇಲೆಯೇ ಎಲ್ಲರಿಗೂ ಹೋದ ಜೀವ ಬಂದಂತಹ ಅನುಭವ. ಸಾಹಸ ಮಾಡಕ್ಕೆ ಹೋಗಿ ಒಬ್ಬ ಸತ್ತೇ ಹೋದ ಅಂತಾಗೋ ಸಂದರ್ಭದಿಂದ ಕೂದಲೆಳೆಯಲ್ಲಿ ಪಾರಾದ ಖುಷಿ ಇನ್ನೂ ಆ ಎತ್ತರೆತ್ತರದ ಬ್ರಿಜ್ಗಳಲ್ಲಿದ್ದಾಗ ರೈಲೇನಾದ್ರೂ ಬಂದಿದ್ರೆ !! ದೇವ್ರೆ ಗತಿ. ಎಡಕುಮೇರಿಗೆ ಹೋಗ್ಬೇಬೇಡಿ ಅಂತ ಹೇಳೋಕೆ ಹೊರಟಿದೀನಿ ಅಂತ್ಕಂಡ್ರೆ ಖಂಡಿತಾ ತಪ್ಪು ಹೋಗ್ಬನ್ನಿ, ಆದ್ರೆ ರೈಲ್ವೇ ವೇಳಾಪಟ್ಟಿ ವಿಚಾರಿಸಿಕೊಳ್ದೇ ಇಂತ ಹುಚ್ಚಾಟಕ್ಕೆ ಸಿಕ್ಕಾಕೋಬೇಡಿ ಅಂತಷ್ಟೇ. ನೀಟಾಗಿ ಪ್ಲಾನ್ ಮಾಡಿ ಎಡಕುಮೇರಿಯಲ್ಲಿ ಎಳೆಯಷ್ಟೂ ತೊಂದರೆಯಿಲ್ದೇ ಸಖತ್ ಎಂಜಾಯ್ ಮಾಡಿದ ಅದೆಷ್ಟೋ ಗೆಳೆಯರು ಎದುರೇ ಇದ್ದಾರೆ, ಆಗಾಗ ಸಿಗ್ತಿರ್ತಾರೆ + +ಮಲ್ಲಳ್ಳಿ ಜಲಪಾತ: +ಕುಮಾರ ಪರ್ವತಕ್ಕೆ ಸೋಮವಾರಪೇಟೆಯ ಕಡೆಯಿಂದ ಹೋಗುವಾಗ ಸಿಗೋ ಒಂದು ಸುಂದರ ಜಲಪಾತ. ತೀರಾ ಸುಂದರ ಅಂತ ಹೇಳೋ ಹಾಗಿಲ್ದೇ ಇದ್ರೂ ಮಲ್ಲಳ್ಳಿಯಿಂದ್ಲೇ ಕುಮಾರಪರ್ವತದೆಡೆಗಿನ ಚಾರಣ ಶುರು ಮಾಡುವವರಿಗೆ ಇದು ಸಖತ್ ಸ್ಪಾಟ್. ತೀರಾ ಎತ್ತರದಿಂದ ನೀರು ಬೀಳದಿದ್ದರೂ ನೀರಿನ ರಭಸಕ್ಕೆ ಅನೇಕ ಕುಳಿಗಳೆದ್ದಿದೆ. ಜಲಪಾತದ ಬುಡಕ್ಕೆ ಸೀದಾ ಹೋಗೋದು ಸಾಧ್ಯವಿಲ್ಲದ ಮಾತು. ಹಲವಾರು ಕಡೆ ನೀರು, ಬಂಡೆಗಳನ್ನ ದಾಟಿ ಸಾಹಸದಿಂದ ಜಲಪಾತದ ಬುಡಕ್ಕೆ ಸಾಗಬೇಕು. ಜಾರೋ ಪಾಚಿಗಟ್ಟಿದ ಕಲ್ಲುಗಳಲ್ಲಿ , ನೀರಿನ ರಭಸಕ್ಕೆ ಸ್ವಲ್ಪ ಕಾಲು ಜಾರಿದರೂ ಸಾಕು. ಸೊಂಟಕ್ಕಿಂತ ಸ್ವಲ್ಪ ಎತ್ತರದ ನೀರಾದರೂ ಆಧಾರ ಸಿಗದೇ ಅಪಾಯ ಕಟ್ಟಿಟ್ಟ ಬುತ್ತಿ. ನಾವಲ್ಲಿಗೆ ಹೋದಾಗ ಅಲ್ಲಿನ ಗೈಡ್ ಸಿರಸಿಯ ಅಶ್ವಥ್ ಹೆಗ್ಡೆ ಅನುವವರ ಕತೆ ಮತ್ತು ಹುಣಸೂರಿನ ಪೋಲೀಸೊಬ್ರ ಜತೆ ಹೇಳ್ತಿದ್ರು. ಇಬ್ರೂ ನೀರು ಅಂತ ಕಂಡ ಕೂಡ್ಲೇ ಧುಮುಕಿದ್ರಂತೆ. ದಾರೀಲೇ ಬಂಡೆಯೊಂದು ತಲೆಗೆ ಹೊಡ್ದು ಪ್ರಜ್ನೆ ತಪ್ಪಿ ನೀರ ತಳ ಸೇರಿದ್ರಂತೆ. ನೀರೊಳಗೆ ತಪ್ಪಿದ ಪ್ರಜ್ನೆ, ಬಂಡೆಯ ಆಘಾತದಿಂದಾದ ರಕ್ತಸ್ರಾವದಿಂದ ಎರಡೂ ಯುವ ಜೀವಗಳ ದುರಂತ ಅಂತ್ಯ ಜಲಪಾತದಲ್ಲಿ ನೀರಿಗಿಳಿಯಲೇ ಬಾರದೆಂಬ ಪುಕ್ಕಲುತನದ ಮಾತುಗಳಲ್ಲ. ಎಷ್ಟೋ ಜಲಪಾತಗಳ ಕೆಳಗಿಳಿದಿದ್ದೇವೆ. ನೀರಲ್ಲಿ ಸಾಕಷ್ಟು ಆಟವಾಡಿದ್ದೇವೆ. ಆದರೆ ನೀರು ಕಂಡ ತಕ್ಷಣ ಹಿಂದುಮುಂದಿಲ್ಲದೇ ಧುಮುಕುವ ಹುಚ್ಚುತನ, ಹೇಗಿದ್ರೂ ಈಜು ಬರುತ್ತೆಂಬ ಹುಂಬತನ ಇರಬಾರದಷ್ಟೇ.. + +ಸಾವನದುರ್ಗ: +ಬೆಂಗಳೂರಿಗೆ ತೀರಾ ಹತ್ತಿರದಲ್ಲಿರೋದ್ರಲ್ಲಿ ಸಖತ್ತಾಗಿರೋ ಚಾರಣದ ನೆನಪುಳಿಸುವಂತ ತಾಣ ಸಾವನದುರ್ಗ. ಹತ್ತಿದಷ್ಟೂ ಮುಗಿಯದಂತ, ಇದೇ ತುದಿಯೆಂದಾಗ ಇನ್ನೂ ಮೇಲೆ ದಾರಿ ಕಾಣುವಂತ ಬೆಟ್ಟ ಇದು. ಬೆಟ್ಟದ ಆಕಾರ ನೋಡಿ ಹತ್ತುವುದೇ ಅಸಾಧ್ಯ ಅನಿಸಿದರೂ ಸ್ವಲ್ಪಎಚ್ಚರದಿಂದ ಹೆಜ್ಜೆಯ ಮೇಲೆಯೇ ಗಮನವಿಟ್ಟು ಹತ್ತುತ್ತಾ ಸಾಗಿದಂತೆ ನಮಗೇ ಆಶ್ಚರ್ಯವಾಗುವಂತೆ ಮೇಲೆ ಸಾಗುತ್ತಾ ಸಾಗುತ್ತೇವೆ. ಇಲ್ಲಿರೋ ಹತ್ತುವ ಮಾರ್ಕುಗಳ, ಕರೆಂಟ್ ಲೈನುಗಳ ಹಾದಿಯಲ್ಲೇ ಸಾಗಿ ಅಂತ ಅನೇಕ ಬ್ಲಾಗುಗಳಲ್ಲಿ, ಹೋಗಿ ಬಂದವರ ಅಂಬೋಣ. ಸಖತ್ ಸುಲಭ ಅಂತಲ್ಲ ಇದು. ಆದ್ರೆ ಇರೋ ಮಾರ್ಗಗಳಲ್ಲಿ ಸ್ವಲ್ಪ ಸೇಫು ಅಂತ ಅಷ್ಟೇ. ಆದ್ರೆ ಕೆಲವರಿಗೆ ಎಲ್ಲಾ ಹೋದಂಗೆ ನಾವು ಹೋದ್ರೆ ಏನು ಥ್ರಿಲ್ಲಿದೆ ಅಂತ ! ಹಂಗೇ ಹತ್ತಿದ್ದ ನಮ್ಮ ಗುಂಪಿನ ಗೆಳೆಯರು ದಾರಿ ತಪ್ಪಿ ಹಂಗೇ ಮುಂದೆ ಹೋಗಿಬಿಟ್ಟಿದ್ರು. ಬೆಟ್ಟದ ಮೇಲೆ ಅಡ್ಡ ನಡೆಯುತ್ತಾ ಸಾಗಿದ ಅವ್ರಿಗೆ ಮುಂದೆ ಒಂದ್ಕಡೆ ಮುಂದೆ ಹೋಗೋಕೆ ಸಾಧ್ಯನೇ ಇಲ್ಲ ಅಂತ ಅನಿಸೋಕೆ ಶುರು ಆಯ್ತು. ಕಾಲೆಲ್ಲಾ ಬೆವರೋಕೆ ಶುರು ಆಯ್ತು !! ಕೂರೋ ಹಾಗೂ ಇಲ್ಲ. ನಡೆದು ಬಂದ ದಾರಿಯಲ್ಲಿ ವಾಪಾಸ್ ಸಾಗೋಕೂ ಕಾಲು ನಡುಗ್ತಾ ಇದೆ, ಕೆಳಗೆ ನೋಡಿದ್ರೆ ಮತ್ತೂ ಭಯ ! ಚೂರು ಕಾಲು ಜಾರಿದ್ರೂ ಏನೂ ಆಧಾರವಿಲ್ಲ. ಬಂಡೆಗಳೇ ಅಧಾರ! ಸಾವನಗುರ್ಗ, ತಮ್ಮ ಸಾವಿನ ದುರ್ಗವಾಗುವುದೋ ಎಂಬ ಭಯದಿಂದ ಅವರು ಕಿರುಚಕ್ಕಿಡುದ್ರು. ಅದನ್ನ ನೋಡಿದ ನಮಗೂ ಭಯ ! ಕೊನೆಗೆ ಕರೆಂಟ್ ಕಂಬದ ದಾರಿಯಿಂದ ಮುಂದೆ ಬಂದಿದ್ದ ನಾವು ಮತ್ತೆ ಹಿಂದೆ ನಾಗಿ ಹೇಗೋ ತ್ರಿಶಂಕು ಸ್ವರ್ಗದಲ್ಲಿದ್ದ ಅವರ ಬಳಿ ಸಾಗಿ ಸಮಾಧಾನ ಪಡಿಸುತ್ತಾ ನಿಧಾನವಾಗಿ ಕೆಳಗಿಳಿಸಿದೆವು. ಸ್ವಲ್ಪ ಹೊತ್ತು ಕೆಳಗೇ ಕುಳಿತು ಭಯ, ಕಾಲು ನಡುಗುವಿಕೆ ಕಮ್ಮಿ ಆದ ನಂತರ ಮತ್ತೆ ಕರೆಂಟ್ ಕಂಬದ ದಾರಿಯಲ್ಲಿ ಚಾರಣ ಮುಂದುವರಿಸಿದೆವು. ಬೆಟ್ಟ ಹತ್ತೋದೇ ತಪ್ಪು, ಸುಮ್ನೇ ಕೆಳಗೆ ಕೂತು ನೋಡ್ಬೇಕು ಅಂತಲ್ಲ. ಬೆಟ್ಟ ಹತ್ತೋಕೆ ಅಂತ ಹೋಗಿದ್ದೇ ಹೊರ್ತು ರಾಕ್ ಕ್ಲೈಂಬಿಂಗ್ ನಂತಹ ಸಾಹಸ ಮಾಡೋಕೆ ಹೋಗಿದ್ದಾಗಿರ್ಲಿಲ್ಲ ನಾವು. ರಾಕ್ ಕ್ಲೈಂಬಿಂಗ್ ಗೆ ಬೇಕಾದ ಶೂ, ಕೊಡಲಿ, ಹಗ್ಗಗಳಂತ ಯಾವುದೇ ಪರಿಕರಗಳಿಲ್ಲದೇ ತಮ್ಮನ್ನ ತಾವು ಕೋತಿ ರಾಮ ಅಂತ್ಕೊಂಡು ಸಿಕ್ಕ ಸಿಕ್ಕ ಬಂಡೆ ಏರಿ ಸಾಹಸ ತೋರ್ಸೋಕೆ ಹೋದ್ರೆ..ಸಾವನ ದುರ್ಗ ಅಂತಲ್ಲ ಯಾವ ಬೆಟ್ಟವಾದ್ರೂ ಸಾವೆಂಬ ಮೋಹಿನಿ ಮುತ್ತಿಕ್ಕೋಕೆ ಕಾಯ್ತಾ ಇರ್ತಾಳೆ. +ಬನ್ನೇರು ಘಟ್ಟ: +ಸಫಾರಿ, ಮೃಗಾಲಯ, ಚಿಟ್ಟೆ ಪಾರ್ಕ್.. ಹೀಗೆ ಬನ್ನೇರುಘಟ್ಟ ಒಂದು ದಿನದ ಪಿಕ್ನಿಕ್ಕಿಗೆ ಒಳ್ಳೇ ಜಾಗ. ಆದರೆ ಇದೇ ಬನ್ನೇರುಘಟ್ಟ ಕೆಲ ಸಮಯದ ಹಿಂದೆ ಟ್ರೆಕ್ಕಿಂಗಿಗೆ ಹೋದ ಟೆಕ್ಕಿಗಳ ಸಾವು ಎಂದು ಕುಖ್ಯಾತವಾಗಿತ್ತು.ಯಾರ ಮಾತೂ ಕೇಳದೆ ಟ್ರೆಕ್ಕಿಂಗು ಅಂತ ನಿಷೇಧಿತ ಕಾಡಿನಲ್ಲಿ ಹೊರಟಿದ್ದ ಟೆಕ್ಕಿಗಳು ಆನೆಯ ಕಾಲಿಗೆ ಬಲಿಯಾಗಿದ್ದರು.ಸಾಹಸ ಬೇಕು ಸರಿ, ಆದರೆ ನಿಷೇಧ ಅನ್ನೋ ಪದಕ್ಕೂ ಅದರದ್ದೇ ಆದ ಅರ್ಥವಿರುತ್ತೆ ಅಲ್ವೇ ? +ಜೋಗ: +ಭೂಮಿ ಮೇಲೆ ಹುಟ್ಟಿದ ಮೇಲೆ ಏನೇನ್ ಕಂಡಿ..ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ ಅನ್ನೋ ಕವಿವಾಣಿಯೇ ಇದೆ. ಉಕ್ಕಿ ಹರಿಯೋ ವೇಳೆ ಜೋಗ ಜಲಪಾತದ ಸಿರಿ ನೋಡಿಯೇ ಸವಿಯಬೇಕು. ಮುಂಗಾರು ಮಳೆಯಲ್ಲಿ ಜೋಗವನ್ನು ಹಲವು ಕೋನಗಳಲ್ಲಿ ತೋರಿಸಿದ ಮೇಲಂತೂ ಜೋಗಕ್ಕೆ ಭೇಟಿ ನೀಡೋ ಪ್ರವಾಸಿಗರ, ಚಿತ್ರ ವಿಚಿತ್ರ ಫೋಟೋ ಹುಚ್ಚಿನ ಸಾಹಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಲಪಾತವಾಗಿ ಶರಾವತಿ ಧುಮುಕುವ ಜಾಗಕ್ಕಿಂತ ಸ್ವಲ್ಪ ಹಿಂದಿರೋದು ಬ್ರಿಟಿಷ್ ಬಂಗಲೋ. ಅಲ್ಲಿಂದ ಜಲಪಾತದ ತಲೆಯವರೆಗೂ ಬರಬಹುದು. ಜಲಪಾತದ ಕೆಳಗೆ ನಿಂತು, ಎದುರಿನಿಂದ ನೋಡಿದರೆ ಸಾಕಾಗದ ಗಂಡೆದೆಯ(?) ಯುವಕರ ತಂಡವೊಂದು ಮುಂಗಾರು ಮಳೆಯ ಶೂಟಿಂಗಿನಂತೆ ಜಲಪಾತದ ತಲೆಯ ಮೇಲಿಂದ ಪೋಸ್ ಕೊಡೋಕೆ ಹೊರಟಿತ್ತು ! ಸಿನಿಮಾ ಅಂದರೆ ಕ್ರೇನ್ಗಳನ್ನು ಬಳಸಿಯೋ, ಜೂಮಿಂಗ್ ಕ್ಯಾಮರಾಗಳಿಂದಲೋ ಜಲಪಾತಕ್ಕೆ ತೀರಾ ಹತ್ತಿರದಲ್ಲಿದ್ದಂತೆ ಜೀವ ಹಾನಿಯಿಲ್ಲದಂತೆ ಚಿತ್ರ ತೆಗೆಯಬಹುದು..ಆದರೆ ನಿಜ ಜೀವನದಲ್ಲಿ ? ನದಿ ಅಂದ ಮೇಲೆ ಜಾರಿಕೆ ಇದ್ದೇ ಇರುತ್ತೆ. ಹಾಗೆಯೇ ಜಲಪಾತದ ತುದಿಗೆ ಹೋಗೋ ಹುಚ್ಚಿನಲ್ಲಿದ್ದವನೊಬ್ಬ ನೀರಿಗೆ ಜಾರಿದ. ನೀರಿನ ರಭಸಕ್ಕೆ ಹತೋಟಿಯೇ ಸಿಗದೆ ಜೀವ ಗೆಳೆಯರ ಕಣ್ಣೆದುರೇ ಜೀವಕ್ಕೆರವಾದ ! ೯೦೦ ಅಡಿ ಎತ್ತರದಿಂದ ಧುಮುಕೋ ಜಲಪಾತದ ರಭಸಕ್ಕೆ ಮಧ್ಯ ಮಧ್ಯ ಅನೇಕ ನೀರ ಕುಳಿಗಳಾಗಿದ್ದವಂತೆ. ಅಂತದ್ದೇ ಒಂದು ಕುಳಿಯನ್ನು ಹೊಕ್ಕಿದ್ದ ಆತನ ದೇಹ ಜಲಪಾತದ ತಳವನ್ನೂ ಸೇರದೆ, ಹುಡುಕ ಬಂದ ಕ್ರೇನ್ಗಳಿಗೂ ಸಿಕ್ಕದೇ ಅನೇಕ ದಿನಗಳ ಕಾಲ ಅತಂತ್ರವಾಗಿತ್ತು +ಮಳೆಗಾಲ ಕಳೆಯುತ್ತಾ ಬಂದಂತೆ ಜೋಗ ಜಲಪಾತದ ರಭಸ ಕಮ್ಮಿಯಾಗುತ್ತಾ ಬರುತ್ತೆ. ಆಗ ಜಲಪಾತದ ಕೆಳಗಿನವರೆಗೂ ಇಳಿಯಬಹುದು. ಧುಮುಕೋ ಜಲಪಾತದ ಹನಿಗಳು ಮತ್ತೆ ಚಿಮ್ಮಿ ಒಂತರಾ ತುಂತುರು ಮುತ್ತುಗಳ ಸಿಂಚನ. ಜಲಪಾತದ ಕೆಳಗೆ ಒಂದು ದೊಡ್ಡ ಬಂಡೆ, ಅದರ ಮುಂದೆ ನೀರ ಕುಳಿ. ಅದರ ಆಳ ಎಷ್ಟಿದೆಯೆಂದು ನಿಖರವಾಗಿ ತಿಳಿಯದಿದ್ದರೂ ಎಂಭತ್ತು ಅಡಿ ಇರಬಹುದೆಂದು ಅಲ್ಲಿನವರು ಹೇಳುತ್ತಾರೆ. ಬಂಡೆಯ ಹತ್ತಿರ ಹೋಗುವಷ್ಟರಲ್ಲೇ ಪೂರ್ತಿ ಸ್ನಾನವಾಗುವಷ್ಟು ನೀರಿದ್ದರೂ ನಮ್ಮ ಜೊತೆ ಬಂದ ಕೆಲವರಿಗೆ ನೀರ ಕುಳಿಗೆ ಧುಮುಕುವ ಹುಚ್ಚು. ಅಲ್ಲಿನ ಸುಳಿಗಳ ಬಗ್ಗೆ ಗುಂಪಲ್ಲಿ ಮುಂಚೆ ಬಂದಿದ್ದವರು ಎಚ್ಚರಿಸದೇ ಹೋಗಿದ್ದರೆ ಇನ್ನೆಷ್ಟು ಜೀವಗಳು ಮೃತ್ಯುಮೋಹಿನಿಯ ಆಲಿಂಗನಕ್ಕೆ ಸಿಕ್ಕುತ್ತಿದ್ದವೋ.. ಮೇಲೇ ನಿಂತು ನೋಡಬೇಕು ಅಂತಲ್ಲ. ಬದಲು ಮಳೆ ಕಡಿಮೆಯಾದಾಗ ಜಲಪಾತದ ಬುಡದ ತನಕ ಇಳಿಯುವುದು ಕಮ್ಮಿ ಸಾಹಸವೇನಲ್ಲ(ಮುಂಚೆ ಮೆಟ್ಟಿಲುಗಳಿರಲಿಲ್ಲ. ಈಗ ಸಿಮೆಂಟ್ ಮೆಟ್ಟಿಲುಗಳನ್ನು ಮಾಡಿ ಅಪಾಯ ಬಹಳವೇ ಕಮ್ಮಿ ಆಗಿದೆ). ಜಲಪಾತದ ಬುಡಕ್ಕೆ ಬಂದು ಅಲ್ಲಿನ ನೀರಲ್ಲಿ ಆಟವಾಡಿದರೂ ಸಾಲದು ಎಂದು ಕಂಡ ಕುಳಿಗಳಲ್ಲಿ ಧುಮುಕಿ ತಮ್ಮ ಈಜು ಪ್ರಾವಿಣ್ಯತೆ ಪ್ರದರ್ಶನ ಬೇಕೇ ಎಂಬ ಪ್ರಶ್ನೆ ಅಷ್ಟೆ. +ಕುಮಾರಪರ್ವತ : +ಎರಡು ದಿನದ ಈ ಟ್ರೆಕ್ಕಿಂಗ್ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇಲ್ಲಿ ಅಪಾಯ ಅಂತೇನಾದ್ರೂ ಇದ್ರೆ ಅದು ರಾತ್ರಿ ವೇಳೆ ಟ್ರೆಕ್ಕಿಂಗ್ ಸಾಹಸ ಅಂತ ಹೊರಡೋ ಗುಂಪುಗಳಿಗೆ. ಅರಣ್ಯ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ಬಿಡದಿದ್ದರೂ ಹೇಗೋ ಕಣ್ಣುತಪ್ಪಿಸಿಯೋ, ಅಲ್ಲಿಂದ ಬೇಗ ಹೊರಟರೂ ಮಧ್ಯೆ ಕಾಲಹರಣ ಮಾಡಿ ಸಂಜೆಯೊಳಗೆ ಬೆಟ್ಟದ ತುದಿ ತಲುಪಲಾಗದೇ ಮಧ್ಯವೇ ಸಿಕ್ಕಿಹಾಕಿಕೊಳ್ಳೋ ಗುಂಪುಗಳಿಗೆ ಅಪಾಯ ತಲೆಮೇಲೆ ತೂಗುತ್ತಿರೋ ಕತ್ತಿಯಂತೆಯೇ. ಬೆಟ್ಟದ ಬುಡದಲ್ಲಿ, ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಅಥವಾ ಬೆಟ್ಟದ ತುದಿಯ ಬಯಲಲ್ಲಿ ಟೆಂಟ್ ಹಾಕಬಹುದು. ಅದರೆ ಕಾಡ ಮಧ್ಯದಲ್ಲಿ ? !! ಕಷ್ಟಪಟ್ಟು ಟೆಂಟ್ ಹಾಕಿದರೂ ಯಾವ ಕಾಡು ಪ್ರಾಣಿ ಯಾವಾಗ ಧಾಳಿ ಮಾಡಬಹುದು ಅಂತ ಆ ದೇವನೇ ಬಲ್ಲ ! ಇದಾದರೂ ಬೇಕು. ಇನ್ನೂ ಹೆಚ್ಚಿನ ಅಪಾಯ ತರೋದು,ಅಸಹ್ಯ ಹುಟ್ಟಿಸೋದು ಬೀರ್ ಬಾಟಲ್ ಟ್ರೆಕ್ಕಿಗರು(? )!. ಕೈಯಲ್ಲೊಂದು ಬೀರ್ ಬಾಟ್ಲು(ಬ್ಯಾಗಲ್ಲೆಷ್ಟೋ ) ಹಿಡಿದೇ ಸಾಗೋ , ಹೋದಲ್ಲೆಲ್ಲಾ ಹಲತರದ ಸಾಹಸ(?) ಪ್ರದರ್ಶಿಸೋ ಇವರು ಟ್ರೆಕ್ಕಿಂಗಿಗೆ ಅಂತಲೇ ಯಾಕೆ ಬರ್ತಾರೋ ಗೊತ್ತಾಗಲ್ಲ. ಕಂಡಲ್ಲೆಲ್ಲಾ ಒಡೆದ ಗ್ಲಾಸು, ಬಾಟಲು, ಪ್ಲಾಸ್ಟಿಕ್ ಕವರು ಬಿಸಾಕೋ, ಸುತ್ತಮುತ್ತಲ ಪರಿಸರವನ್ನೆಲ್ಲಾ ಗಬ್ಬೆಬ್ಬಿಸಿ, ಗಲಾಟೆಯೆಬ್ಬಿಸಿಯೇ ಮುಂದೆ ಸಾಗುವ ಇಂತಹವರಿಂದ ಸ್ಥಳೀಯರು ಟ್ರೆಕ್ಕಿಗರು ಅಂದರೆ ಅಸಹ್ಯಿಸುವಂತಾಗಿದೆ. ನಾನು ಒಬ್ಬ ಟ್ರೆಕ್ಕರ್ ಅಂತ ಹೇಳಲೇ ಅಸಹ್ಯಪಡುವಂತೆ ಮಾಡಿರೋ ಇಂತ ಟ್ರೆಕ್ಕಿಗರಿಗೆ (? ) ಎಲ್ಲಿ ಹೋದಾರೂ ಅಪಾಯ ಗ್ಯಾರಂಟಿಯೇ. +ಬರೀತಾ ಬರೀತ ತುಂಬಾನೇ ಆಯ್ತು ಅನ್ಸತ್ತೆ. ಕೊಡಚಾದ್ರಿಯಿಂದ, ಮುಳ್ಳಯ್ಯನಗಿರಿವರೆಗೆ, ಸ್ಕಂಧಗಿರಿಯಿಂದ ಮಧುಗಿರಿಯವರೆಗೆ ಹೀಗೆ ಬರೆಯುತ್ತಾ ಹೋದರೆ ತುಂಬಾ ಇದೆ. ಆದರೆ ಅವೆಲ್ಲಾ ಕಡೆ ಸಾಹಸಗಳು ಸಾವಲ್ಲಿ ಕೊನೆಯಾಗ್ತಿರೋ ಸಂದರ್ಭಗಳಲ್ಲಿನ ಸಾಮಾನ್ಯ ಅಂಶ ಒಂದೇ. ನಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಬೇಕು ನಿಜ, ಆದ್ರೆ ಅದೇ ಅತಿಯಾಗಿ ನಾನು ಏನು ಬೇಕಾದ್ರೂ ಮಾಡಬಲ್ಲೆ, ಸೂಪರ್ ಹೀರೊ ಅಂದ್ಕೋಬಾರ್ದಷ್ಟೆ. ಇಲ್ಲಿ ನನ್ನ ಖುಷಿಗೆ ನಾನು ಏನು ಮಾಡಿದ್ರೂ ನಡ್ಯತ್ತೆ. ಯಾರೂ ಕೇಳೊಲ್ಲ, ಏನೂ ಆಗಲ್ಲ ಅನ್ನೋ ಭ್ರಮೆ ದೂರಾಗ್ಬೇಕಷ್ಟೆ. ಇವಿದ್ರೆ ಸಾಹಸವೆಂಬ ಭಾವ ಎಂದೂ ಮಾಸದ ಸೂಪರ್ ಅನುಭವಗಳನ್ನ, ಮಧುರ ನೆನಪುಗಳನ್ನು ನೀಡೊತ್ಯೆ ಹೊರತು ಸಾವು ನೋವುಗಳನ್ನಲ್ಲಾ ಎಂಬ ಭಾವದೊಂದಿಗೆ ವಿರಾಮ. \ No newline at end of file diff --git a/PanjuMagazine_Data/article_1016.txt b/PanjuMagazine_Data/article_1016.txt new file mode 100644 index 0000000000000000000000000000000000000000..1385977ff36f9251f265e4ca1c766cd126da2f9b --- /dev/null +++ b/PanjuMagazine_Data/article_1016.txt @@ -0,0 +1,40 @@ +ಇಸ್ಕೋಲಿನಲ್ಲಿ ಏಳಿದ್ದ ವಿಸಯದ್ದ ಬಗ್ಗೆನೇ ಅವತ್ತೇಲ್ಲ ಯೋಚ್ನೆ ಮಾಡ್ಕಂಡು ಏಟು ವೊತ್ತಿಗೆ ಮನಿಗೋಯ್ತಿನೊ, ಏಟು ಬ್ಯಾಗ ಅವ್ವಂಗೆ ಆ ವಿಸಯ ತಿಳ್ಸಿ ನಮ್ಮನೆಗೂ ಒಂದು ಸೌಚಾಲ್ಯ ಮಾಡಿಸ್ಕೊತಿನೋ ಅಂತ ವಿಮಲಿ ಮನಸ್ಸಿನಲ್ಲೆ ಮಂಡಿಗೆ ತಿಂತಿದ್ದಳು. ಮನೆಗೆ ಬಂದವ್ಳೆ ಅವ್ವನ್ನ ಕಾಡೊಕೆ ಸುರು ಹಚ್ಕಂಡ್ಳು. +“ಏಂತದೇ ಅದು ಸೌಚಲ್ಯ” ಅಂತ ಇಟ್ಟಿಗೆ ವೊತ್ತು ಸುಸ್ತಾಗಿದ್ದ ಪಾರು ರೇಕಂಡ್ಳು. ವಿಮಲಿ ಅತ್ಯೂತ್ಸಹದಿಂದ “ಅದೇ ಕನವ್ವ, ಕಕ್ಸದಮನೆ, ಇವತ್ತು ನಮ್ಮಿಸ್ಕೋಲಿನಲ್ಲಿ ದೊಡ್ಡವರೆಲ್ಲ ಬಂದು ಬಾಷ್ಣ ಮಾಡಿದ್ರು ಕನವ್ವ ಬಯಲಾಗೆ ಎಲ್ಡಕ್ಕೆ ವೋಗಬಾರದಂತೆ,ಅಂಗೆ ವೋದಾಗ ಹುಳ ಹುಪ್ಪತೆ ಕಡ್ದು ಎಟೋ ಜನ ಸತ್ತೊಗವ್ರಂತೆ, ಆಮೇಕೆ ಎಣ್ಣು ಮಕ್ಕಳಿಗೆ ಏನೇನೋ ಆಯ್ತದಂತೆ. ಏನೆನೊ ರ್ವಾಗನೂ ಬತ್ತದಂತೆ, ಅದಕ್ಕೆ ಎಲ್ರೋ ಅವರವರ ಮನ್ಯಾಗೆ ಕಕ್ಸದ ಮನೆ ಕಟ್ಕಳ್ಳಿ ಅಂತ ಯೋಳವ್ರೆ, ಯವ್ವ ಯವ್ವ ನಮ್ಮನೆಯಾಗೂ ಸೌಚಾಲ್ಯವ ಕಟ್ಟಸ್ಕೊಳ್ಳಣ ಕನವ್ವ’ ಅಂತ ಅಂಗಲಾಚಿದಳು. “ಅಯ್ಯೊ ಸುಮ್ಕಿರಮ್ಮಿ ,ತಿನ್ನೋಕೆ ಇಟ್ಟಿಲ್ಲ. ಕಕ್ಸದಮನೆ ಅಂತೆ ಕಕ್ಸದಮನೆ” ಪಾರು ಸಿಡುಕಿದಳು. +ಏಳ್ನೆ ಕಿಲಾಸ್ನಲ್ಲಿ ಓದ್ತಾ ಇದ್ದ ವಿಮಲಿಗೆ ಅವ್ವ ಯೋಳಿದ್ದು ಸರಿ ಕಾಣ್ಲಿಲ್ಲ. ದೊಡ್ಡ ಮನ್ಸಿಯಂತೆ “ಇಟ್ಟಿಲ್ಲದಿದ್ದರೂ ಪರ್ವಾಗಿಲ್ಲ ಕನವ್ವ, ನಾವು ತಿಂದಿಲ್ಲ ಅಂತ ಯ್ಯಾರ್ನೋಡೊಕೆ ಬತ್ತರೆ, ಚೊಂಬಿಡ್ಕಂಡು ಕೆರೆಕಡಿಕೆ ವೋಗೊದ್ನ ತಾನೆ ಎಲ್ಲಾ ನೋಡೋದು” ಅಂತ ಅಂದ್ಲು. +“ಏಯ್ ನೋಡ್ಲಿ ತಗೋ, ಎಲ್ರೂ ಅಂಗೆ ತಾನೆ ವೋಗೋದು, ಅದರಲ್ಲಿ ಏನೈತೆ” ಪಾರೂಗೆ ಇಟ್ಟುಂಡು ಮಂಗಿದ್ರೆ ಸಾಕಾಗಿತ್ತು. ಆದ್ರೆ ವಿಮಲಿ ಅವ್ವನ್ನ ಅಟ್ಸುಲ್ಬದಲ್ಲಿ ಬಿಟ್ಟಾಳೆಯೆ, +” ಅಂಗಲ್ಲ ಕನವ್ವ, ಯ್ಯಾವದೊದೊ ಹೊತ್ತಲ್ಲಿ ವೊರಿಕೆ ವೋದ್ರೆ ಏನ್ಯೋನೊ ಆಗುತ್ತೆ ಅಂತ ಅವರು ಯೋಳಿದ್ರಲ್ಲವ್ವ, ಅದೂ ನಿಜಾನೆ ತಾನೆ,ಕತ್ಲಲಿ ಅಜ್ಜಿ ಅಂಗೆ ಕೆರೆಕಡೀಕೆ ವೋಗೋವಾಗ್ಲೆ ಅಲ್ವಾ ಕಾಲ್ಮೂರ್ಕಂಡು ನಳ್ಳಿ ನಳ್ಳಿ ಸತ್ತಿದ್ದು, ನಿಂಗೂ ಅಂಗೆ ಒಂದಿನಾ ಆದ್ರೆ ನನ್ನ ಗತಿ ಏನವ್ವ” ಅವ್ವನ್ನ ಹೆದ್ರಿಸೋಕೆ ನೋಡಿದ್ಲು. +“ಅಯ್ಯೊ ಸಾಯ್ಲೇ ಬೇಕು ಅಂತ ಅಣೆಲೀ ಬರದಿದ್ರೆ ಅಂಗೆ ಸಾಯ್ತೀವಿ ತಗೋ, ಕೆರೆಕಡಿಕೇ ವೋದಾಗ್ಲೆ ಸಾಯಬೇಕು ಅಂತಿದ್ರೆ ಸಾಯೋಣ ತಗೋ” ಉದಾಸವಾಗಿ ಎಳ್ತಾ ಒಲೆ ಮೇಲೆ ಕುದಿ ಉಯ್ದಿದ್ದ ಮುದ್ದೆನಾ ಕೋಲಿಂದ ತಿರುವಿ ಒಂದಿಷ್ಟು ನೀರಾಕಿ ಪಾತ್ರೆನಾ ಮುಚ್ಚಿ ಒಲೆ ಉರಿನಾ ತಗ್ಗಿಸಿ ವಿಮಲಿಯತ್ತ ತಿರುಗಿ ಪಾರು” ನೋಡವ್ವ ವಿಮಲಿ ಅದೆಲ್ಲ ನಮಗ್ಯಾಕೆ ಯೋಳು. ಇರೋರು ನಾವಿಬ್ಬರೂ, ನಮಗ್ಯಾಕೆ ಕಕ್ಕಸದ್ಮನೆ, ಕಟ್ಟಿಸೊಕೆ ದುಡೈತಾ, ಜಾಗಾ ಐತಾ, ಸುಮ್ಕಿದ್ದು ಬಿಡು. ಇವತ್ತೋ ನಾಳೆಕೋ ನೀನು ಬ್ಯಾರೆ ಮನಿಗೋಗೋಳೊ. ಅಲ್ಲಿ ಕಕ್ಸದ್ಮನೆ ಇದ್ರೆ ಆಯ್ತಲ್ಲವಾ” ಅಂತ ವಿಮಲಿ ಆಸೆಗೆ ತಣ್ಣಿರೆರಚಿ ಆ ವಿಷಯಕ್ಕೆ ಮಂಗಳ ಆಡಿ ಬಿಟ್ಟಳು. +ವಿಮಲಿ ಮಾತ್ರ ಸುಮ್ನೆ ಕುಂತ್ಕಳ್ಳಲಿಲ್ಲ. ಏನಾದ್ರೂ ಮಾಡ್ಲೆಬೇಕು ಅಂತ ಆವತ್ತು ಇಸ್ಕೋಲಿಗೆ ಬಂದಿದ್ದ ಸಾಹೇಬ್ರೆನ್ನೇ ಮನೆಗೆ ಕರ್ಕೊಂಡು ಬಂದು ಬಿಟ್ಟಳು. ನರ್ಸಮ್ಮನೂ, ಪಿಡಿಒನೂ ತಮ್ಮನೆಗಂಟಾ ಬಂದಿದ್ದನ್ನ ನೋಡಿ ಪಾರು ಗಾಭರಿಯಾದ್ಲು. “ಏನೇ ವಿಮಲಿ ಅವರನ್ಯಾಕೆ ನಮ್ಮಟ್ಟಿಗೆ ಕರ್ಕೊಂಡು ಬಂದಿದೀಯಾ, ಅವ್ರನಾ ಕೂರ್ಸೋಕೂ ಒಂದ್ಕುರ್ಚಿ ಇಲ್ಲಾ” ಮಗಳ ಕಿವಿಲಿ ಪಿಸುಗುಟ್ತಾನೇ ಸರ್ರನೇ ಒಂದು ಚಾಪೆ ಹಾಕಿ ” ಬನ್ನಿ ಬಡವ್ರ ಮನೆ, ನಮ್ಮನೆನಾ ಉಡ್ಕೊಂಡು ಬಂದು ಬುಟ್ಟಿದ್ದೀರಾ’ ಸಂಕೊಚಿಸುತ್ತ ಒಳಿಕೆ ಕರ್ದಲು ಪಾರು. +” ನೀನೇ ಹೊರಗೆ ಬಾ ಪಾರ್ವತಮ್ಮ” ನರ್ಸಮ್ಮ ಹೇಳಿದಾಗ ಸೆರ್ಗು ಹೊದ್ಕೊಳ್ತಾ ಬಂದ ಪಾರು ಬಾಗಿಲ ಹತ್ತಿರಾನೇ ನಿಂತ್ಕೊಂಡಳು.ಅವರು ಬಂದಿರಾದ್ಯಾಕೆ ಅಂತ ಗೊತ್ಮಾಡ್ಕಂಡಿದ್ದ ಪಾರು ಮಗಳ್ನ ಮನಸ್ನಲ್ಲೇ ಬೈಯ್ದು ಕೊಳ್ತಾ ಅವರ ಕಡೆನೇ ನೋಡ್ತಾ ನಿಂತು ಬಿಟ್ಟಳು. +“ಏನಮ್ಮ ನಿನ್ನ ಮಗಳಿಗೆ ಇರೋ ಬುದ್ದಿ ನಿನಿಗಿಲ್ವಲ್ಲ, ನಮ್ಮನ್ನ ಮನೆವರೆಗೂ ಬರೋ ಹಂಗೆ ಮಾಡಿ ಬಿಟ್ಯಲ್ಲ, ನೋಡು ಪಿಡಿಒ ಸಾಹೇಬ್ರು ಏನೋ ಮಾತಾಡ್ತರಂತೆ ನೋಡು” ನರ್ಸಮ್ಮ ಹೇಳಿದಾಗ, +“ನನ್ನತ್ರ ಏನ್ ಏಳ್ತರೇ ಅವ್ವರೇ, ನಾನೋ ಅಳ್ಲಿ ಮುಕ್ಕ, ಇನ್ನನಮ್ಮ ವಿಮಲಿಗೆ ಏನೂ ಗೊತ್ತಾಗಕಿಲ್ಲ, ನಿಮ್ಮನ್ನ ಕರ್ಕೊಂಡು ಬಂದು ಬುಟವ್ಳೆ” ಸಂಕೋಚಿಸುತ್ತಾ ಹೇಳಿದಳು. +ಆಗ ಪಿಡಿಒ ಸಾಹೇಬ್ರು” ನೋಡಮ್ಮ ಪಾರ್ವತಮ್ಮ, ಈಗಾ ಶೌಚಾಲಯ ಕಟ್ಟಿಸೋದು ಕಡ್ಡಾಯ ಕಣಮ್ಮ, ಬಯಲು ಶೌಚ ಎಷ್ಟು ಅಪಾಯ ಅಂತ ಗೊತ್ತಲ್ವಾ, ಅದಕ್ಕೆ ಸರ್ಕಾರ ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಕಟ್ಟಿಸ ಬೇಕು ಅಂತ ಕಾನೂನು ಮಾಡಿದೆ, ಹಾಗಾಗಿ ನೀವು ಶೌಚಾಲಯ ಕಟ್ಟಿಸಲೇ ಬೇಕು” ಅಂತ ತಾಕೀತು ಮಾಡಿದ್ರು. +“ಅಯ್ಯೋ ಸಾಹೇಬ್ರೇ,ನಮಗ್ಯಾಕೆ ಅದೆಲ್ಲ. ನಾವು ಇರೋರೆ ಇಬ್ರು, ನಂತಾವ ಜಾಗನೂ ಇಲ್ಲಾ, ದುಡ್ಡೂ ಇಲ್ಲಾ’ ಆಗೋದೇ ಇಲ್ಲಾ ಅಂತ ರಾಗ ಎಳೆದಳು. +“ಹಂಗೆಲ್ಲ ಹೇಳೋ ಹಾಗೇ ಇಲ್ಲಾ ಪಾರ್ವತಮ್ಮ, ದುಡ್ಡನ್ನ ಸರ್ಕಾರವೇ ಕೊಡುತ್ತೆ, ಜಾಗ ಮಾತ್ರ ನೀವು ಮಾಡಿಕೊಳ್ಳಲೇಬೇಕು.” ಅಂತ ಪಿಡಿಒ ಸಾಹೇಬ್ರು ಹೇಳಿದಾಗ ಪಾರು ತಬ್ಬಿಬ್ಬದಾಳು. +ಆಗ ನರ್ಸಮ್ಮ” ನೋಡು ಪಾರು, ಸರ್ಕಾರ ಶೌಚಾಲಯ ಕಟ್ಟಿಸೊಕೆ ಹಣ ಕೊಡುತ್ತೆ, ನಿಮ್ಮನೆ ಹಿತ್ತಲಿನಲ್ಲೊ, ಕೊಟ್ಟಿಗೆಯಲ್ಲೊ ಶೌಚಾಲಯ ಕಟ್ಟಿಸೋಕೆ ಸಿದ್ದತೆ ಮಾಡ್ಕೊ, ಗಂಡಸರಿಲ್ಲದ ಮನೆ ನೋಡು ನಿಮ್ಗೆ ಶೌಚಾಲಯದ ಅವಶ್ಯಕತೆ ಹೆಚ್ಚು ಇರೋದು,ಮಗಳು ಬೆಳಿತಾ ಇದ್ದಾಳೆ,ಅವಳು ಸುರಕ್ಷಿತವಾಗಿರಬೇಕೊ ಬೇಡವೊ, ವಯಸ್ಸಿಗೆ ಬಂದ ಮಗಳು ಬಯಲಿಗೆ ಹೋಗ್ತಾ ಇದ್ರೆ ಏನು ಚಂದ ಹೇಳು, ಮೊದ್ಲೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ, ನೀನೆ ಟಿವಿಲಿ ನೋಡ್ತಿಯಲ್ಲಾ, ಯಾವಾಗ್ಲೂ ನೀನು ಅವಳ ಜೊತೆ ಹೋಗೋಕೆ ಆಗುತ್ತಾ ಹೇಳು. ನಿನ್ನ ಒಳ್ಳೆಯದಕ್ಕೆ ನಾವು ಹೇಳೋದು.ಮೊದ್ಲು ಅಂಗನವಾಡಿಲಿ ಅರ್ಜಿ ಕೊಡು” ಅಂತ ಹೇಳಿ ವಿಮಲಿ ಕಡೆ ತಿರುಗಿ ” ವಿಮಲಿ ನೀನೇನು ಚಿಂತೆ ಮಾಡಬೇಡಾ, ನಿಮ್ಮವ್ವ ಶೌಚಾಲಯ ಕಟ್ಟಿಸೋಕೆ ಒಪ್ಕೊಂಡಿದ್ದಾಳೆ” ಅಂತ ಹೇಳಿ ನಕ್ಕಾಗ ವಿಮಲಿ ಖುಷಿಯಿಂದ ಮುಖ ಅರಳಿಸಿ ನಕ್ಕಳು. +ಇಷ್ಟೆಲ್ಲ ಹೋರಾಟ ಮಾಡಿ ವಿಮಲಿ ತನ್ನ ಮನೆಯಲ್ಲೂ ಶೌಚಾಲಯ ಕಟ್ಟೊ ಹಾಗೇ ಮಾಡಿ ಬಿಟ್ಟಳು. ಅರ್ಜಿ ಹಾಕಿದ ಮೇಲೆ ಸರ್ಕಾರ ಹಣನೂ ಬೇಗನೇ ಸ್ಯಾಂಕ್ಷನ್ ಮಾಡ್ತು.ಅದ್ರೆ ಆ ಹಣ ಎಲ್ಲಿ ಸಾಲುತ್ತೆ. ಹಂಗಾಗಿ ಪಾರು,ಮಗಳು ಹೆಣ್ಣಾದ್ರೆ ಆರೈಕೆ, ಆರತಿಗೆ ಇರಲಿ ಅಂತ ಇಟ್ಟಕೊಂಡಿದ್ದ ಹಣನೇ ಬಳಸಿಕೊಂಡು ಮಗಳ ಬಯಕೆ ತೀರಿಸಿದಳು. ಮಗಳ ಹಟದ ಮುಂದೆ ಅವಳು ಸೋಲಪ್ಪಿ ಕೊಂಡಿದ್ದಳು. +ತಮ್ಮ ಮನೆಗೆ ಶೌಚಾಲಯ ಬಂದ ಮೇಲೆ ವಿಮಲಗೆ ಬೆಳಕು ಹರಿಯೊ ಮುಂಚೆನೇ ಚಂಬು ಹಿಡ್ಕೊಂಡು ಜೀವ ಕೈಲಿಟ್ಟುಕೊಂಡು ಬಯಲಿಗೆ ಹೋಗೋದು ತಪ್ಪಿತ್ತು. ಹೆಣ್ಣು ಮಕ್ಕಳು ಹೋಗೋದನ್ನೇ ಕಾಯ್ತ ನಿಂತಿರುತ್ತಿದ್ದ ಪೋಲಿ ಹುಡುಗ್ರ ಪೋಳ್ಳು ಪೋಳ್ಳು ಮಾತುಗಳನ್ನು ಕೇಳಿ ಅಸಹ್ಯ ಪಟ್ಟು ಕೊಳ್ಳೊದೂ ತಪ್ಪಿತು. +ಈಗಾ ವಿಮಲಿ ಮದುವೆ ವಯಸ್ಸಿಗೆ ಬಂದಿದ್ದಾಳೆ. ಎಸ್ಸಸ್ಸಲ್ಸಿ ಒಂದೇ ಸಲಕ್ಕೆ ಮುಗ್ಸಿದ್ರೂ ಕಾಲೇಜಿಗೆ ಕಳಿಸೊ ಆರ್ಥಿಕ ಚೈತನ್ಯ ಇಲ್ಲದೆ ಮಗಳನ್ನ ಪಾರೂ ಮನೆಯಲಿಯೆ ಇಟ್ಟುಕೊಂಡಿದ್ದಳು. ವಿಮಲಿ ಮನೆ ಕೆಲ್ಸ ಮಾಡ್ಕೊಂಡು, ಅವ್ವನ ಜೊತೆ ಇಟ್ಟಿಗೆ ಹೊರೋಕೆ ಹೋಗಿ ಸಂಪಾದನೆನೂ ಮಾಡ್ತ ಇದ್ದಾಳೆ. ಇಬ್ಬರೂ ದುಡಿದು ಒಂದಿಷ್ಟು ಕಾಸು ಮಾಡಿಕೊಂಡಿದ್ದಾರೆ. ಯಾವುದಾದರೂ ಒಳ್ಳೆ ಸಂಬಂಧ ಬಂದ್ರೆ ಮದ್ವೆ ಮಾಡೋ ಆಲೋಚನೆ ಪಾರುದು. ತಾನು ಮದ್ವೆ ಮಾಡಿಕೊಂಡು ಹೋಗಿ ಬಿಟ್ರೆ ಅವ್ವನ್ನ ಯಾರು ನೋಡ್ಕೋತ್ತಾರೆ ಅನ್ನೊ ಚಿಂತೆ ವಿಮಲಿಗೆ. ಅವಳ ಚಿಂತೆ ಹೆಚ್ಚಾಗೊ ಹಾಗೆ ಒಂದಿನಾ ಗಂಡಿನಾ ಕಡೆಯವ್ರು ಬಂದೆ ಬಿಟ್ರು. ಅವರ ಆಸ್ತಿ, ದೊಡ್ಡಮನೆ ನೋಡಿದ ಮೇಲೆ ಅವರು ತಮ್ಮ ವಿಮಲಿಯನ್ನ ಒಪ್ಪಿಕೊಂಡು ಬಿಟ್ರೆ ತನ್ನ ಪುಣ್ಯ ಅಂತ ಭಾವಿಸಿದ್ದ ಪಾರು ಅವರು ಒಪ್ಕಂಡ ಕೂಡಲೆ ಮದ್ವೆಗೆ ದಿನ ಗೊತ್ಮಾಡೇ ಬಿಟ್ಟಳು.ನನಗೆ ಈಗ್ಲೆ ಮದ್ವೆ ಬೇಡಾ ಅಂತ ಕೊಸರಾಡ್ತ ಇದ್ದ ಮಗಳಿಗೆ ಪಾರು”ಸುಮ್ಕರಮ್ಮಿ, ಅವ್ರು ನಿನ್ನೊಪ್ಕಂಡಿರಾದೇ ನಿನ್ಪುಣ್ಯ, ಅಂತದ್ರಲ್ಲಿ ತರ್ಲೆ ಮಾಡ್ಬೆಡಾ, ಆಸ್ತಿ ಐತೇ, ಮನೆ ಐತೆ, ಗಂಡೂ ವೈನಾಗಿದ್ದಾನೆ,ಗೇಮೇನೂ ವೈನಾಗಿಯೆ ಮಾಡ್ತನಂತೆ, ಇನ್ನೆನ್ಬೇಕು ನಿಂಗೆ. ದುಸರಾ ಮಾತಾಡಬೇಡ” ಅಂತ ಮಗಳನ್ನ ಅನುನಯಿಸಿ ಒಪ್ಪಿಸಲು ನೋಡಿದಳು. +” ಅಲ್ಲ ಕನವ್ವ, ನಾನು ಮದ್ವೆ ಮಾಡ್ಕಂಡೋದಮ್ಯಾಕೆ ನೀನೊಬ್ಳೆ ಆಗ್ತಿಯಲ್ಲವ್ವ, ನಿಂಗೆ ನೀರು ನಿಡಿ ಕೊಡವ್ರ್ಯಾರು’ ಆತಂಕದಿಂದ ಕೇಳಿದಳು. +” ಅಯ್ಯೋ ಮೂಳಾ, ನಂಗೇನು ಕೈಕಾಲು ಬಿದ್ದೋಗವಾ, ನಾನಿನ್ನೂ ಗಟ್ಟಿಯಾಗಿದ್ದಿನಿ, ಅಂತ ಕಾಲಕ್ಕೆ ಅಲ್ಲಿಗೆ ಬತ್ತಿನಿ ತಗೋ, ಆ ಮನೇಲಿ ಆಟೋಂದು ಜನ ಮದ್ಯೆ ನನೋಬ್ಳು ಎಚ್ಚಾಯ್ತಿನಾ” ಮಗಳ ತಲೆ ಸವರುತ್ತಾ ಹೇಳಿದಳು. +“ಮತ್ತೆ, ಮತ್ತೇ” ಮಗ್ಳು ರಾಗ ಎಳೆಯೊದನ್ನ ಕಂಡು ಪಾರು ಸಿಡುಕಿ” ಮತ್ತೇನೀ ನಿಂದು ಗುನುಗು” ಅಂದಾಗ ” ಅಲ್ಲ ಕನವ್ವ, ಅವ್ರ ಮನೆಯ್ಯಾಗೆ ಕಕ್ಸದ್ಮನೆ ಐತಾ ಅಂತ ತಿಳ್ಕೊ, ಇಲ್ಲ ಅಂದ್ರೆ ನಾನು ಲಗ್ನನೇ ಆಗಾಕಿಲ್ಲ” ಮುಖ ದಮ್ಮಿಸಿಕೊಂಡು ಹೇಳಿದಾಗ ಪಾರೊ ಗೊಳ್ಳನೇ ನಕ್ಕಳು. +“ನಿಂದೋಳ್ಳೆ ಕಕ್ಸದ್ಮನೆ ಕತೆ ಆಯ್ತಲ್ಲೆ. ಅಲ್ಲ ಕಣೆ ವಿಮಲಿ. ಅಟದೋಡ್ಮನೆಯಾಗೇ ಅದಿರಾಕಿಲ್ವೇನೆ,ಇರ್ತೈತೇ ಬುಡು” ಆ ವಿಷಯಕ್ಕೆ ಇತಿಶ್ರಿ ಹಾಡೋಕೆ ನೋಡಿದಳು. +ಆದರೆ ವಿಮಲಿ ಅಷ್ಟು ಸುಲಭವಾಗಿ ಒಪ್ಕಂಡಳೇ. +“ಇರ್ತೈತೆ ಬುಡು, ಪರ್ತೈತೆ ಬುಡು ಅಂತ ಸುಮ್ಕಿದ್ದುಬಿಡು ನೀನು, ಗ್ಯಾರಂಟಿ ಐತಾ ಅಂತ ನೋಡ್ಕಂಡುಬಾ,ಇಲ್ಲ ಅವ್ರನ್ನೇ ಕೇಳಿ ತಿಳ್ಕಂಡು ನಂಗೆ ಏಳು” ಕೋಪದಿಂದ ಹೇಳಿದಳು. +” ಅಯ್ಯೋ,ನಿಮ್ಮನೆಲಿ ವೊಲ ಐತಾ,ಗದ್ದೆ ಏಷ್ಟೈತೆ ಅಂತ ಕೇಳಬೋದು, ಆದ್ರೆ ನಿಮ್ಮನ್ಯಾಗೆ ಕಕ್ಸದ್ಮನೆ ಐತಾ ಅಂತ ಕೇಳಾಕಾಯ್ತದೇನೇ ವಿಮಲಿ, ಅಂಗೆಲ್ಲ ಕೇಳುದ್ರೆ +ನನ್ನ ಏನಂದ್ಕತರೇ ಯೋಳು,ಪಸಂದಾಗಿರೊ ವೆಂಟಸ್ತನ ಬಂದೈತೆ. ದುಡ್ಡು ಪಡ್ಡು, ಚಿನ್ನ ಗಿನ್ನ ಯ್ಯಾನೂ ಕೇಳ್ದೆ ಸುಮ್ಕೆ ಒಪ್ಕಂಡಿದರೆ, ನೀನು ಸುಮ್ಕಿದ್ದುಬುಡು, ಮದುವೆ ವೈನಾಗಿ ನಡ್ದು ಬುಟ್ರೆ ಆ ಬೀರಪ್ಪಂಗೆ ಕೋಳಿ ಕೋಡ್ತಿನಿ ಅಂತ ಅರ್ಕೆ ಮಾಡ್ಕಂಡಿದಿನಿ” ಅಂತ ತನ್ನದೆ ಚಿಂತೆಯಲ್ಲಿ ಮುಳಗಿಹೋದಳು. +ಇತ್ತ ವಿಮಲಿಯ ಚಡಪಡಿಕೆ ಜಾಸ್ತಿ ಆಗ್ತನೇ ಹೋಯ್ತು. ತಾನು ಲಗ್ನ ಆಗಿ ಹೋಗೋ ಮನೆಲೀ ಶೌಚಾಲಯ ಐತಾ ಇಲ್ವೊ, ಯಾರನ್ನ ಕೇಳೋದು, ಎಂಗೆ ಕೇಳೋದು ಅಂತ ಅಂದ್ಕೊಳ್ಳದ್ರಗೇ ದಿನಗ್ಳು ಕಳೆದೇ ಹೋದ್ವು. ಮದ್ವೆ ಸಂಭ್ರಮದಲ್ಲಿ ಆ ವಿಷಯಕ್ಕೆ ಹೆಚ್ಚು ಗಮನ ಕೊಡೋಕೆ ಆಗ್ಲೆ ಇಲ್ಲಾ. +ಪಾರೂ ಅರ್ಕೆ ಕಟ್ಕೊಂಡಿದ್ರೆಂದ್ಲೆನೋ ವಿಮಲಿ ಮದುವೆ ಯಾವ ಅಡ್ಡಿ ಅಗ್ದೆ ಸುಲಭವಾಗಿ ನಡ್ದು ಹೋಯ್ತು.ಮದುವೆಲಿ ವಿಮಲಿಗೆ ಅವಳ ಗಂಡನ ಮನೆಯವ್ರು ಕರಿಮಣಿ ಸರ ಹಾಕಿದ್ದು ವಿಶೇಷವಾಗಿತ್ತು.ಸಾಮಾನ್ಯವಾಗಿ ಹೆಣ್ಣಿನ ಕಡೆಯವ್ರೆ ಹೆಣ್ಣಿಗೆ ಇಷ್ಟು ತೊಲ ಬಂಗಾರ ಅಂತ ಹಾಕೋದು ಸಹಜವಾಗಿತ್ತು. ಆದ್ರೆ ಪಾರು ತನ್ನ ಬಡತನದಿಂದ ಮಗಳಿಗೆ ಕಿವಿಗೆ ವ್ಯಾಲೆ ಕೊಡದ್ರೊಳ್ಗೆ ಸುಸ್ತಾಗಿದ್ಳು. ಅಂತದ್ರಾಗೆ ಗಂಡನ್ಕಡೆಯವ್ರೆ ಮಾಂಗಲ್ಯ ಸರ ಹಾಕಿದ್ದು ಊರವ್ರ ಕಣ್ಣಲ್ಲಿ ಆಶ್ಚರ್ಯ ತರಿಸಿತ್ತು. ವಿಮಲಿ ವೊಳ್ಳೆ ಮನೆನೇ ಸೇರ್ಕಂಡ್ಳು ಅಂತ ಊರವ್ರೆಲ್ಲಾ ಕೊಂಡಾಡಿದ್ರು. +ಬಲಗಾಲಿಟ್ಟು ಅಕ್ಕಿ ವೊದ್ದು ಒಳಕ್ಬಂದ ವಿಮಲಿಗೆ ಅಲ್ಲಿವರೆಗೂ ಮರ್ತು ಹೋಗಿದ್ದ ವಿಸಯ ನೆಪ್ತಿಗೆ ಬಂದು ಎಂಗೆ ಕೇಳಾದು, ಯಾರನ್ನ ಕೇಳಾದು ಅಂತ ಗೊತ್ತಾಗ್ದೆ ಒಳ್ಗೋಳ್ಗೆ ಚಡಪಡಿಸಿದ್ಳು. ಅವ್ಳ ಚಡಪಡಿಕೆ ಕಂಡಾ ಅವ್ಳ ಹೊಸ ಗಂಡ ಬಸ್ವರಾಜ”ಯಾಕೆ ಏನಾಯ್ತೆ,ಏನಾದ್ರು ಬೇಕಾ” ಅಂತ ಕಿವಿಯಲ್ಲ ಪಿಸುಗುಟ್ಟಿದಾಗ” ಕಿವಿಕೆಂಪಾಗಿತ್ತು, “ಏನೂ ಇಲ್ಲಾ” ಅಂತ ತಲೆ ತಗ್ಗಿಸಿ ತಲೆಯಾಡಿಸಿದ್ದಳು ನಾಚಿಕೆಯಿಂದ. +ಕ್ವಾಣೆಯೋಳ್ಗೆ ಚಿಗವ್ವನ ಜೊತೆ ಮಂಗಿದ್ದ ವಿಮಲಿಯನ್ನು ಅವಳ ನಾದಿನಿ ಬೆಳಗ್ಗೆ ಅಷ್ಟೊತ್ತಿಗೆ ಎಬ್ಸಿ” ಅತ್ಗೆಮ್ಮಾ,ಎಲ್ರೂ ಏಳೋಕ್ಮುಂಚೆನೆ, ಕೆರೆಕಡಿಕೆ ವೋಗ್ಬಂದ್ಬಡೋಣ ಬನ್ನಿ” ಅಂತ ಕರೆದಾದ ಎದೆ ದಸ್ಸಕ್ಕೆಂದಿತ್ತು. ನಿದ್ದೆ ಮಂಪರಿನಲ್ಲಿಯೇ ಬೆಪ್ಪಾಗಿ ಏನು ಅಂತ ಕೇಳಿ ಮತ್ತೊಮ್ಮೆ ದೃಡಪಡಿಸಿಕೊಂಡಿದ್ದಳು.”ಬ್ಯಾಗ ಬನ್ನಿ ಅತ್ಗೆಮ್ಮಾ’ಅಂತ ಅವಳ ಕೈಹಿಡಿದು ಎಳ್ಕಂಡೇ ಹೊರಕ್ಕೆ ಬಂದಿದ್ದಳು. ಕಾಲಿಗೆ ಚಪ್ಪಲಿ ಮೆಟ್ಟಿಕೊಳ್ಳುತ್ತಾ, ತನಗಾದ ನಿರಾಶೆಯನ್ನೂ ಚಪ್ಪಲಿ ಜೊತೆ ಮೆಟ್ಟಿಕೊಳ್ಳುತ್ತಾ ನಾದಿನಿಜೊತೆ ತಂಬಿಗೆ ಹಿಡಿದು ಹೊರಟಾಗ ಅಳು ಉಕ್ಕಿ ಬಂದಿತ್ತು. ಮೊದಲ ದಿನವೇ ಅಸಮಾಧಾನದಿಂದ ಆರಂಭವಾಗಿತ್ತು. “ಅಲ್ಲಾ, ಶಿವಮ್ಮಾ, ಅಷ್ಟು ದೊಡ್ಮನೆ ಕಟ್ಸಿದ್ದಿರಾ, ಒಂದು ಕಕ್ಸದ್ಮನೆ ಕಟ್ಟಲ್ವಾ”ದುಗಡದಿಂದಲೇ ಕೇಳಿದಳು. +” ಇಲ್ಲ ಅತ್ಗೆಮ್ಮಾ, ನಮ್ಮನೆಯ್ಯಾಗೆ ಯಾರ್ಗೂ ಅದು ಬೇಕೇನ್ಸಿಲ್ಲ, ಎಲ್ರೂ ಬಯಲ್ಗೆ ವೋಗಾದು” ಅದೇನು ಅಂತ ದೊಡ್ಡ ವಿಸಯ ಅಲ್ಲ ಅನ್ನೊ ಅಂಗೆ ಹೇಳಿಬಿಟ್ಟಾಗ ವಿಮಲಿ ಸುಮ್ಮನಾಗ್ಲೆ ಬೇಕಾಯ್ತು. ಆದ್ರೆ ಗಂಡಂಗೆ ಹೇಳಿ ಕಕ್ಸದ್ಮನೆ ಕಟ್ಟಿಸ್ಬೇಕು ಅಂತ ಅಂದು ಕೊಂಡ್ಮೇಲೆನೆ ಸಮಾಧಾನದ ಉಸಿರು ಬಿಟ್ಟಿದ್ದು. +ಅವತ್ತೇ ಬೀಗ್ರೂಟನೂ ಇಟ್ಕಂಡಿದ್ದರಿಂದ ಪಾರು ನೆಂಟರಿಷ್ಟರು, ಊರವ್ರೊಂದಿಗೆ ಬಂದು ಊಟಾ ಮುಗ್ಸಕ್ಕಂಡು ಅಳಿಯನ್ನು ಮಗಳನ್ನು ಕರ್ಕಂಡು ವೊಂಟು ಬಿಟ್ಳು. ರಾತ್ರಿಕೇ ಪ್ರಸ್ಥನೂ ಮಡ್ಗದ್ಳು. ಇರೂ ಸಣ್ಣ ಮನೇಲೆ ಎಲ್ಲಾ ತಯಾರಿ ಮಾಡಿ ಮಗಳ್ನೂ, ಅಳಿಮಯ್ಯನ್ನೂ ಒಳಿಕೆ ಬಿಟ್ಟು ತಾನು ಪಕ್ಕದ್ಮನಿಗೆ ಮಲಗಾಕೆ ವೋಗಿಬಿಟ್ಟಳು.ರಾತ್ರಿ ಗಂಡ ಪಕ್ಕಕ್ಕೆ ಬಂದ ಕೂಡ್ಲೆ ತನ್ನ ತಲೆಲಿ ಹುಳದಂತೆ ಕೊರೆಯುತ್ತಿದ್ದ ವಿಸ್ಯವನ್ನ ಕೇಳ್ಬೇಕು ಅಂತ ಅಂದ್ಕತಾ ಇರ್ವಾಗ್ಲೆ ಬಸ್ವರಾಜ ಅತುರದಿಂದ ಅವಳನ್ನ ತಬ್ಬಿ ಹಾಸ್ಗೆ ಮ್ಯಾಲೆ ಉರಳಿಸಿಕೊಂಡಾಗ ಅವಳಿಗೆ ಹೇಳೋಕೆ ಆಗ್ಲಿಲ್ಲ. +ಬೆಳಗ್ಗೆ ಮನ್ಯಲ್ಲೆ ಕಕ್ಸದ್ಮನೆ ಇದ್ರೂ ಬಸ್ವರಾಜ ಬಯ್ಲಿಗೊಗಿ ಬಂದಿದ್ದನ್ನ ಕಂಡು ವಿಮಲಿ” ಮನ್ಯಾಗೆ ಕಕ್ಸದ್ಮನೆ ಇದ್ರೂ ಅದ್ಯಾಕೆ ಹೊರಕ್ಕೊಗಿದ್ರಿ’ ಆಕ್ಷೇಪಿಸಿದ್ಲು. “ಅಯ್ಯೊ ನಂಗೆ ಅದೆಲ್ಲಾ ಸರ್ಯೊಗಕಿಲ್ಲ, ನಂಗೆ ಬಯಲಿಗೊಗೆದೆ ಪಾಟಾಗೈತೆ” ಅಂದು ಬಿಟ್ಟಾಗ ವಿಮಲಿಗೆ ಆಘಾತವಾಯ್ತು. ತನಗೇ ಅಭ್ಯಾಸ ಇಲ್ಲ ಅಂದ ಮೇಲೆ ಗಂಡ ತನಗಾಗಿ ಕಕ್ಸದ್ಮನೆ ಕಟ್ಟಿಸಿ ಕೊಡ್ತಾನಾ ಅನ್ನೊ ಆತಂಕ ಕಾಡಿದ್ರೂ, ಪ್ರಯತ್ನ ಬಿಡಬಾರದು ಅಂತ” ನೋಡಿ ನಾನು ಇದನ್ನ ಕಟ್ಸಿಕೊಳ್ಳಾಕೆ ಅದೆಷ್ಟು ಹಟ ಮಾಡ್ದೆ ಗೊತ್ತಾ, ಅತ್ತು ಕರ್ದು ಅವ್ವನ್ನ ಒಪ್ಸಿ ಇದನ್ನ ಕಟ್ಸೊ ಅಂಗೆ ಮಾಡ್ದೆ. ಆಗ್ಲಿಂದ ನಂಗೆ ಹೊರ್ಕೊಗೊ ಅಭ್ಯಾಸನೆ ತಪ್ಪಿ ಹೋಗೈತೆ. ನಿಮ್ಮನೇಲೂ ಕಟ್ಟಸ್ರಿ” ಅಂತ ಕೇಳಿದ್ಳು” ಹೊಸ ಹೆಂಡ್ತಿಗೆ ಇಲ್ಲವೆನ್ನಲಾರದೆ ಹ್ಹೂಗುಟ್ಟಿದ್ದ. +ವಿಮಲಿ ಗಂಡನ್ಮನೆಗೆ ಬಂದು ಶಾನೆ ದಿನವಾದ್ರೂ ಬಯಲಿಗೊಗಾದು ತಪ್ಪಲಿಲ್ಲ. ಕಿರ್ಕಿರಿಯಿಂದಲೆ ದಿನ ತಳ್ತಿದ್ಳು. ತುಂಬಿದ ಮನೆಲಿ ಗಂಡಾ ಸಿಕ್ತ ಇದ್ದದ್ದೆ ರಾತ್ರಿಲಿ. ಹೊರ್ಗೆ ದುಡ್ದು ಹಣ್ಣಾಗಿ ಬರ್ತಿದ್ದ ಬಸ್ವರಾಜ ಕೈಗೆ ಹೆಂಡ್ತಿ ಸಿಕ್ಕಿದ ಕೂಡಲೆ ಅವಳ ಸಾನಿದ್ಯ ಬಿಟ್ರೆ ಬೇರೇನು ಬೇಕಾಕ್ತ ಇರ್ಲಿಲ್ಲ. ಸುಖದ ಕ್ಷಣಗಳು ಮುಗಿದ ಕೂಡಲೆ ಮಗ್ಗುಲಾಗಿ ಗೊರಕೆ ಹೊಡೆಯೋಕೆ ಶುರುಹಚ್ಕತಿದ್ದ. ಆಗೆಲ್ಲ ವಿಮಲಿ ಅಸಹಾಯಕತೆಯಿಂದ ಕನಲಿಹೋಗುತ್ತಿದ್ದಳು.ಆದರೂ ಪ್ರಯತ್ನ ಕೈಬಿಟ್ಟಿರ್ಲಿಲ್ಲ.ಸರಿಯಾದ ಸಮಯ ನೋಡಿ ತನ್ನ ಬೇಡಿಕೆ ಇಡತೊಡಗಿದ್ಳು. ಅವ್ಳ ಕಾಟ ತಡಿಲಾರದೆ ಒಂದಿನ ಅಪ್ಪನ್ಮುಂದೆ ವಿಷಯ ಇಟ್ಟಾಗ ಮನೆಯಲ್ಲಿ ದೊಡ್ಡ ಹಗರಣವೆ ನಡೆದು ಹೋಯ್ತು.”ನೆನ್ನೆ ಮೊನ್ನೆ ಬಂದವಳಿಗಾಗಿ ಸಂಡಾಸು ಕಟ್ಟಿಸು ಅಂತಿದಿಯಲ್ಲೊ, ಅದಿಲ್ಲದೆ ನಾವೆಲ್ಲ ಇಲ್ವಾ, ಮನೇಲಿ ಇಷ್ಟೊಂದು ಜನ್ರಿಗೆ ಬೇಡದೆ ಇರೋದು ಅವಳಿಗೆ ಬೇಕಾ. ಅವ್ಳೇನು ಮಾರಾಜನ ಮಗ್ಳ, ವೋಗೋಗು, ಮತ್ತೆ ಈ ಇಚಾರ ಈ ಮನ್ಯಾಗೆ ಎತ್ಬಾರ್ದು. ಮನ್ಯಾಗೆ ದೇವ್ರು ದಿಂಡ್ರು ಇಟ್ಕಂಡು, ಮನೆ ವಳ್ಗೆ ಸಂಡಾಸ್ಕಟ್ಬೇಕಂತೆ, ಮಡಿ ಮೈಲ್ಗೆ ಒಂದೂ ಇಲ್ಲಾ, ಕೇಮೆ ನೋಡ್ಕೊ ವೋಗು” ಅಂತ ಅಪ್ಪಯ್ಯಾ ಹೇಳಿಬಿಟ್ಟಾಗ ಬಸ್ವರಾಜ ತೊದಲ್ತಾ” ಅದು ಅದು….ಅಲ್ಲಪ್ಪ, ಅವಳ ಮನೆಲೂ ಸಂಡಾಸು ಐತೆಲ್ಲ, ಅದಕ್ಕೆ ಇಲ್ಲೂ ಕಟ್ಸನ ಅಂತಿದ್ದಾಳೆ, ಈಗಾ ಎಲ್ರೂ ಮನೆಯಾಗೂ ಇರಬೇಕಂತಲ್ಲಪ್ಪ, ನಮ್ಮನೆಯ್ಯಾಗೂ ಎಣ್ಣು ಐಕ್ಳಿದಾವೆ, ವೊತ್ತಿಲ್ದೊತ್ನಾಗೆ ವೊರಿಕ್ಯಾಕೆ ವೋಗೋದು, ಅದರಿಂದ ನಮ್ಗೆ ತೊಂದ್ರೆ ಅಂತವ್ಳೆ ವಿಮಲಿ” ಮೆಲ್ಲಗೆ ಅಪ್ಪಂಗೆ ಹೆಳ್ದ. +ಅದಕ್ಕೆ ಅವನವ್ವ” ಅಲ್ಲ ಕಣ್ಲ ಬಸ್ರಜ, ಈಗಂಟಾ ನಾವೆಲ್ಲ ಬಯ್ಲಿಗೆ ವೋಯ್ತ ಇಲ್ವಾ, ನಮ್ಗೆಲ್ಲಾ ಏನಾಗ್ಬುಟೈತೆ, ಅದಲ್ದೆ ನಿಂದು ಸೇರ್ಸಿ ಈ ವರ್ಸ ಮೂರ್ಮದ್ವೆ ಮಾಡೀವಿ, ಅದೆಲ್ಲ ಕಟ್ಟಾಕೆ ದುಡೈತೆನ್ಲಾ,ಅದೆಲ್ಲಾ ನಮಗ್ಯಾಕೆ ಯೋಳು, ನಮ್ದೇವ್ರೆಗೆಲ್ಲಾ ಅದು ಸರಿ ಬರಾಕಿಲ್ಲ, ಸುಮ್ಕಿದ್ದ ಬುಡು ಮಗಾ” ಅಂತ ಅಂದು ಬಿಟ್ಟಾಗ ಬಸ್ರಾಜ ನಿರುತ್ತರನಾದ.ಅವ್ನಿಗೂ ಅದು ಬೇಕೆ ಬೇಕು ಅಂತೇನು ಅನ್ನಿಸಿರ್ಲಿಲ್ಲ. ಹೊಸ ಹೆಂಡ್ತಿ ಹೇಳಿದ್ಲಲ್ಲ ಅಂತ ಅಪ್ಪ ಅವ್ವನ್ನ ಕೇಳಿದ್ನೆ ವಿನಃ ಅದೇನು ಅಂತ ಮಹತ್ವದ ವಿಚಾರ ಅಂತ ಅವನಿಗೂ ಅನ್ನಿಸದೆ ” ಹೋಗ್ಲಿ ಬಿಡವ್ವ ನಿಮ್ಗೆಲ್ಲ ಬ್ಯಾಡ ಅನ್ಸುದ್ರೆ ಬ್ಯಾಡ ಬುಡು” ಅಂತೇಳಿ ಹೊಂಟೆ ಬಿಟ್ಟಾಗ ಒಳಗಿಂದ್ಲೆ ಎಲ್ಲ ಕೇಳ್ಸಿಕೊಳ್ಳುತ್ತಿದ್ದ ವಿಮಲಿ ನಿರಾಸೆಯಿಂದ ಪೆಚ್ಚಾದ್ಲು. ಒಳಗಿದ್ದವ್ರೆಲ್ಲಾ ಒಬ್ಬರಮುಖ ಒಬ್ಬರು ನೋಡ್ಕಂಡು ಕಿಸಿಕಿಸಿ ನಕ್ಕಾಗ ವಿಮಿಲಿಗೆ ಅವಮಾನವಾದಂತಾಗಿತ್ತು.ಇವರನ್ನೇಲ್ಲ ಬದ್ಲಾಯ್ಸೊಕೆ ತನ್ನಿಂದ ಸಾಧ್ಯಾನಾ ಅಂತ ನಿಟ್ಟುಸಿರು ಬಿಟ್ಟಿದ್ದಳು. +ಸಮಯ ಸಿಕ್ದಾಗಲೆಲ್ಲಾ ಮನೆ ಹೆಂಗ್ಸರಿಗೆಲ್ಲಾ ತಿಳುವಳಿಕೆ ಕೊಡೋಕೆ ಶುರು ಮಾಡಿದ್ದಳು.ಶೌಚಲಯದ ಅವಶ್ಯಕತೆ, ಅದರ ಅನಿವಾರ್ಯತೆ ಬಗ್ಗೆ ಹೇಳುವಾಗ ಅವರಿಗೂ ಅದು ಸರಿ ಅನ್ನಿಸುತ್ತಿತ್ತು.ಅದ್ರೆ ಅವರಿಂದೇನು ಮಾಡಲಾದೀತು, ಮನೆ ಹಿರೀರನ್ನ ಒಪ್ಸದಾದ್ರೂ ಎಂಗೆ, ಅವರ್ಗೆ ಒಂದ್ಸಲ ಬ್ಯಾಡ ಅನ್ಸಿದನ್ನ ಮತ್ತೇ ಬೇಕು ಅನ್ನಿಸೊದು ಕಷ್ಟ ಅನ್ನೊ ಸತ್ಯ ವಿಮಲಿಗೂ ಅರ್ಥವಾಗಿತ್ತು. ಮದ್ವೆ ಮುಂಜಿ,ತಿಥಿ, ದೇವರು ದಿಂಡರು ಅಂತ ಎಷ್ಟು ಬೇಕಾದ್ರೂ ಖರ್ಚುಮಾಡೋ ಈ ಮನೆ ಮಂದಿಗೆ ಶೌಚಾಲಯಕ್ಕಾಗಿ ಖರ್ಚುಮಾಡಲು ಸಿದ್ದರಿಲ್ಲದಿರುವುದು, ಅದು ವ್ಯರ್ಥ ಖರ್ಚೆಂದು ಭಾವಿಸಿರುವ, ಮನೆಯಲ್ಲಿ ಶೌಚಾಲಯವೆಂದರೆ ಅಸಹ್ಯ ಅಂದುಕೊಂಡಿರುವ ಅವರನ್ನು ಬದಲಾಯಿಸುವುದು ಸಾಧ್ಯವೇ ಇಲ್ಲವೆಂದು ಮನೆಯ ಹೆಂಗಸರೆಲ್ಲ ವಿಮಲಿಗೆ ಮನದಟ್ಟು ಮಾಡಿದರು. ಬಸ್ರಾಜನೂ ಮತ್ತೆ ಆ ಸುದ್ದಿ ಎತ್ತಬೇಡಾ, ಮನೆಯ ಎಲ್ಲಾ ಹೆಂಗಸರೂ ಇರೋ ಹಾಗೆ ಇದ್ದು ಬಿಡು, ನಿಂಗೇನು ಕಡ್ಮೆ ಆಗಿದೆ ಈ ಮನೆಲೆ ಅಂತ ಅಂದು ಬಿಟ್ಟಿದ್ದ. ಆದರೆ ಅವಳು ಭರವಸೆ ಕಳೆದುಕೊಳ್ಳಲಿಲ್ಲ. +ಮನೆಯವ್ರೆಲ್ಲಾ ದೇವರ ಹರಕೆ ತೀರಿಸಲು ತಿರುಪತಿಗೆ ಹೊರಟರು. ಅದೇ ಸಮಯದಲ್ಲಿ ಮುಟ್ಟಾಗಿದ್ದ ವಿಮಲಿ, ವಯಸ್ಸಾದ ಕಾರಣಕ್ಕೆ ಹೋಗಲಾರದ ಅಜ್ಜಿ ಹಾಗೂ ಶಾಲೆಗೊಗೋ ಮಕ್ಕಳ ಜೊತೆಗೆ ಮನೆಯಲ್ಲಿಯೇ ಉಳಿಬೇಕಾಯ್ತು. ಗಂಡನ ಜೊತೆ ಹೋಗಕಾಗ್ಲಿಲ್ಲ ಅನ್ನೊ ಬೇಸರದ ಜೊತೆ ಮನೆ ಜವಾಬ್ದಾರಿನೂ ಅವಳ ಮೇಲೆ ಬಿತ್ತು.ಅವರೆಲ್ಲರೂ ಊರಿಗೆ ಹೊರಟ ರಾತ್ರಿನೆ ಆ ಮನೆಯಲ್ಲಿ ಇಂದು ದುರ್ಘಟನೆ ನಡೆದು ಹೋಯ್ತು. ಆವತ್ತ ರಾತ್ರಿ ಹೈಸ್ಕೂಲು ಓದ್ತ ಇದ್ದ ಭಾವನ ಮಗಳು ವಿಮಲಿನ ಏಳಿಸಿ ಹೊರಗೋಗಬೇಕು ಅಂತ ಎಬ್ಬಿಸಿದಾಗ ಇಷ್ಟೊತ್ನಲ್ಲ ಅಂತ ಅನುಮಾನಿಸಿದಳು. ಆದ್ರೆ ತೋರಿಸಿಕೊಳ್ಳದೆ ತಾನು ಜೊತೆಯಲ್ಲಿ ಹೊರಟಳು. ಬಯಲಲ್ಲಿ ಎಲ್ಲ ಮುಗಿಸಿಕೊಂಡು ವಾಪಸ್ಸು ಬರೋವಾಗ ಕಾರೊಂದರಲ್ಲಿ ಕುಡಿದು ತೂರಾಡ್ತಿದ್ದ ಗುಂಪೊಂದು ಇವರನ್ನ ನೋಡಿ ಅಶ್ಲೀಲವಾಗಿ ಮಾತಾಡ್ತ ಇವರನ್ನ ಹಿಡಿದುಕೊಂಡು ಎಳೆದಾಡಿದ್ದರು, ಇವರು ಹೆದರಿ ಕಿರುಚಾಡಿದ್ದರಿಂದ ಹಳ್ಳಿಯವರು ಎದ್ದು ಓಡಿ ಬರುವುದನ್ನ ನೋಡಿ ಓಡಿಹೋಗಿ ಕಾರೋಳಗೆ ಕುಳಿತು ಜೋರಾಗಿ ಕಾರನ್ನ ಓಡಿಸಿಕೊಂಡು ಓಗಿ ಬಿಟ್ಟರು. ಅದ್ಯಾವ ನಾಯಿಗಳು ಇಲ್ಲಿಗೆ ಬಂದಿದ್ದು ಇನ್ನೊಂದು ಸಲ ಈ ಕಡೇ ಕಂಡ್ರೆ ಹೂತಕಿ ಬಿಡ್ತಿವಿ ಅಂತ ಊರವ್ರು ಕೂಗಾಡಿದು.್ರ ಹೆದರಿ ನಡುಗುತ್ತಾ ಇದ್ದ ಅವರಿಬ್ಬರನ್ನು ಮನೆಗಂಟಾ ಬಿಟ್ಟು ” ಜೋಪಾನ ಕಣ್ರವ್ವ, ಅಂಗೆಲ್ಲಾ ಎಟೋಟೋತ್‍ನಲ್ಲೊ ವೊರಕ್ಕೆ ಬರಬ್ಯಾಡ್ರವ್ವ, ಕಾಲಾ ವಂದೇ ಸಮ ಇರಾಕಿಲ್ಲ’ ಅಂತೇಳಿ ವೋಂಟೋದ್ರು. ಆ ಘಟನೆಯಿಂದ ತತ್ತರಿಸಿಹೋಗಿದ್ದ ವಿಮಲಿ ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ. ಗ್ರಹಚಾರ ಕೆಟ್ಟಿದ್ದರೆ ಇವತ್ತು ನಾವು ಆ ರಾಕ್ಷಸರ ಕೈಕೆ ಸಿಕ್ಕು ಏನಾಗಿ ಬಿಡುತ್ತಿದ್ದೆವೊ. ನೆನಸಿಕೊಂಡೇ ಗಡಗಡನೇ ನಡುಗಿಹೋದಳು.ಧೈರ್ಯ ತಂದುಕೊಳ್ಳುತ್ತಲೆ ಮಲಗಲು ಪ್ರಯತ್ನಿಸಿದಳು. ನಿದ್ರೆ ಮಾತ್ರ ಬರಲಿಲ್ಲ. ಬೆಳಗ್ಗೆ ಹೊತ್ತಿಗೆ ವಿಮಲಿ ಒಂದು ನಿರ್ಧಾರಕ್ಕೆ ಬಂದಿದ್ದಳು. +ಬೆಳಗಾದ ಕೂಡಲೆ ಎಲ್ಲಾಕೆಲ್ಸ ಸರಸರನೆ ಮುಗಿಸಿ ಫಷ್ಟ್ ಬಸ್ಗೇ ಪಟ್ಟಣಕ್ಕೆ ಹೋದ್ಳು. ಮೊದ್ಲು ಬಳೆ ಅಂಗಡಿಗೆ ಹೋಗಿ ಒಂದು ಕರಿಮಣಿ ಸರತಗೊಂಡು ತನ್ನ ಚಿನ್ನದ ತಾಳಿಸರವನ್ನು ಬಿಚ್ಚಿ ಮಾಂಗಲ್ಯ ತೆಗೆದು ಅದಕ್ಕೆ ಹಾಕೊಂಡು ಹೊರ್ಗೆ ಬಂದು ಚಿನ್ನಬೆಳ್ಳಿ ಅಂಗಡಿಗೊಗಿ ತನ್ನ ಸರನ ತೂಕ ಹಾಕಿಸಿ ಹಣ ಕೊಡಿ ಅಂತ ಕೇಳಿದ್ಳು. ಅವರು ಅನುಮಾನಿಸಿದಾಗ ಹೇಗಾಗಬಹುದು ಅಂತ ಅಂದುಕೊಂಡು ತನ್ನ ಮದುವೆ ಫೋಟೊದಲ್ಲಿ ಅ ಸರ ಹಾಕಿರುವುದನ್ನ ತೋರಿಸಿ, ಈಗ ಕಷ್ಟ ಅಂತ ಮಾರ್ತಾ ಇದ್ದಿನಿ ಅಂತ ಅವರನ್ನ ಒಪ್ಪಿಸಿ ಹಣ ತಗೋಂಡು ಸೀದಾ ಊರಿಗೆ ಬಂದ್ಳು. ಬಂದವ್ಳೆ ಗಾರೆ ಕೆಲ್ಸದವ್ರನ್ನ ಕರೆಸಿ ತಕ್ಷಣವೇ ಶೌಚಾಲಯ ಕಟ್ಟಕೊಡೋಕೆ ಗುತ್ತಿಗೆ ಕೊಟ್ಟು ಬಿಟ್ಟಳು, ಎರಡೇ ದಿನಕ್ಕೆ ಮನೆಯ ಹಿಂಭಾಗದಲ್ಲಿ ಶೌಚಾಲಯ ಸಿದ್ದವಾಗಿ ಬಿಟ್ಟಿತು.ಅವಳ ಧೈರ್ಯ ಕಂಡು ಊರವ್ರೆ ದಂಗಾಗಿ ಬಿಟ್ಟಿದ್ದರು. ಕೆಲ್ಸ ಮುಗ್ಯೊಗಂಟಾ ಕಾಡದೆ ಇರೊ ಭಯ ಅದು ಮುಗಿದ ಮೇಲೆ ಕಾಡೊಕೆ ಶುರುವಾಯ್ತು. ಭಂಡ ಧೈರ್ಯದಲ್ಲಿ ಈ ಕೆಲ್ಸ ಮಾಡಿಬಿಟ್ಟಿದ್ದಳು. ಅತ್ತೆ ಮಾವ, ಭಾವಂದರು ಗಂಡ ಏನನ್ತಾರೋ, ಅವರಿಗಿಷ್ಟ ಇಲ್ಲದೆ ಇರೊ ಕೆಲ್ಸ ಮಾಡಿ ಬಿಟ್ಟಿದ್ದೆನೆ, ಅವರು ಹಾಕಿದ್ದ ಮಾಂಗಲ್ಯ ಸರ ಬೇರೆ ಮಾರಿ ಬಿಟ್ಟಿದ್ದೆನೆ ನನ್ನ ಉಳ್ಸಾರಾ ಅನ್ನೊ ಭೀತಿಯಲ್ಲಿ ಕಂಗಾಲಾಗಿ ಹೋಗಿದ್ದಳು. ಅವಳು ಅಂದು ಕೊಂಡಂತೆ ಆಗಿ ಹೋಯ್ತು. +ಮನೆಯವ್ರು ಬಸ್ಸಳಿದ ಕೂಡಲೇ ಅವರಿಗೆ ಊರವ್ರೆ ಎಲ್ಲ ವಿಷಯವನ್ನ ತಿಳಿಸಿಬಿಟ್ಟಿದ್ದರು,ಎಲ್ಲಾ ವಿಷಯ ಗೊತ್ತಾದ ಮೇಲೆ ಮನೆಯವ್ರೆಲ್ಲಾ ಕುದ್ದು ಹೋದರು. ತಾವು ಕೊಟ್ಟ ಚಿನ್ನದ ಸರ ಮಾರಿ ಸಂಡಾಸ ಕಟ್ಟೊಕೆ ಅಧಿಕಾರ ಕೊಟ್ಟರೊ ಯಾರು,ತಮ್ಮ ಮಾತು ಮೀರಿ ನಡೆದುಕೊಂಡ ವಿಮಲಿ ಮನೆಯಲ್ಲಿ ಇರಬಾರದು ಅಂತ ಅವಳ ಅತ್ತೆ ಮಾವ ಅವಳನ್ನ ಮನೆಯಿಂದ ಆಚೆಗೆ ಅಟ್ಟಿ ಬಿಟ್ಟರು. ಬಸ್ರಾಜಂಗೂ ಹೆಂಡತಿಯ ಅಧಿಕಪ್ರಸಂಗದ ಬಗ್ಗೆ ವಿಪರೀತ ಕೋಪ ಬಂದು ಬಿಟ್ಟಿತ್ತು. ಅಪ್ಪ ಅವ್ವನ ಮಾತಿಗೆ ಎದರೇನು ಹೇಳದೆ ಹಲ್ಲು ಕಡೆಯುತ್ತಾ ಸುಮ್ಮನಾಗಿ ಬಿಟ್ಟನು. ಊರವ್ರು, ಮನೆಯ ಹೆಂಗಸರು, ಊರಿನ ಮುಖ್ಯಸ್ಥರು ಯಾರೆಷ್ಟೆ ಹೇಳಿದ್ರು ವಿಮಲಿಯನ್ನ ಮನೆಲಿ ಇಟ್ಟುಕೊಳ್ಳೊಕೆ ಒಪ್ಪಿಕೊಳ್ಳಲೆ ಇಲ್ಲಾ.ವಿಮಲಿಯೂ ಎದೆಗುಂದದೆ ಮನೆ ಹೊರಗೆ ಹಾಕಿದರೂ ಜಗಲಿ ಮೇಲೆ ಕುಳಿತು ಬಿಟ್ಟಳು. ಈಮನೆಯಿಂದ ನಾನು ಯಾವ ಕಾರಣಕ್ಕೂ ಹೋಗಲ್ಲ, ನಾನು ಯಾವ ತಪ್ಪು ಮಾಡಿಲ್ಲ ಅಂತ ಹಠ ಹಿಡಿದು ಕುಳಿತು ಬಿಟ್ಟಳು. ಅದ್ಯಾರು ಟಿವಿಯವರಿಗೆ ಹೇಳಿದ್ರೊ ಸಂಜೆ ಹೊತ್ತಿಗೆ ಎಲ್ಲಾ ಟಿವಿಯವ್ರೂ ಆ ಊರಿಗೆ ಬಂದು ಸುದ್ದಿ ಮಾಡಿ ಬಿಟ್ಟರು.ಮನೆಯವ್ರಲ್ಲಾ ಹೊರಗೆ ಬರದೆ ಒಳಗೆ ಉಳಿದು ಬಿಟ್ಟರು,ಸುದ್ದಿ ತಿಳಿದ ಸರ್ಕಾರ ಅವಳನ್ನ ರಾಜಧಾನಿಗೆ ಕರೆಸಿ ಅವಳ ಕೆಲಸವನ್ನು ಕೊಂಡಾಡಿ ಸನ್ಮಾನ ಮಾಡಿ. ಅವಳ ಮಾರಿದ್ದ ಕರಿಮಣಿ ಸರನ ತಂದು ಅವಳಿಗೆ ಬಹುಮಾನವಾಗಿ ನೀಡಿ ಎಲ್ಲಾ ಹೆಣ್ಣು ಮಕ್ಕಳು ಇಂತಹ ಧೈರ್ಯ ಮಾಡಬೇಕು ಅಂತ ಕರೆ ನೀಡಿತು. ಅವಳ ಜೊತೆ ಅಧಿಕಾರಿಗಳನ್ನು ಕಳಿಸಿ ಅವಳನ್ನ ಮನೆಗೆ ಸೇರಿಸಿಕೊಳ್ಳದಿದ್ದರೆ ಜೈಲಿಗೆ ಹಾಕಿಸುವುದಾಗಿ ಹೆದರಿಸಿ ಮತ್ತೆ ಅವಳು ಮನೆಗೆ ಸೇರುವಂತೆ ಮಾಡಿತು. +-ಎನ್, ಶೈಲಜಾ ಹಾಸನ + \ No newline at end of file diff --git a/PanjuMagazine_Data/article_1017.txt b/PanjuMagazine_Data/article_1017.txt new file mode 100644 index 0000000000000000000000000000000000000000..036e0a321d011e42f8373f75474f45911c6af722 --- /dev/null +++ b/PanjuMagazine_Data/article_1017.txt @@ -0,0 +1,67 @@ +ಪ್ರಶ್ನೆಗಳು: +೧. ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ? +೨. ಅಯೋಧ್ಯ ಯಾವ ನದಿಯ ದಡದ ಮೇಲಿದೆ? +೩. ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು? +೪. ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು? +೫. ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ? +೬. ಶಕುಂತಲೆಯ ಮಗ ಭರತನ ಮೊದಲ ಹೆಸರೇನು? +೭. ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು? +೮. ಭಾರತದ ರಾಷ್ಟ್ರೀಯ ಕಾಂಗ್ರೆಸ್‌ಗೆ ಆಯ್ಕೆಯಾದ ಮೊಟ್ಟ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು? +೯. ಶಂಭುಲಿಂಗ ಇದು ಯಾರ ಅಂಕಿತನಾಮವಾಗಿದೆ? +೧೦. ಏಕಕಾಲಕ್ಕೆ ದೃಷ್ಟಿಯನ್ನು ಎರಡು ಕಡೆ ಕೇಂದ್ರಿಕರಿಸುವ ಪ್ರಾಣಿ ಯಾವುದು? +೧೧. ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು? +೧೨. ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ? +೧೩. ವಂಶಿ ಇದು ಯಾರ ಕಾವ್ಯ ನಾಮ? +೧೪. ನಾಸ್‌ಡಾಕ್‌ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪೆನಿ ಯಾವುದು? +೧೫. ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು? +೧೬. ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? +೧೭. ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? +೧೮. ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು? +೧೯. ೨೦೦೯ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? +೨೦. ತ್ರಿಪುರಾ ರಾಜ್ಯದ ರಾಜಧಾನಿ ಯಾವುದು? +೨೧. ನೇತಾಜಿ ಸುಭಾಷಚಂದ್ರಬೋಸ ಕ್ರೀಡಾ ಆಕಾಡೆಮಿ ಮಹಾರಾಷ್ಟ್ರದಲ್ಲಿ ಎಲ್ಲಿದೆ? +೨೨. ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? +೨೩. ಕಾರ್ಗಿಲ್ ಕದನ ನಡೆದ ವರ್ಷ ಯಾವುದು? +೨೪. ವಿಶ್ವದಲ್ಲಿ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯ ಯಾವುದು? +೨೫. ದೆಹಲಿಯಲ್ಲಿನ ರಾಷ್ಟ್ರಪತಿ ಭವನವನ್ನು ವಿನ್ಯಾಸ ಮಾಡಿದವರು ಯಾರು? +೨೬. ದಿನೇಶ ಖನ್ನ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು? +೨೭. ಸತ್ರಿಯ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ? +೨೮. ಆಸ್ಕರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? +೨೯. ಬೆಳಕಿನ ಸಾಂದ್ರತೆ ಅಳೆಯುವ ಸಾಧನ ಯಾವುದು? +೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ. +ಈ ವಾರದ ಪ್ರಸಿದ್ಧ ದಿನಾಚರಣೆಗಳು +ಅಕ್ಟೋಬರ್ – ೦೧ ವಿಶ್ವ ಹಿರಿಯದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನ +ಅಕ್ಟೋಬರ್ – ೦೨ ಗಾಂಧೀ ಜಯಂತಿ ಹಾಗೂ ವಿಶ್ವ ಸಸ್ಯಹಾರಿಗಳ ದಿನ +ಅಕ್ಟೋಬರ್ – ೦೪ ವಿಶ್ವ ಪ್ರಾಣಿ ಕಲ್ಯಾಣ ದಿನ ಹಾಗೂ ವಿಶ್ವ ವಸತಿ ದಿನ +ಉತ್ತರಗಳು: +೧. ದೆಹಲಿ +೨. ಸರಯೂ (ಉತ್ತರ ಪ್ರದೇಶ) +೩. ವಿಜ್ಞಾನೇಶ್ವರ +೪. ಡಿಸೆಂಬರ್ ೨೫ – ೨೦೦೧ +೫. ಅರವಿಂದ ಮಾಲಗತ್ತಿ +೬. ಸರ್ವಧರ್ಮ +೭. ನಾದಿರ್ ಷಾ +೮. ಬದ್ರುದ್ದೀನ್ ತ್ಯಾಬ್ಜೀ +೯. ನಿಜಗುಣ ಶಿವಯೋಗಿ +೧೦. ನೀರುಗುದರೆ +೧೧. ಯೆನ್ +೧೨. ವಾರಣಾಸಿ (ಉತ್ತರ ಪ್ರದೇಶ) +೧೩. ಎ.ಜಿ.ಭೀಮರಾವ್ +೧೪. ಇನ್ಪೋಸಿಸ್ +೧೫. ಆಗಸ್ಟ್ ೧೯೯೬ +೧೬. ಬಳ್ಳಾರಿ +೧೭. ರಾಯಚೂರು +೧೮. ೬ ಏಫ್ರಿಲ್ – ೧೯೪೮ +೧೯. ಎಲ್.ಬಸವರಾಜು +೨೦. ಅಗರತಲಾ +೨೧. ಪುಣೆ +೨೨. ರಾಜಸ್ಥಾನ +೨೩. ೧೯೯೯ +೨೪. ಅಮೆರಿಕನ್ ಮ್ಯೂಸಿಯಂ ಆಫ್ ನಾಚುರಲ್ ಹಿಸೈರಿ +೨೫. ಸರ್.ಎಡ್ಜಿನ್‌ಲುಂಟೆಯೆನ್ಸ್ +೨೬. ಬ್ಯಾಡ್ಮಿಂಟನ್ +೨೭. ಅಸ್ಸಾಂ +೨೮. ಸಿನಿಮಾ +೨೯. ಪೋಟೊ ಮೀಟರ್ +೩೦. ಕೆ.ಕೆ.ಹೆಬ್ಬಾರ್ (ಕರ್ನಾಟಕದ ಪ್ರಸಿದ್ಧ ಚಿತ್ರ ಕಲಾವಿದರು) +***** \ No newline at end of file diff --git a/PanjuMagazine_Data/article_1018.txt b/PanjuMagazine_Data/article_1018.txt new file mode 100644 index 0000000000000000000000000000000000000000..d128b3fd3e0544a0089db5d9dab7c291d8b66d2f --- /dev/null +++ b/PanjuMagazine_Data/article_1018.txt @@ -0,0 +1,14 @@ +ಎಂ ಆರ್‌ ಭಗವತಿಯವರ ನಿರೂಪಣೆ ಮತ್ತು ಸಂಯೋಜನೆ ಇರುವ ಸೋಜಿಗದ ಬಳ್ಳಿ ಮೊನ್ನೆ ಮೊನ್ನೆಯಷ್ಟೇ ನನ್ನ ಕೈ ಸೇರಿತು. ಪುಸ್ತಕವನ್ನು ಒಂದೆರಡು ದಿನಗಳಲ್ಲಿ ಪಟ್ಟು ಹಿಡಿದು ಓದಿ ಮುಗಿಸಿದೆ. ಒಮ್ಮೊಮ್ಮೆ ಕುತೂಹಲದಿಂದಲೂ, ಒಮ್ಮೊಮ್ಮೆ ಆಲಸ್ಯದಿಂದಲೂ, ಒಮ್ಮೊಮ್ಮೆ ನಿದ್ದೆಗಣ್ಣಿನಿಂದಲೂ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಈ ಪುಸ್ತಕದ ಕುರಿತು ಬರೆಯಲೇಬೇಕು ಅನಿಸಿತು. ಆ ಕಾರಣಕ್ಕೆ ಈ ಲೇಖನ. ಸೋಜಿಗದ ಬಳ್ಳಿ ಪುಸ್ತಕ ನನಗೆ ಗಮನ ಸೆಳೆದಿದ್ದು ಅದರಲ್ಲಿ ಮಿಳಿತಗೊಂಡಿರುವ ನವಿರಾದ ಪ್ರೇಮದ ಕಾರಣಕ್ಕೆ. ಅದಕ್ಕೆ ಸಾಕ್ಷಿ ಎಂಬಂತೆ ನವಿರಾದ ಪ್ರೇಮವನ್ನು ಪುಸ್ತಕದ ಮುಖಪುಟದಲ್ಲೇ ಸರಸ್ವತಿ ಮತ್ತು ಚಿ ಶ್ರೀನಿವಾಸರಾಜುರವರ ಕಣ್ಣು ಮತ್ತು ನಗುವಿನಲ್ಲಿ ನಾವು ಕಾಣಬಹುದು. ಇನ್ನೂರು ಪುಟಗಳ ಈ ಪುಸ್ತಕವನ್ನು ಓದುತ್ತಾ ಹೋದಂತೆ ಇವರಿಬ್ಬರ ಪ್ರೇಮದ ವಿವಿಧ ಮಜಲುಗಳು ನಮಗೆ ಓದಲು ಸಿಗುತ್ತವೆ. ಪುಸ್ತಕದ ಮೊದಲ ಪುಟದಲ್ಲೇ “ನೀನೇ ನನ್ನ ಆತ್ಮಕಥೆಯನ್ನು ಬರೆದುಬಿಡು. ಅದು ನಿನ್ನದೂ ಆಗುತ್ತದೆ ನನ್ನದೂ ಆಗುತ್ತದೆ” ಎನ್ನುವ ಚಿ ಶ್ರೀನಿವಾಸರಾಜು ರವರ ಸಾಲು ಪುಸ್ತಕದ ಪ್ರವೇಶಿಕೆಗೆ ಅನುವು ಮಾಡಿಕೊಡುತ್ತದೆ. +ಎಲ್ಲಾ ಆತ್ಮಕಥೆಗಳಂತೆ ಈ ಪುಸ್ತಕವೂ ಸರಸ್ವತಿಯವರ ಬಾಲ್ಯದ ಸಿಹಿ ನೆನಪುಗಳೊಂದಿಗೆ ಶುರುವಾಗುತ್ತದೆ. ಒಂದು ಕಾಲದಲ್ಲಿ ಕಲ್ಲು ಒಡೆಯುವ ಕೆಲಸವನ್ನೂ ಸಹ ಮಾಡಿರುವ ತಾತ ಅಜ್ಜಿಯ ಕಷ್ಟದ ದಿನಗಳು ಹಾಗು ಅವರು ಜೀವನೋಪಾಯಕ್ಕಾಗಿ ಬೇರೆ ಬೇರೆ ಊರುಗಳಲ್ಲಿ ನೆಲೆ ಕಾಣುವ ಕಥೆಗಳೊಂದಿಗೆ ಪುಸ್ತಕ ಶುರುವಾಗಿ, ನಂತರ ಅವರ ತಂದೆಯವರ ಸಾಧನೆಗಳ ಕುರಿತು ಹೇಳುತ್ತಾ ಹೋಗುತ್ತದೆ. ಸರಸ್ವತಿಯವರ ತಂದೆ ಮೊದಲಿಗೆ ಶೂ ಲೇಸು, ಉಡಿದಾರದ ದಾರ, ಹ್ಯಾಂಗರ್‌ ತಯಾರಿಸುವ ಕೆಲಸಕ್ಕೆ ತನ್ನ ತಂದೆಯವರ ಜೊತೆ ಹೋಗುತ್ತಿದ್ದು, ಅದರಿಂದ ಅವರು ಕಲಿತ ಕೆಲಸದ ಅನುಭವಗಳು ಅವರನ್ನು ಒಬ್ಬ ಉದ್ಯಮಿಯನ್ನಾಗಿ ಮಾಡಿದ ಕತೆ ನಿಜಕ್ಕೂ ಮೆಚ್ಚುವಂತಂದ್ದು. ಈಗಿನ ದಿನಗಳಲ್ಲಿ ಸ್ಟಾರ್ಟ್‌ ಅಪ್‌ ಹಾಗು ಸ್ವಂತ ಉದ್ದಿಮೆಯ ಕನಸು ಕಾಣುವ ಅನೇಕರಿಗೆ ಈ ಪುಸ್ತಕದಲ್ಲಿರುವ ಈ ತರಹದ ಸ್ವಂತ ಉದ್ದಿಮೆಯ ಮಾಹಿತಿಗಳು ಸ್ಫೂರ್ತಿದಾಯಕವಾಗಬಹುದು. ಜೊತೆಗೆ ಒಳ್ಳೊಳ್ಳೆಯವರ ಸಹವಾಸ ಹೇಗೆ ಮನುಷ್ಯನನ್ನು ಒಂದು ಮಟ್ಟದಿಂದ ಮತ್ತೊಂದು ಮಟ್ಟಕ್ಕೆ ಕರೆದೊಯ್ಯುತ್ತದೆ ಎನ್ನುವುದನ್ನು ನಾವು ಇಲ್ಲಿ ಕಾಣಬಹುದು. +ಈ ಪುಸ್ತಕದಲ್ಲಿ ಅವರ ತಂದೆಯವರ ಮುದ್ದಿನ ರಾಜಕುಮಾರಿಯಾದ ಸರಸ್ವತಿಯವರ ಬಾಲ್ಯದ ರಸನಿಮಿಷಗಳ ಮೇಲೆ ನಾವು ಕಣ್ಣಾಡಿಸುತ್ತಾ ಹೋದಂತೆ ಒಂದು ಕೂಡು ಕುಟುಂಬದ ಚಿತ್ರಣ ನಮಗೆ ಸಿಗುತ್ತದೆ. ಆ ಕುಟುಂಬ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಬೆಂಗಳೂರಿನಲ್ಲಿ ನೆಲೆ ಕಂಡು ಬದುಕು ಕಟ್ಟಿಕೊಳ್ಳುವ ರೀತಿ ನಿಜಕ್ಕೂ ಅಧ್ಬುತ. ಬೆಂಗಳೂರಿನ ನಿವಾಸಿಗಳೇ ಆದ ಮೇಲೆ ಅದರ ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಪರಿಸರ, ಅಲ್ಲಿನ ಕಟ್ಟುಪಾಡು, ಆಚರಣೆಗಳು ಇವೆಲ್ಲಾ ಸೋಜಿಗದ ಬಳ್ಳಿಯಲ್ಲಿ ದಾಖಲಾಗಿವೆ. ಅದನ್ನೆಲ್ಲಾ ಓದುವಾದ ಒಮ್ಮೊಮ್ಮೆ “ಓ ಹೀಗೂ ಇತ್ತಾ ಬೆಂಗಳೂರು” ಎನಿಸಿದರೆ, ಇನ್ನೊಮ್ಮೊ “ಥೂ ಇಂತಹ ಅನಿಷ್ಟ ಪದ್ದತಿಗಳೂ ಸಹ ಬೆಂಗಳೂರಿನಲ್ಲಿ ಇತ್ತಾ” ಎನ್ನುವುದು ಅರಿವಿಗೆ ಬರುತ್ತದೆ. ಅದರಾಚೆಗೂ ಪುಸ್ತಕ ನಮಗೆ ಇನ್ನೂ ಹೆಚ್ಚು ದಕ್ಕುತ್ತಾ ಹೋಗುವುದು ಈ ಪುಸ್ತಕದ ನಾಯಕ ನಾಯಕಿಯ ಭೇಟಿಯ ನಂತರ. +ಪುಸ್ತಕದ ಕಾಲುಭಾಗವನ್ನು ಸರಸ್ವತಿಯವರು ತಮ್ಮ ಬಾಲ್ಯದ ನೆನಪುಗಳಿಗೆ ಮೀಸಲಿಟ್ಟರೆ ಇನ್ನುಳಿದ ಭಾಗದಲ್ಲಿ ಶ್ರೀನಿವಾಸರಾಜುರವರ ಜೊತೆಗಿನ ಬದುಕನ್ನು ಪೂರ್ತಿಯಾಗಿ ಹೇಳಿದ್ದಾರೆ. ಸರಸ್ವತಿಯವರ ತುಂಬು ಜೀವನದ ಆತ್ಮಕತೆಯನ್ನು ಓದುತ್ತಾ ಹೋದಂತೆ ಒಬ್ಬ ಸಾಮಾನ್ಯ ಗೃಹಿಣಿಯ ಕನಸು ಕನವರಿಕೆಗಳು, ಆಸೆ ಆಕಾಂಕ್ಷೆಗಳು, ನಂತರ ಒಬ್ಬ ಅಮ್ಮನಾಗಿ ಅವರು ಮಕ್ಕಳನ್ನು ಬೆಳೆಸುವಲ್ಲಿ ವಹಿಸುವ ಪಾತ್ರ ಎಲ್ಲವೂ ದಾಖಲಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ. “ನನಗೆ ನನ್ನವರೇ ರಂಗಸ್ಥಳ, ಅವರೇ ಮುಖ್ಯ ಕಾರ್ಯಸ್ಥಾನ, ಶ್ರೀರಂಗನ ಹೃದಯದಲ್ಲಿ ನೆಲೆಗೊಳ್ಳುತ್ತಿದ್ದ ದೇವತೆ ನಾನೇ ಆಗಿದ್ದೆ” ಎಂಬ ಸಾಲು ಸರಸ್ವತಿಯವರ ಮನದಲ್ಲಿ ಹುಟ್ಟಲು ಈ ಜೋಡಿಯು ಕೂಡಿ ಬಾಳಿದ ಸೊಗಸು ಅನೇಕ ನವ ವಧುವರರಿಗೆ ಪಾಠ ಅನ್ನಬಹುದು. ಪ್ರತಿಯೊಬ್ಬರಿಗೂ ಒಂದಲ್ಲ ಒಂದರ ಬಗ್ಗೆ ಒಲವು ಇದ್ದೇ ಇರುತ್ತದೆ. ಹಾಗೆಯೇ ಶ್ರೀನಿವಾಸರಾಜು ರವರಿಗೆ ಇದ್ದ ಕನ್ನಡದ ಮೇಲಿನ ಒಲವು, ಅಧಮ್ಯ ಪ್ರೀತಿ ಅವರಿಂದ ಕ್ರೈಸ್ಟ್‌ ಕಾಲೇಜಿನಲ್ಲಿ ಕನ್ನಡ ಸಂಘವನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತದೆ. ಆ ಸಂಘದಿಂದ ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸಿಕೊಡುವುದಲ್ಲದೇ ಅನೇಕ ಲೇಖಕರ ಕೃತಿಗಳು ಬೆಳಕು ಕಾಣುವಲ್ಲಿ ಶ್ರೀನಿವಾಸರಾಜುರವರು ತೆಗೆದುಕೊಂಡ ರಿಸ್ಕ್‌ ದೊಡ್ಡದು. ಹಾಗೆ ರಿಸ್ಕ್‌ ತೆಗೆದುಕೊಂಡ ಪತಿಯ ಜೊತೆ ಕನ್ನಡ ಕಟ್ಟುವ ಕೆಲಸದಲ್ಲಿ ಸರಸ್ವತಿಯವರು ತಾನೂ ಕೂಡ ವಹಿಸಿದ ಪಾತ್ರವೂ ಕಿರಿದೇನಲ್ಲ. +ಸಾಹಿತ್ಯದ ದಿಗ್ಗಜರ ಜೊತೆ, ತನ್ನ ವಿದ್ಯಾರ್ಥಿಗಳ ಜೊತೆ ಅಧ್ಬುತವಾದ ನಂಟು ಹೊಂದಿದ್ದ ಶ್ರೀನಿವಾಸರಾಜುರವರ ನೆನಪುಗಳನ್ನು ಸೋಜಿಗದ ಬಳ್ಳಿಯ ರೂಪದಲ್ಲಿ ಕಟ್ಟಿಕೊಟ್ಟಿರುವ ಸರಸ್ವತಿ ಅವರ ನೆನಪಿನ ಶಕ್ತಿಗೆ ನಮನಗಳು. ಪುಸ್ತಕದಲ್ಲಿ ಕೆಲವು ಪುಟ್ಟ ಪುಟ್ಟ ಘಟನೆಗಳು ಸಹಾ ದಾಖಲಾಗಿವೆ. ಶ್ರೀನಿವಾಸರಾಜುರವರು ಇಲ್ಲವಾದ ನಂತರ ಅವರ ನೆನಪಿನಲ್ಲೇ ಸರಸ್ವತಿಯವರು ಕಟ್ಟಿಕೊಂಡ ಬದುಕು ಅನೇಕ ಹಿರಿಯ ಒಂಟಿ ಜೀವಗಳಿಗೆ ದಾರಿದೀಪವಾಗಬಹುದು. ಪುಸ್ತಕದ ತುಂಬೆಲ್ಲಾ ನಮಗೆ ಕಾಣಸಿಗುವ, ಕೂಡುಕುಟುಂಬ, ಕಷ್ಟಕಾಲದಲ್ಲಿ ಸಹಾಯಹಸ್ತ ಚಾಚುವ ಕೈಗಳು, ಸದಾ ಜೊತೆ ನಿಲ್ಲುವ ಬಹುಕಾಲದ ಗೆಳೆತನಗಳು, ಕನ್ನಡದ ಕಾರ್ಯದಲ್ಲಿ ನಿರತವಾಗಿರುವ ಕನ್ನಡದ ಸಾಹಿತಿಗಳು, ವಿದ್ಯಾರ್ಥಿಗಳು ಅವರ ಜೊತೆಗಿನ ಒಡನಾಟಗಳು, ನೆನಪುಗಳು ನಮ್ಮಲ್ಲಿ ವ್ಯಕ್ತಿಗಳಾಗಿ, ಘಟನೆಗಳಾಗಿ ನೆನಪಿನಲ್ಲಿ ಉಳಿಯುತ್ತವೆ. +ಹೆಚ್ಚಾಗಿ ಲೇಖಕ/ಲೇಖಕಿಯರೇ ತಮ್ಮ ಆತ್ಮಕಥನವನ್ನು ಬರೆದುಕೊಳ್ಳುವುದು ರೂಢಿ. ಅವರು ಹೇಳಿದ್ದನ್ನು ನಿರೂಪಣೆ ರೂಪದಲ್ಲಿ ನೀಡುವುದು ಅಷ್ಟು ಸುಲಭದ ಕೆಲಸವಲ್ಲ. ಈ ಪುಸ್ತಕದ ನಿರೂಪಣೆ ಹೊಣೆ ಹೊತ್ತಿದ್ದ ಎಂ ಆರ್ ಭಗವತಿಯವರು ಸರಸ್ವತಿಯವರ ಆತ್ಮಕಥನಕ್ಕೆ ತಮ್ಮ ಜೀವನದ ಸುಮಾರು ನಾಲ್ಕು ವರ್ಷಗಳನ್ನು ಮೀಸಲಿಟ್ಟು, ತಮ್ಮ ಗುರುಗಳ ಮತ್ತು ಅವರ ಪತ್ನಿಯ ಬದುಕನ್ನು ಸೋಜಿಗದ ಬಳ್ಳಿ ರೂಪದಲ್ಲಿ ಆಪ್ತವಾಗಿ ಕಟ್ಟಿಕೊಟ್ಟಿರುವ ಪರಿಗೆ ನಿಜಕ್ಕೂ ಅಭಿನಂದನೀಯರು. ಅವರೇ ಲೇಖಕಿಯ ಮಾತಿನಲ್ಲಿ ಹೇಳಿಕೊಂಡಂತೆ “ಹೆಸರಿಗಷ್ಟೇ ಇದು ಸರಸ್ವತಿಯವರ ಆತ್ಮಕತೆ, ಇದರ ತುಂಬಾ ಆವರಿಸಿಕೊಂಡಿರುವುದು ರಾಜು ಮೇಷ್ಟ್ರು” ಎಂಬುದು ನಿಜಾ ಕೂಡ. ಪುಸ್ತಕದಲ್ಲಿ ಯಥೇಚ್ಚವಾಗಿ ಬರುವ ವ್ಯಕ್ತಿಗಳ ಹೆಸರುಗಳು ಒಂದು ಕ್ಷಣ ನಮ್ಮನ್ನು ಕಂಫ್ಯೂಜ್‌ ಮಾಡಿದರೂ ಓದಿಕೊಂಡು ಹೋದಂತೆ ಪುಸ್ತಕ ಆಪ್ತವಾಗುತ್ತಾ ಹೋಗುತ್ತದೆ. ಪುಸ್ತಕದಲ್ಲಿ ಘಟನೆಗಳು ಒಮ್ಮೊಮ್ಮೆ ಕಾಲಾನುಕ್ರಮದಲ್ಲಿ ಇಲ್ಲದ ಕಾರಣಕ್ಕೆ ಚೂರು ಗೊಂದಲ ಅನಿಸಿದರೂ ಓದಿಕೊಳ್ಳಲು ಅಂತಹ ಅಡ್ಡಿಯನ್ನೇನು ಮಾಡುವುದಿಲ್ಲ. +ಒಡನಾಡಿ ಬಳಗ ದೊಡ್ಡಬಳ್ಳಾಪುರ ಇವರಿಂದ ಪ್ರಕಟವಾಗಿರುವ ಜಿ.ಪಿ. ಬಸವರಾಜು ರವರ ಬೆನ್ನುಡಿ ಇರುವ ಸೋಜಿಗದ ಬಳ್ಳಿ ಪುಸ್ತಕದ ಹೈಲೈಟ್ಸ್‌ ಎಂದರೆ ಭಗವತಿಯವರ ಚಂದದ ನಿರೂಪಣಾ ಶೈಲಿ, ರಘು ಅಪಾರರವರ ಮುಖಪುಖ ವಿನ್ಯಾಸ, ಲಕ್ಷ್ಮಿ ಮುದ್ರಣಾಲಯದ ಉತ್ಕೃಷ್ಟ ದರ್ಜೆಯ ಪ್ರಿಂಟಿಂಗ್‌, ಮತ್ತು ನೀತು ಗ್ರಾಪಿಕ್ಸ್‌ ರವರ ಒಳಪುಟ ವಿನ್ಯಾಸ. ಕನ್ನಡವೆಂದರೆ ಬದುಕು ಎಂದು ಬದುಕಿದ ಸರಸ್ವತಿ-ಶ್ರೀನಿವಾಸರಾಜು ದಂಪತಿಗಳ ಈ ಆತ್ಮಕಥನವನ್ನು ಓದಲು ಇಚ್ಚಿಸುವವರು ನುಡಿ ಪುಸ್ತಕ ದೂರವಾಣಿ: 8073321430 ಇವರನ್ನು ಸಂಪರ್ಕಿಸಿ. ಕನ್ನಡ ಪುಸ್ತಕಗಳನ್ನು ತಪ್ಪದೇ ಕೊಂಡು ಓದಿ.. +ಕೊನೆಯದಾಗಿ, ತಮ್ಮ ಲಗ್ನಪತ್ರಿಕೆಯಲ್ಲಿ ಪುತಿನ ರವರ ಕವಿತೆಯ ಸಾಲುಗಳನ್ನು ಅಚ್ಚು ಹಾಕಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜು-ಸರಸ್ವತಿ ದಂಪತಿಗಳ ನೆಚ್ಚಿನ ಸಾಲುಗಳು ನಿಮಗಾಗಿ… +ನನ್ನೊಳು ನಾ ನಿನ್ನೊಳು ನೀ +ಒಲವ ಮುಂತಿಂತ ನಾ ನೀ +ನಿನ್ನೊಳು ನಾ ನನ್ನೊಳು ನೀ +ಒಲಿದ ಮೇಲಂತೆ ನಾ ನೀ +ಇದೇ ಒಲವಿನ ಸರಿಗಮಪದನೀ… +-ನಟರಾಜು ಎಸ್‌ ಎಂ. \ No newline at end of file diff --git a/PanjuMagazine_Data/article_1019.txt b/PanjuMagazine_Data/article_1019.txt new file mode 100644 index 0000000000000000000000000000000000000000..ff06d2a46158b4386f496a495aa9dfd9859e9056 --- /dev/null +++ b/PanjuMagazine_Data/article_1019.txt @@ -0,0 +1,6 @@ + + + + + + \ No newline at end of file diff --git a/PanjuMagazine_Data/article_102.txt b/PanjuMagazine_Data/article_102.txt new file mode 100644 index 0000000000000000000000000000000000000000..b1bdd40d33743ff6cfe393328f609955a04d4a53 --- /dev/null +++ b/PanjuMagazine_Data/article_102.txt @@ -0,0 +1,14 @@ +ಆಗಾಗ ನಾವು ಗಂಡಸರು ಎದೆ ಮೇಲಿನ ಜೇಬು ಮುಟ್ಟಿ ನೋಡಿಕೊಳ್ಳುತ್ತೇವೆ. ಖಾತರಿಯಾದರೆ ಸಮಾಧಾನ; ಮೊಬೈಲ್ ಇದೆ ಅಂತ. ಪ್ಯಾಂಟಿನ ಹಿಂಬದಿಯ ಜೇಬು ಮುಟ್ಟುತ್ತೇವೆ.ಪರ್ಸ್ ಇದೆಯಾ?! ಇಲ್ಲವಾ?!! ಅಂತ. ಎದೆ ಜೇಬಿನಲ್ಲಿ ಮೊಬೈಲ್ ಬಿಟ್ಟು ಚೀಟಿ ಚಪಾಟಿ, ವಿಸಿಟಿಂಗ್ ಕಾರ್ಡ್, ಪೆಟ್ರೋಲ್ ಹಾಕಿಸಿದ ಬಿಲ್ಲು, ಎಟಿಎಂ ನಲ್ಲಿ ದುಡ್ಡು ಡ್ರಾ ಮಾಡಿದ ಪ್ರಿಂಟೆಡ್ ರಸೀತಿ, ಮೆಡಿಕಲ್ ಶಾಪಿಗೆ ಹೋಗಲೆಂದು ಇಟ್ಟುಕೊಂಡ ಡಾಕ್ಟರ್ ಬರೆದುಕೊಟ್ಟ ಗುಳಿಗೆ ಚೀಟಿ.. ಹಾಳು ಮೂಳು ಎಲ್ಲವನ್ನು ತುರಿಕೊಂಡಿರುತ್ತೇವೆ… ದುಡ್ಡೊಂದನ್ನು ಬಿಟ್ಟು. +ಪರ್ಸಿನ ಕತೆಯೂ ಹಾಗೇ… ಅಲ್ಲಿ ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಆರ್.ಸಿ. ಕಾರ್ಡ್, ಲ್ಯಾಮಿನೇಷನ್ ಮಾಡಿಸಿದ ಪಾನ್ ಕಾರ್ಡ್, ಆಧಾರ್ ಕಾರ್ಡ್, ಒಂದೆರಡು ಪಾಸ್ ಪೋರ್ಟ್ ಸೈಜ್ ಫೋಟೋ. ವಿಶೇಷವಾಗಿ ಅತೀ ಇಷ್ಟಪಡುವವರ ಅಮ್ಮ ಅಪ್ಪಂದೋ, ಹುಡುಗೀದೋ ಸೆಪರೇಟಾಗಿ ಇಟ್ಟಿರುತ್ತೇವೆ…. ಅದರೊಂದಿಗೆ ದುಡ್ಡು ಇರಲೇಬೇಕೆಂದಿನಿಲ್ಲ… ಆದರೂ ಪರ್ಸ್ ಅಂತೂ ಹಿಂಬದಿ ಜೇಬಲ್ಲಿರಬೇಕು. +ಎಲ್ಲಾದ್ರೂ ಹೊಟೆಲ್ಲಿಗೋ ಬಾರಿಗೋ ಶಾಪಿಂಗಿಗೋ ಹೋಗಿ ತಿಂದುಂಡು, ಖರೀದಿ ಮಾಡಿ ” ಎಷ್ಟಾಯ್ತು” ಅಂತ ಕೇಳೋಕೆ ಮುಂಚೇನೆ ಬಿಲ್ಲು ಬಂದಿರುತ್ತೆ… ಆಗ ಪರ್ಸ್ ತೆಗೆದು ದುಡ್ಡು ಎಣಿಸಿ ಕೊಡುವ ಸ್ಟೈಲೇ ಬೇರೆ. ಅದು ದುಡ್ಡಿದ್ದಾಗಿನ ಖದರ್ರು. +ಜೇಬಲ್ಲಿ, ಪರ್ಸಲ್ಲಿ ದುಡ್ಡಿಲ್ಲದ ಸಂದರ್ಭದಲ್ಲಿ ಆ ಪರ್ಸನ್ನು ಹನ್ನೆರಡು ಬಾರಿ ತಿರುಗಿಸಿ ಇಲ್ಲವೆಂದು ಗೊತ್ತಿದ್ದೂ ಹುಡುಕಾಡುವ ದೈನೇಸಿತನ ಒಂದಲ್ಲ ಒಂದು ಬಾರಿ ಯಾರಾದರೂ ಎದುರಿಸಿಯೇ ಇರುತ್ತೇವೆ. ಈಗ ಬಿಡಿ ಬಾರ್ ಕೋಡು, ಗೂಗಲ್ ಪೇ, ಫೋನ್ ಪೇ, ಪೇಟಿಎಮ್, ಎಲ್ಲ ಬಂದ ಮೇಲೆ ಬ್ಯಾಂಕ್ ಅಕೌಂಟಲ್ಲಿ ದುಡ್ಡಿದ್ದರೆ ಸಾಕು… ಜೇಬು ಪರ್ಸು ಖಾಲಿ ಇದ್ದರೂ ನಡೆಯುತ್ತದೆ. ಹಾಗಂತ ಅದನ್ನೇ ಎಲ್ಲಾ ಕಡೆ ನಂಬಿ ಹೊರಡುವಂತಿಲ್ಲ.. ಆ ಫಜೀತಿ ಬೇರೆಯದೇ… +ನನಗೆ ಮೊದಲಿಂದಲೂ ಎದೆ ಜೇಬಲ್ಲಿ ಒಂದು ಚಿಕ್ಕ ಪಾಕೆಟ್ ಡೈರಿ ಇರೋದು. ಅದರಲ್ಲೇ ಫೋನ್ ನಂಬರ್ರು, ಓದಿನ ನೋಟ್ಸು, ನೆನೆದಾಗ ಬರೆದು ಗೀಚಿದ ಚಿಕ್ಕ ಸಾಲುಗಳು ಎಲ್ಲವೂ ಅದರಲ್ಲೇ. ಪರ್ಸು ನನ್ನ ಇಷ್ಟದ ವಸ್ತುವಾಗಲೇ ಇಲ್ಲ. ಕಾರಣವಿಷ್ಟೇ, ಪರ್ಸಿನಲ್ಲಿ ಇಡುವಷ್ಟು ದುಡ್ಡು ನನ್ನಲ್ಲಿರುತ್ತಿರಲಿಲ್ಲ. ಹಾಸ್ಟಲ್ ನಲ್ಲಿ ಟ್ರಂಕಿನಲ್ಲಿಟ್ಟರೆ ಕದಿಯುವರೆಂಬ ಭಯ ( ಇಟ್ಟು ಕಳೆದುಕೊಂಡಿದ್ದರ ಪರಿಣಾಮವದು). ಹಾಗಾಗಿ ನಂಬಿಕಸ್ಥ ಗೆಳೆಯರ ಕೈಗಿಟ್ಟಿರುತ್ತಿದ್ದೆ. ಬೇಕಾದಾಗ ಕೇಳೋದು… + ಓದುವಾಗ, ದುಡಿಯಲಾರದ ದಿನಗಳಲ್ಲಂತೂ ಸರಿಯೇ. ದುಡಿಯುವಾಗಾದರೂ ಇಟ್ಟುಕೊಳ್ಳಬೇಕಲ್ಲ! ಅದೂ ಅಭ್ಯಾಸವಾಗುತ್ತದೆಂದು ನಂಬಿದ್ದೆ. ಸುಡುಗಾಡು, ತಿಂಗಳ ಕೊನೆಗೆ ಬರೋ ಸಂಬಳ ನಂಬಿಕೊಂಡು ಅದಕ್ಕೂ ಮೊದಲೇ ಖರ್ಚು ಮತ್ತು ಸಾಲದ ಬಾಬ್ತು ದೊಡ್ದದಿರುತ್ತಿತ್ತು. ಅದಲ್ಲದೇ ಸಂಬಳದ ನಂತರದ ದಿನಗಳಿಗೆ ಬೇಕಿರುತ್ತಲ್ಲ?!!! ಅದಕ್ಕಾದರೂ ದುಡ್ಡಿಡಲು ಪರ್ಸು ಬೇಕೆನಿಸುತ್ತಲೇ ಇರಲಿಲ್ಲ. ಮನೆಯಲ್ಲೋ ಆಫೀಸಿನ ಅಲಮಾರಿನಲ್ಲೋ ಇಟ್ಟುಬಿಡುತ್ತಿದ್ದೆ. ಕೈಯಲ್ಲಿದ್ದರೆ ಅಷ್ಟನ್ನು ಎದೆ ಮೇಲಿನ ಜೇಬಲ್ಲೇ ಇಟ್ಟು ಅಭ್ಯಾಸ… +ಸ್ನೇಹಿತರು ಹೋದಲ್ಲಿ ಪರ್ಸು (violet ಅಂತ ಆಮೇಲೆ ತಿಳೀತು) ನೋಡಿ “ಲೆದರ್ರಮಾ, ಮಸ್ತಿದೆ” ಅನ್ನೋರು.. ಖರೀದಿಸೋರು. ತೀರ ಇತ್ತೀಚೆಗೆ ಅಂದರೆ 2011ರ ನಂತರ ನಾನು ಆಸೆಪಟ್ಟು ಖರೀದಿಸಿದ್ದೆಂದರೆ ಒಂದೆರಡು ಪರ್ಸು ಮಾತ್ರ. ಅದರ ಮೇಲೆ ಅಷ್ಟಾಗಿ ಆಸೆ ಹುಟ್ಟಲೇ ಇಲ್ಲ. ಇದ್ದಾಗಾದರೂ ಅದರಲ್ಲಿ ದುಡ್ಡು ಇಡುತ್ತಿದ್ದೇನೆಂದರೆ ಅದೂ ಇಲ್ಲ. ಇಟ್ಟಿದ್ದು ಕೇವಲ ಡಿ.ಎಲ್ಲು, ಆರ್.ಸಿ. ವಿಸಿಟಿಂಗ್ ಕಾರ್ಡು, ಮತ್ತು ಕರೆಂಟು ಬಿಲ್ಲು, ಬರೀ ಇಂಥದರಿಂದಲೇ ತುಳುಕುತ್ತಿತ್ತು. +ಅಪರೂಪಕ್ಕೆ ದುಡ್ಡಿದ್ದಾಗ, ಅದೆಷ್ಟು ದಿನ ಬಳಿಯಿರುತ್ತೋ ಗೊತ್ತಿಲ್ಲ… ನನ್ನ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲವೆಂದು ಗೊತ್ತಿದ್ದೂ ಪರ್ಸಿನಲ್ಲಿ ದುಡ್ಡಿಟ್ಟುಕೊಂಡು ಅದೊಮ್ಮೆ ಕನ್ಯಾ ( ನೋಡಲಲ್ಲ) ತೋರಿಸುವ ಘನಕಾರ್ಯಕ್ಕೆಂದು ಗದಗಕ್ಕೆ ಹೋಗಿದ್ದೆ. ಮೂರುವರೆ ಸಾವಿರ ಇತ್ತು. ಮರಳಿ ಬರುವಾಗ ರೈಲ್ವೆ ಸ್ಟೇಷನ್ ದಾಟಿ ಅರ್ಧ ಕಿಲೋಮೀಟರ್ ದಾಟಿರಲಿಲ್ಲ. ನಾವಿದ್ದ ಬೋಗಿಯಿಂದಲೇ ಒಬ್ಬ ಹಾರಿದ್ದಲ್ಲದೇ ಡೋರಲ್ಲಿದ್ದ ನನಗೇ ಫಿಂಗರ್ ತೋರಿಸಿ ಹಂಗಿಸಿದ್ದ. ಅಗಲೂ ಗೊತ್ತಾಗಲಿಲ್ಲ. ಸುಮಾರು ಹೊತ್ತಾದ ನಂತರ ಹಿಂಬದಿಗೆ ಕೈ ಹಾಕಿದರೆ ಪರ್ಸಿಲ್ಲ. +“ಇವ್ನೌನ್, ಪರ್ಸೇ ಇಡದವನು ನಾನು, ಅಪರೂಪಕ್ಕೆ ಖರೀದಿಸಿದ ಪರ್ಸಲ್ಲಿ ದುಡ್ಡಿಟ್ಟುಕೊಂಡರೆ ಹೀಗಾಯ್ತಲ್ಲಾ!?” ಅಂತ ಬೇಜಾರಾಗಿ ಪರ್ಸ್ ಸಹವಾಸವನ್ನೇ ಬಿಟ್ಟಿದ್ದೆ. +ಆಗಾಗ ಆಫೀಸಲ್ಲಿ, ಮನೆಯಲ್ಲಿ,ಗೆಳೆಯರ ಮಧ್ಯೆ ತಮಾಷೆಗೆ ದುಡ್ಡಿನ ವಿಚಾರ ಬಂದರೆ ಸಾಕು; ” ಕಾಯಕವೇ ಕೈ ಸಾಲ” ಅಂದುಬಿಡುತ್ತಿದ್ದೆ. ಅದೊಮ್ಮೆ ಸದಾ ಕಾಲಕ್ಕೂ ಕೇಳಿದರೆ ಇಲ್ಲವೆನ್ನದೇ ಸಾಲ ಕೊಡುವ ಲಕ್ಷ್ಮಿಪುತ್ರಿಯಂಥ ಗೆಳತಿಯೊಬ್ಬಳು ನನ್ನ ಜನ್ಮ ದಿನಕ್ಕೆ ಪರ್ಸೊಂದನ್ನು ಗಿಫ್ಟ್ ಮಾಡಿದಳು. ದುಡ್ಡು ಅದರಲ್ಲಿಡಲು ಮನಸ್ಸು ಬರಲೇ ಇಲ್ಲ. ಆದರೆ ಪ್ರೀತಿಯಿಂದ ಕೊಟ್ಟಿದ್ದು ಪರ್ಸ್ ನಾನಿಟ್ಟುಕೊಳ್ಳಲೇಬೇಕು…. ಆದರೆ ಏನಿಡುವುದು?!!! ಮೊದಮೊದಲು ಅದನ್ನು ಎಷ್ಟು ಚೆಂದ ಕಾಪಾಡಿಕೊಂಡೆ. ನಂತರ ಅದೇ ಕತೆ…. ದುಡ್ಡೊಂದನ್ನು ಬಿಟ್ಟು ಉಳಿದೆಲ್ಲಾ ತುಂಬಿಕೊಳ್ಳುತ್ತಾ ಹೋಯಿತು…. ಆಗಾಗ ಬೇಡವಾದವುಗಳನ್ನು ಪರ್ಸಿನಿಂದ ಬಿಸಾಡುತ್ತಿದ್ದೆ. ಮತ್ತೆ ಖುಷ್ಬೂ ಸ್ಲಿಮ್ಮಾದಂತೆ ತೆಳ್ಳಗಾಗುತ್ತಿತ್ತು. +ಕಾಲೇಜ್ ಗೆಳೆಯ/ತಿಯರ ವಾಟ್ಸಪ್ ಗ್ರೂಪ್ ಆದಮೇಲೆ ಮೊದಲಿಂದಲೂ ಸಲುಗೆಯಿದ್ದ ಗೆಳೆಯ ಗೆಳತಿಯರನ್ನು ರೇಗಿಸುವುದು ಮಾಮೂಲು…. ಅವರ ತುಂಬಾ ಹಳೆಯ ಅಂದರೆ ಕಾಲೇಜಿನ ಅಥವಾ ಅದಕ್ಕೂ ಮುಂಚಿನ ಪಾಸಪೋರ್ಟ್, ಸ್ಟಾಂಪ್ ಸೈಜಿನ ಕೆಲವು ಫೋಟೋಗಳು ಕಾಲೇಜು ಬಿಟ್ಟು ಬರುವಾಗ ಯಾವಾಗ ಪಡೆದಿದ್ದೆನೋ ಅಥವಾ ಎತ್ತಿಕೊಂಡಿದ್ದೆನೋ ನೆನಪಿಲ್ಲ, ಈಗಲೂ ಇವೆ… ಒಮ್ಮೆ ಗೆಳತಿಯೊಬ್ಬಳ ಹಳೆಯ ಫೋಟೋ ಗ್ರೂಪಲ್ಲಿ ಶೇರ್ ಮಾಡಿ ” ಇಪ್ಪತ್ತೈದು ವರ್ಷಗಳಿಂದ ಕಾಣೆಯಾಗಿದ್ದಾಳೆ, ಪತ್ತೆಯಾದರೆ ಈ ಗ್ರೂಪಿನಲ್ಲಿ ಮಾಹಿತಿ ಕೊಡಿ” ಅಂತ ಹಾಕಿಬಿಟ್ಡಿದ್ದೆ. ನೋಡಿದರೆ ಆ ಫೋಟೋದಲ್ಲಿದ್ದವಳೂ ಗ್ರೂಪಲ್ಲಿದ್ದಳು. +ಉಳಿದವರು ಅಲೆಲೆಲೆ….. ” ಈ ಬಡ್ಡಿಮಗ ಕಾಲೇಜಲ್ಲಿ ನಿನ್ನ ಲೈನ್ ಹೊಡಿತ್ತಿದ್ದ ಅಂತ ಕಾಣುತ್ತೆ, ಹೌದೇನೇ?!!!!” ಎನ್ನುವಂತಾಗಿತ್ತು….. ಅದಾಗಿ ಆ ಪ್ರಸಂಗವನ್ನು ಮರೆತೇಬಿಟ್ಟಿದ್ದೆ. ಸ್ಲಿಮ್ಮಾಗಿತ್ತಲ್ಲಾ! ಖುಷ್ಬೂನಂತೆ ಆಗ ಪರ್ಸಲ್ಲಿ ಮತ್ತೆ ಸಿಕ್ಕಿದ್ದು ಆ ಹಳೆಯ ಫೋಟೋ. +ಗಿಫ್ಟ್ ನೀಡಿದ ಗೆಳತಿ ಲಕ್ಷ್ಮಿಪುತ್ರಿಯ ಪರ್ಸಿಗೀಗ ಭರ್ತಿ ನಾಲ್ಕು ವರ್ಷ. ಹಿಂಬದಿಯ ಜೇಬಲ್ಲಿಟ್ಟು ಇಟ್ಟು ಕೂತು ಎದ್ದು ಅದರ ಬೆನ್ನೆಲುಬು, ಪಕ್ಕೆ, ಮತ್ತು ಮೈಕೈ ಮೆತ್ತಗಾಗಿದೆ. ಮೊದಲಿನಂತೆ ಪರ್ಸಿನ ಮೇಲೆ ಆಸೆ ಇಲ್ಲದಿರಬಹುದು. ಆದರೆ ಗೆಳತಿಯೊಬ್ಬಳು “ಪ್ರೀತಿ”ಯಿಂದ ನೀಡಿದ್ದಲ್ಲವೇ! ಜೋಪಾನ ಮಾಡಿಟ್ಟಿದ್ದೇನೆ…. ಬದಲಾಗಿ ಅವಳು ನನ್ನ ಪ್ರತಿ ಬರ್ತಡೆಗೆ ವಿಶ್ ಮಾಡುವ ನೆನಪಿಗೆ ಶಾಶ್ವತವಿರುವಂತೆ ಅವಳ ಕಣ್ಣ ಹಚ್ಚೆ ನನ್ನ ಕೈ ಮೇಲಿದೆ…. +-ಅಮರದೀಪ್ \ No newline at end of file diff --git a/PanjuMagazine_Data/article_1020.txt b/PanjuMagazine_Data/article_1020.txt new file mode 100644 index 0000000000000000000000000000000000000000..ad34ba1110cf6ffd2688752045f10796563ac886 --- /dev/null +++ b/PanjuMagazine_Data/article_1020.txt @@ -0,0 +1,7 @@ +ಮುಂಝಾನಿಂದ ಯಾಕೊ ಮನಸ್ಸು ಭಾಳ ತಳಮಳಸ್ಲಿಕತ್ತಿತ್ತು. ಇವತ್ತ ಆಂವಾ ಬರಾಂವ ಇದ್ದಾ. ಯಥಾಪ್ರಕಾರ ಕೈ ತಮ್ಮ ಕೆಲಸಾ ಮಾಡಲಿಕತ್ತಿದ್ವು. ಆದ್ರ ಮನಸ್ಸು ಮಾತ್ರಾ ಆಂವನ್ನ ನೆನಿಕೊಳ್ಳಿಕತ್ತಿತ್ತು. ಆಂವಗ ಇಷ್ಟ ಆಗೊ ಅಡಿಗಿ ಎಲ್ಲಾ ಮಾಡಿದ್ದೆ. ಆಂವಗ ನನ್ನ ಕೈ ಅಡಿಗಿ ಅಂದ್ರ ಭಾಳ ಸೇರತದ. ಊರಾಗ ಇದ್ದಾಗ ಎಷ್ಟ ಹೊತ್ತಾದ್ರು , ಹಸಿವ್ಯಾದ್ರು ಹೊರಗ ಏನು ತಿನ್ನಲಾರದ ಉಪವಾಸ ಮನಿಗೆನ ಊಟಕ್ಕ ಬರತಿದ್ದಾ. ನನ್ನ ಮುಂದ ಕೂಡಿಸಿಕೊಂಡು ನನ್ನ ಜೋಡಿ ಸರಸವಾಡಕೊತ ಊಟಾ ಮಾಡೊದಂದ್ರ ಆಂವಗ ಭಾಳ ಪ್ರೀತಿ. +ಆದ್ರ ಹಿಂಗ ಒಂದ ದಿನಾ ಆ ವಿಧಿ ಆಂವನ್ನ ತುಂಬಿದೆಲಿ ಮುಂದಿಂದನ ಕರಕೊಂಡ ಹೋಗಿಬಿಟ್ಟಿತ್ತು. ನನ್ನ ಹಣಿಯ ಶ್ರೀಂಗಾರ ಅಷ್ಟ ಅಲ್ಲಾ ನನ್ನ ಬಾಳಿನ ಚಲುವಿಕೆನ ಸುಧ್ಧಾ ತನ್ನ ಜೊಡಿ ತಗೊಂಡ ಹೋಗಿದ್ದಾ. ಆಂವಾ ಯಾವಾಗಿದ್ರು " ನಿನ್ನ ನೆರಳಿನಂಘ ಯಾವಾಗಿದ್ರು ನಿನ್ನ ಜೋಡಿನ ಇರತೇನಿ " ಅಂತ ಹೇಳತಿದ್ದಾ. ಆದ್ರ ಜೀವನದ ನಡು ಹಾದಿಯೊಳಗ ಅರ್ಧಕ್ಕ ನನ್ನ ಒಬ್ಬಾಕ್ಕಿನ್ನ ಮಾಡಿ ಹೋಗಿ ಬಿಟ್ಟಿದ್ದಾ. ನನಗ ತಿಳುವಳಿಕಿ ಬಂದಾಗಿಂದ ನಾನು ಆಂವನ ಒಡನಾಟದೊಳಗನ ನನ್ನ ಬಾಲ್ಯವನ್ನ ಕಳೆದೆ. ನಮ್ಮ ಬಾಜು ಮನಿಯೊಳಗಿದ್ದ ಅವರ ಕುಟುಂಬಕ್ಕ ಮತ್ತ ನಮ್ಮ ಮನೆಯವರಿಗಿದ್ದ ತುಂಬು ಸ್ನೇಹದ ಸೇತುವೆನ ನಮ್ಮಿಬ್ಬರ ಒಡನಾಟಕ್ಕ ಹಾದಿ ಆಗಿತ್ತು. ಸ್ವಭಾವತಃ ಸೌಮ್ಯ ಆದ ಆಂವನ ಸಾಮಿಪ್ಯ ನಂಗ ಭಾಳ ಸೇರತಿತ್ತು. ಹಿತವಾದ ಗೆಳೆತನದ ಭಾವದೊಳಗ ಹೆಂಗ ದಿನಾ ಕಳೆದು ಬಾಲ್ಯ ಹೋಗಿ ಹರೆಯ ಬಂತೊ ಗೊತ್ತಾಗಲೆ ಇಲ್ಲಾ. +ಇಗೀಗ ಆಂವ ನೋಡೊ ನೋಟ ಅದೇನೊ ಒಂಥರ ಮೈ ನವಿರೇಳುವಂಗಿರತಿತ್ತು. ಆವತ್ತು ಹುಣ್ಣಿಮೆಯ ಸಂಜಿಮುಂದ ನಮ್ಮ ಅಮ್ಮನ ಒಂದು ಸಂದೇಶವನ್ನ ಹೊತ್ತು ಅವರ ಮನಿಗೆ ಹೋಗಿ ಬರೊವಾಗ ಅವರ ಅಂಗಳದಾಗಿನ ಪಾರಿಜಾತ ಗಿಡದ ಕಟ್ಟಿಯ ಹತ್ರ ನಿಂತಿದ್ದ ಆಂವ. ಮತ್ತೇರಿಸುವಂತಿದ್ದ ಆ ನೋಟದೊಳಗಿನ ಕರೆಗೆ ಓಗೊಟ್ಟು ಆಂವನ ಹತ್ತಿರ ಹೋದಾಗ ಗಿಡದ ಮರೆಗೆ ನನ್ನ ಕರೆದು ನನ್ನ ತುಟಿಗೆ ಹೂಮುತ್ತು ಕೊಟ್ಟಿದ್ದ. ನಾನು ನಾಚಿ ಓಡುವ ಪ್ರಯತ್ನದಲ್ಲಿದ್ದಾಗ ನನ್ನ ಕೈ ಹಿಡಿದೆಳೆದು ಹಿಂದಿನಿಂದ ಅಪ್ಪಿ ಕಿವಿಯೊಳಗ " ನಾ ನಿನ್ನ ಭಾಳ ಪ್ರೀತಿ ಮಾಡ್ತಿನಿ " ಅಂತ ಪಿಸುಧನಿಯೊಳಗ ಹೇಳಿದ್ದ. ಆ ಕ್ಷಣದ ಸುಖದಮಲನ್ನ ಹೆಚ್ಚಿಸಲಿಕ್ಕಾಗಿ ಪ್ರಕೄತಿ ಮಂದನೆಯ ತಂಗಾಳಿ ಬಿಸಿತ್ತು. +ಅಲ್ಲಿಯ ಆ ಪಾರಿಜಾತದ ಹೂವಿನ ಜೋಡಿ ಸಂಜೆ ಅರಳಿದ ನಿತ್ಯಮಲ್ಲಿಗೆಯ ಹೂವಿನ ಸುವಾಸನೆ ಸುತ್ತಲು ಮಾದಕತೆಯನ್ನ ಹರಿಸಿತ್ತು. ಮುಂದ ಎಲ್ಲರ ಒಪ್ಪಿಗೆಯಿಂದ ಬಾಳಸಂಗಾತಿಗಳಾಗಿ ಅದೇಷ್ಟು ರಾತ್ರಿಗಳನ್ನ ನಾವಿಬ್ಬರು ಆ ಪಾರಿಜಾತದ ಗಿಡದ ಕಟ್ಟೆಯ ಮೇಲೆ ಸರಸವಾಡುತ್ತಾ ಕಳೆದೆವೊ ಅದರ ಲೆಕ್ಕ ಆ ಚಂದಪ್ಪಗ ಮಾತ್ರ ಗೊತ್ತದ ಅನಿಸ್ತದ. ನಮ್ಮ ಒಲವಿನಂಗಳದೊಳಗ ನಮ್ಮ ಪ್ರತಿರೂಪದಂತಿರೊ ಎರೆಡು ಹೂಗಳರಳಿದರು ನಮ್ಮ ಒಲವು ಮೊದಲಿನಂಘ ನಾವಿನ್ಯತೆಯಿಂದನ ಇತ್ತು. ಬೆಳದಿಂಗಳರಾತ್ರಿಯೊಳಗ ಪಾರಿಜಾತ ಗಿಡದ ಕಟ್ಟಿಯ ಮ್ಯಾಲೆ ನನ್ನ ಮಡಿಲೊಳಗ ತಲಿ ಇಟ್ಟು ಮಲಗಿ ತುಂಬಿದ ಚಂದ್ರನನ್ನ ನೋಡೊದು ಅಂದ್ರ ಆಂವಗ ಭಾಳ ಖುಷಿ ಆಗತಿತ್ತು. +ಎಲ್ಲಾನು ನೆನಪಿಗಿರಲಿ ಅಂತ ಕೊಟ್ಟು ನನ್ನಿಂದ ದೂರ ದೂರ ಹೋದ ಆಂವನ ಬೆನ್ನತ್ತಿ ಹೋಗಿ " ನನ್ನ ಬಿಟ್ಟು ಹೆಂಗ ಹೋದಿ ನೀನು ಮೋಸಗಾರ ಅಂತ ಕೇಳೊಣಂತಾ ಭಾಳ ಸಲಾ ಅನಿಸಿದ್ದದ. ಆದ್ರ ಆಂವನ ಪ್ರತಿರೂಪಧಂಗಿರೊ ಮಕ್ಕಳಿಗಾಗಿ ಬಲವಂತವಾಗಿ ನನ್ನನ್ನ ನಾನು ಜೀವಿಸೊ ಹಂಗ ಮಾಡಿಕೊಂಡೇನಿ. ಇವತ್ತಿಗೆ ಆಂವ ಹೋಗಿ ಒಂದು ವರ್ಷ ಆಗೇದ. ಇವತ್ತ ಆಂವಾ ಬರತಾನ, ನೆನಪಿನ ಬಲಿಯಿಂದ ಹೊರಗ ಬಂದು ಮತ್ತೊಂದ ಸಲಾ ಮಾಡಿದ್ದ ಅಡಿಗಿನೆಲ್ಲಾ ನೋಡಿ ಯಾವದು ಮರೆತಿಲ್ಲಾ ಅಂತ ಖಾತ್ರಿ ಮಾಡಕೊಂಡು, ಆಂವಗ ಬಾಳಿ ಎಲಿಯೊಳಗ ಊಟಾ ಮಾಡೊದಂದ್ರ ಭಾಳ ಸೇರತಿತ್ತು. ಎಲಿಯೊಳಗಂದ್ರ ನಾಲ್ಕ ತುತ್ತು ಜಾಸ್ತಿನ ಊಟಾ ಮಾಡತಿದ್ದಾ. ದೊಡ್ಡದೊಂದು ಕುಡಿಬಾಳಿ ಎಲಿಯೊಳಗ ಮಾಡಿದ್ದ ಅಡಗಿನೆಲ್ಲಾ ಬಡಿಸಿ ಪಾರಿಜಾತದ ಗಿಡದ ಕಟ್ಟಿ ಮ್ಯಾಲೆ ತಂದಿಟ್ಟೆ. ಆಂವನ್ನ ನಾ ಯಾವಾಗಿದ್ರು ಆಂವನ ಹೆಸರು ಹಿಡದು ಏಕವಚನದೊಳಗನ ಕರಿತಿದ್ದೆ. ನಾ ಹಂಗ ಕರೆಯೊದನ ಆಂವಗ ಸೇರತಿತ್ತು. ಮತ್ತ ನಾ ಹಂಗ ಕರಿಲಿ ಅನ್ನೊದ ಆಂವನ ಇಚ್ಛಾನು ಆಗಿತ್ತು. ಆದ್ರ ಇವತ್ತ ತುಂಬಿದೆಲಿ ಬಡಿಸಿಟ್ಟು "ಕಾವ್ ಕಾವ್" ಅಂತ ಕರಿಬೇಕಾದ್ರ ಉಸಿರು ನಿಂಥಂಗನಿಸ್ತಿತ್ತು. ಉಕ್ಕಿ ಬರೊ ಕಣ್ಣಿರನ್ನ ತಡಕೊಂಡು ಆಂವಗಾಗಿ ಕಾಯ್ದೆ. +ಸ್ವಲ್ಪ ಹೊತ್ತಿನ್ಯಾಗ ಸದ್ದಿಲ್ಲದಂಘ ಹಾರಿ ಬಂದು ಅಲ್ಲೆ ಇದ್ದ ಕುಂಬಿ ಮ್ಯಾಲೆ ಕೂತು ಹುಳು ಹುಳು ನನ್ನ ಮಾರಿನ ನೋಡಲಿಕತ್ತು. ಅಲ್ಲೆ ಇದ್ದ ಮಕ್ಕಳಿಗೆ ನಮಸ್ಕಾರ ಮಾಡಲಿಕ್ಕೆ ಹೇಳಿ ನಾನು ಸ್ವಲ್ಪ ಮುಂದ ಹೋಗಿ ಬಾ ಅಂತ ಕರೆಯೊಹಂಗ ಎಲಿನ ಮುಂದ ಸರಿಸಿದೆ. ಅದು ಹಾರಿ ಬಂದು ಎಲಿ ಮುಂದ ಕೂತು ಎಲಿಯೊಳಗಿನ ಭಜಿಯನ್ನ ತನ್ನ ಬಾಯೊಳಗ ತಗೊಂಡು ಮತ್ತ ನನ್ನ ಮಾರಿನ ನೋಡಲಿಕತ್ತು. ಹೌದು ಆಂವಗ ಬಟಾಟಿ ಭಜಿ ಅಂದ್ರ ಭಾಳ ಸೇರತಿದ್ವು. ಕಾಡಿಬೇಡಿ ಮ್ಯಾಲಿಂದ ಮ್ಯಾಲೆ ಇಚ್ಛಾ ಪಟ್ಟು ಮಾಡಿಸಿಕೊಂಡು ತಿಂತಿದ್ದಾ. ಕಣ್ಣಿರಿನಿಂದ ಮಸುಕಾದ ದೄಷ್ಠಿಯೊಳಗಿಂದನ ಎಲಿಒಳಗ ತಡಬಡಿಸಿ ಇನ್ನೊಂದು ಭಜಿಯನ್ನ ತಗೊಂಡು ಅದರ ಕೊಕ್ಕಿನ ಮುಂದ ಹಿಡದೆ. ಅದು ಬಗ್ಗಿ ತನ್ನ ಕೊಕ್ಕಿನಿಂದ ಮೃದುವಾಗಿ ನನ್ನ ಬೆರಳನ್ನ ಸ್ಪರ್ಷಿಸುತ್ತಾ ತನಗಿಷ್ಟದ ಭಜಿಯನ್ನ ತಗೊಂಡು ಹಾರಿ ಹೋಯಿತು. ಆ "ಕಾಕ ಸ್ಪರ್ಷ" ದೊಳಗ ಆಂವಾ " ನಾ ಯಾವಾಗಲು ನಿನ್ನ ಹತ್ರ, ನಿನ್ನ ಸುತ್ತಮುತ್ತನ ಇದ್ದೇನಿ ಮತ್ತ ಯಾವಾಗಲು ಇರತೇನಿ ಅಂತ ಹೇಳಲಿಕತ್ತಾನೇನೊ ಅನ್ನೊ ಅನುಭೂತಿ ಇತ್ತು. ಆ ಅಪೂರ್ವ ಅನುಭೂತಿಯಿಂದ ಮನಸ್ಸು ಹೃದಯ ತಪ್ತವಾಗಿ ಹೋತು……. +***** \ No newline at end of file diff --git a/PanjuMagazine_Data/article_1021.txt b/PanjuMagazine_Data/article_1021.txt new file mode 100644 index 0000000000000000000000000000000000000000..078a7aaf42793fc72416ecc83b28264cc12fa082 --- /dev/null +++ b/PanjuMagazine_Data/article_1021.txt @@ -0,0 +1,6 @@ +ಕಾಲೇಜ್ ಗ್ರೌಂಡಲ್ಲಿ ಎಂದಿನಂತೆ ಇಳಾ ಮಂಗಳೂರು ಮಂಜ ಮತ್ತು ಸರಿತಾ ಮಾತಾಡ್ತಾ ಕೂತಿದ್ದಾಗ "ಏನ್ ಚಿಲ್ರೆ ಸಮಸ್ಯೆ ಗುರೂ, ಥೂ..!" ಅಂತ ಗುಂಡಣ್ಣ ಮತ್ತು ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ ಎಂಟ್ರಿ ಕೊಟ್ರು. "ತಿಪ್ಪ ಅವ್ರು ಬೆಳಬೆಳಗ್ಗೆ ಯಾರ್ಗೋ ಬಯ್ತಾ ಇರೋ ಹಾಗೆ ಉಂಟಲ್ಲಾ ಮಾರ್ರೆ" ಅಂದ ಮಂಜ. "ಹೂಂ ಕಣೋ ಮಂಜ. ಈ ಬಸ್ಸೋರು ಒಂದ್ರೂಪಾಯಿ, ಎರಡ್ರೂಪಾಯಿ ಚಿಲ್ರೆ ಇದ್ರೆ ಕೊಡಂಗೇ ಇಲ್ಲ. ಟಿಕೇಟ್ ಹಿಂದ್ಗಡೆ ಬರ್ದೇನೋ ಕೊಡ್ತಾರೆ, ಆದ್ರೆ ಇಳಿಯೋ ಹೊತ್ಗೆ ರಷ್ಷಾಗಿದ್ದಾಗ್ಲೇ ಕಂಡೆಕ್ಟರ್ ಚಿಲ್ರೆ ಕೊಡೋದ್ ಬಿಟ್ಟು ಇನ್ನೆಲ್ಲೋ ರಷ್ಷೊಳಗೆ ಹೋಗ್ಬಿಟ್ತಾನೆ. ಇಳಿಯೋ ಗಡಿಬಿಡೀಲಿ ದಿನಾ ಚಿಲ್ರೆ ಖೋತ. ಥೋ…" ಅಂದ. "ಹೂಂ. ಇನ್ನು ಡ್ರೈವರೇ ಕಂಡೆಕ್ಟರೂ ಆಗಿರೋ ಪುಷ್ಪಕ್ ಬಸ್ಸುಗಳಲ್ಲೂ ಅದೇ ಕತೆ. ಸ್ಟಾಪ್ ಬಂದಾಗ ಮುಂದೇ ಬಂದು ಇಳೀಬೇಕಿದ್ರೂ ಒಂದ್ರೂಪಾಯಿ, ಎರಡ್ರುಪಾಯಿ ಚಿಲ್ರೆ ಇಸ್ಕೊಂಡು ಇಳ್ಯೋಕೆ ಒಂಥರಾ ಆಗುತ್ತೆ. ಚಿಲ್ರೆ ಕೊಡ್ರಿ ಅಂದಾಗ ಎಷ್ಟು ಅಂತಾನೆ, ಇಷ್ಟೊಳ್ಳೆ ಬಟ್ಟೆ ಹಾಕಿ ದೊಡ್ಡೋನ ಥರ ಕಾಣ್ತೀಯ, ಒಂದ್ರೂಪಾಯಿ ಚಿಲ್ರೆ ಕೇಳೋಕೆ ನಾಚ್ಕೆ ಆಗೋಲ್ವ ಅನ್ನೋ ತರ ನೋಡ್ತಾನೆ. ದಿನಾ ಒಂದೊಂದ್ರೂಪಾಯಿ ಕೊಚ್ಕೊಂಡೋಗ್ತಿದೆ ಅನ್ಸಿದ್ರೂ ಒಂದ್ರೂಪಾಯ್ ಚಿಲ್ರೆ ಅಂತ ಹೆಂಗೆ ಹೇಳೋದು" ಅಂತ ಒಂಥರಾ ಮುಖ ಮಾಡಿದ ಗುಂಡ. "ಹೂಂ ಅರ್ಥ ಆಗುತ್ತೆ ಮಿಸ್ಟರ್ ರೌಂಡ್. ಹಿಂದ್ಗಡೆ ಎಲ್ಲಾ ಹುಡ್ಗೀರ್ ನಿಂತಿರ್ಬೇಕಾದ್ರೆ ಡ್ರೈವರ್ ಹತ್ರ ಒಂದ್ರುಪಾಯಿ ಚಿಲ್ರೆ ಕೇಳೋಕೆ ನಾಚ್ಕೆ ಆಗೆ ಆಗುತ್ತೆ ಬಿಡಿ" ಅಂದ್ಲು ಇಳಾ. ಎಲ್ಲಾ ಗೊಳ್ ಅಂದ್ರು ಒಂದ್ಸಲ. +"ಬರೀ ಬಸ್ಸಲ್ಲಿ ಅಲ್ಲ, ಅಂಗ್ಡೀಲೂ ಚಿಲ್ರೆ ಕೊಡಲ್ಲ. ಒಂದು-ಎರಡು ರೂಪಾಯಿಗೆಲ್ಲಾ ಚಾಕಲೇಟ್ ಕೊಡೂದ್ ಹಳೇ ಕತೆ. ಈಗ ಐದ್ರುಪಾಯಿ ಚಿಲ್ರೆ ಇಲ್ಲ, ಚಾಕ್ಲೇಟ್ ಕೊಡ್ಲಾ ಅಂತ್ರು ಕಾಣಿ" ಅಂದ್ಲು ಸರಿ ಅಲಿಯಾಸ್ ಸರಿತಾ. "ಸರಿ ಹೇಳೋದ್ ಸರೀ…" ಅಂತ ಎಲ್ಲಾ ರಾಗ ಎಳೆದ್ರು. ಮತ್ತೊಮ್ಮೆ ’ಗೊಳ್’ ನಗುವಿನ ಅಲೆ ಸ್ವಲ್ಪ ತಣ್ಣಗಾದ ಇಳಾ ಮಾತು ಮುಂದುವರಿಸಿದ್ಲು. "ಈ ಸಮಸ್ಯೆಗೆ ಏನೂ ಪರಿಹಾರನೇ ಇಲ್ವಾ, ಏನ್ಮಾಡ್ಬೋದು ಮಿಸ್ಟರ್ ರೌಂಡ್" ಅಂತ ಗುಂಡನ್ನ ಮಾತಿಗೆ ಎಳೆದ್ಲು. ಮೊದಲೇ ಶೇಪ್ ಔಟಾದಂತಾಗಿ ತಣ್ಣಗೆ ಕೂತಿದ್ದ ಗುಂಡನ ಮುಖ ಈಗ ಮತ್ತೆ ಅರಳಿದಂತಾಗಿ ಮಾತಿಗೆ ಶುರುವಿಟ್ಟ. "ಇಲ್ಲ ಅಂತೇನಿಲ್ಲ. ಹುಬ್ಳಿ, ಧಾರವಾಡ ಕಡೆ ಅಂಗಡಿಯವರು ಚಿಲ್ರೆ ಬದ್ಲು ಟೋಕನ್ ವ್ಯವಸ್ಥೆ ಮಾಡಿದಾರೆ ಅಂತ ಓದಿದ ನೆನ್ಪು" ಅಂದ. "ಓ… ಏನದು?" ಅಂದ್ರು ಎಲ್ಲ. "ಅಂಗಡಿಯವ್ರ ಸಂಘದವ್ರು ತಮ್ಮದೇ ಒಂದಿಷ್ಟು ಪ್ಲಾಸ್ಟಿಕ್ ಟೋಕನ್ಗಳ್ನ ಮಾಡ್ಕೊಂಡಿದಾರೆ. ಒಂದ್ರುಪಾಯಿ, ಎರಡ್ರುಪಾಯಿ, ಐದ್ರುಪಾಯಿ ಹೀಗೆ. ಚಿಲ್ರೆ ಬದ್ಲು ಅದನ್ನೇ ಕೊಡೋದು ಅವ್ರು. ಆ ಸುತ್ತಮುತ್ತಲ ಏರಿಯಾಗಳ ಅಂಗಡಿಗಳವ್ರಿಗೆಲ್ಲಾ ಆ ಟೋಕನ್ಗಳ ಪರಿಚಯ ಇರತ್ತೆ. ಹಂಗಾಗಿ ಮುಂದಿನ ಸಲ ಸಾಮಾನು ತಗೋವಾಗ ಈ ಟೋಕನ್ಗಳು ಬದಲಾಗುತ್ವೆ" ಅಂದ. "ಓ, ಸೂಪರಲಾ! ಪ್ರತೀ ಸಲ ಚಿಲ್ರೆ ಇಲ್ದಿದ್ದಾಗ್ಲೂ ಚಾಕ್ಲೇಟ್ ತಗೋಳೋದು ತಪ್ಪತ್ತಲ್ಲ ಮಾರ್ರೆ" ಅಂದ ಮಂಜ. "ಹೂಂ…" ಅಂದ್ರು ಎಲ್ಲಾ. "ಆದ್ರೆ ಈ ಐಡಿಯಾ ಸರಿಗಿಲ್ಲ ಕಣ್ಲಾ, ನಮ್ಕಡೆನೂ ಅಂಗಡಿಯವ ಚಿಲ್ರೆ ಇಲ್ದಿದ್ದಾಗ ಎರಡು ರೂಪಾಯಿ ಮುಂದಿನ ಸಲ ನೀವೇ ಕೊಡಿ ಅಂತನೋ ಅಥವಾ ಮೂರು ರೂಪಾಯಿ ಮುಂದಿನ ಸಲ ಸಾಮಾನು ತಗೋವಾಗ ಇಸ್ಕೋಳಿ ಅಂತಲೋ ಚುಕ್ತಾ ಮಾಡ್ತಾನೆ. ಇವೆಲ್ಲಾ ಅದೇ ಏರಿಯಾದಲ್ಲಿರೋರಿಗೆ ಓಕೆ. ಆದ್ರೆ ಬೇರೆ ಏರಿಯಾದೋರ ಗತಿ ಏನು. ಇಲ್ಲಿ ಯಾರ ಮನೆಗೋ ಬಂದಾಗ ಈ ಟೋಕನ್ ತಗೊಂಡ ತಪ್ಪಿಗೆ ಪ್ರತೀ ಸಲ ಅಲ್ಲಿಗೇ ಬರ್ಬೇಕಾ? ಏನ್ ಸೂಪರ್ ಐಡಿಯಾನಪ್ಪ ಇದು" ಅಂತ ಕೊಕ್ಕೆ ತೆಗ್ದ ತರ್ಲೆ ತಿಪ್ಪ. ಯಾರಿಗೂ ಏನು ಹೇಳ್ಬೇಕು ಅಂತ ಗೊತ್ತಾಗ್ದೆ ತೆಪ್ಪಗಾದ್ರು. +"ನಮ್ಮ ಸರ್ಕಾರದವ್ರೇ ಯಾಕೆ ಚಿಲ್ರೆ ನಾಣ್ಯಗಳ್ನ ಹೆಚ್ಚೆಚ್ಚು ಟಂಕಿಸಿ ಈ ಚಿಲ್ರೆ ಕೊರತೆ ನೀಗಿಸಬಾರ್ದು?" ಅಂದ್ಲು ಇಳಾ. "ಸರ್ಕಾರದವ್ರು ಮಾಡುತ್ರು. ಬಸವಣ್ಣ, ಅಂಬೆಡ್ಕರ್, ಶಿವಾಜಿ ಹೀಗೆ ಸರ್ಕಾರ ಪದೇ ಪದೇ ಟಂಕಿಸೋ ರೂಪಾಯಿ ನಾಣ್ಯಗಳು ಎಲ್ ಹೋತ್ತು ಕಂಡಿದ್ರಾ ಯಾರಾರು?" ಅಂದ್ಲು ಸರಿತಾ. ಅಚಾನಕ್ಕಾಗಿ ಮೂಡಿದ ಈ ಪ್ರಶ್ನೆಗೆ ಯಾರಿಗೂ ಉತ್ರ ಹೊಳೀಲಿಲ್ಲ. ಹೇಳೋಕೆ ಅವ್ಳಿಗೂ ಉತ್ರ ಗೊತ್ತಿರ್ಲಿಲ್ಲ. "ಸಿಕ್ತೂ ಅಂತನೇ ಇಟ್ಕಳಿ. ಹತ್ತು ಹದಿನೈದು ರೂಪಾಯಿಗೆ ಚಿಲ್ರೆನಾ ಯಾವಾಗ್ಲೂ ಹೊತ್ಕೊಂಡ್ ತಿರ್ಗೂದೂ ಅಸಾಧ್ಯ ಬಿಡಿ ಮಾರ್ರೆ" ಅಂದ ಮಂಜ. ಹೌದೌದು ಅನ್ನೋ ತರ ತಲೆ ಹಾಕಿದ್ರು ಎಲ್ಲರೂ. "ಕಾಯಿನ್ನಿನ ಬದ್ಲು ಒಂದ್ರುಪಾಯಿ, ಎರಡ್ರುಪಾಯಿ, ಐದ್ರುಪಾಯಿ ನೋಟುಗಳ್ನ ಹೆಚ್ಚೆಚ್ಚು ಮುದ್ರಿಸಬಹುದು. ಆದ್ರೆ ಪೇಪರಿಗೆ ಮರಗಳ ನಾಶ, ಕಾಯಿನ್ ಬಾಳಿಕೆ ಬಂದಷ್ಟು ದಿನ ಬರದೇ, ಬೇಗ ಹರ್ದೋಗೋ ನೋಟುಗಳು… ಇವೆಲ್ಲಾ ಯೋಚ್ನೆ ಮಾಡಿದ್ರೆ ಇದೂ ಒಳ್ಳೆಯ ಯೋಚ್ನೆ ಅಲ್ಲ ಅನಿಸುತ್ತೆ" ಅಂದ ಗುಂಡ. ಹೌದೆನ್ನುವಂತೆ ತಲೆ ಆಡಿಸಿದ್ರೂ ಅದಕ್ಕೆ ಪರ್ಯಾಯ ಐಡಿಯಾ ಏನು ಕೊಡೋದು ಅಂತ ಹೊಳೀದೇ ಎಲ್ಲಾ ಸ್ವಲ್ಪ ಮೌನವಾಗಿ ಕೂತ್ರು. +ಮೌನ ಮುರಿಯೋ ಥರಾ ಸರಿತಾ ಮತ್ತೆ ಮಾತಿಗಿಳಿದ್ಳು. "ನನ್ನತ್ರ ಒಂದು ಮಸ್ತ್ ಐಡಿಯಾ ಇತ್ತು ಕೇಣಿ" ಅಂದ್ಲು. ಎಲ್ಲಾ ’ಹೇಳು’ ಅನ್ನೋ ಹಾಗೆ ಅವ್ಳ ಮುಖನೇ ನೋಡಿದ್ರು. "ಅಂಗ್ಡೀಲಿ, ಬಸ್ಸಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ಸ್ವೈಪಿಂಗ್ ಮೆಷಿನ್ ಇಟ್ರೆ ಹೆಂಗಿರುತ್ತು?" ಅಂದ್ಲು. "ನೂರಾ ಐವತ್ತಮೂರು, ಮುನ್ನೂರ ತೊಂಭತ್ತ ಏಳು… ಹೀಗೆ ಎಷ್ಟು ರೂಪಾಯಿಯಾದ್ರೂ ಅದರಲ್ಲಿ ಸ್ವೈಪ್ ಮಾಡೂಕಾತ್ತು. ಈಗೆಂತೂ ಹೆಚ್ಚಿನ ಬ್ಯಾಂಕುಗಳಲ್ಲಿ ಕ್ರೆಡಿಟ್ ಕಾರ್ಡು ಸ್ವೈಪ್ ಮಾಡೋದ್ರ ಮೇಲಿದ್ದ ಚಾರ್ಜು ತೆಗ್ದಿರೋದ್ರಿಂದ ದುಡ್ಕೊಡೋಕೂ ಇದ್ಕೂ ಏನೂ ವ್ಯತ್ಯಾಸ ಕಾಂಬೂದಿಲ್ಲ. ಬಸ್ ಕಂಡಕ್ಟ್ರಿಗೂ ಇದೇ ತರದ್ ಒಂದು ಮೆಷೀನ್ ಕೊಡೂದು, ಈಗಿರೋ ಟಿಕೆಟ್ ಮೆಷೀನ್ ತರ. ಟಿಕೆಟ್ಗೆ ದುಡ್ಡು ಎಷ್ಟಾತ್ತೋ ಅಷ್ಟಕ್ಕೆ ಸ್ವಾಪ್ ಮಾಡೂಕಾತ್ತು. ಬಸ್ ಕಂಡಕ್ಟರ್ ಚಿಲ್ರೆ ಚಿಲ್ರೆ ಅಂತ ಮಾರಿ ಕೆಂಪ್ ಮಾಡೂದೂ ತಪ್ಪುತ್ತು. ಹೆಂಗೆ?" ಅಂದ್ಳು. ಎಲ್ಲರ ಕಣ್ಣುಗಳು ಒಮ್ಮೆ ಮಿಂಚಿದ್ವು. "ಸರಿ ಹೇಳಿದ್ ಮೇಲೆ ಸರಿನೇ" ಅಂದ್ಲು ಇಳಾ. "ಹೌದು ಸರಿ, ಸರಿ…" ಅಂತ ಎಲ್ಲಾ ರಾಗ ಎಳೆದು ನಕ್ರು. +"ಐಡಿಯಾ ಏನೋ ಸರಿ. ಆದ್ರೆ ಅದೆಲ್ಲಾ ಆಗಿ ಹೋಗೋದಾ? ಸ್ವೈಪ್ ಮೆಷೀನು ಅಂದ್ರೆ ಅದ್ಕೆ ನೆಟ್ವಕ್ರೂ, ಇಂಟರ್ನೆಟ್ಟು… ಮಣ್ಣು ಮಸಿ ಬೇಡ್ವಾ? ನಮ್ಮಲ್ಲಿ ಕರೆಂಟೇ ನೆಟ್ಟಗಿರುಲ್ಲ. ಅಂತದ್ರಲ್ಲಿ ನೆಟ್ವರ್ಕು, ಮತ್ತೆ ಇದು ಬೇರೆ… ಹೆಂಗೆ ವರ್ಕೌಟ್ ಆಗುತ್ತೋ" ಅಂತ ಕೊಂಕು ತೆಗೆದ ತಿಪ್ಪ. ತಿಪ್ಪನ ಬದ್ಲು ಬೇರೆ ಯಾರಾದ್ರೂ ಈ ಮಾತು ಹೆಳಿದ್ರೆ ಸರಿತಾಗೆ ಸಿಟ್ಟೆಲ್ಲಾ ನೆತ್ತಿಗೇರಿ ಎರಡು ತಪರಾಕಿ ತಟ್ಟೇ ಬಿಡುತಿದ್ಲೋ ಏನೋ. ಆದ್ರೆ ತಿಪ್ಪನ ಸ್ವಭಾವ ಗೊತ್ತಿದ್ರಿಂದ ಸುಮ್ಮನಾದ್ಲು. ಆದ್ರೂ ಎಲ್ರಿಗೂ ತಿಪ್ಪನ ಮೇಲೆ ಸಿಟ್ಟು ಬಂದಿತ್ತು. "ಕೆಲಸ ಆಗ್ಬೇಕು ಅಂದ್ರೆ ಏನಾರೂ ಒಂದು ರೀತಿಗಳಿದ್ದೇ ಇರುತ್ತೆ ಕಣ್ರೀ ತಿಪ್ಪ ಅವ್ರೆ. ಹಿಂದಿನ ಸಲ ಬೆಂಗಳೂರಿಂದ ಬೀರೂರು ತನಕ ನಿಮ್ಮ ಗರ್ಲ್ ಫ್ರೆಂಡ್ ಜೊತೆ ಮಾತಾಡ್ತಾ ಹೋಗಿದ್ರಿ ಅಂತ ಹೇಳ್ತಾ ಇದ್ರಿ ತಾನೆ? ಫ್ರೆಂಡಿಗೆ ಮಾತಾಡೋಕೆ ನೆಟ್ವರ್ಕು ಇರತ್ತೆ ಅಂದ್ರೆ ಕಂಡಕ್ಟರಿಗೆ ಕಾರ್ಡು ಸ್ವೈಪ್ ಮಾಡೋಕೆ ನೆಟ್ವರ್ಕು ಸಿಗೋಲ್ವಾ ಆ ರೂಟಲ್ಲಿ" ಅಂದ್ಲು. ತಿಪ್ಪಂಗೇ ಅನಿರೀಕ್ಷಿತ ಟಾಂಗ್ ಬಿದ್ದಿದ್ದು ನೋಡಿ ಉಳಿದವ್ರಿಗೆಲ್ಲಾ ಆಶ್ಚರ್ಯ ಆಯ್ತು. ತಿಪ್ಪನ ಮುಖ ಇಂಗು ತಿಂದ ಮಂಗನ ಹಂಗಾಯ್ತು. +"ಹೌದು. ಮಧ್ಯ ಮಧ್ಯ ನೆಟ್ವರ್ಕು ಇಲ್ದೇ ಹೋದ್ರೂ ನೆಟ್ವರ್ಕು ಸಿಕ್ಕೋ ಕಡೆ ಎಂತೂ ಬಸ್ಸಲ್ಲಿ ಇದನ್ನ ಬಳಸ್ಬೋದು. ಸಿಟಿ ಒಳಗೆ ಓಡಾಡೋ ಐದ್ರೂಪಾಯಿ, ಹರ್ತೂಪಾಯಿ ಚಾರ್ಜಿನ ಬಸ್ಸುಗಳಲ್ಲಿ ಈಗಿರೋ ಕಾರ್ಡ್ ಸ್ವೈಪ್ ತರ ಮಾಡೋದು ಅಷ್ಟು ಪ್ರಾಕ್ಟಿಕಲ್ ಅನಿಸದೇ ಇದ್ರೂ ದೂರ ಪ್ರಯಾಣದ ಬಸ್ಸುಗಳಲ್ಲಿ ಆರಾಮಾಗಿ ಮಾಡ್ಬೋದು" ಅಂದ ಗುಂಡ. "ಹೂಂ ಹೌದು ಮಾರ್ರೆ, ಈಗ ನಾವು ಚಿಮಣೆಣ್ಣೆ ದೀಪದ ಕಾಲ್ದಲ್ಲೋ ಕಲ್ಲು ಗೀರಿ ಚೆಂಕಿ ಹಚ್ಚೋ ಆದಿವಾಸಿಗಳ ಕಾಲ್ದಲ್ಲೋ ಇಲ್ಲ. ಕರೆಂಟಿಲ್ದಿದ್ರೆ ಬೇಟರಿ" ಅಂದ ಮಂಜ. "ಬಾಟ ಗೊತ್ತು, ಬೇಟ, ಬೇಟಿ, ಬೇಟೆ ಗೊತ್ತು. ಇದ್ಯಾವ್ದುರಿ ಕರೆಂಟಿಲ್ಲದಿದ್ದಾಗಿನ ಬೇಟೆ ರೀ!?" ಅಂದ್ಲು ಇಳಾ. "ಅದು ಬೇಟರೀ ಅಲ್ಲ ಇಳಾ ಅವ್ರೆ ಬ್ಯಾಟರಿ, ಬ್ಯಾಟ್ರಿ, ರೀಚಾರ್ಚಬಲ್ ಬ್ಯಾಟ್ರಿ" ಅಂದ ಗುಂಡ ಮಂಜನ ಸಪೋರ್ಟಿಗೆ ಬರುತ್ತ. "ಸರಿಯಪ್ಪ ಪೇಟೇಲೇನೋ ಕರೆಂಟು, ನೆಟ್ಟು, ಬ್ಯಾಟ್ರಿ. ಅಲ್ಲಿ ಸಾವಿರಗಟ್ಲೆ ವ್ಯವಹಾರನೂ ಆಗತ್ತೆ ಅಂತಿಟ್ಕೊಳ್ಳೋಣ. ಹಂಗಾಗಿ ಅವ್ರಿಗೆ ಈ ಸ್ವ್ಯಾಪು ಲಾಭನೂ ತರ್ಬೋದು. ಆದ್ರೆ ಹಳ್ಳಿ ಕಡೆ, ಕರೆಂಟು-ನೆಟ್ಟು…" ಅಂತ ಮತ್ತೆ ಕೇಳ್ಲೋ ಬೇಡ್ವೋ ಅನ್ನೋ ತರ ರಾಗ ತೆಗೆದ ತಿಪ್ಪ. "ಹಳ್ಳಿ ಕಡೆ ನಮ್ಮ ಕಡ ಸಿಸ್ಟಮ್ಮು ಇದ್ದೇ ಇತ್ತಲ್ಲ ತಿಪ್ಪಣ್ಣ" ಅಂದ್ಲು ಸರಿ. "ಹಳ್ಳಿ ಕಡೆ ಕಡವೆ ಅನ್ನೋ ಪ್ರಾಣಿ ಇರುತ್ತೆ. ಅದ್ನ ಬೇಟೆ ಆಡ್ತಾರೆ ಅಂತ ಕೇಳಿದ್ದ್ರೆ. ಈ ಬೇಟೆಗೂ, ಚಿಲ್ರೆ ಸಮಸ್ಯೆಗೂ ಏನು ಸಂಬಂಧ?" ಅಂದ್ಲು ಏನೂ ಅರ್ಥವಾಗದ ಇಳಾ. ಮುಗುಳ್ನಕ್ಕ ಮಂಜನೇ ಉತ್ತರಿಸಿದ. "ಕಡ ಅಂದ್ರೆ ಸಾಲ ಅಂತ ಇಳಾ ಅವ್ರೆ. ಎರಡ್ರುಪಾಯಿ ಮುಂದಿನ ಸಲ ಕೊಡಿ, ಮೂರು ರೂಪಾಯಿ ಮುಂದಿನ್ಸಲ ಇಸ್ಕೋಳಿ.. ಅದೇ ಆವಾಗ ತಿಪ್ಪೂ ಭಾಯಿ ಹೇಳ್ತಾ ಇದ್ರಲ್ಲ ಅದು" ಅಂತ ಧ್ವನಿಗೂಡಿಸಿದ ಗುಂಡ. "ಮಕ್ಳಾ ಕೊನೆಗೂ ನನ್ನ ಬುಡಕ್ಕೆ ಬಂದು ಬಿಟ್ರಿ. ನಡೀರಿ ನಡೀರಿ ಕ್ಲಾಸಿಗೆ ಟೈಮಾಗ್ತಾ ಬಂತು. ಒಂದಿನನಾದ್ರೂ ಸರಿಯಾದ ಟೈಮಿಗೆ ಕ್ಲಾಸಿಗೆ ಹೋಗಣ" ಅಂದ. ಎಲ್ಲಾ ಮತ್ತೆ ನಗ್ತಾ ಮೇಲೆದ್ದು ಕ್ಲಾಸಿನ ಕಡೆ ಹೆಜ್ಜೆ ಹಾಕಿದ್ರು. \ No newline at end of file diff --git a/PanjuMagazine_Data/article_1022.txt b/PanjuMagazine_Data/article_1022.txt new file mode 100644 index 0000000000000000000000000000000000000000..531277430b4599ab1dfd9219f3f5a1f8f73d098f --- /dev/null +++ b/PanjuMagazine_Data/article_1022.txt @@ -0,0 +1,7 @@ +ದಿನಾ ಆಫೀಸಿಂದ ಲೇಟಾಗಿ ಮನೆಗೆ ಬರುವವನಿಗೆ ಒಂದು ದಿನ ಬೇಗ ಮನೆಗೆ ಬಂದು ಬಿಟ್ರೆ ಎಲ್ಲಿಲ್ಲದ ಚಡಪಡಿಕೆ. ಮನೆಯಲ್ಲಿರುವರ ಮಾತಾಡಿಸುವಿಕೆಗಿಂತ ಆಫೀಸಿನದೇ ಚಿಂತೆ. ಅಲ್ಲಿ ಕೆಲಸವಿದ್ದುದ್ದನ್ನು ಬಿಟ್ಟು ಬಂದುದಕಲ್ಲ, ಏನೂ ಕೆಲಸವಿಲ್ಲದಿದ್ದರೂ ಇದೇ ತರ. ಸಮಸ್ಯೆ ಕೆಲಸದ್ದಲ್ಲ. ಅದಿಲ್ಲದಿದ್ದಾಗ ಇರೋ ಬಿಡುವಿನದು. ದಿನಾ ಶಾಲೆ. ಟ್ಯೂಷನ್ನು, ಹೋಂವರ್ಕು ಅಂತ ಓದಿನಲ್ಲೇ ಮುಳುಗಿ ಹೋಗಿ ಮನೆಗೆ ಬಂದವರನ್ನು ಮಾತಾಡಿಸಲೂ ಬಿಡುವಿಲ್ಲದ ಮಗನಿಗೆ ಓದಿನ ಒಂದು ಹಂತ ದಾಟಿದ ನಂತರ ತೀರಾ ಕಸಿವಿಸಿ. ಮುಂದಿನ ಹಂತ ಏನೆಂದು ನಿರ್ಧರಿತವಾಗಿದ್ದರೂ ಅಲ್ಲಿಯವರೆಗೆ ಕಾಯಲಾಗದ ತಳಮಳ. ಕೆಲ ದಿನಗಳ ರಜೆಯಾದರೂ ಏಕೆ ಬರುತ್ತೋ ಎಂಬ ಶಾಪ. ಸಮಸ್ಯೆ ಶಾಲೆ,ಓದು, ಹೋಂವರ್ಕಿನದಲ್ಲ. ಸಮಸ್ಯೆ ಬಿಡುವಿಗೆ ಒಗ್ಗದ ಮನಸಿನದು. ಗಂಡ ಹೆಸರಾಂತ ಆಟಗಾರ. ಇತ್ತೀಚೆಗಷ್ಟೇ ನಿವೃತ್ತನಾಗಿ ಮನೆ ಸೇರಿದ್ದಾನೆ. ಆ ಧಾರಾವಾಹಿ ಯಾಕೆ ನೋಡುತ್ತೀಯ, ಕಿಟಕಿಗೆ ಈ ಬಣ್ಣದ ಕರ್ಟನ್ ಯಾಕೆ ಅಂತ ಇಷ್ಟು ವರ್ಷಗಳಿಲ್ಲದ ಪ್ರಶ್ನೆ. ದಿನಾ ಸಂಜೆ ಎಲ್ಲಾದರೂ ಹೊರಗಡೆ ಹೋಗೋಣ ಬಾ ಅಂತ ನಿತ್ಯದ ಧಾರಾವಾಹಿ ನೋಡಲೂ ಬಿಡಲ್ಲ ಅನ್ನೋದು ಹೆಂಡತಿಯ ಅಳಲು. ಇಲ್ಲಿ ಮತ್ತೆ ಸಮಸ್ಯೆ ಬಿಡುವಿನದೇ.ಗಂಡನ ಬಿಡುವು,ಹೆಂಡತಿಯ ಬಿಡುವಿನೊಂದಿಗೆ ಹೊಂದಾಣಿಕೆಯಾಗದುದು. ಯಾವಾಗಲೂ ಏನಾದರೂ ಕೆಲಸ ಮಾಡ್ತನೇ ಇದ್ದವರಿಗೆ ಒಂದರೆಕ್ಷಣ ಸುಮ್ಮನೆ ಕೂರುವುದೂ ಕಷ್ಟವೇ. ಆದರೆ ತೀರಾ ಕಷ್ಟಪಡುವಾಗ ಅಂದುಕೊಳ್ಳುತ್ತಿದ್ದ ಒಂದು ದಿನ ತಾನೂ ಆರಾಮಾಗಿರಬೇಕೆಂಬ ಆಸೆ ಇದ್ದಕ್ಕಿದ್ದಂತೆ ನೆರವೇರಿ ತಾನೂ ಆರಾಮವಾಗಿರಬಹುದಾದ ದಿನ ಬಂದಾಗ ಆ ಆರಾಮದ ಪರಿಕಲ್ಪನೆಯೇ ಬದಲಾಗಿರುತ್ತದೆ. ವಿರಾಮವೇ ಬೇಸರ ತರಿಸುತ್ತಿರುತ್ತದೆ. +ಬಿ. ಚಂದ್ರಪ್ಪ ಅಂತ ಒಬ್ಬ. ಬಿ. ಅಂದ್ರೆ ಬೊರೆಗೌಡನೋ, ಬೊಮ್ಮನಳ್ಳಿಯೋ, ಬೆಂಗಳೂರೋ ಯಾರಿಗೂ ಗೊತ್ತಿರಲಿಲ್ಲ. ಗೊತ್ತಿಲ್ಲವೆಂದರೆ ಹೇಗೆ ? ಕೇಳಿದರೆ ಹೇಳೋಲ್ಲವೇ ? ಅಯ್ಯೋ, ಯಾರಾದರೂ ಮಾತಾಡಿಸಿದರೆ ಉತ್ತರಿಸುವೆಷ್ಟು ಪುರುಸುತ್ತೆಲ್ಲಿದೆ ಆ ಮನುಷ್ಯನಿಗೆ . ಏನಾದ್ರೂ ಕೇಳಿದ್ರೆ . ಇದು ಅರ್ಜೆಂಟಾ ? ಆಮೇಲೆ ಮಾತಾಡೋಣವಾ ? ನಾ ಸ್ವಲ್ಪ ಬ್ಯುಸಿ ಇದ್ದೀನಿ ಅನ್ನೋ ಉತ್ತರವೇ ಹೆಚ್ಚಿನ ಬಾರಿ ಸಿಗುತ್ತಿತ್ತು. ಮನೆಯಿಂದ ಹೆಂಡತಿ ಬೇಗ ಬನ್ನಿ ಅಂತ ಫೋನ್ ಮಾಡಲಿ, ಮಗ ಅಪ್ಪ ನನ್ನ ಯೂನಿಯನ್ ಡೇ ಇದೆ. ನೆನಪಿದೆ ತಾನೇ ಅಂತ ನೆನಪಿಸಲಿ, ನಾನು ಬ್ಯುಸಿಯಿದ್ದೀನಿ ಕಣೋ.. ಸಾರಿ ಎಂಬ ಉತ್ತರವೇ ಸಿಕ್ಕಿ ಸಿಕ್ಕಿ ಮನೆಯವರಿಂದ ಹಿಡಿದು ಎಲ್ಲರ ಬಾಯಲ್ಲೂ ಇವ ಬಿಸಿ ಚಂದ್ರಪ್ನೋರು ಆಗಿದ್ದ. ಕ್ಷಮಿಸಿ ಆಗಿಬಿಟ್ಟಿದ್ರು !. ಸದಾ ಒಂದಿಲ್ಲೊಂದು ಚಿಂತೆಯ ಚಿತೆಯಲ್ಲಿ ತಮ್ಮನ್ನು ಸುಟ್ಟುಕೊಳ್ಳುತ್ತಾ ಗರಂ ಆಗೇ ಇದ್ದು ಬಿಸಿ ಚಂದ್ರಪ್ಪನೆನ್ನೋ ಹೆಸರಿಗೆ ಸೂಕ್ತವಾಗೇ ಇದ್ರು ಅವರು.ಈ ಬ್ಯುಸಿ ಚಂದ್ರಪ್ನೋರು ನಿಜವಾಗ್ಲೂ ಏನು ಮಾಡ್ತಿದ್ರು ಅನ್ನೋದ್ನ ಸದ್ಯಕ್ಕೆ ಸ್ವಲ್ಪ ಬದಿಗಿಟ್ಟು ಒಂದು ದಿನ ಏನಾಯ್ತಪ ಅಂತ ನೋಡೋಣವಂತೆ. +ಚಂದ್ರಪ್ಪನವರು ಈಗಿದ್ದ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಮುಗಿಯುತ್ತಾ ಬಂದಿತ್ತು. ಈಗಿರೋ ಪ್ರಾಜೆಕ್ಟಿನ ಮುಗಿಯೋ ದಿನಾಂಕ ಇನ್ನೂ ತಡವಿದ್ದುದರಿಂದ ಹೊಸ ಪ್ರಾಜೆಕ್ಟು ಯಾವಾಗ ಶುರು ಅನ್ನೋದೇ ಗೊತ್ತಿಲ್ಲದ ಅನಿಶ್ಚಿತತೆ ಇದ್ದಿದ್ದರಿಂದ ಇವರ ಸಹೋದ್ಯೋಗಿಗಳೆಲ್ಲಾ ಒಂದೊಂದು ದಿನ ಚಕ್ಕರ್ ಹಾಕ್ತಾ ಇದ್ದರು ಇಲ್ಲಾ ಬೇಗ ಮನೆಗೆ ಹೋಗುತ್ತಿದ್ದರು. ಬಿಸಿ ಚಂದ್ರಪ್ಪನವರು ಕೇಳಿದಾಗ ಶನಿವಾರ, ಭಾನುವಾರ, ಹಗಲು ರಾತ್ರೆಗಳೆನ್ನದೇ ಕೆಲಸ ಮಾಡಿದೀವಲ್ರೀ , ಈಗ ಸ್ವಲ್ಪ ದಿನ ಕುಟುಂಬದ ಜೊತೆ ಕಳೆಯೋಣ ಅಂತಿದೀವಿ. ನೀವೂ ಸ್ವಲ್ಪ ರೆಸ್ಟ್ ತಗೋಳ್ರಿ. ಎಷ್ಟು ಅಂತ ಕೆಲ್ಸ ಮಾಡ್ತೀರಾ ಅಂತ ಬಂದ್ರೆ ಬಿಟ್ಟಿ ಅಡ್ವೈಸ್ ಕೊಡೋಕೆ ಬಂದ್ರು , ಮೈಗಳ್ಳರು ಅಂತ ಅವ್ರ ಮಾತೇ ಕೇಳ್ತಿರಲಿಲ್ಲ ಬಿಸಿ ಚಂದ್ರಪ್ಪ. ಶುಕ್ರವಾರದ ದಿನ. ಕೆಲಸವೂ ಇಲ್ಲದ್ದರಿಂದ ಮೂರು ಘಂಟೆಗೇ ಆಫೀಸು ಫುಲ್ ಖಾಲಿ. ಬಿಸಿ ಚಂದ್ರಪ್ಪನಿಗೆ ಹುಡುಕಿಕೊಂಡು ಮಾಡಲೂ ಏನೂ ಕೆಲಸವಿರಲಿಲ್ಲ. ಮಾತಾಡಲೂ ಯಾರೂ ಜನರಿಲ್ಲ. ಪಕ್ಕನೇ ಯಾರಿಗಾದರೂ ಫೋನ್ ಮಾಡೋಣವಾ ಅನಿಸಿತು. ತನ್ನ ಗೆಳೆಯರೆಲ್ಲಾ ಅರ್ಧರ್ಧ ಘಂಟೆ ಫೋನಲ್ಲಿ ಮಾತಾಡುತ್ತಲೇ ಕಾಲ ಕಳೆಯೋದನ್ನ ಗಮನಿಸಿದ್ದ ಚಂದ್ರಪ್ಪ ತನ್ನ ಮೊಬೈಲು ತಡಕಿದ. ಆಫೀಸು, ಮನೆ, ಕೆಲ ಸಹೋದ್ಯೋಗಿಗಳದ್ದು ಬಿಟ್ಟರೆ ಬೇರೆ ನಂಬರುಗಳೇ ಇರಲಿಲ್ಲ. ಒಂದಿಷ್ಟು ಗೆಳೆಯರ ನಂಬರಿದ್ದರೂ ಹೇಗೆ ಮಾಡೋದೆಂಬ ಸಂಕೋಚ. ಅವರು ಟ್ರಿಪ್ಪು, ಗೆಟ್ ಟುಗೆದರ್, ಮದುವೆ ಹೀಗೆ ಯಾವುದಕ್ಕೆ ಕರೆದರೂ ಹೋಗದೇ ಬಿಸಿಯಾಗಿದ್ದ ತಾನು ಈಗ ಅವರಿಗೆ ಹೇಗೆ ಫೋನ್ ಮಾಡೋದೆಂಬ ಅಳುಕು. ಬೆಳಿಗ್ಗೆ ಓದಿದ ಅದೇ ಪೇಪರ್ ಮತ್ತೆ ಓದಲು ಬೇಜಾರಾಗಿ ಮನೆಗೆ ಹೊರಟ. ಶುಕ್ರವಾರದ ಟ್ರಾಫಿಕ್ಕು ಒಂದಿಂಚೂ ಚಲಿಸದಂತೆ ನಿಂತು ಬಿಟ್ಟಿತ್ತು. ಕಿಟಕಿ ಬಳಿಯ ಸೀಟು ಸಿಕ್ಕಿದ್ದು ಯಾವ ಜನ್ಮದ ಪುಣ್ಯವೋ ಎಂದು ಖುಷಿಗೊಂಡಿದ್ದ ಚಂದ್ರಪ್ಪ ಕೆಲವೇ ನಿಮಿಷಗಳಲ್ಲಿ ಕೂತಲ್ಲೇ ನಿದ್ರೆ ಹೋಗಿದ್ದ. +ಅಂತೂ ಮನೆ ಬಂತು. ಕಾಲಿಂಗ್ ಬೆಲ್ ಒತ್ತೇ ಒತ್ತಿದ. ಒಂದು ನಿಮಿಷವಾದರೂ ಯಾರೂ ಬಾಗಿಲು ತೆಗೆಯುತ್ತಿಲ್ಲ. ಒಳಗೇನೋ ಮಾಡ್ತಿದಾರೇನೋ , ಫೋನ್ ಮಾಡಿ ಕರೆಯೋಣ ಅಂತ ಹೆಂಡತಿಯ ಮೊಬೈಲಿಗೆ ಕರೆ ಮಾಡಿದ. ಕೆಲ ರಿಂಗಾಗೋಷ್ಟರಲ್ಲಿ ಆ ಕಡೆಯಿಂದ ಹೆಂಡತಿ ಫೋನ್ ಎತ್ತಿದಳು. ಎಂತದೋ ಭಜನೆಯ ದನಿ. ಅವಳು ಏನು ಮಾತಾಡ್ತಿದಾಳೆ ಅನ್ನೋದೇ ಸ್ಪಷ್ಟವಾಗಿ ಕೇಳ್ತಿರಲಿಲ್ಲ. ಭಜನೆ ಕ್ಲಾಸಲ್ಲಿದೀನಿ ಕಣ್ರಿ. ನೀವು ಬರೋದು ಹೇಗಿದ್ರೂ ಎಂಟು ಘಂಟೆಗಲ್ವಾ, ಅಷ್ಟರೊಳಗೆ ಬರ್ತೀನಿ ಅಂತ ಏನೋ ಅಂದಂತೆ ಅಸ್ಪಷ್ಟವಾಗಿ ಕೇಳಿತು. ಅಪರೂಪಕ್ಕೆ ಬೇಗ ಮನೆಗೆ ಬಂದ ಗಂಡನನ್ನು ಮಾತಾಡಿಸೋದು ಬಿಟ್ಟು ಎಲ್ಲೋ ಹೋಗಿದಾಳೆ ಅಂತ ಬಿಸಿಯಾದ್ರು ಚಂದ್ರಪ್ಪನೋರು. ಸಿಟ್ಟು ತಣ್ಣಗಾದ ಮೇಲೆ ವಿವೇಕ ಹೇಳಿತು ಚಂದ್ರಪ್ಪಂಗೆ. ನೀನೊಬ್ನೇ ಬ್ಯುಸಿಯಾಗಿರ್ತೀನಿ ಅಂದ್ಕೊಂಡಿದೀಯ . ನನ್ನ ಹೆಂಡತಿಯೂ ಬ್ಯುಸಿಯಾಗಿದಾಳೆ ಅದ್ರಲ್ಲಿ ತಪ್ಪೇನಿದೆ ? ಒಂದಿನವೂ ಸಮಯಕ್ಕೆ ಸರಿಯಾಗಿ ಮನೆಗೆ ಬರದ, ಬರೋ ದಿನವೂ ಫೋನ್ ಮಾಡಿ ಹೇಳದ್ದು ನಿಂದೇ ತಪ್ಪು. ನಿನ್ನ ಇರುವಿಕೆಯ ಬಯಸಿ ಬಯಸಿ ಬೇಸರವಾದ ಅವಳು ಇನ್ನೇನೋ ಮಾರ್ಗ ಕಂಡುಹಿಡ್ಕೊಂಡಿದಾಳೆ ಬೇಸರ ಕಳೆಯೋಕೆ.ಅದ್ರಲ್ಲಿ ತಪ್ಪೇನಿದೆ ಅಂತು. ಹೌದಲ್ವಾ ಅನಿಸಿತು ಚಂದ್ರಪ್ಪಂಗೆ. ಮಗನಾದ್ರೂ ಮನೆಯಲ್ಲಿರಬೇಕೆಂದು ನಿರೀಕ್ಷಿಸಿ ಫೋನ್ ಮಾಡಿದ. ನಾನು ಫ್ರೆಂಡ್ಸ್ ಜೊತೆ ಪ್ರಾಜೆಕ್ಟಿನ ಅಸೈನುಮೆಂಟಿನಲ್ಲಿ ಬ್ಯುಸಿ ಇದೀನಿ ಡ್ಯಾಡ್. ಆಮೇಲೆ ಮಾಡ್ತೀನಿ ಅಂತ ಚಂದ್ರಪ್ಪ ಮಾತಾಡೋದ್ರೊಳಗೇ ಫೋನ್ ಕಟ್! ಹೋಗಲಿ ಎಂದು ಮಗಳಿಗೆ ಫೋನ್ ಮಾಡಿದ. ಫೋನ್ ಫುಲ್ ರಿಂಗಾದರೂ ಎತ್ತಲಿಲ್ಲ ಅವಳು. ಮೊದಲು ಇವರ ಬಗ್ಗೆ ಸಿಟ್ಟು ಬಂದರೂ ಆಮೇಲೆ ಮೊದಲಿನಂತೆಯೇ ವಿವೇಕ ಉದಯಿಸಿದ ಮೇಲೆ ಸಮಾಧಾನವಾಯ್ತು. ಎಲಾ ಶಿವನೇ ನಾನೊಬ್ನೇ ಎಲ್ಲರಿಗಿಂತ ಬಿಸಿ ಅಂದ್ಕೊಂಡ್ರೆ ಎಲ್ಲಾ ನನಗಿಂತ ಬ್ಯುಸಿ ಆಗಿದ್ದಾರಲ್ಲಾ. ಏನು ಮಾಡೋದು ಅಂತ ತಲೆ ಮೇಲೆ ಕೈಹೊತ್ತು ಕುಳಿತ. ಭಕ್ತಾ ಕರೆದೆಯಾ ಅಂತ ಎಲ್ಲಿಂದಲೋ ದನಿ ಕೇಳಿಸಿತು. ನೋಡಿದರೆ ಯಾರೂ ಕಾಣುತ್ತಿಲ್ಲ. ಆದರೂ ಎಲ್ಲಿಂದಲೋ ದನಿ. ಯಾರು ನೀನು ಅಂದ್ರೆ. ನಾನು ಶಿವ.ಈಗಷ್ಟೆ ಕರೆದೆಯಲ್ಲಾ. ಅದಕ್ಕೇ ನಿನ್ನೆದುರು ಬಂದಿದೀನಿ ಅನ್ನೋ ಉತ್ತರ ಬಂತು. ಎರಡು ಮೂರು ಕೆಲಸಗಳಲ್ಲಿ ಮುಳುಗಿದರೇ ಬ್ಯುಸಿ ಬ್ಯುಸಿಯೆಂದು ಎಲ್ಲರ ಮೇಲೂ ಹರಿಹಾಯೋ ನಾನೆಲ್ಲಿ, ಕೊಟಿ ಕೋಟಿ ಭಕ್ತರ ಮೊರೆ, ಲೋಕದ ಲಯದಂತಹ ಹೊರೆ ಹೊತ್ತಿದ್ರೂ ತಕ್ಷಣ ಸ್ಪಂದಿಸಿದ ಶಿವ ಎಲ್ಲಿ ಅನಿಸಿತು. ಬ್ಯುಸಿ ಬ್ಯುಸಿಯೆಂದು ತಾನು ಇತ್ತೀಚೆಗೆ ಕಳೆದುಕೊಂಡ ಮಗನ ಯೂನಿಯನ್ ಡೇ, ಆಪ್ತ ಗೆಳೆಯನ ಮದುವೆ, ಅಣ್ಣನ ಮಗನ ನಾಮಕರಣ, ತನ್ನದೇ ಮದುವೆಯ ಆನಿವರ್ಸರಿ,ಹೀಗೆ.. ಅನೇಕ ಕ್ಷಣಗಳೆಲ್ಲಾ ನೆನಪಾಗಿ ದು:ಖ ಉಮ್ಮಳಿಸಿ ಬರತೊಡಗಿತು. +ಯಾಕೋ ಭಕ್ತ, ನನ್ನ ಕರೆದು ಅರ್ಧ ಘಂಟೆ ಆಗ್ತಾ ಬಂತು. ಏನೂ ಮಾತಿಲ್ಲದೆ ಅಳುತ್ತಾ ಕೂತಿದ್ದೀಯಲ್ಲೋ ಅನ್ನೋ ದನಿ ಕೇಳಿತು. ಅರ್ಧ ಘಂಟೆಯೇ ? ನಿನ್ನ ಅಮೂಲ್ಯ ಸಮಯ ಹಾಳು ಮಾಡಿದೆನೆಲ್ಲೋ ಶಿವನೇ. ಎಷ್ಟು ಬ್ಯುಸಿಯಿದ್ದೆಯೇನೋ ನೀನು ಅಂದ ಚಂದ್ರಪ್ಪ. ಬ್ಯುಸಿಯಾ ? ಅದೇನದು ಅಂದ ಶಿವ. ಬ್ಯುಸಿ ಅಂದರೆ ಬಿಡುವಿಲ್ಲದೇ ಇರುವುದು ಅಂದ ಚಂದ್ರಪ್ಪ. ಓ ಅದಾ? ಅದು ನಂಗೆ ಗೊತ್ತಿಲ್ಲಪ್ಪ ಅಂದ ಶಿವ. ಓ, ಹೌದಾ ? ಇಷ್ಟು ಫ್ರೀ ಹೇಗೆ ಮಾಡ್ಕೋತೀಯ ನೀನು ಅಂದ ಚಂದ್ರಪ್ಪ. ಈ ಬ್ಯುಸಿ, ಫ್ರೀ ಮಾಡ್ಕೋಳ್ಳೋದು ಇದೆಲ್ಲಾ ನಂಗೆ ಗೊತ್ತಿಲ್ಲಪ್ಪ. ಇದನ್ನೇನಿದ್ದರೂ ಮಹಾವಿಷ್ಣುವಿಗೆ ಕೇಳು ಅಂದ, ವಿಷ್ಣುವಿಗೆ ದುಷ್ಟರಕ್ಷಣೆ, ಶಿಷ್ಟ ರಕ್ಷಣೆಯೇ ಕೆಲಸ. ಸಮಸ್ತ ಲೋಕ ಕಲ್ಯಾಣದಲ್ಲಿ ನಿರತನಾಗಿರೋ ಆತ ತನ್ನ ಮೊರೆಗೆಲ್ಲಿ ಪ್ರತ್ಯಕ್ಷನಾಗುತ್ತಾನೋ ಎಂದುಕೊಳ್ಳುವಷ್ಟರಲ್ಲೇ ಭಕ್ತಾ ನೆನೆದೆಯಾ ನನ್ನ ಅನ್ನೋ ಮತ್ತೊಂದು ದನಿ ಕೇಳಿಸಿತು. ನಿನ್ನೆಲ್ಲಾ ಕೆಲಸಗಳ ಮಧ್ಯೆಯೂ ನನ್ನ ಮೊರೆ ಕೇಳಿ ಕ್ಷಣದಲ್ಲೇ ಓಡಿಬಂದೆಯಾ ಹರಿಯೇ ? ನೀನು ಇಷ್ಟು ಫ್ರೀ ಹೇಗೆ, ಅಷ್ಟು ಕೆಲಸವಿದ್ದರೂ ಫ್ರೀ ಮಾಡ್ಕೋಳ್ಲೋದು ಹೇಗೆ ? ಇರೋ ಒಂದು ಕೆಲಸದಲ್ಲೇ ಮುಳುಗಿಹೋಗೋ ನಾನು ಮಡದಿ ಮಕ್ಕಳನ್ನೇ ಮಾತಾಡಿಸಲಾಗೋದಿಲ್ಲ ಅಂದ ಚಂದ್ರಪ್ಪ. ಬ್ರಹ್ಮ ಪ್ರಜಾಪಿತನಷ್ಟು ಕೆಲಸ ನನಗಿಲ್ಲ ಭಕ್ತಾ. ನಿನ್ನ ಪ್ರಶ್ನೆಗೆ ಅವನೇ ಉತ್ತರಿಸಿಯಾನು ಅವನನ್ನೇ ಕರೆ ಅಂತು ಎರಡನೇ ದನಿ. ಜಗದ ಪ್ರತಿಯೊಬ್ಬರ ಹಣೆಬರಹ ಬರೆಯೋದರಲ್ಲಿ ಅರೆಕ್ಷಣವೂ ವಿಶ್ರಮಿಸದ ಬ್ರಹ್ಮ ನನ್ನ ಕರೆಗೆ ಓಗೋಡೋದು ಅಸಾಧ್ಯದ ಮಾತೇ ಸರಿ ಅಂತ ಚಂದ್ರಪ್ಪ ಅಂದುಕೊಳ್ತಿರಬೇಕಾದ್ರೇ ಕರೆದೆಯಾ ಭಕ್ತಾ ಅನ್ನೋ ಮೂರನೇ ದನಿ ಕೇಳಿತು. ನೀನು ಬ್ಯುಸಿಯಿಲ್ಲವೇ ಬ್ರಹ್ಮ ಎಂದು ಬಿಟ್ಟ ಬಾಯಿ ಬಿಟ್ಟಂತೆ ತೆರೆದ ಕಣ್ಣುಗಳನ್ನು ಇನ್ನೂ ಅಗಲಗೊಳಿಸುತ್ತಾ ದಿರ್ಭಮೆಯಿಂದ ಕೇಳಿದ ಚಂದ್ರಪ್ಪ. ಬ್ರಹ್ಮ ನಸುನಗುತ್ತಾ ಹೇಳಿದ. ಭಕ್ತಾ. ಜಗದಲ್ಲಿ ಬಿಡುವಿಲ್ಲದವರು ಯಾರಪ್ಪಾ ಇದ್ದಾರೆ ? ತನ್ನ ರಥವೇರಿ ಜಗಕ್ಕೇ ಶಕ್ತಿಯುಣಿಸುತ್ತಾ ಸಾಗೋ ಸೂರ್ಯನಿಗೂ ಒಂದು ದಿನದ ಅವಿರತ ಪಯಣದ ನಂತರ ಒಂದು ರಾತ್ರಿಯ ವಿಶ್ರಾಂತಿ. ಅಸಂಖ್ಯ ತಾರೆಗಳ ತೋಟದ ಮಾಲಿ ಚಂದ್ರನಿಗೂ ರಾತ್ರಿ ಪಾಳಿಯ ನಂತರ ಹಗಲೆಲ್ಲಾ ವಿಶ್ರಾಂತಿ. ಕೊಚ್ಚಿ ಹರಿವ ಹೊಳೆಗೂ ಚಳಿಗಾಲದಲ್ಲಿ ಮರಗಟ್ಟಿ ವಿಶ್ರಾಂತಿ. ಪ್ರಾಣಿ, ಪಕ್ಷಿ, ಜಲಚರ, ಸಸ್ಯ, ಮನುಜರಿಗೂ ಬಿಡುವೆಂಬುದು ಇದ್ದೇ ಇದೆ ನನ್ನ ಸೃಷ್ಟಿಯಲ್ಲಿ. ಬಿಡುವಿನಿಂದಲೇ ಸೃಷ್ಟಿಸಿದ್ದೇನೆ ನಿನ್ನನ್ನ. ನಿನಗೊಪ್ಪುವ ಸುಖದ ಸಂಸಾರವನ್ನ ಅಂತ ವಿರಮಿಸಿತು ಆ ದನಿ. ವಾಗ್ಝರಿಯ ನಡುವೆ ಒಂದು ಬಿಡುವು ತೆಗೆದುಕೊಳ್ಳುತ್ತಾ. +ಹೌದಲ್ಲಾ ಅನಿಸಿತು ಚಂದ್ರಪ್ಪನಿಗೆ. ಎಲ್ಲಕ್ಕೂ ಅದರದ್ದೇ ಆದ ಸಮಯವಿದೆ. ಆಫೀಸಷ್ಟೇ ತನ್ನ ಬದುಕಲ್ಲ. ಅದಾದ ನಂತರ ತನ್ನದೇ ಆದ ಸಂಸಾರವಿದೆ. ಎಲ್ಲರೊಳಗೊಂದಾಗಿ ಇರೋ ಬದಲು ತಾನೇ ಎಲ್ಲಾ ಮಾಡಬೇಕೆಂಬ ಹಮ್ಮು ಯಾಕೆ ? ಬಿಡುವು ಎಂಬುದು ಎಲ್ಲಿಂದಲೋ ಬರುವುದಲ್ಲ. ನಾವು ಇರುವುದಕ್ಕೆ ಕೊಡೋ ಪ್ರಾಮುಖ್ಯತೆಗಳೇ ಬಿಡುವನ್ನು ಸೃಷ್ಠಿಸುತ್ತದೆ ಅಂತ ಎಲ್ಲೋ ಓದಿದ ನೆನಪಾಯ್ತು. ಇನ್ನಾದರೂ ಬ್ಯುಸಿ ಅನ್ನೋದನ್ನ ತನ್ನ ಕಡತದಿಂದ ಹೊರಹಾಕಿ ಎಲ್ಲರಿಗಾಗಿ , ಎಲ್ಲರೊಂದಿಗೆ ಬಾಳಬೇಕು ಎಂದು ನಿರ್ಧರಿಸಿದ..ತಥಾಸ್ತು ಅಂದತಾಯಿತು ಮೂರು ದನಿಗಳು. ಒಮ್ಮೆಲೇ ಭೂಕಂಪವಾದಂತೆ ಆಗಿ ಆಯ ತಪ್ಪಿ ಮುಂದಕ್ಕೆ ವಾಲಿದ. ಹಣೆ ಎದುರಿಗಿದ್ದ ಸೀಟಿಗೆ ಹೊಡೆದಿತ್ತು. ಕಣ್ಣು ಬಿಟ್ಟಿತ್ತು. ನೋಡಿದರೆ ತಾನು ಇಳಿಯಬೇಕಾದ ಸ್ಟಾಪು ಬಂದು ಬಿಟ್ಟಿದೆ. ಗಡಬಡಿಸಿ ಎದ್ದು ಮನೆಗೆ ಸಾಗಿದ. ಇಷ್ಟು ಹೊತ್ತು ನಡೆದಿದ್ದು ಕನಸೋ ನನಸೋ ಎನ್ನೋ ಆಲೋಚನೆಯಲ್ಲಿದ್ದಾಗಲೇ ಮನೆ ತಲುಪಿಬಿಟ್ಟಿದ್ದ. ಎಲ್ಲೋ ಸೈಕಲ್ ಹತ್ತಿ ಹೊರಟಿದ್ದ ಮಗ ಹಾಯ್ ಡ್ಯಾಡ್ ಅಂತ ಇವನನ್ನು ನೋಡಿ ಖುಷಿಯಿಂದ ಮನೆಗೆ ವಾಪಾಸಾಗಿದ್ದ. ಅಪ್ಪ ಬಂದ್ರು ,ಮಮ್ಮಿ ಪಪ್ಪ ಬಂದ್ರು ಅಂತ ಮಹಡಿಯ ಮೇಲಿಂದ ಅಪ್ಪ, ತಮ್ಮ ಬರೋದ್ನ ನೋಡಿದ್ದ ಮಗಳೂ ಕೆಳಗೆ ಓಡಿಬಂದಿದ್ಲು. ಮಗಳ ಗಲಾಟೆ ಕೇಳಿ ಹೌದೋ ಅಲ್ವೋ ಅನ್ನೋ ಆಶ್ಚರ್ಯದಲ್ಲೇ ಬಾಗಿಲು ತೆಗೆಯೋಕೆ ಬಂದ್ಲು. ಚಂದ್ರಪ್ಪ ಕಾಲಿಂಗ್ ಬೆಲ್ ಒತ್ತೋದಕ್ಕೂ ಅವನ ಮಡದಿ ಬಾಗಿಲು ತೆಗೆಯೋದಕ್ಕೂ ಸರಿ ಹೋಯ್ತು. ಬೇಗ ಮನೆಗೆ ಬಂದಿದ್ದು ಒಂದು ಅಚ್ಚರಿಯಾದರೆ ದಿಢೀರನೆ ಬದಲಾದ ವರ್ತನೆ ಇನ್ನೊಂದು ಬಗೆಯ ಅಚ್ಚರಿ. ಅಂತೂ ಎಲ್ಲೋ ಕಳೆದುಹೋದ ಅಪ್ಪ, ಗಂಡ ಮರಳಿ ಸಿಕ್ಕಿದ್ದಕ್ಕೆ ಎಲ್ಲಾ ಖುಷಿಯಾಗಿದ್ದರು..ಈ ಸಡನ್ ಬದಲಾವಣೆಗೆ ಕಾರಣ ಏನು ಅಂತ ಯಾರೂ ಬಿಸಿ ಚಂದ್ರಪ್ಪನ್ನ ಆಮೇಲೂ ಕೇಳಲೇ ಇಲ್ಲ. ಏಕೆಂದರೆ ಬಿಸಿ ಚಂದ್ರಪ್ಪ ಕರಗಿಹೋಗಿದ್ದ. ಅವನ ಬದಲಾವಣೆಗೆ ಕಾರಣವಾಗಿದ್ದ ಮೂರು ದನಿಗಳು ನಗ್ತಾ ಇದ್ದವು. ನಮ್ಮ ನಿಮ್ಮೊಳಗೂ ಇರಬಹುದಾದ ಈ ತರದ ಇನ್ನೊಂದು ಬಿಸಿ ಚಂದ್ರಪ್ಪನ ಹುಡುಕಿ ಅವನನ್ನು ಸರಿ ದಾರಿಗೆ ತರೋ ಯೋಚನೆಯಲ್ಲಿದ್ದವು. +***** \ No newline at end of file diff --git a/PanjuMagazine_Data/article_1023.txt b/PanjuMagazine_Data/article_1023.txt new file mode 100644 index 0000000000000000000000000000000000000000..cb9bb599a059a19d92eda6b093e35070f2acfe09 --- /dev/null +++ b/PanjuMagazine_Data/article_1023.txt @@ -0,0 +1,2 @@ + + \ No newline at end of file diff --git a/PanjuMagazine_Data/article_1024.txt b/PanjuMagazine_Data/article_1024.txt new file mode 100644 index 0000000000000000000000000000000000000000..bfef9f5fa6428986a146bd9d3b4808ba4725ba3e --- /dev/null +++ b/PanjuMagazine_Data/article_1024.txt @@ -0,0 +1,20 @@ +ಸುಮಾರು ಐವತ್ತರ ಆಸುಪಾಸಿನ ವಯಸ್ಸಿನ ವ್ಯಕ್ತಿ ಆತ. ಹೆಸರು ವೀರಣ್ಣ ಅಂತ. ಹೆಚ್ಚು ಮಾತನಾಡದ, ತೆಳ್ಳನೆ ಆಕೃತಿ. ಮನೆಯಲ್ಲಿ ಹೆಂಡತಿ, ಮಕ್ಕಳು ಅಳಿಯ, ಚಿಳ್ಳೆ ಪಿಳ್ಳೆಗಳು. ಮನೆಯಲ್ಲಿ ಆಡು ಭಾಷೆ ತೆಲುಗು. ಬಂದವರೊಂದಿಗೆ ತೆಲುಗು, ಕನ್ನಡ, ಹಿಂದಿ ಮಾತನಾಡುವುದು ಸರಾಗ. ದೊಡ್ಡ ಮಗಳ ಹೆಸರು ಅರುಣಾ ಅಂತ. ಅಳಿಯ ಸೀನ. ಅವನು ಆಂಧ್ರದ ಯಾವುದೋ ಊರಲ್ಲಿ ಫೈನಾನ್ಸ್ ಮಾಡುತ್ತಿದ್ದನಂತೆ. ಅದು ಬಿಟ್ಟು ಮದುವೆ ನಂತರ ಇಲ್ಲೇ ಬಳ್ಳಾರಿಯಲ್ಲಿ ಮಾವನ ಮನೆಯಲ್ಲಿ ಬಂದು ನೆಲೆಸಿದ್ದ. ದುರುಗಮ್ಮ ಗುಡಿ ಹತ್ತಿರದ ಈರಣ್ಣ ಮೆಸ್ ಅಂದ್ರೆ ಸಾಕು ಅಷ್ಟು ಪರಿಚಿತ. ಅವರು ಮೆಸ್ ಒಂದನ್ನು ನಡೆಸುತ್ತಿದ್ದರು. ಪಕ್ಕಾ ಅಂದ್ರ ಶೈಲಿಯ ಊಟ. ಸುತ್ತ ಮುತ್ತಲಿದ್ದ ಎಂ. ಬಿ. ಎ. ಇಂಜನೀಯರಿಂಗ್, ಡಿಗ್ರಿ, ಓದುವ ಹುಡುಗರು, ಬ್ಯಾಚುಲರ್ ನೌಕರರು, ಖಾಸಗಿ, ಫೈನಾನ್ಸ್ ಕಂಪನಿ ನೌಕರರು, ವಕೀಲರು, ಎಲ್ಲರೂ ಅಲ್ಲಿ ಮಧ್ಯಾಹ್ನ, ರಾತ್ರಿ ಊಟಕ್ಕೆ ಬರುತ್ತಿದ್ದರು. ಪಕ್ಕದಲ್ಲೇ ಗೋಪಿ ಬ್ಲಡ್ ಬ್ಯಾಂಕ್ ಇತ್ತು. ಅದರ ಮಾಲೀಕ ರೆಡ್ಡಿ ಭರ್ತಿ ಕುಡುಕ. ಆನಂತರ ಕುಡಿತ ಬಿಟ್ಟನೆಂದು ಕೇಳಿದ್ದೆ. ಈಗ ಇದ್ದಾನೋ ಇಲ್ಲವೋ ಗೊತ್ತಿಲ್ಲ. + +ತೊಂಬತ್ತೇಳು ತೊಂಬತ್ತೆಂಟರ ಸಮಯದಲ್ಲಿ ನಾವಿನ್ನು ಹೊಸದಾಗಿ ನೌಕರಿಗೆ ಸೇರಿದ್ದವು. ಒಂದೇ ಆವರಣ ದಲ್ಲಿ ಇದ್ದಿದ್ದರಿಂದ ಸುಮಾರು ಸಮಾ ವಯಸ್ಸಿನ ಹುಡುಗ ಬುದ್ಧಿಯ ನೌಕರರು ಒಟ್ಟೊಟ್ಟಿಗೆ ಪರಿಚಯವಾಗಿ ಅಲ್ಲಿಲ್ಲಿ ತಿಂದು ಹೊಟ್ಟೆ ಕೆಡಿಸಿಕೊಂಡಿದ್ದೂ ಅಲ್ಲದೇ ಆಸ್ಪತ್ರೆಗೆ ದೇಣಿಗೆ ನೀಡಿ ಕೊಡುಗೈ ದಾನಿಗಳೂ ಆಗಿದ್ದೆವು. ಅಂತ ಸಮಯದಲ್ಲೇ ನಮಗೆ ದರ್ಶನವಾಗಿದ್ದು, ಈರಣ್ಣ ಮೆಸ್. ಸುಮಾರು ನೂರರಿಂದ ನೂರೈವತ್ತು ಜನ ಒಂದೊಪ್ಪೊತ್ತಿಗೆ ಊಟ ಮಾಡಲು ಬರುತ್ತಿದ್ದರು. ಆಹಾ… ಎಂಥೆಂಥ ಮಜದ ಓದುವ ಹುಡುಗರು ಬರುತ್ತಿದ್ದ ರೆಂದರೆ, ಬಹಳಷ್ಟು ಮಂದಿ ಆಂಧ್ರ ಸೀಮದ ಹುಡುಗರೇ ಆದ್ದರಿಂದ ಅವರಿಗೆ ಕನ್ನಡ ಹೊಸದು. ಕಲಿಯುವ ಹುಕಿ. ನಮಗೋ ತೆಲುಗು ಹೊಸದು ಕಲಿಯಲಾರದ ಹಠ. ಬರುಬರುತ್ತಾ ಆ ಹುಡುಗರಿಗೆ ಕನ್ನಡ, ನಮಗೆ ತೆಲುಗು ಅಭ್ಯಾಸವಾಗಿಬಿಟ್ಟಿತು. + +ಕೇವಲ ಹತ್ತರಿಂದ ಹದಿನೈದು ಜನರ ಪರಿಚಯದ ನಾವು ಆ ಮೆಸ್ ಸೇರಿದ ಮೇಲೆ ಸುಮಾರು ಇಲಾಖೆ ಗಳ ನೌಕರರು ಗೆಳೆಯರಾದರು. ಸಖತ್ ಕಾಮಿಡಿ ಸೆನ್ಸ್ ಇದ್ದ ನಮ್ಮ ಇನ್ನೊಬ್ಬ ಗೆಳೆಯನಿದ್ದ. ಅವನ ಹೆಸರೂ ಸೀನ. ಅವನ ಕನ್ನಡ ಭಾಷೆ ಸ್ಪುಟವಾಗಿತ್ತು. ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಾದರೂ ಹರಕಾ ಪರಕಾ ಮಾತಾಡಿ ತಮಾಷೆ ಮಾಡಿ ಸೀನ್ ಕ್ರಿಯೇಟ್ ಮಾಡಿಬಿಡುತ್ತಿದ್ದ. ಅವನೊಟ್ಟಿಗೆ ನಾನು ಕಾಡು ರಾಜ (ಅವನು ಅರಣ್ಯ ಇಲಾಖೆಯಲ್ಲಿದ್ದಿದ್ದರಿಂದ ಹಾಗೆ ಕರೆಯುತ್ತಿದ್ದೆವು ) ಆ ಸಮಯಕ್ಕೆ ಏನು ತೋಚುತ್ತೋ ಅದನ್ನು ಸ್ವಾರಸ್ಯವಾಗಿ, ಕಾಲೆಳೆಯುವಂತೆಯೂ, ನಕ್ಕು ಹಗುರಾಗುವಂತೆಯೂ ಮಾತಾಡಿ ಗಮನ ಸೆಳೆಯುತ್ತಿದ್ದೆವು. ಹೀಗಾಗಿ ನಮ್ಮ ಗುಂಪು ಈರಣ್ಣ ಮೆಸ್ ನಲ್ಲಿ ಬಂತೆಂದರೆ ಹುಡುಗರು ಜೊತೆ ಸೇರಿ ಹರಟೆಗೆ ಕುಂತುಬಿಡುತ್ತಿದ್ದರು. ಚಿರಂಜೀವಿ, ಬಾಲಕೃಷ್ಣ ಅವರ ಸಿನೆಮಾಗಳ ಕ್ರೇಜ್ ಎಷ್ಟಿತ್ತೆಂದರೆ ಆಗ ರಿಲೀಜ್ ಆಗುತ್ತಿದ್ದ ಅವರ ಸಿನೆಮಾಗಳ ಷೋ ನಂತರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ, ಮೆರವಣಿಗೆ, ಕೇಕೆ. ಮಧ್ಯರಾತ್ರಿ ನಂತರ ಒಂದು ಗಂಟೆಗೆ ಮೊದಲ ಷೋ. ಅದಕ್ಕಾಗಿ ಹಿಂದಿನ ದಿನ ರಾತ್ರಿ ಎಂಟು ಗಂಟೆಗೇ ಟಿಕೆಟ್ಟಿಗೆ ಕ್ಯೂ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಗುಂಪುಗಳ ನಡುವೆ ಮಾರಾಮಾರಿ. ಒಹ್…. ಬ್ಯಾಡಪ್ಪ ಅಂತವರ ಉರವಣಿಗೆ. "ಸರಿಯಾಗಿ ಓದಿ ಪಾಸಾಗಿ ದುಡ್ಕಂಡು ತಿನ್ರಲೇ ಅಂದ್ರೆ ಅತಿರೇಕದ ಸಿನಿಮಾದ ಹುಚ್ಚು ಹಚ್ಕೊಂಡು ತಿರುಗ್ತವೆ ಮುಂಡೇವು" ಹಳೇ ತಲೆಮಾರಿನ ದುಡಿದು ಸಾಕುತ್ತಿರುವ ಪೋಷಕರು ಹೀಗೇ ಪೇಚಾಡುತ್ತಿದ್ದರು. ಸಾವ್ರ ಸಲ ಬಡ್ಕೊಂದ್ರೂ ಮನೆಗೆ ಒಂದು ಕೆಜಿ ಅಕ್ಕಿ ತಂದು ಕೊಡದ ಕೆಲ ಅಡ್ನಾಡಿಗಳು ಈ ಸಿನೆಮಾಗಳ ಹುಚ್ಚಲ್ಲಿ ಅನ್ನ ಸಂತರ್ಪಣೆಯಲ್ಲಿ ಹಣೆಗೆ ರಿಬ್ಬನ್ನು ಕಟ್ಟಿಕೊಂಡು ಸೇವೆ ಮಾಡುವ ಪರಿಯನ್ನು ಕಂಡು ಗೊಣಗಿದ್ದೂ ಆಯಿತು. + +ನಮ್ಮ ಗುಂಪಿನ ಸದಸ್ಯರು ಈರಣ್ಣ ಕುಟುಂಬದ ಸದಸ್ಯರೊಂದಿಗೆ ಎಷ್ಟು ಹತ್ತಿರಾದರೆಂದರೆ, ರಶ್ ಇದ್ದರೆ ಸೀದಾ ತಟ್ಟೆ ಹಿಡಿದು ಅಡುಗೆ ಮನೆಗೆ ನುಗ್ಗಿ ಚಪಾತಿ ಉದ್ದಿದ್ದರೆ ಅವುಗಳನನ್ನು ಓಲೆ ಮೇಲೆ ನಾವೇ ಬೇಯಿಸಿ ಕೊಂಡು, ಪಾತ್ರೆಗಳನ್ನು ತಡಕಾಡಿ ಪಲ್ಯ, ಅನ್ನ ಪಪ್ಪು ( ಗಟ್ಟಿ ಬೇಳೆ ಮತ್ತು ಸೊಪ್ಪಿನ ಸಾರಿಗೆ ಹಾಗನ್ನು ತ್ತಾರೆ). ನೀಡಿಕೊಂಡು ಅಲ್ಲೇ ಮೂಲೆಯಲ್ಲೇ ಕುಂತು ಹೊಟ್ಟೆ ತುಂಬಾ ತಿಂದು ಎದ್ದು ಬರುತ್ತಿದ್ದೆವು. "ಇಷ್ಟು ಮಾಡೋ ನೀವು ರೂಮಿನಲ್ಲೇ ಮಾಡ್ಕೊಂಡು ತಿನ್ನೋಕೇನು ಧಾಡಿ? " ಎಂದು ಯಾರಾದರು ಕೇಳಿದರೆ "ನೋಡಿ, ಮಾಡ್ಕೊಂಡು ತಿನ್ನೋಕೇನೂ ಬೇಜಾರಿಲ್ಲ, ಆದ್ರೆ ತಿಂದ್ ಮೇಲೆ ಮುಸುರಿ ತಿಕ್ಕಿ ತೊಳೆಯೋದಿದೆ ಯೆಲ್ಲಾ? ಆಗ ಬರುತ್ತೆ (ಕುತ್ತಿಗೆಗೆ ) ಕುತಿಗ್ಗೆ" ಅಂದು ಜಾರಿಕೊಳ್ಳುತ್ತಿದ್ದೆವು. "ಮದುವೆನಾದ್ರೂ ಮಾಡ್ಕೊಂಡ್ರೆ ಬಂದ್ ಹೆಂಡ್ರು ಕೂಳು ಕುಚ್ಚಿ ಬಡಿತಾರೆ, ಆದಷ್ಟು ಬೇಗ ಆಗ್ರಪ್ಪ" ಅಂತ ಈರಣ್ಣನ ಪತ್ನಿ ಹೇಳಿದರೆ ಒಬ್ಬೊಬ್ರು ಒಂದೊಂದ್ ಹುಡುಗಿ ವರಸೆ, ಕಥೆ ಕಂತು ಕಂತಾಗಿ ಪೋಣಿಸಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದೆವು. + +ಹೊಟ್ಟೆ ತುಂಬಾ ಒಂದೊತ್ತಿನ ಊಟ ಕೊಡುತ್ತಿದ್ದ ಈರಣ್ಣ, ಆ ಊಟಕ್ಕೆ ತಗೋತಾ ಇದ್ದಿದ್ದು ಬರೀ ಹತ್ತು ರುಪಾಯಿ. ಬರೋರೆಲ್ಲಾ ಸ್ಟೂಡೆಂಟ್ಸ್, ಮತ್ತು ಎಂಪ್ಲಾಯೀಸ್ ಆದ್ದರಿಂದ ಅವರಿಂದ ತಿಂಗಳಿನ ಲೆಕ್ಕದಲ್ಲಿ ಕೊನೆಗೆ ದುಡ್ಡು ಪಡೀತಿದ್ದ. ದುಡ್ಡು ಕೈಯಾಡುವವರು ಮುಂಚಿತವಾಗಿಯೇ ಕೊಟ್ಟು ಬಿಡೋರು. ನಾವು ದಿನದ ಲೆಕ್ಕದಲ್ಲಿ, ವಾರದ ಲೆಕ್ಕದಲ್ಲಿ ಕೊಡುತ್ತಿದ್ದೆವು. ಆದರೆ, ಈರಣ್ಣನಾಗಲೀ ಆತನ ಮಗಳು ಅರುಣಾ, ಅಳಿಯ ಸೀನನಾಗಲೀ ದುಡ್ಡಿನ ಕೊಡುಕೊಳ್ಳುವ ವ್ಯವಹಾರದಲ್ಲಿ ಒಂದು ಶಿಸ್ತು, ಲೆಕ್ಕ ಮುಲಾಜು ಇದ್ದಿದ್ದರೆ ಮೆಸ್ ಚೆನ್ನಾಗಿಯೇ ನಡೆಯುತ್ತಿತ್ತು. ಅದನ್ನವರು ಪಾಲಿಸಲೇ ಇಲ್ಲ. ಮೊದಮೊದಲು ಚೆನ್ನಾಗಿಯೇ ಇರುತ್ತಿದ್ದ ಹುಡುಗರು ಬರುಬರುತ್ತಾ ಬರೋಬ್ಬರಿ ತಿಂದುಂಡು ದುಡ್ಡು ಕೊಡಲು ಸತಾಯಿಸುವುದು, ಕೊಡದೇ ಮೆಸ್ ಕಡೆ ತಲೆ ಹಾಕದಿರುವುದು ಮಾಡಲು ಶುರು ಮಾಡಿದರು. ಆದರೂ ಹಾಗೂ ಹೇಗೂ ನಡೆಯುತ್ತಿತ್ತು ಮೆಸ್. ದಿನಾ ರಾತ್ರಿ ಎಲ್ರೂ ಊಟ ಮಾಡಿ ಹೋದ ಮೇಲೆ ಮನೆಯವರೆಲ್ಲಾ ಉಂಡು ತಟಗು ಮನೆಯಲ್ಲಿ ಮಲಗುವ ಹೊತ್ತಿಗೆ ಹನ್ನೊಂದುವರೆ ಹನ್ನೆರಡಾಗುತ್ತಿತ್ತು. + +ಈ ಮಧ್ಯೆ ಅರುಣಾಗೆ ಆಗಲೇ ನಾಲ್ಕು ವರ್ಷದ ಒಂದು ಗಂಡು ಮಗುವಿತ್ತು. ನೋಡಲು ಸಣ್ಣಗಿದ್ದ ಅರುಣಾ ಥೇಟ್ ಶಿಲುಬೆಯಂತೆ ಕಾಣುತ್ತಿದ್ದಳು. ನಾವು ನಾಲ್ಕು ಜನ ಗೆಳೆಯರು ಸೇರಿ "ನಿಮ್ಮಪ್ಪ, ತಂದ್ ಹಾಕ್ತಾರೆ, ಅವ್ವ ಮಾಡ್ ಹಾಕ್ತಾರೆ, ಸೀನ (ಗಂಡ ) ಹೊರಗಿನ ತಿರುಗಾಡೋ ಕೆಲ್ಸ ನೋಡ್ಕೋತಾನೆ, ಅಬ್ಬಬ್ಬಾ ಅಂದ್ರೆ ಬಡಿಸೋದು ನಿನ್ ಕೆಲ್ಸ, ಮುಸಿರೇನೂ ಬೇರೆಯವ್ರು ಬಂದ್ ತಿಕ್ಕಿ ಹಾಕ್ತಾರೆ, ಅಷ್ಟು ಮಾಡ್ತಾ ಚೆನ್ನಾಗಿ ತಿಂದುಂಡು ಆರೋಗ್ಯ ನೋಡ್ಕೊಳ್ಳೋಕೆ ಅದೆಷ್ಟು ಸೋಮಾರಿತನ ನಿಂಗೆ ?" ಉಗಿಯುತ್ತಿದ್ದೆವು. ಅರುಣಾ ಬಹಳ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಆದರೆ ಅವಳಿಗೆ ಆರೋಗ್ಯದ ಕಡೆ ಲಕ್ಷ್ಯ ಇದ್ದಿಲ್ಲ. ಅಂಥಾದ್ದ ರಲ್ಲಿ ಅರುಣಾ ಮತ್ತೊಮ್ಮೆ ಬಸಿರೆಂದು ತಿಳಿಯಿತು. "ಅಷ್ಟೊಂದು ವೀಕ್ ಇರುವ ಅರುಣಾಳ ಸ್ಥಿತಿಯಲ್ಲಿ ಇನ್ನೊಂದು ಡೆಲಿವರಿ ಎಷ್ಟರ ಮಟ್ಟಿಗೆ ಸೇಫ್ ಅಂತ ಯೋಚಿಸ್ತೀಯಾ?" ಆಕೆಯ ಗಂಡ ಸೀನನನ್ನು ಸೈಡಿಗೆ ಕರೆದು ಕ್ಯಾಕರಿಸಿದೆವು. ಅದೊಂದಿನ ನನ್ನ ಗೆಳೆಯ ಸೀನ, ಕಾಡು ರಾಜ ಮತ್ತು ನಾನು ರಾತ್ರಿ ಕನ್ನಡ ಸಿನೆಮಾ "ಲಾಲಿ" ನೋಡಿಕೊಂಡು ಲೇಟಾಗಿ ಮೆಸ್ ಗೆ ಊಟಕ್ಕೆ ಬಂದೆವು. ಅದೇತಾನೇ ಅರುಣಾಳನ್ನು ಆಸ್ಪತ್ರೆಯಿಂದ ಚೆಕಪ್ ಮಾಡಿಸ್ಕೊಂಡು ಬಂದ ಆಕೆ, ಗಂಡ ಸೀನ ಒಳ್ಳೆ ಖುಷಿಯಲ್ಲಿದ್ದರು. "ಹೊಟ್ಟೆಯಲ್ಲಿ ಮಗು ಆರೋಗ್ಯವಾಗಿದೆಯಂತೆ" ಅರುಣಾ ಅವರಮ್ಮನಿಗೆ ಹೇಳುತ್ತಿದ್ದಳು. + +ಎಂದಿನಂತೆ ನಾವು ಅಡುಗೆ ಮನೆಗೇ ನುಗ್ಗಿ ಇದ್ದದ್ದು ತಟ್ಟೆಗೆ ನೀಡಿಕೊಂಡು ಊಟ ಮಾಡ್ತಾ ಇದ್ದೆವು. ಏಕಾಏಕಿ ನಮ್ಮ ಗೆಳೆಯ ಸೀನ ಅರುಣಾ ಮತ್ತು ಆಕೆಯ ಗಂಡ ಸೀನನ ಎದುರಲ್ಲೇ " ಅಲ್ಲಾ ಅರುಣಾ, ದಿನಾ ರಾತ್ರಿ ಎಲ್ಲಾ ಕೆಲ್ಸ ಮುಗ್ಸಿ ಮಲಗೋದೇ ರಾತ್ರಿ ಹನ್ನೆರಡಾಗುತ್ತೆ ಅಂತೀರಾ, ಬೆಳಿಗ್ಗೆ ಬೇಗ ಏಳಬೇಕು, ಮತ್ತೆ ಕೆಲ್ಸ ಮಗ, ಅವನ ದೇಖರಿಕೆ, ಎಲ್ಲಾ ಸರಿ; ಮೂಡ್ ಬಂದ್ರೆ ನಿಮ್ಮಿಬ್ರಲ್ಲಿ ಯಾರು ಎಷ್ಟು ಹೊತ್ಗೆ ಮೊದ್ಲು ಎಬ್ಬಿಸು ತ್ತಿದ್ದಿರಿ?" ಅಂದುಬಿಟ್ಟ. ಒಂದೆರಡು ಕ್ಷಣ ನಾನು, ಕಾಡು ರಾಜ ಮುಖ ನೋಡಿಕೊಂಡೆವು. ಅರುಣಾ ಅಷ್ಟೇ ಸಲೀಸಾಗಿ ಗಂಡನ ಪಕ್ಕಕ್ಕೆ ಸರಿದು "ಒಂದೊಂದ್ ಸಲ ನಾನು ಮತ್ತೊಂದ್ ಸಲ ಇವ್ರು" ಅಂದಾಗ ಆಕೆಯ ಗಂಡ ಸೀನ, ಆಕೆಯ ಅಮ್ಮ ನಾವು ನಕ್ಕಿದ್ದೇ ನಕ್ಕಿದ್ದು. ಎರಡನೆಯದು ಹೆಣ್ಣಾಯಿತು ಅರುಣಾಗೆ. + +ಅದೇ ಟೈಮ್ನಲ್ಲಿ ಅಪ್ಪ ಹೃದಯಾಘಾತದಿಂದ ಹೋಗಿಬಿಟ್ಟ. ನಾನು ಅಜ್ಜಿ, ಅವ್ವನನ್ನು ಕರೆದುಕೊಂಡು ಬಂದು ಬಳ್ಳಾರಿಯಲ್ಲಿ ಮನೆ ಮಾಡಿದೆ. ಮೆಸ್ ಗೆ ಹೋಗುವುದು ಕಡಿಮೆಯಾಯಿತು. ಬಾಡಿಗೆ ಮನೆಗಳ ಬದುಕು ನಮ್ಮನ್ನು ಅಲೆಮಾರಿಗಳಂತೆ ನೋಡಿತು. ನೌಕರಿಯ ಜೋಳಿಗೆ ಹಿಡಿದು ಊರೂರು ತಿರುಗಿ ದೇಹಿ ಅನ್ನುತ್ತಾ ಹತ್ತಾರು ವರ್ಷಗಳೇ ಕಳೆದವು. ಗೆಳೆಯ ಸೀನ ಕಪಲ್ ಕೇಸ್ ನಲ್ಲಿ ತನ್ನೂರು ಚಳ್ಳಕೆರೆಗೆ ವರ್ಗಾಯಿಸಿ ಕೊಂಡ. ಕಾಡು ರಾಜ ಇನ್ನು ಬಳ್ಳಾರಿಯಲ್ಲೇ ಇದ್ದಾನೆ. ನಾನೀಗ ಕೊಪ್ಪಳದಲ್ಲಿ. ಮೊನ್ನೆ ನನ್ನ ಹಿರಿಯ ಸಿಬ್ಬಂದಿ, ಗೈಡ್, ತನ್ನ ಮನೆ ಬಾಡಿಗೆ ನೀಡಿ ಸಹಕರಿಸಿದ್ದ ಸಹೃದಯಿಯೊಬ್ಬರು ಬಳ್ಳಾರಿಯಲ್ಲಿ ಆಕಸ್ಮಿಕವಾಗಿ ಬೈಕ್ ಮೇಲೆ ಬಿದ್ದು ಆಸ್ಪತ್ರೆ ಸೇರಿದಾಗ ನೋಡಲು ಹೋಗಿದ್ದೆ. ವೈದ್ಯರ ಕ್ಲಿನಿಕ್ ಅದೇ ದುರುಗಮ್ಮ ಗುಡಿ ಹತ್ತಿರದ ಈರಣ್ಣ ಮೆಸ್ ಪಕ್ಕದ ರಸ್ತೆಯಲ್ಲಿತ್ತು. ಸುಮ್ಮನೆ ನೆನಪಾಗಿ ಮನೆ ಹತ್ತಿರ ಹೋದೆ. ಒಂದು ಹುಡುಗಿ ಕಕ್ಕ ಮಾಡಿಕೊಂಡ ಚಿಕ್ಕ ಮಗುವನ್ನು ತೊಳೆಯುತ್ತಿದ್ದಳು. ಆಕೆ ಅರುಣಾಳ ತಂಗಿ. + +"ಎಲ್ಲಿ ಅರುಣಮ್ಮ? ಹೇಗಿದಿರಿ? ನಾನ್ ಗುರ್ತು ಸಿಕ್ಕೆನೇ? ಸೀನ ಏನ್ ಮಾಡ್ತಾ ಇದ್ದಾನೆ? ಕೇಳುತ್ತಲೇ ಇದ್ದೆ. ಆ ಹುಡುಗಿ ಏನು ಆಗಿಯೇ ಇಲ್ಲವೆಂಬಂತೆ ಅಥವಾ ಆಗಿದ್ದನ್ನು ಮರೆತು ನೆನಪಿಸಿಕೊಂಡಂತೆ "ಸೀನ ಆಂಧ್ರಕ್ಕೆ ಹೋದ, ಅರುಣಾ ಕೂಡ "ಹೋಗಿ" ನಾಲ್ಕು ವರ್ಷವಾದವು, ಆಕೆ ಮಕ್ಕಳನ್ನ ನಾವೇ ಜೋಪಾನ ಮಾಡ್ತಿ ದೀವಿ. ದುಡ್ಡಿನ ಅಡಚಣೆ, ಸರಿಯಾಗಿ ಮ್ಯಾನೇಜ್ ಮಾಡದ ಕಾರಣ ಮೆಸ್ ಈಗ ನಡೆಸುತ್ತಿಲ್ಲ. ಬಹಳ ದಿನ ವಾಯ್ತಲ್ಲಾ? ಬೇಗ ನಿಮ್ ಗುರ್ತು ಸಿಗ್ಲಿಲ್ಲ" ಅಂದಳು. "ಸೀನ ಆಂಧ್ರಕ್ಕೆ ಹೋಗಿದ್ದು ಸರಿ, ಅರುಣಾ ಕೂಡ ಹೋಗಿದ್ದು ಸರಿ. ಆದ್ರೆ ಮಕ್ಕಳನ್ನು ನೀವ್ ಯಾಕ್ ಜೋಪಾನ ಮಾಡೋದು" ಅಂದೆ. ನನಗೆ ಸರಿಯಾಗಿ ಅರ್ಥವೇ ಆಗಿಲ್ಲವೆಂದು ಆ ಹುಡುಗಿಗೆ ಗೊತ್ತಾಯಿತು. ಅರುಣಾ ತೀವ್ರ ಅನಾರೋಗ್ಯವಾಗಿ ತೀರಿಕೊಂಡು ನಾಲ್ಕು ವರ್ಷಗಳೇ ಆದದ್ದನ್ನು ಬಿಡಿಸಿ ಹೇಳಿದಳು. + +ಪಿಚ್ಚೆನಿಸಿ ಹೆಚ್ಚು ಹೊತ್ತು ಅಲ್ಲಿರಲಾಗದೇ ನಡೆದು ಬಂದುಬಿಟ್ಟೆ +***** \ No newline at end of file diff --git a/PanjuMagazine_Data/article_1025.txt b/PanjuMagazine_Data/article_1025.txt new file mode 100644 index 0000000000000000000000000000000000000000..4026026be374c151fa02ef079928c7e3733edfcf --- /dev/null +++ b/PanjuMagazine_Data/article_1025.txt @@ -0,0 +1,8 @@ + + + + + + + + \ No newline at end of file diff --git a/PanjuMagazine_Data/article_1026.txt b/PanjuMagazine_Data/article_1026.txt new file mode 100644 index 0000000000000000000000000000000000000000..6e3d0f1c1aac419410daf866a9f1843d2cb199fc --- /dev/null +++ b/PanjuMagazine_Data/article_1026.txt @@ -0,0 +1,14 @@ +ಪೀಠಿಕೆ: +ಮುಂಚೆಯೆಲ್ಲಾ ದೀಪಾವಳಿ,ದಸರಾಗಳೆಂದರೆ ಮನೆ ತುಂಬಾ ಜನ. ಎಲ್ಲೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಹಬ್ಬದ ಸಂದರ್ಭ ಮಕ್ಕಳೆಲ್ಲಾ ತಮ್ಮ ಮೂಲಮನೆಗೆ ಹೋಗೋದು ಪದ್ದತಿ. ಎಲ್ಲಾ ಸೇರಿ ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದ ಖುಷಿಯೇ ಬೇರೆ. ಅವಿಭಕ್ತ ಕುಟುಂಬಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ, ಜನರಲ್ಲಿ ಸ್ವಾರ್ಥ, ಅಸೂಯೆಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆಯೇ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಮುಂದುವರೆದಂತೆಯೇ ಈ ಖುಷಿ, ನಗು ಕಮ್ಮಿಯಾಗುತ್ತಾ ಬರುತ್ತಿದೆ. ಎಂದೂ ಮುಗಿಯದ ಮಕ್ಕಳ ಎಕ್ಸಾಮಿನ ಟೆನ್ಷನ್ನು, ಅವರು ಏನೂ ಮಾಡಿರದಿದ್ದರೂ ಅವರನ್ನು ಯಾಕೆ ಕರೆಯಬೇಕೆಂಬ ಹಳ್ಳಿಯವರ ಬೇಸರವೂ, ನಮಗೆ ಸರಿಯಾದ ಆತಿಥ್ಯ ಮಾಡಿಲ್ಲವೆಂಬ ದೊಡ್ಡ ಪಟ್ಟಣದವರ ಸಣ್ಣತನವೂ ಮೇಳೈಸಿ ಸಂಬಂಧಗಳು ಸಾಯುತ್ತಿವೆ. ಹಬ್ಬಗಳ ಸೊಬಗು ಸಣ್ಣದಾಗುತ್ತಿದೆ. ಅದರ ಬಗ್ಗೆಯೇ ಒಂದು ಕತೆ.. ದೀಪಾವಳಿ. +ಕತೆಗೆ ಬರೋದಾದ್ರೆ..: +ಊರ ಸಾಹುಕಾರನ ಮನೆ. ಈಗಿರೋ ಸಾಹುಕಾರ ಹೆಸರಲ್ಲಿ ಸಾಹುಕಾರನಾದ್ರೂ ಮಕ್ಕಳು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟುವಷ್ಟು ಸಾಹುಕಾರನೇನಾಗಿರಲಿಲ್ಲ. ಭೂಸುಧಾರಣೆಯ ಹೊತ್ತಲ್ಲಿ ಈಗಿರೋ ಸಾಹುಕಾರ ಅಮಿತನ ತಂದೆ ಅನಂತಪತಿಯವರು ತಮ್ಮೂರಲ್ಲಿದ್ದ ಜಮೀನನ್ನೆಲ್ಲಾ ಹಂಚಿ ಈ ಊರಿನಲ್ಲಿದ್ದ ಸಣ್ಣ ಜಮೀನಲ್ಲಿ ಬಂದು ನೆಲೆಸಿದ್ದರಂತೆ. ಯಾರು ಏನು ಕಷ್ಟವೆಂದರೂ ನೆರವಾಗುತ್ತಿದ್ದ, ದೇಹಿ ಎಂದು ಬಂದವರಿಗೆ ಎಂದೂ ನಾಸ್ತಿಯೆನ್ನದ ಜನರು ಎಂಬ ಗುಣ ಶ್ರೀಮಂತರೆಂಬ ಕಾರಣಕ್ಕೆ ಇಂದೂ ಸಾಹುಕಾರ್ರು ಎಂಬ ಹೆಸರು ಆ ಮನೆತನಕ್ಕೆ ಮುಂದುವರೆದಿತ್ತು. ಅಮಿತನಂತೆಯೇ ಆತನ ಪತ್ನಿ ವಿಶಾಲೆಯದೂ ಹೆಸರಿಗೆ ತಕ್ಕಂತ ವಿಶಾಲ ಮನೋಭಾವ. ಮನೆಗೆ ಮಧ್ಯರಾತ್ರಿ ಬಂದು ನೆಂಟರು ಬಾಗಿಲು ತಟ್ಟಿದರೂ ಬೇಸರಿಸದೆ ಅವರಿಗೆ ಏನಾದರೂ ತಯಾರಿಸಿ ಉಣಬಡಿಸೋ ಅನ್ನಪೂರ್ಣೇಶ್ವರಿಯವಳು.ಇವರಿಗೆ ಒಬ್ಬ ಮಗ ಗುಣ ಮತ್ತು ಮಗಳು ಸುಗುಣ. . ಅಗರ್ಭ ಶ್ರೀಮಂತಿಕೆಯಿಲ್ಲದಿದ್ದರೂ ಇದ್ದುದರಲ್ಲೇ ಸಂತೃಪ್ತ ಸುಖಸಂಸಾರ. ದೊಡ್ಡ ಸಾಹುಕಾರನ ದೊಡ್ಡ ಮಕ್ಕಳೆಲ್ಲರೂ ಊರಲ್ಲಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಕಾರಣವೊಡ್ಡಿ ಪಟ್ಟಣ ಸೇರಿದ್ದರು. ಅಲ್ಲಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದರೂ ಊರಿಗೆ ಬಂದು ಪ್ರತೀ ಬಾರಿಯೂ ತಂದೆಯ ಹತ್ತಿರವಿದ್ದ ಅಳಿದುಳಿದ ಹಣಕ್ಕೆ ಪೀಡಿಸುತ್ತಲೂ, ಜಮೀನಲ್ಲಿ ಬಂದ ಪಸಲಲ್ಲಿ ತಮಗೆ ಸರಿಯಾದ ಪಾಲಿತ್ತಿಲ್ಲವೆಂಬ ಕಾರಣಕ್ಕೆ ಜಗಳವನ್ನೂ ಆಡುತ್ತಿದ್ದರು. ತಮ್ಮ ಮಕ್ಕಳ ಈ ದುರ್ಬುದ್ದಿಗೆ ಆ ತಂದೆ ಕೊರಗುತ್ತಾ ತನ್ನ ಕೊನೆಯ ದಿನಗಳನ್ನು ದೂಡುತ್ತಿರುವಾಗಲೇ ವರ್ಷದ ದೀಪಾವಳಿ ಹಬ್ಬ ಬಂದಿತ್ತು. +ದೀಪಾವಳಿಯೆಂದರೆ ದೊಡ್ಡ ಹಬ್ಬವೆಂದೇ ಪ್ರತೀತಿಯಲ್ಲಿ. ಸಾಹುಕಾರನ ಪಟ್ಟಣದಲ್ಲಿರೋ ಮಕ್ಕಳು , ತಮ್ಮ ಹೆಂಡತಿ ಮಕ್ಕಳೊಂದಿಗೆ,ಹೆಣ್ಣು ಮಕ್ಕಳು ಅಳಿಯಂದಿರೊಂದಿಗೆ ಊರಿಗೆ ದಾಂಗುಡಿಯಿಡುತ್ತಿದ್ದ ಸಂದರ್ಭ. ಮನೆಯೆಲ್ಲಾ ಗಿಜಿ ಗಿಜಿ. ಪಟ್ಟಣದ ಮಕ್ಕಳು ಹೊಸ ಬಟ್ಟೆ ತೊಟ್ಟು ಜಗುಲಿಯಲ್ಲಿ ಇಸ್ಪೀಟಿಗೆ ಕೂತುಬಿಟ್ಟರೆ ಮುಗಿದೋಯ್ತು. ಹೊರಜಗತ್ತಿನ ಅರಿವೇ ಇರುತ್ತಿರಲಿಲ್ಲ. ಹಬ್ಬದ ತಯಾರಿಯಿಂದ , ದನ ಕರುಗಳನ್ನು ತಯಾರು ಮಾಡೋವರೆಗೆ, ಆಯುಧಗಳನ್ನು ತೊಳೆಯೋದರಿಂದ ಮನೆ ಕೆಲಸಕ್ಕೆ ಬಂದ ಕೆಲಸದವರ ಊಟ, ತಿಂಡಿ, ಕಾಪಿಗಳು ಸರಿಯಾಗಿ ಆಯ್ತೇ ಎಂದು ವಿಚಾರಿಸುವುದರವರೆಗೆ ಎಲ್ಲಾ ಕೆಲಸಗಳೂ ಅಮಿತನ ಮೇಲೆಯೇ ಬೀಳುತ್ತಿದ್ದವು. ಅತ್ತಿಗೆಯಂದಿರೂ ಒಂದು ಕಾಸಿನ ಕಡ್ಡಿ ಕೆಲಸ ಮಾಡದೇ, ಕುಡಿದ ಕಾಪಿ ಲೋಟ ತೊಳೆಯದೇ ಊರು ಸುತ್ತೋಕೆ ಹೊರಡುತ್ತಿದ್ದರೂ ಬೇಸರಿಸದ ವಿಶಾಲೆಗೆ ಹರಿದ ತನ್ನ ಹಳೆಯ ಸೀರೆಗಿಂತಲೂ ಹಬ್ಬದ ಸಂದರ್ಭದಲ್ಲೂ ಹಳೆಯ ಬಟ್ಟೆ ಹಾಕಬೇಕಾದಂತಹ ತನ್ನ ಗಂಡನ ಮಗ್ಗೆ, ಹಬ್ಬಕ್ಕೆ ಹಾಕಲೂ ಹೊಸ ಬಟ್ಟೆ ಸಿಗದ ತನ್ನ ಮಕ್ಕಳನ್ನು ನೆನೆದು ಮರುಕವಾಗುತ್ತಿತ್ತು. ಅಡಿಕೆಗೆ ಕೊಳೆ ರೋಗ ಬಂದು ಸಿಕ್ಕ ಅಲ್ಪ ಪಸಲಿನಲ್ಲಿ ತಮ್ಮ ವರ್ಷವಿಡೀ ಹೇಗೆ ಜೀವನ ನಡೆಸಬೇಕು ಎಂಬ ಅಲ್ಪ ಅರಿವೂ ಇಲ್ಲದೇ ಆ ದುಡ್ಡಲ್ಲೂ ಪಾಲು ಕೇಳಲು ಬಂದಿರೋ, ದೀಪಾವಳಿಯನ್ನು ನಿಲ್ಲಿಸಬಾರದೆಂದು ತಮ್ಮಅದಕ್ಕಾಗೇ ಎಷ್ಟು ಸಾಲ ಮಾಡಿರಬಹುದು ಎಂದು ಒಂದಿನಿತೂ ಯೋಚಿಸದೇ ಇಲ್ಲಿ ಬಂದು ಆರಾಮಗಿರೋವಂತಹ ಭಾವಂದಿರಿಗಿಂತಲೂ ತಂದೆಯ ಕೊನೆಗಾಲ ಸಮೀಪಿಸುತ್ತಿರುವುದನ್ನು ಅರಿಯದೇ ಅವರನ್ನು ಕಾಡುತ್ತಿರೋ ಪರಿಯ ಬಗ್ಗೆ ಸಿಟ್ಟೂ , ಮಾವನವರ ಬಗ್ಗೆ ಅನುಕಂಪವೂ ಮೂಡುತ್ತಿತ್ತು. +ನೀರು ತುಂಬೋ ಭೂರಿ ಹುಣ್ಣಿಮೆ ಬಂತು. ಹಂಡೆ, ಭಾವಿಯನ್ನೆಲ್ಲಾ ರಂಗೋಲಿಯೆಳೆದು , ಕಾಡಲ್ಲಿ ಸಿಗುತ್ತಿದ್ದ ಅಂಡೆಕಾಯಿ ಬಳ್ಳಿಯಿಂದ ಸುತ್ತುವರೆದು ಸಿಂಗರಿಸಿದ ಬಳಿಕ ಮನೆಯವರಿಗೆಲ್ಲಾ ಎಣ್ಣೆ ಸ್ನಾನ. +ಭರ್ಜರಿ ಸ್ನಾನವಾಗಿ ಭೂರಿ ಭೋಜನವೂ ಆಗಿ ಎಲೆಯಡಿಕೆ ಮೆಲ್ಲುತ್ತಾ ಕುಳಿತಿದ್ದ ಅನಂತ ಪತಿಯ ದೊಡ್ಡ ಮಗ ತಂದೆಯನ್ನು ಮಾತಿಗೆಳೆದ. ಅಪ್ಪಾ, ಇನ್ನೆಷ್ಟು ವರ್ಷ ಅಂತ ನಾವು ಇಲ್ಲಿ ಬಂದು ಜಮೀನಿನ ಫಸಲಿನ ಪಾಲು ಕೇಳೋದು. ಪ್ರತೀ ಸಲ ಕೇಳೋಕೆ ನಮಗೂ ಒಂತರ ಬೇಜಾರಾಗುತ್ತೆ. ನಮ್ಮ ನಮ್ಮ ಪಾಲು ಎಷ್ಟೂಂತ ಹಿಸೆ ಮಾಡಿ ಕೊಡು. ಅದನ್ನ ಮಾರಿ, ಬಂದ ಹಣ ತಗೊಂಡು ಹೋಗಿ ಬಿಡ್ತೇವೆ. ಪ್ರತೀ ಸಲ ಕೇಳೋದು ಇರಲ್ಲ ಅಂದ. ಅಲ್ರೋ, ನಿಮ್ಮನ್ನೆಲ್ಲಾ ದೊಡ್ಡ ದೊಡ್ಡ ಓದಿಗೆ , ಬಿಸಿನೆಸ್ಸಿಗೆ ಅಂತ ಅಷ್ಟೆಲ್ಲಾ ಖರ್ಚು ಮಾಡಿದೀನಿ. ಕಿರಿಯ ಮಗನಿಗೆ ಅಂತ ಏನೂ ಕೊಟ್ಟಿಲ್ಲ. ಇರೋ ಒಂದೂವರೆ ಎಕರೆ ತೋಟಕ್ಕೂ ಪ್ರತೀ ವರ್ಷ ಕೊಳೆ ಬರ್ತಾ ಇದೆ. ಆದ್ರೂ ಅದರಲ್ಲಿ ಪಾಲು ಕೇಳೋ ಪಾಪಿಗಳಿಗೆ ಒಂದು ಮಾತೂ ಆಡದ ಆ ಪುಣ್ಯಾತ್ಮ ಬಂದಿದ್ದರಲ್ಲೇ ಪಾಲು ಕೊಡ್ತಾ ಇದ್ದಾನೆ. ಅವನ ಹರುಕು ಬಟ್ಟೆ, ಸ್ಥಿತಿ ನೋಡಿದ ಮೇಲೆ ಸಹಾಯ ಮಾಡೋಕೆ ಬರೋ ಬದ್ಲು ತೋಟದಲ್ಲಿ ಹಿಸೆ ಕೇಳ್ತಾ ಇದ್ದೀರಲ್ಲೋ, ಏನೋ ಕಮ್ಮಿಯಾಗಿದೆ ನಿಮ್ಗೆ ಅಂದ ಅನಂತ ಪತಿ. ಅಪ್ಪಾ, ಅವನ ಕರ್ಮ ನಮಗೆ ಗೊತ್ತಿಲ್ಲ. ನೀನು ಪಾಲು ಕೊಡ್ಲೇ ಬೇಕು. ಕೊಡ್ತೀಯೋ ಇಲ್ವೋ ? ಇಲ್ಲ ಅಂದ್ರೆ ಹೇಳ್ಬಿಡು. ಅದು ಹೇಗೆ ತಗೋಬೇಕು ಅಂತ ಗೊತ್ತಿದೆ ನಮ್ಗೆ ಅಂದಿದ್ದ ಮಧ್ಯದ ಮಗ. +ಹಬ್ಬ ಕಳೀಲಿ ನೋಡೋಣ ಅಂದಿದ್ದ ಅಪ್ಪ. +ದೊಡ್ಡಬ್ಬ ಬಂದೇ ಬಿಡ್ತು. ಗೋಪೂಜೆ, ಲಕ್ಷ್ಮಿಪೂಜೆ, ಆಯುಧ ಪೂಜೆ ಅಂತ ಇಬ್ರು ಅಣ್ಣಂದಿರೂ ಮಡಿಯುಟ್ಟುಕುಂಡು ಕೂತೇ ಬಿಟ್ರು. ದನಕರುಗಳಿಗೆ ಬಣ್ಣ ಹಚ್ಚೋದ್ರಿಂದ, ಆಯುಧ ತೊಳೆದು ಜೇಡಿ ಕೆಮ್ಮಣ್ಣು ಹಚ್ಚೋದು, ಹೊರಗೆ ಅಣ್ಣಂದಿರು ಒಡೆಯಲು ಬೇಕಾದ ಕಾಯಿ ಸುಲಿದುಕೊಡೋದು ಹೀಗೆ ಹೊರಗಿನ ಕೆಲಸಗಳೆಲ್ಲಾ ತಮ್ಮನ ಮೇಲೇ ಬಿತ್ತು. ಅದೆಲ್ಲಾ ಮುಗಿಸಿ ಆತನ ಸ್ನಾನ ಆಗೋದ್ರೊಳಗೆ ಪೂಜೆ ಮುಗಿಯುತ್ತಾ ಬಂದಿತ್ತು. ಹಬ್ಬದ ದಿನವೂ ಮಧ್ಯಾಹ್ನ ಸ್ನಾನ ಮಾಡ್ತೀಯಲ್ಲೋ ಕೊಳೆಯ ಅಂತ ಬೈಸ್ಕೊಳ್ಳಬೇಕಾಗೂ ಬಂತು ಪ್ರತೀ ವರ್ಷದಂತೆಯೇ ! ನನಗೆ ಮಂತ್ರ , ತಂತ್ರಗಳೇನೂ ಗೊತ್ತಿಲ್ಲ ದೇವರೇ. ನನ್ನ ಅಣ್ಣಂದಿರು ಚೆನ್ನಾಗೇ ಪೂಜೆ ಸಲ್ಲಿಸಿದ್ದಾರೆ ಅಂದುಕೊಳ್ಳುತ್ತೀನಿ. ಕಾಯಕವೇ ಕೈಲಾಸ ಎಂದು ತೋಟ, ಗದ್ದೆ ಕೆಲಸಗಳಲ್ಲೇ ಮುಳುಗಿ ನಿನ್ನ ಪೂಜಿಸೋ ವಿಧಿಯನ್ನರಿಯದೇ ನಾನೆಸಗಿದ ತಪ್ಪುಗಳನ್ನೆಲ್ಲಾ ಮನ್ನಿಸಿ ನಮ್ಮ ಪೂಜೆಯನ್ನು ಸ್ವೀಕರಿಸಿ ನಮ್ಮನ್ನು ಎಂದಿನಂತೇ ಕಾಪಾಡೋ ಪ್ರಭುವೆ ಎಂದು ಬೇಡಿಕೊಂಡ. ಹಬ್ಬದ ಊಟವಾಗುತ್ತಿದ್ದಂತೆಯೇ ಒಬ್ಬೊಬ್ಬರೇ ಖಾಲಿಯಾದರು. ರಾತ್ರಿ ತನಕ ಉಳಿದರೆ ತಮ್ಮ ಮಕ್ಕಳು ಪಟಾಕಿ ಪಟಾಕಿ ಅನ್ನುತ್ತಾರೆ. ಅವರಿಗೆ ಅಂತ ಮಾತ್ರವೇ ತರೋಕ್ಕಾಗದೇ ಎಲ್ಲರಿಗೂ ಪಟಾಕಿ ತರಬೇಕಾದ ಖರ್ಚು ಎಂಬ ದೂರಾಲೋಚನೆ !! +ಮುಂದಿನ ಬಾರಿ ದೀಪಾವಳಿ ಬಂದಿತ್ತು. ಇತ್ತೀಚೆಗೆ ಹಲವು ವರ್ಷಗಳಿಂದ ಕೊಳೆ ಬರುತ್ತಿದ್ದ ಮರಗಳಿಗೆ ಈ ವರ್ಷ ಕೊಳೆ ಬಾರದ್ದರ ಜೊತೆಗೆ ಹೊಸದಾಗಿ ಶುರು ಮಾಡಿದ್ದ ಎರೆಗೊಬ್ಬರದಿಂದಲೂ ಅಲ್ಪ ಲಾಭ ಬರೋಕೆ ಶುರುವಾಗಿದ್ದರಿಂದ ಸಹಜವಾಗೇ ಖುಷಿಯಲ್ಲಿದ್ದ ಅಮಿತ. ಹಿಂದಿನ ವರ್ಷದ ಹಬ್ಬವಾದ ಮೇಲೆ ಅಪ್ಪನ ಆರೋಗ್ಯ ಹದಗೆಡುತ್ತಿದ್ದರೂ ತಿಂಗಳಿಗೊಮ್ಮೆಯೂ ಫೋನ್ ಮಾಡದ ಅಣ್ಣಂದಿರೆಗೆಲ್ಲಾ ಮತ್ತೆ ಮತ್ತೆ ಫೋನ್ ಮಾಡಿ ಹಬ್ಬ ಹತ್ತಿರ ಬರೋದನ್ನ ನೆನಪಿಸಿ ಕರೆಯುತ್ತಿದ್ದರೂ ಅವರು ಬರ್ತೀನಿ ಅಂತಲೂ ಅನ್ನದೇ, ಬರೋಲ್ಲ ಅಂತಲೂ ಅನ್ನದೆ, ಮುಂಚಿನಂತೆ ಚೆನ್ನಾಗಿ ಮಾತನ್ನೂ ಆಡದೇ ಫೋನಿಡುತ್ತಿದ್ದರು. ನಾನೇ ಹೋಗಿ ಅವರನ್ನು ಹಬ್ಬಕ್ಕೆ ಕರೆದುಬರುತ್ತೇನೆ. ಅಕ್ಕಂದಿರನ್ನು ದೀಪಾವಳಿಗೆ ಕರೆಯದಿರೋದು ಚೆನ್ನಾಗಿರೋಲ್ಲ ಅಂತ ಅಮಿತ. ಬೇಡ ಕಣೋ ಮಗನೇ,ಸುಮ್ಮನೇ ಅಲ್ಲಿಗೆ ಹೋಗಿ ಯಾಕೆ ಅವಮಾನ ಅನುಭವಿಸ್ತೀಯ ಅಂದ ಅನಂತಪತಿ. ಹೌದು ಕಣ್ರಿ, ನಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡ್ತಿಲ್ಲ ಅಂತಲ್ಲ. ನಮ್ಮ ಬಡತನದ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಕೊಂಕು ಮಾತಾಡ್ತಾರೆ ಅಂತಲೂ ಅಲ್ಲ ಆದರೆ ನಿಮ್ಮ ಬಗ್ಗೆ, ಮಾವನವರ ಬಗ್ಗೆಯೂ ಅವರು ಚುಚ್ಚೋದು ನಂಗೆ ಇಷ್ಟ ಆಗೋಲ್ಲ ಕಣ್ರಿ. ಅವರಿಗೆ ಇಷ್ಟ ಇಲ್ಲ ಅಂದ್ರೆ ನೀವ್ಯಾಕೆ ಒತ್ತಾಯ ಮಾಡ್ತೀರಿ . ಬೇಡ ಬಿಡಿ ಅಂದ್ಲು ವಿಶಾಲು. ಅಮಿತ ಅರೆಕ್ಷಣ ಮೌನವಾಗಿದ್ದ. ಆತ ಏನು ಹೇಳಬಹುದೆಂಬ ಕುತೂಹಲ ಎಲ್ಲರಿಗೂ ಇತ್ತು. ನೀ ಹೇಳೋ ಮಾತು ನನಗೂ ಅರ್ಥವಾಗುತ್ತೆ ವಿಶಾಲು. ನೀ ಹೇಳೋದು ಸರಿನೇ ಆದ್ರೂನು ಮೂಲ ಮನೆಯಲ್ಲಿರೋ ತಮ್ಮನಾಗಿ ಬೇರೆ ಕಡೆ ಇರೋ ಅಣ್ಣ-ಅಕ್ಕಂದಿರನ್ನು ಹಬ್ಬಕ್ಕೆ ಕರೀದೆ ಇರೋದು ಸರಿ ಇರಲ್ಲ. ಕರೆದು ಬರ್ತೀನಿ ಅಂತ ಅವರ ಉತ್ತರಕ್ಕೂ ಕಾಯದೇ ಪಟ್ಟಣದ ಬಸ್ಸು ಹತ್ತಿದ ಅಮಿತ. +ಹಬ್ಬಕ್ಕೆ ಕರೆಯೋಕೆ ಬಂದ ಇವನಿಗೆ ಅಲ್ಲಿ ಸಿಕ್ಕ ಸತ್ಕಾರಗಳನ್ನು ಮರೆಯುವಂತೆಯೇ ಇಲ್ಲ! ನಿಮ್ಮ ತಮ್ಮ ಇವತ್ತೇನಾದ್ರೂ ಇಲ್ಲೇ ಝಾಂಡಾ ಹೂಡಿದ್ರೆ ಏನು ಕತೆ ? ನೋಡಿದ್ರೆ ಹಾಗೇ ಅನ್ಸುತ್ತೆ. ಈಗ್ಲೇ ಹೇಳಿ ಬಿಡ್ತೇನೆ. ನಾನೆಂತೂ ಅಡಿಗೆ ಬೇಯಿಸಿ ಹಾಕೋದಿಲ್ಲ , ಮನೆಗೆ ಬಂದ ಅಬ್ಬೆಪಾರಿಗಳಿಗೆಲ್ಲಾ ಅಡಿಗೆ ಬೇಯಿಸಿ ಹಾಕೋಕೆ ಇದೇನು ಛತ್ರವೇ ಎಂದು ಗಂಡನನ್ನು ಅಡಿಗೆ ಮನೆಗೆ ಕರೆದೊಯ್ದು ಜಗಳಕ್ಕಿಳಿದಿದ್ದ ಮೊದಲ ಅತ್ತಿಗೆಯ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಬೇರೇನೂ ತುರ್ತು ಕೆಲಸವಿದೆಯೆಂದು ಅವರ ಮನೆಯಲ್ಲಿ ನೀರೂ ಕುಡಿಯದಂತೆ ಹೊರಟುಬಿಟ್ಟಿದ್ದ. ನಂತರ ಹೋಗಿದ್ದು ಹಿರಿಯ ಅಕ್ಕನ ಮನೆಗೆ. ಎದುರಿಗೆ ಬಂದು ಸ್ವಾಗತಿಸಿದ ಭಾವ ನಸುನಕ್ಕು ಸ್ವಾಗತಿಸಿದರೂ ಅವರು ಒಳಗೆ ಅಕ್ಕನನ್ನು ಕರೆಯಲು ಹೋದಾಗ ಒಳಮನೆಯಲ್ಲಿ ಅವಳು ಭಾವನೊಂದಿಗೆ ಆಡುತ್ತಿದ್ದ ಮಾತುಗಳು ಕೇಳಿ ಅಮಿತನಿಗೆ ಬೇಸರವಾಯ್ತು. ಸುಮ್ಮನೇ ಅಲ್ಲಿಯವರೆಗೆ ಯಾಕೆ ಹೋಗಬೇಕುರಿ ? ಸುಮ್ಮನೇ ದುಡ್ಡು ದಂಡ. ಹಿರಿಯ ಮಗಳಿಗೆ ಕಾಲು ಭಾಗ ಆಸ್ತಿಯನ್ನೂ ಬರೆದುಕೊಡದ ಆ ತಂದೆಯ ಮುಖ ನೋಡಲೂ ಇಷ್ಟವಿಲ್ಲ. ಇನ್ನು ಆ ಅಮಿತನ ಸಂಸಾರವೋ.. ಭಿಕ್ಷುಕರ ಬಿಡಾರದಂತಿದೆ. ನನ್ನ ಮಕ್ಕಳ ಒಳ್ಳೆ ಬಟ್ಟೆಗಳನ್ನು, ನನ್ನ ರೇಷ್ಮೆ ಸೀರೆಯನ್ನು ಆ ವಿಶಾಲೆ ಮತ್ತವಳ ಮಕ್ಕಳು ಜೊಲ್ಲು ಸುರಿಸುತ್ತಾ ನೋಡೋದನ್ನ ನೆನೆಸಿಕೊಂಡ್ರೆ ನಂಗೆ ಅಸಹ್ಯವಾಗುತ್ತೆ. ನಾನಂತೂ ಬರೋಲ್ಲ ಅನ್ನುತ್ತಿದ್ದಳು ಅಕ್ಕ. ಅಬ್ಬಾ, ಇವಳು ನನ್ನ ಸ್ವಂತ ಅಕ್ಕನೇ ಅನಿಸಿಬಿಟ್ಟಿತ್ತು ಅಮಿತನಿಗೆ. ಅಲ್ಲೇ, ನಿನ್ನ ಮದುವೆಯ ಹೊತ್ತಿಗೆ, ತಮ್ಮ ಯಾವುದೋ ಮನೆ ಮಾರಿ ನಾನೊಂದು ಬಿಸಿನೆಸ್ ತೆಗೆಯೋಕೆ ಸಹಾಯ ಮಾಡಿದ್ದ, ನಾನು ಲಾಸಿನಲ್ಲಿದ್ದಾಗ ಎಷ್ಟೋ ಸಲ ಸಹಾಯ ಮಾಡಿದ್ದ ನಿಮ್ಮ ಅಪ್ಪ, ತಮ್ಮನ ಬಗ್ಗೆ ಹೀಗೆಲ್ಲಾ ಮಾತನಾಡ್ತೀಯಲ್ಲ ನೀನು, ಈಗೋನೋ ಮೂರ್ನಾಲ್ಕು ವರ್ಷದಿಂದ ಅಡಿಕೆಗೆ ಕೊಳೆಬಂದು ಅನ್ನುತ್ತಿದ್ದ ಭಾವನ ಮಾತನ್ನ ಅರ್ಧಕ್ಕೇ ತಡೆದ ಅಕ್ಕ, ಹೂಂ ಕಣ್ರೀ, ನಾನಿರೋದೇ ಹೀಗೆ. ನಿಮಗೆ ಸಹಾಯ ಮಾಡೋದು ಅವರ ಕರ್ತವ್ಯವಾಗಿತ್ತು ಮಾಡಿದಾರೆ. ಅದರಲ್ಲೇನಿದೆ ? ನನಗೆ ಆಸ್ತಿ ಕೊಡೋವರೆಗೋ ನಾನು ಆ ಕಡೆ ತಲೆನೂ ಹಾಕಲ್ಲ, ನೀವೂ ಆ ಕಡೆ ಹೋಗೋ ಹಾಗಿಲ್ಲ ಅಂದಿದ್ದಳು. +ಅಲ್ಲಿಂದಲೂ ಅನಿವಾರ್ಯ ಕಾರಣ ಹೇಳಿ ಎರಡನೇ ಅಣ್ಣನ ಮನೆಗೆ ಹೋಗಿದ್ದ ಅಮಿತನಿಗೆ ಬಾಗಿಲ ಬೀಗ ಸ್ವಾಗತ ಮಾಡಿತ್ತು. ಪಕ್ಕದಲ್ಲೇ ಇದ್ದ ಅಂಗಡಿಯಿಂದ ಫೋನ್ ಮಾಡಿದರೆ ಅಯ್ಯೋ, ನೀನು ಫೋನ್ ಮಾಡಿ ಬರೋದಲ್ಲವೇನೋ, ನನಗೆ ಆಫೀಸಲ್ಲಿ ಅರ್ಜೆಂಟ್ ಕೆಲಸವಿದೆ. ಬರೋದು ರಾತ್ರಿಯಾಗುತ್ತೆ ಅಂದ ಅಣ್ಣ. ಸರಿ, ಅತ್ತಿಗೆ, ಮಕ್ಕಳು ? ಅವರು ಇಲ್ಲೇ ಮಾರ್ಕೇಟಿಗೆ ಹೋಗಿರ್ಬೇಕು. ಸರಿ ಬಿಡು ಅಣ್ಣ. ಅವರು ಬರೋವರಿಗೆ ಇಲ್ಲೇ ಕಾಯ್ತೀನಿ.. ಅಯ್ಯಯ್ಯೋ ಬೇಡಪ್ಪ, ಅವಳು ಅವಳಪ್ಪನ ಮನೆಗೆ ಹೋಗಬೇಕುಂತಿದಾಳೆ ಮಾರ್ಕೆಟ್ಟಿಂದ ಬಂದ ಅವಳಿಗೆ ನಿನ್ನ ಜೊತೆ ಮಾತಾಡ್ತಾ ಕೂತ್ರೆ ಅಪ್ಪನ ಮನೆಗೆ ಹೋಗೋಕೆ ಲೇಟಾಗುತ್ತೇಂತ ಬೈಕೋತಾಳೆ. ಇನ್ನೊಂದ್ಸಲ ಬರೋದಾದ್ರೆ ಫೋನ್ ಮಾಡ್ಕೊಂಡು ಬಾರೋ.. ಹಲೋ ಹಲೋ..ಕೇಳ್ತಾ ಇದಿಯಾ.. ಹಲೋ. ಹಲೋ.. ಎಂದು ಫೋನ್ ಕುಕ್ಕಿದ್ದ. ಅನಪೇಕ್ಷಿತ ಅತಿಥಿಯಾಗಿರಲು ಇಷ್ಟವಿಲ್ಲದೇ ಎರಡನೇ ಅಕ್ಕನಿಗೆ ಅಲ್ಲಿಂದಲೇ ಫೋನ್ ಮಾಡಿದ್ದ. ಪಟ್ಟಣಕ್ಕೆ ಬಂದಿದ್ದೇನೆಂದು ಹೇಳಿದರೂ ಅವಳು ಮನೆಗೆ ಕರೆದಿರಲಿಲ್ಲ. ಬರುತ್ತೇನೆ ಎಂದು ಇವನೂ ಹೇಳಲಿಲ್ಲ. ಎರಡು ದಿನ ಇದ್ದು ಎಲ್ಲರನ್ನೂ ಕರೆದುಬರುತ್ತೇನೆ ಎಂದಿದ್ದವನಿಗೆ ಮಧ್ಯಾಹ್ನದ ಒಳಗೇ ಎಲ್ಲರನ್ನೂ ಕರೆದು ಮುಗಿದಿದ್ದರಿಂದ ತಕ್ಷಣವೇ ಊರು ಬಸ್ಸು ಹತ್ತಿ ರಾತ್ರಿಗೆ ಮನೆಗೆ ಮುಟ್ಟಿದ್ದ. +ಭೂರಿ ಹುಣ್ಣಿಮೆ ಬಂದೇ ಬಿಟ್ಟಿತು. ಹದಿನೈದು ಜನರ ಬದಲು ಐದು ಜನರೇ ಇದ್ದರೂ ಈ ಸಲದ ದೀಪಾವಳಿಯಲ್ಲಿ ಏನೂ ಖುಷಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಹಿಂದಿನ ಹಬ್ಬಗಳಲ್ಲಿರುತ್ತಿದ್ದ, ಗಲಾಟೆ, ನಗುಗಳ ಕಳೆ ಇಲ್ಲದಿದ್ದರೂ ಮನೆ ತುಂಬಾ ಓಡಾಡುತ್ತಿದ್ದ ಗುಣ, ಸುಗುಣರ ಓಟ, ಆಟಗಳೇ ಒಂದು ಚಲುವನ್ನು ಮೂಡಿಸಿದ್ದವು. ಸುಗುಣನಿಗೇ ಒಂದು ಅಡ್ಡಮಡಿಯುಡಿಸಿ ಕೂರಿಸಿದ್ದ ದೀಪಾವಳಿಯ ದಿನವಂತೂ ಆ ಭಗವಂತನೇ ಹುಡುಗನ ರೂಪದಲ್ಲಿ ಮನೆಗೆ ಬಂದಿದ್ದಾನೇನೋ ಅನಿಸುತ್ತಿತ್ತು. ಲಂಗಧಾವಣಿಯುಟ್ಟು , ಆರತಿ ದೀಪಗಳ ಬಟ್ಟಲು ಹಿಡಿದು ಗುಣನ ಜೊತೆಗೇ ತಿರುಗುತ್ತಿದ್ದ ಸುಗುಣಳನ್ನು ನೋಡೋದೇ ಒಂದು ಸೊಬಗಾಗಿತ್ತು. ಪಟಾಕಿಗಳ ಆರ್ಭಟವಿಲ್ಲದಿದ್ದರೂ ಮನೆಯ ಸುತ್ತಲಿಟ್ಟ ದೀಪಗಳ ಚೆಲುವು, ಗಂಟೆ, ಜಾಗಟೆಗಳ ನಾದದಲ್ಲಿ ಈ ಬಾರಿಯ ಹಬ್ಬದ ರಾತ್ರಿ ಎಲ್ಲಿಗೋ ಕರೆದೊಯ್ದಿತ್ತು. ರಾತ್ರೆ ಬಂದ ಹಬ್ಬ ಆಡೋರು(ಅಂಟಿಗೆ-ಪಿಂಟಿಗೆ) ಯವರಲ್ಲೂ ಏನೋ ಚೆಲುವು ಕಾಣುತ್ತಿತ್ತು. ಕೊಳೆಯಿರದ ಮರ, ಕೈ ಹಿಡಿಯುತ್ತಿರುವ ಗೊಬ್ಬರ, ಸರಿಯಾಗುತ್ತಿರುವ ಅಪ್ಪನ ಆರೋಗ್ಯ.. ಹೀಗೆ ಎಲ್ಲವೂ ಅಮಿತನ ಶುದ್ದ ಮನಸ್ಸಿನ ಪ್ರಾರ್ಥನೆಗೆ ಒಲಿದಂತಿತ್ತು.. +***** \ No newline at end of file diff --git a/PanjuMagazine_Data/article_1027.txt b/PanjuMagazine_Data/article_1027.txt new file mode 100644 index 0000000000000000000000000000000000000000..c3cbf3c1ea51ef69ac5bbace9c22321d47da4e24 --- /dev/null +++ b/PanjuMagazine_Data/article_1027.txt @@ -0,0 +1,7 @@ +ಜಗತ್ತಿನಲ್ಲಿ ತೃತೀಯ ಲಿಂಗದ ಜನರನ್ನು ಜನರೆಂದು ಬಾವಿಸದೆ ನಿರಂತರ ಶೋಷಣೆಗೆ ಒಳಪಡುವಂತ ಸಮುದಾಯ ಇದು .ಅವರಷ್ಟೆ ಶೋಷಣೆಗೆ ಒಳಗಾದ ಇನ್ನೊಂದು ಸಮುದಾಯ ಇದೆ ಅದು ದೇವದಾಸಿ ಸಮುದಾಯ. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದಲಿತ ಹೆಣ್ಣು ಮಕ್ಕಳನ್ನು ಮೇಲ್ಜಾತಿಯವರು ತಮ್ಮ ಭೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅವರನ್ನು ಹೀನಾಯವಾಗಿ ಶೋಷಣೆ ಮಾಡುವ ಪ್ರವೃತ್ತಿಯು ಇನ್ನು ಕೆಲವೊಂದು ಸ್ಥಳಗಳಲ್ಲಿ ಜೀವಂತವಾಗಿದೆ. ಅನೇಕ ಮುಗ್ಧ ಹೆಣ್ಣು ಮಕ್ಕಳು ಈ ಪಾಪದ ಪದ್ದತಿಗೆ ತಿಳಿದೋ ತಿಳಿಯದೆಯೋ ಬಲಿಯಾಗುತ್ತಿದ್ದಾರೆ. ಮೂಢನಂಬಿಕೆ ಮತ್ತು ಬಡತನ ಕಾರಣ ನೀಡಿ ಒಂದು ಹೆಣ್ಣನ್ನು ಇಂತಹ ಸ್ಥಿತಿಗೆ ತಳ್ಳುವುದು ಎಷ್ಟರ ಮಟ್ಟಗೆ ಸರಿ ಇದೆ? +ದೇವದಾಸಿ ಸಮುದಾಯದವರನ್ನು ಸಮಾಜದ ಶ್ರೇಣಿಯಲ್ಲಿ ತೀರಾ ಕೆಳಮಟ್ಟದಾಗಿ ನೋಡುತ್ತಿದ್ದಾರೆ. ಅವರಿಗೂ ಬದುಕುವ ಹಕ್ಕಿದೆ ಎಂದು ಯಾರು ಯೋಚನೆ ಮಾಡತ್ತಿಲ್ಲ. ಮೌಢ್ಯತಗೆ ಮಾರುಬಿದ್ದು ಅಮಾಯಕ ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುತ್ತಿದ್ದಾರೆ. ಒಂದು ಹೆಣ್ಣಿಗೆ ಅರಿಯದ ವಯಸ್ಸಿನಲ್ಲಿ ದೇವರ ಹೆಸರಿನಲ್ಲಿ ಮುತ್ತು ಕಟ್ಟಿ ಸುಂದರ ಬದುಕನ್ನು ಅಪಾಯಕ್ಕೆ ತಳುತ್ತಾರೆ. ಕೊನೆಗೆ ಅವರು ಮಾರಣಾಂತಿಕ ರೋಗಕ್ಕೆ ಬಲಿಯಾಗುತ್ತಾರೆ. ಇನ್ನು ಅವರಿಗೆ ಜನಿಸಿದ ಮಕ್ಕಳಿಗೆ ಯಾರುತಾನೆ ಆಶ್ರಯ ಕೊಡುತ್ತಾರೆ. ದೇವದಾಸಿ ಮಕ್ಕಳು ಎನ್ನುವ ಕಾರಣದಿಂದ ಸಮಾಜವು ತನ್ನ ತಾಯಿಯನ್ನು ನೋಡಿದ ದೃಷ್ಟಿಯಿಂದ ನೋಡುತ್ತಿದೆ. ಆ ಮಗು ಮುಂದಿನ ದಿನಗಳಲ್ಲಿ ಶಾಲೆಗೆ ದಾಖಲಾತಿಗೆ ಹೋದಾಗ ಎದುರಾಗುವ ಮೊದಲ ಪ್ರಶ್ನೆ ತಂದೆ ಯಾರು? ಅಂತಾ. ಇದನ್ನು ಕೇಳಿದಾಗ ಅವರಿಗೆ ಆಗುವ ಅವಮಾನ ಅಷ್ಟಿಷ್ಟಲ್ಲ. ಆಗವರು ತಂದೆ ಇಲ್ಲೆಂದು ತಾಯಿ ಹೆಸರು ಹೇಳಿ ದಾಖಲಾತಿ ಮಾಡುತ್ತಾರೆ. ಅದರೆ ಮಕ್ಕಳು ಅಮ್ಮನನ್ನು ಅಪ್ಪನ ಬಗ್ಗೆ ಕೇಳಿದಾಗ ಏನೊ ಒಂದು ನೆಪ ಹೇಳಿ ಸಮಾದಾನ ಪಡಿಸುತ್ತಾಳೆ. ದಿನಗಳು ಕಳೆದಂತೆ ಸಹಪಾಠಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಆಗವುದಿಲ್ಲ. ಅದೇ ನೋವಲ್ಲಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. +ಕೆಲವು ದೇವದಾಸಿ ಹೆಣ್ಣು ಮಕ್ಕಳು ತಮ್ಮ ಊರಲ್ಲಿ ಇಂದುಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಬಾಂಬೆ, ಪುಣೆ, ಗೋವಾ ಮುಂತಾದ ಕಡಗೆ ವಲಸೆ ಹೋಗುತ್ತಿದ್ದಾರೆ. ಮನೆಯ ಜವಾಬ್ದಾರಿ ಇರುದರಿಂದ ಅವರು ವಲಸೆ ಹೋಗಬೇಕಾಗಿ ಬರುತ್ತದೆ. ಪ್ರತಿಯೊಬ್ಬ ತಾಯಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಆಸೆ ಇರುವುದು ಸಹಜ. ಆದರೆ ಅವರಿಗೆ ಅಷ್ಟು ಸಾಮಥ್ರ್ಯ ಇರುವುದಿಲ್ಲ. +ಭಾರತ ದೇಶದಲ್ಲಿ ಕರ್ನಾಟಕ ದೇವದಾಸಿ ಪದ್ದತಿ ಆಚರಣೆಯಲ್ಲಿ ಮುಂಚೂಣೆಯಲ್ಲಿದೆ. ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗಿತ್ತು. ಸರ್ಕಾರವು ಈಗ ಸ್ವಲ್ಪ ಮಟ್ಟಿಗೆ ಅದನ್ನು ನಿಯಂತ್ರಣ ಮಾಡಿದೆ. ಬೆಳಗಾವಿ ಜಿಲ್ಲೆಯ ಗೋಕಾಕ, ಅವರಾದಿ, ತಿಮ್ಮಾಪೂರ, ವೆಂಕಟಾಪೂರ, ಯಾದವಾಡ ಹಾಗೂ ಬಾಗಲಕೋಟಿ ಜಿಲ್ಲೆಯ ಶಿರೋಳ,ರೂಗಿ, ಬೆಳಗಲಿ ಇತ್ಯಾದಿ ಇನ್ನೂ ಅನೇಕ ಗ್ರಾಮಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ದೇವದಾಸಿ ಮಹಿಳೆರು ಇದ್ದಾರೆ. ಇಂದು ಅವರು ಸ್ವಂತ ಕೆಲಸ ಮಾಡುಕೊಳ್ಳುತ್ತಿದ್ದಾರೆ. ಆದರೆ ಬೆರಳೆಣಿÀಕೆಯಷ್ಟು ದೇವದಾಸಿ ಮಹಿಳೆಯರು ವ್ಯೆಶ್ಯಾವಾಟಿಕೆಯನ್ನು ಮುಂದುವರಿಸಿದ್ದಾರೆ. ಕೂಲಿಗೆ ಹೋಗುವವರಿಗೆ ಕೆಲವು ದಿನಾ ಮಾತ್ರಾ ಕೆಲಸ ಸಿಗುತ್ತದೆ. ಕೆಲಸ ಸಿಗದಿದ್ದ ಪಕ್ಷದಲ್ಲಿ ಅವರಿಗೆ ದ್ಯೆನಂದಿನ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅಸ್ಯಾದವಾದ ಮಾತಾಗಿದೆ. 8 ರಿಂದ 9ನೆ ತರಗತಿಯವರೆಗೂ ಶಾಲೆಗೆ ಹೋದ ಮೇಲೆ ಮುಂದಿನ ಶಿಕ್ಷಣ ಕೊಡಿಸಲು ಪೋಷಕರಿಗೆ ತೊಂದರೆಯಾಗುತ್ತಿದೆ. ಈ ಸ್ಥಿತಿಯಲ್ಲಿ ತಾಯಿಯು ತನ್ನ ಜೊತೆ ಕೂಲಿಗೆ ಬಾ ಎಂದು ಕರೆದುಕೊಂಡು ಹೋಗುತ್ತಾರೆ. ಆಗ ಆ ಮಗು ತನ್ನ ಶಾಲೆಯನ್ನು ಅರ್ದಕ್ಕೆ ಮೊಟಕುಗೊಳಿಸಿ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತವೆ. ಶಿಕ್ಷಣ ಪಡೆಯಬೇಕೆಂಬ ಆಸೆಯು ಕೂಡಾ ನಿರಾಸೆಯಾಗುತ್ತವೆ. ಕನಸುಗಳು ಅಲ್ಲಿಯೇ ಕಮರಿ ಹೋಗುತ್ತದೆ. +ಸರ್ಕಾರವು 1984 ರಲ್ಲಿ “ದೇವದಾಸಿ ನಿರ್ಮೂಲನಾ ಕಾಯ್ದೆ”ಯನ್ನು ಜಾರಿಗೆ ತಂದಿದೆ. ಅದು ಕೆಲವೊಂದು ಕಡೆಯಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೂ ಸಹ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿಲ್ಲ. ಸರ್ಕಾರ ಪಿಂಚಣಿ, ಸಬ್ಸಿಡಿಯಲ್ಲಿ ಧನಸಹಾಯ ಮಾಡಿ ಅವರಿಗೆ ಸ್ವಾವಲಂಬನೆ ಜೀವನ ನಡೆಸಲು ಅವಕಾಶ ಮಾಡಿ ಕೊಟ್ಟಿದೆ. ಅದು ಎಷು ಜನರಿಗೆ ಸಿಗುತ್ತಿದೆ ಎಂದು ನೋಡಬೇಕಿದೆ. ದೇವದಾಸಿ ಮಹಿಳೆಯರು ಇರುವ ಗ್ರಾಮಗಳನ್ನು ಗುರ್ತುಸಿ ಅವರ ಬಗ್ಗೆ ಹಾಗೂ ಅವರ ಮಕ್ಕಳ ಶಿಕ್ಷಣದ ಬಗ್ಗೆ ಸರ್ವೆ ಮಾಡಬೇಕು ಆಗ ನ್ಯೆಜವಾದ ಸ್ಥಿತಿ ಅರ್ಥವಾಗುತ್ತದೆ. ಬಜೆಟ್‍ನಲ್ಲಿ ಮಂಡನೆಯಾಗುವ ಹಣವು ಅವರ ಕೈಗೆ ಸೇರುತ್ತಿಲ್ಲ. ಅಲ್ಪ ಪ್ರಮಾಣದಲ್ಲಿ ಸಿಗುತ್ತಿದೆ. ಇದರಿಂದ ಅವರು ತಕ್ಕ ಮಟ್ಟಿನ ಜೀವನ ನಡೆಸಲು ಸಾದ್ಯವೇ? ಸರ್ಕಾರಗಳು ಯಾವುದೇ ಯೋಜನೆಗಳು ತಂದರೂ ಸಹ ಅವು ಇಲ್ಲಿಯವರೆಗೂ ತಲುಪುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಯಾರನ್ನು ನಂಬಿ ಇವರುಗಳು ಬದುಕಬೇಕಾಗಿದೆ. ಸರ್ಕಾರ ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದು ಅವರನ್ನು ರಕ್ಷಿಸುವ ಕೆಲಸ ಮಾಡಿದಾಗ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದಾಗಿದೆ. +-ಜಯಶೀ ಎಸ್ ಎಚ್. + \ No newline at end of file diff --git a/PanjuMagazine_Data/article_1028.txt b/PanjuMagazine_Data/article_1028.txt new file mode 100644 index 0000000000000000000000000000000000000000..d6ed76fab0999df6ba9d8f08a6f86ec7157de78f --- /dev/null +++ b/PanjuMagazine_Data/article_1028.txt @@ -0,0 +1,25 @@ +"ಬೆಳಕಿನ ವೇಗದಲ್ಲಿ ನೀನಿದ್ದಾಗ ಎಲ್ಲವೂ ಶೂನ್ಯವಾದಂತೆ ಭಾಸವಾಗುತ್ತದೆ; ಅಸಲು ಶೂನ್ಯವೇ ಆಗಿರುತ್ತದೆ" +ಯಾವುದೋ ಅನಾಮಧೇಯ ವಿಜ್ಞಾನಿಯ ಈ ವಾಕ್ಯ ನನ್ನೊಳಗೆ ಎನನ್ನೋ ಹುಟ್ಟಿಹಾಕಿರಬೇಕು!. ಇಲ್ಲದಿದ್ದರೆ ಇಷ್ಟೊಂದು ಕಾಡುವ ಅಗತ್ಯವೇನಿತ್ತು? ಈ ಪ್ರವಾಹಭರಿತ 'ಜಲಧಾರಿನಿ' ತುಂಬಿ ಹರಿವಾಗ, ಅದರಲ್ಲಿ ಕೊಚ್ಚಿಹೋಗೋ ಸಾವಿರ ಕಲ್ಮಶಗಳ ನಡುವೆ ಇಂತಹುದೊಂದು ಪ್ರಶ್ನೆ ಯಾಕೆ ನನ್ನ ಕಾಡಬೇಕು? ಅದು ನನ್ನದಲ್ಲದ ಪ್ರಶ್ನೆಗೆ!. +ಕರಿಮುಗಿಲಕಾಡು; +ಈ ಹೆಸರೇ ವಿಚಿತ್ರತೆರನದು ಕರಿಮುಗಿಲೆಂದರೆ ಕಪ್ಪಾದ ಮುಗಿಲುಗಳು. ಮುಗಿಲುಗಳು ಸೇರಿ ಕಾಡಾದೀತೆ? ಕಾದಾಡಿತಷ್ಟೇ. ಇಂತಹುದೊಂದು ವಿಚಿತ್ರ ಊರಿಗೆ ನಾಗರೀಕತೆ ತುದಿಯಲ್ಲಿರೋ ಬೆಂಗಳೂರಿನಿಂದ ಬಂದಿದ್ದಾದರೂ ಯಾಕೆ? ಊರಿಗೆ ಊರು ಅಲ್ಲವಿದು; ದಟ್ಟಕಾಡಿನಲ್ಲಿ ಪುಟ್ಟ ಕಾಂಕ್ರೀಟ್ ಗುಹೆ ನಮ್ಮದು. ಇಲ್ಲಿ ನಮ್ಮದು ಪ್ರಾಣಿ ತರೆನ ಜೀವನ; ಇಲ್ಲ, ನನಗೆ ಹಾಗೇ ಭಾಸವಾಗುತ್ತಿರಬೇಕು. ಕಾಡಿಗೆ ಅಲ್ಲ ಕಾಡಿನಂತ ಊರಿಗೆ ಉತ್ತರಾಭಿಮುಖವಾಗಿ ಹರಿವ 'ಜಲಧಾರಿನಿ' ನದಿ ಎಷ್ಟೋ ಬಾರಿ ಕಪ್ಪಾಗಿದೆ. ಮೇಲಣ ಮುತ್ತಿಕೊಂಡ ಕಪ್ಪು ಮೋಡಗಳಿಂದ. ಮೈಸೂರಿನ ಗೊಮ್ಮಟಗಿರಿಯಿಂದ ನಮ್ಮಪ್ಪ ನೇರವಾಗಿ ಇಲ್ಲಿಗೆ ಬಂದನಂತೆ, ಏನನ್ನೂ ಕಂಡೋ ಗೊತ್ತಿಲ್ಲ. ಮದುವೆಯಾದ ಹೊಸತರಲ್ಲಿ ಊಳಿಡುವ ನರಿಗಳಿಗೆ, ಅದರ ಸರಗಳಿಗೆ ಅಮ್ಮ ನಿಂತಲ್ಲಿಯೇ ಉಚ್ಚೆ ಉಯ್ಯುತ್ತಿದ್ದಲಂತೆ. ಅಪ್ಪ ಸರಹೊತ್ತಿನಲ್ಲಿ ಮನೆಗೆ ಬರುತ್ತಿದ್ದನಂತೆ. ಆಗ ಅವನ ಮುಖ ಕಪ್ಪಾಗಿರುತಿತ್ತಂತೆ!. +ಅಸಲು ಅಪ್ಪನದು ವಿಚಿತ್ರ ವ್ಯಕ್ತಿತ್ವ. ಆತನಿಗೆ ಆ ಕಾಲದಲ್ಲೇ ಓದಲೂ ಗೊತ್ತಿತ್ತು, ಬರೆಯಲೂ ಸಹ. ಅಪ್ಪನ ಡೈರಿಯಲೀ ವಿಚಿತ್ರ ವಿಚಿತ್ರ ಶ್ಲೋಕ, ಗೀತೆ, ಒಗಟು, ಕತೆಗಳೆಲ್ಲಾ ಇದೆ. ಹೊತ್ತು ಕಳೆಯಲು ಅದನ್ನು ಓದುತ್ತಿದ್ದೇನೆ. ಈಗೀಗ ಅಪ್ಪ ಆಪ್ತನಾಗಿಬಿಟ್ಟಿದ್ದಾನೆ. ಅಮ್ಮನಿಗೆ ಅಸ್ತಮಾ. ಆಕೆ ರಾತ್ರಿ ಹೊತ್ತಿನಲ್ಲಿ ನರಿಗಳಂತೆ ಕೆಮ್ಮುತ್ತಾಳೆ, ನರಿಗಳು ಕೆಮ್ಮುವುದಿಲ್ಲ ಊಳಿಡುತ್ತವೆ. ರಾತ್ರಿ ಹೊತ್ತು ಬೆಚ್ಚುತ್ತಾಳೆ. ನನ್ನ ಕೈ ಹಿಡಿಯುತ್ತಾಳೆ ಪ್ರೀತಿಯ ಮಗನ ತಣ್ಣನೆ ಕೈಗಳಿಗಿಂತ, ಅಪ್ಪನ ಬಿಸಿ ಕೈಗಳು ಅವಕ್ಕೆ ಮದ್ದಾಗಬಹುದೇನೋ. ಅದನ್ನು ಹುಡುಕುವಂತೆ ನನ್ನ ಕೈ ಹಿಡಿದು ಬೆಚ್ಚಗೆ ಮಲಗುತ್ತಾಳೆ. +ನನಗಿಬ್ಬರೂ ಅಣ್ಣಂದಿರರಿದ್ದಾರೆ. ಒಬ್ಬನ ಹೆಸರು 'ಪರದೇಸಿ' ಇನ್ನೊಬ್ಬನ ಹೆಸರು'ಪೂರ್ವ'. ಹೆಸರೇ ವಿಚಿತ್ರವಲ್ಲವೇ. ಅವೆರಡು ಅವರ ನಿಜವಾದ ಹೆಸರು. ಬೆಂಗಳೂರಿನ ನಾಗರಿಕತೆಗೆ ಹೆದರಿ ಪರದೇಸಿ 'ಪರಂಧಾಮ್' ಎಂತಲೂ, ಪೂರ್ವ 'ಮೋಹನ್' ಎಂತಲೂ ಬದಲಾಯಿಸಿಕೊಂಡಿದ್ದಾರೆ. +" ನನ್ನ ಹುಚ್ಚು ಅಲೆದಾಟದ ನೆವದಲ್ಲಿ ಸಾವಿರ ಅರ್ಥಗಳು ಹೊಳೆಯುತ್ತವೆ. ಜಲಧಾರಿನಿಯ ಸೆರೆಯಲ್ಲಿ, ತೆಕ್ಕೆಯಲ್ಲಿ ಹಲವು ಮರಣ ಹೊಂದಿದ ಹಳದಿ ಎಲೆಗಳು ಮೆರವಣಿಗೆ ಹೊರಡುತ್ತವೆ. ಅವನ್ನೆಲ್ಲ ಕಂಡಾಗ ಮೇಲೆ ಹೇಳಿದಂತೆ ಸಾವಿರ ಅರ್ಥಗಳು ಹೊಳೆಯುತ್ತವೆ. ಮಾದಿ( ನನ್ನ ಹೆಂಡತಿ ) ಅಲ್ಲಿ ಕತ್ತಲ ಕೋಣೆಯಲ್ಲಿ, ಕಾಡಿನಂತ ಊರಿನಲ್ಲಿ ಒಬ್ಬಳೇ ಇರುತ್ತಾಳೆ. ಆಕೆ ನಿಜಕ್ಕೂ ಸುಂದರಿ. ಆದರೆ ನನ್ನನ್ನು ಮದುವೆಯಾಗಲೂ ಹಠಹಿಡಿದವಳು. ಜೀವನ ಎಂದರೇನು? ಎಂದು ಕೇಳಿದವಳು. ಅದೇ ಉತ್ತರದ ನೆವದಲ್ಲಿ ಈ ಅಲೆದಾಟ. ಕೋಣೆಯ ಅದ್ಯಾವುದೋ ಮೂಲೇಲಿ ಗುಬ್ಬಿ ಮರಿಯಂತೆ ಹೆದರಿ ಕುಳಿತಿರುತ್ತಾಳೆ; ಕುಕ್ಕರುಗಾಲಲ್ಲಿ. ನಾನು ಹೋದೊಡನೆ ಬೆದರಿ, ನನ್ನ ಗುರುತಾಗಿ ಓಡಿ ಬಂದು ತಬ್ಬಿಕೊಳ್ಳುತ್ತಾಳೆ. ಆಗ ಇಬ್ಬರೂ ಕತ್ತಲಲ್ಲಿ ಕತ್ತಲಾಗುತ್ತೇವೆ. ಅಂತಹ ಒಟ್ಟು ಕತ್ತಲುಗಳ ಮೂರ್ತ ರೂಪವೇ 'ಪರದೇಸಿ' ನನ್ನ ಹಿರಿ ಮಗ. ನಾನು ಕಂಡುಕೊಳ್ಳಲಾರದ ಉತ್ತರಗಳಿಗೆ ಅವನು ಉತ್ತರನಾದ ಎಂಬ ಭರವಸೆಗೆ ಅವನಿಗೆ ಆ ಹೆಸರನ್ನಿಟ್ಟೆ" +ಅಪ್ಪನ ಡೈರಿಯ ಹೆಸರಿಲ್ಲದ ಪುಟದಲ್ಲಿ ನನ್ನ ಹಿರಿ ಅಣ್ಣನ ಹಿಸ್ಟರಿಯಿದೆ. ಎಷ್ಟು ಬಾರಿ ಓದಿದರೂ ಅರ್ಥವಾಗಲಿಲ್ಲ; ಈಗ ಅವನಿಗೆ ಹುಚ್ಚಿಡಿದಿದೆ. ಅಪ್ಪನಂತೆ ಮಾತನಾಡುತ್ತಾನಂತೆ ಎಂದು ಅಮ್ಮ ಹೇಳುತ್ತಾಳೆ. ಬಹುಶಃ ನಮ್ಮತ್ತಿಗೆ ಆತನನ್ನು ಈ ಹೊತ್ತು ಅಲ್ಲಿ ದೂರದ ಬೆಂಗಳೂರಿನಲ್ಲಿ ಗದರಿಸುತ್ತಿರಬೇಕು. +"ನಾನು ನನ್ನ ಪೂರ್ವಿ( ನನ್ನ ಹಳೆಯ ಪ್ರೇಯಸಿ ) ಗೊಮ್ಮಟಗಿರಿಯ ನೀಲಗಿರಿ ತೋಪುಗಳ ನಡುವೆ ಅಡ್ಡಾಡ್ಡುತ್ತಿರುತ್ತೇವೆ. ಈಗಲೂ ಸಹ. ಅವಳಿಗೂ ಮದುವೆಯಾಗಿದೆ ಮಕ್ಕಳಿಲ್ಲ. ಈ ದಿನ ಅದೇ ಸುದ್ದಿಯಲ್ಲಿ ಮಿಂದವರಿಗೆ ಅದೇನೂ ರಭಸ ಬಂದಿತೋ ಗೊತ್ತಿಲ್ಲ. ಆಕೆ ನನ್ನ ಕೆಡವಿಕೊಂಡು ತನ್ನಾಸೆಯನ್ನೆಲ್ಲಾ ನನ್ನಲ್ಲಿ ಸುರಿಸತೊಡಗಿದಳು. ನಾನು ಕ್ಷಣಕಾಲ ಬೆಚ್ಚಿದ್ದರೂ ಸಾವರಿಸಿಕೊಂಡು ಉತ್ತರ ನೀಡಿದೆ. ಉತ್ತರದ ಕೊನೆಯಲ್ಲಿ ಅವಳು ತೃಪ್ತಿಯಾದದ್ದು ಅವಳ ಮುಖಭಾವವೇ ಹೇಳುತ್ತಿತ್ತು. ಈ ಹಿಂದೆಯೂ ಆಕೆ ನನ್ನೊಂದಿಗೆ ಹೀಗೆ ಸೆಣಸಿದುಂಟು. ಆಗೆಲ್ಲ ಸೋತು ಹೋಗುತ್ತಿದ್ದ ನಾನು ಈ ದಿನ ಗೆದ್ದೆ; ಮೀಸೆ ತಿರುವಿದೆ. ಆನಂತರ ಒಬ್ಬರಿಗೊಬ್ಬರೂ ಅಂಟಿಕೊಂಡು ನಾ ಬರೆದ ಕವಿತೆಗಳ ಹಾಡಿಕೊಂಡು ಊರಿಗೆ ಬಂದೆವು. ಅವಳು ಎಡಕ್ಕೆ ತಿರುಗಿ ಕಾಲುದಾರಿ ಹಿಡಿದಳು. ಮನೆಗೆ ಬಂದಾಗ ಚಂದ್ರ ನಗುತ್ತಿದ್ದ; ಮನೆಯಲ್ಲೂ ಸಹ ಹಿರಿಯವ ಐದು ವರ್ಷದ ಮುದ್ದಿನ ಕಂದ ನಗುತಲಿದ್ದ. ಆ ದಿನ ನಡೆದ ಕತ್ತಲಾಟದಲ್ಲಿ ನಾ ಸುಸ್ತಾಗಿದ್ದೆ" +ಅಪ್ಪನ ಬರಹವೇ ವಿಚಿತ್ರದ್ದು; +"ಸುಮಾರು ಆರು ತಿಂಗಳ ನಂತರ ನನ್ನ ಪುರ್ವಿಗಾಗಿ ಊರಿನ ಹಾದಿ ತುಳಿದೆ. ಆ ದಿನವೂ ಹುಣ್ಣಿಮೆ. ಆದರೆ ಹೊರಟದ್ದು ಬೆಳಗ್ಗೆ. ಊರಿಗೆ ಹೋಗಿ, ಅವಳ ಮನೆ ಎದುರು ಹರಿದಾಡಿದಾಗಲೂ ಅವಳು ಬಾರದಿದ್ದು ಕಂಡು ಭಯವಾಗುತ್ತಿತ್ತು ( ಹಿಂದೆಯೆಲ್ಲಾ ಅದು ಹೇಗೆ ಗುರುತಾಗಿ ಓಡಿ ಬಂದು ಬಾಗಿಲಲ್ಲಿ ನಿಂತು ನನ್ನ ನೋಡಿ ಮುಗುಳ್ನಗುತ್ತಿದ್ದಳು ) ಗೆಳೆಯ ಕುಂಡೆಯನ್ನು ವಿಚಾರಿಸಿದಾಗ " ಲೋ, ಆವಮ್ಮ ಹುಚ್ಚಿ ಆಗ್ಬಿಟ್ಟ ಳು. ಅದ್ಯಾವುದೋ ಸೀಮೆ ಪದ ಹೇಳ್ಕಂಡು ಊರೂರು ಅಲ್ಕೊಂಡು ಅದೆಲ್ಲೋ ಲಾರಿ ಕೆಳಗೆ ಸಿಕ್ಕೊಂಡ್ ಸತ್ತ್ ಹೋದ್ಲು ಕಣ್ಲಾ ಬಡ್ ಹೈದ್ ನೇ " ಎಂದ. ಅಲ್ಲಿಯೇ ತಲೆ ಸುತ್ತು ಬಂದು ಬಿದ್ದೆ" +" ಜಲಧಾರಿನಿಯಲ್ಲಿ ತೇಲುವ ಮೃತಎಲೆಗಳಲ್ಲಿ ಅವಳಿದ್ದಾಳಾ ಎಂದು ಹುಡುಕುತ್ತಿದ್ದೆ, ಸಿಗಲಿಲ್ಲ. ಈಚೀನ ದಿನಗಳು ಕಾಡಿನಂತೆ ಕತ್ತಲಾಗಿವೆ. ಉಲ್ಲಾಸವೇ ಇಲ್ಲ" +" ನನ್ನೊಳಗಿನ ದುಃಖ ಮಾದಿಗೆ ಹೇಗೋ ಗೊತ್ತಾಯ್ತು ( ನಿಜ ಕಾರಣ ತಿಳಿದಿಲ್ಲ ). ಪರದೇಸಿನಾ ಬೇಗ ಮಲಗಿಸಿ ಬಲು ಸಿಂಗಾರವಾಗಿ ನನ್ನೆದುರು ಕುಳಿತಳು. ನನ್ನ ದುಃಖಕ್ಕೆ ಮದ್ದು ಅವಳಲ್ಲಿತ್ತು. ಆ ದಿನ ಅವಳು ಅದನ್ನು ಕೊಟ್ಟಳು ಸಹ; ವಿಚಿತ್ರವಾದರೂ ನಿಜವೇ. ಇಂತಹ ಮದ್ದುಗಳಲ್ಲಿ ನನ್ನ ನಾ ಕಳಕೊಂಡರೂ ಪೂರ್ವಿ ಕಳೆಯಲಿಲ್ಲ. ಅವಳು ಕಾಡಿನಂತೆ ದಟ್ಟವಾಗಿದ್ದಳು. ಅವಳ ನೆನಪಿಗೆ, ನೆನಪು ಕೊಟ್ಟ ನೋವುಗಳಿಗೆ, ನೋವುಗಳಿಗೆ ಕೊಟ್ಟ ಮಾದಿಯ ಮದ್ದುಗಳಿಗೆ ನನ್ನ ಎರಡನೆಯವ ಹುಟ್ಟಿದ. ಪೂರ್ವ ಎಂದು ಹೆಸರಿಟ್ಟೆ" +ಎರಡನೇ ಅಣ್ಣನ ಹಿಸ್ಟರಿಯಿದು. +ಅವನು ತುಂಬಾ ಭಾವುಕ. ಅಲ್ಲಿ ಅಣ್ಣನ( ಪರದೇಸಿಯ) ಮನೆಯಲ್ಲಿದ್ದಾಗ ಅದ್ಯಾವುದೋ ಸುಂದರ ಹುಡುಗಿಯ ನಗುವಿಗೆ ಅರಳಿದ್ದ. ಆದರೆ ಆ ನಗು ಕೊನೆವರೆಗೂ ಬರಲಿಲ್ಲ. ಇವರ ಆದರ್ಶವೆನ್ನಬಹುದಾದ ಆ 'ಪ್ರೇಮ'ಕ್ಕೆ ಆಕೆಯ ಮನೆಯವರೇ ಅಡ್ಡವಾದರು. ದೂರದ ಬಾಂದ್ರ( ಮುಂಬೈನಲ್ಲಿದೆ) ಕ್ಕೆ ಅವಳನ್ನು ಮದುವೆ ಮಾಡಿ ಕಳಿಸಿದರು. ತನ್ನ ದುಃಖ ಶಮನಕ್ಕಾಗಿ ಇಲ್ಲಿಗೆ ಬಂದ ಗಂಟೆಗಟ್ಟಲೇ ಅಮ್ಮನ ಮಡಿಲಲ್ಲಿ ಮಲಗುತ್ತಿದ್ದ. ವಿಚಿತ್ರವಾಗಿ ನಗುತ್ತಿದ್ದ, ಹಾಗೇ ಅಳುತ್ತಿದ್ದ. ಈಗ ವಿಚಿತ್ರವಾಗಿ ವಿರಹಗೀತೆಗಳನ್ನು ಹಾಡುತ್ತಾ ಕಾಡುಗಳಲ್ಲಿ ಅಲೆಯುತ್ತಿರುತ್ತಾನೆ. ಅದೋ ಅವನ ಧ್ವನಿ ಕೇಳುತ್ತಿದೆ " ಮರೆಯದಂತಾ ರೂಪರಾಶಿ, ಹೃದಯದಾಶ ರೂಪಸಿ" ಅಯ್ಯೋ ಅಳುತ್ತಿದ್ದಾನೆ, ಅರೇ ವಿಚಿತ್ರವಾಗಿ ನಗುತ್ತಿದ್ದಾನೆ. ಆ ನಗು ದ್ವನಿಯಾಗಿ, ಪ್ರತಿದ್ವನಿಯಾಗಿ, ದ್ವಿವೇಗವಾಗಿ ಕಾಡನ್ನೆಲ್ಲ ಹಬ್ಬಿದೆ; ಅಪ್ಪನ ಗೋರಿ ಸಣ್ಣಗೆ ನಡುಗುತ್ತಿರಬೇಕು. ನಾನು ಕುತೂಹಲದಲ್ಲಿ ನನ್ನ ಜನನದ ಬಗ್ಗೆ ಅಪ್ಪನ ಡೈರಿಯ ಪುಟಗಳನ್ನು ಹುಡುಕುತ್ತೇನೆ. ಉಹ್ಞೂ ಸಣ್ಣ ಪದವೂ ಇಲ್ಲ. +"ಇತ್ತೀಚೆಗೆ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಅದೇ 'ಸಾವು'!ಮೊನ್ನೆ ಅದ್ಯಾವುದೋ ಸಭೆಯಲ್ಲಿ ಗುಂಗುರು ಕೂದಲಿನ ವಿಜ್ಞಾನಿಯೊಬ್ಬ " ಬೆಳಕಿನ ವೇಗದಲ್ಲಿ ನೀನಿರುವಾಗ ಶೂನ್ಯವಾದಂತೆ ಭಾಸವಾಗುತ್ತದೆ. ಅಸಲು ಶೂನ್ಯವೇ ಆಗಿರುತ್ತದೆ" ಎಂದು ವಿಜ್ಞಾನದ ತಿರುಳನ್ನು ಬಿಚ್ಚುತ್ತಿದ್ದ. ಅದಕ್ಕೆ ಪೂರಕವಾಗಿ ವೇದಗಳ ಶ್ಲೋಕಗಳನ್ನು ಬಳಸುತ್ತಿದ್ದ ( ಅದು ಬೆಂಗಳೂರಿನ ಹೆಸರು ಗೊತ್ತಿಲ್ಲದ ಪ್ರದೇಶ. ಮಕ್ಕಳ್ಳಿಬ್ಬರೂ ಹಿರಿಮಗನ ಮನೆಯಲ್ಲಿದ್ದಾರೆ. ಶ್ರೀಮಂತಿಕೆ ಮನೆಯಲ್ಲಿ ತುಂಬಿದೆ. ಎಕೋ ಶ್ರೀಮಂತಿಕೆ ಎಂದರೆ ನನಗೆ ಚಿಕ್ಕಂದಿನಿಂದ ಅಲರ್ಜಿ. ಹಾಗೇ ಸುತ್ತಾಡಲೂ ಹೊರಗೆ ಬಂದಾಗ ಆ ಸಭೆಯು ನಡೆಯುತ್ತಿತ್ತು). ಎರಡು ದಿವಸದಿಂದ ಅದೇ ವಾಕ್ಯ ರಿಂಗಣಿಸುತ್ತಿದೆ. ಹಾಗೇ ರಿಂಗಣಿಸುತ್ತಲೇ ಅದು ಸಾವಿನ ನಿಜವಾದ ಅರ್ಥ ಸ್ಫುರಿಸಿತು. ನಾನೀಗ ಬೆಳಕಿನ ವೇಗಕ್ಕೆ ಮರಳಬೇಕು; ಅಲ್ಲ ಬೆಳಕಿನ ವೇಗದಲ್ಲಿ ನಡೆಯಬೇಕು" +" ಬದುಕು ಪ್ರಶ್ನೆಗಳ ಹುತ್ತ, +ಬರಿದೇ ನೂರು ಉತ್ತರಗಳ ಸುತ್ತ, +ನಿಜ ಉತ್ತರವರಿತವನು ಸತ್ತ, +ಪ್ರಶ್ನೆಗಳೊಡನೆ ತಲೆಮಿಂದವನಾದನು ಹುತ್ತ" +ಅಪ್ಪನ ಡೈರಿಯ ಕೊನೆಯ ಸಾಲುಗಳಿವು, ಹಾಗೆ ಬರೆದ ಎಷ್ಟು ದಿನಕ್ಕೆ ಅಪ್ಪ ಸತ್ತನೆಂಬುದು ಗೊತ್ತಿಲ್ಲ. ಏಕೆಂದರೆ ಅವನ ಡೈರಿಗೆ ಪುಟಗಳ ಸಂಖ್ಯೆಯಾಗಲೀ, ದಿನಾಂಕವಾಗಲೀ ಇಲ್ಲ,. +ಬೆಂಗಳೂರು; ನನ್ನ ಇಲ್ಲಿನ ಕರಿಮುಗಿಲಕಾಡಿನಿಂದ ನೋಡಿದರೆ ಬಲು ತಮಾಷೆಯೆನಿಸುತ್ತದೆ. ಅಲ್ಲಿನ ಜನ, ನೋವು, ಆಡಂಬರ, ಅರ್ಥವಿಲ್ಲದ ಥಿಯರಿಗಳು ಕಾರ್ಟೂನ್ ಗಳೇ ಸರಿ. ಮನುಷ್ಯ ತನ್ನದೆನಬಹುದಾದ ಎಲ್ಲ ಪೊರೆ ಕಳಚಿ ದೂರದಿಂದ ಅವನನ್ನು ಅವನೇ ನೋಡಿಕೊಳ್ಳಬೇಕು. ಆಗ ಅವನಿಗವನು ಅರಿವಾಗುತ್ತಾನೆ. +ಅಮ್ಮ ಆಕೆಯ ರೋಗಕ್ಕೆ ಅದ್ಯಾವುದೋ ಹೆಸರಿಲ್ಲದ ಎಲೆಯ ರಸ ಕುಡಿಯುತ್ತಾಳೆ. ರಾತ್ರಿಯೆಲ್ಲಾ ಕೆಮ್ಮುತ್ತಾಳೆ. ನೆನ್ನೆ ಜಲಧಾರಿನಿಯಿಂದ ಮನೆಗೆ ಬಂದಾಗ ಅಮ್ಮ ನರಿಯೊಂದಿಗೆ ಮಾತನಾಡುತ್ತಿದ್ದಳು. ನಾನು ಬಂದೊಡನೆ ನರಿ ವಿಚಿತ್ರವಾಗಿ ಊಳಿಡುತ್ತಾ ಓಡಿ ಹೋಯ್ತು. ಅಮ್ಮ ಏನೂ ಆಗದವಳಂತೆ ಅಡುಗೆ ಮನೆ ಹೊಕ್ಕಳು. ಅಡುಗೆ ಮಾಡಲು( ರಸ ಮಾಡಲೂ ಸಹ) +ಅಮಾವಾಸ್ಯೆಗೆ ಬೇಗನೇ ಕತ್ತಲಾಗುತ್ತಿದೆ. ಕಾಡಿನಂತ ಕಾಡೇ ವಿಚಿತ್ರವಾಗಿ ಕತ್ತಲೆಡೆಗೆ ಸಾಗುತ್ತಿದೆ. ಜಲಧಾರಿನಿಯ ಮೃತ ಎಲೆಗಳ ರವ ಇಲ್ಲಿಗೂ ಕೇಳಿಸುತ್ತಿದೆ. ಸಾಧ್ಯವಾದರೆ ನಿಮ್ಮ ದೈನಂದಿನ ಜಂಜಡದಿಂದ, ಭಾರವಾದ ಥಿಯರಿಗಳಿಂದ, ಅರ್ಥವಿಲ್ಲದೇ ಅಲೆದಾಡುತಿಹ ನಿಮ್ಮ ಸೋಗಿನಿಂದ ನಿಮಗೊಂದು ಸಣ್ಣನೆಯ ವಿಶ್ರಾಂತಿ ಬೇಕಿದ್ದರೆ. ನನ್ನ ಕರಿಮುಗಿಲಕಾಡಿಗೆ ಬನ್ನಿ. ಅಲ್ಲಿ ಬಂದರೆ ಎಷ್ಟೋ ವಿಚಿತ್ರ ಸದ್ದುಗಳು ಕೇಳಿಸುತ್ತವೆ. ಅಂತಹುದೇ ಒಂದು ಸದ್ದು ಈ ಜಲಧಾರಿನಿಯದು. ಅಲ್ಲಿ ಪಕ್ಕದ ಬಂಡೆಯನ್ನೇರಿ ಕಾಡನ್ನು ಸವಿಯುತ್ತಿರುತ್ತೇನೆ. ನಿಮಗೆ ನನ್ನ ಗುರುತಾದೀತು. ಕತ್ತಲಾದರೆ ನರಿಯನ್ನು ಮೀರಿಸೋ, ಅಮ್ಮನೂ ಊಳಿಡುವುದು ಕೇಳಿಸುತ್ತದೆ. ಹೆದರಬೇಡಿ ಬನ್ನಿ. ಆಕೆ ನಿಜಕ್ಕೂ ದೇವರಿನಂತಹವಳು. ಅವಳ ತೆಕ್ಕೆಯಲ್ಲಿ ನಾನು ಮಲಗಿರುತ್ತೇನೆ. ಬರುತ್ತೀರಲ್ಲವೇ? +***** \ No newline at end of file diff --git a/PanjuMagazine_Data/article_1029.txt b/PanjuMagazine_Data/article_1029.txt new file mode 100644 index 0000000000000000000000000000000000000000..2805c53ec8d252a50972fc7b6ca36d07ff78e7c5 --- /dev/null +++ b/PanjuMagazine_Data/article_1029.txt @@ -0,0 +1,2 @@ +ಇಲ್ಲಿಯ ಅವರೆನ್ನುವ ಅವರು ಬೇರೆ ಯಾರು ಆಗಿರುವುದಿಲ್ಲ ನಿಮ್ಮ ಕನಸುಗಳಿಗೆ ನೀರೆರೆದು ಜೊತೆಯಾದ ನಿಮ್ಮ ಮಾತುಗಳಲ್ಲಿ ಮಾತಾದ, ವರ್ಷಾನುವರ್ಷಗಳಿಂದಲೂ ನಿಮ್ಮ ಎಲ್ಲಾ ಭಾವನೆ, ಕಲ್ಪನೆ, ಸಾಧನೆ, ಕಷ್ಟ -ಸುಖ, ದುಃಖ-ದುಮ್ಮಾನ ಗಳ ಜೊತೆ ಬೆರೆತು ಸ್ನೇಹದ ಸೇತುವೆಯಂತಿದ್ದ ಆತ್ಮೀಯ ಗೆಳೆಯ/ಗೆಳತಿಯರೇ ಆಗಿರುತ್ತಾರೆ. ನಿಮ್ಮ ಮತ್ತು ಅವರ ನಡುವೆ ಹಿಂದೆ ಅದೆಷ್ಟೋ ಇಂತಹ ಸಣ್ಣ ಪುಟ್ಟ ಜಗಳಗಳು ಉದ್ಭವಿಸಿ ಒಂದೆರಡು ದಿನಗಳವರೆಗೆ ಮಾತು ಬಿಟ್ಟು ದೂರಾಗಿ ಮತ್ತೆ ನಿಮಗೆ ನೀವೇ ಎಲ್ಲವನ್ನು ಮರೆತು compromise ಆಗಿರುತ್ತಿರಿ, ಆದರೆ ಪ್ರತಿ ಬಾರಿಯೂ ಪ್ರತಿ ಜಗಳದ ನಂತರವೂ ಮತ್ತೆ ಒಂದಾಗುವ ಮಾತು ಬರುವುದಿಲ್ಲ, ಕೆಲವೊಂದು ಕೆಲವೊಮ್ಮೆ ಅತಿರೇಕದ ಘಟ್ಟಕ್ಕೆ ನಿಮ್ಮನ್ನು ತಲುಪಿಸಿ, ನಿಮಗೆ ತಿಳಿಯದೆ ನಿಮ್ಮಲ್ಲಿ Ego ಅನ್ನೋವ ನಂಜಿನ ಗಿಡವೊಂದು ಚಿಗುರೊಡೆದಿರುತ್ತದೆ. ಅದು ನಿಮ್ಮ ಸ್ನೇಹವನ್ನು ಮತ್ತೆ ಬೆಸೆಯಲು ಬಿಡುವುದಿಲ್ಲ. + \ No newline at end of file diff --git a/PanjuMagazine_Data/article_103.txt b/PanjuMagazine_Data/article_103.txt new file mode 100644 index 0000000000000000000000000000000000000000..f7029438801e3cb0239dde639a05661f2474f846 --- /dev/null +++ b/PanjuMagazine_Data/article_103.txt @@ -0,0 +1,7 @@ +ಪ್ರಕೃತಿ ಮನುಷ್ಯನಿಗೆ ಎಲ್ಲವನ್ನು ಸಮಾನಾವಾಗಿ ಕೊಟ್ಟಿದೆ.ಆ ಪ್ರಕೃತಿ ಕೊಟ್ಟಿರುವುದನೆಲ್ಲಾ ನಾವು ಸಮನಾಗೇ ಅನುಭವಿಸಬೇಕು,ಸ್ವಲ್ಪ ಹೆಚ್ಚು ಕಡಿಮೆಯಾದರೆ ನಮಗೆ ಆಪತ್ತು. ಪ್ರಕೃತಿದತ್ತವಾಗಿ ಮನುಷ್ಯನಿಗೆ ಸಿಕ್ಕಿರುವುದರಲ್ಲಿ 'ನಿದ್ದೆ'ಯು ಒಂದು.ಒಬ್ಬ ಮನುಷ್ಯ ಕನಿಷ್ಠ 7ರಿಂದ 8ಗಂಟೆ ನಿದ್ದೆ ಮಾಡಲೇಬೇಕು. ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಅವನೆ ಕಾರಣನಾಗುತ್ತಾನೆ.ಈಗಿನ ಬ್ಯುಸಿ ಜೀವನದಲ್ಲಿ ನಿದ್ರೆಯನ್ನು ಕೆಲವರು ಮರೆತೆಬಿಟ್ಟಿದ್ದಾರೆ. ಈಗಿನ ಬಹುತೇಕರು ನಿದ್ದೆ ಮಾಡದೇ ಬಳಲುತ್ತಿದ್ದಾರೆ, ಒಂದಲ್ಲಾ ಒಂದು ಯೋಚನೆ, ಚಿಂತೆ ಅವರನ್ನು ಕಾಡುತ್ತಲೇ ಇರುತ್ತದೆ. ನೀವು ಕೆಲವರನ್ನು ಗಮನಿಸಿರಬೇಕು ಸದಾ ಏನನ್ನೋ ಕಳೆದುಕೊಂಡವರಹಾಗೆ ಇರುತ್ತಾರೆ, ವೈಯುಕ್ತಿಕ ಹಾಗು ಸಾಮಾಜಿಕ ಯೋಚನೆಗಳು, ಚಿಂತೆಗಳು ಅವರ ಮೆದುಳಲ್ಲಿ ಭದ್ರವಾಗಿ ತಳಪಾಯ ಹಾಕಿ ಮನೆಕಟ್ಟಿಬಿಟ್ಟಿರುತ್ತವೆ. ಅವು ಹೋಗುವುದಿಲ್ಲ ಇವರು ಬಿಡುವುದಿಲ್ಲ. +ಒಬ್ಬ ಉದ್ಯೊಗಿಯ ಕೆಲಸದ ಗುಣಮಟ್ಟ ಕುಗುತ್ತಿದೆ ಅಥವಾ ಒಬ್ಬ ವಿದ್ಯಾರ್ಥಿಯ ಪ್ರತಿ ತಿಂಗಳ ಪರೀಕ್ಷೆಯಲ್ಲಿ ಅಂಕ ಕಡಿಮೆ ಇದೆ ಅಂದರೆ ಅದಕ್ಕೆ ನಿದ್ರೆಯು ಕಾರಣವಿರಬಹುದು. ನೀವು ಗಮನಿಸಿರಬಹುದು ಮನೆಯಲ್ಲಿ ಒಳ್ಳೆಯ ಮಂಚ ಅದರ ಮೇಲೊಂದು ಮೃದುವಾದ ಹಾಸಿಗೆಯಿದ್ದರೂ ನಿದ್ದೆ ಮಾಡಿರುವುದಿಲ್ಲ ಕೇವಲ 15ರಿಂದ 20ನಿಮಿಷ ಪ್ರಯಾಣ ಮಾಡುವ bmಣಛಿ ಬಸ್ಸಿನಲ್ಲಿ ಸೊಗಸಾದ ನಿದ್ದಗೆ ಜಾರಿರುತ್ತಾರೆ, ಅಷ್ಟೇ ಯಾಕೆ ಮಾನ್ಯ ಮುಖ್ಯಮಂತ್ರಿಗಳ ಕಥೆಯು ಗೊತ್ತಲ್ಲವ. ನೀವು ಚಿಂತೆಗಳನ್ನ,ಯೋಚನೆಗಳನ್ನು ತಲೆತುಂಬ ತುಂಬಿಕೊಂಡಿರುವ ಪರಿಣಾಮ ನಿದ್ದೆ ಎಷ್ಟೇ ದೊರವಿದ್ದರೂ ಕೆಲ ಸಮಯದಲ್ಲಿ ಅಂದರೆ ಬಸ್ಸಲ್ಲಿ ಪ್ರಯಾಣಿಸುವಾಗ,ಮೀಟಿಂಗ್ ಹಾಲಿನಲ್ಲಿ ಕುಳಿತಿರುವಾಗ, ಮಧ್ಯಾಹ್ನದ ಊಟವಾದ ಮೇಲೆ ಕಂಪ್ಯೂಟರಿನ ಮುಂದೆ ಕುಳಿತಾಗ ಯಾಮಾರಿಸಿ ನಿದ್ದೆ ಬಂದು ಬಿಡುತ್ತದೆ. ಯಾಕೆಂದರೆ ಮೆದಳು ಬರೀ ವರ್ತಮಾನದನ್ನು ಮಾತ್ರ ಯೋಚಿಸುತ್ತಿರುತ್ತದೆ. ಹಾಗಾಗಿ ಅದಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿ ಬೇಗ ನಿದ್ದೆಗೆ ಜಾರುತ್ತದೆ.ಅದೇ ರಾತ್ರಿ ಭೂತ,ವರ್ತಮಾನ, ಭವಿಷ್ಯದ ಎಲ್ಲಾ ಯೋಚನೆಗಳು ಒಂದೇ ಬಾರಿ ಮೆದುಳಿಗೆ ನುಗ್ಗುವುದರಿಂದ ನಿದ್ರಾದೇವಿ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. +ಸಮಸ್ಯೆಗಳು, ಕಷ್ಟಗಳು ಹೆಚ್ಚುತ್ತಿವೆ ಅಂತ ಅವನ್ನು ತಲೆತುಂಬ ತುಂಬಿಕೊಂಡು ಹುಚ್ಚರಾಗಿ ತಿರುಗುವುದಕ್ಕೆ,,, ಮೊದಲು ಸಮಸ್ಯೆಗಳ ಬೇರು ಎಲ್ಲಿದೆ ಎಂದು ಹುಡುಕಬೇಕು, ಹುಡುಕಬೇಕೆಂದರೆ ನಿಮ್ಮ ಮೆದುಳು ಸದಾ ಚಿಛಿಣive ಇರಬೇಕು. ನಿಮ್ಮ ಮೆದುಳೋ ಬರೀ ಚಿಂತೆಗಳನ್ನೇ ತುಂಬಿಕೊಂಡು ಸತ್ತುಹೋಗಿರುತ್ತದೆ.ಇನ್ನೇಲ್ಲಿ ಸಮಸ್ಯೆಯ ಬೇರನ್ನು ಹುಡುಕುತ್ತದೆ. ಅದಕ್ಕೆ ಕಣ್ತುಂಬ ನಿದ್ದೆ ಮಾಡಬೇಕು. +ಸಮಸ್ಯೆ ಯಾರಿಗಿಲ್ಲ..?? ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಒಂದೊಂದು ಸಮಸ್ಯೆಗಳಂಟು.ಆದರೆ ಆ ಸಮಸ್ಯೆ ನಮ್ಮ ಬದುಕನ್ನು ನುಂಗಿಹಾಕಬಾರದು.ಎಂತಹ ಸಮಸ್ಯೆಗಳಿದ್ದರೂ ಧೃತಿಗೆಡದೆ ಒಂದು ಕ್ಷಣ ಧೃಡನಿರ್ದಾರ ಮಾಡಿ ಮನಸಾರೆ ನಿದ್ರೆಮಾಡಿ, ,, ಮೆದುಳಿಗೆ ಹೊಸ ಚೈತನ್ಯ ಬರುತ್ತದೆ. ಜಗತ್ತು ಹೊಸದಾಗಿ ಕಾಣುತ್ತದೆ.ನಿಮ್ಮ ಸಮಸ್ಯೆ ಆಗ ಕಾಲಿನ ಮೇಲಿರುವ ಕಸದಂತೆ ಕಾಣುತ್ತದೆ. +'ಮನುಷ್ಯನಿಗೆ ಆರೋಗ್ಯವೇ ಭಾಗ್ಯ 'ಆರೋಗ್ಯವನ್ನು ಹಾಳುಮಾಡಿಕೊಂಡು ನೀವು ಎಷ್ಟೇ ಸಂಪಾದಿಸಿದರೂ ಅದು ಶೂನ್ಯಕ್ಕೆ ಸಮ.ಕಣ್ತುಂಬ ನಿದ್ದೆ ಮಾಡಿ ಹೊಸ ಉಲ್ಲಾಸ, ಹುಮ್ಮಸ್ಸು ನಿಮ್ಮದಾಗಿಸಿಕೊಳ್ಳಿ ಸದಾ ಖುಷಿಯಾಗಿರಿ. +-ಗೂಳೂರು ಚಂದ್ರು + \ No newline at end of file diff --git a/PanjuMagazine_Data/article_1031.txt b/PanjuMagazine_Data/article_1031.txt new file mode 100644 index 0000000000000000000000000000000000000000..9c1e27995110e9889ae0f7d767febccd7584bd43 --- /dev/null +++ b/PanjuMagazine_Data/article_1031.txt @@ -0,0 +1,98 @@ +ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶಿರಸಿಯ ಶೋಭಾ ಹಿರೇಕೈ ಅವರ ಚೊಚ್ಚಲ ಕವನ ಸಂಕಲನ ಈ ‘ಅವ್ವ ಮತ್ತು ಅಬ್ಬಲಿಗೆ’. ಸುಮಾರು ನಲವತ್ತು ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ಹಿರಿಯ ಕವಿ ವಿಷ್ಣು ನಾಯ್ಕರು ತಮ್ಮ ಸುದೀರ್ಘ ಮುನ್ನುಡಿಯ ಆರಂಭದಲ್ಲಿಯೇ ‘ಇದೊಂದು ದೇಸಿ ಚಿಂತನೆಯ ನೆಲ ಮೂಲದ ಕವನ ಗುಚ್ಛ’ ಎಂದು ಉಲ್ಲೇಖಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯೇ ಅವರ ಮಾತನ್ನು ಅನುಮೋದಿಸುವಂತಿದೆ. ಕನಕಾಂಬರ ಹೂವನ್ನು ನಮ್ಮ ಆಡುಭಾಷೆಯಲ್ಲಿ ಅಬ್ಬಲಿಗೆ ಅಥವಾ ಅಬ್ಬಲಿ ಹೂವು ಎಂದು ಕರೆಯುತ್ತೇವೆ.ಈ ಅಬ್ಬಲಿಗೆ ಹೂವು ಯಾವುದೇ ರೀತಿಯ ಸುವಾಸನೆ ಇರದೇ, ಬಣ್ಣದ ಅಬ್ಬರವಿಲ್ಲದೇ ತನ್ನ ನಯವಾದ ಸ್ವಭಾವದಿಂದಲೇ ಎಲ್ಲರನ್ನೂ ಸೆಳೆಯಬಲ್ಲ ಹೂವು, ನಮ್ಮ ಹಳ್ಳಿಯ ಹೆಣ್ಣುಮಕ್ಕಳಿಗಂತೂ ಬಲು ಆಪ್ತವಾದ ಹೂವು ಈ ಅಬ್ಬಲಿಗೆ.ಉತ್ತರಕನ್ನಡ ಜಿಲ್ಲೆಯಲ್ಲಿ ಇಂದಿಗೂ ಅಬ್ಬಲಿಗೆ ಗಿಡಗಳ ನೆಟ್ಟು ಬೆಳೆಸಿ ಹೂ ಬಿಟ್ಟಾಗ ಅದನ್ನು ಕೊಯ್ದು ಚೆಂದದ ದಂಡೆಗಳ ಕಟ್ಟಿ ಮಾರಾಟಮಾಡಿ ತಮ್ಮ ಕೈಖರ್ಚಿಗೆ ಪುಡಿಗಾಸು ಕೂಡಿಹಾಕುವ ನನ್ನ ಅಮ್ಮನಂತಹ ನೂರಾರು ಅಮ್ಮಂದಿರನ್ನು ಕಾಣಬಹುದು.ಹೀಗಾಗಿ ಅವ್ವಳ ಆಪ್ತ ಸಖಿ ಅಬ್ಬಲಿಗೆ ನಮ್ಮ ಆಪ್ತ ಸಖಿಯೂ ಹೌದು. ಅವ್ವ ಮತ್ತು ಅಬ್ಬಲಿಗೆಯ ಒಡನಾಟದಲ್ಲಿ ಬೆಳೆದ ನಮಗೆ ಅಥವಾ ಈ ಕವಿಗೆ ಅವೆರಡೂ ಒಂದೇ ಚೌಕಟ್ಟಿನಲ್ಲಿ ಕಾಣುವ ಚಿತ್ರವಾಗಿ ಮನದಲ್ಲಿ ಅಚ್ಚೊತ್ತಿರುವುದು ಸಹಜವೇ ಆಗಿದೆ.. +ಅನೇಕ ವರುಷಗಳಿಂದ ಶೋಭಾ ಹಿರೇಕೈ ಅವರ ಬಿಡಿ ಬಿಡಿ ಕವಿತೆಗಳನ್ನು ಓದುತ್ತಾ ಬಂದ ನನಗೆ ಅವರ ಕವಿತೆಗಳಲ್ಲಿ ಹಾಗೂ ಅವರ ವೈಯಕ್ತಿಕ ನಿಲುವುಗಳಲ್ಲಿ ಆದ ಪಲ್ಲಟವನ್ನು ಬಹಳ ಹತ್ತಿರದಿಂದ ನೋಡಲು ಸಾಧ್ಯವಾಗಿದೆ.ಇಲ್ಲಿರುವ ಕವಿತೆಗಳನ್ನೂ ಕೂಡ ಅವರ ಬರವಣಿಗೆಯ ಕಾಲಘಟ್ಟದ ಆಧಾರದ ಮೇಲೆ ವರ್ಗೀಕರಿಸಬಹುದಾಗಿದೆ ಮತ್ತು ಅವು ಕಾಲದ ಜೊತೆ ತನ್ನನ್ನು ಹಿಗ್ಗಿಸಿಕೊಳ್ಳುತ್ತಾ ಬಂದ ಬಗೆಯನ್ನು ಗಮನಿಸಬಹುದಾಗಿದೆ. ದಿನದಿಂದ ದಿನಕ್ಕೆ ಸಾಮಾಜಿಕ ನೆಮ್ಮದಿ ಕುಸಿಯುತ್ತಿರುವ ಹೊತ್ತಲ್ಲಿ ಲೇಖಕನೊಬ್ಬ ತನ್ನ ಜವಾಬ್ದಾರಿಗಳನ್ನು ಹೆಚ್ಚೆಚ್ಚು ಅರ್ಥೈಸಿಕೊಳ್ಳುತ್ತಾ, ಆ ಎಚ್ಚರವನ್ನು ತನ್ನ ಬರವಣಿಗೆಯ ಮೂಲಕ ವ್ಯಕ್ತಪಡಿಸುವುದು ಈ ಕಾಲದ ಅಗತ್ಯವಾಗಿದೆ ಮತ್ತು ಈ ಕವಿ ಆ ಎಚ್ಚರಿಕೆಯನ್ನು ತನ್ನೊಳಗೆ ಜಾಗೃತವಾಗಿಟ್ಟುಕೊಂಡಿದ್ದಾರೆ ಎಂಬುದನ್ನು ಅವರ ಕವಿತೆಗಳೇ ಸಾರಿ ಹೇಳುತ್ತವೆ.. +ನನಗೆ ಕೊಂಚ ಆಶ್ಚರ್ಯವಾದ ಒಂದು ಸಂಗತಿಯೆಂದರೆ, ಸಾಮಾನ್ಯವಾಗಿ ಲೇಖಕನೊಬ್ಬ ತನ್ನ ಮೊದಲ ಕೃತಿಯನ್ನು ತಂದೆ-ತಾಯಿಯವರಿಗೋ, ಕುಟುಂಬದ ಆಪ್ತ ಜೀವಕ್ಕೋ ಅಥವಾ ತನ್ನನ್ನು ಪ್ರೋತ್ಸಾಹಿಸಿದ ಹಿರಿಯರಿಗೋ ಅರ್ಪಿಸುವುದನ್ನು ಗಮನಿಸುತ್ತೇವೆ.. ಆದರೆ ಇಲ್ಲಿ ಕವಿ ತನ್ನ ಕೃತಿಯನ್ನು ‘ಈ ನೆಲದ ಶ್ರಮಿಕರ ಬೆವರಿಗೆ’ ಅರ್ಪಿಸುವ ಮೂಲಕ ಶ್ರಮ ಸಂಸ್ಕ್ರತಿಗೆ ದೊಡ್ಡ ಗೌರವವನ್ನು ಸಲ್ಲಿಸಿದ್ದಾರೆ.ಅಂತೆಯೇ ಈ ಸಂಕಲನದ ಅನೇಕ ಕವಿತೆಗಳಲ್ಲಿ ಶ್ರಮ ಸಂಸ್ಕ್ರತಿಯನ್ನು ಬಿಂಬಿಸುವ, ದುಡಿಯುವರ ದನಿಯಾಗುವ ಪ್ರಾಮಾಣಿಕ ಪ್ರಯತ್ನವಿದೆ.. +ಇನ್ನು ಒಬ್ಬ ಲೇಖಕ ತನ್ನ ಬರವಣಿಗೆಯ ಸ್ಪಷ್ಟ ಉದ್ದೇಶವನ್ನು ತಾನು ಯಾರಿಗಾಗಿ ಮತ್ತು ಯಾಕಾಗಿ ಬರೆಯುತ್ತಿರುವೆ ಎನ್ನುವ ಸ್ಪಷ್ಟ ಮುನ್ನೋಟವನ್ನು ಹೊಂದಿರುವ ಅಗತ್ಯತೆ ಖಂಡಿತವಾಗಿಯೂ ಇರುತ್ತದೆ.ಅಂತಹ ಒಂದು ಕವಿಯ ನಿಲುವನ್ನು ಸೂಚಿಸುವ ‘ನನ್ನ ಕವಿತೆ’ ಎಂಬ ಕವನದಲ್ಲಿ ನನ್ನ ಕವಿತೆ ರೂಪಕ ಪ್ರತಿಮೆಗಳ ಭಾರ ಹೊಂದಿಲ್ಲಾ ಎನ್ನುತ್ತಾ +“ನನ್ನೀ ಕವಿತೆ +ದಿನವಿಡಿ ಬೆವರ ಮಿಂದು +ಜಗುಲಿ ಕಟ್ಟೆಗೊರಗಿ ಬಿಡುವ +ನನ್ನಪ್ಪನಂಥ ಅಪ್ಪಂದಿರಿಗಾಗಿ, +ಹಾಡು-ಹಸೆ, ಕಸ ಮುಸುರೆ ಮುಗಿಸಿ +ಹಂಡೆ ನೀರು ಮಿಂದು ಹಗುರಾಗುವ +ನನ್ನವ್ವನಂಥ ಅವ್ವಂದಿರಿಗಾಗಿ, +ಎದೆ ಸಿಗಿದರೂ +ನಾಲ್ಕಕ್ಷರ ಕಾಣದ +ಅಣ್ಣ ಕರಿಯಣ್ಣನಂಥವರಿಗಾಗಿ..” +ಎಂದು ತನ್ನ ಬರವಣಿಗೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಾರೆ. ಹೀಗಿದ್ದರೂ ಇವರ ಕವಿತೆಗಳಲ್ಲಿ ಬಹಳ ಸಶಕ್ತವಾದ ರೂಪಕ, ಪ್ರತಿಮೆಗಳು ಕಾಣಸಿಗುತ್ತವೆ.ಆದರೆ ಅವು ಎಲ್ಲಿಯೂ ಕವಿತೆಗೆ ಹೇರಿಕೆಯಾಗದೇ ಆಡುಮಾತಿನ ಪದಗಳಿಂದ ಸರಳವಾಗಿಯೂ, ಆಕರ್ಷಣೀಯವಾಗಿಯೂ ಮೂಡಿ ಬಂದಿವೆ.. +‘ಅವ್ವ ಮತ್ತು ಅಬ್ಬಲಿಗೆ’ ಕವಿತೆಯಲ್ಲಿ +“ಅವ್ವ ನೆಟ್ಟ ಅಬ್ಬಲಿಗೆ ಓಣಿ +ತಿಂಗಳ ಮೊದಲೇ ಮೈ ನೆರೆಯುತ್ತದೆ. +ಮತ್ತು ಮಿಂದ ಹುಡುಗಿಯರ +ಮುಡಿಯೇರಿ ರಂಗಾಗುತ್ತವೆ.” ಇಲ್ಲಿ ಅಬ್ಬಲಿಗೆ ಓಣಿ ಮೈನೆರೆಯುವ ರೂಪಕ ಸೊಗಸಾಗಿದೆ.ಹಾಗೆಯೇ ಈ ಕವಿತೆಯ ಕೊನೆಯಲ್ಲಿ +“ಈಗೀಗ ಮಲ್ಲಿಗೆಯ ಕಂಪಿಗೆ +ಮಾರು ಹೋದರೂ +ಅಬ್ಬಲಿಗೆಯ ಕೆಂಪನ್ನು ಮರೆತಿಲ್ಲ.” ಎನ್ನುವ ಮೂಲಕ ತವರಿನ ಭಾವನಾತ್ಮಕ ನಂಟನ್ನು ಅಬ್ಬಲಿಗೆಯ ರೂಪಕದಲ್ಲಿ ಕಟ್ಟಿಕೊಟ್ಟಿದ್ದಾರೆ. +ಅದೇ ಮಾದರಿಯ ಇನ್ನೊಂದು ಕವಿತೆ ‘ಮೀಯುವುದೆಂದರೆ’ +“ಮೀಯುವುದೆಂದರೆ ಬುರುಗು ನೊರೆಯಲ್ಲಿ ನೆಂದು +ಮೈಯ್ಯುಜ್ಜಿ ಈಚೆ ಬರುವುದಲ್ಲ ನನಗೆ +ಬದಲು ಹರಯವನ್ನೇ +ಚಂಬು ಚಂಬಾಗಿ ಮೊಗೆದು +ಮೈ ಮನಕ್ಕೆರೆದು ಕೊಳ್ಳುವುದು +ಥೇಟ್ ಇವನ ಪ್ರೀತಿಯಂತೆ.” +“ಆ ಬಚ್ಚಲೇ ಆಪ್ತ +ಮತ್ತೆಲ್ಲವೂ ಅಲ್ಲಿ ಗುಪ್ತ ಗುಪ್ತ” +ಹೀಗೆ ತವರಿನ ಹಂಡೆ ಒಲೆಯ ಬಿಸಿ ನೀರಿನ ಸ್ನಾನದ ಮೂಲಕ ತನ್ನ ಯವ್ವನದ ರೋಮಾಂಚಕತೆಗಳು ತೆರೆದುಕೊಳ್ಳುತ್ತಿದ್ದ ಬಗೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ.ಜೊತೆಗೆ ಈ ಕವಿತೆ ಹಂಡೆ ಒಲೆಯ ಬಚ್ಚಲನ್ನೂ ಹಾಗೂ ಈ ಕಾಲದ ಆಧುನಿಕ ವ್ಯವಸ್ಥೆಗಳುಳ್ಳ ‘ಬಾತ್ ರೂಮ್’ ಗಳನ್ನು ಅಕ್ಕಪಕ್ಕದಲ್ಲಿಟ್ಟು ಕಳೆದುಕೊಂಡ ಭಾವಗಳ ಹೆಕ್ಕುತ್ತಿದ್ದಾರೆ.. +ಈ ಸಂಕಲನದ ಬಹಳ ಮುಖ್ಯವಾದ ಕವಿತೆಗಳಲ್ಲಿ ‘ಹೆಚ್ಚೆಂದರೇನು ಮಾಡಿಯೇನು’ ಎಂಬ ಕವಿತೆಯೂ ಒಂದು. ಹೆಣ್ಣಿನ ಮುಟ್ಟು ಮತ್ತು ಆ ಕಾರಾಣಕ್ಕಾಗಿ ಅಯ್ಯಪ್ಪನ ದೇಗುಲ ಪ್ರವೇಶ ನಿಷಿದ್ಧ ಎಂಬ ವಿಚಾರದ ಸುತ್ತ ನಡೆದ ರಾಜಕೀಯ ಪ್ರೇರಿತ ಹಿಂಸಾತ್ಮಕ ಘಟನೆಗಳನ್ನು ಕವಿ ತನ್ನದೇ ಆದ ತೀಕ್ಷ್ಣ ದ್ವನಿಯಲ್ಲಿ ಖಂಡಿಸುತ್ತಾರೆ. ತಾನೂ ಅಯ್ಯಪ್ಪನ ದೇಗುಲಕ್ಕೆ ಬಂದರೆ ಏನು ಮಾಡಬಲ್ಲೆ ಎಂಬುದನ್ನು ನೆನೆಸಿಕೊಳ್ಳುತ್ತಾ ಆರಂಭವಾಗುವ ಈ ಕವಿತೆ ಅಯ್ಯಪ್ಪನನ್ನು ತನ್ನ ಮಗುವಂತೆ ಕಂಡು ಅವನ ಜೊತೆ ಮಮಕಾರದಿಂದ ಮಾತನಾಡುವ ರೂಪದಲ್ಲಿ ಮುಂದುವರೆಯುತ್ತದೆ.. +“ಹೆಚ್ಚೆಂದರೆ ನಾನಲ್ಲಿ +ಏನು ಮಾಡಿಯೇನು? +ನನ್ನ ಮಗನಿಗೂ ನಿನಗೂ +ಯಾವ ಪರಕ್ಕೂ ಉಳಿದಿಲ್ಲ ನೋಡು +ಬಾ ಮಲಗಿಕೋ +ನನ್ನ ಮಡಿಲಲ್ಲಿ +ನನ್ನ ಮುಟ್ಟಿನ ಕಥೆಯ +ನಡೆಯುತ್ತಿರುವ ಒಳಯುದ್ಧಗಳವ್ಯಥೆಯ +ನಿನಗೆ ಹೇಳಿಯೇನು” ಎನ್ನುತ್ತಾರೆ. ಹೀಗೆ ಅಯ್ಯಪ್ಪನೆಂಬ ಜಗತ್ತು ನಂಬುವ ದೇವನಿಗೂ ಈ ಕವಿ ತಾಯಿಯಾಗುತ್ತಾರೆ. ಕವಿತೆಯ ಕೊನೆಯಲ್ಲಿ ಈ ತಾಯಿ ಅಯ್ಯಪ್ಪನನ್ನೇ ನೇರವಾಗಿ +” ಹೇಳು ನನ್ನ ಮುಟ್ಟು ನಿನಗೆ ಮೈಲಿಗೆಯೇ” ಎಂದು ಕೇಳುವ ಮೂಲಕ ಬಂಡಾಯದ ಧ್ವನಿಯನ್ನು ಎತ್ತುತ್ತಾರೆ, ಅಲ್ಲದೇ ದೇವರೆಂಬ ನಂಬಿಕೆ ಮತ್ತು ಹೆಣ್ಣಿನ ನಡುವೆ ತಡೆಗೋಡೆಯಾಗಿ ನಿಂತಿರುವ ವೈದಿಕಶಾಹಿಯನ್ನು ಮೀರಿ ದೇವರ ಜೊತೆಗೇ ನೇರ ತರ್ಕಕ್ಕಿಳಿವ ಈ ಕವಿತೆಯ ಮಾದರಿ ಪರಿಣಾಮಕಾರಿಯಾಗಿದೆ.. ಒಬ್ಬ ಹೆಣ್ಣುಮಗಳಷ್ಟೇ ಬರೆಯಬಹುದಾದ ಕವಿತೆ ಎಂಬಷ್ಟು ತಾಯಿಯ ಅಂತಃಕರಣದಿಂದ ಕೂಡಿದೆ.. +ಈ ಸಂಕಲನದ ‘ಕವನ ಹುಟ್ಟುವ ಹೊತ್ತು’ ಎಂಬ ಕವಿತೆ ನನಗೆ ಬಹಳ ಮೆಚ್ಚುಗೆಯಾದದ್ದು. ಕುಟುಂಬದೊಳಗೆ ಹೆಣ್ಣಿನ ಅಸಹಾಯಕ ಸ್ಥಿತಿಯನ್ನು ಮತ್ತದೇ ತಣ್ಣನೆಯ ದ್ವನಿಯಲ್ಲಿ ತೆರೆದಿಡುತ್ತದೆ. +“ಎಲ್ಲಾ ದಿಕ್ಕು ಕೇಳಿಸಿ ಮಾಡಿಸಿದ್ದ” ಮನೆಯಲ್ಲಿ +“ಬರೆಯಲು ಕುಳಿತರೆ +ಜಾಗದ ಕೊರತೆ” ಮಗನ ಕೋಣೆಯಲ್ಲೋ, ಹಜಾರದಲ್ಲೋ, ಕೊನೆಗೆ +“ರೂಮೊಳು ಬಂದರೆ +ನನ್ನವನ ಧ್ವನಿ ಲೈಟಾರಿಸಿ ಮಲಗು +ಬೆಳಿಗ್ಗೆ ಬೇಗನೆ ಏಳಬೇಕಲ್ಲ! +ಕಾಳಜಿಯೋ? ಆಹ್ವಾನವೋ? +ಪೆನ್ನು ಪಕ್ಕಕ್ಕಿರಿಸಿ +ಒರಗುತ್ತೇನೆ,ನನ್ನ +ಕವನಗಳು ಕಳೆಯುತ್ತವೆ +ರಾತ್ರಿಯಲ್ಲಿ!” +ಹೀಗೆ ಮನೆಯೊಡತಿ ಪಟ್ಟ ಹೊತ್ತಿರುವ ಹೆಣ್ಣು ಮಗಳಿಗೆ ಆ ಮನೆ ಹೇಗೆ ತನ್ನದಲ್ಲ ಎಂಬ ಅಪರಿಚಿತ ಬಾವ ತಂದುಬಿಡಬಲ್ಲದು; ತನ್ನ ಏಕಾಂತವ, ತನ್ನೊಳಗಿನ ತುಮುಲಗಳ ಬಿಡುಗಡೆಗೆ ಪುಟ್ಟ ಅವಕಾಶವೂ ಇಲ್ಲದೇ ನೋವುಗಳೆಲ್ಲಾ ಒಳಗೊಳಗೇ ಇಂಗಿಹೋಗುವ ಬಗೆಯನ್ನು ಈ ಕವಿತೆ ಹೇಳುತ್ತದೆ.. +ಹಾಗೆಯೇ ಇಲ್ಲಿನ ಎರಡು ಬೇರೆ ಬೇರೆ ಕವಿತೆಗಳಲ್ಲಿ ವ್ಯಕ್ತವಾಗಿರುವ ಹೆಣ್ಣಿನ ಭಿನ್ನ ಧ್ವನಿಗಳು ಮತ್ತು ಆ ಮೂಲಕ ಆಕೆ ಸಂಬಂಧಗಳನ್ನು ಕೊನೆಯ ಹಂತದವರೆಗೂ ಕಾಪಾಡಿಕೊಳ್ಳಲು ಪ್ರಯತ್ನಿಸುವ ಬಗೆಯನ್ನು ಕಾಣಬಹುದಾಗಿದೆ. +‘ಕಲ್ಲಾದವಳಿಗೆ’ ಕವಿತೆಯಲ್ಲಿ ” ಒಬ್ಬನ ಮೋಸ ಇನ್ನೊಬ್ಬನ +ಶಾಪಕ್ಕೆ ಗುರಿಯಾಗಿಯೂ ನೀ +ಮೊಕ್ಷಕ್ಕೂ ಮತ್ತೊಬ್ಬನಿಗಾಗಿಯೇ +ಕಾದೆಯಲ್ಲವೇ? +ಅದಕ್ಕೇ ತಕರಾರಿದೆ ನಿನ್ನ ಬಗ್ಗೆ” ಎಂದು ತಕರಾರು ತೆಗೆಯುವ ಕವಿ ‘ಪಂಜರದ ಪಕ್ಷಿ’ ಕವಿತೆಯಲ್ಲಿ +“ಸಿಹಿಮುತ್ತ ನೀಡಿ +ಹಿತವಾಗಿ ಮೈ ಸವರಿ +ಕಳಿಸುವ ಪರಿ ನಿನಗೆ +ಬಾರದೇನು?” ಎಂದು ತಾನು ಗೂಡುಬಿಟ್ಟು ಹಾರಲು ಶಕ್ತವಾಗಿದ್ದರೂ ಆತನೇ ಪ್ರೀತಿಯಿಂದ ಹೊರ ಬಿಡಬಾರದೇಕೆ ಎಂದೂ ಹಂಬಲಿಸುತ್ತಾರೆ.. +ಮತ್ತೆ ಮತ್ತೆ ಯುದ್ಧ ಈ ತಲೆಮಾರಿನ ಲೇಖಕರನ್ನು ಕಾಡುತ್ತಲೇ ಇದೆ.ಎಲ್ಲೆಲ್ಲೂ ಯುದ್ಧದ ಉನ್ಮಾದವೇ ತುಂಬಿಕೊಳ್ಳುತ್ತಿರುವ ಅಥವಾ ಕೃತಹ ಕಾರಣಗಳು ಯುದ್ಧವನ್ನು ಉತ್ತೇಜಿಸುತ್ತಿರುವ ಈ ಹೊತ್ತಲ್ಲಿ ಯುದ್ಧದ ನಿರರ್ಥಕತೆಯನ್ನೂ ಜನರೆದುರು ತೆರೆದಿಡುವ ಕೆಲಸ ಲೇಖಕನ ಕರ್ತವ್ಯವೂ ಹೌದು.. ಈ ಸಂಕಲನದ ‘ಯುದ್ಧ-ಬುದ್ಧ’ ಎಂಬ ಕವಿತೆಯಲ್ಲಿ ಕವಿ ಯುದ್ಧ ಶುರುವಾಗಿಯೇ ಬಿಡುವ ಭೀತಿಯಿಂದ ಬುದ್ಧನಲ್ಲಿ ವಿನಂತಿಸಿಕೊಳ್ಳುತ್ತಾರೆ +“ನೀ ಬರಲು +ಈಗಲೇ ಸರಿಯಾಗಿದೆ ಕಾಲ +ಬಂದುಬಿಡು, +ಬೆರಳೇ ಬೇಕೆಂದವನಿಗೆ +ನೀ ಹೇಳಿದ ಕಥೆಯನ್ನೊಮ್ಮೆ ಹೇಳಿ ಬಿಡು +ಯುದ್ಧ ನಿಂತಾದರೂ +ನಿಲ್ಲಲಿ ಇಲ್ಲಿ” ಎನ್ನುತ್ತಾರೆ.. ಈ ಕವಿತೆಯ ಉದ್ಧಕ್ಕೂ ಯುದ್ಧದ ಕಾರಣಗಳನ್ನು, ಅಲ್ಲಿ ಬಲಿಯಾಗುವ ಅಮಾಯಕರ ನೋವನ್ನೂ ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ.. +ಹೀಗೇ ಕಾಲದ ತಲ್ಲಣಗಳಿಗೆ ಪ್ರತಿಕ್ರಿಯೆಯಾಗಿ, ಪ್ರತಿರೋಧವಾಗಿ ಇಲ್ಲಿನ ಅನೇಕ ಕವಿತೆಗಳು ಧ್ವನಿಯೆತ್ತುತ್ತವೆ.. +‘ಗುರ್ ಮೆಹರ್ ನ ಅಂತರಂಗ’ ಕವಿತೆಯಲ್ಲಿ “ಹೇಳು ಅಶೋಕ +ಕಳಿಂಗ ನಿನ್ನ ಕಾಡಿದಂತೆ +ಕಾರ್ಗಿಲ್ ನನ್ನ ಕಾಡುತ್ತಿದೆ +ಯುದ್ಧವನ್ನು ಯುದ್ಧವನ್ನದೇ +ಇನ್ನೇನನ್ನಲ್ಲಿ?” +‘ನಾವು ಮತ್ತು ಅವರು’ ಕವಿತೆಯಲ್ಲಿ +“ನಾವೋ… +ದಿಂಬಿನ ಜೊತೆಗೆ ನಿದ್ದೆಯನ್ನೂ ಮಾರುವವರಿಗಾಗಿ +ಬರ ಕಾಯುತ್ತಿದ್ದೇವೆ ಇಲ್ಲಿ +ಈ ಮಹಡಿ ಮನೆಯಲ್ಲಿ” +‘ಉಯಿಲೊಂದ ಬರೆದಿಡುವೆ’ ಕವಿತೆಯಲ್ಲಿ +“ನನ್ನ ರಕ್ತವೇನಾದರೂ ಚೆಲ್ಲಿಬಿಟ್ಟರೆ +ಸೇರಿಸಿ ಬಿಡಿ ಚಮಚ-ಚಮಚದಷ್ಟು +ಎಲ್ಲಾ ಧರ್ಮಗಳ ಬಾಟಲಿಗಳ ಮೇಲೆ +ಕಾಲಕಾಲಗಳಾಚೆಯಾದರೂ +‘ಪ್ರೇಮಧರ್ಮ’ವೊಂದು ಹುಟ್ಟಿ ಬಿಡಲಿ +ನನ್ನ ರಕ್ತದಿಂದ” +ಹೀಗೆ ವರ್ತಮಾನದ ಸಮಸ್ಯೆಗಳಿಗೆ ಸ್ಪಂಧಿಸುತ್ತಾ, ತನ್ನ ಬದುಕು ಬವಣೆಗಳನ್ನು, ತವರಿನ ಕಾಡುವ ಮಧುರ ನೆನಪುಗಳನ್ನು ಮತ್ತೆ ಮತ್ತೆ ಪೋಣಿಸುತ್ತಾ, ಮಲೆನಾಡಿನ ಪ್ರಕೃತಿಯ ಜೊತೆ ಜೊತೆಗೇ ಸಾಗುತ್ತಾ,ತನ್ನ ನೆಲದ ಭಾಷೆ ಸಂಸ್ಕ್ರತಿಗಳನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಾ ಈ ಕವಿ ತನ್ನ ಮೊದಲ ಸಂಕಲನವನ್ನು ಓದುಗರ ಕೈಗಿಟ್ಚಿದ್ದಾರೆ.. ಮೊದಲ ಸಂಕನದ ಕೆಲವು ಮಿತಿಗಳು ಇಲ್ಲಿಯೂ ಇವೆಯಾದರೂ ಅವು ಓದಿನ ಖುಷಿಗೆ ತಡೆಯಾಗುವುದಿಲ್ಲ.. ಕೆಲವು ಕಡೆ ಸೇರಿಹೋಗಿರುವ ಇಂಗ್ಲೀಷ್ ಪದಗಳು, ತುಸು ಎಳೆದಂತಾಯಿತೇನೋ ಎಂದೆನಿಸಿದ ಒಂದೆರಡು ಕವಿತೆಗಳು, ಹೆಚ್ಚಿನ ಕವಿತೆಗಳಲ್ಲಿ ಕಂಡುಬಂದ ಏಕತಾನತೆ ಹೀಗೇ ಸಣ್ಣ ಪುಟ್ಟ ದೋಷಗಳನ್ನು ಹುಡುಕಬಹುದಾದರೂ ಕವಿಯ ಮೊದಲ ಪ್ರಯತ್ನವಾಗಿ ಈ ಸಂಕಲನ ಬಹುತೇಕ ಓದುಗರ ಮನಸ್ಸನ್ನು ಗೆಲ್ಲಬಲ್ಲದು ಎಂದು ಭಾವಿಸುತ್ತೇನೆ.. +ತನ್ನ ಸುತ್ತಲಿನ ಎಲ್ಲವನ್ನೂ ತಾಯಿಯ ಅಂತಃಕರಣದಿಂದಲೇ ನೋಡುವ ಈ ಸ್ವಸ್ಥ ಮನಸ್ಸಿಗೆ ಕವಿಗೆ ಶುಭವಾಗಲಿ ಎಂದು ಹಾರೈಸುತ್ತಾ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳು ಇವರಿಂದ ಮೂಢಿಬರಲಿ ಎಂದು ಆಶಿಸುತ್ತೇನೆ…. +“ಅವ್ವ ಮತ್ತು ಅಬ್ಬಲಿಗೆ” ನಿಮಗೂ ಆಪ್ತವಾಗಬಲ್ಲದು ಓದಿ… +–ಸಚಿನ್ ಅಂಕೋಲಾ… + \ No newline at end of file diff --git a/PanjuMagazine_Data/article_1032.txt b/PanjuMagazine_Data/article_1032.txt new file mode 100644 index 0000000000000000000000000000000000000000..517b60b25a265852f1401a9b51ca07c10cb810d6 --- /dev/null +++ b/PanjuMagazine_Data/article_1032.txt @@ -0,0 +1,20 @@ +ಸೀನ್ ೧: +ಸೀತೆ: ಏನ್ರೀ ಇದು, ಎಷ್ಟು ಸಲ ಹೇಳಬೇಕು ನಿಮಗೆ. ಒದ್ದೆ ಟವೆಲು ಮಂಚದ ಮೇಲೆ ಹಾಕಬೇಡಿ ಅಂತ. ಒಗೆಯೊ ಬಟ್ಟೆ ವಾಶಿಂಗ್ ಮಶೀನಿಗೆ ಹಾಕಿ, ನೆಲದ ಮೇಲೆ ಬಿಸಾಡಬೇಡಿ. ಅಬ್ಬಾ, ಹೇಳಿ ಹೇಳಿ ಸುಸ್ತಾಯ್ತು! +ರವಿ: ಅಯ್ಯೊ, ಹೋಗೆ. ಮದುವೆ ಆಗಿ ೧೫ ವರುಷ ಆದ್ರೂ ಅದೇ ರಾಗ ಹಾಡ್ತೀಯಲ್ಲ. ಹೊಸದೇನೂ ಸಿಗಲಿಲ್ಲವಾ? +ಸೀ: ಅಲ್ಲ ರೀ, ಇಷ್ಟು ವರುಷ ಆದ್ರೂ ನೀವು ಬದಲಾಗಿಲ್ಲವಲ್ಲ. ಅದೇ ತಪ್ಪುಗಳು ಮಾಡ್ತಾ ಇದ್ರೆ ನಾ ಅದನ್ನೇ ಹೇಳಬೇಕಾಗುತ್ತೆ +ರ: ಆಯ್ತು ಕಣೆ, ಇಗೋ ನೋಡು, ಟವೆಲ್ ಹೊರಗಡೆ ಹರುವುದಕ್ಕೆ ಹೊರಟೆ. ಬಟ್ಟೆ ವಾಶಿಂಗ್ ಮಶೀನ್ ಅಲ್ಲಿ ಹಾಕಿ ನಾನೆ ಆನ್ ಮಾಡ್ತೀನಿ ಆಯ್ತ? ಎಲ್ಲಿ ಈಗ ಬೇಗ ಒಂದ್ಲೋಟ ಕಾಫ಼ಿ ಕೊಡು ನೋಡೊಣ! +ಸೀನ್ ೨: +ರೇವತಿ: ಏನ್ರೀ ಸ್ವಲ್ಪ ಈ ಕಡೆ ಬರ್ತೀರಾ? +ಸುರೇಶ: ಏನೇ ಅದು? ಕಾಣಿಸುತ್ತಾ ಇಲ್ವಾ, ಆನ್ಲೈನ್ ಕಾಲ್ ಅಲ್ಲಿ ಇದೀನಿ +ರೇ: ಸರಿ ಬಿಡಿ. ನಿಮ್ಮದು ಯಾವಾಗ್ಲೂ ಇದೇ ಆಯ್ತು. ಮನೆ ಕೆಲಸ ಎಲ್ಲಾ ನ ಒಬ್ಬಳೇ ಮಾಡಬೇಕು. ಕೂತಿರ್ತೀರ ಅದರ ಮುಂದೆ ಯಾವಾಗ್ಲೂ! +ಸು: ರಜೆ ಅಲ್ಲ ಕಣೆ ಈಗ. ವರ್ಕ್ ಫ಼್ರಮ್ ಹೋಮ್ ಅಂದರೆ ಮನೆಯಿಂದಲೇ ಆಫ಼ೀಸಿನ ಕೆಲಸ ಮಾಡೊದು! +ರೇ: ಹೋಗ್ಲಿ ಬಿಡಿ, ನಿಮ್ಮದು ಯಾವಾಗ್ಲೂ ಇದ್ದಿದ್ದೇ! +ಸೀನ್ ೩: +ಅಮ್ಮ: ಸಾಕು ಕಣೊ ಆಡಿದ್ದು. ಪಕ್ಕದ ಮನೆ ಶಾಮುನ ಕಳಿಸು. ಊಟಕ್ಕೆ ಬಾ +ಮಗ: ಅವನಿಗೂ ಇಲ್ಲೇ ಕೊಡಮ್ಮ. ಆಮೇಲೆ ಗೇಮ್ ಮುಗಿಸಿಬಿಡ್ತೀವಿ. +ಲಾಕ್ಡೌನ್ ಶುರುವಾದಾಗಲಿಂದ ಮನೆಮನೆಯ ಕತೆ ಇದು. ಒಂದೊಂದು ವಯಸ್ಸಿನವರಿಗೆ ಒಂದೊಂದು ಅನುಭವ. ಚಿಕ್ಕ ಮಕ್ಕಳು. ಸ್ಕೂಲ್ಗೆ ಹೋಗುವ ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ. ಶಾಲೆ ಇಲ್ಲ, ಪರೀಕ್ಷೆಯ ಗೋಳಿಲ್ಲ. ಹಾಯಾಗಿ ಆಟವಾಡಿಕೊಂಡು, ಟೀವಿ, ಮೊಬೈಲ್ ಗೇಮ್,ಕತೆ ಬುಕ್ಕು ಓದಿಕೊಂಡು ಆಟ ಆಡಿಕೊಂಡು ಹಾಯಾಗಿದಾರೆ. ಚಿಕ್ಕ ವಯಸ್ಸಿನ, ಮದುವೆಯಾಗದ ಟೀನೇಜರ್ಸ್ ತಮ್ಮ ತಮ್ಮ ಪ್ರಪಂಚದಲ್ಲಿ. ವಾಟ್ಸಪ್, ಜ಼ೂಮ್ ಮುಂತಾದುವುಗಳಲ್ಲಿ ಬ್ಯುಸಿ. ಹಾ, ಪ್ರೇಯಸಿ/ಪ್ರಿಯಕರನ ಭೇಟಿ ಮಾತ್ರ ಸಾಧ್ಯವಿಲ್ಲ. ಆದರೆ ಈಗಿನ ಕಾಲದ ಹತ್ತು ಹಲವಾರು “ಕಣ್ಣು ತಪ್ಪಿಸಿ” ಕಳಿಸಬಹುದಾದ ಮಾಧ್ಯಮಗಳಿರುವುದರಿಂದ ಯೋಚನೆಯಿಲ್ಲ. +ನವದಂಪತಿಗಳಿಗೆ ಇದು ಮತ್ತೊಮ್ಮೆ ಮಧುಚಂದ್ರ ಆಚರಿಸುವ ಸಮಯವಾಗಿರಬಹುದು. ಮದುವೆಯಾದ ಮೇಲೆ ಎಲ್ಲೂ ಹೋಗಕ್ಕೆ ಆಗಿರಲಿಲ್ಲ, ಕೆಲಸದ ಒತ್ತಡದಿಂದ, ಈಗ ಒಟ್ಟಿಗೆ ಅಡುಗೆ ಮಾಡಿಕೊಂಡು, ತಮಾಶೆ, ಪ್ರೀತಿಯಿಂದ ಬದುಕು ಸಾಗುತ್ತಲಿದೆ. ಕೆಲಸ ಹೊರೆ ಅನಿಸುತ್ತ ಇಲ್ಲ, ಇನಿಯನ ಸಂಗಡ ಹಾಯಾಗಿರುವೆ! ಇದು ಹೊಸದಾಗಿ ಮದುವೆಯಾದ ತಾನ್ಯಾಳ ಅನಿಸಿಕೆ. +ಇನ್ನು ತಂದೆ ತಾಯಂದಿರಿಗೆ ಮಕ್ಕಳನ್ನು ನೋಡಿಕೊಳ್ಳುವ ಯೋಚನೆ. ಮಕ್ಕಳಿಗೆ ಆಡಲು ಜತೆಯಿದ್ದರೆ, ನೋಡಿಕೊಳ್ಳುವರಿದ್ದರೆ ಪರವಾಗಿಲ್ಲ. ಮನೆ ಕೆಲಸ ಮಾಡಿಕೊಂಡು, ಮಕ್ಕಳನ್ನು ಸುಧಾರಿಸುವುದು ಸಾಮಾನ್ಯ ಅಲ್ಲ. ಏನೊ ಒಂದು ಬೇಯಿಸಿ ಹಾಕೋಣ ಅನ್ನುವುದು ವಯಸ್ಸಾದವರು, ಮಕ್ಕಳು ಇದ್ದರೆ ಆಗೊಲ್ಲ. ಸ್ವಲ್ಪ ದೊಡ್ಡ ಮಕ್ಕಳು ಇದ್ದರೆ ಅವುಗಳ ಆನ್ಲೈನ್ ಹೋಂವರ್ಕ್, ಕ್ಲಾಸುಗಳು,ಪ್ರಾಜೆಕ್ಟ್ ಇತ್ಯಾದಿ ಗಮನಿಸುವುದು, ಅಡುಗೆ ಕೆಲಸ, ಮನೆ ಕೆಲಸ ಇವುಗಳಲ್ಲಿ ಸಮಯ ಜಾರುವುದು ಗೊತ್ತಾಗುವುದೇ ಇಲ್ಲ.ಕೆಲಸ ಮಾಡಿ ತಲೆ ಚಿಟ್ಟು ಹಿಡಿದು ಸಾಕಪ್ಪ ಈ ಕೊರೋನ ಅನ್ನುವುದಕ್ಕೂ ತ್ರಾಣ ಇರುವುದಿಲ್ಲ! +ಮಕ್ಕಳು ದೊಡ್ಡವರಾಗಿದ್ದರೆ ತಂದೆ ತಾಯಂದಿರಿಗೆ ಸ್ವಲ್ಪ ಆರಾಮ. ಆಫ಼ೀಸಿನ ಕೆಲಸ ಇದ್ದರೂ ಅಷ್ಟು ಕಷ್ಟವಾಗುವುದಿಲ್ಲ. ಹೇಗೊ ಏನೋ ನಿಭಾಯಿಸಿಬಿಡಬಹುದು. +ಮಿಡ್ಡಲ್ ಕ್ಲಾಸ್ ಜನಕ್ಕೆ ಒಂದು ರೀತಿ ಬಹಳವೇ ಕಷ್ಟ. ಇತ್ತ ಮನೆ ಕೆಲಸ, ಅತ್ತ ಆಫ಼ೀಸಿನದು, ಟ್ಯಾಕ್ಸ್, ತಿಂಗಳ ಸಾಲದ ಕಂತು ಕಟ್ಟುವುದು ಎಲ್ಲವೂ ಇದೆ. ಇವರ ಟ್ಯಾಕ್ಸ್ ಹಣದಿಂದ ನಡೆಯುತ್ತಿರುವ ದೇಶದಲ್ಲಿ ಇವರ ದನಿ ಯಾರಿಗೂ ಕೇಳುವುದೇ ಇಲ್ಲ. ಈ ಮಹಾಮಾರಿಯಿಂದ ಆಗಿರುವ ಕಷ್ಟ ಅಷ್ಟಿಷ್ಟಲ್ಲ. ದಿನಗೂಲಿ ಮಾಡಿ ಜೀವಿಸುವವರು, ಹೊರ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ಕೆಲಸ ಮಾಡುತ್ತಿರುವರು, ಆರ್ಥಿಕವಾಗಿ ಹಿಂದುಳಿದವರು ಇವರಿಗೆ ಆಗಿರುವ ನಷ್ಟ ಅಪಾರ. ಇವರು ಅನುಭವಿಸುತ್ತಿರುವುದು ನೋಡಿದರೆ ಸಂಕಟವಾಗುತ್ತದೆ. ಇವರಿಗೆ ಸಹಾಯ ಹಸ್ತ ಚಾಚುತ್ತಿರುವ ಬಹುತೇಕರು ಇದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುತ್ತಿರುವುದೇ ಜಾಸ್ತಿ. ಒಟ್ಟಿನಲ್ಲಿ ಆರ್ಥಿಕ ವ್ಯವಸ್ಥೆ ಕುಸಿದು ಬೀಳುವುದರಲ್ಲಿದೆ. ಆದರೂ ಸರಕಾರ, ವೈದ್ಯರು, ದಾದಿಯರು, ಪೋಲೀಸರು, ಪೌರಕಾರ್ಮಿಕರು ಮತ್ತಿತ್ತರ ಶ್ರಮಗಳು ವ್ಯರ್ಥವಾಗದಂತೆ ಜೋಪಾನವಾಗಿರುವುದೇ ಈಗಿರುವ ದಾರಿ.‌ +–ಸಹನಾ ಪ್ರಸಾದ್‌ \ No newline at end of file diff --git a/PanjuMagazine_Data/article_1033.txt b/PanjuMagazine_Data/article_1033.txt new file mode 100644 index 0000000000000000000000000000000000000000..8f7c007cc18c8b6a175284d77b38316bcf37224d --- /dev/null +++ b/PanjuMagazine_Data/article_1033.txt @@ -0,0 +1,66 @@ +ಇಲ್ಲಿಯವರೆಗೆ +ರೂಮಿಗೆ ಬಂದ ಹರಿ ಅನೂಷಾಳಿಗೆ ಕಾಲ್ ಮಾಡಿದ. +“ಹೇ ಅನೂಷ ಏನ್ ಮಾಡ್ತಿದ್ದೀಯಾ?” +” ಏನಿಲ್ಲಪ್ಪ. ಈಗ ಜಸ್ಟ್ ಊಟ ಆಯ್ತು, ಸುಮ್ಮನೆ ಕೂತಿದ್ದೀನಿ. ಮನೆಯಲ್ಲಿ ಫುಲ್ ಖುಷ್ ಕಣೋ, ಕೆಲಸ ಸಿಕ್ಕಿದ್ದಕ್ಕೆ” +” ಹೌದಾ… ನಮ್ಮನೇಲೂ ಅಷ್ಟೇ, ತುಂಬಾ ಖುಷಿಯಾಗಿದ್ದಾರೆ. ಆದ್ರೂ ನಮ್ಮಪ್ಪ, ಕೊನೆಗೊಂದು ಬಾಂಬ್ ಹಾಕಿನೆ ಹೋದ್ರು ನೋಡು.” +” ಹ್ಹ….ಹ್ಹ…. ಹಂಗೆ ಆಗ್ಬೇಕು ನಿನಗೆ. ಅಂದ್ಹಾಗೆ, ಏನ್ ಬಾಂಬು ಅದು ಮಿಸ್ಟರ್ ಹರಿ?”. ಎಂದು ರೇಗಿಸಿದಳು ಅನೂಷಾ. +“ಏಯ್… ಸಾಕು ಸುಮ್ನಿರೇ ಕುಳ್ಳಿ. ಏನಿಲ್ಲ ಕೆಲಸ ಸಿಕ್ತು ಅಂತ ಹಾರಾಡಬೇಡ. ಇನ್ನೊಂದು ಸೆಮ್ ಇದೆ, ನೆಟ್ಟಗೆ ಓದ್ಕೋ. ಅಂತ ಬೈದು ಹೋದ್ರು” +” ಓಹೋ ಅವರು ಹೇಳುವುದು ಕರೆಕ್ಟಾಗಿದೆ ಬಿಡು ಇದೊಂದು ಸೆಮ್ ಪಾಸಾಗಬೇಕಲ್ಲಪ್ಪ.” ಎಂದು ಗೊಣಗಿದಳು. ದೀರ್ಘಕಾಲದ ಮಾತುಕತೆಯಾದ ನಂತರ ಸಂಜೆ ಪಾರ್ಕಲ್ಲಿ ಮೀಟಾಗಿ ನಂತರ ಡೊಮಿನೊಸ್ ಗೆ ಹೋಗೋಣವೆಂದು ನಿರ್ಧರಿಸಿದರು. +ಸ್ವಲ್ಪ ರೆಸ್ಟ್ ಮಾಡಿದ ಹರಿ, ಐದು ಗಂಟೆಗೆ ಎದ್ದು ಫ್ರೆಶ್ ಆಗಿ, ತಯಾರಾಗತೊಡಗಿದ. +” ಅಮ್ಮ ನಾನು ಸ್ವಲ್ಪ ಹೊರಗಡೆ ಹೋಗಿ ಬರ್ತೀನಿ.” ಎಂದು ಹೇಳಿ ಬೈಕ್ ಹತ್ತಿ ಹೊರಟ. ಪಾರ್ಕ್ ಹತ್ತಿರ ಬಂದು ನಿಂತಾಗ ಸಂಜೆ ಆರು ಗಂಟೆಯಾಗಿತ್ತು. ಅದೇ ಸಮಯಕ್ಕೆ ಬಂದ ಹರಿಯನ್ನು ನೋಡಿ ಅಚ್ಚರಿಗೊಂಡಳು ಅನೂಷಾ. +” ಇವತ್ತೇನೋ ಪೆದ್ದ,. ಇಷ್ಟು ಬೇಗ ಬಂದಿದೆಯಾ?” ಎಂದು ರೇಗಿಸಿದಳು. +” ಸಾಕು ಸುಮ್ನಿರೇ” ಎನ್ನುತ್ತಾ ಅವಳನ್ನು ಬಿಗಿದಪ್ಪಿದ.”ಐ ಲವ್ ಯು ಕುಳ್ಳಿ.” ಎಂದು ಮೆಲು ಧ್ವನಿಯಲ್ಲಿ ಅವಳ ಕಿವಿಗೆ ಬೀಳುವಂತೆ ನುಡಿದ. ಅವಳು ಸಹ, ” ಲವ್ ಯು ಟೂ ಕಣೊ ಪೆದ್ದ” ಎಂದಳು. ಇಬ್ಬರೂ ಕೆಲಕಾಲ ಹಾಗೇ ನಿಂತು, ನಂತರ ಒಂದು ಬೆಂಚಿನ ಮೇಲೆ ಕುಳಿತು ಮಾತನಾಡತೊಡಗಿದರು. +” ಕೆಲಸ ಅಂತೂ ಸಿಕ್ತು. ಬೇಗ, ಇಬ್ಬರೂ ಮನೆಯಲ್ಲಿ ಹೇಳಿ, ಒಪ್ಸಿ ಮದುವೆ ಆಗ್ಬಿಡ್ಬೇಕು” ಎಂದಳು. +” ನಮ್ಮನೇಲಿ ಏನು ಪ್ರಾಬ್ಲಮ್ ಇಲ್ಲಪ್ಪ. ಇರೋದೆಲ್ಲ ನಿಮ್ಮ ಮನೆಯಲ್ಲೇ ನೋಡು. ನಿಮ್ಮಪ್ಪ ಇದ್ದಾರಲ್ಲ, ಅವರನ್ನು ಒಪ್ಸೋದೆ ಒಂದು ದೊಡ್ಡ ಹರಸಾಹಸ” ಎಂದ ಹರಿ. +” ಹೌದು…. ಏನ್ ಮಾಡೋದು, ನಮ್ಮಪ್ಪ ಇರೋದೇ ಹಂಗೆ.” ಅನೂಷಾಳ ಅಪ್ಪ ಮಿಲಿಟರಿಯಲ್ಲಿದ್ದು ರಿಟೈರ್ಡ್ ಆಗಿದ್ದರಿಂದ ತುಂಬಾ ಸ್ಟ್ರಿಕ್ ಆಗಿದ್ದರು. ಒಂದು ಬಾರಿ, ಹರಿ ಮತ್ತು ಅವಿನಾಶ್ ಅವಳ ಮನೆಗೆ ಹೋದಾಗ, ಇನ್ವೆಸ್ಟಿಗೇಶನ್ ಆಫೀಸರ್ ತರಹ ಅವರನ್ನು ಪ್ರಶ್ನಿಸಿ ಸಂಕೋಚಕ್ಕೆಡೆಮಾಡಿದ್ದರು. ಹೀಗಾಗಿ, ಅವತ್ತಿನಿಂದ ಹರಿ ಅವಳ ಮನೆಯ ಕಡೆಗೆ ಸುಳಿದಿರಲಿಲ್ಲ. +ಅರ್ಧಗಂಟೆ ಪಾರ್ಕಿನಲ್ಲಿ ಕಳೆದು ಇಬ್ಬರು ಡೊಮಿನೊಸ್ ನ ಕಡೆಗೆ ಹೊರಟರು. ಹತ್ತು ನಿಮಿಷದಲ್ಲಿ ಹತ್ತಿರದ ಸ್ಟೋರ್ ಗೆ ತಲುಪಿ, ಒಳಗೆ ಹೋದರು. ವಿಶಾಲವಾದ ಸ್ಟೋರ್ ಅದು. ಮಿನುಗುವ ಲೈಟುಗಳು, ಅಲ್ಲಲ್ಲಿ ಹಾಕಿರುವ ಟೇಬಲ್ಲುಗಳು, ಕುರ್ಚಿಗಳು ಕಸ್ಟಮರ್ ನ ಖುಷಿ ಗೊಳಿಸಲು ಗೋಡೆಗೆ ತೂಗುಹಾಕಿದ್ದ ಜಗತ್ತನ್ನೇ ತೋರಿಸುವಷ್ಟು ದೊಡ್ಡದಾದ ಟಿವಿ. ಮನಸ್ಸನ್ನು ಉಲ್ಲಾಸಗೊಳಿಸುವಂತಹ ಸಂಗೀತ. ಎಲ್ಲವೂ ಮನಮೋಹಕವಾಗಿದ್ದವು. ಇದೇನು ಮೊದಲ ಬಾರಿಯಲ್ಲ, ಹರಿ ಮತ್ತು ಅನೂಷಾ ಅಲ್ಲಿಗೆ ಹೋದದ್ದು. ಟೈಮ್ ಸಿಕ್ಕಾಗಲೆಲ್ಲ ಹೋಗುತ್ತಿದ್ದರು. +” ಎಸ್ ಸರ್. ಯುವರ್ ಆರ್ಡರ್ ಪ್ಲೀಸ್.” ಎಂದು ಕೌಂಟರ್ ನ ಬಳಿ ಹೋಗುತ್ತಲೇ ಕೇಳಿದಳು, ಸ್ಟೋರ್ ನಾಕೆ. +” ಔಟಿe ಠಿeಠಿಠಿಥಿ ಠಿಚಿಟಿeeಡಿ ಚಿಟಿಜ oಟಿe veggie ಠಿಚಿಡಿಚಿಜise.” +” ಥ್ಯಾಂಕ್ಯೂ ಸರ್. ವೇಟ್ ಮಾಡಿ.” ಎಂದಳು. +ಹತ್ತು ನಿಮಿಷದ ನಂತರ ಪಿಜ್ಜಾ ಬಂತು. ಇಬ್ಬರೂ ಮಾತನಾಡುತ್ತಾ ತಿಂದರು. ಅದೆಂತಹದೊ ಬ್ರಹ್ಮಾ ಲೋಕದಲ್ಲಿ ಮುಳುಗಿ ಬಿಟ್ಟಿದ್ದರು. ಪಿಜ್ಜಾ ಖಾಲಿಯಾದದ್ದೆ ಗೊತ್ತಾಗಲಿಲ್ಲ ಅವರಿಗೆ. +” ಇನ್ನೊಂದು ಆರ್ಡರ್ ಮಾಡ್ಲಾ? ತಿಂತೀಯಾ?” ಎಂದು ಕೇಳಿದ ಹರಿ. +” ಉಹುಂ ಬೇಡ ಕಣೋ, ಈಗಲೇ ಸಾಕಾಗಿದೆ.” ಎಂದಳು. ಇಬ್ಬರು ಕೈ ಒರೆಸಿಕೊಂಡು ಹೊರನಡೆದರು. +” ಹಿಂಗೆ ಪದೇಪದೇ ಪಿಜ್ಜಾ ನಿಂತಿದ್ರೆ ಡುಮ್ಮಿ ಆಗೋಗ್ತಿನಿ ನಾನು. ಅಷ್ಟೇ.” +” ಹ್ಹ….ಹ್ಹ….ಆಗೋದ್ ಏನು ಬಂತು, ಡುಮ್ಮಿನೆ ಇದ್ದೀಯಲ್ಲ..ಹ್ಹ….ಹ್ಹ..” ಎಂದು ಜೋರಾಗಿ, ಅನೂಷಾಳನ್ನು ಛೇಡಿಸುತ್ತಾ ನಕ್ಕ. +” ಸಾಕು ಸುಮ್ನಿರೋ. ನೀನೇನು ಸ್ಲಿಮ್ ಅಂಡ್ ಟ್ರಿಂ ಆಗಿದೀಯ ನೋಡು. ನೀನು ಅಷ್ಟೇ ಡುಮ್ಮ.” ಎಂದು ರೇಗಿದಳು. +” ಓಹೋ ಸಿಟ್ಟುಬಂತು ಮೇಡಂಗೆ. ಸುಮ್ನೆ ಕಿಂಡಲ್ ಮಾಡಿದೆ.” ಎಂದು ಅವಳ ಭುಜವನ್ನು ಸವರಿದ. ಇಬ್ಬರು ಮೈ ಹೊಸೆಯುತ್ತ ಬೈಕಿನೆಡೆಗೆ ಹೊರಟರು. ” ಕೆಲಸ ಸಿಕ್ಕಿದ್ದು ಮೆಲಿಟಾಗೊಂದು ಹೇಳಬೇಕು, ಇಲ್ಲದಿದ್ದರೆ ನನ್ನ ಕೊಲೇನೆ ಮಾಡ್ತಾಳೆ. ನಾನು ಹೇಳ್ದಿದ್ರೆ ಹೇಗಾದರೂ ಗೊತ್ತಾಗಿಬಿಡುತ್ತೆ ಅವಳಿಗೆ. ಅದಕ್ಕೂ ಮುಂಚೆ ಹೇಳ್ಬೇಕು.” +” ಹುಂ…ಹುಂ… ಹೇಳಪ್ಪ ನಿನ್ನ ಬೆಸ್ಟೀಗೆ. ಇಲ್ಲದಿದ್ದರೆ ಆಂಗ್ರಿ ಬರ್ಡ್ ಆಗಿಬಿಡುತ್ತಾಳೆ….ಹ್ಹ….ಹ್ಹ…”. ಮೆಲಿಟಾ ಮತ್ತು ಹರಿ ಚೈಲ್ಡ್ ಹುಡ್ ಫ್ರೆಂಡ್ಸ್ ಆಗಿದ್ದರು. ಇಬ್ಬರು ಪಿಯುಸಿವರೆಗೂ ಜೊತೆಗೆ ಹೊಂದಿದವರಾಗಿದ್ದರಿಂದ ತುಂಬಾ ಕ್ಲೋಸ್ ಇದ್ದರು. ಇವರಿಬ್ಬರ ಸ್ನೇಹ ಅನೂಷಾಗೆ ಅಷ್ಟೇನು ಹಿಡಿಸುತ್ತಿರಲಿಲ್ಲ. ಆದರೂ ಅದನ್ನ ವ್ಯಕ್ತಪಡಿಸುತ್ತಿರಲಿಲ್ಲ. +” ಹತ್ತು…. ಎಂಟೂವರೆ ಆಗಿದೆ ಟೈಮ್. ಮನೆ ಹತ್ತಿರಾನೆ ಬಿಡ್ತೀನಿ.” ಎಂದ ಹರಿ. +” ಬೇಡ ಕಣೋ. ಅಪ್ಪ ನೋಡಿದ್ರೆ ಬೈತಾರೆ. ಸುಮ್ನೆ ಯಾಕೆ” +” ಇರ್ಲಿ ಬಾ…. ಅವರಿಗೆ ಕಾಣಿಸದೆ ಇರೋ ಹಾಗೆ ಬಿಟ್ಟು. ಬೇಗ ವಾಪಸ್ ಬರ್ತೀನಿ” +” ಹುಂ ಸರಿ” ಎಂದು ಬೈಕ್ ಹತ್ತಿದ್ದಳು ಅನೂಷಾ. ಅಲ್ಲಿಂದ ಸುಮಾರು ಇಪ್ಪತ್ತೈದು ನಿಮಿಷದ ಹಾದಿ. ಪ್ರತಿ ಬಾರಿ ಬಂದಾಗ ತನ್ನ ಸ್ಕೂಟಿ ತರುತ್ತಿದ್ದಳು. ಆದರೆ, ಈ ಬಾರಿ, ಸ್ಕೂಟಿ ಅವಳ ತಂದೆ ತೆಗೆದುಕೊಂಡು ಹೋಗಿದ್ದರಿಂದ ಬಸ್ಸಿಗೆ ಬಂದಿದ್ದಳು. ಹೀಗಾಗಿ ಬಿಡ್ತೀನಿ ಅಂತ ಒತ್ತಾಯ ಮಾಡಿದ ಹರಿ. ಇಪ್ಪತ್ತೈದು ನಿಮಿಷಗಳ ಪ್ರಯಾಣದ ನಂತರ ಮನೆಯ ಹತ್ತಿರ ತಲುಪಿದರು. ಅವಳನ್ನು ಬಿಟ್ಟವನೇ “ಬಾಯ್” ಎಂದು ಗಾಡಿ ಬಿಟ್ಟುಬಿಟ್ಟ. ಅವಳನ್ನು ಬಿಟ್ಟು ಮನೆಗೆ ತಲುಪುವುದರಲ್ಲಿ ಒಂಭತ್ತುವರೆಯಾಗಿತ್ತು. ಅಮ್ಮನ ಒತ್ತಾಯಕ್ಕೆ ಸ್ವಲ್ಪವೇ ಊಟ ಮಾಡಿ ರೂಮಿನೊಳಗೆ ಬಂದುಬಿಟ್ಟ. ಅಂದಿನ ದಿನ ಎಲ್ಲವೂ ಸಂತೋಷವನ್ನು ಕೊಡುವಂತಹ ಸಂಗತಿಗಳಾಗಿದ್ದವು. ಕೆಲಸ ಸಿಕ್ಕ ಸುದ್ದಿ ಹಾಗೂ ಪ್ರೇಯಸಿಯ ಜೊತೆಗೆ ಹಾಯಾಗಿ ಸುತ್ತಾಡಿದ್ದು ಎಲ್ಲವೂ ಮನಸ್ಸನ್ನು ಖುಷಿಗೊಳಿಸಿದ್ದವು. ಒಬ್ಬ ಯುವಕನ ಬಾಳಿನಲ್ಲಿ ಸಂತೋಷವನ್ನು ವೃದ್ಧಿಸುವ ಘಟ್ಟವೆಂದರೆ ಇದೇ ನೋಡಿ. ಉದ್ಯೋಗವೆನ್ನುವುದು ಆ ಯುವಕನ ಬಾಳಿನಲ್ಲಿ ಎಂತಹ ಪ್ರಮುಖ ಪಾತ್ರವನ್ನು ವಹಿಸುತ್ತದೆಂದರೆ, ಅದರಲ್ಲಿ ಬಿದ್ದು ಹೊರಳಾಡುತ್ತಿರುವವರಿಗೆ ಗೊತ್ತಾಗುತ್ತದೆ. ಆ ದಿನ ಹರಿಯನ್ನೂ ಸಮೀಪಿಸುತ್ತಿತ್ತು. ಹೀಗಾಗಿ ಸಹಜವಾಗಿಯೇ ಖುಷಿಯಾಗಿದ್ದ. ತಡರಾತ್ರಿಯವರೆಗೂ ಅನೂಷಾಳ ಜೊತೆ ಚಾಟ್ ಮಾಡುತ್ತಾ ಮಲಗಿದ್ದ. ನಂತರ ನಿದ್ರೆ ಬಂತೆಂದು ಇಬ್ಬರು ಮಲಗಿದರು. ಹರಿಗೆ ನಿದ್ರೆಯೆ ಬರಲಿಲ್ಲ. ಖುಷಿಯಾದಾಗ ನಿದ್ರೆ ಬರುವುದಿಲ್ಲವಂತೆ. ಹೊರಳಾಡಿದ, ಹೊರಳಾಡುತ್ತಲೆ ಇದ್ದ. ಅದ್ಯಾವಾಗ ನಿದ್ರೆ ಹತ್ತಿತೊ ಗೊತ್ತಿಲ್ಲ. ಬೆಳಗ್ಗೆ, ಅಮ್ಮ ಬಂದು “ಎದ್ದೇಳು ಹರಿ, ಲೇಟಾಯ್ತು.” ಎಂದಾಗಲೆ ಎಚ್ಚರವಾಗಿದ್ದು ಅವನಿಗೆ. ಎದ್ದವನೇ ದಡಬಡ ಮಾಡುತ್ತಾ ಸ್ನಾನ ಮಾಡಿ, ಹೋದಷ್ಟು ತಿಂಡಿಯನ್ನು ತಿಂದವನೇ ಕಾಲೇಜಿನೆಡೆಗೆ ಹೊರಟ. ಲೇಟ್ ಆಗಿದ್ದರಿಂದ ಮೊದಲನೆಯ ಕ್ಲಾಸ್ ಬಂಕ್ ಮಾಡಿ ಕ್ಯಾಂಟೀನಿನಲ್ಲಿ ಕುಳಿತ. +ಎಕ್ಸಾಮ್ ಹತ್ತಿರವಾದಂತೆ ಇಬ್ಬರು ತಮ್ಮ ತಮ್ಮ ಪುಸ್ತಕಗಳಲ್ಲಿ ಮುಳುಗಿದ್ದರು. ಎಕ್ಸಾಮ್ ಒಂದು ವಾರ ಇರುವಂತೆಯೇ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಸೆಲೆಕ್ಟ್ ಆದವರಿಗೆ ಒಂದು ಮೇಲ್ ಬಂದಿತ್ತು. ಹರಿಗೆ ದುರದೃಷ್ಟವಶಾತ್ ಹೈದರಾಬಾದಿಗೆ ಪೋಸ್ಟಿಂಗ್ ಆಗಿತ್ತು. ಅನೂಷಾಳಿಗೆ ಬೆಂಗಳೂರಿನಲ್ಲಿಯೆ ಪೋಸ್ಟಿಂಗ್ ಆಗಿತ್ತು. ಒಂದು ಕ್ಷಣ ಕುಗ್ಗಿ ಹೋದ ಹರಿ. ಪ್ರೀತಿಸಿದ ಗೆಳತಿ ಅಕ್ಕರೆಯ ತಂದೆ- ತಾಯಿ ಎಲ್ಲರನ್ನು ಹೇಗೆ ಬಿಟ್ಟುಹೋಗುವುದು. ಬಂದ ಆಫರನ್ನು ಬಿಟ್ಟುಬಿಡಬೇಕೆನಿಸಿಬಿಟ್ಟಿತು. ಆದರೆ ಅಂತಹ ಒಳ್ಳೆ ಸಂಬಳ ಹಾಗೂ ಕಂಪನಿಯನ್ನು ಬಿಡಲು ತಯಾರೂ ಇರಲಿಲ್ಲ. ಏನು ಮಾಡಬೇಕೆಂಬುದೆ ತಿಳಿಯಲಿಲ್ಲ. ಎರಡು ದಿನದಿಂದ ಸಪ್ಪಗಿರುವ ಮಗನನ್ನು ನೋಡಿ, ಚಡಪಡಿಸುತ್ತಾ ಸೀತಮ್ಮನವರು ಕೇಳಿದರು, +” ಯಾಕೋ ಹರಿ ಹೆಂಗಿದ್ದೀಯಾ? ಏನಾದರೂ ಪ್ರಾಬ್ಲಮ್ ಆಗಿದೆನಾ?” +” ಏನಿಲ್ಲ ಬಿಡು ಅಮ್ಮ. ಇನ್ನೊಂದೆರಡು ದಿನ, ತಾನಾಗೆ ಸರಿ ಹೋಗುತ್ತೆ.” +” ಹೇಳೊ ಏನಾಯ್ತು? ಸಾಲ್ವ್ ಮಾಡೋಕ್ ಆದ್ರೆ ನಾನು ನಿಮ್ಮಪ್ಪ ಹೆಲ್ಪ್ ಮಾಡ್ತೀವಿ.” +” ಏನಿಲ್ಲ ಅಮ್ಮ. ನಂಗೆ ಹೈದರಾಬಾದಿಗೆ ಪೋಸ್ಟಿಂಗ್ ಆಗಿದೆ. ನಂಗೆ ಅಲ್ಲಿಗೆ ಹೋಗೋಕೆ ಇಷ್ಟ ಇಲ್ಲ.” +” ಅಯ್ಯೋ ಹುಚ್ಚ ಇಷ್ಟೇನಾ. ನಾನೇನೊ ಬೇರೆ ಅಂದುಕೊಂಡು ಹೆದರಿಬಿಟ್ಟಿದ್ದೆ.” ಎಂದರು ಅಮ್ಮ. ಇಬ್ಬರ ನಡುವೆ ಕ್ಷಣಕಾಲ ಮೌನ ಆವರಿಸಿತು. +” ಇರ್ಲಿ ಬಿಡು ಅಮ್ಮ. ಏನ್ ಮಾಡೋದು, ನನ್ನ ಹಣೆಬರಹ. ಅಲ್ಲಿಗೆ ಹೋಗ್ತಿನಿ.” ಎಂದು ಮಾತು ಮುಗಿಸಲು ಹೊರಟ ಹರಿ. +” ಅಲ್ವೋ ಹರಿ, ಇಷ್ಟು ಸಣ್ಣ ವಿಷಯಕ್ಕೆ ಹಿಂಗೆ ಬೇಜಾರಾಗಿ ಕೂತ್ಕೊಂಡುಬಿಟ್ಟರೆ ಮುಂದೆ ಹೆಂಗೋ?. ಸ್ಟ್ರಾಂಗ್ ಆಗಿರಬೇಕು ನೀನು. ಹೈದ್ರಾಬಾದ್ ಏನು ಸಾವಿರ ಕಿಲೋಮೀಟರ್ ದೂರದಲ್ಲಿಲ್ಲ. ಒಂದು ರಾತ್ರಿಯ ಪ್ರಯಾಣ. ಫ್ಲೈಟ್ ಗೆ ಬಂದರಂತೂ ಕಣ್ಣು ಮುಚ್ಚಿ ಕಣ್ಣು ತೆಗೆಯುವುದರಲ್ಲಿ ಬೆಂಗಳೂರಿನಲ್ಲಿ ಇರ್ತಿಯ. ಎದ್ದೇಳು ಫ್ರೆಶ್ ಆಗಿ ತಿಂಡಿ ತಿನ್ನು. ಇದನ್ನೆಲ್ಲಾ ತಲೆಯಿಂದ ತೆಗೆದು ಹಾಕು.” ಎಂದು ಹರಿಯನ್ನು ಸಮಾಧಾನ ಪಡಿಸಿದರು. ನಂತರದ ದಿನಗಳಲ್ಲಿ ಹರಿ ಕೊಂಚ ಗೆಲುವಿನಿಂದಿದ್ದ. ಕ್ರಮೇಣ ಖುಷಿಖುಷಿಯಾಗಿ ಎಲ್ಲರ ಜೊತೆ ಓಡಾಡತೊಡಗಿದ. ಗಂಡು ಮಕ್ಕಳಿಗೆ ಹಾಗೇ ನೋಡಿ, ಅಮ್ಮನ ಪ್ರೀತಿಯ ಮಾತುಗಳು ಹಾಗು ಹಿತನುಡಿಗಳು ಬೇಗನೆ ತಲೆಯೊಳಗೆ ಹೋಗಿಬಿಡುತ್ತವೆ. ಅಮ್ಮನೆಂದರೆ ಅದೇನೋ ಸ್ಟ್ರೆಂತ್ ಇದ್ದಂತೆ. ಅವಳೊಬ್ಬಳೇ ಎಂತಹ ಕಠಿಣ ಪರಿಸ್ಥಿತಿಯಲ್ಲಿದ್ದರೂ ಅದರಿಂದ ಪಾರು ಮಾಡಬಲ್ಲಳು. ಕೇವಲ ಅವಳ ಅಕ್ಕರೆಯ ನುಡಿಗಳಿಂದ. +ಇನ್ನೇನು ಒಂದೇ ತಿಂಗಳು ಉಳಿದಿತ್ತು ಕೆಲಸಕ್ಕೆ ಜಾಯಿನ್ ಆಗಲು. ಕೊನೆಯ ಸೆಮಿಸ್ಟರ್ ಕೂಡ ಮುಗಿದಿತ್ತು. ಒಳ್ಳೆಯ ಅಂಕ ಕೂಡ ಬಂದಿತ್ತು. ಹರಿ ರಜೆಯಲ್ಲಿ ಫ್ರೆಂಡ್ಸ್ ಜೊತೆ ಊರೂರು ಅಲೆಯುತ್ತಿದ್ದ. ಸಂಬಂಧಿಕರ ಮನೆಗೆ ಹೋಗಿ ಬಾರೋ ಎಂದು ಹೇಳಿ ಹೇಳಿ ಅಮ್ಮನಿಗೆ ಸಾಕಾಗಿತ್ತು. ಕೊನೆಗೂ ಒಂದು ದಿನ ” ನಡಿ ಅಮ್ಮ ಅದೆಷ್ಟು ದಿನ ಇರೋಣ ಅಂತಿಯೋ ಇದ್ದು ಬರೋಣ.” ಎಂದು ಸಿಡಿಮಿಡಿಗೊಂಡು ಹೊರಟ. ಸೋದರತ್ತೆಯ ಮನೆ, ದೊಡ್ಡಪ್ಪ, ಚಿಕ್ಕಪ್ಪ ಹೀಗೆ ಒಂದು ವಾರ ಎಲ್ಲರ ಮನೆಗೂ ತಿರುಗಾಡಿದರು. ಅಲ್ಲಿ ಯಾರು ಇವನು ವಯಸ್ಸಿನವರು ಇಲ್ಲದಿದ್ದರಿಂದ ತುಂಬಾ ಬೋರ್ ಆಗುತ್ತಿತ್ತು. ಒಂದೇ ಕಡೆ ಕೂರುವ ವ್ಯಕ್ತಿ ಹರಿಯಾಗಿರಲಿಲ್ಲ. ಹೇಗೋ ಅಮ್ಮನ ಒತ್ತಾಯಕ್ಕೆ ಸುಮ್ಮನಿರುತ್ತಿದ್ದ. +ಹೀಗೆ ಒಂದು ತಿಂಗಳು ಮುಗಿಯುತ್ತಾ ಬಂತು. ಹರಿಗೆ ಮತ್ತೆ ಸಂಕಟ ಪ್ರಾರಂಭವಾಯಿತು. +” ನಿಮ್ಮನ್ನೆಲ್ಲ ಹೇಗೆ ಬಿಟ್ಟಿರುವುದು ಅನೂಷಾ. ನನಗೆ ಈಗಲೇ ಬೇಜಾರಾಗ್ತಿದೆ.” ಎಂದು ಗೋಳಾಡಿದ. +” ಏ ಪೆದ್ದ, ಅದೇನು ಹೆಣ್ಣುಮಕ್ಕಳ ಹಂಗೆ ಗೊಳೋ ಅಂತ ಹೇಳ್ತಿಯಾ. ಸುಮ್ಮನೆ ಇದ್ದರೆ ಸರಿ, ಇಲ್ಲದಿದ್ದರೆ ಅಲ್ಲಿಗೆ ಬಂದು ಸಾಯಿಸಿ ಬಿಡ್ತೀನಿ.” ಎಂದು ಜೋರಾಗಿ ನಕ್ಕಳು. +“ನಿನಗೇನು ಗೊತ್ತು ನನ್ನ ಕಷ್ಟ. ಬಿಡು ಹೋಗ್ತೀನಿ, ಒಬ್ಬಳೇ ಆರಾಮಾಗಿರು.” +” ಹುಚ್ಚ ಹಂಗಲ್ಲ ಹೇಳಿದ್ದು. ಸಾರಿ ಕಣಪ್ಪ. ನಂಐಗು ಅರ್ಥ ಆಗುತ್ತೆ. ಆದರೆ ಏನ್ ಮಾಡೋದು ಕೆಲಸ ಮಾಡಬೇಕಲ್ಲ. ಒಂದು ವರ್ಷ ಅಲ್ಲಿ ವರ್ಕ್ ಮಾಡು, ಆಮೇಲೆ ಇಲ್ಲಿಗೆ ಟ್ರಾನ್ಸ್ಫರ್ ತೆಗೆದುಕೊಂಡರಾಯ್ತು.” +” ಹಾ ಅಷ್ಟೇ ಮಾಡ್ತೀನಿ ಬಿಡು. ಸರಿ ನಾನು ಸ್ವಲ್ಪ ಹೊರಗಡೆ ಹೋಗಬೇಕು ನಾಳೆ ನೈಟ್ ನೆ ಹೊರಡಬೇಕು.” +” ಹೂಂ ಸರಿ, ಹೊರಡು. ಬಾಯ್. ಟೇಕ್ ಕೇರ್.” ಫೋನು ಇಟ್ಟ ನಂತರ ಅಮ್ಮ ಮಗ ಇಬ್ಬರೂ ಮಾರ್ಕೆಟ್ಗೆ ಹೊರಟರು. +” ಏನೇನ್ ಬೇಕು ಎಲ್ಲ ತಗೊಂಡು ಬಿಡು ಆಮೇಲೆ ಅದು ಮತ್ತೆ ಇದು ಮತ್ತೆ ಅಂತ ಕೂತ್ಕೋ ಬೇಡ.” +” ಹು ಅಮ್ಮ. ಸರಿ ನಡಿ ಈಗ.” ಎಂದು ಹೊರಟರು. +ಮಾರ್ಕೆಟ್ಟಿನಿಂದ ಬಂದನಂತರ ಹರಿ ಬಟ್ಟೆಯನ್ನು ಪ್ಯಾಕ್ ಮಾಡಿಕೊಂಡ. ಅಮ್ಮನು ಸಹ ಸಹಾಯ ಮಾಡಿದರು. ಒಂದು ದೊಡ್ಡ ಟ್ರಾಲಿ ಜೊತೆಗೆ ಒಂದ ಬ್ಯಾಗ್ ಪ್ಯಾಕ್ ನಷ್ಟು ಬಟ್ಟೆಗಳು ಹಾಗೂ ಇತರೆ ಸಾಮಾನುಗಳನ್ನು ತೆಗೆದುಕೊಂಡ. ಹನ್ನೊಂದುವರೆಗೆ ಬಸ್ ಇದ್ದುದರಿಂದ, ಅಷ್ಟೇನೂ ಗಡಿಬಿಡಿಯಿರಲಿಲ್ಲ. ಪ್ಯಾಕಿಂಗ್ ಮುಗಿಸಿ ಊಟ ಮಾಡಲು ಹೊರಟ ಹರಿ. +” ಎಲ್ಲಾ ಪ್ಯಾಕ್ ಮಾಡಿಕೊಂಡ್ಯಾ ಹರಿ?” ಎಂದು ಅಪ್ಪ ಕೇಳಿದರು. +” ಹುಂ ಅಪ್ಪ. ಎಲ್ಲ ಇಟ್ಕೊಂಡಿದೀನಿ.” +” ಬೇಜಾರಾಗಬೇಡ ಕಣೋ. ನಾವು ಬಂದು ಹೋಗ್ತಾ ಇರ್ತೀವಿ. ಒಂದೆರಡು ತಿಂಗಳಷ್ಟೇ, ಆಮೇಲೆ ತಾನೆ ಸರಿಹೋಗುತ್ತೆ. ಕೆಲಸದ ಕಡೆ ಗಮನ ಹರಿಸು. ನಾವು ಆರಾಮಾಗಿರ್ತೀವಿ ಇಲ್ಲಿ..” +” ಹುಂ ಅಪ್ಪ. ನೀವು ಆರೋಗ್ಯದ ಕಡೆ ಗಮನ ಕೊಡಿ ತಿಂಗಳಿಗೊಮ್ಮೆಯಾದರೂ ಬಂದು ಹೋಗ್ತೀನಿ.” +” ಹುಂ ಆಯ್ತು.” +ಊಟ ಮುಗಿಸಿದ ನಂತರ ರೆಡಿಯಾಗಲು ಹೊರಟ ಹರಿ. ಹತ್ತುವರೆಯಾಗಿತ್ತು. ಮನೆಯಿಂದ ಬಸ್ಟ್ಯಾಂಡಿಗೆ ಹೋಗಲು ಕನಿಷ್ಠಪಕ್ಷ ಮೂವತ್ತು ನಿಮಿಷಗಳಾದರೂ ಬೇಕಿತ್ತು. ಹೀಗಾಗಿ ಹೊತ್ತುವರೆಗೆ ಮನೆಗೆ ಬಿಡಲು ಸಿದ್ಧನಾದ, ಅರ್ಧ ಗಂಟೆ ಮುಂಚೆ ಹೋಗುವುದು ಒಳಿತೆಂದು. ಕ್ಯಾಬ್ ಗಾಗಿ ಕಾಯುತ್ತಾ ಕುಳಿತಿದ್ದ ಹರಿ, ಬಂದಕೂಡಲೇ ಹೊರಟ. ಬಸ್ಟ್ಯಾಂಡಿನವರೆಗೆ ನಾವು ಬರುತ್ತೇವೆ ಎಂದರೂ ಬೇಡವೆಂದು ಮನೆಯಲ್ಲೇ ಇರಲು ಹೇಳಿದ ಅಪ್ಪ-ಅಮ್ಮನಿಗೆ. ಅಷ್ಟು ರಾತ್ರಿಯಲ್ಲಿ ವಾಪಸ್ಸು ಬರುವುದು ಕಷ್ಟವೆಂದು, ಅವರು ಕೂಡ ಸುಮ್ಮನಾದರು. ಮಗನನ್ನು ತಬ್ಬಿಕೊಂಡು ” ಹೋಗಿ ಬಾ ಹುಷಾರು.” ಎಂದು ಕಣ್ಣೀರು ಹಾಕಿದರು ಅಮ್ಮ. ಮಗನ ಸಪ್ಪೆ ಮುಖ ನೋಡಿ ಅಪ್ಪನಿಗೂ ಬೇಜಾರಾಯಿತು. ಅನ್ನಕ್ಕಾಗಿ ಇದೆಲ್ಲ ಮಾಡಲೇಬೇಕೆಂದು ಅವರಿಗೂ ತಿಳಿದಿತ್ತು. ಹೀಗಾಗಿ ಸಮಾಧಾನ ಮಾಡಿಕೊಂಡರು. ” ಹೋಗಿಬರುತ್ತೇನೆ ಅಪ್ಪ, ಅಮ್ಮ.” ಎಂದು ಹೇಳಿ, ಅವರ ಕಾಲಿಗೆ ನಮಸ್ಕರಿಸಿ, ಮನೆಯಿಂದ ಹೊರಟ. ಮನೆಯ ಬಾಗಿಲಿನಿಂದಲೇ ಮಗನನ್ನು ಕಳುಹಿಸಿಕೊಟ್ಟರು. +” ಬಾಯ್.” ಅಂದು ಕೈಬೀಸಿ ಹೊರಟ. +” ಬಸ್ ಹೊರಟಿದೆ ಹೋಗ್ ಬರ್ತೀನಿ. ಬಾಯ್ .ಮಿಸ್ ಯು.” ಎಂಬ ಮೆಸೇಜ್ ಸ್ಕ್ರೀನಿನ ಮೇಲೆ ಬರುತ್ತಲೇ ಮೊಬೈಲನ್ನು ಕೈಗೆತ್ತಿಕೊಂಡಳು ಅನೂಷಾ. +” ಹೂ ಕಣೋ. ಸರಿ ಹೋಗ್ಬಾ, ಹುಷಾರು, ಟೇಕ್ ಕೇರ್. ಮಿಸ್ ಯು ಕಣೋ, ಬೆಳಗ್ಗೆ ರೀಚ್ ಆದ್ಮೇಲೆ ಮೆಸೇಜ್ ಮಾಡು. ಬಾಯ್.” +” ಹುಂ ಆಯ್ತು ಬಾಯ್ ಗುಡ್ ನೈಟ್.” +” ಗುಡ್ ನೈಟ್.” + +ಕಣ್ಣುಬಿಟ್ಟಾಗ ಹೈದರಾಬಾದಿನಲ್ಲಿದ್ದ ಹರಿ. ಮೊದಲಬಾರಿಗೆ ಕಾಲಿಡುತ್ತಿದೆ. ಹೇಗಿರುತ್ತದೋ ಏನೋ ಎನ್ನುವ ದುಗುಡ ಅವನಲ್ಲಿತ್ತು. ಬಸ್ ಇಳಿಯುತ್ತಲೇ, ಕ್ಯಾಬ್ ಮಾಡಿಕೊಂಡು ಕಂಪನಿಯವರು ಬುಕ್ ಮಾಡಿದ್ದ ಹೋಟೆಲಿಗೆ ಹೋದ. +ಒಟ್ಟು ನಲವತ್ತು ಜನರನ್ನು ಅಪಾಯಿಂಟ್ ಮಾಡಿಕೊಂಡಿದ್ದ ಕಂಪನಿಯವರು, ಎಲ್ಲರಿಗೂ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು. ಒಂದು ವಾರ ರೂಮಿನಲ್ಲಿದ್ದು, ಅನಂತರ ಬೇರೆಕಡೆಗೆ ರೂಮ್ ನೋಡಿಕೊಳ್ಳಬಹುದಿತ್ತು. ಅಥವಾ, ಅದೇ ರೂಮಿಗೆ ಹಣವನ್ನು ಕೊಟ್ಟು ಮುಂದುವರಿಸಲೂ ಬಹುದಿತ್ತು. ಅಲ್ಲಿಯ ಹವಾಮಾನ ಹಾಗು ಊಟ ತಿಂಡಿಗಳ ಪದ್ಧತಿಗೆ ಹೊಂದಿಕೊಳ್ಳಲು ಹರಿಗೆ ಒಂದು ತಿಂಗಳು ಬೇಕಾಯಿತು. ಅಷ್ಟರಲ್ಲಾಗಲೇ ಹರಿಗೂ ಒಂದು ಐದಾರು ಜನ ಸ್ನೇಹಿತರಾಗಿದ್ದರು. ಅದರಲ್ಲಿ ಇಬ್ಬರು ಕರ್ನಾಟಕದವರೇ ಆಗಿದ್ದರು. ಹೀಗಾಗಿ ಅದೇನು ದೊಡ್ಡ ತೊಂದರೆಯಾಗಲಿಲ್ಲ ಹದಿನೈದು ದಿನಗಳ ನಂತರ ಮೂರು ಜನ ಸೇರಿ, ಒಂದು ಮನೆಯನ್ನು ಬಾಡಿಗೆಗೆ ಹಿಡಿದರು. ಊಟಕ್ಕೆ ಹತ್ತಿರದಲ್ಲೆ ಇದ್ದ ಮೆಸ್ಸಿಗೆ ಹೋಗುತ್ತಿದ್ದರು. ಹೀಗೆ ಹೈದರಾಬಾದಿನ ಜೀವನ ಸುಖಮಯವಾಗಿಲ್ಲದಿದ್ದರೂ, ಕಷ್ಟಕರವಾದದ್ದುಂತು ಆಗಿರಲಿಲ್ಲ. ನಡುವೆ ಒಂದು ಬಾರಿ ಮನೆಗೆ ಕೂಡ ಹೋಗಿ ಬಂದಿದ್ದ. ಅನೂಷಾಳಿಗೆ ಹಾಗೂ ಮನೆಗೆ ತಪ್ಪದೇ ಕಾಲ್ ಮಾಡುತ್ತಿದ್ದ. ಎಲ್ಲವೂ ಒಂದು ತೂಕದ ಮೇಲೆ ನಡೆದಿತ್ತು. +ಟ್ರೈನಿಂಗ್ ಪೇರಿಯಡ್ ಎರಡು ತಿಂಗಳಿತ್ತು. ಅದಾದ ನಂತರ ಅವರಿಗೆ ಒಂದು ಪೋಸ್ಟ್ ಸಿಗಲಿತ್ತು. ಎರಡು ತಿಂಗಳು ಕಳೆದ ನಂತರ ಅದು ಕೂಡ ಆಯಿತು. ಹಾಗೆ ಮನೆಯ ಅಟ್ಯಾಚ್ಮೆಂಟ್ ಕಡಿಮೆಯಾಗಿತ್ತು. ಹೀಗೆ ಸುಗಮವಾಗಿ ಕೆಲಸ ಸಾಗಿತ್ತು. +(ಮುಂದುವರೆಯುವುದು) \ No newline at end of file diff --git a/PanjuMagazine_Data/article_1034.txt b/PanjuMagazine_Data/article_1034.txt new file mode 100644 index 0000000000000000000000000000000000000000..e69de29bb2d1d6434b8b29ae775ad8c2e48c5391 diff --git a/PanjuMagazine_Data/article_1035.txt b/PanjuMagazine_Data/article_1035.txt new file mode 100644 index 0000000000000000000000000000000000000000..33e07bfae40af010c4d9d593ea4abd423cc9aaf3 --- /dev/null +++ b/PanjuMagazine_Data/article_1035.txt @@ -0,0 +1,56 @@ +ಬಾನಿನಲ್ಲಿ ಬಣ್ಣಗಳು ಮಾತಾಡತೊಡಗಿದ್ದವು. +ಹೋಳಿ ಹಬ್ಬದ ಸಂಜೆ. ಅವನು ಒಂದರ ಹಿಂದೊಂದು ಸಿಗರೇಟುಗಳನ್ನು ಸುಡುತ್ತಾ ಸುಮ್ಮನೆ ಸಮುದ್ರವನ್ನು ದಿಟ್ಟಿಸುತ್ತಿದ್ದ. ಮಾತನಾಡುವುದಕ್ಕೇನೂ ಇಲ್ಲವೆಂಬಂತೆ ಅವಳೂ ತುಟಿ ಬಿಚ್ಚಲಿಲ್ಲ. ಹನ್ನೊಂದು ವರ್ಷಗಳ ಸುದೀರ್ಘ ಅವಧಿಯ ನಂತರ ಇಬ್ಬರೂ ಆಕಸ್ಮಿಕವಾಗಿ ಪಣಂಬೂರಿನ ಸಮುದ್ರತಟದಲ್ಲಿ ಎದುರುಬದುರಾಗಿದ್ದರು. ಅವನು ಸರಕಾರಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಅವಳು ನಗರದಲ್ಲಿ ತಳವೂರುತ್ತಿರುವ ದಂತ ವೈದ್ಯೆ. ಅಂದಹಾಗೆ ಇಬ್ಬರೂ ಒಂದಾನೊಂದು ಕಾಲದಲ್ಲಿ ಪ್ರೇಮಿಗಳು. +ಎಷ್ಟು ಚೆನ್ನಾಗಿದ್ದ ಇವ ಥೇಟು ಶಾರೂಖನಂತೆ, ಚಾಕ್ಲೇಟು ಬಾಯ್ ಇಮೇಜ್ ಇದ್ದ ಹುಡುಗ. ಒಣಕಲಾಗಿ ಹೋಗಿದ್ದಾನೆ. ಗಡ್ಡ ಬಿಟ್ಕೊಂಡು ಫಿಲಾಸಫರ್ ಥರ ಕಾಣ್ತಾ ಇದ್ದಾನೆ. ಅವಳು ಸುಮ್ಮನೆ ಮರುಗಿದಳು. +ಡಾರ್ಕ್ ಸರ್ಕಲ್ ಎಂದರೆ ಹೌಹಾರುತ್ತಿದ್ದ, ಹೆಚ್ಚಿದ ಸೌತೆಕಾಯಿಯ ಹೋಳುಗಳನ್ನು ಬ್ಯಾಗಿನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದ ಹುಡುಗಿಗೆ ಈಗ ಕನ್ನಡಕವೂ ಬಂದಿದೆ. ಅವನೂ ಸುಮ್ಮನೆ ಯೋಚಿಸಿದ. ಆದರೂ ಏನೂ ಅನ್ನಲಿಲ್ಲ. +"ಈಗಲೂ ಪದ್ಯ ಬರೆಯುತ್ತೀಯಾ ನೀನು?", ಅವಳು ಕೇಳಿದಳು. +"ಇಲ್ಲ. ಪೆನ್ನು ಹಿಡಿದರೆ ಸಾಕು, ಶೋಕಗೀತೆಗಳೇ ಬರುತ್ತಿದ್ದವು. ಕವಿತೆಗಳಿಗೆ ಗುಡ್ ಬೈ ಹೇಳಿಬಿಟ್ಟೆ. ಗದ್ಯವೇ ಓಕೆ ನಂಗೆ", ಮರಳಿನ ನಡುವೆ ಸಿಕ್ಕಿದ ಒಂದು ಚಿಕ್ಕ ಕಲ್ಲನ್ನು ನಿರ್ಲಿಪ್ತನಾಗಿ ಅವನು ಸಮುದ್ರಕ್ಕೆಸೆದ. +"ಒಳ್ಳೇ ದೇವದಾಸ್ ನೀನು", ಅವಳಂದಳು. +ಅವನು ಈ ಬಾರಿ ಮಾತಾಡಲಿಲ್ಲ. +"ಮೈಸೂರಿನಲ್ಲಿ ಎಮ್. ಬಿ. ಬಿ. ಎಸ್ ಮುಗಿಸಿ ಐದು ವರ್ಷ ಸಿಂಗಾಪುರದಲ್ಲಿದ್ದೆ. ಈಗ ಇಲ್ಲೇ ಡೆಂಟಲ್ ಕ್ಲಿನಿಕ್ ಇಟ್ಕೊಂಡಿದ್ದೀನಿ. ಗಂಡ ಬೆಂಗಳೂರಿನಲ್ಲಿದ್ದಾರೆ" +"ಹೂಂ. ಗುಡ್" +"ಎರಡು ವರ್ಷದ ಹಿಂದೆ ಫೇಸ್ ಬುಕ್ಕಿನಲ್ಲಿ ನಿಂಗೆ ನಂಬರ್ ಕೊಡು ಅಂತ ಮೆಸೇಜ್ ಹಾಕಿದ್ದೆ.", ಅವಳ ದನಿಯಲ್ಲಿ ಕಂಪ್ಲೇಂಟಿತ್ತು. +"ನನ್ನ ಫೇಸ್ ಬುಕ್ ಅಕೌಂಟಿನಲ್ಲೇ ಫೋನ್ ನಂಬರ್ ಹಾಕಿಟ್ಟಿದ್ದೇನೆ ನಾನು. ನೀನೇನು ಸೆಪರೇಟಾಗಿ ಕೇಳೋದು" +ಈ ಬಾರಿ ಅವಳು ಮಾತನಾಡಲಿಲ್ಲ. +"ಹೋಗುವಾಗ ನಂಬರ್ ಕೊಟ್ಟು ಹೋಗುತ್ತೇನೆ. ಡೋಂಟ್ ವರಿ", ಅವನಿಂದ ವಿನಾಕಾರಣ ಒಂದು ನಿರ್ಲಕ್ಷ್ಯದ ಧಾಟಿ. +"ಮಹದುಪಕಾರ ಮಾಡ್ಬಿಟ್ರು ಸಾಹೇಬ್ರು. ಯಾಕೋ ಮದುವೆಯಾಗಲಿಲ್ಲ ನೀನು ಪೆದ್ ಮುಂಡೇದು?" +"ಹಲೋ ಮ್ಯಾಡಮ್. ನೆಟ್ಟಗೆ ಮೂವತ್ತೂ ಆಗಲಿಲ್ಲ ನಂಗೆ ಓಕೆ!!" +"ಇನ್ನೇನು ನಲವತ್ತಾಗೋದಿಕ್ಕೆ ಕಾಯ್ತಾ ಇದೀಯಾ?" +"ಕೌನ್ಸಿಲಿಂಗ್ ತಗೊಳ್ತಾ ಇದೀನಿ. ಇನ್ನೊಂದು ವರ್ಷದಲ್ಲಿ ಮುಗೀಬೋದು. ಆಮೇಲೆ ಮದುವೆ, ಮುಂಜಿ ಎಲ್ಲಾ" +"ಕೌನ್ಸಿಲಿಂಗಾ, ಅದೇನೋ ಆಗಿದೆ ನಿಂಗೆ ದೊಡ್ರೋಗ?" +"ನೀನು ಇದ್ದಕ್ಕಿದ್ದಂತೆ ಮಾಯವಾದ ಮೇಲೆ ಬದುಕುವುದೇ ಕಷ್ಟವಾಗಿ ಹೋಯಿತು. ಮೊದಲು ಹಾಳು ಇನ್ಫಾಚುವೇಷನ್ ಅಂದ್ಕೊಂಡೆ. ಅನಂತರ ಟೈಮ್ ವಿಲ್ ಹೀಲ್ ಅಂತ ನಂಗೇ ಹೇಳ್ಕೊಂಡೆ. ಗವರ್ಮೆಂಟ್ ಜಾಬ್ ಅಂತ ಚಂಡೀಗಢ್ ನಲ್ಲಿ ಸೆಟಲ್ ಆಗ್ಬಿಟ್ಟೆ. ವರ್ಷಗಳು ಕಳೆದಂತೆ ಎಲ್ಲಾನೂ ಸರಿಯಾಗೋದು ಬಿಟ್ಟು ಇನ್ನಷ್ಟು ಡಿಪ್ರೆಶನ್ ಗೆ ಬಿದ್ದುಬಿಟ್ಟೆ. ಯಾವ ಸಂಬಂಧಗಳಲ್ಲೂ ಗಟ್ಟಿತನ ಬರಲಿಲ್ಲ. ಇನ್ ಸೆಕ್ಯೂರಿಟಿಯ ಕೆಟ್ಟಶಾಪ ತಗಲ್ಹಾಕ್ಕೊಂಡು ಬಿಡ್ತು." +"ನೀವು ಹಾಳು ಹುಡುಗರೇ ಹೀಗೆ. ಕೆಲವು ನೆನಪುಗಳನ್ನು ಹಂಗೇ ಬಿಡಬೇಕು ಕಣೋ" +"ಸುಮ್ಮನೆ ಉಸಿರಾಡುತ್ತಿದ್ದೆ, ಜೀವಂತವಾಗಿದ್ದೇನಷ್ಟೇ ಅನ್ನೋ ಹಾಗೆ. ನಾಲ್ಕೈದು ವರ್ಷ ತಾನೇ ಸರಿಯಾಗುತ್ತೇನೋ ಅಂತ ಕಾದೆ. ಕಣ್ಣು ಕಿತ್ತು ಬರುವಷ್ಟು ಓದಿದೆ. ಪುಟಗಟ್ಟಲೆ ಬರೆದು ರಾಶಿ ಹಾಕಿದೆ. ಬೋರ್ ಡಮ್ ಕಿಲ್ಡ್ ಮಿ. ಇಟ್ ಸ್ಟಿಲ್ ಕಿಲ್ಸ್ ಮಿ" +"ಮತ್ತೆ?" +"ಮತ್ತೇನೂ ಇಲ್ಲ. ಡಾಕ್ಟರು ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಅಂತ ಲೇಬಲ್ ಹಾಕಿಬಿಟ್ಟಿದ್ದರು. ಅದ್ಕೇ ಮೂರು ವರ್ಷದಿಂದ ಕೌನ್ಸೆಲಿಂಗ್ ತಗೊಳ್ತಾ ಇದೀನಿ" +ನಡುವಿನಲ್ಲೊಂದು ನೀರವ ಮೌನ. ಸಮುದ್ರದ ಚಿಕ್ಕ ಅಲೆಯೊಂದು ಬಂದು ತೀರದ ಒದ್ದೆ ಮರಳಿನ ಮೇಲೆ ತನ್ನಷ್ಟಕ್ಕೆ ತಾನು ಹಾಯಾಗಿ ಓಡಾಡಿಕೊಂಡಿದ್ದ ಒಂದು ಅರ್ಧ ಇಂಚಿನ ಪುಟಾಣಿ ಏಡಿ ಮರಿಯೊಂದನ್ನು ಸದ್ದಿಲ್ಲದೆ ನುಂಗಿಹಾಕಿತು. +"ಐ ಡೋಂಟ್ ನೋ ವ್ಹಾಟ್ ಟು ಸೇ! ಫಾರ್ಗಿವ್ ಮಿ ಇಫ್ ಪಾಸಿಬಲ್" +"ಹಾಗೇನೂ ಇಲ್ಲ. ನೀನು ನನ್ನ ಲೈಫ್ ನಲ್ಲಿ ಬಂದು ಹೋಗಿ ಎಲ್ಲಾ ಅಲ್ಲೋಲಕಲ್ಲೋಲವಾದ ಮೇಲೆ ನನಗೆ ಇದು ಗೊತ್ತಾಯಿತಷ್ಟೇ. ಅಂದ ಹಾಗೆ ಬಾಲ್ಯದಿಂದಲೇ ಇದು ನನ್ನನ್ನು ಮೈಲ್ಡ್ ಆಗಿ ಆವರಿಸಿಕೊಂಡಿತ್ತು ಅಂತ ನಿಧಾನಕ್ಕೆ ನಂಗೆ ಕೌನ್ಸೆಲಿಂಗ್ ಮೂಲಕ ಗೊತ್ತಾಯ್ತು. ನೀನೊಂದು ಒಣ ನೆಪ ಆದೆ ಅಷ್ಟೇ ನಂಗೆ" +ಅವನು ಜೇಬಿನಿಂದ ಪುನಃ ಸಿಗರೇಟೊಂದನ್ನು ತೆಗೆದು ಲೈಟರ್ ನಿಂದ ಹೊತ್ತಿಸಿದ. ಅವಳ ಕಣ್ಣಿಗೆ, ಅವನ ಸಿಗರೇಟಿನ ಹೊಗೆಯ ತೆಳ್ಳನೆಯ ಪರದೆ ಅಸ್ತಮಿಸುತ್ತಿದ್ದ ಸೂರ್ಯನನ್ನು ಒಂದು ಕ್ಷಣ ಮಬ್ಬಾಗಿಸಿತು. ಅವಳ ಕೈ ಬೆರಳುಗಳು ಸೀರೆಯ ಸೆರಗಿನ ತುದಿಯೊಂದಿಗೆ ಬಿಗಿಯಾಗಿ ಬೆಸೆಯುತ್ತಾ, ಬಿಡಿಸಿಕೊಳ್ಳುತ್ತಾ ಬ್ಯುಸಿಯಾಗಿದ್ದವು. +"ಅದೆಷ್ಟೋ ಸಿಗರೇಟು ಸೇದ್ತೀಯಾ. ತುಟಿಯೆಲ್ಲಾ ಕಪ್ಪಗಾಗಿ ಬಿಟ್ಟಿದೆ ನೋಡು" +"ಯಾವತ್ತೂ ಇಲ್ಲ. ಸ್ವಲ್ಪ ಟೆನ್ಷನ್ ಆಗ್ಬಿಟ್ರೆ ಅಷ್ಟೆ", ಹೊಗೆಯ ಜೊತೆ ಸುಳ್ಳೂ ಸಲೀಸಾಗಿ ಅವನ ತುಟಿಯಿಂದ ಹೊರಬಿತ್ತು. +"ಬೇಗ ಮದುವೆ ಆಗ್ಬಿಡು ಮಾರಾಯ. ಒಬ್ಳು ಸೋಲ್ ಮೇಟ್ ಅಂತ ಬಂದ್ಬಿಟ್ರೆ ಎಲ್ಲಾನೂ ಸರಿಹೋಗುತ್ತೆ. ತುಂಬಾ ಲೋನ್ಲಿ ಆಗ್ಬಿಟ್ಟಿದ್ದೀಯ ನೀನು ಅಷ್ಟೇ" +"ಹೂಂ…" +"ಅದ್ಯಾವ ಟೈಪು ಹುಡುಗಿ ಬೇಕೋ ನಿಂಗೆ?" +"ಗೊತ್ತಿಲ್ಲ. ಎಕ್ಸ್ಪೆಕ್ಟೇಷನ್ನು ಅಂದ್ರೆ ಭಯವಾಗುತ್ತೆ. ದೇ ಆಲ್ವೇಸ್ ಹರ್ಟ್. ಸೋ ಅಂಥಾ ಕನಸುಗಳು ಬೇಡ್ವೇ ಬೇಡ" +ಗಾಳಿಯ ಬಿಂಕದ ಚಲನೆಗೆ ತೀರದ ತೆಂಗಿನಮರದ ಉದ್ದುದ್ದ ಗರಿಗಳು ತಲೆದೂಗಿದವು. ದೂರದ ಮಸೀದಿಯೊಂದರಿಂದ ಮೌಲ್ವಿಯೊಬ್ಬ ಮೈಕಿನಲ್ಲಿ ಅಲ್ಲಾನನ್ನು ಕರೆದಂತಾಯಿತು. +"ನೋಡ್ತಾ ಇದೀಯಾ ಅಲ್ಲಿ. ಬಣ್ಣಗಳ ಹಬ್ಬ ಕಣೋ ಇವತ್ತು. ಮುಖ ಊದಿಸ್ಕೊಂಡು ಕೂತಿದೀಯ ನೋಡು ನೀನಿಲ್ಲಿ. ಆ ಪಾನಿಪುರಿ ಸ್ಟಾಲ್ ಪಕ್ಕದಲ್ಲಿ ಏನೋ ಹೋಳಿ ಫೆಸ್ಟಿವಲ್ ಈವೆಂಟ್ ಆಗ್ತಾ ಇದೆ ಅನ್ಸುತ್ತೆ. ಬಾ ಹೋಗೋಣ.", ಅವಳು ಎದ್ದು ಅವನ ಕೈ ಹಿಡಿದೆಳೆದಳು. ಅವಳ ಬಣ್ಣದ ಗಾಜಿನ ಬಳೆಗಳು ಅವನ ಕಿವಿಯ ಪಕ್ಕದಲ್ಲೇ ತನಗರಿವಿಲ್ಲದಂತೆ ಘಲ್ಲೆಂದವು. +"ಹೇಯ್, ಬಣ್ಣದೋಕುಳಿ ಕಣೇ, ಇನ್ನೇನಿರುತ್ತೆ. ಬಟ್ಟೆ ಹಾಳಾಗುತ್ತಪ್ಪ" +"ಬಣ್ಣಗಳ ಬಗ್ಗೆ ಅದೆಷ್ಟು ಚಂದ ಕವನ ಬರೀತಿದ್ದೆ ನೀನು. ಬಾರೋ ಸುಮ್ನೆ ನನ್ ಜೊತೆ. ಎಲ್ಲದಕ್ಕೂ ಗೋಳು ನಿಂದು" +"ಗೋಲ್ ಗಪ್ಪಾ ತಿನ್ಸು ಮೊದ್ಲು. ಆಮೇಲೆ ನೋಡೋಣಂತೆ" +"ಬಾ ಮತ್ತೆ. ಪಾನಿಪುರಿ ಚೆನ್ನಾಗ್ ಮಾಡ್ತಾನೆ ಈಯಪ್ಪ" +"ಗೋಲ್ ಗಪ್ಪಾ ಅನ್ನು. ಇಟ್ ಸೌಂಡ್ಸ್ ಕ್ಯೂಟ್", ಅವನು ರೊಳ್ಳೆ ತೆಗೆದ. +"ಎದ್ದೇಳು ಮಹಾನುಭಾವ", ಅವಳು ಜೋರಾಗಿ ಅವನ ಕೈ ಹಿಡಿದೆಳೆದಳು. ಅವನು ಎದ್ದು ಪ್ಯಾಂಟಿಗೆ ಅಂಟಿಕೊಂಡಿದ್ದ ಅಲ್ಪ ಸ್ವಲ್ಪ ಮರಳನ್ನು ಕೊಡವಿ ಹಾಕಿದ. ಷರ್ಟಿನ ಮೇಲೆ ತೆಳ್ಳನೆ ಹರಡಿಕೊಂಡಿದ್ದ ಬೂದಿಯ ಬಗ್ಗೆ ಅವನಿಗೆ ಪರಿವೆಯಿರಲಿಲ್ಲ. ಕೊನೆಯ ಪಫ್ ಎಂಬಂತೆ ದೀರ್ಘವಾಗಿ ಕಣ್ಮುಚ್ಚಿ ಸೇದಿ ಸಿಗರೇಟನ್ನು ತನ್ನ ಬೂಟುಕಾಲಿನಲ್ಲಿ ಹೊಸಕಿಹಾಕಿದ. +ಇಬ್ಬರೂ ಮೆಲ್ಲಗೆ ಒದ್ದೆ ಮರಳಿನ ಮೇಲೆ ಮೂಡಿ, ನೀರಿನೊಂದಿಗೆ ಮರೆಯಾಗುವ ಹೆಜ್ಜೆಗುರುತುಗಳನ್ನು ನೋಡುತ್ತಾ ಜೊತೆಜೊತೆಯಾಗಿ ಹೆಜ್ಜೆ ಹಾಕತೊಡಗಿದರು. +"ಅ ವಾಕ್ ಟು ರಿಮೆಂಬರ್" ಮೂವೀ ನೆನಪಿದ್ಯಾ ಅಂದ ಅವನು. +"ಹಲೋ, ಫ್ಲರ್ಟ್ ಮಾಡೋ ಕಾಲ ಮುಗಿದ್ಹೋಯ್ತು ನಂಗೆ", ಅಂದಳು ಅವಳು. +"ನನ್ಹಂಗೆ ಪೋಯೆಟಿಕ್ ಆಗಿ ಯಾವ ಹುಡುಗ ಫ್ಲರ್ಟ್ ಮಾಡ್ತಾನೆ ಹೇಳು", ಅವನ ತುಟಿಯಂಚಿನಲ್ಲೊಂದು ತುಂಟನಗೆ. +ಕ್ಷಣಗಳು ಸುಂದರವಾಗಿದ್ದಾಗ ಸಮಯಕ್ಕೂ ವಿನಾಕಾರಣ ಮುಂದಕ್ಕೋಡುವ ಅಧಿಕ ಪ್ರಸಂಗ. ಅಂತೂ ಇಂತೂ ಸ್ಟಾಲ್ ಬಂದೇ ಬಿಡ್ತು. +ಅವಳ ಫೋನು ಅದ್ಯಾವುದೋ ಹಿಂದಿ ಹಾಡಿನ ಟ್ಯೂನಿನಲ್ಲಿ ಅವಳ ವ್ಯಾನಿಟಿ ಬ್ಯಾಗಿನೊಳಗಿನಿಂದಲೇ ಹೊಡೆದುಕೊಳ್ಳಲಾರಂಭಿಸಿತು. ಅವಳು ಕ್ಯಾರೇ ಅನ್ನಲಿಲ್ಲ. ಐದು ಸೆಕೆಂಡುಗಳ ನಂತರ ಪುನಃ ಅದೇ ಟ್ಯೂನು. ಅದ್ಯಾರು ನೋಡೇ ಅಂತ ಅವನು ಕಣ್ಣಲ್ಲೇ ಅಂದ. ಒಲ್ಲದ ಮನಸ್ಸಿನಿಂದಲೇ ಅವಳು ಬ್ಯಾಗಿನ ಝಿಪ್ ತೆಗೆದಳು. ಹೋಮ್ ಸ್ಕ್ರೀನಿನಲ್ಲಿ ಕರೆ ಮಾಡುತ್ತಿರುವವರು ಯಾರೆಂದು ನೋಡುತ್ತಾ ಸುಮ್ಮನೆ ಕಟ್ ಮಾಡಿ ಮರುಮಾತಿಲ್ಲದೆ ಫೋನನ್ನು ಬ್ಯಾಗ್ ನಲ್ಲಿರಿಸಿದಳು. ಪತಿರಾಯನಿಗೆ ಒಂದು ಘಳಿಗೆಯೂ ಬಿಟ್ಟಿರಲಾಗುತ್ತಿಲ್ಲವೋ ಏನೋ ಎಂದು ಅವನು ಮನಸ್ಸಿನಲ್ಲೇ ಅಂದುಕೊಂಡ. ಮೊಂಡ ಬಿಲ್ಡಿಂಗ್ ಓನರ್! ನಾಳೆಯವರೆಗೂ ಬಾಡಿಗೆಗೆ ಕಾಯಬಾರದೇ, ದಿನಕ್ಕೆ ಹತ್ತು ಸಲ ಕಾಲ್ ಮಾಡುತ್ತಾನೆ ಎಂದು ಅವಳು ಮನದಲ್ಲೇ ತನ್ನ ಮನೆ ಮಾಲಿಕನಿಗೆ ಹಿಡಿಶಾಪ ಹಾಕಿದಳು. ಅವನೂ ಯಾರೆಂದು ಕೇಳಲಿಲ್ಲ. ಅವಳೂ ಸಮಜಾಯಿಷಿಯ ಗೋಜಿಗೆ ಹೋಗಲಿಲ್ಲ. ಇಬ್ಬರ ಅದೃಷ್ಟವೋ ಏನೋ, ಫೋನು ಇನ್ನೊಮ್ಮೆ ರಿಂಗಾಗಲಿಲ್ಲ. +"ಏಕ್ ಪ್ಲೇಟ್ ಗೋಲ್ ಗಪ್ಪಾ ಪ್ಲೀಸ್", ಅವನು ಸ್ಟೈಲಾಗಿ ಆರ್ಡರ್ ಕೊಟ್ಟ. ಅವನ ಪಂಜಾಬಿ ಮಿಶ್ರಿತ ಆಕ್ಸೆಂಟ್ ಗೆ ಅವಳು ಸುಮ್ಮನೆ ಮುಗುಳ್ನಕ್ಕಳು. +ಅಂಗಡಿಯವನು ನಸುನಗುತ್ತಾ ಗೋಲ್ ಗಪ್ಪಾ ತೆಗೆಯುತ್ತಾ ಖಾರದ ನೀರು ಅದರೊಳಗೆ ಸುರಿಯುವ ಬದಲು, ಬಣ್ಣದ ನೀರು ಸುರಿದ. ಸಮುದ್ರವನ್ನು ಕಣ್ಣಲ್ಲೇ ಅಳೆಯುತ್ತಾ, ಅವಳ ಜೊತೆ ಮಾತನಾಡುತ್ತಾ ನಿಂತ ಅವನಿಗೆ ಏನಾಗುತ್ತಿದೆಯೆಂದು ಗೊತ್ತಾಗುವಷ್ಟರಲ್ಲೇ ಬಣ್ಣದ ನೀರು ತುಂಬಿದ ಗೋಲ್ ಗಪ್ಪಾಗಳು ಅವನ ಮೇಲೆರಗಿದವು. ಅವನು ಸಾವರಿಸಿಕೊಂಡು ನೋಡುವಷ್ಟರಲ್ಲೇ ಅಂಗಡಿಯವನು "ಹ್ಯಾಪೀ ಹೋಲೀ" ಎಂದು ದೊಡ್ಡದಾಗಿ ನಗುತ್ತಾ ಬಣ್ಣದ ಮೂಟೆಯೊಂದಿಗೆ ಓಡೋಡುತ್ತಾ ಗುಂಪಿರುವ ಕಡೆಗೆ ಮರೆಯಾಗುತ್ತಿದ್ದ. +ಅವನನ್ನು ನೋಡಿ ಅವಳು ಈಗ ಬಿದ್ದು ಬಿದ್ದು ನಗತೊಡಗಿದಳು. +"ಯೂ ಮೇಡ್ ಆನ್ ಆಸ್ ಆಫ್ ಮೈಸೆಲ್ಫ್ ಹಾ", ಎಂದು ಹುಸಿನಗೆ ಬೀರುತ್ತಾ ಬಣ್ಣದ ನೀರಿನ ಬಾಲ್ದಿಯಲ್ಲಿ ತೋಯುತ್ತಾ ಇದ್ದ ತನ್ನ ತುಂಬು ತೋಳಿನ ಬಿಳಿ ಷರ್ಟನ್ನೂ ಲೆಕ್ಕಿಸದೆ ಅವನು ಬಣ್ಣಗಳನ್ನು ತುಂಬುತ್ತಾ ಅವಳೆಡೆಗೆ ಎಸೆಯಲು ಓಡತೊಡಗಿದ. ಅವಳೂ ತನ್ನ ಕಾಲೇಜು ದಿನಗಳು ಬಂದೇ ಬಿಟ್ಟಿತೇನೋ ಎಂಬಂತೆ ಬಿದ್ದು ಬಿದ್ದು ನಗುತ್ತಾ, ಎಡಗೈಯಲ್ಲಿ ಸೆರಗನ್ನೂ ಸಾವರಿಸಿಕೊಳ್ಳುತ್ತಾ, ಬಲಗೈಯಲ್ಲಿ ತನ್ನ ವ್ಯಾನಿಟಿ ಬ್ಯಾಗನ್ನೂ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ ಬಣ್ಣದಾಟ ಆಡುತ್ತಿರುವ ಗುಂಪಿನೆಡೆಗೆ ಖುಷಿಖುಷಿಯಾಗಿ ಓಡತೊಡಗಿದಳು. +ಅವಳೆಡೆಗೆ ಓಡುತ್ತಾ, ದೂರದಲ್ಲಿ ಮೆಲ್ಲಗೆ ಸಮುದ್ರದೆಡೆಗೆ ಜಾರುತ್ತಿರುವ ಕೆಂಪನೆಯ ಸೂರ್ಯನನ್ನು ಕಂಡು ಅವನಿಗೇಕೋ ತುಂಬಾನೇ ಖುಷಿಯಾಯಿತು. ಷರ್ಟಿನ ಮೇಲೆ ಸಣ್ಣಗೆ ಬಣ್ಣದ ನೀರಿನೊಂದಿಗೆ ಹರಿಯುತ್ತಿರುವ ಸಿಗರೇಟಿನ ಬೂದಿಯನ್ನು ಕಂಡು ಅಚ್ಚರಿಪಟ್ಟ. +ಮೊದಲಬಾರಿಗೆ ಅವನಿಗೆ ಸಿಗರೇಟಿನ ಆಷ್ ಸುಮ್ಮನೆ ಬೂದು ಬಣ್ಣದಷ್ಟೇ ಕಂಡಿತು. +ಧರೆಯಲ್ಲಿ ಬಣ್ಣಗಳು ಮಾತಾಡತೊಡಗಿದ್ದವು. +***** \ No newline at end of file diff --git a/PanjuMagazine_Data/article_1036.txt b/PanjuMagazine_Data/article_1036.txt new file mode 100644 index 0000000000000000000000000000000000000000..b041aea1df3449586132fe9e6dbc5bb0b6fb32fe --- /dev/null +++ b/PanjuMagazine_Data/article_1036.txt @@ -0,0 +1,65 @@ +ಪ್ರಶ್ನೆಗಳು: +೧. ೦೩.೦೨.೨೦೧೩ರಂದು ಬಿಡುಗಡೆಯಾದ ಖುಷ್ವಂತನಾಮ ದಿ ಲೆಸೆನ್ಸ್ ಆಫ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು? +೨. ವಾರಣಾಸಿ ಯಾವ ನದಿ ದಡದ ಮೇಲಿದೆ? +೩. ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು? +೪. ಟೆನ್ನಿಸ್‌ನಲ್ಲಿ ಗ್ರಾಂಡ್ ಸ್ಲ್ಯಾಮ್ ಟೆನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು? +೫. ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು? +೬. ೭೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ? +೭. ೨೦೧೨ ಡಿಸೆಂಬರ್ ೨೯ ರಿಂದ ನಡೆದ ಕೇರಳ ರಾಜ್ಯ ೫ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು? +೮. ೨೦೧೨ ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು? +೯. ೨೦೧೩ರ ಡಿಎಸ್‌ಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪೆಡದ ಸಾಹಿತಿ ಯಾರು? +೧೦. ೧೮೫೭ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು? +೧೧. ಪೊಲಿಟಿಕಲ್ ಡೈನಾಮಿಕ್ ಆಫ್ ಪಂಚಾಯತ್ ರಾಜ್ ಗ್ರಂಥ ಕರ್ತೃ ಯಾರು? +೧೨. ವಿಶ್ವದ ಮೊದಲನೆ ಮಹಾಯುದ್ಧ ಜರುಗಿದ ವರ್ಷ ಯಾವುದು? +೧೩. ವಿಶ್ವಸಂಸ್ಥೆ ಆರಂಭವಾಗುವ ಮೊದಲು ಇದ್ದ ಸಂಸ್ಥೆ ಯಾವುದು? +೧೪. ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮ ೧೮೫೭ರ ಮೇ ೧೦ ರಂದು ಎಲ್ಲಿ ಆರಂಭವಾಯಿತು? +೧೫. ಪ್ರಪ್ರಥಮ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಮಹಿಳಾ ಅಧ್ಯಕ್ಷೆ ಯಾರು? +೧೬. ೧೯೯೮ರ ಮೇ ೧೧ರಂದು ಭಾರತ ಎಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು? +೧೭. ಆಲಿಪ್ತ ಚಳುವಳಿ ಸ್ಥಾಪಿಸಿದ ಮೂರು ದೇಶಗಳ ಪೈಕಿ ಭಾರತ ಒಂದು ಉಳಿದವು ಯಾವುವು? +೧೮. ಶ್ರವಣಬೆಳಗೋಳದ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಿಸಿದವರು ಯಾರು? +೧೯. ಮಧ್ಯಪ್ರದೇಶ ಸರ್ಕಾರ ಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಿದೆ ಆ ಗಾಯಕಿ ಯಾರು? +೨೦. ಬಿಜಾಪುರದ ಮೂಲ ಹೆಸರೇನು? +೨೧. ಮಾನವನ ರಕ್ತಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು? +೨೨. ನೈಟ್‌ಹುಡ್ ಪುರಸ್ಕಾರವನ್ನು ಯಾವ ದೇಶ ನೀಡುತ್ತದೆ? +೨೩. ಪೆರಿಯಾರ್ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? +೨೪. ಪ್ರಕಾಶ ಪಡುಕೋಣೆ ಯಾವ ಕ್ರೀಡೆಗೆ ಹೆಸರಾಗಿದ್ದಾರೆ? +೨೫. ಬಾಂಬೆಯನ್ನು ಮಹಾರಾಷ್ಟ್ರ ಸರ್ಕಾರ ಮುಂಬಯಿ ಎಂದು ಯಾವ ವರ್ಷ ಬದಲಿಸಿತು? +೨೬. ಸಾಹಿತ್ಯದಲ್ಲಿ ನವರಸಗಳೆಂದರೆ ಯಾವುವು? +೨೭. ಶಬ್ದದ ವೇಗ ಎಷ್ಟು? +೨೮. ಜೇಡರ ಹುಳ ತನ್ನ ಬಲೆಯನ್ನು ಹೆಣೆಯಲು ತೆಗೆದುಕೊಳ್ಳುವ ಕಾಲ ಎಷ್ಟು? +೨೯. ಪಿನ್ ಕೋಡ್ ಎಂದರೇನು? +೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ. +ಈ ವಾರದ ಪ್ರಸಿದ್ಧ ದಿನಾಚರಣೆ +ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ +ಉತ್ತರಗಳು: +೧. ಖುಷ್ವಂತ್ ಸಿಂಗ್ +೨. ಗಂಗಾ +೩. ಮೂರಾರ್ಜಿ ದೇಸಾಯಿ +೪. ಮಹೇಶ್ ಭೂಪತಿ +೫. ಬಿ.ಆರ್.ಪಂತಲು +೬. ನಗರ ಪಾಲನೆ +೭. ಮನು ಬಳಿಗಾರ +೮. ಈಜಿಪ್ಟ್ +೯. ಜೀತ್ ತುಯ್ಯಿಲ್ +೧೦. ವಿ.ಡಿ.ಸಾವರ್ಕರ್ +೧೧. ಪಿ.ಸಿ.ಮಾಥುರ್ +೧೨. ೧೯೧೪ ರಿಂದ ೧೯೧೯ +೧೩. ಲೀಗ್ ಆಫ್ ನೇಷನ್ಸ್ +೧೪. ಮೀರತ್ +೧೫. ವಿಜಯಲಕ್ಷ್ಮಿ ಪಂಡಿತ್ +೧೬. ಪೋಖಾರಣ್ +೧೭. ಯುಗೋಸ್ಲಾವಿಯ, ಈಜಿಪ್ಟ್ +೧೮. ಚಾವುಂಡರಾಯ +೧೯. ಲತಾ ಮಂಗೇಶ್‌ಕರ್ +೨೦. ವಿಜಯಪುರ +೨೧. ಕಾರ್ಲ್‌ಲ್ಯಾಂಡ್ ಸ್ಲೈನರ್ +೨೨. ಇಂಗ್ಲೆಂಡ್ +೨೩. ಕೇರಳ +೨೪. ಬ್ಯಾಂಡ್ಮಿಂಟನ್ +೨೫. ೧೯೯೫ +೨೬. ರತಿ, ಶೋಕ, ಕ್ರೋಧ, ಜಿಗುಪ್ಸೆ, ಶಮ, ಹಾಸ್ಯ, ಉತ್ಸಾಹ, ಭಯ ಮತ್ತು ವಿಸ್ಮಯ +೨೭. ೧ ನಿಮಿಷಕ್ಕೆ ೨೦ಕಿ.ಮೀ ವೇಗದಲ್ಲಿ ಪ್ರಸಾರವಾಗುತ್ತದೆ +೨೮. ಕೇವಲ ೯೦ ಸೆಕೆಂಡುಗಳು +೨೯. ಪೋಸ್ಟಲ್ ಇಂಡೆಕ್ಸ್ ನಂಬರ್ +೩೦. ಆಶಾ ಬೋಸ್ಲೆ +***** \ No newline at end of file diff --git a/PanjuMagazine_Data/article_1037.txt b/PanjuMagazine_Data/article_1037.txt new file mode 100644 index 0000000000000000000000000000000000000000..f977f36f2167cc0c4729f2464bae2ffd7e3580bf --- /dev/null +++ b/PanjuMagazine_Data/article_1037.txt @@ -0,0 +1,7 @@ +ಸಮಾಜದಲ್ಲಿ ಎಲ್ಲರೂ ಗುರುತಿಸುವದು ಒಂದು ಒಳ್ಳೆಯ ಕೆಲಸಗಳಿಗೆ ಅಥವಾ ಅವರು ಮಾಡುವ ಕೆಟ್ಟ ಕೆಲಸಗಳಿಂದ ತಮ್ಮ ಹೆಸರನ್ನು ಮಾಡಿಕೊಂಡಿರುತ್ತಾರೆ. ಸಮಾಜದಲ್ಲಿರುವ ಕೆಲವರು ಸಮಾಜಕ್ಕೆ ಏನಾದರೂ ಮಾಡಬೇಕೆನ್ನುವ ಇಚ್ಚೆ ಹೊಂದಿರುತ್ತಾರೆ. ಆದರೆ ಕೆಲವು ತಾವಾಯಿತು ತಮ್ಮ ಪಾಡಾಯಿತು ಎನ್ನುವ ಮನೋಭಾವದವರೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ವಿಕಲಾಂಗನಾದರೂ ತನ್ನ ವಿಕಲತೆಯನ್ನು ನುಂಗಿಕೊಂಡು ಶಿರಹಟ್ಟಿ ತಾಲೂಕಿನಲ್ಲಿನ ಅಂಗವಿಕಲರ ಸಮಸ್ಯೆಗಳಿಗೆ ದ್ವನಿಯಾಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೌಲ್ಯಗಳನ್ನು ಬೆಳೆಸುತ್ತಿರುವ ಬಾಳೇಹೊಸೂರು ಗ್ರಾಮದ ಫಕ್ಕೀರೇಶ ಮ್ಯಾಟಣ್ಣವರ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ. +ಫಕ್ಕೀರೇಶ ಮ್ಯಾಟಣ್ಣವರ +ಶಿರಹಟ್ಟಿ ತಾಲೂಕಿನ ಕಟ್ಟ ಕಡೆಯ ಗ್ರಾಮವಾದ ಬಾಳೇಹೊಸೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಬಡ ಕುಟುಂಬದಲ್ಲಿ ಹುಟ್ಟಿನಿಂದಲೆ ಅಂಗವಿಕಲತೆಯನ್ನು ಹೊತ್ತುಕೊಂಡು ಹುಟ್ಟಿದ ಫಕ್ಕೀರೇಶ ತಮ್ಮ ಮನೆತನಕ್ಕೆ ಎಂದಿಗೂ ಭಾರ ಎನಿಸಿಕೊಳ್ಳಲಿಲ್ಲ. ಅಂಗವಿಕಲ ಮಕ್ಕಳು ಜನಿಸಿದರೆ ಅದೊಂದು ಶಾಪ ಎನ್ನುವಂತಾಗಿರುವಾಗ, ಫಕ್ಕೀರೇಶ ಅವರ ತಂದೆ ತಾಯಿಗಳು ಎಂದಿಗೂ ಹಾಗೆ ಅಂದುಕೊಳ್ಳಲಿಲ್ಲ. ವಿದ್ಯೆಯ ಕಡೆಗೆ ಹೆಚ್ಚು ಒತ್ತು ನೀಡಿದ ತಂದೆ ತಾಯಿಯರು ಅವನನ್ನು ಪಿಯುಸಿವರೆಗೆ ಓದಿಸಲು ಬಹಳ ಕಷ್ಟಪಟ್ಟರು. ಮುಂದೆ ತನ್ನ ವಿಕಲತೆಯನ್ನು ಮರೆಮಾಚುವಂತೆ ೧೯೯೭ ರಿಂದಲೆ ಅನೇಕ ಸಂಘಟನೆಗಳನ್ನು ಹುಟ್ಟು ಹಾಕುವ ಮೂಲಕ ಸಮಾಜದಲ್ಲಿನ ನೊಂದ ಜೀವಿಗಳ ಪಾಲಿಗೆ ಸ್ಪಂಧಿಸುವ ವ್ಯಕ್ತಿಯಾಗಿ ಗುರುತಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ತನ್ನ ಲವಲವಿಕೆಯ ನಡೆಯಿಂದ ಅನೇಕ ಸಂಘಟನೆಗಳು ಬೆಳೆದು ನಿಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾನೆ. +ಸದಾ ಜನರೊಂದಿಗೆ ಬೆರೆಯುವ, ಸಮಸ್ಯೆಗಳಿಗೆ ಸ್ಪಂದಿಸುವ ಫಕ್ಕೀರೇಶ ಅವರು ಸಾರ್ವಜನಿಕವಾಗಿ ತನ್ನ ಹೆಸರನ್ನು ಗುರುತಿಸಿಕೊಂಡಿದ್ದಾನೆ. ೨೦೦೩ ರಲ್ಲಿ "ಆಸರೆ" ಎಂಬ ಅಂಗವಿಕಲ ಕ್ಷೇಮಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿಯ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಶಿರಹಟ್ಟಿ ತಾಲೂಕಿನ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ಸಂಸ್ಥೆಯನ್ನು ಹುಟ್ಟು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಕಾಲಿನ ವಿಕಲತೆಯಿಂದ ಬಳಲುತ್ತಿರುವ ಈತ ಕೋಲು ಹಿಡಿದುಕೊಂಡೆ ಎಲ್ಲ ಕಡೆಗಳಲ್ಲಿಯೂ ಚಟುವಟಿಕೆಯಿಂದ ಭಾಗವಹಿಸುತ್ತಾನೆ. ಗ್ರಾಮದಲ್ಲಿ ಈತನ ಸಾರ್ವಜನಿಕ ಸ್ಪಂದನೆ ಈತನನ್ನು ರಾಜಕೀಯಕ್ಕೆ ಎಳೆದು ತರುವಂತೆ ಮಾಡಿದೆ. ಬಾಳೇಹೊಸೂರಿನ ಗ್ರಾಮದ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ವಿಕಲತೆಯ ತೊಂದರೆಯ ನಡುವೆ ಅವರು ಜನರ ನೋವಿಗೆ ಸ್ಪಂದಿಸುವ ರೀತಿ ಎಲ್ಲರಿಗೂ ಆಶ್ಚರ್ಯ ತರುವಂತಿದೆ. ಎಂದಿಗೂ ಆತನಿಗೆ ಬೇಸರವೆಂಬುದಿಲ್ಲ, ಬಡವರ, ನೊಂದವರ ಕೆಲಸಗಳನ್ನು ತಾನೆ ಕಚೇರಿಗಳಿಗೆ ಅಲೆದಾಡಿ ಎಲ್ಲ ರೀತಿಯಿಂದಲೂ ಸಹಾಯಕವಾಗುವಂತೆ ಮಾಡುವ ರೀತಿ ಉಳಿದವರಿಗೆ ಮಾದರಿ ಎನ್ನುವಂತಿದೆ. +ಭವ್ಯ ಕನಸುಗಳನ್ನು ಹೊತ್ತಿರುವ ಅಂಗವಿಕಲ ಆಶಾಕಿರಣವಾಗಿರುವ ಫಕ್ಕೀರೇಶ ಅವರು ಇದಿಗ ರಾಜ್ಯದ ಜವಳಿ ಸಚಿವ ಆರ.ವರ್ತೂರ ಪ್ರಕಾಶ ಅವರ ಯುವಸೇನೆಯ ಗದಗ ಜಿಲ್ಲಾ ಅಧ್ಯಕ್ಷನಾಗುವ ಮೂಲಕ ರಾಜ್ಯಮಟ್ಟದಲ್ಲಿ ತನ್ನ ಹೆಸರನ್ನು ಬೆಳೆಸಿಕೊಂಡಿದ್ದಾನೆ. ಆರ್.ವರ್ತೂರ ಪ್ರಕಾಶ ಅವರ ಆಪ್ತವಲಯದಲ್ಲಿ ಫಕ್ಕೀರೇಶ ಸಹಾ ಗುರುತಿಸಿಕೊಂಡಿರುವದು ವಿಶೇಷವಾಗಿದೆ. ಫಕ್ಕೀರೇಶ ಅವರ ಉದ್ದೇಶಿತ ಕಾರ್ಯ ಸಫಲವಾಗಲಿ ಎನ್ನುವದು ಹಾರೈಕೆಯಾಗಿದೆ. +-ದಿಗಂಬರ ಎಂ. ಪೂಜಾರ + ***** \ No newline at end of file diff --git a/PanjuMagazine_Data/article_1038.txt b/PanjuMagazine_Data/article_1038.txt new file mode 100644 index 0000000000000000000000000000000000000000..8057c22a48d5e20a6233002c478698392849444c --- /dev/null +++ b/PanjuMagazine_Data/article_1038.txt @@ -0,0 +1,10 @@ +ದೀಪಾವಳಿ ಮರಳಿ ಬಂದಿದೆ. ಆಫೀಸಿನ ಬಾಸಿನ ಟೇಬಲ್ ಮೇಲೀಗ ರಜೆಯ ಅರ್ಜಿಗಳೆಲ್ಲ ನಾ ಮೊದಲು, ತಾ ಮೊದಲು ಎಂದು ತಳ್ಳಾಡುತ್ತಾ ಸಾಲಾಗಿ ನಿಂತಿವೆ. ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎಂದು ಯೋಚಿಸುತ್ತಿರುವಾಗಲೇ ಅವರ ಹೆಂಡತಿ ಕಾಲ್ ಮಾಡಿದ್ದಾರೆ. ‘ಹಬ್ಬಕ್ಕೆ ಊರಿಗೆ ಹೋಗಲಿಕ್ಕಿದೆ. ಟಿಕೇಟು ಬುಕ್ ಮಾಡೋದು ಮರೀಬೇಡಿ!” ಎಂದು ನೆನಪಿಸಿದ್ದಾಳೆ. ಹೀಗೆ ಬಾಸೆಂಬ ಬಾಸೇ ರಜೆ ಹಾಕಿ ಹೋದ ಆಫೀಸಿನಲ್ಲಿ ಕೆಲವರಿಗಷ್ಟೇ ರಜೆ ಮಂಜೂರಾಗಿದೆ. ಅವರೆಲ್ಲ ಸಂಭ್ರಮದಲ್ಲಿ ಊರಿನ ಬಸ್ಸು ಹತ್ತುತ್ತಿದ್ದರೆ ರಜೆ ಸಿಗದ ಹತಾಷರು ಹೊರಟವರಿಗೆ ಟಾಟಾ ಹೇಳಿ ಬೈಕು, ಬಸ್ಸುಗಳ ಹತ್ತಿ ತಮ್ಮ ತಮ್ಮ ಏರಿಯಾಗಳತ್ತ ಹೊರಟಿದ್ದಾರೆ. +ದೀಪಾವಳಿ ಮರಳಿಬಂದಿದೆ: ಊರಿಗೆ ಹೊರಟ ಬಸ್ಸುಗಳಿಗೆ, ಹಳ್ಳಿಯ ಹಂಚು ಮನೆಗೆ, ಪಟ್ಟಣದ ಕಾಂಕ್ರೀಟು ಕಟ್ಟಡಕ್ಕೆ, ಊರಿನ ಗೂಡಂಗಡಿಗೆ, ಹೊಸೂರಿನ ಪಟಾಕಿ ಸಂತೆಯ ಬೀದಿಗೆ, ವರಲೆ ಹಿಡಿದ ದ್ವಾರಬಾಗಿಲಿಗೆ, ಬಣ್ಣ ಮಾಸಿದ ಹೊಸಿಲಿಗೆ, ವರುಷದಿಂದ ಮೂಲೆಯಲ್ಲಿದ್ದ ಹಣತೆಗಳಿಗೆ, ಅಮ್ಮನ ಕೈಲಿ ಸಗಣಿ-ನೀರು ಬಳಿಸಿಕೊಂಡ ಅಂಗಳಕ್ಕೆ, ಕೊಂಬು ಕುಣಿಸುತ್ತಾ ಸ್ನಾನ ಮಾಡಿಸಿಕೊಳ್ಳುತ್ತಿರುವ ಕೊಟ್ಟಿಗೆಯ ದನಕರುಗಳಿಗೆ, ಸರಕಾರಿ ಶಾಲೆಯ ಫೋರನೊಬ್ಬ ಮಾಸ್ತರಿಗೆ ಕಾಣದಂತೆ ಕೋವಿ-ಮದ್ದು ಮುಚ್ಚಿಟ್ಟುಕೊಂಡಿರುವ ಪಾಟಿ ಚೀಲಕ್ಕೆ, ಪಟಾಕಿ ಹೊಡೆಸುತ್ತಿರುವ ಪುಟ್ಟುವಿನ ಕೈಗೆ, ಖಾಲಿಯಾದ ಅಪ್ಪನ ಜೇಬಿಗೆ… ದೀಪಾವಳಿ ಎಲ್ಲೆಡೆಗೂ ಬಂದಿದೆ! +ದೀಪಾವಳಿ ಬರಲಿರುವ ಸುಳಿವು ಎಲ್ಲರಿಗಿಂತ ಮೊದಲು ಊರಿನ ಚಿಣ್ಣರಿಗೆ ಸಿಕ್ಕಿದೆ. ಉಪೇಂದ್ರಣ್ಣನ ಅಂಗಡಿಯ ಪಡಸಾಲೆಯಲ್ಲಿ ಕೋವಿ-ಮದ್ದುಗಳ ಮಾಲೆಗಳು ನೇತಾಡತೊಡಗಿದ ದಿನ ಸಂಜೆಯೇ ಊರಿನ ಪೋರರೆಲ್ಲ ತಮ್ಮ ತಮ್ಮ ಅಮ್ಮಂದಿರ ಮುಂದೆ ಹಾಜರಾಗಿದ್ದಾರೆ . “ಪಟಾಕಿ ತಕಂಬುಕ್ ದುಡ್ ಕೊಡೇ” ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅವರಲ್ಲಿ ಕೆಲವರಿಗೆ ಸುಲಭವಾಗಿ ಸಿಕ್ಕ ಹಣ ಇನ್ನು ಕೆಲವರಿಗೆ ನಾಲ್ಕೆಂಟು ಒದೆಗಳ ಸಮೇತ ಸಿಕ್ಕಿದೆ. ಹೀಗೆ ಕಣ್ಣೀರು ಹರಿಸಿ ಪಡೆದುಕೊಂಡ ಹಣದಲ್ಲಿ ಕೊಳ್ಳಬೇಕೆಂದಿರುವ ಪಟಾಕಿಗಳು ಹಲವಿದ್ದರೂ ಕೋವಿ ಹಾಗೂ ಗುಂಡಿನ ರೀಲುಗಳು ಎಲ್ಲದಕ್ಕಿಂತ ಮೊದಲು ರಂಗ ಪ್ರವೇಶಿಸಿವೆ. ಅಪ್ಪ ಅಥವಾ ಅಮ್ಮ ಕೊಟ್ಟ ಹಣವನ್ನು ತೆಗೆದುಕೊಂಡು ಮಾಮೂಲಿ ಹುಡುಗನಂತೆ‌ ಮನೆಯಿಂದ ಹೊರಟ ಪ್ರತಿಯೊಬ್ಬ ಚಿಣ್ಣನೂ ಕೋವಿ ಹಿಡಿದುಕೊಂಡು ಸಾಕ್ಷಾತ್ ಪೋಲೀಸ್ ಇನ್ಸ್’ಪೆಕ್ಟರನೇ ಆಗಿ ಮನೆಗೆ ಮರಳಿದ್ದಾನೆ. ಹಣ ಕೊಡಲು ಸತಾಯಿಸಿದ ಅಮ್ಮನಿಗೇ ಕೋವಿ ಹಿಡಿದು ‘ಹ್ಯಾಂಡ್ಸಪ್’ ಹೇಳಿ, ಕಾಡಿ ಮತ್ತೆರೆಡು ಒದೆ ತಿಂದಿದ್ದಾನೆ. +ಹುಡುಗ ಪಟಾಕಿಗಳ ಹಿಂದೆ ಬಿದ್ದಿದ್ದರೆ‌ ಮನೆಯ ಹೆಣ್ಣು ಮಗಳು ತನ್ನದೇ ಲೋಕದಲ್ಲಿ ಮುಳುಗಿದ್ದಾಳೆ. ‘ನೀರು ತುಂಬುವ’ ಹಬ್ಬದ ದಿನ ಬಚ್ಚಲ ಹಂಡೆಗೆ ಕಂಯ್ಯಟ್ಲೆ ಬಳ್ಳಿಯ ಸರ ತೊಡಿಸಿದ್ದಾಳೆ. ಅಮ್ಮ ಬರೆದ ರಂಗೋಲಿಯ ನಡುವೆ ತನ್ನದೂ ಎರೆಡು ಸಾಲುಗಳನ್ನು ಸೇರಿಸಿದ್ದಾಳೆ. ಎಣ್ಣೆ-ನೀರಿನಲ್ಲಿ ಮಿಂದ ಹೆರಳನ್ನು ಹೆಗಲ ತುಂಬಾ ಹರವಿಕೊಂಡು, ಜರತಾರಿಯಂಚಿನ ಹಸಿರು ಲಂಗ ತೊಟ್ಟು ಸಾಕ್ಷಾತ್ ಪುಟ್ಟ ಲಕ್ಷ್ಮಿಯೇ ಆಗಿದ್ದಾಳೆ. ಅಂಗಳದಲ್ಲಿ ಅಣ್ಣ/ತಮ್ಮ ಹೊಡೆಸುವ ಪಟಾಕಿಯ ಸದ್ದುಗಳಿಗೆ ದೂರದಲ್ಲಿ ನಿಂತು ಕಿವಿ, ಕಣ್ಣುಗಳನ್ನೆಲ್ಲ ಮುಚ್ಚಿಕೊಂಡು ಬೆಚ್ಚುತ್ತಿದ್ದಾಳೆ. ಬಳಿಯಲ್ಲೇ ಪಟಾಕಿ ಸಿಡಿಸಿ ಅವಳನ್ನು ಬೆದರಿಸುವ ಆಟ ತಮ್ಮನಿಗೆ ಮೋಜು ತಂದಿದೆ. ಸಂಜೆಯ ಪೂಜೆಯ ವೇಳೆ ಅಕ್ಕ-ತಮ್ಮರಿಬ್ಬರೂ ಪರಸ್ಪರ ಪೈಪೋಟಿಯಲ್ಲಿ ಸಾಲು ಸಾಲು ದೀಪ ಹಚ್ಚುತ್ತಿರುವ ಸಂಭ್ರಮವನ್ನು ನೋಡಿದ ಫೋಟೋದಲ್ಲಿನ ದೇವರ ಮುಖದಲ್ಲಿನ ಮಂದಹಾಸ ದುಪ್ಪಟ್ಟಾಗಿದೆ. +ಕೊಟ್ಟಿಗೆಯಲ್ಲಿನ ದನ, ಕರು, ಎಮ್ಮೆಗಳಿಗೆ ಭರ್ಜರಿ ಅಭ್ಯಂಜನ ನಡೆಯುತ್ತಿದೆ. ಹಣೆಗೆ ಕುಂಕುಮವಿಟ್ಟುಕೊಂಡು, ಕೋಡಿನ ಸಂದಿಗೊಂದು ಬಿಡಿಹೂವು ಸಿಕ್ಕಿಸಿಕೊಂಡು ತಲೆಯಾಡಿಸುತ್ತಾ ನಿಂತಿರುವ ತಾಯಿ ಹಸುವಿನ ಕೊರಳಲ್ಲಿರುವ ಹೂವಿನ ಹಾರವನ್ನು ತಿನ್ನಲೆಂದು ಅದರ ಪುಟ್ಟೀಕರು ನಾಲಿಗೆ ಚಾಚುತ್ತಿದೆ. ಇಷ್ಟು ದಿನ ಅದೇ ಅಕ್ಕಚ್ಚು, ಬೂಸ, ಹಿಂಡಿಗಳ ತಿಂದೂ ತಿಂದೂ ಬೇಸತ್ತಿದ್ದ ಎಮ್ಮೆಗಿಂದು ಅಕ್ಕಿ, ಬೆಲ್ಲ, ಬಾಳೆಹಣ್ಣುಗಳ ಕಂಡು ಖುಷಿ ತಾಳದಾಗಿದೆ. ಅಡಿಗೆ ಮನೆಯಿಂದ ಹೊಮ್ಮುತ್ತಿರುವ ಪರಿಮಳಕ್ಕೆ ಮೂಗು ಅರಳಿಸುತ್ತಾ ಅವು ತಮ್ಮ ಆಂಯ್ ವಾಂಯ್ ಅಂಬೇ ಭಾಷೆಗಳ ಮೂಲಕ ತಮಗೂ ಪಾಯಸ ನೀಡುವಂತೆ ಒಡೆಯ, ಒಡತಿಯರನ್ನು ಒತ್ತಾಯಿಸುತ್ತಿವೆ. +ಹಬ್ಬದ ಬೆಳಗ್ಗೆ ಬೆಂಗಳೂರಿನಿಂದ ಬಂದ ಬಸ್ಸಿನಲ್ಲಿ ಸಂಭ್ರಮದ ಸಂತೆಯೇ ಬಂದಿಳಿದಿದೆ. ಮದುವೆಯಾದ ನಂತರ ಮೊದಲ ದೀಪಾವಳಿಗೆ ಮಾವನ ಮನೆಗೆ ಬರುತ್ತಿರುವ ಅಳಿಯ ತನ್ನ ನವವಧುವಿನ ಕೈ ಹಿಡಿದು ಮಾವನ ಮನೆಯತ್ತ ನಡೆಯುತ್ತಿದ್ದಾನೆ. ಅವನ ಕೈಚೀಲದಲ್ಲಿರುವ ಸಿಹಿತಿಂಡಿಯ ಕಂಪು ಅವರಿಗಿಂತ ಮೊದಲೇ ಮನೆ ತಲುಪಿದೆ. ಅವರನ್ನು ಸ್ವಾಗತಿಸಲು ಬಾಗಿಲಿಗೆ ಬಂದ ಅತ್ತೆ-ಮಾವನ ಮುಖದಲ್ಲಿ ನೂರು ಹಣತೆಗಳು ಬೆಳಗುತ್ತಿವೆ. ‘ಹೋ..’ ಎಂದು ಹೊಸ ಅಳಿಯನನ್ನು ಮುತ್ತಿಕೊಂಡ ಮಕ್ಕಳಿಗೆ ಸಿಹಿತಿಂಡಿಗಳು ಹಂಚಲ್ಪಟ್ಟಿವೆ. ಈಗಷ್ಟೇ ಮಿಂದು, ಜರೀಸೀರೆಯುಟ್ಟು, ಹಿತ್ತಲ ಸೇವಂತಿಗೆಯನ್ನು ಮುಡಿದು ಬರುತ್ತಿರುವ ತನ್ನ ಮುದ್ದು ಮಡದಿಯ ಮೇಲೆ ಅವನಿಗೀಗ ಹೊಸದಾಗಿ‌ ಒಲವಾಗಿದೆ. ಅತ್ತೆ ಬಡಿಸಿದ ಕಜ್ಜಾಯ, ಚಕ್ಕುಲಿಗಳು ಹಿಂದೆಂದೂ ಸವಿಯದಷ್ಟು ರುಚಿಯಾಗಿವೆ. ಸಂಜೆ ಆರತಿಯ ನಂತರ ವಧು-ವರರಿಬ್ಬರೂ ಜೊತೆಯಾಗಿ ಬೆಳಗಿದ ಹಣತೆಗಳು ಅವರ ಮುಂಬರುವ ಬದುಕಿನ ಕನಸುಗಳಂತೆಯೇ ದೇದೀಪ್ಯಮಾನವಾಗಿವೆ. +ಮೈತುಂಬಾ ಬಣ್ಣಬಣ್ಣದ ಬಲ್ಬು ತೊಟ್ಟು ನಿಂತ ಟೆರಾಸು ಮನೆಯ ಪಕ್ಕದ ಗುಡಿಸಲಿಗೂ ದೀಪಾವಳಿ ಕಾಲಿಟ್ಟಿದೆ. ಅಲ್ಲಿ, ಅಪರೂಪಕ್ಕೆ ಮಾಡಿದ ಪಾಯಸವನ್ನು ತಿನ್ನುವುದು ಹೇಗೆಂದು ತಿಳಿಯದೆ ಮುಖ-ಮೂತಿಗೆಲ್ಲ ಮೆತ್ತಿಕೊಂಡ ದೊಗಲೆ ಚಡ್ಡಿಯ ಹುಡುಗನ ಬಾಯನ್ನು ಅಮ್ಮನ ಹರಕು ಸೀರೆಯ ಸೆರಗು ವರೆಸಿ ಸ್ವಚ್ಛಗೊಳಿಸಿದೆ. ಪಕ್ಕದ‌ ಟೆರಾಸು ಮನೆಯವರು ರಾತ್ರೆಯ ಬಾನಿಗೆ ಹಾರಿಬಿಟ್ಟ ರಾಕೇಟನ್ನು ತನ್ನ ಮನೆಯ ಮಾಡಿನ ತೂತಿನಿಂದ ನೋಡಿದ ಹುಡುಗ ಹೊರಗೋಡಿ ಬಂದಿದ್ದಾನೆ. ಅವರ ಮನೆಯಂಗಳದಲ್ಲಿ ಗಿರಗಿರನೆ ತಿರುಗುತ್ತಾ ಬೆಳಕಿನ ವೃತ್ತ ರಚಿಸುತ್ತಿರುವ ನೆಲಚಕ್ರ ಹುಡುಗನ ಕಣ್ಣಲ್ಲೂ ಪ್ರತಿಫಲಿಸಿದೆ. ನೋಡನೋಡುತ್ತಿದ್ದಂತೆಯೇ ಬೆಳಕಿನ ಮರವೊಂದು ಹೂಬಿಟ್ಟಂತೆ ಅಷ್ಟೆತ್ತರಕ್ಕೆ ಅರಳಿ ನಿಂತ ‘ಬಾಳೆಕಂಬ’ದ ಮೇಲೆ ಹುಡುಗನಿಗೆ ಒಲವಾಗಿದೆ. ಮತ್ತೊಂದು ರಾಕೇಟು ಹಚ್ಚಲು ಹೊರಟ ಪಕ್ಕದ ಮನೆಯ ಅಣ್ಣನ ಕಣ್ಣೀಗ ಹುಡುಗನ ಮೇಲೆ ಬಿದ್ದಿದೆ. ‘ಬಾರೋ ಇಲ್ಲಿ ಪುಟ್ಟ’ ಎಂದು ಕರೆದ ಅವನತ್ತ ಹೆದರುತ್ತಲೇ ನಡೆದ ಪುಟ್ಟನ ಕೈಗೆ ನಕ್ಷತ್ರ ಕಡ್ಡಿಯೊಂದು ವರ್ಗಾವಣೆಯಾಗಿದೆ. ಹಿಡಿದುಕೊಳ್ಳಲು ಹೆದರಿ ಹಿಂದಡಿಯಿಟ್ಟ ಅವನ ಕೈಗೆ ಮತ್ತೊಂದು ಪುಟ್ಟ ಕೈ ಆಸರೆಯಾಗಿದೆ. ಚರ್ರನೆ ಕಿಡಿಯೆರಚುತ್ತಾ ಓಡಿ ಬಂದ ಕುದುರೆ ಪಟಾಕಿ ಅಣ್ಣನನ್ನು ಅಂಗಳದ ತುಂಬಾ ಅಟ್ಟಿಸಿಕೊಂಡು ಹೋದಾಗ ಮನೆಯವರೆಲ್ಲ ಗೊಳ್ಳೆಂದು ನಕ್ಕಿದ್ದಾರೆ. ಪುಟ್ಟನ ಕೈಯಲ್ಲೀಗ ಬೆಳಗುತ್ತಿರುವ ಸುರುಸುರು ಬತ್ತಿಯಿಂದ ಚಿಮ್ಮುತ್ತಿರುವ ನಕ್ಷತ್ರಗಳ ಹೊಳಪಿಗೆ ದೂರದಲ್ಲಿ ನಿಂತು ನೋಡುತ್ತಿರುವ ಅಮ್ಮನ ಕಣ್ಣಂದ ಜಾರಿದ ಹನಿಯೊಳಗೂ ಬೆಳಕು ಮೂಡಿದೆ. +ದೀಪಾವಳಿ ನಿರ್ಗಮಿಸಿದೆ. ಮತ್ತೆ ಶುರುವಾದ ಶಾಲೆಯ ತರಗತಿಗಳು ಸಿಡಿದು ಹೋದ ಪಟಾಕಿ, ಹಾರಿಹೋದ ರಾಕೇಟುಗಳ ರೋಚಕ ಕಥೆಗಳಿಂದ ತುಂಬಿಹೋಗಿವೆ. ರಸ್ತೆಯ ತುಂಬಾ ಬೆಳಕನೆರಚಿ ಹೋದ ವಿವಿಧ ಪಟಾಕಿಗಳ ಅವಶೇಷಗಳು ಮುಗಿದ ಸಂಭ್ರಮದ ಕುರುಹಾಗಿ ಬಿದ್ದುಕೊಂಡಿವೆ. ಸುಟ್ಟುಹೋದ ಆ ಸಿಡಿಮದ್ದುಗಳ ಅವಶೇಷಗಳ ನಡುವೆ ಹೊಟ್ಟದೇ ಉಳಿದ ಪಟಾಕಿಗಳಿಗಾಗಿ ಚಿಂದಿ ಆಯುವ ಹುಡುಗರ ತಂಡವೊಂದು ಹುಡುಕಾಟ ನಡೆಸಿದೆ. ಅವರು ಸಿಕ್ಕ ಒಂದು ಅರೆ ಉರಿದ ಮತಾಪಿಗೆ ಮತ್ತೆ ಬೆಂಕಿ ತಗುಲಿಸಿ ಹೋ ಎಂದು ಕುಣಿಯುವಾಗ ಮುಗಿದ ದೀಪಾವಳಿಗೆ ಮರುಜೀವ ಬಂದಿದೆ. ಹಬ್ಬ ಮುಗಿಸಿ ಶಹರಿಗೆ ಮರಳುತ್ತಿರುವ ಭಾರ ಹೃದಯಗಳೊಳಗೆ ನೆನಪಿನ ಪ್ರಣತಿಗಳು ಪ್ರಜ್ವಲಿಸುತ್ತಿವೆ. +ದೀಪಾವಳಿ ಸಂಪನ್ನವಾಗಿದೆ. +-ವಿನಾಯಕ ಅರಳಸುರಳಿ \ No newline at end of file diff --git a/PanjuMagazine_Data/article_1039.txt b/PanjuMagazine_Data/article_1039.txt new file mode 100644 index 0000000000000000000000000000000000000000..1e504ba299112f1ffe2d0e63696f33442389203d --- /dev/null +++ b/PanjuMagazine_Data/article_1039.txt @@ -0,0 +1,9 @@ +ಇದೊಂದು ವಿದ್ಯೆ ಮನುಷ್ಯರು ಸ್ವತಃ ಕಲಿತದ್ದಾಗಿರಲಿಕ್ಕಿಲ್ಲ. ಯಾಕೆಂದರೆ ಹೆಚ್ಚಾಗಿ ಇಂತಹ ಕೆಲಸಗಳ ಕ್ರೆಡಿಟ್ಟನ್ನು ಇಲಿಗಳೋ, ಹೆಗ್ಗಣಗಳೋ, ಏಡಿಗಳೋ ತೆಗೆದುಕೊಂಡು ಮನುಷ್ಯರ ಗುರುಗಳು ನಾವೇ ಎಂದು ಫೋಸ್ ಕೊಡುತ್ತವೆ. ಅಂತಹ ಅತ್ಯುತ್ತಮ ವಿದ್ಯೆ ಯಾವುದೆಂದರೆ ’ಕನ್ನ ಹಾಕುವುದು ಅಥವಾ ಕೊರೆಯುವುದು’… ಹಾಗೆ ನೋಡಿದರೆ ಯಾವ ವಿದ್ಯೆಯೂ ಮನುಷ್ಯನ ಸ್ವಂತದ್ದಲ್ಲವೇ ಅಲ್ಲ ಬಿಡಿ. ’ಎಲ್ಲವಂ ಬಲ್ಲಿದರಿಂದ ಕೇಳಿ, ನೋಡಿ, ಮಾಡಿ’ಯೇ ಕಲಿತದ್ದು. ಆದರೆ ಆ ವಿದ್ಯೆಗಳಲ್ಲಿ ಮನುಷ್ಯ ಎಷ್ಟು ಪಳಗಿಬಿಡುತ್ತಾನೆ ಎಂದರೆ ಕಲಿಸಿದ ಗುರುವೇ ತಲೆಬಾಗಿ ಪ್ರಣಾಮ ಮಾಡುವಷ್ಟು. ಇರಲಿ ಈಗ ಮನುಷ್ಯನ ಯೋಗ್ಯತೆಯನ್ನು ಹೊಗಳುತ್ತಾ ಕುಳಿತುಕೊಳ್ಳುವುದು ಬೇಕಿಲ್ಲ. ಮೂಲ ವಿಷಯಕ್ಕೆ ಬರೋಣ. +ಮೊದಲಿಗೆ ಮಕ್ಕಳ ಓದಿಗೆ ಸುಲಭ ಲಭ್ಯವಾಗಿದ್ದ ಚಂದಮಾಮ ಬಾಲಮಿತ್ರಗಳಂತಹ ಪುಸ್ತಕಗಳಲ್ಲಿ ಕಳ್ಳನ ಕಥೆಗಳು ಇರುತ್ತಿದ್ದುದು ಸಾಮಾನ್ಯ. ಕನ್ನ ಹಾಕುವ ಚಿತ್ರಗಳು ಎಷ್ಟು ಚೆನ್ನಾಗಿ ಇರುತ್ತಿತ್ತು ಗೊತ್ತಾ? ಗೋಡೆಯೊಂದರಲ್ಲಿ ಓರೆಕೋರೆಯಾಗಿ ಕೆತ್ತಿದ ಒಂದು ಅಮೀಬಾದ ಚಿತ್ರದಂತಹ ತೂತು. ಅದು ಗೋಡೆಯ ನೆಲಮಟ್ಟದಿಂದ ಸ್ವಲ್ಪ ಮೇಲೆ. ಅಂದರೆ ಕಳ್ಳ ಕಾಲೆತ್ತಿಯೋ ತಲೆ ತೂರಿಸಿಯೋ ಅದರೊಳಗೆ ಸಲೀಸಾಗಿ ಇಳಿಯುವಂತೆ. ಆ ಜಾಗವಲ್ಲದೆ ಬೇರೆಲ್ಲಿಯೂ ಇಡೀ ಗೋಡೆಯಲ್ಲಿ ಕಲೆಯ ಗುರುತೂ ಇಲ್ಲದಂತೆ.. ಕಳ್ಳತನ ಮುಗಿಸಿ ಬರುವಾಗ ಅವನ ಬೆನ್ನ ಮೇಲಿದ್ದ ಚೀಲ ಸಮೇತ ಅವನು ಅದರೊಳಗಿನಿಂದ ಹೊರಬರುವಂತೆ.. ಆಹಾ ಅದೆಷ್ಟು ಕಲಾತ್ಮಕವಾಗಿತ್ತೆಂದರೆ ನಮ್ಮ ಮನೆಯ ಗೋಡೆಗೂ ಅಂತಹುದೇ ಒಂದು ಕನ್ನ ಕೊರೆದು ಕಳ್ಳ ಬರಬಾರದೇ ಅನ್ನಿಸುತ್ತಿತ್ತು. +ಒಮ್ಮೆ ಏನಾಯ್ತು ಅಂದ್ರೆ ನಾನು ’ಬುದ್ಧಿವಂತ ಕಳ್ಳ’ ಎಂಬ ಕಥೆಯೊಂದನ್ನು ಓದಿದ್ದೆ. ಆ ಕಳ್ಳ ಎಂಥೆಂತಹಾ ಅಧಿಕಾರಿಗಳಿಗೂ ಚಳ್ಳೆಹಣ್ಣು ತಿನ್ನಿಸಿ ಶ್ರೀಮಂತರ ಮನೆಗೆ ಕನ್ನ ಕೊರೆದು ಕಳ್ಳತನ ನಡೆಸುವವನು. ಯಾರ ಕೈಗೂ ಸಿಕ್ಕಿ ಬೀಳದವನು. ರಾಬಿನ್ ಹುಡ್ ನಂತೆ ಬಡವರಿಗೆ ಸಹಾಯ ಮಾಡುತ್ತಿದ್ದ ಕಳ್ಳನಾದ ಕಾರಣ ಅವನ ಚಿತ್ರವು ಮಾಮೂಲಿ ಕಳ್ಳರಂತೆ ವಿಕಾರವಾಗಿರದೇ ರಾಜಕುಮಾರನ ಚಿತ್ರದಂತೆ ಸುಂದರವಾಗಿತ್ತು.ಹಾಗಾದ ಕಾರಣವೋ ಏನೋ ಆತ ರಾಜನೊಡನೆ ಪಂಥ ಕಟ್ಟಿ ಅವನ ಮಗಳನ್ನು ಅರಮನೆಗೇ ಕನ್ನ ಕೊರೆದು ಕದ್ದೊಯ್ಯುತ್ತಾನೆ. ಕಥೆಯ ಕೊನೆಗೆ ರಾಜ ಅವನನ್ನೇ ತನ್ನ ಉತ್ತರಾಧಿಕಾರಿಯನ್ನಾಗಿಸಿ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ನನಗಂತೂ ಇಡೀ ದಿನ ಆ ಕಳ್ಳನದ್ದೇ ಆಲೋಚನೆ. ರಾತ್ರೆಯೂ ಅದೇ ಗುಂಗಿನಲ್ಲಿ ಮಲಗಿ ನಿದ್ದೆ ಹೋಗಿದ್ದೆ. ಅದ್ಯಾಕೋ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಪಕ್ಕದ ಕೋಣೆಯಿಂದ ಅಪ್ಪನ ಗೊರಕೆಯ ಶಬ್ಧವಲ್ಲದೆ ಇನ್ನೂ ಒಂದು ಶಬ್ಧವನ್ನು ನನ್ನ ಕಿವಿಗಳು ಗ್ರಹಿಸಿದವು. ಅದೂ ಗೋಡೆಯ ಆ ಕಡೆಯಿಂದ ಬರುತ್ತಿತ್ತು. ಗೋಡೆಗ ಟಪ್ ಟಪ್ ಎಂದು ಬಡಿದಂತೆ. ನನಗಂತೂ ತಿಳಿದೇ ಬಿಟ್ಟಿತು. ಇದು ಯಾವುದೋ ಕಳ್ಳನದೇ ಕೆಲಸ. ಅಂದರೆ ಗೋಡೆಗೆ ಕನ್ನ ಕೊರೆದು ಒಳ ನುಗ್ಗಲು ಯತ್ನಿಸುತ್ತಿದ್ದಾನೆ. ಆದರೆ ಎಲ್ಲಾ ಕಳ್ಳರೂ ಕಥೆಯಲ್ಲಿನ ಒಳ್ಳೆಯ ಕಳ್ಳರಲ್ಲ ಎಂದು ಹಲವಾರು ಕಳ್ಳರ ಕಥೆಗಳನ್ನು ಓದಿದ್ದ ನನಗೆ ತಿಳಿದಿತ್ತು. ಅಮ್ಮ ಅಪ್ಪನನ್ನು ಕೂಗಿ ಏಳಿಸೋಣ ಎಂದುಕೊಂಡೆ. ಆದರೆ ಯಾಕೋ ಅವರ ನಿದ್ದೆ ಹಾಳು ಮಾಡುವುದು ಬೇಡ . ಕಳ್ಳ ಬಂದರೆ ಆ ಕನ್ನದ ತೂತಿನಿಂದಲೇ ತಾನೇ ಒಳ ಬರುವುದು. ಒನಕೆ ಓಬವ್ವಳ ಕಥೆಯನ್ನೂ ಅರೆದು ಕುಡಿದಿದ್ದ ಕಳ್ಳ ಕನ್ನದ ತೂತಿನಿಂದ ಒಳ ಬರುವಾಗಲೇ ಮಂಡೆಗೆ ಬಡಿಯುವ ಐಡಿಯಾವು ಗೊತ್ತಿತ್ತಲ್ಲಾ… ಆದರೆ ಈ ಕತ್ತಲಲ್ಲಿ ಒನಕೆ ಎಲ್ಲಿಂದ ಬರಬೇಕು? ಪಕ್ಕದಲ್ಲಿದ್ದ ಶಾಲೆಯ ಚೀಲದಿಂದ ಹಿಡಿದೆಳೆದ ಮರದ ಸ್ಕೇಲನ್ನೇ ಬಡಿಗೆಯಂತೆ ಕೈಯಲ್ಲಿ ಹಿಡಿದುಕೊಂಡು ಅಲ್ಲಾಡದೇ ಮಲಗಿಯೇ ಇದ್ದೆ. ಯಾಕೆಂದರೆ ಇನ್ನೂ ಗೋಡೆಯ ತೂತು ಆಗಿರದ ಕಾರಣ ನಾನೆಲ್ಲಿ ನಿಲ್ಲಬೇಕು ಎಂದು ನಿರ್ಧಾರವಾಗಿರಲಿಲ್ಲ. ಆ ಸದ್ದು ಅದ್ಯಾವಾಗ ನಿಂತಿತೋ, ಮತ್ಯಾವಾಗ ನನ್ನ ಕಣ್ಣುಗಳು ಮುಚ್ಚಿ ನಿದ್ದೆ ಹತ್ತಿತೋ ನನಗೆ ಗೊತ್ತಿಲ್ಲ ಬೆಳಗ್ಗೆ ಏಳುವಾಗ ಕೈಯಲ್ಲಿ ಇನ್ನೂ ಸ್ಕೇಲ್ ಹಿಡಿದು ಆಯುಧ ಪಾಣಿಯಾಗಿಯೇ ಎದ್ದು ರಾತ್ರೆಯ ಕಥೆಯನ್ನು ಅಪ್ಪ ಅಮ್ಮನಿಗೆ ಅವಸರದಿಂದ ಹೇಳಿದೆ. ಅವರಿಬ್ಬರೂ ಹೊಟ್ಟೆ ಹಿಡಿದುಕೊಂಡು ಬಿದ್ದು ಬಿದ್ದು ನಕ್ಕರು. ಯಾಕೆಂದರೆ ಆ ಶಬ್ಧದ ಮೂಲ ಬೀದಿಯ ಕಜ್ಜಿನಾಯಿಯೊಂದು ಅಲ್ಲಿ ಮಲಗಿ ತನ್ನ ಬೆನ್ನನ್ನೋ ಕಿವಿಯನ್ನೋ ಕೆರೆದುಕೊಂಡದ್ದಾಗಿತ್ತಂತೆ. ಹೀಗೆ ಅವರು ಕನ್ನದ ಮೂಲಕ ಕಳ್ಳ ಬರುವ ನನ್ನ ಕನಸುಗಳಿಗೆ ಕೊಳ್ಳಿ ಇಟ್ಟುಬಿಟ್ಟರು. +ನಾನು ಇತ್ತೀಚೆಗಷ್ಟೇ ನೋಡಿದ ಹಳೆಯ ಇಂಗ್ಲೀಷ್ ಚಲನಚಿತ್ರವೊಂದು ಇಡಿಯಾಗಿ ಕನ್ನ ಕೊರೆಯುವುದರ ಬಗ್ಗೆಯೇ ಚಿತ್ರಿಸಲ್ಪಟ್ಟಿತ್ತು. ಜೈಲುಗಳಿಂದ ತಪ್ಪಿಸಿಕೊಳ್ಳಲು ಒದ್ದಾಡುವ ಯುದ್ಧ ಕೈದಿಗಳು ಕನ್ನ ಕೊರೆಯುವ ಚಿತ್ರಣವದು. ಅದರಲ್ಲಿ ನಾನು ಅದೆಷ್ಟು ಮುಳುಗಿ ಹೋಗಿದ್ದೆ ಎಂದರೆ ಅತ್ತ ಜೈಲರ್ ನ ಶೂಸ್ ಸದ್ದಿನ ಹಿಮ್ಮೇಳ ಕೇಳುತ್ತಿದ್ದಂತೆ ನನ್ನ ಹೃದಯ ಆತಂಕದಿಂದ ವೇಗವಾಗಿ ಹೊಡೆದುಕೊಳ್ಳುತ್ತಿತ್ತು. ಎಲ್ಲಾ ಸರಿಯಾಗಿ ಕನ್ನ ಕೊರೆದು ಮುಗಿಸಿ ಒಬ್ಬೊಬ್ಬರೇ ಹೊರ ಬೀಳುವಾಗ ನಾನು ಬೆವರು ಒರೆಸಿಕೊಂಡಿದ್ದೆ. +ಹಾಗೆಂದು ಈ ಕನ್ನ ಹಾಕುವುದು’ ಎಂಬುದು ಯಾವಾಗಲೂ ಕ್ರಿಯಾಪದವೇ ಆಗಿರಬೇಕಿಲ್ಲ. ಹರೆಯದ ವಯಸ್ಸಿನಲ್ಲಿ ಕತ್ತೆಯೂ ಸುಂದರಿಯೋ, ಸುಂದರನೋ ಆಗಿ ಕಾಣುವಾಗ ಈ ಕನ್ನ ಹಾಕುವುದು ನಾಮ ಪದವಾಗಿ ಬಿಡುತ್ತದೆ. ಅದೂ ಡೈರೆಕ್ಟ್ ಹೃದಯಕ್ಕೇ ಕನ್ನ. ಕಣ್ಣು ಕಣ್ಣೂ ಕಲೆತಾಗಾ.. ಅಂತ ಹಾಡಿ ಎದೆ ಬಡಿತ ಮೇಲಕ್ಕೇರಿ ಗೊತ್ತಿಲ್ಲದಂತೆ ಪಕ್ಕನೆ ಹೃದಯ ಕದ್ದೊಯ್ಯಲ್ಪಡುತ್ತದೆ. ಕದ್ದೊಯ್ಯುವ ಚೋರರ ಕುಲ ಗೋತ್ರ ಪ್ರವರಗಳು ಗೊತ್ತಾಗಿ ಕೆಲವೊಮ್ಮೆ ಅದೇ ವೇಗದಲ್ಲಿ ಮರಳಿ ಸಿಗುವುದೂ ಉಂಟು. ಆದರೆ ಗಂಟೆಗಳ ಅಂತರದಲ್ಲಿ ಜೀವಂತ ಹೃದಯವನ್ನೇ ಊರಿಂದ ಊರಿಗೆ ಒಯ್ದು ಜೋಡಿಸಬಲ್ಲ ಈ ಸಶಕ್ತ ಇಂಟರ್ನೆಟ್ ಯುಗ ಈ ನವಿರಾದ ಭಾವನೆಗಳನ್ನು ಉದ್ದೀಪನಗೊಳಿಸುತ್ತಿದ್ದ ಮಧುರ ಸ್ಮೃತಿಯಾಗಿ ಜೀವನವಿಡೀ ಕಾಡುತ್ತಿದ್ದ ಈ ಕನ್ನ ಹಾಕುವಿಕೆಯನ್ನು ನಿಲ್ಲಿಸಿಬಿಟ್ಟಿದೆ. ಈಗೇನಿದ್ದರೂ ಎಸ್ಸೆಮ್ಮೆಸ್ಸಿನ ಕಾಲ. ಕರೆನ್ಸಿ ಇದ್ದಷ್ಟು ದಿನ ನಿಮ್ಮ ಹೃದಯ ಮಿಡಿಯುತ್ತಿರುತ್ತದೆ. ಮೆಸೇಜ್ ಫಾರ್ವರ್ಡ್ ಮಾಡಿದಂತೆ ಇವನ ಹೃದಯ ಅವಳಿಗೆ ಪಾಸ್ ಮಾಡಲ್ಪಡುತ್ತದೆ. ಒಂದೇ ಮೆಸೇಜನ್ನು ಹಲವರಿಗೆ ಕಳುಹಿಸಿದಂತೆ ಹೃದಯವೂ ಹಲವು ಕಡೆ ಪಯಣಿಸಿ ಮೂಲ ಸ್ಥಾನ ಸೇರುವುದೂ ಉಂಟು. +ಆದರೆ ಇವರೆಲ್ಲರನ್ನೂ ಮೀರಿಸಿದ, ಇಲಿ ಹೆಗ್ಗಣಗಳಂತಹ ’ಕನ್ನ ವೀರ’ ಗುರುಗಳನ್ನೇ ನಾಚಿಸುವ ಇನ್ನೊಂದು ಗುಂಪು ಈ ವಿದ್ಯೆಯನ್ನು ಮುಂದುವರಿಸುತ್ತಾ ಬಂದಿರುವುದೇ ಈಗಲೂ ಕನ್ನಡ ನಿಘಂಟಿನಲ್ಲಿ ಈ ಪದ ಉಳಿಯಲು ಕಾರಣವಾಗಿರುತ್ತದೆ. ಸೇವೆಯೇ ಇವರ ಕೆಲಸವಾದ್ದರಿಂದ ಅವರೇನು ಇದಕ್ಕೆ ಪ್ರತ್ಯೇಕ ಶುಲ್ಕ ವಿಧಿಸದೇ ಸಮಾಜಕ್ಕೂ ಮುಂದಿನ ಜನಾಂಗಕ್ಕೂ ಉಪಕಾರ ಮಾಡುತ್ತಾರೆ. ಆದರೆ ಜನ ಸಾಮಾನ್ಯರು ಅವರ ಸೇವೆಯನ್ನು ಪರಿಗಣಿಸದೇ ಅವರನ್ನು ದೂರುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಆ ಸೇವಾ ಮನೋಭಾವದ ಮಹಾತ್ಮರು ಇನ್ಯಾರು ಅಲ್ಲ. ಭ್ರಷ್ಟ ಅಧಿಕಾರಿಗಳು ಮತ್ತು ಕೆಟ್ಟ ರಾಜಕಾರಿಣಿಗಳು. ಇವರದ್ದಂತೂ ಕಣ್ಣಿಗೆ ಕಾಣದ ಮಾಯಜಾಲದ ಕನ್ನ. ಸರಕಾರದಿಂದ ಮಂಜೂರಾದ ಹಣ ನೇರವಾಗಿ ಇವರ ತಿಜೋರಿಯ ಕಡೆಗೇ ಬೀಳುವಂತೆ ಆಡಳಿತದ ಗೋಡೆಗಳಿಗೇ ಕನ್ನ ಹೊಡೆದುಬಿಟ್ಟಿರುತ್ತಾರೆ. ಅದೂ ಕೊಂಚವೂ ಸದ್ದಾಗದೇ, ಕಿಂಚಿತ್ತೂ ಸುಳಿವು ನೀಡದೇ.. ಆದರೀಗ ಈ ಕನ್ನ ಹಾಕುವ ಕಳ್ಳರು ಕಾಣಿಸುವುದೇ ಇಲ್ಲ. ಏನಿದ್ದರೂ ಬಾಗಿಲು ಒಡೆಯುವುದು, ಸರಳು ಕತ್ತರಿಸಿ ಒಳ ನುಗ್ಗುವುದು ಇಲ್ಲದಿದ್ದರೆ ಚಾಕೂ ಚೂರಿ ಪಿಸ್ತೂಲ್ ಗಳನ್ನು ತೋರಿಸಿ ಹೆದರಿಸಿ ಹಣ ಕೀಳುವುದು ಕಳ್ಳರ ದಂಧೆಯಾಗಿದೆ. ಇನ್ನೂ ದೊಡ್ಡ ಕಳ್ಳರು ಬಾಂಬ್, ಹಾಕಿ ದೇಶವನ್ನೇ ಪುಡಿ ಮಾಡುತ್ತಾರೆ. ಮೊದಲಿನ ಕಳ್ಳರಂತೆ ದೈಹಿಕ ಶ್ರಮ ಬೇಡುವ ಕನ್ನ ಹಾಕುವಿಕೆಯನ್ನು ಬಿಟ್ಟುಕೊಟ್ಟು ಕಳ್ಳತನದ ಸಂಸ್ಕೃತಿಯ ಮೂಲ ಕೊಂಡಿಯನ್ನು ಮರೆತು ಆಧುನಿಕತೆಯತ್ತ ದಾಪುಗಾಲು ಹಾಕುತ್ತಿದ್ದಾರೆ. + ಬೆನ್ನಿನ ಮೇಲೆ ಸಾಂತಾಕ್ಲಾಸಿನ ಉಡುಗೊರೆಯ ಚೀಲದಂತಹಾ ಹೊರಲು ಸಾಧ್ಯವಾಗುವಷ್ಟೇ ತುಂಬಿದ ಚೀಲ ಹೊತ್ತ, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ ( ಕೆಲವೊಮ್ಮೆ ಒಂದು ಕಣ್ಣಿಗೆ ಮಾತ್ರ) ದೃಡಕಾಯ ಜೀವಿಯೊಂದು, ತಾನೇ ಬೆವರು ಸುರಿಸಿ ಮಾಡಿದ ಗೋಡೆಯ ನಡುವಿನ ಕನ್ನದಲ್ಲಿ ಸಾಗುವ ಸಾಂಪ್ರದಾಯಿಕ ರೂಪವನ್ನು ಕಾಣುವುದು ಅಪರೂಪವಾಗುತ್ತಿದೆ. ಮೊದಲು ಕಳ್ಳತನ ಎನ್ನುವುದು ಏನೂ ಇಲ್ಲದವನೊಬ್ಬ ತನ್ನದೋ ತನ್ನ ಕುಟುಂಬದ್ದೋ ಹೊಟ್ಟೆ ಹೊರೆಯುವಲ್ಲಿನ ಸಂಪಾದನೆಗೆ ಸೀಮಿತವಾಗಿತ್ತು. ಈಗ ಅದು ಬಡವ ಬಲ್ಲಿದನೆಂಬ ಭೇದವಿಲ್ಲದೆ ಯಾರು ಬೇಕಾದರವರು ಊರೂರನ್ನೇ ಕೊಳ್ಳೆ ಹೊಡೆಯುವ ಮಟ್ಟಕ್ಕೇರಿದ್ದಿದೆಯಲ್ಲಾ ಅದು ದುರಂತ ಎಂದೇ ನನ್ನ ಅನಿಸಿಕೆ.. ನೀವೇನಂತೀರಾ..? +-ಅನಿತಾ ನರೇಶ್ ಮಂಚಿ +***** \ No newline at end of file diff --git a/PanjuMagazine_Data/article_104.txt b/PanjuMagazine_Data/article_104.txt new file mode 100644 index 0000000000000000000000000000000000000000..0519ecba6ea913e21689ec692e81e9e4973fbf73 --- /dev/null +++ b/PanjuMagazine_Data/article_104.txt @@ -0,0 +1 @@ + \ No newline at end of file diff --git a/PanjuMagazine_Data/article_1040.txt b/PanjuMagazine_Data/article_1040.txt new file mode 100644 index 0000000000000000000000000000000000000000..54065d0260737010d7c70c7535504e6b79605536 --- /dev/null +++ b/PanjuMagazine_Data/article_1040.txt @@ -0,0 +1,10 @@ +"ಇಲ್ಲಿಂದ ಹೊರಬಿದ್ದವಳೇ ಮೂರು ಕೆಲಸಗಳನ್ನು ಮಾಡಬೇಕಿದೆ ನನಗೆ. ಪೈಂಟಿಂಗ್, ಪೈಂಟಿಂಗ್ ಮತ್ತು ಪೈಂಟಿಂಗ್" +ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು, ನೋವನ್ನೆಲ್ಲಾ ದೇಹದ ಮೂಲೆಮೂಲೆಯಲ್ಲೂ ಆವರಿಸಿಕೊಂಡು ಮೆಕ್ಸಿಕೋದ ಆಸ್ಪತ್ರೆಯ ವಾರ್ಡೊಂದರಲ್ಲಿ ಮಲಗಿದ್ದ ಹೆಣ್ಣೊಬ್ಬಳು ಹೇಳಿದ ಮಾತಿದು. ಈ ಚಿತ್ರಕಲಾವಿದೆಯ ಹೆಸರು ಫ್ರೀಡಾ ಕಾಹ್ಲೋ. ಪಿಕಾಸೋ ಮತ್ತಿತರ ದಿಗ್ಗಜರ ಸಮಕಾಲೀನಳಾದಳೂ ಕೂಡ ತನ್ನ ಜನ್ಮಭೂಮಿ ಮೆಕ್ಸಿಕೋದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನದೇ ಆದ ಛಾಪನ್ನು ಕಲಾಲೋಕದಲ್ಲಿ ಮೂಡಿಸಿದವರು ಫ್ರೀಡಾ. ತನ್ನ ದೇಹವನ್ನು ಮತ್ತು ಮನಸ್ಸಿನಲ್ಲಾ ಮಡುಗಟ್ಟಿ ಆವರಿಸಿದ್ದ ನೋವುಗಳೊಂದಿಗೆ ಜೀವನದುದ್ದಕ್ಕೂ ಹಟಬಿಡದೆ ಸೆಣಸಾಡಿ, ಖ್ಯಾತಿಯ ಉತ್ತುಂಗಕ್ಕೇರಿ ಸೈ ಎನಿಸಿಕೊಂಡು ತನ್ನ ಜೀವಿತಕ್ಕೊಂದು ಘನತೆಯನ್ನು ತಂದವರು ಫ್ರೀಡಾ ಕಾಹ್ಲೋ. +ಫ್ರೀಡಾ ಎಂದರೆ ಅಸಾಮಾನ್ಯ ಪ್ರತಿಭಾವಂತೆ ಹೆಲೆನ್ ಕೆಲ್ಲರಳಂತೆ. ಫ್ರೀಡಾ ಎಂದರೆ ನಮ್ಮವರೇ ಆದ ನಾಟ್ಯಪ್ರವೀಣೆ, ಸಾಹಸಿ ಸುಧಾ ಚಂದ್ರನ್ ಇದ್ದಂತೆ. ಅವರ ಕಥೆಯು ಜೀವನಪ್ರೀತಿಗೊಂದು ಭಾಷ್ಯವಿದ್ದಂತೆ. ಮೆಕ್ಸಿಕನ್ ಕ್ಯಾಥೊಲಿಕ್ ಹಿನ್ನಲೆಯ ಮ್ಯಾಟಿಲ್ದಾ ಮತ್ತು ಯುರೋಪಿಯನ್ ಮೂಲದ ನಾಸ್ತಿಕವಾದಿ ಯುವಕ ಗುಯ್ಲೆರ್ಮೋ ಕಾಹ್ಲೋ ದಂಪತಿಗಳ ಮೂರನೇ ಮಗಳೇ ಫ್ರೀಡಾ. ಅತೀ ಚೂಟಿ ಮತ್ತು ಬುದ್ಧಿವಂತೆಯಾಗಿದ್ದ ಮಗು ಎಲ್ಲರಿಗೂ, ಅದರಲ್ಲೂ ತಂದೆಯ ಫೇವರಿಟ್. ತಾಯಿಗಿಂತಲೂ ತಂದೆಯೊಂದಿಗೆ ಹೆಚ್ಚು ಉತ್ತಮ ಬಾಂಧವ್ಯವಿದ್ದ, ಅಷ್ಟಿಷ್ಟು ರೆಬೆಲ್ ಮನೋಭಾವದ, ಬೋಲ್ಡ್ ಶೈಲಿಯ ಈ ಮಗುವಿಗೆ ವೈದ್ಯೆಯಾಗುವ ಕನಸೊಂದಿತ್ತು. ಆದರೆ ಆರನೇ ವಯಸ್ಸಿನಲ್ಲೇ ಪೋಲಿಯೋ ಫ್ರೀಡಾಳ ಜೊತೆಯಾಗುತ್ತದೆ. ತನ್ನ ಹದಿನೆಂಟನೇ ವಯಸ್ಸಿನಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಫ್ರೀಡಾಳ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ಗಂಭೀರವಾಗಿ ಗಾಯಗೊಂಡಿದ್ದ ಈ ಹುಡುಗಿ ಬದುಕುಳಿಯುವುದೇ ಕಷ್ಟವೆಂದು ವೈದ್ಯರುಗಳು ಕೈಚೆಲ್ಲಿ ಕೂತಿದ್ದರಂತೆ. ಬೆನ್ನುಮೂಳೆ, ಸೊಂಟದ ಮೂಳೆ, ಭುಜದ ಮೂಳೆಗಳು ಈ ಅಪಘಾತದಲ್ಲಿ ಇನ್ನಿಲ್ಲದಂತೆ ಘಾಸಿಗೊಂಡವು. ಬಲಪಾದವು ನಜ್ಜುಗುಜ್ಜಾಗಿದ್ದೇ ಅಲ್ಲದೆ ಭುಜದ ಮೂಳೆಗಳಂತೆಯೇ ಸ್ಥಾನಪಲ್ಲಟಗೊಂಡವು. ಬಸ್ಸಿನ ಉದ್ದವಾದ ಕಬ್ಬಿಣದ ಹಿಡಿಯೊಂದು ಹೊಟ್ಟೆಯ ಕೆಳಭಾಗದಿಂದ ತೂರಿಕೊಂಡು ಹೋಗಿ ಯೋನಿಮಾರ್ಗವಾಗಿ ಹೊರಬಂದು ಬಹುತೇಕ ದೇಹವನ್ನೇ ಜರ್ಝರಿತಗೊಳಿಸಿತ್ತು. ತಿಂಗಳುಗಟ್ಟಲೆ ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಮಲಗಿದ್ದ ಫ್ರೀಡಾ ಪವಾಡವೆಂಬಂತೆ ಚೇತರಿಸಿಕೊಳ್ಳುತ್ತಾ ನಿಧಾನವಾಗಿ ಚಿತ್ರಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಾರಂಭಿಸಿದರು. ನೋವಿನ ಭಾಷೆಗೊಂದು ಮಾಧ್ಯಮವಾದ ಬಣ್ಣಗಳು ಮುಂದೆ ಅವರ ಬಾಳಿನುದ್ದಕ್ಕೂ ಬೆಳಕಾದವು. +ಫ್ರೀಡಾರ ಕಲರ್ ಫುಲ್ ಬದುಕಿನಲ್ಲಿ ವಿವಾಹದ್ದೂ ಒಂದು ಕಥೆ. ಮ್ಯೂರಲ್ ಗಳನ್ನು ರಚಿಸಿ ಆಗಲೇ ಪ್ರಸಿದ್ಧಿಯನ್ನು ಪಡೆದಿದ್ದ ಸ್ತ್ರೀಲೋಲ ಜೀನಿಯಸ್ ಕಲಾವಿದ ಡೀಗೋ ವಿರೇರಾನಡೆಗೊಂದು ವಿಚಿತ್ರವಾದ ಆಕರ್ಷಣೆ ಹರೆಯದ ಫ್ರೀಡಾಗಿತ್ತು. ಭೇಟಿಯ ಮೊದಲ ದಿನಗಳಲ್ಲಿ ತನ್ನ ಪೈಂಟಿಂಗ್ ಒಂದನ್ನು ಡೀಗೋಗೆ ತೋರಿಸಲು ಹಲವು ದಿನ ಡೀಗೋನ ಬೆನ್ನಹಿಂದೆಯೇ ಫ್ರೀಡಾ ಚಿಕ್ಕಮಗುವಿನಂತೆ ಸುತ್ತುತ್ತಿದ್ದರಂತೆ. ಕೊನೆಗೂ ಮುಹೂರ್ತ ಕೂಡಿಬಂದು ಇಪ್ಪತ್ತರ ಈ ತರುಣಿಯ ಪೈಂಟಿಂಗ್ ಅನ್ನು ನೋಡಿದ ಡೀಗೋ, "ಪ್ರತಿಭೆಯೆಂಬುದು ನಿನ್ನಲ್ಲಿದೆ" ಎಂದಾಗ ಫ್ರೀಡಾಳ ಸ್ವರ್ಗಕ್ಕೇ ಮೂರೇ ಗೇಣು. ಆ ಆರಂಭದ ದಿನಗಳ ತರುವಾಯ ಉದಯೋನ್ಮುಖ ಕಲಾವಿದೆ ಫ್ರೀಡಾರ ಮಾರ್ಗದರ್ಶಕನಾಗುವ ಡೀಗೋ ಬಹುಬೇಗ ಫ್ರೀಡಾರ ತಾಯಿಯ ಅಸಮಧಾನದ ನಡುವೆಯೂ ಅವರ ಬಾಳಸಂಗಾತಿಯಾಗಿ ಮಾರ್ಪಾಡಾಗುತ್ತಾನೆ. ಫ್ರೀಡಾಗಿಂತ ಇಪ್ಪತ್ತು ವರ್ಷ ಹಿರಿಯನೂ, ದೃಢಕಾಯಿಯೂ ಆಗಿದ್ದ ಡೀಗೋ ಬಳುಕುವ ಬಳ್ಳಿಯಂತಿದ್ದ ಫ್ರೀಡಾಳನ್ನು ವಿವಾಹವಾದಾಗ, ’ಇದೊಂದು ಆನೆ ಮತ್ತು ಪಾರಿವಾಳದ ಜೋಡಿ’ ಎಂದು ಫ್ರೀಡಾಳ ಪೋಷಕರು ಅಸಮಧಾನದಲ್ಲಿ ಗೊಣಗಿಕೊಂಡಿದ್ದರಂತೆ. ಇವರ ವೈವಾಹಿಕ ಜೀವನ ಅದೆಷ್ಟು ಏರಿಳಿತಗಳನ್ನು ಕಂಡರೂ, ಇಬ್ಬರೂ ಖ್ಯಾತಿಯ ಉತ್ತುಂಗಕ್ಕೇರಿದರೂ ಪ್ರೀತಿಗೇನೂ ಬರವಿರಲಿಲ್ಲ. ತನ್ನ ಗಂಡ ತನ್ನ ತಂಗಿಯೊಂದಿಗೆ ಹಾಸಿಗೆ ಹಂಚಿಕೊಂಡಾಗ ಫ್ರೀಡಾ ತೀವ್ರ ಯಾತನೆಗೊಳಗಾದಂತೆಯೇ, ಫ್ರೀಡಾಳ ಬೈಸೆಕ್ಷುವಲ್ ಲೈಂಗಿಕತೆ ಡೀಗೋಗೆ ಅರಗಿಸಿಕೊಳ್ಳಲಾರದ ತುತ್ತಾಗಿತ್ತು. ಪರಸ್ತ್ರೀಯರೊಂದಿಗೆ ಸಂಬಂಧ ಬೆಳೆಸಿಕೊಂಡರೂ ಸುಮ್ಮನಿದ್ದ ಡೀಗೋಗೆ ಪರಪುರುಷರೊಂದಿಗೆ ಫ್ರೀಡಾಳ ದೈಹಿಕ ಸಂಬಂಧಗಳು ರೇಜಿಗೆಯನ್ನೂ, ಹೊಟ್ಟೆಕಿಚ್ಚನ್ನೂ ಉಂಟುಮಾಡಿಸುತ್ತಿದ್ದವು. ಡೀಗೋನೆಡೆಗಿನ ತನ್ನ ಪ್ರೀತಿಯ ಭಾವತೀವ್ರತೆಯನ್ನು ಲೆಕ್ಕವಿಲ್ಲದಷ್ಟು ಬಾರಿ ಫ್ರೀಡಾ ತನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಾರೆ. ಡೀಗೋನ ಹಲವು ಮ್ಯೂರಲ್ ಗಳಲ್ಲಿ ಫ್ರೀಡಾಳ ಸುಂದರ ಮುಖ ಕಂಗೊಳಿಸುತ್ತದೆ. ೧೯೩೯ ರ ನವೆಂಬರ್ ನಲ್ಲಿ ವಿಚ್ಛೇದನದೊಂದಿಗೆ ವಿವಾಹವು ಮುರಿದುಬಿದ್ದರೂ, ೧೯೯೦ ರಲ್ಲಿ ಇಬ್ಬರೂ ಮತ್ತೆ ಒಂದಾದರು. "ನನ್ನ ಜೀವನದಲ್ಲಿ ಎರಡು ಬಹುದೊಡ್ಡ ಅಪಘಾತಗಳು ಆಗಿಹೋಗಿವೆ. ಒಂದು ಬಸ್ ಅಪಘಾತ ಮತ್ತು ಇನ್ನೊಂದು ಡೀಗೋ. ಎರಡನೆಯ ಅಪಘಾತವೇ ಮರೆಯಲಾರದ್ದು" ಎಂದು ಫ್ರೀಡಾ ಒಂದೆಡೆ ಬರೆದುಕೊಳ್ಳುತ್ತಾರೆ. ಎಲ್ಲಾ ಸೃಜನಶೀಲರಂತೆಯೇ ಇವರಿಬ್ಬರೂ ಇಷ್ಟಿಷ್ಟೇ ವಿಭಿನ್ನರು, ಇಷ್ಟಿಷ್ಟೇ ವಿಕ್ಷಿಪ್ತರು. ಬಟ್ ದೇ ವೇರ್ ಮೇಡ್ ಫಾರ್ ಈಚ್ ಅದರ್. +ಶಸ್ತ್ರಚಿಕಿತ್ಸೆಯ ದೃಷ್ಟಾಂತಗಳು ಹದಿನೆಂಟರ ಹರೆಯದಲ್ಲಾದ ಅಪಘಾತದ ಗಾಯಗಳ ನೋವಿನಂತೆ, ಅದರ ಕರಾಳ ನೆನಪುಗಳಂತೆ ಸಮಯದೊಂದಿಗೆ ಮಾಸಿಹೋಗಲಿಲ್ಲ. ಪರಿಣಾಮವಾಗಿ ಫ್ರೀಡಾರ ತಾಯಿಯಾಗುವ ಕನಸು ಎಂದೂ ನೆರವೇರಲಿಲ್ಲ. ಮೂರು ಬಾರಿ ಗರ್ಭ ಧರಿಸಿದರೂ ತೀವ್ರ ರಕ್ತಸ್ರಾವದೊಂದಿಗೆ ಗರ್ಭಪಾತಗಳಾದವು. ಫ್ರೀಡಾರ ತಾಯಿ ಒಂದು ವಿಭಿನ್ನವಾದ ಕ್ಯಾನ್ವಾಸ್ ಸ್ಟ್ಯಾಂಡ್ ಅನ್ನು ಆಸ್ಪತೆಯಲ್ಲಿ ಮಲಗಿದ ಮಗಳಿಗಾಗಿಯೇ ಸಿದ್ಧಪಡಿಸಿಟ್ಟುಕೊಂಡಿದ್ದರಂತೆ. ತನ್ನನ್ನು ತಾನು ನೋಡಿಕೊಳ್ಳಲು ಅನುವಾಗುವಂತೆ ಕನ್ನಡಿಯೊಂದನ್ನೂ ಫ್ರೀಡಾರ ಬೆಡ್ ಗೆ ಜೋಡಿಸಿಡಲಾಗಿತ್ತು. ಹೀಗೆ ಹಲವು ವಿಶಿಷ್ಟ ಕಲಾಕೃತಿಗಳು ಆಸ್ಪತ್ರೆಯ ವಾರ್ಡುಗಳಲ್ಲೇ ಈ ಕಲಾವಿದೆಯ ಕುಂಚದಿಂದ ಮೂಡಿಬಂದವು. ನೋವು, ಹತಾಶೆ, ಒಂಟಿತನಗಳು ಒಂದೊಂದಾಗಿ ಕ್ಯಾನ್ವಾಸಿನಲ್ಲಿ ಮಿಳಿತಗೊಂಡವು. ೧೯೪೦ ರ ಆಸುಪಾಸಿಗೆ ಮತ್ತೊಮ್ಮೆ ಸರಿಸುಮಾರು ಮೂವತ್ತು ಶಸ್ತ್ರಚಿಕಿತ್ಸೆಗಳಿಗೆ ಫ್ರೀಡಾ ತನ್ನ ದೇಹವನ್ನು ಒಡ್ಡಿಕೊಳ್ಳಬೇಕಾಯಿತು. ದೇಹಕ್ಕೆ ಬಲ ನೀಡಲು ಸ್ಟೀಲಿನ ಕವಚವನ್ನೂ ಅಳವಡಿಸಿದ್ದಾಯಿತು. ಇಂತಹ ನರಕಯಾತನೆಯ ದಿನಗಳಲ್ಲಿ ರಚಿಸಿದ ಒಂದು ಸೆಲ್ಫ್ ಪೋಟ್ರೇಟ್ ಕಲಾಕೃತಿಯಲ್ಲಿ ಯೋನಿಯಿಂದ ಕತ್ತಿನವರೆಗೂ ಸೀಳಿಕೊಂಡು ಹೋದ ರಾಡೊಂದನ್ನು ಮತ್ತು ದೇಹದಲ್ಲೆಲ್ಲಾ ರೋಮದಂತೆ ಚುಚ್ಚಿಸಿಕೊಂಡಿದ್ದ ಲೋಹದ ಮೊಳೆಗಳನ್ನು ಕಾಣಬಹುದು. (೧೯೪೦: ದ ಬ್ರೋಕನ್ ಕಾಲಂ). ಬಂಜರು ಹಿನ್ನೆಲೆಯಲ್ಲಿ ನಗ್ನದೇಹಿಯಾಗಿ ಕಣ್ಣೀರಿಡುತ್ತಾ ನಿಂತಿರುವ ಫ್ರೀಡಾರ ದೇಹವನ್ನು ಇಲ್ಲಿ ಶ್ವೇತವರ್ಣದ ಲೋಹದ ಕವಚವಷ್ಟೇ ಆವರಿಸಿಕೊಂಡಿದೆ. ಫ್ರಖ್ಯಾತ ಕಲಾವಿದನೊಬ್ಬ ಅಂದಿದ್ದನಂತೆ, "ಫ್ರೀಡಾರ ಜೀವನವನ್ನು ಅವರ ಕಲಾಕೃತಿಗಳಿಂದ ಬೇರ್ಪಡಿಸಲು ಸಾಧ್ಯಲಿಲ್ಲ. ಅವರ ಕಲಾಕೃತಿಗಳೇ ಅವರ ಆತ್ಮಕಥೆಗಳು", ಎಂದು. ಫ್ರೀಡಾರ ಕಲಾಕೃತಿಗಳನ್ನು ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಈ ಮಾತುಗಳು ಅತಿಶಯೋಕ್ತಿಯೆನಿಸುವುದಿಲ್ಲ. + +ಹೀಗೆ ನಲವತ್ತೇಳು ವರುಷ ಬದುಕಿ ಅದರಲ್ಲೂ ಹಲವು ಕಾಲ ಆಸ್ಪತ್ರೆಗಳಲ್ಲೇ ಒಂದಾದರೊಂದಂತೆ ಸರಣಿ ಶಸ್ತ್ರಚಿಕಿತ್ಸೆಗಳ ನೋವನ್ನು ನುಂಗುತ್ತಾ ಬಂದಿದ್ದ ಫ್ರೀಡಾಳ ಬದುಕಿನಲ್ಲಿ ಜೀವನಪ್ರೀತಿಗೇನೋ ಕೊರತೆಯಿರಲಿಲ್ಲ. ಆ ಕಾಲದ ಲಿಯೋನ್ ಟ್ರೋಸ್ಕಿಯಂಥಾ ಪ್ರಖ್ಯಾತ ಕಮ್ಯೂನಿಸ್ಟರ ಒಡನಾಟ ಡೀಗೋ-ಫ್ರೀಡಾ ದಂಪತಿಗಿತ್ತು. ಇಬ್ಬರೂ ರಾಜಕೀಯ ನೆಲೆಯಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸತೊಡಗಿದ್ದರು. ಫ್ರೀಡಾಳ ಸೌಂದರ್ಯ, ಬುದ್ಧಿವಂತಿಕೆ, ಅಗಾಧ ಪ್ರತಿಭೆ ಎಲ್ಲರನ್ನೂ ಸೆಳೆಯುತ್ತಲಿತ್ತು. ಖಾಸಗಿ ಪಾರ್ಟಿಗಳಲ್ಲೆಲ್ಲಾ ತನ್ನ ಹಾಸ್ಯಪ್ರವೃತ್ತಿ, ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುವ ಡರ್ಟಿ ಜೋಕುಗಳಿಂದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಫ್ರೀಡಾಳಲ್ಲಿ ಅದೇನೋ ಸಿಡಕ್ಟಿವ್ ಆದ ಸೆಳೆತವಿತ್ತು ಎಂದು ಅವರ ನಿಕಟವರ್ತಿಗಳು ಹಲವು ಕಡೆ ಉಲ್ಲೇಖಿಸುತ್ತಾರೆ. ತನ್ನ ಕಲಾಕೃತಿಯ ಪ್ರದರ್ಶನವೊಂದಕ್ಕೆ ಹೋಗುವುದು ಕಷ್ಟವೆಂದಾದಾಗ ಸ್ನೇಹಿತರ ನೆರವಿನಿಂದ ತನ್ನ ಹಾಸಿಗೆಯನ್ನೇ ಗ್ಯಾಲರಿಯವರೆಗೆ ಶಿಫ್ಟ್ ಮಾಡಿ ಪಾರ್ಟಿಯನ್ನು ಎಂಜಾಯ್ ಮಾಡಿದ್ದರಂತೆ ಈ ಫ್ರೀಡಾ. ಇವರ ಕೇಶಶೈಲಿ, ಆಭರಣ ಮತ್ತು ಕಣ್ಣುಕುಕ್ಕುವ ಬಣ್ಣಗಳ ದಿರಿಸುಗಳು ಆ ಕಾಲದಲ್ಲೇ ಕ್ಯಾಮೆರಾದ ಕಣ್ಣುಗಳಿಗೆ ಹಬ್ಬದಂತಿದ್ದವು. ಕಲಾವಿಮರ್ಶಕರು "ಸರ್ರಿಯಲಿಸ್ಟ್" ಲೇಬಲ್ ಕೊಟ್ಟಾಗ "ನಾನು ಕನಸುಗಳನ್ನು ಯಾವತ್ತೂ ಚಿತ್ರಿಸಲೇ ಇಲ್ಲ. ನನ್ನದೇನಿದ್ದರೂ ಕಟುಸತ್ಯಗಳು" ಎಂದು ನಗುತ್ತಲೇ ತಳ್ಳಿಹಾಕಿದರು. ೧೯೫೦ ರ ಸುಮಾರಿನಲ್ಲಿ ಮತ್ತೊಮ್ಮೆ ವರುಷ ಪೂರ್ತಿ ಆಸ್ಪತ್ರೆಯಲ್ಲಿ ಭರ್ತಿಯಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬೇಕಾಯಿತು. ಗ್ಯಾಂಗ್ರೀನ್ ಆದ ಕಾಲನ್ನು ಕತ್ತರಿಸಲೇಬೇಕೆಂದು ವೈದ್ಯರು ಹೇಳಿದಾಗ "ಹಾರಲು ರೆಕ್ಕೆಗಳಿದ್ದಾಗ, ಕಾಲಿನ ಹಂಗೇಕೆ?" ಎಂದು ತಮ್ಮ ಡೈರಿಯಲ್ಲಿ ಬರೆದುಕೊಂಡರು. ಈ ಕೊನೆಯ ಹಂತದಲ್ಲೂ ಮಲಗಿದ್ದಲ್ಲೇ ಸತತವಾಗಿ ಕಲಾಕೃತಿಗಳನ್ನು ರಚಿಸುತ್ತಲೇ, ಭಾವನೆಗಳನ್ನು ಬಣ್ಣಗಳಲ್ಲಿ ಬಿಂಬಿಸುತ್ತಲೇ ಹೋದರು. "ಟ್ರೀ ಆಫ್ ಹೋಪ್" ಎಂಬ ಹೆಸರಿನ ಕಲಾಕೃತಿಯಲ್ಲಿ ತಾನು ಮರಣಶಯ್ಯೆಯಿಂದ ಗುಣಮುಖರಾಗಿ ಜೀವಂತಿಕೆಯೇ ಮೈತಳೆದಂತೆ ಸಿಂಗರಿಸಿ ಚಿತ್ರಿಸಿದ ಕಲಾಕೃತಿಯೇ ಇವರ ಜೀವನಪ್ರೀತಿಯನ್ನು ಸಾರಿಹೇಳುತ್ತದೆ. +ಬಲಗಾಲಿಗಾದ ಗ್ಯಾಂಗ್ರೀನ್ ತರುವಾಯದ ದಿನಗಳು ಫ್ರೀಡಾರ ಜೀವನದ ಕೊನೆಯ ಕ್ಷಣಗಳೂ, ಅತೀವ ನೋವಿನಿಂದ ತುಂಬಿಕೊಂಡಿದ್ದಂಥವೂ ಆಗಿದ್ದವು. ೧೯೫೪ ರ ಜುಲೈ ೧೩ ರಂದು ಫ್ರೀಡಾ ಈ ಜಗತ್ತಿಗೆ ವಿದಾಯವನ್ನು ಹೇಳುತ್ತಾರೆ. ಡೀಗೋ ವಿರೇರಾ ಈ ದಿನವನ್ನು ತನ್ನ ಜೀವನದ ಅತೀ ವಿಷಾದದ ದಿನವೆಂದೂ, ಫ್ರೀಡಾರೊಂದಿಗೆ ಕಳೆದ ಒಂದೊಂದು ಕ್ಷಣಗಳೂ ತನ್ನ ಜೀವನದ ಅತ್ಯಂತ ಮಧುರ ಕ್ಷಣಗಳೆಂದು ಆತ್ಮಕಥೆಯಲ್ಲಿ ಹೇಳಿಕೊಳ್ಳುತ್ತಾನೆ. "ದ ಬ್ಲೂ ಹೌಸ್" ಎಂದೇ ಖ್ಯಾತಿಯುಳ್ಳ ಮ್ಯೂಸಿಯಂ ಆಗಿ ಬದಲಾದ ಫ್ರೀಡಾರ ನಿವಾಸ ಇಂದು ಮೆಕ್ಸಿಕೋ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದು. ಫ್ರೀಡಾ ಬಾಳಿದ ಶೈಲಿ ಎಲ್ಲರಿಗೂ ಒಂದು ಸಾರ್ವಕಾಲಿಕ ಸ್ಫೂರ್ತಿ. ಫ್ಯಾಶನ್ ಉದ್ಯಮಕ್ಕೆ ಇಂದಿಗೂ ಫ್ರೀಡಾರ ಫ್ಯಾಶನ್ ಸೆನ್ಸ್ ಎಂಬುದು ಸದಾ ಹೊಸ ಹೊಸ ಪ್ರಯೋಗಕ್ಕೊಳಗಾಗುವ ಒಂದು ಪರಿಕಲ್ಪನೆ. ಜೂಲಿ ಟೇಮರ್ ನಿರ್ದೇಶನದಲ್ಲಿ, ಖ್ಯಾತ ಮೆಕ್ಸಿಕನ್-ಅಮೆರಿಕನ್ ನಟಿ ಸಲ್ಮಾ ಹಾಯೆಕ್ ಫ್ರೀಡಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ ೨೦೦೨ ರಲ್ಲಿ ತೆರೆಕಂಡ "ಫ್ರೀಡಾ" ಚಲನಚಿತ್ರ ಎರಡು ಅಕಾಡೆಮಿ ಅವಾರ್ಡುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಗಲ್ಲಾ ಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ ಜಯಭೇರಿ ಬಾರಿಸಿದ ಈ ಚಿತ್ರ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನೂ, ನಟಿ ಸಲ್ಮಾಗೆ ಪ್ರತಿಷ್ಠಿತ ಅಕಾಡೆಮಿ ಪುರಸ್ಕಾರ, ಬಾಫ್ತಾ ಪುರಸ್ಕಾರ, ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೂ ನಾಮನಿರ್ದೇಶನಗೊಳ್ಳುವಂತೆ ಮಾಡಿದವು. +ಫ್ರೀಡಾ ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಜೀವನ, ಸಾಧನೆ ಇಂದಿಗೂ ಎಲ್ಲರಿಗೂ ಪ್ರೇರಣಾದಾಯಕ, ದಾರಿದೀಪ ಮತ್ತು ಅಜರಾಮರ. ಕತ್ತಲಿನ ಸುರಂಗದಾಚೆಗೆ ಬೆಳಕನ್ನು ಕಾಣುವ ಆಶಾವಾದ ಎಲ್ಲರ ಮನದಲ್ಲೂ ಕತ್ತಲಿನಲ್ಲಿ ಮಿಣುಕುವ ಮಿಣುಕುಹುಳಗಳ ಪುಟ್ಟಬೆಳಕಿನಂತೆ ಆಗೊಮ್ಮೆ ಈಗೊಮ್ಮೆಯಾದರೂ ಮಿನುಗಲಿ. ನೋವಿನ ಕಾರ್ಮೋಡಗಳ ಮರೆಯಿಂದಲೂ ನಗುವಿನ ಬೆಳ್ಳಿಕಿರಣವೊಂದು ಕಾಣುವಂತಾಗಲಿ. ಆಫ್ಟರಾಲ್ ಬದುಕೊಂದು ಪೈಟಿಂಗ್ ಇದ್ದಂತೆಯೇ ಅಲ್ಲವೇ! ಅಸಂಖ್ಯಾತ ಬಣ್ಣಗಳ ಒಂದು ಅಪೂರ್ವ ಕಲಸುಮೇಲೋಗರ. +***** \ No newline at end of file diff --git a/PanjuMagazine_Data/article_1041.txt b/PanjuMagazine_Data/article_1041.txt new file mode 100644 index 0000000000000000000000000000000000000000..e9c4934e358c2d2d9d6310879a3ee5d4623092dc --- /dev/null +++ b/PanjuMagazine_Data/article_1041.txt @@ -0,0 +1,23 @@ +ಏ ಎಲ್ಲಾದ್ರೂ ಟ್ರಿಪ್ ಹೋಗೋಣ್ವಾ ? ಬೆಂಗ್ಳೂರಿಗೆ ಬಂದು ತುಂಬಾ ದಿನ ಆಯ್ತು ಕಣೋ. ಏನೂ ನೋಡಿಲ್ಲ ಸರಿಯಾಗಿ. +ಹೂಂ. ಸರಿ. ಎಲ್ಲಿಗೆ ? +ಅರೆ, ವಾರ ವಾರ ಕಾಲಿಗೆ ಚಕ್ರ ಕಟ್ಕೊಂಡವ್ನ ತರ ತಿರ್ಗೋದು ನೀನು. ಬೈಕಂತೆ, ಕಾರಂತೆ. ಬಸ್ಸಂತೆ. ಆ ಫೇಸ್ಬುಕ್ಕನ್ನೇ ಮಿನಿ ಹಾರ್ಡುಡಿಸ್ಕು ಮಾಡೋ ಅಷ್ಟು ಫೋಟೋ ತುಂಬ್ಸಿದ್ದೀಯ. ನಂಗೆ ಕೇಳ್ತಿಯಲ್ಲೋ ಎಲ್ಲೋಗದು ಅಂತ. ನೀನು ಹೋಗಿರೋ ಜಾಗಗಳಲ್ಲೇ ಯಾವ್ದಾದ್ರೂ ಹೇಳೋ. +ಊಂ… ನಿಂಗೆ ಎಷ್ಟೊತ್ತಿನ ಪ್ರಯಾಣ ಆಗಿರ್ಬೇಕು ? ಒಂದೆರಡು ಘಂಟೆ ಒಳಗಿಂದ, ಅಥವಾ ಒಂದಿಡೀ ದಿನದ್ದ ? +ನಾ ಹೇಳಿದ್ದು ಟ್ರಿಪ್ಪು ಅಂತ. ಈ ಬೆಂಗ್ಳೂರಲ್ಲಿ ಒಂದ್ಗಂಟೆ ಒಳಗೆ ಎಲ್ಲಿ ಹೋಗೋಕಾಗತ್ತಪ್ಪ ? ಬಸ್ಟಾಂಡಿಗೆ ಹೋಗೋಕೆ ಒಂದು ಘಂಟೆ ಬೇಕು !! ಯಾವ್ದೋ ಮಾಲಿಗೆ ಕರ್ಕಂಡೋಗೂಂತ ಹೇಳ್ತಿರೋದಲ್ಲ ನಿಂಗೆ. ಟ್ರಿಪ್ಪು ಕಣೋ ಟ್ರಿಪ್ಪು. +ಸುಧಾ ಹಿಂಗೆ ಮಾತಾಡ್ತಾನೆ ಇದ್ರೆ ಶ್ಯಾಮ ಯೋಚನಾ ಲಹರಿಯಲ್ಲಿ ಮುಳುಗಿಹೋಗಿದ್ದ. +ಶ್ಯಾಮ, ಸುಧಾ ಹೈಸ್ಕೂಲಿಂದ ಕ್ಲಾಸ್ ಮೇಟ್ಸು. ಕ್ಲಾಸ್ ಮೇಟ್ಸಂದ ಮಾತ್ರಕ್ಕೆ ಸಖತ್ ಸ್ನೇಹ, ಒಂದೇ ಆಲೋಚನಾ ಲಹರಿ, ಪ್ರೇಮ .. ಮಣ್ಣು ಮಸಿ ಅಂತೆಲ್ಲಾ ಏನಿಲ್ಲ. ಶ್ಯಾಮನದು ಉತ್ತರ ಅಂದ್ರೆ ಸುಧಾಳದು ದಕ್ಷಿಣ ಅನ್ನೋ ಭಾವ. +ಶ್ಯಾಮಂಗೆ ತಾನು ಹುಟ್ಟಿ ಬೆಳೆದು ಕಾರಣಾಂತರಗಳಿಂದ ದೂರಾದ ಹಳ್ಳಿಗೆ, ಅಲ್ಲಿನ ಜೀವನ ಶೈಲಿಯ ಕಡೆಗೆ ಸೆಳೆತವಾದ್ರೆ ಸುಧಾಳದು ಪಕ್ಕಾ ತದ್ವಿರುದ್ದ. ನೀನೇನಾಗ್ತೀಯ ಅಂದವರಿಗೆ ಶ್ಯಾಮ ಸಸ್ಯಶಾಸ್ತ್ರ ವಿಜ್ಞಾನಿ ಅಂತಿದ್ರೆ ಸುಧಾ ಸಾಫ್ಟವೇರ್ ಇಂಜಿನಿಯರ್ರು ಅಂತಿದ್ಳು. ತಾನು ಒಂಭತ್ತನೇ ಕ್ಲಾಸಿಗೆ ಎಂಟ್ರಿ ಕೊಟ್ಟ ಆ ಪಟ್ಟಣದ ಶಾಲೆಯ ಹುಡುಗರನ್ನು ಪರಿಚಯ ಮಾಡಿಕೊಳ್ಳೋಕೆ ಸುಮಾರು ಸಮಯ ತಗೊಂಡಿದ್ದ ಶ್ಯಾಮ. ಅಂತದ್ರಲ್ಲಿ ಕ್ಲಾಸ್ ಟಾಪರ್ರು ಸುದೇಷ್ಣೆ ಅಲಿಯಾಸ್ ಸುಧಾಳನ್ನ ಮಾತಾಡಿಸೋದು!! ಊಹೂಂ.. ಆ ಕಾರಣಕ್ಕೆ ಅವಳನ್ನು ಮಾತಾಡಿಸೋಕೆ ಶ್ಯಾಮ ಹೆದರುತಿದ್ನೋ ಅಥವಾ ಸದಾ ತನ್ನ ಪಾಡಿಗೆ ತಾನಿರುತಿದ್ದ ಹೊಸ ಹುಡುಗ ಶ್ಯಾಮನನ್ನ ಹೆಚ್ಚು ಮಾತಾಡಿಸೋಕೆ ಸುಧಾಳೇ ಮುಂದಾಗಿರಲಿಲ್ವೋ ಆ ಎಂಭತ್ತು ಜನರ ಕ್ಲಾಸಿನ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಹೊಸ ವಾತಾವರಣ, ಜನಗಳು, ಹೊಸ ಶಿಕ್ಷಣ ಕ್ರಮ ಇವಕ್ಕೆ ಹೊಂದಿಕೊಳ್ಳೋದ್ರಲ್ಲಿ ಶ್ಯಾಮನ ಎರಡು ವರ್ಷಗಳು ಕಳೆದುಹೋಗಿದ್ರೆ, ಆಗಲೇ ಕ್ಲಾಸು ಟಾಪರ್ರಾಗಿರೋ ನಾನು ತಾಲ್ಲೂಕಿಗೆ ಹೆಚ್ಚು ಅಂಕ ತೆಗಿಬೇಕು. ಒಳ್ಳೇ ಪಿ.ಯು ಕಾಲೇಜಲ್ಲಿ ಸೀಟ್ ಸಿಗ್ಬೇಕಂದ್ರೆ ಸಖತ್ತಾಗಿ ಓದ್ಬೇಕು ಅನ್ನೋ ಮಹತ್ವಾಕಾಂಕ್ಷೆಯಲ್ಲಿ ಸುಧಾಳ ದಿನಗಳು ಓಡುತ್ತಿದ್ದವು. +ಎಸ್ಸೆಸ್ಸೆಲ್ಸಿ ಆಯ್ತು. ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದ ಸುಧಾ ಅಲ್ಲಿ ಸೇರಿದ್ಲಂತೆ, ಇಲ್ಲಿ ಸೇರಿದ್ಲಂತೆ ಅನ್ನೋ ಸುದ್ದಿಗಳು ಹಬ್ಬಿದ್ವೇ ಹೊರತು ಅವ್ಳು ಎಲ್ಲಿ ಸೇರಿದ್ಲು ಅನ್ನೋದು ಅವ್ಳ ಹತ್ತಿರದ ಸ್ನೇಹಿತೆಯರಿಗೆ ಮಾತ್ರ ಗೊತ್ತಾಯ್ತು. +ಶ್ಯಾಮನಿಗೆ ನಿರೀಕ್ಷೆಗೆ ತಕ್ಕಷ್ಟು ಅಂಕ ದಕ್ಕಲಿಲ್ಲ. ಯಾಕೋ… ಎಂಭತ್ಮೂರು ಪ್ರತಿಶತ ಅಂಕ ತೆಗೆದಿದ್ದ ಅವನಿಗೆ ಎಲ್ಲರೂ ಖುಷಿ ಪಟ್ಟು ಅಭಿನಂದಿಸಿದ್ರೆ ಅವ ಮಾತ್ರ ಬೇಸರದಲ್ಲಿದ್ದ. ಯಾಕೋ ಕಮ್ಮಿಯಾಯ್ತು ತನ್ನ ಸಾಧನೆ. ಬೇರೆ ಕಡೆ ಇರ್ಲಿ. ಈ ಊರಲ್ಲೇ ತನಗೊಂದು ಸೀಟು ದಕ್ಕೀತೆ ಅನ್ನೋ ಭಯ ಅವನಿಗೆ. ಹೇಗೋ ಅವನಿಗೆ ವಿಜ್ಞಾನದ ಸೀಟು ದಕ್ಕಿದಾಗ ಅವನ ಖುಷಿಗೆ ಮೇರೆಯಿರಲಿಲ್ಲ. ರಿಸಲ್ಟ್ ಬಂದ ದಿನ ಹಂಚದ ಸಿಹಿಯನ್ನು ತನಗೆ ಕಾಲೇಜಲ್ಲಿ ಸೀಟು ಸಿಕ್ಕಿದ ದಿನ ಹಂಚಿದ್ದ ! ಅಂತೂ ಕಾಲೇಜು ಪರ್ವ ಶುರುವಾಯ್ತು. +ದಿನಗಳು ಕಳೆಯುತ್ತಿದ್ದಂಗೆ ಯಾಕೋ ಸಸ್ಯಶಾಸ್ತ್ರದಷ್ಟೇ ಗಣಿತ, ಭೌತಶಾಸ್ತ್ರಗಳು ಇಷ್ಟವಾಗತೊಡಗಿದ್ವು. ಮೊದಲಿದ್ದ ಭಯ ಈಗಿರಲಿಲ್ಲ. ಮನದ ಮೂಲೆಯಲ್ಲಿ ಆಗಾಗ ಕಾಡುತ್ತಿದ್ದ ಪ್ರಶ್ನೆ. +ಪಿಯುಸಿಯ ಮೊದಲನೇ ವರ್ಷ ಮುಗಿದು ರಜಾ ಬಂದಾಗ ಅದೆಂತದೋ ಸಿ.ಇ.ಟಿ ಅಂತ ಪರೀಕ್ಷೆಯಿದೆ ಅಂತ ಗೊತ್ತಾಯ್ತು. ಎಲ್ಲೆಲ್ಲೂ ಅದ್ರ ಟ್ಯೂಷನ್ನಿಗೆ ಹೋಗೋರ ಹಾವಳಿ. ಅದ್ರಲ್ಲಿ ಏನಿರಬಹುದು ಅಂತ ವಿಚಾರಿಸಿದ ಶ್ಯಾಮನಿಗೆ ತಾನೊಮ್ಮೆ ಯಾಕೆ ಪ್ರಯತ್ನಿಸಬಾರ್ದು ಅನಿಸ್ತು. ಯಾವಾಗ ಈ ಓದುವಿಕೆಯಲ್ಲಿ ಮುಳುಗಿಹೋದ್ನೋ, ಅದ್ರಲ್ಲೇ ಹೇಗೆ ಘಂಟೆ, ದಿನ, ವಾರಗಳು ಉರುಳಿದ್ವೋ ಗೊತ್ತೇ ಆಗ್ಲಿಲ್ಲ. ಶ್ಯಾಮನೆಂದ್ರೆ ಲೈಬ್ರರಿ ಅಂತ ಹುಡುಗ್ರೆಲ್ಲಾ ತಮಾಷೆ ಮಾಡೋ ತರ ಆಗೋಗಿದ್ದ. ಪ್ರಯತ್ನದ ಫಲ ಸಿ.ಇ.ಟಿಯಲ್ಲಿ ದಕ್ಕಿತ್ತು. ಪ್ರತಿಷ್ಟಿತ ಇಂಜಿನಿಯರ್ ಕಾಲೇಜೊಂದರಲ್ಲಿ ಸೇರೋ ಸೀಟಿನ ಭಾಗ್ಯ ಸಿಕ್ಕಿತ್ತು. ಇವನ ಪ್ರತಿಭೆ ನೋಡಿ ಸಾಲ ಕೊಟ್ಟು ಸಹಕರಿಸಿದ ಬ್ಯಾಂಕವ್ರು, ನಾವೆಂತೂ ಓದಲಿಲ್ಲ , ನೀನಾದ್ರೂ ಓದಿ ಮುಂದೆ ಹೋಗೆಂದು ಬೆನ್ನು ತಟ್ಟುತ್ತಿದ್ದ ಪೋಷಕರು ನೆನ್ಪಾಗಿದ್ರು, ಕಾಲೇಜಲ್ಲಿ ಗಣಿತ ಅಂದ್ರೆ ಭಯಪಡುತ್ತಿದ್ದ ತನಗೆ ಪ್ರೀತಿಯಿಂದ ಅರ್ಥವಾಗೋ ತರ ಹೇಳಿಕೊಟ್ಟ ಮಿಸ್ಸು .. ಹೀಗೆ ಹಲವರು ಕಣ್ಣ ಮುಂದೆ ಬಂದು ಹೋದ್ರು. ನೋವ ಮರೆಸಿದ್ದ ಕಾಲೇಜು ಪರ್ವ ನಲಿವ ಅಂಚನ್ನು ಬಾಳಿಗೆ ಹಂಚೋಕೆ ತಯಾರಾಗಿತ್ತು. +ಇಂಜಿನಿಯರಿಂಗ್ ಅಂದುಕೊಂಡಷ್ಟು ಸುಲಭವಿರಲಿಲ್ಲ. ದೊಡ್ಡ ಕಾಲೇಜಿನ ನಿರೀಕ್ಷೆಗಳು ದೊಡ್ಡವೇ ಇತ್ತು. ಅಲ್ಲಿ ಬಂದವರೆಲ್ಲಾ ಇವನಂತಹವರೇ ಆಗಿದ್ದರಿಂದ ಪೈಪೋಟಿಯೂ ಹೆಚ್ಚೇ ಇತ್ತು. ಮೊಬೈಲು, ಬೈಕು, ಜೀನ್ಸುಗಳಲ್ಲಿ ಕಂಗೊಳಿಸುತ್ತಿದ್ದ ಆ ಹುಡುಗರ ಮಧ್ಯೆ ಸಾದಾ ಸೀದಾ ಇರುತ್ತಿದ್ದ ಇವನೊಬ್ಬ ಅಬ್ಬೇಪಾರಿ. ತನ್ನ ಪಾಡಿಗೆ ತಾನಿದ್ದುಬಿಡುತ್ತಿದ್ದ ಇವ ಮೊದ ಮೊದಲು ಅಲ್ಲಿ ಕಾಮಿಡಿ ವಸ್ತುವಾಗಿದ್ರೂ ಇವನ ಒಳ್ಳೇ ಗುಣಕ್ಕೆ ಮನಸೋತ ಗೆಳೆಯರ ಗ್ಯಾಂಗೊಂದರಲ್ಲಿ ತಾನೂ ಒಬ್ಬನಾಗಿಬಿಟ್ಟಿದ್ದ. ಗಾಂಧಿ ಗಾಂಧಿ ಅಂತ ಕರೀತಿದ್ರೂ ಅವ್ರ ಬರ್ತಡೇ ಪಾರ್ಟಿಗಳಲ್ಲಿ, ಕ್ಲಾಸ್ ಮಾಸ್ ಬಂಕುಗಳಲ್ಲಿ, ಗ್ರೂಪ್ ಟ್ರಿಪ್ಪುಗಳಲ್ಲಿ ಖಾಯಂ ಸದಸ್ಯನಾಗಿದ್ದ ಶ್ಯಾಮ. ಅವರೆಲ್ಲರ ಕ್ಲಾಸ್ ಅಸೈನ್ ಮೆಂಟುಗಳು ಇವನದೇ ಕಾಪಿ ಅಂತ ಗೊತ್ತಿದ್ರೂ ಲೆಕ್ಚರರುಗಳು ಕ್ಲಾಸಲ್ಲಿ ಏನೂ ಹೇಳುವಂತಿರಲಿಲ್ಲ. ಒಂದಿಬ್ಬರು ಇವನನ್ನ ಸೈಡಿಗೆ ಕರೆದು ಅವರ ಜೊತೆ ಸೇರ್ಬೇಡ. ನೀನು ಹಾಳಾಗೋಗೋಲ್ಲದೇ ನಿನ್ನ ಅಸೈನ್ ಮೆಂಟು ಕಾಪಿ ಮಾಡೋಕೆ ಕೊಟ್ಟು ಅವರನ್ನ ಇನ್ನಷ್ಟು ಸೋಂಬೇರಿ ಮಾಡ್ತಿದೀಯ ಅಂತ ಎಚ್ಚರಿಸಿದ್ರೂ ತಲೆ ಕೆಡಿಸಿಕೊಂಡಿರಲಿಲ್ಲ ಶ್ಯಾಮ. ಅಯ್ಯೋ ಹೋಗ್ಲಿ ಬಿಡಿ ಸರ್. ಮೈನ್ ಎಕ್ಸಾಂ ಟೈಮಿಗೆ ಸರಿ ಹೋಗ್ತಾರೆ. ಪಿ.ಯು.ನಲ್ಲಿ ಒಂದು ದಿನವೂ, ಹೋಗ್ಲಿ ಒಂದು ಘಂಟೆಯೂ ವ್ಯರ್ಥ ಮಾಡದೆ ಓದು, ಓದು ಅಂತ ಇವ್ರ ಪೋಷಕರು ಕಾಟ ಕೊಟ್ಟಿರ್ತಾರೆ. ಆ ಕಾಟದಿಂದ ಈಗ ತಾನೇ ಮುಕ್ತಿ ಸಿಕ್ಕಿದೆ ಇವರಿಗೆ. ಸ್ವಲ್ಪ ದಿನ ಆರಾಮಾಗಿರ್ಲಿ ಬಿಡಿ. ನಿಧಾನ ಸರಿ ಹೋಗ್ತಾರೆ ಅಂತಿದ್ದ. +ಅವರಿಗೆ ಇವನಂತ ಹುಡುಗ್ರನ್ನ ನೋಡೋದು ಹೊಸದೇ ? ಏನಾದ್ರೂ ಹಾಳಾಗಿ ಹೋಗ್ಲಿ ಅಂತ ಸುಮ್ನಾಗಿದ್ರು. ಮೊದಲ ಸೆಮ್ಮಿನ ಪರೀಕ್ಷೆ ಬಂತು. ಒಳ್ಳೊಳ್ಳೆ ರ್‍ಯಾಂಕಿನ ಹುಡುಗರ ಕಾಲೇಜು ತಾನೇ. ಸಹಜವಾಗೇ ಫೈನಲ್ ಎಕ್ಸಾಮಲ್ಲಿ ಎಲ್ಲರದ್ದೂ ಒಳ್ಳೊಳ್ಳೆ ಮಾರ್ಕುಗಳೆ. ಶ್ಯಾಮನಿದ್ದ ಗ್ಯಾಂಗಿನಲ್ಲಿ ಶ್ಯಾಮನದ್ದೇ ಹೆಚ್ಚಿದ್ದರೂ ಉಳಿದವರದ್ದು ತೀರಾ ಕಮ್ಮಿಯೇನಿರಲಿಲ್ಲ. ಹೆಂಗೆ ಕಾಲಹರಣ ಮಾಡಿದ್ರೂ ಕೊನೆಗೆ ಸರಿಯಾಗಿ ಓದಿದ್ರಾಯ್ತು ಅನ್ನೋ ಭಂಡ ಧೈರ್ಯ ಬಂದ ಕಾರಣವೋ ಏನೋ ಹುಡುಗರ ಟ್ರಿಪ್ಪುಗಳು ಜಾಸ್ತಿ ಆದ್ವು. ಮುಳ್ಳಯ್ಯನ ಗಿರಿ, ಸಕಲೇಶಪುರ, ಶೃಂಗೇರಿ ಅಂತ ಬೈಕ್ ಹತ್ತಿ ಹೊರಟುಬಿಡೋರು. ಶ್ಯಾಮನ ಬಳಿ ಬೈಕ್ ಇರದಿದ್ರೂ ಇವರ ಗ್ರೂಪಿನ ಕಾಯಂ ಸದಸ್ಯನಾದ ಇವನನ್ನು ಬಿಟ್ಟು ಹೋಗೋದು ಹೇಗೆ? ಈ ಟ್ರಿಪ್ಪುಗಳಲ್ಲೇ ಎರಡನೇ ಸೆಮ್ಮು ಕಳೆದಿತ್ತು. +ಮೂರನೇ ಸೆಮ್ಮು. ಅಂದ್ರೆ ಅವರು ತಗೊಂಡ ಬ್ರಾಂಚಿಗೆ ಪ್ರವೇಶ. ಇಂಜಿನಿಯರಿಂಗಿನ ಬಿಸಿ ತಟ್ಟತೊಡಗಿತ್ತು ಆಗ. ಟ್ರಿಪ್ಪುಗಳು ಕಮ್ಮಿಯಾಗಿದ್ರೂ ನಿಂತೇನು ಹೋಗಿರಲಿಲ್ಲ. ಹುಡುಗರಿಗೆ ಸ್ವಲ್ಪ ಪ್ರಬುದ್ದತೆ, ವಿಷಯಗಳಲ್ಲಿ ಆಸಕ್ತಿ ಶುರುವಾಗಿತ್ತಾ ಗೊತ್ತಿಲ್ಲ. ಆಗಷ್ಟೇ ಪರಿಚಯವಾಗಿದ್ದ ಫೇಸ್ಬುಕ್ಕಲ್ಲಿ ಮೊಬೈಲಿಗಿಂತ ಹೆಚ್ಚು ಚಾಟಿಂಗ್ ಶುರುವಾಗಿತ್ತಾ ? ಗೊತ್ತಿಲ್ಲ. ಕಾಲೇಜು ಕಳೆದ ನಂತರ ಮಾತಾಡೋಕೂ ಸಿಗದಂತೆ ಮರೆಯಾಗ್ತಿದ್ದ ಗೆಳೆಯರೆಲ್ಲಾ ಮಧ್ಯರಾತ್ರಿಯವರೆಗೂ ಫೇಸ್ಬುಕ್ಕಲ್ಲಿ ಸಿಗ್ತಿದ್ರು ! ಆಗ ಕಣ್ಣಿಗೆ ಬಿದ್ದವಳೇ ಸುಧಾ. ಒಂದಿನ ಸಡನ್ನಾಗಿ ಸುಧಾ ಸುಧೇಷ್ಣೆ ಅನ್ನೋ ಹೆಸರಲ್ಲಿ ಕೋರಿಕೆ ಬಂದಾಗ ಯಾರಿದು ಅಂತ ಕುತೂಹಲಗೊಂಡಿದ್ದ ಶ್ಯಾಮನಿಗೆ ಹೈಸ್ಕೂಲ ದಿನಗಳು ನೆನಪಾಗಿದ್ವು. ಆಗ ಹಾಯ್, ಹಲೋ ಬಿಟ್ರೆ ಹೆಚ್ಚೇನೂ ಮಾತನಾಡದ ಇವಳು ಈಗೇಕೆ ಕೋರಿಕೆ ಕಳ್ಸಿದ್ಲಪ್ಪ ಅಂತ ಒಮ್ಮೆ ಗಾಬರಿಗೊಂಡಿದ್ದ ಶ್ಯಾಮ. ಶ್ಯಾಮನ ಮನಸ್ಸಲ್ಲಿ ತಾನಿನ್ನೂ ಸಾಮಾನ್ಯ ವಿದ್ಯಾರ್ಥಿ ಮತ್ತು ಸುಧಾ ಯಾರೊಂದಿಗೂ ಮಾತನಾಡದ ಟಾಪರ್ರು ! ಕೋರಿಕೆ ಸ್ವೀಕರಿಸೋಕೆ ಹೆದರಿ ಹಂಗೇ ಬಿಟ್ಟಿದ್ದ. +ಒಂದು ವಾರದ ನಂತರ ಹೇಯ್ ಶ್ಯಾಮ. ಹೇಗಿದ್ದೀಯ. ನೀನು ನಮ್ಮ ಹೈಸ್ಕೂಲವನು ತಾನೇ ? ಯಾಕ್ರಿ ಒಂದು ವಾರದಿಂದ ನನ್ನ ರಿಕ್ವೆಸ್ಟ್ ಸ್ವೀಕರಿಸಿಲ್ಲ ಅಂತ ಮೆಸೇಜ್ ಕಳಿಸಿದ್ಲು ಫೇಸ್ಬುಕ್ಕಲ್ಲಿ. ರಿಕ್ವೆಸ್ಟನ್ನ ಸ್ವೀಕರಿಸಿ ಹೆ… ಹೆ… ಇಲ್ಲ. ಹಾಗೇನಿಲ್ಲ. ಈ ಕಡೆ ಬರದೆ ಸುಮಾರು ದಿನ ಆಯ್ತು ಅಂತ ಪೆದ್ದು ಉತ್ರ ಕೊಟ್ಟಿದ್ದ. ಅದು ಸುಳ್ಳಂತ ಇಬ್ರಿಗೂ ಗೊತ್ತಿತ್ತು. +ಸುಧಾ ಪುಣೆಯಲ್ಲಿ ಯಾವುದೋ ಅವರೂಪದ ವಿಷಯದಲ್ಲಿ ಡಿಗ್ರಿ ಮಾಡ್ತ ಇರೋದು, ತುಂಬಾ ದಿನಗಳಿಂದ ತನ್ನ ಕ್ಲಾಸುಮೇಟುಗಳನ್ನ ಫೇಸ್ಬುಕ್ಕಲ್ಲಿ ಹುಡುಕಿದ್ದು. ಅದರಲ್ಲಿ ಶ್ಯಾಮನ್ನ ಬಿಟ್ಟು ಉಳಿದವರೆಲ್ಲಾ ಕಂಡಿದ್ದು. ಶ್ಯಾಮ ಮಾತ್ರ ಇತ್ತೀಚೆಗಷ್ಟೇ ಕಂಡಿದ್ದು… ಹೀಗೆ ಹಲವಷ್ಟು ವಿಷಯಗಳು ಪರಿಚಯವಾದ ದಿನದ ನಂತರದ ಹಲ ಸಂಜೆಗಳಲ್ಲಿ ಗೊತ್ತಾದ್ವು. ಹಚ್ಚ ಹಸಿರ ಕಾನನ, ಮೈತುಂಬಿ ಹರಿತಿರೋ ನದಿ, ಸ್ವಚ್ಛ ಜಲರಾಶಿಯ ನಡುವೆ ಮನೆ ಮಾಡಿಕೊಂಡು ಇದ್ದು ಬಿಡಬೇಕು ಅನ್ನೋ ಆಸೆ. ಇಲ್ಲ ಅಂದ್ರೆ ಅಂತ ಜಾಗಗಳಿಗೆ ಆಗಾಗ ಟ್ರಿಪ್ಪಾದ್ರೂ ಹೋಗಿ ಬರ್ತಿರ್ಬೇಕು ಅನ್ನೋ ಆಸೆ ಅಂತ ಒಮ್ಮೆ ಸುಧಾ ಹೇಳ್ತಾ ಇದ್ರೆ ಶ್ಯಾಮ ಆಶ್ಚರ್ಯದಿಂದ ಕೇಳ್ತಾ ಇದ್ದ. ಹೈಸ್ಕೂಲಲ್ಲಿ ಕನ್ನಡದಲ್ಲಿ ಮಾತಾಡಿಸಿದ್ರೂ ಇಂಗ್ಲೀಷಲ್ಲೇ ಉತ್ರ ಕೊಡುತ್ತಿದ್ದ, ಸಾಫ್ಟವೇರು, ಫಾರಿನ್ನು ಅನ್ನುತ್ತಿದ್ದ ಸುಧಾ ಇವಳೇನಾ ಅನಿಸಿಬಿಡ್ತು ಇವನಿಗೆ. +ಅವಳ ಸ್ವಚ್ಛ ಕನ್ನಡದ ಮುಂದೆ ತನ್ನ ಕಲಬೆರಕೆ ಕನ್ನಡ ಬಿದ್ದು ಬಿದ್ದು ನಕ್ಕಂಗಾಯ್ತು ಶ್ಯಾಮನಿಗೆ. ಅಷ್ಟಕ್ಕೂ ಯಾವುವಾದ್ರೂ ವಸ್ತುವಿನ ಬೆಲೆ ತಿಳ್ಕೋಬೇಕು ಅಂದ್ರೆ ಅದ್ರಿಂದ ದೂರಾಗ್ಬೇಕು ಅನ್ನೋ ಮಾತು ಅವಳ ವಿಷಯದಲ್ಲಿ ನಿಜವಾಗಿತ್ತಾ ? ಗೊತ್ತಿಲ್ಲ. ಒಟ್ನಲ್ಲಿ ಇವರಿಬ್ಬರ ಆಲೋಚನೆಗಳು ಒಂದೇ ದಿಕ್ಕಿನಲ್ಲಿ ಹರಿಯೋದು ನೋಡಿ ಇಬ್ಬರೂ ಸುಮಾರು ಸಲ ಖುಷಿಯಾಗ್ತಿದ್ರು. ಯಾವಾಗ್ಲೂ ಟ್ರಿಪ್ಪು ಹಾಕೋ ನಿಮ್ಮನ್ನ ಕಂಡ್ರೆ ಹೊಟ್ಟೆ ಕಿಚ್ಚಾಗುತ್ತೆ ಕಣೋ ನಂಗೆ ಅಂದಿದ್ಲು ಒಮ್ಮೆ ಸುಧಾ. +ನೀ ಅಲ್ಲಿ ಕೂತ್ಕೊಂಡು ಬಾಯಿ ಬಡ್ಕೊಂಡ್ರೆ ಏನಾಗುತ್ತೆ ? ಇಲ್ಲಿ ಬಾ. ನಿನ್ನೂ ಕರ್ಕೊಂಡು ಹೋಗ್ತೀವಿ ಅಂದಿದ್ದ ಶ್ಯಾಮನೂ ಫುಲ್ ಜೋಷಲ್ಲಿ. ಆದ್ರೆ ಅವಳು ಇವನ ಮಾತನ್ನು ಅಷ್ಟು ಸೀರಿಯಸ್ಸಾಗಿ ತಗೊಂಡು ಬೆಂಗಳೂರಿಗೆ ಬಂದೇ ಬಿಡೋ ಪ್ಲಾನು ಹಾಕ್ತಾಳೆ ಅಂತ ಅಂದ್ಕೊಂಡಿರಲಿಲ್ಲ. ಇನ್ನೆರಡು ವಾರದಲ್ಲಿ ಅವಳು ಬರೋಳಿದ್ಲು. ಅವಳಿಗಾಗಿ ಒಂದು ಸಖತ್ತಾದ ಜಾಗ ಹುಡ್ಕೋ ಹೊಣೆಗಾರಿಕೆ ಇವನದ್ದಾಗಿತ್ತು. +ಅಷ್ಟಕ್ಕೂ ಬರ್ತಿರೋದು ಅವಳೊಬ್ಳೆ. ಒಬ್ನೆ ಹೆಂಗೆ ಕರ್ಕೊಂಡೋಗೋದು ? ನನ್ನತ್ರ ಬೈಕಿಲ್ಲ. ಏನಿಲ್ಲ. ಮೊದಲ ಬಾರಿ ಇಲ್ಲಿಗೆ ಬರ್ತೀನಿ ಅಂತಿರೋಳು ಬರೀ ಪ್ರಾಕ್ಟಿಕಲ್ ಜೋಕ್ ಮಾಡ್ತಿದಾಳಾ ? ಅಥವಾ ನಿಜವಾಗೂ ಬರ್ತಾಳಾ ? ಬಂದೇ ಬಿಟ್ರೆ ಅವಳನ್ನ ಒಬ್ಬಳೇ ಟ್ರಿಪ್ಪಿಗೆ ಎಲ್ಲಿಗೆ ಕರ್ಕೊಂಡು ಹೋಗೋದು. ಗ್ರೂಪಲ್ಲಿ ಹೋಗೋಗು ಚೆನ್ನಾಗಿರತ್ತೆ. ಆದ್ರೆ ಬರೋ ಅವಳಿಗೆ ನಿನ್ನ ಜೊತೆಗೆ ಇನ್ಯಾರಾದ್ರೂ ಹುಡುಗೀರನ್ನ ಕರ್ಕೊಂಡು ಬಾ ಅಂತ ಹೇಳ್ಲಾ ? ಟ್ರಿಪ್ಪು ಅಂತ ನಮ್ಮ ಗ್ಯಾಂಗಿನಲ್ಲಿ ಒಂದಿಷ್ಟು ಹುಡುಗೀರನ್ನ ಕರ್ಕೊಂಡು ಹೋಗಿದ್ದಿದ್ರೂ ಆ ಹುಡುಗೀರು ಈ ಹುಡುಗಿ ಯಾರು ಅಂದ್ರೆ ಏನನ್ನೋದು ? ಅಷ್ಟಕ್ಕೂ ಅವರ ಜೊತೆ ಇವಳು ಹೊಂದ್ಕೋತಾಳೋ ಇಲ್ವೋ ? ಹಿಂದಿನ ಟ್ರಿಪ್ಪಿನಲ್ಲಿ ಯಾವ ಹುಡುಗೀರೂ ಬರದೆ ಬರೀ ಹುಡುಗ್ರೇ ಹೋಗಿದ್ವಿ. ಈ ಸಲದ ಟ್ರಿಪ್ಪಲ್ಲಿ ಹುಡುಗೀರನ್ನ ಕರ್ಕೊಂಡೋಗೋಣ್ವಾ ಅಂತ ಹುಡುಗ್ರಿಗೆ ಹೇಗೆ ಹೇಳ್ಲಿ, ಇವಳಿಗೆ ಕಂಪೆನಿಯಾಗ್ಲಿ ಅಂತ ಹುಡುಗೀರಿಗೆ ಹೋಗಿ ಹೇಗೆ ಕೇಳ್ಲಿ ಅನ್ನೋ ಹಲವು ಪ್ರಶ್ನೆಗಳು ಪ್ರತೀ ಸಂಜೆ ಸುಧಾ ಪಿಂಗ್ ಮಾಡಿದಾಗ್ಲೂ ಕಾಡ್ತಿದ್ವು. ಭಯಕ್ಕೆ ಉಪ್ಪು , ಖಾರ ಹಚ್ಚುವಂತೆ ಬೆಂಗಳೂರ ಸ್ಕೂಲೊಂದರಲ್ಲಿ ಹಂಗಾಯ್ತಂತೆ, ಕ್ಯಾಬ್ ಡ್ರೈವರ್ರು ಸಿಕ್ಕಿ ಬಿದ್ದನಂತೆ. ಏಟಿಎಮ್ಮಿನಲ್ಲಿ ಹಾಗಾಯ್ತಂತೆ ಅನ್ನೋ ಸುದ್ದಿಗಳೇ ತಿಂಗಳಲ್ಲಿ ಹರಡಿಹೋಗಿ ಯಾರೋ ತಲೆಕೆಟ್ಟವರ ಕೃತ್ಯಗಳಿಗೆ ಎಲ್ಲರೂ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಪರಿಸ್ಥಿತಿ ಸರಿಯಿಲ್ಲ. ಇನ್ಯಾವಾಗಾದ್ರೂ ಹೋಗೋಣ ಎಂದರೂ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಸುಧಾ. ಒಂದಿನ ಎಂತೂ ಶ್ಯಾಮ ಅದ್ಯಾವ ಮೂಡಿನಲ್ಲಿದ್ನೋ ಗೊತ್ತಿಲ್ಲ. ದಿನಾ ಬರೀ ರಕ್ತಪಿಪಾಸು, ಧನಪಿಪಾಸುಗಳ ಸುದ್ದಿ ಓದಿ ಓದಿ ಸಾಕಾಗಿಹೋಗಿದೆ ನಂಗೆಂತೂ. ನಿನಗೂ ಹಾಗೇ ಅಂದ್ಕೊಂಡಿರ್ತೀನಿ. ಅಂತಾದ್ರಲ್ಲಿ, ಎಷ್ಟೊ ವರ್ಷಗಳಿಂದ ಮುಖ ಕಾಣದ, ಹೈಸ್ಕೂಲಲ್ಲಿ ಕಂಡ ಹಾಗೇ ಇನ್ನೂ ಇದ್ದೀನಿ ಅಂದುಕೊಂಡು ಅದ್ಯಾವ ಧೈರ್ಯದ ಮೇಲೆ ಬೆಂಗಳೂರಿಗೆ ನನ್ನ ಭೇಟಿ ಮಾಡೋಕೆ ಬರ್ತಾ ಇದ್ದೀಯ ನೀನು ? ಅದೂ ಒಬ್ಬಳೇ ? ಭಯ ಆಗೋಲ್ವ ಅಂದಿದ್ದ. ಅರ್ಧ ಘಂಟೆಯಾದ್ರೂ ಅವಳಿಂದ ಉತ್ತರ ಬರದಿದ್ದಾಗ ಬೇಸತ್ತು ಲಾಗೌಟ್ ಮಾಡಿದ್ದ. ಮತ್ತೊಂದು ದಿನ ಆ ಕಡೆ ತಲೇನೆ ಹಾಕಿರಲಿಲ್ಲ. +ಮಾರನೇ ದಿನ ಲಾಗಿನ್ ಆದ್ರೆ ಇಪ್ಪತ್ಮೂರು ಮೆಸೇಜುಗಳು. ಅದರಲ್ಲಿ ಇಪ್ಪತ್ತೆರಡು ಆಕೆಯವೇ . ಕರೆಂಟ್ ಹೋಗಿತ್ತು ಸಾರಿ ಅನ್ನೋದ್ರಿಂದ ಶುರುವಾಗಿ ಕೊನೆಗೆ ದೊಡ್ಡ ಕತೆಯನ್ನೇ ಬರೆದುಬಿಟ್ಟಿದ್ಲು. ನನಗೆ ಕೃಷ್ಣನಂತಹ ಅಣ್ಣ, ಭೀಮನಂತಹ ಪತಿ ಸಿಕ್ಕೋ ಭರವಸೆ ಇರೋದ್ರಿಂದ ಜೀವನದಲ್ಲಿ ಯಾವ ದುಷ್ಯಾಸನ , ಕೀಚಕರು ಏನೂ ಮಾಡೋಕಾಗೋಲ್ಲವೆಂಬ ನಂಬಿಕೆಯಿದೆ ಅಂತ ಒಂದು ಮುಗುಳುನಗೆಯೊಂದಿಗೆ ಮಾತು ಮುಗಿಸಿದ್ಲು. ಅಂದು ರಾತ್ರೆ ಮತ್ತೆ ಪಿಂಗ್ ಮಾಡಿದ ಇವನಿಗೆ ಎಂದಿನಂತೆ ಹರಟೆಗೆ ಸಿಕ್ಕಿರಲಿಲ್ಲ ಅವಳು. ಮುಂದಿನ ವಾರ ಹೋಗೇನಕಲ್ಲಿಗೆ ಹೋಗೋಣ್ವಾ ಅಂದಿದ್ದ ಇವ ಆ ರಾತ್ರಿಯ ಟೀವಿ ನೋಡಿರ್ಲಿಲ್ಲ. ಯಾವುದೋ ಅನಿವಾರ್ಯ ಕಾರಣದಿಂದ ಎಲ್ಲೋ ಹೋಗಬೇಕಾದ ಅವಳು ಇವನಿಗೆ ಪಿಂಗೂ ಮಾಡಿರಲಿಲ್ಲ. ದಿನಾ ಸಂಜೆ ಅವಳ ಪ್ರತಿಕ್ರಿಯೆ ಏನೆಂದು ನೋಡೋಕೋಸ್ಕರವೇ ಫೇಸ್ಬುಕ್ಕಿಗೆ ಹೋಗ್ತಿದ್ದ ಇವನಿಗೆ ಟ್ರಿಪ್ಪಿನ ಹಿಂದಿನ ರಾತ್ರಿಯಾದ್ರೂ ಉತ್ತರ ಬಂದಿರಲಿಲ್ಲ. ಅವಳೇ ಬರದೇ ಇನ್ನೇನು ಟ್ರಿಪ್ಪು ಅಂತ ಹೊಗೇನಕಲ್ಲ ಟ್ರಿಪ್ಪಿಗೆ ನಾನು ಬರೋಲ್ಲ. ನೀವು ಹೋಗೋದಾದ್ರೆ ಹೋಗಿ ಬನ್ನಿ ಅಂದಿದ್ದ ಟ್ರಿಪ್ಪ ಹಿಂದಿನ ಸಂಜೆ. ಎಂದೂ ಹೀಗನ್ನದ ಇವ ಇವತ್ಯಾಕೆ ಹೀಗಂತಿದಾನೆ ಅಂತ ಅವರ್ಯಾರಿಗೂ ಗೊತ್ತಾಗಲಿಲ್ಲ. ಎಷ್ಟು ಕೇಳಿದ್ರೂ ಇವನೂ ಕಾರಣ ಬಾಯ್ಬಿಡಲೊಲ್ಲ. ಇವನನ್ನ ಬಿಟ್ಟು ಹೋಗೋಕೆ ಯಾರಿಗೂ ಮನಸ್ಸಾಗದೇ ಟ್ರಿಪ್ಪನ್ನೇ ಕ್ಯಾನ್ಸಲ್ ಮಾಡಿದ್ರು ಕೊನೆಗೆ. +ಮಾರನೇ ದಿನ ಬೆಳಬೆಳಗ್ಗೆ ಗೆಳೆಯನೊಬ್ಬ ಫೋನ್ ಮಾಡಿ ಟೀವಿ ಹಾಕು ಅಂದ. ಅವನ ದನಿಯಲ್ಲಿದ್ದ ಗಾಬರಿ ನೊಡಿ ಏನಾಯ್ತಪ್ಪ ಅಂತ ಟೀವಿ ಹಾಕಿದ ಶ್ಯಾಮನಿಗೆ ಹೃದಯ ಬಾಯಿಗೆ ಬಂದ ಭಾವ. ಹೊಗೇನಕಲ್ಲಲ್ಲಿ ಸಿಕ್ಕಾಪಟ್ಟೆ ಮಳೆ. ಬೋಟಿಂಗಿಗೆ ಹೋಗಿ ಕೊಚ್ಚಿಹೋದ ಎರಡು ತಂಡಗಳಿಗಾಗಿ ಹುಡುಕಲು ನೀರು ಇಳಿಯೋವರೆಗೆ ಕಾಯುವಿಕೆ, ಇನ್ನೊಂದು ತಿಂಗಳು ಅಲ್ಲಿ ಯಾರನ್ನೂ ಬಿಡೋದಿಲ್ಲ, ಚಾರಣಿಗರಿಗೆ ಅತ್ತ ಸುಳಿಯದಂತೆ ಪೋಲೀಸರ ಎಚ್ಚರಿಕೆ ಅಂತ ಪುಂಖಾನುಪುಂಖವಾಗಿ ಸುದ್ದಿಗಳು ಬರುತ್ತಿತ್ತು ಟೀವಿಯಲ್ಲಿ. ಇತ್ತ ಇಷ್ಟೊತ್ತಿಗೆ ಶವವಾಗಿ ತೇಲಬೇಕಿದ್ದ ತಮ್ಮ ಜೀವವುಳಿಸಿದ ಕಾಣದ ದೇವರಿಗೆ, ಪರೋಕ್ಷವಾಗಿ ಜೀವವುಳಿಸಿ ಪ್ರತ್ಯಕ್ಷ ದೇವರೇ ಆಗೋದ ಸುಧೇಷ್ಣೆಗೆ ನಮಸ್ಕರಿಸುತ್ತಿದ್ದ ಶ್ಯಾಮ ಫೇಸ್ಬುಕ್ಕಲ್ಲಿ ಮತ್ಯಾವಾಗ ಸಿಗ್ತಾಳೋ ಅವಳು. ಮಾತಾಡಬೇಕು, ಜೀವವುಳಿಸಿದ್ದಕ್ಕೆ ಥ್ಯಾಂಕ್ಸ್ ಹೇಳಬೇಕು ಅಂತ ಚಡಪಡಿಸುತ್ತಿದ್ದ. + \ No newline at end of file diff --git a/PanjuMagazine_Data/article_1042.txt b/PanjuMagazine_Data/article_1042.txt new file mode 100644 index 0000000000000000000000000000000000000000..91ee91be5be143dc796759ee6f5b20454b7a690e --- /dev/null +++ b/PanjuMagazine_Data/article_1042.txt @@ -0,0 +1,18 @@ +ದಿನಾಂಕ ೧೪ ಫೆಬ್ರವರಿ ೨೦೧೩ +ಪ್ರೀತಿಯ ಹೆಸರು ಹೇಳಲಾಗದವಳೇ/ಪಲ್ಲವಿ, +ಧನ್ಯವಾದಗಳು. ಖಾಲಿ ಹಾಳೆಯಂತಿದ್ದ ನನ್ನನ್ನು ಎಲ್ಲರೂ ಓದುವಂತಹ ಕೃತಿಯನ್ನಾಗಿ ಮಾಡಿದ ನಿನಗೆ ಪ್ರೀತಿಪೂರ್ವಕ ಧನ್ಯವಾದಗಳು. ಇದು ನಾನು ನಿನಗಾಗಿ ಬರೆಯುತ್ತಿರುವ ೩೬೫ನೇ ಪತ್ರ. ನಿನ್ನೆ ಬರೆಯುವಾಗಿದ್ದ ಪ್ರೇಮ, ಅದೇ ಉತ್ಕಟತೆಯೊಂದಿಗೆ ಇದನ್ನೂ ನಿನಗೆ ಅರ್ಪಿಸುತ್ತಿದ್ದೇನೆ. ನಿನ್ನ ಭಕ್ತನ ಈ ಕಿರು ಕಾಣಿಕೆಯನ್ನು ಸ್ವೀಕರಿಸುತ್ತೀಯಲ್ಲವೇ? +ಆಯ್ತು ಕೋಪ ಮಾಡ್ಕೋಬೇಡ. ಹೀಗೆಲ್ಲಾ ಹುಚ್ಚು ಪ್ರೇಮಿಯಂತೆ ಮಾತಾಡೋದು ನಿನಗೆ ಇಷ್ಟವಿಲ್ಲ ಅನ್ನೋದು ನೆನಪಿದೆ. ಅದೆಲ್ಲಾ ಒತ್ತಟಿಗಿರಲಿ. ಇವತ್ತು ಫೆಬ್ರವರಿ ೧೪. ವ್ಯಾಲೆಂಟೈನ್ಸ್ ಡೇ. ಕನ್ನಡದಲ್ಲಿ ಪೇಮಿಗಳ ದಿನ. ಶುಭಾಶಯಗಳು. ಏನೂ? ನಿನಗೆ ಗೊತ್ತು ಅನ್ನುತ್ತಿದ್ದೀಯಾ? ಹೌದು. ನಿನಗೆ ಎಲ್ಲಾ ಗೊತ್ತು. ಆದರೆ ಅವತ್ತೊಂದು ದಿನ ನನ್ನ ಹುಟ್ಟಿದ ದಿನವನ್ನೇ ಮರೆತುಬಿಟ್ಟಿದ್ದೆ. ಇಲ್ಲಾ. ಮರೆತವಳಂತೆ ನಟಿಸಿದ್ದೆ. ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಗಳು ಮುಗಿದ ದಿನ. ಪರೀಕ್ಷೆ ಮುಗಿಸಿದವಳೇ ಎಲ್ಲರೆದುರು ನನ್ನನ್ನು ಅಪ್ಪಿಕೊಂಡು ಇಡೀ ಜಗತ್ತಿಗೆ ಕೇಳುವಂತೆ ಕೂಗಿ ವಿಷ್ ಮಾಡುತ್ತೀಯೆಂದು ಕಾಯುತ್ತಾ ನಿಂತ್ತಿದ್ದರೆ, ಬಂದವಳೇ ಮನೆಗೆ ಹೋಗುತ್ತೇನೆಂದು ಓಡಿಬಿಟ್ಟೆ. ತಿರುಗಿ ಬಂದು ಹೇಳುವೆಯೇನೋ ಎಂದು ನೀನು ಹೋದ ದಾರಿಯನ್ನೇ ಆಸೆ ತುಂಬಿದ ಕಂಗಳಿಂದ ನೋಡುತ್ತಿದ್ದೆ. ಆದರೆ ನೀನು ಬರಲಿಲ್ಲ. ಕಣ್ಣ ಮೂಲೆಯಲ್ಲೊಂದು ಹನಿ ಚಿಗುರೊಡೆದಿತ್ತು ಹಾಗೆಯೇ ನಿನ್ನ ಮೇಲೆ ಕೋಪವೂ ಕೂಡ. +ಅದೇ ದಿನ ಸಂಜೆ ಶಾಲೆಯಲ್ಲಿ ಎಲ್ಲ ಗೆಳೆಯರೂ ಬಂದಿದ್ದರು. ನೀನೂ ಬಂದಿದ್ದೆ. ಕೆಂಪು ಹಸಿರು ಲಂಗ ದಾವಣಿ ಹಾಕಿಕೊಂಡು ಮುದ್ದಾಗಿ ಕಾಣುತ್ತಿದ್ದೆ. ಬಿಟ್ಟ ಕಣ್ಣು ಬಿಟ್ಟಂತೆ ನಿನ್ನನ್ನೇ ನೋಡುತ್ತಾ ನಿಂತು ಬಿಟ್ಟಿದ್ದೆ ನಾನು. ರಮೇಶ! ರಮೇಶ! ಯಾವುದೋ ಸ್ವರ್ಗಲೋಕದಿಂದ ಕೆಳಗೆ ಬಿದ್ದಂತಾಯಿತು. ನನ್ನಿಂದ ಕೆಲವೇ ದೂರದಲ್ಲಿ ನೀನು ನಿಂತಿದ್ದೆ. ನಿನ್ನ ಪುಟ್ಟ ಕೈಗಳು ನನ್ನ ತೋಳನ್ನು ಹಿಡಿದಿದ್ದವು. ಈ ಭೂಮಿಯ ಮೇಲೆ ನನ್ನಮ್ಮನ ನಂತರ ನಾನು ತುಂಬಾ ಪ್ರೀತಿ ಮಾಡಿದ ಹೆಣ್ಣು ನೀನು. ಆ ಕ್ಷಣದಲ್ಲಿ ನಿನ್ನ ಕಣ್ಣುಗಳಲ್ಲಿ ಕಂಡದ್ದು ನಮ್ಮ ಸುಂದರ ನಾಳೆಗಳು ಹಾಗೂ ಬರಲಿರುವ ನಮ್ಮ ಪುಟ್ಟ ಕನಸುಗಳು. ಹಿಂದಿದ್ದ ಕೈಗಳಿಂದ ಏನನ್ನೋ ಕೈಗಿಟ್ಟೆ ನೀನು. ನನಗಿನ್ನೂ ಚೆನ್ನಾಗಿ ನೆನಪಿದೆ. ನಿಮ್ಮನೆ ಅಂಗಳದಲ್ಲಿ ಬೆಳೆದ ಕೆಂಪು ಗುಲಾಬಿ ಹಾಗೂ ನಾಲ್ಕಾಣೆಯ ಎರಡು ಆಸೆ ಚಾಕ್ಲೇಟುಗಳು. +ನಗ್ತಾ ಇದೀಯಾ? ಇವತ್ತಿನ ದಿನದಲ್ಲಿ ನಾಲ್ಕಾಣೆ ಚಲಾವಣೆಯಲ್ಲೇ ಇಲ್ಲ. ನಮ್ಮ ದಿನಗಳು ಎಷ್ಟು ಚೆನ್ನಾಗಿದ್ದೋ ಅಲ್ವಾ? ನಮ್ಮಿಬ್ಬರ ಮಧ್ಯೆ ಪ್ರೀತಿ ಹೇಗೆ ಶುರುವಾಗಿದ್ದು ಹೇಗೆಂದು ಇನ್ನೂ ಗೊತ್ತಾಗಿಲ್ಲ. ಬಹುಶ: ಪರಿಶುಧ್ಧ ಪ್ರೀತಿಗೆ ಆರಂಭ ಅಂತ್ಯವೇ ಇರುವುದಿಲ್ಲ ಅನ್ಸುತ್ತೆ. ಎರಡು ಜೀವಗಳ ಸುಂದರ ದಿನಗಳೇ ಅವರ ಪ್ರೀತಿಗೆ ಸಾಕ್ಷಿ. ಪ್ರೇಮ ನಿವೇದನೆ ಮಾಡದೇ ಪ್ರೀತಿ ಮಾಡಿದವರು ನಾವು. ಇವತ್ತಿನಂತೆ ಮೊಬೈಲ್ ಇಂಟರ್ನೆಟ್ ಫೇಸ್‌ಬುಕ್ ಇರಲಿಲ್ಲ ಆ ದಿನಗಳಲ್ಲಿ. ಇದ್ದಿದ್ದು ಕೇವಲ ಖಾಲಿ ಹಾಳೆಗಳು ಹಾಗೂ ನೀಲಿ ಇಂಕಿನ ರೆನಾಲ್ಡ್ಸ್ ಪೆನ್ನು. ನನ್ನ ಸ್ಕೂಲಿನ ಶರ್ಟಿನ ಮೇಲೆ ಪಲ್ಲವಿ ರಮೇಶ್ ಎಂದು ದಪ್ಪದಾಗಿ ಬರೆದ ದಿನ ಮನೆಗೆ ಬರಿ ಮೈಯಲ್ಲೇ ಹೋಗಿದ್ದೆ. ಅಮ್ಮ ಕೇಳಿದಾಗ ಏನೋ ಕುಂಟು ನೆಪ ಹೇಳಿ ಪಾರಾಗಿದ್ದೆ. ಅದೇ ನೆಪದಲ್ಲಿ ಶಾಲೆಗೆ ಚಕ್ಕರ್ ಹೊಡೆದು ಅಣ್ಣಾವ್ರ ನಾ ನಿನ್ನ ಮರೆಯಲಾರೆ ಸಿನಿಮಾಗೆ ಹೋಗಿದ್ದು ನೆನಪಿದೆ ತಾನೇ? +ಕೆಲವೊಮ್ಮೆ ಯೋಚಿಸ್ತೀನಿ. ನನ್ನ ಬದುಕಿನಲ್ಲಿ ನೀನಿರದೇ ಹೋಗಿರದಿದ್ದರೇ ಇವತ್ತು ನಾನು ಏನಾಗಿರುತ್ತಿದ್ದೆ ಅಂತ. ಹೆಚ್ಚೇನೂ ಬದಲಾವಣೆ ಇರುತ್ತಿರಲಿಲ್ಲ. ನನ್ನ ಹೆಂಡತಿಯ ಹೆಸರು ಬೇರೆ ಇರುತ್ತಿತ್ತಷ್ಟೆ. ಹಾಗೆಂದ ಮಾತ್ರಕ್ಕೆ ನನ್ನ ಮಗಳಿಗೇನೂ ನಿನ್ನ ಹೆಸರಿಡುತ್ತಿರಲಿಲ್ಲ. ಮೇಲಿದ್ದವನ ಕೃಪೆ. ಹಾಗೇನೂ ಆಗಲಿಲ್ಲ. ನನ್ನ ಜೀವದ ಗೆಳತಿಯಾದ ನೀನೆ ನನ್ನ ಬಾಳ ಸಂಗಾತಿಯೂ ಆದೆ. ನಿನ್ನ ಕೊರಳಿಗೆ ತಾಳಿ ಕಟ್ಟಿದ ದಿನ ನನ್ನ ಬದುಕು ಸಾರ್ಥಕವಾಯಿತು. ತಂದೆಯಿಲ್ಲದವನಾದ ನನ್ನನ್ನು ನಿನ್ನ ಮಡಿಲಿಗೆ ಹಾಕಿದ್ದಳು ನನ್ನನ್ನು. ಅಷ್ಟು ನಂಬಿಕೆ ನಿನ್ನ ಮೇಲೆ ಅವಳಿಗೆ. +ಮದುವೆಯಾದ ಒಂದು ವರ್ಷದಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದೆ ನೀನು. ನಿನ್ನ ಕೈ ಬೆರಳುಗಳನ್ನು ಹಿಡಿದು ನಿನ್ನ ಹಣೆಗೆ ಮುತ್ತಿಟ್ಟ ಆ ದಿನವಿನ್ನೂ ನನ್ನ ಎದೆಗೂಡಿನಲ್ಲಿ ಹಸಿರಾಗಿದೆ. ಮಗುವಿಗೆ ಹೆಸರೇನಿಡುವುದೆಂದು ಕೇಳಿದರೆ ಹಿಂದೆ ಮುಂದೆ ಯೋಚಿಸದೇ ಲಕ್ಷ್ಮಿ ಎಂದುತ್ತರಿಸಿದೆ. ನನ್ನ ಹಡೆದವಳ ಹೆಸರದು. ಆದರೆ ಮುದ್ದಿನ ಮೊಮ್ಮಗಳ ನೋಡುವ ಭಾಗ್ಯವೇ ಇರಲಿಲ್ಲ ಅವಳಿಗೆ. ನಮ್ಮ ಮದುವೆಯಾದ ಮೂರೇ ತಿಂಗಳಲ್ಲಿ ನಮ್ಮನ್ನೆಲ್ಲ ಬಿಟ್ಟು ಹೊರಟುಬಿಟ್ಟಳು. ತನ್ನ ಗಂಡನ ಬಳಿಗೆ. ಪ್ರೀತಿಯ ಮೊದಲ ಪಾಠ ಹೇಳಿಕೊಟ್ಟವಳು ನಿನಗೆ ಆ ಜವಾಬ್ದಾರಿ ವಹಿಸಿದ್ದಳು. +ಎಲ್ಲರಂತೆ ಮೊದಲು ಅಮ್ಮ ಎಂದೇ ತೊದಲಿದಳು ಲಕ್ಷ್ಮಿ. ನಿನ್ನ ಕಣ್ಣುಗಳು ಏನೋ ಹೇಳಲು ಪ್ರಯತ್ನಿಸುತ್ತಿದ್ದವು. ಅರ್ಥವಾದವನಂತೆ ನಿನ್ನ ತಲೆ ನೇವರಿಸಿದ್ದೆ. ಲಕ್ಷ್ಮಿಗೆ ಆಗ ಒಂದೂವರೆ ವರ್ಷ. ಯಾಕೋ ದೇವರಿಗೆ ನನ್ನ ಮೇಲೆ ಮುನಿಸಿರಬೇಕು. ನೀನು ಮತ್ತೊಮ್ಮೆ ತಾಯಿಯಾಗುವುದಿಲ್ಲವೆಂಬ ಆಘಾತವನ್ನು ನೀಡಿದ. ಅಂದೇ ಕೊನೆ. ಇರುವುದೆಲ್ಲ ನೀನು ನನ್ನ ಮಗಳು. ದೇವರೆನನ್ನುವವನ ಮೇಲೆ ನಂಬಿಕೆಯೇ ಹೊರಟುಹೋಯಿತು. +ನೋಡು ನೋಡುತ್ತಿದ್ದಂತೆ ಲಕ್ಷ್ಮಿಗೆ ಐದು ವರ್ಷ ತುಂಬಿತು. ಸೈಕಲ್ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟು ಬಂದಿದ್ದೆ. ಬೇರೆ ಮಕ್ಕಳಂತೆ ರಚ್ಚೆ ಹಿಡಿದಿರಲಿಲ್ಲ. ಎಲ್ಲಾ ನಿನ್ನಂತೆ. ಆದರೆ ನೀನು ಮಾತ್ರ ಚಿಕ್ಕವಳಂತೆ ಅಳುತ್ತಿದ್ದೆ. ಮಗಳು ಮನೆಗೆ ಬಂದಾಗ ನಿನ್ನ ಅಳು ನಿಂತಿದ್ದು. ರಾತ್ರಿ ಮಲಗಿದ್ದಾಗ ಕೇಳಿದಾಗ ಅವಳು ನಮ್ಮ ಮಗಳಿರಬಹುದು. ಆದರೆ ನನಗೆ ಅವಳಲ್ಲಿ ಕಾಣುವುದು ನೀವು. ನೀವೇ ನನ್ನಿಂದ ದೂರ ಹೋದಂತಾಯಿತು ಎಂದುತ್ತರಿಸಿದ್ದೆ. +ಕಾಲ ಬೇಗ ಓಡಿತು. ಈಗ ಲಕ್ಷ್ಮಿಗೆ ಇಪ್ಪತೆರಡು ವರ್ಷ. ಇನ್ನೂ ಮೂರು ತಿಂಗಳಲ್ಲಿ ಅವಳ ಮದುವೆ. ನೀನಂದುಕೊಂಡಂತೆ ಶಿಕ್ಷಕಿಯಾಗಿದ್ದಾಳೆ. ಅವಳ ಗಂಡನಾಗಲಿರುವವನು ಕೂಡ ಶಿಕ್ಷಕನೇ . ತುಂಬಾ ಒಳ್ಳೆಯವನು. ಹೇಳಿ ಮಾಡಿಸಿದ ಜೋಡಿ ನಮ್ಮ ಲಕ್ಷ್ಮಿಗೆ. ಅವರನ್ನು ನೋಡಿದರೆ ನಮ್ಮಿಬರನ್ನು ನೋಡಿದಂತಾಗುತ್ತದೆ. ಆದರೆ, ಅದನ್ನು ನೋಡಲು ನೀನು ಜೊತೆಯಲ್ಲಿಲ್ಲವೆಂಬ ಕೊರಗು. +ನೀನು ನನಗೆ ಮೋಸ ಮಾಡಿದೆ. ಕೊನೆ ಉಸಿರುವವರೆಗೆ ಜೊತೆಯಲ್ಲಿರುತ್ತೇನೆಂದವಳು ನಡುದಾರಿಯಲ್ಲಿ ಬಿಟ್ಟು ಹೋದೆ. ಅವತ್ಯಾಕೋ ತಲೆ ಸುತ್ತುತ್ತಿದೆ ಅಂದವಳು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಮಲಗಿದವಳು ಮತ್ತೆ ಎದ್ದೇಳಲೇ ಇಲ್ಲ. ನಂತರದ ಪರೀಕ್ಷೆಯಲ್ಲಿ ತಿಳಿದಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿತ್ತೆಂದು. ಲಕ್ಷ್ಮಿ ಎಂಟನೇ ತರಗತಿಯಲ್ಲಿದ್ದಳು. ನನ್ನ ತೋಳಿಗೊರಗಿ ಬಿಕ್ಕಳಿಸಿ ಅಳುತ್ತಿದ್ದಳು. ಮತ್ತೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟು ನಿಂತ ನಿನ್ನ ಮೇಲೆ ಅಗಾಧ ಕೋಪವೂ ಇತ್ತು. ಆದರೆ,,, +ಕ್ಷಮೆಯಿರಲಿ. ನಿನ್ನೊಡನೆ ನಾನು ಬರಲಾಗಲಿಲ್ಲವೆಂಬ ನೋವು ನನಗಿನ್ನೂ ಕಾಡುತ್ತಿದೆ. ಮಗಳಲ್ಲಿ ನಿನ್ನನ್ನೂ ನನ್ನಮ್ಮನನ್ನೂ ನೋಡುತ್ತಾ ನಿನ್ನ ಭೇಟಿ ಮಾಡುವ ದಿನಕ್ಕೆ ಕಾಯುತ್ತಿದ್ದೇನೆ. ಬರುತ್ತೇನೆ. ನಮ್ಮ ಪ್ರೀತಿಯ ಮೇಲಾಣೆ. ನೀನು ಹೋದಾಗಿನಿಂದ ನಿನಗಾಗಿ ಪ್ರತಿದಿನವೂ ತಪ್ಪದೇ ಪತ್ರ ಬರೆಯುತ್ತಿದ್ದೇನೆ. ನಿನ್ನ ಮಡಿಲಲ್ಲಿ ಮತ್ತೆ ಮಗುವಾದಾಗ ನಿನಗೆ ನೀಡುತ್ತೇನೆ. ಓದುವಿಯಂತೆ ಆಯ್ತಾ?. ಇಲ್ಲಾ ನಾನೇ ಓದಿ ಹೇಳುತ್ತೇನೆ. ನಿನ್ನ ಕಣ್ಣಲ್ಲಿ ಕಣ್ಣಿಟ್ಟು. ಬೇಗ ಬರುತ್ತೇನೆ. +ಹ್ಙಾ! ಮರೆತುಬಿಟ್ಟಿದ್ದೆ. ನಾಳೆ ನಮ್ಮ ಮಗಳು , ಅಳಿಯನನ್ನು ಮನಗೆ ಕರೆತರುತ್ತಿದ್ದಾಳೆ. ಅವರ ಬಗ್ಗೆ ಮುಂದಿನ ಪತ್ರದಲ್ಲಿ ಹೇಳುತ್ತೇನೆ. ತಡವಾಯಿತು, ಮಲಗ್ತೀನಿ. ಕನಸಲ್ಲಿ ಬರೋದು ಮರೀಬೇಡ. ಕೊನೆಯದಾಗಿ ಭೂಮಿಯೆಂಬ ತೋಟದಲ್ಲಿ ಪವಿತ್ರವಾದ ಪ್ರೇಮದ ಹೆಸರಿನಲ್ಲಿ ಕಾಮವೆಂಬ ಬಳ್ಳಿಯನ್ನು ಬೆಳೆಯುತ್ತಿದ್ದಾರೆ ಇಂದಿನ ಯುವಜನಾಂಗ. ಅವರಿಗಷ್ಟು ಬುಧ್ಧಿ ನೀಡೆಂದು ನಿನ್ನನ್ನು ಬೇಗನೆ ಕರೆಸಿಕೊಂಡವನಿಗೆ ಹೇಳು ಹಾಗೆಯೇ ಅವನಿಗೊಂದು ನನ್ನ ಧಿಕ್ಕಾರವನ್ನು ತಲುಪಿಸು. +ಸದಾ ನಿನ್ನವನು +ರಮೇಶ +ವಿ.ಸೂ: ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬರುತ್ತಿರುವಾಗ ಕಂಡ ಅಜ್ಜಿ ತಾತನಿಗೆ ಅರ್ಪಣೆ. ಹಾಗೆಯೇ ಎಲ್ಲ ನಿಜವಾದ ಪ್ರೇಮಿಗಳಿಗೆ ಶುಭಾಶಯಗಳು. +***** \ No newline at end of file diff --git a/PanjuMagazine_Data/article_1043.txt b/PanjuMagazine_Data/article_1043.txt new file mode 100644 index 0000000000000000000000000000000000000000..2f9bb6abe05c599bdcd9c32af68cb67f0e5eb0af --- /dev/null +++ b/PanjuMagazine_Data/article_1043.txt @@ -0,0 +1,50 @@ +ಪುದೀನ ರೈಸ್. +ಬೇಕಾಗುವ ಸಾಮಾಗ್ರಿಗಳು: +ಪುದೀನ ಸೊಪ್ಪು ½ ಕಟ್ಟು +ಕೊತ್ತಂಬರಿ ಸೊಪ್ಪು ½ ಕಟ್ಟು +ಬೆಳ್ಳುಳ್ಳಿ 3 +ಶುಂಠಿ 1ಇಂಚು +ಹಸಿ ಮೆಣಸಿನಕಾಯಿ 4 +ಈರುಳ್ಳಿ 1 +ತೆಂಗಿನ ತುರಿ ½ ಕಪ್ +ನೀರು ¼ ಕಪ್ +ಇಷ್ಟನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. +ಉಳಿದ ಸಾಮಾಗ್ರಿಗಳು: +ತುಪ್ಪ 3 ಚಮಚ +ಗೋಡಂಬಿ ಸ್ವಲ್ಪ +ಜೀರಿಗೆ 1 ಚಮಚ +ಕಾಳುಮೆಣಸು 10 +ಪಲಾವ್ ಎಲೆ 1 +ಲವಂಗ 4 +ಸ್ಟಾರ್ ಅನೈಸ್ 1 +ಚಕ್ಕೆ ಒಂದಿಂಚು +ಈರುಳ್ಳಿ 1 +ಟೊಮೆಟೊ 2 +ಆಲೂಗಡ್ಡೆ 1 +ಹುರುಳಿ ಕಾಯಿ 5 +ಬಟಾಣಿ ½ ಕಪ್ +ಕ್ಯಾರೆಟ್ 1 +ಬಾಸುಮತಿ ಅಕ್ಕಿ 1 ಕಪ್ +ನೀರು 2 ಕಪ್ +ಉಪ್ಪು ರುಚಿಗೆ ತಕ್ಕಷ್ಟು. +ತರಕಾರಿಗಳನ್ನು ಒಂದೇ ರೀತಿಯಲ್ಲಿ ಹೆಚ್ಚಿಕೊಳ್ಳಿ. +ತಯಾರಿಸುವ ವಿಧಾನ: +ಕುಕ್ಕರ್ನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ. ಜೀರಿಗೆ, ಗೋಡಂಬಿ, ಕಾಳುಮೆಣಸು, ಪಲಾವ್ ಎಲೆ, ಲವಂಗ, ಸ್ಟಾರ್ ಅನೈಸ್, ಚಕ್ಕೆಯನ್ನು ಹಾಕಿ ತುಪ್ಪದಲ್ಲಿ ಹುರಿಯಿರಿ. ನಂತರ ಈರುಳ್ಳಿಯನ್ನು ಹಾಕಿ ಬಾಡಿಸಿ.ಟೊಮೆಟೊ ಹಾಕಿ ಬಾಡಿಸಿ. ತರಕಾರಿಗಳನ್ನು ಸೇರಿಸಿ ಮಿಶ್ರಣ ಮಾಡಿ. ರುಬ್ಬಿದ ಮಿಶ್ರಣವನ್ನು ಹಾಕಿ ಒಂದು ನಿಮಿಷ ಕೈಯಾಡಿಸಿ. ಬಾಸುಮತಿ ಅಕ್ಕಿಯನ್ನು ಹಾಕಿ ಜೊತೆಗೆ ಸೇರಿಸಿ. ನೀರು ಮತ್ತು ಉಪ್ಪು ಸೇರಿಸಿ. ಕುಕ್ಕರ್ ಮುಚ್ಚಳವನ್ನು ಮುಚ್ಚಿ. ಎರಡು ವಿಷಲ್ ಬಂದ ನಂತರ ಒಲೆ ಆರಿಸಿ. +ರುಚಿಯಾದ ಪುದೀನ ರೈಸ್ ನ್ನು ರಾಯಿತಾದೊಂದಿಗೆ ಸವಿಯಿರಿ. +2.ಹಲಸಿನ ಹಣ್ಣಿನ ಪಾಯಸ. +ಹಲಸಿನ ಹಣ್ಣಿನ ತೊಳೆ 6 +ಹಾಲು ½ ಲೀಟರ್ +ಬೆಲ್ಲ 1 ಕಪ್/ಸಿಹಿ ಎಷ್ಟು ಬೇಕು ಅಷ್ಟು +ತೆಂಗಿನ ತುರಿ ½ ಕಪ್ +ಚೀರೋಟಿ ರವೆ 2 ಚಮಚ +ತುಪ್ಪ 5ಚಮಚ +ದ್ರಾಕ್ಷಿ 10 +ಗೋಡಂಬಿ 5 +ಬಾದಾಮಿ 5 +ಏಲಕ್ಕಿಪುಡಿ ¼ ಚಮಚ +ನೀರು ½ ಚಮಚ +ತಯಾರಿಸುವ ವಿಧಾನ: +ದಪ್ಪನೆಯ ಬಾಣಲೆಯಲ್ಲಿ ಚೀರೋಟಿ ರವೆಯನ್ನು ಹಾಕಿ ಹುರಿದು ಕೊಳ್ಳಿ. ನಂತರ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ. ಬಾದಾಮಿ ಮತ್ತು ಗೋಡಂಬಿಯನ್ನು ಚಿಕ್ಕದಾಗಿ ಕತ್ತರಿಸಿ ಬಿಸಿಯಾದ ತುಪ್ಪದಲ್ಲಿ ಹಾಕಿ ಹುರಿದು ಕೊಳ್ಳಿ. ದ್ರಾಕ್ಷಿಯನ್ನು ಹಾಕಿ ಹುರಿಯಿರಿ. ನಂತರ ತುಪ್ಪದಿಂದ ತೆಗೆದಿಡಿ. ಅದೇ ತುಪ್ಪದಲ್ಲಿ ಚಿಕ್ಕದಾಗಿ ಒಂದೇ ಅಳತೆಯಲ್ಲಿ ಕತ್ತರಿಸಿದ ಹಲಸಿನ ಹಣ್ಣಿನ ತೊಳೆಯನ್ನು ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಹಾಲನ್ನು ಹಾಕಿ ಕೈಯಾಡಿಸುತ್ತಾ ಇರಿ. ಮಿಕ್ಸಿಯಲ್ಲಿ ಸ್ವಲ್ಪ ನೀರನ್ನು ಹಾಕಿ ತೆಂಗಿನಕಾಯಿ ತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯುತ್ತಿರುವ ಪದಾರ್ಥಕ್ಕೆ ಸೇರಿಸಿ. ಬೆಲ್ಲವನ್ನು ಹಾಕಿ ಚನ್ನಾಗಿ ಕೈಯಾಡಿಸುತ್ತಾ ಇರಬೇಕು ಇಲ್ಲವಾದರೆ ತಳಹಿಡಿಯುತ್ತದೆ. ಕುದಿ ಬಂದ ನಂತರ ಏಲಕ್ಕಿಪುಡಿ ಮತ್ತು ಹುರಿದು ಕೊಂಡ ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಹಾಕಿ ಮಿಶ್ರಣ ಮಾಡಿ. +ಈ ಪಾಯಸವನ್ನು ಬಿಸಿಯಿರುವಾಗ ಅಥವಾ ಫ್ರೀಜ್ನಲ್ಲಿ ತಣ್ಣಗೆ ಮಾಡಿ ಸವಿಯಲು ರುಚಿಯಾಗಿರುತ್ತದೆ. +-ವೇದಾವತಿ ಹೆಚ್. ಎಸ್. + \ No newline at end of file diff --git a/PanjuMagazine_Data/article_1044.txt b/PanjuMagazine_Data/article_1044.txt new file mode 100644 index 0000000000000000000000000000000000000000..e69de29bb2d1d6434b8b29ae775ad8c2e48c5391 diff --git a/PanjuMagazine_Data/article_1045.txt b/PanjuMagazine_Data/article_1045.txt new file mode 100644 index 0000000000000000000000000000000000000000..068f77cb8ea398f2379677f6253465d1004639ba --- /dev/null +++ b/PanjuMagazine_Data/article_1045.txt @@ -0,0 +1,9 @@ + +ಚಿಕ್ಕವನಿದ್ದಾಗ ಎಂದು ಹೇಳಬಹುದು. ಹಲವು ಘಟನೆಗಳು ಕಾಲಾನುಕ್ರಮದಲ್ಲಿ ಮರೆತು ಹೋಗುತ್ತವೆ. ಕೆಲವು ಘಟನೆಗಳು ಮರೆತು ಬಿಡಬೇಕೆಂದರು ಮರೆಯಲಾಗುವುದಿಲ್ಲ. ನಮ್ಮದು ಆವಾಗ ಜೋಡು ಕುಟುಂಬ. ೧೮ ಅಂಕಣದ ಸೋಗೆ ಮನೆಯಲ್ಲಿ ಎಲ್ಲಾ ಒಟ್ಟು ಸೇರಿ ಹತ್ತಾರು ತಿನ್ನುವ ಬಾಯಿಗಳು. ಪ್ರತಿವರ್ಷ ಇಡೀ ಮನೆಯ ಸೋಗೆಯನ್ನು ಬದಲಾಯಿಸಿ ಹೊಸದನ್ನು ಹೊದಿಸಬೇಕು. ಅದೊಂದು ವಾರದ ಕಾರ್ಯಕ್ರಮ. ಹತ್ತಾರು ಆಳು-ಕಾಳುಗಳು ಅವರಿಗೆ ಊಟ-ತಿಂಡಿ, ಬೆಲ್ಲದ ಕಾಫಿ ಇತ್ಯಾದಿಗಳು. ಅದಿರಲಿ ಈಗ ಹೇಳ ಹೊರಟಿರುವ ಕತೆಗೆ ಹಿಂದಿನ ವಾಕ್ಯಗಳು ಪೂರಕವಷ್ಟೆ. ವರ್ಷದಲ್ಲೊಂದು ಬಾರಿ ಅಂದರೆ ನವಂಬರ್‌ನಲ್ಲಿ ಕಂಬಳಿಹುಳುಗಳ ಕಾಟ. ಕೆಲವೊಮ್ಮೆ ಅಗಣಿತ ಸಂಖ್ಯೆಯಲ್ಲಿ ಕಂಬಳಿಹುಳುಗಳ ಮರಿಗಳು ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಕೆಂಪಗಿನ ಮಣ್ಣಿನ ಮುಳ್ಳುಗೋಡೆಗಳ ತುಂಬಾ ಕಂಬಳಿಹುಳುಗಳು. ಮಣ್ಣಿನ ಗೋಡೆಯ ಮೂಲ ಬಣ್ಣ ಕಾಣದಂತೆ ಕಪ್ಪು-ಕಪ್ಪು. ಮೈಗೆ ತಾಗಿದರೆ ಉರಿ ಜೊತೆಗೆ ವಿಪರೀತ ಕಡಿತ. ಸೋಗೆ ಮನೆಯಲ್ಲಿ ಸ್ವಾಭಾವಿಕವಾಗಿ ಕಂಬಳಿಹುಳುಗಳ ಕಾಟ ಹೆಚ್ಚು. ಕೆಲವೊಂದು ಬಾರಿ ಸೀಮೆ ಎಣ್ಣೆ ಸಿಂಪಡಿಸಿ ಅವುಗಳನ್ನು ಹದಕ್ಕೆ ತರುವ ಪ್ರಯತ್ನವೂ ನಡೆಯುತ್ತಿತ್ತು. ಸೋಗೆ ಮನೆಗೆ ಸೀಮೆಎಣ್ಣೆ ಸಿಂಪಡಿಸಿ ಏನಾದರೂ ಬೆಂಕಿ ತಗುಲಿದರೆ ಯಾವ ದೇವನೂ ಬಂದು ಕಾಪಾಡಲಾರ. ಹಾಗಾಗಿ ಕಂಬಳಿಹುಳುಗಳ ಜೊತೆ ಏಗುವುದು ಅನಿವಾರ್ಯವಾಗಿತ್ತು. ಬಡತನದ ಜೊತೆಗೆ ವಿಪರೀತ ಕಂಬಳಿಹುಳುಗಳ ಆ ದಾಳಿ ಆಗಿನ ಜನರನ್ನು ಕಂಗೆಡಿಸಿತ್ತು ಜೊತೆಗೆ ಕಂಬಳಿಹುಳುಗಳ ಮೇಲೆ ಅವರಿಗೆ ಅಪಾರ ಕೋಪವಿತ್ತು. ಇದೆಲ್ಲವೂ ಸ್ವಲ್ಪ-ಸ್ವಲ್ಪ ನೆನಪಿರುವ ಸಂಗತಿಗಳು. ಒಮ್ಮೆ ಸುಮಾರು ಎರೆಡುವರೆ ಅಥವಾ ಮೂರಿಂಚು ಉದ್ದದ ಕಂಬಳಿಹುಳು ಮನೆಯ ಬದಿಯ ಕಟ್ಟೆಯ ಮೇಲೆ ಸರ-ಸರ ಸಾಗುತ್ತಿತ್ತು. ಹೆಬ್ಬೆಟ್ಟು ದಪ್ಪವಿರುವ ಆ ಕಂಬಳಿಹುಳು ನೋಡಲು ಸುಂದರವಾಗಿತ್ತು. ಅಚ್ಚ ಕಪ್ಪುಬಣ್ಣದ ಕೂದಲನ್ನು ಮೈತುಂಬಾ ಹೊಂದಿದ ಅದು ಮಿನಿ ಕರಡಿಯಂತೆ ತೋರುತ್ತಿತ್ತು. ಆದರೆ ಅದರ ಗ್ರಹಚಾರ ನೆಟ್ಟಗಿರಲಿಲ್ಲ. ಅದನ್ನು ನೋಡಿದ ಒಬ್ಬ ಆಳು ಅಲ್ಲೇ ಇದ್ದ ಸೀಮೆಎಣ್ಣೆಯನ್ನು ಅದರ ಮೇಲೆ ಸುರುವಿದ. ಘಾಟು ವಾಸನೆಗೆ ವಿಲಿ-ವಿಲಿ ಒದ್ದಾಡುತ್ತಿದ್ದ ಅದಕ್ಕೆ ಬೆಂಕಿಕಡ್ಡಿ ಕೊರೆದು ಹಚ್ಚಿದ. ಕ್ಷಣ ಮಾತ್ರದಲ್ಲಿ ಕಂಬಳಿಹುಳು ಕರಕಲಾಗಿ ಹೋಯ್ತು. ಆ ಆಳು ಯುದ್ಧ ಗೆದ್ದವನಂತೆ ಮುಖ ಮಾಡಿಕೊಂಡು ಹೋದ. +ನಾನು ಕೆಲಸ ಮಾಡುವ ಜಾಗದ ಪಕ್ಕದ ಮನೆಯಲ್ಲಿ ಒಬ್ಬ ಚಿನ್ನ-ಬೆಳ್ಳಿ ವ್ಯಾಪಾರಿಯಿದ್ದಾರೆ. ಸಜ್ಜನ, ವಿನಯವಂತ. ಅವರಿಗೆ ಈಗ ಮೂರು ವರ್ಷದ ಕೆಳಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಬೆಂಗಳೂರಿನ ದೊಡ್ಡಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ದೈಹಿಕವಾಗಿ ಏನೂ ಸಮಸ್ಯೆಯಿಲ್ಲ. ತನ್ನ ಬಾಳಿನಲ್ಲಿ ಹೀಗಾಯಿತಲ್ಲ ಎಂಬುದನ್ನು ಕಂಡವರಿಗೆಲ್ಲಾ ಹೇಳುತ್ತಾ ಕೊರಗುವುದು ಅವರಿಗೊಂದು ಚಟವಾಗಿದೆ. ಇವರ ಈ ಚಟದಿಂದ ಮನೆಯವರಿಗೆ, ಅಕ್ಕ-ಪಕ್ಕದವರಿಗೆ ಸ್ವಲ್ಪ ಕಿರಿ-ಕಿರಿಯಾಗುತ್ತದೆ. ದಿನನಿತ್ಯ ಕಾಡುವ ಇವರನ್ನು ಹೇಗಾದರೂ ಮಾಡಿ ಸರಿಮಾಡಬೇಕೆಂಬ ಉದ್ಧೇಶದಿಂದ ಅವರಿಗೆ ಬೆಳಗ್ಗೆ ಬೇಗ ಎದ್ದು ನನ್ನ ಜೊತೆ ಬರಲು ಹೇಳಿದೆ. ಆ ಮನುಷ್ಯ ಸೂರ್ಯವಂಶಿ ಅಂದರೆ ೯ ಗಂಟೆಯ ಮೇಲೆ ಹಾಸಿಗೆಯಿಂದ ಏಳುವ ಪರಿಪಾಠ ಲಾಗಾಯ್ತಿನಿಂದಲೂ ಇದೆ. ಹರಸಾಹಸ ಮಾಡಿ ಬೇಗ ಏಳಲು ಒಪ್ಪಿಸಿದ್ದಾಯಿತು. ಪ್ರತಿದಿನ ೨-೩ ಕಿ.ಮಿ. ವಾಕಿಂಗ್ ಮಾಡುವುದು. ವಾಪಾಸು ಬರವಷ್ಟರಲ್ಲಿ ಬೆಳಕು ಹರಿಯುತ್ತದೆ. ಹೀಗೆ ವಾಪಾಸು ಬರುವಾಗ ತಾರು ರಸ್ತೆ ಇಳಿದು ನುಣಿ ಮಣ್ಣಿನಲ್ಲಿ ಒಂದು ದೊಡ್ಡ ಕಂಬಳಿಹುಳು ಎಕ್ಸ್‌ಪ್ರೆಸ್ ರೈಲಿನ ವೇಗದಲ್ಲಿ ಹೋಗುತ್ತಿತ್ತು. ಅದು ಹರಿದು ಹೋದ ಜಾಗದಲ್ಲಿ ಗೆರೆ ಮೂಡುತಿತ್ತು. ಸ್ನೇಹಿತರಿಗೆ ಕಂಬಳಿಹುಳು ನೋಡಿ ಎಷ್ಟು ಚೆನ್ನಾಗಿದೆ. ನೀವೆಂತಾ ಜನ ಮಾರಾಯ್ರೆ, ಕಂಬ್ಳಿಹುಳ ಚೆನ್ನಾಗಿದೆ ಅಂತಿರಲ್ಲಾ ಎಂದರು. ಕಂಬಳಿಹುಳ ಮೈಗೆ ಹತ್ತಿದರೆ ಮೈ ತುರಿಕೆಯಾಗುತ್ತದೆ ಎಂಬ ವಿಚಾರವಷ್ಟೇ ಅವರಿಗೆ ಗೊತ್ತು. ಕಂಬಳಿಹುಳ ಚಿಟ್ಟೆಯಾಗುತ್ತದೆ, ಚಿಟ್ಟೆಗಳು ಪರಾಗಸ್ಪರ್ಶ ಮಾಡುತ್ತವೆ. ನಾವು ಉಣ್ಣುವ ಅಕ್ಕಿ, ತಿನ್ನುವ ಪದಾರ್ಥಗಳ ತಯಾರಿಕೆಯಲ್ಲಿ ಚಿಟ್ಟೆಗಳ ಸೇವೆ ಇದೆ ಎಂಬ ಯಾವ ವಿಚಾರವೂ ಗೊತ್ತಿರಲಿಲ್ಲ. ತಿಳಿ ಹೇಳಿದ ಮೇಲೆ ಆಶ್ಚರ್ಯಪಟ್ಟರು. +ಬಹುತೇಕ ಕಂಬಳಿಹುಳುಗಳು ಪರಿಸರ ಸಮತೋಲನೆಯನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಆದರೂ ಕೆಲವು ಕಂಬಳಿಹುಳುಗಳ ಸಂತತಿ ಕಾಡಿನಲ್ಲಿರುವ ಮರಗಳಿಗೆ ಹಾನಿಕಾರಕವಾಗಬಲ್ಲವು. ಕೆಲವು ಕಂಬಳಿಹುಳುಗಳು ಹುಟ್ಟಿದಾಗ ಇರುವ ಗಾತ್ರಕ್ಕಿಂತ ೧೦೦೦ ಪಟ್ಟು ದೊಡ್ಡದಾಗಿ ಬೆಳೆಯುತ್ತವೆ. ಇವುಗಳಿಗೆ ಸದಾ ಹಸಿವು. ತಿನ್ನುತ್ತಲೇ ಇರುತ್ತವೆ. ಹಸಿರೆಲೆಗಳನ್ನು ತಿನ್ನುತ್ತವೆಯಾದರೂ, ಕೆಲವು ಪ್ರಭೇದಗಳು ಮರದ ತೊಗಟೆಯನ್ನು ಭಕ್ಷಿಸುತ್ತವೆ. ಇವುಗಳ ದವಡೆ ಬಲಿಷ್ಟವಾಗಿದ್ದು, ದೇಹ ಮಾತ್ರ ಅತ್ಯಂತ ಮೃದು. ಮೈಮೇಲೆ ಉದ್ದುದ್ದ ಕೂದಲು ಇರುವ ಕಂಬಳಿಹುಳುಗಳು ಸಾಮಾನ್ಯವಾಗಿ ಕಂಡು ಬರುವ ಪ್ರಬೇಧಗಳು. ವೈವಿಧ್ಯದಲ್ಲಿ ಚಿಟ್ಟೆಗಳಷ್ಟೇ ಬಣ್ಣಗಳನ್ನು ಹೊಂದಿರುವ ಕಂಬಳಿಹುಳುಗಳು ಇವೆ. ಕೆಲವಂತೂ ನಯನಮನೋಹರ. ಮುಟ್ಟಿದರೆ ಮಾತ್ರ ಹರೋ-ಹರ. ಕೆಲವು ಕಂಬಳಿಹುಳುಗಳ ರೋಮಗಳು ಬರೀ ತುರಿಕೆಯಷ್ಟೆ ಉಂಟು ಮಾಡಿದರೆ, ಕೆಲವು ವಿಷಕಾರಿ ಕಂಬಳಿಹುಳುಗಳ ರೋಮಗಳು ಮೈಮೇಲೆ ದದ್ದು ತರುತ್ತವೆ. ವಿಪರೀತ ಉರಿ ನೀಡುವ ಪ್ರಬೇಧಗಳು ಇವೆ. ಕೆಲವು ಬಾರಿ ಮುಟ್ಟಿಸಿಕೊಂಡು ವ್ಯಕ್ತಿಗೆ ವಾಂತಿಯೂ ಆಗಬಹುದು. ನಿದ್ರಾಹೀನತೆ, ರಕ್ತದೊತ್ತಡ ಹೆಚ್ಚಿದ ದಾಖಲೆಗಳೂ ಇವೆ. +ಕಂಬಳಿಹುಳುಗಳ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳನ್ನು ಈ ಸಮಯದಲ್ಲಿ ಸೂಕ್ತ. ಸಾಮಾನ್ಯವಾಗಿ ಮೊಟ್ಟೆಯಿಂದ ಹೊರಬರುವ ಮರಿಗಳು ತಮ್ಮ ಮೊಟ್ಟೆಯ ಕವಚವನ್ನೇ ಮೊದಲ ಆಹಾರವಾಗಿ ಸೇವಿಸುತ್ತವೆ. ಮೊಟ್ಟೆಯ ಕವಚವು ಅತ್ಯಂತ ಹೆಚ್ಚಿನ ಪ್ರೋಟಿನ್ ಹೊಂದಿರುತ್ತದೆ. ಆಮೇಲೆ ತಾನು ಇರುವ ಮರದ ಎಲೆಗಳನ್ನೇ ತಿಂದು ಹಲವು ವಾರಗಳಲ್ಲಿ ಅತ್ಯಂತ ವೇಗವಾಗಿ ತನ್ನ ಗಾತ್ರವನ್ನು ಹೆಚ್ಚಿಸಿಕೊಂಡು ಪ್ರಬುದ್ಧವಾಗುತ್ತದೆ. ಇದಕ್ಕೆ ಕೀಟಲೋಕದ ಬಕಾಸುರ ಎಂದು ನಿಸ್ಸಂಶಯವಾಗಿ ಕರೆಯಬಹುದು. ಮನುಷ್ಯನ ದೇಹದಲ್ಲಿ ೬೦೦ ಚಿಲ್ಲರೆ ಮಾಂಸಖಂಡಗಳಿರುತ್ತವೆ. ಆದರೆ ನೋಡಿ, ಈ ಪುಟ್ಟ ಜೀವಿಯಲ್ಲಿ ಇರುವ ಮಾಂಸಖಂಡಗಳ ಸಂಖ್ಯೆ ಭರ್ತಿ ನಾಲ್ಕು ಸಾವಿರ. ಇದರ ತಲೆಯಲ್ಲೇ ೨೪೮ ಮಾಂಸಖಂಡಗಳಿವೆ. ಸಾಮಾನ್ಯವಾಗಿ ಯಾರೂ ಕಂಬಳಿಹುಳುಗಳಂತಹ ಕೀಟಗಳ ಸುದ್ದಿಗೆ ಹೋಗುವುದಿಲ್ಲವಾದ್ದರಿಂದ ಈ ಕೀಟವನ್ನು ಗಮನಿಸುವವರ ಸಂಖ್ಯೆ ಕಡಿಮೆ. ಇವಕ್ಕೆ ಹನ್ನೆರೆಡು ಕಣ್ಣುಗಳಿವೆ, ಆರು ಜೊತೆ ಕಾಲುಗಳಿವೆ. ಕಾಲುಗಳ ನಡುವೆ ಕಾಲಿನಂತೆಯೇ ಕಾಣುವ ಸುಳ್ಕಾಲುಗಳಿವೆ. ಈ ಸುಳ್ಕಾಲುಗಳು ಮರ ಹತ್ತುವಾಗ ಉಪಯೋಗವಾಗುತ್ತವೆ. ತಮ್ಮ ಬಾಯಿಯ ಹಿಂಭಾಗದಲ್ಲಿರುವ ಚಿಕ್ಕ ಚೀಲದಿಂದ ಇವು ರೇಷ್ಮೆಯನ್ನು ಉತ್ಪಾದಿಸುತ್ತವೆ. ಮಲೆನಾಡಿನ ಜನ ಸಾಮಾನ್ಯವಾಗಿ ಮರದಿಂದ ನೇತಾಡುತ್ತಿರುವ ಬಿಳಿ ಕಂಬಳಿಹುಳವನ್ನು ಗಮನಿಸುರುತ್ತಾರೆ. ಕೆಲವೊಂದು ಬಾರಿ ಇವು ಮುಖಕ್ಕೆ ತಗುಲಿ ತುರಿಕೆಯನ್ನುಂಟು ಮಾಡುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಕಂಬಳಿಹುಳುಗಳ ಚಲನೆಯನ್ನು ಸಮುದ್ರದ ಅಲೆಗಳಿಗೆ ಹೋಲಿಸಬಹುದು. ದೇಹದ ಹಿಂಭಾಗ ಕಾಲಿನಿಂದ ಒತ್ತಿ ಚಲಿಸುವ ಕಂಬಳಿಹುಳು ಅಲೆ-ಅಲೆಯಂತೆ ಮುಂದಕ್ಕೆ ಚಲಿಸುತ್ತದೆ. ಆಹಾರ ಸರಪಣಿಯಲ್ಲಿ ಅತಿ ಕೆಳಮಟ್ಟದಲ್ಲಿರುವ ಕಂಬಳಿಹುಳುವಿಗೆ ನಿಸರ್ಗದಲ್ಲಿ ಸಾಕಷ್ಟು ಶತ್ರುಗಳಿದ್ದಾರೆ. ಮುಖ್ಯವಾಗಿ ಪಕ್ಷಿಗಳು. ಅತ್ಯಂತ ಹೆಚ್ಚು ಪ್ರೋಟಿನ್ ಹೊಂದಿರುವ ಕಂಬಳಿಹುಳುಗಳು ಕೆಲವು ಪಕ್ಷಿಗಳಿಗೆ ಇಷ್ಟವಾದ ಆಹಾರ. ನಿಸರ್ಗದಲ್ಲಿ ಬಲು ವಿಚಿತ್ರ ಸೂತ್ರಗಳಿವೆ. ಕಂಬಳಿಹುಳುಗಳ ಪಿಡುಗು ಮಿತಿಮೀರದಂತೆ ತಡೆಯಲು ಹಕ್ಕಿ-ಪಕ್ಷಿಗಳಿವೆ. ಹಾಗೆಯೇ ಕಂಬಳಿಹುಳುಗಳು ಬದುಕಲು ಹಲವಾರು ತಂತ್ರಗಳನ್ನು ಉಪಯೋಗಿಸುತ್ತವೆ. ಅತಿಯಾದ ರಂಗಿನಿಂದ ಕೂಡಿದ ಕಂಬಳಿಹುಳುಗಳು ಹೆಚ್ಚು ವಿಷಕಾರಿ. ಕೆಲವೊಂದು ಕಂಬಳಿಹುಳುಗಳು ಎಲೆಯ ಬಣ್ಣವನ್ನೇ ಹೊಂದಿರುತ್ತವೆ. ಬೇಟೆಗಾರ ಪಕ್ಷಿಯನ್ನು ಬೆದರಿಸಲು ಕೆಲವು ಪ್ರಬೇಧಗಳು ತೀಕ್ಷ್ಣವಾದ ಶಿಳ್ಳೆಯನ್ನು ಹಾಕುತ್ತವೆ. ಪ್ರಸಿದ್ಧ ಮೊನಾರ್ಕ್ ಕಂಬಳಿಹುಳುಗಳು ಮಿಲ್ಕ್‌ವೀಡ್ ಎಂದು ಕರೆಯಲಾಗುವ ಮರದಲ್ಲಿರುವ ಗ್ಲೈಕೋಸೈಡ್ ಎಂಬ ವಿಷವನ್ನೇ ತಿಂದು ಜೀರ್ಣಮಾಡಿಕೊಳ್ಳುತ್ತವೆ. ಆದ್ದರಿಂದ ಪಕ್ಷಿಗಳು ಇವುಗಳನ್ನು ತಿನ್ನಲಾಗುವುದಿಲ್ಲ. ಆದರೆ ಜಗತ್ತಿನ ದೈತ್ಯ ಕಂಪನಿ ಮಾನ್ಸೋಂಟೋ ಕಂಪನಿಯ ರೌಂಡ್‌ಅಪ್ ಎಂಬ ಪೀಡೆನಾಶಕ ಇವುಗಳಿಗೆ ಮಾರಕವಾಗಿ ಪರಿಣಮಿಸಿದೆ. ಪೂರ್ಣ ಪ್ರಮಾಣದಲ್ಲಿ ಬೆಳೆದ ಕಂಬಳಿಹುಳ ತನ್ನ ಸುತ್ತ ಬಲೆಯನ್ನು ಹೆಣೆದುಕೊಂಡು ನಿದ್ರೆಗೆ ಜಾರುತ್ತದೆ. ಹವಾಮಾನಕ್ಕೆ ಅನುಗುಣವಾಗಿ ಕ್ರಮೇಣ ಕಂಬಳಿಹುಳು ಚಿಟ್ಟೆ ಅಥವಾ ಪತಂಗವಾಗಿ ಮಾರ್ಪಾಡಾಗುತ್ತದೆ. ಹೂವಿಂದ ಹೂವಿಗೆ ಹಾರುತ್ತಾ ಮಕರಂದ ಹೀರುತ್ತಾ, ಪರಾಗಸ್ಪರ್ಶ ಕ್ರಿಯೆ ನಡೆಸಿ, ಗಂಡಿನ ಜೊತೆ ಸೇರಿ ಸಂತಾನಕ್ರಿಯೆಯಲ್ಲಿ ತೊಡಗಿ, ಮೊಟ್ಟೆಯಿಡುತ್ತದೆ ಎಂಬಲ್ಲಿಗೆ ಚಿಟ್ಟೆಯ ಜೀವನಚಕ್ರ ಮುಗಿಯುತ್ತದೆ. +ಈ ಘಟನೆ ಬರೆಯುವುದಕ್ಕೆ ಪ್ರೇರಣೆಯೂ ಒಂದು ಕಂಬಳಿಹುಳುವೇ. ಸಾಗರದ ಸರ್ಕಾರಿ ಬಸ್‌ಸ್ಟ್ಯಾಂಡ್ ಇರುವುದು ರಾಷ್ಟ್ರೀಯ ಹೆದ್ದಾರಿ ೨೦೬ ಪಕ್ಕದಲ್ಲಿ. ಇಂಡಿಯಾ ಅಭಿವೃದ್ಧಿಯಾಗುತ್ತಿದೆಯಾದ್ದರಿಂದ, ವಾಹನಗಳ ಓಡಾಟ ಹೆಚ್ಚು. ಇದಕ್ಕಾಗಿ ರಸ್ತೆ ಅಗಲ ಮಾಡಬೇಕು ಎಂದು ನೂರಾರು ವರ್ಷಗಳಿಂದ ಇದ್ದ ಮಾವು, ನಿರ್ಕಾಯ್, ಹಲಸು ಇತ್ಯಾದಿ ಮರಗಳನ್ನು ಬುಡಸಮೇತ ಸವರಿ ಮಾರಿಕೊಂಡಿದ್ದಾಗಿದೆ. ರಸ್ತೆ ಅಗಲೀಕರಣ ಕಾರ್ಯ ಇನ್ನೂ ಶುರುವಾಗಿಲ್ಲ. ಸರ್ಕಾರಕ್ಕೆ ಹಣ ಬೇಕು ಎಂದರೆ ಈ ರೀತಿಯ ಯೋಜನೆಗಳನ್ನು ಜಾರಿ ಮಾಡಿಕೊಳ್ಳುತ್ತವೆ. ಹಿಂದೆ ಈ ಮರಗಳಲ್ಲೂ ಕಂಬಳಿಹುಳುಗಳಿರುತ್ತಿದ್ದವು. ಈಗ ಅವುಗಳಿಗೆ ನೆಲೆಯಿಲ್ಲ. ನನ್ನ ಕೆಲಸದ ಜಾಗಕ್ಕೆ ಹೋಗುವಾಗ ಇದೇ ರಾಷ್ಟ್ರೀಯ ಹೆದ್ದಾರಿ ೨೦೬ನ್ನು ಹಾದು ಹೋಗಬೇಕಾಗುತ್ತದೆ. ಸೆಣಬಿನ ಚೀಲದಲ್ಲಿ ನೀರಿನ ಬಾಟಲಿಯನ್ನು ತುಂಬಿಕೊಂಡು ಸರ್ಕಾರಿ ಬಸ್‌ಸ್ಟ್ಯಾಂಡ್ ಹತ್ತಿರ ಬರುತ್ತಿದ್ದವನಿಗೆ ೨ ಇಂಚು ಗಾತ್ರದ ಹೆಬ್ಬೆಟ್ಟಿನಷ್ಟು ದೊಡ್ಡದಾಗ ಕಪ್ಪು-ಬೂದು ಮಿಶ್ರಿತ ಕಂಬಳಿಹುಳು ವೇಗದಿಂದ ರಸ್ತೆ ದಾಟುವ ಪ್ರಯತ್ನದಲ್ಲಿತ್ತು. ಹೆದ್ದಾರಿಯಲ್ಲಿ ವಿಪರೀತ ವಾಹನಗಳ ಓಡಾಟ. ಖಾಸಗಿ ಬಸ್ಸುಗಳು, ಶಾಲೆಗೆ ಹೋಗುವ ವಾಹನಗಳು, ಬಸ್ಸಿನಿಂದಿಳಿದು ಬರುವ ಅಸಂಖ್ಯ ಜನ. ಸ್ಕೂಲಿಗೆ ಸೈಕಲ್ ಮೇಲೆ ಹೋಗುವ ಮಕ್ಕಳು. ಅದೂ ಬೆಳಗಿನ ಹೊತ್ತು ಎಲ್ಲರಿಗೂ ಗಡಿಬಿಡಿ. ಈ ಕಂಬಳಿಹುಳಕ್ಕೂ ಗಡಿಬಿಡಿ (ಶಾಸ್ತ್ರೀಯವಾಗಿ ಕಂಬಳಿಹುಳುವನ್ನು ಜಿಯೋಮೆಟ್ರಿಡ್ಸ್ ಎಂದೂ ಕರೆಯುತ್ತಾರೆ, ಗ್ರೀಕ್ ಭಾಷೆಯಲ್ಲಿ ಜಿಯೋ ಎಂದರೆ ಭೂಮಿ-ಮೆಟ್ರಿಡ್ ಎಂದರೆ ಅಳತೆ. ಇಡೀ ಭೂಮಿಯನ್ನೇ ಅಳತೆ ಮಾಡಲು ಹೊರಟಂತೆ ತೋರುತ್ತದೆಯಾದ್ದರಿಂದ ಈ ಹೆಸರು). ಇದು ರಸ್ತೆ ದಾಟಿ ಸುರಕ್ಷಿತವಾಗಿ ಆಚೆ ಸೇರುವ ಸಂಭವ ಕೋಟಿಯಲ್ಲೊಂದು ಭಾಗವಷ್ಟೆ. ಗಡಿಬಿಡಿಯಿಂದ ಹೋಗುತ್ತಿದ್ದ ಕಂಬಳಿಹುಳುವಿನ ಎದುರು ಕೈಯಿಟ್ಟೆ. ಅದರ ವೇಗ ಎಷ್ಟಿತ್ತೆಂದರೆ, ನನ್ನ ಕೈಯನ್ನು ಅದು ಅಡ್ಡಿ ಎಂದು ಭಾವಿಸಲೇ ಇಲ್ಲ. ಸರಾಗವಾಗಿ ಹತ್ತಿತು. ಅದು ಯಾವ ದಿಕ್ಕಿಗೆ ಹೊರಟ್ಟಿತ್ತೋ ಅದೇ ದಿಕ್ಕಿಗೆ ಇರುವ ಕಡಿದ ಮರದ ಬೊಡ್ಡೆಯ ಬಳಿ ಬಿಟ್ಟೆ. ಕಾಲೇಜುಗಳಿಗೆ ಹೋಗುತ್ತಿದ್ದ ಕನ್ಯಾಮಣಿಗಳು ಗಾಬರಿ ಬಿದ್ದು, ಆಶ್ಚರ್ಯ ಮುಖಮಾಡಿ ನಂತರ ನನ್ನೊಂತರಾ ನೋಡಿ ಮುಸಿ-ಮುಸಿ ನಗುತ್ತಿದ್ದರು. ರಿಕ್ಷಾ ಸ್ಟ್ಯಾಂಡಿನವರು ದಿನಾ ನೋಡಿ ಪರಿಚಯವಿದ್ದವರು. ಆದರೂ ವಿಚಿತ್ರವಾಗಿ ನೋಡುತ್ತಿದ್ದರು. +ಮಧ್ಯಾಹ್ನ ಊಟಕ್ಕೆ ಮನೆಗೆ ಹೋದವನು ಮನೆಯವಳಿಗೆ ಮತ್ತು ಮಗನಿಗೆ ಘಟನೆಯನ್ನು ವಿವರಿಸಿದೆ. ನಮ್ಮ ಹೋಂ ಮಿನಿಸ್ಟ್ರಿಗೆ ಕಂಬಳಿಹುಳ ಎಂದು ಹೇಳಿದರೆ ಸಾಕು ಮೈ ತುರಿಕೆ ಶುರುವಾಗುತ್ತದೆ. ಕಂಬಳಿಗೂ ಕಂಬಳಿಹುಳುವಿಗೂ ಸಂಬಂಧವಿಲ್ಲದಿದ್ದರೂ, ಕಂಬಳಿಯಲ್ಲಿ ಕಂಬಳಿಹುಳುವನ್ನು ಕಾಣುವ ನನ್ನವಳು ಮನೆಯಲ್ಲಿ ಕಂಬಳಿಯನ್ನೇ ಇಟ್ಟಿಲ್ಲವಾದ್ದರಿಂದ ಚಳಿಗಾಲದಲ್ಲೂ ಕಂಬಳಿ ಹೊದೆಯುವ ಭಾಗ್ಯವಿಲ್ಲ. +[ಕಂಬಳಿಹುಳುಗಳಿಂದ ಜೀವದ್ರವ್ಯ ಔಷಧಗಳನ್ನು ತಯಾರಿಸುವ ಪ್ರಯತ್ನದ ಬಗ್ಗೆ ಬೆಳಕು ಚೆಲ್ಲುವ ಕುತೂಹಲಕರವಾದ ಲೇಖನವನ್ನು ಕನ್ನಡದ ಪ್ರಸಿದ್ಧ ವಿಜ್ಞಾನ-ಪರಿಸರ ಲೇಖಕರಾದ ನಾಗೇಶ್ ಹೆಗಡೆಯವರ ಅಂತರಿಕ್ಷದಲ್ಲಿ ಮಹಾಸಾಗರ ಎಂಬ ಪುಸ್ತಕದ ಪುಟ ೪೫ರಲ್ಲಿ ಕಂಬಳಿ ಹುಳುಗಳಿಂದ ಸಿದ್ಧೌಷದ ಲೇಖನದಲ್ಲಿ ಕಾಣಬಹುದು. ಓದಿ] +***** \ No newline at end of file diff --git a/PanjuMagazine_Data/article_1046.txt b/PanjuMagazine_Data/article_1046.txt new file mode 100644 index 0000000000000000000000000000000000000000..a7515f182d8b34e8e3736b44d40e67caab7c7643 --- /dev/null +++ b/PanjuMagazine_Data/article_1046.txt @@ -0,0 +1,27 @@ +ಅತಿಕಡಿಮೆ ಬಂಡವಾಳ-ಹೆಚ್ಚು ಆದಾಯದ ಉದ್ಯೋಗ; ಹಂದಿಸಾಕಾಣಿಕೆ + ಮನಸು ಮಾಡಿದರೆ ಏನು ಬೇಕಾದರೂ ಮಾಡಿ ತೋರಿಸಬಹುದೆನ್ನುವುದಕ್ಕೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಕೆಲಸ ಮಾದರಿಯಾಗಿದೆ. ಇತರ ಉದ್ಯೋಗಕ್ಕಾಗಿ ಅಲೆಯುವ ನಿರುದ್ಯೋಗಿ ಯುವಕರ ಪಾಲಿಗೆ ಇಲ್ಲಿನ ಕೈದಿಗಳು, “ಕೆಲಸ ತಮ್ಮ ಕೈಯಲ್ಲಿಯೇ ಇದೆ; ಆದರೆ, ಮನಸು ಮಾಡಬೇಕು” ಎಂಬುದನ್ನು ಬಂದಿಖಾನೆಯಲ್ಲಿ ಬಂಧಿಯಾಗಿದ್ದರೂ ಸ್ವತಃ ಹಂದಿಸಾಕುವ ಮೂಲಕ ಇಲಾಖೆಗೆ ಆದಾಯ ತಂದುಕೊಡುತ್ತಿದ್ದಾರೆ. ಆ ಮೂಲಕ ಪರಿಸ್ಥಿತಿ, ಸನ್ನಿವೇಶಕ್ಕೆ ಬಲಿಯಾಗಿ ಒಂದಿಲ್ಲೊಂದು ಅಪರಾಧವೆಸಗಿ ಜೈಲುಪಾಲಾಗಿರುವ ಇವರು, ತಮ್ಮ ಅನ್ನದಾತ ಮತ್ತು ಆಶ್ರಯದಾತ ಎನಿಸಿದ ಇಲಾಖೆ ಮತ್ತು ಸರ್ಕಾರಕ್ಕೆ ಉತ್ತಮ ಆದಾಯದ ಮೂಲವೊಂದನ್ನು ಒದಗಿಸಿಕೊಡುತ್ತಿದ್ದಾರೆ ಎನ್ನಬಹುದು. ಜೊತೆಗೆ, ತಮಗರಿವಿಲ್ಲದಂತೆಯೇ ನಿರುದ್ಯೋಗಿ ಯುವಜನತೆಗೆ, ಉತ್ತಮ ಸ್ವಉದ್ಯೋಗದ ಮಾದರಿಯೊಂದನ್ನು ತಿಳಿಸಿಕೊಟ್ಟಿದ್ದಾರೆ. +ಹಂದಿಸಾಕಾಣಿಕೆ ಆರಂಭವಾದ ಬಗೆ…? + ಅದು 2005 ರ ಸಮಯ. ಆ ವರ್ಷದ ಸೆಪ್ಟೆಂಬರ್ 5 ನೇ ತಾರೀಕಿನಂದು ಆಗ ಈ ಕಾರಾಗೃಹದ ಜೈಲರ್ ಆಗಿದ್ದ (ಈಗ ದೇವನಹಳ್ಳಿಯ ಕೋರಮಂಗಲ ಬಯಲು ಬಂದೀಖಾನೆಯಲ್ಲಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಗಿದ್ದಾರೆ.) ಓಬಳೇಶಪ್ಪ ಅವರ ಕಾಳಜಿಯಿಂದ ಹೆಸರಘಟ್ಟದ ಫಾರಂನಿಂದ ವಿಶೇಷವಾದ "ಯಾರ್ಕ್"ತಳಿಯ 1 ಗಂಡು, 4 ಹೆಣ್ಣು ಸೇರಿ (3 ತಿಂಗಳಪ್ರಾಯದ) 5 ಹಂದಿಮರಿಗಳನ್ನು ತರಿಸಲಾಯಿತು. ಆ ಮರಿಗಳನ್ನು ನೋಡಿಕೊಳ್ಳುವ ಸಲುವಾಗಿ ಸ್ವಲ್ಪ ಪ್ರಾಣಿಗಳ ಬಗೆಗೆ ಆಸಕ್ತಿ ಹೊಂದಿರುವ ಮೂರು ಕೈದಿಗಳನ್ನು ನೇಮಿಸಲಾಯಿತು. ಜೈಲಿನ ಕೈದಿಗಳ ಎಂಜಲು ಹಾಗೂ ಉಳಿದು-ಬಳಿದ ಆಹಾರ ಪದಾರ್ಥವನ್ನೇ ಹಂದಿಗಳಿಗೆ ಆಹಾರವಾಗಿ ಕೊಡಲಾಯಿತು. ಜೈಲಿನ ಹೊರಾವರಣದಲ್ಲಿದ್ದ ಕೆರೆಯ ಭಾಗದಲ್ಲಿ "ವರಾಹ ಸಾಕಾಣಿಕಾ ಕೇಂದ್ರ" ಎನ್ನುವ ಹಂದಿಗೂಡೊಂದನ್ನು ನಿರ್ಮಿಸಿ, ಅವುಗಳ ಪೋಷಣೆಗೆ ಅನುವು ಮಾಡಿಕೊಡಲಾಯಿತು. + ಹೀಗೆ ಕೇವಲ 5 ಹಂದಿಗಳಿಂದ ಆರಂಭವಾದ ಹಂದಿಸಾಕಾಣಿಕೆ ಕಾಯಕ, 11 ದೊಡ್ಡಹಂದಿಗಳು, ಒಂದು ವರುಷದ 13 ಮರಿಗಳು, 8 ತಿಂಗಳ 18 ಮರಿಗಳು, 12 ಅರ್ಧ ವರ್ಷದ ಮರಿಗಳು, 3 ತಿಂಗಳ 10 ಮರಿಗಳು, 2 ತಿಂಗಳ 12 ಮರಿಗಳು ಹಾಗೂ ಮೂರು ವಾರದ 22 ಹಂದಿಮರಿಗಳು ಸೇರಿದಂತೆ ಇಂದು 100 ಕ್ಕೂ ಹೆಚ್ಚುಹಂದಿಗಳು ಸದ್ಯ ಗೂಡಲ್ಲಿವೆ. +ಹಂದಿಸಾಕಾಣಿಕೆಗೆ ಬೇಕಾದ ಗೂಡಿನ ನಿರ್ಮಾಣ, ಆರೈಕೆ ವಿಧಾನ + ಹಂದಿಗಳ ಆರೈಕೆಯನ್ನು ಹೇಗೆ ಮಾಡುವಿರಿ, ಎಂದರೆ ಹಂದಿಗೂಡಿನ ಜವಾಬ್ದಾರಿ ಹೊತ್ತ ಮಂಡ್ಯದ ದೊಡ್ಡಮುಲಗೂಡಿನವರಾದ ಕೈದಿ ಶ್ರೀನಿವಾಸ್, ಹಂದಿಸಾಕಾಣಿಕೆಯ ಸಂಪೂರ್ಣ ವಿವರವನ್ನು ಹೇಳುವುದು ಹೀಗೆ, "ನೋಡಿ, ಸಾರ್. ಮದಲಿಂದ್ಲೂ ಹಂದಿ ಸಾಕೋದ್ರ ಬಗ್ಗೆ ನನಗೇನೂ ಅನುಭವ ಇರ್ಲಿಲ್ಲ. ಜೈಲಿಗೆ ಬಂದಾಗ ಅಧಿಕಾರಿಗಳು ನನ್ನ ತೋಟದಕೃಷಿ, ಹಸುಸಾಕುವ ಬಗೆಗಿನ ಆಸಕ್ತಿ ನೋಡಿ, ಇಲ್ಲಿಗೆ ಹಾಕಿದ್ರು. ಮೊದಮೊದ್ಲು ನನಗೆ ತೋಚಿದಂಗೆ, ಡಾಕ್ಟ್ರು ಹೇಳ್ದಂಗೆ ಹಂದಿ ಉಪಚಾರ ಮಾಡ್ತಿದ್ದೆ. ಅಮೇಲಾಮೇಲೆ ಹಂದಿ ಸಾಕಾಣಿಕೆಯ ಗುಟ್ಟು ತಿಳೀತಾ ಹೋಯ್ತು. ನನ್ನ ಇಸ್ಟೊರ್ಸುದ್ ಅನುಬವ್‍ದಲ್ಲಿ ಹೇಳೋದಾದ್ರೆ, ಹಂದಿಸಾಕೋದಕ್ಕೆ ಮುಖ್ಯವಾಗಿ ಶೀತವಾತಾವರಣ ಹೇಳಿ ಮಾಡ್ಸುದ್. ಬಿಸ್ಲು ಮತ್ತು ಬಿಸಿವಾತಾವರ್ಣ ಹಂದಿಗಳಿಗೆ ಒಗ್ಗದಿರೋ ಮಾತು. ಇದ್ರಿಂದ ಆದಷ್ಟು ಶೀತವಾದ, ಜೊತೆಗೆ ತೇವಾಂಶ ಇರೋ ಜಾಗ್ದಲ್ಲಿ ಹಂದಿಗೂಡು ಕಟ್ಟಿ, ಪೋಸ್ಣೆ ಮಾಡ್ಬೇಕು" ಎಂದು ಹಂದಿಸಾಕಾಣಿಕೆಯ ಒಳಹೊರಗನ್ನು ಬಹಳ ಅನುಭವಿ ತಜ್ಞರಂತೆ ವಿವರಿಸ್ತಾರೆ. +ಗರ್ಭಧರಿಸುವಿಕೆ, ಆರೈಕೆ ಕ್ರಮ + ಒಂದು ಹಂದಿಯು ಸರಾಸರಿಯಾಗಿ ತಾನು ಹುಟ್ಟಿದ 12 ರಿಂದ 14 ತಿಂಗಳಲ್ಲಿ ಗರ್ಭಧರಿಸುವ ಸಾಮಥ್ರ್ಯ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ, ಒಂದು ಹಂದಿಯು ಸರಾಸರಿಯಾಗಿ 8 ರಿಂದ 10 ಮರಿಗಳನ್ನು ಹಾಕುತ್ತದೆ. ಒಂದುವೇಳೆ ಆಹಾರವನ್ನು ಅತಿಯಾಗಿ ನೀಡಿದರೆ ಹಂದಿಗಳು ಕೊಬ್ಬುವ ಸಂಭವವಿರುವುದರಿಂದ, ಅಂತಹ ಹಂದಿಗಳು ಕೇವಲ 4 ರಿಂದ 5 ಮರಿಗಳಿಗಷ್ಟೆ ಜನ್ಮ ನೀಡಬಲ್ಲವು. ಆದುದರಿಂದ ಮಿತವಾದ ಆಹಾರ ನೀಡುವುದು ಒಳ್ಳೆಯದು. +ಇದರಿಂದ ಹಂದಿಗಳು ಕೊಬ್ಬಿ ಹೆಚ್ಚು ತೂಗುವ ಮೂಲಕ ಲಾಭ ಸಿಗುತ್ತದೆ ಎನ್ನಿಸಿದರೂ ಅದು ಗರ್ಭಾವಸ್ಥೆಗೆ ಬಂದರೆ ಮರಿಗಳನ್ನು ಕಡಿಮೆ ಹಾಕುತ್ತದೆ. ಹೀಗಾಗಿ ಆದಷ್ಟು ಮಿತಾಹಾರ ನೀಡಿಕೆ ಅವಶ್ಯಕ ಎನ್ನುತ್ತಾರೆ ಕೈದಿ ಶ್ರೀನಿವಾಸ್. +ಅತಿ ಕಡಿಮೆ ಅವಧಿ-ಅತ್ಯಂತ ಲಾಭದಾಯಕ- ಝಣಝಣ ಹಣ: + ಅತ್ಯಂತ ಲಾಭದಾಯಕವೆನಿಸಿರುವ ಹಂದಿಸಾಕಾಣಿಕೆ ಕಸುಬು ಅತಿ ಕಡಿಮೆ ಅವಧಿ ಯಲ್ಲಿ ಉತ್ತಮ ಆದಾಯ ತಂದುಕೊಡುವ ಕಸುಬಾಗಿದೆ. ವರ್ಷದಲ್ಲಿ ನಾಲ್ಕುಬಾರಿ ಮರಿಹಾಕುವ ಸಾಮಥ್ರ್ಯವುಳ್ಳ ಹಂದಿ ಸಾಕಾಣೆ ಒಂದು ಲಾಭದಾಯಕ ಕಸುಬಾಗಿದ್ದು, ಕಡಿಮೆ ಶ್ರಮ ಮತ್ತು ಕಡಿಮೆ ಖರ್ಚಿನ ಬಾಬತ್ತಾಗಿದೆ. ಏನಿಲ್ಲವೆಂದರೂ ಆರಂಭಿಸಿದ ಮೊದಲ ಒಂದು ವರ್ಷವನ್ನು ಹೊರತು ಪಡಿಸಿ, ಮುಂದಿನ 3 ತಿಂಗಳಲ್ಲಿ ಝಣಝಣ ಹಣವನ್ನೆಣಿಸಬಹುದು. ಇದಕ್ಕೆ ಬ್ಯಾಂಕುಗಳೂ ಸಹ ಹಣಕಾಸಿನ ನೆರವನ್ನು ಒದಗಿಸಿಕೊಡುವಲ್ಲಿ ಮುಂದೆ ಬರುತ್ತಿವೆ. +ಆಹಾರಕ್ರಮ ಹೇಗೆ… ಎಂತು…..? + ಸಾಮಾನ್ಯವಾಗಿ ಹಂದಿಸಾಕಾಣಿಕೆಗೆ ಬೇಕಾಗಿರೋದು ಸೂಕ್ತವಾದ ಆಹಾರ. ಅದರಲ್ಲೂ ಹೋಟೆಲ್ಲು, ಛತ್ರ, ಮನೆಯ ಉಳಿದು-ಬಳಿದ ಆಹಾರವು ಅವುಗಳ ಪಾಲಿಗೆ ಮೃಷ್ಟಾನ್ನ ಭೋಜನದಂತೆ. ಇಲ್ಲಿನ ಜೈಲಿನಲ್ಲಿ ತಿಂದುಂಡು ಉಳಿದ ಆಹಾರವೇ ರಾಶಿ-ರಾಶಿ ಸಿಗುವುದರಿಂದ ಇವುಗಳಿಗೆ ಆಹಾರದ ಕೊರತೆಯಿಲ್ಲ. ಬೇಕಾದಲ್ಲಿ ಹೋಟೆಲ್ಲುಗಳ ಟೀ/ಕಾಫಿ ಪುಡಿಯ ಗಷ್ಟ, ಅಳಿದುಳಿದ ಅನ್ನ-ಸಾಂಬಾರನ್ನು ತಂದು ಹಾಕಬಹುದು. ಇದನ್ನು ಹಂದಿಗಳು ಚಪ್ಪರಿಸಿ ತಿನ್ನುತ್ತವೆಯಾದ್ದರಿಂದ ಹಂದಿಪೋಷಣೆಗೆ ಹೇಳಿಮಾಡಿಸಿದ ಆಹಾರವಾಗಿದೆ. ಅದರ ಜೊತೆಗೆ ಇಂಡಿ ಮತ್ತು ಬೂಸ ಕೊಡಲಾಗುತ್ತದೆ. +ಆಗತಾನೆ ಹಾಲುಬಿಡಿಸಿದ ಮರಿಗಳಿಗೆ ಮಾತ್ರ ಮುಸುಕಿನ ಜೋಳದ ಹಸಿರು ಹುಲ್ಲುಕಡ್ಡಿ, ಸೀಮೆಹುಲ್ಲು ಮುಖ್ಯವಾಗಿ ಬೇಕು. ತಾಯಿಹಂದಿಯ ದೇಹ ಮತ್ತು ಅದರ ಸದೃಢತೆಯ ಆಧಾರದ ಮೇಲೆ ಮರಿಗಳು ಹಾಲು ಕುಡಿಯುವುದನ್ನು ಬಿಡಿಸಲಾಗುತ್ತದೆ. ಅಂದರೆ, ಇದನ್ನು ತಾಯಿಹಂದಿಯು ಎಷ್ಟು ಪುಷ್ಟಿಯಿಂದಿದೆ ಎಂಬುದರ ಮೇಲೆ ನಿರ್ಧಾರ ಮಾಡಲಾಗುತ್ತದಂತೆ. +ಇನ್ನು ಹಂದಿಗಳಿಗೆ ಚಿಕಿತ್ಸೆ, ಔಷಧೋಪಚಾರದ ಮಾತು + ಸಾಮಾನ್ಯವಾಗಿ ಹಂದಿಗಳಲ್ಲಿ ಅವು ಹುಟ್ಟಿದ ಸಂದರ್ಭ ಮತ್ತು ಸಣ್ಣಮರಿಗಳಿದ್ದಾಗ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಔಷಧೋಪಚಾರ ಮಾಡಿದರೆ ಅವು ಬೆಳೆದಂತೆ ಯಾವುದೇ ಕಾಯಿಲೆಗೆ ಈಡಾಗದೆ ಸ್ವಸ್ಥವಾಗಿರುತ್ತವೆ. ಇದರಿಂದ ಮತ್ತೆ ಅವು ಕಾಯಿಲೆಬೀಳದಂತೆ ತಡೆಯಬಹುದಲ್ಲದೆ ಮಾಡಲಾಗುವ ಚಿಕಿತ್ಸಾವೆಚ್ಚವೂ ಉಳಿಯುತ್ತದೆ ಮತ್ತು ಶ್ರಮವೂ, ಆಗುವ ನಷ್ಟವೂ ತಪ್ಪುತ್ತದೆ" ಎನ್ನುತ್ತಾರೆ ಮತ್ತೊಬ್ಬ ಖೈದಿ ತುಮಕೂರಿನ ವೆಂಕಟೇಶ್. + ಇನ್ನು ಔಷಧೋಪಚಾರದ ವಿಚಾರಕ್ಕೆ ಬಂದರೆ, ಮರಿಗಳು ಜನಿಸಿದ ತಕ್ಷಣವೇ ಅಂದರೆ, ಹುಟ್ಟಿದ 21 ನೇ ದಿನಕ್ಕೆ ಜಂತುಹುಳು ನಿವಾರಕವೆನಿಸಿದ ಆಲ್ಬೆಂಡೋಜೆಲ್ ನೀಡಬೇಕು.ಅದರ ಜೊತೆಗೆ ಆಸ್ಟೋವೆಟ್ ಟಾನಿಕ್ ಕುಡಿಸಬೇಕು. ಹಂದಿಗಳನ್ನು ಹೆಚ್ಚು ಕಾಡುವ ಸಮಸ್ಯೆ ಎಂದರೆ, ಜ್ವರ. ಅದರ ಕುರಿತು ಸ್ವಲ್ಪ ಕಾಳಜಿ ವಹಿಸಿಬೇಕಾದುದರಿಂದ ಜ್ವರ ಬಂದಲ್ಲಿ ಪಶುವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಬೇಕು. ಇನ್ನುಳಿದಂತೆ ಎಲ್ಲಾ ಚಿಕಿತ್ಸೆಯು ನಮ್ಮದೇ ಅನುಭವದ ಮೇಲೆ ಕೊಡುತ್ತೇವೆ ಎನ್ನುತ್ತಾರೆ, ಸಾಕಾಣಿಕೆಯ ಜವಾಬ್ದಾರಿಯಲ್ಲಿ ಪಾಲುಹೊತ್ತ ವೃದ್ಧ ಕೈದಿ ವೆಂಕಟೇಗೌಡ. +ಹಂದಿಗಳು ಮತ್ತು ಗೂಡಿನ ಸ್ವಚ್ಛತೆ + ಹಂದಿಸಾಕಾಣಿಕೆಯಲ್ಲಿ ಸ್ವಚ್ಛತೆ ಎಂಬುದು ಅತ್ಯಂತ ಮುಖ್ಯ ಅಂಶವಾಗಿದೆ. ಹಂದಿಗಳು ಸಾಮಾನ್ಯವಾಗಿ ಕೊಳಕಿನ ಮೇಲೆ ಬಿದ್ದು ಹೊದ್ದಾಡುವ ಗುಣಸ್ವಭಾವದವುಗಳಾದುದರಿಂದ ಅವುಗಳನ್ನು ದಿನಕ್ಕೆ ಮೂರು ಬಾರಿಯಾದರೂ ಸ್ವಚ್ಛಗೊಳಿಸಬೇಕು. ಅಂದರೆ, ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹಂದಿಗಳನ್ನು ಮತ್ತು ಗೂಡನ್ನು ನೀರಿನಿಂದ ತೊಳೆಯಬೇಕು. ಇದನ್ನು ಚಾಚೂ ತಪ್ಪದೆ ನಡೆಸಬೇಕು. ಹಾಗಿದ್ದಾಗ ಮಾತ್ರ ಹಂದಿಗಳ ಆರೋಗ್ಯ ಚೆನ್ನಾಗಿರುತ್ತದೆ. +ಉತ್ತಮ ಗೊಬ್ಬರದ ಮೂಲ + ಹಂದಿಗಳ ಮಲ ಮತ್ತು ಮೂತ್ರವು ಉತ್ತಮ ಗೊಬ್ಬರವಾಗಿದ್ದು, ಅಲ್ಲದೆ ಪೌಷ್ಟಿಕಾಂಶಗಳ ಆಗರವಾಗಿರುವ ಕಾರಣ, ಅದಕ್ಕೆ ಭಾರಿ ಬೇಡಿಕೆಯಿದೆ. ಆದರೆ, ಜೈಲು ಸರ್ಕಾರದ ಅಧೀನ ಸಂಸ್ಥೆಯಾದ ಕಾರಣ, ಎಲ್ಲವೂ ಟೆಂಡರ್‍ನ್ನು ಆಧರಿಸಿರುವ ಕಾರಣಕ್ಕೆ ಆ ಗೊಬ್ಬರದ ಸಂಗ್ರಹಣೆಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಇದನ್ನು ತಮ್ಮ ಜೈಲಿನ ಆವರಣದಲ್ಲಿರುವ ತೋಟದ ಗಿಡಗಳಿಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ, ಹಂದಿಗೂಡು ಮತ್ತು ತೋಟದ ಉಸ್ತುವಾರಿ ಹೊತ್ತಿರುವ ಜೈಲಿನ ವಾರ್ಡನ್ ಸಂಗಮನಾಥ ಬಾಳಿಗಟ್ಟಿ. +ಇಲಾಖೆಗೆ ಉತ್ತಮ ಆದಾಯದ ಮೂಲ; ಅಲ್ಲದೆ, ಇತರರಿಗೆ ಮಾದರಿ + ಜೈಲಿನ ಕೈದಿಗಳಿಗೆ ಇದೊಂದು ಕಾಯಕವಾದರೆ ನಮ್ಮ ಇಲಾಖೆಗೊಂದು ಉತ್ತಮ ಆದಾಯದ ಮೂಲವಾಗಿದೆ ಎನ್ನುತ್ತಾರೆ ಜೈಲಿನ ಮುಖ್ಯ ಅಧೀಕ್ಷಕರಾದ ಎಚ್.ವಿ.ವೀರೇಂದ್ರ ಸಿಂಹ ಅವರು. "ನಮ್ಮ ಇಲಾಖೆಯ ಎಡಿಜಿಪಿ ಕೆ.ವಿ.ಗಗನ್‍ದೀಪ್ ಸಾಹೇಬರ ಸಲಹೆ ಮೇರೆಗೆ ನಮ್ಮಲ್ಲಿನ ಕೈದಿಗಳಿಗೆ ಉತ್ತಮ ಜೀವನ ಕೌಶಲಗಳನ್ನು ಕಲಿಸಿಕೊಡುವ ಕೆಲಸವಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಅದರಲ್ಲಿ ಈ ಹಂದಿಸಾಕಾಣಿಕೆಯೂ ಒಂದು. ಇದರಿಂದ ಈಗಿನ ಕೈದಿಗಳು ಶಿಕ್ಷೆಯಿಂದ ಮುಕ್ತರಾಗಿ ಹೊರಹೋದಮೇಲೆ ಮತ್ತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲೆಂಬ ಉದ್ದೇಶದಿಂದ ಇಂತಹ ಜೀವನ್ಮುಖಿ ಕಸುಬುಗಳನ್ನು ರೂಪಿಸಲಾಗಿದೆ. ಇದು ಅವರಿಗೆ ಅಷ್ಟೆ ಅಲ್ಲದೆ ನಮ್ಮ ಇಲಾಖೆಗೂ ಲಾಭದಾಯಕವಾಗಿದೆ. +ಈ ದಿಸೆಯಲ್ಲಿ ನಮ್ಮ ಈ ಹಂದಿಸಾಕಾಣಿಕೆಯಿಂದ ವರ್ಷಕ್ಕೆ ಏನಿಲ್ಲವೆಂದರೂ 3 ರಿಂದ 4 ಸಲ ಕೊಟೇಷನ್ ಪಡೆದು ಹರಾಜು ಪ್ರಕ್ರಿಯೆ ಮೂಲಕ ಲಕ್ಷಗಟ್ಟಳೆ ಆದಾಯ ಸಿಗುತ್ತಿದೆ. ಇದಕ್ಕೆ ಕಾರಣರಾದ ಹಂದಿಸಾಕಾಣಿಕೆಯ ಜವಾಬ್ದಾರಿ ಹೊತ್ತ ನಮ್ಮ ಕೈದಿಗಳಾದ ಶ್ರೀನಿವಾಸ್, ವೆಂಕಟೇಶ್, ವೆಂಕಟೇಗೌಡ ಮತ್ತಿತರ ಕೈದಿಗಳು ಹಾಗೂ ಜೈಲಿನ ಸಹಾಯಕ ಅಧೀಕ್ಷಕ ಐ.ಎಸ್.ಸೀಮಿಮಠ್ ಮತ್ತಿತರೆ ಅಧಿಕಾರಿಗಳ ಸೇವೆ ಶ್ಲಾಘನೀಯವಾಗಿದೆ. ಅಲ್ಲದೆ, ಇಂತಹ ಪ್ರಯತ್ನಗಳು ಇತರೆ ನಿರುದ್ಯೋಗಿ ಯುವಕರು ತಮ್ಮ ಜೀವನ ರೂಪಿಸಿಕೊಳ್ಳಲು ಮಾದರಿಯಾಗಿವೆ" ಎನ್ನುತ್ತಾರೆ ವೀರೇಂದ್ರ ಸಿಂಹ. + ಒಟ್ಟಿನಲ್ಲಿ ಜೈಲಿನ ಬಂಧಿಗಳಾಗಿದ್ದರೂ ಉತ್ತಮ ನಡತೆ ಹಾಗೂ ಸ್ವಭಾವಗಳಿಂದ ಜೈಲಿನ ಅಧಿಕಾರಿಗಳಿಂದ ಒಳ್ಖೆಯ ಹೆಸರನ್ನು ಪಡೆದುಕೊಂಡಿರುವ ಈ ಮೂವರ ಕೈದಿಗಳ ಹಂದಿಸಾಕಾಣಿಕೆ ಕಾರ್ಯ ಇತರರಿಗೂ ಮಾದರಿಯಾಗಿದೆ. ಇನ್ನೇನು ಜೈಲಿನಿಂದ ಸನ್ನಡತೆಯ ಆಧಾರದಲ್ಲಿ ಬಂಧಮುಕ್ತಗೊಳ್ಳುವ ನಿರೀಕ್ಷೆಯಲ್ಲಿರುವ ಇವರು, ಹೊರಬಂದ ಮೇಲೆ ಈಗಿರುವ ಅನುಭವವನ್ನು ಹಂದಿಸಾಕಾಣಿಕೆ ಮಾಡುವುದಕ್ಕೆ ಮೀಸಲಿಟ್ಟು, ತಮ್ಮ ಜೀವನ ರೂಪಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಅದೇನೆ ಇರಲಿ, ಅತಿ ಕಡಿಮೆ ಬಂಡವಾಳ, ಶ್ರಮ, ಖರ್ಚನ್ನು ಬಯಸುವ ಈ ಕಸುಬು, ಉತ್ತಮ ಆದಾಯ ತಂದುಕೊಡುವ ಉದ್ಯೋಗವೇ ಸರಿ. ಇದು ಉದ್ಯೋಗಕ್ಕೆ ಕೃಷಿಭೂಮಿಗಳನ್ನು ಹಾಳುಹಂಪೆಯನ್ನಾಗಿಸಿ, ನಗರದತ್ತ ಮುಖಮಾಡುತ್ತಿರುವ ನಿರುದ್ಯೋಗಿ ಯುವಕರ ಪಾಲಿಗೆ ಸಂಜೀವಿನಿಯಾಗಿದೆ. + ***** \ No newline at end of file diff --git a/PanjuMagazine_Data/article_1047.txt b/PanjuMagazine_Data/article_1047.txt new file mode 100644 index 0000000000000000000000000000000000000000..a41f761d944c20c8944c08939f4a8340d844f8b4 --- /dev/null +++ b/PanjuMagazine_Data/article_1047.txt @@ -0,0 +1,54 @@ +ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು. +ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ. +"ಏನಮ್ಮ ತುಂಬಾ ಕೆಮ್ಮು ಇರುವ ಹಾಗಿದೆ , ಕುಡಿಯಲು ನೀರು ಕೊಡಲಾ? " ಎಂದೆ, ದೀಪ ಹಾಕುತ್ತ. +ಅವಳಿಗೆ ಉತ್ತರಿಸಲು ಆಗಲಿಲ್ಲ ಅನ್ನಿಸುತ್ತೆ, +"ಕೊಡು" ಅನ್ನುವಂತೆ ತಲೆ ಆಡಿಸಿದಳು. ಹೋಗಿ ನೀರು ತಂದೆ. ಎದ್ದು ಕುಳಿತು ಕುಡಿಯಲು ಪ್ರಯತ್ನಿದಳು, ಆದರೆ ಪೂರ್ತಿ ನೀರು ಕುಡಿಯಲೇ ಇಲ್ಲ. ತಲೆ ಪಕ್ಕಕ್ಕೆ ವಾಲಿಸಿ ಹಾಗೆ ಹಿಂದಕ್ಕೆ ಒರಗಿಬಿಟ್ಟಳು. +ನನಗೆ ಸ್ವಲ್ಪ ಗಾಭರಿ ಅನ್ನಿಸಿತು +"ಏನಾಯಿತು" ಎಂದು ಕೇಳೀದರೆ ಉತ್ತರವಿಲ್ಲ. ಅಲುಗಿಸಿದರೆ ಕಣ್ಣು ಬಿಡುತ್ತಿಲ್ಲ. ತಕ್ಷಣ +"ಕಮಲ" ಎನ್ನುತ್ತ ಜೋರಾಗಿ ಹೆಂಡತಿಯನ್ನು ಕೂಗಿದೆ. ರೂಮಿನಲ್ಲಿ ಮಲಗಿದ್ದವಳು ಎದ್ದು ಬಂದಳು. ಹಾಗೆ ಮತ್ತೊಂದು ರೂಮಿನಿಂದ ಮಗನು ಎದ್ದು ಬಂದ. +ತಕ್ಷಣ ನರ್ಸಿಂಗ್ ಹೋಮ್ ಗೆ ಪೋನ್ ಮಾಡಿ ಆಂಬ್ಯೂಲೆನ್ಸ್ ತರಿಸಿ, ತಲುವುವಾಗ ಅರ್ಧಗಂಟೆ ಕಳೆದಿತ್ತು. ಯಾವುದೇ ಉಪಯೋಗವಾಗಲಿಲ್ಲ. +ಡಾಕ್ಟರ್ ಹೇಳಿದರು +"ಇಲ್ಲ , ಉಪಯೋಗವಿಲ್ಲ, ತಡವಾಗಿದೆ ಪ್ರಾಣಹೋಗಿ ಅರ್ಧಗಂಟೆಯಾಗಿದೆ ಅನ್ನಿಸುತ್ತೆ,ಸಿವಿಯರ್ ಹಾರ್ಟ್ ಅಟ್ಯಾಕ್ " +ಏನು ಎಂದು ಅರ್ಥವಾಗುವದರಲ್ಲಿ ಅಮ್ಮ ಬಿಟ್ಟುಹೊರಟುಹೋಗಿದ್ದಳು. +**** *** +ಮುಂದಿನದೆಲ್ಲ ಯಾಂತ್ರಿಕ. ಬೆಂಗಳೂರಿನಲ್ಲಿದ್ದ ತಮ್ಮನಿಗೆ ಬರುವಂತೆ ಕಾಲ್ ಮಾಡಿದೆ, ಬೆಳಗ್ಗೆ ಆಗುವದರಲ್ಲಿ ಎಲ್ಲರಿಗು ವಿಷಯ ತಿಳಿದು ಒಬ್ಬರ ನಂತರ ಒಬ್ಬರು ಬರುತ್ತಿದ್ದರು. ಅಮ್ಮನ ತಮ್ಮಂದಿರು ಇಬ್ಬರೂ ಬಂದರು. ಎಲ್ಲರು ಅವಳ ಗುಣಗಾನ ಮಾಡುತ್ತ ಕಣ್ಣೀರು ಸುರಿಸುವರೆ. +ನನಗೆ ಏನು ತೋಚದೆ ಸಪ್ಪಗೆ ಕುಳಿತಿದ್ದೆ. +ಎಲ್ಲರೂ ಬಂದು ಏರ್ಪಾಡುಗಳೆಲ್ಲ ಮುಗಿದು ಅಂತ್ಯಕ್ರಿಯೆಗೆ ಹೊರಡುವಾಗ ಮಧ್ಯಾನ್ಹ ದಾಟಿತ್ತು. ನಾನು ಮೌನವಾಗಿ ನಡೆದಿದ್ದೆ. ಅದೇನು ಎಂದು ಅರ್ಥವಾಗುತ್ತಿಲ್ಲ, ಎದೆಯಲ್ಲಿ ಮಡುವುಗಟ್ಟಿದ ಸಂಕಟ. ಅಮ್ಮನ ದೇಹಕ್ಕೆ ಬೆಂಕಿ ಹಚ್ಚುವಾಗಲು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ಎಲ್ಲರೂ ಅಳುತ್ತಿರುವಾಗಲು ನನ್ನ ಕಣ್ಣಲ್ಲಿ ಒಂದು ಹನಿಯಾದರು ನೀರು ಬರಲಿಲ್ಲ. +**** **** +ಹತ್ತನೆ ದಿನದ ಕಾರ್ಯಗಳು ಕಡೆಯ ಘಟ್ಟ ಮುಟ್ಟಿದ್ದವು. +ಪುರೋಹಿತರು ಹೇಳುತ್ತಿದ್ದರು. "ಇಂದಿಗೆ ಎಲ್ಲ ಕಾರ್ಯಗಳು ಕೊನೆಮುಟ್ಟಿದವು. ವಿಸರ್ಜನೆಯಾದರೆ ಪ್ರೇತಾತ್ಮಕ್ಕೆ ಭೂಮಿಯ ಋಣಮುಗಿಯಿತು. ಇನ್ನೂ ಏನಿದ್ದರು ನಾಳೆ ವೈಧೀಕ, ನಾಡಿದ್ದು, ವೈಕುಂಠ.ಅಳುವ ಹಾಗಿದ್ದರೆ ಅತ್ತು ಬಿಡಿ, ತಾಯಿಗೆ ಹಾಕುವ ಕಡೆಯ ಕಣ್ಣೀರು ಇದು" +ಅವರ ಮಾತು ತಂದ ದುಃಖ ತಡೆಯಲಾರದೆ, ಸೋದರಮಾವ ಕಣ್ಣು ಒತ್ತಿಕೊಳ್ಳುತ್ತ ಅಲ್ಲಿಂದ ಎದ್ದು ಹೊರಗೆ ಹೋದರು. ತಮ್ಮ ದುಃಖತಡೆಯಲಾರದೆ ಜೋರಾಗೆ ಅತ್ತುಬಿಟ್ಟ. +ನಾನು ಅವರು ಪ್ರೇತರೂಪಕ್ಕೆ ಜೋಡಿಸಿದ ಮೂರು ಸಣ್ಣ ಕಲ್ಲುಗಳನ್ನು ಅದರ ಮೇಲೆ ಹಾಕಿದ್ದ ಅರಳು ಮುಂತಾದವನ್ನು ನೋಡುತ್ತಿದ್ದೆ ಹೊರತಾಗಿ ಅಳುಬರಲಿಲ್ಲ. ಅಮ್ಮನನ್ನು ನೆನೆಯುತ್ತ ದುಃಖ ಒತ್ತರಿಸುತ್ತ ಬರುತ್ತಿತ್ತು, ಹಿಂಸೆಯಾಗುತ್ತಿತ್ತು ಆದರೆ ಅದೇನೊ ಕಣ್ಣಿನಲ್ಲಿ ಒಂದೇ ಒಂದು ಹನಿ ನೀರಾದರು ಕಾಣಿಸಿಕೊಳ್ಳಲಿಲ್ಲ. ಪುರೋಹಿತರು ನನ್ನನ್ನೇ ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿದ್ದರು. ನಾನು ಸುಮ್ಮನೆ ದೃಷ್ಟಿ ಶೂನ್ಯನಾಗಿ ಕುಳಿತಿದ್ದೆ. +ಊಟವೆಲ್ಲ ಮುಗಿದು ಎಲ್ಲರೂ ಮಾತನಾಡುತ್ತ ಕುಳಿತಂತೆ, ಪುರೋಹಿತರು ಹೇಳುತ್ತಿದ್ದರು +"ನಮ್ಮ ಧರ್ಮದಲ್ಲಿ ನಾವು ಹೆತ್ತ ತಾಯಿ ತಂದೆಯರಿಗೆ ಸತ್ತಾಗ ಈ ಎಲ್ಲ ಕರ್ಮಗಳನ್ನು ಮಾಡುತ್ತೇವೆ, ಇದೆಲ್ಲ ಹಣದಿಂದ ಆಗುವುದು, ಆದರೆ ನಿಜವಾದ ತಿಥಿ ಎಂದರೆ ತಾಯಿಗಾಗಿ ಹರಿಸುವ ಒಂದು ಹನಿ ಕಣ್ಣೀರು. ಆ ರೀತಿ ಭಾವವೇ ಇಲ್ಲದ ಮೇಲೆ ತಿಥಿ ಮಾಡಿ ಸಹ ಏನು ಉಪಯೋಗ, ಅಲ್ಲವೆ " +ಪಕ್ಕದಲ್ಲಿದ್ದ ನನ್ನ ಸೋದರ ಮಾವನನ್ನು ಕೇಳುತ್ತಿದ್ದರು. +ನನಗೆ ಅರ್ಥವಾಗುತ್ತಿತ್ತು ಪುರೋಹಿತರು ಹೇಳುತ್ತಿರುವುದು ನನ್ನ ಬಗ್ಗೆ ಎಂದು. ಆದರೆ ನಾನು ಏನು ಉತ್ತರಕೊಡಲಾರದ ಸ್ಥಿತಿ ತಲುಪಿದ್ದೆ. ಮೌನವಾಗಿಯೆ ಅವರ ಮಾತುಗಳನ್ನು ಅವಹೇಳನವನ್ನು ನುಂಗಿಕೊಂಡೆ. +**** ****** +ಎಲ್ಲ ಕಾರ್ಯಗಳು ಮುಗಿದಿದ್ದವು. ಮನೆಯಲ್ಲಿ ಈಗ ನಾವು ಮೂರು ಜನ ಮಾತ್ರ, ನಾನು , ಪತ್ನಿ ಹಾಗು ಮಗ. +ಅಮ್ಮ ಮಲಗುತ್ತಿದ್ದ ರೂಮೀಗ ಖಾಲಿ ಖಾಲಿ. ಒಂದು ವಾರ ಕಳೆದಿತ್ತು ಅನ್ನಿಸುತ್ತೆ. ಹೆಂಡತಿ ಮಾತು ತೆಗೆದಳು. +"ಇದೇನು ಹೀಗೆ ಇರುತ್ತೀರಿ, ಸಮಾದಾನ ತಂದುಕೊಳ್ಳಬಾರದೆ. ಅತ್ತೆ ಜೀವನದಲ್ಲಿ ಎಲ್ಲವನ್ನು ಕಂಡರು ಸುಖಃ ದುಃಖ ಎಲ್ಲವನ್ನು ನೋಡಿದರು , ಸಾವಿನಲ್ಲೂ ಯಾವುದೇ ಸಂಕಟ ಅನುಭವಿಸಲಿಲ್ಲ. ಸುಖಃದ ಮರಣವನ್ನೆ ಪಡೆದರು. ಎಷ್ಟು ದಿನ ಹೀಗಿರುತ್ತೀರ ಹೇಳಿ. ಸ್ವಲ್ಪ ಮನವನ್ನು ಬೇರೆ ಕಡೆ ಹರಿಸಿ" ಎಂದೆಲ್ಲ ಹೇಳಿದಳು. +ನಾನು ಹೇಳಿದೆ +"ಇಲ್ಲ ಕಮಲ , ನನ್ನ ಮನದ ದುಃಖ ಬೇರೆಯೇ ಇದೆ. ಅಮ್ಮ ಸತ್ತಾಗ ಎಲ್ಲರೂ ಸೇರಿದರು, ಸೋದರಮಾವ ಆದಿಯಾಗಿ ದುಃಖಪಟ್ಟರು, ನನ್ನ ಮನದಲ್ಲಿ ಅದೆಂತದೋ ಭಾವ ಬೇಯುತ್ತಲೆ ಇತ್ತು, ಆದರೆ ನನ್ನನ್ನು ಸಾಕಿ ಸಲಹಿದ ಅಮ್ಮನಿಗಾಗಿ ಒಂದು ಹನಿ ಕಣ್ಣೀರು ಹಾಕಲಾಗಲಿಲ್ಲ. ಬೇಕು ಅಂದರೂ ಅಳು ಬರಲಿಲ್ಲ. ನನ್ನ ಮನದ ಬಗ್ಗೆ ನನಗೆ ಚಿಂತೆಯಾಗಿದೆ, ನನ್ನಲ್ಲಿ ಭಾವನೆಗಳೆಲ್ಲ ಬತ್ತಿ ಹೋದವ ಅನ್ನಿಸುತ್ತಿದೆ" +ಅದಕ್ಕೆ ಕಮಲ ಹೇಳಿದಳು +"ಹಾಗೇನು ಇಲ್ಲರೀ , ಕೆಲವರಿಗೆ ಹಾಗೆ ಬೇಗ ಅಳು ಎನ್ನುವುದು ಬರುವದಿಲ್ಲ. ಅದು ಅವರವರ ಸ್ವಭಾವ , ಹೊರಗೆ ಅಳುವುದು ತಮ್ಮ ದುಃಖದ ತೋರ್ಪಡೆ ನಿಮ್ಮ ಸ್ವಭಾವ ಅಲ್ಲ ಬಿಡಿ" +"ಇಲ್ಲ ಕಮಲ, ನೀನು ಏನು ಹೇಳುವಾಗಲು ನನಗೆ ಸಮಾದಾನವಿಲ್ಲ. ಹಾಗೆಂದು ನನಗೆ ಸುಮ್ಮನೆ ಎಲ್ಲರೆದುರಿಗೂ ಅಳುವ ನಾಟಕವಾಡಲು ಇಷ್ಟವಿರಲಿಲ್ಲ, ನನಗೆ ನನ್ನ ಬಗ್ಗೆಯೆ ಅನುಮಾನ ಪ್ರಾರಂಭವಾಗಿದೆ, ನಾನು ಅಷ್ಟೊಂದು ನಿರ್ಭಾವುಕನ, ಕಡೆಗೆ ಅಮ್ಮನ ಸಾವಿಗೆ ಅಳದಷ್ಟು. ಅಥವ ನನ್ನ ಒಳ ಮನದಲ್ಲಿ ಅವಳ ಬಗ್ಗೆ ಪ್ರೀತಿಯೆ ಇಲ್ಲವಾ?" + ನನ್ನ ಮನೋವ್ಯಥೆ ಮುಂದುವರೆದಿತ್ತು. ಕಡೆಗೆ ಕಮಲ ಹೇಳಿದಳು +"ನಿಮ್ಮ ಮಾನಸಿಕ ತುಮಲ ನೋಡಲು ಆಗುತ್ತಿಲ್ಲ, ನಿಮಗೆ ನಿಮ್ಮ ಮನದ ಬಗ್ಗೆ ಅಷ್ಟೋಂದು ಬೇಸರವಿದ್ದಲ್ಲಿ, ಯಾರಾದರು ಮಾನಸಿಕ ತಜ್ಞರಲ್ಲಿ ಹೋಗಿ ತೋರಿಸೋಣ, ಅವರು ನಿಮ್ಮ ಮನವನ್ನು ಸರಿಯಾಗಿ ಅರ್ಥೈಸಿ ಹೇಳಬಹುದು. ಆಗ ನಿಮಗೂ ಒಂದು ಸಮಾದಾನ ದೊರೆಯುತ್ತದೆ. ಅಂತಹ ಸಮಸ್ಯೆಗಳು ಏನಾದರು ಇದ್ದಲ್ಲಿ ಪರಿಹಾರವಾಗುತ್ತದೆ" +ಏನು, ಅಮ್ಮನ ಸಾವಿಗೆ ಅಳಲಿಲ್ಲ ಎನ್ನುವ ಕಾರಣಕ್ಕೆ ಮಾನಸಿಕ ಡಾಕ್ಟರ್ ಬಳಿಯೆ ? +ಎಂದು ಮೊದಲು ಅನ್ನಿಸಿತು, ಕಡೆಗೊಮ್ಮೆ ಹೆಂಡತಿಯ ಮಾತು ಸರಿ ಅನ್ನಿಸಿತು. +ಮನೋವೈದ್ಯರು ಸಹನೆಯಿಂದ ನಾನು ಹೇಳುವದನ್ನೆಲ್ಲ ಕೇಳಿದರು. +ನಂತರ ಮಧ್ಯ ಮಧ್ಯ ಕೆಲವು ಪ್ರಶ್ನೆಗಳನ್ನು ಕೇಳಿದರು. ಉತ್ತರಿಸಿದೆ. ನನ್ನ ಹೆಂಡತಿ ಸಹ ಅವರಿಗೆ ಕೆಲವು ವಿಷಯಗಳನ್ನು ತಿಳಿಸಿದಳು. ನಾನು ತಂದೆಯನ್ನು ತೀರ ಚಿಕ್ಕವಯಸಿನಲ್ಲಿ ಕಳೆದುಕೊಂಡಿದ್ದು, ನಂತರ ಅಮ್ಮ ನನ್ನನ್ನು ಹಾಗು ತಮ್ಮನನ್ನು ಒಬ್ಬಂಟಿಯಾಗಿ ಸಾಕಿದ್ದು. ಎಲ್ಲವನ್ನು ತಿಳಿಸುತ್ತ, ಈಚೆಗೆ ತಾಯಿ ತೀರಿಕೊಂಡರೆಂದು, ಆ ಸಮಯದಲ್ಲಿ ಇವರು ಏನು ಮಾಡಿದರು ಅಮ್ಮನಿಗಾಗಿ ಒಂದೇ ಒಂದು ಹನಿ ಕಣ್ಣೀರು ಸುರಿಸಲಾಗದಿದ್ದು, ಮನೋವ್ಯಥೆ ಎಲ್ಲವನ್ನು ಹೇಳಿದಳು. +ಮನೋವೈದ್ಯರು ಕ್ಷಣಕಾಲ ಸುಮ್ಮನೆ ಕುಳಿತರು. ಅವರು ಏನನ್ನೋ ಚಿಂತಿಸುತ್ತ ಇದ್ದರು. ನನ್ನ ಮುಖವನ್ನೆ ದೀರ್ಘಕಾಲ ನೋಡಿ ನಂತರ ಎದ್ದು ಬಂದು, ಸ್ವಲ್ಪ ಕಣ್ಣು ಅಗಲಿಸಿ ಎನ್ನುತ್ತ ನನ್ನ ಕಣ್ಣುಗಳನ್ನು ಪರೀಕ್ಷಿಸಿ ಪುನಃ ಅವರ ಜಾಗದಲ್ಲಿ ಹೋಗಿ ಕುಳಿತರು. +"ನೋಡಿ ಶರ್ಮರವರೆ ನಿಮ್ಮ ಮಾತುಗಳ ಮೇಲೆ ಹೇಳುವದಾದರೆ ನಿಮ್ಮ ಮನಸ್ಥಿತಿ ಅತ್ಯಂತ ಸಹಜವಾಗಿದೆ, ಯಾವುದೇ ಏರುಪೇರುಗಳು ಇಲ್ಲ. ನಿಮಗೆ ಮಾನಸಿಕವಾಗಿ ಏನೋ ಆಗಿದೆ ಎನ್ನುವುದು ನಿಮ್ಮ ಕಲ್ಪನೆ ಅಷ್ಟೆ. ಹೆದರಬೇಡಿ, ನಿಮಗೆ ಯಾವ ಮನೋರೋಗದ ಚಿಕಿತ್ಸೆಯ ಅಗತ್ಯವೂ ಇಲ್ಲ' +ನನಗೆ ಸಮಾದಾನ ಅನ್ನಿಸಿತು, ಜೊತೆ ಜೊತೆಗೆ ಮತ್ತೆ ಆತಂಕ +'ಸರಿ ಡಾಕ್ಟರ್ ಎಲ್ಲವೂ ಸರಿ ಇದೆ ಅನ್ನುವದಾದರೆ ನನಗೆ ಏನಾಗಿದೆ, ಏಕೆ ಅಳು ಬರುತ್ತಿಲ್ಲ. ಮನದಲ್ಲೆ ಎಷ್ಟೇ ವ್ಯಥೆ ತುಂಬಿದರು, ಭಾವನೆಗಳ ವ್ಯತ್ಯಾಸವಾಗುತ್ತಿದ್ದಾಗಲು ನಾನು ಸಹಜವಾಗಿಯೆ ಇರುತ್ತೇನೆ ಅಳುತ್ತಿಲ್ಲ. ಅಳು ಅನ್ನುವುದು ಮನಷ್ಯನ ಸಹಜ ಭಾವವಲ್ಲವೇ, ಅಲ್ಲದೇ ತಾಯಿಯ ಮರಣ ಎನ್ನುವುದು ಎಂತಹ ಕಲ್ಲು ಮನದವರಿಗೂ ದುಃಖದ ಭಾವವನ್ನು ತುಂಬುತ್ತದೆ, ಆದರೆ ನನ್ನ ಮನಸ್ಥಿತಿಯನ್ನು ನೋಡಿ, ನನಗೇಕೆ ಒಂದು ಹನಿ ಕಣ್ಣೀರು ಬರುತ್ತಿಲ್ಲ' +ಡಾಕ್ಟರ್ ನಿಧಾನವಾಗಿ ನುಡಿದರು +'ಇಲ್ಲ …, ಇದಕ್ಕೆ ಕಾರಣ ನಿಮ್ಮ ಮನಸ್ಥಿತಿಯಲ್ಲ ಇದಕ್ಕೆ ಕಾರಣ ನಿಮ್ಮ ಕಣ್ಣು. ಅಲ್ಲಿ ಕಣ್ಣೀರು ಉತ್ಪತ್ತಿಯಾಗುವ ಗ್ಲಾಂಡ್ ಬತ್ತಿ ಹೋಗಿದೆ, ಆಂಗ್ಲದಲ್ಲಿ ಡ್ರೈ ಐಸ್ ಅನ್ನಬಹುದೇನೊ, ಅಂದರೆ ನಿಮಗೆ ಸಹಜವಾಗಿಯೆ ಕಣ್ಣೀರು ಬರುತ್ತಿಲ್ಲ. ನಿಮ್ಮ ಭಾವನೆಯ ಉತ್ಕರ್ಷದಲ್ಲಿಯೂ ಕಣ್ಣ್ಣೀರು ಬರುತ್ತಿಲ್ಲ ಏಕೆ ಎಂದರೆ ನಿಮ್ಮ ಕಣ್ಣಿನಲ್ಲಿ ನೀರೆ ಇಲ್ಲ. ನನ್ನ ಹತ್ತಿರ ಬಂದಿರುವಿರಿ, ನಾನು ಜನರಲ್ ಆಗಿ ಒಂದು ಐ ಡ್ರಾಪ್ ಕೊಡುತ್ತೇನೆ,ನೀವು, ಮತ್ತೆ ಯಾರಾದರು ಕಣ್ಣಿನ ತಜ್ಞರನ್ನು ಬೇಟಿ ಆಗಬೇಕಾಗುತ್ತೆ. ಕೆಲವರಿಗೆ ಕಣ್ಣಿನಲ್ಲಿ ನೋವು ಇಂತಹುದೆಲ್ಲ ಇರುತ್ತೆ ಆದರೆ ನಿಮಗೆ ಯಾವುದೇ ನೋವಿಲ್ಲ ಹಾಗಾಗಿ ನಿಮ್ಮ ಅರಿವಿಗೆ ಬರಲಿಲ್ಲ ಅನ್ನಿಸುತ್ತೆ' +**** **** +ಮನೆಗೆ ಬಂದು ತಲುಪಿದೆವು. ಡಾಕ್ಟರ್ ಕೊಟ್ಟಿದ್ದ ಐ ಡ್ರಾಪ್ಸ್ ತರಲು ಹೋಗಲಿಲ್ಲ. +ಅಮ್ಮನ ಕೋಣೆಯೊಳಗೆ ಹೋದೆ. +ಅಲ್ಲಿ ಹಾಕಿದ್ದ ಅವಳ ಫೋಟೋ ನೋಡುತ್ತ ನಿಂತಿದ್ದೆ. ಎಂತದೋ ಹಿಂಸೆ ಅನ್ನಿಸುತ್ತಿತ್ತು. ಕಣ್ಣು ಮುಚ್ಚಿಕೊಂಡು ಅಮ್ಮನನ್ನು ನೆನೆದುಕೊಂಡೆ +"ಅಮ್ಮ ನೀನು ಗಂಡನನ್ನು ಕಳೆದುಕೊಂಡ ನಂತರ ನಮ್ಮನ್ನು ಎಷ್ಟು ಜತನದಿಂದ ಬೆಳೆಸಿದೆ ಎಂದು ತಿಳಿದಿದೆ. ನಿನ್ನ ಎಲ್ಲ ದುಃಖವನ್ನು ನಿನ್ನೊಳಗೆ ಅಡಗಿಸಿಕೊಂಡು, ನಮ್ಮ ಎದುರಿಗೆ ಯಾವ ಭಾವವನ್ನು ತೋರದೆ ಸಹಜವಾಗಿ ವರ್ತಿಸುತ್ತಿದ್ದೆ, ಮುಖದಲ್ಲಿ ನಗುವನ್ನು ತುಂಬಿಕೊಳ್ಳುತ್ತಿದ್ದೆ. ನಮ್ಮ ಎದುರಿಗೆ ಅತ್ತುಬಿಟ್ಟರೆ , ಎಲ್ಲಿ ನಮ್ಮ ಆತ್ಮ ವಿಶ್ವಾಸ ಕುಗ್ಗಿಹೋಗಿ ಬಿಡುವುದೋ ಎನ್ನುವ ಆತಂಕ ನಿನಗೆ. ನನಗೆ ಕಾಣದಂತೆ ನೀನು ಕೊರಗಿ ಕಣ್ಣೀರು ಒರೆಸಿಕೊಳ್ಳುವದನ್ನು ಎಷ್ಟೋ ಸಾರಿ ನಾನು ಗಮನಿಸಿದ್ದೆ ಅಮ್ಮ. ನಮ್ಮ ಕಣ್ಣಲ್ಲಿ ಎಂದು ನೀರು ಬರದಂತೆ ನಮ್ಮನ್ನು ಬೆಳೆಸಿದೆ. ಈಗ ನೋಡು ನೀನು ಕಣ್ಣೀರು ಹಾಕುತ್ತ ಬೆಳೆಸಿದ ನಾನು ನಿನ್ನ ಸಾವು ಅನ್ನುವಾಗಲು ಒಂದು ಹನಿ ಕಣ್ಣೀರು ಹಾಕಲು ಆಗದಂತ ಸ್ಥಿತಿಯನ್ನು ಹೊಂದಿರುವೆ. ನನ್ನ ಮನ ಭಾವೋತ್ಕರ್ಷಕ್ಕೆ ಒಳಗಾಗಿದೆ, ಆದರೂ ನಿನಗಾಗಿ ಒಂದು ಹನಿ ಕಣ್ಣೀರು ಹಾಕಲಾರೆ, ನನ್ನನ್ನು ಕ್ಷಮಿಸು ಅಮ್ಮ" +ಕಣ್ಣುಮುಚ್ಚಿ ಅಮ್ಮನನ್ನು ಬೇಡುತ್ತಿದ್ದೆ. ಹಾಗೆ ಎಷ್ಟು ಹೊತ್ತು ನಿಂತಿದ್ದೆನೊ ನನಗೆ ತಿಳಿಯದು. ಕೆನ್ನೆಯೆಲ್ಲ ಒದ್ದೆ ಆದಂತೆ ಅನ್ನಿಸಿತು. ನಿಧಾನಕ್ಕೆ ಕಣ್ಣನ್ನು ತೆಗೆದೆ. ನನ್ನ ಬಲಕೈ ಕಣ್ಣಿನ ಬಳಿ ಹೋಯಿತು. ಕೈಯನ್ನು ಕೆನ್ನೆಯ ಮೇಲೆ ಒತ್ತಿ , ನೋಡಿದೆ, ಕೈಯೆಲ್ಲ ಒದ್ದೆ ಒದ್ದೆ, ಕಣ್ಣೀರು. +ಅಮ್ಮ ನನ್ನ ಮಾತನ್ನು ಕೇಳಿಸಿಕೊಂಡಿದ್ದಳು, ಅವಳಿಗಾಗಿ ಕಣ್ಣೀರು ಹಾಕದ ಪಾಪಿ ಎನ್ನುವ ನನ್ನ ಭಾವ ತೊಡೆಯುವಂತೆ, ಕಣ್ಣಲ್ಲಿ ನೀರು ಸುರಿಯುತ್ತಿತ್ತು, ನಮಗಾಗಿ ಎಲ್ಲವನ್ನು ಕೊಟ್ಟ ಅಮ್ಮ ಈಗ ಕಣ್ಣೀರನ್ನು ಕೊಟ್ಟಿದ್ದಳು. ಮನದಲ್ಲಿ ದುಃಖದ ಭಾವ ತುಂಬಿ ಬರುತ್ತಿತ್ತು, ಅಮ್ಮನನ್ನು ಕಳೆದುಕೊಂಡ ನೋವು ಮನವನ್ನು ತುಂಬುತ್ತಿರುವಂತೆ, ಅಳು ತುಂಬಿ ಬಿಕ್ಕಿ ಬಿಕ್ಕಿ ಬರುತ್ತಿತ್ತು. ಅಂದಿನಿಂದ ತಡೆದಿದ್ದ ದುಃಖ ಕಣ್ಣೀರು ಅಮ್ಮನ ಫೋಟೊದ ಮುಂದೆ ತನ್ನ ಒತ್ತಡವನ್ನು ಕಳೆದುಕೊಳ್ಳುತ್ತಿತ್ತು. +***** \ No newline at end of file diff --git a/PanjuMagazine_Data/article_1048.txt b/PanjuMagazine_Data/article_1048.txt new file mode 100644 index 0000000000000000000000000000000000000000..17ad133289c5cf0d4a628ed7158acdf2dfc78c75 --- /dev/null +++ b/PanjuMagazine_Data/article_1048.txt @@ -0,0 +1,260 @@ +ಶಾಂತಿಗೀತೆ +ಮುಗಿಲು.. +ಕೆಂಡಕಾರುವ ಅಗ್ನಿಪಾತ್ರೆ +ನೆಲ.. +ಕಿಚ್ಚು ಎಬ್ಬಿಸುವ ಒತ್ತಲು +ಗಾಳಿ.. +ಕೊಳ್ಳಿಹೊತ್ತಿಸುವ ಕಟುಕ +ಮಳೆ.. +ಬಾರದೆ ಕಾಡುವ ಇನಿಯ +ನಾನು.. +ನೆಲವಾಗಬೇಕು ಮಲೆನಾಡ ಕಾಡಂತೆ +ಮುಗಿಲಾಗಬೇಕು ಹುಣ್ಣಿಮೆ ಇರುಳಂತೆ +ನಾನು.. +ಗಾಳಿಯಾಗಬೇಕು.. ಬೆಂದೊಡಲ ತಣಿಸಬೇಕು +ಮಳೆಯಾಗಬೇಕು.. ನದಿಯಾಗಿ ಹರಿಯಬೇಕು +ನಾನು.. +ಹಕ್ಕಿಯಾಗಬೇಕು.. ಗಡಿಗಳಾಚೆ ಹಾರಬೇಕು +ಮದ್ದುಗುಂಡು ಬರುವ ದಾರಿಹಾಯ್ದು ಆಚೆ +ಹೋಗಿ ಶಾಂತಿ ಸಾರಿ ಬರಬೇಕು +ಸರಹದ್ದಿನಗುಂಟ ಮುಳ್ಳಿನ ಬೇಲಿ +ನಿಬಿಡ ಸರಳುಗಳ ಪಂಜರ ಹೇಗೆ ಹಾರಲಿ? +ಬೇಡ.. ಬೇಡ.. +ಈ ಜೀವಾವಧಿ ಶಿಕ್ಷೆ.. ನೀಡಬೇಡ.. +ಅಮ್ಮ ಕೈಯೊಳಗಿನ ಚಿಮ್ಮಟಿಗೆಯ ಎಸೆದು +ನೀನಾದರೂ ಹೇಳು +ಅತ್ತಿಗೆ ಒಲೆಯ ಮೇಲಿನ ಹೆಂಚಿಳಿಸಿ +ನೀನಾದರೂ ಹೇಳು +ಈ ಮನೆ.. ಓಣಿ.. ಊರು.. +ನಾಡು.. ಎಲ್ಲವೂ ಹೀಗೇಕೆಂದು? +ಅದೇಕೆ ಅಪ್ಪ ಚಿಕ್ಕಪ್ಪ ಬೆತ್ತಗಳಿಡಿದು +ಎದುರುಬದುರಾಗಿದ್ದಾರೆ +ಹೀಗಿರುವಾಗ ನಾನು ಹೇಗೆ +ನೆಲವಾಗಲಿ..? ಮುಗಿಲಾಗಲಿ..? +ಗಾಳಿ.. ಮಳೆಯಾಗಲಿ..? +ಹಕ್ಕಿಯಾಗಿ ಸರಹದ್ದುಗಳ ಮುರಿದು +ದೇವದಾರುಗಳ ಟೊಂಗೆಯ ಮೇಲೆ +ಕುಳಿತು ಶಾಂತಿ ಗೀತೆ ಹಾಡಲಿ..? +-ಗಿರೀಶ ಚಂದ್ರಕಾಂತ ಜಕಾಪುರೆ + + + + + +*ಅಮ್ಮ ಐ ಲವ್ ಯೂ ಮಾ* +ನಾ ಕಂಡ ದೇವರು ನೀ +ನಾ ಕಂಡ ಗುರುವು ನೀ +ನಾ ಕಂಡ ದೈವವು ನೀ +ಅಮ್ಮ ಐ ಲವ್ ಯೂ ಮಾ…! +ನಾ ಕಂಡ ಜನ್ಮದಾತೇಯು ನೀ +ನಾ ಕಂಡ ಶಾಂತಿದಾತೇಯು ನೀ +ನಾ ಕಂಡ ಸತ್ಯದಾತೇಯು ನೀ +ಅಮ್ಮ ಐ ಲವ್ ಯೂ ಮಾ…! +ನಾ ಕಂಡ ಕರುಣಾ ಮಾತೇಯು ನೀ +ನಾ ಕಂಡ ಅನ್ನದಾತೇಯು ನೀ +ನಾ ಕಂಡ ಶ್ರಮಜೀವಿಯು ನೀ +ಅಮ್ಮ ಐ ಲವ್ ಯೂ ಮಾ…! +ನಾ ಕಂಡ ಬಾಳಿನ ಬೆಳಕು ನೀ +ನಾ ಕಂಡ ನಲಿವಿನ ಮಂತ್ರದಂಡವು ನೀ +ನಾ ಕಂಡ ಧನಿಯದ ಯಂತ್ರವು ನೀ +ಅಮ್ಮ ಐ ಲವ್ ಯೂ ಮಾ…! +ನಾ ಕಂಡ ನೋವು ಮರೆಸುವ ಮಂತ್ರವಾದಿಯೂ ನೀ +ನಾ ಕಂಡ ಭಾರ ಹೊರುವ ಭೂ ತಾಯಿಯೂ ನೀ +ನಾ ಕಂಡ ಸಂಬಳವಿಲ್ಲದ ಕಾರ್ಮಿಕಳು ನೀ +ಅಮ್ಮ ಐ ಲವ್ ಯೂ ಮಾ…! +ನಾ ಕಂಡ ಸಹನಾ ಮೂರ್ತಿಯೂ ನೀ +ನಾ ಕಂಡ ಕಲ್ಮಶವಿಲ್ಲದ ಹೃದಯೂ ನೀ +ನಾ ಕಂಡ ಸೌಂದರ್ಯವತಿಯೂ ನೀ +ಅಮ್ಮ ಐ ಲವ್ ಯೂ ಮಾ…! +ನನ್ನ ಮೊದಲ ತೋದಲ ನುಡಿಯೂ ನೀ +ಈ ಮಗ್ದ ಜೀವದ ಜೀವಾಳ ನೀ +ನಿನ್ನನ್ನು ಪಡೆದ ನಾನೇ ಧನ್ಯ +ನಿನ್ನ ಋಣ ತೀರಿಸಲು ಇರುವುದಾದರೇ +ಮರು ಜನ್ಮ ನೀನೇ ಆಗಲಿ ನನಮ್ಮ +ಓ ಜನ್ಮದಾತೆಯೇ ನಿಮಗೊಂದು +ನನ್ನ ಸಲಾಂ… ಸಲಾಂ….!! +ಅಮ್ಮ ಐ ಲವ್ ಯೂ ಮಾ…! +*ಜಗದೀಶ ದೊಡ್ಡಮನಿ* + + + + + +ಅಸುನೀಗಬೇಡ ಅನ್ನದಾತ +ಕೋಟಿ ಜನರ ಹಸಿವು ನೀಗಲೆಂದು +ಮೇಟಿ ಹಿಡಿದೆ ಜಗವು ಬದುಕಲೆಂದು +ಚಳಿಗಾಳಿಗೆ ಮೈಯನಿರಿಸಿ +ಭೂತಾಯಿಗೆ ಬೆವರ ಸುರಿಸಿ +ಫಸಲು ಬೆಳೆಯ ಕಾಯಕ ಯೋಗಿ +ಬದುಕುತ್ತಿರುವೆನೀ ಎಂತಹ ತ್ಯಾಗಿ +ಲಾಭದಾಸೆಗೆ ಕಳಪೆ ಬೀಜಕೊಟ್ಟರು +ಅನ್ನಬೆಳೆವ ನಿನ್ನಾಸೆಗೆ ಕೊಳ್ಳಿ ಇಟ್ಟರು +ಬಿತ್ತಿದ ಬೀಜ ಮೊಳಕೆಯೊಡೆಯಲಿಲ್ಲ +ಕಲಬೆರಕೆಯ ಗೊಬ್ಬರ ಕಸುವು ನೀಡಲಿಲ್ಲ +ಮುಗಿಲೆತ್ತರ ಬೆಳೆದ ಬಿ.ಟಿ.ಹತ್ತಿ +ಬಸಿರಾಗಲಿಲ್ಲ, ಕಾಯೊಡೆದು ಅರಳಲಿಲ್ಲ +ಭತ್ತ, ರಾಗಿ, ಜೋಳ ಬೆಳೆದು ನೆಮ್ಮದಿಯಲ್ಲಿದ್ದೆ +ಕುಲಾಂತರಿ ತಳಿಗಳಿಂದ ಸಂಕಷ್ಟಕ್ಕೆ ಬಿದ್ದೆ +ಹೊಲದಲ್ಲಿ ಕೀಟಬಾಧೆ, ಊರಲ್ಲಿ ಸಾಲಬಾಧೆ +ಬೆಳೆದ ಬೆಳಗಳಿಗೆ ನೂರೊಂದು ರೋಗ +ಬೆಲೆ ಸಿಗದೇ ಚಿಂತೆಯಲ್ಲಿ ಮನೋರೋಗ +ಪರಿಹಾರ ಕೇಳಿದರೆ ಬರೀ ಹಾರಿಕೆಯ ಉತ್ತರ +ಬರಗಾಲದ ಬರೆಯಿಂದ ಬದುಕು ತತ್ತರ +ಜಗವು ಬೆಲ್ಲ-ಸಕ್ಕರೆ ಸವಿಯಲೆಂದು +ಕಬ್ಬು ಬೆಳೆದೆ ಬಲು ಹಿಗ್ಗಿನಿಂದ +ಆದರೆ . . . ಬೆಳೆದು ನಿಂತ ರಸದ ಕಬ್ಬು +ಕೊಯ್ಯಲಿಲ್ಲ, ಕಾರ್ಖಾನೆಗೆ ಒಯ್ಯಲಿಲ್ಲ +ಸಾಲದ ಗಾಣದಲಿ ಸಿಕ್ಕು ಸಿಪ್ಪೆಯಾದೆ +ಮುಂದಿನ ದಾರಿಕಾಣದೇ ಸಪ್ಪೆಯಾದೆ +ಕಾರ್ಖಾನೆಗಳೆಲ್ಲಾ ಬಹುತೇಕ ಇವರವೇ +ಹಾಗಾಗಿ ಪರಿಹಾರ ಸೂತ್ರಗಳು ಅವರವೇ +ಮರೆಯಲ್ಲಿ ನಿನ್ನ ಚಿವುಟಿ ಅಳಿಸುವರು +ಎಲ್ಲರೆದುರು ತೊಟ್ಟಿಲ ತೂಗಿ ನಟಿಸುವರು +ಅನ್ನದಾತ ಸಾಯುತ್ತಿರುವ ಇಂದು ಹಸಿವಿನಿಂದಲ್ಲ +ಅಸಹಾಯಕತೆಯಿಂದ, ಈ ಹಾಳು ವ್ಯವಸ್ಥೆಯಿಂದ +ಚಿನ್ನಬೆಳೆವ ಗಣಿಗಾರಿಕೆಗಿಂತ +ಅನ್ನಬೆಳೆವ ನಿನ್ನ ಹೊಣೆಗಾರಿಕೆ ದೊಡ್ಡದು +ಓಡುವ ಮೋಡಗಳು ಇನ್ನೆಷ್ಟು ದಿನ ಓಡಿಯಾವು +ನಿಂತು ನಾಲ್ಕು ಹನಿಯ ಚೆಲ್ಲಿ ತಂಪು ಮಾಡಿಯಾವು +ಅನ್ನದಾತ ನೀನಿಲ್ಲದೇ ಲೋಕ ಬದುಕೀತು ಹೇಗೆ ? +ಅಸುನೀಗಬೇಡ, ಭರವಸೆಯ ಕಳೆದುಕೊಳ್ಳಬೇಡ +ನಿನ್ನ ನಂಬಿದ ಕುಟುಂಬ, ಜಗವ ಅನಾಥವಾಗಿಸಬೇಡ +-ಸಿ.ಮ.ಗುರುಬಸವರಾಜ, ಇಟ್ಟಿಗಿ. + + + + + + + " ಹೊಲೆಗಾರ ನಾ " +ಶಿಲೆಯಲ್ಲಾ, ಕಲೆಯಲ್ಲಾ ! +ಭವಬಂಧುವಲ್ಲ, ಅಲೆಯಸೆಲೆಯಲ್ಲ! +ಪಾಪವಿಲ್ಲ, ಪುಣ್ಯವಿಲ್ಲ, +ವೇದಗೋಷ್ಠಿಯ ವೇದಭಟ್ಟ ನಾನಲ್ಲ ! +ಜಡಧರಿಯಲ್ಲ, ಶಂಖುಚಕ್ರವಿಲ್ಲ! +ಹಾವಿನಮಾಲೆಯಲ್ಲ, ಶ್ಮಶಾನಧಾರಿಯೂ ನನ್ನಲ್ಲಾ ! +ಡಮರೂ, ಟಮಟೆಯ ಮೂರ್ತನೂ ನಾನಲ್ಲಾ ! +ಆದಿಯಲ್ಲ, ಅಂತ್ಯವೂ ನನ್ನಲ್ಲ ! +ಪುರಾಣದ ಹಂಗಿಲ್ಲಾ, +ವಿಭೂತಿಯ ಭವಭಯವಿಲ್ಲ! +ಕಾಶಿಯಲ್ಲೂ ನಾನಿಲ್ಲ, +ಹಿಮಾ-ಭುವದಲ್ಲೂ ನಾನಿಲ್ಲ! +ತಲೆಯಿಲ್ಲ, ಬಲೆಯಿಲ್ಲ, +ಶಿರವರವವ, ಹೊತ್ತುವ ನಾನಲ್ಲ! +ಗಂಗೆಯಲ್ಲ, ಶಿವೆಯಲ್ಲ, +ಹೊಲೆಯ ಒಲಿಯುವ, +ದಿಟ್ಟ ಶಿವ ನಾನು ನಾನು ! +ಶಿವ ನಾನು ! +ಕಾವಿಯುಟ್ಟವನ್ನಲ್ಲ, ಕಾಯಿಮುಟ್ಟವನ್ನಲ್ಲ, +ಜಾತಿ, ಧರ್ಮ, ಕುಲ ನೆಲವಿಲ್ಲ! +ಗುಡಿಯಲ್ಲ, ಮಡಿಯಲ್ಲ, ನಿಮ್ಮೆಲ್ಲರಾ + +ಶಿವ ನಾನಲ್ಲ ! +ಕರ್ಮದಪಶು ನಾನು, +ಕಾಯಕದ ನೆಲೆ ನಾನು !! +ಸರ್ವರ ಸರ್ವತಾ ಭವ ನಾನು, +ವಿಶ್ವದ ಭವಭೂತ ನಾನು, + +ವಿಶ್ವದ ನಿರಾಕರ ನಾನು ! +ಹೊಲೆಯ ಒಲಿಯುವ , +ಹೊಲೆಗಾರ ನಾನು ! +ಆ ಶಿವ ನಾನು ,. +ಶಿವ ನಾನು ! +-ಬೆನಾಕೀ ತುಮಕೂರು + + + + + +ಭೂಮಿ ತೂಗುವ ಹಕ್ಕಿ + +ಈ ಬೆಳ್ಳಾನೆ ಬೆಳಗಿನಲ್ಲಿ +ಮುಂಬಾಗಿಲ ಅಂಗಳದಲ್ಲಿ +ಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾ +ಭೂಮಿಯನ್ನೇ ತೂಗುತ್ತಿದೆಯಲ್ಲಾ +ಎಲಾ! ಪುಟಾಣಿ ಚುರುಕು ಹಕ್ಕಿ +ಯಾರಿಟ್ಟರೋ ಹೆಸರು? +ಭೂಮಿ ತೂಗುವ ಹಕ್ಕಿ. +ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ +ತೂಗಿದಷ್ಟೂ ತೂಗಿದಷ್ಟೂ +ಮೇಲಕ್ಕೂ ಏರುವುದಿಲ್ಲ;ಕೆಳಕ್ಕೂ +ಇಳಿಯುವುದಿಲ್ಲ. +ಸಮತೋಲನದ ಸಮಭಾರವಂತೂ +ಸಧ್ಯಕ್ಕೆ ಸಾಧ್ಯವೇ ಇಲ್ಲವಾ..? +ಅತ್ತೊಮ್ಮೆ ಇತ್ತೊಮ್ಮೆ ಮುಗಿಯದ +ಶತಪಥ. +ಪಾತಾಳಕ್ಕಿಳಿದ ಇಲ್ಲಿಯ ದು:ಖ +ಮುಗಿಲು ಮುಟ್ಟಿರುವಾಗ ಅಲ್ಲಿಯ ರೋದನ +ಕ್ಷಣಕ್ಕೊಮ್ಮೆ ಹತೋಟಿ ತಪ್ಪುವ ಬದುಕ ಸಂತೆಯ +ಭಾರ ವಹಿವಾಟಿನ ನಡುವೆ ಪುಕ್ಕದ ಅಳತೆಗೋಲು +ಹಿಡಿತಕ್ಕೆ ದಕ್ಕುವುದಿಲ್ಲ. +ಹಠಕಟ್ಟಿ ಉಸಿರೊತ್ತಿ +ಬಿರುಸಿನಲ್ಲಿ ಒಯ್ದಷ್ಟೇ +ರಭಸದಲ್ಲಿ ರಪಕ್ಕನೆ ಪ್ರತಿಭಾರಿ +ನೆಲಕ್ಕಾತು ಹೋಗುವ ವಿಫಲ ಪ್ರಯತ್ನ +ನೋಡುತ್ತಾ ನಿಂತ ನೆಲವೂ ನೆಟ್ಟ ಆಗಸವೂ +ಅರೆಗಳಿಗೆ ಕಂಪಿಸಿಕೊಂಡರೂ.. +ಹಕ್ಕಿ ಬಾಲ ಕುಣಿಸುತ್ತಲೇ ಇದೆ +ಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿ +ಪುಕ್ಕದಲ್ಲಿಟ್ಟು ತೂಗುತ್ತಲೇ ಇದೆ +ನಿರುಕಿಸುತ್ತಾ ನಿಂತ ಅಂಗಳದೆದೆ +ಈ ಗಳಿಗೆಯಲ್ಲಾದರೂ ಹಗುರಗೊಳ್ಳುತ್ತಿದೆ. +ದಕ್ಕಿದ ನಿರಾಳತೆಗೆ +ಅತ್ತ ಇತ್ತ ನುಲಿಯುತ್ತಾ +ಪುರ್ರನೆ ಹಾರಿದೆ ಹಕ್ಕಿ +ತೂಗಿಕೊಳುವ ಕಾತರತೆಯಲ್ಲಿ +ಮತ್ತೆ ರಚ್ಚೆ ಹಿಡಿದಿದೆ ಭೂಮಿ. +– ಸ್ಮಿತಾ ಅಮೃತರಾಜ್. ಸಂಪಾಜೆ + + + + + +ಕನಸಿನ ರಾಣಿ +ಮನದಲ್ಲಿ ಕಾಡುವ ನಿನ್ನಯ +ಉಳಿದ ನೆನಪುಗಳ ಸರಮಾಲೆ +ಬಂದು ಹೋಗುವ ಹಾಗೆ ನೀಡುತ್ತಿವೆ +ನಿನ್ನಯ ಸೌಂದರ್ಯದ ಸಂಗತಿಗಳು +ಯಾವ ಒಂದು ರೂಪವು ಸಹ +ಪಡೆದುಕೊಳ್ಳುತ್ತಿಲ್ಲ ನನ್ನಯ ಬದುಕಲಿ +ಆದರೂ ನನಗೆ ಗೊತ್ತು ನಿನ್ನಯ +ಪ್ರೀತಿಯ ನುಡಿ ಮುತ್ತುಗಳು ಪ್ರತಿಧ್ವನಿಸುತ್ತಿವೆ +ಕನಸುಗಳ ರಾಶಿಯಲ್ಲಿ ನಿನ್ನಯ +ಪ್ರೇಮದ ಚಂದಿರ ಬೆಳದಿಂಗಳು ಚಿಮ್ಮುಸುತ್ತಿರುವೆ +ಜೀವದ ಒಡತಿಯಾದರೂ ಸಹ ನಿನ್ನಯ +ಮಾರ್ದನಿ ಮೂಡುವ ಹಾಗೆ ಹಂಬಲಿಸುತ್ತಿರುವೆ +ಮನಸ್ಸಿನಲ್ಲಿ ಮೂಡುವ ನಿನ್ನಯ ರೂಪಕ್ಕೆ +ಒಂದು ನೆಲೆ ಎಂಬುದನ್ನು ಸೃಷ್ಟಿಸುತ್ತಲಿರುವೆ +ಖಂಡಿತ ಹೇಳುವೆ ಗೆಳತಿಯೇ ನೀನೇ +ನನ್ನ ಹೃದಯ ಅಂತರಾಳದ ಗೌಡತಿ ಎಂದೂ! +ಸಾರಿ ಸಾರಿ ಹೇಳುವೆ ನನ್ನಯ +ಮನದರಸಿ ನೀನೇ ಚಲುವೆ +-ನಾಗಪ್ಪ.ಕೆ.ಮಾದರ + + + + + +-: ಭಾವ ದುಂದುಭಿ :- +ಮೂಖವಾಗಿದ್ದ ಮನಸು +ನಿನ್ನ ನಗು ತಾಕುತ್ತಲೇ +ರೆಕ್ಕೆ ಬಿಚ್ಚಿದ ಹಕ್ಕಿಯಂತಾಗಿ ಭಾವನೆಗಳ +ಆಗಸದಲ್ಲಿ ವಿಹರಿಸಲು ಅಣಿಯಾಗುತ್ತದೆ. +ಸಾಕಿನ್ನೆಂದು ಕೈಚೆಲ್ಲಿ ಹೋಗಿದ್ದ ಉಲ್ಲಾಸ +ನಿನ್ನ ನಗುವ ಮೂಸುತ್ತಲೇ ಮನಸಿನ ಮೂಲೆಯಿಂದ +ಮೆಲ್ಲಗೆ ಸೆಲೆಯುಕ್ಕಲಾರಂಭಿಸುತ್ತದೆ ಕೊರಕಲಿನ +ಕಿಂಡಿಯಿಂದ ಹರಿದುಬರುವ ನೀರ ಸೆಲೆಯಂತೆ. +ಮೊಗೆದಷ್ಟು ಬತ್ತದ ನಿನ್ನೊಲವ +ಒರತೆಯದು ನಿತ್ಯ ಬಿಕ್ಕಳಿಸುವ +ಮನಸಿಗೆ ಹೊಸ ಜೀವನೋತ್ಸಾಹವ +ಹೊಮ್ಮಿಸುವ ಅಮೃತಧಾರೆಯಂತಹುದು. +ಜಗದ ಲೆಕ್ಕದಲ್ಲಿ ಬಡವನೆನಿಸಿದ್ದರು +ಭಾವಾಂತರಂಗದ ಭಾವದೋಕುಳಿಯಲಿ +ಸಿರಿವಂತಿಕೆಗೇನು ಕೊರೆಯಿಲ್ಲ ನಿನ್ನೊಟ್ಟಿಗೆ +ಬೆಸೆದ ಹೃದಯದ ಕಿಮ್ಮತ್ತೇನು ಕಡಿಮೆಯಲ್ಲ. +-ಪ್ರವೀಣಕುಮಾರ್. ಗೋಣಿ + + + + + \ No newline at end of file diff --git a/PanjuMagazine_Data/article_1049.txt b/PanjuMagazine_Data/article_1049.txt new file mode 100644 index 0000000000000000000000000000000000000000..6c1136623beb87bd73dc49703cde0123a435528e --- /dev/null +++ b/PanjuMagazine_Data/article_1049.txt @@ -0,0 +1,55 @@ +ಕವನ ಸಂಕಲನ: ಬಂದೂಕು ಹಿಡಿದ ಕೈಗಳು +ಲೇಖಕಿ: ಕು.ಅಂಜಲಿ ಬೆಳಗಲ್, ಹೊಸಪೇಟೆ +ಬಂದೂಕು ಹಿಡಿದ ಕೈಗಳಿಂದ ಎದೆಗಿಳಿದ ಗುಂಡುಗಳು (ಕವಿತೆಗಳು)….. +ಕನ್ನಡದ ಕೆಚ್ಚೆದೆಯ ಯುವ ಕವಯಿತ್ರಿ ಕುಮಾರಿ ಅಂಜಲಿ ಬೆಳಗಲ್ ಅವರ “ಬಂದೂಕು ಹಿಡಿದ ಕೈಗಳು” ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿ ಮೊಳಗುವ ಗಂಟಾನಾದವೇ ಸರಿ. ಬದುಕಿನ ಏಳು ಬೀಳುಗಳೊಂದಿಗೆ ಬದುಕಿನ ಚಿತ್ರಣವನ್ನು ಹಾಗು ಆಸರೆಯಾದ ತೃಣವನ್ನೂ ಮನಸಾರೆ ನೆನೆಯುವ ಮತ್ತು ಕವಿತೆಯ ಮೂಲಕ ಕೃತಜ್ಞತೆ ಸಲ್ಲಿಸುವ ಕವಿಭಾವ ಅದ್ಭುತ. ಕವಯಿತ್ರಿ ಯುವಪೀಳಿಗೆಯ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ ಸಾಹಿತ್ಯವನ್ನು ತಮ್ಮ ಕೈಗಳಿಂದ ಬಂದೂಕಿನಲ್ಲಿ ತುಂಬಿ ಸತ್ವಯುತವಾದ ಗಟ್ಟಿಯಾದ ಗುಂಡನ್ನು ಈ ಮೂಲಕ ಹಾರಿಸಿದ್ದಾರೆ. ಬಂದೂಕು ಹಿಡಿದ ಕೈಗಳು ಅನ್ನೊ ಶಿರ್ಷಿಕೆಯೇ ಒಂದು ಭಯಾನಕ ಸನ್ನಿವೇಶವನ್ನು ಸೃಷ್ಟಿಸಬಹುದು ಆದರೆ ಕವನಸಂಕಲನದ ಕವಿತೆಗಳನ್ನು ಓದಿದಾಗ ಬಂದೂಕು ಹಿಡಿಯಲೇಬೇಕಾಗಿದೆ ಎಂಬ ಸ್ಪಷ್ಟ ನಿಲುವಿಗೆ ಓದುಗರನ್ನು ತಂದು ನಿಲ್ಲಿಸುವಲ್ಲಿ ಕವಯಿತ್ರಿ ಅಂಜಲಿಯವರ ಕವಿತೆಗಳು ಸಾಗುತ್ತವೆ. +ಕವನಸಂಕಲನದ ಕವಿತೆಗಳು ತೀರಾ ಕೆಳಮಟ್ಟದಲ್ಲಿ ಬದುಕುವ ಜನರ ಎತ್ತರದ ದ್ವನಿಯಾಗಿ ಪ್ರತಿದ್ವನಿಸುತ್ತವೆ. ಜೊತೆಗೆ ಕವಯಿತ್ರಿಯವರಿಗೆ ಸಾವನ್ನು ಚಿತ್ರಿಸುವ ಕಲೆ ಕರಗತವಾದಂತೆ ಬಾಸವಾಗುತ್ತದೆ ಈ ವಿಷಯಕ್ಕೆ ಸಂಬಂದಿಸಿದ ಕವಿತೆಗಳು ಕವನಸಂಕಲನ ಒಳಗೊಂಡಿದೆ. ಪ್ರಸ್ತುತ ಸಮಾಜದಲ್ಲಿನ ತವಕ ತಲ್ಲನಗಳ ಬೇರುಹಿಡಿದು ನೋಡಿದಾಗ ಇವರ ಕವಿತೆಗಳು ಬೇರುಗಳನ್ನೂ ಜಾಲಾಡಿಸುವಷ್ಟು ನಿಷ್ಟುರವಾಗಿ ಹೇಳುವ ಮತ್ತು ಕೇಳುವ ದಿಟ್ಟತನಕ್ಕೆ ಸಾಕ್ಷಿಯಾಗುತ್ತವೆ. ಇನ್ನು ಬದುಕಿನ ಜೊತೆಗಾರನನ್ನು, ಗೆಳೆಯನನ್ನು ಹುಡುಕುವಲ್ಲಿ ಕವಯಿತ್ರಿ ತುಂಬಾ ಗೊಂದಕ್ಕೂ ಈಡಾಗಿರುವದಲ್ಲದೇ ಅಷ್ಟೇ ಎಚ್ಚರದ ಹೆಜ್ಜೆ ಇಡುವಲ್ಲಿ ತಮ್ಮನ್ನು ತಾವು ಎದುರಿಗೆ ನಿಲ್ಲಿಸಿಕೊಂಡು ಕವಿತೆಯಲ್ಲಿ ಮಾತನಾಡುವ ಬಗೆಯು ಚನ್ನಾಗಿ ಮೂಡಿಬಂದಿದೆ. +೩೯ ಕವಿತೆಗಳನ್ನುಳ್ಳ(ಗುಂಡುಗಳನ್ನುಳ್ಳ) ಬಂದೂಕಿನ ಮೊಲ ಕವಿತೆಯಲ್ಲೇ ‘ಅವನ ಹೆಜ್ಜೆ ಹುಡುಕುತ್ತಾ’ ಹೊರಟ ಕವಯಿತ್ರಿ ಅಂಜಲಿಯವರು ಓದುಗರನ್ನು ಅಂಜಿಸಿ ಅಳಿಸಿಬಿಡುತ್ತಾರೆ. ಸಾವಿನ ಮೆರವಣಿಗೆಯಲ್ಲಿ ನೋವಿನ ಪಲ್ಲಕ್ಕಿ, ನೋವಿನ ಪಲ್ಲಕ್ಕಿಯಲಿ ಬಿಕ್ಕುವ ದಿಕ್ಕು ತೋಚದೇ ಕುಳಿತ ಜೀವ. ನೆಲದ ಗುಂಡಿಯು ಬೆವರಿ ಕಣ್ಣೀರ ಹಾಕುವ ಪರಿಗೆ ತಂದು ನಿಲ್ಲಿಸುವ ಕವಿತೆ ಹುಡುಕಾಟದ ಕುರಿತು ಹುಡುಕಾಡುವಂತೆ ಕಾಡುತ್ತದೆ. +ದೇವರ ನೆಪದಲ್ಲಿ ಜನರು ಮುಳುಗಿರುವ ಮೂಢ ನಂಬಿಕೆಯ ಕುರಿತು ಹೇಳುವಾಗ ಕಣ್ಣಿಗೆ ಕಾಣಲು ದೇವರು ನರನಲ್ಲ ಎಂಬುದನ್ನು ‘ನರನಲ್ಲದ ದೇವರು’ ಕವಿತೆಯಲಿ ಹೇಳುತ್ತಾ ಮಾನವೀತೆಯತ್ತ ಮುಖಮಾಡುತ್ತಾರೆ. ‘ನನ್ನ ಹೆಣದ ಸುತ್ತ’, ‘ಇರುಳಲ್ಲಿ ಸತ್ತಾಗ’, ‘ಬಿದ್ದ ಹೆಣಗಳು’, ‘ಅವಳ ಗೋರಿ’, ‘ಗೋರಿಯೊಳಗಿನ ನಾನು’, ‘ಸತ್ತ ಕನಸುಗಳು’, ಈ ಎಲ್ಲ ಕವಿತೆಗಳಲ್ಲಿ ಅಂಜಲಿಯವರು ಸಾವಿಗೆ ಅಂಜದೇ ಅಳುಕದೆ ನಿಲ್ಲುವ ಪರಿ ಪ್ರತಿಫಲಿಸುತ್ತದೆ ಸಾವನ್ನು ಚಿತ್ರಿಸುವ ಧೈರ್ಯ ಮತ್ತು ಸಾವನ್ನು ಸಾರ್ಥಕಗೊಳಿಸುವ ರೀತಿ, ಜೊತೆಗೆ ಸತ್ತವರ ಬದುಕಿನ ತೊಳಲಾಟಗಳನ್ನು ತನ್ನದೇ ಎಂದುಕೊಂಡು ತನ್ನನ್ನೇ ಸಾಯಿಸಿಕೊಂಡು ಹೇಳುವ ವಿಭಿನ್ನವಾದ ಅನುಭವವನ್ನು ಕಟ್ಟಿಕೊಡುತ್ತವೆ. + +ದೇವದಾಸಿಯರ ಬದುಕಿನ ಕುರಿತು ‘ಮುತ್ತು ಕೊಟ್ಟವಳು’ ಕವಿತೆಯಲ್ಲಿ ಹೇಳಿದರೆ, ‘ರಥದ ಬೀದಿ’ ಕವಿತೆಯು ಮೌಢ್ಯತೆಯ ಕುರಿತು ಬಿಂಬಿಸುತ್ತದೆ. ‘ಅವನಲ್ಲದೇ ಅವಳಾಗಿ’ ಕವಿತೆಯು ಮಂಗಳಮುಖಿಯರ ಬದುಕಿನ ಚಿತ್ರಣವನ್ನು ಕಣ್ಮುಂದಿರಿಸಿದರೇ, ‘ಗರತಿ ಗೌರವ್ವ’ ಕವಿತೆಯು ಈ ನೆಲದ ಹೆಣ್ಣಿನ ದುಡಿಮೆ ಪ್ರತಿಮೆಯಾಗಿ ನಿಲ್ಲುತ್ತದೆ. +“… ಬಾಸಿಂಗ ಕಟ್ಟಿದ ನನ್ನ ಒಳಗೊಳಗೆ +ವರದಕ್ಷಿಣೆಯನ್ನು ವರಿಸಿದ ನಿನ್ನ +ಏಳು ಹೆಜ್ಜೆಗಳಿಂದ ನಾ ಹಿಂದೆ ಸರಿಯುತ್ತಿದ್ದೇನೆ..” +‘ಬಾಗಿನ’ ಕವಿತೆಯ ಈ ಸಾಲುಗಳು ವರದಕ್ಷಿಣೆ ಪದ್ಧತಿಗೆ ಪ್ರತಿರೋಧವಾಗಿ ನಿಲ್ಲುತ್ತವೆ. +“… ಒಂದಗಳು ಅನ್ನದ ಗಂಟಲಿಗೆ +ಗೌರವಧನದ ಗುಟುಕು ನೀರ ಹನಿ ಚೆಲ್ಲುವ +ಸರ್ಕಾರದ ಚಲ್ಲಾಟಕ್ಕೆ ಮಾಹಿತಿ ಕಳಿಸುವ +ಸರ್ಕಾರದ ಮೀನ ಮೇಷದ ಮುಂಗೈ ಆಟಕ್ಕೆ +ಬಳೆ ತೊಡಿಸಿ ಚಳಿ ಬಿಡಿಸುವ ಚಾಮುಂಡಿಯವಳು +ಬಾಲವಾಡಿಯ ತಾಯಿಯವಳು..” +ಎನ್ನುವ “ಗೂಡು ಕಟ್ಟಿದವಳು” ಕವಿತೆಯ ಸಾಲುಗಳು ಸರಕಾರದ ಆಳಾಗಿ ದುಡಿಯುವ ಅಂಗನವಾಡಿಯ ಶಿಕ್ಷಕಿಯರ ಬದುಕಿನ ಚಿತ್ರಣದ ಜೊತೆಗೆ ಸರಕಾರದ ಕಿವಿ ಹಿಂಡುವ ಗಟ್ಟಿ ಧೈರ್ಯವನ್ನು ಬಿಂಬಿಸುತ್ತವೆ. +‘ಅಮ್ಮ ನೀ ನನ್ನ ದೀವಿಗೆ’ ಕವಿತೆಯಲಿ ಜಗದ ಮಾತೆ ಭರತಮಾತೆಯ ಸದ್ಯದ ಪರಿಸ್ಥಿತಿಯ ಕುರಿತು ವಿಷಾದ ಮತ್ತು ಭಾರತಮಾತೆಯನ್ನು ಭದ್ರಗೊಳಿಸುವತ್ತ ಹೆಜ್ಜೆ ಇಡುವ ಭರವಸೆಯ ಭಾವಗಳನ್ನು ಬಿತ್ತಿದ್ದಾರೆ. +ಕಲ್ಲೆದೆಯ ಗುಂಡಿಗೆ ಸೀಳಿ +ಹೊತ್ತುರಿಯುವ ಬೆಂಕಿಯಲಿ ಬಾಳಿ +ಹಗಲು ರಾತ್ರಿ ಮಾಡುತ ಕೂಲಿ +ನಮ್ಮನ್ನು ಸಾಕಿ ಸಲುಹಿದಳು +ಅಮ್ಮ ಗಂಡೆದೆಯ ಗುಂಡಿಗೆಯವಳು…” +ಎಂಬ ‘ಗಂಡೆದೆಯ ಗುಂಡಿಗೆಯವಳು’ ಕವಿತೆಯ ಈ ಸಾಲುಗಳು ಅಮ್ಮನ ಕುರಿತು ಅಮ್ಮನ ಕಷ್ಟದ ಜೊತೆಗೆ ಬದುಕನ್ನು ಮತ್ತು ಬದುಕಿನ ಅಂದಿನ ಸ್ಥಿತಿಯನ್ನು ಕವಿತೆಯಲ್ಲಿ ಹೇಳುವ ಮೂಲಕ ಅಮ್ಮನನ್ನು ಕಣ್ಣಮುಂದೆ ನಿಲ್ಲಿಸುತ್ತಾರೆ. +“ಬೆಟ್ಟ ಗುಡ್ಡಗಳ ನಡುವೆ +ತಗ್ಗುಗುಂಡಿಗಳ ತೋಡಿ +ಕಲ್ಲು ಮಣ್ಣು ದೋಚಿದವರು ಅವರು +ಆದರೆ ನಾವಿಲ್ಲಿ ಕಲ್ಲು ಒಡೆಯುವವರು….” +‘ನಾವು ಕಲ್ಲು ಒಡೆಯುವವರು’ ಎಂಬ ಕವಿತೆಯ ಈ ಸಾಲುಗಳು ಗಣಿಗಾರಿಕೆಯನ್ನು ಪ್ರಶ್ನಿಸುತ್ತವೆ ಮತ್ತು ವಿರುದ್ಧವಾಗಿ ನಿಲ್ಲಲಾದಿದ್ದರೂ ದುಡಿದು ಬದುಕುತ್ತಿದ್ದೇವೆ ಎಂಬುದರ ಜೊತೆಗೆ ವಿರೋಧಿಸಲಾಗಲು ಆಗುತ್ತಿಲ್ಲ ಏಕೆಂದರೆ ನಾವಿಲ್ಲಿ ಕಲ್ಲು ಒಡೆಯುವವರು ಎಂಬ ಅಸಹಾಯಕತೆಯನ್ನು ಕವಿತೆ ತುಂಬಾ ಚನ್ನಾಗಿ ಕಟ್ಟಿಕೊಟ್ಟಿದೆ. +‘ಗಿಲ್ಲಿದಾಂಡು ಮೊಬೈಲ್ ನ ದಂಡು’ ಕವಿತೆ ಹೊಸಪೀಳಿಗೆ ಮಕ್ಕಳು ಆಟಗಳಿಂದ ವಂಚಿತರಾಗಿರುವ ರೀತಿಯನ್ನು ಹಾಗು ‘ಕಾಡ್ಗಿಚ್ಚು’ ಕವಿತೆಯು ಪಕ್ಷಿ ಸಂಕುಲ, ವನ್ಯ ಸಂಪತ್ತು, ಭೂ ಹಗರಣದ ಕುರಿತು ಮಾತಿಗಿಳಿಯುತ್ತದೆ. +ನಿನ್ನ ಮೇಲಿನ ಪ್ರೀತಿ ಈ ರೀತಿ ಅಪಾರವಾಗಿರುವಾಗ +ನೀನೇಕೆ ನನ್ನ ಪ್ರೀತಿಯ ತೊರೆದೆ ಗೆಳತಿ +ಪ್ರೀತಿಯನ್ನು ಮನಸಿನಿಂದ ಪ್ರೀತಿಸು, ಕ್ಷಣಿಕ ಆಸೆಯಿಂದಲ್ಲ…. +‘ಹೆಜ್ಜೆ ಗುರುತು’ ಕವಿತೆಯಲ್ಲಿ ಕವಯತ್ರಿಯವರು ಪ್ರೇಮದ ಬಗ್ಗೆ ತನ್ನ ಗೆಳೆಯನನ್ನು ಮನದಲ್ಲಿರಿಸಿಕೊಂಡು ಗೆಳತಿಯ ಮೂಲಕ ತಿಳಿಸುವ ವಿಭಿನ್ನ ಪ್ರಯತ್ನವನ್ನು ಕೈಗೊಂಡಿದ್ದಾರೆ ಜೊತೆಗೆ ಮನದಲ್ಲೊಬ್ಬ ಮನಸೋರೆಗೊಂಡವನಿರುವ ಕುರಿತು ಸುಳಿವನ್ನೂ ನೀಡುತ್ತಾರೆ. ಮುಂದುವರೆದು.. +‘ಯಾರಿಗೆಂದು ಕೊಡಲಿ ನಾ ಈ ಹೃದಯ..’ +ಕವಿತೆಯಲಿ +ಬಣ್ಣ ಬಣ್ಣದ ವೇಷ ಧರಿಸಿ +ಕಂಡ ಕಂಡವರನ್ನು ಮೋಹಿಸಿ +ಉಂಡು ಭಂಡರಂತೆ ತಿರುಗುವ +ಕಾಮ ರಾಲ್ಷಸರ ಈ ಜಗದಲ್ಲಿ +ಯಾರಿಗೆಂದು ಕೊಡಲಿ ನಾ ಈ ಹೃದಯ… +ಎಂಬ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಳ್ಳುವ ಮೂಲಕ ಹುಡುಗಿಯರು ಪ್ರೀತಿಸುವ ಮೊದಲು ಯೋಚಿಸುವ ರೀತಿಯನ್ನು ತಮ್ಮದೇ ಮನದ ಗೊಂದಲಗಳ ಮೂಲಕ ನಮ್ಮ ಮುಂದಿಡುತ್ತಾರೆ. +‘ರೈತನ ಪ್ರಾಣ ರಾಜಕೀಯ ಗಾನ..’ +ಕವಿತೆಯು ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಮೊಸಳೆಗಳಿಗೆ, ನರಿಗಳಿಗೆ ಹೋಲಿಸಿ +ರೈತನ ಬದುಕನ್ನು ಅವನು ಬದುಕುತ್ತಿರುವ ರೀತಿಯನ್ನು ಪಡುತ್ತಿರುವ ಕಷ್ಟವನ್ನು ಕವಿತೆಯ ಗುಂಡಿನ ಮೂಲಕ ಎದೆಗೆ ತಾಕುತ್ತಾರೆ. ಹೀಗೆ ಹಲವಾರು ರೀತಿಯ ವಿಭಿನ್ನವಾದ ಗುಂಡುಗಳನ್ನು ಮೈದುಂಬಿಕೊಂಡು ಲೋಡ್ ಆಗಿರುವ ಬಂದೂಕನ್ನು ತಮ್ಮ ಕೈಲಿ ಹಿಡಿದುಕೊಂಡು ನಮ್ಮ ಕೈಗಿಟ್ಟು ಗುಂಡು ಹೊಡೆಯಬೇಕೊ ಬೇಡವೋ ಅನ್ನೊ ಕೊನೆಯ ಪ್ರಶ್ನೆಗೆ ಉತ್ತರವನ್ನು ಓದುಗರಿಂದಲೇ ನಿರಿಕ್ಷಿಸುವಂತೆ ನಮ್ಮೆದುರು ನಿಲ್ಲುತ್ತಾರೆ.. +ಬಂದೂಕನ್ನು ಕೈಗೆತ್ತಿಕೊಂಡರೆ ಪ್ರೇಮದ ಗುಂಡುಗಳು, ನೋವಿನ ಗುಂಡುಗಳು, ಎಚ್ಚರಿಕೆಯ ಗುಂಡುಗಳು, ಹೋರಾಟಕ್ಕೆ ಅಣಿಯಾಗುವ ಗಟ್ಟಿ ಗುಂಡುಗಳು, ಸಾವಿಗೂ ಹೆದರದ ಬದುಕಿನ ಗುಂಡುಗಳು ತಾಕುತ್ತಲೇ ಇರುತ್ತವೆ. ಇವರ ಸಾಹಿತ್ಯಿಕ ಬಂದೂಕಿನಲ್ಲಿ ಮತ್ತಷ್ಟು ಮತ್ತಷ್ಟು ಹಿತವಾದ ಗುಂಡುಗಳು ಸಿಡಿಗುಂಡುಗಳು ಕವಿತೆಗಳು ನಮ್ಮೆದೆಗೆ ಹಾರಿ ಬರಲಿ ಸಾಹಿತ್ಯಿಕ ಕ್ಷೇತ್ರದಲ್ಲಿ ಹೊಸ ಸಂಚಲನವನ್ನುಂಟುಮಾಡಲಿ ಎಂದು ಆಶಿಸುವೆ. ಬದುಕಿನ, ಪ್ರೀತಿಯ, ಸಮಾಜದ ಏಳುಬೀಳುಗಳ, ಭ್ರಷ್ಟರ, ರಾಜಕಾರಣಿಗಳ, ಕಾಮುಕರ, ಮೋಸಗಾರರ, ಕಷ್ಟಗಳ ಜೊತೆಗೆ ಯುದ್ಧಕ್ಕಿಳಿಯುವವರು ಒಮ್ಮೆ ಈ “ಬಂದೂಕು ಹಿಡಿದ ಕೈಗಳ”ನ್ನು ಓದಿಕೊಳ್ಳಿ ಮತ್ತು ಕವಯಿತ್ರಿಯವರ ಮೊದಲ ಹೆಜ್ಜೆಗೆ ಹರಸಿ ಹಾರೈಸಿ ಪ್ರೋತ್ಸಾಹಿಸಿ.. +ಕವನಸಂಕಲನದ ಪ್ರತಿಗಳಿಗಾಗಿ ಸಂಪರ್ಕಿಸಿ: +ಅಂಬೆ ಪ್ರಕಾಶನ +ಚಪ್ಪರದಹಳ್ಳಿ, ೨೮ ನೇ ವಾರ್ಡ, ಹೊಸಪೇಟೆ. +ದೂರವಾಣಿ ೮೧೪೭೪೭೦೦೧೪. +-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ. + \ No newline at end of file diff --git a/PanjuMagazine_Data/article_105.txt b/PanjuMagazine_Data/article_105.txt new file mode 100644 index 0000000000000000000000000000000000000000..155c7cdc3424eb58053bcf75536315bae5254772 --- /dev/null +++ b/PanjuMagazine_Data/article_105.txt @@ -0,0 +1,25 @@ +ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ನಿಜಾಮ್ ಸೇನೆಯ ಗುಂಡಿಗೆ ಬೆದರದೆ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪೋಲಿಸರ ಮತ್ತು ಕನ್ನಡ ಮತ್ತು ಏಕೀಕರಣ ವಿರೋಧಿಗಳ ಹಿಂಸೆಗೆ ಜಗ್ಗದೆ, ನಾಡು-ನುಡಿಗಾಗಿ ಕಳೆದ 67 ವರ್ಷಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ, ನಿರಂತರ, ಅಪ್ರತಿಮ ಸೇವೆ ಸಲ್ಲಿಸಿದವರು. ಗಾಂಧಿವಾದಿ, ಕನ್ನಡ ಕಣ್ಮಣಿ 87 ವರ್ಷದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ಪ್ರೀತಿ ನನ್ನ ಮತ, ಸೇವೆ ನನ್ನ ವ್ರತ ಎಂದು ಬಾಳಿದ ಈ ಸಜ್ಜನರ ಜೀವನ-ಸಾಧನೆ-ಕನ್ನಡ ಪ್ರೇಮ ಎಲ್ಲಾ ಕನ್ನಡಿಗರಿಗೂ ಪ್ರೇರಣೆಯಾಗಿದೆ. +ಕನ್ನಡ ನುಡಿ, ಗಡಿ ಮತ್ತು ಗುಡಿಗಳ ರಕ್ಷಣೆಗೆ ಮತ್ತು ನಡಕಟ್ಟಿದ ಕಟ್ಟಾಳು, ಚತುರ ಮತ್ತು ಸಮರ್ಥ ಸಂಘಟಕ, ಆರ್ಥಿಕ ಸಂಕಷ್ಟದಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಜೀವ ನೀಡಿದ ಭೂತಪೂರ್ವ ಗೌರವ ಕಾರ್ಯದರ್ಶಿ, ಪರಿಷತ್ತಿನ ಮುಖವಾಣಿ “ಕನ್ನಡ ನುಡಿ”ಯ ಮಾಜಿ ಸಂಪಾದಕ, ಪ್ರಪ್ರಥಮ ಕನ್ನಡ-ನಿಘಂಟು ಪ್ರಕಟಣೆ ಮತ್ತು ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳ ರೂವಾರಿ, ಕರ್ನಾಟಕ ಭಾಷಾ ಆಯೋಗ ಮತ್ತು ಕರ್ನಾಟಕ ಗೆಜೆಟಿಯರ್ ಸಮಿತಿಯ ಮತ್ತು ಅಖಿಲ ಭಾರತ ವಕೀಲರ ಪರಿಷತ್ತಿನ ಮಾಜಿ ಸದಸ್ಯ, ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕ ಮತ್ತು ಪ್ರಥಮ ಪ್ರಧಾನ ಕಾರ್ಯದರ್ಶಿ, ಸಾವಿರಾರು ಜನ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ನ್ಯಾಯ ಒದಗಿಸಿಕೊಟ್ಟ ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ, ಪ್ರಸಿದ್ಧ ವಾಗ್ಮಿ, ಪ್ರಧ್ಯಾಪಕ, ಕವಿ, ಲೇಖಕ, ಚಿಂತಕ, ವಿಮರ್ಶಕ, 3000ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಖ್ಯಾತ ಅಧುನಿಕ ವಚನಕಾರ, ಕಟ್ಟಾ ಗಾಂಧೀವಾದಿ – ಶ್ರೀ ಅನ್ನದಾನಯ್ಯ ಪುರಾಣಿಕರನ್ನು ವರ್ಣಿಸುವುದು ಹೇಗೆ? ಯಾವ ವರ್ಣನೆಯೂ ಕಡಮೆಯೇ ! +ಅಂದಿನ ನಿಜಾಂ ಸಂಸ್ಥಾನದ ರಾಯಚೂರು ಜಿಲ್ಲೆಯ, ಇಂದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ( 8 ಮಾರ್ಚ 1928)ರಂದು ಜನಿಸಿದ ಪುರಾಣಿಕರ ತಂದೆ ಖ್ಯಾತ ಪ್ರವಚನಕಾರ, ವೈದ್ಯರು ಮತ್ತು ಕವಿಗಳಾಗಿದ್ದ ಪಂಡಿತ ಕಲ್ಲಿನಾಥಶಾಸ್ತ್ರೀಗಳು ಮತ್ತು ತಾಯಿ ದಾನದ ಪ್ರತಿರೂಪವೇ ಆಗಿದ್ದ ದಾನಮ್ಮ. ಆ ಭಾಗದ ಓರ್ವ ಮಹಾತಪಸ್ವಿಗಳ ಕೃಪಾಶಿರ್ವಾದದ ಬಲ ಪಡೆದುಕೊಂಡೇ ನನ್ನ ಮಗ ಹುಟ್ಟಿದ, ಅದಕ್ಕಂದೇ ಆ ತಪಸ್ವಿಗಳ ಹೆಸರನ್ನೇ ನನ್ನ ಮಗನಿಗೆ ( ಅನ್ನದಾನಯ್ಯ) ಎಂದಿಟ್ಟಿರುವೆ – ಎಂದು ಅವರ ತಾಯಿ ಆಗಾಗ ಹೇಳುತ್ತಿದ್ದರು. ಆ ಮಹಾತಪಸ್ವಿಗಳು ಮೆಚ್ಚುವಂತೆ ಜೀವನ ನೆಡೆಸಿದ್ದಾರೆ ಪುರಾಣಿಕರು. ಕಡುಬಡತನದಲ್ಲಿ ಬೆಳೆದ ಅನ್ನದಾನಯ್ಯ ಅಂದಿನಿಂದ ಇಂದಿನವರೆಗೂ ಸಮಾಜದಲ್ಲಿರುವ ಬಡವರ ಮತ್ತು ದಮನಿತರ ನೋವು ಮತ್ತು ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಸಹಾಯ ಮಾಡುವ ತನು-ಮನ-ಧನದ ದಾಸೋಹ ನೆಡೆಸುತ್ತಿದ್ದಾರೆ. +ಕುಗ್ರಾಮವೊಂದರಲ್ಲಿ ಬೆಳೆದ, ಶಿಕ್ಷಣ ಪಡೆದ, ಯಾವುದೇ ಶಿಫಾರಸು ಪತ್ರಗಳೂ ಇಲ್ಲದ ಈ ಹಳ್ಳಿಯ ಹೈದ, ಕನ್ನಡ ಕಣ್ಮಣಿಯಾಗಿ, ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದು ಯಾರಾದರೂ ಬೆರಳು ಕಚ್ಚುವಂತಿದೆ. ಅವರ ಈ ಸಾಧನೆಗೆ ಪ್ರೇರಣೆ, ನಿರಂತರ ಪ್ರಚೋದನೆ, ಗುರಿಯತ್ತ ಗಮನಕ್ಕೆ ಬೆಂಗಾವಲಾದ ಕುಗ್ಗದ ಸ್ಥೈರ್ಯ ಮತ್ತು ಅಪಾರ ಸಹನೆಗಳ ರಹಸ್ಯವನ್ನು ಅರಸುವ ಪ್ರಯಾಸವು ಹೃದಯಂಗಮವಾಗಿರುವಂತೆ ಅದು ಉಜ್ವಲವೂ ಆಗಿರುತ್ತದೆ. +ಅನ್ನದಾನಯ್ಯ ಪುರಾಣಿಕರ ಬಾಳಬಟ್ಟೆಗೆ ದಾರಿದೀಪಗಳಾಗಿ ಬೆಳಗುತ್ತಿರುವ ವ್ಯಕ್ತಿಗಳು ಇಬ್ಬರು : ಒಬ್ಬರು ಹನ್ನೆರಡನೆಯ ಶತಮಾನದಲ್ಲಿ ಕಿರಿಯ ವಯಸ್ಸಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಶರಣ ಚೆನ್ನಬಸವಣ್ಣನವರು, ಮತ್ತೊಬ್ಬರು ಹರನ ಮುಡಿಯಿಂದ ಇಳಿದು ಬಾ ತಾಯಿ ಎಂದು ಗಂಗಾವತರಣ ಮಾಡಿಸಿದ ಭಗೀರಥರು. ಬಾಲ್ಯದಲ್ಲಿಯೇ ಪುರಾಣಿಕರ ಭಾವವನ್ನು ಒಳಹೊಕ್ಕ ಮತ್ತು ಮನದಲ್ಲಿ ನೆಲೆನಿಂತ ಈ ಇಬ್ಬರ ಅಮೋಘ ವ್ಯಕ್ತಿತ್ವ ಮತ್ತು ಗೌರಿಶಂಕರ ಸಾಧನೆಗಳು ಪುರಾಣಿಕರ ವ್ಯಕ್ತಿತ್ವ ವಿಕಸನದಲ್ಲಿ “ಸತ್ವದ” ಪಾರಮ್ಯತೆ ಮತ್ತು ಅಂತರಿಕ ಸತ್ವದ ಅದಮ್ಯತೆಗಳನ್ನು ದೃಢಗೊಳಿಸಿದವು. +ತಾನು ಜೀವಿಸಿದ ಕೇವಲ 25 ವರ್ಷಗಳ ಅವಧಿಯಲ್ಲಿ ಚೆನ್ನಬಸವಣ್ಣ ಮಾಡಿದ್ದು, ಸಾಧಿಸಿದ್ದು ಮತ್ತು ಸಿದ್ಧಿಸಿದ್ದು ‘ದಂತಕತೆ’ಯಂತಾಗಿದೆ. ಶರಣರ ಆಂದೋಲನದ ನಾಯಕ ಬಸವಣ್ಣನ ಬಲಗೈಯಾಗಿ, ಬಸವನ ನಡೆ-ನುಡಿಗಳ, ಗುರಿ-ಗಮ್ಯಗಳ ಸೂಕ್ಷ್ಮ ಪರೀಕ್ಷಕನಾಗಿ, ಅನುಭವ ಮಂಟಪದ ಸಾರಥಿಯಾಗಿ, ಧರ್ಮಸೂಕ್ಷ್ಮಗಳ ಸಂಹಿತೆಯ ರೂಪಕನಾಗಿ ಚೆನ್ನಬಸವಣ್ಣ ತಲುಪಿದ ಎತ್ತರ ಹಾಗೂ ಚಲಿಸಿದ ಬಿತ್ತರಗಳು ಪುರಾಣಿಕರಲ್ಲಿ ಅಪಾರವಾಗಿ ಪ್ರಭಾವ ಬೀರಿದವು ಮತ್ತು ಸದಾ ಜಾಗೃತವಾಗಿದ್ದು ದಾರಿ ತೋರಿಸುತ್ತಲಿವೆ. ಚೆನ್ನಬಸವಣ್ಣನಿಂದ ತಾವು ಪಡೆದ ಜೀವನ-ಸಂಜೀವನಿಯ ಪ್ರೇರಣೆಗೆ ಕಾಣಿಕೆ ಎನ್ನುವಂತೆ ಪ್ರಪ್ರಥಮವಾಗಿ ಆತನ ಕೃತಿಗಳನ್ನು ಪರಿಶ್ರಮದಿಂದ ಕಲೆಹಾಕಿ ಶಾಸ್ತ್ರೀಯವಾಗಿ ಶೋಧಿಸಿ ಸಂಪಾದಿಸಿ “ಚೆನ್ನಬಸವ ಸಾಹಿತ್ಯ” ಎಂಬ ಹೆಸರಿನಲ್ಲಿ 1956ನಲ್ಲಿ ಪ್ರಕಟಿಸಿದರು. ಆಗಿನ್ನೂ ಅವರು ಲಾ ಕಾಲೇಜಿನ ವಿದ್ಯಾರ್ಥಿ. ಆ ಕೃತಿಗೆ ಪಂಡಿತ ಪ್ರಕಾಂಢ ಡಾ.ಎಸ್.ಸಿ.ನಂದೀಮಠರು ಅಮೂಲ್ಯವಾದ ಮುನ್ನಡಿ ಬರೆದಿದ್ದು ಪುರಾಣಿಕರ ಸಾಧನೆಯನ್ನು ಮತ್ತು ಕೃತಿಯ ಸತ್ವವನ್ನು ಸೂಚಿಸುತ್ತದೆ. ಆ ಗ್ರಂಥವು ಶರಣ ಸಾಹಿತ್ಯ ಅಧ್ಯಯನಕ್ಕೆ ಹೊಸ ಬಾಗಿಲನ್ನೇ ತೆರೆದದ್ದು ಇತಿಹಾಸ. +ಭಗೀರಥ ಹರನ ಜಟಾಜೂಟದಿಂದ ಗಂಗೆಯನ್ನು ಪ್ರಯಾಸಪಟ್ಟು ಧರೆಗೆ ಇಳಿಸಿದ ಧೀರ, ಅಸದೃಶ ಸಾಧಕ. ದೃಢ ಸಂಕಲ್ಪ, ಸಂಕಲ್ಪಕ್ಕೆ ಅನುಗುಣವಾದ ಕ್ರಿಯಾಕಲ್ಪ, ಸವೆಯದ ಸಹನೆ, ಯೋಜನೆಯ ಹೆಜ್ಜೆ, ಹೆಜ್ಜೆಗೆ ಅನಿವಾರ್ಯವಾಗಿರುವ ಸಂಪನ್ಮೂಲಗಳ ಶೇಖರಣೆ ಮತ್ತು ಸದೂಪಯೋಗ – ಇವುಗಳ ಸಂಕೇತನಾಗಿದ್ದಾನೆ ಭಗೀರಥ. ಅವನ ಬಗ್ಗೆ ಪುರಾಣಿಕರಿಗೆ ಎಷ್ಟು ಪರಿಯ ಅಭಿಮಾನವೆಂದರೆ, ಅವನ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಒಂದು ಚರಿತ್ರೆಯನ್ನೇ 1960 ರಲ್ಲಿ ಬರೆದರು. ಅದು ಕನ್ನಡ ಯುವಜನಾಂಗಕ್ಕೆ ಪ್ರೇರಣೆಯಾಗಿರಲಿ ಎಂಬ ಆಶಯದಿಂದ ಅರ್ಪಿಸಿದರು. ಅದು ಶಿಕ್ಷಣ ಕ್ರಮ ನಿರ್ಮಿಸುವ ಮಂದಿಗಾಗಲಿ, ಮಕ್ಕಳನ್ನು ಹೆತ್ತ ತಂದೆತಾಯಂದಿರಿಗಾಗಲಿ ಎಂದಿಗೂ ಒಂದು ಪ್ರೇರಣೆಯ ಪಾಠವಾಗಿದೆ. ರಾಜ್ಯ ಸಾಹಿತ್ಯ ಅಕೆಡೆಮಿಯ ಪ್ರಶಸ್ತಿಯನ್ನು ಈ ಪುಸ್ತಕ್ಕೆ ನೀಡಲಾಗಿದೆ. +ಚೆನ್ನಬಸವಣ್ಣ ಮತ್ತು ಭಗೀರಥರಿಂದ ಕಲಿತ ಪಾಠವೆಂದರೆ ಯಾವುದೇ ಸಮಸ್ಯೆಯಿರಲಿ, ಅದನ್ನು ಹಿಮ್ಮೆಟ್ಟದೆ ಎದುರಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಲುವ ಕೌಶಲ, ಆ ಪ್ರವೃತ್ತಿ ಪುರಾಣಿಕರನ್ನು ಬಹಳ ಎತ್ತರದವರೆಗೆ ತಲುಪಿಸಿದೆ. +ಪುರಾಣಿಕರದು ಎಂದೂ ಒಂಟಿ ಸಲಗದ ಬದುಕಲ್ಲ. ಯಾವಾಗಲೂ ಗೆಳೆಯರ, ಆಪ್ತರ ಗುಂಪು ಕಟ್ಟುತ್ತಿದ್ದರು. ಎಲ್ಲರೂ ಸ್ಕೂಲು-ಕಾಲೇಜಿಗೆ ಹೋಗುವುದು ಕಲಿಯಲಿಕ್ಕೆ, ಆಟ ಓಟದಲ್ಲಿ ಒಂದಿಷ್ಟು ನಲಿಯಲಿಕ್ಕೆ. ಪುರಾಣಿಕರ ಹುಟ್ಟುಗುಣವೆಂದರೆ, ಕಲಿಯುವುದಂತೂ ಸರಿಯೆ, ಆಟ-ಓಟಗಳಲ್ಲಿ ಮೆರೆಯುವುದೂ ಸರಿಯೆ, ಆದರೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗುರುತಿಸುವುದು, ಅವುಗಳ ಪರಿಹಾರಕ್ಕೆ ಸಂಬಂಧಿಸಿದವರ ಗಮನ ಸೆಳೆಯುವುದು ಅದು ಅದ್ಯವಾಗಿತ್ತು. ಅದಕ್ಕೆಂದು ಒಂದು ವಿದ್ಯಾರ್ಥಿ ಸಂಘ ಹುಟ್ಟುತ್ತಿತ್ತು, ಅದರ ಕರ್ಣಧಾರತ್ವ ಅವರಿಗೆ ಸಲ್ಲುತ್ತಿತ್ತು. ಅವರು ಕೊಪ್ಪಳದಲ್ಲಿ ಓದಲಿ, ಗುಲಬರ್ಗಾದಲ್ಲಿ ಕಲಿಯಲಿ, ಹೈದರಾಬಾದಿನಲ್ಲಿ ಅಭ್ಯಾಸ ಮಾಡಲಿ, ಅಲ್ಲಲ್ಲಿ ವಿದ್ಯಾರ್ಥಿ ಸಂಘಗಳು ಹುಟ್ಟುತ್ತ ಹೋದವು. ಅಂದಿನ ಪರಿಸರಕ್ಕೆ ಪರಿಸ್ಥಿತಿಗೆ ತಕ್ಕಂತೆ ವಿದ್ಯಾರ್ಥಿಗಳ ಮತ್ತು ವಿಶೇಷವಾಗಿ ಬಡವರ, ದಲಿತರ, ಅಲ್ಪಸಂಖ್ಯಾತರ ಕ್ಷೇಮಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾದವು. +ಅನ್ನದಾನಯ್ಯ ಪುರಾಣಿಕ +1942ರಲ್ಲಿ ರಾಜ್ಯದಲ್ಲಿ ನೆಡೆದ ಚಲೇಜಾವ್ ಮತ್ತು ಸ್ವಾತಂತ್ರ್ಯ ಚಳುವಳಿಯ ನಾಯಕರಲ್ಲಿ ಒಬ್ಬರಾಗಿ ಬ್ರಿಟೀಷರ ದೌರ್ಜನ್ಯವನ್ನು ಎದುರಿಸಿದ ಅನ್ನದಾನಯ್ಯ, ನಂತರ 1947-48ರಲ್ಲಿ ಹೈದರಾಬಾದು ಸಂಸ್ಥಾನದ ಪೋಲಿಸರು ಮತ್ತು ಉಗ್ರಗಾಮಿಗಳಾದ ರಜಾಕಾರರ ದೌರ್ಜನ್ಯದ ವಿರುದ್ಧ ಸಿಡಿದ್ದೆದರು. ಭಾರತದೊಡನೆ ಹೈದರಾಬಾದು ಸಂಸ್ಥಾನ ವಿಲೀನವಾಗುವುದನ್ನು ವಿರೋಧಿಸುವ ರಜಾಕಾರರು ಜನಸಾಮಾನ್ಯರ ಮೇಲೆ ನೆಡೆಸಿದ ಹಿಂಸೆ ಮತ್ತು ದೌರ್ಜನ್ಯ ಇಡೀ ಮನುಕುಲದ ಇತಿಹಾಸದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವಂತಿದೆ. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಅನ್ನದಾನಯ್ಯನವರು, ತಮ್ಮ ವಿದ್ಯಾಭ್ಯಾಸ ತೊರೆದು ಸಾವಿರಾರು ಜನ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರನ್ನು ರಜಾಕಾರರಿಂದ ರಕ್ಷಿಸಲು ಮುಂದಾದರು. ಅನ್ನದಾನಯ್ಯನವರ ಹೋರಾಟದ ಬದುಕಿಗೆ ಹೊಸ ಆಯಾಮ ದೊರೆಯಿತು. ಅವರ ಕತೃತ್ವಶಕ್ತಿಗೆಯ ಅವಿಷ್ಕಾರಕ್ಕೆ ಹೊಸ ಕ್ಷೇತ್ರ ಲಭಿಸಿತು. ರಾಯಚೂರು ಜಿಲ್ಲೆಯ ಗಡಿಗಂಟಿದ ಮುಂಬೈ ರಾಜ್ಯದ ಮುಂಡರಗಿ ಮೊದಲಾದ ಗ್ರಾಮಗಳ ಪ್ರದೇಶ ಪುರಾಣಿಕರೂ ಹಾಗೂ ಅವರ ಸ್ನೇಹಿತರ ಪಾತ್ರಕ್ಕೆ ಆಹ್ವಾನ ನೀಡಿತು. ಹೀಗೆ ರಾಜ್ಯದಲ್ಲಿ ನೆಡೆದ ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ಮುನ್ನುಡಿಯನ್ನು ಬರೆದ ಅನ್ನದಾನಯ್ಯನವರು ಮುಂಡರಗಿ ಶಿಬಿರದಲ್ಲಿ ಸಮಾನಮನಸ್ಕರ ಮತ್ತು ಉತ್ಸುಕ ಸ್ನೇಹಿತರ ಒಂದು ಪಡೆಯನ್ನು 1947ರಲ್ಲಿ ಸಂಘಟಿಸಿದರು. ನಿರಾಯುಧವಾಗಿದ್ದ ಈ ಪಡೆ ಯಾರಿಗೂ ತಿಳಿಯದಂತೆ ನಿಜಾಮ ಸಂಸ್ಥಾನದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಧುನಿಕ ಬಂದೂಕುಗಳನ್ನು ಹೊಂದಿದ್ದ ರಜಾಕಾರರ ವಿರುದ್ಧ ಕಾರ್ಯಾಚರಣೆ ನೆಡೆಸುತ್ತಿತ್ತು ಹಾಗೂ ಯಾವ ಹಾನಿಯನ್ನೂ ಅನುಭವಿಸದೆ ಬೆಳಗಾಗುವುದರಲ್ಲಿ ತನ್ನ ನೆಲೆಗೆ ಹಿಂತಿರುಗುತ್ತಿತ್ತು. ಇದು ರಜಾಕಾರರಿಗೆ ಬರೆ ಎಳೆಯುವ ಕೆಲಸವಾಗಿತ್ತು. ಅವರ ಸ್ಥೈರ್ಯ ಕುಗ್ಗಿಸುವ ಹುನ್ನಾರವಾಗಿತ್ತು. ಈ ಪಡೆಗೆಳ ಸಂಘಟನೆ, ಅವುಗಳು ಅನುಸರಿಸಬೇಕಾದ ರಣತಂತ್ರ, ರಹಸ್ಯವರದಿ ವರ್ತಮಾನಗಳ ವಿಲೇವಾರಿ ಮತ್ತು ಪ್ರಚಾರ ಇವು ಅನ್ನದಾನಯ್ಯನವರ ನೇತೃತ್ವದಲ್ಲಿ ರೂಪಗೊಳ್ಳುತ್ತಿದ್ದವು. ಅನ್ನದಾನಯ್ಯನವರ ನೇತ್ರತ್ವದಲ್ಲಿ ಮುಂಡರಗಿ ಶಿಬಿರಾರ್ಥಿಗಳು ನೆಡೆಸಿದ ಹೋರಾಟಕ್ಕೆ ಸೋತು ಕಂಗೆಟ್ಟ ರಜಾಕಾರರು ಮತ್ತು ನಿಜಾಮ್ ಪೋಲಿಸರು ಪಲಾಯನ ಮಾಡಿದರು. ಅನ್ನದಾನಯ್ಯನವರು ಹೈದರಾಬಾದು ಸಂಸ್ಥಾನದ 87 ಹಳ್ಳಿಗಳನ್ನು ಸ್ವತಂತ್ರಗೊಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಈ ಹಳ್ಳಿಗಳು ಸ್ವತಂತ್ರ ಭಾರತದ ಭಾಗವೆಂದು ಘೋಷಿಸಿದರು. ಸಾವಿರಾರು ಕುಟುಂಬಗಳನ್ನು ರಜಾಕಾರರಿಂದ ರಕ್ಷಿಸಿದರು. ಈ ಸೋಲಿನಿಂದ ರಜಾಕಾರರಾಗಲಿ ಅಥವಾ ಹೈದರಾಬಾದಿನ ನಿಜಾಮನಾಗಲಿ ಮತ್ತು ದಕ್ಷಿಣ ಭಾರತದಲ್ಲಿ ಮತ್ತೊಂದು ಪಾಕಿಸ್ತಾನವನ್ನು ಸ್ಥಾಪಿಸುವ ಹುನ್ನಾರದಲ್ಲಿದ್ದ ಭಾರತದ ವಿರೋಧಿಗಳಾಗಲಿ ಚೇತರಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಸರದಾರ ಪಟೇಲ್‍ರು ಅನ್ನದಾನಯ್ಯನವರ ಹೋರಟವನ್ನು ಮೆಚ್ಚಿ, ಕೇಂದ್ರ ಮಂತ್ರಿ ಗಾಡ್ಗೀಲ್‍ರನ್ನು ಮುಂಡರಗಿಯ ಶಿಬಿರಕ್ಕೆ ಕಳುಹಿಸಿದ್ದರು. ನಿಜಲಿಂಗಪ್ಪನವರು ಮೊದಲಾದ ರಾಜ್ಯ ನಾಯಕರು ಅನ್ನದಾನಯ್ಯನವರಿಗೆ ನೈತಿಕ ಬೆಂಬಲ ಸೂಚಿಸಿದರು. ಪುರಾಣಿಕರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಅದೇಶ ಹೊರಡಿಸಿದ ಹೈದರಬಾದು ನಿಜಾಮ, ಮುಂದೆ 1948ರಲ್ಲಿ ಭಾರತಕ್ಕೆ ಸೋತು ಶರಣಾಗಿ ತನ್ನ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿದ. ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ 2 ವರ್ಷಗಳ ಕಾಲ ವಿದ್ಯಾಭ್ಯಾಸ ಕಳೆದು ಕೊಂಡಿದ್ದಲ್ಲದೆ, ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು ಅನ್ನದಾನಯ್ಯನವರು. ಆದರೆ ಅವರಲ್ಲಿ ಹುದುಗಿದ್ದ ಅನೇಕ ಶಕ್ತಿಗಳನ್ನು ಹೊರಹೊಮ್ಮಿ ಅವರ ಸತ್ವವನ್ನು ಸದೃಢಗೊಳಿಸಿದವು. ಮುಂದೆ ರಾಷ್ಟ್ರೀಯ ಮತ್ತು ರಾಜ್ಯದ ಮುತ್ಸದ್ಧಿಗಳ ಹಿತವಾದ ಕೇಳಿ, ಓದು ಮುಂದುವರೆಸಲು ಸಿದ್ಧರಾದ ಪುರಾಣಿಕರಿಗೆ , ಹೈದರಾಬಾದಿಗೆ ಹಿಂತಿರುಗಿ ಉಳಿದ ಸ್ನೇಹಿತರು ತಾವು ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ ಭಾಗವಹಿಸಿದೆವೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆದ ಸನ್ಮಾನ ಮತ್ತು ಸವಲತ್ತುಗಳ ಲಾಭ ಪಡೆಯುವ ಮನಸ್ಸಾಗಲಿಲ್ಲ. ತಮ್ಮ ಶಿಕ್ಷಣಕ್ಕೆ ಒಂದು ಹೊಸ ತಿರುವು ಕೊಟ್ಟು ವಿಜ್ಞಾನದ ಬದಲಾಗಿ ವಾಣಿಜ್ಯ ಕಲಿಯಲಿಕ್ಕೆಂದು ಹುಬ್ಬಳ್ಳಿಗೆ ಬಂದಿಳಿದರು. +ಹುಬ್ಬಳ್ಳಿಯ ಜೆ.ಜೆ.ಕಾಮರ್ಸ ಕಾಲೇಜಿನ ಮೊದಲನೆಯ ವರ್ಷದ ವಿದ್ಯಾರ್ಥಿಯಾದ ಪುರಾಣಿಕರಿಗೆ ಎಲ್ಲವೂ ಅಪರಿಚಿತವೆ. ಸಾಲದ್ದಕ್ಕೆ “ಮುಗಲಾಯಿ”ಯಿಂದ ಬಂದ ಕಡುಬಡವ ಮತ್ತು ಹಿಂದುಳಿದವನೆಂದು ಅವಮಾನಿಸುವ ಜನರ ಕಿರುಕುಳ ಬೇರೆ. ಈ ನಿಷೇಧಸ್ವರೂಪದ ವಿಷಮ ಪರಿಸ್ಥಿತಿಯಲ್ಲಿ ಅನೇಕ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೊಂದು-ಬೆಂದಿರುವುದನ್ನು ಕಂಡು ಕೆರಳಿದ ಅನ್ನದಾನಯ್ಯನವರು, ವಿದ್ಯಾರ್ಥಿಗಳ ಸಂಘಟನೆಗೆ ಮುಂದಾದರು. ಸೂಕ್ತ ಪಾಠಕ್ಕೆ ಆಗ್ರಹ, ಬಡ ವಿದ್ಯಾರ್ಥಿಗಳಿಗೆ ಆಸನ, ವಸನ ಮತ್ತು ವಾಸಗಳ ಏರ್ಪಾಡು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಹುಬ್ಬಳ್ಳಿ ನಗರಸಭಾಗೃಹದಲ್ಲಿ ವಿದ್ವಾಂಸರ, ಸಾಧಕರ, ಸಿದ್ಧಪ್ಮರುಷರ ವ್ಯಾಖ್ಯಾನಗಳು ಮೊದಲಾದ ಕೆಲಸಗಳನ್ನು ಪುರಾಣಿಕರ ನೇತೃತ್ವದಲ್ಲಿ ಈ ಸಂಘಟನೆಯು ನೆಡೆಸಿತು. ಕರ್ನಾಟಕ ಏಕೀಕರಣ ಆಗ್ರಹಕ್ಕೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಪುರಾಣಿಕರು ನೆಡೆಸಿದ ಬೃಹತ್ ವಿದ್ಯಾರ್ಥಿ ಸಮಾವೇಶ ಮತ್ತು ಮೆರವಣಿಗೆಯಂತಹ ಮತ್ತೊಂದು ಜನಪರ ಕಾರ್ಯಕ್ರಮವನ್ನು ಇದುವರೆಗೂ ಹುಬ್ಬಳ್ಳಿ ಇನ್ನೂ ಕಂಡಿಲ್ಲ. ಪುರಾಣಿಕರಿಗೆ ಹುಬ್ಬಳ್ಳಿ-ಧಾರವಾಡಗಳ ‘ನಾ’, ‘ನೀ’ ಎನ್ಮ್ನವ ಎಲ್ಲಾ P್ವ್ಷೀತ್ರದ ನಾಯಕರೊಂದಿಗೆ ಸಂಪರ್ಕ ದೊರೆಯಿತು. ಎಲ್ಲ ಮತಭಾಂದವರು, ಭಾಷಿಕರೂ ಪುರಾಣಿಕರೊಡನೆ ಕೈಗೋಡಿಸಿದರು. ಒಬ್ಬ ಯುವ ನಾಯಕ ಉದಯಿಸಿದ ಎಂದು ದಿನಪತ್ರಿಕೆಗಳು ಗುರುತಿಸಿ ಬೆನ್ಮ್ನ ತಟ್ಟಿದವು. ಆದರೆ ಹೊರಗಿನಿಂದ ಬಂದ ಮೊಗಲಾಯಿ ಪ್ರದೇಶದ ಒಬ್ಬ ಹ್ಶೆದ ನಮ್ಮೂರಲ್ಲಿ ಧ್ವಜ ಹಾರಿಸಿದನಲ್ಲ ಎಂಬ ಕೆಲವರ ಹೊಟ್ಟೆಯುರಿಗೂ ಅನ್ನದಾನಯ್ಯನವರು ಗುರಿಯಾದರು. ‘ ಕರ್ನಾಟಕ ಏಕೀಕರಣ’ ಆಗಲೇ ಬೇಕೆಂಬ ಆಗ್ರಹದ ಉಪವಾಸ ಹ್ರಡಿದ್ದ ಗಾಂಧಿವಾದಿ ಅದರಗುಂಚಿ ಶಂಕರಗೌಡರ ಉಪವಾಸದ ಅಂತ್ಯದಲ್ಲಿ ಸಂಭವಿಸಿದ ಅನೀರಿಕ್ಷಿತ ಗಲಭೆಯಲ್ಲಿ ಪೋಲಿಸರು ಗುಂಡು ಹಾರಿಸಿದರು. ಗಲಭೆಗೆ ವಿದ್ಯಾರ್ಥಿ ನಾಯಕ ಪುರಾಣಿಕ ಕಾರ್ಯಕರ್ತನೆಂದು ಸುಳ್ಮ್ಳ ಆರೋಪ ಹೊರಸಿ ಕೆಲ ರಾಜಕೀಯ ವ್ಯಕ್ತಿಗಳು ಅವರನ್ಮ್ನ ಬಂಧನಕ್ಕೆ ಒಳಪಡಿಸಿದರು. ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ನಾಯಕನೊಬ್ಬನನ್ನು ಸುಳ್ಳು ಆರೋಪದಡಿ ಬಂಧಿಸಿ, 1954ರಲ್ಲಿ ಸೆರೆಮನೆಗಟ್ಟಿದ ಕೀರ್ತಿ ಸ್ವತಂತ್ರ್ಯ ಭಾರತದ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ್ದಾಯಿತು. +ಸೆರೆಮನೆ ಸೇರಿದ ಗಾಂಧಿವಾದಿ ಪುರಾಣಿಕರ ಉಪವಾಸ ವ್ರತ ಕೈಗೊಂಡರು. ಯಾರ ಬೆದರಿಕೆಗೂ ಜಗ್ಗದೆ ಅನ್ನ ಸತ್ಯಾಗ್ರಹ ನೆಡೆಸಿ, ಜೈಲಿನಲ್ಲಿ ಪೋಲಿಸರ ಹಿಂಸೆ-ದೌರ್ಜನ್ಯಕ್ಕೀಡಾದ ಅಮಾಯಕರ ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸಿದರು. ಪುರಾಣಿಕರ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಸಾಬೀತಾಗಿ ಅವರನ್ನು ಗೌರವಾನ್ವಿತವಾಗಿ ಬಿಡುಗಡೆ ಮಾಡಿದ ಘನ ನ್ಯಾಯಾಲಯವು, ಪೋಲಿಸರಿಗೆ ಮತ್ತು ಸರ್ಕಾರಕ್ಕೆ ಛೀಮಾರಿ ಹಾಕಿತು. +ಹುಬ್ಬಳ್ಲಿಯಿಂದ ಬಿ.ಕಾಮ್ ಪದವಿ ಪಡೆದ ಪುರಾಣಿಕರು ಲಾ ಓದಲೆಂದು ಹ್ಶೆದರಾಬಾದಿಗೆ ಹಿಂದಿರುಗಿದರು. “ಆಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು” ಆಯೋಗಿಸ ಬೇಕು. ಅದರ ಮೂಲಕ ಇಡೀ ಕರ್ನಾಟಕದ ವಿದ್ಯಾರ್ಥಿ ವೃಂದಕ್ಕೆ ಒಂದು ಸೂಕ್ತ ವೇದಿಕೆ ಲಭಿಸುವುದು ಎಂದು ಯೋಚಿಸಿದ ಪುರಾಣಿಕರು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಪರಿಷತ್ತಿನ ಪಾತ್ರ ಬಹಳ ದೊಡ್ಡದೆಂದು ಮನದಟ್ಟು ಮಾಡಿ ಕೊಡಲು ಕರ್ನಾಟಕದಾದಂತ್ಯ ಪ್ರಯಾಣ ಮಾಡಿದರು. ವಿದ್ಯಾರ್ಥಿಗಳಂತೂ ಸರಿಯೇ ಅವರಿಗೆ ಪ್ರಚೋದನೆ ಪ್ರೇರಣೆ, ಫ್ರೋಫೆಸರ್ ಗಳು, ಪ್ರಿನ್ಸಿಪಾಲರು, ಸಾಹಿತಿಗಳು, ಸಮಾಜ ಚಿಂತಕರನ್ಮ್ನ ಸಂಪರ್ಕಿಸಿ ಅವರ ಬೆಂಬಲ, ಮಾರ್ಗದರ್ಶನ ಪಡೆಯುವ್ಯದರಲ್ಲಿ ಪುರಾಣಿಕರು ಯಶಸ್ವಿಯಾದರು. ಪುರಾಣಿಕರು ಭೇಟಿಯಾಗಿ ಮಾತನಾಡಿದ ನಂತರ ರಾಷ್ಟ್ರಕವಿ ಕುವೆಂಪು ಈ ಸಂಘಟನೆಗೆ ಮುಕ್ತ ಬೆಂಬಲ ನೀಡಿದರು. ಪ್ರಪ್ರಥಮ ಅಖಿಲ ಕರ್ನಾಟಕ ವಿದ್ಯಾರ್ಥಿ ಸಮ್ಮೇಳನವು ಯಶಸ್ವಿಯಾಗಿ 1954ನಲ್ಲಿ ಹ್ಶೆದರಾಬಾದಿನಲ್ಲಿ ನೆಡೆಯಿತು. ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು ಪುರಾಣಿಕರು. ಕರ್ನಾಟಕದ ಎಲ್ಲಾ ಭಾಗದ ವಿದ್ಯಾರ್ಥಿಗಳು, ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಹೀಗೆ ಇಡೀ ರಾಜ್ಯದ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸಂಘಟಿತರಾಗಿದ್ದು ಇದೇ ಮೊದಲು ಮತ್ತು ಇದಕ್ಕೆ ರೂವಾರಿಯಾದರು ಪುರಾಣಿಕರು. ಇಡೀ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಒಂದು ವಿದ್ಯುತ್ ಸಂಚಾರದ ಅನುಭವವಾಯಿತು. ಅವರಿಗೆ ಸಂಘಟನೆಯ ಇನ್ನಷ್ಟು ಸೂಕ್ಷ್ಮ ಸುಳುಹುಗಳು ಮನೋಗತವಾದವು. +ಗಡಿನಾಡಿನಲ್ಲಿ ಕನ್ನಡ ಮತ್ತು ಕನ್ನಡ ಸಾಹಿತ್ಯದ ಪ್ರಚಾರಕ್ಕಾಗಿ ಸ್ವಂತ ಹಣ ವಿನಯೋಗಿಸಿ ಹೈದರಾಬಾದಿನಲ್ಲಿ ಭಾರತೀ ಪ್ರಿಂಟರಿ ಎಂಬ ಅಚ್ಚುಕೂಟವನ್ನು ತನ್ಮೂಲಕ “ಸಹಜೀವನ ಪ್ರಕಾಶನ” ಎಂಬ ಸಂಸ್ಥೆಯನ್ನು ಪುರಾಣಿಕರು ಪ್ರಾರಂಭಿಸಿದರು. ಪ್ರಮುಖ ಸಾಹಿತಿಗಳ ಹಲವಾರು ಪುಸ್ತಕಗಳು ಇಲ್ಲಿ ಪ್ರಕಟವಾಗಿರುವುದು ಇಲ್ಲಿ ಗಮನಾರ್ಹವಾಗಿದೆ. +ನವೆಂಬರ್ 1, 1956ರಂದು ಕರ್ನಾಟಕ ಏಕೀಕರಣಗೊಂಡು ಮೈಸೂರು ರಾಜ್ಯವಾಗಿ ಹೊರಹೊಮ್ಮುವ ಹಿಗ್ಗಿನ ಸುದ್ಧಿ ಪುರಾಣಿಕರನ್ನು ರೋಮಾಂಚನಗೊಳಸಿತ್ತು. ಆಗ ಅವರು ಹೈದರಾಬಾದಿನಿಂದ ಬೆಂಗಳೂರಿಗೆ ಹೋಗಿ ಅಲ್ಲಿ ನ್ಯಾಯವಾದಿಯಾಗಿ ವೃತ್ತಿ ಆರಂಭಿಸುವ ತೀರ್ಮಾಣ ಕೈಗೊಂಡರು. ‘ಹೊಸ ಮಾಲೆಗಿತ್ತಿ’ಯಾಗಿ ಅದೇ ಬಂದಿದ್ದ ಪತ್ನಿ ನೀಲಾಂಬಿಕೆಯೊಡನೆ, ಅಷ್ಟಿಷ್ಟು ಮನೆ ಸಾಮಾನುಗಳು ಮತ್ತು ಕಿಸೆಯಲ್ಲಿ ಪುಡಿಗಾಸು ಇಟ್ಟುಕೊಂಡು. ಅರಿಯದ ನಗರಕ್ಕೆ, ತಲೆಯಲ್ಲಿ ಯೋಜನೆ, ಎದೆಯಲ್ಲಿ ಧೈರ್ಯ, ಹಿಡಿಯಲ್ಲಿ ಸ್ಥೈರ್ಯ ತುಂಬಿಕೊಂಡು ಬೆಂಗಳೂರಿಗೆ ಬಂದಿಳಿದರು. ದೂರಾತಿದೂರದ ಸಂಬಂಧವಾದರೂ ಅತ್ಯಂತ ಆಪ್ತರಾಗಿ ಸ್ವಾಗತಿಸಿದ ಶ್ರೀನೀಲಕಂಠಾರಾಧ್ಯರ ಅತಿಥಿಯಾಗಿ “ಸನ್ಯಾಸಿಯ ಮದುವೆಗೆ ಜುಟ್ಟು ಜನಿವಾರಗಳಿಂದ ಆರಂಭ” ಎನ್ನುವಂತೆ ಪುರಾಣಿಕರು ತಮ್ಮ ನ್ಯಾಯವಾದಿ ವೃತ್ತಿ ಆರಂಭಿಸಲು ಒಬ್ಬ ಹಿರಿಯ ನ್ಯಾಯವಾದಿಯ ಬಳಿ ತರಬೇತಿಗಾಗಿ ಹುಡುಕಾಟ ಆರಂಭಿಸಿದರು. ಹೈದರಾಬಾದಿನಲ್ಲಿ ಪಡೆದಿದ್ದ ಅಂತಹ ಅನುಭವ, ಅವರು ನ್ಯಾಯವಾದಿಯಂದು ಸನದು ಪಡೆಯಲು ಕಡಿಮೆಯಾಗಿತ್ತು. ಶ್ರೀ ವಿ.ಕೃಷ್ಣಮೂರ್ತಿ ಎಂಬ ಸಹೃದಯದ ಹಿರಿಯ ನ್ಯಾಯವಾದಿಯ ಕಚೇರಿಯಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕೆಲ ಸಮಯದಲ್ಲೇ ತಂದೆ, ತಾಯಿ, ತಮ್ಮ, ತಂಗಿ ಮತ್ತು ಅಳಿಯ ಬೆಂಗಳೂರಿನಲ್ಲಿದ್ದ ಅನ್ನದಾನಯ್ಯನವರ ಜೊತೆಗೆ ವಾಸಿಸಲು ಬಂದರು. ಪ್ರತಿದಿನ ಬರುವ ಪರಿಚಿತರು, ಸಂಬಂಧಿಗಳು ಬೇರೆ. ಆಗ ನ್ಯಾಯವಾದಿಯಾಗಿ ಸಂಜೆಯವರೆಗೆ ಕೆಲಸ ಮಾಡಿದರೆ ರಾತ್ರಿಯೀಡಿ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಮಾಡಿ, ಕುಟುಂಬ ವೆಚ್ಚ ನಿರ್ವಹಿಸುವ ಸಾಹಸ ಮಾಡಿದರು ಪುರಾಣಿಕರು. 1957ರಿಂದ ನ್ಯಾಯವಾದಿಯಾದರೂ, ಗಾಂಧೀಜಿಯವರಂತೆ ಕೇಸಿನಲ್ಲಿ ಅನ್ಯಾಯವಾದದ್ದು ಖಾತ್ರಿ ಎನಿಸಿ ಅದನ್ನು ನೆಡೆಸಿದರೆ ನ್ಯಾಯ ದೊರೆಯಲು ಶಕ್ಯ ಎಂದು ಅನ್ನುವಂಥಹ ಕೇಸುಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅಂತಿಂಥ ಕೇಸುಗಳನ್ನು “ಬಂದಷ್ಟು ಬಂತು ಬಂಡಿವಾಡದ ಸುಂಕ” ಎಂದು ಫೀಸಿಗಾಗಿ ಹಾತೊರೆದು ಎಂದೂ ನೆಡೆಸಲಿಲ್ಲ. ಅವುಗಳನ್ನು ವಾಪಸ್ಸು ಕಳುಹಿಸಿ ಕೊಡುತ್ತಿದ್ದರು. ಅವರಲ್ಲಿ ಕೆಲವರು ಬೇರೆ ವಕೀಲರತ್ತ ಧಾವಿಸುತ್ತಿದ್ದರು. ಬಡವರಿಗೆ ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲೇ ಊಟ, ವಸತಿ ನೀಡಿ ಮತ್ತು ಊರಿಗೆ ಹಿಂದಿರುಗಲು ಪುರಾಣಿಕರೇ ಹಣಕೊಟ್ಟು ಕಳುಹಿಸುತ್ತಿದ್ದರು. ಕೇಸ್ ನೆಡೆಸಿ ಗೆದ್ದು ಕೊಟ್ಟರೂ ಏನನ್ನೂ ಕೊಡದ ಕಕ್ಷಿದಾರಗಳಿಗಾಗಿ ಅವರು ಎಂದೂ ತಲೆಕೆಡೆಸಿ ಕೊಳ್ಳಲಿಲ್ಲ. ಸುಮಾರು 12 ವರ್ಷ ಸರ್ಕಾರಿ ನ್ಯಾಯವಾದಿಯಾಗಿ(1969-81), ಕೋಟ್ಯಾಂತ ಮೌಲ್ಯದ ಸರ್ಕಾರಿ ಆಸ್ತಿಯನ್ನು ಉಳಿಸುಕೊಡುವಲ್ಲಿ ಅಮೂಲ್ಯ ಸೇವೆ ಸಲ್ಲಿಸಿದರು. ಸಾವಿರಾರು ಜನ ಬಡವರಿಗೆ, ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಉಚಿತವಾಗಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ನ್ಯಾಯ ನಿಷ್ಟುರಿ, ನಿರ್ಭಿತ ನ್ಯಾಯವಾದಿಯಾಗಿ 50 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಹೈಕೋರ್ಟ ನ್ಯಾಯಧೀಶರಾಗುವ ಅವಕಾಶಗಳು ಬಂದರೂ ಅದನ್ನು ಸ್ವೀಕರಿಸದೆ ಅವರು ನ್ಯಾಯವಾದಿಯಾಗಿ ಮುಂದುವರೆದಿದ್ದು ಇಲ್ಲಿ ಗಮನಾರ್ಹವಾಗಿದೆ. ನ್ಯಾಯವಾದಿಯ ವೃತ್ತಿಯು ಪುರಾಣಿಕರಿಗೆ ಉಪಾಸನೆಯಾಗಿತ್ತು ಮತ್ತು ಸಮಾಜ ಸೇವೆಯ ಸಾಧನವಾಗಿತ್ತು. +ಪುರಾಣಿಕರು ಮುಂಜಾನೆ 9ರಿಂದ ಸಂಜೆಯ 5ರವರೆಗೆ ಹೈಕೋರ್ಟ ಕೆಲಸ ಮತ್ತು ಸಂಜೆ ಒಂದೆರಡು ತಾಸು ಕೇಸ್ ತಯಾರಿಗೆ, ಇತ್ಯಾದಿಗಳಿಗೆ ಬಳಸಿದರೆ, ಉಳಿದ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟರು. ಅವರ ಹೋರಾಟ ಮನೋಭಾವ, ರಚನಾತ್ಮಕ ಯೋಜನೆ, ಸಮಾಜ ನಿಷ್ಠೆ, ಕತೃತ್ವ ಶಕ್ತಿಗಳು ಹೊರಹೊಮ್ಮಿದವು. ಬೆಂಗಳೂರಿನ ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವೇಶಿಸಿದರು ಮತ್ತು ಜನತೆಯ ಬೆಂಬಲ ಗೆದ್ದರು. ಈ ಕೆಲಸಗಳಲ್ಲಿ ತಮ್ಮ ಛಾಪು ಸ್ಥಾಪಿಸಿದರು. ಎತ್ತರದಿಂದ ಎತ್ತರಕ್ಕೆ ಬೆಳೆಯುತ್ತಾ ಹೋದರು. ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕರಾಗಿ (1969ರಿಂದ), 27 ವರ್ಷಗಳ ಕಾಲ ಅದರ ಪ್ರಧಾನ ಕಾರ್ಯದರ್ಶಿಯಾಗಿ (1964-91) ಅವರು ತನು-ಮನ-ಧನದ ಸೇವೆ ಸಲ್ಲಿಸಿರುವುದರಿಂದ ಈ ಸಂಸ್ಥೆ ಇಂದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯಲು ಸಾಧ್ಯವಾಗಿದೆ. ಪುರಾಣಿಕರ ಪ್ರಯತ್ನದಿಂದಾಗಿ ಬಸವಣ್ಣನವರ 8ನೆ ಶತಮಾನೋತ್ಸವ ಮತ್ತು ಪಾದಯಾತ್ರೆ (1967-68) ಮತ್ತು ಕನ್ನಡ ಮತ್ತು ಬೇರೆ ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲೀಷ್, ರಷ್ಯಾ ಮೊದಲಾದ ಭಾಷೆಗಳಲ್ಲಿ ವಚನ ಸಾಹಿತ್ಯದ ಪ್ರಕಟಣೆ ಮೊದಲಾದ ಕೆಲಸಗಳನ್ನು ಬಸವ ಸಮಿತಿ ಮಾಡಲು ಸಾಧ್ಯವಾಯಿತು. ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದರ ಗೌರವ ಕಾರ್ಯದರ್ಶಿಯಾಗಿ ( 1960-68) ಸೇವೆ ಸಲ್ಲಿಸಿ, ಅದರ ಸಮಸ್ಯೆಗಳನ್ನು ಪರಿಹರಿಸಿ ಮತ್ತೆ ಈ ಸಂಸ್ಥೆಗೆ ಪುರ್ನಜನ್ಮ ನೀಡಿದವರು ಪುರಾಣಿಕರು. +ಕನ್ನಡ, ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ಅನ್ನದಾನಯ್ಯ ಪುರಾಣಿಕರು 35ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವರ ನೂರಾರು ಲೇಖನಗಳು ದೇಶ-ವಿದೇಶಗಳಲ್ಲಿ ಪ್ರಕಟವಾಗಿವೆ. ಜನಜಾಗೃತಿಗಾಗಿ ಅವರು ¨ರೆಯುವ ಸಾವಿರಾರು ಅಧುನಿಕ ವಚನಗಳು ಅಪಾರ ಮನ್ನಣೆ ಗಳಿಸಿವೆ. ಅವರಿಗೆ ಅಖಿಲ ಕರ್ನಾಟಕ ವಚನ ಪರಿಷತ್ತಿನ ಪ್ರಥಮ ಅಧಿವೇಶನದ ಅಧ್ಯಕ್ಷತೆಯ ಗೌರವ ದೊರೆತಿದೆ. ಕರ್ನಾಟಕದ ಶ್ರೀಷ್ಟ ವಚನಕಾರನೆಂಬ ಪ್ರಶಸ್ತಿ ಗೌರವ ದೊರೆತಿದೆ. ಕರ್ನಾಟಕ ರಾಜ್ಯ ಸರ್ಕಾರವು ಅವರಿಗೆ 2006ರಲ್ಲಿ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಲವಾರು ಸಾಂಸ್ಕøತಿಕ ಸಂಸ್ಥೆಗಳು ಮತ್ತು ಸಂಘಟನೆಗಳು ಅವರ ಸೇವೆಯ ಘನತೆ ಮನ್ನಿಸಿ ಸತ್ಕರಿಸಿವೆ. +ನಿರ್ಬಲರಿಗೆ ಬಲವನ್ನು, ಬಲವಂತರಿಗೆ ವಿದ್ಯೆಯನ್ನು +ಸೋತವರಿಗೆ ತಲೆಯೆತ್ತಿ ನಿಲ್ಲುವ ಕೆಚ್ಚನ್ನು, +ಸೋಲುವವರಿಗೆ ಗೆಲುವೆನೆಂಬ ನಂಬಿಕೆಯನ್ನು +ಏಗಿದವರಿಗೆ ಎತ್ತರವನ್ನು, ಬೀಗಿದವರಿಗೆ ಬಾಗುವುದನ್ನು ಕೊಡುತ್ತಲ್ಲೆ ತಮ್ಮ ಸಂಸಾರವನ್ನು ಸವೆಯಬಳಸುತ್ತಿರುವ ತ್ರಿವಿಧ ದಾಸೋಹ ಗುಣದ ಅನ್ನದಾನಯ್ಯನವರಿಗೆ ಜನಮನ್ನಣೆಯ ದಾಹವಿಲ್ಲ, ಮಾನ ಸಮ್ಮಾನದ ಲೋಭವಿಲ್ಲ, ಕೀರ್ತಿ ಪ್ರಶಸ್ತಿಗಳ ಭ್ರಮೆಯಿಲ್ಲ, ಅತ್ತ ಹೊರಳಿ ನೋಡುವ ಜಾಯಮಾನ ಅವರದಲ್ಲ. +87 ವರ್ಷದ ಇಳಿವಯಸ್ಸಿನಲ್ಲೂ ಸಹ ಇಳೆಯ ಕೊಳೆ ಕಳೆದು ಶಿವಕಳೆ ಬೆಳಗಲಿ ಎಂಬ ಚಿಂತನೆಯನು ಹಾಸಲು, ಹೊದೆಯಲು ಬಳಸಿಕೊಂಡು ಹದುಳಿಗರಾಗಿದ್ದಾರೆ ಅನ್ನದಾನಯ್ಯ ಪುರಾಣಿಕರು. ಸುಮಾರು 5 ವರ್ಷದಿಂದ ಅನಾರೋಗ್ಯದಿಂದಾಗಿ ಅವರು ಹಾಸಿಗೆ ಹಿಡಿದರೂ, ಬೆಂಗಳೂರಿನಲ್ಲಿ ವಾಸವಾಗಿರುವ ಅವರನ್ನು ಸೌಜನ್ಯಕ್ಕಾದರೂ ಒಬ್ಬ ಮಂತ್ರಿಗಳಾಗಲಿ ಅಥವಾ ಅಧಿಕಾರಿಗಳಾಗಿ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಪದಾಧಿಕಾರಿಗಳಾಗಲಿ ಭೇಟಿಯಾಗಿ, ನೆರವು ನೀಡದಿರುವುದು ನಾಡಿನ ದುರಂತ. +ನಾಡು ನುಡಿಗಾಗಿ 67 ವರ್ಷ ನಿರಂತರವಾಗಿ ದುಡಿದ ಈ ನಾಡಿನ ಆಸ್ತಿಗೆ, ಕನ್ನಡಿಗರು ತೋರಿದ ನಿರ್ಲಕ್ಷ ಅಕ್ಷಮ್ಯ. 20-10-2015ರಂದು ಶಿವಾಧೀನರಾದ ಶ್ರೀ ಪುರಾಣಿಕರಿಗೆ ಸರ್ಕಾರದ ಗೌರವದೊಂದಿಗೆ ಅಂತ್ಯಸಂಸ್ಸಾರವೂ ನೆಡೆಯಲಿಲ್ಲ. ಕರ್ನಾಟಕ ಏಕೀಕರಣದ 75 ವರ್ಷದ ಸಂಭ್ರಮದ ಹೊಸಲಿನಿಲ್ಲಿ, ಕರ್ನಾಟಕ ಏಕೀಕರಣದ ಪ್ರಮುಖ ನಾಯಕರೊಬ್ಬರನ್ಮ್ನ ಕನ್ನಡಿಗರು ಹೀಗೆ ಕಳುಹಿಸಿಕೊಟ್ಟಿದ್ದು ವಿಷಾದನೀಯ. + \ No newline at end of file diff --git a/PanjuMagazine_Data/article_1050.txt b/PanjuMagazine_Data/article_1050.txt new file mode 100644 index 0000000000000000000000000000000000000000..d859bdf6ea89e9be99ac33b1053aafd02b33c9c8 --- /dev/null +++ b/PanjuMagazine_Data/article_1050.txt @@ -0,0 +1,24 @@ +ಪ್ರಕಟಣೆ 1 +ಜ್ಞಾನಡಮರು ಪ್ರಕಾಶನವು ದ್ವಿತೀಯ ವರ್ಷ ಪೂರೈಸಿದ ಸವಿನೆನಪಿಗಾಗಿ ಸಹಕಾರ ತತ್ವದಡಿಯಲ್ಲಿ ರಾಜ್ಯಮಟ್ಟದ ಚೌಪದಿಗಳ ಅಪೂರ್ವ ಸಂಕಲನ ಹೊರತರಲು ಚಿಂತನೆ ನಡೆಸಿದ್ದು, ಆಸಕ್ತ ಹಿರಿಯ-ಕಿರಿಯ ಕವಿಗಳು ಸ್ವರಚಿತ ೬ ಚೌಪದಿಗಳನ್ನು ಮೊಗೇರಿ ಶೇಖರ ದೇವಾಡಿಗ ಸಂಪಾದಕರು ಜ್ಞಾನಡಮರು ಪ್ರಕಾಶನ, ಮೊಗೇರಿ ಕೆರ್ಗಾಲ್ (ಅಂಚೆ) ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-೫೭೬೨೧೯ ಮೊ: ೯೯೧೬೧೮೦೪೯೫ ಈ ವಿಳಾಸಕ್ಕೆ ಮಾರ್ಚ್ ೨೮ ೨೦೧೫ ರೊಳಗೆ ೨ ಸ್ವವಿಳಾಸ ಬರೆದ ಅಂಚೆ ಲಕೋಟೆಯನ್ನು ಲಗತ್ತಿಸಿ ಕಳುಹಿಸಲು ಕೋರಲಾಗಿದೆ. ಇ-ಅಂಚೆ ಮೂಲಕ +ಕಳುಹಿಸುವವರು ನುಡಿ ತಂತ್ರಾಂಶದಲ್ಲಿ ಟೈಪಿಸಿ ಕಳುಹಿಸಬಹುದು. +ಇ-ಅಂಚೆ: shekharadevadiga2013@gmail.com + ನಿಯಮಗಳು + ಕವನಗಳು ನಾಲ್ಕು ಸಾಲುಗಳನ್ನು ಹೊಂದಿರಬೇಕು (ಚೌಪದಿ) + ಸ್ವಂತ ರಚನೆಯ ಬಗ್ಗೆ ಸ್ವದೃಢೀಕರಣವಿರಬೇಕು. + ಪ್ರಕಟಿಸಲು ಅನುಮತಿಯನ್ನು ಲಿಖಿತವಾಗಿ ನೀಡತಕ್ಕದ್ದು. +***** +ಪ್ರಕಟಣೆ 2 +ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ – 2015 +ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರಿಂದ ಕರ್ನಾಟಕದ ಉದಯನ್ಮೋಖ ಹಾಗೂ ಎಲೆಮರೆಯ ಕವಿಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ " ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ – 2015" ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವನಗಳನ್ನು ಕಳುಹಿಸಬಹುದಾಗಿದೆ. +ಸೂಚನೆಗಳು +01. ಕವಿತೆಗಳು 30 ಸಾಲುಗಳು ಮೀರಿರಬಾರದು. +02. ಕವಿಗಳು ತಮ್ಮ ಕವಿತೆಗಳ ಜೊತೆಯಲ್ಲಿ ತಮ್ಮ ಇತ್ತೀಚಿನ ಪೋಟೋ, ಅಂಚೆ ವಿಳಾಸ, ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. +03. 2015ರ ಏಪ್ರಿಲ್ ತಿಂಗಳಿನಲ್ಲಿ ಫಲಿತಾಂಶ ಘೋಷಿಸಲಾಗುವುದು. +04. ಕವಿತೆಗಳು ಕಳುಹಿಸಲು ಕೊನೆಯ ದಿನಾಂಕ ಜನವರಿ 05, 2015 +ಕವನಗಳು ಕಳುಹಿಸಬೇಕಾದ ವಿಳಾಸ +ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಹೆಚ್ ಎಸ್ ಗಾರ್ಡನ್, ಚಿಕ್ಕಬಳ್ಳಾಪುರ – 562 101 +ನುಡಿ ತಂತ್ರಾಂಶದಲ್ಲಿ ಟೈಪಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. jeevanprakashana@gmail.com +ಹೆಚ್ಚಿನ ಮಾಹಿತಿಗಾಗಿ 9901982195/9901928906 ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ. +***** +ಪ್ರಕಟಣೆ 3 +***** \ No newline at end of file diff --git a/PanjuMagazine_Data/article_1051.txt b/PanjuMagazine_Data/article_1051.txt new file mode 100644 index 0000000000000000000000000000000000000000..a4d573e40e587b981b2669291563fc5ba3f8f8f1 --- /dev/null +++ b/PanjuMagazine_Data/article_1051.txt @@ -0,0 +1,73 @@ +ನಾನೊಂದು ಖಾಲಿ ಸೀಸೆ +ನಾನೊಂದು ಖಾಲಿ ಸೀಸೆ +ಈಗ ನಾ 'ನೊಂದೆ', +ಮತ್ತು ತರುವ ಮದಿರೆ ತುಂಬಿಹೆ +ನನ್ನೊಳು ಪೂರ್ತಿ, +ಬರೀ ಮೈಗಷ್ಟೇ ಮತ್ತು; ಮತ್ತೇನಿಲ್ಲ +ದಾಹದಿ ಮದಿರೆಯ ದಾಸರು ಕೊಂಡು +ಹೀರಿದರೆಲ್ಲ ನನ್ನೊಳ ಮತ್ತು ; +ಮತ್ತೇನೂ ಅಷ್ಟೇ ಮತ್ತೇನಿಲ್ಲ, +ದಾಹದಿ ಹೀರಿ ಮೋಹದಿ ಇವರು +ಮುತ್ತಿಕ್ಕಿ ಮತ್ತೆಲ್ಲ ಹೀರಿ ಮತ್ತೂ +ಮುತ್ತಿಕ್ಕಿ; ಕೊನೆಗೊಮ್ಮೆ ಬಿಸಾಕಿದರೆನ್ನ +ಬೀದಿಯಲಿ ಅಷ್ಟೇ ನನ್ನೊಳು ಮತ್ತೇನಿಲ್ಲ, +ತೂರಾಡುತಲಿ ಕೂಗಾಡುತಲಿ ಬೈಯುತಲಿ +ನನ್ನನೂ; ಬೈಸಿಕೊಳುತಲಿ ತಮ್ಮನೂ +ಕಕ್ಕುತಿಹರು ಮನದೊಳಗಣ ಕಿಚ್ಚನು +ಇಷ್ಟೇ ನನ್ನೊಳು ಮತ್ತೇನಿಲ್ಲಾ, +ಅದೆಷ್ಟೋ ಮತ್ತನು ಮತ್ತೇ ಮತ್ತೇ +ನಾ ತುಂಬಿಕೊಂಡಿಹೆ ನೀ ದೇಹದೊಳು; +ತುಂಬಿದಾಗ ನನ್ನೊಳು ಮತ್ತು +ನಾನೇ ಕುಡುಕರ ಸೊತ್ತು; ಹೀರಿ ದಾಹ +ತೀರಿದಾಗ ನಾನೇ ಇವರಿಗೆ ಆಪತ್ತು, +ತಪ್ಪು ನನ್ನದಲ್ಲದಿದ್ದರೂ ನಾನಿಳಿದ +ಕಾಯಕವೇ ಅಂಥದು; ಮೈ ಮಾರಿಕೊಳುವ +ಸೂಳೆಗೂ ಮತ್ತು ತುಂಬಿದ ಮೈ +ಮಾರಿಕೊಳುವ ನನಗೂ ಅಂತರವಿಷ್ಟೇ ; +ಆ ಕಣ್ಣಿಗೂ ಈ ಹುಬ್ಬಿಗೂ ಇರುವಷ್ಟೇ, +–ಶಿದ್ರಾಮ ತಳವಾರ್ + + + + + + +ಸ್ಪರ್ಶ ಬಂಧನ +ನನ್ನ ಕೈಯೊಳು ನಿನ್ನ ಕೈ +ಛಾಪು ಮೂಡಿಸಿದ ನಿನ್ನ ಅಂಗೈ +ರೇಖೆ ರೇಖೆ ಸಂಧಿಸಿದೆ +ಆ ಸ್ಪರ್ಶದಲ್ಲಿ ಮೌನ ಒಡಮೂಡಿದೆ +ಮುಷ್ಟಿ ಬಲದೆದುರಲಿ +ನಿಷ್ಪಾಪಿ ಬೆರಳುಗಳು ಸೋತಿವೆ +ನಡುಕ ಮರೆಮಾಚಿ +ಬಿಸಿ ಸ್ಪರ್ಶದೊಳಗೂ +ತಂಪು ಮೂಡಿದೆ +ಅಂಗೈಗಳೆರಡರ ಬಾಹು ಬಂಧನ +ಮನದೊಳಗೆ ಇಂಬು ನೀಡಿದೆ +ಏನೋ ಕಂಪನ +ಕಂಡಾಗ ಅಂಗೈ +ಮುಷ್ಟಿಬಿಗಿಯಲಿ ಬಂಧಿಸಿದ +ನಿನ್ನ ನೆನಪು ಅನುದಿನ… +-ವೆಂಕಟೇಶ ನಾಯಕ್ + + + + + +ಕಣ್ಣು-ಕಾಡಿಗೆ +ಕಣ್ಣ ಮೇಲಿನ ಕಾಡಿಗೆ, +ಕಂಡು ಕಾಣದ ಕಾಡಿಗೆ +ಕಣ್ಣ ಒಳಗಿನ ಭಾವಚಿತ್ರಕೇ, +ಭಾವನೆಯ ಬಣ್ಣ ನೀ ಚೆಲ್ಲಿದೆ +ಮನದಾಳದ ಪಿಸುಮಾತಿಗೆ, +ನೂರೆಂಟು ಅರ್ಥವ ನೀ ಕಲ್ಪಿಸಿದೆ +ಕಣ್ಣ ಮೇಲಿನ ಕಾಡಿಗೆ, +ಕಂಡು ಕಾಣದ ಕಾಡಿಗೆ +ಕಣ್ಣು ರೆಪ್ಪೆಯ ನಾಜುಕು ನಡೆಗೆ, +ಮನಸೋತು ನೀ ಹಿಂಬಾಲಿಸಿದೆ +ನೀ ಸಿಗದೆ ಮರುಗಿದ ಕಣ್ಣಿರಿಗೆ, +ಕರಗಿ ನೀ ನನ್ನ ಸೇರಿದೆ +ಕಣ್ಣ ಮೇಲಿನ ಕಾಡಿಗೆ, +ಕಂಡು ಕಾಣದ ಕಾಡಿಗೆ +–ಲೋಕೇಶಗೌಡ ಜೋಳದರಾಶಿ + \ No newline at end of file diff --git a/PanjuMagazine_Data/article_1052.txt b/PanjuMagazine_Data/article_1052.txt new file mode 100644 index 0000000000000000000000000000000000000000..2c40a18386ec2bf0fcfdd7b88b325dff00d2079a --- /dev/null +++ b/PanjuMagazine_Data/article_1052.txt @@ -0,0 +1,14 @@ + + + + + + + + + + + + + + \ No newline at end of file diff --git a/PanjuMagazine_Data/article_1053.txt b/PanjuMagazine_Data/article_1053.txt new file mode 100644 index 0000000000000000000000000000000000000000..ea2222f6f2ec23cfa78b551d40d9a74b140db216 --- /dev/null +++ b/PanjuMagazine_Data/article_1053.txt @@ -0,0 +1,8 @@ +ಇಲ್ಲಿಯವರೆಗೆ +ಬೆಳಿಗ್ಗೆ ಕೆಲಸಕ್ಕೆ ಹೊತ್ತಾಗಿದ್ದರೂ ಅಂತಹ ಗಡಿಬಿಡಿಯೇನೂ ತೋರಿಸದೆ, ತಾನು ಬೇಗ ಹೋಗಿಯಾದರೂ ಏನು ಮಾಡುವುದು ಅನ್ನುವ ಮನಸ್ಥಿತಿಯಲ್ಲಿ ಆರಾಮವಾಗಿ ಬಂದ ಪ್ರದೀಪ್ ಗೆ ಸ್ವಾಗತಿಸಿದ್ದು ಎಂದಿಗಿಂತಲೂ ಚೊಕ್ಕದಾದ ಆಫೀಸಿನ ಪ್ರಾಂಗಣ. ಅವನಿಗೆ ಆಶ್ಚರ್ಯವಾಗಿತ್ತು. ಅಲ್ಲೇ ನಿಂತು ಅತ್ತಿತ್ತ ಕಣ್ಣಾಡಿಸಿದ. ರಿಸೆಪ್ಶನ್ ನಲ್ಲಿ ಹೂವಿನ ಅಲಂಕಾರ, ಆ ಕಡೆ ಈ ಕಡೆಗೊಂದು ಹೂ ಕುಂಡಲ. ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು. ಆಗಾಗ ತಮ್ಮ ಸ್ಯಾರಿ ಸರಿ ಇದೆಯೋ ಇಲ್ಲವೋ ಎಂಬಂತೆ ತಮ್ಮದೇ ಸುತ್ತಲೂ ಕಣ್ಣಾಡಿಸುತ್ತ, ಸರಿಯಿಲ್ಲ ಅನಿಸಿದೆಡೆಗೆ ಸರಿ ಮಾಡಿಕೊಳ್ಳುತ್ತ ನಿಂತಿದ್ದರು. ಬೇರೆಯವರು ತಮ್ಮನ್ನು ಗಮನಿಸುತ್ತಿದ್ದಾರೆ ತಾನೇ ಎಂದೂ ಅತ್ತಿತ್ತ ನೋಡುತ್ತ, ಒಬ್ಬನಾದರೂ ನೋಡುತ್ತಿದ್ದರೆ ಅದು ತನ್ನನ್ನೇ ನೋಡುತ್ತಿರಬೇಕು ಎಂದು ಒಂದು ಗಳಿಗೆ ನಿಶ್ಚಿಂತರಾಗುತ್ತಿದ್ದರು. ಸುಗಂಧ ದ್ರವ್ಯವನ್ನು ಯಥೇಚ್ಚವಾಗಿ ಸ್ಪ್ರೇ ಮಾಡಿದ್ದರಿಂದ ಆ ಪ್ರದೇಶದಲ್ಲಿ ಘಾಟು ವಾಸನೆ ಅಡರಿತ್ತು. ಒಟ್ಟಿನಲ್ಲಿ ಅಲ್ಲಿ ಹಬ್ಬದ ವಾತಾವರಣವಿತ್ತು. ಬೆಂಗಳೂರಿಗೆ ಬಂದ ಮೇಲೆ ಹಬ್ಬ ಹರಿದಿನಗಳನ್ನೇ ಮರೆತ ಪ್ರದೀಪಗೆ ಇವತ್ತು ಯಾವುದೋ ಹಬ್ಬವಿರಬೇಕು ತಾನು ಅದನ್ನು ಎಂದಿನಂತೆ ಮರೆತುಬಿಟ್ಟೆನೇನೋ ಎಂಬ ಸಂಶಯ ಉಂಟಾಗಿರುವಾಗಲೇ ಅಲ್ಲೇ ಪಕ್ಕಕ್ಕೆ ಇದ್ದ ಫಲಕದ ಮೇಲೆ ಯಾರಿಗೋ ಸ್ವಾಗತ ಕೋರಿದ ಅಕ್ಷರಗಳು ಕಂಡವು. ಕೂಲಂಕುಷವಾಗಿ ನೋಡಲಾಗಿ 'Welcome to Voice President John C. Becker' ಅನ್ನುವ ವಾಕ್ಯಗಳು ಕಂಡವು. ತಮ್ಮ ಶಾಖೆಗೆ ಜಾನ್ ಬರುತ್ತಿರುವ ವಿಷಯ ಅವನಿಗೆ ಗೊತ್ತಾಗಿದ್ದು ಆಗಲೆ. ಅವನು ಬರುತ್ತಿರುವ ವಿಷಯ ಮೊದಲೇ ಗೊತ್ತಿತ್ತಾದರೂ ಇವತ್ತೇ ಬರುವನೆಂದು ಅವನಿಗೆ ಅಂದಾಜಿರಲಿಲ್ಲ. ತನಗ್ಯಾರೂ ಹೇಳಲೇ ಇಲ್ಲವೆಂಬ ಕೋಪ ಅವನಿಗೆ ಬಂದಿತು. ತನ್ನ ಬಾಸ್ ಸುಜಯ್ ಎಲ್ಲ ವಿಷಯಗಳನ್ನು ತನ್ನ ಗೆಳತಿ ನಿಶಾಗೆ ಮಾತ್ರ ಹೇಳುತ್ತಾನೆ. ಮಿಕ್ಕ ತಾವೆಲ್ಲರೂ ಏನು ಪಾಪ ಮಾಡಿದ್ದೇವೆ? ಅಂತ ತನ್ನಲ್ಲೇ ಅವನನ್ನು ಬೈದುಕೊಂಡ. ಈ ವಿಷಯದ ಬಗ್ಗೆ ಜಾನ್ ಗೆ ದೂರು ಕೊಡಬೇಕು ಅಂತ ಯೋಚಿಸುತ್ತ ತನ್ನ ಜಾಗಕ್ಕೆ ತೆರಳಿದ. +ಅಮೆರಿಕಾದ ದೊರೆಗೆ ಅದ್ಧೂರಿಯ ಸ್ವಾಗತ ಕೋರಲು ಎಲ್ಲ ಸಿದ್ಧತೆಗಳಾಗಿದ್ದವು. ಶಾಖೆಯ ಮುಖಸ್ಥನಾದ ಸುಧೀರ್ ತನ್ನ ಮಾಮೂಲಿ ಟೀ ಶರ್ಟ್ ಹಾಕಿಕೊಳ್ಳದೆ ತುಂಬಾ ಡೀಸೆಂಟ್ ಆಗಿರುವ ಸೂಟು ಬೂಟು ಹಾಕಿಕೊಂಡು ತಯಾರಾಗಿದ್ದುದು ವಿಶೇಷವಾಗಿತ್ತು. ಉಳಿದ ಮ್ಯಾನೇಜರ್ ಗಳೂ ತಂತಮ್ಮ ಸೂಟು ಬೂಟುಗಳೊಂದಿಗೆ ಮದುವೆಗೆ ತಯಾರಾದಂತೆ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ ಬಂದಿದ್ದರು. ಮೊದಲೇ ನಿರ್ಧರಿಸಿದಂತೆ ಜಾನ್ ಹನ್ನೆರಡು ಗಂಟೆಗೆ ಬರುವದಿತ್ತಾದರೂ ಅವನು ಬಂದಿದ್ದು ಒಂದು ಗಂಟೆ ಮೊದಲೇ. ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿ ಎಲ್ಲರಿಗೂ ಅನಿರೀಕ್ಷಿತ ತಿರುವು ಕೊಡುವುದರಲ್ಲಿ ಜಾನ್ ದು ಎತ್ತಿದ ಕೈ. ಅದೇ ಅವನ ವಿಶೇಷ. ಅದನ್ನು ಮೊದಲೇ ತಿಳಿದಿದ್ದ ಸುಧೀರ್ ಎಲ್ಲ ತಯಾರಿಗಳನ್ನೂ ಮುಂಚಿತವಾಗೆ ಮಾಡಿಕೊಂಡಿದ್ದ. +ಜಾನ್ ಬರುತ್ತಲೇ ಸೀರೆ ಉಟ್ಟ ನೀರೆಯರು ಅವನಿಗೆ ಹೂ ಗುಚ್ಚದೊಂದಿಗೆ ಸ್ವಾಗತಿಸಿದರು. ಅವನು ಗಂಟು ಮುಖದಲ್ಲೇ ಸ್ವೀಕರಿಸಿದ. ಅವನ ಜೊತೆಗೆ ಜೇಕಬ್ ನೂ ಬಂದಿದ್ದ. ಸುಧೀರ್ ತನ್ನನ್ನು ತಾನು ಪರಿಚಯಿಸಿಕೊಂಡ. ಜಾನ್, ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ರೀತಿಗೆ ತುಸು ಮುಜುಗರಕ್ಕೊಳಗಾದ. ಆ ನೋಟ ‘ನೀನೆ ಏನು ಈ ಶಾಖೆಯ ಮುಖ್ಯಸ್ಥ?’ ಅನ್ನುವಂತಿತ್ತು. ಮಿಕ್ಕ ಸಹೋದ್ಯೋಗಿಗಳನ್ನೂ ಅವನಿಗೆ ಸುಧೀರ ಪರಿಚಯಿಸಿದ. ಎಲ್ಲರನ್ನೂ ಹುಬ್ಬು ಗಂಟಿಕ್ಕಿಯೇ ಮಾತಾಡಿಸಿದ ಜಾನ್ ಎಲ್ಲರಲ್ಲಿಯೂ ನಡುಕ ಹುಟ್ಟಿಸಿದ. ಪ್ರಥಮ ಚುಂಬನದಲ್ಲೇ ದಂತಭಗ್ನವಾಗಿತ್ತು! +ಸುಧೀರ್ ನ ಜೊತೆಗೆ ಇಡೀ ಆಫೀಸನ್ನು ಸುತ್ತಾಡಿದ ಜಾನ್, ಎಲ್ಲ ಕಡೆಗೂ ಸಂಶಯದ ದೃಷ್ಟಿಯಿಂದಲೇ ಅಡ್ಡಾಡುತ್ತಿದ್ದನೇನೋ ಅಂತ ಅನಿಸುತ್ತಿತ್ತು. ಕೆಲವು ಸಹೋದ್ಯೋಗಿಗಳ ಜೊತೆಗೆ ಮಾತಾಡಿ ಅವರೇನು ಮಾಡುತ್ತಿರುವರೆಂದು ಕೇಳಿ ತಿಳಿದುಕೊಂಡ. ಕೆಲವರಿಗೆ ಇದನ್ನು ಹೀಗೇಕೆ ಮಾಡುತ್ತಿರುವೆ? ಹಾಗೇಕೆ ಮಾಡುತ್ತಿಲ್ಲ ಅಂತೇನೇನೋ ಪ್ರಶ್ನೆ ಕೇಳಿ ಅವರಲ್ಲಿ ಬೆವರು ಹುಟ್ಟಿಸಿದ. ಪ್ರದೀಪನಂತಹ ಕೆಲೆಸಗಳ್ಳರು ಮಾತ್ರ ಅವನು ಬಂದ ಸಮಯಕ್ಕೆ ತಮ್ಮ ಜಾಗದಲ್ಲಿರದೆ ಬಚಾವಾದರು. ಎಂದಿನಂತೆ ಡೆಸ್ಕಿಗೆ ಅಂಟಿಕೊಂಡು ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಇದರಿಂದ ಕಿರಿಕಿರಿ ಅನುಭವಿಸುವಂತಾಯಿತು. ಆದರೆ ನಿಶಾ ಮಾತ್ರ ಇದೆ ಒಂದು ಅವಕಾಶಕ್ಕೆ ಕಾಯುತ್ತಿದ್ದವಳಂತೆ ಅವನ ಜೊತೆ ಅಮೆರಿಕಾದ accent ನಲ್ಲಿ ಮಾತಾಡಿ ಅವನ ಮನ ಗೆದ್ದಳು. ಅವಳ ಹೆಸರು ಏನು , ಅವಳು ಯಾರಿಗೆ ರಿಪೋರ್ಟ್ ಮಾಡುತ್ತಿದ್ದಾಳೆ ಎಂಬೆಲ್ಲ ವಿಷಯಗಳನ್ನು ಅವನು ಕೇಳಿ ತಿಳಿದುಕೊಂಡ. ಅವನ ಜೊತೆಗಿದ್ದ ಜೇಕಬ್ ಇದೆಲ್ಲವನ್ನೂ ನೋಟ್ ಮಾಡಿಕೊಂಡ. ಈ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯಬಹುದೆಂದು ಸುಧೀರನಿಗೆ ಮನದಟ್ಟಾಯಿತು. ಯಾವುದೇ ಉಪಾಧ್ಯಕ್ಷ ಇಲ್ಲಿಯವರೆಗೆ ಈ ತರಹ ವರ್ತಿಸಿರಲಿಲ್ಲ. +ಮದ್ಯಾಹ್ನದ ಊಟಕ್ಕೆ ಕಂಪನಿಯ ಪಕ್ಕದಲ್ಲೇ ಇದ್ದ ಪಂಚತಾರಾ ಹೋಟೆಲ್ ನಲ್ಲಿ ಪೃಥ್ವಿ ವ್ಯವಸ್ಥೆ ಮಾಡಿಸಿದ್ದ. ಅದೇ ಹೋಟೆಲ್ ನಲ್ಲಿ ಅವನ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಆಫೀಸಿಗೆ ತುಂಬಾ ಹತ್ತಿರದಲ್ಲೇ ಇರುವ ಹೋಟೆಲ್ ನಲ್ಲಿಯೇ ತಾನು ತಂಗಬೇಕೆಂದು ಜಾನ್ ನ ಅಪೇಕ್ಷೆಯಾಗಿತ್ತು. ಅವನ ಜೊತೆಗೆ ಊಟಕ್ಕೆ ಸುಧೀರ್ ಹಾಗೂ ಇತರ ಮ್ಯಾನೇಜರ್ ಗಳು ಹಾಜರಾಗಿದ್ದರು. ಎಂದೂ ಹಾಕಿಕೊಂಡು ರೂಢಿಯಿರದ ಸೂಟು ಎಲ್ಲರಿಗೂ ಕಸಿವಿಸಿ ಉಂಟುಮಾಡಿತ್ತು. ಎದುರಿಗೆ ಜಾನ್ ನಂತಹ ವ್ಯಕ್ತಿ ಕೂತಿರುವಾಗ ಎಲ್ಲರ ಹಸಿವೆಯೂ ಸಹಜವಾಗಿಯೇ ಮಾಯವಾಗಿತ್ತು. ಅವನು ಏನು ಕೆಳುತ್ತಾನೋ ಎನ್ನುವ ಹೆದರಿಕೆ ಪ್ರತಿಯೊಬ್ಬರಲ್ಲೂ ಇತ್ತು. ಅವನೂ ಕೂಡ ಈ ಸಂದರ್ಭದ ಸದ್ಬಳಕೆ ಮಾಡಿಕೊಂಡಿದ್ದ. ಪ್ರತಿಯೊಬ್ಬ ಮ್ಯಾನೇಜರ್ ಗೂ ಪ್ರಶ್ನೆಗಳನ್ನು ಹಾಕುತ್ತ ಅವರನ್ನು ಪೇಚಿಗೆ ಸಿಕ್ಕಿಸುತ್ತಿದ್ದ. ಅದೇ ಜೇ.ಸಿ.ಬಿ ಎಂಬ ಅನ್ವರ್ಥಕ ನಾಮ ಗಳಿಸಿದ ಜಾನ್ ನ ವಿಶೇಷತೆಯಾಗಿತ್ತು. ಮರುದಿನ ಪ್ರತಿಯೊಬ್ಬ ಮ್ಯಾನೇಜರ್ ಜೊತೆಗೆ ತನ್ನ ಮೀಟಿಂಗ್ ಗೊತ್ತು ಮಾಡಲು ಆದೇಶ ಹೊರಡಿಸಿದ್ದ. ಎಲ್ಲರೂ ಒಂದೊಂದು ತುತ್ತನ್ನೂ ತುಂಬಾ ಪ್ರಯಾಸ ಪಟ್ಟು ಗಂಟಲೊಳಗೆ ಇಳಿಸಿಕೊಳ್ಳುತ್ತಿದ್ದರು. +ಕಡೆಗೂ ಊಟದ ಆಟ ಮುಗಿದಿತ್ತು. ಹಿಂದಿನ ರಾತ್ರಿಯೇ ಬಂದ ಜಾನ್ ಗೆ ನಿದ್ದೆ ಬಂದಿರಬಹುದು ಹಾಗೂ ಅವನು ತನ್ನ ಕೋಣೆಗೆ ಹೋಗಿ ಮಲಗಿ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಬಹುದೆಂಬ ಎಲ್ಲರ ನಿರೀಕ್ಷೆ ಸುಳ್ಳು ಮಾಡಿ, ಊಟದ ಬಳಿಕ ಎಲ್ಲರ ಜೊತೆಗೆ ಆಫೀಸಿನ ಕಡೆಗೆ ನಡೆದನವನು. ಸುಧೀರ್ ನ ಜೊತೆಗೆ ಕುಳಿತು ಒಂದಿಷ್ಟು ವಿಷಯಗಳ ಮಾಹಿತಿ ಪಡೆಯುವ ಉದ್ದೇಶ ಅವನದಾಗಿತ್ತು… +(ಮುಂದುವರಿಯುವುದು…) \ No newline at end of file diff --git a/PanjuMagazine_Data/article_1054.txt b/PanjuMagazine_Data/article_1054.txt new file mode 100644 index 0000000000000000000000000000000000000000..6a364be3cdbb2df48f765cfdd941cb0b8959e08b --- /dev/null +++ b/PanjuMagazine_Data/article_1054.txt @@ -0,0 +1,55 @@ +“ಒಂದು ರೊಟ್ಟಿಯ ತುಣುಕು ಕೊಡಿ” “ಏನಾದರೂ ತಿನ್ನಲು ಕೊಡಿ " ಆಕೆ ದೈನ್ಯತೆಯಿಂದ ಬೇಡಿದಳು. +ಗಟ್ಟಿ ಕಲ್ಲಿನ ಅಂಗಳದ ಸುಡು ಬಿಸಿಲಿನಲ್ಲಿ ನಿಂತಿದ್ದಳು ಹುಡುಗಿ. ಮೈಯಲ್ಲಿ ಮಾಂಸದ ಹೆಸರೇ ಇರಲಿಲ್ಲ, ಎಲುಬಿನ ಗೂಡು. ಮಕ್ಕಳಿಗೆ ಅನಾಟಮಿಯ ಪಾಠ ಕಲಿಸುವಷ್ಟು ಅವಳ ಎಲುಬು ನಿಚ್ಚಳವಾಗಿ ಮೈಯಿಂದ ಕಾಣುತ್ತಿದ್ದವು. +“ಅಮ್ಮ ಅವಳಿಗೆ ಸ್ವಲ್ಪ ತಿಂಡಿ ಕೊಡು. ನಿನ್ನೆಯಿಂದ ತಿಂಡಿಗೋಸ್ಕರ ಆಕೆ ಬೀದಿ ಬೀದಿ ಅಲೆಯುತ್ತಿದ್ದಾಳೆ’ ಕನಿಕರದಿಂದ ತನ್ನ ಅಮ್ಮನಿಗೆ ಹೇಳಿದ ಅದಿಲ್. +“ಹೋಗಾಚೆ”- ಅಮ್ಮ ಗಟ್ಟಿ ದನಿಯಿಂದ ಗದರಿದರು. “ನಮ್ಮ ಅಂಗಳದಲ್ಲಿ ನಿಂತು ತಿಂಡಿಗಾಗಿ ಅಂಗಲಾಚಲು ನಿನಗೆ ಎಷ್ಟು ಧೈರ್ಯ? ನಾವೇನಾದರೂ ನಿನಗೆ ಊಟ ಹಾಕುತ್ತೇವೆಂದು ನಿನ್ನ ಅಪ್ಪನ ಬಳಿ ಪಣ ತೊಟ್ಟಿದ್ದೇವಾ”? +“ಗೋದಿ ಕಿಲೋ ಗೆ ಮೂರು ರೂಪಾಯಿ. ಹಾಗಿದ್ದಲ್ಲಿ ಭಿಕಾರಿಗಳಿಗೆ ರೊಟ್ಟಿ ದಾನಮಾಡುವುದಾ’ ಜಪಮಾಲೆ ಹುಡುಕುತ್ತಲೇ ಅಲ್ಲೇ ಕೂತಿದ್ದ ಅಜ್ಜಿ ದನಿ ಸೇರಿಸಿದಳು. +"ಒಂದು ಚೂರು ರೊಟ್ಟಿ" ಆ ಹುಡುಗಿ ಮತ್ತೊಮ್ಮೆ ಕೀರಲು ದನಿಯಿಂದ ಬೇಡಿದಳು. +“ಹೋಗುತ್ತೀಯಾ, ಚಪ್ಪಲಿ ತೆಗೆದು ಬಾರಿಸಲಾ” ಜಪಮಾಲೆಯ ಸರಣಿ ತಪ್ಪಿಹೋದ ಅಜ್ಜಿ ಅಬ್ಬರಿಸಿದರು. +“ಅವಳಿಗೆ ಏನಾದರು ತಿನ್ನಲು ಕೊಡಿ ಅಥವಾ ಏನಾದರೂ ಕೆಲಸನಾದ್ರೂ ಕೊಡಿ’ ಬೆನ್ನಿಗಂಟಿಕೊಂಡಿದ್ದ ಅವಳ ಹೊಟ್ಟೆಯ ಮೇಲೆ ಕನಿಕರದ ದೃಷ್ಟಿಯಿಂದ ನೋಡಿ ಅದಿಲ್ ಪುನ: ತನ್ನ ಅಮ್ಮನ ಬಳಿ ಉಸುರಿದ +ಅಮ್ಮನ ಮುಖದಲ್ಲಿ ಫಕ್ಕನೆ ಬೆಳಗು ಮೂಡಿತು. ಹೌದಲ್ಲವೇ ದೇವರೆ ನನ್ನ ಪ್ರಾರ್ಥನೆ ಕೇಳಿ ಮನೆಕೆಲಸದಾಳು ನನಗೆ ದಯಮಾಡಿಸಿದ್ದಾನೆ ಎಂದಳು “ಅದೇ ಸರಿ ನಾವು ಅವಳನ್ನು ಮನೆಕೆಲಸಕ್ಕೆ ಇಟ್ಟುಕೊಳ್ಳೋಣ” +"ಇಲ್ಲಿ ನೋಡು ಹುಡುಗಿ, ಮನೆಗೆಲಸ ಮಾಡಿಕೊಡುತ್ತೀಯಾ"? +“ಕೆಲಸ? ಏನು ಕೆಲಸ? ಚಿಕ್ಕ ದನಿಯಿಂದ ಹುಡುಗಿ ಪ್ರಶ್ನಿಸಿದಳು” ಕೆಲ ಕ್ಷಣದ ನಂತರ ಅಳುತ್ತ ಪುನ: ತಿಂಡಿಗೋಸ್ಕರ ಬೇಡಿಕೆಯಿಟ್ಟಳು. +“ಸರಿ ನಿನಗೆ ತಿನ್ನಲು ಇಕ್ಕುತ್ತೇವೆ ಆದರೆ ಮೊದಲು ಮನೆಕೆಲಸಗಳನ್ನು ಮಾಡಿ ಕೊಡು” ಅಂದಳು ಅಮ್ಮ, ನಿನ್ನೆಯ ತಂಗಳನ್ನು ಬಿಸಾಕದೆ ಜೋಗಪ್ಪನಿಗೆತ್ತಿಟ್ಟ ಅನ್ನದ ನೆನಪಾಗಿ. ಹಳಸಿದ ಅನ್ನ ಕೊಟ್ಟು ಜೋಗಿಯಿಂದ ಆಶೀರ್ವಾದ ಪಡೆಯುವುದು ಅವಳ ಆಲೋಚನೆ +"ಸಧ್ಯ ದೇವರು ದೊಡ್ಡವನು. ಒಂದು ಕೆಲಸದ ಆಳು ಕಳುಹಿಸಿ ಕೊಟ್ಟಿದ್ದಾನೆ" ಅಂದಳು ಅಲ್ಲೆ ಪರೀಕ್ಷೆಗೆ ಓದುತ್ತಿದ ಆಜ್ರಾ. ಮನೆಕೆಲಸಗಳನ್ನು ಮಾಡಿ ಅವಳು ಸೋತಿದ್ದಳು. ಅದಲ್ಲದೇ ಅವಳ ಶಾಲೆ ಒಂದು ಮೈಲಿ ದೂರ. ಶಾಲೆಯಿಂದ ಅಷ್ಟು ದೂರ ನಡೆದು ಬಂದಮೇಲೆ ಬಟ್ಟೆ ತೊಳೆದು ಬೆನ್ನಿನಲ್ಲಿ ನೋವು ಶುರುವಾಗಿದೆ. +"ಇಲ್ಲಿ ಕೇಳು ಹುಡುಗಿ ನಿನಗೆ ಅಡಿಗೆ ಮಾಡಲು ಬರುತ್ತಾ"? ಅವಳಿಗೆ ಕೆಲಸ ಕೊಟ್ಟು ಸಂಬಳ ಕೊಟ್ಟರೆ ಇದರಿಂದ ನಮಗೆ ಸ್ವಲ್ಪವಾದರೂ ಮೈಯಲ್ಲಿ ಆರಾಮ ಅನಿಸಬೇಕಲ್ಲವಾ?? +ಹುಡುಗಿ ಉತ್ತರಿಸಲಿಲ್ಲ. ಅಮ್ಮನ ಕಡೆ ನೆಟ್ಟ ನೋಟದಿಂದ ನೋಡಿದಳು ಇಂತಹ ಸಲ್ಲದ ಪ್ರಶ್ನೆಗಳಿಗೆ ಉತ್ತರವಿಲ್ಲ ಎಂಬಂತೆ. ಅಡಿಗೆ ಮಾಡಕ್ಕೆ ಸ್ಟವ್ ಬೇಕು. ಎಷ್ಟು ಜನರ ಬಳಿ ಸ್ಟವ್ ಇದೆ?? +"ಮಾಂಸದ ಅಡುಗೆ ಮಾಡಬಹುದೆ” ಕೇಳಿದಳು ಅಜ್ಜಿ. ಇನ್ನು ಅವಳನ್ನು ಪ್ರಶ್ನಿಸುವ ಅಧಿಕಾರ ತನ್ನದು ಎಂಬಂತೆ. +"ಅಜ್ಜಿ ಮಾಂಸದ ಬಗ್ಗೆ ಆಕೆಗೆ ಯಾಕೆ ಕೇಳುತ್ತಿಯಾ, ಆಕೆ ಹಿಂದು ಆಗಿರಬಹುದು”, ಅದಿಲ್ ತನ್ನಜ್ಜಿಗೆ ಹೇಳಿದ. +“ಏನು ಹಿಂದು ವೆ? ಚುರುಕಾದಳು ಅದಿಲ್ ನ ಅಮ್ಮ. ಹುಡುಗಿ ಮೈ ಮೇಲೆ ಬಟ್ಟೆ ಕೂಡ ಸರಿಯಿಲ್ಲ, ಹಿಂದು ಮುಸ್ಲಿಮ್ ಅಂತ ತಿಳಿಯುವುದು ಹೇಗೆ? ಒಳ್ಳೆದಾಯ್ತು ಅದಿಲ್ ನಮ್ಮನ್ನು ಎಚ್ಚರಿಸಿದ್ದು. ಇಲ್ಲದಿದ್ದರೆ ನಮ್ಮ ಮನೆಯ ದೇವರ ಸಾಮಾನೆಲ್ಲ ಅವಳು ಕದಿಯುತ್ತಿದ್ದಳು. +“ನೀನು ಹಿಂದು ವೇನೆ ಹುಡುಗಿ? +“ಹಿಂದು”? ಹುಡುಗಿಯ ದನಿ ಇನ್ನಷ್ಟು ಉಡುಗಿ ಹೋಗಿತ್ತು. +ಏಂಥಹ ದಡ್ಡ ಹುಡುಗಿ ಎಂದಳು ಅಮ್ಮ ನಗುತ್ತ, ಈ ಹುಡುಗಿ ನನಗೆ ಹುಚ್ಚು ಹಿಡಿಸುತ್ತಾಳೆ ಅಷ್ಟೆ. +ಹುಡುಗಿಯ ಬಗ್ಗೆ ನಡೆಯುತ್ತಿದ್ದ ಮಾತುಕತೆ ಒಳಗಡೆ ಪತ್ತೆದಾರಿ ಕತೆ ಓದುತ್ತಿದ್ದ ಹಿರಿಯಣ್ಣನ ಕಿವಿಗೆ ತಲುಪಿತು. ಪುಸ್ತಕ ಬದಿಗಿಟ್ಟು ಅವನು ತನಿಖೆ ನಡೆಸಲು ಹೊರಗೆ ಬಂದ. ಹುಡುಗಿಯನ್ನು ನೋಡಿ ‘ಬರಿ ಮೂಳೆ ಮತ್ತು ವಯಸ್ಸು ಕೂಡ ಚಿಕ್ಕದು’. "ಹುಡುಗಿ ನಿನಗೆ ಹಿರಿಯಕ್ಕ ಇದ್ದರೆ ಅವಳನ್ನೇ ಕಳುಹಿಸು". ಒಂದು ಚೂರು ರೊಟ್ಟಿಗಾಗಿ ಈಕೆ ಏನಾದರೂ ಮಾಡಲು ತಯಾರಿದ್ದರೆ ಆಕೆಯ ಅಕ್ಕ ಕೂಡ ಬೇರೆಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತಾಳೆ ಎಂಬ ದುರಾಲೋಚನೆ ಆತನದ್ದು. +ನನ್ನ ಹಿರಿಯಕ್ಕ!? ಅಂತ ಚಕಿತಳಾಗಿ ಕೇಳಿದಳು ಹುಡುಗಿ ಏನೂ ಅರ್ಥವಾಗದವಳಂತೆ. ಹುಡುಗಿ ಕುಸಿದು ಕೂತು ಇನ್ನೇನೂ ಅಲ್ಲೇ ಮಲಗುವ ಹಾಗೆ ತೋರಿದಳು +ಆಜ್ರಾಗೆ ಆಟ. ಪುಸ್ತಕದಿಂದ ತಲೆ ಎತ್ತಿ ‘ಹೋ ಇವಳು ಇಲ್ಲೇ ಸದಾಕಾಲ ಠಿಕಾಣಿ ಹೂಡುವ ಅಂದಾಜಿನಲ್ಲಿದ್ದಂತೆ ತೋರುತ್ತಾಳೆ" ಅಂದಳು ನಗುತ್ತ. +“ಒಂದೆ ಒಂದು ರೊಟ್ಟಿ” ಹುಡುಗಿ ಪುನ: ಉಚ್ಚರಿಸಿದಳು +“ಮಹಾ ಜಾಣೆ, ರೊಟ್ಟಿ ರೊಟ್ಟಿ ಅಂತಾಳೆ ವಿನಹ: ಕೆಲ್ಸದ ಬಗ್ಗೆ ಚಕಾರ ಎತ್ತುತ್ತಿಲ್ಲ. ಒಂದು ರೊಟ್ಟಿ ಕೊಟ್ಟೆವೆಂದರೆ ಅವಳು ಇಲ್ಲಿಂದ ಮಾಯ ಅಷ್ಟೆ” +ಅಜ್ಜಿಯ ತನಿಖೆ ಮುಂದುವರೆಯುತು. “ಬೇರೆ ಎಲ್ಲಾದರೂ ಕೆಲ್ಸ ಮಾಡಿದ ಅನುಭವ ಉಂಟೋ? ಮನೆಯಲ್ಲಿ ಹೆಚ್ಚು ಕಡಿಮೆಯಾದರೆ ನಿನ್ನ ಕೃತ್ಯಕ್ಕೆ ಯಾರು ಜವಾಬ್ದಾರಿ?” ಯಾರಿಗೊತ್ತು ಆಕೆಗೆ ಕಳ್ಳರ ಜತೆ ಸಂಪರ್ಕ ಇದ್ದು ರಾತ್ರಿ ನಾವು ಮಲಗಿದ್ದಾಗ ಒಳಗಡೆಯಿಂದ ಚಿಲಕ ತೆಗೆದು ಅವರಿಗೆಲ್ಲ ಒಳ ನುಗ್ಗುವ ಅನುವು ಮಾಡಿಕೊಡಬಹುದು” +ಈಗ ಆ ಹುಡುಗಿಯ ಕಣ್ಣುಗಳು ಅತ್ತ ಇತ್ತ ಹಾರಾಡಿ ಅಡುಗೆ ಕೋಣೆಯತ್ತ ಸರಿದವು. ಅಲ್ಲಿಂದ ಬೇಳೆ ಅಕ್ಕಿ ,ಬೇಯುತ್ತಿರುವ ಖಿಚಡಿಯ ಪರಿಮಳ ಬರುತ್ತಿತ್ತು +"ನೋಡು ಆಕೆಯ ಕಣ್ಣುಗಳು ಹೇಗೆ ಮನೆಯೊಳಗೆ ತಿರುಗಾಡುತ್ತಿದ್ದಾವೆ ಆಕೆ ಕಳ್ಳಿನೆ ಸೈ. ಅವಳ ಕಣ್ಣುಗಳಲ್ಲಿನ ಹುಚ್ಚು ಹೊಳಪು ನೋಡಿ" ಅಂದಳು ಮನ:ಶ್ಯಾಸ್ತ್ರದ ವಿದ್ಯಾರ್ಥಿನಿ ಆದ ಆಜ್ರಾ ತಾನು ಮಹಾ ಎಲ್ಲರ ಮನಸ್ಸು ಓದ ಬಲ್ಲವಳಂತೆ +“ರೊಟ್ಟಿ” ಆ ಹುಡುಗಿ ಕೀರಲು ದನಿಯಿಂದ ಮತ್ತೊಮ್ಮೆ ಕೂಗಿಕೊಂಡಲು +ಹುಡುಗಿಗೆ ಮಾತು ಬರಲ್ಲ ಏನೋ ಮಣಮಣಿಸುತ್ತಿದ್ದಾಳೆ +ಅದೇ ಸರಿ ಎಂದ ಅಲ್ಲಿದ್ದ ಹಿರಿಯಣ್ಣ. "ಹಿಂದಿನ ಕೆಲಸದಾಳು ನಸೀಬನ್‍ದು ಎಷ್ಟು ಉದ್ದ ನಾಲಿಗೆ? ನನ್ನ ಬಗ್ಗೆ ಇಲ್ಲಸಲ್ಲದು ಹೇಳಿ ನೆರೆಹೊರೆಯಲ್ಲಿ ತಿರುಗಾಡಿಕೊಂಡಿದ್ದಳು” +“ನಿನಗೆ ತಿಂಗಳಿಗೆ ಏಳು ರೂಪಾಯಿ ಸಂಬಳ ಕೊಡುತ್ತೇನೆ.. ದಿನವಿಡೀ ಕೆಲಸವಿರುತ್ತೆ” +“ಏಳು ರೂಪಾಯಿಗಳೆ? ಹುಚ್ಚುಗಿಚ್ಚು ಏನಾದರು ತಗುಲಿತೆ ಸೊಸೆಯೇ? ಐದು ರೂಪಾಯಿಗಿಂತ ಹೆಚ್ಚು ದಮಡಿಯಿಲ್ಲ’ ಸರಿಯೆನಿಸಿದ್ರೆ ಇರು ಇಲ್ಲದಿದ್ದರೆ ಜಾಗ ಖಾಲಿ ಮಾಡು ‘ಗುಡುಗಿದರು ಅಜ್ಜಿ +ಹುಡುಗಿ ತಲೆಯಲ್ಲಾಡಿಸಿದಳು +ಈಗ ನಿಧಾನವಾಗಿ ಹೊರಗೆ ಬರುವ ಸರದಿ ಅತ್ತಿಗೆಯದು. “ಮಗುವಿನ ಬಟ್ಟೆ ತೊಳಿಬೇಕು, ಪಾತ್ರೆ ಪಗಡಿ ತೊಳಿಬೇಕು, ಮಗುವಿನ ಹಾಲಿನ ಬಾಟಲ್ ಬಿಸಿ ನೀರಿನಿಂದ ತೊಳೆಯಬೇಕು” ಮೊದಲೆ ತನ್ನ ಕೆಲ್ಸಗಳನ್ನು ಹೇಳಿಬಿಟ್ಟರೆ ಆಮೇಲೆ ಕಿರಿಕಿರಿಯಿರುವುದಿಲ್ಲ ಎಂಬುದು ಅತ್ತಿಗೆ ಯ ಆಲೋಚನೆ. +ಹುಡುಗಿ ಬಿಸಿಲಲ್ಲಿ ಕುಳಿತೇ ಇದ್ದಳು ತನ್ನ ತಲೆಯನ್ನು ಮಂಡಿಯೊಳಗೆ ಇಟ್ಟು. +"ಅಮ್ಮ ಆಕೆಗೆ ಗಿಡಗಳಿಗೆ ನೀರು ಹಾಕಲು ಹೇಳು ನಾನು ಪರೀಕ್ಷೆಗೆ ಓದಬೇಕು" ಅಂದಳು ಆಜ್ರಾ +ನಿಮ್ಮಗಳ ಕೆಲ್ಸ ಎಲ್ಲ ಮುಗಿದ ನಂತರ ಆಕೆಯನ್ನು ನನ್ನ ಬಳಿ ಕಳಿಸಿ. ಅವಳಿಂದ ಮೈ ಮಾಲೀಸು ಮಾಡಿಸಿಕೊಂಡು ಸ್ವಲ್ಪ ನಿದ್ರೆನಾದ್ರೂ ಬರುವುದಾ ನೋಡುತ್ತೇನೆ" ಅಂದಳು ಅಜ್ಜಿ +“ಅವಳು ಅಡಿಗೆ ಮಾಡಿದರೆ ನಾನಂತೂ ಊಣ್ಣುವುದಿಲ್ಲ , ಎಷ್ಟು ಗಲೀಜು ಇದ್ದಾಳೆ’ ಅಂದ ಹಿರಿಯಣ್ಣ "ಅವಳಿಗೆ ಹಿರಿಯಕ್ಕ ಇದ್ದಾಳೆಯೇ ಅಂತ ಕೇಳಿ ಯಾರಾದ್ರೂ" +“ನೀನು ಎಲ್ಲಿರುವುದು? ನಿನ್ನ ಮನೆಯೆಲ್ಲಿ?” +“ಏಳು ಏಳು ಕಸ ಗುಡಿಸು" +“ಅಮ್ಮ ಅವಳಿಗೆ ರೊಟ್ಟಿ ಕೊಡು” ಪುನ: ತನ್ನಮ್ಮನಿಗೆ ಹೇಳಿದ ಅದಿಲ್ ಅಲ್ಲಿಂದ ಹೊರ ಹೊರಟ +“ಮೊದಲು ನನ್ನ ಮಾತು ಕೇಳು’ ಅಂದಳು ಅಜ್ಜಿ ನನ್ನ ನಸ್ಯದ ಡಬ್ಬಿ ತೆರೆಯುತ್ತ” ಇಲ್ಲಿ ನಿನ್ನನ್ನು ಬಲ್ಲವರು ಯಾರಿದ್ದಾರೆ? ಏನಾದರೂ ಕಳುವಾದರೆ ನಾವು ಯಾರನ್ನು ಜವಬ್ದಾರರನ್ನಾಗಿಸುವುದು?” +“ತಟ್ಟೆ ಗ್ಲಾಸ್ ಏನಾದರೂ ಮುರಿದರೆ ಅದನ್ನು ನಿನ್ನ ಸಂಬಳದಲ್ಲಿ ಹಿಡಿಯುತ್ತೇವೆ” ಅಮ್ಮನಿಂದ ಬೆದರಿಕೆ +“ಕೆಲಸದ ಬಗ್ಗೆ ಹೇಳಿದ ಕೂಡಲೆ ಹೇಗೆ ನಿಶ್ಚಲಳಾಗಿ ಕೂತಿದ್ದಾಳೆ ಕಳ್ಳಿ” ಅವಳು ಕೆಲ್ಸ ಮಾಡುತ್ತಾಳೆ ಅಂದ್ರೆ ನಿಮ್ಮೆಲ್ಲರ ಭ್ರಮೆ; ರೊಟ್ಟಿ ತೆಗೊಂಡು ಇಲ್ಲಿಂದ ನಡೆದುಬಿಡುತ್ತಾಳೆ ಅಷ್ಟೆ’ +"ಏಳು ಕಸ ಗುಡಿಸು" +"ಮಗುವಿನ ಬಟ್ಟೆ ತೊಳಿ" +ನನ್ನ ಪರವಾನಗಿ ಇಲ್ಲದೆ ಏನನ್ನು ತಿನ್ನ ಬಾರದು +ತಡೀರಿ ನಿಮಗೊಂದು ಆಟ ತೋರಿಸುತ್ತೇನೆ ಅಂದಳು ಆಜ್ರಾ. ಅವಳು ಅಡಿಗೆ ಮನೆಗೆ ಹೋಗಿ ಒಂದು ರೊಟ್ಟಿಯನ್ನು ತಂದು, ಹುಡುಗಿಯ ಬಳಿ ನಡೆದು, ರೊಟ್ಟಿಯನ್ನು ಅವಳ ತಲೆಯ ಮೇಲೆ ಹಿಡಿದಳು. +ಹುಡುಗಿಯಿಂದ ಏನೂ ಪ್ರತಿಕ್ರಿಯೆ ಬರದೆ ಅವಳ ಗದ್ದ ಹಿಡಿದು ಮೇಲೆತ್ತಿದಳು, ಹುಡುಗಿಯ ತಲೆ ನಿರ್ಜೀವವಾಗಿ ಅವಳ ಕೈಯಲ್ಲಿ ವಾಲಿತು +ಆಟಕ್ಕೆ ತೆರೆ ಬಿದ್ದಿತ್ತು +ಮೂಲ ಉರ್ದು: ಜೀಲಾನಿ ಬಾನೋ +ಇಂಗ್ಲಿಷ್: ತಕಿ ಅಲಿ ಮಿರ್ಜ +ಕನ್ನಡಕ್ಕೆ : ಮಾಲತಿ ಶೆಣೈ \ No newline at end of file diff --git a/PanjuMagazine_Data/article_1055.txt b/PanjuMagazine_Data/article_1055.txt new file mode 100644 index 0000000000000000000000000000000000000000..3893efd48ad11a132f2590a7f44007a08023fefa --- /dev/null +++ b/PanjuMagazine_Data/article_1055.txt @@ -0,0 +1,7 @@ +ಮೊನ್ನೆ ನಾನು ಮತ್ತು ನನ್ನ ಫ್ರೆಂಡ್ಸ ಸೇರಿ ನಡುರಾತ್ರಿ ವಿಡಿಯೋಕಾಲ್‍ನಲ್ಲೇ ಒಂದು ಸಣ್ಣ ಚರ್ಚಾಕೂಟ ಏರ್ಪಡಿಸಿದ್ದೆವು. ಹೆಣ್ಮಕ್ಳು ಅಂದ್ರೆ ಮತ್ತೆ ಕೇಳಬೇಕಾ? ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಆದರೆ ಸದಾ ವಟಗುಡುವ ಗೆಳತಿ ಮಾತ್ರ ಬಾಯಿಗೆ ಬೀಗ ಹಾಕಿ ಕೂತಿದ್ದು ನನಗೆ ಸಹಿಸಲಾಗಲಿಲ್ಲ. ಕಾರಣ ಕೇಳಿದಾಗ ಹುಡುಗಿಯರು ಇಲ್ಲಿ ಮಾತನಾಡುವುದಷ್ಟೇ ಬಂತು ಸಮಯ ಬಂದಾಗ ನಾವು ಬಾಯಿ ಬಿಡಲಾರೆವು ಅಲ್ವಾ? ಅಂದಳು. ಲೇ ಎಲ್ಲಾದರೂ ಭೋಧೀ ವೃಕ್ಷದ ಕೆಳಗೆ ಕೂತಿದ್ದಿಯಾ? ಯಾಕೋ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಿ, ಏನ್ ಮ್ಯಾಟರ್ ಮಚ್ಚಿ? ಎಂದೆ. +ಸಣ್ಣ ಧ್ವನಿಯಲ್ಲಿ ತನಗಾದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಳು. ಇತ್ತೀಚೆಗೆ ಅವಳು ಊರಿನಿಂದ ರಾತ್ರಿ ಬಸ್‍ಲ್ಲಿ ಬರುವಾಗ ಇವಳ ಸೀಟಿನ ಪಕ್ಕ ಯಾರೋ ಒಬ್ಬ ಹುಡುಗ ಬೇಕೆಂದೆ ಭುಜಕ್ಕೆ ಒರಗುವುದು. ಮೈ ಸೋಕಲು ಪ್ರಯತ್ನಿಸುವುದು ಮಾಡುತ್ತಿದ್ದನಂತೆ. ಬಸ್ ಬೇರೆ ಸಿಕ್ಕಾಪಟ್ಟೆ ರಶ್ ಇದ್ದದ್ದರಿಂದ ಸೀಟು ಬದಲಾಯಿಸಿ ಕೊಳ್ಳುವ ಪ್ರಮೇಯವೇ ಇರಲಿಲ್ಲ. ಒಂದೆರಡು ಬಾರಿ ಬೈದರೂ ಅ ಹುಡುಗ ಸಾರೀ ನಿದ್ದೆಗಣ್ಣಲ್ಲಿ ಗೊತ್ತಾಗಿಲ್ಲ ಎನ್ನುತ್ತ ಮತ್ತೆ ತನ್ನ ಹಳೆಯ ಚಾಳಿ ಮುಂದವರೆಸುತ್ತಿದ್ದನಂತೆ. ಟಿಕೇಟ್ ತೆಗೆಯುವಾಗ ಕಂಡಕ್ಟರ್ ಬಳಿ ದೂರು ನೀಡೋಣ ಎಂದುಕೊಂಡರೆ ಅವನು ಟಿಕೇಟ್ ನೀಡುವಾಗ ಮೇಲಿಂದ ಕೆಳಗೆ ನೋಡಿ, ಹಣ ಪಡೆಯುವಾಗ ಬೇಕೆಂದೇ ಕೈ ಮುಟ್ಟಿದ, ಚಿಲ್ಲರೆಯಿದ್ದರೂ ಕೊಡದೇ ಆಮೇಲೆ ಕೊಡುತ್ತೇನೆಂದು ಹೇಳಿದಾಗ ಇವಳಿಗೆ ಅವಳಿಗೆ ಅವನಿಗೆ ಹೇಳಿ ಏನೂ ಪ್ರಯೋಜನವಿಲ್ಲ ಎನಿಸಿಬಿಟ್ಟಿತ್ತು. ಇಡೀ ರಾತ್ರಿ ಆ ಹುಡುಗನ ಕಾಟಕ್ಕೆ ನಿದ್ದೆ ಇಲ್ಲ. ಪ್ರತಿ ಸ್ಟಾಪ್‍ಗೂ ಅವನು ಇಲ್ಲೇ ಇಳಿದುಹೋಗಬಾರದೇ ಎನಿಸುತ್ತಿತ್ತು ಎಂದಳು. +ಇವಳು ಹೇಳಿ ಮುಗಿಸುವಲ್ಲಿ ಬಾಯಿ ತೆರೆದ ಇನ್ನೊಬ್ಬಳು ಈ ದರಿದ್ರ ಹುಡುಗರೇ ಹೀಗೆ ಮೊನ್ನೆ ಲೈಬ್ರರಿಗೆ ಹೋಗುವಾಗ ಇಡೀ ರೋಡು ಖಾಲಿಯಿದ್ದರೂ ಬೇಕೆಂದೇ ಬೈಕ್‍ನನ್ನ ಮೇಲೆ ಹಾಯಿಸುವಂತೆ ಹೆದರಿಸಿದ. ಅಂದಿನಿಂದ ನನಗೆ ಆ ದಾರಿಯಲ್ಲಿ ಒಬ್ಬಳೇ ಅಡ್ಡಾಡಲು ಭಯ. ಅಷ್ಟೇ ಅಲ್ಲ ನನ್ನ ಫ್ರೆಂಡ್ ಬರುವಾಗ ಒಬ್ಬ ಅವಳ ದುಪಟ್ಟಾವನ್ನು ಎಳೆದಿದ್ದರಂತೆ, ಅವಳಂತೂ ಪಾಪ ಹೆದರಿ ಎರಡು ವಾರ ಕಾಲೇಜು ಬಿಟ್ಟಿದ್ದಳು. ಹೆಲ್ಮೆಟ್ ಹಾಕಿಕೊಂಡವನು ಯಾರು ಎಂದು ತಿಳಿಯಲಿಲ್ಲ. ಒಂದು ವೇಳೆ ತಿಳಿದರೂ ನಾವು ಜಾಸ್ತಿಯೆಂದರೆ ಅವನನ್ನು ಬೈಯಬಹುದು. ಅಷ್ಟೇ ಮನೆಯಲ್ಲಿ ಹೇಳಿದರೆ ವಿಷಯ ಇನ್ನಷ್ಟು ದೊಡ್ಡದಾಗಬಹುದು. ಅದರಿಂದ ನಮಗೆ ಇನ್ನಷ್ಟು ರಿಸ್ಟ್ರಿಕ್ಷನ್ಸ್ ಹೆಚ್ಚಾಗುತ್ತವೆ. ಕಾಲೇಜಿನಲ್ಲಿ ಕಂಪ್ಲೇನ್ಟ್ ಮಾಡಿದರೂ ನಾವೇ ಟಾರ್ಗೆಟ್ ಆಗ್ತೀವಿ. ಜನ ಅಯ್ಯೋ ಹಾಗಾಯ್ತಾ? ಎಂದು ಒಣ ಸಾಂತ್ವಾನ ನೀಡುವ ನೆಪದಲ್ಲಿ ಊರುತುಂಬಾ ಸುದ್ದಿಯನ್ನು ಹಬ್ಬಿಸಿ ಬಿಡುತ್ತಾರೆ ನಾಳೆ ನಾವೇ ಇದರಿಂದ ತಲೆಯೆತ್ತಿ ಓಡಾಡಲು ಆಗುವುದಿಲ್ಲ ಅದಕ್ಕೆ ಸುಮ್ಮನಿರುವುದೇ ಒಳ್ಳೆಯದು ಎಂದಳು. +ಇಂತಹ ಘಟನೆಗಳು ಕೇವಲ ನನ್ನ ಅಥವಾ ನನ್ನ ಗೆಳತಿಯರ ಜೀವನದಲ್ಲಷ್ಟೇ ಆಗಿರುವುದಲ್ಲ. ಪ್ರತಿಯೊಬ್ಬ ಹುಡುಗಿಯೂ ಇವನ್ನು ಅನುಭವಿಸಿರುತ್ತಾಳೆ. ಡುಮ್ಮಿ, ಕಡ್ಡಿ, ಕುಳ್ಳಿ, ಒಂಟೆ, ಕರಿಯಮ್ಮ, ಬಿಳಿಜಿರಲೆ ಎಂದು ಅನ್ವರ್ಥಕ ನಾಮಗಳಿಂದ ಸಂಬೋಧಿಸುವುದು, ಹುಡುಗಿಯರ ಸಾಮಥ್ಯವೇ ಇಷ್ಟು ಅಡುಗೆಮನೆ ನೋಡಿಕೊಳ್ಳಲೇ ನೀವು ಲಾಯಕ್ಕು ಇಂತಹ ಫೇಮಸ್ ಡೈಲಾಗುಗಳು, ದೇಹದ ಅಂಗಾಂಗಗಳ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡುವುದು ಇತ್ಯಾದಿ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಸ್ವಂತಿಕೆ ಅಸ್ಥಿತ್ವ ಹುಡುಕಿಕೊಳ್ಳಲು ಯತ್ನಿಸುವ ಮಹಿಳೆಯರ ಆತ್ವವಿಶ್ವಾಸಕ್ಕೆ ಆ್ಯಸಿಡ್ ಎರಚಿದಂತೆ. ಅತ್ಯಾಚಾರದಂತಹ ಹೇಯ ಕೃತ್ಯಗಳಿಗೆ ಶಿಕ್ಷೆ ನೀಡಲು ವರ್ಷಗಳೇ ಬೇಕಾಗಿರುವ ಇಂದಿನ ವ್ಯವಸ್ಥೆಯಲ್ಲಿ ಇವೆಲ್ಲ ವಿಷಯಗಳು ನಗಣ್ಯ ಎನಿಸುತ್ತವೆ. ಇನ್ನೂ ಮಹಿಳೆಯರೇ ಕಾಲೇಜು, ರಸ್ತೆ, ಮನೆ, ಕಾರ್ಯಾಲಯಗಳಲ್ಲಿ ಮಾನಸಿಕ ಶೋಷಣೆಯನ್ನು ಎದುರಿಸುತ್ತಿದ್ದರೂ ಅವೆಲ್ಲಾ ನಾರ್ಮಲ್ ಎನ್ನುವಂತೆ ಸುಮ್ಮನಿರುವುದು ಇಂತಹ ಚಟುವಟಿಕೆಗಳನ್ನು ಇನ್ನೂ ಪ್ರೋತ್ಸಾಹಿಸುತ್ತಿದೆ. +ಇಡೀ ದಿನ ಟಿಕ್-ಟಾಕ್ ಮಾಡುವ ಬದಲು ಯಾವುದೇ ರೀತಿಯಿಂದ ನಮಗೆ ಶೋಷಣೆಯಾಗುತ್ತಿದೆ ಎನಿಸಿದರೆ ಕೂಡಲೇ ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ಸಾಧ್ಯವಿಲ್ಲವೇ? ಇದು ಎಷ್ಟೋ ಪ್ರಕರಣದಲ್ಲಿ ಪುರಾವೆಯಾಗಬಲ್ಲದು. ಸಮಾಜದಲ್ಲಿ ಜಾಗೃತಿ ಮೂಡಿಸಬಲ್ಲದು. ನಮಗಾಗುತ್ತಿರುವ ಕಿರುಕುಳವನ್ನು ಖಂಡಿಸಿ ಪ್ರತಿಭಟಿಸಲು ನಮ್ಮಿಂದಲೇ ನಿರ್ಮಾಣವಾದ ಸಮಾಜದ ಭಯವೇಕೆ? ಅನ್ಯಾಯವನ್ನು ಸಹಿಸುವುದು ನಮ್ಮ ಸಂಸ್ಕಾರವಲ್ಲ. ಶೋಷಣೆಯ ವಿರುದ್ಧ ಧ್ವನಿಯೆತ್ತುವ ಆತ್ಮವಿಶ್ವಾಸವನ್ನು ತುಂಬುವುದು, ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗುವುದೇ ಸಂಸ್ಕಾರ. +ಅಂದು ಮಹಿಳೆಯರಿಗೆ ಹಲವಾರು ಕಟ್ಟುಪಾಡುಗಳನ್ನು ವಿಧಿಸಲಾದರೂ ಕಿತ್ತೂರು ಚೆನ್ನಮ್ಮ, ಓಬವ್ವ, ರಾಣಿ ಲಕ್ಷ್ಮೀಬಾಯಿಯಂತಹ ವೀರ ಮಹಿಳೆಯರು ತಮ್ಮ ದೇಶಕ್ಕಾಗಿ ಹೋರಾಡುವ ಧೈರ್ಯ, ಸಾಮಥ್ರ್ಯ ತೋರಿದ್ದರು. ಬದಲಾದ ಆಧುನಿಕ ದಿನಮಾನಗಳಲ್ಲಿ ಶಿಕ್ಷಣ, ಉದ್ಯೋಗ ಪಡೆದ ಮಹಿಳೆಯರು ತಮಗಾಗಿ, ತಮ್ಮ ಸ್ವಾಭಿಮಾನಕ್ಕಾಗಿ ಹೋರಾಡಲು ಧ್ವನಿಯೆತ್ತಬೇಕು. ಮಾನಸಿಕ ಕಿರುಕುಳ ಕೊಡುವುದರಿಂದ ಸಾಧಿಸುವುದಾದರೂ ಏನು? ಇಂತಹ ವಿಕೃತಿಯನ್ನು ಕೈಬಿಟ್ಟು ಸಂವಿಧಾನಕ್ಕೆ ಸೀಮಿತವಾದ ಸಮಾನತೆ, ಸ್ವಾತಂತ್ರ್ಯ ಸಮಾಜದಲ್ಲೂ ಕಾಣಬೇಕು. ಇದಕ್ಕಾಗಿ ಪುರುಷ ಮಹಿಳೆಯೆಂಬ ಬೇಧವಿಲ್ಲದೇ ಪ್ರತಿಯೊಬ್ಬರೂ ಕೈ ಜೋಡಿಸೋಣ. ನೆನಪಿರಲಿ ಬದಲಾವಣೆಯ ಆರಂಭ ನಮ್ಮಿಂದಲೇ ಸಾಧ್ಯ. +–ಪ್ರೀತಿ ಕಾಮತ್ \ No newline at end of file diff --git a/PanjuMagazine_Data/article_1056.txt b/PanjuMagazine_Data/article_1056.txt new file mode 100644 index 0000000000000000000000000000000000000000..3fb895ae4e4c6b514ba114f5c7621fc70d9fa8e4 --- /dev/null +++ b/PanjuMagazine_Data/article_1056.txt @@ -0,0 +1,11 @@ +ಸ್ವಾತಂತ್ರ್ಯಪೂರ್ವದಲ್ಲಿ ಜಗತ್ತಿನ ಬಹಳ ದೇಶಗಳಿಗೆ ಭಾರತದ ಧರ್ಮ, ಸಂಸ್ಕೃತಿಯ, ಉದಾತ್ತ ಗುಣಗಳ ಪರಿಚಯವೇ ಆಗಿರಲಿಲ್ಲ, ಆಗಲು ಸಾಧ್ಯವಿರಲಿಲ್ಲ! ಭಾರತಕ್ಕೆ ಸ್ವಾಯತ್ತತೆ ಇರದಿದ್ದರಿಂದ, ಬ್ರಿಟಿಷರೇ ಭಾರತವನ್ನು ಪ್ರತಿನಿಧಿಸುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅವರ ಆಡಳಿತ ಇರುವಾಗಲೇ ಆ ಇಬ್ಬರು ಮಹಾನ್ ವ್ಯಕ್ತಿಗಳು, ಜಗತ್ತು ಕತ್ತೆತ್ತಿ ನೋಡುವಂತೆಯೂ, ನಿಬ್ಬೆರಗಾಗಿ ನಿಲ್ಲುವಂತೆಯೂ, ಭಾರತದ ಮಾನವೀಯತೆಯನ್ನು ಗುರುತಿಸುವಂತೆಯೂ, ಜಗತ್ತು ತನ್ನಷ್ಟಕ್ಕೆ ತಾನು ಎದ್ದು ನಿಂತು ತಲೆ ಬಾಗಿ ನಮಿಸುವಂತೆ, ಕೈಗಳು ತಮ್ಮಷ್ಟಕ್ಕೆ ತಾವೇ ಭಾರತವನ್ನು ವಂದಿಸುವಂತೆ ಮಾಡಿದರು. ಜನವರಿಯಲ್ಲೇ ಆ ಇಬ್ಬರಲ್ಲಿ ಒಬ್ಬರದು ಜಯಂತಿ, ಮತ್ತೊಬ್ಬರದು ಪುಣ್ಯ ಸ್ಮರಣೆ! +ಭಾರತಕ್ಕೆ ವಿಶಿಷ್ಟ ಸಂಸ್ಕೃತಿ, ಪುರಾತನ ಶ್ರೇಷ್ಟ ನಾಗರೀಕತೆ, ಮಹಾನ್ ಉಧಾತ್ತ ಭಾವಗಳು ಇವೆ ಎಂದು, ಭಾರತ ಋಷಿ, ಮುನಿ, ಸಾಧು, ಸಂತರ, ಆಧ್ಯಾತ್ಮ ಜೀವಿಗಳ, ಆತ್ಮೋದ್ಧಾರವೇ ಜೀವನದ ಉದ್ಧೇಶ ಇರುವವರ ನಾಡೆಂದು ವಿಶ್ವದ ಅನೇಕ ರಾಷ್ಟ್ರಗಳಿಗೆ ತಿಳಿದಿರಲಿಲ್ಲ! ಎಷ್ಟೋ ರಾಷ್ಟ್ರಗಳಿಗೆ ಭಾರತ ಎಂಬ ಮಹಾನ್ ರಾಷ್ಟ್ರ ಇದೆ ಎಂದೂ ತಿಳಿದೇ ಇರಲಿಲ್ಲ! ಅಂತಹ ಭಾರತವನ್ನು ವಿಶ್ವಮಟ್ಟದಲ್ಲಿ ಗೌರವಕ್ಕೆ ಮೊದಲು ಭಾಜನವಾಗುವಂತೆ ಮಾಡಿದ್ದು ಆ ಮಹಾನ್ ವ್ಯಕ್ತಿಗಳಲ್ಲಿ ಒಬ್ಬ ವೀರ ಸನ್ಯಾಸಿ. ಜಗತ್ತಿನ ಬಹಳ ರಾಷ್ಟ್ರಗಳಿಗೆ ಆ ಒಂದು ದಿನ ಬೆಳಕಾಗುವುದರೊಳಗೆ ಹಿಂದೂ ಧರ್ಮವನ್ನೂ, ಭಾರತದ ಸಂಸ್ಕೃತಿಯನ್ನೂ, ಉದಾತ್ತತೆಯನ್ನು ವಿಶ್ವದ ಅಂತರಾತ್ಮವನ್ನು ಹೊಗುವಂತೆ ಮಾಡಿ ಭಾರತವನ್ನೂ ವಿಶ್ವಮಾನ್ಯ ಮಾಡಿದುದಲ್ಲದೆ, ಒಂದು ದಿನ ಹಿಂದೆ ದಿಕ್ಕೆಟ್ಟವರೂ, ಅಜ್ಞಾತರೂ, ಅನಾಥರೂ, ಬಿಕ್ಷುಕರೂ ಆಗಿದ್ದವರು ವಿಶ್ವ ವಿಖ್ಯಾತರಾದರು. +೧೮೯೩ ರರ ಸೆಪ್ಟೆಂಬರ್ ೧೧ ರಂದು, ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಆ ವೀರ ಸನ್ಯಾಸಿ ಆ ಸಭೆಯನ್ನುದ್ದೇಶಿಸಿ ಕೊಟ್ಟ ಕೊನೆಯಲ್ಲಿ ಮಾಡಿದ ಪುಟ್ಟ , ದಿಟ್ಟ ಭಾಷಣವೇ ಇಷ್ಟೆಲ್ಲಾ ಚಮತ್ಕಾರಕ್ಕೆ, ಭಾರತದ ಕೀರ್ತಿ ಪತಾಕೆ ವಿಶ್ವಮಟ್ಟದಿ ಹಾರಾಡಲು ಕಾರಣವಾದದ್ದು. +ಇಂತಹ ಗೌರವಕ್ಕೆ ಪಾತ್ರವಾಗುವಂತೆ ಮಾಡಿದ್ದು ಆ ಸನ್ಯಾಸಿ ಸಭೆಯನ್ನು ಉದ್ದೇಶಿಸಿದ ರೀತಿ. ಅಪರಿಚಿತ ಪರಕೀಯರನ್ನು, ಸ್ವಕೀಯರಂತೆ, ಹತ್ತಿರದ ಸಂಬಂಧೀಕರಂತೆ ಸಹೋದರ, ಸಹೋದರಿಯರೇ ಎಂದು ಸಂಬೋಧಿಸಿದ್ದು, ಸಾಗರದೋಪಾದಿಯಲ್ಲಿ ನೆರೆದಿದ್ದ ಕೇಳುಗರನ್ನು ೨ – ೩ ನಿಮಿಷದ ವರೆಗೆ ಕರತಾಡನದಲ್ಲಿ ಮುಳುಗಿಸಿದ್ದು, ನಂತರ ಧರ್ಮವನ್ನು ವ್ಯಾಖ್ಯಾನಿಸಿದ ರೀತಿ : ಎಲ್ಲಾ ಧರ್ಮಗಳ ಗುರಿ ಒಂದೆ. ಎಲ್ಲಾ ಧರ್ಮಗಳು ಸಮಾನ. ಯಾವುದೇ ದೇವರು, ಧರ್ಮ ಉನ್ನತವಾದುದೂ ಅಲ್ಲ, ಕೀಳಾದುದೂ ಅಲ್ಲ ಎಂದು ಹೇಳಿ ನಮ್ಮ ಧರ್ಮವೇ ಮೇಲು, ಇತರರ ಧರ್ಮ ಕೀಳೆಂಬ ಪಲ್ಲವಿಗೆ ಅಂತ್ಯ ಹಾಡಿದ ಆ ಉದಾರವಾಣಿ. ಕಂಚಿನ ಕಂಠದಿಂದ ನೆರೆದವರೆಲ್ಲಾ ಒಪ್ಪುವಂತೆ ದೇವರು ಮತ್ತು ಧರ್ಮವನ್ನು ವಿವರಿಸಿದರು ಮುಖ್ಯವಾಗಿ ಎಲ್ಲರಿಗೂ ಧರ್ಮ ಅಗತ್ಯವಾದುದೆಂಬುದನು ಸಾರಿ, ಮನದಟ್ಟು ಮಾಡಿದುದು. ಅವರ ಆಕರ್ಷಕ ವ್ಯಕ್ತಿತ್ವ, ಯಾವ ಧರ್ಮದಲೂ ತರತಮ ಎಣಿಸದ ವೈಶಾಲ್ಯತೆ. ಅವರ ಕಂಚಿನ ಕಂಠ, ಮಾತಿನ ರೀತಿ ಮತ್ತು ವಾಕ್ ಸಿರಿ. +ಕೇವಲ ೧೫ ನಿಮಿಷ ಮಾತನಾಡಿ ದೊಡ್ಡ ಖ್ಯಾತಿಗೆ ಭಾಜನರಾದ ಆ ಸನ್ಯಾಸಿ ಆ ಸಮ್ಮೇಳನದಲ್ಲಿ ಉಪನ್ಯಾಸ ನೀಡುತ್ತಿರುವವರಲ್ಲಿ ಅತ್ಯಂತ ಕಿರಿಯ ಪ್ರತಿನಿಧಿಯಾಗಿದ್ದರು. ಜಗತ್ತಿನ ಮೂಲೆ ಮೂಲೆಗೂ ಭಾರತೀಯ ಧರ್ಮ, ಸಂಸ್ಕೃತಿ, ಉದಾತ್ತ ಗುಣಗಳನು ತಲುಪಿಸಿದರು. ರಾಮಕೃಷ್ಣ ಮಿಷನ್ ಅನ್ನು ಅನೇಕ ದೇಶಗಳಲ್ಲಿ ಸ್ಥಾಪಿಸಿ ಹಿಂದೂ ಧರ್ಮ, ಸಂಸ್ಕೃತಿ, ರಾಮಕೃಷ್ಣರ ವಿಚಾರಗಳನ್ನು ವಿವರಿಸಿದರು. ವಿವರಿಸಲು ಅನುಕೂಲಿಸಿದರೂ, ಇಂದಿಗೂ ಆವು ಆ ಕೆಲಸ ಮಾಡುತ್ತಿವೆ. ಅವರ ಚಿಂತನೆಗಳು ದೇಶದ ಉದ್ದಾರ , ವಿಶ್ವದ ಎಲ್ಲಾ ಮಾನವರ ಆತ್ಮೋದ್ದಾರದ ಬಗ್ಗೆ ಆಗಿದ್ದವು. ಹೀಗೆ ವಿಶ್ವದ ಮಾನವರ ಆತ್ಮೋದ್ಧಾರದ ಬಗ್ಗೆ ಶ್ರಮಿಸಿ, ಭಾರತೀಯತೆಯ ಉದಾತ್ತತೆಯ ಪರಿಮಳ ಪ್ರಪಂಚದಾದ್ಯಂತ ಪಸರಿಸಿ ನಲವತ್ತು ವರುಷ ತುಂಬುವ ಮುನ್ನವೆ ಹಿಂದಕೆ ಬರಲಾಗದ ಸ್ಥಳವ ತಲುಪಿದ. +ಅನ್ಯ ರಾಷ್ಟ್ರದ ವಸಹಾತುಗಳಾಗಿದ್ದ ರಾಷ್ಟ್ರಗಳೆಲ್ಲ ಹೋರಾಡಿ ರಕ್ತ ಸುರಿಸಿ ಸ್ವತಂತ್ರವಾದವು. ಭಾರತ ಮಾತ್ರ ಸುದೀರ್ಘ ಕಾಲ ಸ್ವಾತಂತ್ರ್ಯಕೆ ಹೋರಾಡಿದರೂ ಕೋಟಿಗಟ್ಟಲೆ ಮಾನವರ ಸಾವು, ನೋವ ತಡೆದು, ರಕ್ತ ಹರಿಸದೆ, ಅಹಿಂಸೆಯಿಂದ ಸ್ವತಂತ್ರವಾಯಿತು. ಇದ ಕಂಡು ವಿಶ್ವವೇ ಬೆರಗಾಯಿತು. ಇದರಿಂದ ಭಾರತ ವಿಶ್ವಮಾನ್ಯವಾಯಿತು. ವಿಶ್ವವೇ ತಲೆಬಾಗಿ ವಂದಿಸಿತು! ಇದರ ಮುಖ್ಯ ಕಾರಣಕರ್ತ ಲೋಕಮಾನ್ಯನಾದ. +ಈ ಘಟನೆಗೆ ಕಾರಣವಾದದ್ದು ಸ್ವಾತಂತ್ರದ ಹೋರಾಟದ ಅಭಿಯಾನಕೆ ಮುಂದಾಳುವಾದ, ಸತ್ಯಾಗ್ರಹ, ಅಸಹಕಾರ, ಅಹಿಂಸಾ …. ವ್ರತಗಳ, ಚಳುವಳಿಗಳ ಹರಿಕಾರನಾದ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಹೋರಾಟ. ಅಸ್ತ್ರಗಳನೇ ಬಳಸದೆ, ರಣಕೆ ಧುಮುಕದೆ ಯುದ್ದ ಗೆದ್ದ ಮಹಾತ್ಮನ ನಿರಂತರ ಅವಿರತ ಅಹಿಂಸಾ, ಶಾಂತ ಯುದ್ದ! ದೇಶದ ಉದ್ದಗಲ ವಿಶ್ರಮಿಸದೆ ಓಡಾಡಿ, ಅನೇಕತೆಯ ಬೇಧ ಭಾವ ತೊಡೆದು, ನಾವೆಲ್ಲರೊಂದೆಂಬ ಏಕತೆಯ ಮೂಡಿಸಿ, ದೇಶವ ಒಗ್ಗೂಡಿಸಿ, ದೇಶಪ್ರೇಮವ ತುಂಬಿ, ವಿಧ ವಿಧದಿ ಹೋರಾಡಿ, ಚಳುವಳಿಗಳ ಹೂಡಿ, ಉಪವಾಸ ಸತ್ಯಾಗ್ರಹ ಮಾಡಿ, ಅಹಿಂಸಾ ಮಾರ್ಗದಿ ಸ್ವಾತಂತ್ರದ ಹೋರಾಟದಿ ಹಿಂದಡಿಯಿಡದ, ವಿಶ್ರಮಿಸದ ವೀರಯೋಧನ ಛಲ ಬಿಡದ ಹೋರಾಟ ! ಆಂಗ್ಲರ ಅಹಿಂಸಾ ಮಂತ್ರದಿಂದ ಮಣಿಸಿದ, ಭಾರತದ ದಾಸ್ಯದ ಸಂಕೋಲೆ ಕಳಚಿ ವಿಶ್ವವೇ ಬೆರಗಾಗುವಂತೆ ಮಾಡಿ, ವಿಶ್ವವಿಖ್ಯಾತನಾದ ಶಾಂತಿಪ್ರಿಯ. ಮಾನವ ಪ್ರೇಮಿಯ ಲೋಕ ಪ್ರೀತಿ ! +ದಕ್ಷಿಣ ಆಪ್ರಿಕದ ಕಗ್ಗತ್ತಲೆ ಬೆಳಗಲು ನಾಂದಿ ಹಾಡಿದ್ದ ಶೋಷಿತರ ಸಹೋದರ, ವಿಶ್ವಕತಿ ಪ್ರಬಲ ಅಹಿಂಸಾ ಅಸ್ತ್ರವನ್ನು ನೀಡಿ, ಭಾರತದ ದಾಸ್ಯ ಸಂಕೋಲೆಯನ್ನು ಕಳಚಿ, ತಪ್ಪು ಗ್ರಹಿಕೆ ಗುಂಡಿಗೆ ಬಲಿಯಾದ, ಆಗಲೂ ಅಹಿಂಸ ಮಂತ್ರ ಪಠಿಸಿದ, 30 – 01 – 1948 ರಂದು ವಿಶ್ರಮಿಸಿದ, ವಿಶ್ರಮಿಸದ ವೀರ ಯೋಧ! +ಬಯೋತ್ಪಾದನೆ, ಉಗ್ರರ ಅಟ್ಟಹಾಸ, ನಕ್ಸಲರ ಕ್ರೂರತೆ, ಧರ್ಮ ಪ್ರಾಯೋಜಿತ ಬಯೋತ್ಪಾದನೆ, ಭ್ರಷ್ಟಾಚಾರ, ಹಿಂಸೆ, ಕೊಲೆ, ಆಧುನಿಕ ಒತ್ತಡದ ನೆಮ್ಮದಿರಹಿತ ಬದುಕು ವಿಜೃಂಭಿಸಿ ಮಾನವ ನೆಮ್ಮದಿಗಾಗಿ ಅಲೆಯುತ್ತಿರುವ ಈ ಸಂದರ್ಭದಲ್ಲಿ ಈ ಘಟನೆಗಳಿಗೆ ಸಂಬಂಧಿಸಿದ ಮಹಾನ್ ಸಾಧಕರ ಆತ್ಮೋದ್ಧಾರದ ವಿಚಾರಗಳು, ಅಹಿಂಸಾ ತತ್ವ ಸತ್ಯ, ಮಾನವ ಪ್ರೇಮ ಮಾನವನ ನೆಮ್ಮದಿಯ ಬದುಕಿಗೆ ಆಸರೆ ಆಗುವುದರಿಂದ ಇವರ ನಡೆಗಳು ಹಿಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತವೆನಿಸುತ್ತಿವೆ. ಜನರ ನೆಮ್ಮದಿಗೆ ಕಾರಣವಾಗುತ್ತಿವೆ! +ಕೆ ಟಿ ಸೋಮಶೇಖರ ಹೊಳಲ್ಕೆರೆ, + \ No newline at end of file diff --git a/PanjuMagazine_Data/article_1057.txt b/PanjuMagazine_Data/article_1057.txt new file mode 100644 index 0000000000000000000000000000000000000000..dde0653cb98533d37eba69e6f13cf8057b78a9c6 --- /dev/null +++ b/PanjuMagazine_Data/article_1057.txt @@ -0,0 +1,154 @@ +ಬೆನ್ನುಬಿದ್ದ ಕರಾಳರಾತ್ರಿಯ ದಿನಚರಿ +ಅಂದು ಮಧ್ಯಾಹ್ನದ ಕಡು ಬಿಸಿಲಿನಲ್ಲಿ +ಹಜ್ಜೆಗಳ ಪಕ್ಕ ಹೆಜ್ಜೆಗಳನ್ನು ಇರಿಸಿ +ಎಲ್ಲ ಪ್ರೇಮಿಗಳ ಉದಾಹರಣೆಯೊಂದಿಗೆ +ಊರ ಮಧ್ಯ ಹೋಗುತ್ತಿದ್ದರೆ; +ಯಾರೋ ಬೊಗಳಿದಂತೆ +ಅಂಜುವ ಮಾತಿಲ್ಲ, ಆದರೆ ಸ್ವಲ್ಪ ಕಸಿವಿಸಿ +ಲೋಕದಲ್ಲಿ ನಾಯಿಗಳು ಬೊಗಳುವದು ಸಹಜ +ಅಂಜುವದೇಕೆ…? +ಮುಂದೆ ಮುಂದೆ ಹೆಜ್ಜೆ ಹಾಕಿ, +ಹಿಂದೆ ಹಿಂದೆ ನೋಡಿದಷ್ಟು +ಗಾಢವಾದ ಭಯವು ಬೆನ್ನು ಏರಿ ಕುಳಿತಿದೆ +ಪಕ್ಕದಲ್ಲಿ ಪ್ರೇಮಜ್ವಾಲೆ ಉರಿಯುವಾಗ +ಯಾವ ಭಯವು ಎಷ್ಟು ಗಟ್ಟಿಗೊಳ್ಳುವದು +ಕಗ್ಗತ್ತಲು ಆವರಿಸಿದ ಈ ವರ್ತುಲದಲ್ಲಿ +ಎಲ್ಲವೂ ಅಡಕವಾಗಿವೆ +ಸಾಕ್ಷೀಕರಿಸಲು ನಮ್ಮಿಬ್ಬರ ಕಣ್ಗಳ +ಕ್ಷಿತಿಜಗಳು ಸೋಲುತ್ತಿವೆ +ದಪ್ಪನೆಯ ಕತ್ತಲೀಗ ಸ್ವಾಹಿಸಿ ರಾತ್ರಿ ಮಾತ್ರ +ನಿಟ್ಟುಸುರಿನಿಂದ ಬೀಗುತ್ತಿದೆ….! +ನನ್ನ ಭಯವನ್ನು ನಿನ್ನ ಕಂಗುಳಲಿ +ನಿನ್ನ ಭಯವನ್ನು ನನ್ನ ಹೆಗಲಿಗೆ ಹಾಕಿ, +ತಳ್ಳುತ್ತಾ ನೂಕುತ್ತಾ ತಬ್ಬಿಕೊಳ್ಳುತ್ತಾ ಸಾಗಬೇಕಿತ್ತು +ನಾಯಿ ಬೊಗಳಿ,ನಾಲ್ಕು ಹೆಜ್ಜೆ ಹಿಂದೆ ಬಂದೆವು +ನೆಲದ ಮೇಲೆ ಮೂಡಿದ ಸೂತಕವನ್ನು +ಇಬ್ಬರೂ ಒಪ್ಪಿಕೊಳ್ಳದಿದ್ದರೂ +ತಪ್ಪುಗಳು ಸಮಪಾಲ್ಗೊಳ್ಳುತ್ತವೆ +ಕಗ್ಗತ್ತಲು ತುಂಬಿದ ಹೊತ್ತನ್ನು +ನೀನೊಬ್ಬಳೇ ಭವ್ಯಪ್ರೇಮಬೆಳಕು ಪಸರಿಸಿ +ಚದುರಿಸಬಹುದಿತ್ತು;ತಲೆ ಕೊಡವಿದೆ +ಮತ್ತೆ ಬೆಳಕನರಸಿ ಬೆಳಕಿನಡೆಗೆ ಸಾಗುತ್ತಲೇ +ಬೊಗಳುವ ನಾಯಿ ಕಂಡು ಬೆಚ್ಚಗಾದೆ +ಅಲ್ಲಿಯೂ ಕತ್ತಲೆ ರಾಜ್ಯಕಟ್ಟಿ ನರಳುತ್ತಿತ್ತು. +–ಪ್ಯಾರಿಸುತ (ಆರ್.ಎನ್. ದರ್ಗಾದವರ) +ಭವ -ಬವಣೆ +ಹೇ ದೇವಾ… ಭವ -ಬವಣೆಯ ಹರಿಕಾರ +ಏಕಾಗಿ ಬಿಟ್ಟಿರುವೆ ತನುವ ! +ನನ್ನದೆನ್ನುವುದು ಮರೀಚಿಕೆಗೆ ಬಾಯಾರಿರುವಾಗ +ಕೊಟ್ಟು -ಕೇಳುವ ಪರಿಯ ದಿರಿಸೇನು +ಶೈಶವ -ಹರೆಯಗಳ ಅರಿವಿಲ್ಲದ ಕನವರಿಕೆ +ಅರಿತು ಬೆರೆಯುವಾಗ ನೀ ಎಡೆಗೊಡುತ್ತಿಲ್ಲ +ತಪ್ಪು ಒಪ್ಪಿನ ಜರಿಯ ಕಪ್ಪು ಹಾಸಿನ ದಿರಿಸು ತೊಟ್ಟಿರುವ +ಅಳೆದು ತೂಗುವ ಲೆಕ್ಕಾಚಾರದ ತಾರೀಫು +ಒಬ್ಬರಲ್ಲಿ ಕಿತ್ತು ಇನ್ನೊಬ್ಬರಿಗೆ ಬಿತ್ತುವ +ಸಮ ಅಸಮಾನತೆಗಳ ಆತ್ಮವ ನಾ ಒಲ್ಲೆ +ಎಲ್ಲಿಯ ಗುಣ ವ್ಯತ್ಯಾಸಗಳ ದೋಷಕ್ಕೆ +ಅಸಹಾಯಕರ ಕಾಡಿ ದೂಡಿರುವೆ +ಮನಸ್ಸಲ್ಲಿ ಪರಿಪಕ್ವತೆಯ ನಂಟಿನ ಜಾಡಿದ್ದರೆ +ಜಗದಲಿ ಕಾಣುತ ಸಮಾನರಾಗಿ +ಹಂಚೆಲ್ಲ ಸುಖ -ದುಃಖದ ಆಗಮ -ನಿಗಮಗಳ ಫಲವ +ಕೃಶದ ಇಂದು ನಾಳೆಯ ದೇಹದ ಅಸ್ತಿತ್ವಕ್ಕೆ +ಪುಟಿಯುತ್ತಿದೆ ನಾನು -ನನ್ನದೆಂಬ ಅಮಲಿನ ಮಜಲುಗಳು +ಸಿರಿತನವ ಉಟ್ಟು ನೆಮ್ಮದಿಯ ಕಿತ್ತು +ಗಹಗಹಿಸಿ ನಗುತ್ತಿರುವ ನಿನ್ನ ಮರ್ಮಕ್ಕೆ +ಶರಣಯ್ಯ ನಾ ಶರಣು +ನನ್ನೊಳಗಿನ ನಾನು ಬೇರಲ್ಲೇ ಕೊಳೆಯಲಿ +ಕ್ರೂರತೆಯಲ್ಲಿನ ಮೃಗ ತುಳಿಯಲಿ +ಸಮಾನತೆಯ ದಿಕ್ಕು ರಾರಾಜಿಸಲಿ +ನ್ಯಾಯ ಸಂಕುಲ ಅಜರಾಮರವಾಗಲಿ +ಪ್ರೀತಿಯು ಪ್ರೀತಿಯ ಸೇರುತ ಬಾಳಲಿ +ಆಗ ನಾ ಮೆಚ್ಚಿ ನುಡಿಯುವೆ +ನಿನ್ನ ಆಂತರ್ಯ -ಬಾಹ್ಯ ತತ್ವ ಸತ್ವದ ಸಿದ್ದಿ ಶುದ್ಧಿಯ. +-ಕಾವ್ಯ ಎಸ್. +ಬದುಕೆಂದರೆ, +ಗಂಧದ ಕೊರಡು +ಕರ್ಪೂರದ ಒಡೆ, +ಎಣ್ಣೆ ಬತ್ತಿಗೆ ದಾಂಪತ್ಯ +ದೀಕ್ಷೆ ನೀಡೂ ಪುರೋಹಿತ! +ಬದುಕೆಂದರೆ, +ಚಳಿಗಾಲದ ಇಬ್ಬನಿ, +ಮಳೆಗಾಲದ ಕಾರ್ಮೋಡ, +ಬ್ಯಾಸಿಗಿ ರಣ ಬಿಸಿಲು! +ಬದುಕೆಂದರೆ, +ಕುಳಿರ್ಗಾಳಿ ಬೀಸೂ ಬ್ಯಾಸಿಗೀ ಗುಲ್ ಮೊಹರ್ ಗಿಡ, +ಬಿಸಿಲಾಗ ನಾಲಿಗೆ ತಂಪು ಮಾಡೂ ಬರ್ಪ, +ದಣಿದಾಗ ಮುದ ನೀಡೂ ಹದವಾದ ಹುಳಿ ಮಜ್ಜಿಗಿ! +ಬದುಕೆಂದರೆ, +ಮರೆತು ಹೋದ ಗೆಳತಿಯ ಸವಿ ನೆನಪಿನ ಸಂಕಟ! +ಜಿಗುಪ್ಸೆಯ ಉರಿಯಾಗ ಸುಟ್ಟು ಕರಕಲಾಗೂ ಬದನೆಕಾಯಿ, +ಖುಷಿಯಾದಾಗ ಹಿಗ್ಗಿ ಹೀಚಾಗೂ ಹೀರೆ! +ಬದುಕೆಂದರೆ, +ಸಿಟ್ಟಾದಾಗ ಸುಟ್ಟು ಕಮಟಾಗೂ ಹಾಲಿನ ಕೆನೆ, +ಉಮಾಯದಾಗ ಉಣ್ಣಗೊಡದ ಉತ್ಸಾಹದ ಬುಗ್ಗೆ, +ನೊಂದರೂ ನಗುವ ನಾಚಿಗ್ಗೇಡಿ! +ಬದುಕೆಂದರೆ +ಕೊಯ್ದಷ್ಟೂ ಚಿಗುರಿ‌ ನಿಲ್ಲೂ ಕರಿಕೆ, +ಸೋತ ಕಾಲುಗಳು ತಂಗೂ ಬೇವಿನ ಮರದ ನೆರಳು, +ಚೈತ್ರಕ್ಕಷ್ಟೇ ಕೇಳಿ ಬರೂ ಕೋಗಿಲೆ ಸ್ವರ! +ಬದುಕೆಂದರೆ, +ಅಮಾಸಿ ಕಗ್ಗತ್ತಲೆಯ ನಕ್ಷತ್ರದ ಹೊಳಪು, +ಹುಣಿವಿ ಚಂದ್ರನ ಹಾಲ್ಬೆಳದಿಂಗಳು, +ಭಾವದಲೆಗಳ ಮೊರೆತದ ಮಹಾತೀರ! +ಬದುಕೆಂದರೆ, +ಬಿರಿದು ಪರಿಮಳ ಬೀರೂ ಮುಂಜಾವ ಮಲ್ಲಿಗಿ, +ಮದುಮಗಳ ವರ್ಣದ ಶ್ರಾವಣದ ಕ್ಯಾದಿಗಿ, +ದೀಪಾವಳಿಗಿ ನಸುನಗುವ ಸಾರವಾಳ ಸೇವಂತಿಗಿ! +ಬದುಕೆಂದರೆ, +ಮಾಂಸ ಮಜ್ಜೆ ತುಂಬಿದ ದೊಡ್ಡ ಚೀಲದ ಚಲನೆ, +ಸರಕು ತುಂಬಿದವನ ಮರೆತೇ ತಿರುಗೂ ಪರಿಭ್ರಮಣೆ, +ಕಾಲನ ಹೊಡೆತಕ್ಕೆ ಸಿಕ್ಕು ನುಗ್ಗಾಗೂ ಕೀಲಿ ಮಣೆ… +-ಸಾವಿತ್ರಿ ಹಟ್ಟಿ +ಗಜಲ್ +ಸ್ನೇಹದ ಮೂಲಾರ್ಥವೇ ಬೇರೆಯಾಗುತಿದೆ ಗೆಳೆಯ/ +ಪ್ರೇಮದ ಪರಿಭಾಷೆಯೇ ಬದಲಾಗುತಿದೆ ಗೆಳೆಯ// +ತೇಜಾಬ್ ಎರಚಿ ವಿಕೃತಿ ಮೆರೆಯುವ ಮಜ್ನೂಗಳು/ +ಚಿತ್ರಹಿಂಸೆಯಿಂದ ಲೈಲಾಳನ್ನು ಕೊಲ್ಲಲಾಗುತಿದೆ ಗೆಳೆಯ// +ಮೋಸದ ಬಲೆ ಬೀಸುವ ಪ್ರೇಯಸಿಯರ ದರ್ಬಾರು / +ಪ್ರೇಮಿಗಳ ಜೇಬು ನಸೀಬು ಖಾಲಿಯಾಗುತಿದೆ ಗೆಳೆಯ// +ನೇಹದ ಹೆಸರಿನಲಿ ಸಂಚು ದಗಲಬಾಜಿತನ ಮಾಮೂಲು/ +ಒಡಹುಟ್ಟಿದವರ ನಡುವೆ ನಂಜು ಬಿತ್ತಲಾಗುತಿದೆ ಗೆಳೆಯ// +ಹೆಣ್ಣೇ ಹೆಣ್ಣಿಗೆ ಗಂಡೇ ಗಂಡಿಗೆ ಮೋಹಿಸುವ ಕಾಲವಿದು/ +ನರನಾರಿಯರ ಸಂಬಂಧಗಳು ಆಭಾಸವಾಗುತಿದೆ ಗೆಳೆಯ// +ಲಾಭವಿಲ್ಲದೆ ಇಲ್ಲಿ ಯಾರೂ ಯಾರನ್ನು ಮಾತಾಡಿಸರು/ +ದುಡ್ಡಿಗಾಗಿ ಹೆತ್ತವರನ್ನೆ ಮಸಣಕ್ಕೆ ಕಳಿಸಲಾಗುತಿದೆ ಗೆಳೆಯ// +ವರದಕ್ಷಿಣೆ ಆಸೆಗೆ ಅಬಲೆಯರನ್ನ ಸುಡುತ್ತಿದ್ದಾರೆ ಪ್ರತಿಕ್ಷಣ/ +ಕಣ್ಬಿಬಿಡದ ಕಂದಮ್ಮರನ್ನು ತಿಪ್ಪೆಗೆ ಎಸೆಯಲಾಗುತಿದೆ ಗೆಳೆಯ// +ಮೋಜಿಗೆ ಜೂಜಿಗೆ ಪತ್ನಿಯನ್ನೆ ಅಡವಿಟ್ಟರುವನು ಪತಿರಾಯ / +ಹಸುಳೆಯರ ಮೇಲೆ ಅತ್ಯಾಚಾರ ನಡೆಸಲಾಗುತಿದೆ ಗೆಳೆಯ// +ಜಗವೆನ್ನುವದು ಕ್ರೂರಿಗಳ ಅಡ್ಡೆಯಾಗುತಿದೆಯಲ್ಲ “ಪೀರ”/ +ಸಾವಲ್ಲೂ ಲಾಭದ ಗುಣಾಕಾರ ಮಾಡಲಾಗುತಿದೆ ಗೆಳೆಯ // +-ಅಶ್ಫಾಕ್ ಪೀರಜಾದೆ. +ಹೂಂಕರಿಸುತಿದೆ ಶ್ರಾವಣ, +ಠೇಂಕರಿಸುವಂತೆ ರಾವಣ. +ಝೇಂಕರಿಸಿದೆ ಭ್ರಾಮರ, +ಮೋತ್ಕರಿಸುವಂತೆ ಮೈಮನ… +ಸಾಲು ಸಾಲು ಮೇಘರಾಶಿ +ನಡುವೆ ನಡುವೆ ನೀಲಿ ಹಾಸಿ, +ಸಾಗುತಿದೆ …ಮಾಗುತಿದೆ.. +ತುಂಬುಕಳಚೋ ಹಣ್ಣ ರೀತಿ. +ವರ್ಷ ಋತುವು ಮೈಯನೆರೆದು +ಧರಣಿ ಕಣಕಣವು ಹಸಿರ ಹೊಸೆದು, +ಮೈಯುತುಂಬಿ, ಮನದದುಂಬಿ +ಒಸಗೆ ಹಾಡಿದೆ ಎದೆಯತುಂಬಿ. +ಕೊಳೆವ ಬೀಜವೂ ಮೊಳಕೆ ತಳೆದು, +ಎದ್ದು ನಗುತಿದೆ ಹಸಿರ ಮುಡಿದು. +ಅಣು ಅಣುವಲು ಜೀವ ಕಳೆಯ +ಹೊಮ್ಮಿಸುವನೇ ರಾಜ ಶ್ರಾವಣ. +ಜಂಜಡಗಳ ದೂರ ನೂಕಿ +ಬನ್ನಿ ಬೆರೆಯುವ ಉಯ್ಯಾಲೆ ಜೀಕಿ. +ಪ್ರಕೃತಿ ತೆರೆದಿ ನಗುತ ನಗುತಾ +ಮೇಘದಂತೆ ಮುಂದೆ ಸಾಗುತ… +ಸರೋಜ ಪ್ರಶಾಂತಸ್ವಾಮಿ +ಗಜ಼ಲ್ +ಎದೆಯೊಳಗೆ ನುಗ್ಗದ ಕನಸುಗಳಿಗೆ ಹಂಬಲಿಸುವುದು ಬೇಡ +ಇಲ್ಲ ಸಲ್ಲದ ಆಸೆಗಳಿಗೆ ಬಲಿಯಾಗುವುದು ಬೇಡ +ಮನಸುಗಳು ಬೆಸೆಯದ ಹೊರತು ಪ್ರೀತಿಗೆ ಜಾಗವೆಲ್ಲಿ +ಪ್ರೀತಿಯನ್ನು ಅರ್ಥೈಸಿಕೊಳ್ಳದೆ ವೃಥಾ ಚಿಂತಿಸುವುದು ಬೇಡ +ಅವರ್ಯಾರೋ ಬರುವರು ನಮ್ಮೆದುರು ನಿಲ್ಲುವರು +ಉಪದೇಶ ಕೇಳಿ ಯೋಚನೆಯಲಿ ಮುಳುಗುವುದು ಬೇಡ +ಪ್ರೇಮ ಪುರಾಣಗಳು ಸಾಕಷ್ಟು ಸಿಗುತ್ತವೆ ಕೇಳಲು ಓದಲು +ಪ್ರೀತಿ ಪ್ರೇರೇಪಿಸುವ ಮನಸುಗಳೇ ಇಲ್ಲವೆನ್ನುವುದು ಬೇಡ +ನಾವಂದುಕೊಂಡ ಪ್ರೀತಿ ಪ್ರೇಮ ಒಂದು ತೆರನಾದ ಭ್ರಮೆ +ದೇಸು ಅರಗಿಸಿಕೊಂಡದ್ದು ಸುಳ್ಳೆಂದು ಭ್ರಮಿಸುವುದು ಬೇಡ +–ದೇಸು ಆಲೂರು..‌ \ No newline at end of file diff --git a/PanjuMagazine_Data/article_1058.txt b/PanjuMagazine_Data/article_1058.txt new file mode 100644 index 0000000000000000000000000000000000000000..e69de29bb2d1d6434b8b29ae775ad8c2e48c5391 diff --git a/PanjuMagazine_Data/article_1059.txt b/PanjuMagazine_Data/article_1059.txt new file mode 100644 index 0000000000000000000000000000000000000000..feab433e8a5968a574795dc8644929db9cf9346f --- /dev/null +++ b/PanjuMagazine_Data/article_1059.txt @@ -0,0 +1,5 @@ +ಅಂತೂ ಈ ವರ್ಷದ ಫೆಬ್ರುವರಿ ೧೪ ಮರೆಯಾಯ್ತು. ಪ್ರತಿ ವರ್ಷದ ಹಾಗೆ ನನ್ನ ನಿರೀಕ್ಷೆ ಹುಸಿಯಾಯ್ತು. ಅದೆಷ್ಟೋ ದಿನಗಳಾದವು ನಿನ್ನ ದ್ವನಿ ಕೇಳಿ. ಈ ದಿನ ಬಂದಿತೆಂದರೆ ಸಾಕು ಅದೆಷ್ಟು ಸಂತಸ ನಿನಗೆ. ಆ ಮಾತುಗಳನ್ನು ನುಡಿಯದಿದ್ದರೆ ನಿನಗೆ ಸಮಾಧಾನವಾಗುತ್ತಿರಲಿಲ್ಲ. ಮತ್ತೆ ಮತ್ತೆ ಆ ನಿನ್ನ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ನಾನೋ ಹುಡುಗಿಯರೆಂದರೆ ಮಾರುದ್ದ ದೂರ ಸರಿಯುವ ಆಸಾಮಿ. ಅದೇಗೋ ನನ್ನ ನಿನ್ನ ನಡುವೆ ಸ್ನೇಹ ಬೆಳೆಯಿತು. ಸ್ನೇಹ ವೆಂದೂ ಪ್ರೇಮಕ್ಕೆ ತಿರುಗಬಾರದೆಂದು ಲಕ್ಷ್ಮಣ ಗೆರೆ ಹಾಕಿದ್ದವಳೇ ನೀನು. ಆದರೆ ನೀನೇ ಆ ಗೆರೆಯನ್ನು ದಾಟಿ ಅಲಿಖಿತ ಸಂವಿಧಾನವನ್ನು ಆಗಾಗ ತದ್ದುಪಡಿ ಮಾಡುತ್ತಿದ್ದವಳೇ ನೀನು. ಕೆಲವೊಮ್ಮೆ ನಿನ್ನ ತುಂಟಾಟಗಳಿಗೆ ನಾನೇ ಮೂಗನಾಗಿಬಿಡುತ್ತಿದ್ದೆ. +ನಿಜ ನಾನೀಗ ನಿಜವಾಗಿಯೂ ಮೂಕನಾಗಿ ಮೌನಿಯಾಗಿದ್ದೇನೆ. ಪ್ರತಿ ಬಾರಿ ಈ ಹಾಳು ಮೊಬೈಲ್ ರಿಂಗಾದಗೆಲ್ಲ ನಿನೇ ಎಂದು ಭಾವಿಸುತ್ತೇನೆ. ಮೊಬೈಲ್ ಕಂಪನಿಯವರು ಕಳುಹಿಸುವ ಮೆಸೆಜ್ ಗಳೆಲ್ಲ ನಿನ್ನ ನೆನಪನ್ನೇ ಮರುಕಳಿಸುತ್ತವೆ. ಅದೇನೆ ಇರಲಿ ಈಗ ಅವೆಲ್ಲ ಸುಳ್ಳು. ಪ್ರತಿ ವರ್ಷ ಆ ದಿನದಂದು ನಿನ್ನಿಂದ ಒಂದು ಕಾಲ್ ಅಥವಾ ಮೆಸೇಜ್ ಬರಬಹುದೆಂಬ ನಿರೀಕ್ಷೆಯಲ್ಲೆ ಇರುತ್ತೇನೆ. ಆದರೆ ನನ್ನ ನಿರೀಕ್ಷೆಗಳೆಲ್ಲ ಪ್ರತಿ ಸಾರಿ ಸುಳ್ಳಾಗುತ್ತಿವೆ. ಪ್ರತಿ ವರ್ಷ ಆ ದಿನದಂದು ನಿನಗೆ ವಿಷ್ ಮಾಡುತ್ತೇನೆಂದು ನೀನು ಆ ದಿನ ಹೇಳಿದ ಮಾತನ್ನು ಕ್ಯಾಲೆಂಡರ್ ಪ್ರತಿ ವರ್ಷ ನೆನಪಿಸುತ್ತೆ. ಆದರೆ ಆ ವಿಷ್ ಮರೆಯಾಗಿ ಸುಮಾರು ವರ್ಷಗಳೇ ಕಳೆದವು. ನಿನಗೆ ನೆನಪಿದೆಯೇ ? ಓ ನಾನು ನಿನ್ನ ಮರೆತಿರುವೆ ಎಂದುಕೊಂಡಿರುವೆಯಾ ? ಖಂಡಿತ ಇಲ್ಲ . ಅದೇ ದಿನ ನಾ ನಿನಗೆ ಕೊಟ್ಟ ಮಾತಿನಂತೆ ನನ್ನ ಉಸಿರಿರುವ ವರೆಗೂ ಮರೆಯಲಾರೆ . +ಅದೆಲ್ಲಾ ಈಗ ಇತಿಹಾಸ. ಗತಿಸಿ ಹೋದ ಕಾಲದ ನೆನಪುಗಳು ಗತಿಸಲಾರವು. ಆದರೆ ನನ್ನನ್ನು ಮರೆಯುವಂತ ತಪ್ಪನ್ನು ನಾನೇನು ಮಾಡಿದೆ ? ಅದನ್ನು ನೀನೇ ಹೇಳಬೇಕು. ಪ್ರೀತಿ ಪ್ರೇಮದ ಮಾಯೆಯಿಂದ ಹೋರಹೋದರೂ ಸ್ನೇಹ ಮಾಡಿದರೆ ತಪ್ಪೇನು ? ನನ್ನ ಸ್ನೇಹ ನಿನಗೆ ಮುಳುವಾಗುವುದೇ ? ನಿನಗಿರುವ ಸ್ನೇಹಿತರ ಬಳಗದಲ್ಲಿ ನನ್ನನ್ನು ಸೇರಿಸಿಕೊಳ್ಳಲು ಸಾದ್ಯವಿಲ್ಲವೇ ? ಪ್ರೀತಿ ಪ್ರೇಮ ಇಲ್ಲದಿದ್ದರೂ ಪರವಾಗಿಲ್ಲ ನಿನ್ನ ಸ್ನೇಹವೊಂದೇ ನನಗೆ ಬೇಕು ಅಷ್ಟೇ. ನಾನೆಂದಿಗೂ ನಿನ್ನ ಸ್ನೇಹಕ್ಕೆ ಹಾತೊರೆಯುತ್ತೇನೆ. ಆ ನಿನ್ನ ಅಲಿಖಿತ ಮೂಲ ಸಂವಿಧಾನಕ್ಕೆ ನಾನೆಂದಿಗೂ ಬದ್ದ. ಈ ಜೀವನದಲ್ಲಿ ನೀನಿಲ್ಲದೇ ನಾ ಹೇಗಿರಲಿ …?!! +– ವೆಂಕಟೇಶ ಚಾಗಿ + \ No newline at end of file diff --git a/PanjuMagazine_Data/article_106.txt b/PanjuMagazine_Data/article_106.txt new file mode 100644 index 0000000000000000000000000000000000000000..574ae91654c594e7eeb6a300d162cb59d3636014 --- /dev/null +++ b/PanjuMagazine_Data/article_106.txt @@ -0,0 +1,15 @@ +-೮- +ಒಂಟೆತ್ತಿನ ಗಾಡಿಲಿ ಗೋದಿ ಉಪ್ಪಿಟ್ಟು ಬಂದಾಗ ಹತ್ತತ್ತಿರ ಒಂದು ಗಂಟೆಯಾಗಿತ್ತು. ಗೋದಿ ಉಪ್ಪಿಟ್ಟನ್ನು ದೊಡ್ಡ ದೊಡ್ಡ ಕ್ಯಾನ್ಗಳಿಂದ ಸ್ಕೂಲಲ್ಲಿದ್ದ ಎರಡು ದೊಡ್ಡ ಬಾಂಡಲಿಗೆ ಸುರಿವಾಗ ಗೋದಿ ಉಪ್ಪಿಟ್ಟು ಗಮಗಮ ಅಂತಿತ್ತು. ಬಿಸಿ ಗೋದಿ ಉಪ್ಪಿಟ್ಟು ತುಂಬಿದ್ದ ಬಾಂಡಲಿಯಿಂದ ಹೊಗೆ ಏಳುತ್ತಿತ್ತು. ಆ ಗಮಲು ಹೀರುತ್ತಿದ್ದರೆ ಮಜವಾಗುತ್ತಿತ್ತು.. ನಟರಾಜ ಮೇಷ್ಟ್ರು ಏಳನೇ ಕ್ಲಾಸಿನ ಗೌಡರ ಹುಡುಗರಿಂದ ಆ ಗೋದಿ ಉಪ್ಪಿಟ್ಟನ್ನು ಇಳಿಸಿಕೊಳುವುದು ಮತ್ತು ಮದ್ಯಾಹ್ನ ಬೆಲ್ಲು ಹೊಡೆದಾಗ ಕ್ಯೂ ನಿಲ್ಲಿಸಿ ಎಲ್ಲರಿಗೂ ಕೊಡುವ ಜವಾಬ್ದಾರಿ ವಹಿಸಿದ್ದರು. ಪೋಸ್ಟ್ ಮ್ಯಾನ್ ಗಂಗಣ್ಣನೂ ತನ್ನೆಲ್ಲ ಕೆಲಸ ಮುಗಿಸಿ ನಮಗೆ ಉಪ್ಪಿಟ್ಟು ಕೊಡುವ ಆಸುಪಾಸು ಟೈಮಿಗೆ ಸರಿಯಾಗಿ ಒಂದು ದೊಡ್ಡ ಪ್ಲಾಸ್ಟಿಕ್ ಕವರ್ ರೆಡಿ ಮಾಡಿಕೊಂಡು ಬಂದು ಜಗುಲಿಯ ಮಗ್ಗುಲಲ್ಲಿ ಕುಂತು ತನಗೆ ತಾನೇ ಮಾತಾಡಿಕೊಂಡು ಅದು ಇದು ಬರೆಯುತ್ತ ಲೆಕ್ಕ ಮಾಡುತ್ತ ಇದ್ದುದು ಅವನ ರೂಢಿಯಾಗಿತ್ತು. ನಾವು ಕ್ಯೂ ನಿಂತಿದ್ದರು ಆ ಮೇಷ್ಟ್ರು ಅವನಿಗೇ ಮೊದಲು ಕೊಟ್ಟು ‘ಪಾಪ ಬಿಸಿಲು ಮಳೆ ಅನ್ನದ ರೀತಿ ಪೋಸ್ಟ್ ಹಂಚ್ತಾನೆ ಮೊದಲು ಕೊಡಿ ಅವನಿಗೆ” ಅಂತ ಕೊಡಿಸುತ್ತಿದ್ದರು. +ಆ ಹೊತ್ತಲ್ಲಿ ಹೆಡ್ ಮೇಷ್ಟ್ರು ರೂಮಲ್ಲೆ ಎಲ್ಲ ಟೀಚರು ಸೇರುತ್ತಿದ್ದರು. ಅವತ್ತು ಹಂಗೆ ಸೇರಿದ್ದರು. ಅವರಲ್ಲಿ ನಮ್ಮೂರಿನ ಮೇಡಮ್ಮೂ ಒಬ್ಬರಿದ್ದರು. ಅವರ ಗಂಡ ಪೋಲೀಸರಾಗಿದ್ರು. ಹಂಗಾಗಿ ಸ್ಕೂಲಲ್ಲಿ ಅವರಿಗೆ ಬೇರೆ ತರ ರೆಸ್ಪೆಕ್ಟ್ ಇತ್ತು. ಒಂದೊಂದ್ಸಲ ಆ ಮೇಡಂ ಗಂಡ ಪೋಲೀಸ್ ಡ್ರೆಸ್ಸಲ್ಲೆ ಬ್ಯಾಟರಿ ಇರುವ ಅಟ್ಲಾಸ್ ಸೈಕಲಲ್ಲಿ ಬರೋರು. ಆ ಸೈಕಲ್ ಕ್ಯಾರಿಯರಿಗೆ ಹಿಂದಿನಿಂದ ಸೀಟಿನ ನಡು ಮಧ್ಯೆಕ್ಕೆ ಬರುವಂತೆ ಸಿಕ್ಕಿಸಿದ್ದರು. +ಉದ್ದಕ್ಕೆ ದಪ್ಪಗೆ ಪೊದೆ ಮೀಸೆಯ ಅವರು ಬಂದಾಗ ನಮ್ಮೂರವ್ರು ಅಂತ ಎಲ್ಲರಿಗೂ ಗೊತ್ತಾಗಲಿ ಅಂತ ಬೀಗಿ ಗಸಗಿ, ಕಾಂತ, ಪರ್ಸಿ, ನಾನು ಓಡಿ ಹೋಗಿ ‘ನಮಸ್ಕಾರ ಸಾರ್’ ಅಂದರೆ ದಪ್ಪ ಮೀಸೆಯ ಅವರು ನಗ್ತಾ ಬೆನ್ನು ತಟ್ಟಿದರೆ ನಾವು ನಮ್ಮೊಳಗೆ ‘ನಮ್ಮ ತಂಟೆಗೆ ಬಂದರೆ’ ಅಂತ ನಮ್ಮ ಕ್ಲಾಸಿನ ಬೇರೆಯವರನ್ನು ನೋಡ್ತ ಗುರಾಯಿಸಿ ನಮ್ಮ ನಮ್ಮ ಸೀಟಿನಲ್ಲಿ ಕೂರುತ್ತಿದ್ದೆವು. ಅಂತಾ ಪೋಲೀಸರ ಹೆಂಡತಿಯಾದ ನಮ್ಮೂರಿನ ಮೇಡಂಗೆ “ಏನ್ರಿ ನಿಮ್ಮೂರವ್ರು ಎಲ್ಲ ನಮ್ದೆ ಅಂತಾರಲ್ಲ.. ಅವ್ರಪ್ಪಂದ್ರು ಕಟ್ಸಿದ್ರ ಸ್ಕೂಲು ಮಾರ್ಕೆಟ್ಟು ಬಸ್ಟ್ಯಾಂಡು ಎಲ್ಲನು..? ಪಾಪ ಆ ಗಂಗ ಏನ್ಮಾಡ್ದ ಹೇಳಿ.. ಅವನಿಗೆ ಹೊಡಿಯೋಕೆ ಸುತ್ತ ಸುತ್ತಿದ್ರು ಗೊತ್ತಾ..? ನಾನು ಕಿಟಕೀಲಿ ನೋಡ್ತಾನೆ ಇದ್ದೆ. ಪಾಪ ಕಂಡ್ರಿ ರೈತ್ರು. ಅವ್ರ್ ಗೂಡ್ನೆಲ್ಲ ಕದಿತಾರಲ್ರಿ.. ಏನೊ ಗಂಗ ನೋಡ್ದ ಹೇಳ್ದ. ಅವ್ನು ಸರಿಯಾಗೆ ಹೇಳ್ದ. ನಮ್ಗು ಗೊತ್ತಿತ್ತು ಇದೆಲ್ಲ ಮೊದಲಿಂದ. ಏನೊ ಮಾಡ್ಕಳ್ಳಿ ಕೂಲಿ ಮಾಡೋರು ಅವ್ರ ಕೆಲ್ಸದ ಮಧ್ಯೆ ನಾವ್ಯಾಕೆ ಅಂತ ಸುಮ್ನಿದ್ದಾಯ್ತು. ಬರ‌್ತಾರೆ ನೋಡಿ ಪೋಲೀಸ್ರು ನಾಲಕ್ ದಿನ ಒಳಗಾಕಿ ಏರೋಪ್ಲೇನ್ ಎತ್ತುದ್ರೆ ಆವಾಗ ಗೊತ್ತಾಗುತ್ತೆ ಬಡ್ಡಿ ಮಕ್ಖಿಗೆ.. ಹೇಳಿ ನಿಮ್ ಯಜಮಾನ್ರುಗು ಅವ್ರೂ ಪೋಲೀಸಲ್ವ.. ಸ್ಕೂಲ್ಲಿ ಬೈರಾಪುರ ಅಂತ ಹೆಸ್ರಿದಿಯಂತೆ. ಸ್ಕೂಲಿರೋದು ಹೊಸ ತಿರುಮಕೂಡಲಲ್ಲಿ ಗೊತ್ತಾ.. ಅದೆಂಗೆ ಬೈರಾಪುರ ಅಂತ ಮಾಡಿದಾರೆ? ಮಾಡ್ತಿನಿ ಇವ್ರ್ ಆಂಕಾರ ಎಲ್ಲಿತಂಕ ಇರುತ್ತೊ ” ಅಂದರು. +ನಾವು ಮಿಕಿ ಮಿಕಿ ಕಣ್ಣು ಬಿಟ್ಟು ನೋಡ್ತ ಉಪ್ಪಿಟ್ಟಿನ ಗಮಲು ಹೀರುತ್ತಿದ್ದೆವು. ಆಗ ನಮ್ಮೂರ್ ಮೇಡಮ್ಮು “ಸಾರ್ ನಮ್ಮೂರವ್ರು ಅಂತ ನಾನೇನ್ ವಯಿಸ್ಕಳ. ನಿಮ್ಮಿಷ್ಟ. ನಮ್ಗು ಅದ್ಕು ಸಂಬಂಧ ಇಲ್ಲ” ಅಂತ ಸಿಟ್ಟುಗೊಂಡು ಕುಂತರು. ಅವತ್ಯಾಕೊ ಗಂಗಣ್ಣನ ಸುಳಿವಿರದೆ ನಟರಾಜ ಮೇಷ್ಟ್ರು “ಲೇ ಗಂಗನ್ ಕರಿಯೋ” ಅಂದರು. ಹೊರಗೆ ಗಂಗನ ಸುಳಿವಿರಲಿಲ್ಲ. +* +ತಿಂಗಳಾಯ್ತು. ಉಪ್ಪಿಟಮ್ಮ ಸೊಪ್ಪಿಟಮ್ಮ ಹಬ್ಬವಿತ್ತು. ಊರು ರಂಗು ಬಳಿದುಕೊಂಡು ನಲಿಯುತ್ತಿತ್ತು. ತಮಟೆ ಸದ್ದು ಊರಾಳುತ್ತಿತ್ತು. ಹೊಳೆ ಕಡೆಯಿಂದ ಕೇಲು ಬರುತ್ತಿತ್ತು. ಕುಂಟು ಸಿದ್ದಪ್ಪ ಶಿಸ್ತಾಗಿ ಕಂಡು ಸ್ವಲ್ಪ ಎದ್ದಾಳುಗಳು, ಕೋಲಾಟ ದೊಣ್ಣೆ ವರಸೆ ಆಡುತ್ತಿದ್ದ ಯುವಕ ಸಂಘದವರನ್ನು ಸೇರಿಸಿಕೊಂಡು ಏನೇನೊ ಮಾತಾಡಿಕೊಂಡು ಹೋಗುವಾಗ ತಮಟೆ ಸದ್ದಿಗೆ ಸರಿಯಾಗಿ ಕೇಳದೆ ಗಸಗಿ, ಗೋಳು, ವಾಟೀಸು, ಪರ್ಸಿ, ಕಾಂತು, ನಾನು ಗರಿಗರಿ ಹೊಸ ಬಟ್ಟೆ ಇಕ್ಕಿಕೊಂಡು ಕೇಲಿನ ಮುಂದೆ ಕುಣಿಯುತ್ತಿದ್ದವರು ಅದೇನೊ ಎತ್ತ ಅಂತ ಅವರ ಗುಂಪಿಗೆ ಸೇರಿಕೊಂಡು ಬೀಗುತ್ತ ಹೋಗುತ್ತಿದ್ದಾಗ ಕುಂಟು ಸಿದ್ದಪ್ಪ “ಆ ಹೆಡ್ ಮೇಷ್ಟ್ರುಗೆ ಒಂದ್ ಗತಿ ಕಾಣ್ಸಗಂಟ ಬುಡದಿಲ್ಲ” ಅಂತಿದ್ದು ನಮಗೊಂಥರ ಮಜ ಅನಿಸಿದ್ದರು ಇವರೊಂದಿಗಿದ್ದದ್ದು ನೋಡಿ ಸ್ಕೂಲಿಗೆ ಹೋದಾಗ ಹೊಡೆದರೆ ಎಂಬ ಅಳುಕಿನಲ್ಲೇ ಅದೇನಾದ್ರು ಆಗಲಿ ಅಂತ ಮಾತಾಡ್ತ ಮಾತಾಡ್ತ ಬಿರಬಿರ ಹೆಜ್ಜೆ ಹಾಕತೊಡಗಿದೆವು. +ಬಿಸಿಲ ಧಗೆ. ಹನ್ನೊಂದು ಗಂಟೆಗೆ ಸೈಕಲ್ ಏರಿ ಬಂದಿದ್ದ ಗಂಗಣ್ಣ ಊರು ಬಳಸಿ ಪೋಸ್ಟ್ ಹಂಚಿ ಓಲ್ಡೇಜು ವಿಡೊ ಪೆನ್ಸನ್ ಕೊಟ್ಟು ಹೆಬ್ಬೆಟ್ಟು ಒತ್ತಿದ್ದ ಎಂ.ಓ ಫಾರಂ ಕೊಟ್ಟು ಎಲ್ಟಿಎಂ ಹಾಕಿಸಿಕೊಳ್ತ “ಏನ್ ಸಿದ್ದಪ್ಪೋರೆ ಹಬ್ಬ ಜೋರು’ ಅಂದ. ಕುಂಟು ಸಿದ್ದಪ್ಪ “ಹು ಗಂಗಣ್ಣ ಬಾ ಊಟ ಮಾಡುವಂತೆ.. ಕೆಂಪುಂಜನೆ ಕುಯ್ತಿಂವಿ” ಅಂದ. ಗಂಗಣ್ಣ, ಬ್ಯಾಲೆನ್ಸ್ ಇದ್ದ ಇನ್ನೊಂದೆರಡು ಪೋಸ್ಟ್ ಎತ್ತಿ ಅಡ್ರೆಸ್ ಓದ್ತಾ ನೋಡ್ತ “ಅಯ್ಯೋ ನಿಮ್ಮನೇಲಿ ಉಣ್ಣಂಗಿದ್ರೆ ಉಣ್ತಿದ್ದೆ ಸಿದ್ದಪ್ಪೋರೆ. ಏನ್ಮಾಡದು ಸಂಪ್ರದಾಯ ಬಿಡೊಕಾಗುತ್ತ..ಅದೂ ಅಲ್ದೆ ನೀವೇನಪ್ಪ ದನ ಬೇರೆ ಕುಯ್ತಿರಿ.. ನಮ್ ದೇವ್ರು ಅಲ್ವ. ದೇವ್ರನ್ನ ಯಾರಾದ್ರು ತಿಂತಾರ. ಒಳ್ಳೆದಾಗುತ್ತ.. ಗೋಮಾತೆ ಅಂದ್ರೆ ಬಸವಣ್ಣೋರು ಸಿದ್ದಪ್ಪೋರೆ.. ” ಅಂತಂತ “ಅಯ್ಯೋ ಸ್ಕೂಲ್ಗೊಂದ್ ಪಾರ್ಸಲ್ ಮರ‌್ತೆ ಬಿಟ್ನಲ್ಲ.. ನಮ್ ಪೋಸ್ಟ್ ಮೇಷ್ಟು ನೋಡುದ್ರೆ ಬೈತಾರಲ್ಲ ಏನ್ಮಾಡೋದು.. ಆಗ್ಲೇ ಕೊಟ್ಟು ಬರಬೇಕಿತ್ತು.. ಇವತ್ತು ಶನಿವಾರ ಬೇರೆ. ಅವ್ರು ಇದಾರ ಇಲ್ವ.. ಅದೇನೋ ಬೆಳಗ್ಗೆ ಮೇಲೆ ಬಣ್ಣ ಹೊಡಿಸ್ತ ಬೋರ್ಡ್ ಬರಿಸ್ತಿದ್ರು. ನೋಡಾಣ ಇರಬೋದು. ಇದ್ರೆ ಕೊಟ್ಬುಟ್ಟು ಕ್ಲಿಯರ್ ಮಾಡ್ಕೊಳಾಣ.. ಕೊಡಿ ಸಿದ್ದಪ್ಪೋರೆ” ಅಂತ ಎಂಓ ಫಾರಂ ಈಸಿಕೊಳ್ಳುವಾಗ ಕುಂಟ ಸಿದ್ದಪ್ಪ “ಯಾವ್ ಬೋರ್ಡ ಗಂಗಣ್ಣ” ಅಂದ. “ಅದೇ ಸ್ಕೂಲ್ ನೇಮು ಸಿದ್ದಪ್ಪೋರೆ. ಎಲ್ಲ ಹಳೇದಾಗಿ ಸರಿಯಾಗಿ ಏನೂ ಕಾಣ್ತ ಇರ‌್ಲಿಲ್ವಂತೆ. ಆ ಸ್ಕೂಲು ಹೊಸ ತಿರುಮಕೂಡಲು ಏರಿಯಾದಲ್ಲಿ ಇದಿಯಲ್ವ.. ಅದ್ಕೆ ಅದ್ಯಾರನ್ನೊ ಬೈತಾ ಒಂದೆ ಸಲ ಬೈರಾಪುರ ಹೆಸ್ರು ಹೊಡಿಸಾಕಿ ಹೊಸ ತಿರುಮಕೂಡಲು ಅಂತ ಬರೆಸ್ತಿದ್ರು. ಬರಿಸ್ತಾ ಬರಿಸ್ತಾ ಬರೆಯೋನ್ ಜೊತೆ ಅದೇನೇನೊ ಮಾತಾಡ್ತ ಅವ್ರು ಯಾರ‌್ಯಾರನ್ನೊ ಬೈಯ್ತ ಇದ್ರು. +ನಾನು ಅವರು ಬಯ್ಯೊ ಗ್ಯಾನ್ದಲ್ಲಿ ಕೇಳ್ತಾ ಕೇಳ್ತಾ ಸೈಕಲ್ ಏರಿ ಈ ಕಡೆ ಬಂದಾಯ್ತು. ಏನ್ಮಾಡೋದು..” ಅಂತ ಎಂ.ಓ ಫಾರಂ ನೀಟಾಗಿ ಜೋಡಿಸಿಕೊಂಡು ಸೈಕಲ್ ಏರಿ ಹೋದ ಗಂಗಣ್ಣನನ್ನೇ ನೋಡುತ್ತ ಕುಂತಲ್ಲೇ ಸಿಡಿಸಿಡಿ ಸಿಡಿಯುತ್ತ ಸಡನ್ ಹೋಗದೆ ಯಾರನ್ನೊ ಕರೆದು ತನ್ನ ಬ್ಯಾಟರಿ ಇರೊ ಫಳಫಳ ಮಿಂಚ್ತಿದ್ದ ಅಟ್ಲಾಸ್ ಸೈಕಲ್ ಕೊಟ್ಟು ನೋಡಿ ಬರಲು ಹೇಳಿದ. ಸೈಕಲ್ ತುಳಿದು ಭರ‌್ರಂತ ಹೋದವನು ಅದೇ ಸ್ಪೀಡಲ್ಲಿ ಬಂದು ದಸ್ಸೊಬಸ್ಸೊ ಏದುತ್ತ “ಸಾ ಹಳೇ ಬೋರ್ಡ್ ಅಳ್ಸಿ ಹೊಸ ಬೋರ್ಡ್ ಬರೆಸ್ತಾ ಅವ್ರ. ಅದ್ರಲ್ಲಿ ನಮ್ಮೂರೆಸ್ರೆ ಇಲ್ಲ. ಹೊಸ ತಿರುಮಕೂಡಲು ಅಂತ ದಪ್ಪಗ ಬರ‌್ದು ಡಿಸೈನ್ ಮಾಡ್ತ ಇದ್ರು..” ಅಂದ. ಕುಂಟು ಸಿದ್ದಪ್ಪನಿಗೆ ಇನ್ನಷ್ಟು ಉರಿ ಏಳ್ತು. ಊರಿನ ಮೇನ್ ರೋಡಲ್ಲಿ ಹೊಳೆಯಿಂದ ತಮಟೆ ಜೋರು ಸದ್ದು ಮಾಡುತ್ತ ಪುಂಡುಡುಗರು ಕೋಲಾಟ ದೊಣ್ಣೆ ವರಸೆ ಆಡುತ್ತ ಉಪ್ಪಿಟಮ್ಮ ಸೊಪ್ಪಿಟಮ್ಮನ ಕೇಲು ಮುಂದೆ ಲಕ್ಜಲಕ್ಜನೆ ಕುಣಿಯುತ್ತಾ ಬರುತ್ತಿದ್ದವು. ಆಗ ಕುಂಟು ಸಿದ್ದಪ್ಪನ ಮಾತು ಎಲ್ಲ ಕಡೆ ಸದ್ದು ಮಾಡಿ ಬಿರಬಿರನೆ ಸಾಗಿ ಸ್ಕೂಲ್ ಹತ್ರ ಬಂದಾಗ ನಟರಾಜ ಮೇಷ್ಟ್ರು ಆಲದ ಮರದ ಕೆಳಗೆ ಕುರ್ಚಿ ಹಾಕಿಕೊಂಡು ಗಂಗಣ್ಣ ಕೊಟ್ಟ ಪಾರ್ಸಲ್ ಪೋಸ್ಟ್ ನೋಡ್ತ ಮಾತಾಡ್ತ ಸೈನ್ ಮಾಡಿ “ಗಂಗಣ್ಣ ನನ್ ಟೇಬಲಲ್ಲಿ ಸೀಲಿದೆ ತಗೊ ಹಾಕೊ” ಅಂತಿದ್ದರು. ಗಂಗಣ್ಣ ಹೆಡ್ ಮೇಷ್ಟ್ರು ರೂಮಿನತ್ತ ಡಿಸ್ಪ್ಯಾಚ್ ಟಪಾಲು ಹಿಡಿದು ಜಗುಲಿ ಹತ್ತಿದ. ಉಪ್ಪಿಟಮ್ಮ ಸೊಪ್ಪಿಟಮ್ಮ ದೇವಸ್ಥಾನದ ಒಳಗೆ ಅಷ್ಟಗಲಕು ಹರಡಿಕೊಂಡಿದ್ದ ದೊಡ್ಡ ದೊಡ್ಡ ಛತ್ರಿ ಮರಕ್ಕೆ ಕಟ್ಟಿದ್ದ ಮೈಕ್ ಸೆಟ್ ಹಾರನ್ ಲಿ ರಾಜಕುಮಾರ್ ‘ನಾನೊಬ್ಬಕಳ್ಳ’ ಪಿಚ್ಚರ‌್ನ “ನಾನೊಬ್ವ ಕಳ್ಳನು/ ನಾನೊಬ್ಬ ಸುಳ್ಳನು/ ಬಲುಮೋಸಗಾರನು ಸರಿಯೇನು..” ಹಾಡು ಮೊಳಗುತ್ತಿತ್ತು. +ಕುಂಟು ಸಿದ್ದಪ್ಪ ಸೈಲೆಂಟಾಗಿ ಕತ್ತೆತ್ತಿ ಮೇಲೆ ಬೋರ್ಡ್ ನೋಡಿದ. ಏಣಿ ಮೇಲೆ ನಿಂತವನು ಎಲ್ಲ ಮುಗಿಸಿ ಸೈಡ್ ಬಾರ್ಡರ್ ಬರೆದು ಡಿಸೈನ್ ಮಾಡ್ತ ಇದ್ದ. ಅವನನ್ನು “ನೋಡಪ್ಪ ನಿಲ್ಸು ಇಲ್ಲಿ. ಇಲ್ನೋಡು.. ಆ ಹೊಸ ತಿರುಮಕೂಡಲು ಇದಿಯಲ್ಲ ಅದನ್ನ ಅಳ್ಸಿ ಬೈರಾಪುರ ಅಂತ ಬರೀ” ಅಂತ ಜೋರು ದನಿಯಲ್ಲಿ ಹೇಳಿದ. ಅಷ್ಟೊತ್ತಿಗೆ ನಟರಾಜ ಮೇಷ್ಟ್ರು ಪಾರ್ಸಲ್ ಬಿಚ್ಚಿ ನೋಡ್ತ ಇದ್ದವರು ಎದ್ದು ಬಂದು “ಏನ್ ಸಿದ್ದಪ್ಪ ಯಾಕೆ” ಅಂತ ಕೇಳಿದರು. ನಾನು, ಗೋಳು, ಕಾಂತ, ಗಸಗಿ ಎಲ್ಲ, ಮೇಷ್ಟ್ರು ಕಣ್ಣಿಗೆ ಬೀಳದ ಹಾಗೆ ಜನರ ಮರೆಯಲ್ಲಿ ನಿಂತೆವು. ಸಿದ್ದಪ್ಪ ವಾದ ಮಾಡ ತೊಡಗಿದ. ಮೇಷ್ಟ್ರೂ ಜೋರು ಮಾಡಿದರು. ನಮ್ಮೂರಿನವರೆಲ್ಲ ತುಂಬಿಕೊಂಡರು. ಹಬ್ಬಕ್ಕೆ ಅಂತ ಕುಲದವರು ಪೋಲೀಸರನ್ನ ಕರೆಸಿದ್ದರು. ಪೋಲೀಸು ವ್ಯಾನು ದೇವಸ್ಥಾನದ ಹತ್ತಿರ ನಿಂತಿತ್ತು. ಒಳಗಿದ್ದ ಪೋಲೀಸರು ದಡದಡನೆ ಇಳಿದು ಬಂದರು. ಗಂಗಣ್ಣ ಜಗುಲಿ ಮೇಲೆ ನಿಂತವನು ಕೆಳಗಿಳಿದು ಬರದೆ ಸುಮ್ಮನೆ ನೋಡ್ತಾ ಇದ್ದ. ಅಷ್ಟೊತ್ತಿಗೆ ತಿರುಮಕೂಡಲಿನ ಒಕ್ಕಲಿಗ ಲೀಡರೂ ಬಂದರು. ಅವರೊಂದಿಗಿಷ್ಟು ಪುಂಡುಡುಗರು ಬಂದು ಕೈಕೈ ಮಿಲಾಯಿಸಿದರು. ಈಗಾಗಲೇ ಕುಂಟು ಸಿದ್ದಪ್ಪ ಯಾರಿಗೊ ಹೇಳಿ ಎಮ್ಮೆಲ್ಲೆ ಟಿ.ಪಿ. ಬೋರಯ್ಯನವರಿಗೆ ವಿಷಯ ಮುಟ್ಟಿಸಿದ ಕಾರಣ ತಾಲ್ಲೊಕು ಶಿಕ್ಷಣ ಇಲಾಖೆ ಅಧಿಕಾರಿ ಧಾವಿಸಿ ಬಂದಿದ್ದರು. ಅವರ ಮುಖ ನೋಡಿದ್ದೆ ಜೋರಾಗಿ ಮಾತಾಡುತ್ತಿದ್ದ ನಟರಾಜು ಮೇಷ್ಟ್ರು ಏನೂ ಮಾತಾಡದೆ ಮುಖ ಕಿವುಚುತ್ತ ಬನ್ನಿ ಸಾರ್. ಒಳಗ್ ಬನ್ನಿ ಸಾರ್ ಅಂತ ಗಾಬರಿಯಲ್ಲಿ ಮೆತ್ತಗಾಗಿದ್ದು ಕಂಡಿತು. +ಅದಾಗಿ ವಾರ್ಷಿಕ ಪರೀಕ್ಷೆ ಮುಗಿದು ಏಳನೇ ಕ್ಲಾಸ್ ಮೆಟ್ಟಿಲು ಹತ್ತಿದಾಗ ನಟರಾಜ ಮೇಷ್ಟ್ರು ವರ್ಗ ಆಗಿರ ಸುದ್ದಿನ ಆ ಗಂಗಣ್ಣನೇ ತಂದು ಕೊಟ್ಟ ಶಿಕ್ಣಣ ಇಲಾಖೆಯಿಂದ ಬಂದಿದ್ದ ಸ್ಪೀಡ್ ಪೋಸ್ಟ್, ಕ್ಲಾಸ್ ಕ್ಲಾಸಿಗೂ ತಲುಪಿ ಎಲ್ಲ ಟೀಚರುಗಳು ಹೆಡ್ ಮೇಷ್ಟ್ರು ರೂಮಲ್ಲಿ ಕುಂತು ಒಳಗೊಳಗೆ ಗುಸುಗುಸು ಪಿಸಿಪಿಸಿ ಅಂತ ಮಾತಾಡುತ್ತಿದ್ದುದು ಸ್ಕೂಲಾಚೆಗು ಸುದ್ದಿ ಹೋಯ್ತು. +-ಎಂ.ಜವರಾಜ್ +(ಮುಂದುವರಿಯುವುದು) +[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. +ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ] \ No newline at end of file diff --git a/PanjuMagazine_Data/article_1060.txt b/PanjuMagazine_Data/article_1060.txt new file mode 100644 index 0000000000000000000000000000000000000000..ff06d2a46158b4386f496a495aa9dfd9859e9056 --- /dev/null +++ b/PanjuMagazine_Data/article_1060.txt @@ -0,0 +1,6 @@ + + + + + + \ No newline at end of file diff --git a/PanjuMagazine_Data/article_1061.txt b/PanjuMagazine_Data/article_1061.txt new file mode 100644 index 0000000000000000000000000000000000000000..61d8261d7e60930f90f4d3fa9119652c31b3fce4 --- /dev/null +++ b/PanjuMagazine_Data/article_1061.txt @@ -0,0 +1,6 @@ +ಪಂಜು ಸಾಹಿತ್ಯದ ಚಿಲುಮೆ, ಅಂತರ್ಜಾಲದಲ್ಲಿ ಹೆಸರು ಮಾಡಿದಕ್ಕಿಂತಲೂ ಅಂತರಂಗದಲ್ಲಿ ಸದ್ದಿಲ್ಲದೆ ಸೇರಿಕೊಂಡ ಸಿಹಿ ಪನ್ನೀರು. ಸಾಹಿತ್ಯ ರಚಿಸಿ ಮಸ್ತಕದಿಂದ ಪುಸ್ತಕಕ್ಕೆ ಇಳಿಸಿ ಕೂತವರಿಗೆ; ಪುಸ್ತಕದಿಂದ ಓದುಗರ ಮನೆಗೆ ಮನಸಿಗೆ ತಲುಪಿಸುವಂತಹ ಪರಿಪೂರ್ಣ ಕೆಲಸ ಪಂಜುವಿನಿಂದಾಗಿದೆ. ಪಂಜು ಎಂದರೆ ಬೆಳಕು, ಕತ್ತಲಲ್ಲಿದ್ದವರಿಗೆ ಪಂಜುಹಿಡಿದು ಸಾಹಿತ್ಯ ಬೆಳೆಸುವ ದಾರಿತೋರಿಸಿದೆ ನಾಡಿಗೆ ಪರಿಚಯಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲು ಸಹಾಯವಾಗಿ ನಿಂತಿದೆ. ಯುವ, ಎಲೆ ಮರೆ ಕಾಯಿಯಂತಹ ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಿ ನಿಂತು ೭ ವಸಂತಗಳನ್ನು ಪೂರೈಸಿದೆ. ಈ ಸಪ್ತ ವರ್ಷದಲ್ಲಿ ಸಾಕಷ್ಟು ಓದುಗರ ಮನಗೆದ್ದು ಸುಪ್ತವಾದ ಮನಸಲ್ಲಿ ನೆಲೆಯೂರಿದೆ. +ವೈಯಕ್ತಿಕವಾಗ ನನಗೆ ಪರಿಚಯವಾಗಿ ೨-೩ ವರ್ಷಗಳಷ್ಟೇ ಆದರೂ ನನ್ನ ಕವನ ಕಥೆಗಳನ್ನು ಓದುಗರಿಗೆ ಮುಟ್ಟಿಸಿ ಪ್ರೋತ್ಸಹಿಸಿರುವುದು, ಬರವಣಿಗೆಯಲ್ಲಿ ಹೆಚ್ಚು ತೊಡಗುವಂತೆ ಮಾಡಿದೆ. ಕೇವಲ ಒಂದು ಪ್ರಕಾರದ ಸಾಹಿತ್ಯಕ್ಕೆ ಸೀಮಿತಗೊಳಿಸದೆ, ವೈಯಕ್ತಿಕವಾಗಿ ಮಾತಾಡಿ ಇನ್ನಿತರ ಸಾಹಿತ್ಯ ಪ್ರಕಾರಗಳನ್ನೂ ಬರೆಯಿರಿ ಎಂದು ಹುರಿದುಂಬಿಸುವ ಕೆಲಸ ಪಂಜು ಬಳಗ ಮಾಡುತ್ತಿದೆ. +ಪಂಜು ಎಂದರೆ ಸಾಕು, ಪಂಜು ನೆನಪಾದರೆ ಸಾಕು ಏನಾದರೂ ಬರೆದು ಕಳಿಸಬೇಕೆನಿಸುತ್ತದೆ. ತಕ್ಷಣ ಜಾಗೃತನಾಗಿ ಬರೆಯಲು ತೊಡಗುತ್ತೇನೆ. ನನ್ನನ್ನು ಗುರುತಿಸುವವರೂ, ಮತ್ತೊಬ್ಬರಿಗೆ ಪರಿಚಯಿಸಲು ಪಂಜುವಿನಲ್ಲಿ ಇವರ ಕಥೆ ಬಕವನ ಬರುತ್ತೆ ನೋಡಿ; ವರದೇಂದ್ರ ಕೆ ಅಂತ, ಅವರೇ ಇವರು ಎಂದು ಪರಿಚಯಿಸುವುದನ್ನು ಕಂಡು ಕೇಳಿದಾಗ ಪಂಜುವಿನ ಬಗ್ಗೆ ಹೆಮ್ಮೆ ಎನಿಸುತ್ತದೆ. +ಜನವರಿ ೨೧ ರಂದು ಪಂಜುವಿನ ಹುಟ್ಟುಹಬ್ಬ. ಈಗಾಗಲೆ ಏಳು ವರ್ಷಗಳನ್ನು ಪೂರೈಸಿರುವ ಪಂಜು ಹೀಗೆ ನೂರಾರು ವರುಷ ಹುಟ್ಟುಹಬ್ಬ ಆಚರಿಸಿಕೊಳ್ಳಲಿ. ನಾವೆಲ್ಲ ಪಂಜು ಬಳಗದಲ್ಲಿದ್ದುಕೊಂಡು ಪಂಜುವನ್ನು ಉತ್ತಮ ಪತ್ರಿಕೆಯಾಗಿಸೋಣ. +“ಹುಟ್ಟು ಹಬ್ಬದ ಶುಭಾಶಯಗಳು ಪಂಜು” +–ವರದೇಂದ್ರ ಕೆ. \ No newline at end of file diff --git a/PanjuMagazine_Data/article_1062.txt b/PanjuMagazine_Data/article_1062.txt new file mode 100644 index 0000000000000000000000000000000000000000..adff03d5d50a40cf2f28198fcc93d421e440aa2b --- /dev/null +++ b/PanjuMagazine_Data/article_1062.txt @@ -0,0 +1,14 @@ +ಮಳೆಗಾಲದಲ್ಲಿನ ಮಲೆನಾಡು ಅಂದ್ರೆ ಎಲ್ಲೆಡೆ ಹಚ್ಚ ಹಸಿರು. ಬಿಟ್ಟೂ ಬಿಡದೇ ಸುರಿಯೋ ಮಳೆಗೆ ಕಗ್ಗಲ್ಲುಗಳ ನಡುವೆ ಬೈತಲೆ ತೆಗೆದಂತಹ ಜಲಪಾತಗಳು, ಹಸಿರು ಹೊದ್ದ ಕಾನನಗಳು. ಇವುಗಳನ್ನು ಕಣ್ತುಂಬಿಕೊಳ್ಳೋಕೆ ಎಲ್ಲೆಡೆಯಿಂದ ಬರ್ತಿರೋ ಪ್ರವಾಸಿಗರಿಗೆ ರೆಕ್ಕೆಬಿಚ್ಚಿದ ನವಿಲುಗಳ, ಇಂಪು ಕಂಠದ ಕೋಗಿಲೆಗಳ ಸ್ವಾಗತ. ಮಳೆ ಹೆಚ್ಚಾದಂತೆಲ್ಲಾ ಹೆಚ್ಚಾಗೋ ಜಲಪಾತಗಳ ಭೋರ್ಗರೆತಕ್ಕೆ ಸುತ್ತಲಿನ ಜಾಗದಲ್ಲೆಲ್ಲಾ ಮಂಜು ಮುಸುಕಿ ಜಲಪಾತದ ನೋಟವೇ ಮುಚ್ಚಿಹೋಗೋದೂ ಉಂಟು. ಅಂತಹ ಸಂದರ್ಭದಲ್ಲೆಲ್ಲಾ ಬೀಸೋ ಗಾಳಿಯ ಜೊತೆ ತೆರೆತೆರೆಯಾಗಿ ಸರಿವ ಮಂಜ ಪರದೆಯ ಹಿಂದಿನ ಜಲಪಾತವನ್ನು ಕಣ್ತುಂಬಿಕೊಳ್ಳೋ ಅನುಭವವೇ ಅದ್ಭುತ. ಹಾಗೇ ಸರಿಯುತ್ತಿದ್ದ ಮಂಜ ನಿರೀಕ್ಷೆಯಲ್ಲಿದ್ದಾಗ ಬೀಸಿದ ಗಾಳಿಗೆ ಹಾರಿತ್ತೊಂದು ವೇಲು. ಅದನ್ನು ಹಿಡಿಯೋಕಂತ ಓಡಿದ ಚೆಲುವೆಯ ಹಿಂದೆಯೇ ಇವನ ಹೃದಯವೂ ಹಾರಿಹೋಗಿತ್ತು. +ಅವಳು ಮಂಜುಳ. ಅವಳ ಕಿಲ ಕಿಲ ನಗು ಮಳೆಗಾಲದ ಝರಿಯಂತೆ. ರೈತರಿಗೆ ಖುಷಿ ತರೋ ಸ್ವಚ್ಛ,ಶುಭ್ರ ನೀರ ಧಾರೆಯಂತೆ ಅವಳ ಶ್ವೇತ ದಂತಪಂಕ್ತಿಗಳಾಚೆಗಿನ ಮಂದಹಾಸ. ವೇಲು ಸಿಕ್ಕ ಖುಷಿಯೊಂದಿಗೆ ಜಲಪಾತದದೆದುರ ಮಂಜ ಪರದೆ ಸರಿದದ್ದು ಅವಳು ಮತ್ತವಳ ಗೆಳತಿಯರಿಗೆ ಹರ್ಷವಿತ್ತಿದ್ರೆ ಅವರ ನಗುವಲೆ ಅವರಿಗೇ ಅರಿವಿರದಂತೆ ಎಷ್ಟೋ ನೋಟಗಳನ್ನು ತಮ್ಮತ್ತ ಸೆಳೆದಿತ್ತು. ಆ ರೀತಿ ಸೆಳೆಯಲ್ಪಟ್ಟವರಲ್ಲಿ ಮಾಧವನೂ ಒಬ್ಬ. ಮಂಜ ಪರದೆ ಸರಿದು ರಾಜ, ರಾಣಿ, ರೋರರ್, ರಾಕೆಟ್ಟುಗಳ ಸೊಬಗು ಹಂತಹಂತವಾಗಿ ಅನಾವರಣಗೊಳ್ಳುತ್ತಿದ್ದರೂ ಇವನ ದೃಷ್ಟಿ ಮಾತ್ರ ಅವಳತ್ತಲೇ ನೆಟ್ಟಿತ್ತು. ಯಾಕೋ ಇತ್ತ ತಿರುಗಿದ ಅವಳ ದೃಷ್ಟಿ ಇವನೊಂದಿಗೆ ಬೆರೆತಿದ್ದು ಕ್ಷಣಕಾಲ ಮಾತ್ರವೋ ಅಥವಾ ಹಾಗೆ ಅವನಿಗನಿಸಿತ್ತೋ ಗೊತ್ತಿಲ್ಲ. ಕೆಲ ನಿಮಿಷಗಳಲ್ಲೇ ಆ ಗುಂಪು ಅಲ್ಲಿಂದ ಮರೆಯಾಗಿತ್ತಾದ್ರೂ ಅವಳ ಗುಂಗಲ್ಲೇ ಇದ್ದ ಇವನಿಗೆ ಅದರ ಅರಿವಾಗೋದ್ರಲ್ಲಿ ಇನ್ನೊಂದು ಮಂಜ ಪರದೆ ಜಲಪಾತದೆದುರು ಬಂದಾಗಿತ್ತು ! +ಮಂಜ ತೆರೆ ಇಷ್ಟು ಹೊತ್ತು ಕಣ್ಣಾಮುಚ್ಚಾಲೆಯಾಡುತ್ತಿದ್ದ ಜಲಪಾತವನ್ನಷ್ಟೇ ಅಲ್ಲ,ತನ್ನ ಜೀವನದ ಮಹತ್ವದ ಕ್ಷಣವನ್ನೂ ಮುಚ್ಚುತ್ತಿದೆಯಾ ಅನಿಸಿತ್ತವನಿಗೆ. ಮಂಜ ತೆರೆ ಮತ್ತೆ ತೆರೆಯೋವರೆಗೆ ಕಾದು ಜಲಸಿರಿಯ ಸವಿಯನ್ನನುಭವಿಸಲೇ ಅಥವಾ ಆಗಲೇ ಹೋದವಳು ಎತ್ತ ಹೋದಲೆಂದು ತಿಳಿಯಲೇ ಎಂಬ ದ್ವಂದ್ವ ಕ್ಷಣಕ್ಷಣವೂ ಕಾಡತೊಡಗಿ ಮನಸ್ಸಿನ ಮಾತು ಕೇಳೋ ಬದಲು ಹೃದಯ ಹಾರಿದತ್ತ ಸಾಗಿದನವ. ಅಲ್ಲೆಲ್ಲಿ ಹುಡುಕಿದರೂ ಅವಳ ಸುಳಿವಿಲ್ಲ. ಇಡೀ ಜೋಗಕ್ಕೆ ಅವಳೊಬ್ಬಳೇ ಬಂದಿದ್ದರಾದರೂ ಹೇಗಾದ್ರೂ ಹುಡುಕಬಹುದಿತ್ತೇನೋ. ಬರೋ ನೂರಾರು ಪ್ರವಾಸಿಗರ ಮಧ್ಯೆ ಕಳೆದುಹೋದವಳನ್ನು ಎಲ್ಲಂತ ಹುಡುಕೋದು ? ಜಲಪಾತವನ್ನಾದ್ರೂ ಕಣ್ತುಂಬಿಕೊಳ್ಳೋಣವೆಂದು ವಾಪಾಸ್ಸುಬಂದ್ರೂ ಬೀಳುತ್ತಿದ್ದ ನೀರ ಧಾರೆಯ ಬದಲು ಅವಳ ಮುಖವೇ ಕಂಡಂತಾಗುತ್ತಿತ್ತು ! +ಆ ಜಾಗದಲ್ಲಿ ಇದ್ದಷ್ಟೂ ಅವಳ ಮುಖವೇ ಕಾಣುತ್ತೆ ಅಂದುಕೊಂಡು ಹೊರಬಂದು ಬೇರೆಲ್ಲಾದರೂ ಹೋಗಬೇಕೆಂದು ಅಂದುಕೊಳ್ಳುವಷ್ಟರಲ್ಲೇ ಜಲಪಾತದಿಂದ ಎಂಟು ಕಿ.ಮೀ ದೂರದಲ್ಲೇ ಕಲ್ಸಂಕ ಅಂತೊಂದು ಜಾಗವಿದೆ ಅಂತ ಗೆಳೆಯನೊಬ್ಬ ಹೇಳಿದ ಮಾತು ನೆನಪಾಯ್ತು. ಹರಿಯೋ ಝರಿಯ ಮೇಲೆ ನಿರ್ಮಿತವಾದ ನೈಸರ್ಗಿಕ ಬ್ರಿಡ್ಜೇ ಕಲ್ಸಂಕ. ಪ್ರಪಂಚದಲ್ಲೇ ಎರಡನೇ ಅತೀ ಉದ್ದದ ನೈಸರ್ಗಿಕ ಬ್ರಿಡ್ಜು ಎಂದು ಎಂದೋ ಪತ್ರಿಕೆಯಲ್ಲಿ ಅದರ ಬಗ್ಗೆ ಓದಿದ್ದ ನೆನಪಾಗಿ ಅದರ ಬಳಿ ಸಾಗೋಕೆ ಬಸ್ಸೋ, ಆಟೋವೋ ಸಿಗುತ್ತೆಂದು ಹುಡುಕಿದ್ರೂ ಏನೂ ಸಿಕ್ಕದೇ ಕೊನೆಗೆ ಆ ಮಾರ್ಗವಾಗಿ ಬೇರೆ ಊರಿಗೆ ಸಾಗುತ್ತಿದ್ದ ಕಾರವರ ಜೊತೆ ಸೇರಿ ಕಲ್ಸಂಕ ತಲುಪಿದ್ದ. ಹೆಸರೇ ಹೇಳುವಂತೆ ನೆಲದಿಂದ ಸುಮಾರು ಹತ್ತು ಹದಿನೈದಡಿ ಎತ್ತರಕ್ಕಿರುವ ನಲವತ್ತೈವತ್ತು ಅಡಿ ಉದ್ದದ ಸೇತುವದು. ಅದರ ಕೆಳಗೆ ನದಿ ಮೆಲುವಾಗಿ ಹರಿಯುತ್ತಿದ್ದರೆ ಅತ್ತಿತ್ತ ಹಸಿರ ರಾಶಿ. ಸೇತುವಿನಾಚೆಯೊಂದು ಗುಡಿ. ಕೆಳಭಾಗದಲ್ಲೂ ಒಂದು ಚೌಡಿಯಿದ್ದಾಳೆಂದು ನಂಬುವ ಜನ ಇಟ್ಟ ಕುಂಕುಮಗಳಿರೋ ಕಲ್ಲುಗಳು. ಆಚೆ ಬದಿ ಹಸಿರ ಹೊನ್ನು ಹೊದ್ದ ಗದ್ದೆಗಳಿದ್ದರೆ ಈಚೆ ಬದಿ ಜಂಬಿಟ್ಟಿಗೆಗಳ ರಾಶಿ ಮತ್ತು ಇಟ್ಟಿಗೆ ತೆಗೆಯೋಕೆಂತಲೇ ಮಾಡಿರುವ ಜಾಗ. ಚೌಡಿಯೋ ದುರ್ಗಿಯೋ ಇದ್ದಾಳೆಂಬ ನಂಬಿಕೆಯಿರದಿದ್ದರೆ ಹಂತಹಂತವಾಗಿ ಕಲ್ಸಂಕವೂ ಯಾರದೋ ಮನೆಯ ಚಪ್ಪಡಿಯಾಗುತ್ತಿತ್ತೇನೋ ಎನಿಸಿತವನಿಗೆ. ಜೋಗದಂತೆ ಭೋರ್ಗರೆಯದೇ ಶಾಂತವಾಗಿ ಹರಿಯುತ್ತಿದ್ದ ಝರಿ ಇಷ್ಟವಾಯ್ತವನಿಗೆ. ಹಾಗೇ ನೀರಿಗಿಳಿದು ಕೊಂಚ ಹೊತ್ತು ಹರಿವ ನೀರಲ್ಲಿ ಕಾಲಾಡಿಸುತ್ತಾ ಕೂತವನಿಗೆ ಸೇತುವಿನ ಮೇಲೊಂದಿಷ್ಟು ಹೊತ್ತು ಕೂತು ಧ್ಯಾನಿಸಿದರೆ ಹೇಗನ್ನಿಸಿತು. ಹೇಗಿದ್ರೂ ಆ ಜಾಗದಲ್ಲಿ ತನ್ನ ಬಿಟ್ಟರೆ ಬೇರ್ಯಾರೂ ಇಲ್ಲ. ಬರುವಾಗ ಇಟ್ಟಿಗೆಗಳ ಪಕ್ಕದಲ್ಲೊಂದು ಸೈಕಲ್ಲು ಕಂಡಿತ್ತಾದರೂ ಸೇತುವಿನ ಬಳಿ ಯಾರೂ ಇರಲಿಲ್ಲ. +ಸೈಕಲ್ಲಿನ ಸವಾರ ಇಲ್ಲ ಸವಾರಿಣಿ ಅಲ್ಲೇ ಎಲ್ಲೋ ಇದ್ದು ಸದ್ಯದಲ್ಲೇ ವಾಪಾಸ್ಸು ಬರಬಹುದೇ ? ಬಂದು ನಿರ್ಜನ ಸೇತುವಿನ ಮೇಲೆ ಧ್ಯಾನಕ್ಕೆ ಕೂತಿರೋ ವಿಚಿತ್ರ ಆಸಾಮಿಯನ್ನು ನೋಡಿ ಗಾಬರಿಗೊಳ್ಳಬಹುದೇ ಎಂದನಿಸಿತೊಮ್ಮೆ. ಜಗಕ್ಕಾಗಿ ತಾನು ಬಾಳಬೇಕೇ ? ತನಗಾಗಿ ಬದುಕಿದರೆ ಸಾಕೆನಿಸಿ ಸೇತುವಿನ ಮೇಲೆ ಹತ್ತಿ ಕೂತ. ಹೊಳೆಯಂಚಲ್ಲಿ ಚಿಗುರಿದ್ದ ಸಂಪಿಗೆಯ ಪರಿಮಳದಲ್ಲಿ, ಕೆಳಗೆ ಹರಿಯುತ್ತಿರುವ ನದಿಯ ನಿನಾದ, ಹಕ್ಕಿಗಳ ಚಿಲಿಪಿಲಿಯ ಪ್ರಶಾಂತ ಪರಿಸರದಲ್ಲಿ ಅದೆಷ್ಟು ಹೊತ್ತು ಹಾಗೇ ಕುಳಿತಿದ್ದನೋ ಗೊತ್ತಿಲ್ಲ. ಕಣ್ಣು ಬಿಟ್ಟು ನೋಡಿದರೆ ಪಕ್ಕದಲ್ಲೇ ಒಬ್ಬ ಹುಡುಗ. ತನ್ನನ್ನೇ ನೋಡುತ್ತಿದ್ದ ಅವನನ್ನು ನೋಡಿ ಇವನಿಗೆ ಹೆದರಿಕೆಯಾಗಿ ಒಮ್ಮೆ ಹಿಂದೆ ಸರಿದ. ಇವನ ದಿಢೀರ್ ಚಲನೆಯನ್ನು ನೋಡಿ ಅವನೂ ಹೆದರಿ ಹಿಂದೆ ಸರಿದ. ಚೂರು ಆಯ ತಪ್ಪಿದ್ರೆ ಸೇತುವೆಯಿಂದ ಕೆಳಗೇ ಬೀಳುತ್ತಿದ್ದ ಅವನ ಅವಸ್ಥೆಯನ್ನು ನೋಡಿ ಇವನಿಗೆ ನಗು ಬಂತು. ನಗುತ್ತಿದ್ದ ಮಾಧವನಿಂದ ತನ್ನ ಮಂಕುತನ ನೆನಪಾಗಿ ಹುಡುಗನಿಗೂ ನಗುವುಕ್ಕಿತು. ಅಚ್ಚರಿ, ನಿರಾಸೆ,ಪ್ರಶಾಂತತೆ, ಭಯ, ನಗು..ಹೀಗೆ ಅದೆಷ್ಟು ಸ್ಥಾಯಿ ಭಾವಗಳು ತನಗೆ ಕೊಂಚ ಕಾಲದಲ್ಲೇ ಕಾಡಿದ ಬಗೆ ಮಾಧವನಿಗೆ ಅಚ್ಚರಿ ಮೂಡಿಸಿತ್ತು. ಅವನೊಂದಿಗೆ ಆ ಸ್ಥಳದ ಬಗ್ಗೆಯೊಂದಿಷ್ಟು ಮಾಹಿತಿ ಕಲೆಹಾಕಿ ಹೊರಡಲನುವಾದ ಮಾಧವನಿಗೆ ಅವನೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳೋ ಮನಸ್ಸಾಯ್ತು. ಏ ತಡೆಯೋ ಹುಡುಗ. ನಿನ್ನೊಂದಿಗೆ ಒಂದು ಫೋಟೋ ತಗೊಳ್ಳೋಣ ಅಂತ ತನ್ನ ಮೊಬೈಲಲ್ಲೊಂದು ಸೆಲ್ಪಿ ತೆಗೆದುಕೊಂಡು ತನ್ನ ಜೇಬಿನಿಂದೊಂದು ಚಾಕಲೇಟು ತೆಗೆದು ಅದನ್ನು ಬೇಡವೆನ್ನುತ್ತಿದ್ದ ಹುಡುಗನ ಕೈಗಿತ್ತು ಹೊರಡಲನುವಾದ ಮಾಧವ. "ನೀವೂ ಆ ಪಿಂಕ್ ಡ್ರೆಸ್ಸಿನ ಅಕ್ಕನ ತರಾನೆ. ಎಷ್ಟು ಸ್ವೀಟ್.." ಹೊರಡಲುವಾಗಿದ್ದ ಮಾಧವನಿಗೆ ಹೆಜ್ಜೆಗಳನ್ನ ಹುಡುಗನ ಈ ಮಾತುಗಳು ತಡೆದು ನಿಲ್ಲಿಸಿದವು. +"ಏನಂದೆ ? ಯಾವ ಪಿಂಕ್ ಅಕ್ಕ" ಅಂದ. +"ಈಗ ಸ್ವಲ್ಪ ಹೊತ್ತಿನ ಮುಂಚೆ ಒಂದಿಷ್ಟು ಅಕ್ಕಂದಿರು ಕಲ್ಸಂಕ ಹುಡುಕ್ತಾ ಬಂದಿದ್ರು . ಅದ್ರಲ್ಲೊಬ್ಳು ಪಿಂಕ್ ಚೂಡಿಧಾರ, ವೇಲು ಹೊದ್ದಿದ್ದ ಅಕ್ಕ ಎಲ್ಲರ ಜೊತೆಗೂ ನಗುನಗುತ್ತಾ ಮಾತಾಡ್ತಿದ್ಳು. ಆಚೆ ದಡದಲ್ಲಿದ್ದ ನಾನೇ ಅವ್ರಿಗೆ ಈ ಸ್ಥಳದ ಬಗ್ಗೆ ಹೇಳಿದ್ದೆ. ಇದ್ನೆಲ್ಲಾ ನೋಡಿದ್ದ ಅವ್ರು ಹೋಗ್ತಾ ಹೋಗ್ತಾ ನಂಗೊಂದು ಚಾಕಲೇಟ್ ಕೊಟ್ಟು ಹೋಗಿದ್ರು. ಸ್ವೀಟ್ ಚಾಕಲೇಟ್. ಸ್ವೀಟ್ ಅಕ್ಕ" ಅಂದ ಆ ಹುಡುಗ. +ಮಾಧವನಿಗೆ ತನ್ನ ಮನಸೆಳೆದವಳು ನೆನಪಾದಳು. "ಅವ್ರು ಎಷ್ಟು ಜನ ಇದ್ದರು ಅಂದೆ" ? +"ಎಂಟೋ ಒಂಭತ್ತೋ ಜನ ಇದ್ದರು ಅನ್ಸತ್ತೆ" ಅಂತ ಇದ್ದರೆ ಮಾಧವನಿಗೆ ಅವರನ್ನು ನೋಡೋ ಛಾನ್ಸನ್ನು ಎರಡನೇ ಸಲ ಮಿಸ್ ಮಾಡಿಕೊಂಡ ಬೇಜಾರು. +"ಅವರು ಎಲ್ಲಿ ಹೋದ್ರು ಗೊತ್ತಾ?" ಅಂದ ಮಾಧವ +"ಎಲ್ಲಿ ಅಂತ ಸರಿಯಾಗಿ ಗೊತ್ತಿಲ್ಲ. ಆದ್ರೆ ಜಲಪಾತದ ಬಗ್ಗೆ ಮಾತಾಡ್ತಿದ್ದ ಅವರಿಗೆ ಬ್ರಿಟಿಷ್ ಬಂಗ್ಲೆ ಗೊತ್ತಾ ಅಂತ ಕೇಳಿದ್ದೆ. ಗೊತ್ತಿಲ್ಲ ಅಂದ ಅವರಿಗೆ ಅದ್ರ ಬಗ್ಗೆ ಹೇಳಿದ್ದೆ.ಹತ್ತೂವರೆ ಹನ್ನೊಂದರ ಮೇಲೆ ಬಿಸಿಲು ಜಾಸ್ತಿಯಾಗೋದ್ರಿಂದ ಜಲಪಾತದೆದುರಿನ ಮಂಜು ಕಮ್ಮಿಯಾಗಿ ಅದು ಸರಿಯಾಗಿ ಕಾಣುತ್ತೆ ಅಂತಲೂ ಹೇಳಿದ್ದೆ. ಹೌದಾ ? ಹಾಗಾದ್ರೆ ಅಲ್ಲಿಗೆ ಮತ್ತೆ ಹೋಗೋಣ್ವಾ ಅಂತ ಮಾತಾಡಿಕೊಳ್ತಿದ್ದ ಅವರು ಅಲ್ಲೇ ಎಲ್ಲೋ ಹೋಗಿರಬೇಕು" ಅಂದ ಅವ. ಸರಿ ಅಂತ ಹೊರಬಂದ ಮಾಧವ ಎದ್ದೆನೋ ಬಿದ್ದೆನೋ ಅನ್ನುವಂತೆ ನಡೆಯುತ್ತಾ, ಓಡುತ್ತಾ ಬಂದು ಅಂತೂ ಸಿಕ್ಕ ವಾಹನಗಳ ಹಿಡಿದು ಜಲಪಾತದ ಹತ್ತಿರ ತಲುಪಿದ. +ಮಂಜ ತೆರೆ ಸರಿದಾಗೆಲ್ಲಾ ಜಲಪಾತದ ಹಿಂದೊಂದು ಬಂಗಲೆ ಕಾಣಿಸುತ್ತಿತ್ತು. ಬ್ರಿಟಿಷರ ಕಾಲದಲ್ಲಿ ಕಟ್ಟಿಸಿದ್ದೆಂದು, ಒಂದು ಕಾಲದಲ್ಲಿ ಅವರ ಪ್ರವಾಸಿ ಮಂದಿರವಾಗಿತ್ತೆಂದೂ ಅದಕ್ಕೆ ಬ್ರಿಟಿಷ್ ಬಂಗಲೊ ಎಂದೇ ಹೆಸರು. ಅದರ ಪಕ್ಕದಲ್ಲೇ ಸಾಗಿ ಬರೋ ಶರಾವತಿ ಒಂಭೈನೂರು ಅಡಿಗಳಿಗಿಂತಲೂ ಹೆಚ್ಚಿನ ಆಳಕ್ಕೆ ಧುಮುಕುತ್ತಾಳೆ. ನಿಧಾನವಾಗಿ ಹರಿಯುತ್ತಿರೋ ಶರಾವತಿ ವೇಗ ಪಡೆದುಕೊಂಡು ಆಳಕ್ಕೆ ಧುಮುಕೋ ತಾಣವದು. ಮುಂಗಾರು ಮಳೆ ಚಿತ್ರದಲ್ಲಿ ಹೈ ಜೂಮ್ ಕ್ಯಾಮರಾ ಉಪಯೋಗಿಸಿ, ಕ್ರೇನ್ ಬಳಸಿ ತೆಗೆದ ಚಿತ್ರವನ್ನು ನಿಜವೆಂದೇ ನಂಬಿದ ಕೆಲವರು ಅದೇ ಶೈಲಿಯಲ್ಲಿ ಪೋಸ್ ಕೊಡೋಕೆ ಹೋಗಿ ಪ್ರತಿವರ್ಷವೂ ಪ್ರಾಣ ಕಳೆದುಕೊಳ್ಳೋ ಮೃತ್ಯುಕೂಪವದು. ಆದರೆ ದೂರದಿಂದ ನೋಡುವವರಿಗೆ ತನ್ನತ್ತ ಬರಸೆಳೆವ ಚುಂಬಕವೂ ಹೌದದು. ಜಲಪಾತದೆದುರು ಹುಡುಕಿ ಹುಡುಕಿ ಅವಳಿರದ ಜಾಗದಲ್ಲಿ ಕುಳಿತಿರೋಕಾಗದೇ ಎದ್ದು ಹೊರಬರುವಾಗ ಜಲಪಾತದ ಹಿಂದಿರುವ ಪ್ರವಾಸಿ ಬಂಗಲೆಯಡೆಗೆ ಹೋಗೋಣವೆನಿಸಿತು.ಆ ಕಡೆ ಕರೆದೊಯ್ಯೋಕೆ ರೆಡಿಯಿದ್ದ ಜೀಪು, ಕಾರಿನವರ ಧ್ವನಿಗಳೂ ಆ ಸಮಯಕ್ಕೆ ಕೇಳಬೇಕೇ ? .ಮುಂಗಾರು ಮಳೆ ಸ್ಪಾಟ್, ಬ್ರಿಟಿಷ್ ಬಂಗಲೋ ಅಂತ ಕೂಗುತ್ತಿದ್ದ ವ್ಯಾನಿನವರ ದನಿ ಕೇಳಿ ತನ್ನ ಮಳೆ ಹುಡುಗಿ ಅಲ್ಲೇನಾದ್ರೂ ಹೋಗಿರಬಹುದಾ ಅನ್ನೋ ಆಲೋಚನೆ ಬಂತು ಮಾಧವನಿಗೆ. ಸಿಕ್ಕರಾಯಿತು. ಸಿಗದಿದ್ದರೂ ನೋಡೋದ್ರಲ್ಲೇನಿದೆ ಅಂದ್ಕೊಂಡವ ಸೀದಾ ಎದುರಿಗಿದ್ದ ವ್ಯಾನು ಹತ್ತಿದ್ದ. ಆ ವ್ಯಾನಿನವ ಇನ್ನೂ ಮತ್ತೂ ಜನ ಬಂದು ಹತ್ತಲಿ ಅಂತ ಸಮಯ ಕಾಯ್ತಾ ಇದ್ರೆ ಒಳಗೆ ಕೂತ ಮಾಧವನ ಅಸಹನೆ ಜಾಸ್ತಿಯಾಗುತ್ತಿತ್ತು. ಅದೆಷ್ಟು ಸಲ ವಾಚು ನೋಡಿಕೊಂಡನೋ ಎಷ್ಟು ಸಲ ಧನಲೋಭಿ ಡ್ರೈವರನಿಗೆ ಶಾಪ ಹಾಕಿದ್ನೋ ಅವನಿಗೇ ಗೊತ್ತು. ವಾಚೇ ನಿಂತುಹೋಗಿದೆಯೇನೋ ಅಂತ ಪರೀಕ್ಷಿಸಬೇಕೆನ್ನುವಷ್ಟರಲ್ಲಿ ಗಾಡಿ ಹೊರಟಿತು. +ಇದ್ದ ಸಿಕ್ಕಾಪಟ್ಟೆ ಗಾಡಿಗಳ ಮಧ್ಯೆ ಇವನ ಗಾಡಿ ಒಂದಿಷ್ಟು ದಾರಿ ಮಾಡಿಕೊಂಡು ಬ್ರಿಟಿಷ್ ಬಂಗಲೋ ತಲುಪುವಷ್ಟರ ಹೊತ್ತಿಗೆ ಇವನಿಗೆ ಕಣ್ಣೆದುರೇ ವರ್ಷಗಳು ಕಳೆದುಹೋದ ಭಾವ! ಅಲ್ಲಿ ಹೋಗಿದ್ದೇನೋ ಹೌದು. ಆದ್ರೆ ಅಲ್ಲಿ ಏನೂ ನೋಡೋಕಾಗ್ತಿರಲಿಲ್ಲ. ಗುಂಪುಗೂಡಿದ್ದ ಜನರ ಮಧ್ಯೆ ಏನಾಯಿತು ಅಂತ ಹಣುಕಿ ನೋಡೋಕೆ ಪ್ರಯತ್ನಿಸಿದ್ರೂ ಏನೂ ಕಾಣ್ತಿರಲಿಲ್ಲ. ದೂರದಲ್ಲೊಂದಿಷ್ಟು ಜನ ಪೋಲೀಸರನ್ನ ಕರೆಸಿ, ಫೈರಿಂಜವ್ರನ್ನ ಕರೆಸಿ ಅಂತ ಕೂಗ್ತಿದ್ದಿದು ಕೇಳಿಸ್ತಿತ್ತು. ಈಗಾಗಲೇ ನೆರೆದಿದ್ದ ಒಂದಿಷ್ಟು ಪೋಲೀಸರು ಜನರನ್ನ ಮತ್ತೂ ಮುಂದಕ್ಕೆ ಹೋಗದಂತೆ ತಡೆಯುತ್ತಿದ್ದರು. ಯಾರೋ ಒಂದಿಷ್ಟು ಹುಡುಗಿಯರು ನೀರಲ್ಲಿ ಬಿದ್ದು ಕೊಚ್ಚಿಹೋದ್ರಂತೆ. ಫೈರಿಂಜಿನ್ನಿನ ಪ್ರಾಣ ರಕ್ಷಕರು ಹಗ್ಗ ಕಟ್ಟಿಕೊಂಡು ತಮ್ಮ ಜೀವದ ಹಂಗು ತೊರೆದು ಸುತ್ತಲಿನ ಕಲ್ಲುಗಳ ಮಧ್ಯೆಯೋ, ಮರದ ಬೇರುಗಳನ್ನ ಹಿಡಿದೋ ಇನ್ನೂ ಜೀವ ಉಳಿಸಿಕೊಂಡವರನ್ನು ಬದುಕಿಸೋ ಪ್ರಯತ್ನದಲ್ಲಿದ್ದಾರಂತೆ ಅನ್ನೋ ಮಾತುಗಳು ತೇಲಿಬಂದವು. ಬೇಸಿಗೆಯಲ್ಲಾದರೆ ಜಲಪಾತಕ್ಕೆ ಬರೋ ನೀರನ್ನೇ ನಿಲ್ಲಿಸಿ ಮೇಲಿಂದ ಹಗ್ಗ ಕಟ್ಟಿ ಕೆಳಗಿಳಿಯೋ ಅವರು ಬಂಡೆಗಳ ಮಧ್ಯೆ ಸಿಕ್ಕವರನ್ನು ,ಆತ್ಮಹತ್ಯೆ ಮಾಡಿಕೊಳ್ಳೋಕೆ ಹೋಗಿ ಜಲಪಾತದ ರಭಸಕ್ಕೆ ಆದ ಕಲ್ಲಿನ ಮಧ್ಯದ ಕುಳಿಗಳಲ್ಲಿ ಸಿಕ್ಕಿಕೊಂಡವರ ದೇಹಗಳನ್ನ ಹೊರತೆಗೆಯುತ್ತಾರೆ. ಆದರೆ ಈ ನೀರ ಪ್ರವಾಹದೆದುರು ಅವರಿಗೋ ಏನೂ ಮಾಡೋಕಾಗೊಲ್ಲ ಅಂತಿದ್ದರು ಕೆಲವರು. ಕಷ್ಟ ಆಗ್ಬೋದು. ಆದ್ರೂ ಅವರು ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡೋರಲ್ಲ ಅಂತಿದ್ದರು ಕೆಲೋರು. ಆದ್ರೆ ಇದ್ದ ಜನರಲ್ಲಿ ಮುಕ್ಕಾಲು ಜನ ಅಂತಹ ಮಳೆಗಾಲದಲ್ಲಿ ಬ್ರಿಟಿಷ್ ಬಂಗಲೆಗೆ ಹೋಗಿದ್ದೂ ಅಲ್ಲದೇ , ನಿಷೇಧಿತ ಪ್ರದೇಶವೆಂಬ ಬೋರ್ಡಿನ ಬೇಲಿಯನ್ನು ಹಾರಿ ಜಲಪಾತದ ತುತ್ತತುದಿಗೆ ಬಂದು ಫೋಟೋ ತೆಗೆಸಿಕೊಳ್ಳೋಕೆ ಹೋದ ಹುಡುಗಿಯರ ಹುಚ್ಚುತನಕ್ಕೆ ಬಯ್ಯೋರೆ. ಅವಳು ತನ್ನ ಮನಸೆಳೆದವಳಾ ಎಂಬ ಭಾವ ಬಂದು ಕಣ್ಣಂಚೊಮ್ಮೆ ಒದ್ದೆಯಾಯ್ತು. ಆ ಗಲಾಟೆಯ ನಡುವೆಯೂ ಬೆಳಗ್ಗೆ ಮನ ಸೆಳೆದಂತಹದೇ ದನಿ ಕೇಳಿದಂತಾಯ್ತೊಮ್ಮೆ. ಅದೇ ದನಿ. ತಲೆ ತಿರುಗಿಸಿದರೆ ಹಿಂದೆಲ್ಲಿಂದಲೋ ಹಾರಿಬಂದ ವೇಲು ಪಕ್ಕದಲ್ಲಿನ ಪೊದೆಯೊಂದಕ್ಕೆ ಸಿಕ್ಕಿಕೊಂಡಿತ್ತು. + \ No newline at end of file diff --git a/PanjuMagazine_Data/article_1063.txt b/PanjuMagazine_Data/article_1063.txt new file mode 100644 index 0000000000000000000000000000000000000000..d8e4233df72ff5cadb30ac4f6f8a9e8bfd4b4463 --- /dev/null +++ b/PanjuMagazine_Data/article_1063.txt @@ -0,0 +1,37 @@ +೧. ನಿಜವಾದ ಮಾರ್ಗ +ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು. +ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?” +ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ ಕೊಡು.” +ಈ ಪದಗಳನ್ನು ಹೇಳುವುದರ ಮುಖೇನ ಇಕ್ಕ್ಯು ದಾರಿಯನ್ನು ಎಷ್ಟು ಸ್ಪಷ್ಟವಾಗಿ ತೋರಿಸಿದನೆಂದರೆ ನಿನಕಾವಾ ಮುಗುಳ್ನಗೆ ಬೀರಿ ಸತ್ತನು. +***** +೨. ಗೂಡೋ ಮತ್ತು ಚಕ್ರವರ್ತಿ +ಚಕ್ರವರ್ತಿ ಗೋಯೋಝೈ ಗುರು ಗೂಡೋ ಮಾರ್ಗದರ್ಶನದಲ್ಲಿ ಝೆನ್‌ಅನ್ನು ಅಧ್ಯಯಿಸುತ್ತಿದ್ದ. +ಚಕ್ರವರ್ತಿ ವಿಚಾರಿಸಿದ: “ಝೆನ್‌ನಲ್ಲಿ ಈ ಮನಸ್ಸೇ ಬುದ್ಧ. ಇದು ಸರಿಯಷ್ಟೆ?” +ಗೂಡೋ ಉತ್ತರಿಸಿದ: “ನಾನು ಹೌದು ಎಂಬುದಾಗಿ ಹೇಳಿದರೆ ಅರ್ಥ ಮಾಡಿಕೊಳ್ಳದೆಯೇ ಅರ್ಥವಾಗಿದೆ ಎಂಬುದಾಗಿ ನೀನು ಆಲೋಚಿಸುವೆ. ಇಲ್ಲ ಎಂಬುದಾಗಿ ನಾನು ಹೇಳಿದರೆ, ನೀನು ಚೆನ್ನಾಗಿ ಅರ್ಥ ಮಾಡಿಕೊಳ್ಳ ಬಹುದಾದ ತಥ್ಯವನ್ನು ಅಲ್ಲಗಳೆದಂತಾಗುತ್ತದೆ” +ಇನ್ನೊಂದು ದಿನ ಗೂಡೋವನ್ನು ಚಕ್ರವರ್ತಿ ಕೇಳಿದ: “ಜ್ಞಾನೋದಯವಾದ ಮನುಷ್ಯ ಸತ್ತ ನಂತರ ಎಲ್ಲಿಗೆ ಹೋಗುತ್ತಾನೆ?” +ಗೂಡೋ ಉತ್ತರಿಸಿದ: “ನನಗೆ ಗೊತ್ತಿಲ್ಲ.” +ಚಕ್ರವರ್ತಿ ಕೇಳಿದ: “ನಿಮಗೆ ಏಕೆ ಗೊತ್ತಿಲ್ಲ?” +ಗೂಡೋ ಉತ್ತರಿಸಿದ: “ಏಕೆಂದರೆ ನಾನಿನ್ನೂ ಸತ್ತಿಲ್ಲ.” +ತದನಂತರ ತನ್ನ ಮನಸ್ಸಿನಿಂದ ಗ್ರಹಿಸಲಾಗದ ಇಂಥ ವಿಷಯಗಳ ಕುರಿತು ಹೆಚ್ಚು ವಿಚಾರಿಸಲು ಚಕ್ರವರ್ತಿ ಹಿಂದೇಟು ಹಾಕಿದ. ಆದ್ದರಿಂದ ಅವನನ್ನು ಜಾಗೃತಗೊಳಿಸಲೋ ಎಂಬಂತೆ ಗೂಡೋ ತನ್ನ ಕೈನಿಂದ ನೆಲಕ್ಕೆ ಹೊಡೆದ. ಚಕ್ರವರ್ತಿಗೆ ಜ್ಞಾನೋದಯವಾಯಿತು! +ಜ್ಞಾನೋದಯವಾದ ನಂತರ ಚಕ್ರವರ್ತಿಯು ಝೆನ್‌ ಅನ್ನೂ ಗೂಡೋವನ್ನೂ ಮೊದಲಿಗಿಂತ ಹೆಚ್ಚು ಗೌರವಿಸತೊಡಗಿದ. ತನ್ನ ಚಳಿಗಾಲದಲ್ಲಿ ಅರಮನೆಯ ಒಳಗೆ ಟೊಪ್ಪಿ ಧರಿಸಲು ಅನುಮತಿಯನ್ನೂ ಗೂಡೋನಿಗೆ ನೀಡಿದ.೮೦ ವರ್ಷಕ್ಕಿಂತ ಹೆಚ್ಚು ವಯಸ್ಸು ಆದ ನಂತರ ಗೂಡೋ ತಾನು ಭಾಷಣ ಮಾಡುತ್ತಿರುವಾಗಲೇ ನಿದ್ದೆಗೆ ಜಾರುತ್ತಿದ್ದ. ಅಂಥ ಸನ್ನಿವೇಶಗಳಲ್ಲಿ ತನ್ನ ಪ್ರೀತಿಯ ಶಿಕ್ಷಕ ತನ್ನ ವಯಸ್ಸಾಗುತ್ತಿರುವ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ಅನುಭವಿಸಲಿ ಎಂಬ ಕಾರಣಕ್ಕಾಗಿ ಚಕ್ರವರ್ತಿ ತಾನೇ ಸದ್ದು ಮಾಡದೆಯೇ ಇನ್ನೊಂದು ಕೊಠಡಿಗೆ ತೆರಳುತ್ತಿದ್ದ. +***** +೩. ವಿಧಿಯ ಕೈಗಳಲ್ಲಿ +ನೊಬುನಾಗ ಎಂಬ ಹೆಸರಿನ ಜಪಾನಿನ ಮಹಾಯೋಧನೊಬ್ಬ ತನ್ನ ಶತ್ರು ಪಾಳೆಯದಲ್ಲಿದ್ದ ಸೈನಿಕರ ಸಂಖ್ಯೆಯ ಹತ್ತನೇ ಒಂದು ಭಾಗದಷ್ಟು ಮಂದಿ ತನ್ನ ಅಧೀನದಲ್ಲಿ ಇಲ್ಲದಿದ್ದರೂ ಧಾಳಿ ಮಾಡಲು ನಿರ್ಧರಿಸಿದ. ತನ್ನ ಗೆಲ್ಲುವು ಖಚಿತ ಎಂಬುದು ಅವನಿಗೆ ಗೊತ್ತಿದ್ದರೂ ಅವನ ಸೈನಿಕರಿಗೆ ಈ ಕುರಿತು ಸಂಶಯವಿತ್ತು. +ಹೋಗುವ ದಾರಿಯಲ್ಲಿ ಇದ್ದ ಶಿಂಟೋ ಪೂಜಾಸ್ಥಳದ ಬಳಿ ಆತ ನಿಂತು ತನ್ನ ಸೈನಿಕರಿಗೆ ಇಂತು ಹೇಳಿದ: “ಪೂಜಾಸ್ಥಳದೊಳಕ್ಕೆ ಹೋಗಿ ಬಂದ ನಂತರ ನಾನು ನಾಣ್ಯವೊಂದನ್ನು ಮೇಲಕ್ಕೆ ಚಿಮ್ಮುತ್ತೇನೆ. ಮುಮ್ಮುಖ ಮೇಲೆ ಇರುವಂತೆ ನಾಣ್ಯ ಕೆಳಗೆ ಬಿದ್ದರೆ ನಾವು ಗೆಲ್ಲುತ್ತೇವೆ, ಹಿಮ್ಮುಖ ಮೇಲೆ ಇರುವಂತೆ ಬಿದ್ದರೆ ನಾವು ಸೋಲುತ್ತೇವೆ. ನಮ್ಮನ್ನು ವಿಧಿ ಅದರ ಕೈಗಳಲ್ಲಿ ಹಿಡಿದುಕೊಂಡಿದೆ.” +ನೊಬುನಾಗ ಪೂಜಾಸ್ಥಳವನ್ನು ಪ್ರವೇಶಿಸಿ ಮೌನ ಪ್ರಾರ್ಥನೆ ಸಲ್ಲಿಸಿದ. ಹೊರಬಂದು ನಾಣ್ಯವನ್ನು ಮೇಲಕ್ಕೆ ಚಿಮ್ಮಿದ, ಮುಮ್ಮುಖ ಮೇಲೆ ಇತ್ತು. ಯುದ್ಧ ಮಾಡಲು ಅವನ ಸೈನಿಕರು ಎಷ್ಟು ಉತ್ಸುಕರಾಗಿದ್ದರೆಂದರೆ ಯುದ್ಧದಲ್ಲಿ ಅವರು ಬಲು ಸುಲಭವಾಗಿ ಜಯ ಗಳಿಸಿದರು. +ಯುದ್ಧ ಮುಗಿದ ನಂತರ ನೊಬುನಾಗನ ಅನುಚರ ಅವನಿಗೆ ಇಂತೆಂದ: “ವಿಧಿಯ ತೀರ್ಪನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ.” +“ಖಂಡಿತ ಸಾಧ್ಯವಿಲ್ಲ” ಎಂಬುದಾಗಿ ಉದ್ಗರಿಸಿದ ನೊಬುನಾಗ ತಾನು ಚಿಮ್ಮಿದ ನಾಣ್ಯವನ್ನು ತೋರಿಸಿದ. ಅದರ ಎರಡೂ ಪಾರ್ಶ್ವಗಳಲ್ಲಿ ಮುಮ್ಮುಖದಲ್ಲಿರಬೇಕಾದ ಚಿತ್ರವೇ ಇತ್ತು. +***** +೪. ಕಾಸನ್‌ ಬೆವರಿದ +ಪ್ರಾಂತೀಯ ಪ್ರಭುವಿನ ಶವಸಂಸ್ಕಾರವನ್ನು ಅಧಿಕೃತವಾಗಿ ನೆರವೇರಿಸುವಂತೆ ಕಾಸನ್‌ಗೆ ಹೇಳಲಾಯಿತು. +ಆ ವರೆಗೆ ಅವನು ಪ್ರಭುಗಳನ್ನೇ ಆಗಲಿ ಶ್ರೇಷ್ಠರನ್ನೇ ಆಗಲಿ ಸಂಧಿಸಿಯೇ ಇರಲಿಲ್ಲವಾದ್ದರಿಂದ ಅಧೀರನಾಗಿದ್ದ. ಶವ ಸಂಸ್ಕಾರದ ಕರ್ಮಾಚರಣೆ ಆರಂಭವಾದಾಗ ಅವನು ಬೆವರಿದ. +ತರುವಾಯ, ಅವನು ಹಿಂದಿರುಗಿ ಬಂದ ನಂತರ, ತನ್ನ ಶಿಷ್ಯರನ್ನು ಒಂದೆಡೆ ಸೇರಿಸಿದ. ವಿಜನ ಪ್ರದೇಶದಲ್ಲಿರುವ ದೇವಾಲಯದಲ್ಲಿ ತನ್ನ ನಡೆನುಡಿ ಹೇಗಿರುತ್ತದೋ ಅಂತೆಯೇ ಖ್ಯಾತರ ಜಗತ್ತಿನಲ್ಲಿಯೂ ಇರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಶಿಕ್ಷಕನಾಗುವ ಅರ್ಹತೆ ಈಗ ತನಗಿಲ್ಲವೆಂಬುದನ್ನು ಒಪ್ಪಿಕೊಂಡ. +ಆನಂತರ ಕಾಸನ್‌ ರಾಜೀನಾಮೆ ಸಲ್ಲಿಸಿ ಇನ್ನೊಬ್ಬ ಗುರುವಿನ ಶಿಷ್ಯನಾದ. ೮ ವರ್ಷಗಳ ತರುವಾಯ ಜ್ಞಾನಿಯಾಗಿ ತನ್ನ ಹಿಂದಿನ ಶಿಷ್ಯರ ಬಳಿಗೆ ಹಿಂದಿರುಗಿದ. +***** +೫. ಕಲ್ಲು ಮನಸ್ಸು +ಚೀನೀ ಝೆನ್‌ ಗುರು ಹೋಗೆನ್‌ ಗ್ರಾಮಾಂತರ ಪ್ರದೇಶದ ಒಂದು ಸಣ್ಣ ದೇವಾಲಯದಲ್ಲಿ ಏಕಂಗಿಯಾಗಿ ವಾಸಿಸುತ್ತಿದ್ದ. ಅದೊಂದು ದಿನ ಯಾತ್ರೆ ಹೋಗುತ್ತಿದ್ದ ನಾಲ್ಕು ಮಂದಿ ಸನ್ಯಾಸಿಗಳು ಬಂದು ಅವನ ನಿವಾಸದ ಪ್ರಾಂಗಣದಲ್ಲಿ ಬೆಂಕಿ ಹಾಕಿ ತಾವು ಮೈ ಬೆಚ್ಚಗೆ ಮಾಡಿಕೊಳ್ಳಬಹುದೇ ಎಂಬುದಾಗಿ ಕೇಳಿದರು. +ಬೆಂಕಿ ಹಾಕುತ್ತಿರುವಾಗ ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆ ಕುರಿತು ಅವರು ಚರ್ಚಿಸುತ್ತಿರುವುದು ಹೋಗೆನ್‌ಗೆ ಕೇಳಿಸಿತು. ಅವನು ಅವರ ಜೊತೆ ಸೇರಿ ಕೇಳಿದ: “ಅಲ್ಲೊಂದು ದೊಡ್ಡ ಕಲ್ಲು ಇದೆ. ಅದು ನಿಮ್ಮಮನಸ್ಸಿನ ಒಳಗಿದೆ ಎಂಬುದಾಗಿ ಪರಿಗಣಿಸುತ್ತಿರೋ ಅಥವ ಹೊರಗಿದೆ ಎಂಬುದಾಗಿ ಪರಿಗಣಿಸುತ್ತೀರೋ?” +ಅವರ ಪೈಕಿ ಒಬ್ಬ ಸನ್ಯಾಸಿ ಇಂತು ಉತ್ತರಿಸಿದ: “ಬೌದ್ಧಸಿದ್ಧಾಂತದ ದೃಷ್ಟಿಕೋನದಿಂದ ನೋಡುವುದಾದರೆ ಪ್ರತಿಯೊಂದೂ ಮನಸ್ಸಿನ ಮೂರ್ತೀಕರಣವೇ ಆಗಿರುತ್ತದೆ. ಆದ್ದರಿಂದ ಕಲ್ಲು ನನ್ನ ಮನಸ್ಸಿನ ಒಳಗಿದೆ ಎಂಬುದಾಗಿ ನಾನು ಹೇಳುತ್ತೇನೆ.” +ಅದಕ್ಕೆ ಹೋಗೆನ್‌ ಇಂತು ಪ್ರತಿಕ್ರಿಯಿಸಿದ: “ಅಂಥ ಕಲ್ಲನ್ನು ನಿನ್ನ ಮನಸ್ಸಿನಲ್ಲಿ ಎಲ್ಲೆಡೆಗೂ ಹೊತ್ತೊಯ್ಯುತ್ತಿದ್ದರೆ ನಿನ್ನ ತಲೆ ಬಲು ಭಾರವಾಗಿರುವಂತೆ ಭಾಸವಾಗುತ್ತಿರಬೇಕು.” +***** + \ No newline at end of file diff --git a/PanjuMagazine_Data/article_1064.txt b/PanjuMagazine_Data/article_1064.txt new file mode 100644 index 0000000000000000000000000000000000000000..1e7caf90bae965c2009a1d50e663cc7275a11dc1 --- /dev/null +++ b/PanjuMagazine_Data/article_1064.txt @@ -0,0 +1,6 @@ +ಈಗ ನನ್ನ ಬಹಳ ಕಾಡಿದ ಒಂದು ಸಿನಿಮಾ ಬಗ್ಗೆ ಬರೆಯಬೇಕು. +ಅದರಲ್ಲಿ ಬರುವ ಒಂದು ಡೈಲಾಗ್ ಬಗ್ಗೆ 'ನಮ್ಮ ರಾಜ್ಯಕ್ಕೆ ಅಪಮಾನವಾಯಿತು' ಅಂತ ಬೊಬ್ಬಿರಿದ ನನ್ನ ರಾಜ್ಯದ ಕೆಲವರ ಬಗ್ಗೆ ನಿಜಕ್ಕೂ ಕನಿಕರವಿದೆ. ಹೌದು. ಇದು ಅದೇ ಸಿನಿಮಾ. 'ಫ಼ೈಂಡಿಂಗ್ ಫ಼ಾನ್ನಿ' ಹೋಮಿ ಅಡಜನಿಯ ನಿರ್ದೇಶನವಿರುವ (ಇವನ ಬೀಯಿಂಗ್ ಸೈರಸ್ ಕೂಡ ಒಳ್ಳೆಯ ಪ್ರಯತ್ನ) ಕೆಲವು ಕಡೆ 'ಲೆಟ್ಟರ್ಸ್ ಟು ಜೂಲಿಯಟ್' ಅನ್ನು ಹೋಲುತ್ತದೆ. ಅರ್ಜುನ್ ಕಪೂರ್, ದೀಪಿಕಾ ಪಡುಕೋಣೆ (ಇವಳ ಸ್ಕರ್ಟ್ ನ ಅಂದವನ್ನು ಬಣ್ಣಿಸಲೇ?) ನಾಸಿರುದ್ದೀನ್ ಶಾ, ಪಂಕಜ್ ಕಪೂರ್, ಡಿಂಪಲ್ ಕಪಾಡಿಯ ಮುಖ್ಯ ಭೂಮಿಕೆಯ ಇದು ಕಳೆದ ವರ್ಷ ಬಿಡುಗಡೆಯಾಯಿತು(೨೦೧೪) ಇನ್ನು ಕತೆಯ ಬಗ್ಗೆ ಹೇಳುವುದಾದರೆ, ಕತೆ ನಡಿಯುವುದು ಗೋವಾದಲ್ಲಿ, ಕಾಲಮಾನ ಸರಿ ಸುಮಾರು ಯಾವಾಗ ಬೇಕಾರೂ ತಗೊಳ್ಳಿ ಯಾಕಂದ್ರೆ ನಮಗೆ ನಿರ್ದಿಷ್ಟವಾಗಿ ಅದು ಗೊತ್ತಾಗೊಲ್ಲ. ಪೊಕೊಲಿಯಮ್ ಎಂಬ ಗೋವದ ಹಳ್ಳಿಯಲ್ಲಿನ ಐದು ಜನ ವಿಚಿತ್ರ ಮನುಷ್ಯರ ಕತೆ(ಹಾಗಂತ ನಮಗನಿಸುವುದು) .ಅಲ್ಲಿನ ಪೋಸ್ಟ್ ಮ್ಯಾನ್ ಫ಼ರ್‍ದಿಯ ಮನೆ ಬಾಗಿಲಿನ ಕೆಳಗೆ ಯಾರೋ ಹಾಕಿಟ್ಟ ಪತ್ರವೊಂದು ಸಿಗುತ್ತದೆ. ಅದು ಅವನು ೪೬ ವರ್ಷಗಳ ಕೆಳಗೆ ಸ್ಟೀಫ಼ನಿ ಫ಼ರ್ನಾಂಡೀಸ್ ಅಕಾ ಫ಼ಾನ್ನಿ ಎಂಬ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿ ಕಳಿಸಿದ ಪತ್ರ. ಅದು ವಾಪಾಸಾಗಿರುತ್ತದೆ. ಫ಼ರ್‍ದಿ ಆ ೪೬ ವರ್ಷವೂ ಅವಳು ಎಂದಾದರೊಂದು ದಿನ ತನ್ನ ಪತ್ರಕ್ಕೆ ಮಾರುತ್ತರ ಬರಬಹುದೆಂಬ ನಿರೀಕ್ಷೆಯಲ್ಲಿರುತ್ತಾನೆ. ಈಗ ಅಚಾನಕ್ ಆಗಿ ತನ್ನ ಪತ್ರ ಅವಳಿಗೆ ದೊರಕೇ ಇಲ್ಲವೆಂಬ ಸತ್ಯ ತಿಳಿದು ತೀವ್ರ ಕ್ಷೋಭೆಯಲ್ಲಿರುತ್ತಾನೆ. ಆಗ ಅಲ್ಲಿಗೆ ಬರುವ ಆ ಊರಿನ ವಿಧುರೆ ( ಕನ್ಯೆ ಅನ್ನಬಹುದು. ಅವಳ ಗಂಡ ಮದುವೆ ದಿನವೇ ಮದುವೆಯ ಕೇಕ್ ತಿನ್ನುವಾಗ ಉಸಿರುಗಟ್ಟಿ ಸತ್ತಿರುತ್ತಾನೆ) ಆಂಜಿ, ಅವನಿಗೆ ಸಹಾಯ ಮಾಡಲು ನಿರ್ಧರಿಸುತ್ತಾಳೆ. +ಫ಼ಾನ್ನಿಯ ಹುಡುಕುವ ಈ ಸಾಹಸಕ್ಕೆ ಅವಳ ಅತ್ತೆ ರೋಸಿ, ಆ ಅತ್ತೆಯ ದೊಡ್ಡ ಹಿಂಭಾಗದ ಆರಾಧಕನಾಗಿ ಅವಳನ್ನು ಮಾಡೆಲ್ ಆಗಿಟ್ಟುಕೊಂಡು ಚಿತ್ರ ಬರೆಯುವ ಸಂಕಲ್ಪದ ಚಿತ್ರಕಾರ ಡಾನ್ ಪೆಡ್ರೊ, ಆಂಜಿಯ ಬಾಲ್ಯ ಸಖ, ಅವಳ ಗುಟ್ಟಾಗಿ ಪ್ರೀತಿಸಿ ಹೇಳಲಾಗದೆ ಅವಳ ಮದುವೆಯ ದಿನ ಮುಂಬೈಗೆ ಓಡಿ ಹೋಗಿ ಈಗ ವಾಪಸ್ ಬಂದಿರುವ ಸಾವಿಯೋ ಇವರೆಲ್ಲಾ ಜೊತೆಯಾಗುತ್ತಾರೆ. ಅವರು ಫ಼ಾನ್ನಿಯ ಹುಡುಕಿದರೇ? ಡಾನ್ ಪೆಡ್ರೋ ,ರೋಸಿಯ ಚಿತ್ರ ಬಿಡಿಸಿದನೇ? ಸಾವಿಯೋ , ಆಂಜಿ ಒಂದಾದರೇ? ಎಂಬುದೆಲ್ಲ ಪ್ರಶ್ನೆಗಳಿಗೆ ಉತ್ತರ ನೋಡಿಯೇ ಸವಿಯಬೇಕು. (ಆಗ ಅದು ನಗಣ್ಯವೆನಿಸಿರುತ್ತದೆ.) +ಕಾಲ ಚಲಿಸಲು ನಿಲ್ಲಿಸಿದ ಹಳ್ಳಿಯೊಂದರಿಂದ ಶುರುವಾಗುವ ಕತೆ, ನಿಧಾನವಾಗೇ ಚಲಿಸುತ್ತದೆ. ಇಲ್ಲಿ ಎಲ್ಲರೂ ಆರಾಮ ಜೀವಿಗಳು. ಅರ್ಥ ಹೀನ ಮಾತುಕತೆ, ಗೊತ್ತಿರದ ರಹಸ್ಯಗಳು, ತಪ್ಪು ತಿಳುವಳಿಕೆಗಳು (ಮತ್ತು ಇದ್ಯಾವುದೂ ಬದುಕ ಬದಲಾಯಿಸುವ ಸ್ಪೋಟಕತ್ವ ಕಳಕೊಂಡ ವಿಷಯಗಳು). ಎಲ್ಲವು ಅಲ್ಲಲ್ಲಿ ಬಂದು ಹೋಗುತ್ತದೆ. ಬಹುತೇಕ ಮಾತುಗಳಲ್ಲಿ, ಪ್ರಯಾಣದಲ್ಲಿ ಚಿತ್ರ ನಡೆಯುವುದರಿಂದ ಹಳೆಯ ಗುಜುರಿ ಕಾರಲ್ಲಿ ಕೂತು ಗೋವಾ ಟೂರು ಹೋದ ಅನುಭವ ಕೊಡುತ್ತದೆ (ಮತ್ತು ಗೋವಾಕ್ಕೆ ಅದೇ ಸರಿ). ನಾವು ಬಾತ್ರೂಮಿನಲ್ಲಿ ನಮ್ಮಷ್ಟಕ್ಕೇ ಕಿರುಚುವ ಲಹರಿಯಂತೆ, ಸಂಗೀತವಿದೆ. ಸ್ಕರ್ಟ್ ಧರಿಸಿದ ಆಂಜಿಯ ನೀಳ ಕಾಲುಗಳೂ, ಎದೆಯ ಸೀಳೂ ಖುಷಿ ಕೊಡುತ್ತದೆ. ಫ಼ರ್‍ಡಿಯ ಕಾಯುವಿಕೆ, ರೋಸಿಯ ಒಣ ಜಂಭ, ಡಾನ್ ಪೆಡ್ರೋ ನ ಚಡಪಡಿಕೆ, ಸಾವಿಯೋ ನ ಗೊಂದಲ ಇವೆಲ್ಲಾ ನಮ್ಮನ್ನೂ ಕಾಡುತ್ತದೆ. ಅವಗಾವಾಗ ಹಾಳಾಗುವ ಗಾಡಿ ಬದುಕಿನಂತೇ, ಅದೇ ಪಾತ್ರವಾಗಿದೆ. ಚರ್ಚಿನ ಪಾದ್ರಿ ,ಫ಼ರ್‍ದಿಯ ಕನಸಿನ ಫ಼ಾನ್ನಿ ಮಿಣುಕಿ ಮರೆಯಾಗುತ್ತಾರೆ. +ಈಗಿನ ವೇಗದಲ್ಲೂ ನಿಂತು ಆಸ್ವಾದಿಸುವ ಗುಣ ಇರುವುದರಿಂದ 'ಫ಼ೈಂಡಿಂಗ್ ಫ಼್ಯಾನಿ' ಇಷ್ಟವಾಗುತ್ತದೆ. +***** \ No newline at end of file diff --git a/PanjuMagazine_Data/article_1065.txt b/PanjuMagazine_Data/article_1065.txt new file mode 100644 index 0000000000000000000000000000000000000000..256e8791a302636e86e2d36ffd7dee198c6af6be --- /dev/null +++ b/PanjuMagazine_Data/article_1065.txt @@ -0,0 +1,8 @@ +2022 ರ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ ಪ್ರಕಟಿತ ಕೃತಿಗಳ ಆಹ್ವಾನ +2). ಸೃಜನಶೀಲವೆನಿಸಿದ ಮೂರು ಕೃತಿಗಳಿಗೆ ತಲಾ 500/- ರೂಗಳ ನಗದು ಬಹುಮಾನ, 500/- ರೂ ಮೌಲ್ಯದ ಪುಸ್ತಕ ಬಹುಮಾನ, ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುವುದು. +ತಮ್ಮ ಕೃತಿಗಳನ್ನು ಕಳಿಸಬೇಕಾದ ಅಂಚೆ ವಿಳಾಸ : +ಅವ್ವ ಪುಸ್ತಕಾಲಯ +ನಂ.189, ಕುಡಿಯುವ ನೀರಿನ ಘಟಕ, ಕೆಂಚನಹಳ್ಳಿ ಅಂಚೆ +ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು +ತುಮಕೂರು ಜಿಲ್ಲೆ – 572123 +ಮೊ : 8548948660 \ No newline at end of file diff --git a/PanjuMagazine_Data/article_1066.txt b/PanjuMagazine_Data/article_1066.txt new file mode 100644 index 0000000000000000000000000000000000000000..389d2f22eeb04b7357a97b3b5f079f25641e4a2c --- /dev/null +++ b/PanjuMagazine_Data/article_1066.txt @@ -0,0 +1,7 @@ +‘ ನಗು ‘ ಎಂಬುದು ಮುಖದಲ್ಲಿ ಪ್ರಕಟವಾಗುವ ಒಂದು ಭಾವ! ಮನಸ್ಸು ಒಳಗಿರುವುದರಿಂದ ಅದರ ನೇರ ಸಾಕ್ಷಾತ್ ದರುಶನ ಕಷ್ಟ. ಮನ ಭಾವಗಳ ಮೂಲಕ ತನ್ನ ಸಾಕ್ಷಾತ್ ದರುಶನ ಮಾಡಿಸುವುದು! ಮುಖದಲ್ಲೆ ಮನದ ಭಾವಗಳು ಮೇಳೈಸುವುದು! ಮುಖದಲ್ಲೆ ಮನ ಬಂದು ನರ್ತಿಸಿ ತನ್ನ ಖುಷಿಯ ಪ್ರಕಟಿಸುವುದು! ದುಃಖವ ಅನಾವರಣಗೊಳಿಸುವುದು. ಮುಖವೆ ಮನದ ಆಡೊಂಬಲ. ಮುಖ ಎಂಬುದು ಆತ್ಮದ ಭಾವಗಳನ್ನು ಪ್ರಕಟಿಸುವ ಜೀವಂತ ಸ್ವಾಭಾವಿಕ ಕಿರು ಪರದೆ! ಮುಖದಲ್ಲೇ ನಗುವೆಂಬ ಅಮೂಲ್ಯ ಆಭರಣ ಮೈದೋರಿ ಮುಖದ ಸೊಗಸು ಹೆಚ್ಚಿಸುವುದು! ಮತ್ತೆ ಮತ್ತೆ ಮೈದೋರಿ ಮುಖಕೆ ವ್ಯಾಯಾಮ ಮಾಡಿಸಿ ರಕ್ತ ಸಂಚಲನ ಹೆಚ್ಚಿಸಿ ರಂಗೇರಿಸಿ ಆರೋಗ್ಯ ಕಾಪಾಡುವುದು! ಅದಕ್ಕೆ ಹೆಚ್ಚು ನಗಬೇಕು! ಮುಖದಲ್ಲಿ ಪ್ರಕಟವಾಗುವ ಭಾವಗಳು ಮನದ ಪ್ರತಿಬಿಂಬಗಳು. +ನಗುವಿನಲ್ಲಿ ಅನೇಕ ವಿಧ. ತನಗಾದ ಸಂತಸವನ್ನು ಅವು ವಿವಿಧ ರೀತಿ ವ್ಯಕ್ತಪಡಿಸುವುವು. ಅವು ವ್ಯಕ್ತವಾಗುವ ರೀತಿ ಕಂಡು ಅವರಿಗಾಗಿರಬಹುದಾದ ಸಂತಸದ ಪ್ರಮಾಣವನ್ನು ಅರಿಯಬಹುದು. ಕೆಲವೊಮ್ಮೆ ಅವರಿಗಿರುವ ಗರ್ವ, ಅಸಹನೆ, ಕುಹಕತೆ, ವ್ಯಂಗ್ಯ ಮುಂತಾದವೂ ಪ್ರಕಟವಾಗುವುವು. ಸನ್ಮಾನಿಸಿದಾಗ ಮನಃಪೂರಕ ಸಂತೋಷವಾಗುವುದು. ಸಂತಸ ಎದೆ ತುಂಬಿ ಬರುವುದು. ಎದೆ ತುಂಬಿ ಬಂದ ಸಂತಸ ಮುಖದಿ ನಗುವಾಗಿ ಪ್ರಕಟವಾಗುವುದು. ನಗು ಮಾನವನೆಂಬ ಸಸ್ಯದಲ್ಲಿ ಸಂಪೂರ್ಣ ವಿಕಸಿಸಿದ ಸೌಗಂಧ ಸೂಸುವ ಕುಸುಮ! ಮೊಗ್ಗು ಹಿಗ್ಗಲು ಪರಿಮಳ ಸೂಸಲು ಪ್ರಾತಃಕಾಲ, ಬೆಳಗಿನ ತಂಪು ಗಾಳಿ, ಹಿತವಾದ ಹವಾಮಾನ, ಸೂರ್ಯನ ಹೊಂಗಿರಣಗಳ ಮೃದು ಸ್ಪರ್ಷ, ಅದರದೇ ಆದ ಮುಂಜಾವಿನ ವಾತಾವರಣ ಅವಶ್ಯಕ! ಹಾಗೆ ಮನೆಯಲ್ಲಿ ನಗು ಚಿಮ್ಮಲು ಒಂದು ಸಂತಸದ ಮಾತು, ಹಾಸ್ಯದ ತುಣುಕು, ಒಂದು ಸುಂದರ ದೃಶ್ಯ, ಮನಕೆ ಹಿತವಾದ ಸುದ್ದಿ, ಮಧುರ ಘಟನೆ, ಸುಮಧುರ ಸವಿನೆನಪು, ಇಷ್ಟರ ಆಗಮನ, ತಾನು ಯಾವುದರಲ್ಲಾಗಲಿ ಗೆದ್ದ ಸುದ್ದಿ, ಎಲ್ಲರಿಗಿಂತ ಮುಂದಿರುವ ವಿಷಯ, ಖುಷಿ ತರುವ ಭಾವಚಿತ್ರಗಳೋ ಅವಶ್ಯಕ. ಅದಕ್ಕೇ ನಮ್ಮ ಪೂರ್ವಜರು ಹಬ್ಬ ಹರಿದಿನ, ಉತ್ಸವ, ಜಾತ್ರೆ ಮದುವೆ, ಮುಂಜಿ, ನಾಮಕರಣ, ಷಷ್ಠಿ ಆಚರಣೆ, ಮದುವೆಯಲ್ಲಿ ನೆಂಟರ ನಡುವೆ ಸಂಬಂಧಗಳ ಬೆಸೆಯುವ ಆಟಗಳ ರೂಪದ ಆಚರಣೆಗಳು, ಮುಂತಾದ ಸಂಭ್ರಮಗಳ ವರುಷದುದ್ದಕ್ಕೂ ಇರುವಂತೆ ನೋಡಿಕೊಂಡಿದ್ದರು. ಅನೇಕ ಕಾರಣಗಳಿಂದ ಬಂಧು ಬಾಂಧವರು ಆಗಾಗ ನೆರೆದು ಇಷ್ಟದ ನುಡಿಗಳಲಿ ಮಿಂದು ಸವಿ ಭೋಜನ ಕೂಟದಿ ಮುಳುಗುತ್ತಿದ್ದರು. ಜತೆಗೆ ಕೋಲಾಟ, ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ, ಒಗಟು, ಭಜನೆ, ಜಾನಪದ ನೃತ್ಯಗಳು : ವೀರಗಾಸೆ, ಸೋಮನ ಕುಣಿತ ತೊಗಲು ಗೊಂಬೆಯಾಟ, ಓಲೆಬಸವ, ಮೋಡಿ ಮುಂತಾದವು ಮನರಂಜನೆಯ ಮೂಲವಾಗಿದ್ದವು. ಅವು ನಗು ಹೊಮ್ಮಿಸಲು ಸಹಕಾರಿಯಾಗಿದ್ದವು. +‘ ನಗು ‘ ಮಾನವನಿಗೆ ಪ್ರಕೃತಿ ನೀಡಿರುವ ವಿಶಿಷ್ಟ ವರ! ಯಾವುದೇ ಜೀವಿಗಳು ಮಾನವನಂತೆ ನಗಲಾರವು, ಯಾವುದೇ ಭಾವನೆಗಳನ್ನು ಮುಖದ ಮೂಲಕ ಹೊರ ಹಾಕಲಾರವು. ಮಾನವನ ಮುಖವನ್ನು ನೋಡಿದಾಕ್ಷಣ ಅವನು ಸಂತಸದಿಂದಿರುವನೋ ದುಃಖದಲ್ಲಿರುವನೋ ಎಂದು ತಿಳಿಯಬಹುದು. ಪ್ರಾಣಿಗಳ ಮುಖವನ್ನು ನೋಡಿ ಅದರ ಭಾವನೆಗಳನ್ನು ತಿಳಿಯಲಾಗದು! ಏಕೆಂದರೆ ಪ್ರಾಣಿಗಳ ಮುಖದಲ್ಲಿರುವ ಸ್ನಾಯುಗಳು ಮಾನವನ ಸ್ನಾಯುಗಳಂತೆ ವಿಕಸಿಸಿ ಸಂಕುಚಿಸಿ ಸಂತಸ ತೋರಲು, ನಾನಾ ಭಾವನೆಗಳ ಅಭಿವ್ಯಕ್ತಿಸಲು ಸಮರ್ಥವಾಗಿಲ್ಲ. ಮಾನವನಿಗೆ ಮಾತ್ರ ಮುಖದಲ್ಲಿ ಭಾವನೆಗಳ ಪ್ರಕಟಿಸುವ ಕೊಡುಗೆ ಪ್ರಕೃತಿ ನೀಡಿರುವುದು ಅವನ ಭಾಗ್ಯ. ಮುಖ ಭಾವನೆಗಳ ವ್ಯಕ್ತಪಡಿಸುವುದರಿಂದ ಮುಖವನ್ನು ಮನಸ್ಸಿನ ಕನ್ನಡಿ ಎನ್ನಬಹುದು! +ಲೀಯಾನಾರ್ಡೋ ಡಾವಿಂಚಿಯ ಪ್ರಸಿದ್ದ ಕಲಾಕೃತಿಯಾದ ಮೊನಾಲಿಸಾಳದು ಮುಗ್ದ ಸಹಜ ನಗುವಾದುದರಿಂದ ಇಂದಿಗೂ ಎಲ್ಲರ ಗಮನ ಸೆಳೆಯುತ್ತಿರುವುದು! ಸುಂದರವಾಗಿ ಕಾಣುತ್ತಿರುವುದು! ಸಹಜ ನಗು ನಿಷ್ಕಲ್ಮಷವಾದುದು. ಸಹಜವಾಗಿ ನಕ್ಕಾಗ ಮುಖದಲ್ಲಿರುವ ಸ್ನಾಯುಗಳು ಹಿಗ್ಗುವುದು ಕುಗ್ಗುವುದು ಮಾಡುವುದರಿಂದ ಅಲ್ಲಿರುವ ಸ್ನಾಯುಗಳಿಗೆ ವ್ಯಾಯಾಮವಾಗಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಇಡೀ ಮುಖ ಸಬಲವೂ ಕಾಂತಿಯುತವೂ ಆರೋಗ್ಯಪೂರ್ಣವೂ, ಸುಂದರವೂ ಆಗುವುದು! ಆತ್ಮಕ್ಕೆ ಆನಂದವಾಗುವುದು. ನಗು ಇತರರಿಗೆ ಮುದನೀಡಬೇಕು. ಆಗ ನಮ್ಮ ಸಂತಸ ಇಮ್ಮಡಿಯಾಗುತ್ತದೆ. +‘ ನಗು ‘ ಆರೋಗ್ಯದ, ದೀರ್ಘಾಯುಷ್ಯದ ಗುಟ್ಟು! ಇದು ತಿಳಿದಮೇಲೆ ನಗೆಗೆ ಮಹತ್ವ ಬಂದಿದೆ. ಅದಕ್ಕಾಗಿಯೇ ಎಲ್ಲಾ ಕಡೆ ನಗೆ ಕೂಟಗಳು, ನಗೆ ಹಬ್ಬಗಳು, ಬೆಳದಿಂಗಳ ಚುಟುಕು ಗೋಷ್ಟಿಗಳು, ಸಾಹಿತ್ಯ ಗೋಷ್ಠಿಯಲ್ಲಿ ಹಾಸ್ಯದ ಚಟಾಕೆಗಳು ಹಾರಿಸುತ್ತಿರುವುದು! ಕೃತಕ ನಗುವಿಗಿಂತ ಸಹಜ ನಗು ಹೆಚ್ಚು ಆರೋಗ್ಯಕಾರಿ. ಕೃತಕವಾಗಿ ನಕ್ಕಾಗ ಮುಖಕ್ಕಷ್ಟೇ ವ್ಯಾಯಾಮವಾಗುತ್ತದೆ. ಸಹಜವಾಗಿ ನಕ್ಕಾಗ ಮುಖದ ಜತೆಗೆ ಮನಸ್ಸಿಗೆ ಇಡೀ ದೇಹಕ್ಕೆ ಸಂತೋಷವವಾಗುತ್ತದೆ. ಅದರಲ್ಲಿ ಇಡೀ ದೇಹವೇ ತೊಡಗುವುದರಿಂದ ದೇಹ ಹಗುರವಾಗಿ ಮುಖಕ್ಕೆ ವ್ಯಾಯಾಮವಾಗುವುದರ ಜತೆಗೆ ಆರೋಗ್ಯ, ಆಯಸ್ಸು, ಸೌಂದರ್ಯ ಅಧಿಕವಾಗುತ್ತದೆ! ಆದ್ದರಿಂದ ನಗುವ ಸಂದರ್ಭಗಳು ಬಂದಾಗ ಅವುಗಳ ಸದ್ಬಳಕೆ ಮಾಡಿಕೊಂಡು ಮನಸಾರೆ ನಕ್ಕುಬಿಡಬೇಕು. ನಗು ಆರೋಗ್ಯ ಉತ್ತಮವಾಗಲು ಕಾರಣವಾಗುವುದರಿಂದ ಬದುಕನ್ನು ಸಂತಸ ಉಂಟಾಗುವಂತೆ ರೂಪಿಸಿಕೊಳ್ಳಬೇಕು. ಅವಕಾಶವಾದಾಗ ಚಿಕ್ಕ ಮಗ್ದ ಮಕ್ಕಳೊಂದಿಗೆ ಬೆರೆತಾಗ ಅವು ನೀಡುವ ನಿಷ್ಕಲ್ಮಷ ಆನಂದದಿಂದ ಸಂತಸವಾಗುವುದು, ಅವರಿಗೆ ಸ್ಪಂದಿಸಿದಾಗ ಅವರ ಕಲ್ಪನಾ ಶಕ್ತಿಗೆ, ಪ್ರಶ್ನೆಗಳಿಗೆ ಬೆರಗಾಗುವಿರಿ. ಅವರ ತೊದಲುವಿಕೆ, ಅಪ್ರಬುದ್ದ ಸಹಜ ಮಾತು, ನಿಮಗೂ ನಿಲುಕದ ಪ್ರಶ್ನೆ, ಅವಕ್ಕೆ ಅರ್ಥ ಮಾಡಿಸಲಾಗದ ಕಷ್ಟ ಸಂತಸ ತಂದು ಆನಂದ ನೀಡುವುದು. ಬೀಚಿ, ಚಾರ್ಲಿ ಚಾಪ್ಲಿಯನ್, ಮಿಸ್ಟರ್ ಬೀನ್, ಪ್ರೋಪೇಸರ್ ಕೃಷ್ಣೇ ಗೌಡರು, ಗಂಗಾವತಿ ಪ್ರಾಣೇಶ್ , ರಿಚರ್ಡ್ಲೂಯೀಸ್, ಮಾಮನಿ ಮುತಾದವರ ನಗೆ ಚಟಾಕೆಗಳಿಗೆ ಸಮಯಕೊಡಿ! ಮೊದಲು ಮನಸ್ಸನ್ನು ನಗಲು ಸಿದ್ದಗೊಳಿಸಿಕೊಳ್ಳಬೇಕು. ಒಡನಾಡಿಗಳು ತಪ್ಪು ಮಾಡುವುದು, ವಸ್ತುಗಳನ್ನು ಮಕ್ಕಳು ಒಡೆದು ಹಾಕುವುದು ಸಾಮಾನ್ಯ ಅಗ ಕೋಪ ಮಾಡಿಕೊಳ್ಳದೆ ಇವು ಬದುಕಿನ ಭಾಗ, ಕಲಿಯುವವರು ಮಾಡುವ ಸಹಜ ತಪ್ಪುಗಳು, ನಡೆಗಲಿಯುವವರು ಎಡವುದು ಸಹಜ. ಅವುಗಳನ್ನು ತಪ್ಪೆಂದು ಭಾವಿಸಿ ತಿದ್ದಿ ಅವುಗಳ ಸಂಭಾಳಿಸುವ ಕಲೆ ತೋರಿಸಿ ಆ ಕಲೆಯಲ್ಲಿ ಸಂತಸ ಕಾಣಬೇಕು. +ಬದುಕಿನಲ್ಲಿ ನಗು ಇರುವಂತೆ ಬದುಕುವ ಶೈಲಿ ರೂಪಿಸಿಕೊಳ್ಳಬೇಕು. ಕರುಬುವುದು ಬಿಡಬೇಕು. ಏಕೆಂದರೆ ಅದು ಆನಾರೋಗ್ಯಕ್ಕೆ ರಹದಾರಿ. ಬದುಕಿನ ಅನೇಕ ಸಂದರ್ಭಗಳಲ್ಲಿ ಬೆಳಗಿನಿಂದ ಸಂಜೆಯವರೆಗೂ ನಗು ಸಹಜವಾಗಿ ಬರುತ್ತದೆ. ನಗು ಇಲ್ಲದೆ ಬದುಕು ಇರಲಾರದು! ಆದರೆ ಅಹಂ, ಬಿಗುಮಾನ, ಪ್ರತಿಷ್ಟೆ, ನಾಗರೀಕತೆಯ ಸೋಗು, ತಂದೆ, ಒಡೆಯ, ಅಧಿಕಾರಿ ಎಂಬ ಸ್ಥಾನಮಾನ ನಗುವನ್ನು ಅದುಮಿಡುವಂತೆ ಮಾಡುತ್ತದೆ. ನಗುವನ್ನು ಅದುಮಿಡುವುದು ಆರೋಗ್ಯಕ್ಕೆ ಪೂರಕವಲ್ಲ! ನಕ್ಕರೆ ಎಲ್ಲಿ ಬೆಲೆ ತೂಕ ಕಡಿಮೆಯಾಗಿಬಿಡುತ್ತದೋ, ತನ್ನ ಮಾತಿನ ಮಹತ್ವ ಹೊರಟುಹೋಗಿಬಿಡುತ್ತದೋ, ನಾನು ಸದರ ಆಗುತ್ತೇನೋ ಎಲ್ಲಿ ನನಗೆ ಮುಂದೆ ಬೆಲೆ ಕೊಡದಂತಾಗಿಬಿಡುವರೋ ಎಂದು ನಾಗರೀಕ ಮಾನವ ನಗಲಿಕ್ಕೆ ಚೌಕಾಸಿ ಮಾಡುತ್ತಿದ್ದಾನೆ. ನಗಲಷ್ಟೇ ಅಲ್ಲ, ಸೀನಲು, ಕೆಮ್ಮಲು, ಆಕಳಿಸಲು, ಅಳಲು ಮುಂತಾದ ಸಹಜ ಕ್ರೀಯೆಗಳನ್ನು ಮಾಡಲು ಹಿಂದು ಮುಂದು ನೋಡಿ ಅವುಗಳನ್ನೆಲ್ಲಾ ಕರ್ಚಿಫಿನಲ್ಲಿ ಅದುಮಿಡುವುದು, ಮುಚ್ಚಿಡುವುದು ಮಾಡುತ್ತಿದ್ದಾನೆ! ಮದುವೆ, ಹಬ್ಬ, ಹಾಸ್ಯ, ಋತುಮಾನ, ವಾತಾ ಪಿತ್ತ ವಿಕಾರಗಳಿಗನುಗುಣವಾಗಿ ಇವೆಲ್ಲಾ ಸಹಜವಾಗಿ ಬರುತ್ತವೆ. ಬರಬೇಕು. ಸಹಜವಾಗಿ ಬರುವ ಇವುಗಳ ಪೂರ್ಣವಾಗಲು ಬಿಡಬೇಕು. ಆದರೆ ಸೀನಿದರೆ, ಕೆಮ್ಮಿದರೆ, ಆಕಳಿಸಿದರೆ ಪಕ್ಕದವರು ಅನಾಗರಿಕ, ಸೋಮಾರಿ ಎಂದುಕೊಂಡಾರು ಎಂದು ಅವುಗಳನ್ನು ನಿಯಂತ್ರಿಸುವರು. ಪೂರ್ತಿ ಆಕಳಿಸಲು ಬಿಡುವುದೇ ಇಲ್ಲ. ಹೀಗೆ ಮಾಡುವುದರಿಂದ ಕ್ರಮೇಣ ಬಾಯಿ ತೆರೆಯುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಅದರಿಂದ ಬಾಯಿಗಾಗುವ ವ್ಯಾಯಾಮದ ಲಾಭವನ್ನು ಇಲ್ಲವಾಗಿಸಿಕೊಳ್ಳುತ್ತೇವೆ. ನಗು, ಸೀನು, ಆಕಳಿಕೆ, ಕೆಮ್ಮು, ಮೈಮುರಿಯುವಿಕೆ ದೇಹದ ಅಂಗಾಂಗಗಳ ಪರೀಕ್ಷೆಗಳೂ ಸಹ ಆಗುತ್ತವೆ. ಅವುಗಳನ್ನು ನಿಯಂತ್ರಿಸಬಾರದು. ಬೇರೆಯವರಿಗೆ ತೊಂದರೆಯಾಗದಂತೆ ಅನಭವಿಸಬೇಕು! ಕೆಲವು ಸಹಜ ಕ್ರೀಯೆಗಳು ಅಶುಭವೆಂದು ಔಷಧಿ ಸೇವಿಸಿ ಮುಂದೂಡುತ್ತಿರುವುದು ಅಪಾಯ! ಸಂತಸದ ಸಮಯ ಬಂದಾಗ ನಕ್ಕು ಆರೋಗ್ಯದಿಂದಿರಬೇಕೇ ಹೊರತು ನಾಗರೀಕತೆಯ ಸೋಗು ಹಾಕಿ ನಗದಂತೆ ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಾರದು. ಒಂದು ಪದ್ಯದಲ್ಲಿ ಡಿವಿಜಿಯವರು ಎಲ್ಲರ ಜೀವನದಲ್ಲಿ ನಗು ತುಂಬಿರಲಿ ನಗಿ ಇತರರನ್ನೂ ನಗಿಸಿ ನಗುತಾ ಬದುಕಿ ಎಂಬ ಸದಾಶಯದಿಂದ ನಗಿಸುವ ನಗುತ ಬಾಳುವ ವರವ ಕೊಡೋ ಎಂದು ಬೇಡಿಕೊಳ್ಳೋ ಮಂಕುತಿಮ್ಮ ಎಂದು ಹೇಳುತ ನಗುವಿನ ಮಹತ್ವ ಸಾರಿರುವರು! +–ಕೆ ಟಿ ಸೋಮಶೇಖರ್ ಹೊಳಲ್ಕೆರೆ \ No newline at end of file diff --git a/PanjuMagazine_Data/article_1067.txt b/PanjuMagazine_Data/article_1067.txt new file mode 100644 index 0000000000000000000000000000000000000000..094c590068e5d76d1e598148efb94047c245d81f --- /dev/null +++ b/PanjuMagazine_Data/article_1067.txt @@ -0,0 +1,12 @@ + +ಬೆಳಗಿನ ಸೂರ್ಯ ಆಗಲೇ ತೇಲಿ ಬಂದು ೩ನೇಅಂತಸ್ತಿನಲ್ಲಿರೊ ಅವನ ಮನೆಯ ಕಿಟಕಿಯಲ್ಲಿ ಇಣುಕುತ್ತಿದ್ದ, ಹೆಂಡತಿ ಮಗ ಇನ್ನೂ ಸುಖ ನಿದ್ರೆಯಲ್ಲಿದ್ರು. ಬ್ರಾಹ್ಮೀ ಮಹೂರ್ತದಲ್ಲಿ ಏಳಬೇಕಂದು ಎಷ್ಟೋ ಸಲ ಅನ್ನಿಸಿದರೂ ಸಾಧ್ಯವಾಗಿಲ್ಲ. ತಿಂಗಳದ ಮೊದಲ ವಾರವಾದ್ದರಿಂದ ಖುಷಿಯಾಗಿದ್ದ. ರೂಡಿಯಂತೆ ತನ್ನ ಮೊಬೈಲಿನ ಸ್ಕ್ರೀನ್ ಆನ್ ಮಾಡಿದ ಸಾಲು ಸಾಲಾಗಿ ಸಂದೇಶಗಳು ಬಂದಿದ್ವು ಎಲ್ಲವೂ ಸಾಲಕ್ಕೆ ಸಂಭದಿಸಿದ್ದವೆ. ಮನೆಯಲ್ಲಿರುವ ಪ್ರಿಡ್ಜ್, ವಾಷಿಂಗ್ ಮೆಷಿನ್, ಎಲ್ಇಡಿ ಟಿವಿ ಗಳೆಲ್ಲವೂ ಕಂತಿನ ಸರಕುಗಳೆ. ಒಂದೇ ಸಲಕ್ಕೆ ಅವುಗಳ ಕಂತು ಡೆಬಿಟ್ ಆಗಿದ್ದು ತಿಳಿದು ಒಂದು ಕ್ಷಣ ಮ್ಲಾನಗೊಂಡ. +ಮೊಬೈಲ ಬದಿಗೆಸೆದು ಮಂಚದಿಂದ ಎದ್ದ, ಪುಸ್ತಕಗಳ ಕಡೆ ತಲೆ ಹಾಕಿ ಅದೆಷ್ಟೋ ದಿವಸಗಳಾಯ್ತೆಂದು ಷೋ ಕೇಸ್ನಲ್ಲಿರೊ ಪುಸ್ತಕಗಳ ಮೇಲೆ ಕೈಯಾಡಿಸಿದ. ಭಗವದ್ಗೀತೆ, ಸ್ವಾಮಿ ವಿವೇಕಾನಂದರು, ಸ್ವಾಮಿ ಅಭೇದಾನಂದರು, ಓಶೋ, ರವಿ ಬೆಳಗೆರೆಯ ಅದೆಷ್ಟೋ ಬಾಟಮ್ ಐಟೆಮ ಖಾಸ್ ಬಾತಗಳು, ಬೈರಪ್ಪನವರ ಉತ್ಕೃಷ್ಟ ತಾತ್ವಿಕ ಕಾದಂಬರಿಗಳು, ಕುಂವೀ, ಬೀಚಿ, ಜೋಗಿ, ತರಾಸು ರವರ ಕಾದಂಬರಿಗಳು, ಡಿವಿಜಿ ಯವರ ಮಂಕುತಿಮ್ಮನ ಕಗ್ಗ, ಯಶವಂತ ಚಿತ್ತಾಲರ ಶಿಕಾರಿ, ಅರವಿಂದ ಅಡಿಗನ ಖಿhe ವೈಟ್ ಟೈಗರ್, ಹಾಗೂ ಯೋಗದ ಪುಸ್ತಕಗಳಿಂದ ತುಂಬಿ ಹೋಗಿದೆ. +ಹೋದ ತಿಂಗಳು ಅಪ್ಪ ಬಂದಾಗ ಈ ಪುಸ್ತಕಗಳನ್ನು ನೋಡಿ ಕಿರುಚಾಡಿದ್ದು ನೆನಪಿಗೆ ಬಂತು. "ಇದೇ ಏನೊ ನಿನ್ನ ಸಾಧನೆ, ಈ ಹಾಳು ಪುಸ್ತಕ ಓದಿ ಏನ್ ಕಿತ್ತಾಕಿದಿಯೋ. ಎಷ್ಟ ದುಡ್ಡು ಗಳಿಸಿದಿ, ಎಲ್ಲಿ ಜಾಗ ತಗೊಂಡಿದಿ, ಯಾವ ಕಾರ ತಗೊಂಡಿದಿ? ನಿನ್ನ ವಯಸ್ಸಿನವರು ಊರಾಗ ಮನೆ ಕಟ್ಟಿದಾರ ನೀ ಏನ್ ಮಾಡಿದಿ, ಬರಿ ಸಾಲ ಅಂತಿಯಲ್ಲೋ?" ಎಂಬ ಅಪ್ಪನ ಪ್ರಶ್ನೆಗಳಿಗೆ ಇವನ ಬಳಿ ಉತ್ತರವಿರಲಿಲ್ಲ. ಈ ಪುಸ್ತಕಗಳೆಲ್ಲ ತನ್ನನ್ನು ಬೌದ್ಧಿಕವಾಗಿ ಬೆಳೆಸಿದೆಯೆಂದು ತಲೆ ಹೋಳಾಗಿಸಿ ಮೆದಳನ್ನು ತೋರಿಸಲೇ? ಅಪ್ಪ ಹೇಳಿದರಲ್ಲಿ ತಪ್ಪೇನಿಲ್ಲ ಅನ್ನಿಸಿತು. ಇದಾವುದನ್ನೂ ಓದದೇಯೂ ಕೇವಲ ಕೆಲಸ ಮಾಡುತ್ತ ಉದ್ದಾರಾದವರು ತುಂಬಾ ಜನ ಇದ್ದರಲ್ಲ: ಇದು ತನ್ನ ಹಚ್ಚುತನ ಎನ್ನಿಸತೊಡಗಿತು. +ಉಹುಂ ತಾನು ಪುಸ್ತಕದ ಕೀಡೆಯಲ್ಲ ಎಂದು ಬಾಲ್ಕನಿಯಲ್ಲಿ ನಿಂತು ಬೀದಿಯ ಕಡೆ ದೃಷ್ಟಿ ಹಾಯಿಸಿದ. ಎಲ್ಲವೂ ಸಾಮಾನ್ಯವಾಗಿದೆ. ಮೀನು ಮಾರುವ ಇಬ್ರಾಹಿಂ, ಏಳು ಗಂಟೆಗೆ ಚಾಚೂ ತಪ್ಪದೇ ಹಾಲು ಹಾಕಿ ಹೋಗುವ ಹಾಲಿನ ಹುಡುಗಿ ದೀಕ್ಷಾ, ಏಳನೇ ಕ್ಲಾಸಂತೆ ಪುಸ್ತಕ ನೋಡಿದರೆ ಗಬಕ್ಕನೆ ತಿರುವಿ ನೋಡುವ ಗುಣದವಳು, ಮಹಾಭಾರತ ಪುಸ್ತಕ ತಗೊಂಡು ಹೋದದ್ದು ನೆನಪಾಗಿ ಈ ರೈತನ ಮಗಳೂ ಪುಸ್ತಕದ ಕ್ರಿಮಿಯಾದಳೆ ಎಂದು ಯೋಚಿಸತೊಡಗಿದ. ಕೋಶ ಓದಿದ್ದು ಎಷ್ಟು ಸತ್ಯವೋ ದೇಶ ಸುತ್ತಿದ್ದೂ ಅಷ್ಟೇ ಸತ್ಯ. ಪಶ್ಚಿಮ ಘಟ್ಟದ ಈ ಜಿಲ್ಲೆಯಲ್ಲಿ ಬೈಕಿನ ಮೇಲೆ ಒಬ್ಬಂಟಿಯಾಗಿ ಎಲ್ಲೆಲ್ಲೋ ತಿರುಗಿದ್ದಿದೆ, ಮೇಲ್ಜಾತಿಯವನ ದಡ್ಡತನ, ಕೀಳ್ಜಾತಿಯವನ ಅಂಜಬುರುಕತನ, ಬಡವನ ಸ್ನೇಹ, ಶ್ರೀಮಂತನ ಅಹಂ ಎಲ್ಲವನ್ನೂ. ಅನುಭವಿಸಿಯಾಗಿದೆ. ಸಾಹಿತ್ಯ ಕೇವಲ ಮಾಧ್ಯಮವಷ್ಟೆ. 'ಹೊಟ್ಟೆ ಮಾತ್ರ ಬಿಡಬ್ಯಾಡವೋ ಮಾರಾಯಾ ವಾಮನಾವತಾರದಂತೆ ಕಾಣಿಸ್ತಿಯ' ಎಂದು ತನ್ನ ಸುಂದರ ಹೆಂಡತಿ ರೇಗಿಸಿದ್ದು ನೆನಪಾಗಿ ಸೊಂಟದ ಬಳಿ ಕೈಯಾಡಿಸಿದ ಬೊಜ್ಜು ಬೆಳೆಯುತ್ತಿತ್ತು. ಅದೆಷ್ಟು ದಿನ ಆಯ್ತು ಓಡಿ ಕ್ಯಾಸ್ವಾಸ್ ಷೂ ಧೂಳು ಹಿಡಿದಿದೆ. ನಾಳೆಯಿಂದ ಶುರು ಮಾಡಬೇಕೆಂದುಕೊಂಡ. ಏನಾಗಿದೆ ತನ್ನ ಮನಸ್ಥಿತಿಗೆ, ಸುಖಕ್ಕೂ ದುಃಖಕ್ಕೂ ದುಡ್ಡೇ ಕಾರಣವೇ? ಬ್ಯಾಂಕ್ ಬ್ಯಲೆನ್ಸ್ ಆ ಕಡೆ ಅಳುತ್ತಿದೆ ಈ ಕಡೆ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯೂ ಬೆಳೆಯುತ್ತಿದೆ. ಎಲ್ಲ ರೋಗಗಳ ಮೂಲವೂ ಮಾನಸಿಕತೆಯೆಂದು ಎಲ್ಲೋ ಓದಿದ ನೆನಪು. ಎದ್ದು ಡೈನಿಂಗ್ ಹಾಲ್ ನ ಸಿಂಕ್ ಎದುರುಗಡೆ ನಿಂತು ಕನ್ನಡಿಯಲ್ಲಿ ಮುಖ ನೋಡಿಕೊಂಡ ಕಣ್ಣ ಕೆಳಗೆ ಕಪ್ಪು ಪರದೆ ವಯಸ್ಸು ಇನ್ನೂ ಮೂವತ್ತರ ಒಳಗೆ; ಇಷ್ಟು ಬೇಗ ಮುಪ್ಪು ಆವರಿಸತೊಡಗಿತೆ? ದಿಗ್ಭ್ರಾಂತನಾದ. +ಸ್ವಲ್ಪ ಹೊತ್ತಿನ ನಂತರ ನಗುಮೊಗದೊಂದಿಗೆ ಮಗ ಎದ್ದ, ಅದೇ ಮುಗ್ಧತೆ ನಿರ್ಲಿಪ್ತತೆ ಇಡಿ ಬ್ರಂಹಾಡದ ಸುಖಗಳನ್ನೆಲ್ಲಾ ತನ್ನಲ್ಲೇ ಬಚ್ಚಿಟ್ಟುಕೊಂಡಿರುವ ದೇವತೆಯಂತೆ. 'ಪಾ' ಎಂದು ತೊಡೆಯ ಮೇಲೆ ಕೂತ. ತನ್ನಿಂದ ಈಡೇಲರಾದ ಎಲ್ಲಾ ಕನಸುಗಳನ್ನು ಮಗನ ಕಣ್ಣಲ್ಲೆ ಕಾಣುವ ದಡ್ಡ ಬಡ್ಡಿ ಮಕ್ಕಳ ನಡುವೆ ತಾನೂ ಒಬ್ಬ!! ಇನ್ನು ಹೆಂಡತಿಯ ಸರದಿ ರಜೆ ದಿವಸ ಅವಳು ಏಳುವುದೇ ಎಂಟು ಗಂಟೆಗೆ ಇಲ್ಲದಿದ್ದರೆ ಕಿರಿಕಿರಿ ಶುರು. ಹಳ್ಳಿಯಲ್ಲಿ ಬೆಳೆದರೂ ರೈತನ ಮಗಳಾಗಿಯೂ ಯಾವುದೇ ಕಷ್ಟ ಸವೆಸಿ ಗೊತ್ತಿಲ್ಲ ಅದಕ್ಕೇ ಅವಳು ತರುವ ಬೇಡಿಕೆಯ ಚೀಟಿ ಇವನ ಬೆವರಿಳಿಸುತ್ತದೆ. ಬೀಚು , ಪಾರ್ಕು, ಗೋಬಿ ಮಂಚೂರಿ, ಪಂಜಾಬಿ ಥಾಲಿ, ಮಗನ ಹಗ್ಗೀಸ್ ಹೀಗೆ ಮುಗಿದಿತ್ತು ಆ ರವಿವಾರ. + ರಾತ್ರಿ ಹನ್ನೊಂದು ಘಂಟೆ, ಮಗ ರಂಪ ಮಾಡಿ ಈಗ ನಿಧಾನವಾಗಿ ನಿದ್ರಾದೇವತೆಯ ತೆಕ್ಕೆಗೆ ಜಾರಿದ್ದ ಹೆಂಡತಿಯದ್ದೂ ಅದೇ ಸ್ಥಿತಿ ಇವನಿಗೆ ನಿದ್ರೆ ಬರಲೊಲ್ಲದು; ಕೆಲವೊಮ್ಮೆ ಮನುಷ್ಯನಿಗೆ ತಾನು ಒಳ್ಳೆಯವನೆನಿಸಿಕೊಳ್ಳುವ ಚಟ ಶುರುವಾಗುತ್ತೆ ಅದೇ ಕಾರಣಕ್ಕೆ ಬೇರೆಯವರ ಸಹಾಯಕ್ಕಾಗಿ ಅವರ ಮುಂದೆ ದೊಡ್ಡಸ್ತಿಕೆ ತೋರಿಸಲು ನಾವೇ ಸಾಲ ಮಾಡಿಕೊಂಡಿರುತ್ತೆವೆ. ಆದರೂ ಶಹರುಗಳಿಂದ ಹಳ್ಳಿಗಳಿಗೆ ಹೋದಾಗಲೆಲ್ಲ ಜೀನ್ಸ ಕಿಸೆಯಿಂದ ಸ್ಮಾರ್ಟ್ ಫೋನ್ ತೆಗೆದು ಏನೋ ಕಂಪೆನಿಯ ಮಹತ್ವದ ಮೇಲ್ ಬಂದಿದೆಯೆಂದು ಪೋಸ್ ಕೊಟ್ಟು ಅದೇ ಹಳಸಲು ವಾಟ್ಸ್ ಅಪ್ ಮೆಸೇಜ್ ಗಳನ್ನು ಓದುತ್ತಿರುತ್ತೇವೆ. ನಮ್ಮದೇ ಆದ ನಾಟಕೀಯ ಜೀವನ ಶುರು ಮಾಡಿಕೊಂಡಿರುತ್ತೆವೆ ; ಅಲ್ಲಿಂದಲೇ ಶುರುವಾಗೋದು ಎಡವಟ್ಟು. +ಈಗೀಗ ತಾನು ಮಲಗುವುದು ಮಧ್ಯರಾತ್ರಿಯ ವೇಳೆ ಬರೀ ಭೂತ ಭವಿಷತ್ತಿನಲ್ಲೇ ಮಗ್ನನಾಗಿರುವನಂತೆ ಭಾಸವಾಗತೊಡಗಿತು ಅವನಿಗೆ. ಏನೋ ಹೊಳೆದವನಂತೆ ಫೋನ ಹೊರತೆಗೆದು ಡಾಟಾ ಆಫ್ ಮಾಡಿದ, ಫೇಸ್ ಬುಕ್ ಅನ್ನು ನಿಷ್ಕ್ರಿಯಗೊಳಿಸಿದ. ಮುಂಬಯಿನ ಕೊಳಗೆರಿಗಳು, ಹಳೆ ದೆಹಲಿಯ ಫುಟಪಾತುಗಳು, ಚೆನ್ನೈ ರೈಲ್ವೆ ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಮಲಗಿರುವ ಉತ್ತರ ಭಾರತದ ಕಾರ್ಮಿಕರು ನೆನಪಾಗತೊಡಗಿದರು ಒಮ್ಮೆ ನಿಟ್ಟುಸಿರಿಟ್ಟ. ತನ್ನ ತಲೆಯ ಮೇಲೆ ಸೂರಿದೆ, ಹೊಟ್ಟೆ ಭರ್ತಿಯಾಗಿದೆ, ತನ್ನ ಕುಟುಂಬ ಸುರಕ್ಷಿತವಾಗಿದೆ!! ಐದು ನಿಮಿಷ ಭ್ರಮರಿ ಮಾಡಿ 5 ಘಂಟೆಗೆ ಅಲಾರ್ಮ್ ಸೆಟ್ ಮಾಡಿ ಮಲಗಿ ಬಿಟ್ಟ. . +5:30ಕ್ಕೆ ಕಾಲನಿಯ ಗ್ರೌಂಡಲ್ಲಿ ಎರಡು ಸುತ್ತು ಹಾಕುವಷ್ಟರಲ್ಲಿ ಹೈರಾಣಾಗಿ ಹೋದ. ಇನ್ನು ರಮ್ಮ ಹಾಕೋದು ಬಿಡಬೇಕೆಂದುಕೊಂಡ ಸಾರಾಯಿ ಯಾವುದಾದರೂ ಸರಿ ಮೊದಲು ಸುಡುವುದು ಕರುಳನ್ನೇ ಅಲ್ಲವೆ! ಒಂದು ಕಡೆ ಕುಳಿತು ಸುಧಾರಿಸಿಕೊಳ್ಳತೊಡಗಿದ ಅಷ್ಟರಲ್ಲಿ ಕಾಲನಿಯ ಕೆಲ ಮಧ್ಯವಯಸ್ಕ ಮಹಿಳೆಯರ ದಂಡು ವಾಕಿಂಗ್ ಮಾಡುತ್ತ ಕಿಲ ಕಿಲ ನಕ್ಕಿದ್ದು ಕೇಳಿ ಕಿವಿಯಲ್ಲಿ ಗಾಳಿ ಹೊಕ್ಕ ಕರುವಿನ ಹಾಗೆ ಮೈದಾನ ಬಿಟ್ಟು, ಗೇಟಲ್ಲಿರೊ ಸೆಕ್ಯುರಿಟಿ ನಮಸ್ತೆ ಸರ್ ಎಂದುದನ್ನೂ ಕೇಳಿಸಿಕೊಳ್ಳದೆ ಒಂದೇ ಸಮನೆ ಓಡಿದ. ಪರಶುರಾಮನ ಸೃಷ್ಟಿಯಿದು ಸಮತಟ್ಟಾದ ಭೂಮಿ ಸಿಗೋದೇ ಇಲ್ಲ. ತಗ್ಗು ದಿನ್ನೆಗಳು ಎಗ್ಗಿಲ್ಲದೆ ದಾಟಿ ಒಂದು ಹಂತದಲ್ಲಿ ಬಳಲಿ ಬೀಳುತ್ತೇನಂದೆನ್ನೆಸ್ಸಿದರೂ ಬಿಡದೆ ವೇಗ ಹೆಚ್ಚಿಸಿದ, ಚರ್ಮದ ಪ್ರತಿ ರಂಧ್ರದಲ್ಲೂ ಬೆವರು ಒಸರತೊಡಗಿತು, ಟ್ಯಾಂಕಿ, ಮರಕಡ ದಾಟಿ ಬಜಪೆ ಕಡೆ ತಿರುಗಿ ಅರ್ಧ ಕಿಲೊಮೀಟರಲ್ಲಿ ಸಿಗೊ ಮರವೂರು ಸೇತುವೆಯ ಮೇಲೆ ತಲೆ ಬಗ್ಗಿಸಿ ಏದುಸಿರು ಬಿಡುತ್ತ ನಿಂತು ಬಿಟ್ಟ. ಬೆವರಿನ ಪ್ರತಿಯೊಂದು ಹನಿಯಲ್ಲೂ ತನ್ನಲ್ಲಿದ್ದ ನಕಾರಾತ್ಮಕ ಅಂಶಗಳೆಲ್ಲವೂ ಹೊರಹೋಯಿತು, ಮನಸ್ಸು ಪ್ರಫುಲ್ಲಗೊಂಡಿತು. ಒಂದೇ ದಿವಸಕ್ಕೆ ಇಷ್ಟು ಓಡಿದರೆ ನಾಳೆ ಬೆಳಗ್ಗೆ ಕಕ್ಕಸಿಗೆ ಹೋಗುವುದು ಕಷ್ಟವಾಗುತ್ತದೆಯೆಂದು ವಿಲಕ್ಷಣ ನಗೆ ನಕ್ಕು ಅಲ್ಲೇ ನಿಂತು ಸುಧಾರಿಸಿಕೊಂಡ, ಆಗಷ್ಟೇ ಏರ್ ಪೋರ್ಟ್ ನಿಂದ ಲೋಹದ ಹಕ್ಕಿ ಪ್ರಯಣಣಿಕರನ್ನು ಹೊತ್ತು ಆಗಸಕ್ಕೆ ಹಾರಿತು. ಬೆಳಂಬೆಳಗ್ಗೆ ನದಿಯಲ್ಲಿ ಮರಳುಗಾರಿಕೆ ಎಥೆಚ್ಚವಾಗಿ ನಡೆಯುತ್ತಿದೆ ಈ ಸೇತುವೆಯ ಇನ್ನೊಂದು ತುದಿ ಮುಗಿದ ಮೇಲೆ ಮರಳು ತೆಗೆಯುವ ಕಾರ್ಮಿಕರ ಗುಡಿಸಲುಗಳಿವೆ. ಅಲ್ಲಿ ಹೋಗಿ ಕುಳಿತು ಕಾರ್ಮಿಕನೊಬ್ಬನನ್ನು ಮಾತಿಗೆಳೆದ. ಜಾರ್ಖಂಡದನಂತೆ "ಧೋನಿ ಸಾಲಾ ಹಮಾರಾ ಗಾಂವ ಕಾ ಹೈ" ಎಂದು ಬೀಗಿದ, ಮೂವರು ಮಕ್ಕಳ ತಂದೆ; ಎಲ್ಲರನ್ನೂ ಎಲ್ಲವನ್ನೂ ಧಿಕ್ಕರಿಸಿ ಕೂಲಿಗಾಗಿ ರೈಲು ಹತ್ತಿ ಬಂದು ಬಿಟ್ಟಿದ್ದ. ಮಕ್ಕಳ ವಿಷಯ ಬಂದಾಗ ಅವನ ಕಠೋರವಾದ ಮುಖದಲ್ಲೂ ಮಂದಹಾಸ ಮೂಡಿತು, ಹರ್ಷಗೊಂಡವನಂತೆ ತಾನೂ ಮಗುವಾಗಿ ಹೋದ, ಮತ್ತೆ ಗಂಭೀರವಾಗಿ ನದಿಯ ನೇರಕ್ಕೆ ದೃಷ್ಟಿ ನೆಟ್ಟು "ಉನಕೊ ಪಡಾಯೆಂಗೆ ನಾ ಸಾಬ್ ಬಹುತ್ ಪಡಾಯೆಂಗೆ ಉನಕೊ" ಎಂದು ಎದ್ದು ನದಿಯಲ್ಲಿ ಕಾಯುತ್ತಿರುವ ಬೋಟು ಹತ್ತಿದ. ತನ್ನನ್ನು ತಾನು ಉಸಿರುಗಟ್ಟಿಸಿ ನದಿಯ ತಳಕ್ಕಿಳಿದು ಮರಳು ತೆಗೆಯುವ ಕಾಯಕವದು :ನಮ್ಮ ನಮ್ಮ ಮನೆಯ ಪ್ರತಿಯೊಂದು ಕಣಕಣದಲ್ಲೂ ಬಡವನೊಬ್ಬನ ಉಸಿರಿದೆ ನೆನಪಿರಲಿ. +ಬೆಳಗಿನ ಸೂರ್ಯ ಇಂಚಿಂಚಾಗಿ ಮೇಲೆರುತ್ತ ತನ್ನನ್ನು ನೋಡಿ "ಶಹಬ್ಬಾಸ್ ಮಗನೇ ಶಹಬ್ಬಾಸ್ ಒಂದೇ ದಿನಕ್ಕೆ ಸುಸ್ತಾಗಬೇಡ ದಿನಾಲೂ ಶುರು ಹಚ್ಕೊ "ಅಂದಗಾಯ್ತು. ತಾನೂ ಸಿರಿವಂತ, ಭಾಗ್ಯವಂತ, ಪುಣ್ಯವಂತ ಹಾಗೂ ಸುಖಿ ಮನುಷ್ಯ ಎಂದೆನಿಸಿ ಅರ್ಜಿತ್ ಸಿಂಗನ ಹಾಡು ಕೇಳುತ್ತಾ ಮನೆಯ ದಾರಿ ಹಿಡಿದ. . . . + + \ No newline at end of file diff --git a/PanjuMagazine_Data/article_1068.txt b/PanjuMagazine_Data/article_1068.txt new file mode 100644 index 0000000000000000000000000000000000000000..7f06ed8c098e6402a4fc3cf799068daef0908f74 --- /dev/null +++ b/PanjuMagazine_Data/article_1068.txt @@ -0,0 +1,80 @@ +ಮತ್ತೊಂದು ಗೋಮುಖ +ಓ ಜನರೆ ನನಗೂ ಬಯಕೆಗಳಿವೆ, ಬಯಕೆ ಬೆಂಕಿಯ ಬೇಗೆ ತಾಳಲಾರೆ, +ಒಮ್ಮೆ ಅನುಭವಿಸಲು ಬಿಡಿ ನಿಮಗೆ ದಮ್ಮಯ್ಯ ಅಂತಿನಿ + +ಅನ್ನದೆ ವಿಧಿಯಿಲ್ಲ, ಪ್ರತಿಭಟನೆಯ ದಾರಿ ಕಾಣದ, ಮತಿ ಇರದ ಮಾತು ಬಾರದ, ದನ ನಾನು +ಹುಟ್ಟಿದಾಗ ತಾಯಿ ಕೆಚ್ಚಲಿಗೆ ಬಾಯಿ ಹಾಕಿದರೆ ಜಗ್ಗಿ ಕಟ್ಟಿದಿರಿ +ತೊರೆ ಬಿಟ್ಟ ತಾಯ ಕೆಚ್ಚಲ ಬಕೇಟಿಗೆ ಬಸಿದಿರಿ +ಮುಸು ಮುಸು ಮುಸುಗುಟ್ಟಿ ಮೌನವಾದಳು ನನ್ನ ಮೂಕ ತಾಯಿ +ನನ್ನ ಪಾಲದು ನನಗೆ ಕೊಡಿ ಎಂದು ಹಕ್ಕಿನ ಮಾತಾಡಿಲಿಲ್ಲ ನಾನು +ನೀವು ಕುಡಿಯಿರಿ, ನನಗಷ್ಟು ಕುಡಿಸಿರಿ ಅಂತ ದಮ್ಮಯ್ಯ ಅಂದೆ. + +ನನ್ನ ಮಗನ ತೊಡ್ಡು ಬಡಿಸಿ ಬೀಜ ಒಡೆದು ನಿಮ್ಮ ಬೀಜ ಬೇಯಿಸಿ ಕೊಳ್ಳುತ್ತಿದ್ದಿರಿ. +ಅವನ ಬದುಕು ಪೂರ್ತಿ ಹೆಗಲಿಗೆ ನೊಗ ಕಟ್ಟಿ ನಿಮ್ಮ ಬದುಕಿನ ಬಂಡಿ ಎಳೆಸಿಕೊಳ್ಳುತ್ತಿದ್ದಿರಿ +ಆತ ಹುಟ್ಟಿದ್ದು ತನ್ನ ಫಲ ಬಿತ್ತುವುದಕ್ಕೆ, ಆದರೆ ಬೀಜ ಒಡೆಸಿಕೊಂಡಾತನಲ್ಲಿ ಬೀಜವೆಲ್ಲಿ, +ಅವನಿಗೆ ದಕ್ಕಬೇಕಾದ ಕ್ಷೇತ್ರದಲ್ಲಿ ನೀವು ಮೂಗು ತೂರಿಸುತ್ತಿದ್ದಿರಿ. + +ಆಸೆ ಪಡುವ ಹರೆಯದ ಮಗಳಿಗೆ ಗುದದಲ್ಲಿ ಕೈ ಹಾಕಿ ಬಸಿರುಗಟ್ಟಿಸುತ್ತಿರಿ +ಪಾಪ, ಆಕೆ ತಾನು ಯಾವಾಗ, ಹೇಗೆ, ಬಸಿರಾದೆ, +ತನ್ನ ಮಗುವಿಗೆ ತಂದೆಯಾರೆಂದು ತಿಳಿಯದ ನತದೃಷ್ಟೆ. +ಸುಖದ ನರಳಿಕೆಯೂ ಇಲ್ಲದೆ ಗರ್ಭಗಟ್ಟಿ ಅದನ್ನು ನಿಮಗೆ ಬೇಕಾದ ಉತ್ಪನ್ನ ನೀಡುವ ಯಂತ್ರ + +ಹಸಿರು ಕಂಡಲ್ಲಿ ಬಾಯಾಕಿದರೆ ಕಲ್ಲು ಬೀಸುತ್ತಿರಿ. +ಹಸಿರು ಬಯಲಿನ ನಡುವೆ ಒಡ್ಡು ಬೇಲಿ ಹಾಕಿ ನಂದು ನಿಂದೆಂದೂ ಜಗಳವಾಡುವಿರಿ, +ಹಾಗಾದರೆ ಇನ್ನುಳಿದ ನಮ್ಮಂಥ 84ಕೋಟಿ ಜೀವರಾಶಿಯ ನಮ್ಮ ಪಾಲೆಲ್ಲಿ. +ಹಳ್ಳ ಹಸಿರು, ಕೆರೆ ಬಾವಿ ಬಯಲುಗಳೆಲ್ಲ ನಿಮ್ಮದಾದರೆ ನಮ್ಮ ಪಾಡೇನು. + +ನೀವಾದರೋ ನಿಮ್ಮ ವಂಶದ್ಧಾರಕರನ್ನು ಕಣ್ಣಲ್ಲಿ ಕಣ್ಣೀಟ್ಟು ಒಪ್ಪಮಾಡಿ ಸಾವಿರಗೊಳಿಸುತ್ತಿದ್ದಿರಿ +ನಾನು ಹೆಚ್ಚಿನದೇನನ್ನು ಕೇಳುವುದಿಲ್ಲ, ಹಸಿರು ಮೇಯಲು, ಪ್ರೀತಿಯ ಹೋರಿಯೊಂದಿಗೆ ಕೂಡಲು +ಎಳೆ ಮಕ್ಕಳಿಗೆ ಮೊಲೆ ಕುಡಿಸಲು, ಅವಕಾಶ ಕೊಡಿ ಸಾಕು, +ಇಲ್ಲವಾದರೆ, ಮುಂದೆ ಭೂಲೋಕದಲ್ಲೆಲ್ಲ ನೀವೇ ಅವರಿಸಿರುತ್ತಿರಿ, +ನಾವು ಡೈನೋಸಾರ್‍ನ ಹಾದಿ ಹಾದಿಹಿಡಿಯಬೇಕಾಗುತ್ತದೆ. +ಹೋಗಿ ಬರುತ್ತೇವೆ. ಅಲ್ಲಲ್ಲ, ಹೋಗುತ್ತಿದ್ದೇವೆ. +-ಹನುಮಂತ ಹಾಲಿಗೇರಿ + +ಹಣತೆ ನಕ್ಕಿತು +ಶತಮಾನಗಳು ಉರುಳಿದರೂ +ತೀರದ ಚಿರಂತನ ಹಸಿವು + +ಸೂರ್ಯ ಸೂತಕವಿಲ್ಲದ ಮನೆಯ +ದಿನವೂ ಹಾದು ಹೋದ + +ಚಂದ್ರ ತಾರೆಯರು ಭೂಮಂಡಲದ +ಕ್ಷುದ್ರರಿಗೆ ಸಾಂತ್ವಾನ ಹೇಳಿದರೂ + +ಪ್ರೀತಿ ಸಾರಲು ನದಿ +ದಣಿವಿಲ್ಲದೆ ಹರಿಯಿತು + +ಮನುಷ್ಯ ಮಾತ್ರ ಸೂತಕದ +ಮನೆಯಲ್ಲಿ ತೂಕಡಿಸಿರಲು + +ದಕ್ಕದ ಪ್ರೀತಿಗೆ ಸೋತಿರಲು +ನಿಲ್ಲದ ಮುಪ್ಪ ಅಣೆಕಟ್ಟಿನಲ್ಲಿ ಬಂಧಿಸಿರಲು +ಅರಮನೆಯ ಮುಂದೆ +ಬದುಕ ಕಿರುಹಣತೆ ನಕ್ಕಿತು +-ನಾಗರಾಜ್ ಹರಪನಹಳ್ಳಿ. ಕಾರವಾರ. + +ವಿಳಾಸವಿಲ್ಲದವರು +ನೀವು ಬಯಸಿದ ಮನೆ +ಇಲ್ಲಿದೆ ಬನ್ನಿ +ಉಳಿಯಬಹುದು ನೀವು +ಬಯಸಿದಷ್ಟು ದಿನ +ಬಾಡಿಗೆ ಹೆಚ್ಚೇನಿಲ್ಲ +ಎಂದವರು ಬಿಡಿ ಮನೆಯ +ಉಳಿದದ್ದು ಸಾಕು ವಿಳಾಸ +ಬದಲಾಗಿದೆ ಎಂದು ಹೇಳುತ್ತಿದ್ದಾರೆ +ಮೊದಲಿದ್ದ ಮನೆ ಬಿಟ್ಟು +ಹೊಸ ಮನೆಗೆ ಬಂದವರು +ಮತ್ತೆ ಕಳೆದುಕೊಂಡರು +ತಮ್ಮ ವಿಳಾಸ +ಮನೆಗೆ ಮರಳುವಂತಿಲ್ಲ +ತೊರೆದ ಮನೆ ಈಗ +ಮೊದಲಿನಂತಿದೆ ಎಂದು +ನಂಬುವುದಾದರೂ ಹೇಗೆ? +ಜೇಡ ವಾಸದ ಮನೆಯ +ಮತ್ತೆ ಹೊಕ್ಕುವುದು ಕಷ್ಟ +ಹುಡುಕುತ್ತಿದ್ದಾರೆ ಹೊಸ ಮನೆಯ +ನಿರ್ಜನ ಬೀದಿಯಲ್ಲಿ ಹೀಗೆ +ರಾತ್ರಿ ಬಂದಿಳಿಯಲು +ಇರಬಹುದೇ ಯಾವ ಕಾರಣ? +-ಅಕ್ಷತಾ ಕೃಷ್ಣಮೂರ್ತಿ \ No newline at end of file diff --git a/PanjuMagazine_Data/article_1069.txt b/PanjuMagazine_Data/article_1069.txt new file mode 100644 index 0000000000000000000000000000000000000000..f2d97191957364fcc040876272f71d04db50f2d1 --- /dev/null +++ b/PanjuMagazine_Data/article_1069.txt @@ -0,0 +1,12 @@ +ಮನುಷ್ಯನಿಗೆ ಸಮಯ ಅನ್ನೋದು ಅಮೂಲ್ಯ. ಈ ಕ್ಷಣ ಕಳೆದುಕೊಂಡರೆ ಅದನ್ನು ಮತ್ತಿನ್ನೆಂದೂ ಪಡೆಯಲು ಸಾಧ್ಯವಿಲ್ಲ. ಬಹಳಷ್ಟು ಸಾಧಕರು ಸಮಯವನ್ನು ತಮ್ಮ ತಮ್ಮ ಕೌಶಲ್ಯ, ಕ್ರಿಯೇಟಿವಿಟಿಗೆ, ನೈಪುಣ್ಯತೆಗೆ ಓರೆ ಹಚ್ಚುವ ಗೀಳಿಗೆ ಹಠಕ್ಕೆ ಬಿದ್ದು ಬಳಸಿಕೊಳ್ಳುತ್ತಾರೆ. ಇರುವ ಇಪ್ಪತ್ನಾಲ್ಕು ಗಂಟೆಯಲ್ಲಿ ಹದಿನೆಂಟು ತಾಸು ಕೆಲಸ ಮಾಡುತ್ತಲೇ, ಓದು, ಬರಹ, ಸಂಗೀತ, ಸುತ್ತಾಟ, ಗೆಳೆಯರು, ಹರಟೆ ಎಲ್ಲವನ್ನೂ ಹದವಾಗಿ ಅನುಭವಿಸಿ ಖುಷಿಯಿಂದಿರುವ ಎಷ್ಟು ಜನರಿಲ್ಲ ಹೇಳಿ? +ಬಾಲ್ಯದಲ್ಲಿ ನನ್ನದೊಂದು ಅಂದಾಜೇ ಇರದ ದಿನಗಳಿದ್ದವು. ಆ ಸಮಯದಲ್ಲಿ ನನ್ನ ಮನಸ್ಸಿಗೆ ನೋವಾಗುವಂಥ ಅಥವಾ ದು:ಖವಾಗುವಂಥ ಸನ್ನಿವೇಶ ಎದುರಾದಲ್ಲಿ “ ನನಗೂ ಒಂದು ಟೈಂ ಬರುತ್ತೆ….” ಅಂದುಕೊಂಡು ಸುಮ್ಮನಾಗುತ್ತಿದ್ದೆ. ನೋಡ ನೋಡುತ್ತಲೇ ಬಾಲ್ಯ ಕಳೆಯಿತು. ಹರೆಯಕ್ಕೆ ಕಾಲಿಟ್ಟ ಹೊಸತು. ಓದಿನ ಅನಿವಾರ್ಯ, ದುಡಿಮೆಯ ದರ್ದು. ಮಧ್ಯೆದಲ್ಲೇ ಹಾಗೆ ಬಂದು ಹೀಗೆ ಮುಖ ಸವರಿ ಹೋದ ಗಾಳಿಯಂಥ ಪ್ರೀತಿ. ಮತ್ತೆ ಖಾಲಿ ಖಾಲಿ ….. ಆಗಲೂ “ ನಂಗೂ ಒಂದು ಟೈಂ ಬರುತ್ತೆ…” ಅಂದುಕೊಂಡೆ. +ನೌಕರಿಗೆ ಸೇರಿದ ಹೊಸದು. ಹಿರಿಯ ನೌಕರರಿದ್ದ ಕಛೇರಿ. ನಾನೊಬ್ಬನೇ ಇಪ್ಪತ್ತೂ ದಾಟದ ಹುಡುಗ. ನನಗಿಂತ ಹದಿನೈದಿಪ್ಪತ್ತು ವರ್ಷ ದೊಡ್ಡವರಿದ್ದರೇನಂತೆ? ಹರಟೆ, ಸಲಹೆ ಸಲೀಸು ಸಲೀಸು. ಅದರಲ್ಲೊಬ್ಬರಿಗೆ ಪದೇ ಪದೇ ಗಡಿಯಾರ ನೋಡುವ ಅಭ್ಯಾಸವೇನಿದ್ದಿಲ್ಲ. ಆದರೆ, ಅದರೆ, ಅವರು ಗಡಿಯಾರ ನೋಡಿದಾಗೊಮ್ಮೆ ಸಮಯ 4.20 ಆಗಿರುತ್ತಿತ್ತು. ಆಕಸ್ಮಿಕವೂ ಹೌದು, ಕೆಲಸದ ನಡುವೆ ಯಾರಿಗಾದರೂ ಕರೆ ಮಾಡುವ, ಬರ ಹೇಳುವ, ಅಥವಾ ಇನ್ನಾವುದಕ್ಕೋ ನೋಡಿದಾಗೊಮ್ಮೆ 11.20, 12.20, 1.20, 3.20, 4.20 ಕೊನೆಗೆ ಇನ್ನೇನು ಮನೆಗೆ ಹೊರಡಬೇಕಲ್ಲಾ ಎಂದು ನೋಡಿದರೆ 5.20.. ಹೀಗೆ. +ಅವರು ಅದನ್ನು ಹೇಳಿ “ನೋಡಪ್ಪಾ 420 ಮಂದಿಗೆ ಮಾತ್ರ 4.20 ಟೈಂ.. ಕಾಣುತ್ತೆ.” ಅನ್ನೋರು; ತಮಾಷೆಗೆ. ಹಂಗಾಗಿ ಆಗಿನಿಂದ ಅವರನ್ನು 4.20 ಮಂದಿ ಅನ್ನಲು ಶುರುವಾಯಿತು. ಬರಬರುತ್ತಾ ಆ ಚಾಳಿ ನನಗೂ ಬಿದ್ದಿತು. ಬರೀ ಆ ಚಾಳಿ ರೂಢಿ ಆಯಿತಷ್ಟೇ ಅಲ್ಲ. ಬದಲಾಗಿ 4.20 ಸಮಯಕ್ಕೆ ನನ್ನ ಲಕ್ಕೋ ಏನೋ ಸಾಕಷ್ಟು ಸಲ ಒಳ್ಳೊಳ್ಳೇ ಕೆಲಸಗಳಾಗಿವೆ. ಅದೊಮ್ಮೆ ಕಛೇರಿಯಲ್ಲೊಬ್ಬ ನೌಕರರು ತಮ್ಮ ಮೇಲಿದ್ದ ಆರೋಪಗಳನ್ನು ಮರೆಮಾಚಲು ಒಂದು ಗುಂಪು ಜನರನ್ನು ನನ್ನನ್ನು ಹೊಡೆಸಲು ಕರೆಸಿದ್ದರು. ಅದೇ ಸಮಯಕ್ಕೆ ನನ್ನ ಗೆಳೆಯನೊಬ್ಬ ಬಂದನೆಂದು ಟೀ ಕುಡಿಯಲು ಎದ್ದು ಹೋಗಿದ್ದೇ ಬಂತು. ಆ ಗುಂಪಿನ ಬಾಯಿಗೆ ಕೈಯಿಂದ ಸಿಗದೇ ತಪ್ಪಿಸಿಕೊಂಡ ಲಕ್ಕು…. ಆಗ ಸಮಯ ಸಂಜೆ 4.20…. ತುಂಬಾ ಸೂಕ್ಷ್ಮದ ಸಂಧರ್ಭ, ಒಂದು ಮಾತು ಆಡಿದರೆ ಹೆಚ್ಚು ಇನ್ನೊಂದಾಡಿದರೆ ಕಡಿಮೆ. ಅಂಥ ಕಛೇರಿಯಲ್ಲಿ ಸಮಯದಲ್ಲಿ ಮಾತೇ ಆಡದೇ, ಕೇವಲ ಕಡತಗಳೊಂದಿಗೆ ಮಾತಾಡಿಸಿ ಗೆದ್ದ ಸಮಯಗಳೆಷ್ಟೋ. ಸಿಬ್ಬಂದಿಗೋ, ಸ್ನೇಹಿತರಿಗೋ ಏನಾದರೊಂದು ಸಲಹೆ, ಕೆಲಸ, ಒಳ್ಳೆಯದಾಗಿದ್ದ ಮಾತಿನ ಹುಸಿನಗೆಯಲ್ಲಿ “ನಮ್ಮಂಥ 4.20 ಮಂದಿಯಿಂದ ಇನ್ನೇನಾಗೋದಿಕ್ಕೆ ಸಾಧ್ಯ ಹೇಳ್ರಿ….” ಅಂದುಬಿಡುತ್ತಿದ್ದೆ. ಡಕೋಟಾ ಎಕ್ಸಪ್ರೆಸ್ ನಂತಾಗಿದ್ದ 96ರ ಮಾಡೆಲ್ ಬಜಾಜ್ ಸ್ಕೂಟರ್ ರಿಪೇರಿಗೆ ದಬ್ಬಿಕೊಂಡು ಗ್ಯಾರೇಜ್ ಹತ್ತಿರ ಹೋದರೆ ಸಾಕು, ದೂರದಿಂದಲೇ ಅಡ್ಡಬೀಳುತ್ತಿದ್ದ ಮೆಕಾನಿಕ್ ಗಳ ಭಯ ಭಕ್ತಿಗೆ ಮನಸೋತು ಕೊನೆಗೆ 2012ರಲ್ಲಿ ಬೈಕ್ ಖರೀದಿಸಿ ರಿಜಿಸ್ಟ್ರೇಷನ್ ಮಾಡಿದರೆ ಸಿಕ್ಕ ನಂಬರ್ರು- 2120. ಆ ಬೈಕ್ ಸಹ ಬರೋಬ್ಬರಿ ಸಾಥ್ ನೀಡುತ್ತಿದೆ; ನನ್ನ ತಿರುಗಾಟ, ಫೋಟೋಗ್ರಫಿ, ಮತ್ತೆಲ್ಲಕ್ಕೂ. +ಅದೊಮ್ಮೆ ಬಾಡಿಗೆ ಮನೆಯಿಂದ ಸ್ವಂತ ಮನೆ ಕಟ್ಟಿಸುವ ಯೋಚನೆ ಹೊಳೆದದ್ದೇ ತಡ. ಕೈಯಲ್ಲಿ ಐವತ್ತು ರುಪಾಯಿಗಿಂತ ಒಂದೇ ಒಂದು ರುಪಾಯಿಯೂ ಇಲ್ಲದೇ ಹೆಂಡತಿಯನ್ನು ಕೂಡಿಸಿಕೊಂಡು ಸೈಟ್ ನೋಡಲು ಬೈಕ್ ಸ್ಟಾರ್ಟ್ ಮಾಡಿದೆ. ನೋಡುತ್ತೇನೆ; ಸಮಯ ಸಂಜೆ 4.20. ಕಟ್ಟಿದ ಮನೆ ಖರೀದಿಸಲು ನಿರ್ಧರಿಸಿದ ನಂತರ ಟೊಕನ್ ಅಡ್ವಾನ್ಸ್ ಕೋಡಿದಿಕ್ಕೆ ಅಂತ ಕರೆಸಿ ಹತ್ತು ಸಾವಿರ ಮನೆ ಓನರ್ ಕೈಗಿಟ್ಟು ಒಂದು ಕಪ್ಪು ಚಹಾ ಕುಡಿದು ನೋಡುತ್ತೇನೆ, ಸಮಯ ಸಂಜೆ 7.20. ಮುಂದೆ ಹಳೆಯ ಸೈಟು ಕೊಟ್ಟು ಬಂದ ದುಡ್ಡಿಗೆ ಬ್ಯಾಂಕ್ ಸಾಲ ಜೋಡಿಸಿ ಮನೆ ಖರೀದಿಸಿದೆ. ಆ ಹಳೇ ಎರಡು ಸೈಟುಗಳನ್ನು ಮಾರಾಟ ಮಾಡಿ ಸಬ್ ರಿಜಿಸ್ಟ್ರಾರ್ ಆಫೀಸಲ್ಲಿ ಥಂಬ್ ಇಂಪ್ರೆಷನ್ ಕೊಡುವಾಗಮ್ಮೊ ಸಮಯ ನೋಡಿದೆ ಸಮಯ 4.20. ಆಹಾ… 4.20 ಎಂಬ ಸಮಯವೇ? +ಇದಿಷ್ಟು ನನ್ನ ಪಾಲಿಗೆ 4.20 ಸಮಯ ಒಲಿದ ಮಾತಾಯಿತು. ಇನ್ನು ನನ್ನ ಮೇಲೆ ಕತ್ತಿ ಮಸೆದು, ಶಪಿಸಿ, ಆರೋಪ ಹೊರಿಸಿ, ಮೂಗರ್ಜಿ ಬರೆದು ಮುಖ್ಯಮಂತ್ರಿಗಳಿಗೆ, ಸೆಕ್ರಟರಿಯೇಟ್ ಗೆ, ಇಲಾಖೆಗೆ, ಅಕ್ಕಪಕ್ಕದ ಜಿಲ್ಲೆಯ ನಮ್ಮದೇ ಕಛೇರಿಗಳಿಗೆ ಇರುಮುಡಿ ಕಟ್ಟಿಕೊಂಡ ಅಯ್ಯಪ್ಪಸ್ವಾಮಿ ಭಕ್ತರಂತೆ ನನ್ನದೇ ಹೆಸರನ್ನು ಮಾತಿಗೊಮ್ಮೆ ನೆನೆಸಿಕೊಳ್ಳುತ್ತಾ ದೂರಿದವರು, ಪೂಜೆ, ಹೋಮ ಹವನ ಮಾಡಿದವರ ಸಮಯವನ್ನೂ ಒಂದಿಷ್ಟು ಹೇಳಬೇಕಿದೆ. +ಪವರ್ ಫುಲ್ ದೇವಿ ಬಳ್ಳಾರಿ ದುರುಗಮ್ಮ, ಹುಲಿಗೆಮ್ಮ, ಸೌದತ್ತಿ ಎಲ್ಲಮ್ಮ ಎಲ್ಲರಿಗೂ ಭಕ್ತಿಯಿಂದ ನಮಿಸಿ ನಿಂಬೆಹಣ್ಣು ಮಂತ್ರಿಸಿಕೊಂಡು, ಗಿಣಿಶಾಸ್ತ್ರ ಕೇಳಿ ಪಾವನರಾಗಿ “ನೋಡ್ರಿ, ಅವನ್ನ ಏನ್ಮಾಡ್ಬಿಡ್ತೀವಿ…..” ಅಂತೆಲ್ಲಾ ಅಬ್ಬರಿಸಿ ಬೊಬ್ಬಿರಿದವರ ಹಿಂದೆ ಯಾವ ಬಳ್ಳಾರಿ ದುರುಗಮ್ಮ, ಹುಲಿಗೆಮ್ಮ ಸೌದತ್ತಿ ಎಲ್ಲಮ್ಮಂದಿರು ಸೊಪ್ಪು ಹಾಕಲಿಲ್ಲ. ಬದಲಾಗಿ ಬೊಬ್ಬಿರಿದವರ ಕೈಯಲ್ಲಿ ಚಾಟಿ ಕೊಟ್ಟು ತಮ್ಮ ಎಮ್ಮೆ ಚರ್ಮದ ಮೈಗೆ ತಾವೇ ಬೀಸಿಕೊಳ್ಳುವಂತೆ ಕರುಣೆ ತೋರಿದರು. ಯಾವ ದೇವರು ಮುಹೂರ್ತ ನೋಡಿ ಕೈ ಮುಗಿ ಎನ್ನುವುದಿಲ್ಲ. ಇನ್ನೊಬ್ಬರಿಗೆ ಕೇಡು ಬಯಸಿ ಹರಕೆ ತೀರಿಸೆಂದು ಆಗ್ರಹಿಸುವುದಿಲ್ಲ. ಮನುಷ್ಯನ ಗುಣ, ಮನಸ್ಸಿನ ಕನ್ನಡಿ ಎನ್ನಬಹುದು. ಮನಸಿನಂತೆ ಮಹಾದೇವ ಎಂದ ಹಳಬರು ದಡ್ಡರಲ್ಲ. ನಾವು ಒಬ್ಬರಿಗೆ ಕೇಡು ಬಯಸಿದರೆ ನಮಗೆ ಇನ್ನೊಂದು ಬಗೆಯಲ್ಲಿ ಕೇಡಾಗಿರುತ್ತದೆ. +ಬಿಡಿ, ಈಗೊಂದಿಷ್ಟು ತಮಾಷೆಗೆ ಬರೋಣ. ನನ್ನ ಮದುವೆ ಮಟ ಮಟ ಮಧ್ಯಾಹ್ನ “ಅಭಿಜನ್ ಲಗ್ನ” ದ ಮೂಹೂರ್ತ 12.20ರ ವೇಳೆ ತಾಳಿ ಕಟ್ಟಿದೆ. ಗೇಲಿ ಮಾಡುವವರು “ಆತ್ ನೋಡಪಾ….. ಇನ್ಮೇಲೇ ಹೀಂಗೇ ಧಗಾ ಧಗಾ…..ಅಂತ ಮನೇಲಿ ಇಬ್ರೂ ಉರಿಯದಿದ್ರೆ ಸಾಕು” ಅಂದಿದ್ರು. ಮದುವೆ ನಡೆದದ್ದು ಸಿಟಿಯ ಮಧ್ಯೆ ಭಾಗದಲ್ಲಿ. ಮದುವೆಗೆ ಬಂದ ಆಹ್ವಾನಿತರು ಹತ್ತಿರವಿದ್ದ ಗಿಫ್ಟ್ ಸೆಂಟರ್ ಗೆ ಹೋಗೋದು ಒಂದೊಂದು ಗಿಫ್ಟ್ ತರೋದು….. ಪ್ರೆಸೆಂಟ್ ಮಾಡೋರು… ಮದುವೆ ಮುಗಿದ ಮೇಲೆ ಬಂದಿರೋ ಗಿಫ್ಟ್ ಪ್ಯಾಕ್ ಎಲ್ಲವನ್ನು ಬಿಚ್ಚುತ್ತಿದ್ದರೆ “ ನನ್ ಟೈಂ…. ಈಗ ಕೂಡಿ ಬಂದಿದೆ” ಅನ್ನಿಸಿದ್ದು ಸುಳ್ಳಲ್ಲ. ಯಾಕೆ ಗೊತ್ತಾ? ಬಂದ ಸುಮಾರು ಗಿಫ್ಟ್ ಗಳಲ್ಲಿ ಕನಿಷ್ಟವೆಂದರೂ ಇಪ್ಪತ್ತೈದು ವಾಲ್ ಕ್ಲಾಕ್ ಗಳು. ಅಪ್ಪಿತಪ್ಪಿ ವರ್ಷದಲ್ಲಿ ಒಮ್ಮೆ ಕೈ ಜಾರಿ ಬೀಳಿಸಿದೆ ಅಂದ್ಕಂಡ್ರೂ ಕನಿಷ್ಟ ಪಕ್ಷ ಇಪ್ಪತ್ತೈದು ವರ್ಷಕ್ಕಾಗುವಷ್ಟು ವಾಲ್ ಕ್ಲಾಕ್ ಗಳಿದ್ದವು. ಅದರಲ್ಲಿ ಚೆನ್ನಾಗಿದ್ದದ್ದನ್ನು ಮನೆಯ ಗೋಡೆಗೆ ಶೆಲ್ ಹಾಕಿ ನೇತಾಕಿದೆನು. ಬಾಕಿ ಇದ್ದವಲ್ಲ? ಅವನ್ನೇನು ಮಾಡೋದು? ಆಗಾಗ ಯಾರದಾದರೂ ಸಣ್ಣ ಬರ್ತಡೆ. ಬೀಳ್ಕೊಡುಗೆ ಇಂತಹ ಕಾರ್ಯಕ್ರಮಗಳಲ್ಲಿ ಗಿಫ್ಟ್ ಕೊಟ್ಟು ಸುಮ್ಮನಾದೆ. ಆದರೆ, ನನ್ನ ಗೆಳೆಯನೊಬ್ಬ ಸೀರಿಯಸ್ಸಾಗಿ ನಮ್ಮ ಮದುವೆ ಆದ ವರ್ಷಗಳ ನಂತರ ಫೋನ್ ಮಾಡಿ ಅದೊಮ್ಮೆ “ದೀಪು…. ನಿಮ್ಮದುವೆಯಲ್ಲಿ ಗಿಫ್ಟ್ ಬಂದಿದ್ವಲ್ಲಾ? ಗಡಿಯಾರಗಳು ಇದಾವ?“ ಅಂತ ಕೇಳಿದ್ದಲ್ಲದೇ ಖುದ್ದಾಗಿ ಬಂದು ತಮಾಷೆ ಮಾಡುತ್ತಲೇ ಒಂದು ಪೀಸ್ ತೆಗೆದುಕೊಂಡು ಹೋಗಿದ್ದ. +ನಾನು ತೆಗೆದ ಕೆಲವು ಫೋಟೋಗಳು ಪತ್ರಿಕೆಗಳಲ್ಲಿ ಬಂದವು. ನನ್ನ ಲೇಖನಗಳು ಪ್ರಕಟವಾದವು. ನಾನು ಒಂದಷ್ಟು ವಾರಗಳು ತೋಚಿದ್ದನ್ನು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆದೆ. ನನ್ನ ಫೋಟೋಗ್ರಫಿ ಹವ್ಯಾಸದ ಬಗ್ಗೆ ಪತ್ರಕರ್ತ ಮಿತ್ರರು ವರದಿ ಮಾಡಿದರು. ಆಗೆಲ್ಲಾ ಅವನ್ನೆಲ್ಲಾ ನನ್ನ ಹೆಂಡತಿಗೆ ತೋರಿಸಿದರೆ, “ಪೇಪರ್ನವ್ರಿಗೆ ನಿಮ್ ಬಗ್ಗೆ ಗೊತ್ತಿಲ್ಲ…. ನೀವು ಬರೀ 4.20 ಅಲ್ಲ… 8.40 ಅಂತ ನಾನೇ ಹೇಳ್ತೀನಿ ಇರಿ” ಎನ್ನುತ್ತಾ ಕಿಸಕ್ಕನೇ ನಗುತ್ತಾಳೆ. ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಭಾಷಣಗಳನ್ನು ಕೇಳುತ್ತಿದ್ದರೆ, “ ಈ ಟೈಂ ಅನ್ನೋದ್ ಏನದಾ……” ಎನ್ನುತ್ತಾ ಶುರು ಮಾಡಿ ಮನುಷ್ಯನ ಜೀವನ, ಗುಣಾವಗುಣಗಳನ್ನು ವಿಮರ್ಶೆ, ತರ್ಕ, ಫಜೀತಿ, ಅನಿವಾರ್ಯಗಳಿಂದ ಕೂಡಿಸಿ, ಕೊನೆಗೆ ಒಂದು ಉದಾಹರಣೆ, ಉಪಸಂಹಾರದೊಂದಿಗೆ ಮುಗಿಸುವ ಮಾತಿನಲ್ಲಿ ಒಂದಿಷ್ಟು ವಿಚಾರಗಳಿರುತ್ತವೆ; ಅರ್ಥ ಮಾಡಿಕೊಳ್ಳಲು. ಆಗೆಲ್ಲಾ ನನ್ನ 4.20 ಸಮಯದ ಕತೆ ಹೇಳಬೇಕೆನ್ನಿಸ್ಸಿದ್ದು ತಮಾಷೆಗೆ ಮಾತ್ರವಲ್ಲ….. +ಮೊನ್ನೆ ಮನೆಗೆ ಬಂದ ಬ್ಯಾಂಕ್ ಉದ್ಯೋಗಿಯೊಬ್ಬರು ಒಂದು ಚೆಂದನೆಯ ವಾಲ್ ಕ್ಲಾಕ್ ನೀಡಿ ಹೋದರು… ಅದನ್ನು ಅವರ ಬ್ಯಾಂಕಿನವರು ಕೊಟ್ಟಿದ್ದರಂತೆ. “ಯಪ್ಪಾ, ಈ ಟೈಂ ಓಡೋದ್ ನೋಡಿ ನೋಡಿ ಸಾಕಾಗೈತಿ..” ಅಂದುಕೊಂಡೆ. ಹಳೆಯ ಹಿರಿಯ ಸಹುದ್ಯೋಗಿಗಳು, ನನಗೊದಗಿದ್ದ ಕೆಟ್ಟ ಸಮಯಗಳು, ಮತ್ತದನ್ನು ನಿವಾರಿಸಿಕೊಂಡ ಸಂತಸಗಳು, 4.20 ಸಮಯ. ಆ ಸಮಯಕ್ಕೆ ನನಗಾದ ಒಳ್ಳೆಯ ಕೆಲಸಗಳು,ಈಗಲೂ ನನ್ನನ್ನು ಕೆಲವರು, 4.20 ಸರ್ ಅಂದೇ ಕೀಟಲೆ ಮಾಡುವ ನನ್ನ ಸಿಬ್ಬಂದಿ ನೆನಪಾಗಿ ಇಷ್ಟು ಬರೀಬೇಕಾಯ್ತು…… ಅಂದಹಾಗೆ ಈಗ ಸಮಯ ರಾತ್ರಿ 8.40….. +–ಅಮರದೀಪ್.ಪಿ.ಎಸ್. + \ No newline at end of file diff --git a/PanjuMagazine_Data/article_107.txt b/PanjuMagazine_Data/article_107.txt new file mode 100644 index 0000000000000000000000000000000000000000..879f93cb5a1de6fd9fbce0903e174bd810a987f0 --- /dev/null +++ b/PanjuMagazine_Data/article_107.txt @@ -0,0 +1,11 @@ +ಪ್ರತಿಯೊಬ್ಬ ಮನುಷ್ಯ ತನ್ನ ಬಾಳ ಹಾದಿಯಲ್ಲಿ ಹಲವಾರು ರೀತಿಯ ಏಳು ಬೀಳುಗಳನ್ನು ಕಾಣುತ್ತಾ ಸಾಗುತ್ತಾನೆ, ಕಷ್ಟ ಸುಖ ನೋವು ನಲಿವು ಹೀಗೆ ಹಲವಾರು ರೀತಿಯ ವೈಪರೀತ್ಯಗಳನ್ನು ಜೀವನದ ವಿಭಿನ್ನ ಸನ್ನಿವೇಶಗಳಲ್ಲಿ ಎದುರಿಸುತ್ತಾ ಸಾಗುವ ಮನುಷ್ಯ ಕೆಲವೊಮ್ಮೆ ಜೀವನದ ಕಹಿ ಘಟನೆಗಳಿಂದ ವಿಚಲಿತನಾಗಿ ಬಿಡುತ್ತಾನೆ. ಮುಂದೇನು ಮಾಡಬೇಕು ಎಂಬ ವಿಚಾರವೇ ತೋಚದಂತಾಗಿ ಗೊಂದಲಕ್ಕೀಡಾಗುತ್ತಾನೆ. ಆದರೆ ವಾಸ್ತವದಲ್ಲಿ ಯಾವುದೇ ಒಂದು ಸಮಸ್ಯೆಗೆ ಚಿಂತೆ ಮಾಡುವುದು ಪರಿಹಾರವಲ್ಲ ಬದಲಾಗಿ ಆ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಾ ಸಾಗುವುದೇ ಮನುಷ್ಯ ಧರ್ಮವಾಗಬೇಕು ಕಾರಣ ಸೃಷ್ಟಿಯ ಎಲ್ಲ ಜೀವರಾಶಿಗಳಲ್ಲಿ ಮನುಷ್ಯ ವಿಶೇಷ ಹಾಗೂ ವಿಶಿಷ್ಟ ಎನಿಸಿಕೊಂಡಿದ್ದಾನೆ ಅವನಲ್ಲಿರುವ ಬುದ್ಧಿವಂತಿಕೆಯನ್ನು ಸರಿಯಾಗಿ ಸಮಚಿತ್ತದಿಂದ ಸದ್ಬಳಕೆ ಮಾಡುತ್ತಾ ಹೋದರೆ ಯಾವುದೂ ಕೂಡ ಅಸಾಧ್ಯವೆಂಬುದೇ ಇಲ್ಲ. +ಈ ಜಗತ್ತು ಕಂಡ ಹಲವಾರು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅವಲೋಕಿಸಿದಾಗ ಅವರೆಲ್ಲರ ಅತ್ಯುನ್ನತ ಸಾಧನೆಗೆ ಬಾಹ್ಯ ಪ್ರೇರಕಗಳಿಗಿಂತ ಹೆಚ್ಚು ಆಂತರಿಕವಾಗಿರುವ ಅವರ ಮನೋ ಧೈರ್ಯವೇ ಅವರ ಆದರ್ಶ ವ್ಯಕ್ತಿತ್ವಕ್ಕೆ ಅವರ ಸಾಧನೆಗೆ ದಾರಿ ದೀಪವಾಗಿತು. ಇದೆಲ್ಲವನ್ನೂ ಗಮನಿಸುತ್ತಾ ಹೋದರೆ ನಮ್ಮ ಸುತ್ತಮುತ್ತಲೂ ಎಲ್ಲವೂ ನಮಗೆ ಒಳಿತಾಗುವ ಸಂಗತಿಗಳೇ ಇರುವುದಿಲ್ಲ ಆದರೆ ಆಯ್ಕೆಗಳು ಮಾತ್ರ ನಮಗೆ ಬಿಟ್ಟಿದ್ದು.! “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎನ್ನುವಂತೆ ಉತ್ತಮರ ಸಹವಾಸವೇ ನಮ್ಮ ವ್ಯಕ್ತಿತ್ವಕ್ಕೆ ಕೆಲವೊಮ್ಮೆ ಮೆರುಗನ್ನು ತಂದುಕೊಡುವಂತಹದ್ದು. ಈ ಜಗದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಏನೇ ಬಂದರೂ ಅದೆಲ್ಲವನ್ನೂ ಸಮಚಿತ್ತದಿಂದ ಎದುರಿಸಬೇಕು ಎಂಬ ಮಾತಿಗೆ ಅರ್ಥಪೂರ್ಣವಾಗಿ ಹನ್ನೆರಡನೇ ಶತಮಾನದ ಮಹಾನ್ ಶರಣೆ ಅಕ್ಕಮಹಾದೇವಿಯ ಈ ವಚನ ನಮ್ಮಲ್ಲಿ ಅಂಜಿಕೆಯನ್ನು ದೂರ ಮಾಡಿ ಮನೋಧೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗುವಂತಿದೆ ಅದೆಂದರೆ, +ಬೆಟ್ಟದ ಮೇಲೊಂದು ಮನೆಯ ಮಾಡಿ +ಮೃಗಗಳಿಗಂಜಿದಡೆಂತಯ್ಯಾ? +ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ? ಸಂತೆಯೊಳಗೊಂದು ಮನೆಯ ಮಾಡಿ +ಶಬ್ದಕ್ಕೆ ನಾಚಿದಡೆಂತಯ್ಯಾ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ +ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು +ಬೆಟ್ಟ ಕಾಡು ಎಂದ ಮೇಲೆ ಮೃಗ ಪಕ್ಷಿಗಳು ಸಾಮಾನ್ಯವಾಗಿರುತ್ತವೆ. ಹಾಗೆಯೇ ಸಮುದ್ರ ಎಂದ ತಕ್ಷಣ ನೊರೆ ತೆರೆಗಳು ಬರುವುದು ಸಾಮಾನ್ಯ. ಸಂತೆಯೆಂದರೆ ಹಲವಾರು ಜನ ಒಂದು ಕಡೆ ಸೇರುವುದರಿಂದ ಶಬ್ದ ಎನ್ನುವುದು ಸಾಮಾನ್ಯ ಹಾಗೆಯೇ ಈ ಜಗತ್ತಿನಲ್ಲಿ ನಾವೆಲ್ಲ ಹುಟ್ಟಿದ್ದೇವೆ ಎಂದ ಮೇಲೆ ಎಷ್ಟೋ ಸಂದರ್ಭದಲ್ಲಿ ಸ್ತುತಿ ನಿಂದೆಗಳು ಬಂದೇ ಬರುತ್ತವೆ ಆದರೆ ಅದ್ಯಾವುದಕ್ಕೂ ನಾವು ವಿಚಲಿತರಾಗದೆ ಕೋಪ ತಾಪಗಳಿಗೆ ಒಳಗಾಗದೆ ಸಮಾಧಾನಿಯಾಗಿರಬೇಕು ಎಂಬ ತಿಳಿವಳಿಕೆಯ ಮಾತು ಎಲ್ಲರ ಜೀವನಕ್ಕೂ ದಾರಿದೀಪವಾಗುವುದು. ಪ್ರಪಂಚದಲ್ಲಿ ಸುತ್ತಲೂ ಒಳ್ಳೆಯದು ಇದೆ ಹಾಗೆಯೇ ಕೆಟ್ಟದ್ದು ಸಹ ಇದೆ ಆದರೆ ಯಾವ ದಾರಿಯಲ್ಲಿ ಹೋದರೆ ನಮ್ಮ ಜೀವನ ಸಾರ್ಥಕ ಎಂಬ ಅಂಶವನ್ನು ನಾವು ಮನಗಾಣಬೇಕು. ಇಲ್ಲವಾದರೆ ದಿಕ್ಕು ದಾರಿಗಳನ್ನು ಮರೆತು ಹೋದರೆ ಬದುಕು ಸೂತ್ರವಿರದ ಗಾಳಿಪಟ ದಂತಾಗುತ್ತದೆ. ಯಾರೋ ನಮ್ಮನ್ನು ಹೊಗಳಿದಾಗ ಹಿಗ್ಗದೆ, ತೆಗಳಿದಾಗ ಕುಗ್ಗದೆ ಆ ಹೊಗಳಿಕೆ ತೆಗಳಿಕೆಗಳನ್ನು ಸಮವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. +ಮಹಾ ಭಾರತದಲ್ಲೆಲ್ಲ ನಮಗೆ ಕಾಣುವ ಒಂದು ಧರ್ಮ ಸೂತ್ರವೆಂದರೆ “ಧರ್ಮೋ ರಕ್ಷತಿ ರಕ್ಷಿತಃ “ಎಂಬುದು ಹಾಗೆಯೇ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅಂಥವರನ್ನು ಧರ್ಮ ರಕ್ಷಿಸುತ್ತದೆ ಪಾಂಡವರು ಧರ್ಮವನ್ನು ಬಿಡಲಿಲ್ಲ ಕೊನೆಗೆ ಧರ್ಮ ಅವರನ್ನು ಬಿಡಲಿಲ್ಲ ಎಂತಹದೇ ಸಂಕಷ್ಟ ಬಂದರೂ ಧರ್ಮ ಅವರನ್ನು ರಕ್ಷಿಸಿತು. ಈ ಮಹಾಭಾರತದ ನೀತಿ ಸಂದೇಶ ಕೇವಲ ದ್ವಾಪರ ಯುಗಕ್ಕೆ ಮಾತ್ರ ಅನ್ವಯಿಸುವುದಿಲ್ಲ ಇಡೀ ಮಾನವ ಕುಲಕ್ಕೆ ಎಲ್ಲ ಯುಗಗಳಿಗೂ ಕೂಡ ಅನ್ವಯಿಸುವ ನೀತಿ ಸತ್ಯ ಇದರಲ್ಲಿದೆ.ಹಾಗೆ ಜೀವನದ ಎಷ್ಟೋ ಸಂದರ್ಭದಲ್ಲಿ ನಮ್ಮ ಜೀವನವೇ ಮುಗಿದು ಹೋಯಿತು ಎನ್ನುವ ಸಂಕಷ್ಟಗಳನ್ನು ಎದುರಿಸುತ್ತಿರುತ್ತವೆ ಆದರೆ ಅದೆಲ್ಲವೂ ಸಹ ತಾತ್ಕಾಲಿಕವಷ್ಟೇ. ನಮ್ಮಲ್ಲಿ ದೃಢವಾದ ಮನಸ್ಥಿತಿ ಇದ್ದಾಗ ಅದೆಲ್ಲವನ್ನು ಸಹಜವಾಗಿ ಸ್ವೀಕರಿಸಿ ಜೀವನದ ಸವಾಲುಗಳಿಗೆ ದೃಢವಾಗಿ ನಿಲ್ಲಬೇಕು ಅಂದಾಗ ಮಾತ್ರ ಎಲ್ಲ ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುತ್ತದೆ. +“ಧೈರ್ಯಂ ಸರ್ವತ್ರ ಸಾಧನಂ” ಎನ್ನುವಂತೆ ಧೈರ್ಯ ಹೊಂದಿದ್ದರೆ ಸಕಲವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಜೀವನದ ದಾರಿ ನೀತಿ ಪಥದಲ್ಲಿ ಸಾಗುತ್ತಾ ಹೋದರೆ ಯಾವುದೇ ಭಯ ಆತಂಕವಿಲ್ಲದೆ ಅಂಜದೆ ಮುನ್ನುಗ್ಗಿ ನಮ್ಮ ಜೀವನದ ಧ್ಯೇಯವನ್ನು ಸಾಧಿಸಬಹುದು. +–ಪ್ರೊ ಸುಧಾ ಹುಚ್ಚಣ್ಣವರ \ No newline at end of file diff --git a/PanjuMagazine_Data/article_1070.txt b/PanjuMagazine_Data/article_1070.txt new file mode 100644 index 0000000000000000000000000000000000000000..2e13e73bad4a1a2c363a63d7c9f0c937390665e9 --- /dev/null +++ b/PanjuMagazine_Data/article_1070.txt @@ -0,0 +1,17 @@ + +ವಿಶಾಲ ಮರುಭೂಮಿಯ ಮರಳಿನ ಮೇಲೆ ಬಿಸಿಲು ಚೆಲ್ಲುತ್ತ ನಿಂತ ನೀಲ ಆಕಾಶಕ್ಕೆ ಒಂದೇ ಬಣ್ಣ, ಕಪ್ಪು, ಬಿಳಿ, ಕಡು ನೀಲ, ಕಡುಗಪ್ಪು, ಬಂಗಾರ, ಹಳದಿ ಯಾವುದೇ ಬಣ್ಣಗಳಿಲ್ಲದ ಮೋಡಗಳ ಅಡಿಯಲ್ಲಿರುವವರ ಬದುಕು ಕೂಡ, ಬಣ್ಣಗಳಿಲ್ಲದ ಬದುಕು. ಈ ನೀಲ ಆಕಾಶದ ಕೆಳಗೆ ಇರಾಕ್ ಮತ್ತು ಟರ್ಕಿ ನಡುವಿನ ಮರುಭೂಮಿಯಂತ ಪ್ರದೇಶದಲ್ಲಿ ಕುರ್ದಿಶ್ ಎನ್ನುವ ನಿರಾಶ್ರಿತರ ಕ್ಯಾಂಪ್ ಇದೆ. ಇರಾಕ್ ಮತ್ತು ಅಮೇರಿಕಾದ ಯುದ್ಧೋನ್ಮಾದದ ಹರಿತ ಧೂಳು ಎಲ್ಲೆಲ್ಲು ತುಂಬಿದೆ. ಯುದ್ಧವೆಂದರೆ ಸೈನಿಕರ ಬಡಿದಾಟವಲ್ಲ, ಬಂದೂಕುಗಳ ಶಬ್ದಗಳಲ್ಲ, ಯುದ್ಧವೆಂದರೆ ಸೇನೆಗಳ ಛಾಯೆಯಲ್ಲಿ ಸ್ವರೂಪವನ್ನು ಕಳೆದುಕೊಂಡ ಸಾಮಾನ್ಯ ಜನರ ಹತಾಶ ಹೋರಾಟ, ಬದುಕಲೇ ಬೇಕಾದ ಅನಿವಾರ್ಯತೆ ಮತ್ತು ಕ್ಷಣ ಮಾತ್ರದಲ್ಲಿ ಆವರಿಸುವ ಸಾವಿನ ನಿರ್ವಾತದಡಿಯಿಂದ ತಪ್ಪಿಸಿಕೊಳ್ಳುವ ಅಗತ್ಯತೆ. +ಕುರ್ದಿಶ್ ನ ನಿರಾಶ್ರಿತರ ಕ್ಯಾಂಪ್ ನಲ್ಲಿ ಬಹು ಸಂಖ್ಯೆಯ ಮಕ್ಕಳಿದ್ದಾರೆ, ಇವರಲ್ಲಿ ಬಹುತೇಕ ಮಂದಿ ಅಪ್ಪ, ಅಮ್ಮ, ತಮ್ಮ, ತಂಗಿ, ಕೈ, ಕಾಲು, ಕಿವಿ ಅಥವಾ ಇನ್ನೇನಾದರು ಕಳೆದುಕೊಂಡವರು. ಎಲ್ಲರ ಆಳದಲ್ಲಿ ಯಾವತ್ತು ಎತ್ತಲಾರದ ಕಲ್ಮಶ ಭಯವೊಂದು ಹೂತು ಹೋಗಿದೆ. ಈ ಬಿಡಿ ಬಿಡಿ ವಿಷಾದಗಳಿಗೆ ನಾಯಕನಾಗಿರುವ ಹುಡುಗ ಸ್ಯಾಟಲೈಟ್, ಇವನ ನಿಜವಾದ ಹೆಸರು ಏನೆಂದು ಯಾರಿಗೂ ಗಮನವಿಲ್ಲದಿದ್ದರೂ, ಡಿಶ್ ಟಿವಿಯನ್ನು ಸರಿಪಡಿಸುವಲ್ಲಿಯ ಇವನ ಪ್ರವೀಣತೆ ಸ್ಯಾಟಲೈಟ್ ಎನ್ನುವ ಅನ್ವರ್ಥನಾಮವನ್ನು ತಂದುಕೊಟ್ಟಿದೆ. ಸ್ಯಾಟಲೈಟ್ ಎನ್ನುವ ಹೆಸರಿನಲ್ಲಿ ಎಲ್ಲರು ಮೂಲ ಹೆಸರನ್ನೇ ಮರೆತಿದ್ದಾರೆ, ಮೂಲ ಬದುಕನ್ನು ಮರೆತಿರುವಂತೆ. ಆದರೆ ಟಿವಿ ರಿಪೇರಿಗಿಂತ ಇನ್ನೊಂದು ಬಹು ಮುಖ್ಯ ಕೆಲಸವನ್ನು ಈ ಸ್ಯಾಟಲೈಟ್ ಮಾಡುತ್ತಾನೆ, ನಿರಾಶ್ರಿತರ ಕ್ಯಾಂಪ್ ನ ಹುಡುಗರನ್ನು ಕಟ್ಟಿಕೊಂಡು ಯುದ್ಧಪೀಡೀತ ಪ್ರದೇಶದಲ್ಲಿ ಹೂತಿಟ್ಟ ಮೈನ್ಸ್ ಗಳನ್ನು (ನೆಲಬಾಂಬ್ ) ಹುಡುಕಿ ತೆಗೆದು ಅದನ್ನು ಮಾರಾಟ ಮಾಡುವದು. ಕುರುಚಲು ಪ್ರದೇಶದಲ್ಲಿ ಜೀವ ತೆಗೆಯುವ ಬಾಂಬ್ ಹುಡುಕಿ ತೆಗೆದು ಮಾರಾಟ ಮಾಡಿ ಬದುಕುವ ವಿಪರ್ಯಾಸವಿದೆ. ಈ ಹುಡುಗರ ಮಧ್ಯೆದಲ್ಲಿ ಕೈ ಇಲ್ಲದ ಹ್ಯೇನ್ಕೊವ್ ಎನ್ನುವ ಹುಡುಗನಿದ್ದಾನೆ, ಅಡ್ಡಡ್ಡ ಮಲಗಿಕೊಂಡು ಬಹು ಕುಶಲತೆಯಿಂದ ಬಾಂಬ್ ನ ಪಿನ್ ಗಳನ್ನು ಪುಟ್ಟ ಪುಟ್ಟ ತುಟಿಗಳಿಂದ ಬೇರ್ಪಡಿಸುವ ಅಪಾಯಕಾರಿ ಕುಶಲತೆ ಇವನಿಗೆ ಸಿದ್ಧಿಸಿದೆ. ಹ್ಯೇನ್ಕೊವ್ ಗೆ ಅಗ್ರಿನ್ ಎನ್ನುವ ಸ್ನಿಗ್ಧ ಸುಂದರಿ ಸಹೋದರಿಯಿದ್ದಾಳೆ. ಪರ್ಷಿಯಾದ ಸಾವಿರಾರು ಹುಡುಗಿಯರಂತೆ ಆಗ್ರಿನ್ ಳ ಸೌಂದರ್ಯ ಸಹ ಪ್ರಶಾಂತ ಮೌನದ ಹಿಂದೆ ಅವಿತುಕೊಂಡಿದೆ, ಅವಳ ಕಣ್ಣುಗಳು ಅವಳ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುವದಕ್ಕಾಗಿಯೇ ಯಾವುದೋ ಅನಂತದೆಡೆಯಿಂದ ಅವತರಿಸುವ ಶ್ರೀರಕ್ಷೆಯೆಡೆಗೆ ತೀವ್ರವಾಗಿ ದಿಟ್ಟಿಸುತ್ತಿರುವಂತೆ ಭಾಸವಾಗುತ್ತವೆ, ಹೊಂಚು ಹಾಕಿ ಕಾಡುವ ಕರಾಳ ಭೂತ ಕಾಲದ ನೆನಪುಗಳಿಗೆ ತನ್ನ ಮೌನವನ್ನು ಗುರಾಣಿಯಾಗಿ ಹಿಡಿದಿದ್ದಾಳೆ. ಆಗ್ರಿನ್ ಳ ಬಾಲ್ಯದಲ್ಲಿ ಅವಳ ಮೇಲಾದ ಪಾಶವೀ ಬಲಾತ್ಕಾರ ಮತ್ತು ಯುಧ್ಧದಲ್ಲಿ ಕೊಚ್ಚಿಹೋದ ಅವಳ ಕುಟುಂಬದ ನೆನಪು ಅವಳನ್ನಷ್ಟೇ ಅಲ್ಲ ಸಹೋದರ ಹ್ಯೇನ್ಕೊವ್ ನನ್ನು ಸಹ ಕಾಡುತ್ತಿದೆ. ಹ್ಯೇನ್ಕೊವ್ ಮತ್ತು ಆಗ್ರಿನ್ ನಡುವೆ ಇನ್ನೊಂದು ಜೀವವಿದೆ, ಆಗ್ರಿನ್ ಳ ದುರಂತ ಭೂತಕಾಲದ ಸಾಕ್ಷಿಯಾಗಿ ಹುಟ್ಟಿನಿಂದ ಕಣ್ಣುಗಳನ್ನು ಕಳೆದುಕೊಂಡ ಸುಮಾರು ೪ ವರ್ಷದ ಪುಟ್ಟ ಬಾಲಕ ರಿಗಾ. ಪುಟ್ಟ ಮನಸ್ಸು ದೊಡ್ಡ ಮನುಷ್ಯರ ಯುದ್ಧದ ಹೇಸಿಗೆಯನ್ನು ನೋಡಬಾರದು ಎನ್ನುವಂತೆ ದೇವರು ಅವನ ಕಣ್ಣುಗಳನ್ನು ತನ್ನ ಬಳೀಯೇ ಇರಿಸಿಕೊಂಡಿದ್ದಾನೆಯೆ ಎನ್ನುವಂತೆ ಭಾಸವಾಗುತ್ತದೆ. ಮೈನ್ಸ್ ಗಳ ನಡುವೆ, ಕ್ಯಾಂಪಿನ ಮಧ್ಯೆ, ಸಾವಿರಾರು ಅನಾಥರ ಮಧ್ಯೆ ಯಾವುದು ಅರಿವಿಲ್ಲದ ರಿಗಾನ ದೇದೀಪ್ಯಮಾನ ನಗುವಿನಲ್ಲಿ ಆಗ್ರಿನ್ ತನ್ನ ನಗುವನ್ನು ಬಚ್ಚಿತ್ತಿದ್ದಾಳೇನೋ ಎನ್ನುವ ವಿಚಾರ ಹಾದು ಹೋಗುತ್ತದೆ. ತನ್ನ ತಂದೆ ಯಾರೆಂದು ತಿಳಿಯದ ಬಹುಶ: ಅವನ ತಾಯಿಗೂ ತಿಳಿಯದ ಪುಟ್ಟ ರಿಗಾನ ನಗು ಮನುಷ್ಯ ಕುಲದ ಆತ್ಮ ಸಾಕ್ಷಿಗೆ ಮನುಷ್ಯ ಮನುಷ್ಯರ ನಡುವಿನ ಅನ್ಯಾಯ ಅನಾಚಾರ ದಬ್ಬಾಳಿಕೆಯ ಅಸಹ್ಯತೆಯ ಬಗ್ಗೆ ಮೂಲಭೂತವಾದ ನಿರ್ಣಾಯಕವಾದ ಪ್ರಶ್ನೆಯನ್ನು ಚುಚ್ಚಿ ಕೇಳುವಂತಿದೆ. ಪುಟ್ಟ ರಿಗಾ ಹಸಿವಿನಿಂದ, ಭಯದಿಂದ, ದು:ಖದಿಂದ ಅತ್ತಾಗ ಅವನ ಸುತ್ತಲಿನ ಮೌನವೇ ಉತ್ತರವಾಗುತ್ತದೆ, ಮೌನವೇ ಸಮಾಧಾನವಾಗುತ್ತದೆ. ಯುದ್ಧ ಪೀಡೀತ ಪ್ರದೇಶಗಳ ಅಸಹಜ ಮೌನವೊಂದು ಎಲ್ಲರಲ್ಲಿ ಅಂಟಿಕೊಂಡಿದೆ. ರಿಗಾನ ಜೊತೆ ಜೊತೆಯಲ್ಲಿ ಹ್ಯೇನ್ಕೊವ್ ನಲ್ಲಿ ಯುದ್ಧ ಕಾಲದಲ್ಲಿ ಅಪರೂಪವಾದ ,ಅಸಾಧ್ಯವಾದ ಆಶಾವಾದವಿದೆ, ಬದುಕಬೇಕೆಂಬ ಉತ್ಕಟ ಆಸೆಯಿದೆ, ಆಗ್ರಿನ್ ಗೆ ದೂರದ ಮೋಡದ ಮರೆಯಲ್ಲಿ ಹಿತವಾಗಿ ಬದುಕಬೇಕೆಂಬ ಕನಸಿದೆ.ಕೈಗಳಿಲ್ಲದ ಹ್ಯೇನ್ಕೊವ್ ಅಥವಾ ಆಗ್ರಿನ್ ಸದಾ ಕಾಲದ ಕಣ್ಣುಗಳಿಲ್ಲದ ರಿಗಾನನ್ನು ಬೆನ್ನ ಮೇಲೆ ಕಟ್ಟಿಕೊಂಡು ಸಾಗುವಾಗ ಕಣ್ಣಂಚು ತೇವವಾಗುತ್ತದೆ. +ಈ ಜನರ ವಿಶ್ವ ನಿಮ್ಮ ಮನಸ್ಸಿನಲ್ಲಿ ಆಕಾರವನ್ನು ಪಡೆಯಲು ಆರಂಭಿಸಿದೆ ? ಸಾವಿರಾರು ನಿರಾಶ್ರಿತ ಜೀವಗಳು ಗುಡಾರ ಮತ್ತು ಗುಡಿಸಲುಗಳು ವಾಸಿಸುತ್ತಿದ್ದಾರೆ. ಇವರ ಮಧ್ಯೆ ಸ್ಯಾಟಲೈಟ್ ಅತ್ಯಂತ ವ್ಯವಹಾರ ಕುಶಲ ವ್ಯಕ್ತಿ, ಸಭೆಗಳನ್ನು ಕರೆಯುವದು, ಯಾವುದಾದರು ವಿಷಯದ ಬಗ್ಗೆ ಘೋಷಣೆ ಮಾಡುವದು, ಕೆಲಸವನ್ನು ಹಂಚುವದು, ತನ್ನ ಮುರುಕು ಸೈಕಲ್ ಮೂಲಕ ಹಳ್ಳಿಯನ್ನೆಲ್ಲ ಸುತ್ತಾಡುವದು. ಸದಾಕಾಲ ಎತ್ತರದ ಧ್ವನಿಯಲ್ಲಿ ಮಾತನಾಡುವ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಬೇಕಾ ಗಿರುವ ಸ್ಯಾಟಲೈಟ್ ತನ್ನ ಜೀವನದ ದುಃಖವನ್ನು ನೆನಪಿಸಿಕೊಳ್ಳಲಿಕ್ಕೆ ಪುರುಸೊತ್ತು ಇಲ್ಲದ ವ್ಯಕ್ತಿಯಾಗಿ ಕಾಣಿಸುತ್ತಾನೆ. +ಒಮ್ಮೆ ಹಳ್ಳಿಯ ಸಮಸ್ತರು ಅಮೆರಿಕಾದ ಧಾಳಿಯ ಬಗ್ಗೆ ಟಿವಿಯಲ್ಲಿ ಬರುತ್ತಿರುವ ವಿಷಯವನ್ನು ತಿಳಿಯಲು ಕಾತುರರಾಗಿದ್ದಾರೆ. ಬೆಟ್ಟದ ತುದಿ ಹತ್ತಿ ಟಿವಿ ಅಂಟೆನಾದ ಸಿಗ್ನಲ್ ಹಿಡಿಯುವ ಪ್ರಯತ್ನದಲ್ಲಿ ಎಲ್ಲರೂ ಇದ್ದಾರೆ. ಎಡ ಬಲ ಬಲ ಎಡ ಉದ್ದ ಅಗಲ ಹೀಗೆ ಎಲ್ಲ ಪ್ರಯತ್ನಗಳೂ ವ್ಯರ್ಥವಾದ ನಂತರ ಸ್ಯಾಟಲೈಟ್ ಇವೆಲ್ಲವನ್ನೂ ಬಿಟ್ಟು ತಾನು ಒಂದು ಡಿಶ್ ತರುವುದಾಗಿ ಘೋಷಿಸುತ್ತಾನೆ. ಅಂತೆಯೇ ಹತ್ತಿರದ ಪಟ್ಟಣದಿಂದ ಅವನು ಒಂದು ಡಿಶ್ ಅನ್ನು ಸೈಕಲ್ ಮೇಲೆ ತಂದಾಗ ಸಮಸ್ತ ಹಳ್ಳಿಯೇ ಸಂತೋಷ ಪಡುತ್ತದೆ. ಈಗ ಸ್ಯಾಟಲೈಟ್ ಡಿಶ್ ಜೋಡಿಸಲು ತಯಾರಾಗಿದ್ದಾನೆ, ಪ್ರತಿ ಸಲ ಸಿಗ್ನಲ ಬಂದಾಗಲೂ ಟಿವಿಯಲ್ಲಿ ಅಶ್ಲೀಲವಾದ ಧರ್ಮಬಾಹಿರ ನೃತ್ಯ ಹಾಡು ಹುಡುಗಿಯರು ಬರುತ್ತಿದ್ದಾರೆ, ಇಷ್ಟಾದರೂ ಸಹ ಅವರು CNN ಚಾನೆಲ್ ಬರುವಷ್ಟು ಕಾಲ ತಾಳ್ಮೆಯಿಂದ ಕಾಯುತ್ತಿದ್ದಾರೆ. ಚಾನೆಲ್ ನ ವಾರ್ತೆಯಲ್ಲಿ ತಮಗೆ ಅರ್ಥವಾದಷ್ಟು ಇಂಗ್ಲಿಶ್ ಪದಗಳ ಆಧಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ. ಸದಾಂ ನ ದ್ವೇಷದಲ್ಲಿ ಅವರು ಅಮೇರಿಕನ್ ರ ಬರುವಿಕೆ ಕಾಯುತ್ತಿದ್ದಾರೆ. ಆದರೆ ಅಮೆರಿಕನ್ನರು ಅವರಿಗೆ ಏನು ಒಳ್ಳೆಯದು ಮಾಡಬಹುದು ? +ಇವೆಲ್ಲವುಗಳ ನಡುವೆ ಸ್ಯಾಟಲೈಟ್ ನ ಮಾತುಗಳು ಆಗ್ರಿನ್ ಳ ಮೌನದಲ್ಲಿ ಕರಗುತ್ತಿವೆ. ಮಾತುಗಳ ಮೂಲೆಯಲ್ಲಿ ಅವಳ ಮೌನ ಅವನನ್ನು ಹಿಡಿದಿಡುತ್ತಿದೆ. +ಆಗ್ರಿನ್ ಳ ಬದುಕಿನ ತೀವ್ರ ಗಾಯದ ಕಲೆಯಾಗಿ ಉಳಿದಿರುವ ರಿಗಾ ಸದಾ ಕಾಲ ಕಿರಿಯ ವಯಸ್ಸಿನ ತಾಯಿಯನ್ನು ಕಾಡುತ್ತಿದ್ದಾನೆ. ಮುಗ್ಧ ಬಾಲಕನ ಮುಖ ನಮ್ಮನ್ನು ಕಲಕಿದರೆ, ಆಗ್ರಿನ್ ಗೆ ಅವಳ ಭೂತದ ಕಹಿಯ ರುಚಿ ನಾಲಗೆಯ ಮೇಲೆ ಬಂದಂತೆ. ಸನ್ನಿವೇಶವೊಂದರಲ್ಲಿ ರಿಗಾ ಮೈನ್ಸ್ ನಡುವೆ ಸಿಕ್ಕಿ ಹಾಕಿಕೊಂಡಿದ್ದಾನೆ, ಯಾವುದೇ ದಿಕ್ಕಿನಲ್ಲಿ ಹೆಜ್ಜೆಯಿಟ್ಟರು ಸಹ ಮೈನ್ಸ್ ಸ್ಪೋಟಗೊಳ್ಳುವ ಅಪಾಯವಿದೆ. ವಿಷಯ ತಿಳಿದ ಸ್ಯಾಟಲೈಟ್ ಸ್ಥಳಕ್ಕೆ ಆಗಮಿಸುತ್ತಾನೆ. ರಿಗಾನ ಸ್ಥಿತಿ ಅತ್ಯಂತ ಅನಿಶ್ಚಿತತೆಯಲ್ಲಿದೆ. ದೃಷ್ಠಿಯಿಲ್ಲದ ಮಾತುಗಳು ಅರ್ಥವಾಗಗುವಷ್ಟು ದೊಡ್ದವನಲ್ಲದ ಪುಟಾಣಿ ರಿಗಾನ ಯಾವುದೇ ಚಲನವಲನ ಮೈನ್ಸ್ ಸ್ಪೋಟಕ್ಕೆ ಆಸ್ಪದವಾಗಬಲ್ಲದು. ಸಧ್ಯಕ್ಕೆ ಹೊಸ ಜಾಗದಲ್ಲಿನ ಹೊಸ ಗಾಳಿಯ ಜೊತೆಗೆ ಆಟವಾಡುವಂತೆ ಉಸಿರೆಳೆದುಕೊಳ್ಳುತ್ತಿರುವ ರಿಗನನ್ನು ರಕ್ಷಿಸಲು ಸ್ಯಾಟಲೈಟ್ ಉಪಾಯ ಹುಡುಕಬೇಕಿದೆ. ರಿಗಾನನ್ನು ರಕ್ಷಿಸಲು ಸಿದ್ಧನಾದ ಸ್ಯಾಟಲೈಟ್ ನ ಸಧ್ಯದ ಪೇಚಿಗೆ ಇನ್ನೊಂದಿಷ್ಟು ತೊಂದರೆ ಸೇರಿಕೊಳ್ಳುವದು, ಅವನ ಹಿಂಬಾಲಕರಾದ ಪಾಷೋ ಮತ್ತು ಶಿರ್ಕೋ ಎನ್ನುವ ಇಬ್ಬರು ಹುಡುಗರು ಈ ಕೆಲಸವನ್ನು ತಾವೇ ಮಾಡುತ್ತೇವೆಂದೂ ಮತ್ತು ಅವರ ನಾಯಕನಾದ ಸ್ಯಾಟಲೈಟ್ ಅಪಾಯಕ್ಕೆ ಸಿಲುಕಬಾರದು ಎಂದು ಹಟ ಹಿಡಿದಾಗ. ಆದರೆ ಅವರ ನಾಯಕ ಹಿಂಬಾಲಕರ ಯಾವುದೇ ಮಧ್ಯಪ್ರವೇಶವನ್ನು ವಿಟೋ ಚಲಾಯಿಸಿ ನಿರಾಕರಿಸುತ್ತಾನೆ. ಅದರಂತೆಯೇ ರಿಗಾ ನನ್ನು ಅವನು ನಿಂತ ಸ್ಥಳದಲ್ಲಿಯೇ ಉಳಿಸಿಕೊಳ್ಳಲು, ಸ್ಯಾಟಲೈಟ್ ತನ್ನ ಸೈಕಲ್ ಬೆಲ್ ನ್ನು ಒಂದೆ ಸಮನೆ ಬಾರಿಸಿ, ಶಬ್ದ ಬಂದ ದಿಕ್ಕಿಗೆ ರಿಗಾನನ್ನು ಆಕರ್ಷಿಸಲು ಉಳಿದ ಹುಡುಗರಿಗೆ ಹೇಳುತ್ತಾನೆ. ಜೊತೆಯಲ್ಲಿ ಸ್ಯಾಟಲೈಟ್, ಮೃದು ಮಾತುಗಳಿಂದ ರಿಗಾ ನಿಗೆ ನಿಂತ ಜಾಗದಿಂದ ಸರಿದಾಡದಂತೆ ಹೇಳುತ್ತ ಅವನನ್ನು ಸಮೀಪಿಸಲು ಪ್ರಯತ್ನಿಸುತ್ತಾನೆ. ಈ ಮಧ್ಯೆ ಸೈಕಲ್ ಬೆಲ್ ಶಬ್ದ ರಿಗಾ ನಿಗೆ ಎಷ್ಟು ಸಂತಸ ತರುತ್ತದೆಯೆಂದರೆ ಅವನು ಜೋರಾಗಿ ನಗುತ್ತ, ನಿಂತ ಜಾಗದಲ್ಲೇ ಜಿಗಿದಾಡಲು ಶುರು ಮಾಡುತ್ತಾನೆ. ಇನ್ನೇನು ಮೈನ್ಸ್ ಸ್ಪೋಟಗೊಳ್ಳುವಂತೆ ಮಾಡುತ್ತಾನೆ ಎನ್ನುವಷ್ಟರಲ್ಲಿ ಸ್ಯಾಟಲೈಟ್, ರಿಗಾನನ್ನು ರಕ್ಷಿಸುತ್ತಾನೆ. ಎಲ್ಲ ಅಪಾಯಗಳ ನಡುವೆ ಇದ್ದರು ಅವುಗಳ ಅರಿವಿಲ್ಲದೆ ನಕ್ಕು ನಲಿಯುವ ರಿಗಾ, ಜೀವವನ್ನೇ ಪಣವಾಗಿತ್ತು ರಿಗಾ ನನ್ನು ರಕ್ಷಿಸುವ ಸ್ಯಾಟಲೈಟ್ ಇಬ್ಬರು ಯುದ್ಧ ಕಾಲದ ಅವಶೇಷಗಳೇ. +ಸ್ವಲ್ಪ ದಿನಗಳಲ್ಲಿ ನೀಲ ಆಕಾಶ ಆಗ್ರಿನ್ ಲ ಪ್ರಾರ್ಥನೆಗೆ ಓಗುಟ್ಟಿವೆ. ಯುದ್ಧದಿಂದ ಜರ್ಜರಿತವಾದ ಭೂಮಿಯಲ್ಲಿನ ಬಂಡೆಯೊಂದರ ತುದಿಯಿಂದ ಆಕಾಶಕ್ಕೆ ಹಾರಿದ್ದಾಳೆ. ಯಾವತ್ತಿಗೂ ಖಾಲಿಯಾಗದಷ್ಟು ಮೌನವನ್ನು ಕೊಂಡೊಯ್ದಿದ್ದಾಳೆ. ಪುಟ್ಟ ರಿಗಾನನ್ನು ಬಲಿ ತೆಗೆದುಕೊಂಡಿದ್ದು ಅಮೆರಿಕೆಯ ಅಥವಾ ಇರಾಕಿನ ಅಥವಾ ಟರ್ಕಿಯ ಬಂದೂಕಲ್ಲ, ಆಗ್ರಿನ್ ಳ ಹೃದಯ ಮತ್ತು ಆತ್ಮಸಾಕ್ಷಿಯ ಕಲಹದ ಸಿಡಿಮದ್ದಿಗೆ ರಿಗಾ ಬಲಿಯಾಗಿದ್ದಾನೆ. ಈಗ ಅವರ ಕುಟುಂಬದಲ್ಲಿ ಉಳಿದುಕೊಂಡವನು ಹೆಂಕೊವ್ ಮಾತ್ರ, ಕೈಗಳಿಲ್ಲದ ಹೆಂಕೊವ್ ನಲ್ಲಿ ಬದುಕುವ ಆಶಾವಾದವಿದೆ. +ಯುದ್ಧದ ಕರಾಳ ಛಾಯೆಯನ್ನು ಹೊತ್ತು ಸಾಗುತ್ತಿರುವ ಅಮಾಯಕರ ಬಾಗಿದ ಬೆನ್ನಿನ ಅಡಿಯಲ್ಲಿನ ಶಕ್ತಿ ಕುಂದಿದ ಹೃದಯದ ಚಿತ್ರಣವನ್ನು ಕಟ್ಟಿ ಕೊಡುವ ಈ ಸಿನಿಮಾ ' ಟರ್ಟಲ್ಸ್ ಕ್ಯಾನ್ ಫ್ಲೈ'. ಚಿತ್ರದುದ್ದಕ್ಕೂ ಸ್ಯಾಟಲೈಟ್ ಗೆ ಅಮೇರಿಕಾ ಒಂದು ದಂತಕಥೆಯಾಗಿ ಕಾಣಿಸುತ್ತದೆ. ಟೈಟಾನಿಕ್, ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೋ, ಬ್ರೂಸ್ ಲೀ, ಜಿನೆದಿನ್ ಜಿದಾನೆ ಎಲ್ಲರೂ ಸಹ ಅಮೇರಿಕ ಎನ್ನುವವ ದೂರದ ಹೊಳಪು ಕನಸಿನ ಭಾಗವಾಗಿ ಸ್ಯಾಟಲೈಟ್ ಮತ್ತು ಅವನ ಸಂಗಡಿಗ ಬಾಲಕರನ್ನು ಹಿಂಭಾಲಿಸಿದೆ. ಅಮೇರಿಕಾ ಎನ್ನುವವರು ಉದಾತ್ತರು ಮತ್ತು ಸದ್ದಾಂ ಕೈಯಿಂದ ಇರಾಕ್ ಬಿಡಿಸಿ ಒಂದು ಹೊಸ ಬದುಕನ್ನು ತಂದುಕೊಡುತ್ತಾರೆ ಎನ್ನುವ ಭಾವನೆ ಅವರೆಲ್ಲಿಗಿದೆ. ಯಾವತ್ತಿಗೂ ಹೇಳದ ಮಾತಿನಲ್ಲಿ, ದಿಗಂತದೆಡೆಗೆ ನೆಟ್ಟ ಮೌನದಲ್ಲಿ ಮರೆಯಾದ ಆಗ್ರಿನ್ ಮತ್ತು ಸುತ್ತ ಜಗತ್ತಿನ ಕತ್ತಲನ್ನು ಯಾವತ್ತಿಗೂ ಕಾಣದ ರಿಗಾನ ಸಾವಿನ ಪದರಗಳಲ್ಲಿ ಅಮೇರಿಕಾ ಎನುವ ದಂತಕಥೆ ಕ್ರಮೇಣ ಅಳಿಸುತ್ತಿದೆ. ಕೊನೆಯ ದೃಶ್ಯದಲ್ಲಿ ಅಮೆರಿಕಾದ ಸೈನಿಕರು ಹಾದು ಹೋಗುತ್ತಿರುವದನ್ನು ಕಂಡ ಪಾಷೋ ಖುಶಿಯಿಂದ ಸ್ಯಾಟಲೈಟ್ ನತ್ತ ಕಿರುಚಿ ಹೇಳುತ್ತಿದ್ದಾನೆ " ನೋಡು ಅಮೆರಿಕಾದವರನ್ನು ನೋಡಬೇಕು ಎನ್ನುತ್ತಿದ್ದೇಯಲ್ಲ, ಇಲ್ಲಿದ್ದರೆ ಅವರು ". ಸ್ಯಾಟಲೈಟ್ ಅವರಿಗೆ ಬೆನ್ನು ತಿರುಗಿಸಿ ಮೌನವಾಗಿ ನಡೆದಿದ್ದಾನೆ. ಯಾವತ್ತಿಗೂ ಮಾತನಾಡುತ್ತಿರುತ್ತಿದ್ದ ಸ್ಯಾಟಲೈಟ್ ಮೌನಿಯಾಗಿದ್ದಾನೆ. ಚಿತ್ರದುದ್ದಕ್ಕೂ ಮೌನವನ್ನು ಅತ್ಯಂತ ಶಕ್ತಿಯುತ, ಪರಿಣಾಮಕಾರಿ ಮತ್ತು ತೀವ್ರವಾಗಿ ಬಳಸಿಕೊಂಡಿರುವ ನಿರ್ದೇಶಕ ಸ್ಯಾಟಲೈಟ್ ನ ಮೌನದ ಮೂಲಕ ಯುದ್ಧ ಒಳ್ಳೆಯ ದಿನಗಳನ್ನು ತರುವದು ಎನ್ನುವ ನಂಬಿಕೆಯ ಬುಡಕ್ಕೆ ಮೌನ ಪ್ರಶ್ನೆಯ ಈಟಿ ಚುಚ್ಚಿದ್ದಾರೆ. +ಜೀವಂತ ಮೈನ್ಸ್ ಗಳ ಹುಡುಕಿ ತೆಗೆದು ಅದರಿಂದ ಬದುಕು ಕಟ್ಟಿಕೊಳ್ಳುವ ಮತ್ತು ಕಳೆದುಕೊಳ್ಳುವ ಅನಾಥ ಹುಡುಗರ ಮೌನ, ಗತಕಾಲದ ದುರಂತವನ್ನು ಜೀವಂತವಾಗಿಡುವಂತೆ ಜೊತೆಗಿರುವ ರಿಗಾನನ್ನು ದಿಟ್ಟಿಸುವ ಆಗ್ರಿನ್ ಳ ಮೌನ, ಟರ್ಕಿಯ ಗಡಿಯಲ್ಲಿ ಕಾಣದ ಬಂದೂಕಿಗೆ ಅಡ್ಡಲಾಗಿ ಕುಳಿತಿರುವ ಭ್ರಮೆಯ ಬೆಳಕಿನ ಪ್ರಪಂಚವನ್ನೇ ಕಾಣದ ಪುಟ್ಟ ರಿಗಾನ ಅಳುವ ಮುಂಚಿನ ಮೌನ, ದೂರದಲ್ಲಿ ಬದುಕ ಕಟ್ಟಿಕೊಳ್ಳುವ ಆಸೆಯಲ್ಲಿರುವ ಹೆಂಕೊವ್ ಕಳೆದುಕೊಂಡ ಕೈಯ ಜೊತೆಗಿನ ಮೌನ, ಆಗ್ರಿನ್ ಳ ಮೌನಕ್ಕೆ ಮಾತು ಸೇರಿಸಲು ಹೊರಟು ಸೋತ ಸ್ಯಾಟಲೈಟ್ ನ ಮೌನ, ವಾರ್ತಾ ಚಾನಲ್ ನಲ್ಲಿ ಅಮೆರಿಕಾದ ಆಗಮನದ ಸುದ್ದಿ ನಿರಿಕ್ಷಿಸುತ್ತಿರುವ ಜನರ ಮೌನ, ನೀಲ ಆಕಾಶದ ಅಡಿಯಲ್ಲಿ ಯುದ್ಧೋನ್ಮಾದ ಮಾತುಗಳನ್ನು ಶಾಪಗ್ರಸ್ತ ಮೌನವಾಗಿಸಿದೆ. +ಸಿನಿಮಾ: ಟರ್ಟಲ್ಸ್ ಕ್ಯಾನ್ ಫ್ಲೈ (Turtles Can Fly) +ಭಾಷೆ: ಕುರ್ದಿಶ್ +ದೇಶ: ಇರಾನ್ +ನಿರ್ದೇಶನ: ಬಹ್ಮಾನ್ ಗೊಬಡಿ +ಇಂತಿ, +ಸಚೇತನ +***** \ No newline at end of file diff --git a/PanjuMagazine_Data/article_1071.txt b/PanjuMagazine_Data/article_1071.txt new file mode 100644 index 0000000000000000000000000000000000000000..9528b943f8e23de71ec3dcb1f1c69d5319875938 --- /dev/null +++ b/PanjuMagazine_Data/article_1071.txt @@ -0,0 +1,9 @@ +ಇದೇನಪ್ಪಾ ವಿಚಿತ್ರ ಶೀರ್ಷಿಕೆ ,ಶೂ ಮಣ್ಣಾಗೋಕೂ ಮತ್ತು ಊಟಿ ಮೋಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂದ್ಕೊಂಡ್ರಾ ? ಊಟಿ ಅಂದ್ರೆ ಮಧುಚಂದ್ರದ ಜಾಗ. ಅದ್ರ ಬಗ್ಗೆ ಮದ್ವೆಯಾಗದ ಈ ಹುಡ್ಗ ಏನು ಬರಿಬೋದು ಅಂದ್ಕೊಂಡ್ರಾ ? ಹಿ.ಹಿ. ನಾ ಆ ವಿಷ್ಯದ ಬಗ್ಗೆ ಹೇಳ್ತಿರೋದಲ್ಲ.ಶೂ ಬೆಂಗ್ಳೂರಲ್ಲಿದ್ರೂ ಮಣ್ಣಾಗತ್ತೆ. ಅದಕ್ಕೆ ಊಟಿ ಮೋಡ ಸುರ್ಸೋ ಮಳೇನೇ ಆಗ್ಬೇಕಾ ಅಂದ್ರಾ ? ವಿಷ್ಯ ಅದೂ ಅಲ್ಲ. ಹೇಳೋಕೆ ಹೊರಟೊರೋದು ಎಲ್ಲಾ ಸಾಮಾನ್ಯವಾಗಿ ನೋಡೋ ದೊಡ್ಡಬೆಟ್ಟ, ಗುಲಾಬಿ ತೋಟ, ಊಟಿ ಕೆರೆಗಳನ್ನೊಳಗೊಂಡ ಊಟಿಯ ಬಗ್ಗೆ ಅಲ್ಲ. ಬದಲಿಗೆ ಊಟಿಯಿಂದ ಹದಿನಾಲ್ಕೇ ಕಿ.ಮೀ ದೂರವಿದ್ದರೂ ಸುಮಾರಷ್ಟು ಜನ ಮಿಸ್ ಮಾಡಿಕೊಳ್ಳೋ ಕೂನೂರು ಮತ್ತು ಕೋಟಗಿರಿ ಎಂಬ ಸ್ಥಳಗಳ ಬಗ್ಗೆ.ಸ್ಥಳ ಅನ್ನೋಕಿಂತ ಮೋಡಗಳೊಂದಿಗೆ ಮೊಹಬ್ಬತ್ತಿನ ಮಹಲುಗಳು ಅಂತ ಇವನ್ನು ಕರೆದ್ರೂ ತಪ್ಪಾಗಲಾರದೇನೋ. +ಅತ್ತೆ, ಮಾವ(ಮಾವ ಅಂದ್ರೆ ಸೋದರ ಮಾವ ಮಾರ್ರ. ಥೋ.) ಊಟಿಯ ಹತ್ತಿರದ ಕೂನೂರಿಗೆ ವರ್ಗವಾಗಿ ಆರು ತಿಂಗಳಾಗುತ್ತಾ ಬಂದಿತ್ತು. ಪ್ರತೀ ಬಾರಿಯೂ ಅವರ ಕರೆಗೆ ಏನಾದ್ರೂ ಒಂದು ಪಿಳ್ಳೆ ನೆವ ಒಡ್ಡುತ್ತಿದ್ದ ನಂಗೆ ಈ ಸಲ ಯಾಕೋ ಹೋಗ್ಬೇಕೂ ಅನಿಸಿಬಿಟ್ಟಿತ್ತು ಅಲ್ಲಿಗೆ. ತಡಿಯಂಡಮಾಲ್ ಟ್ರಿಪ್ಪಲ್ಲಿ ಮಣ್ಣಾದ ಶೂವನ್ನು ಈ ವಾರ ತೊಳೆಯಬೇಕು ಅಂದ್ಕೋತಾ ಇದ್ರೂ ಪ್ರತೀ ವಾರಾಂತ್ಯ ಇನ್ನೆಲ್ಲಾದ್ರೂ ಟ್ರಿಪ್ಪುಗಳು ರೆಡಿಯಾಗಿ ಬಿಡ್ತಿತ್ತು. ದಸರಾಕ್ಕೆ ಊರು, ನಗರ, ಬಿಳಿಗಿರಿ ರಂಗನ ಬೆಟ್ಟ, ಬೆಂಗ್ಳೂರ ಮಣ್ಣು ಹೀಗೆ ಈ ತೊಳೆಯುವಿಕೆಯ ಕನವರಿಕೆಯಲ್ಲೇ ಇನ್ನೊಂದಿಷ್ಟು ಮಣ್ಣು ತುಂಬಿಕೊಳ್ಳುತ್ತಿದ್ದ ಶೂಗೆ ಸ್ನಾನ ಮಾಡಿಸೋ ಮುಹೂರ್ತ ಬರ್ಬೇಕಂದ್ರೆ ಅದು ಊಟಿಗೆ ಹೋಗಿ ಬಂದ ಮೇಲೇ ಸೈ ಅನಿಸಿಬಿಟ್ಟಿತ್ತು ! ಆಯ್ತು ಅಂತೊಂದು ಶುಕ್ರವಾರ ರಾತ್ರೆ ಒಂಭತ್ತೂಮುಕ್ಕಾಲರ ಬಸ್ಸು ಹತ್ತಿದ ನಾನು ಬೆಳಗ್ಗೆ ಆರಕ್ಕೆ ಊಟಿಗೆ ಹೋಗಿ ಮುಟ್ಟಿದ್ದೆ. ಅಲ್ಲಿಂದ ಕೂನೂರು ಮುಟ್ಟಬೇಕು ಸರಿ. ಆದ್ರೆ ಯಾವ ಬಸ್ಸು ಅಂತ ನೋಡಿದ್ರೆ ಕೂನೂರು ಅಂತ ಕೂಗ್ತಿದ್ದ ಯಾವ ದನಿಯೂ ಇಲ್ಲ. ಇಂಗ್ಲೀಷನ್ನು ಬುಡಸಮೇತ ಕಿತ್ತಾಕಬೇಕು ಅನ್ನುವಂತಿದ್ದ ಪೂರ್ಣ ತಮಿಳಕ್ಷರದ ಬೋರ್ಡುಗಳು ನನಗೆಲ್ಲಿ ಅರ್ಥ ಆಗ್ಬೇಕು ! ಅಂತೂ ಇಂತೂ ಎರಡು ಮೂರು ಜನ ಡ್ರೈವರುಗಳನ್ನ ಇಂಗ್ಲೀಷಲ್ಲೇ ಕೇಳಿದಾಗ ಒಬ್ಬ ೪೨೩ ರ ಬಸ್ಸು ಹತ್ತಿ ಅಂದ ಹರಕು ಮುರುಕು ಇಂಗ್ಲೀಷಿನಲ್ಲಿ. +ಬಸ್ಸು ಹತ್ತಿ ಕೂತ ಡ್ರೈವರ್ ಕನ್ನಡದಲ್ಲಿ ಮಾತಾಡಿದಾಗ ಆಶ್ಚರ್ಯ !. ಥೋ . ಕನ್ನಡದಲ್ಲೇ ಕೇಳ್ಬೋದಿತ್ತಲ್ವಾ ಆರಾಮಾಗಿ ಅಂತ. ಊಟಿಯಲ್ಲಿ ಬಡಗರು, ಥೋಡರು ಅಂತ ಜನಾಂಗದವ್ರು ಇರ್ತಾರೆ. ಈ ಬಡಗು ಭಾಷೆ ಕನ್ನಡದ ಉಪಭಾಷೆ ಅಂತ ಆಮೇಲೆ ಗೊತ್ತಾಯ್ತು ! ಮಾವನ ಮನೆಯಲ್ಲಿ ಪಕ್ಕಾ ಕನ್ನಡ ಮಾತಾಡೋ ಕೆಲಸದ ಅಮ್ಮ ಸಿಕ್ಕಿದ್ದು ಆಮೇಲಿನ ವಿಷಯ ಬಿಡಿ. ಇದನ್ನೆಲ್ಲಾ ನೆನೆದು ಬಸ್ಸು ಯಾವ್ದು ಕೇಳೋಕೆ ಪಟ್ಟ ಪಾಡು ನೆನದ್ರೆ ಈಗ್ಲೂ ನಗು ಬರತ್ತೆ. +ಕೂನೂರಿಗೆ ಊಟಿಯಿಂದ ಹದಿನಾಲ್ಕು ಕಿ.ಮೀ ಅಷ್ಟೆ. ಬಸ್ಚಾರ್ಚು ಹದಿಮೂರು ರೂ. ಆದ್ರೆ ಆ ದಾರಿಗೆ ಮುಕ್ಕಾಲು ಘಂಟೆ ತಗೊಂಡ ಹಸಿರು ಬಸ್ಸಲ್ಲಿ ಕೂನೂರು ತಲುಪಿದ ನನಗೆ ಮೋಡಗಳ ಸ್ವಾಗತ. ಜಿಮುರು ಮಳೆಯ ನಡುವೆ ಮಾವನ ಮನೆಗೆ ಸಾಗಿದ ನನಗೆ ಯಾವಾಗ ಅಲ್ಲಿನ ಸ್ಥಳಗಳ ನೋಡ್ತೇನೋ ಅನ್ನೋ ಕುತೂಹಲ. ಆದ್ರೆ ಮಳೆ ಬಿಟ್ಟರಲ್ಲವೇ ಎಲ್ಲಿಗಾದ್ರೂ ತೆರಳೋದು ? ! ರಾತ್ರೆ ನಿದ್ದೆಯಿಲ್ಲದಿದ್ದರೂ ಹಗಲು ಮಲಗಲೊಲ್ಲದ ನಾನು ಬೆಳಕಿನ ಕಿಂಡಿ ಹೊರಹೊಮ್ಮೋದನ್ನೇ ಕಾಯ್ತಾ ಇದ್ದೆ. ಹತ್ತೂಮುಕ್ಕಾಲರ ಹೊತ್ತಿಗೆ ಅಂತೂ ಚೂರು ಬಿಸಿಲು ಹೊರಟಂತಾದಾಗ ಅಲ್ಲಿನ ಸ್ಥಳಗಳ ನೋಡ ಹೊರಟ್ವಿ. ಮೊದಲು ನೋಡಿದ್ದ್ರು ವೆಲ್ಲಿಗ್ಟಂನ್ ಲೇಕ್ ಅನ್ನೋ ಕೆರೆ. ಸಾರ್ವಜನಿಕರ ಪ್ರವೇಶಕ್ಕೆ ತಲಾ ಹತ್ತು ರೂ ಶುಲ್ಕ, ದೋಣಿಯಾನಕ್ಕೆ ಹದಿನೈದರ ಶುಲ್ಕ ಅಂತ ಬೋರ್ಡು ನೋಡಿದ ನಂಗೆ ಈ ದುಬಾರಿ ದುನಿಯಾದಲ್ಲೂ ಇಂಥಾ ಜಾಗಗಳಿವೆಯಾ, ಪರವಾಗಿಲ್ವೇ ಅನಿಸಿತು. ಓ, ಇದನ್ನು ನೋಡ್ಕೊಳ್ತಾ ಇರೋರು ಭಾರತೀಯ ಸೇನೆಯವ್ರು. ಹಾಗಾಗಿ ಈ ತರ ಅಂತ ಆಮೇಲೆ ಅರಿವಾಯ್ತು. ಹಲತರದ ಬಾತುಗಳು ವಿಹರಿಸ್ತಾ ಇರೋ ಆ ಕೆರೆಯಲ್ಲಿ ಲೈಫಜಾಕೇಟ್ ತೊಟ್ಟು ತುಳಿಯೋ ಬೋಟು ಹೊಕ್ಕು ಒಂದು ರೌಂಡು ಹಾಕಿ ಬರೋದಿದ್ಯಲ್ಲ. ಎಂಥಾ ಖುಷಿ ಅಂತೀರಾ ? ಕೈಗೆ ಸಿಗುವಂತೆ ನಮ್ಮ ಪಕ್ಕದಲ್ಲೇ ಈಜುತ್ತಿರೋ ಬಾತುಗಳು ಯಾವುದಾದ್ರೂ ಸುಂದರಿಯ ಸಂದೇಶ ಹೊತ್ತು ತಂದವಾ ಅಂತ ಕೈ ಚಾಚೋದ್ರೊಳಗೆ ಅವು ದೂರ ಓಡಬೇಕೇ ? !! +ಒಂದು ಹದಿನೈದಿಪ್ಪತ್ತು ತರದ ಕಲ್ಲುಗಳು, ಅವುಗಳ ಪೂರ್ಣ ವಿವರ, ಹಲತರದ ಹೂಗಳನ್ನೊಳಗೊಂಡ ರಮ್ಯ ನೋಟ.. ಹೀಗೆ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಖುಷಿ ಕೊಡ್ಬೋದಂತಹ ತಾಣವಿದು. ಅಲ್ಲಿಂದ RMC ಗಾರ್ಡನ್ನಿಗೆ ತೆರಳಿ ಅಲ್ಲೊಂದಿಷ್ಟು ಹೂಗಳ ಫೋಟೋ ಕ್ಲಿಕ್ಕಿಸೋ ಹೊತ್ತಿಗೆ ಊಟದ ಸಮಯ ಆಗ್ತಾ ಬಂದಿತ್ತು. ನಾ ಕೊಟ್ಟ್ರ ಬ್ರೇಕು ಮುಗೀತು. ಮತ್ತೆ ಬರ್ತೀನಿ ನೊಡ್ರಪ್ಪ ಅಂತ ಮಳೆ ಶುರುವಾಗೋದ್ರೊಳಗೆ ಮನೆ ಸೇರ್ಕೋಬೇಕೆಂಬ ತುಡಿತ ಕಾಡ್ತಾ ಇತ್ತು.ಅಂತೂ ಮನೆ ಸೇರಕ್ಕೂ ಮಳೆ ಭೋರ್ಗರೆಯೋಕೂ ಸರಿ ಆಯ್ತು. +ಮಧ್ಯಾಹ್ನ ನಾಲ್ಕೂವರೆ ಹೊತ್ತಿಗೆ ರಾತ್ರಿಯಿಡೀ ನಿದ್ರೆಯಿರದ ನಂಗೊಂದು ಜೊಂಪು ಹತ್ತಿ ಎಚ್ಚರಾಗಿದ್ರೂ ಮಳೆ ಹನಿ ಕಡಿದಿರಲಿಲ್ಲ. ಇನ್ನು ಹಿಂಗೇ ಬಿತ್ರೆ ಆಗೋಲ್ಲ ಅಂತ ಉಳಿದ ಜಾಗ ನೋಡೋಕೆ ಹೊರಟ್ವಿ. ಕೂನೂರಿಂದ ಏಳು ಕಿ.ಮೀ ದೂರದಲ್ಲಿ ಲ್ಯಾಂಬ್ಸ್ ರಾಕ್, ಅಲ್ಲಿಂದ ಐದು ಕಿ.ಮೀ ದೂರದಲಿ ಡಾಲ್ಫಿನ್ ನೋಸ್ ಅಂತ ಎರಡು ಜಾಗಗಳಿವೆ ಅಂತ ಓದಿದ್ದೆ. ಅಲ್ಲೇ ದಾರಿಯಲ್ಲಿ ಲಾಸ್ ಫಾಲ್ಸ್ ಮತ್ತು ಡಾಲ್ಫಿನ್ ಮೂಗಿಂದ ಹದಿಮೂರು ಕಿ.ಮೀ ದೂರದಲ್ಲಿ ಲಾರೆನ್ಸ್ ಫಾಲ್ಸ್ ಅಂತ ಮತ್ತೊಂದು ಜಲಪಾತ. ಸರಿ, ಇದ್ರಲ್ಲಿ ಕೆಲವೊಂದನ್ನಾದ್ರೂ ನೋಡ್ಬೇಕಂತ ಹೊರಟ ನಮಗೆ ಎದುರಾಗಿದ್ದು ದಟ್ಟ ಕತ್ತಲೆಯ ಶೋಲಾ ಕಾಡುಗಳು. ನಾಲ್ಕೂ ಮುಕ್ಕಾಲಿಗೆ ರಾತ್ರಿಯಾದಂತಹ ಕತ್ತಲು ಇವನ್ನು ಹೊಕ್ರೆ. ಕಾಡು ದಾಡಿದ್ರೆ ಮತ್ತೆ ಬೆಳಗು. ಮತ್ತೊಂದಿಷ್ಟು ಮರ ಬಂತು ಅಂದ್ರೆ ದಟ್ಟ ಕತ್ತಲಿನ ಪ್ರವೇಶ. ಒಂತರಾ ಹಗಲಿರುಳುಗಳ ನಡುವಿನ ದಾರಿಯಲ್ಲಿ ಅತ್ತಿತ್ತ ಹೊಯ್ದಾಡಿದಂತಹ ಭಾವ ! +ಮೊದಲು ಡಾಲ್ಫಿನ್ನಿನ ಮೂಗು ನೋಡಿದ್ವಿ. ಅಲ್ಲಿನ ಗೋಪುರ ಚೂಪಾದ ಬೆಟ್ಟದ ತುದಿಯಲ್ಲಿದ್ದು ದೂರದಿಂದ ನೋಡಿದೋರಿಗೆ ನೀರಿಂದ ಮೇಲೆ ನೆಗೆದ ಡಾಲ್ಫಿನ್ನಿನ ಮೂಗಿನ ತರಹ ಕಾಣತ್ತೆ ಅಂತ ಆ ತರಹ ಹೆಸ್ರು ಬಂದಿರಬಹುದು ಅಂತ ಮಾವನ ಅಂಬೋಣ. ಅಲ್ಲಿ ಬೆಳಗ್ಗೆ ಆದ್ರೆ ಟೀ, ಕಾಫಿಯ ಅಂಗಡಿಗಳಿರುತ್ತೆ. ಆದ್ರೆ ನಾವು ಹೋಗೋ ಹೊತ್ತಿಗೆ ಐದೂವರೆ ಆಗ್ತಾ ಬಂದಿದ್ರಿಂದ ಎಲ್ಲಾ ಬಾಗ್ಲಾಕಿತ್ತು. ಅದ್ರೂ ಫೋಟೋ ಕ್ಲಿಕ್ಕಿಸೋ ಜನಕ್ಕೆ, ಸೂರ್ಯಾಸ್ತವನ್ನು ನಿರೀಕ್ಷಿಸುತ್ತಿದ್ದ ಸೌಂದರ್ಯಪ್ರೇಮಿಗಳಿಗೇನೋ ಕೊರತೆಯಿರಲಿಲ್ಲ. ಅಲ್ಲಿಂದ ಮರಳ್ತಾ ಕ್ವೀನ್ ಸೀಟ್ ಅನ್ನೋ ಸ್ಥಳವೂ ಸಿಕ್ಕಿತು. ಅಲ್ಲಿಂದ ನೂರು ಮೀಟರ್ ಮೇಲೆ ಹತ್ತಿದ್ರೆ ಮತ್ತೊಂದು ಸೂರ್ಯಾಸ್ತ ವೀಕ್ಷಣೆಯ ಸ್ಥಾನ. ಆದ್ರೆ ಅಲ್ಲಿಗೆ ಹೋದ್ರೆ ಕುರಿಕಲ್ಲು(ಲ್ಯಾಂಬ್ಸ್ ರಾಕ್!)ಗೆ ಹೋಗಲಾಗದೇ ಇರಬಹುದೆಂಬ ಭಯದಿಂದ ಅಲ್ಲಿಗೆ ಹೋಗಲಿಲ್ಲ. ಕುರಿಕಲ್ಲಿಗೆ ಹೋದ್ರೆ ಅಲ್ಲಿ ಮತ್ತೆ ಕತ್ತಲ ಗವಿ. ಐನೂರು ಮೀಟರ್ ಶೋಲಾ ಕಾಡೊಳಗಿನ ದಾರಿಗೆ ಸ್ವಾಗತ ಅಮ್ತ ಬೋರ್ಡೊಂದು ಅಲ್ಲಿ ನಮಗೆ ಸ್ವಾಗತ ಕೋರುತ್ತಿತ್ತು. ಅಲ್ಲಿ ಎಡಕ್ಕೊಂದು ಬಲಕ್ಕೊಂದು ದಾರಿಗಳಿದ್ವು. ಬಲದ ದಾರಿ ಬೆಟ್ಟದ ಮೇಲೆ ಸ್ವಲ್ಪ ಬೇಗ ತಲುಪಿಸಿದ್ರೆ ಎಡದ್ದು ಸ್ವಲ್ಪ ಸುತ್ತಿ ಬಳಸಿ ಕಾಡಿನ ದರ್ಶನ ಮಾಡಿಸುವಂತದ್ದು. ಎರಡೂ ಕಡೆ ಕಲ್ಲಿನ ಮೆಟ್ಟಿಲುಗಳಿರೋದ್ರಿಂದ ಆ ಕಾಡ ಕತ್ತಲಲ್ಲೂ ನಾವು ಕಳೆದು ಹೋಗದೇ ತುದಿ ತಲುಪಿ ಮರಳೋದು ಸಾಧ್ಯವಾಯ್ತು. ಪೂರ್ಣ ಕತ್ತಲಾವರಿಸ್ತುತ್ತಾ ಬಂದಿದ್ರೂ ಅಲ್ಲಿನ ಮಂಜ ಪರಿ ಅದ್ಭುತ. ಕತ್ತಲು ಕವಿದು ಎದುರಿನ ಜಾಗವೇ ಮರೆಯಾಗಬೇಕೆಂಬ ಸಮಯದಲ್ಲಿ ಚೂರು ಬೆಳಕು. ಆ ಬೆಳಕನ್ನೆಲ್ಲಾ ಹಂತ ಹಂತವಾಗಿ ನುಂಗಲು ಹೊಂಚುತ್ತಿರುವ ಮೋಡಗಳು. ಮೋಡಗಳ ಹಾಲ ರಾಶಿಯ ನೋಡ ನೋಡುತ್ತಾ ಅವು ನಮ್ಮ ಮೇಲೇ ಬಂದು ನಮ್ಮನ್ನೂ ತಮ್ಮ ಕಾಲಗರ್ಭದಲ್ಲಿ ,ಸ್ವಚ್ಛ ಶುಭ್ರತೆಯಲ್ಲಿ ಲೀನವಾಗಿಸಿಬಿಟ್ಟಾವೆಯಾ ಎಂಬ ಭಯ. +ಅಲ್ಲಿಂದ ಮನಸ್ಸಿಲ್ಲದ ಮನಸ್ಸಿಂದಿಳಿದು ಮನೆ ಮುಟ್ಟಿದ್ವಿ. ಮಾರನೇ ದಿನ ಕೂನೂರಿನಿಂದ ಮುರು ಕಿ.ಮೀ ದೂರದ ಸಿಮ್ಸ್ ಪಾರ್ಕು, ಪಕ್ಕದ ರೇಬಿಸ್ಗೆ ಔಷಧಿ ಕಂಡು ಹಿಡಿದ ಲೂಯಿಸ್ ಪಾಶ್ಚರಿನ ಪಾಶ್ಚರ್ ಇನ್ಸಿಟಿಟ್ಯೂಟ್, ಟ್ಯಾನ್ ಟೀ ಮ್ಯೂಸಿಯಂ ನೋಡೋದಿತ್ತು. ಹಲತರದ ಸಸ್ಯಗಳ ಬಗ್ಗೆ ತಿಳಿಯೋ ಕುತೂಹಲವಿರೋರಿಗೆ ಇದೊಂದು ಒಳ್ಳೆಯ ತಾಣ. ಇನ್ನೂರು, ಇನ್ನೂರೈವತ್ತು ವರ್ಷಗಳಷ್ಟು ಹಳೆಯ ಮರಗಳಿರೋ ಸಿಮ್ಸ್ ಪಾರ್ಕ್ ಸಂದರ್ಶನಕ್ಕೆ ದೊಡ್ಡವರಿಗೆ ೩೦, ಮಕ್ಕಳಿಗೆ ೧೫ ಮತ್ತು ಕ್ಯಾಮರಾಕ್ಕೆ ೫೦ ರೂ ಪ್ರವೇಶ ಶುಲ್ಕ. ಇಲ್ಲಿರೋ ಸಖತ್ ಹೂಗಳಿಗೆ ಹೋಲಿಸಿದ್ರೆ ಕ್ಯಾಮರಾಕ್ಕೆ ಕೊಡೋ ೫೦ ನಿಜಕ್ಕೂ ಸಾರ್ಥಕ ಎಂದೇ ಹೇಳಬೇಕು. ಅಲ್ಲಿಂದ ಕೋಟಗಿರಿ ಮಾರ್ಗದಲ್ಲಿ ಸಾಗಿ ಪ್ರಕೃತಿಯ ಆನಂದ ಸವಿಯೋದ್ರೊಂದಿಗೆ ದಾರಿ ಮಧ್ಯದ ಚಿನ್ನ ಬಾಲಾಜಿ ದೇವಸ್ಥಾನವ ಸಂದರ್ಶಿಸುವ ಮನಸ್ಸೂ ಇತ್ತು. ಬೆಂಗಳೂರಿಗೆ ಮರಳೋ ಬಸ್ಸು ಸಂಜೆ ಐದೂವರೆಗೆ ಇಲ್ಲದಿದ್ದರೆ ಅಲ್ಲೇ ಇನ್ನೆರಡು ದಿನ ಇದ್ದು ನೀಲಗಿರಿ ರೈಲಲ್ಲಿ ಅಲೆಯುವ, ಸುತ್ತಮುತ್ತಲ ಜಾಗಕ್ಕೆ ಟ್ರೆಕ್ಕಿಂಗ್ ಹೋಗೋ ಬಯಕೆಯೂ ಇತ್ತು. ಅಂದಂಗೆ ಇಲ್ಲಿ ಮೂರು ಟ್ರೆಕ್ಕಿಂಗ್ ಮಾರ್ಗಗಳಿವೆ. ಊಟಿಯದೊಂದು, ಕೋಟಗಿರಿಯದೊಂದು, ಕೂನೂರಿನದೊಂದು. ಮುಂದೊಮ್ಮೆ ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಹೋಗೋ ಮನಸ್ಸಿದೆ. ಅದು ಸಾಧ್ಯವಾದ ದಿನ ಅದ್ರ ಬಗ್ಗೆಯೂ ಬರೆಯೋ ಪ್ರಯತ್ನ ಮಾಡುವೆ. ಅಲ್ಲಿಯವರೆಗೆ ದೀಪಾವಳಿಯ ಶುಭಾಶಯಗಳು ಮತ್ತು ಶುಭದಿನ. +***** \ No newline at end of file diff --git a/PanjuMagazine_Data/article_1073.txt b/PanjuMagazine_Data/article_1073.txt new file mode 100644 index 0000000000000000000000000000000000000000..2ab7a94cd74054c41d5123458e78c5f9d8bd5cd5 --- /dev/null +++ b/PanjuMagazine_Data/article_1073.txt @@ -0,0 +1,25 @@ + + + + + +ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಮಹಾರಾಷ್ಟ್ರದಲ್ಲಿ ಕಳೆದ ೨೫ ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಖ್ಯಾತ ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ರವರನ್ನು ಎರಡು ವಾರಗಳ ಹಿಂದೆ ಕೊಲೆ ಮಾಡಿರುವುದು ಎಲ್ಲೆಡೆ ಪ್ರತಿಭಟನೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅವರು ದಿ: ೨೦.೦೮.೨೦೧೩ ರಂದು ವಾಯುವಿಹಾರಕ್ಕೆ ಹೋಗಿದ್ದಾಗ ಅವರನ್ನು ಸಮಾಜಘಾತುಕ ಶಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾಯ, ಮಾಟ, ಮಂತ್ರಗಳಿಂದ ಅವರನ್ನು ಕೊಲ್ಲಲಾಗಿಲ್ಲ! +ಡಾ: ನರೇಂದ್ರ ದಾಬೋಲ್ಕರ್ ರವರು ಮೂಲತ: ಡಾಕ್ಟರ್ ಆಗಿದ್ದು, ಸಮಾಜವನ್ನು ಕಾಡುತ್ತಿರುವ ಪಿಡುಗುಗಳಾದ ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಹೋರಾಡುವ ಸಲುವಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದರು. ಹಳ್ಳಿ ನಗರ ಪ್ರದೇಶಗಳ ಮೂಲೆ ಮೂಲೆಗಳಿಗೆ ತಮ್ಮ ಕಾರ್ಯಕರ್ತರೊಡನೆ ಹೋಗಿ ಬಾಬಾಗಳು, ಢೋಂಗಿ ಸ್ವಾಮೀಜಿಗಳು ಮತ್ತು ಇತರೆ ಧಾರ್ಮಿಕ ಕಪಟಿಗಳ ಬೂಟಾಟಿಕೆಗಳನ್ನು ಬಯಲಿಗೆಳೆಯುತ್ತಿದ್ದರು. ಅವರ ಜೀವದ ಮೇಲೆ ಹಲವಾರು ಬಾರಿ ಧಾಳಿಗಳೂ ನಡೆದಿದ್ದವು. ಅಂಧಶ್ರದ್ಧೆಗಳ ವಿರುದ್ದ ಹೋರಾಡುವ ಸಲುವಾಗಿ ’ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಈ ಸಂಘಟನೆಯ ಒಂದು ವರ್ಷ ಪೂರಾ ಕಾರ್ಯಕ್ರಮಗಳು ಮುಂಚೆಯೇ ನಿಗಧಿಯಾಗಿರುತ್ತಿದ್ದವು. ಅಂಧಶ್ರದ್ಧೆ ನಿರ್ಮೂಲನೆಗಾಗಿ ಮಸೂದೆಯೊಂದನ್ನು ಜಾರಿಗೆ ತರಬೇಕೆಂದು ಕಳೆದ ೧೮ ವರ್ಷಗಳಿಂದ ಅವರು ಹೋರಾಡುತ್ತಿದ್ದರೂ ಅದನ್ನು ಕಡೆಗಣಿಸಿದ್ದ ಮಹಾರಾಷ್ಟ್ರ ಸರ್ಕಾರ ಅವರು ಸತ್ತ ೩ ದಿನದೊಳಗೆ ಆ ಮಸೂದೆಯನ್ನು ಅಂಗೀಕರಿಸಿದೆ! +ಗಣೇಶನ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿಕೊಂಡು ಮಾಡುವ ವಿಗ್ರಹಗಳು ಪರಿಸರಕ್ಕೆ ಮಾರಕವಾಗಿರುವುದರಿಂದ ನೈಸರ್ಗಿಕ ಬಣ್ಣ ಮತ್ತು ಮಣ್ಣು ಬಳಸಿದ ವಿಗ್ರಹಗಳನ್ನೇ ಬಳಸಬೇಕೆಂದು ಹೈಕೋರ್ಟ್‌ವರೆಗೂ ಹೋರಾಡಿ ಪರಿಸರ-ಸ್ನೇಹಿ ತೀರ್ಪು ಹೊರಬೀಳುವಲ್ಲಿ ಯಶಸ್ವಿಯಾಗಿದ್ದರು. ಹಳ್ಳಿಗಳಲ್ಲಿ ಜಾತಿ ತಾರತಮ್ಯದ ಕುರುಹಾದ ಕೆಳಜಾತಿ ಜನರಿಗೆ ಒಂದೇ ಕಡೆ ನೀರು ನೀಡದಿರುವ ವಿರುದ್ದ ’ಒಂದು ಹಳ್ಳಿ, ಒಂದು ಬಾವಿ’ ಘೋಷಣೆಯಡಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಜ್ಯೋತಿ ಬಾ ಪುಲೆ-ಸಾಹು-ಅಂಬೇಡ್ಕರ್ ರವರ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದರು. ವೈಚಾರಿಕ ಲೇಖನಗಳನ್ನು ಒಳಗೊಂಡ ವಾರಪತ್ರಿಕೆ ’ಸಾಧನಾ’ ದ ಸಂಪಾದಕರಾಗಿದ್ದರು. ಆದರೆ ಗಾಂಧಿಯನ್ನು ಹತ್ಯೆ ಮಾಡಿದ ಮತಾಂಧ ಮನಸ್ಥಿತಿಯೇ ಇವರನ್ನು ಬಲಿತೆಗೆದುಕೊಂಡಿದೆ. +ಮೂಢನಂಬಿಕೆ ಮತ್ತು ಅಂಧಶ್ರದ್ಧೆ ವಿರುದ್ದದ ಹೋರಾಟ ಮತ್ತು ವಿಚಾರವಾದಿಗಳು: +ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳನ್ನು ಬೆಳೆಸಿ ಜನರನ್ನು ವಂಚಿಸುವ ಹಾಗೂ ಶೋಷಣೆ ಮಾಡುವ, ಆ ಮೂಲಕ ಸಮಾಜದಲ್ಲಿ ಹಣ ಮತ್ತು ಅಧಿಕಾರ ಗಳಿಸುವ ಶಕ್ತಿಗಳಿಗೆ ಯಾವಾಗಲೂ ಸ್ವತಂತ್ರ ಆಲೋಚನೆಯ, ತರ್ಕಿಸುವ ಮತ್ತು ಪ್ರಶ್ನಿಸುವ ಮನೋಭಾವದ ವೈಚಾರಿಕತೆ ಶತ್ರುವೇ ಸರಿ. ಇಂಥಹ ಮೂಢನಂಬಿಕೆಗಳು ಮತ್ತು ಕಂದಾಚಾರಗಳ ಕುರಿತಾಗಿ ವಿಚಾರವಾದಿಗಳ ಚಟುವಟಿಕೆಗಳಿಗೆ ಹೋಲಿಸಿದರೆ ಜನವಿಜ್ಞಾನ ಚಳುವಳಿಗೆ ತನ್ನದೇ ಆದ ಕಣ್ಣೋಟವಿದೆ. ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳ ಮೂಲ ಬೇರುಗಳು ತಿಳುವಳಿಕೆಯ ಕೊರತೆ ಅಥವಾ ಅಜ್ಞಾನ ಹಾಗೂ ಸಮಾಜದ ರಚನೆಯಲ್ಲಿ ಅಡಗಿದೆ. ಒಂದೆಡೆ ಅಜ್ಞಾನದಿಂದ ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳು ಬೆಳೆದರೆ, ಮತ್ತೊಂದೆಡೆ ಸಮಾಜದ ರಚನೆ ಅಂದರೆ ಸಮಾಜದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಮೂಢನಂಬಿಕೆಯನ್ನು ಮತ್ತಷ್ಟು ಪೋಷಿಸುತ್ತವೆ ಮಾತ್ರವಲ್ಲ ವಿಜ್ಞಾನದ ಕುರಿತು ಅಪನಂಬಿಕೆ ಹುಟ್ಟಿಸಲು ಸದಾ ಯತ್ನಿಸುತ್ತವೆ. +ಸಮಾಜದ ರಚನೆ ಬದಲಾದಂತೆ ನಂಬಿಕೆಗಳೂ ಬದಲಾಗುತ್ತವೆ. ಸಮಾಜ ರಚನೆಯನ್ನು ಆಮೂಲಾಗ್ರ ಬದಲಿಸುವ, ಉಳ್ಳವರು ಮತ್ತು ಇಲ್ಲದವರ ಸಂಘರ್ಷ, ಹೋರಾಟಗಳ ಜೊತೆಗೆ ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ದದ ಹೋರಾಟವನ್ನೂ ಬೆಸೆಯಬೇಕು. ವೈಜ್ಞಾನಿಕ ಮನೋಭಾವ ಬೆಳೆಸಲು ಶ್ರಮಿಸುತ್ತಾ ಮೂಢನಂಬಿಕೆ ಮತ್ತು ಕಂದಾಚಾರಗಳ ಕುರಿತು ಜನತೆಯ ನಡುವೆ ಜಾಗೃತಿ ಮೂಡಿಸಿ ಅವುಗಳನ್ನು ತೊಡೆಯಬೇಕು ಎನ್ನುವುದು ಜನವಿಜ್ಞಾನ ಚಳುವಳಿಯ ಕಣ್ಣೋಟ. ಸಮಾಜರಚನೆಯ ಬದಲಾವಣೆಗೆ ಕೈಹಾಕದೆ ಆ ಸಮಾಜದ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಮಾತ್ರವೇ ಪ್ರಶ್ನಿಸುವುದರಿಂದ ಅವುಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ ಎಂಬುದನ್ನು ವಿಚಾರವಾದಿಗಳು ಮನಗಂಡಿಲ್ಲ. +ಆದರೆ ಡಾ: ನರೇಂದ್ರ ದಾಭೋಲ್ಕರ್‌ರವರ ವೈಶಿಷ್ಟ್ಯ ಮಾದರಿ ಇರುವುದು ಇಲ್ಲಿಯೇ. ಅವರು ವಿಚಾರವಾದಿಯಾಗಿ ಜಾತಿ ಪದ್ದತಿಯ ವಿರುದ್ದ ಹೋರಾಟವನ್ನೂ ಕೂಡ ಮೂಢನಂಬಿಕೆ ಮತ್ತು ಕಂದಾಚಾರ ವಿರುದ್ದ ಹೋರಾಟಗಳ ಜೊತೆಗೆ ಬೆಸೆದಿದ್ದರು. +ಡಾ: ನರೇಂದ್ರ ದಾಭೋಲ್ಕರ್ ರವರ ಮೇಲಿನ ಧಾಳಿ ಪ್ರತ್ಯೇಕ ಘಟನೆಯೇನಲ್ಲ. ಇತ್ತೀಚಿನ ವರ್ಷಗಳಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಪ್ರಗತಿಪರ ವಿಚಾರಗಳು, ಇತ್ಯಾದಿ ಮೇಲೆ ತೀವ್ರಗೊಳ್ಳುತ್ತಿರುವ ಸರಣಿ ಧಾಳಿಗಳ ಪೈಕಿ ಅದೂ ಒಂದಷ್ಟೆ. ಪ್ರಗತಿಪರ ರಂಗಕರ್ಮಿ ಸಪ್ಧಾರ್ ಹಶ್ಮಿಯನ್ನು ಹಾಡು ಹಗಲೇ ಕೊಂದದ್ದು, ಕಲಾವಿದ ಎಂ.ಎಫ್ ಹುಸೇನ್ ರವರ ಕಲಾಕೃತಿಗಳನ್ನು ನಾಶಮಾಡಿ ಹತ್ಯೆ ಮಾಡಲು ಯತ್ನಿಸಿದ್ದು, ಹಲವು ಬರಹಗಾರರು, ಕಲಾವಿದರು, ಕಾರ್ಟೂನಿಸ್ಟರ ಮೇಲೆ, ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಸರಣಿ ಧಾಳಿಗಳಲ್ಲೊಂದು ಇದೊಂದಷ್ಟೆ. ಇದು ಬೆಳೆಯುತ್ತಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಕೋಮುವಾದಿಗಳ ಶಕ್ತಿಯನ್ನು ತೋರಿಸುತ್ತದೆ. +ಇದು ೧೬ ನೇ ಶತಮಾನದ ಖ್ಯಾತ ವಿಚಾರವಾದಿ ಜಿಯಾರ್ಡಿನೊ ಬ್ರುನೋ ಗಲ್ಲಿಗೇರಿದ ಘಟನೆ ನೆನಪಿಸಿಕೊಳ್ಳಬಹುದು. ಆತ ವಿಚಾರವಾದಿ ಮಾತ್ರವೇ ಅಲ್ಲ, ಖಗೋಳವಿಜ್ಞಾನದಲ್ಲಿ ಕೊಪರ್ನಿಕಸ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸೂರ್ಯಕೇಂದ್ರಿತ ಮಾದರಿಯನ್ನು ಜನಪ್ರಿಯಗೊಳಿಸಿ, ಸೂರ್ಯ ಕೂಡ ಒಂದು ನಕ್ಷತ್ರ, ನಮ್ಮ ವಿಶ್ವದಲ್ಲಿ ಹಲವಾರು ನಕ್ಷತ್ರಗಳು ಗ್ರಹಗಳು ಹೀಗೆ ವ್ಯವಸ್ಥಿತವಾಗಿ ಭೌತಿಕ ನಿಯಮನುಸಾರ ಅಸ್ತಿತ್ವದಲ್ಲಿದೆ ಎಂದಿದ್ದ. ಇಂಥಹ ಪ್ರಭುತ್ವ-ವಿರೋಧಿ ವಿಚಾರಗಳಿಂದ ಕ್ರೋಧಗೊಂಡ ರೋಮನ್ ಪ್ರಭುತ್ವ ಅವನನ್ನು ಗಲ್ಲಿಗೇರಿಸಿತ್ತು. +೧೯೫೮ ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರೂ ರವರು ’ವಿಜ್ಞಾನ ನೀತಿ ನಿರ್ಣಯ’ ವೊಂದನ್ನು ಲೋಕಸಭೆಯಲ್ಲಿ ಮಂಡಿಸಿ ’ಇದು ದೇಶಕ್ಕೆ ವಿಜ್ಞಾನದ ಸಾಧನಗಳನ್ನು ನೀಡಲಿದ್ದು, ಭೌತಿಕ ತಿಳುವಳಿಕೆ ವಿಸ್ತರಿಸುತ್ತದೆ. ಜೀವನದ ಮೌಲ್ಯಗಳು ಉತ್ತಮಗೊಳ್ಳುತ್ತವೆ. ಇದು ಭಾರತೀಯ ನಾಗರೀಕತೆಗೆ ಹೊಸ ಚೈತನ್ಯ ಮತ್ತು ನವನವೀನ ಶಕ್ತಿ ನೀಡುತ್ತದೆ.’ ಎಂದಿದ್ದರು. ಇದರ ಚರ್ಚೆಗೆ ಅಂದಿನ ಲೋಕಸಭಾ ಸದಸ್ಯರೆಲ್ಲರು ಬಹಳ ಸಮಯ ನೀಡಿದ್ದರು. +ಅಲ್ಲದೆ, ನಮ್ಮ ಸಂವಿಧಾನದ ವಿಧಿ ೫೧ ಎ (ಹೆಚ್) ವೈಜ್ಞಾನಿಕ ಮನೋಭಾವದ ಕುರಿತು ಈ ರೀತಿ ಹೇಳುತ್ತದೆ: ದೇಶದ ಪ್ರತಿಯೊಬ್ಬ ನಾಗರೀಕನೂ ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ವೈಚಾರಿಕ ಮನೋಭಾವವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಹೊಂದಿರತಕ್ಕದ್ದು. +ಆದರೆ, ಡಾ: ನರೇಂದ್ರ ದಾಭೋಲ್ಕರ್‌ರವರು ಈ ಆಶಯಗಳನ್ನು ಜಾರಿಗೊಳಿಸುವಾಗಲೇ ಬಲಿಯಾದದ್ದು ಸಂವಿಧಾನದ ಮೇಲಿನ ಧಾಳಿಯಷ್ಟೆ. +ಈ ಹತ್ಯೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸೋಣ. +ಅವರನ್ನು ಹತ್ಯೆಗೈದ ಕೊಲೆಗಡುಕರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸೋಣ. +ಮೂಢನಂಬಿಕೆಗಳನ್ನು ಬಯಲುಗೊಳಿಸುವ ವಿಚಾರವಾದಿಗಳ ಮೇಲೆಯೇ ಧಾರ್ಮಿಕ ಸಹಿಷ್ಣುತೆಗಾಗಿ ಇರುವ ಹಲವು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವುಗಳಿಗೆ ಸಂವಿಧಾನದ ವಿಧಿ ೫೧ ಎ (ಹೆಚ್) ಗೆ ಪೂರಕವಾಗಿ ತಿದ್ದುಪಡಿ ಮಾಡಬೇಕು. +ವೈಜ್ಞಾನಿಕ ಮನೋಭಾವ ಹರಡುತ್ತಾ ಮೂಢನಂಬಿಕೆಗಳು ಮತ್ತು ಅಂಧಶ್ರದ್ದೆಗಳ ವಿರುದ್ದ ಜಾಗೃತಿ ಮೂಡಿಸಿ ಅವುಗಳನ್ನು ತೊಡೆದುಹಾಕಬೇಕು. + -ಜೈಕುಮಾರ್ +ಬಿಜಿವಿಎಸ್, ಕರ್ನಾಟಕ, +ಐ.ಐ.ಎಸ್.ಸಿ. ಆವರಣ, ಬೆಂಗಳೂರು +********* \ No newline at end of file diff --git a/PanjuMagazine_Data/article_1074.txt b/PanjuMagazine_Data/article_1074.txt new file mode 100644 index 0000000000000000000000000000000000000000..25432c7238c1f27184bb22884b359691fb74a9d2 --- /dev/null +++ b/PanjuMagazine_Data/article_1074.txt @@ -0,0 +1,13 @@ +ಮೈಸೂರು ದಸರಾ. ಎಷ್ಟೊಂದು ಸುಂದರ.. ಎಂಬ ಹಾಡನ್ನು ಕೇಳಿದ್ನೇ ಹೊರತು ಅದ್ನ ಕಣ್ಣಾರೆ ನೋಡೋ ಭಾಗ್ಯ ಇತ್ತೀಚೆಗಿನವರೆಗೂ ಸಿಕ್ಕಿರಲಿಲ್ಲ. ತೀರಾ ಸಣ್ಣವನಿದ್ದಾಗ ನನ್ನಪ್ಪ, ನನ್ನ ಮುತ್ತಜ್ಜ(ಅಜ್ಜಿಯ ಅಪ್ಪ) ಮೈಸೂರು ದಸರಾಕ್ಕೆ ಹೋದ ಕತೆ, ಅಲ್ಲಿ ನನ್ನ ಮುತ್ತಜ್ಜನ ಒಳಜೇಬನ್ನೇ ಕತ್ತರಿಸಿದ ಕಳ್ಳರ ಕಥೆ , ಮೈಸೂರಿಗೆ ದಸರಾ ಸಮಯದಲ್ಲಿ ಹೋದ್ರೆ ಕಾಲಿಡೋಕೂ ಆಗಲ್ಲ ದಸರಾನಾ ರಸ್ತೆ ಮೇಲೆ ನೋಡೋದು ಹೋಗ್ಲಿ ಮನೆ ಮಹಡಿ ಮೇಲೆ ನಿತ್ತು ನೋಡೋದಕ್ಕೂ ಕಷ್ಟಪಡ್ಬೇಕು ಎಂಬ ಮಾತುಗಳೇ ದಸರಾಕ್ಕೆ ಹೋಗದಂತೆ ತಡೀತಿದ್ವಾ ಅಥವಾ ಕಣ್ಣಾರೆ ನೋಡಿದ್ದಕ್ಕಿಂತಲೂ ಹೆಚ್ಚಿಗೆ ತುಂಬಿಹೋಗಿದ್ದ ಊಹಾಪೋಹಗಳೇ ತಡೀತಿದ್ವಾ ಗೊತ್ತಿಲ್ಲ. ದಸರಾ ಎಂದರೆ ಮುಂಚೆ ಮಹಾರಾಜರು ಆನೆಯ ಮೇಲೆ ಕುಳಿತು ನಡೆಸುತ್ತಿದ್ದ ಮೆರವಣಿಗೆ ಆಮೇಲೆ ಅದರ ಬದಲು ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡಿಯುವಂತಹ ವಿಜಯದಶಮಿಯ ದಿನ ಸಿಕ್ಕಾಪಟ್ಟೆ ರಷ್ಷಿರುತ್ತೆ. ಬೇರೆ ಸಂದರ್ಭದಲ್ಲೂ ಇರತ್ತೆ ಆದ್ರೆ ನೋಡ್ಬೋದು ಕಣ್ರೋ . ಬೆಂಗ್ಳೂರಲ್ಲೇ ಇದ್ದು ಮೈಸೂರು ದಸರಾ ನೋಡಕಾಗ್ಲಿಲ್ಲ ಅಂದ್ರೆ ಹೆಂಗೆ ಅಂದ ಗೆಳೆಯರ ಮಾತಿಗೆ ಒಪ್ಪಿ ನಮ್ಮ ಗ್ಯಾಂಗು ಕೊನೆಗೂ ಮೈಸೂರಿಗೆ ಹೊರಟಿತು. ಮತ್ತೊಂದು ದಸರಾ ಬರ್ತಿರೋ ಈ ಸಂದರ್ಭದಲ್ಲಿ ಆ ಅರಮನೆ ದೀಪಾಲಂಕಾರ, ಕೆಆರೆಸ್ಸು, ಚಾಮುಂಡಿ ಬೆಟ್ಟಗಳ ಸುಂದರ ನೆನಪುಗಳದೇ ಅಂಬಾರಿ.. ಹಾಗಾಗಿ ಅವೇ ನೆನಪುಗಳ್ನ ದಾಟಿಸೋ ಪ್ರಯತ್ನ ಈ ಬಾರಿ. +ಮೈಸೂರು ಅರಮನೇನ ನೋಡ್ಬೇಕು. ಸರಿ, ಅದ್ರಲ್ಲಿ ಏನು ನೋಡ್ಬೇಕು ? ಅರೆ, ಇದೊಳ್ಳೆ ಪ್ರಶ್ನೆ ಆಯ್ತಲ್ಲ ಅಂದ್ಕೊಂಡ್ರಾ ? ಇದು ದಸರಾ ಸಮಯ ಸ್ವಾಮಿ. ಹಾಗಾಗಿ ಕೇಳ್ಬೇಕಾದ ಪ್ರಶ್ನೆನೆ. ದೀಪಾಲಂಕಾರ ನೋಡ್ಬೇಕು ಅಂದ್ರೆ ಸಂಜೆ /ರಾತ್ರಿ ಬರ್ಬೇಕು. ಅರಮನೆ ಒಳಗಡೆ ನೋಡ್ಬೇಕು ಅಂದ್ರೆ ಬೆಳಗ್ಗೆ ಹೊತ್ತು ಬರ್ಬೇಕು. ಅರಮನೇನ ಯಾವಾಗಾದ್ರೂ ನೋಡ್ಬೋದು. ಆದ್ರೆ ದೀಪಾಲಂಕಾರ ನೋಡ್ಲೇಬೇಕು ಅಂತ ಎಲ್ರೂ ಮಾತಾಡ್ಕೊಂಡ್ವಿ. ಸರಿ ಬೆಳಗ್ಗೆ ಏನ್ಮಾಡೋದು ಅಂತ ಮಾತಾಡ್ತಿರೋವಾಗ್ಲೇ ಮೈಸೂರು ಬರೋದಕ್ಕೂ ಚಾಮುಂಡಿ ಬೆಟ್ಟ ಸ್ವಾಗತ ಕೋರ್ತಿರೋ ತರಾ ಕಾಣೋದಕ್ಕೂ ಸರಿ ಹೋಯ್ತು . ಮೈಸೂರು ಮುಟ್ಟಿ ಒಂದು ಹಂತದ ತಿಂಡಿ ಮುಗ್ಸೋ ಹೊತ್ತಿಗೆ ಮೊದ್ಲು ಚಾಮುಂಡಿ ಬೆಟ್ಟ ನೋಡೋದಂತ್ಲೂ ಆಮೇಲೆ ಸಂಜೆಗೆ ದೀಪಾಲಂಕಾರ ನೋಡೋಂದಂತ್ಲೂ ಪ್ಲಾನ್ ಮಾಡಿದ್ವಿ. ಆದ್ರೆ ಬೆಂಗ್ಳೂರಿಂದ ಬಂದ ಎಲ್ಲ ಗೆಳೆಯರ ಕೈಲೂ ಬ್ಯಾಗುಗಳು. ಬ್ಯಾಗು ಹೊತ್ಕೊಂಡು ತಿರುಗೋದೇಗೆ ? ಮೈಸೂರಿನ ನಂಬನಿ(ನಂದಿ ಬಸ್ ನಿಲ್ದಾಣ)ದಲ್ಲಿ ವಿಚಾರಿಸಿದ್ರೆ ಅಲ್ಲೆಲ್ಲೂ ಇಲ್ಲ ಅಂತದ್ರೂ. ನಾವು ಇಳಿದ ರೈಲ್ವೇ ಸ್ಟೇಷನ್ನಿನಲ್ಲೇ ಕೇಳಿದ್ರೆ ಅಲ್ಲೇ ಇಡ್ಬೋದಿತ್ತೇನೋ. ಆದ್ರೆ ಮೈಸೂರು ತಿರ್ಗೋ ಹುಮ್ಮಸ್ಸಲ್ಲಿ ಸೀದಾ ನಂಬನಿಗೆ ಬಂದು ಬಿಟ್ಟಿದ್ವಲ್ಲ. ವಾಪಾಸು ಹೋಗೋ ಮನಸ್ಸಿಲ್ಲದೇ ಗೆಳೆಯನ ನೆಂಟರ ಮನೆಗೆ ಹೊರಟ್ವಿ. ಅಲ್ಲಿ ಬ್ಯಾಗಿಟ್ಟು ಮತ್ತೆ ವಾಪಾಸ್ಸು ಬರೋ ಹೊತ್ತಿಗೆ ಸಾಕಷ್ಟು ಸಮಯ ಹಾಳಾಗಿತ್ತಾದ್ರೂ ನಮ್ಮ ಹುಮ್ಮಸ್ಸು ಕಿಂಚಿತ್ತೂ ಕಮ್ಮಿಯಾಗಿರ್ಲಿಲ್ಲ. +ಚಾಮುಂಡಿಬೆಟ್ಟಕ್ಕೆ ಹವಾನಿಯಂತ್ರಿತ ಬಸ್ಸುಗಳೂ, ಸೀದಾ ಬಸ್ಸುಗಳು ಇವೆ ಅಂತ ನಾನು ಬರ್ಯೋಕೆ ಹೋದ್ರೆ ನಿಮ್ಮಲ್ಲಿ ಅನೇಕರೆಲ್ಲಾ ಸೇರಿ ನನಗೆ ಹೊಡ್ಯೋಕೆ ಬರ್ಬೋದು!! ಅದು ಎಲ್ಲರಿಗೂ ಗೊತ್ತಿರೋ ವಿಷಯನೇ ಹೊಸದೇನಿದ್ರೂ ಇದ್ರೆ ಹೇಳು ಅಂತ ಕೇಳೋ ಮೊದ್ಲೆ ಹೇಳ್ಬಿಡ್ತೇನೆ. ಚಾಮುಂಡಿಬೆಟ್ಟಕ್ಕೆ ಬಸ್ಸಲ್ಲಿ ಹೋಗೋಕಿಂತಲೂ ನಡ್ಕೊಂಡೋ,ಸ್ವಂತ ವಾಹನವೇನಾದ್ರೂ ಇದ್ರೆ ಅದ್ರಲ್ಲಿ ಹೋಗೋದು ಒಳ್ಳೇದು ಅನ್ಸತ್ತೆ. ಯಾಕಂದ್ರೆ ಆ ರಸ್ತೆಯಲ್ಲಿ ಸಿಗೋ ಅಸಂಖ್ಯ ಹಳದಿ, ಕೆಂಪು, ನೀಲಿ ಹೂಗಳು, ಸುಂದರ ದೃಶ್ಯಾವಳಿ ಕ್ಯಾಮೆರಾ ಹೊತ್ತು ತಂತಿದ್ದ ನನ್ನ ಸ್ನೇಹಿತರು ಕರಬುವಂತೆ ಮಾಡ್ತಿದ್ವು. ಚಲಿಸೋ ಬಸ್ಸಿನಲ್ಲಿ ಆ ದೃಶ್ಯಗಳ ಸೆರೆ ಹಿಡಿಯಲಾರದೇ,ಅ ದೃಶ್ಯಗಳು ಮಿಸ್ಸಾಗುವುದನ್ನೂ ಬಿಡಲೂ ಆಗದೇ ಅವರು ಪರದಾಡುತ್ತಿದ್ದರೆ ಕ್ಯಾಮೆರಾಗಳಿಲ್ಲದ ನಮ್ಮಂತವರು ನಿರ್ಲಿಪ್ತರಾಗಿ ಪ್ರಕೃತಿಯನ್ನು ಆನಂದಿಸಲೂ ಆಗದೇ, ಬಾಲ್ಯ ಸ್ನೇಹಿತರನ್ನು ಬೈದು ಸುಮ್ಮನಿರಿಸಲೂ ಆಗದಂತಹ ದ್ವಂದ್ವದಲ್ಲಿ ಸಿಕ್ಕಿದ್ದೆವು. ಬರೋ ಹೊತ್ತಿಗಾದ್ರೂ ನಡೆದೇ ಬರ್ಬೇಕು ಅಂತ ನಿಶ್ಚಯಿಸಿದ್ವಿ. ಪ್ರಧಾನ ದೇಗುಲದ ಹೊರಗೆ ಜಿನುಗುತ್ತಿದ್ದ ಮಳೆಯಲ್ಲಿ ಅರ್ಧಘಂಟೆ ನೆನೆಯುತ್ತಲೇ ದೇವರ ದರ್ಶನ ಪಡೆದು ಮಹಿಷಾಸುರನೆದ್ರು ನಿಂತು ಫೋಟೋ ತೆಗೆಸಿ ನಂದಿಯನ್ನು ನೋಡಲು ಹೊರಟೆವು. + ಚಾಮುಂಡಿ ಬೆಟ್ಟಕ್ಕೆ ಕೆಳಗಿನಿಂದ ಹತ್ತಿದ್ರೆ ಸುಮಾರು ಸಾವಿರ ಮೆಟ್ಟಿಲು. ಅದರ ಸುಮಾರು ಮುಕ್ಕಾಲು ಭಾಗ ಅಂದ್ರೆ ಏಳು ನೂರು ಐವತ್ತು ಹತ್ತಿದ್ರೆ ಸಿಕ್ಕೋದು ನಂದಿ. ನಾವು ಚಾಮುಂಡಿಬೆಟ್ಟದಿಂದ ಕೆಳಗೆ ಅವೇ ಇನ್ನೂರ ಐವತ್ತು ಮೆಟ್ಟಿಲಿಳಿದು ನಂದಿ ನೋಡೋಕೆ ಹೊರಟ್ವಿ. ಕಡುಗಪ್ಪು ನಂದಿ ನೋಡೋಕೆ ದಸರಾ ಇರ್ಲಿ ಇಲ್ಲದಿರಲಿ ಜನಜಂಗಳಿಯೆ. ಇಷ್ಟು ದೊಡ್ಡವನಿರೋ ನಾನೇ ತಣ್ಣಗೆ ಕೂತಿದ್ದೇನೆ , ನನ್ನ ಕಾಲು ಭಾಗವೂ ಇಲ್ಲದ ಹುಲುಮಾನವ ನೀನು. ಎಷ್ಟು ಹಾರಾಡ್ತೀಯಪ್ಪ ನೀನು ಅಂತ ನಂದಿ ಮಾತಾಡ್ತಿದೆಯೋ ಅನಿಸಿತೊಮ್ಮೆ ! ನಂದಿಗೆ ನಮಸ್ಕರಿಸಿದ ನಮಗೆ ಎರಡು ಆಯ್ಕೆ. ಒಂದು ವಾಪಾಸು ಮೇಲೆ ಹತ್ತೋದು. ಇಲ್ಲಾ ಚಾಮುಂಡಿಬೆಟ್ಟದ ಕೆಳಗಿನವರೆಗೆ ನಡೆದುಹೋಗೋದು. ಆದ್ರೆ ಮುಂಚೆ ಬೆಟ್ಟಕ್ಕೆ ಬಸ್ಸಲ್ಲಿ ಹೋಗ್ತಾ ಕಂಡಿದ್ದ ವೀಕ್ಷಣಾಗೋಪುರವೊಂದು ನೆನಪಾಗಿ ಅಲ್ಲಿವರೆಗಾದ್ರೂ ನಡೆದುಹೋಗ್ಬೇಕು. ಅಲ್ಲಿಂದ ಹೇಗೂ ಬರ್ತಿರೋ ಬಸ್ಸುಗಳು ಸಿಕ್ಕುತ್ತೆ. ಇಲ್ಲಾ ಆಂದ್ರೆ ವಾಪಾಸು ಹತ್ತಿಬರೋದು ಅಂತ ಅಂದ್ಕೊಂಡ್ವಿ. ಸರಿ ಅಂತ ರಸ್ತೇಲೇ ನಡೀತಾ ಸಾಗಿದ ನಮಗೆ ಮತ್ತೆ ಕೆಳಗಿಳಿಯೋ ಮೆಟ್ಟಿಲುಗಳು ಕಂಡವು. ರಸ್ತೆಯಾಚೆಯ ಮೇಲೆ ಹತ್ತೋ ಮೆಟ್ಟಿಲುಗಳಲ್ಲೇ ಬಂದಿದ್ರೆ ಇನ್ನೂ ಬೇಗ ಆ ತಿರುವಿಗೆ ಬರ್ಬಹುದಿತ್ತು ಅಂತ ಅವಾಗ ಅನಿಸಿತು.( ನಂದಿಯ ಹತ್ರ ಮೆಟ್ಟಿಲುಗಳ್ನ ಬಿಟ್ಟು ರಸ್ತೆ ಹಿಡಿದಿದ್ವಲ್ಲ). ನಡೀಬೇಕು ಅಂತ ಮುಂಚೆಯೇ ನಿಶ್ಚಯ ಮಾಡಿದ್ವಲ್ಲ. ಹಾಗಾಗಿ ಏಳು ನೂರು ಮೆಟ್ಟಿಲು ಇಳಿಯೋಕೆ ಹೊರಟೇ ಬಿಟ್ವಿ. ಚಾಮುಂಡಿಬೆಟ್ಟ ಚಾರಣ ಅಂತ ಬರೋರು ಮತ್ತೆ ಹರಕೆ ಹೊತ್ತ ಭಕ್ತರನ್ನು ಬಿಟ್ರೆ ಬೇರ್ಯಾರು ಆ ದಾರಿಯಲ್ಲಿ ಬರೋ ತರ ಕಾಣಲಿಲ್ಲ. ನಾವು ಇಳಿಯುವಾಗೆಂತೂ ಒಂದು ಪ್ರೇಮಿ ಜೋಡಿ ಬಿಟ್ರೆ ದಾರಿಯುದ್ದಕ್ಕೂ ನಮ್ಮ ಗೆಳೆಯರ ಗ್ಯಾಂಗೊಂದೇ. +ಚಾಮುಂಡಿಬೆಟ್ಟದ ಬುಡದಲ್ಲಿ ರಾಜರ ಕಾಲದಲ್ಲೋ ನಂತರವೋ ಕಟ್ಟಿಸಿದ ಹಲವು ತಂಗುದಾಣದಂತಹ ರಚನೆಗಳಿವೆ. ದೂರದಿಂದ ನೋಡಿದ ನಾವು ದೇವಸ್ಥಾನ ಅಂದ್ಕೊಂಡ್ರೂ ಹತ್ತಿರ ಹೋಗಿ ನೋಡಿದಾಗ ತಂಗುದಾಣ ಅಂತ ಗೊತ್ತಾಯ್ತು. ನಂದಿಬೆಟ್ಟಕ್ಕೆ ಬರೋ ಕುಟುಂಬಗಳು ಅಡಿಗೆ, ಊಟ ಮಾಡೋಕೆ, ರಾತ್ರೆಯಾದ್ರೆ ಅಲ್ಲೇ ಮಲಗೋಕೆ ಅನುವಾಗುವಂತೆ ಉದಾರ ಹೃದಯದಿಂದ ಕಟ್ಟಿಸಿದ ಆ ತಾಣಗಳು ಈಗ ಜನರೇ ಇಲ್ಲದೇ ಖಾಲಿ ಬಿದ್ದಿರೋದು ನೋಡಿ ಒಮ್ಮೆ ಹೃದಯ ಕಲಕಿತು. ಅಲ್ಲೇ ಮೂಲೆಯಲ್ಲೊಂದಿಷ್ಟು ತುಳಸಿ ಗಿಡಗಳು, ಸಮಾಧಿಗಳು. ಆ ಕಾಲದ ಶಿಲ್ಪಿಗಳದೋ ಮಂತ್ರಿಗಳದೋ ಇರಬಹುದು. ಹೆಚ್ಚಿನ ಮಾಹಿತಿಯಿಲ್ಲದೇ ಖಾಲಿ ಬಿದ್ದಿದ್ವು. ಹಂಗೇ ಕೆಳಗೆ ಬಂದಾಗ ಯಾವುದೋ ಪ್ರೆಸ್ ಎಂಬ ಕಾರಿನಲ್ಲಿ ಬಂದಿಳಿದ ವಿದೇಶಿಗಳು ಚಾಮುಂಡಿ ಬೆಟ್ಟನ ನಾವಿಳಿದು ಬಂದ ಮೆಟ್ಟಿಲುಗಳಲ್ಲೇ ಹತ್ತೋಕೆ ಹೊರಟಿದ್ದು ಕಾಣಿಸ್ತು !! ಅದ್ರ ಬಗ್ಗೆ ನೋ ಕಾಮೆಂಟ್ಸ್. ಕೆಳಗಿಳಿದ ನಮಗೆ ಕಾಯ್ತಾ ಇದ್ದ ಎರಡು ಆಟೋಗಳು ಕಂಡವು. ಅಂದ್ರೆ ಅಪರೂಪಕ್ಕಾದ್ರೂ ಇಲ್ಲಿ ಜನ ಬರ್ತಾರೆ ಅಂತ ಆಯ್ತು. ಅಬ್ಬಾ ಸದ್ಯ ! ಅದೇ ಆಟೋ ಹತ್ತಿ ಚಾಮುಂಡಿಬೆಟ್ಟಕ್ಕೆ ಹೋಗೋ ದಾರಿಯಲ್ಲೇ ಸ್ವಲ್ಪ ಆ ಕಡೆ ಸಿಗೋ ಮೇಣದ ಮ್ಯೂಸಿಯಂಗೆ ಹೋದೆವು. +ಮೇಣದ ಮ್ಯೂಸಿಯಂ ಅಂದ್ರೆ ಲಂಡನ್ ನ ಮೇಡಂ ಟ್ಯುಸಾಡ್ ಮ್ಯೂಸಿಯಂ ನೆನಪಾಗಬಹುದು ಕೆಲವರಿಗೆ. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಹೀಗೆ ಸಿನಿತಾರೆಗಳು ಅವ್ರ ಮೇಣದ ಪ್ರತಿಕೃತಿಗಳೊಂದಿಗೆ ಕೊಟ್ಟ ಪೋಸಿನ ಫೋಟೋಗಳು ಪೇಪರಲ್ಲಿ ಬಂದಿದ್ದು ನೋಡಿರಬಹುದು ನೀವು. ಇದು ಅಷ್ಟು ಚೆನ್ನಾಗಿದೆ ಅಂತ ಹೇಳಲಾಗದಿದ್ದರೂ ಇಲ್ಲಿನವರ ಶ್ರಮಕ್ಕೆ ಒಮ್ಮೆ ಶಭಾಷ್ ಅನ್ನದೇ ಇರೋಕೆ ಸಾಧ್ಯನೇ ಇಲ್ಲ. ಹಲತರದ ವಾದ್ಯಗಳು, ವಾದ್ಯತಂಡಗಳು, ಟೆಲಿಫೋನ್ಗಳು , ಪಂಜಾಬಿ, ಆದಿವಾಸಿ ಹೀಗೆ ಹಲವು ಸಂಸ್ಕೃತಿಗಳು.. ಕೆಲವಂತೂ ನಮ್ಮೆದುರೇ ಜನ ಕೂತಿದ್ದಾರೆನೋ ಅನಿಸುವಂತಿತ್ತು. ಅದನ್ನು ಹೇಳೋದಕ್ಕಿಂತಲೂ ಅಲ್ಲಿ ನೋಡಿಯೇ ಅನುಭವಿಸಬೇಕು. +ಸರಿ, ಅದನ್ನು ನೋಡಿ ಮತ್ತೆ ಮೈಸೂರಿಗೆ ವಾಪಾಸ್ಸು ಬಂದ್ವಿ. ಸಂಜೆಯಾಗುತ್ತಾ ಬಂದಿತ್ತು. ಅರಮನೆಯ ದೀಪಾಲಂಕಾರ ಶುರುವಾಗೋಕೆ ಇನ್ನೂ ಸಮಯ ಇತ್ತು. ಹಾಗಾಗಿ ಜಗನ್ಮೋಹನ ಅರಮನೆ ಅಥವಾ ಜಗನ್ಮೋಹನ ಚಿತ್ರಶಾಲೆಗೆ ಹೋಗೋಣ ಅಂತ ತೀರ್ಮಾನಿಸಿದ್ವಿ. ಜಗನ್ಮೋಹನ ಚಿತ್ರಶಾಲೆ ಅಂದ ತಕ್ಷಣ ಅಲ್ಲಿರೋ ಗಡಿಯಾರ, ರಾಜರ ಕಾಲದ ಚಿತ್ರಗಳು, ದೀಪದ ಮಹಿಳೆ ಹೀಗೆ ಹಲವು ಚಿತ್ರಗಳು ನೆನಪಾಗುತ್ತೆ. ಅಲ್ಲೆಲ್ಲೂ ಕ್ಯಾಮೆರಾ, ಮೊಬೈಲಲ್ಲಿ ಫೋಟೋ ತೆಗೆಯೋಕೆ ಅನುಮತಿ ಇಲ್ದೇ ಇರೋದ್ರಿಂದ ಆ ಚಿತ್ರ ಹಾಕೋಕೆ ಆಗ್ತಾ ಇಲ್ಲ .. ಪ್ರತಿ ಸೆಕೆಂಡ್ ತೋರಿಸೋ ಸೈನಿಕ, ಇಪ್ಪತ್ತು ನಿಮಿಷಕ್ಕೆ ಆಗೋ ಚಲನೆ, ಪ್ರತಿ ಒಂದು ಘಂಟೆಗಾಗುವ ಸೈನಿಕರ ಮೆರವಣಿಗೆ.. ಹೀಗೆ ಆಗಿನ ಕಾಲದಲ್ಲೇ ಮುಂದುವರಿದ ತಂತ್ರಾಂಶ ನೋಡಿ ಖುಷಿಯಾಯ್ತು. ಅದು ಭಾರತದಲ್ಲ, ನಮ್ಮವರಿಗೆ ಅಂತ ತಲೆಯೆಲ್ಲಿ ಎಂಬ ಕುಹಕವೂ ನಮ್ಮವರು ಅದಕ್ಕಿಂತ ಎಷ್ಟೋ ಮುಂದುವರಿದಿದ್ರೂ ವಿದೇಶಿಯರ ನಿರಂತರ ದಾಳಿಯಲ್ಲಿ ಅವೆಲ್ಲಾ ನಶಿಸಿದೆವು ಎಂಬ ಸ್ವಾಭಿಮಾನದ ಮಾತುಗಳೂ ಒಟ್ಟಿಗೇ ನೆನಪಾದವು. +ಅಲ್ಲೇ ಪಕ್ಕದಲ್ಲಿನ ಅಕ್ಕಿಕಾಳಿನ ಮೇಲಿನ ದಶಾವತಾರ ಮುಂತಾದ ಕೆತ್ತನೆಗಳೂ ಮನಸೂರೆಗೊಂಡವು. ರವಿವರ್ಮನ ಜಟಾಯುವಿನ ರೆಕ್ಕೆ ಕಡಿಯುತ್ತಿರುವ ರಾವಣನ ಚಿತ್ರ, ನಳ ದಮಯಂತಿ ಹೀಗೆ ಪ್ರಸಿದ್ದ ಚಿತ್ರಗಳಿಂದ ಹಲವು ಇತ್ತೀಚಿಗಿನ ಪ್ರಸಿದ್ದ ಚಿತ್ರಕಾರರ ಚಿತ್ರಗಳು ನೆಲಮಹಡಿಯಲ್ಲಿವೆ. ಮೇಲ್ಮಡಿಗಳನ್ನು ಹತ್ತುತ್ತಾ ಹತ್ತುತ್ತಾ ಆಗಿನ ಕಾಲದ ವಾದ್ಯಗಳು, ಪಗಡೆಯಂತಹ ಆಟಗಳು, ಜಾಗಟೆಯಂತಹ ವಾದ್ಯಗಳು, ತಬಲಾ.. ಹೀಗೆ ಹಲವು ನಶಿಸುತ್ತಿರುವ ಸಂಸ್ಕೃತಿಗಳಿಗೆ ವೇದಿಕೆಯಂತಿದೆ. ಅಲ್ಲಿನ ಚಿತ್ರಗಳಲ್ಲಿ ಇನ್ನೊಂದು ಮರೆಯಲೇಬಾರದಂತಹ ಚಿತ್ರ ದೀಪದ ಮಹಿಳೆ. ಆ ಚಿತ್ರವನ್ನು ಕತ್ತಲೆಯಲ್ಲಿ ನೋಡಿದರೆ ನಿಜವಾಗಲೂ ಒಬ್ಬ ಮಹಿಳೆ ದೀಪ ಹೊತ್ತು ನಿಂತಂತೆಯೂ ದೀಪದ ಪ್ರಭಾವಳಿ , ನೆರಳುಗಳನ್ನು ನೋಡಿದಂತೆಯೇ ಭಾಸವಾಗುತ್ತೆ! ಅದನ್ನು ನೋಡಿ ಕೆಳಗಿಳಿದಾಗ ಮತ್ತೊಂದು ಕೋಣೆ. ಅಲ್ಲಿ ಐದು , ಹತ್ತನೇ ಶತಮಾನದ ಉತ್ಖತನದ ಕುರುಹಗಳನ್ನು ನೋಡಿ ಒಮ್ಮೆ ಮೈ ಜುಮ್ಮೆಂದಿತು. +ಅಲ್ಲೇ ಮೇಲ್ಗಡೆ ಮೈಸೂರಿನ ಮಹಾರಾಜರು ಮತ್ತು ಅವರ ಆಳ್ವಿಕೆಯ ಇಸವಿಗಳಿರೋ ಚಿತ್ರಗಳೂ ಇವೆ. ಅವರಲ್ಲಿ ಹೆಚ್ಚಿನವರನ್ನು ಗುಲಾಬಿ ಹೂಗಳನ್ನು ಹಿಡಿದಂತೆಯೂ ಕೆಲವರನ್ನು ವಿಭಿನ್ನವಾಗಿಯೂ ಚಿತ್ರಿಸಲಾಗಿದೆ. ಅದೇಕೆಂದು ಅಲ್ಲಿನ ಮೇಲ್ವಿಚಾರಕರಲ್ಲಿ ಪ್ರಶ್ನಿಸಿದಾಗ ಸೂಕ್ತ ಉತ್ತರ ಸಿಗಲಿಲ್ಲ. ನಿಮ್ಮಲ್ಯಾರಾದ್ರೂ ಇತಿಹಾಸಜ್ನ ಮಿತ್ರರಿದ್ದರೆ ಆ ಬಗೆಗಿನ ಮಾಹಿತಿ ಹಂಚಿಕೊಳ್ಳಬಹುದು. ಅಲ್ಲಿನ ಮತ್ತೊಂದು ಮನಸೂರೆಗೊಳ್ಳುವ ಅಂಶ ಅರವತ್ತು ಸಂವತ್ಸರಗಳ ಬಗೆಗಿನ ಸ್ತೋತ್ರಗಳು ಮತ್ತು ಸಂವತ್ಸರದ ಬಗೆಗಿನ ಚಿತ್ರಗಳು. ಇದರಲ್ಲಿ ಕೆಲವು ಸಂವತ್ಸರಗಳು ಕಾಣೆಯಾಗಿದ್ದವೆನ್ನೋದು ಮತ್ತೊಂದು ಬೇಸರದ ಸಂಗತಿ. ಇಲ್ಲಿ ಎಲ್ಲವನ್ನೂ ಹಾಕಲು ಜಾಗವಿಲ್ಲದೇ ಬೇರೆಡೆ ಸ್ಥಳಾಂತರಿಸಲಾಗಿದೆ ಎಂಬ ಮಾತು ಕೇಳಿಬಂದರೂ ಅದು "ಎಲ್ಲಿ" ಎಂಬ ಖಚಿತ ಮಾಹಿತಿ ಸಿಗಲಿಲ್ಲ. ಮೈಸೂರು ಪ್ರಧಾನ ಅರಮನೆ ಎಂದು ಕೆಲವರು ಹೇಳುತ್ತಾರಾದ್ರೂ ಅರಮನೆ ನೋಡೋಕೆ ಆಮೇಲೆ ಹೋದ್ರೂ ಅಲ್ಲಿ ಅವು ಕಾಣಲಿಲ್ಲ. ಇನ್ನೆಲ್ಲಾದ್ರೂ ನೋಡಿದ್ರೆ, ನೀವು ಆ ಮಾಹಿತಿ ಹಂಚಿಕೋಬೋದು. +ಆಷ್ಟೊತ್ತಿಗೆ ಸಂಜೆಯಾಗುತ್ತಾ ಬಂದಿದ್ರೂ ಅರಮನೆಯಲ್ಲಿ ಇನ್ನೂ ದೀಪಾಲಂಕಾರ ಶುರುವಾಗಿರಲ್ಲ ಅನ್ನೋ ಮಾತು ಕೇಳಿಬಂತು. ಸರಿ, ಸೇಂಟ್ ಫಿಲೋಮಿನಾ ಚರ್ಚ್ ನೋಡ್ಕೊಂಡು ಬರೋಣ ಅಂತ ಅಲ್ಲಿಗೆ ಹೊರಟ್ವಿ. ದಾರಿಯಲ್ಲಿ ನೋಡಿದ ಮೈಸೂರಿನ ಪ್ರಸಿದ್ದ ಗಡಿಯಾರದ ಗೋಪುರ, ಸೇಂಟ್ ಫಿಲೋಮಿನಾ ಚರ್ಚು, ಅಲ್ಲಿಗೆ ಹೋಗೋ ದಾರಿಯಲ್ಲೆಲ್ಲಾ ಕಂಡ ಲೈಟುಗಳ ಸೌಂದರ್ಯವನ್ನು ಹೇಳೋದಕ್ಕಿಂತ ಅಲ್ಲಿ ಹೊಗಿ ಸವಿಯೋದೇ ಮೇಲು. ಕೊನೆಗೂ ಅರಮನೆಗೆ ಬಂದೆವು. ಅಬ್ಬಾ ಎಂತಹಾ ದೀಪಾಲಂಕಾರ.. ಸೂಪರ್ರಪ್ಪ.. ಜಗಮಗಿಸುತ್ತಿದ್ದ ಅರಮನೆಯ ಬಗ್ಗೆ ಹೇಳೋದಕ್ಕಿಂತ ಆ ಸೌಂದರ್ಯದ ಕೆಲ ಚಿತ್ರಗಳನ್ನು ಹಾಕೋದೇ ಮೇಲು.. ಆ ರಾತ್ರೆಯಲ್ಲಿ ಅಲ್ಲಿ ನಡೆಯುವ ಸಂಗೀತಗೋಷ್ಟಿಗಳ ಸಂಗೀತ ಸುಧೆಯ ಮಧ್ಯೆ ಆ ಬೆಳಕಿನ ಸವಿ ಸವಿಯೋದೆ ಒಂದು ಸ್ವರ್ಗ ಸಮ ಭಾವ. +ಅರಮನೆಯ ದೀಪಾಲಂಕಾರ ನೋಡುತ್ತಿದ್ದ ನಮಗೆ ಹೊರಬರಲೇ ಮನಸ್ಸಿಲ್ಲ. ಆದ್ರೆ ಏನು ಮಾಡೋದು. ಬರಲೇಬೇಕಲ್ಲ, ಒಲ್ಲದ ಮನಸ್ಸಿಂದ ಹೊರಬಂದು ಸ್ನೇಹಿತನ ನೆಂಟರ ಮನೆ ಸೇರಿದೆವು. +ಮಾರನೆಯ ದಿನ ಬೆಳಗಾಯಿತು. ಅರಮನೆಯನ್ನು ರಾತ್ರೆ ನೋಡಿದ್ದ ನಾವು ಹಗಲು ಅದರ ಒಳಗೆ ನೋಡೋಕೆ ಹೊರಟೆವು.. ದಸರಾ ಅಂದ್ರೆ ಹಗಲೂ ರಾತ್ರಿ ಪ್ರತಿದಿನ ಸಂಗೀತ ಗೋಷ್ಟಿ ನಡೆಯುತ್ತೆ ಅರಮನೆ ಪ್ರಾಂಗಣದಲ್ಲಿ. ನಾವು ಹೋಗಿದ್ದ ದಿನ ಹಲವು ಕಲಾವಿದರ(ನೂರು ಎಂದು ನೆನಪು) ತಬಲಾವಾದನ ಕಾರ್ಯಕ್ರಮ ನಡೀತಿತ್ತು. ಅಂಬಾರಿ, ದರ್ಬಾರ್ ಹಾಲ್, ಹೀಗೆ ನೂರೆಂಟು ಸೌಂದರ್ಯದ ಖನಿ ಅರಮನೆಯ ಸೌಂದರ್ಯವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲಾಗದಿದ್ದರೂ ತುಂಬಿಕೊಳ್ಳೋ ಪ್ರಯತ್ನದಲ್ಲಿ ಹೊರಬಂದೆವು. ಆಮೇಲೆ ಅಲ್ಲೇ ಪಕ್ಕದಲ್ಲಿದ್ದ ದೇಗುಲವನ್ನೂ ಪಕ್ಕದಲ್ಲಿದ್ದ ಫಲಪುಷ್ಪ ಪ್ರದರ್ಶನವನ್ನೂ ನೋಡಿದೆವು. ಮೈಸೂರಿನ ಟಾಂಗಾಗಾಡಿಗಳು, ಮೈಸೂರು ಮೃಗಾಲಯಗಳು, ಕೆ ಆರೆಸ್ಸು ಅಲ್ಲೇ ಪಕ್ಕದ ನಂಜನಗೂಡು ಹೀಗೆ ಸುಮಾರಷ್ಟು ನೋಡುವಂತಹ ಸ್ಥಳಗಳಿದ್ರೂ ಆ ದಿನವೇ ಬೆಂಗಳೂರಿಗೆ ಮರಳೋ ಅನಿವಾರ್ಯತೆ ಇದ್ದಿದ್ರಿಂದ ಒಲ್ಲದ ಮನಸ್ಸಿಂದ ಬಸ್ಸು ಹತ್ತಿದ್ವಿ. ಹಿಂದೊಮ್ಮೆ ಇವುಗಳಿಗೆಲ್ಲಾ ಹೋಗಿದ್ರೂ ಮತ್ತೆ ಮತ್ತೆ ಹೋಗೋ ಮನಸ್ಸಿಂದ.. ಮತ್ತೊಮ್ಮೆ ದಸರಾ ಸವಿ ಸವಿಯೋ ನಿರೀಕ್ಷೆಯಿಂದ… +ನಿಮ್ಮ ಪ್ರಶಸ್ತಿ. \ No newline at end of file diff --git a/PanjuMagazine_Data/article_1075.txt b/PanjuMagazine_Data/article_1075.txt new file mode 100644 index 0000000000000000000000000000000000000000..2949208faeb32ff168965c334573cefa1f476cf0 --- /dev/null +++ b/PanjuMagazine_Data/article_1075.txt @@ -0,0 +1,74 @@ +ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು. +ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ, + ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’ +ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, ಬಗ್ಗಿ ನೋಡಿದೆ, +ನಡುಗಿ ಹೋದೆ! +ನನ್ನ ಗೆಳೆಯ ಶಿವರಾಜ್, ಸ್ಟೂಲಿನ ಮೇಲೆ ಹತ್ತಿ ನಿಂತು, ಮೇಲೆ ಛಾವಣಿಯ ಕಬ್ಬಿಣದ ಹುಕ್ಕಿಗೆ ಹಗ್ಗ ಸಿಕ್ಕಿಸುತ್ತಿದ್ದಾನೆ, +’ಬೇಡವೋ, ಏಕೊ ಏನಾಯಿತೋ ’ ಎಂದು ಒಳಗೆ ನುಗ್ಗಿ ಅವನ ಕೈಲಿದ್ದ ಹಗ್ಗ ಕಿತ್ತುಕೊಂಡೆ, +ಅರ್ಥವಾಗದವನಂತೆ ಅವನು +’ಅರೆ ಏಕಿಷ್ಟು ಗಾಭರಿ, ನೀನು ಯಾವಾಗ ಬಂದೆ?" ಎಂದ ಶಾಂತವಾಗಿ. +’ನಾನು ಈಗಿನ್ನು ಬಂದೆ ಅದು ಬಿಡು, ಏನಿದು ನಿನ್ನ ಪರಿಸ್ಥಿತಿ, ನೇಣು ಹಾಕಿಕೊಳ್ಳುವ ಸ್ಥಿತಿ ನಿನಗೇಕೆ ಬಂದಿತು, ಅಂತಹ ಕಷ್ಟ ನಿನಗೇನು ? ಈ ವಯಸ್ಸಿನಲ್ಲಿ ಹೆಂಡತಿಯನ್ನು ಮಕ್ಕಳನ್ನು ಬಿಟ್ಟು ಹೋಗುವ ಮನಸ್ಸೇಕೆ’ ಎಂದೆ ಸಂಕಟದಿಂದ. +ನನ್ನ ಮುಖ ನೋಡಿ ನುಡಿದ +’ಲೋ ಸತೀಶ, ಪೆದ್ದು ಪೆದ್ದಾಗಿ ಆಡಬೇಡವೋ, ಹುಕ್ಕಿಗೆ ಯಾವುದೋ ಕಾಲದಲ್ಲಿ ಹಗ್ಗ ಕಟ್ಟಿತ್ತು , ಅಸಹ್ಯ ಕಾಣುತ್ತಿತ್ತು, ಮನೆ ಕ್ಲೀನ್ ಮಾಡುತ್ತಿದ್ದೆ, ಹಾಗಾಗಿ ಆ ಹಳೆ ಹಗ್ಗ ಬಿಚ್ಚಿ ಹಾಕೋಣ ಅಂತ ನೋಡಿದೆ ಅಷ್ಟೆ, ಯಾರಾದರು, ನೇಣು ಹಾಕಿಕೊಳ್ಳುವರು, ಬಾಗಿಲು ತೆರೆದಿಟ್ಟು ಪ್ರಯತ್ನಪಡುತ್ತಾರ? ದಡ್ಡ " ಎಂದ +ಅಷ್ಟರಲ್ಲಿ ಅವನ ಹೆಂಡತಿ ಇಂದಿರಮ್ಮ ಹೊರಬಂದರು, +’ಓ ಸತೀಶರವರು, ನೀವು ಯಾವಾಗ ಬಂದಿರಿ , ಬನ್ನಿ ಕುಳಿತುಕೊಳ್ಳಿ ಕಾಫಿ ತರ್ತೀನಿ ’ ಎನ್ನುತ್ತ ಒಳಗೆ ಹೋದರು. +’ಬಾರೋ ಕೂತ್ಕೋ , ಎಲ್ಲಿ ತುಂಬಾ ದಿನದಿಂದ ಕಾಣಲೆ ಇಲ್ಲ ’ +’ನನದೇನಪ್ಪ ಆಫೀಸಿಗೆ ಹೋಗೋದು ಬರೋದು, ಬಿಟ್ಟರೆ ಏನಿದೆ, ನಿನ್ನದಲ್ಲವೆ ಎಲ್ಲ ಗಡಿಬಿಡಿ, ಅದೇನು ಮನೆ ಎಲ್ಲ ಕ್ಲೀನು ಅಂತ ಶುರು ಹಚ್ಕೊಂಡಿದಿ’ +’ಮಾಡ್ಲೇ ಬೇಕಲ್ಲಪ್ಪ, ಇದು ಯಾವ ಮಂತ್ ಹೇಳು’ +’ಅದೇನು ಸೆಪ್ಟೆಂಬರ್ ಅಲ್ಲವೆ ?" +’ಅದು ಇಂಗ್ಲೀಶ್ ಮಂತ್ ಆಯಿತು, ಕನ್ನಡ ಮಂತ್ ಯಾವುದೂ ಹೇಳು’ +’ಕನ್ನಡದಲ್ಲೂ ಸೆಪ್ಟೆಂಬರ್ ಗೆ ಸೆಪ್ಟೆಂಬರ್ ಅಂತಾನೆ ಅಲ್ಲವೆ ಅನ್ನೋದು?" +’ಓ ಅದಲಪ್ಪ ನಾನು ಕೇಳಿದ್ದು, ಈಗ ನೋಡಿ ವಿದೇಶಿಯರೆಲ್ಲ, ಕ್ರಿಸ್ಚಿಯನ್ ಕ್ಯಾಲೆಂಡರ್ ಅನುಸರಿಸುತ್ತಾರೆ, ನಮ್ಮವರು ಆ ದಿನಾಂಕ ಅನುಸರಿಸೋಲ್ಲ, ಇವರು ಬೇರೆ ಕ್ಯಾಲೆಂಡರ್ ಅಲ್ವೇ ?" +’ಅದಾ , ಪಂಚಾಂಗ ಅನ್ನುತ್ತಾರೆ ಅಷ್ಟೆ’ +’ನೋಡು ಅದೇ ಪಂಚಾಂಗದ ಪ್ರಕಾರ ಇದ್ಯಾವ ತಿಂಗಳು’ +’ಈಗ ಶ್ರಾವಣ ನಡೀತಿರಬೇಕಲ್ಲವೆ ?" +’ಅನುಮಾನ ಏಕೆ ಅದೇ ನಡಿಯುತ್ತ ಇರೋದು, ಹಾಗೆ ಈ ತಿಂಗಳು ಪೂರ್ತ ವ್ರತಗಳು ಪೂಜೆಗಳು ಇದ್ದೇ ಇರುತ್ತವಲ್ಲಪ್ಪ , ಹಾಗಾಗಿ ಮನೇ ಸ್ವಲ್ಪ ಸ್ವಚ್ಚವಾಗಿರಲಿ ಅಂತ’ +’ಅದೇನೊ ಅಪ್ಪ ನೀನು ಹೇಳೋದು, ಹಬ್ಬ ಹರಿದಿನ ಅಂದರೆ ಮನೆಯಲ್ಲಿ ಗಲೀಜು ಇದ್ದಷ್ಟು ಹೆಚ್ಚು ಹೆಚ್ಚು ಶ್ರೇಷ್ಠ ಅಲ್ಲವೇ ?" ಅಂದೆ ತಮಾಷಿಗೆ +’ಹಾಗೆ ಅಂದುಕೋ , ನಾನೇನೊ ಕ್ಲೀನ್ ಮಾಡ್ತಾ ಕೂತೆ, ನಿನ್ನೆ ಎಲ್ಲ ಮನೆಯಲ್ಲಿ ಒಂದು ವ್ರತದ ಪ್ರಹಸನ ಆಯ್ತಲ್ಲಪ್ಪ’ +’ವ್ರತವೇ ನೀನು ಅದ್ಯಾವ ವ್ರತ ಮಾಡ್ತೀಯಪ್ಪ ನನಗೆ ತಿಳಿಯದೇ " +'ಅಯ್ಯೋ ನಿನ್ನೆ ಮಂಗಳಗೌರಿ ವ್ರತ ಅಲ್ಲವೇನಪ್ಪ , ಅತ್ತೆ ಸೊಸೆ ಸೇರಿ ವ್ರತಮಾಡಿದರು , ನಾನು ಅವರಿಗೆ ಸಹಾಯಕ ’ +’ಹೌದೆ ಪರವಾಗಿಲ್ಲಪ್ಪ ನೀನು ರಿಟೈರ್ಡ್ ಆದಮೇಲೆ ಒಳ್ಳೆ ಚುರುಕಾಗಿಬಿಟ್ಟೆ, ಹೇಗೆ ನಡೀತು ಹೇಳು ನಿನ್ನೆಯ ವ್ರತ’ +’ಅಯ್ಯೋ ಏಕೆ ಹೇಳ್ತಿ ಅದನ್ನು ವಿವರವಾಗಿಯೆ ಹೇಳಬೇಕು’ +ವ್ರತದ ವಿವರ : +ಅತ್ತೆ ಇಲ್ಲಿಯವಳೆ ಅಪ್ಪಟ ಬೆಂಗಳೂರಿನವಳು, ಸೊಸೆಯಾದರು ಇಲ್ಲಿಯವಳೆ ಆದರು ಹುಟ್ಟಿನಿಂದ ನ್ಯೂಜಿಲೆಂಡಿನಲ್ಲಿ ಬೆಳೆದವಳು ಇಲ್ಲಿಯ ಸಂಪ್ರದಾಯಗಳ ವಿಷಯದಲ್ಲಿ ಅವಳ ಜ್ಞಾನ ಅಷ್ಟಕ್ಕೆ ಅಷ್ಟೆ. +’ಏನಮ್ಮ ನಾಳೆ ಮಂಗಳಗೌರಿ ವ್ರತವಿದೆ, ನೀನು ಬೆಳಗ್ಗೆ ಸ್ವಲ್ಪ ಬೇಗ ಎದ್ದು ಮಾಡಬೇಕಮ್ಮ, ’ +’ವಾಟ್ ಅತ್ತೆ, ಮಂಗಲಗೋರಿ, ಯಾ ಯಾ ಮಮ್ಮಿ ವಾಸ್ ಟೆಲಿಂಗ್ ’ +ಅವರಿಬ್ಬನ ನಡುವೆ ಇದೇ ತಾಪತ್ರಯ, +ಅತ್ತೆಗೆ ಇಂಗ್ಲೀಶ್ ಸ್ವಲ್ಪ ಅರ್ಥವಾದರು, ಕನ್ನಡ ಬಿಟ್ಟು ಬೇರೆ ಬಾಷೆ ಮಾತನಾಡಲು ಬರದು, +ಸೊಸೆಗೆ ಕನ್ನಡ ಸ್ವಲ್ಪ ಅರ್ಥವಾದರು ಎಂದಿಗೂ ಕನ್ನಡ ಮಾತನಾಡಳು . +’ಹೌದಮ್ಮ ನಾಳೆ ಸ್ವಲ್ಪ ನಾಲ್ಕಕ್ಕೆ ಅಲಾರಮ್ ಇಟ್ಟುಕೊಂಡು ಎದ್ದುಬಿಡು, ನೀನು ಹೊರಡುವ ಮುಂಚೆ ಪೂಜೆ ಮುಗಿಸಿ ಆಫೀಸಿಗೆ ಹೋಗುವೆಯಂತೆ’ +’ಯಾ ಯಾ , ಅತ್ತೆ, ಬಟ್ ಯು ನೋ, ಅಮ್ ನಾಟ್ ಅವೇರ್‍ ಆಫ್ ಆಲ್ ದೀಸ್ ಫಾರ್ಮಾಲಿಟೀಸ್ ಯೂ ನೋ, ಯೂ ಹಾವ್ ಟೂ ಹೆಲ್ಪ್ , ..’ +’ಹಾಗೆ ಆಗಲಮ್ಮ , ನೀನು ವ್ರತಮಾಡುತ್ತೀನಿ ಅಂತ ಒಪ್ಪಿಕೊಳ್ಳುವುದು ಹೆಚ್ಚೊ ನಾನು ಸಹಾಯ ಮಾಡುವುದು ಹೆಚ್ಚೋ’ +ಪಾಪ ಆತ್ತೆ ಇಂದಿರಾರವರು, ದಿನವೆಲ್ಲ ಮಾರ್ಕೆಟ್ , ಮಠ ಅಂತ ಸುತ್ತಿದರು, ಪಾಪ ಅವರು ಮಂಗಳಗೌರಿ ಮಾಡುವಾಗಲು ಅಷ್ಟು ಶ್ರಮ ಪಟ್ಟಿರಲಿಲ್ಲ, ಪೂಜೆಗೆ ಬೇಕಾದ ಹೂಗಳು, ಹಣ್ಣುಗಳು, ಮಾವಿನಸೊಪ್ಪು , ಹರಿಸಿನ, ಕುಂಕುಮ , ಹರಿಸಿನ ದಾರ ಎಂದು ದಿನಪೂರ್ತಿ ಓಡಾಡಿ ಸುಸ್ತಾದರು. ಪಾಪ ಶಿವರಾಜನು ಅಷ್ಟೆ ಪತ್ನಿಗೆ ಸಹಾಯಮಾಡುವದೇನು, ಅಟ್ಟದ ಮೇಲಿದ್ದ ದೇವರ ಮಂಟಪ ಇಳಿಸುವದೇನು, ಸ್ಟೂಲಿಗೆ ಬಾಳೆಕಂದು, ಮಾವಿನಸೊಪ್ಪು ಕಟ್ಟುವದೇನು ಒಂದೇ ಎರಡೇ ಕೆಲಸ ಎಲ್ಲವನ್ನು ಮಾಡುವದರಲ್ಲಿ, ತಮ್ಮ ಸೊಸೆ ಮಂಗಳಗೌರಿಗೆ ವ್ರತಮಾಡಲು ಎಲ್ಲ ಸಿದ್ದಪಡಿಸುವದರಲ್ಲಿ ಇಬ್ಬರೂ ಸುಸ್ತು +ಬೆಳಗ್ಗೆ ಗಂಡ ಹೆಂಡತಿ ಎದ್ದು ಸ್ನಾನ ಮುಗಿಸಿ, ಕಾದಿದ್ದೆ ಬಂತು ಸೊಸೆ ಎಂದಿನಂತೆ ಆರುವರೆಗೆ ಎದ್ದು ಬಂದಳು, ಹೊರಗೆ ಎಲ್ಲ ಸಿದ್ದವಿರುವದನ್ನು ಕಾಣುತ್ತ +’ಓ… ಸಾರಿ ಅತ್ತೆ, ಜಸ್ಟ್ ಐ ಹಾವ್ ಫರ್ ಗಾಟನ್ ಟೋ ಕೀಪ್ ಅಲಾರಮ್ , ಎನಿ ಹೌ ಡೋಂಟ್ ವರಿ , ಐ ವಿಲ್ ಮಾನೇಜ್ , ಜಸ್ಟ್ ಐ ವಿಲ್ ಪ್ರಿಪೇರ್ ಅಂಡ ಕಂ ’ +ಅತ್ತೆ ಸೋತು ನುಡಿದರು, +’ಆಯಿತಮ್ಮ, ತಲೆಗೆ ಸ್ನಾನ ಮಾಡು ಹಾಗೆ ಬರುವಾಗ, ಮದುವೆಯ ಸೀರೆ ಹಸಿರಿನದು ಇದೆಯಲ್ಲ, ಅದನ್ನು ಲಕ್ಷಣವಾಗಿ ಉಟ್ಟು ಬಾ’ +’ನೋ ಅತ್ತೆ, ಇಟ್ ಇಸ್ ಇಂಪಾಸಿಬಲ್, ಇನ್ ದಿಸ್ ಹರಿ, ಐ ಕಾಂಟ್ ವಿಯರ್ ಸ್ಯಾರಿ ಯು ನೊ, ’ ಎಂದಾಗ ಅತ್ತೆ ಕಣ್ಣು ಕಣ್ಣು ಬಿಟ್ಟರು . +ಹೇಗೋ ಸೊಸೆಮುದ್ದು ತಯಾರಾಗಿ ಬರುವದರಲ್ಲಿ, ತಾವು ನೈವೈದ್ಯಕ್ಕೆ ಎಂದು ಸಜ್ಜಿಗೆ, ಅನ್ನ ತೊವ್ವೆ, ಕೋಸಂಬರಿ, ಒಂದಿಷ್ಟು ಶಾವಿಗೆ ಪಾಯಸ ಎಲ್ಲವನ್ನು ಸಿದ್ದ ಮಾಡಿಟ್ಟರು +ಸೊಸೆ ಮಾತ್ರ ಲಕ್ಷಣವಾಗಿ ನೈಟಿ ಧರಿಸಿ ಸಿದ್ದವಾಗಿದ್ದಳು. ಅತ್ತೆಯೆ ಬಲವಂತಮಾಡಿ ಒಳಗೆ ಎತ್ತಿಟ್ಟಿದ್ದ ತಾಳಿ ಹಾಗು ಸರವನ್ನು ಅವಳ ಕುತ್ತಿಗೆಗೆ ಹಾಕಿದರು +ಅಲ್ಲಿ ಸಿದ್ದವಿದ್ದ ಮಂಟಪ ಎಲ್ಲವನ್ನು ನೋಡುತ್ತ, ಸೊಸೆ +’ಅತ್ತೆ ಸಾರಿ, ವೇರಿ ಇಸ್ ದ ಚೇರ್, ಐ ಕಾಂಟ್ ಸಿಟ್ ಆನ್ ಫ್ಲೋರ್ ,ಯೋ ನೋ, ಐ ಅಮ್ ನಾಟ್ ಫೆಮಿಲಿಯರ್ ಟೊ ದಟ್ , ’ ಎನ್ನುತ್ತ ಹೊರಗೆ ಹೋಗಿ ಅಲ್ಲಿದ್ದ ಒಂದು ಪ್ಲಾಸ್ಟಿಕ್ಕಿನ ಚೇರನ್ನು ಎಳೆದು ತಂದಳು, ಅತ್ತೆ ಪಾಪ ಎದುರಿಗೆ ಲಕ್ಷಣವಾಗಿ ಚಾಪೆಯ ಮೇಲೆ ಕುಳಿತರು +ಸರಿ ವ್ರತ ಪ್ರಾರಂಭ, +ಮಾವ ಪುಸ್ತಕ ಓದುತ್ತ, ಮಂತ್ರ ಹೇಳುವುದು, ಅತ್ತೆ ಹೀಗೆ ಮಾಡು ಹಾಗೆ ಮಾಡು ಎನ್ನುತ್ತ, ಸೊಸೆಯ ಕೈಲಿ ಪೂಜೆ ಮಾಡಿಸುವುದರಲ್ಲಿ ಸಾಕಷ್ಟು ಸುಸ್ತಾಗಿದ್ದರು, ಪೂಜೆ ಮುಗಿಯಿತು ಅನ್ನುವಾಗ, ಸೊಸೆ +’ಓ ಇಟ್ ಇಸ್ ಸೋ ಸಿಂಪಲ್ , ಐ ವಿಲ್ ಟಕೆ ಅ ವೀಡಿಯೋ ಆಪ್ ದೀಸ್ ಮಂಗಲ್ ಗೋರಿ, ಸೆಂಡ್ ಮೈ ಮಾಮ್, ಇನ್ ವಾಟ್ಸಪ್ ’ ಅಂತ ಖುಷಿ ಪಟ್ಟಳು. +ಅತ್ತೆ ಹೂವನ್ನೆತ್ತಿ ಸೊಸೆಗೆ ಕೊಡುವುದು, ಸೊಸೆ ಅದನ್ನು ದೇವರ ಪೋಟೋದ ಮೇಲೆ ಎಸೆಯುವುದು, ಅತ್ತೆ ಮರಿ ಪೂಜಾರಿಯಂತೆ ಮಂಗಳಾರತಿಗೆ ಸಿದ್ದ ಮಾಡಿಕೊಟ್ಟರೆ ಸೊಸೆ, ಅದನ್ನು ದೇವರ ಮುಂದೆ ತೋರಿಸಿವುದು ಹೀಗೆ ಸಾಗಿತ್ತು ಅವರ ಪೂಜೆ. +ಕೈಗೆ ಹರಿಸಿನ ಹಚ್ಚಿದ ದಾರ ಕಟ್ಟಿಕೊಂಡರು. +ಅಂತೂ ಇಂತೂ ಪೂಜೆ ಮುಗಿಯಿತು ಅಂತ ಅತ್ತೆ ಉಸಿರುಬಿಟ್ಟರೆ, ಸೊಸೆ +’ಸೋ ಎವ್ವೆರಿ ಥಿಂಗ್ ಓವರ್ ಅತ್ತೆ, ’ ಎಂದು ಕೇಳುತ್ತ ಎದ್ದು ನಿಂತಳು. +ಅತ್ತೆ ನೋಡುತ್ತಿರುವಂತೆ ಕೈಗೆ ಕಟ್ಟಿದ ದಾರವನ್ನು ಬಿಚ್ಚಲು ನೋಡಿ ಆಗದಿದ್ದಾಗ ಅಲ್ಲೆ ಇದ್ದ ಚಾಕುವಿನಿಂದ ಪಟ್ ಎಂದು ಕತ್ತರಿಸಿದಳು, ಅತ್ತೆ ಇದೇನು ಎಂದು ನೋಡುತ್ತಿರುವಂತೆ +’ಟೇಕ್ ದಿಸ್ ಅತ್ತೆ, ಕೀಪ್ ಇಟ್ ವಿತ್ ಯೂ’ ಎನ್ನುತ್ತ ನಿಂತಳು +’ಅಯ್ಯೋ ಇದೇನಮ್ಮ ಮಾಡಿದೆ , ಲಕ್ಷಣವಾಗಿ ಪೂಜೆ ಮಾಡಿ , ಮಂಗಳಗೌರಿಯ ವರ ಸಿಗಲಿ ಎಂದು ಕಟ್ಟಿಕೊಂಡಿದ್ದ ದಾರವನ್ನೆಲ್ಲ ಕಿತ್ತು ಹಾಕಿದೆಯಲ್ಲ ’ ಅಂತ ಪ್ರಲಾಪ ಮಾಡುತ್ತಿರುವಂತೆ , ಸೊಸೆ, ಲಕ್ಷಣವಾಗಿ ಕುತ್ತಿಗೆಯಲ್ಲಿದ್ದ, ತಾಳಿ ಸಮೇತ ಇದ್ದ ಎರಡೆಳೆ ಸರವನ್ನು ತೆಗೆದಳು ಅತ್ತೆ ಕೈಗೆ ಹಾಕುತ್ತ +’ಓ ಅತ್ತೆ, ಹೌ ಕೆನ್ ಐ ಗೋ ಟೋ ಆಫೀಸ್, ವಿತ್ ಆಲ್ ದೀಸ್ ಡರ್ಟಿ ಥಿಂಗ್ಸ್, ಅನಿ ಹೌ ಮಂಗಳ ಗೋರಿ ಇಸ್ ಕಂಪ್ಲೀಟೆಡ್ , ಮೈ ಕ್ಯಾಬ್ ಡ್ರೈವರ್ ಕಾಲಿಂಗ್ ಮೀ , ಐ ಹವ್ ಟೊ ಮೂವ್ ’ ಎನ್ನುತ್ತ ರೂಮಿನತ್ತ ಹೊರಟಳು, +ಅತ್ತೆಗೆ ಅರ್ಥವಾಗಿತ್ತು , ಇನ್ನು ಸೊಸೆ ಕೈಗೆ ಸಿಗೋಲ್ಲ, ನಾನು ಹೇಳಿದಂತೆ ಕೇಳೋಲ್ಲ, ಅಂತ ಪಾಪ ಮಾಡಿದ್ದ ಪ್ರಸಾದ ನೈವೈದ್ಯಗಳನ್ನೆಲ್ಲ ಅತ್ತೆ ಮಾವನೆ ತಿನ್ನ ಬೇಕಿತ್ತು. +ಅತ್ತೆಗಂತು ತೀರಾನೆ ಬೇಸರವಾಗಿತ್ತು, ಮಗನಿಗೆ ಒಳ್ಳೆಯದಾಗಲಿ ಎಂದು ಸೊಸೆ ಕೈಲಿ ಮಂಗಳಗೌರಿ ಮಾಡಿಸಿದರೆ, ಆಕೆ ಪೂಜೆ ಮುಗಿಸಿ, ದಾರಿ ಬಿಚ್ಚಿಟ್ಟಿದ್ದು, ತಾಳಿ ತೆಗೆದು ತನ್ನ ಕೈಗೆ ಕೊಟ್ಟಿದ್ದು ಆಕೆಯ ಸಂಪ್ರದಾಯಸ್ಥ ಮನಸನ್ನು ನೋಯಿಸಿತ್ತು, ಆದರೆ ಆಕೆಯ ಮಾತಿಗೆ ಮನಸಿಗೆ ಯಾವ ಬೆಲೆ +***** +ಶಿವರಾಜ್ ಎಲ್ಲವನ್ನು ಹೇಳುತ್ತಿರುವಂತೆ ನನಗೆ ನಗೆ ಉಕ್ಕಿ ಬಂದಿತು, +’ಅಲ್ಲಯ್ಯ, ಈ ರೀತಿ ಬಲವಂತ ಮಾಘಸ್ನಾನ ಏಕೆ ಬೇಕು ಹೇಳು, ಅಲ್ಲ ಅವರೆಲ್ಲ ಈಗಿನ ಕಾಲದವರಪ್ಪ, ಈ ರೀತಿ ಪೂಜೆಯಿಂದ ನಿನಗಾಗಲಿ ನಿನ್ನ ಹೆಂಡತಿಗಾಗಿಲಿ ಏನು ಲಾಭ’ ಎಂದೆ +ಅದಕ್ಕವನು +’ಲಾಭವೇ? ಇದ್ದೆ ಇದೆಯಪ್ಪ, ಸಂಜೆ ನನ್ನ ಹೆಂಡತಿ ಪಾರ್ಕಿಗೆ ವಾಕಿಂಗ್ ಅಂತ ಬಂದಿದ್ದರಲ್ಲ ಅವಳ ಗೆಳೆತಿಯರು, ಕ್ಲಬ್ ಮೆಂಬರ್ಸ್ ಎಲ್ಲರ ಕೈಲಿ ಕೊಚ್ಚಿ ಕೊಂಡಿದ್ದೆ, ಕೊಚ್ಚಿಕೊಂಡಿದ್ದು, ತನ್ನ ಸೊಸೆ ಮಂಗಳಗೌರಿ ಪೂಜೆ ಮಾಡಿದಳು ಅಂತ, ಅವಳು ತಾಳಿ ಬಿಚ್ಚಿಟ್ಟಿದ್ದನ್ನು ಮಾತ್ರ ಅವರ ಕೈಲಿ ಹೇಳದೆ ಬಚ್ಚಿಟ್ಟಳು ಅಂದುಕೋ " ಎಂದು ನಗುತ್ತಿದ್ದ + ಜೊತೆಗೆ ವಾಕಿಂಗ್ ಗೆಳತಿಯರೆಲ್ಲ ಉರಿದು ಕೊಂಡಿದ್ದೆ ಆಯಿತಂತೆ, ಪಾರಿನಿನ್ನಲ್ಲಿ ಬೆಳದ ಸೊಸೆಯಾದರು ಪಾಪ ಇಂದಿರಮ್ಮನ ಸೊಸೆ ಲಕ್ಷಣವಾಗಿ ಮಂಗಳಗೌರಿ ಮಾಡಿದಳು, ಅತ್ತೆಯ ಮಾತಿಗೆ ಎಷ್ಟು ಬೆಲೆ ಕೊಡ್ತಾಳೆ ಅಂತ ಹೊಗಳಿದ್ದೆ ಹೊಗಳಿದ್ದು, ಹಾಗೆ ತಮ್ಮ ತಮ್ಮ ಸೊಸೆಯರನ್ನ ಬೈದುಕೊಂಡರಂತೆ. +ಅಷ್ಟರಲ್ಲಿ ಇಂದಿರಮ್ಮ ಮತ್ತೆ ಒಳಗಿನಿಂದ ಕಾಫಿ ತಂದರು , ತರುತ್ತ +’ಆಯಿತ , ಮತ್ತೆ ಕಂಡವರ ಮುಂದೆ ಅದೇ ಮಂಗಳಗೌರಿನ ಕತೆಯ ಗ್ರಾಮಾಪೋನ್ ಪ್ಲೇಟ್ ಹಾಕಿ ಆಯಿತ ?. ನಿಮಗೆ ನನ್ನ ಮಾನ ತೆಗೆಯೋದು ಅಂದರೆ ಅದೇನು ಸಂತಸವೋ ’ ಎಂದು ರೇಗಿದರು. +ನನ್ನನ್ನು ಕಂಡವರು ಅಂದಿದ್ದು ನನ್ನನ್ನು ಚುಚ್ಚಿತು, ಆದರೇನು ಕಾಫಿ ಬಿಟ್ಟು ಬರಲಾಗುವುದೆ. ಕುಡಿದು ಅಲ್ಲಿಂದ ಹೊರಟೆ . + \ No newline at end of file diff --git a/PanjuMagazine_Data/article_1076.txt b/PanjuMagazine_Data/article_1076.txt new file mode 100644 index 0000000000000000000000000000000000000000..e3ebe5239726fd49c919c6da8a9a47735f8f52b7 --- /dev/null +++ b/PanjuMagazine_Data/article_1076.txt @@ -0,0 +1,8 @@ +ಯೌವನಾವಸ್ಥೆ ಪ್ರಾರಂಭದ ಪೂರ್ವದಲ್ಲೇ ವಿವಿಧ ಭಾವನೆಗಳು ಯುವ ಪೀಳಿಗೆಯ ಮನಸ್ಸಿನಲ್ಲಿ ಉದಯಿಸಿರುತ್ತವೆ, ಆದರೆ ಅವು ರೂಪ ಪಡೆದು ನಿಜವಾದ ಆಕಾರವನ್ನು ಪಡೆಯುವುದು ಬಣ್ಣದ ಬದುಕಿನ ಕಾಲೇಜು ಜೀವನಕ್ಕೆ ಕಾಲಿಟ್ಟ ಆನಂತರ. ಒಂದೊಂದು ರೀತಿಯಲ್ಲಿ ಅವರ ಚಿಂತನೆಯ ಆವಿಷ್ಕಾರದ ರೂಪ ಕೆಲವು ಅವಘಡಗಳು ಸಂಭವಿಸಿ ಉತ್ತಮ ರೀತಿಯ ಚಿಂತನೆಯನ್ನು ಮನಸ್ಸಿನಲ್ಲಿ ಮೂಡಿಸಬಹುದು. ಇಲ್ಲವೇ ಅವು ನಕಾರಾತ್ಮಕ ಚಿಂತನೆಯನ್ನು ಪಡೆದು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲೂ ಪ್ರೇರೇಪಿಸ ಬಹುದು. +ಯುವ ಮನಸ್ಸಿನ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ಅಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಉತ್ತಮ ಮಹತ್ವ ಪೂರ್ಣ ಕೂಡುಗೆ ಬಳುವಳಿಯಾಗಿ ದೊರೆತು, ಈ ನಿಟ್ಟಿನಲ್ಲಿ ಮುಂದಿನ ಭವಿಷ್ಯತ್ತಿನಲ್ಲಿ ತೂಡಗಲು ಅನುವು ಮಾಡಿಕೊಡುತ್ತವೆ. ಎಲ್ಲಾ ಸಕಾರಾತ್ಮಕ ಯುವ ಮನಸ್ಸಿನ ಬೆಳೆವಣಿಗೆಗೆ ಸಾದ್ಯವಾಗುವುದು ಅವರ ಮೇಲೆ ಬೀರುವ ಶಾಲೆ, ಸಮಾಜ, ಸಮುದಾಯ, ಸಮವಯಸ್ಕರ ಗುಂಪು, ಪರಿಸರ ಮತ್ತು ನೆರೆ-ಹೋರೆಯಂತ ಪರಿವರ್ತಕ ಪರಿಸರದಿಂದ ಸಾಧ್ಯ. ವಾಸ್ಥವ ಬದುಕಿನ ಅರಿವಿರದೆ ಪ್ರೀತಿ-ಪ್ರೇಮದ ಮಾಯಾಲೋಕದಲ್ಲಿ ಮುಳುಗಿದರೆ ಅದರಾಚೆಯ ಬದುಕಿನ ಜ್ಞಾನೋದಯವಾದಾಗ ಅದು ಬೇರೆಯ ಲೋಕವನ್ನೇ ಸೇರಿರುತ್ತದೆ. ಇದು ಯುವ ಮನಸ್ಸಿನ ಬೆಳವಣಿಗೆಯ ಪರಿಸರವನ್ನು ಆವಲಂಭಿಸಿದೆ. +ಒಂದೇ ವೇಗದ ಓಟದ ಗತಿಯನ್ನು ಯುವ ಮನಸ್ಸಿನಲ್ಲಿ ಕಾಣಲಾಗದು. ಏಕೆಂದರೆ ಯವ್ವನದ/ಕಿಶೋರಾವಸ್ಥೆಯಲ್ಲಿ ನಿಂತಿರುವ ಮನಸ್ಸು ಚಂಚಲತೆಯ ಬಹುಮುಖಿ ಚಿಂತನೆಗಳನ್ನು ಒಳಗೂಂಡು ನೆಡೆಯುತ್ತಾ ಇರುತ್ತದೆ. ಒಮ್ಮೆ ಆತಿಯಾಗಿ ಕ್ರೀಡೆಯನ್ನು ಇಷ್ಟಪಡುವ ಮನಸ್ಸು ಅದರೊಟ್ಟಿಗೆ ಯಶಸ್ಸಿನ ಮೆಟ್ಟಿಲ ಶಿಖರವೇರುವ ಬಗೆಯ ವಿವಿಧ ಮುಖಗಳನ್ನು ಅರಿಯುವ ಪ್ರಯತ್ನದಲ್ಲಿ ತೂಡಗಿ ಮುಂದುವರಿದು ತನಗೆ ಅರಿವಿಲ್ಲದಂತೆ ದ್ವೇಷ-ಅಸೂಯೆಯಂತ ಗುಣ-ಲಕ್ಷಣಗಳನಗಳನ್ನು ಒಟ್ಟಿಗೆ ಒಡಲೂಳಗೆ ತುಂಬಿಕೂಳ್ಳುತ್ತಾ ಹೋಗುವುದು. ಇದು ಯಾವ ಸಂದರ್ಭದಲ್ಲಿ ಸ್ಪೊಟಿಸಿ ಬಹುದೊಡ್ಡ ಊಹಿಸಲು ಆಸಾಧ್ಯವಾದಗಂತ ಪ್ರಮಾದವನ್ನು ಏಸಗುವುದೆಂದು ಹೇಳಲುಬಾರದು. ಅದು ಪ್ರತಿಸ್ಪರ್ಧಿಯ ಕೂಲೆಯಲ್ಲೋ, ತನ್ನನ್ನು ತಾನೇ ಅಂತ್ಯಗೋಳಿಸಿ ಕೋಳ್ಳುವುದರಲ್ಲೋ ಕೊನೆಗಾಣುತ್ತದೆ. +ಕಾಲೇಜು ಜೀವನದಲ್ಲಿ ಪ್ರಾರಭದಲ್ಲಿ ಯುವ ಮನಸ್ಸಿಗೆ ಸಿಗುವುದು ಪ್ರೀತಿಯ ಬಂಗಾರದ ಜೀವನ. ಆದರೆ ವ್ಯಾಸಂಗ ಪ್ರವೃತ್ತಿಯ ಬಿಡುಗಡೆಯ ಬೀಳ್ಕೋಡುಗೆಯ ಆನಂತರ ಉಂಟಾಗುವ ಮನಸ್ಸು ಮೊದಲಿನಂತೆ ಇರುವುದಿಲ್ಲ. ವ್ಯಾಸಂಗ ಜೀವನದ ವಿವಿಧ ರಸಕ್ಷಣಗಳನ್ನು ಸ್ವಗತದ ಸವಿಯನ್ನು ಸವಿಯುತ್ತಾ, ಅದರೂಟ್ಟಿಗೆ ತಪ್ಪುಗಳ ಬಗೆಗೆ ವಿವೇಚನೆ ಹೊಂದುತ್ತದೆ. ತಾನು ಕಳೆದ ಕ್ಷಣಗಳು ಆ ಕ್ಷಣಕ್ಕೆ ಅಷ್ಟೆ ಸೀಮಿತ, ಈ ದಿನಗಳಿಗೆ ಅವು ದೂರದ ಬೆಟ್ಟಗಳೇ ಸರಿ ಎಂದು ಎಷ್ಟು ಬಾರಿ ಮನಸ್ಸು ಒತ್ತಿ ಹೇಳಿದರೂ ಅದನ್ನು ಒಪ್ಪಿಕೂಳ್ಳುವ ಸ್ಥಿತಿಯಲ್ಲಿ ಮನಸ್ಸು ಸಿದ್ದವಿರುವುದಿಲ್ಲ. ಕೂನೆಗೆ ಇದು ಆರಿವಾಗುವುದು ಯಶಸ್ಸಿನಲ್ಲಿ ಸೋಲುಂಡು, ಸೋಲಿಗೆ ಕಾರಣ ಹುಡುಕ ಹೊರಟಾಗ ಮಾತ್ರ. +ಯುವ ಮನಸ್ಸು ಎಷ್ಟೇ ಬದಲಾವಣೆ ವಿರುದ್ದವಾಗಿ ತನ್ನನ್ನು ತೆರೆದು ಕೂಂಡರೂ ಸಹ: ಪರಿಸ್ಥಿಯ ಕೈಗೊಂಬೆಯ ಕೂಸಾದಾಗ ಖಂಡಿತ ಸಾಧ್ಯವಿಲ್ಲ. ಏಕೆಂದರೆ ಪರಿಸ್ಥಿತಿಯ ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿಯಾಗಿ ಬದಲಾವಣೆಯ ಬಹುಮುಖ ಪ್ರಕ್ರಿಯೆಗೆ ಅವಕಾಶವಿರುವಾಗ ಬದಲಾವಣೆಯ ಸ್ಥಿರತೆಗೆ ಅವಕಾಶವೆಲ್ಲಿ…? ಇದೇ ಕಾರಣಕ್ಕೆ ಒಂದು ಸ್ಥಿರವಾದ ನೆಲೆಯನ್ನು ಈ ಹಂತದಲ್ಲಿ ಹೊಂದಿರಲು ಸಾಧ್ಯವಿಲ್ಲ. ಜೀವನವೆಂದರೆ ಬಣ್ಣದಲೋಕದ ಸಿನೆಮಾ ಕತೆಯೊಂದರ ವಿವಿಧ ಕಲ್ಪನೆಯ ಬದುಕೆಂದು ತಿಳಿದಿರುವಾಗ, ಇದರಾಚೆ ನಿಂತು ಯೋಚಿಸುವ ಔದಾರ್ಯವೆಲ್ಲಿ ತೋರಿಬರಬೇಕು..| ಒಟ್ಟಾರೆಯಾಗಿ "ಅತ್ತದರಿ, ಇತ್ತ ಪುಲಿ" ಎಂಬ ರೀತಿಯಲ್ಲಿ ಡೂಲಾಯಾನ ಮಾನವಾಗಿ ಜೀವಿಸುವ ಸ್ಥಿತಿ ನಮ್ಮದಾಗಿರುತ್ತದೆ. +ವಿದ್ಯಾರ್ಥಿ ಜೀವನದಲ್ಲಿ ಮೋಜು-ಮಸ್ತಿ ಅನುಭವಗಳು ಸಹಜವಾಗೆ ದೊರೆಯುವಂತವುಗಳೇ ಆದರೆ ವಿದ್ಯಾರ್ಥಿ ಜೀವನದ ಆಚೆಯ ಬದುಕನ್ನು ಕಲ್ಪಿಸಿಕೊಂಡಾಗ ಬೇರೆಯದೇ ಅಗಿದೆ. ಈ ಮನಸ್ಥಿತಿಯಿಂದ ದೂರ ಬರಲು ಉತ್ತಮ ಹವ್ಯಾಸ, ಒಳ್ಳೆಯ ಕೃತಿಗಳ ಓದು, ಆದರ್ಶ ಪುರುಷರ ಅನುಕರಣೆ, ಗುರುಗಳ ಮಾರ್ಗದರ್ಶನಗಳಂತ ಗುಣಗಳನ್ನು ಆಳವಡಿಸಿ ಕೂಳ್ಳುವುದರಿಂದ ಜೀವನದ ಬದಲಾವಣೆ ಮಾಡಿಕೂಂಡು ಸಕಾತ್ಮಕ ಮನಸ್ಥಿತಿಯನ್ನು ಪಡೆಯಬಹುದು. ಮನಸ್ಸನ್ನು ನಿಯಂತರಿಸುವ, ಹಾಗೆ ಅರಿಬಿಡುವ ಎರೆಡು ಪ್ರಕ್ರಿಯೆಯೂ ನಮ್ಮ ನಿಯಂತ್ರಣದಲ್ಲೇ ಇದೆ. ಈಗಿದ್ದೂ ಉನ್ನತ ಸಾಧನೆಮಾಡುವ ದಾರಿಯನ್ನು ಯಾರೇನು ಸೂಚಿಸಿ ತಿಳಿಸಬೇಕಾಗಿಲ್ಲ. ಹಾಗಾದರೆ "ವಿದ್ಯಾರ್ಥಿಗಳ ಜೀವನ ಬಂಗಾರದಂತ ಜೀವನ " ಎಂಬ ಮಾತನ್ನು ನಿಜವಾಗಿಸುವತ್ತ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಸಾಗೋಣ. ಕನಿಷ್ಠ ಪಕ್ಷ ಗಾಂಧಿ, ಆಂಬೇಡ್ಕರ್, ವಿವೇಕಾನಂದರಂತೆ ಆಗುವುದಾದರು ಬೇಡ, ಅವರ ಆದರ್ಶ ಪರಿಪಾಲನೆಯೊಂದಿಗೆ ಅವರ ಮಟ್ಟಕ್ಕೆ ಬೆಳೆಯಲು ಮನಸ್ಸು ಮಾಡೊಣ. ವಿದ್ಯಾರ್ಥಿ ಜೀವನವನ್ನು ಯಶಸ್ವಿಯಾಗಿ ಉತ್ತಮ ರೀತಿಯಲ್ಲಿ ಮುಗಿಸಲು ಮುಂದಾಗೂಣ….. +-ವಸಂತ ಬಿ. ಈಶ್ವರಗೆರೆ. + \ No newline at end of file diff --git a/PanjuMagazine_Data/article_1077.txt b/PanjuMagazine_Data/article_1077.txt new file mode 100644 index 0000000000000000000000000000000000000000..88c2253d44dffc65877d4c8a3b15a2202e790252 --- /dev/null +++ b/PanjuMagazine_Data/article_1077.txt @@ -0,0 +1,65 @@ +ಪ್ರಶ್ನೆಗಳು: +೧. ಪರಮ್ – ೧೦೦೦೦ ಎಂಬ ಸೂಪರ್ ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ ಯಾವುದು? +೨. ವನಮಹೋತ್ಸವವನ್ನು ಆರಂಭಿಸಿದವರು ಯಾರು? +೩. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು? +೪. ಗೊರುಚ ಇದು ಯಾರ ಕಾವ್ಯನಾಮವಾಗಿದೆ? +೫. ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್‌ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ? +೬. ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ? +೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು? +೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ ಅಂಕಿತನಾಮ ವಾಗಿದೆ? +೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು? +೧೦. ಪೊಲಾರ್ ಪ್ರಶಸ್ತಿ ವಿಜೇತರಾದ ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರು? +೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು? +೧೨. ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು? +೧೩. ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಯಾರು? +೧೪. ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು? +೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು? +೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು? +೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು? +೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು? +೧೯. ನಾಟಕರತ್ನ ಬಿರುದು ಹೊಂದಿದ ಕರ್ನಾಟಕದ ಹಿರಿಯ ರಂಗಕರ್ಮಿ ಯಾರು? +೨೦. ಜಗತ್ತಿನ ಅತ್ಯಂತ ಚಿಕ್ಕ ಖಂಡ ಯಾವುದು? +೨೧. ಸಾಪೇಕ್ಷತಾವಾದವನ್ನು ಮಂಡಿಸಿದ ವಿಜ್ಞಾನಿ ಯಾರು? +೨೨. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರು? +೨೩. ಸತ್ಯಾಶ್ರಯ ಎಂದು ಬಿರುದು ಹೊಂದಿದ್ದ ಚಾಲುಕ್ಯರ ದೊರೆ ಯಾರು? +೨೪. ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ ಸ್ಥಾಪಿಸಿದ ವರ್ಷ ಯಾವುದು? +೨೫. ನೈಲ್ ನದಿಯ ಕೊಡುಗೆ ಎಂದು ಯಾವ ದೇಶವನ್ನು ಕರೆಯುತ್ತಾರೆ? +೨೬. ಭಾರತಕ್ಕೆ ಮೊದಲು ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು? +೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು? +೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು? +೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆ ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು? +೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ. +ಈ ವಾರದ ಪ್ರಸಿದ್ಧ ದಿನಾಚರಣೆ +ನವೆಂಬರ್ – ೨೬ ಭಾರತ ಸಂವಿಧಾನ ದಿನ +ಉತ್ತರಗಳು: +೧. ಭಾರತ +೨. ಡಾ|| ಕೆ.ಎಂ.ಮುನಿಶ +೩. ಚಾಮರಾಜನಗರ +೪. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ +೫. ಬೆಂಗಳೂರು +೬. ಹಿಮಾಚಲ ಪ್ರದೇಶ +೭. ಕ್ಯೂಬಾ +೮. ಸೊನಲಿಗ ಸಿದ್ಧರಾಮ +೯. ೧೯೬೩ +೧೦. ವಾದ್ಯ ಸಂಗೀತ +೧೧. ಶ್ರೀ ಕೃಷ್ಣದೇವರಾಯ +೧೨. ಲೋಲಕ +೧೩. ಕುವೆಂಪು +೧೪. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ +೧೫. ಜವಹರಲಾಲ್ ನೆಹರು +೧೬. ಕೆಂಪು ರಂಜಕ +೧೭. ತಿಟ್ಟೆ ಕೃಷ್ಣಯ್ಯಂಗಾರ್ +೧೮. ನೇಫಾ +೧೯. ಗುಬ್ಬಿ ವೀರಣ್ಣ +೨೦. ಅಂಟಾರ್ಟಿಕಾ +೨೧. ಆಲ್ಬರ್ಟ್ ಐನ್ ಸ್ಟೀನ್ +೨೨. ಮೇಘಾಲಯ +೨೩. ಕೀರ್ತಿವರ್ಮ +೨೪. ೧೯೭೫ +೨೫. ಈಜಿಪ್ಟ್ +೨೬. ಬಾಬರ್ +೨೭. ವಿಕ್ರಮಾದಿತ್ಯ +೨೮. ಎಂ.ಕೆ.ಗಾಂಧಿ +೨೯. ೧೯೫೭ +೩೦. ಲಾಲ್ ಲಜಪತ್ ರಾಯ್ +***** \ No newline at end of file diff --git a/PanjuMagazine_Data/article_1078.txt b/PanjuMagazine_Data/article_1078.txt new file mode 100644 index 0000000000000000000000000000000000000000..7e0c88035bf9e6a5d997f90f2de95491d7581769 --- /dev/null +++ b/PanjuMagazine_Data/article_1078.txt @@ -0,0 +1,448 @@ +ಗಝಲ್… +ಹುಡುಕುತ್ತಾ ಹೊರಟ ನನಗೆ ಕಳೆದುಕೊಂಡಷ್ಟು ಸಿಕ್ಕಿತು ಸಖಾ.. +ಬಯಸುತ್ತಾ ಹೊರಟ ನನಗೆ ಬಯಸಲಾರದಷ್ಟು ದಕ್ಕಿತು ಸಖಾ… +ನಿನ್ನ ಗುಟ್ಟುಗಳೆಲ್ಲಾ ನನ್ನ ಪಿಸುದ್ವನಿಯಲಿ ರಟ್ಟಾದವು… +ಮೆರೆದು ತುಳುಕಿದ ಒಂದೆರಡು ಹನಿ ಜೀವದ ಕೊನೆ ಹೊಕ್ಕಿತು ಸಖಾ… +ನಿನ್ನ ಬಾಹುವಿನ ಮುದ ಬಂಧಿಸಿದೆ ಬಿಡದೆ ನನ್ನ ತಾರುಣ್ಯ… +ತಾಜಮಹಲಿನ ಗೋರಿ ಇದ ಬಯಸಿ ಬಿಕ್ಕಿತು ಸಖಾ… +ಯಮುನೆಯಲ್ಲಾ ಬಸಿದು ತಂದೆ ಬೊಗಸೆಯಲಿ ನನ್ನ ಕಣ್ಣ ಭಾವಕ್ಕೆ… +ನನ್ನೆದೆಯ ಗಂಧ ನಿನ್ನ ಹುಮ್ಮಸ್ಸಿನ ಹೂಂ ಗುಟ್ಟುವಿಕೆಗೆ ಸೊಕ್ಕಿತು ಸಖಾ… +ಬಡಿದ ಬಾಗಿಲು ತೆರೆಯಲಿಲ್ಲ ಮರಳಿ ಬಂದವು ಶಬ್ದಗಳು.. +ನಿನ್ನ ಬಿಸಿಯುಸಿರು ತಾಕಿದ ಕಿವಿಗಳಿಗೆ ಅರ್ಥಗಳ ಗೇಯತೆ ಮಿಕ್ಕಿತು ಸಖಾ…. +…..ಬೀ +ಬಸಿರು…. +ಆಗಾಗ ನಾನು +ಬಸಿರು ಕಟ್ಟಿಕೊಳ್ಳುತ್ತೇನೆ; +ಈ ನನ್ನ ಪುಟ್ಟ ಒಡಲಲ್ಲಿ +ಬೆಟ್ಟದಂತಹ ಕನಸುಗಳ +ಬೆಚ್ಚನೆ ಕಾಪಿಟ್ಟುಕೊಳ್ಳುತ್ತೇನೆ… +ಬೀಜ ಮೊಳಕೆಯಾಗುತ್ತಾ, +ಸಸಿಯಾಗುತ್ತಾ, +ಹೂ-ಕಾಯಿಯಾಗುತ್ತಾ, +ಇಂಚಿಂಚೇ ಬೆಳೆಯುತ್ತಾ, +ನನ್ನಂತರಂಗವೂ ಹಿಗ್ಗುತ್ತಾ, +ಹೇಳಿಕೊಳ್ಳಲಾಗದ ತುಡಿತ…, +ಒಳಗೊಳಗೇ ಹಿತಕರ ನೋವು… +ಇನ್ನೂ ಹಿಡಿದಿಟ್ಟುಕೊಳ್ಳಲಾಗದೆ +ಒಂದು ಜೀವಂತ ಗಳಿಗೆಯಲಿ +ಹುಳುವು ಚಿಟ್ಟೆಯಾಗಿ +ಬಾನಿಗೆ ಚಿಮ್ಮಿ +ಬಸಿರು ಹಸಿರಾಗುತ್ತದೆ… +ಒಡಲ ಕಾವು ಇಳಿದು +ಮತ್ತೆ ಹೊಸ ಬಸಿರಿಗೆ +ಸಿದ್ಧನಾಗುತ್ತೇನೆ.. +ಎದೆಯ ನೋವುಗಳೆಲ್ಲವ +ಬಯಲಿಗೆ ತೂರಿ +ನಾನು ಕನಸುಗಳನ್ನೇ ಬೆಳೆಯುತ್ತೇನೆ +ಅವುಗಳನ್ನೇ ಉಸಿರಾಡುತ್ತೇನೆ… +-ಸಚಿನ್ ಅಂಕೋಲ… + + + + +ಅವಳು +ಬಿಕೋ ಎನ್ನುತ್ತದೆ ಮನೆ +ಅವಳಿಲ್ಲದೊಡೆ +ಸ್ಮಶಾನವದು ಬೇರೆಲ್ಲೂ ಇಲ್ಲಾ +ಇಲ್ಲೇ ಎನಿಸುತ್ತದೆ ನರಕ! +ಅವಳು ಮೌನಿಯಾದೊಡೆ +ನಮಗೆ ಬಾಯಿಲ್ಲ +ಅವಳಿಲ್ಲದೆ ಎನೂ ಇಲ್ಲ +ಲಾಲನೆ ಪಾಲನೆ ಪೋಷಣೆ… +ಖುಷಿಯಿದ್ದಾಗ ತಿಳಿಯದು +ಅವಶ್ಯಕತೆ ಅನಿವಾರ್ಯತೆ… +ಅವಳೋಮ್ಮೆ ಮಲಗಲಿ +ಜ್ವರವೆಂದು, ತಲೆನೋವೆಂದು! +ತಿಳಿಯುವುದಾಗ ಅವಳ ಕಾರ್ಯಕ್ಷಮತೆ…. +ಮಧುರ ಮಾತುಗಳು +ಮನೆ ಸೇರಿದೊಡನೆ ಊಟೋಪಚಾರ +ಮನೆಯ ಮೂಲೆ ಮೂಲೆ +ಅವಳದ್ದೇ ಕಾರುಬಾರು.. +ಗಂಡಸರದ್ದೇನಿದೆ +ಕೆಲವರದ್ದು ಬರೀ ಕಾರು- ಬಾರು .. +ನೋವೆಂದು ಅಳಳು +ಸುಸ್ತೆಂದು ಮಲಗಳು +ಅವಳಿಗಾಗಿ ಎಂದೆಂದೂ.. +ಬೇಸರ ಬರುವುದವಳಿಗೆ ಇಂದು +ಮಗ ಸೋತಾಗ.. +ಗಂಡ ಸುಸ್ತೆಂದಾಗ… +ಅವಳಿಗಾಗಿ ಎನಿಲ್ಲ +ಪರಿವಾರವೇ ಎಲ್ಲಾ…. +ಹೊಸ ರುಚಿ,ಮಡಿಲ ಪ್ರೀತಿ +ಸಂಸಾರ – ಸಾಗರ +ಅವಳಿಗದೋ ಸ್ವರ್ಗ.. +ಮನಸ್ಪೂರ್ತಿ ಒಮ್ಮೆಯಾದರು ಪ್ರೀತಿಸಿ +ಅವಳಿಗದೇ ವೈಭೋಗ… +ಬೇರೆ ಯಾರಲ್ಲ ಅವಳು +ಅಮ್ಮ….. +ಪ್ರತಿಯೊಂದು ಮನೆಯ, +ಪ್ರೀತಿಯ ಅಮ್ಮ…. +-ಗಾಯತ್ರಿ ಭಟ್ + + + + +ನೇಪಥ್ಯ +ಹುಳಿ ಮಜ್ಜಿಗೆ ಬೆರೆಸಿದ ಬದನೆ ಗೊಜ್ಜು , +ನಿಂಬೆ ರಸ ಪಾಕದ ಹಲಸಿನ ಬೀಜದ ಚಟ್ನಿ, +ನೀರು ಸೌತೆಯ ಪಚ್ಚಡಿ, +ಮಾವಿನಕಾಯಿಯ ಪೊಜ್ಜಿ, +ಗಂಜಿಗೆ ನೆಂಚಿಕೊಳ್ಳುವ +ನೀರೂರಿಸುವ ಖಾರ ಖಾದ್ಯಗಳಿಗೆಲ್ಲಾ +ಜೀವ ತುಂಬಿದೊಗ್ಗರಣೆ +ಒಂದು ಹಂತದಲ್ಲಿ… +ಸಂತೆಯಲ್ಲಿ ಬಿಕರಿಗಿಟ್ಟ ಕನಸು! +ನುಣ್ಣಗಿನ ಪುಟ್ಟ ಸಾಸಿವೆಯ ಸಿಡಿತ +ಎಸಳು ಬೆಳ್ಳುಳ್ಳಿಯ ಘಮ ಬೆರೆತ +ದಿಟ, ಸ್ಫುಟ‌ ಪಚ್ಚೆ ಕರಿಬೇವಿನೆಸಳ ಸಂಗಮದೆಣ್ಣೆ +ಹೆಚ್ಚಿಸಿದ ರುಚಿಯ ಭಾರವ ಹೊತ್ತು +ತುರ್ತಿನ ದಾರಿಯಲ್ಲಿ ಹೊರಟವರಿಗೆಲ್ಲಾ +ಗಮ್ಯ ತಿಳಿಯಲೇ ಇಲ್ಲ ! +ಊಟವೇ ಬೇಡವೆಂದವರೂ +ಒಗ್ಗರಣೆಯ ಘಮಕ್ಕೆ ದಡಕ್ಕನೇ ಊಟಕ್ಕೆದ್ದು +ಅಪ್ಪಿ ತಪ್ಪಿ‌ ನಡುವಲ್ಲಿ ಸಿಕ್ಕ +ಬೆಳ್ಳುಳ್ಳಿಯನ್ನೋ, ಬೇವಿನೆಸಳನ್ನೋ +ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕಿಟ್ಟಾಗ +ಸಿಡಿಯುವ ಸಾಸಿವೆಯು ಒಂದು ಕ್ಷಣ +ನಿರುತ್ತರವಾಗಿ ಬಿಡುತ್ತದೆ ಇವರ ಮುಂದೆ! +ಉರಿಗೆ ಸಿಕ್ಕ ನಂತರವೇ ಸಿಡಿಯುವ ಸಾಸಿವೆಗೂ +ಈ ಪರಿಯ ಧ್ಯಾನ ಎಲ್ಲಿಂದ ಬಂತು? +ಅಚ್ಚರಿ ನನಗೆ. +ತಾತ, ಮುತ್ತಾತರಿಂದ ಹಿಡಿದು +ನಮ್ಮ ಪೂರ್ವಿಕರೆಲ್ಲಾ ಮಾಡಿದ ಪೂರ್ವಾಗ್ರಹಪೀಡಿತ +ಜಾಣ್ಮೆಯ ಕೆಲಸ ಇದು! +ಈಗ ಮೊಮ್ಮಗನಾದಿಯಾಗಿ ಬೆಳೆದರು +ರುಚಿ ನೀಡಿ ಅವಿತ ಒಗ್ಗರಣೆ +ಒಂದಿನಿತು ಬೇಸರಿಸಲಿಲ್ಲ +ಬದಲಿಗೆ ತನ್ನ ಬೆಲೆ ನೆಲೆಯ +ತಾನೇ ಭದ್ರಪಡಿಸಿಕೊಂಡಿದೆ… +ಒಗ್ಗರಣೆಗೆ ಕೃತಜ್ಞತೆ ಸೂಚಿಸದೆ +ಕೃತಘ್ನರಾದವರು +ಚೆಟಿಕೆ ಸಾಸಿವೆಯ ಮುಂದೆ +ಇನ್ನು ಕುಬ್ಜರು ಅಷ್ಟೇ…! +-ಸಂಗೀತ ರವಿ ರಾಜ್ + + + + +ಡೊಂಕು ಮನಸಿನ ನಾಯಕರು +ಡೊಂಕು ಮನಸಿನ ನಾಯಕರೆ +ನೀವೇನುಪಕಾರವ ಮಾಡಿದಿರಿ +ಬರಗಾಲವಿರೆ ಅಲ್ಲಿಗೆ ಹೋಗಿ +ಆಶ್ವಾಸನೆ ನೀಡುವಿರಿ +ಬಡವರ ಶ್ವಾಸ ಕಟ್ಟಿಸಿ ನೀವು +ಹಣವನು ಏಸು ಎಣಿಸುವಿರಿ|| +ಡೊಂಕು ಮನಸಿನ ನಾಯಕರೆ +ನೀವೇನುಪಕಾರವ ಮಾಡಿದಿರಿ +ಪರಿಸರ ಅಸಮತೋಲನದಿ +ಅತಿಮಳೆಯಾಗಿರೆ +ಅಂತರಿಕ್ಷದಿಂ ವೀಕ್ಷಿಸುವಿರಿ +ಭೂಮಿಗೆ ಪಾದವ ಸೋಕಿಸದೆ +ವರದಿಯ ನೀವು ನೀಡುವಿರಿ|| +ಡೊಂಕು ಮನಸಿನ ನಾಯಕರೆ +ನೀವೇನುಪಕಾರವ ಮಾಡಿದಿರಿ +ಹಣ ಹೆಂಡ ನೀಡುತ ನೀವು +ಮತವನು ಯಾಚನೆ ಮಾಡುವಿರಿ +ಮತದಾರರ ಕಣ್ಣಿಗೆ ಬೆಣ್ಣೆಯ ತೋರುತ +ಮೂಗಿಗೆ ತುಪ್ಪವ ಮೆತ್ತುವಿರಿ|| +ಡೊಂಕು ಮನಸಿನ ನಾಯಕರೆ +ನೀವೇನುಪಕಾರವ ಮಾಡಿದಿರಿ +ಹೆಣ್ಣಿನ ಶೋಷಣೆ ನಡೆಯುತಲಿರೆ +ಜಾತಿಯ ಲೆಕ್ಕ ಮಾಡುವಿರಿ +ಹಸು ಕಂದನ ಮೇಲಿನ ಕರುಣೆಯ +ತೊರೆದು ಕ್ರೂರರ ಬೆನ್ನಿಗೆ ನಿಲ್ಲುವಿರಿ|| +ಕುಡಿಯಲು ನೀರು ಯಾಚಿಸಲು +ಬೆತ್ತದ ರುಚಿಯ ತೋರಿಸುವಿರಿ +ಬೆಳೆಗೆ ತಕ್ಕ ಬೆಲೆಯನು ಕೋರಲು +ಗುಂಡನು ಎದೆಗೆ ಹೊಡೆಯುವಿರಿ|| +ಮತದಾರ ಆಗದೆ ಬದಲು +ನಾಡಿಗೆ ಆಗದು ಎಂದಿಗೆ ಒಳಿತು +ಗೊಡ್ಡು ಆಸೆಗೆ ಬೀಳದೆ ಹಾಕಿರಿ +ಮತವನು ಮನದಿಂ ಬಲಿತು|| +ಡೊಂಕು ಮನಸಿನ ನಾಯಕರೆ +ನೀವೇನುಪಕಾರವ ಮಾಡಿದಿರಿ +–ವರದೇಂದ್ರ ಕೆ +ಹನಿಗವನಗಳು +ರಾಯಚೂರು +ನಮ್ಮೂರು – ಬಿಸಿಲೂರು +ಕಲೆಗೆ – ಕೊರತೆಯಿಲ್ಲದೂರು, +ಯಾವ ದಿಕ್ಕಿನಡೆ ಸಾಗಿದರು +ದೊರಕುವರು ಸಾವಿರಾರು ಕಲಾವಿದರು +ಹೆಣ್ಣು +ಜಗಕೆ ಹೆಣ್ಣು, ಮಾದರಿಯ ಕಣ್ಣು +ಅವಳಿಗೆ ಕೈ ಮುಗಿಯೋ ನೀ ಇನ್ನೂ, +ಅವಮಾನಿಸಬೇಡ – ಅವಳನ್ನು +ಎಲ್ಲರ ಗೌರವಿಸುವಳು ಹೆಣ್ಣು +ಅವ್ವ +ಮಂದಿರ – ಗಿಂದಿರ ಯಾಕಣ್ಣ +ಮನೆಯೊಳಗೆ – ಅವ್ವ ಇದ್ದಾಳಣ್ಣ , +ಅವಳಿಗೆ ಶಿರಬಾಗಿ – ಕರಮುಗಿಯಣ್ಣ +ಅವಳಂತ ಪ್ರತ್ಯಕ್ಷ ದೇವರಿಲ್ಲಣ್ಣ +ಬಯಕೆಗಳು +ನೂರಾರು ಬಯಕೆಗಳು +ಮನುಜನಿಗೆ – ಎಂದೆಂದು, +ಅವುಗಳನು – ಈಡೇರಿಸಬೇಕು +ಮನುಜ – ಒಂದೊಂದು +-ಮಂಜುನಾಥ ಗುತ್ತೇದಾರ +ಸೆರಗು ಬೀಸಿಕೊಂಡು +ಹೊರಟಿದ್ದೆ ನಾನು +ಈ ಸೆರಗು ಯಾರು +ಕೊಟ್ಟಿದ್ದು ನನಗೆ +ಅಮ್ಮನಿಗೆ ಅಜ್ಜಿಗೆ +ಕಣ್ಮುಂದೆ ಎಷ್ಟೊಂದು +ಸುಂದರ ಬನ +ನನ್ನ ಕನಸಿನ ಹಾಗೆ +ನೋಡೇ ಬಿಡೋಣವೆನ್ನತ್ತಲೇ +ಒಳಹೊಕ್ಕೆ +ಬಣ್ಣಬಣ್ಣದ ಹೂವುಗಳು +ಅರೆಬಿರಿದ ಮೊಗ್ಗುಗಳು +ಸೆರಗ ತುಂಬಾ +ಅರಳಿಕೊಂಡವು +ಹೂವುಗಳ ಹೀಚುಗಳ +ಅರೆಬಿರಿದ ಮೊಗ್ಗುಗಳ +ಅವುಚಿಕೊಂಡೇ +ಈಚೆ ಬರಬೇಕು +ಮುಳ್ಳು ಸಿಕ್ಕಿಕೊಂಡಿವೆ ಸೆರಗಿಗೆ +ಎಲ್ಲಿದ್ದವು ಮೊನೆ ಮಡಚಿಕೊಂಡು +ಸೆರಗು ಹರಿಯಬಾರದು +ಗೀರಬಾರದು ಮೊಗ್ಗುಗಳು +ನೋಯಕೂಡದು ಹೂ +ಹೆಣಗುತ್ತೇನೆ ಬಿಡಿಸಿಕೊಳ್ಳಲು +ಯುಗಯುಗವು ಕಳೆದಿದೆ +ಅರೇ ಇಲ್ಲೇ ನಿಂತಿದ್ದಾರೆ +ಅತ್ತೆ ಅಕ್ಕ ಅಮ್ಮ ಅಜ್ಜಿ +ನನ್ನದೇ ಸಾಲಿನಲ್ಲಿ ಮಿಸುಕದೇ +ಯಾಕೆ ನಗುತ್ತಿದ್ದಾರೆ +ನನ್ನ ನೋಡಿ? +-ಪ್ರೇಮಾ ಟಿ ಎಮ್ ಆರ್ + + + + +ಹೂ ಅರಳಿ +ಕಲ್ಲು ಬಂಡೆಗಳ +ಕಡಿದಾದ ವನದಲ್ಲಿ +ತುಸು ಮಣ್ಣಿನಸಿಯಲ್ಲಿ +ಅರಳಿ ನಗಿಸಿದೆ ಸಸಿಯು +ಚೆಲುವಾದ ಹೂವನ್ನು..|| +ಚೆಲುವ ಸವಿಯಲು ಅತ್ತ +ಚಿಟ್ಟೆ ದುಂಬಿಗಳ ಚಿತ್ತ +ಕಷ್ಟಗಳು ಕರಗಿದವು +ಸಸಿ ಮನದ ಮನೆಯೊಳಗೆ +ಹೂ ಕೊಡುವ ಖುಷಿಯೊಳಗೆ..| +ಚಿಗುರೊಡೆಯುವ ಮುಂಚೆ +ಎಳ್ಳಷ್ಟು ಸುಖವಿಲ್ಲ +ಹನಿ ಮಳೆಯ ಪಸೆಯೊಳಗೆ +ಚಿಗುರಿತು ಬದುಕಂದು +ಅರಳಿ ನಕ್ಕಿದೆ ಹೂವಿಂದು..|| +ಒಂಟಿತನ ಜೊತೆಗಂಟಿದರೂ +ಮಳೆ ಬಿಸಿಲೆ ಸ್ನೇಹಿತರು +ಬೆಳೆವ ಛಲ ಸಾಕಾಯ್ತು +ಈ ಬದುಕು ಹಸಿರಾಯ್ತು +ದುಂಬಿಗಳು ನೂರಾರು ಇಂದು ಮುಂದು..|| +ಯಾರಿಲ್ಲ ಎನಗಿಲ್ಲ +ಎನ್ನುತಲಿ ಮಡಿದಿದ್ದರೆ +ತಲೆಯೆತ್ತಿ ಜಗವನ್ನು +ನೋಡಿ ನಗುವಾಸೆ +ಅಂದೆ ಕೊನೆಯಾಗುತ್ತಿತ್ತೆ..|| +*** +ಅಮ್ಮಾ ಎಂದರೆ ನನಗೆ +ಆಕಾಶದ ಮನಸ್ಸು +ಸಾಗರದ ಪ್ರೀತಿ +ನೀ ಬಯಸುವ ಕನಸು +ಈ ಮಗುವಿಗೆ ಮೀಸಲು +ಬರಿ ಅಮ್ಮಾ ಎಂದರೆ ನಿನಗೆ +ತೃಪ್ತಿ ಇಲ್ಲ ನನಗೆ..|| +ನಿನ್ನ ಆ ಕರುಣೆಗೆ +ನಾನೆಂದಿಗೂ ಚಿರರುಣಿ +ನಾನಾಡುವ ಈ ಮಾತು +ನೀ ಕೊಟ್ಟ ವರದಾನ +ನೀನೆ ಎಲ್ಲಾ ಅಂದರೂ ತಪ್ಪಿಲ್ಲ +ಬರಿ ಅಮ್ಮಾ ಎಂದರೆ ನಿನಗೆ +ತೃಪ್ತಿ ಇಲ್ಲ ನನಗೆ..|| +ಕೋಟಿ ದೇವರನೆಂದು +ನಾ ಕಾಣೆ ಎಂದೆಂದೂ +ಕಾಣದಿಹ ದೇವರನು +ಪೂಜಿಸಲೇಕೆ ನಾನಿನ್ನು +ಆ ಕೋಟಿ ದೇವರಿಗೆ +ಮೂಲವೆ ನೀನು +ಬರಿ ಅಮ್ಮಾ ಎಂದರೆ ನಿನಗೆ +ತೃಪ್ತಿ ಇಲ್ಲ ನನಗೆ..|| +ಹಸಿವಿದ್ದರೂ ಕಸುವಿನಲಿ +ಸಾಕಿದೆ ನೀನಂದು +ನೀ ಕೊಡುವಾ ಪ್ರೀತಿಗೆ +ಬರಗಾಲ ಬರದೆಂದು +ಈ ಜಗವೇ ಎದುರಾಗಲಿ +ನಿನ ಹರಕೆ ನನಗಿರಲಿ +ಬರಿ ಅಮ್ಮಾ ಎಂದರೆ ನಿನಗೆ +ತೃಪ್ತಿ ಇಲ್ಲ ನನಗೆ..|| +-ವೆಂಕಟೇಶ ಚಾಗಿ + + + + +ಗಜ಼ಲ್ +ಚಡಪಡಿಸುತ್ತಲೇ ಇದೆ ಹೃದಯವೇಕೆ ತಿಳಿಯದು +ಏನೋ ಬೇಕಾಗಿದೆ ಏನೆಂದೆ ಮನಕೆ ತಿಳಿಯದು +ಈ ಸುಂದರ ಕ್ಷಣದಲ್ಲು ಹೇಗೆ ಸಪ್ಪಗಿದೆ ಜೀವ +ಯಾವ ಮುಳ್ಳು ಕುತ್ತುತಿದೆ ಒಳಗನದಕೆ ತಿಳಿಯದು +ಹೂಚೆಲುವೆ ತುಟಿ ತೆರೆದಿದ್ದಾಳೆ ಸ್ತಬ್ಧ ಚಿಟ್ಟೆಗೆ +ಒಲವಹಾಡೂ ಸೆಳೆಯದ ವಿವಶತೆ ಬೇಕೆ ತಿಳಿಯದು +ನಡುರಾತ್ರಿಯಲೆದ್ದವರೆಲ್ಲ ಬುದ್ಧರಾದರೇನು +ಲೋಕ ಬೆಳಗುವ ಪ್ರೀತಿಗೆಂಥ ಅರಕೆ ತಿಳಿಯದು +ಇಲ್ಲಿ ಯಾವುದೂ ಸರಳರೇಖೆಯಲ್ಲಿಲ್ಲ ‘ವಿಶು’ +ಉರುಟು ದಾರಿಯಲ್ಲಿ ತೊಳಲೆ ಬದುಕೆ ತಿಳಿಯದು +-ಗೋವಿಂದ ಹೆಗಡೆ + + + + + +ಒಂದೇ ಒಂದು ನುಡಿ +ಜ್ಞಾನ ತಪ್ಪಿ ಆಡಿದ +ಒಂದೇ ಒಂದು ನುಡಿ +ನಾನು ಬೇರೆ ನೀನು ಬೇರೆ +ಎಂದು ಅಡ್ಡ ಗೋಡೆ ಎತ್ತಿ ನಿಲ್ಲುಸುತ್ತಿದೆ. +ಪ್ರೀತಿ ತುಂಬಿದ ಮಾತಿಗೆ +ಹರ್ಷ ತುಂಬಿದ ಕ್ರಿಯೆಗೆ +ಮನದಾಳದಲ್ಲಿ ಸ್ನೇಹಕೆ +ತಂಪನ್ನೆರೆಯುವ ತಾಕತ್ತಿದೆ +ಬನ್ನಿ ಸುಜ್ಞಾನಿಗಳೆ +ಹಂಬಲದ ಜಲವ ನೇಹದ ಬಲವ +ಎದೆಗವಚಿಕೊಳ್ಳಲು ಅಮೃತದ +ಸವಿ ಜೇನು ಸುರಿಸೋಣ +ಭರವಸೆಯ ರಸ ಬೆರೆಸೋಣ +ನಂಬಿಕೆಯ ದೀಪ ಉರಿಸೋಣ +ಏಕಾಂತದ ಹಾದಿ ತೊರೆದು +ಒಲವ ಭಾವದನು ಮೆರೆದು +ಹೋದಲೆಲ್ಲ ಸವಿ ನಾಲಿಗೆ ಹೊತ್ತು ತಿರುಗೋಣ +ಜೀವ ನದಿಯಲಿ ಸಿಕ್ಕವರಿಗೆಲ್ಲ ಖುಷಿಯ ಹಂಚೋಣ +ಭುವಿಯಲಿ ಸ್ವರ್ಗ ಸೃಷ್ಟಿಸೋಣ +ದೇವ ಮಾನವರಾಗಿ ನಲಿಯುತ ಬಾಳೋಣ +ಜಯಶ್ರೀ.ಜೆ. ಅಬ್ಬಿಗೇರಿ + + + + +ಹಾದಿಬದಿಯ ಮನೆ +ಅವು ಸಂತರ ಆತ್ಮಗಳು +ಸದಾ ಎಲ್ಲರಿಂದ ದೂರದಾಚೆ +ಸ್ವ-ಸಂತೃಪ್ತಿಯ ತಾಣಗಳಲ್ಲೆ ವಾಸ. +ನಕ್ಷತ್ರದಂತೆ ಹೊಳೆವ ಆತ್ಮಗಳಿವೆ +ಸಂಗಾತಿಗಳೇ ಇಲ್ಲದ ಸ್ವರ್ಗದಲಿ +ಪ್ರತ್ಯೇಕತೆಯ ನೆಲೆಯಲ್ಲೇ ಬದುಕುತ್ತವೆ. +ಹೆದ್ದಾರಿಗಳೆಂದು ಹಾದು ಹೋಗದ +ದಾರಿಗೆ ಬೆಳಕು ತೋರಿದ ಆದ್ಯರ ಆತ್ಮಗಳೂ ಇವೆ. +ಆದರೆ ಬದುಕಬಿಡಿ ನನಗೆ ಹಾದಿಬದಿಯ ಮನೆಯಲ್ಲಿ +ಜನರಿಗೆ ಗೆಳೆಯನಾಗಿ. +ಹಾದಿ ಬದಿಯ ಮನೆಯಲ್ಲೇ ನನಗೆ ಬದುಕ ಬಿಡಿ +ಎಲ್ಲಿ ಜನರ ದಂಡು ಸದಾ ಸಂಚರಿಸುವಲ್ಲಿ +ಅವರು ಸಜ್ಜನರೂ ಮತ್ತವರು ದುರ್ಜನರೂ +ಸದ್ಗುಣ ದುರ್ಗುಣಗಳ ಹೊತ್ತ ನನ್ನಂತೆ +ಅದಕ್ಕೆ ನಾನೆಂದು ಟೀಕಾಕಾರನ ಆಸನವೇರುವುದಿಲ್ಲ. +ವ್ಯಂಗ್ಯದ ಈಟಿ ಎಸೆಯುವುದಿಲ್ಲ. +ಬದುಕ ಬಿಡಿ ನನ್ನ ಹಾದಿಬದಿಯ ಮನೆಯಲ್ಲಿ +ಮತ್ತು ಜನರಿಗೆ ಗೆಳೆಯನಾಗಿ. +ಹಾದಿಬದಿಯ ನನ್ನ ಮನೆಯಿಂದಲೇ ದಿಟ್ಟಿಸುತ್ತೇನೆ +ಬದುಕಿನ ಹೆದ್ದಾರಿಯ ಬದಿಯಲ್ಲಿದ್ದರನ್ನು +ಕೆಲವರು ಉತ್ಕಟಾಕಾಂಕ್ಷೆಗಳ ಹೊತ್ತವರು +ಕಷ್ಟಕೋಟಲೆಗೆ ಬಸವಳಿದು ನೊಂದವರು +ಅವರ ನಗು ಅಳುವಿಗೆ ನಾನು ಬೆನ್ನು ತಿರುಗಿಸುವುದಿಲ್ಲ +ಅವೆರಡು ಬದುಕಿನ ಅನಂತ ಯೋಜನೆಯ ಭಾಗಗಳು +ಬದುಕ ಬಿಡಿ ನನ್ನ ಹಾದಿಬದಿಯ ಮನೆಯಲ್ಲಿ +ಮತ್ತು ಜನರಿಗೆ ಗೆಳೆಯನಾಗಿ. +ಮುಂದೆ ಹಳ್ಳಕೊಳ್ಳಗಳ ಕಾಡ ಬಯಲಿನ ಹುಲ್ಲುಗಾವಲಿದೆ +ಎರಲಾಗದೆತ್ತರದ ಪರ್ವತಗಳು ಇವೆ. +ಅದು ನನಗೆ ಗೊತ್ತಿದೆ. +ಈ ದಾರಿ ಧೀರ್ಘ ಮಧ್ಯಾಹ್ನದ ಉದ್ದಕ್ಕೂ +ಮತ್ತೂ ಮುಂದೆ ರಾತ್ರಿಯವರೆಗೂ ಹಬ್ಬಿದೆ. +ಆದರೂ ಸಂತಸವಿದೆ ಆ ಪ್ರಯಾಣಿಕರ ಹರ್ಷದೊಂದಿಗೆ +ನೋಯುತ್ತೇನೆ ಅಪರಿಚಿತರ ನರಳುವಿಕೆಗೆ +ಹಾದಿಬದಿಯ ಮನೆಯಲ್ಲಿದ್ದು ಏಕಾಂಗಿ ಮನುಷ್ಯನಂತಿರಲು ನನಗಾಗದು. +ಅದಕ್ಕೆ ಬದುಕ ಬಿಡಿ ಹಾದಿಬದಿಯ ನನ್ನ ಮನೆಯಲ್ಲಿ +ಅಲ್ಲಿ ಜನರ ದಂಡೇ ಸಾಗಿ ಬರುವುದು +ಅವರು ಸಜ್ಜನರು, ದುರ್ಜನರು, ಅಶಕ್ತರು, ಸಶಕ್ತರು +ಜಾಣರು, ಮೂರ್ಖರು -ಪಕ್ಕಾ ನನ್ನಂತೆ +ಹಾಗಾಗಿ ಟೀಕಾಕಾರನ ಆಸನವೇರಿ ನಾನೇಕೆ ಕಟಕಿಯ ಕಿಡಿ ಸಿಡಿಸಲಿ? +ಬದುಕ ಬಿಡಿ ನನ್ನ ಹಾದಿಬದಿಯ ನನ್ನ ಮನೆಯಲ್ಲಿ +ಮತ್ತು ಜನರಿಗೆ ಗೆಳೆಯನಾಗಿ +ಮೂಲ ; ಇಂಗ್ಲೀಷ -Sam Walter Foss +ಅನುವಾದ: ನಾಗರೇಖಾ ಗಾಂವಕರ +*** +ನಾನು ಆ ಹೆಂಗಸಲ್ಲ +ನಾನು ಆ ಹೆಂಗಸಲ್ಲ +ನಿನಗೆ ಶೂ, ಸಾಕ್ಸಗಳ ಮಾರುವ ಅವಳಲ್ಲ, +ನೆನಪಿಸಿಕೋ ನನ್ನ,ನೀನು ತಂಗಾಳಿಯಂತೆ +ಸ್ವೇಚ್ಛೆಯಿಂದ ವಿಹರಿಸುತ್ತಿರುವಾಗ +ನಿನ್ನ ಕಲ್ಲಿನ ಗೋಡೆಗಳ ನಡುವೆ ನಿನ್ನಿಂದ ಹುದುಗಿಸಲ್ಪಟ್ಟವಳು ನಾನು. +ಗೊತ್ತಿಲ್ಲ ನಿನಗೆ, ನನ್ನ ದನಿಯ ನಿನ್ನ ಕಲ್ಲಿನ ಗೋಡೆಗಳು +ಅದುಮಿಡಲಾರವೆಂದು. +ನಾನು ಅವಳೇ,ನಿನ್ನ ರೂಢಿ ಸಂಪ್ರದಾಯಗಳ +ಸಂಕೋಲೆಯಲ್ಲಿ ಪುಡಿಪುಡಿಯಾದವಳು. +ಗೊತ್ತಿಲ್ಲ ನಿನಗೆ, +ಬೆಳಕು ಕತ್ತಲೆಯೊಳಗೆ ಬಂಧಿಯಾಗದೆಂದು. +ನೆನಪಿಸಿಕೋ ನನ್ನ, +ನೀನ್ಯಾರ ತೊಡೆಯಿಂದ ಹೂವನ್ನು ಕಿತ್ತು +ಮುಳ್ಳನ್ನೂ, ಕೆಂಡವನ್ನೂ ನೆಟ್ಟೆಯೋ ಅವಳೇ ನಾನು. +ಗೊತ್ತಿಲ್ಲ ನಿನಗೆ, +ಆ ಸರಪಳಿಯಿಂದ ನನ್ನ ಪರಿಮಳದ ಉಸಿರುಗಟ್ಟಿಸಲಾಗದೆಂದು. +ಪರಿಶುಧ್ದತೆಯ ಹೆಸರಿನಲ್ಲಿ +ನನ್ನನ್ನು ಕೊಂಡುಕೊಂಡ ಇಲ್ಲ ಮಾರಿದ +ಅದೇ ಹೆಣ್ಣು ನಾನು. +ಗೊತ್ತಿಲ್ಲ ನಿನಗೆ +ನಾನು ಮುಳುಗುತ್ತಿರುವಾಗಲೂ +ನೀರ ಮೇಲೆ ನಡೆಯಬಲ್ಲೆನೆಂದು +ನಾನು ಅವಳೇ, ನಿನ್ನ ಹೊರೆಯಿಂದ ಮುಕ್ತನಾಗಲು +ಮದುವೆಯ ಬಂಧನಕ್ಕೆ ನೂಕಲ್ಪಟ್ಟವಳು +ತಿಳಿದಿಲ್ಲ ನಿನಗೆ, +ಸಂಪ್ರದಾಯದಿಂದಲೇ ಕಟ್ಟಲ್ಪಟ್ಟ ಮನಸ್ಸುಗಳಿರುವ +ದೇಶವೆಂದಿಗೂ ಉದಾರವಾಗಲಾರದೆಂದು. +ನನ್ನ ಪ್ರಾತಿವೃತ್ಯ, ನನ್ನ ತಾಯ್ತನ,ನಿಷ್ಠೆ ಎಲ್ಲ +ನಾನು ಸರಕಂತೆ ನಿನ್ನಿಂದ ಮಾರಲ್ಪಟ್ಟವಳು. +ಆದರೀಗ, ನನಗೆ ಹೂವಂತೆ ಅರಳುವ ಕಾಲ. +ಅರೆಬೆತ್ತಲಾಗಿ ಶೂ, ಸಾಕ್ಸಗಳ ಮಾರುತ್ತಿರುವ +ಆ ಹೆಂಗಸಲ್ಲ ನಾನು +ಅಲ್ಲ. ನಾನು ಆ ಹೆಂಗಸಲ್ಲ. +ಮೂಲ ; ಕಿಶ್ವರ್ ನಹೀದ್ +ಅನುವಾದ: ನಾಗರೇಖಾ ಗಾಂವಕರ + + + + +ಪಯಣ…. +ಜೀವ ಆಗಷ್ಟೇ ಬಂದಿತ್ತು, ಕೇಳಿತ್ತು ನಿಧಾನವಾದ ನನ್ನದೇ ಎದೆ ಬಡಿತ.. +ಎಲ್ಲೋ ಒಳಗಿದ್ದೆ ನಾನು ತಿಳಿಯದ ವಿಳಾಸದಲ್ಲಿ… +ಸುರಕ್ಷಿತ ಅನ್ನಿಸ ತೊಡಗಿತ್ತು ಆ ಹೊಸ ಮನೆ, +ಇರುವೆಯಷ್ಟಿದ್ದ ನಾ ಬೆಳೆಯುತ್ತಿದ್ದೆ ಆ ಸೊಗಸಾದ ಅಂಗಳದಲ್ಲಿ…. +ಆಗಾಗ ಯಾರೋ ಸವರುತಿದ್ದರು ನನ್ನ, +ಮತ್ತೊಂದು ಕೈ ಯ ಬಿಸಿಯೂ ತಟ್ಟುತಿತ್ತು ಕೆಲವೊಮ್ಮೆ… +ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದರು ಇಬ್ಬರು, +ನನ್ನ ಬಗ್ಗೆಯೂ ಹೇಳಿದಂತೆ ಭಾಸವಾಗುತ್ತಿತ್ತು ಒಮ್ಮೊಮ್ಮೆ… +ನಡುವೊಮ್ಮೆ ಸವರುತಿದ್ದ ಕೈ ಹೇಳಿತ್ತು, +ನಾನೇ ನಿನ್ನಮ್ಮ ಎಂದು… +ಆಗಲೇ ಜೊತೆಗಿನ ಕೈ ಹೇಳಿತ್ತು, +ನಾ ನಿನ್ನ ಅಪ್ಪನೆಂದು… +ಕಾದಂತೆ ನನಗಾಗಿ ಇಬ್ಬರೂ ಪ್ರೀತಿಸುತ್ತಿದ್ದರು ನನ್ನ, +ಕಥೆ ಹೇಳಿ ಮಲಗಿಸುತಿದ್ದರು ನನ್ನ, +ಎಲ್ಲೋ ಒಮ್ಮೆಮ್ಮೆ ಅಲುಗಾಡಿದಾಗ ಅಪ್ಪುತಿದ್ದರು ನನ್ನ… +ಅದೇನೋ ಇದ್ದಕಿದ್ದಂತೆ ಅಮ್ಮ ನನ್ನ ಬಿಗಿದಪ್ಪಿ ದೇವರಿಗೆ ನೋ ಬೇಡುತಿದ್ದಳು, +ಅವಳ ಎದೆ ಬಡಿತಕ್ಕೇನೋ ಬೇರೆಯೇ ಸದ್ದಿತ್ತು ಅಂದು…. +ಬೇರೆಯೇನೋ ನನ್ನ ಸವರಲಾರಂಭಿಸಿತು , +ನಂತರ ಹೇಳಿದ್ದು ನಾನು ಹೆಣ್ಣೆಂದು…. +ಆಗಲೇ ಕೇಳಿದ್ದು ಎಂದೂ ಕೇಳದ ನನ್ನಮ್ಮನ ಆಕ್ರಂಧನ, +ಹಿಂದೆಯೇ ಬರಲಾರಂಭಿಸಿತು ಇದುವರೆಗೂ ಕೇಳದ ಸದ್ದೊಂದು… +ಹೀಯಾಳಿಸಿ ಅವಳ ಬಯ್ಯುತ್ತಿ ದ್ದರು +ಹೊರಲಾರೆಯ ಈಗಲಾದರೂ ಗಂಡೆಂದು… +ಗೊಳಾಡಿದಳು, ಬೇಡಿದಳು ನನ್ನಮ್ಮ +ಗೋಗರೆದಳು ಬದುಕಿಸಲು ನನ್ನ , +ಈ ವರೆಗೂ ಹೊತ್ತ ಕನಸ , ಉಸಿರಾಡುತ್ತಿದ್ದ ಅವಳ ಮಗುವ…. +ಕರುಣೆ ,ಕನಿಕರವಿಲ್ಲದೆ ಅವಳಿಂದ ಬೇರ್ಪಡಿಸಿದರೆನ್ನ, +ಕಿತ್ತರು ಕರುಳ ಬಳ್ಳಿಯ ಪರಿಗಣಿಸದೆ ಮಾನವೀಯತೆಯನ್ನ, +ಮುಗಿಸಿದೆ ನಾನಾಗ ಈ ನನ್ನ ಸಣ್ಣ ಹುಟ್ಟು ಸಾವಿನ ಪಯಣ ವ….. +(ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಈ ಕವನ) +-ಶೀತಲ್ + + + + + \ No newline at end of file diff --git a/PanjuMagazine_Data/article_1079.txt b/PanjuMagazine_Data/article_1079.txt new file mode 100644 index 0000000000000000000000000000000000000000..2f46c12b1ba6079853c1c2f68f4ee6ddf093f0a6 --- /dev/null +++ b/PanjuMagazine_Data/article_1079.txt @@ -0,0 +1,7 @@ +ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಘಡಗಳು ಸಂಭವಿಸಿ ಭೂತ ಪ್ರೇತಗಳಾವೋ ಬಂದು ಸೇರಿಕೊಂಡಿದ್ದ ಕಾರಣವೂ ಇರಬಹುದು! ಒಟ್ಟಿನಲ್ಲಿ ಒಂದು ನರ ಪ್ರಾಣಿಯ ಸುಳಿವೂ ಆ ಬಂಗಲೆಯ ಸುತ್ತ ಇದ್ದಂತಿರಲಿಲ್ಲ. ನಾನು ಮಾತ್ರ ನಿರ್ಲಿಪ್ತನಾಗಿ, ಧೈರ್ಯವಹಿಸಿ ಆ ಸರಿ ರಾತ್ರಿಯ ಕಗ್ಗತ್ತಲ ನಡುವಲ್ಲಿ ದೀಪವಿಲ್ಲದೆಯೂ ನಿರಾತಂಕವಾಗಿ ಉಸಿರಾಡುತ್ತಾ ನಿಂತಿದ್ದೆ. ನನ್ನುಸಿರ ಉಚ್ಛ್ವಾಸ – ನಿಚ್ಛ್ವಾಸಗಳ ಏರಿಳಿತಗಳು ಅಕ್ಕ ಪಕ್ಕದಲ್ಲಿರುವವರಿಗೂ ಕೇಳಿಸಬಹುದಿತ್ತು, ಆದರೆ ಅಲ್ಲಿ ನನ್ನನ್ನು ಬಿಟ್ಟು ಮತ್ತಾರೂ ಇರಲಿಲ್ಲ! +ನಿಧಾನವಾಗಿ ನನ್ನ ಭಾವಾಂತರಂಗದಲ್ಲಿನ ಭಯಗಳನ್ನು ನಿಗ್ರಹಿಸುತ್ತಾ, ಆಚೀಚೆ ಯಾರಾದರೂ ಇರಬಹುದೇ? ಈ ಸ್ಥಳ ಇರುವುದಾದರೂ ಎಲ್ಲಿ ಎಂಬ ಅರಿವನ್ನು ತಂದುಕೊಳ್ಳುವ ಪ್ರಯತ್ನ ಮಾಡಬೇಕು ಎಂದುಕೊಳ್ಳುತ್ತಿದ್ದೆ! ಅಸಲಿಗೆ ನಾನು ಅಲ್ಲಿಗೆ ಹೇಗೆ ಬಂದೆ ಎಂಬ ನೆನಪೂ ಇದ್ದಂತೆ ತೋರುತ್ತಿರಲಿಲ್ಲ! ತಲೆ ಧಿಂ ಎಂದು ಹಿಡಿದುಕೊಂಡಿದೆ ಎನಿಸುತ್ತಿತ್ತು. ತಲೆ ಒತ್ತಿ ನೋಡಿಕೊಂಡೆ, ತಲೆಯ ಹಿಂಬದಿಗೆ ಯಾರಾದರೂ ಹೊಡೆದಿರಬಹುದು ಎನಿಸುತ್ತಿತ್ತು. ತಲೆಯ ಹಿಂಬಾಗ ಊದಿಕೊಂಡಂತೆನಿಸುತ್ತಿತ್ತು, ಮುಟ್ಟಿದ ಕೈಗಳಿಗೆ. ಸರಿ ಇನ್ನು ಎಷ್ಟು ಹೊತ್ತು ಈ ಅಜ್ಞಾತ ಸ್ಥಳದಲ್ಲಿ ಅಜ್ಞಾತವಾಸ ಅನುಭವಿಸುವುದು, ಇಲ್ಲಿಂದ ಹೇಗಾದರೂ ಹೊರಗೆ ಹೋಗುವ ದಾರಿ ಹುಡುಕಬೇಕು ಎಂದು ಒಳ ಮನಸ್ಸು ಹೇಳುತ್ತಿತ್ತು. ನಾನು ನಿಧಾನವಾಗಿ ನನ್ನ ಕಾಲುಗಳನ್ನೆಳೆದುಕೊಂಡು ಯಾವುದೋ ಒಂದು ದಿಕ್ಕಿನಲ್ಲಿ ಸರಿಯಲು ಪ್ರಾರಂಭಿಸಿದೆ, ಆ ಉಗ್ರ ನರಸಿಂಹನನ್ನು ನೆನೆಯುತ್ತಾ! +ಈಗ ನಾನು ಸಾಗುತ್ತಿರುವುದು ನನ್ನ ಜೀವನದ ಅತೀ ದುರ್ಗಮದ ಹಾದಿಯಿರಬಹುದು ಎನಿಸಿತು! ಆ ಕಡೆ, ಈ ಕಡೆ ನೋಡುತ್ತಾ, ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತಾ ಬೆಳಕನ್ನು ಹುಡುಕುತ್ತಿದ್ದೆ. ಬಂಗಲೆ ಸುಮಾರು ಏಳೆಂಟು ಅಂತಸ್ತಿನದಾಗಿದ್ದು, ನಾನು ಈಗಿರುವುದು ಕಡೆಯ ಅಂತಸ್ತು ಎನಿಸುತ್ತಿತ್ತು. ಸಾವಕಾಶವಾಗಿ ಮೆಟ್ಟಿಲಿಳಿಯುವ ಹಾದಿಯನ್ನು ಹುಡುಕುತ್ತಿದ್ದೆ. ಪ್ರತಿಯೊಂದು ಅಂತಸ್ತೂ ವೃತ್ತಾಕಾರವಾಗಿದ್ದು, ಒಂದು ದಿಕ್ಕಿನಲ್ಲಿ ಪ್ರಾರಂಭಿಸಿದರೆ ಒಂದು ಆವೃತ್ತದ ನಂತರ ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸುತ್ತಿತ್ತು. ಮಧ್ಯದಲ್ಲಿ ಕೆಳ ಅಂತಸ್ತನ್ನೂ, ಮೇಲಂತಸ್ತನ್ನೂ ನೋಡಬಹುದಾದ ವೃತ್ತಾಕಾರದ ಪ್ಯಾಸೇಜ್ ಇತ್ತು. ಕೆಳಗೆ ಇಳಿಯುವ ಮೆಟ್ಟಿಲುಗಳ ಕುರುಹೇ ಸಿಗುತ್ತಿರಲಿಲ್ಲ. ಹೇಗೋ ಮೂರು ಸುತ್ತು ಸುತ್ತಿದ ನಂತರ ಆರನೇ ಅಂತಸ್ತಿಗೆ ಇಳಿಯುವ ಮೆಟ್ಟಿಲು ಸಿಕ್ಕಿತು. ಆರನೇ ಅಂತಸ್ತು ತಲುಪಿದ ನಾನು ಉಸಿರು ಬಿಡುತ್ತಾ ಹೇಗಾದರೂ ಇಲ್ಲಿಂದ ಬಚಾವಾಗಬಹುದೇನೋ ಎಂದು ಆಶಾಕಿರಣ ಹಚ್ಚಿಟ್ಟೆ, ನನ್ನ ಮನದೊಳಗೆ! ಹಾಗೆ ನನ್ನದೇ ಯೋಚನೆಗಳಲ್ಲಿ ಮೈಮರೆತಿದ್ದ ನನ್ನ ಪಕ್ಕದಲ್ಲಿ ಎಲ್ಲಿಂದಲೋ ತೂರಿಕೊಂಡು ಬಂದು ದೊತ್ತೆಂದು ಅದೇನೋ ಬಿದ್ದ ಸಪ್ಪಳವಾಯ್ತು. ನನ್ನ ಎದೆ ಬಡಿತ ಜೋರಾಯ್ತು! ಹಾಗೆ ದೊತ್ತೆಂದು ಬಿದ್ದ ವಸ್ತು ನಿಧಾನಕ್ಕೆ ಚಲಿಸುವ ಶಬ್ದ ಮಾಡಿತು. ನಾನು ಒಮ್ಮೆಲೇ ಬೆಚ್ಚಿಬಿದ್ದೆ! ನಿಧಾನಕ್ಕೆ ಬಾಲ ಗುಡಿಸಿದಂತಾಗಿ, ತನ್ನ ಹೊಳೆಯುವ ಕಣ್ಣುಗಳನ್ನೊಮ್ಮೆ ಜಳಪಿಸಿದ ಆ ಪ್ರಾಣಿ, ‘ಮೀಯಾಂ…’ ಎಂದೊಡನೆ ನನಗೆ ಚಳಿ ಜ್ವರ ಬಂದು ಬಿಟ್ಟಂತಾಯ್ತು! “ಥೂ ಹಾಳಾದ್ದು ಬೆಕ್ಕು” ಎಂದು ನನ್ನನ್ನು ನಾನೇ ಸಂತೈಸಿಕೊಂಡೆ. +ಹಾಗೆ ನಡೆಯುತ್ತಾ ನನ್ನ ಕೆಳ ಅಂತಸ್ತಿಗೆ ತಲುಪುವ ಮೆಟ್ಟಿಲುಗಳ ಹುಡುಕಾಟವನ್ನು ಮುಂದುವರೆಸಿದೆ. ಆರನೆಯ ಅಂತಸ್ತಿನಲ್ಲಿ ಕೆಲವು ರೂಮುಗಳಿರುವಂತೆ ಕಂಡುಬಂತು. ನಾನು ಆ ಅಂತಸ್ತನ್ನೂ ಒಂದು ಆವೃತ್ತ ಬಂದ ನಂತರ, ರೂಮುಗಳಲ್ಲಿ ಹೇಗಾದರೂ ಕೆಳಗಿಳಿಯಬಹುದೇನೋ ಎಂದು ಪ್ರತಿಯೊಂದು ರೂಮುಗಳ ಸಂದರ್ಶನವನ್ನು ಶುರು ಮಾಡಿದೆ. ಎರಡನೇ ರೂಮಿನಲ್ಲಿ ಐದನೇ ಅಂತಸ್ತಿಗಿಳಿಯುವ ದಾರಿ ಸಿಕ್ಕಿತು. ಐದನೇ ಅಂತಸ್ತಿಗೆ ಬರುತ್ತಿದ್ದಂತೆ ಅದು ಒಂದು ದೊಡ್ಡ ಹಾಲ್ ನಂತೆ ಕಾಣಿಸಿತು. ಅದನ್ನು ಮನೆಯ ವಾರಸುದಾರರು ಸಮಾರಂಭಗಳನ್ನು ಆಯೋಜಿಸಲು, ಇಲ್ಲವೇ ಪಾರ್ಟಿಗಳನ್ನು ಹಮ್ಮಿಕೊಳ್ಳಲು ಬಳಸುತ್ತಿದ್ದಿರಬಹುದು ಎನಿಸಿತು. ಅಲ್ಲಲ್ಲಿ ದುಂಡನೆಯ ಮೇಜುಗಳು ಮತ್ತು ವೈಭವೋಪೇತ ಕುರ್ಚಿಗಳು ಕಾಣುತ್ತಿದ್ದವು. ಹಾಗೆ ಆ ಅಂತಸ್ತನ್ನು ಪರಿಶೀಲಿಸುತ್ತಿದ್ದಂತೆ ಕೆಲವರ ಓಡಾಟ ಮತ್ತು ಪಿಸುಗುಟ್ಟುವಂತಹ ಮಾತುಗಳು ಕೇಳಿಸಲು ಶುರುವಾದವು. ನನಗೆ ಇನ್ನಿಲ್ಲದ ಭಯ ಶುರುವಾಯ್ತು. ಇದೇನು ಯಾರು ಇಲ್ಲವೆಂದುಕೊಂಡಿದ್ದ ಬಂಗಲೆಯಲ್ಲಿ ಈ ಪಿಸುಮಾತುಗಳು ಎಲ್ಲಿಂದ ಬರುತ್ತಿವೆಯಪ್ಪಾ ಎಂದು ಭಯವಾಗಿ ‘ಹನುಮಂತ ಚಾಳೀಸ’ವನ್ನು ಹೇಳಿಕೊಳ್ಳಲು ಶುರುಮಾಡಿದೆ, ಭಯಕ್ಕೆ ನಾಲಿಗೆ ತೊದಲುತ್ತಿತ್ತು! ಆದದ್ದು ಆಗಲಿ ಎಂದು ಪಿಸುಮಾತುಗಳ ಶಬ್ದ ಬರುತ್ತಿದ್ದೆಡೆಗೆ ಹೆಜ್ಜೆ ಹಾಕಿದೆ. ಅದ್ಯಾವುದೋ ರೂಮಿನಲ್ಲಿ ನಾಲಿಗೆ ಚಪ್ಪರಿಸುತ್ತಿರುವ ಶಬ್ಧವಾಗುತ್ತಿತ್ತು! ನಾನು ಆ ಕಡೆಗೆ ನಡೆಯುತ್ತಿದ್ದಂತೆ, ಆಯ ತಪ್ಪಿ ಮೆಟ್ಟಿಲುಗಳ ಮೇಲುರುಳಿ ನಾಲ್ಕನೇ ಅಂತಸ್ತಿಗೆ ಬಿದ್ದಿದ್ದೆ! +ಎದುರಿಗೆ ಯಾರೋ ನನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಅದೇನನ್ನೋ ತಿನ್ನುತ್ತಿರುವಂತೆನಿಸುತ್ತಿತ್ತು. ನಾನು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತಾ ಆ ಆಕೃತಿಯನ್ನು ಸಮೀಪಿಸಿದೆ. ಆ ಆಕೃತಿ ಯಾವುದೋ ರುಂಡವಿಲ್ಲದ ದೇಹದಿಂದ ಬಾಯಿ ಹಾಕಿ ರಕ್ತ ಕುಡಿಯುತ್ತಿತ್ತು. ನಾನು ಅದನ್ನು ನೋಡಿ ಬೆಚ್ಚಿ ಬಿದ್ದು, ಅಯ್ಯೋ ಎಂದು ಕೂಗಲು ಪ್ರಯತ್ನಿಸಿದೆ, ಮಾತುಗಳು ಮಾತ್ರ ಹೊರಬರಲಿಲ್ಲ! ಕಡೆಗೆ ಧೈರ್ಯ ಮಾಡಿ ಆ ಕುರೂಪ ಆಕೃತಿಯನ್ನುದ್ದೇಶಿಸಿ, “ಹೇ, ಯಾರು ನೀನು? ನಿನಗೆ ತಿನ್ನಲು ಮನುಷ್ಯ ಮಾಂಸವೇ ಬೇಕೇ? ಹಾಳಾದ ಪ್ರಾರಬ್ಧ ಕರ್ಮ ನೀನು! ಎದ್ದೇಳು ಯಾರು ನೀನು?” ಎಂದು ಗದರಿಸಿದೆ. ಅದು ಮಾತ್ರ ತನ್ನ ಪಾಡಿಗದು ಆ ಮನುಷ್ಯನ ರಕ್ತವನ್ನು ಸಂಪೂರ್ಣ ಹೀರಿ, ಮಾಂಸವನ್ನು ತಿನ್ನಲು ಶುರು ಮಾಡಿತ್ತು. ನನಗೆ ಆ ಅಮಾನವೀಯ ದೃಶ್ಯವನ್ನು ನೋಡಿ, ಅಸಹ್ಯದೊಂದಿಗೆ ರೋಷವೂ ಉಕ್ಕಿ ಬಂತು! ನಾನು ನನ್ನ ಕಾಲನ್ನು ಜಾಡಿಸಿ ಆ ಆಕೃತಿಗೆ ಒದ್ದೆ. +ಅದು ಒಂದಿಂಚೂ ಕದಲಲಿಲ್ಲ! ತನ್ನ ಪಾಡಿಗದು ಎದೆಯನ್ನು ಬಗೆದು ಹೃದಯವನ್ನು ಹೊರಗೆಳೆದು, ತಿನ್ನಲು ಶುರು ಮಾಡಿತು. ನಾನು ಅದರ ನಿರ್ಲಕ್ಷತನದಿಂದ ಮತ್ತಷ್ಟು ಕುಪಿತಗೊಂಡೆ. ಅದರ ಪಕ್ಕದಲ್ಲೇ ಇದ್ದು ಕೊಡಲಿಯನ್ನೆತ್ತಿಕೊಂಡು ಆ ಆಕೃತಿಯ ತಲೆಗೆ ಬಲವಾಗಿ ಹೊಡೆದೆ! ಅದು ಯಾವ ಚಲನೆಯನ್ನೂ ತೋರಲಿಲ್ಲ! ನಾನು ಕೋಪದಿಂದ ಆ ಆಕೃತಿಯೆಡೆಗೆ ಮುನ್ನುಗ್ಗಿ ಹೋದೆ, ಅದು ನನ್ನ ಕಡೆ ತಿರುಗಿ ತನ್ನ ಬಾಯಿಗೆ ಮೆತ್ತಿಕೊಂಡಿದ್ದ ರಕ್ತವನ್ನು ಒರೆಸಿಕೊಂಡಿತು! ಎದುರಿಗೆ ಕಂಡ ದೃಶ್ಯ ಕಂಡು ಹೌಹಾರಿಬಿಟ್ಟಿದ್ದೆ, ಆ ವಿಕಾರ ಆಕೃತಿ ನಾನೇ ಆಗಿದ್ದೆ! ಅದು ನಾನಲ್ಲ ಎಂದು ಕೂಗಿಕೊಳ್ಳಲೆಂಬಂತೆ ಈ ಕಡೆ ತಿರುಗಿದೆ, ದೇಹದಿಂದ ಬೇರ್ಪಡಿಸಿದ ನನ್ನ ರುಂಡ ಅಲ್ಲಿ ಬಿದ್ದು ಒದ್ದಾಡುತ್ತಿತ್ತು! ನನ್ನನ್ನೇ ನಾನೇ ಬಗೆದು ತಿಂದುಕೊಳ್ಳುತ್ತಿದ್ದೆ ಆ ಏಳಂತಸ್ತಿನ ಬಂಗಲೆಯೊಳಗೆ! ನನ್ನ ಹುಚ್ಚು ಆಸೆಗಳೇ ಭೂತವಾಗಿ, ನನ್ನೊಳಗಿನ ಒಳ್ಳೆಯತನಗಳನ್ನು ಇಂಚಿಂಚನ್ನೂ ತಿನ್ನುತ್ತಿದ್ದೆ! ಹೊರಗಿನ ಜಗತ್ತಿಗೆ ಪ್ರೇತವಾಗಿದ್ದೆ! +– ಪ್ರಸಾದ್.ಡಿ.ವಿ., ಮೈಸೂರು. \ No newline at end of file diff --git a/PanjuMagazine_Data/article_108.txt b/PanjuMagazine_Data/article_108.txt new file mode 100644 index 0000000000000000000000000000000000000000..0463bc5161cc5cc5671836dafc14c4fbec5f22ae --- /dev/null +++ b/PanjuMagazine_Data/article_108.txt @@ -0,0 +1,77 @@ +ಸಾರ್ವಜನಿಕವಾಗಿ ಕಾರ್ಯಕ್ರಮವನ್ನು ಮಾಡದೇ ಹತ್ತಿರ-ಹತ್ತಿರ ವರ್ಷವಾಗಿತ್ತು. ಜಾಗತಿಕ ಹವಾಮಾನ ಬದಲಾವಣೆ ಜಾಥಾವನ್ನು ಹಠಕ್ಕೆ ಬಿದ್ದು ಆಯೋಜಿಸಿದ್ದೆ, ಯಾವುದೇ ಕಾರ್ಯಕ್ರಮ ಮಾಡುವುದಾದರೂ ಮುಖ್ಯವಾಗಿ ಹಣದ ಅವಶ್ಯಕತೆ ಇರುತ್ತದೆ. ಹಣ ಹೊಂದಿಸುವುದು ಸಮಸ್ಯೆಯೇ ಸರಿ. ಜಗದ ಉಳಿವಿಗೆ, ನಾಳಿನ ಮಕ್ಕಳ ಭವಿಷ್ಯಕ್ಕೆ ಏನಾದರೂ ಮಾಡಲೇಬೇಕೆಂದು ಶುರು ಹಚ್ಚಿಕೊಂಡ ಕಾರ್ಯಕ್ರಮಕ್ಕೆ ಹದಿನೈದು ದಿನಗಳಿಂದ ತಯಾರಿ ಮಾಡಲಾಗಿತ್ತು. ಸಾಗರದಂತಹ ಸ್ಥಳದಲ್ಲಿ ಭಾನುವಾರ ಒಂದು ತರಹ ಕಪ್ರ್ಯೂ ಹಾಕಿದ ಹಾಗೆ ಇರುತ್ತದೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳಿಗೂ ರಜೆ. ಪ್ಯಾರಿಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ಶೃಂಗ ಸಭೆಗೆ ಮುನ್ನಾ ದಿನವೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಹಾಗಾಗಿ ಭಾನುವಾರ ರಜಾದಿನವಾದರೂ ಜಾಥಾ ಮಾಡಿದೆವು. +ಸಾಗರದಿಂದ 8 ಕಿ.ಮಿ. ದೂರದ ಅಮಟೆಕೊಪ್ಪದಲ್ಲಿರುವ ಹೊಂಗಿರಣ ಶಾಲೆಯ 147 ಮಕ್ಕಳು ಹಾಗೂ 6 ಜನ ಶಿಕ್ಷಕರು ಸರಿಯಾಗಿ 11 ಗಂಟೆಗೆ ಜಾಥಾ ಪ್ರಾರಂಭಿಸುವ ಸ್ಥಳಕ್ಕೆ ಬಂದಿಳಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಲೇ ಬಂದ್ದಿದ್ದರು. ನಿವೃತ್ತ ನೌಕರರು 20 ಮಂದಿ ಉತ್ಸಾಹದಿಂದ ಜಾಥಾ ಉದ್ಘಾಟನೆಗಾಗಿ ಕಾದಿದ್ದರು. ಕರ್ನಾಟಕ ಕಂಡ ಅಪರೂಪದ ಪರಿಸರ ಹೋರಾಟಗಾರ ಹಾಗೂ ಲೇಖಕ ಶ್ರೀ ಕಲ್ಕುಳಿ ವಿಠ್ಠಲ ಹೆಗ್ಗಡೆ ಘೋಷಣೆಗಳನ್ನು ಬರೆದ ಫಲಕವನ್ನು ಬಾಲಕಿಗೆ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ರಟ್ಟಿನ ಮೇಲೆ ಬರೆಸಿದ ಘೋಷಣೆಗಳನ್ನು ಮಕ್ಕಳು, ಯುವಕರು, ಯುವತಿಯರು ಕೂಗುತ್ತಾ ನಗರದ ಮುಖ್ಯ ಬೀದಿಗಳಲ್ಲಿ ಚಲಿಸಿದರು. ಜಾಥಾದ ಫೋಟೊಗಳನ್ನು ಪ್ಯಾರಿಸ್ ಶೃಂಗ ಸಭೆಗೆ ಕಳುಹಿಸ ಬೇಕಾದ್ದರಿಂದ ಇಂಗ್ಲೀಷ್‍ನಲ್ಲೂ ಘೋಷಣೆಗಳನ್ನು ಬರೆಸಿದ್ದೆವು. ಘೋಷಣೆಗಳು ಹೀಗಿವೆ. +IT IS NOT WARMING +IT’S DYING +** +DOESN’T DENY +CLIMATE CHANGE +** +SYSTEM | NOT CLIMATE +CHANGE | CHANGE +** +NATURE PROTECTS +IF SHE IS PROTECTED +** +NO RAIN +MUCH PAIN +** +LEND A HAND +TO SAVE TREES +** + +THE MORE YOU BURN +THE LESS YOU EARN +** +IF YOU DISTURB THE NATURE +THE NATURE WILL DISTURB YOU +** +PROTECT WHAT +YOU LOVE +MOTHER EARTH +** +A PLANT A DAY +KEEPS THE FLOOD AWAY +** +ANIMALS DIE +WHEN POLLUTION +FILLS LAND & SKY +** +NO ONE WILL +BLAME YOU +FOR GLOBAL WARMING +EXCEPT YOUR CHILDREN +** +ಹೆಚ್ಚಿದ ತಾಪ +ಎಲ್ಲಕೂ ಶಾಪ +** +ಈ ಭೂಮಿ ನಮ್ಮ ತಾತ ಮುತ್ತಾತರಿಂದ +ಬಳುವಳಿಯಾಗಿ ಬಂದದ್ದಲ್ಲ +ನಮ್ಮ ಮಕ್ಕಳು-ಮೊಮ್ಮಕ್ಕಳಿಂದ +ಎರವಲಾಗಿ ಪಡೆದದ್ದು +** +ಕಾರ್ಬನ್ ಹೊಗೆ +ಜಗಕೆಲ್ಲಾ ಧಗೆ +** +ಎಲ್ಲೆಲ್ಲೂ ಪ್ಲಾಸ್ಟಿಕ್ ಚೀಲದ ರಾಶಿ +ಕೇಳಬೇಡಿ ಮಾಲಿನ್ಯದ ಕಾಶಿ +** +ಎಲ್ಲೆಲ್ಲೂ ಗಿಡ-ಮರ +ಚರಾಚರ ಅಮರ +** +ಬಳಸಿ ಎಂದು ಸೋಲಾರು +ಮಾಡಿಕೊಳ್ಳಿ ಕರಾರು +** +ಮಳೆ ನೀರು ಇಂಗಿಸಿ +ಬಾಯಾರಿಕೆ ಹಿಂಗಿಸಿ +** +ಐಷರಾಮಿ ತೊರೆಯಿರಿ +ತ್ಯಾಗವನ್ನು ಮೆರೆಯಿರಿ +** +ವನ್ಯಜೀವಿ ಪ್ರೀತಿಸಿ +ಬಾಳಿನಲ್ಲಿ ಲಂಘಿಸಿ +ಸುಮಾರು 2 ಕಿ.ಮಿ. ಜಾಥಾವನ್ನು ನಡೆಸಿ ಬ್ರಾಸಂ ಸಭಾಂಗಣಕ್ಕೆ ಬರುವ ಹೊತ್ತಿಗೆ ಸರಿಯಾಗಿ ಸಮಯ 12 ಗಂಟೆಯಾಗಿತ್ತು. ಹತ್ತು ನಿಮಿಷದ ವಿರಾಮದ ನಂತರ ಸಭೆ ಶುರುವಾಯಿತು. ಎಲ್ಲರನ್ನೂ ಸ್ವಾಗತಿಸಿ, ಪ್ರಸ್ತಾವಿಕವಾಗಿ ಒಂದಿಪ್ಪತ್ತು ನಿಮಿಷ ಮಾತನಾಡಿದೆ. ಮುಖ್ಯ ಅತಿಥಿಗಳು ಬರೀ ಎರೆಡೆರೆಡು ನಿಮಿಷ ಮಾತನಾಡಿ ವೇದಿಕೆಯನ್ನು ಕಲ್ಕುಳಿಯವರಿಗೆ ಬಿಟ್ಟುಕೊಟ್ಟರು. +1992ರಲ್ಲಿ ಬ್ರೆಜಿಲ್ ದೇಶದಲ್ಲಿ ಪ್ರಾರಂಭವಾದ ಈ ಹವಾಗುಣ ಬದಲಾವಣೆ ಶೃಂಗಸಭೆಯಿಂದ ಹಿಡಿದು ಇವತ್ತಿನವರೆಗೆ 20 ಜಾಗತಿಕ ಸಭೆಗಳು ನಡೆದಿವೆ. ಜಗತ್ತಿನ ಎಲ್ಲಾ ದೇಶದ ಧುರೀಣರು ಒಂದು ಒಟ್ಟಾರೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಮುಂದುವರೆದ ದೇಶ ಅಮೆರಿಕ. ಅಮೆರಿಕ ಯಾವತ್ತೂ ತನ್ನ ಐಷಾರಾಮಿ ಜೀವನದಿಂದ ಹೊರಬರಲು ಒಪ್ಪದೇ ಎಲ್ಲಾ ಶೃಂಗ ಸಭೆಗಳನ್ನೂ ವಿಫಲವಾಗುವಂತೆ ನೋಡಿಕೊಂಡಿತು. ವಾತಾವರಣ ಬದಲಾವಣೆಗೆ ಮುಖ್ಯ ಕಾರಣ ಇಂಗಾಲಾಮ್ಲ, ಪಳೆಯುಳಿಕೆ ಇಂಧನಗಳನ್ನು ಅತಿಯಾಗಿ ಬಳಸುವುದರಿಂದಲೇ ಭೂಮಿ ಬಿಸಿಯಾಗುತ್ತಿದೆ ಎಂದು ವಿಜ್ಞಾನಿಗಳು ಸಾರಿ-ಸಾರಿ ಹೇಳುತ್ತಿದ್ದರೂ ಅಮೆರಿಕ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಮೆರಿಕಾದ ಮೊಬಿಲ್ ಎಕ್ಸಾನ್ ಎಂಬ ತೈಲ ಕಂಪನಿ ಜಗತ್ತಿನ ಹದಿನೇಳು ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಭಾರತದಲ್ಲೂ ಅದರ ಶಾಖೆ ಇದೆ. ಈ ಕಂಪನಿಯ ವಾರ್ಷಿಕ ಲಾಭ ಭಾರತ ದೇಶದ ವಾರ್ಷಿಕ ಬಜೆಟ್ಟಿಗಿಂತ ಹದಿನೇಳು ಪಟ್ಟು ಹೆಚ್ಚು. ಇಂತಹ ಕಂಪನಿಯೇ ಕೆಲವು ವಿಜ್ಞಾನಿಗಳಿ ಹಣ ನೀಡಿ, ಇಂಗಾಲಾಮ್ಲದಿಂದ ವಾತಾವರಣದಲ್ಲಿ ಬಿಸಿ ಏರಿಕೆ ಆಗುವುದಿಲ್ಲ ಎಂಬ ವರದಿಯನ್ನು ಬರೆಸುತ್ತದೆ. ಕಂಪನಿಗೆ ತನ್ನ ಲಾಭ ಮುಖ್ಯವೇ ಹೊರತು ಭೂಮಿಯ ಆರೋಗ್ಯವಲ್ಲ. ಇದೇ ಕಂಪನಿ ಕೆಲವು ಡೋಂಗಿ ಪರಿಸರವಾದಿಗಳಿಗೂ ಹಣ ನೀಡುತ್ತದೆ. “ಹುಲಿಯ ಆಹಾರ” ಎಂಬ ಬಗ್ಗೆ ನಮ್ಮ ದೇಶದ ಡೋಂಗಿ ಪರಿಸರವಾದಿಗಳು ಸಂಶೋಧನೆ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಾರೆ. + +ಭಾರತದಲ್ಲಿ ಭತ್ತ ಬೆಳೆಯುವುದರಿಂದ ಹಾಗೂ ಭಾರತದ ಜಾನುವಾರುಗಳಿಂದ ವಾತಾವರಣದಲ್ಲಿ ಬಿಸಿಯೇರಿಕೆಯಾಗುತ್ತದೆ ಎಂಬ ವರದಿಯನ್ನು ಈ ಕಂಪನಿ ತಯಾರು ಮಾಡುತ್ತದೆ. ಭಾರತದಲ್ಲಿ ಕಟ್ಟಿಗೆ ಒಲೆಯಿಂದ ಬರುವ ಹೊಗೆಯಿಂದ ಇಂಗಾಲಾಮ್ಲ ಹೆಚ್ಚುತ್ತಿದೆಯೆಂಬ ಆರೋಪವನ್ನು ಅಮೆರಿಕ ಮಾಡುತ್ತಿರುವುದಕ್ಕೆ ಈ ಕಂಪನಿಯ ವರದಿಗಳೇ ಕಾರಣ. ಜಗತ್ತಿನ ಯಾವುದೇ ಸರ್ಕಾರಗಳನ್ನು ಅಲ್ಲಾಡಿಸುವ ಶಕ್ತಿ ಹೊಂದಿರುವ ಮೊಬಿಲ್ ಎಕ್ಸಾನ್ ಕಂಪನಿ ಈ ಜಗತ್ತಿನ ನಿಜವಾದ ಖಳನಾಯಕ ಎಂದರು. 50 ನಿಮಿಷ ನಿರರ್ಗಳವಾಗಿ ನೆರದ ಮಕ್ಕಳಿಗೆ ಅರ್ಥವಾಗುವಂತೆ ಕಲ್ಕುಳಿಯವರು ನುಡಿದ ಮಾತುಗಳು ಎಲ್ಲರ ಮನ ತಟ್ಟಿದವು. +2 ಗಂಟೆಗೆ ಸರಿಯಾಗಿ ಸಭೆ ಮುಕ್ತಾಯವಾಯಿತು. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿದ್ದೆವು. ಚಿಕ್ಕದಾದ-ಚೊಕ್ಕದಾದ ಈ ಮಹತ್ವ್ತದ ಕಾರ್ಯಕ್ರಮದ ಆಶಯವನ್ನು ವಿಶ್ವ ನಾಯಕರಿಗೆ ತಲುಪಿಸುವ ಕೆಲಸವನ್ನು ಆವಾಜ್ ಸಂಸ್ಥೆ ಕೈಗೆತ್ತಿಕೊಂಡಿದೆ. ಜಾಥಾದ ಹಾಗೂ ಸಭೆಯ ಪೋಟೊ ಹಾಗೂ ವಿವರಗಳನ್ನು ಕಳುಹಿಸಲಾಗಿದ್ದು, ಇಂದಿನಿಂದ ಪ್ರಾರಂಭವಾಗುವ ಜಾಗತಿಕ ಹವಾಮಾನ ಬದಲಾವಣೆ ಶೃಂಗ ಸಭೆಯಲ್ಲಿ ವಿಶ್ವನಾಯಕರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೆಂದು ಆಶಿಸುತ್ತಾ. . . + \ No newline at end of file diff --git a/PanjuMagazine_Data/article_1080.txt b/PanjuMagazine_Data/article_1080.txt new file mode 100644 index 0000000000000000000000000000000000000000..4f2b5015f093ab1260471081db26e77ab2092c15 --- /dev/null +++ b/PanjuMagazine_Data/article_1080.txt @@ -0,0 +1,17 @@ +ಅಮೂಲ್ಯ ಸಸ್ಯರಾಶಿ, ಜೀವರಾಶಿಗಳಿಂದ ತುಂಬಿದಂತ ಪ್ರದೇಶ, ಬಿಸಿಲಿನ ಕಿರಣಗಳು ಭುವಿಗೆ ಸೋಂಕದಂತಿರುವ ದಟ್ಟ ಕಾನನ, ಒಂದಾನೊಂದು ಕಾಲದಲ್ಲಿ ಕುಖ್ಯಾತ ನರಹಂತಕ ಕಾಡುಗಳ್ಳ ವೀರಪ್ಪನ್ ಆಶ್ರಯ ತಾಣವೂ ಆಗಿದ್ದ ಪ್ರವಾಸಿ ತಾಣವೇ, ಮಲೆಯ ಮಹದೇಶ್ವರ ಬೆಟ್ಟ. +ಒಂದು ಕಾಲದಲ್ಲಿ ವೀರಪ್ಪನ್ ಅಡಗುತಾಣವಾಗಿದ್ದಾಗ, ಮಲೆಯಮಹದೇಶ್ವರ ಬೆಟ್ಟಕ್ಕೆ ಬರೋದಕ್ಕೆ ಜನರು ಭಯ ಪಡುತ್ತಿದ್ದರು. ಸಂಜೆ 6 ಗಂಟೆಯ ನಂತ್ರ ಕೊಳ್ಳೆಗಾಲದಿಂದ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗವ ಮಾರ್ಗವನ್ನ ಮುಚ್ಚಲಾಗುತ್ತಿತ್ತು. ಆದರೇ ಆ ಕಾಲ ಹಿಂದೆ ಸರಿಸು, ನರಹಂತಕ ವೀರಪ್ಪನ್ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿ ಈಗ, ಅದೆಲ್ಲ ದಂತಕತೆಯಷ್ಟೇ. +ಮಹದೇಶ್ವ ನೆಲೆಸಿರುವ ಮಲೆಮಹದೇಶ್ವರ ಬೆಟ್ಟವನ್ನ ಮಾದೇಶನ ಬೆಟ್ಟ, ಮಹದೇಶ್ವರಗಿರಿ, ಎಂ,ಎಂ ಹಿಲ್ಸ್ ಎಂದೆಲ್ಲಾ ಕರೆಯುತ್ತಾರೆ. ಕೊಳ್ಳೆಗಾಲದ ಪೂರ್ವದಿಕ್ಕಿಗೆ ಇರೋ ಈ ಪ್ರದೇಶ, ಒಂದು ಪವಿತ್ರ ಯಾತ್ರಾಸ್ಥಳದ ಜೊತೆಗೆ, ಪ್ರವಾಸಿಗರನ್ನ, ಪ್ರಕೃತಿ ಪ್ರಿಯರನ್ನ ಆಕರ್ಷಿಸುವ ಸುಂದರ ತಾಣ. ಈ ಮಹದೇಶ್ವರ ಬೆಟ್ಟವನ್ನ ಏರುವ ದಾರಿ ಅಷ್ಟು ಸುಗಮವಾದ ದಾರಿ ಅಲ್ಲ. ಹಾವು ಹೇಗೆ ತೆವಳಿಕೊಂಡು ಹೋಗುತ್ತದೋ, ಹಾಗೆ ಈ ಬೆಟ್ಟ ಹತ್ತುವ ರಸ್ತೆ ಇದೆ. ಹೀಗೆ ಇರುವ ದಾರಿಯನ್ನ ಸರ್ಪದ ದಾರಿ, ಬಸವನ ದಾರಿ ಎಂದೆಂಲ್ಲ ಈ ಭಾಗದ ಜನರು ಕರೆಯುವುದು ಉಂಟು. +ಸ್ಥಳ ಪುರಾಣದ ಪ್ರಕಾರ, ಮಲೆಮಹದೇಶ್ವರ ಬೆಟ್ಟದಲ್ಲಿ ಆನೆಮಲೆ, ಜೇನುಮಲೆ, ಕಾನುಮಲೆ, ಪಷೆಮಲೆ, ಪವಳಮೆಲೆ, ಪೊನ್ನಾಚಿಮಲೆ, ಮತ್ತು ಕೂಗುಮಲೆ ಎಂಬ ಮಲೆಗಳು ಸೇರಿ ಒಟ್ಟು ಇಲ್ಲಿ 77 ಮಲೆಗಳು ಇದ್ದಾವೆ. ಈ ಬಗ್ಗೆ ಸವಿವರವಾದ ಮಾಹಿತಿ ದೊರೆತಿರುವ ಜೊತೆಗೆ, ಹಾಡುಗಬ್ಬಗಳಾದ ಜಾನಪದದ ಹಲವು ಪ್ರಕಾರಗಳಲ್ಲಿಯೂ ಇದು ಬಿಂಬಿತವಾಗಿದೆ. +ಇಂತಹ ಐತಿಹಾಸಿಕ ಕೊಂಡಿಯನ್ನ ಬೆಸೆದ ಬೆಟ್ಟದ ಮೇಲೆ ನೆಲೆಸಿರು ದೇವರೇ, ಶ್ರೀ ಮಹದೇಶ್ವರ. ಮಲೆ ಮಹದೇಶ್ವರ ದೇವಸ್ಥಾನ ಶಿವಾಲಯವಾಗಿದ್ದು, ಅಪಾರ ಸಂಖ್ಯೆಯ ಭಕ್ತರನ್ನ ಕರ್ನಾಟಕ ಸೇರಿದಂತೆ, ಹೊರರಾಜ್ಯದಿಂದಲೂ ಹೊಂದಿದೆ. ಹಾಗೇ ಈ ಭಾಗದ ಜನರ ಮನೆದೇವರೂ ಹೌದು. +ಮಲೆಯ ಗಿರಿವಾಸನ ಹಿಂದಿರುವ ಐತಿಹ್ಯ ಕತೆ +ಮಲೆಮಹದೇಶ್ವರ ಇಲ್ಲಿನ ಬೆಟ್ಟಕ್ಕೆ ಬಂದು ನೆಲೆಸಿದ ಬಗ್ಗೆ ಈ ಭಾಗದ ಜನರಲ್ಲಿ ಹಲವು ಐತಿಯ್ಯ, ಪುರಾಣ ಕತೆಗಳು ಜನಜನಿತವಾಗಿವೆ. ಅದರಲ್ಲಿ ಒಂದು, ಮಹದೇಶ್ವರ ಸ್ವಾಮಿ, 17ನೇ ಶತಮಾನದಲ್ಲಿ ಜೀವಿಸಿದ್ದ ಮಹಾನ್ ಮಹಿಮಾ ಪುರುಷ ಎಂಬುದು, ಇತಿಹಾಸದ ದಾಖಲೆಗಳಿಂದ ತಿಳಿದು ಬರುವ ವಿಚಾರ ವಾದರೇ, ಮತ್ತೊಂದು, ಸುಮಾರು 600 ವರ್ಷಗಳ ಹಿಂದೆ ಈ ಮಹದೇಶ್ವರ ಬೆಟ್ಟಕ್ಕೆ ಮಲೆಯ ಮಹದೇಶ್ವರ ಬಂದು ನೆಲೆಸುತ್ತಾನಂತೆ. ಬೆಟ್ಟದಲ್ಲಿ ನೆಲೆನಿಂತು, ಸುಧೀರ್ಘ ತಪಸ್ಸನ್ನ ಆಚರಿಸಿ, ದಿವ್ಯ ಶಕ್ತಿಯನ್ನ ಪಡೆದು ಕೊಂಡನಂತೆ. ಮುಂದೆ ತನ್ನ ಈ ದಿವ್ಯ ಶಕ್ತಿಯಿಂದ ಜನರ ಕಷ್ಟಗಳನ್ನ ನಿವಾರಿಸುತ್ತಾ ಇಲ್ಲಿಯೇ ಲಿಂಗರೂಪದಲ್ಲಿ ನೆಲಸಿಬಿಟ್ಟ ಎಂಬುದು ಇಲ್ಲಿನ ಜನರು ಹೇಳುವ ಜಾನಪದ ಕತೆಯೊಂದರಿಂದ ತಿಳಿಯಬಹುದು. +ಈ ಕತೆಯ ಜೊತೆಗೆ ಮಹದೇಶ್ವರನ ಮೂಲ ಜನ್ಮ ಸ್ಥಳ ಕರ್ನಾಟಕದ ಬೇವಿನಕೊಲ್ಲಿ. ಆದರೇ ಈ ಬಗ್ಗೆ ಖಚಿತ ಮಾಹಿತಿಯ ದಾಖಲೆಗಳು ಲಭ್ಯವಿಲ್ಲ. ಅದೇನೇ ಆದರೂ ಅಸಮಾನ್ಯವಾದ ಲೌಕಿಕ ಶಕ್ತಿಯನ್ನ ಹೊಂದಿರು ಮಲೆಯ ಮಹದೇಶ್ವರ, ಕಷ್ಟವೆಂದು ಬರುವ ಭಕ್ತರ ಕಷ್ಟಗಳನ್ನ ಪರಿಹರಿಸುವ ಭಕ್ತೋದ್ದಾರಕನೆಂದು ಕರೆಯಲಾಗುತ್ತಿದೆ. +ಇಂತಹ ಇತಿಹಾಸ ಪುರುಷ, ಮಹಾನ್ ಮಹಿಮಾವಂತ ಮಹದೇಶ್ವರ ತನ್ನ ಭಕ್ತರನ್ನ ಪರೀಕ್ಷೆ ಮಾಡಲು ಮೊದಲು ಸಕಲ ಐಶ್ವರ್ಯಗಳನ್ನ ನೀಡುತ್ತಾನಂತೆ. ಆನಂತ್ರ ತಾನು ಜಂಗಮನ ವೇಶದಲ್ಲಿ ಭಿಕ್ಷೆ ಬೇಡಲು ಅದೇ ಭಕ್ತರ ಮನೆಗೆ ಹೋಗುತ್ತಾನಂತೆ. ಆಗ ಏನಾದರೂ ಭಕ್ತರು ಭಿಕ್ಷೆ ನೀಡದೇ ಅವಮಾನಿಸಿದಾರೇ, ಅಂತವರ ಮೇಲೆ ಉರಿಯುವ ಕೆಂಡವಾಗಿಬಿಡುತ್ತಾನಂತೆ. ಕೊನೆಗೆ ಆ ಭಕ್ತನನ್ನು ನಾಶಮಾಡಿ ಬಿಡುತ್ತಾನಂತೆ ಎಂಬ ಮತ್ತೊಂದು ನಂಬಿಕೆಯು ಇಲ್ಲಿ ಜನಜನಿತ. +ಕೆಲವು ಸಂದರ್ಭದಲ್ಲಿ ತಾನು ನಾಶಮಾಡಿದ ಭಕ್ತನು ಧರ್ಮ ಪ್ರಿಯನು, ಉತ್ತಮ ನಡಾವಳಿಯ ವ್ಯಕ್ತಿ ಎಂಬುದೇನಾದರೂ ತಿಳಿದು ಬಂದರೇ, ಅಂತಹ ಭಕ್ತನು ಸತ್ತು ಸ್ಮಶಾನದಲ್ಲಿ ಹೆಣವಾಗಿದ್ದರೂ ಅವನನ್ನ ಇದೇ ಮಲೆಯಮಹದೇಶ್ವರ ಬದುಕಿಸುತ್ತಾನೆಂಬ ಹಲವು ಬಗೆಯ ಕತೆಗಳು ಈ ಭಾಗದಲ್ಲಿ ಪ್ರಸಿದ್ದಿ. ಈ ಎಲ್ಲಾ ಐತಿಹ್ಯ,ಪುರಾಣ ಕತೆಗಳು ಮಲೆಮಹದೇಶ್ವರನ ಬಗ್ಗೆ ಇದ್ದು, ಇವೆಲ್ಲಾ ಇಂದಿಗೂ ‘ಗುಡ್ಡರು’ ಎನ್ನುವಂತಹ ಹಾಡುಗಾರರು ಹಾಡುತ್ತಾರೆ. ಇವರು ಹಾಡುವಾಗ ಮಹದೇಶ್ವರನ ಮಹಾತ್ಮೆಯಲ್ಲಿನ ‘ಸಂಕಮ್ಮನ ಸಾಲು’ ಕುರಿತು ಎಂದೂ ಹಾಡುವುದಿಲ್ಲ. ಕೇವಲ ಮಹದೇಶ್ವರ ಈ ಮೊದಲಿನ ಐತಿಹ್ಯ ಕತೆಯನ್ನ ಹಾಡುವುದಷೇ ಇವರ ಪ್ರಧಾನ ಭಾವವಾಗಿಯಂತೆ. +ಜಗತ್ತಿನ ಎರಡನೇ ಮಹಾದೊಡ್ಡಕಾವ್ಯ ಮಲೆಮಹಾದೇಶ್ವರನ ಕಾವ್ಯ +ಇನ್ನೂ ಇಂತಹ ಮಲೆಯ ಮಹದೇಶ್ವರನ ಬಗ್ಗೆ ಹಲವು ವಿದ್ವಾಂಸರು ಜಾನಪದ ಗಾಯಕರಿಂದ ಹಾಡುಗಳನ್ನ ಸಂಗ್ರಹಿಸಿ, ಕೃತಿಗಿಳಿಸಿದ್ದಾರೆ. ಈ ಮಲೆಮಹದೇಶ್ವರನ ಮಹಾಕಾವ್ಯ ದೊಡ್ಡ ಮಹಾಕಾವ್ಯಗಳು ಎಂದರೇ, ಇಡೀ ಜಗತ್ತಿನಲ್ಲಿಯೇ ಫಿನ್‍ಲ್ಯಾಂಡಿನ ಕಲೇವಾಲ ಮೊದಲ ಅತೀ ದೊಡ್ಡ ಮಹಾಕಾವ್ಯವೆನಿಸಿದರೇ, ಎರಡನೇಯದೇ ಮಲೆಮಹದೇಶ್ವರನ ಮಹಾಕಾವ್ಯ. +ಈ ಮಲೆಮಹದೇಶ್ವರನ ಮಹಾಕಾವ್ಯ ಹಲವು ಜನಪದೀಯ ಸಾಲುಗಳನ್ನ ಒಳಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಬರುವ ಶ್ರವಣಯ್ಯನಸಾಲು, ಕುಂತೂರು ಮಠದ ಸಾಲು, ಜುಂಜೇಗೌಡನ ಸಾಲು, ಬೇವಿನಹಟ್ಟಿ ಕಾಳಮ್ಮನ ಸಾಲು ಮತ್ತು ಸುಂಕಮ್ಮನ ಸಾಲುಗಳ ಪ್ರತಿ ಸಾಲಿನಲ್ಲೂ, ಮಲೆಯ ಮಹದೇಶ್ವರನ ಒಂದೊಂದು ಮಹಿಮೆಯನ್ನ ಹೇಳುತ್ತಾ ಹೋಗುತ್ತವೆ. +ಹೋಗೋದು ಹೇಗೆ..? +ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿ ಇರುವ ಮಹದೇಶ್ವರ ಬೆಟ್ಟವು, ಕೊಳ್ಳೆಗಾಲದಿಂದ 50 ಕಿ.ಲೋ ಮೀಟರ್ ಹಾಗೂ ಮೈಸೂರಿನಿಂದ ಹೊರಟರೇ, 150 ಕಿ.ಲೋ.ಮೀಟರ್ ದೂರವಾಗುತ್ತದೆ. ಬೆಟ್ಟ, ಕಡಿದಾದ ರಸ್ತೆ, ಗಿರಿಶೃಂಗಗಳ ವಿಹಂಗಮ ನೋಟದಲ್ಲಿ ಸಾಗುವ ನಿಮ್ಮ ಪ್ರಯಾಣ, ತಂಪು ತಂಪು, ಕೂಲ್ ಎಂಬಂತೆ ಸಾಗುತ್ತದೆ. ಇಲ್ಲಿಗೆ ಬಸ್ಸು, ರೈಲು ಮತ್ತು ವಾಯಸಾರಿಗೆ ವ್ಯವಸ್ಥೆ ಬಳಸಿ ಹೋಗಬಹುದು. ಜೊತೆಗೆ ನಮ್ಮ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಂದ ಸಾರಿಗೆ ವ್ಯವಸ್ಥೆ ಲಭ್ಯ. ಹಾಗೇ ಬೆಂಗಳೂರಿನಿಂದ ಚಾಮರಾಜನಗರ ಮಾರ್ಗವಾಗಿ ನೀವು ಈ ಮಲೆಯ ಮಹದೇಶ್ವರ ಬೆಟ್ಟಕ್ಕೆ ಹೋಗಬಹುದು. ಸೋ ನೀವು ಒಮ್ಮೆ ಹೋಗಿ ಬನ್ನಿ, ಭಕ್ತಿಯಿಂದ ಮಲೆಯ ಮಹದೇಶ್ವರನಿಗೆ ನಮಿಸಿ ಬನ್ನಿ. ಬಟ್ ಬೀ ಅರ್ಲ, ಟೇಕ್ ಕೇರ್, ಹ್ಯಾಪಿ ಜರ್ನಿ. +-ವಸಂತ ಬಿ ಈಶ್ವರಗೆರೆ + \ No newline at end of file diff --git a/PanjuMagazine_Data/article_1081.txt b/PanjuMagazine_Data/article_1081.txt new file mode 100644 index 0000000000000000000000000000000000000000..8e78783dec7005f25b6cbc0961c86a80665b95b2 --- /dev/null +++ b/PanjuMagazine_Data/article_1081.txt @@ -0,0 +1,6 @@ + + ಮೊನ್ನೆ ಟಿವ್ಹಿ ಒಳಗ ಒಂದ ಕ್ವಿಜ್ ಶೋ ನೋಡ್ಲಿಕತ್ತಿದ್ದೆ. ಭಾಗವಹಿಸಿದವರು ಸುಮಾರು ೧೬ ರಿಂದ್ ೧೮ ವಯಸ್ಸಿನ ಒಟ್ಟು ಎಂಟ ಮಂದಿ ಇದ್ರು. ನಾಲ್ಕ ಗುಂಪ ಮಾಡಿದ್ರು. ಒಂದ ಗುಂಪಿನ್ಯಾಗ ಇಬ್ಬರು, ಭಾಗವಹಿಸಿದ ಹುಡುಗರ ಪರಿಚಯ ಮಾಡಿಕೊಟ್ಟು, ಪ್ರಶ್ನೆಗಳನ್ನ ಕೇಳಲಿಕ್ಕೆ ಶುರು ಮಾಡಿದ್ರು. ಎಷ್ಟ ಸರಳ ಪ್ರಶ್ನೆ ಅದು," ಕೌರವರ ತಂದೆ ಯಾರು?" ಅದಕ್ಕ ಅವರು ಕೊಟ್ಟ ಉತ್ತರಾ "ಅರ್ಜುನ" ಅಂತ. ಅದನ್ನ ಕೇಳಿ ನಾ ದಂಗ ಬಡಧಂಗ ಕುತಿದ್ದೆ. ನಮ್ಮ ಹಿಂದುಗಳ ಪವಿತ್ರ ಗ್ರಂಥ ಮತ್ತ ನಮ್ಮ ಭಾರತೀಯರ ಧಾರ್ಮಿಕ ಜೀವನಕ್ಕ ಮಾರ್ಗದರ್ಶನ ಆದಂಥಾ ಮಹಾಭಾರತದ ಬಗ್ಗೆ ಈಗಿನ ಯುವಕರಿಗೆ ಇರೊಹಂತಾ ಕ್ಷೀಣ ಜ್ಞಾನ ನೋಡಿ ಖರೇನು ಭಾಳಾ ಬ್ಯಾಸರಾತು. ಮುಂದಿನ ಪ್ರಶ್ನೆ,"ಕೆಂಪು ವರ್ಣ ಹೊಂದಿರುವ ಗ್ರಹ ಯಾವದು?" ಅದಕ್ಕ ಯಾರಿಗೂ ಉತ್ತರಾ ಗೊತ್ತಿರಲಿಲ್ಲಾ, ಅದಕ್ಕ ಆ ನಿರೂಪಕಿ ನಕ್ಕೋತ ಸ್ಟೈಲಾಗಿ ಹೊಗ್ಲಿ "ನಾವು ಯಾವ ಪ್ಲಾನೇಟ್‍ನಲ್ಲಿದ್ದೀವಿ ಅಂತಾನಾದ್ರು ಹೇಳತಿರಾ" ಅಂತ ಅಂದದ್ದಕ್ಕ, ಒಂದ ಗುಂಪಿನಿಂದ "ಮಾರ್ಸ್" ಅಂತ ಮತ್ತ ಇನ್ನೊಂದ ಗುಂಪಿನಿಂದ "ಮರಕ್ಯೂರಿ" ಅಂತ ಉತ್ತರಾ ಬಂತು, ಅದನ್ನ ಕೇಳಿ ನಾ ಅಂತು ಹೈರಾಣ ಆಗಿ ಹೊದೆ. ತೀರಾ ನಾವು ಭೂಮಿ ಮ್ಯಾಲೆ ಇದ್ದೇವಿ ಅನ್ನೊ ಸಾಮಾನ್ಯ ಪರಿಜ್ಞಾನ ಸುಧ್ಧಾ ಈಗಿನವರಿಗೆ ಇಲ್ಲಂದ್ರ ಅವರು ಅದೆಂಥಾ ಮಾರ್ಗದರ್ಶನದಾಗ ಬೇಳಿಲಿಕತ್ತಾರ ಅನ್ನೊದ ವಿಚಾರ ಮಾಡೋ ಸಂಗತಿನ ಮತ್ತ. ಇದ ಪರಿಸರ ಮಕ್ಕಳಿಗೆ ಸಿಗಲಿಕ್ಕತ್ತಂದ್ರ ಬರೇ ಈ ಭೌಗೋಲಿಕ, ಐತಿಹಾಸಿಕ, ಧಾರ್ಮಿಕ ವಿಚಾರಗಳನ್ನಷ್ಟ ಅಲ್ಲಾ ಮಾನವೀಯ ಸಂಬಂಧಗಳನ್ನು ಸುಧ್ಧಾ ಮರೆಯುವ ಅಂಥಾ ಪರಿಸ್ಥಿತಿ ಬಂದರು ಆಶ್ಚರ್ಯ ಎನಿಲ್ಲಾ. +ನಾವ ಸಣ್ಣವರಿದ್ದಾಗ ಸ್ಕೂಲನ್ಯಾಗ ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಪರಿಕ್ಷಾಗಳನ್ನ ನಡಸತಿದ್ರು. ಮತ್ತ ಅದರ ಜೊತಿಗೇನ ರೆಡ್-ಕ್ರಾಸ್, ಪ್ರಥಮ ಚಿಕಿತ್ಸೆ, ಬೌಧ್ಧಿಕ ಪರಿಕ್ಷಾಗಳು ನಡಿತಿದ್ವು. ಪರಿಕ್ಷಾಪೂರ್ವ ಈ ಎಲ್ಲಾ ವಿಷಯಗಳ ಬಗ್ಗೆ ನಮಗ ತರಬೇತಿ ಕೊಡ್ತಿದ್ರು. ಮತ್ತ ಪ್ರತಿ ವಾರಾ ಮನೆಕೆಲಸ ಅಂತಾ ಒಂದಿಷ್ಟು ಕ್ರಿಯಾತ್ಮಕ ಚಟುವಟಿಕೆಗಳನ್ನ ಮಾಡಲಿಕ್ಕೆ ಕೊಡತಿದ್ರು. ಒಂದೊಂದ ವಾರಾ ಒಂದೊಂದ, ಬ್ಯಾರೆ ಬ್ಯಾರೆ ನಮೂನಿ ಪಕ್ಷಿಗಳ ಚಿತ್ರಾ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ, ಹಣ್ಣುಗಳ ಚಿತ್ರ, ಹೂವುಗಳ ಚಿತ್ರ, ಸಾಕು ಪ್ರಾಣಿಗಳ ಚಿತ್ರ, ಕಾಡುಪ್ರಾಣಿಗಳ ಚಿತ್ರಗಳನ್ನ ಸಂಗ್ರಹ ಮಾಡಿ ದೊಡ್ಡದೊಂದ ಬೋರ್ಡನೊಳಗ ಅಂಟಿಸಿ, ಆಯಾ ಚಿತ್ರದ ಕೆಳಗ ಅವಕ್ಕ ಸಂಬಂಧಪಟ್ಟ ಹೆಸರು ಮತ್ತ ವಿವರಣೆ ಬರೆದು ತಂದು ಟೀಚರ ಅವರಿಗೆ ಒಪ್ಪಿಸಬೇಕಾಗತಿತ್ತು. ಮತ್ತ ರಟ್ಟಿನಿಂದ ತುಳಸಿ ಕಟ್ಟಿ, ಮನಿಯಂಥಾ ವಸ್ತುಗಳನ್ನ ಮಾಡಕೊಂಡ ಬರಲಿಕ್ಕೆ ಹೇಳತಿದ್ರು. ಅಗಲಾದ ಟ್ರೇ ಒಳಗ ತುಂಬ ಮಣ್ಣ ಹಾಕಿ ಅದನ್ನ ಹಸಿ ಮಾಡಿ, ಅದರಾಗ ಬೀಜಾ ಹಾಕಿ ಅವು ಮೊಳಕಿ ಎದ್ದಮ್ಯಾಲೆ ಟೀಚರವರಿಗೆ ತಂದು ಒಪ್ಪಿಸಿ ಅದರ ಬಗ್ಗೆ ಸಂಕ್ಷಿಪ್ತ ವಿವರಣೆ ಬರದು ತೊರಸಬೇಕಾಗತಿತ್ತು. ಹಿಂಗ ಸ್ಕೂಲನ್ಯಾಗ ಬ್ಯಾರೆ ಬ್ಯಾರೆ ವಿಷಯಗಳ ಬಗ್ಗೆ, ಕರಕುಶಲ ವಸ್ತುಗಳನ್ನ ಮಾಡೋದು ಹೆಂಗಂತ ತಿಳಿಸಿಕೊಟ್ಟು ನಮ್ಮ ಕಡೆಯಿಂದ ಪ್ರಾಯೋಗಿಕವಾಗಿ ಪ್ರಯೋಗಗಳನ್ನ ಮಾಡಸ್ತಿದ್ರು. ತಿಂಗಳಿಗೊಮ್ಮೆ ಒಂದೊಂದ ಕ್ಲಾಸನ್ಯಾಗ ಐದು ಮಂದಿ ಹುಡುಗುರದ ಒಂದ ಗುಂಪ ಮಾಡಿ, ಪ್ರತಿ ಗುಂಪಿಗೂ ಒಂದೊಂದ ವಿಷಯ ಕೊಟ್ಟು ಅಂದ್ರ ಹಳ್ಳಿಯ ವಾತಾವರಣ, ಶಹರದ ಚಿತ್ರಣ, ಉದ್ಯಾನವನ, ದೇವಸ್ಥಾನ, ಆಶ್ರಮ, ಪಾಠಶಾಲೆ, ಗುರುಕುಲಗಳು ಹಿಂಗ ಯಾವದರ ಬಗ್ಗೆ ಮಾದರಿಗಳನ್ನ ಮಾಡಕೊಂಡ ಬರಲಿಕ್ಕೆ ಹೇಳತಿದ್ರು. ಎಲ್ಲಾರು ಕೂಡೆ ಚರ್ಚೆ ಮಾಡಿ ವಿಷಯಕ್ಕ ಸಂಬಂಧಪಟ್ಟ ವಸ್ತುಗಳನ್ನ ಸಂಗ್ರಹ ಮಾಡಿ ನಮಗ ವಹಿಸಿದ ವಿಷಯದ ಬಗ್ಗೆ ಪ್ರೋಜೆಕ್ಟ್ ವರ್ಕ್ ಮಾಡತಿದ್ವಿ. ಒಬ್ಬರಿಗೊಬ್ಬರು ಸಹಕಾರ ಕೊಟಗೋತ ಕೆಲಸಾ ಮಾಡಿದ್ರ ಎಷ್ಟ ಛೊಲೋ ಫಲಿತಾಂಶ ಸಿಗತದ ಮತ್ತ ಸಹಾಯ ಮನೋಭಾವನೆ ಬೆಳಿತದ. +ಪ್ರತಿ ಶನಿವಾರಾ ಮಧ್ಯಾನಾ ೪ ಘಂಟೆಕ ಮತ್ತ ರವಿವಾರಾ ಮುಂಝಾನೆ ೯ ಘಂಟೆಕ ಗೀತಾ ಕ್ಲಾಸ್ ನಡಸತಿದ್ರು, ದೇವರ ಶ್ಲೋಕಗಳನ್ನ ಮತ್ತ ಭಗವದ್ಗಿತಾ ಅಧ್ಯಾಯಗಳನ್ನ ಹೇಳಿಕೊಡತಿದ್ರು. ತಿಂಗಳ ಕಡಿವಾರದಾಗ ಶ್ಲೋಕಗಳ ಸ್ಪರ್ಧೆ ಇಡತಿದ್ರು. ಶುಕ್ರವಾರಕ್ಕೊಮ್ಮೆ ಸರಸ್ವತಿ ಪೂಜಾ ಮಾಡಸ್ತಿದ್ರು, ಹಿಂಗ ವಿಧ್ಯಾಭ್ಯಾಸದ ಜೊಡಿ ಸಾಮಾನ್ಯ ಜ್ಞಾನ ಮತ್ತ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆನೂ ಕಲಿತಿದ್ವಿ. + ಈಗೀಗ ನಮ್ಮ ದೇಶಿಯ ಆಟಗಳಂತು ಮಾಯ ಆಗಿಹೊಗ್ಯಾವ. ಈಗಿನ ಯಾವ ಹುಡುಗುರು ಗೋಲಿ, ಗಜ್ಜಗಾ, ಸರಬಡಗಿ, ಲಗೋರಿ, ಕುಂಟೆಬಿಲ್ಲಿ, ಐಸ್-ಪೈಸ್ (ಕಣ್ಣಾಮುಚ್ಚಾಲೆ),ಖೋಖೋ, ಕುಂಟಮುಟ್ಟಾಟಾ, ಗಿಡಮಂಗ್ಯಾ, ಚಿನ್ನಿದಾಂಡ, ಆಣಿಕಲ್ಲ, ಇಂಥಾ ನಾಡ ಆಟಗಳನ್ನ ಯಾರ ಆಡತಾರ ಹೇಳ್ರಿ. ಕಂಪ್ಯೂಟರ್ ಮುಂದ ಕೂತು ಗೇಮ್ಸ್ ಆಡೊದು ಬಿಟ್ರ ಮೊಬೈಲನ್ಯಾಗ ಗೇಮ್ ಆಡೋದು ಇವಿಷ್ಟ ಬಿಟ್ರ ಟಿವ್ಹಿ ಮುಂದ ಕಾರ್ಟೂನ್ ಚಾನಲ್ ಮುಂದ ಕುತ್ರ ಮುಗದಹೋತು ಜಗತ್ತ ಮರತಬಿಡತಾರ. ಹಿಂಗಾಗಿ ಈಗಿನ ಹುಡುರೊಳಗ ಸಂವಹನಶೀಲತೆನ ಕಡಿಮಿ ಆಗೇದ. ಎಲ್ಲಾರ ಜೋಡಿ ಕೂಡಿ ಆಡೊದು, ಬೆರೆಯೋದು ಅಂದ್ರ ಎನು ಅಂತನೂ ಗೊತ್ತಿರಂಗಿಲ್ಲ. ನಾವ ಸಣ್ಣವರಿದ್ದಾಗ ನಮ್ಮ ಅಮ್ಮ ಬೈದು ಮನಿಗೆ ಕರಕೊಂಡ ಬರೊತನಕ ಹೊರಗ ಫ್ರೆಂಡ್ಸ ಜೋಡಿ ಆಡ್ತಿದ್ವಿ, ಆದರ ಈಗ ನಾ ನನ್ನ ಮಗಗ ಒಂದೆರಡ ತಾಸು ಎಲ್ಲರ ಹೊರಗ ಆಟಾ ಆಡಲಿಕ್ಕೆ ಹೋಗ ಮಾರಾಯಾ ಅಂತ ಬೇಡ್ಕೊಂಡ್ರು ಹೋಗಂಗಿಲ್ಲಾ. ಕಂಪ್ಯೂಟರ್ ಮುಂದ ಇಲ್ಲಾ ಟಿವ್ಹಿ ಮುಂದ ಕುತಬಿಡತಾನ. ಮೊನ್ನೆ ನನ್ನ ಗೆಳತಿ ಭೆಟ್ಟಿಯಾಗಿದ್ಲು, ಬಿಜಾಪುರನ್ಯಾಗ ಇರ್ತಾಳ. ಆಕಿ ಮಗಳು ಒಂದನೆ ಕ್ಲಾಸನ್ಯಾಗ ಇದ್ದಾಳಂತ, ಆ ಸಣ್ಣ ಹುಡುಗರಿಗೆ ಪ್ರೋಜೆಕ್ಟ್ ವರ್ಕ್ ಅಂತಹೇಳಿ "ಕೊಲವರಿ ಕೊಲವರಿ" ಹಾಡಿನ ಸಾಹಿತ್ಯ ಬರಕೊಂಡ ಬರ್ರಿ ಅಂತ ಹೇಳಿ ಕಳಿಸಿದ್ರಂತ. ಇದಕ್ಕ ಎನ ನಗಬೇಕೋ,ಅಳ್ಬೇಕೋ, ವಿಷಾದಿಸಬೇಕೋ ಒಂದು ಗೊತ್ತಾಗಲಿಲ್ಲ ನಂಗ. ಈಗೀಗ ಸ್ಕೂಲನ್ಯಾಗ ಮಕ್ಕಳಿಗೆ ಕೊಡೊ ಪ್ರೊಜೆಕ್ಟ್ ವರ್ಕ್ ಮಕ್ಕಳು ಮಾಡೊ ಅಂಥಾವ ಇರಂಗೆ ಇಲ್ಲಾ, ಅವನ್ನೆಲ್ಲಾ ನಾವ ಪಾಲಕರ ಮಾಡಬೇಕು ಅಂದ್ರ ಅಷ್ಟು ಮಕ್ಕಳ ವಯಸ್ಸು ಮತ್ತ ಬುಧ್ಧಿಮಟ್ಟಕ್ಕ ಮೀರಿದಂಥಾವ ಇರತಾವ. ಮನಿಯೋಳಗ ತಂದಿ ತಾಯಿಗಳ ಜೊತಿಗೆ ಸ್ಕೂಲನ್ಯಾಗನೂ ಮಕ್ಕಳಲ್ಲಿ ಉತ್ತಮ ನಡುವಳಿಕೆಯ ಬಗ್ಗೆ ಅರಿವು ಮೂಡಿಸೊವಂಥಾ ವಿಷಯಗಳ ಬಗ್ಗೆ ತಿಳಿಸಿಕೋಡಬೇಕು. ಮಕ್ಕಳು ದಿನದ ಭಾಳಷ್ಟು ಹೊತ್ತು ತಮ್ಮ ಕ್ಲಾಸ ಟೀಚರ ಜೊತಿಗೆನ ಸ್ಕೂಲಿನ್ಯಾಗ ಕಳಿತಾರ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯೊಳಗ ಆಧುನಿಕ ವಿಷಯಗಳ ಜೊತಿಗೆ ನಮ್ಮ ಸಂಸ್ಕೃತಿ ಮತ್ತ ಆಚಾರ ವಿಚಾರಗಳನ್ನ ತಿಳಿಸಿಕೊಡೊ ಅಂಥಾ ಒಂದ ಕ್ರೀಯಾಶಿಲ ಕಾರ್ಯಕ್ರಮವನ್ನ ಹಮ್ಮಿಕೊಬೇಕು. ಇದರಿಂದ ಮಕ್ಕಳಲ್ಲಿ ನಮ್ಮತನದ ಅರಿವು ಮತ್ತ ಸಂವಹನಶೀಲತೆ ಬೆಳಿತದ ಮತ್ತ ಮುಂದ ಭವಿಷ್ಯದ ದಿನಗಳೊಳಗ ಉತ್ತಮ ಪ್ರಜೆಯಾಗಿ ದೇಶವನ್ನ ಪ್ರಗತಿಪಥದೊಳಗ ನಡಸಲಿಕ್ಕೆ ಸಾಧ್ಯ ಆಗ್ತದ. ಈ ನಿಟ್ಟಿನೊಳಗ ಪ್ರಯತ್ನದ ಮೊದಲನೆ ಹೆಜ್ಜಿ ನಮ್ಮ ನಮ್ಮ ಮನಿಯಿಂದನ ಶುರು ಆಗಬೇಕು. ಯಾಕಂದ್ರ ಮನೆಯೆ ಮೊದಲ ಪಾಠಶಾಲೆ ಅನ್ನೊದು ಜಗತ್ತಿಗೆ ಗೊತ್ತಿದ್ದ ನಿತ್ಯ ಸತ್ಯ. +ಈಗಿನ ಕಾಲಮಾನದಾಗ ಆಧುನಿಕ ತಂತ್ರಜ್ಞಾನ ಭಾಳ ಅವಶ್ಯಕ ಅದ. ಆದರ ನಮ್ಮ ದೇಶದ ಐತಿಹಾಸಿಕ, ಪೌರಾಣಿಕ ಮತ್ತ ಪ್ರಾಚೀನ ಸಂಸ್ಕೃತಿಯ ಬಗ್ಗೆ ತಿಳಕೊಳ್ಳೊದು ಸುಧ್ಧಾ ನಮ್ಮ ಕರ್ತವ್ಯ. ನಾವು ಮೊದಲು ನಮ್ಮ ವಿದ್ಯಾಭ್ಯಾಸದ ಜೋಡಿ ನಮ್ಮ ದೇಶದ ಸಂಸ್ಕೃತಿ ಮತ್ತ ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಆಚಾರ ವಿಚಾರ, ದೇಶದ ಸಾಮಾಜಿಕ, ಅರ್ಥಿಕ ಪರಿಸ್ಥಿತಿ ಬಗ್ಗೆ ಜ್ಞಾನಾರ್ಜನೆ ಮಾಡಬೇಕು ಅಂದ್ರನ ನಾವು ಪರಿಪೂರ್ಣ ಸಾಧನೆಕಾರರಾಗಲಿಕ್ಕೆ ಸಾಧ್ಯ ಅದ. ಅದೆಲ್ಲಾ ಬಿಟ್ಟು ನಾವು ಬರೇ ಭಾಳಷ್ಟು ಮಾರ್ಕ್ಸ ತಗೊಂಡು ವಿದೇಶಕ್ಕ ಹೋಗಿ ಅಲ್ಲೆ ಛೊಲೋ ಕೆಲಸಾ ಮಾಡಿ ಅಲ್ಲಿ ಮಂದಿ ಕಡೆ ವ್ಹಾಹ್ ವ್ಹಾಹ್ ಅನಿಸ್ಕೊಂಡು ಕೈ ತುಂಬ ಪಗಾರ ತಗೊಂಡು ಬ್ಯಾಂಕ ಬ್ಯಾಲನ್ಸ ಜಾಸ್ತಿ ಮಾಡ್ಕೊಂಡ್ರ ಅದು ಪರಿಪೂರ್ಣ ಸಾಧನೆ ಆಗಂಗಿಲ್ಲಾ. ನಮ್ಮ ಉತ್ತರ ಕರ್ನಾಟಕದ ಕಡೆ ಒಂದ ಗಾದೆ ಮಾತು ಅದ, "ಮದ್ಲ ಮನಿ ಗೆದ್ದ ಆಮ್ಯಾಲೆ ಮಾರ ಗೆದಿಬೇಕ" ಅಂತ, ಹಂಗ ಮದ್ಲ ನಮ್ಮತನದ ಬಗ್ಗೆ ತಿಳಕೊಂಡ, ನಮ್ಮ ದೇಶಕ್ಕಾಗಿ ಎನರೆ ಒಳ್ಳೆದನ್ನ ಮಾಡಿ, ಆಮ್ಯಾಲೆ ಜಗತ್ ಮೆಚ್ಚೊ ಸಾಧನೆ ಮಾಡಬೇಕು. \ No newline at end of file diff --git a/PanjuMagazine_Data/article_1082.txt b/PanjuMagazine_Data/article_1082.txt new file mode 100644 index 0000000000000000000000000000000000000000..e69de29bb2d1d6434b8b29ae775ad8c2e48c5391 diff --git a/PanjuMagazine_Data/article_1083.txt b/PanjuMagazine_Data/article_1083.txt new file mode 100644 index 0000000000000000000000000000000000000000..19f33c232ad0869147879e2e833598c5f4a6ca29 --- /dev/null +++ b/PanjuMagazine_Data/article_1083.txt @@ -0,0 +1,7 @@ +`ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿ ಚಿತ್ರ ನೋಡುವುದು ಮತ್ತು ಅದರ ಬಗ್ಗೆ ಬರೆಯುವುದು ಕಷ್ಟದ ಕೆಲಸ. ಆಗಲೇ ಹಲವರು ಅದರ ಬಗ್ಗೆ ಬರೆದು-ಹೇಳಿ ಬಿಟ್ಟಿರುತ್ತಾರೆ. ಅವರ ಅಭಿಪ್ರಾಯಗಳು ನಮ್ಮ ತಲೆಯಲ್ಲೂ ನೆಲೆಗೊಂಡು ಬಿಟ್ಟಿರುತ್ತವೆ. ಅದರಿಂದ ಹೊರಬರಲು ಸಾಕಷ್ಟು ತಿಣುಕಬೇಕು. ಕೆಲವು ವಿಮರ್ಶೆಗಳು ಖಂಡಿಸಲೆಂದೇ ಹುಟ್ಟಿಕೊಳ್ಳುತ್ತವೆ! ಕೆಲವರಿಗೆ ಸಿನಿಮಾದ ಅಂತ್ಯವನ್ನು ಹೇಳುವ ಆತುರ. ಇದರಿಂದ ಚಿತ್ರದ ರಸಾಸ್ವಾದನೆಗೆ ಖಂಡಿತ ಧಕ್ಕೆಯಾಗುತ್ತದೆ. ʼಮಾಮನ್ನನ್‌ʼ ನೋಡಿದಾಗ ನನಗೂ ಅದೇ ಆಯಿತು. ಪುಣ್ಯವಶಾತ್‌ ನೋಡುವಂತಿಲ್ಲವೆಂದು ಯಾರೂ ಹೇಳಿರಲಿಲ್ಲ. ʼಪೆರಿಯೇರುಂ ಪೆರುಮಾಳ್‌ʼ ʼಕರ್ಣನ್‌ʼ ಚಿತ್ರದ ಬಳಿಕ ಮಾರಿ ಸೆಲ್ವರಾಜ್‌ ʼಮಾಮನ್ನನ್‌ʼ ಚಿತ್ರ ನಿರ್ದೇಶಿಸುತ್ತಾರೆ, ಅದರಲ್ಲಿ ವಡಿವೇಲುವಿಗೆ ವಿಶಿಷ್ಟವಾದ ಭೂಮಿಕೆಯಿದೆ ಎನ್ನುವುದೇ ನಿರೀಕ್ಷೆ ಹುಟ್ಟಿಸಿ ಚಿತ್ರದ ನಿರ್ಮಾಪಕರು, ನಿರ್ದೇಶಕರಿಗಿಂತ ಹೆಚ್ಚಾಗಿ ಅಭಿಮಾನಿಗಳೇ ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರ ನೀಡಿದ್ದರು. ತಮಿಳುನಾಡಿಗೆ ಸೀಮಿತವಾಗಿದ್ದ ಹೀರೋ ವರ್ಶಿಪ್‌ ಬೆಂಗಳೂರಿನ ತಮಿಳು ಪ್ರೇಮಿ ಕನ್ನಡಿಗರಿಗೆ ಸ್ವಲ್ಪ ಹೆಚ್ಚಾಗಿಯೇ ಅಂಟಿದೆ. ಚಿತ್ರ ಚೆನ್ನಾಗಿದ್ದರೆ ಅತಿಯಾಗಿ ಹೊಗಳುವ ಅವರು ಚೆನ್ನಾಗಿಲ್ಲದಿದ್ದರೆ ಮೌನಕ್ಕೆ ಜಾರುತ್ತಾರೆ! ನಿರ್ದೇಶಕನ ಅಥವಾ ಕಲಾವಿದನ ಮೇಲಿನ ಅತಿಯಾದ ನಿರೀಕ್ಷೆ, ಅವನ ಸೃಜನಶೀಲತೆಗೆ ಭಂಗ ತರುವ ಸಂಭವವೂ ಇದೆ. ಉತ್ತಮ ಚಿತ್ರ ಕೊಟ್ಟು ಭರವಸೆ ಮೂಡಿಸಿದ ನಿರ್ದೇಶಕರು ನಂತರದಲ್ಲಿ ವಿಫಲರಾಗಿದ್ದಕ್ಕೆ ಇದೂ ಕಾರಣವಿರಬಹುದು. ಇರಲಿ, ಮಾರಿ ಸೆಲ್ವರಾಜ್‌ ಭರವಸೆಯನ್ನು ಹುಸಿಗೊಳಿಸಿಲ್ಲ ಎನ್ನುವುದಕ್ಕೆ ʼಮಾಮನ್ನನ್‌ʼ ಚಿತ್ರದಲ್ಲಿ ಸಾಕಷ್ಟು ಕಾರಣಗಳಿವೆ. +ಮಾರಿ ಸೆಲ್ವರಾಜ್‌ಎರಡು ರೀತಿಯಲ್ಲಿ ʼಮಾಮನ್ನನ್‌ʼ ಚಿತ್ರದಲ್ಲಿ ತಮ್ಮನ್ನು ಪ್ರಯೋಗಗೊಳಪಡಿಸಿಕೊಂಡಿದ್ದಾರೆ. ಮೊದಲನೆಯದು ಈ ವರೆಗೆ ನಿರ್ವಹಿಸಿದ ಪಾತ್ರಗಳಿಗಿಂತ ಭಿನ್ನವಾದ ವಡಿವೇಲು ಪಾತ್ರ. ಮತ್ತೊಂದು ಶೋಷಿತ ಜಾತಿಯನ್ನು ಕೇಂದ್ರ.ವಾಗಿರಿಸಿದ ರಾಜಕೀಯ ಚಿತ್ರದ ಕಟ್ಟೋಣ. ರಾಜಕೀಯ ಚಿತ್ರಗಳು ಅನೇಕವಿವೆ. ಅದೇ ರೀತಿಯಲ್ಲಿ ಶೋಷಿತರ ಸಿನಿಮಾಗಳೂ ಬಂದಿವೆ. ಆ ಬಗೆಯ ಹೆಚ್ಚಿನ ಸಿನಿಮಾಗಳಲ್ಲಿ ಬಲಿಷ್ಟ ಜಾತಿಗಳವರೇ ರಕ್ಷಕರೆನ್ನುವುದು ವಿಪರ್ಯಾಸ. ಇದಕ್ಕೆ ವ್ಯತಿರಿಕ್ತವಾಗಿʼಮಾಮನ್ನನ್‌ʼ ದಲಿತ (ಬಹುಶಃ ಇರುಳರ್)‌ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಬದುಕು-ರಾಜಕೀಯವನ್ನು ನಿರೂಪಿಸುತ್ತದೆ. ಶೋಷಿತ ಜಾತಿಯ ವ್ಯಕ್ತಿ ಎಂಎಲ್‌ಎಯಾಗಿ ಆಯ್ಕೆಯಾದರೂ ಬಲಾಢ್ಯ ಜಾತಿಗಳವರ ಹಿಡಿತದಿಂದ ಹೊರ ಬರುವುದಿಲ್ಲ; ಮೂರು ಮಕ್ಕಳು ದಾರಣವಾಗಿ ಹತರಾದರೂ ನ್ಯಾಯ ಕೊಡಿಸಲಾಗದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ. ಎರಡು ಅವಧಿಗೆ ಚುನಾಯಿತನಾದ ಜನ ಪ್ರತಿನಿಧಿಗೆ ಬಲಾಢ್ಯರೆದುರು ಕೂರಲು ಅವಕಾಶವಿಲ್ಲ. ಸಾಮಾಜಿಕ ನ್ಯಾಯವೆನ್ನುವುದು ಬಲಿಷ್ಟರ ಹಿತಾಸಕ್ತಿಯನ್ನು ಅವಲಂಬಿಸಿದೆ ಎನ್ನುವುದನ್ನು ʼಮಾಮನ್ನನ್‌ʼ ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ. ರತ್ನವೇಲು ಸ್ಪಷ್ಟವಾಗಿ ಹೇಳುತ್ತಾನೆ: “ಸಾಮಾಜಿಕ ನ್ಯಾಯವನ್ನು ಅಂತ್ಯಗೊಳಿಸಬೇಕು, ನಂತರ ಅಪ್ಪ ಮಗನನ್ನು ಮುಗಿಸಬೇಕು” ಇವು ಬಲಿತವರಿಗೆ ಸಾಮಾಜಿಕ ನ್ಯಾಯದ ಬಗೆಗಿರುವ ಅಸಹನೆಯನ್ನು ತೋರುವ ಮಾತುಗಳು. ಯಾವ ಪಕ್ಷ ಸೇರಿದರೂ ಅದನ್ನು ಗೆಲ್ಲಿಸುತ್ತೇನೆ, ತನಗೆ ಎದುರಾದವನನ್ನು ಯಾವ ರೀತಿಯಿಂದಲಾದರೂ ಸೋಲಿಸುತ್ತೇನೆ ಎನ್ನುವ ಅವನಲ್ಲಿ, ಜಾತಿ, ಅಂತಸ್ತು, ಸಂಪತ್ತಿನ ಮೂಲಕ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ಅಹಂಕಾರವಿದೆ;ಇದು ಪ್ರಸ್ತುತ ರಾಜಕೀಯ. +ಚುನಾವಣೆಯಲ್ಲಿ ಗೆಲ್ಲಲು ಶೋಷಿತರು ಬಲಿಷ್ಟರನ್ನು ಓಲೈಸುವುದು, ಅಂಥ ಪಕ್ಷಕ್ಕೆ ಸೇರುವುದು, ಹಾಗೂ ಅವರ ಹಂಗಿನಲ್ಲಿರುವುದು ಅನಿವಾರ್ಯವೆನ್ನಿಸುವ ಪರಿಸ್ಥಿತಿ ಇದೆ. ಬಹಳ ಹಿಂದೆಯೇ ಇದನ್ನು ಮನಗಂಡು ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರತ್ಯೇಕ ಮತಕ್ಷೇತ್ರದ ಬೇಡಿಕೆಯನ್ನಿಟ್ಟಿದ್ದರು. ʼಮಾಮನ್ನನ್‌ʼ ಚಿತ್ರದ ಮೂಲಕ ಮಾರಿ ಸೆಲ್ವರಾಜ್‌ ಸೂಚ್ಯವಾಗಿ ಪ್ರತ್ಯೇಕ ಮತಕ್ಷೇತ್ರದ ಅಗತ್ಯವನ್ನು ಹೇಳಲು ಬಯಸಿದಂತೆ ಕಾಣುತ್ತದೆ. ಮಾಮನ್ನನ್‌ ಪಾತ್ರವನ್ನು ನಿರ್ವಚಿಸಿದ ರೀತಿಯೂ ವಿಶಿಷ್ಟವಾದುದು. ಬಲಿಷ್ಟರನ್ನು ಎದುರು ಹಾಕಿಕೊಳ್ಳದೆ ಅವರ ಮರ್ಜಿಯನ್ನು ಪಾಲಿಸುವ ಮಾಮನ್ನನ್‌ ಎಚ್ಚೆತ್ತುಕೊಳ್ಳುವ ಸಂದರ್ಭದ ನಿರ್ವಹಣೆ ಬಹಳ ಸಹಜವಾಗಿದೆ. ಮಾಮನ್ನನ್‌ ಮಗನಂತೆ ದುಡುಕುವವನಲ್ಲ. ಯುದ್ಧವನ್ನು ಗೌರವದಿಂದ ಗೆಲ್ಲಬೇಕೆನ್ನುವ ವಿವೇಚನೆಯಿರುವ ಆತನಲ್ಲಿ ರಿವಾಲ್ವರ್‌ ಕೈಗೆತ್ತಿಕೊಳ್ಳುವ ಕಸುವೂ ಇದೆ. ಚುನಾವಣೆಯ ಸಂದರ್ಭದಲ್ಲಿ ಆತನ ತಾಳ್ಮೆ ಮತ್ತು ಪ್ರಬುದ್ಧತೆ ಪ್ರಕಟವಾಗುತ್ತದೆ. ಅದಿವೀರನ್‌ನ ದುಡುಕುತನದ ಬದಲಾಗಿ ಮಾಮನ್ನನಲ್ಲಿ ವಿವೇಕವಿದೆ. ಈ ಮೂಲಕ ಯುವ ಜನರ ಆಕ್ರಮಣಕಾರಿ ಧೋರಣೆಗೆ, ಎಚ್ಚರದ, ನ್ಯಾಯಿಕ ಹೋರಾಟದ ದಾರಿಯನ್ನು ʼಮಾಮನ್ನನ್‌ʼ ಸೂಚಿಸುವಂತಿದೆ. ತಮ್ಮ ಮೇಲಿನ ನಿರ್ದೇಶಕರ ನಂಬಿಕೆಗೆ ವಡಿವೇಲು ನ್ಯಾಯ ಒದಗಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಕಷ್ಟ ಪಟ್ಟು ಅಭಿನಯಿಸಿರುವಂತೆ ತೋರಿದರೂ ಪಾತ್ರದ ಔಚಿತ್ಯವನ್ನುಅರಿತು ನಟಿಸಿದ್ದಾರೆ. +ಹೊಸ ತಲೆಮಾರು ಹಳಬರಿಗಿಂತ ಭಿನ್ನವಾಗಿ ಯೋಚಿಸುತ್ತಾರೆ ಎನ್ನುವುದನ್ನು ರೂಪಿಸಲು ಮಾರಿ ಸೆಲ್ವರಾಜ್‌ ಚಿತ್ರದಲ್ಲಿ ಹಲವು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಸ್ವಜಾತಿಯ ಸಂಘದ ಪ್ರತಿನಿಧಿ, ನಮ್ಮ ಮಾತು ಅವರು ಕೇಳುವುದಿಲ್ಲ ಎಂದು ರತ್ನವೇಲುವಿಗೆ ಹೇಳುವುದು, ಮಾಮ್ಮನ್ನನ್‌ ಬೆಂಬಲಕ್ಕೆ ಬರುವ ಯುವಜನರು, ಇಂತಾ ಕೆಲವು ದೃಶ್ಯಗಳು. ಸಣ್ಣ, ಸಣ್ಣ ದೃಶ್ಯ ಕಟ್ಟುಗಳಲ್ಲಿ ಮಾರಿ ಸೆಲ್ವರಾಜ್‌ ಇಷ್ಟವಾಗುತ್ತಾರೆ. ಇಲ್ಲಿ ಅವರ ಪ್ರತಿಭೆಯ ಹೊಳಹು ಕಾಣುತ್ತದೆ. ಮಾಮನ್ನನ್‌ ಹೆಂಡತಿಯ ಕಾಲು ಹಿಡಿಯುವುದು, ಮಗನ ಹರಿದ ಜೇಬನ್ನು ಮುಟ್ಟುವುದು, ಹಂದಿ ಮರಿಯನ್ನು ಮುದ್ದಾಡುವುದು ಇಂತಾ ಸೂಕ್ಷ್ಮಗಳು ಬಹಳಷ್ಟನ್ನು ಹೇಳುತ್ತವೆ. ತಿರುವಲ್ಲವರ್‌ ಕವಿತೆಗಳು, ಅಂಬೇಡ್ಕರ್‌ ಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿಕೊಳ್ಳುವದರಲ್ಲೂ ಚಂದವಿದೆ. ಪ್ರತಿಮೆಗಳ ಮೂಲಕ ನಿರೂಪಣೆ ಮಾಡುವುದರಲ್ಲಿ ಮಾರಿ ಸೆಲ್ವರಾಜ್‌ ಸಿದ್ಧಹಸ್ತರು. ಇಲ್ಲಿಯೂ ಹಂದಿ, ಬೇಟೆ ನಾಯಿಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಉದಯ ನಿಧಿ ಸ್ಟಾಲಿನನ್ನು ಅದಿವೀರನ್‌ ಆಗಿ ಸಹಿಸಿಕೊಳ್ಳುವುದು ಕಷ್ಟ. ಅವರ ಮರಗಟ್ಟಿದ ಮೋರೆ ಪ್ರೀತಿಸುವಾಗಲು ಬದಲಾಗದಿರುವುದು ಚೋದ್ಯವೇ ಸರಿ. ಈ ಕೊರತೆಯನ್ನು ತುಂಬಿಕೊಡುವುದು ಫಹಾಧ್ ಫಾಸಿಲ್.‌ ಸಲೀಸಾದ ಪಾತ್ರ ನಿರ್ವಹಣೆ ಅವರದ್ದು. ಉದಯನಿಧಿಯ ಕಣ್ಣುಗಳು ನಿಸ್ತೇಜವಾಗಿದ್ದರೆ, ಫಹಾದ್ ಫಾಸಿಲ್ ಕಣ್ಣುಗಳಲ್ಲಿ ಅಭಿನಯಿಸುತ್ತಾರೆ! +ಕೆಲವು ವಿಷಯಗಳಲ್ಲಿ ಮಾರಿ ಸೆಲ್ವರಾಜ್‌ ರಾಜಿ ಮಾಡಿಕೊಂಡಿದ್ದಾರೆ ಕೂಡಾ. ಅದಿವೀರನ್‌ ಏಕಾಂಗಿಯಾಗಿ ಫೈಟ್‌ ಮಾಡುವುದು, ಚುನಾವಣಾ ಫಲಿತಾಂಶದ ಲಂಬಿತ ವಿವರಣೆ, ಒಂದು ಪಕ್ಷದ ಪರವೆಂದು ಕಾಣುವ ದೃಶ್ಯಗಳು, ಅನವಶ್ಯವೆಂದು ಅನ್ನಿಸುವ ಹಾಡುಗಳು, ಚಿತ್ರದ ಸುದೀರ್ಘ ಅವಧಿ ಸ್ವಾರಸ್ಯವನ್ನು ಕೆಡಿಸುವ ಅಂಶಗಳು. ಲಾಭ ನಷ್ಟದ ಲೆಕ್ಕಾಚಾರವಿರುವ ಸಿನಿಮಾ ರಂಗದಲ್ಲಿ ಸಾಮಾಜಿಕ ನ್ಯಾಯದ ಪರವಾಗಿದ್ದು, ದಲಿತ-ದಮನಿತರ ಪಾತ್ರವನ್ನು ಕೇಂದ್ರವಾಗಿರಿಸಿ ಚಿತ್ರ ನಿರ್ಮಾಣ ಮಾಡುವುದು ಸುಲಭವಲ್ಲ. ಇಂತಹ ಸವಾಲನ್ನು ಎದುರಿಸುವಾಗ ಕಮರ್ಶಿಯಲ್‌ ಅಂಶಗಳು ಬೇಕಾಗಬಹುದು. ಚಿತ್ರದಲ್ಲಿ ಈ ಅಂಶಗಳು ಸ್ವಲ್ಪ ಹೆಚ್ಚೇ ಇವೆ. ದೇಹದ ಆರೋಗ್ಯಕ್ಕೆ ಕಹಿ ಗುಳಿಗೆಯನ್ನು ಸಿಹಿ ಲೇಪನದೊಂದಿಗೆ ಸೇವಿಸುವಂತೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮನರಂಜನೆಯ ಸರಕನ್ನು ಸಹಿಸಿಕೊಳ್ಳಬೇಕಾಗುತ್ತದೆ. +ಕೊನೆಗೆ, ಇನ್ನು ಆಗಲೇ ಕೆಲವರು ಹೇಳಿ ಬಿಟ್ಟಿರುವ ಮಾತು: ನಿರ್ಲಕ್ಷಿತ ಸಮುದಾಯದ ವ್ಯಕ್ತಿ ಬಂದಾಗ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಎದ್ದು ನಿಲ್ಲುವ ಸಂದರ್ಭದ ಚಿತ್ರಣ. ಇದೊಂದು ಅದ್ಭುತವಾದ ಕಲ್ಪನೆ. ಇದು ವೀಕ್ಷಕನಲ್ಲಿ ಗಾಢವಾದ ಪರಿಣಾಮ ಉಂಟು ಮಾಡುತ್ತದೆ. ಇಂತಹ ಅಂಶಗಳೇ ಮಾರಿ ಸೆಲ್ವರಾಜ್‌‌ ರನ್ನು ಮೆಚ್ಚುವಂತೆ ಮಾಡುತ್ತವೆ! +-ಎಂ ನಾಗರಾಜ ಶೆಟ್ಟಿ \ No newline at end of file diff --git a/PanjuMagazine_Data/article_1084.txt b/PanjuMagazine_Data/article_1084.txt new file mode 100644 index 0000000000000000000000000000000000000000..ba4881d1617c3288814ee42a425db539b4edc9fe --- /dev/null +++ b/PanjuMagazine_Data/article_1084.txt @@ -0,0 +1,12 @@ +ಕೊಲ್ಕತ್ತ ವಿಮಾನ ನಿಲ್ದಾಣದ ೩ಎ ಗಾಜಿನ ಬಾಗಿಲಿಂದ ಹೊರಬರುತ್ತಿದ್ದಂತೆ ಸಣ್ಣಗೆ ಮಳೆ. ನನಗಾಗಿ ಕಾಯುತ್ತಿದ್ದ "ಅಭಿಜಿತ್ ಡೆ" ಹೆಸರಿನ ನನಗಿಂತ ಸ್ವಲ್ಪ ಹೆಚ್ಚೇ ವಯಸ್ಸಿನ, ಹೆಚ್ಚೇ ಗಾತ್ರದ ಮತ್ತು ಜಾಸ್ತಿ ಬೆಳ್ಳಗಿನ ವ್ಯಕ್ತಿಯೊಬ್ಬ, "ಹಾಯ್ ಶಿವುಜೀ, ಕೆಸಾ ಹೇ, ಪ್ಲೇನ್ ನೇ ಕೊಯಿ ಪ್ರಾಬ್ಲಂ ನಂ ತಾ: ಸಬ್ ಕುಚ್ ಟೀಕ್ ಹೇನಾ," ಎಂದು ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡನಲ್ಲ, ಅಲ್ಲಿಗೆ ನನ್ನ ಮನಸ್ಸಿನ ಚಿಂತೆಗಳಲ್ಲಿ ಅರ್ಧದಷ್ಟು ದೂರವಾಗಿತ್ತು. ಮೊದಲ ಬಾರಿಗೆ ನನ್ನ ಮಟ್ಟಿಗೆ ತುಂಬಾ ದೂರದ ಕೊಲ್ಕತ್ತಗೆ ಪ್ರಯಾಣ ಹೊರಟಿದ್ದೇನಲ್ಲ ಅದಕ್ಕಾಗಿ ಏನನ್ನು ಮರೆಯಬಾರದೆಂದುಕೊಂಡು, ಎರಡು ದಿನದ ಮೊದಲೇ ನಾನು ತೆಗೆದುಕೊಂಡು ಹೋಗುವ ವಸ್ತುಗಳ ಪಟ್ಟಿಯನ್ನು ಮಾಡಿದ್ದೆ. +ಎರಡು ಲಗೇಜ್ ಬ್ಯಾಗುಗಳು. ಒಂದರಲ್ಲಿ ಐದು ದಿನಕ್ಕಾಗುವ ಬಟ್ಟೆಗಳು, ಇನ್ನೊಂದು ಪುಟ್ಟಬ್ಯಾಗಿನಲ್ಲಿ ವಿಮಾನದ ಟಿಕೆಟ್, ನನ್ನ ವೈಯಕ್ತಿಕ ವಿಳಾಸ ತೋರಿಸುವ ಓಟರ್ ಐಡಿ, ಮೊಬೈಲ್ ಚಾರ್ಚರ್, ಪುಟ್ಟ ಕ್ಯಾಮೆರ ಅದರ ಚಾರ್ಚರ್, ನಾನು ಬೆಳ್ಳಗೆ ಕಾಣಲು ಫೇಸ್ ವಾಸ್, ಪೌಡರ್, ಅಲ್ಲಿ ಪ್ರಯಾಣಿಸುವ ರೈಲಿನಲ್ಲಿ ಬಿಡುವಾದರೆ ಓದಲು ಒಂದೆರಡು ಪುಸ್ತಕಗಳು, ಅಲ್ಲಿನವರಿಗೆ ಕೊಡಲು ನನ್ನ ಪುಸ್ತಕಗಳು ಮತ್ತು ಕಿರುಚಿತ್ರ "ಬೆಳಗಾಯ್ತು ಇನ್ನೂ ನ್ಯೂಸ್ ಪೇಪರ್ ಬಂದಿಲ್ವ" ಸಿಡಿ,……ಹೀಗೆ ಪ್ರತಿಯೊಂದನ್ನು ಮೊದಲೇ ಪಟ್ಟಿ ಮಾಡಿ ಸಿದ್ದಪಡಿಸಿಟ್ಟುಕೊಂಡು ಎಲ್ಲವನ್ನು ಸರಿಯಾಗಿ ಪರೀಕ್ಷಿಸಿಕೊಂಡು ಹೊರಟಿದ್ದರೂ, ಅಲ್ಲಿ ಅಚಾನಕ್ಕಾಗಿ ಎರಡರಲ್ಲಿ ಒಂದು ಬ್ಯಾಗ್ ಕಳೆದುಹೋದರೆ ಅಥವ ವಿಮಾನದಲ್ಲಿ ಹೋಗುವಾಗ ಏನಾದರೂ ತೊಂದರೆಯಾದರೆ ಇರಲಿ ಎಂದುಕೊಂಡು ನನ್ನನ್ನು ಕರೆದ ಕೊಲ್ಕತ್ತದ ಅನೇಕರ ಫೋನ್ ನಂಬರುಗಳನ್ನು ಬರೆದು ನನ್ನ ಶ್ರೀಮತಿಯ ಕೈಗೆ ಕೊಟ್ಟು ಅಲ್ಲಿಂದ ಹೊರಟಿದ್ದೆ. +ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಹೊರಟೆವಲ್ಲ, ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಮಾತು. ದಾರಿಯಲ್ಲಿ ಸಾಗಿದ ಒಂದುಕಾಲು ಗಂಟೆಯಲ್ಲಿ, ತುಂಬಾ ವರ್ಷಗಳ ನಂತರ ಮತ್ತೆ ಬೇಟಿಯಾಗಿದ್ದೇವೆ ಎನ್ನುವಂತೆ, ನಮ್ಮ ನಡುವೆ ಫೋಟೋಗ್ರಫಿ, ಮನೆ ವಿಚಾರ, ಹೀಗೆ ಎಲ್ಲವನ್ನು ಹಂಚಿಕೊಳ್ಳುತ್ತ ಕೊಲ್ಕತ್ತದ ಹೃದಯ ಭಾಗದಿಂದ ದಕ್ಷಿಣ ೩೫ ಕಿಲೋಮೀಟರ್ ಮೂಲೆಯಲ್ಲಿರುವ ಭಾರಕ್ ಪುರ್ನ ಅಭಿಜಿತ್ ಡೆ ಮನೆ ತಲುಪುವ ಹೊತ್ತಿಗೆ, ನಾವಿಬ್ಬರೂ ಬಾಲ್ಯದ ಗೆಳೆಯರು ಮತ್ತೆ ಬೇಟಿಯಾಗುತ್ತಿದ್ದೇವೇನೋ ಎನ್ನುವಂತ ಒಂದು ನಮಗರಿಯದಂತ ಆತ್ಮೀಯತೆ ನಮ್ಮೊಳಗೆ ಮೂಡಿತ್ತು. ನನಗಂತೂ ಅವರ ಮನೆ ತಲುಪುತ್ತಿದ್ದಂತೆ ಉಳಿದಿದ್ದ ಅರ್ಧ ಚಿಂತೆಯೂ ಸಂಪೂರ್ಣ ಮಾಯವಾಗಿ ತಂದಿರುವ ಎಲ್ಲವೂ ಕಳೆದು ಹೋದರೂ ಇಲ್ಲಿ ನೆಮ್ಮದಿಯಾಗಿ ಇರಬಹುದು ಎನಿಸಿತ್ತು. + "ಶಿವು ನಿಮಗೆ ಏನೂ ಅಭ್ಯಂತರವಿಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ಇರಬಹುದು" ನಿಮಗೆ ಇಷ್ಟವಿಲ್ಲದಿದ್ದಲ್ಲಿ ನಮ್ಮ ಇತರ ಜ್ಯೂರಿಗಳಿಗೆ ಹೋಟಲ್ಲಿನಲ್ಲಿ ರೂಂ ವ್ಯವಸ್ಥೆ ಮಾಡಿದಂತೆ ನಿಮಗೆ ವ್ಯವಸ್ಥೆ ಮಾಡುತ್ತೇವೆ" ಎಂದು ಅಭಿಜಿತ್ ಡೇ ಫೋನಿನಲ್ಲಿ ಕೇಳಿದಾಗ, "ನಾನು ನಿಮ್ಮ ಮನೆಯಲ್ಲಿ ಇರುತ್ತೇನೆ" ಎಂದಿದ್ದೆ. ಅದಕ್ಕವರು ಸಂಕೋಚದಿಂದ "ನಮ್ಮಂತಹ ಬಡವನ ಮನೆ, ನಿಮಗೆ ತೊಂದರೆಯಾಗಬಹುದು" + ನೋಡಿ ಅಭಿಜಿತ್ ಡೇ ಸರ್, ನಾವು ಯಾವುದೇ ಪ್ರವಾಸಕ್ಕೆ ಹೋದರೂ ಅಲ್ಲೆಲ್ಲಾ ಹೋಟಲ್ ರೂಮಿನಲ್ಲಿಯೆ ಉಳಿದುಕೊಳ್ಳುತ್ತೇವಾದ್ದರಿಂದ ಅದರಲ್ಲಿ ಏನು ವಿಶೇಷವಿಲ್ಲ. ಆದ್ರೆ ಮೊದಲ ಭಾರಿಗೆ ಕಲ್ಕತ್ತದಂತ ದೊಡ್ದ ನಗರಕ್ಕೆ ಬರುತ್ತಿದ್ದೇನೆ. ಅಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದ ಜೊತೆ ಒಂದೆರಡು ದಿನ ಕಳೆಯುವುದು ನನ್ನ ಸೌಭಾಗ್ಯವೆಂದುಕೊಳ್ಳುತ್ತೇನೆ. ನಮ್ಮಿಬ್ಬರ ನಡುವೆ ಬಡತನ-ಸಿರಿತನವೆಂಬ ಬೇಧಭಾವಗಳಿಲ್ಲ. ನಾನು ಕೂಡ ಒಬ್ಬ ಸಾಮಾನ್ಯ ದಿನಪತ್ರಿಕೆ ವಿತರಕನಷ್ಟೆ., ಮತ್ತೆ ಇದು ನನ್ನ ಬದುಕಿನ ಮದುರವಾದ ನೆನಪಿನ ಕ್ಷಣಗಳಾಗಬಹುದು. ಎಂದು ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಒಪ್ಪಿಕೊಂಡಿದ್ದೆ. +ಯಾವುದೇ ಒಂದು ಹಳ್ಳಿ, ಪಟ್ಟಣ, ನಗರಕ್ಕೆ ಹೋದಾಗ ನಮ್ಮ ಪುಟ್ಟ ಕಣ್ಣುಗಳ ಹೊರನೋಟಕ್ಕೆ ಅವು ಬಹು ಸುಂದರವಾಗಿ ಅಥವ ಕೊಳಕಾಗಿ ಕಾಣಿಸಬಹುದು. ಆದರೆ ಅವುಗಳ ನಿಜವಾದ ಆತ್ಮದ ಒಂದು ಕೋಲ್ಮಿಂಚು, ಭಾವನಾತ್ಮಕ ಅಭಿವ್ಯಕ್ತಿಯ ತುಣುಕನ್ನು ಆಸ್ವಾದಿಸಬೇಕಾದರೆ ಖಂಡಿತವಾಗಿ ಅವುಗಳಲ್ಲಿನ ಒಂದು ಮನೆಯಲ್ಲಿ ಒಂದೆರಡು ದಿನಗಳ ಮಟ್ಟಿಗಾದರೂ ಇದ್ದು ಬರಬೇಕು ಎಂದು ಎಲ್ಲಿಯೋ ಓದಿದ್ದು ನೆನಪಾಗಿತ್ತು ಮತ್ತು ನನ್ನ ಉದ್ದೇಶವೂ ಅದೇ ಆಗಿತ್ತು. "ಹಾವ್ ಜೀ" ಎಂದು ಅವರ ಶ್ರೀಮತಿಯವರು ನನ್ನನ್ನು ಸ್ವಾಗತಿಸಿದಾಗ ಮೊಟ್ಟ ಮೊದಲ ಭಾರಿಗೆ ಕೊಲ್ಕತ್ತದ ಒಂದು ಟಿಪಿಕಲ್ ಮದ್ಯಮ ವರ್ಗದ ಮನೆಯೊಳಕ್ಕೆ ಕಾಲಿಟ್ಟಿದ್ದೆ. ಅಭಿಜಿತ್, ಅವರ ಶ್ರೀಮತಿ, ಒಬ್ಬಳು ಪುಟ್ಟ ಮಗಳು, ಕೆಲಸದವಳಾದರೂ ಮನೆ ಮಗಳೇ ಆಗಿಬಿಟ್ಟಿರುವ ನಮಿತ. ಈ ನಾಲ್ವರ ಪುಟ್ಟ ಮದ್ಯಮ ವರ್ಗದ ಕುಟುಂಬವದು. ಬಿಸಿ ಬಿಸಿ ಟೀ ಕುಡಿದ ನಂತರ ಪುಟ್ಟದಾಗಿ ಸ್ನಾನ ಮಾಡಿ ಸಿದ್ದನಾದೆನಲ್ಲ…ಸಂಕೋಚದಿಂದ ಮಾತಾಡುವ ಅವರ ಶ್ರೀಮತಿ, ಮುಗ್ದತೆಯಿಂದ ತಾನು ಬಿಡಿಸಿದ ಚಿತ್ರವನ್ನು ತೋರಿಸುವ ಅವರ ಮಗಳು, ನಮಗಿಷ್ಟದ ಅಡುಗೆಯನ್ನು ಉತ್ಸಾಹದಿಂದ ಮಾಡುವ ನಮಿತ, ಮನಪೂರ್ವಕವಾಗಿ ನಗುತ್ತ ಮಾತಾಡುವ ಅಭಿಜಿತ್, ಕೇವಲ ಒಂದೇ ಗಂಟೆಯಲ್ಲಿ ಎಲ್ಲರೂ ಆತ್ಮೀಯರಾಗಿ ನಮ್ಮ ಮನೆಯಲ್ಲಿಯೇ ಇರುವಂತೆ ಅನ್ನಿಸತೊಡಗಿತ್ತು. +ಕೆಲ ನಿಮಿಷಗಳ ನಂತರ ಅಭಿಜಿತ್ ಡೇ ತಮ್ಮ ಇಪ್ಪತ್ತು ವರ್ಷಗಳ ಅನುಭವದಲ್ಲಿ ಕಲಿತ ಫೋಟೊಗ್ರಫಿ, ಹೇಳಿಕೊಟ್ಟ ಗುರುಗಳು, ನಡೆದು ಬಂದ ದಾರಿ ಎಲ್ಲವನ್ನು ಅವರ ಅದ್ಬುತ ಚಿತ್ರಗಳ ಮೂಲಕ ವಿವರಿಸಿದಾಗ ಅವರ ಬಗ್ಗೆ ಹೆಮ್ಮೆಯೆನಿಸಿತ್ತು. ವಿಭಿನ್ನವಾದ ಅಲೋಚನೆ, ಚಿಂತನೆ ಮತ್ತು ಪ್ರಯೋಗಗಳಿಂದ ಮೂಡಿಸುವ ಅವರ ಫೋಟೊಗ್ರಫಿ ಕಲಾಕೃತಿಗಳು, ಅದರಿಂದ ಗಳಿಸಿದ ಪ್ರಶಸ್ತಿಗಳು, ಇತ್ಯಾದಿಗಳನ್ನು ನೋಡಿದ ಮೇಲೆ ಇವರಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ ಎನಿಸಿತು. ನಮ್ಮ ದಕ್ಷಿಣ ಭಾರತದ ಛಾಯಾಗ್ರಾಹಕರ ಫೋಟೊಗ್ರಫಿ ವಿಧಾನ, ತಯಾರಿ ರೂಪುರೇಷೆಗಳು ಒಂದು ರೀತಿಯಾದರೆ, ಉತ್ತರ ಭಾರತದ ಅದರಲ್ಲೂ ಪಶ್ಚಿಮ ಬಂಗಾಲದವರ ಫೋಟೊಗ್ರಫಿ ವಿಧಾನ, ರೂಪುರೇಷೆಗಳು ಬೇರೆ ತರನದ್ದು. ಅವರ ಚಿತ್ರಗಳನ್ನು ನೋಡಿದಾಗ ಅವರು ಕಲಾತ್ಮಕ ಛಾಯಾಗ್ರಾಹಣದಲ್ಲಿ ನಮಗಿಂತ ಮುಂದಿದ್ದಾರೆ ಅನಿಸುತ್ತದೆ. +ನಡುವೆ ಬೆಂಗಾಲದ ಟಿಪಿಕಲ್ ಶೈಲಿಯ ದಹೀ ಮಸಾಲಪುರಿ ಬಂತು. ಆಹಾ ಎಂಥ ರುಚಿ ಅಂತೀರಿ, ಅದನ್ನು ಸವಿಯುತ್ತಾ, ಅಭಿಜಿತ್ ಫೋಟೊಗಳನ್ನು ನೋಡುತ್ತಾ, ಅವರ ಅನುಭವವನ್ನು ಕೇಳುತ್ತಾ, ವಾಹ್! ಸಮಯ ಹೋಗಿದ್ದೇ ತಿಳಿಯಲಿಲ್ಲ. ನಡುವೆ ಅವರ ಫೋಟೊಗ್ರಫಿ ಕ್ಲಬ್ನ ಅಧ್ಯಕ್ಷರು, ಇತರ ಸದಸ್ಯರು, ವಿಧ್ಯಾರ್ಥಿಗಳ ಬಂದಾಗ ಅವರ ಪರಿಚಯವೂ ಆಯ್ತು. ರಾತ್ರಿ ಊಟದ ಸಮಯವಾಯ್ತು ಬನ್ನಿ ಎಂದು ಕರೆದಾಗಲೇ ಗೊತ್ತಿಗಿದ್ದು ಆಗಲೇ ರಾತ್ರಿ ಒಂಬತ್ತು ಗಂಟೆ ದಾಟಿದೆಯೆಂದು. ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತೆವು. ನನಗಿಷ್ಟವೆಂದು ಪರೋಟ, ಅಲುಗಡ್ಡೆಯ ಪಲ್ಯ, ಚಿಕನ್ ಮಸಾಲ, ಪಾಯಸ ಮತ್ತು ರಸಗುಲ್ಲ,.ಒಟ್ಟಾರೆಯಾಗಿ ರಾತ್ರಿ ಭರ್ಜರಿ ಊಟವೇ ಆಗಿಹೋಯ್ತು. ಈ ನಡುವೆ ಮಧ್ಯಾಹ್ನ ನಾನು ಬರುವ ಹೊತ್ತಿಗೆ ಶುರುವಾದ ಜಡಿ ಮಳೆ ಆಗಾಗ ಬಿಡುವುದು ಮತ್ತೆ ಶುರುವಾಗುವುದು ಥೇಟ್ ನಮ್ಮ ಬೆಂಗಳೂರಿನ ಮಳೆಯಂತೆ ಕಣ್ಣುಮುಚ್ಚಾಲೆಯಾಡುತ್ತಿತ್ತು. ಹೊರಗೆ ಸ್ವಲ್ಪ ಜೋರು ಮಳೆ ಶುರುವಾದರೂ ನನಗಂತೂ ಪ್ರಯಾಣದ ಆಯಾಸದಿಂದ ಮಲಗಿದ ತಕ್ಷಣವೆ ನಿದ್ರೆ ಆವರಿಸಿತ್ತು. + ಮರುದಿನ ಬೆಳಿಗ್ಗೆ ಎಚ್ಚರವಾದಾಗ ಹೊರಗೆ ಸಂಪೂರ್ಣ ಬೆಳಕಾಗಿತ್ತು. ಬಹುಶಃ ನಾನು ಎಂಟುಗಂಟೆಯವರೆಗೂ ಚೆನ್ನಾಗಿ ಮಲಗಿಬಿಟ್ಟಿದ್ದೇನೆ ಅಂದುಕೊಂಡು ಕೈಗಡಿಯಾರವನ್ನು ನೋಡಿಕೊಂಡರೆ ಐದು ಗಂಟೆ ತೋರಿಸುತ್ತಿದೆ! ಇದೇನಿದು ಹೊರಗೆ ನೋಡಿದರೆ ಅಷ್ಟೊಂದು ಬೆಳಕಾಗಿದೆ, ಆದ್ರೆ ಮೊಬೈಲಿನಲ್ಲೂ ಕೂಡ ಐದುಗಂಟೆ ತೋರಿಸುತ್ತಿದೆ! ಕುತೂಹಲದಿಂದ ಎದ್ದು ಬಾಲ್ಕನಿಗೆ ಬಂದು ನೋಡಿದರೆ, ನಿಜವಾಗಿಯೂ ಬೆಳಿಗ್ಗೆ ಐದು ಗಂಟೆಗೆ ಸಂಪೂರ್ಣ ಬೆಳಕಾಗಿಬಿಟ್ಟಿದೆ! ನಮ್ಮ ಬೆಂಗಳೂರಿನಲ್ಲಿ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಆಗುವಷ್ಟು ಬೆಳಕಾಗಿಬಿಟ್ಟಿದೆ. ಸೂರ್ಯೋದಯ ಕಾಣಬಹುದಾ ಎಂದು ಪೂರ್ವದತ್ತ ನೋಡಿದರೆ ದಟ್ಟವಾದ ಮೋಡದ ವಾತಾವರಣ, ಈ ಮಳೆಗಾಲದಲ್ಲಿ ಹೀಗಾದರೆ ಮೋಡಗಳಿಲ್ಲದ ಬೇಸಿಗೆ ಹೇಗಿರಬಹುದು ಎಂದು ಕಲ್ಪಿಸಿಕೊಂಡರೆ ಬಹುಶಃ ನಮ್ಮ ಬೆಂಗಳೂರಿನ ಒಂಬತ್ತು-ಹತ್ತು ಗಂಟೆಯಲ್ಲಿ ಕಾಣುವ ಬೆಳಕು ಇಲ್ಲಿ ಮುಂಜಾನೆ ನಾಲ್ಕು-ಐದು ಗಂಟೆಗೆ ಕಾಣಬಹುದೇನೊ! ಈ ಸಮಯದಲ್ಲಿ ಬೆಂಗಳೂರು ಹೇಗಿರಬಹುದು? ನಮ್ಮ ದಿನಪತ್ರಿಕೆ ಹಂಚುವ ಹುಡುಗರು ಏನು ಮಾಡುತ್ತಿರಬಹುದೆಂದು ನೆನಪಿಸಿಕೊಂಡರೆ, ಕತ್ತಲಲ್ಲಿ ಸಪ್ಲಿಮೆಂಟರ್ ಹಾಕುವ ನಂತರ ಜೋಡಿಸಿಕೊಳ್ಳುತ್ತಾ, ತಲೆಹರಟೆ ಮಾಡುತ್ತಾ, ಸಿದ್ದವಾಗುತ್ತಿರುವ ಅನೇಕ ಪುಟ್ಟ ಪುಟ್ಟ ಚಿತ್ರಗಳು ಮನಸ್ಸಿನಲ್ಲಿ ಹಾದು ಹೋದವು. ಇಷ್ಟು ಬೇಗ ಎದ್ದು ಏನು ಮಾಡುವುದು ಎಂದು ಮತ್ತೆ ಮಲಗಿದೆ. ಎಚ್ಚರವಾದಾಗ ಏಳುಗಂಟೆ. ನಾವು ಕೊಲ್ಕತ್ತದಿಂದ ನೂರತೊಂಬತ್ತು ಕಿಲೋಮೀಟರ್ ದೂರದಲ್ಲಿ ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಸುಂದರ ಮತ್ತು ಪುಟ್ಟ ದಿಘ ಟೌನಿಗೆ ಹೋಗಬೇಕಿತ್ತು. ಅಲ್ಲಿಯೇ ನಮ್ಮ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ತೀರ್ಪುಗಾರಿಕೆಗಳು ನಡೆಯುವುದು ನಿಗದಿಯಾಗಿತ್ತು. +ನಾನು ಮತ್ತು ಅಭಿಜಿತ್ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಬೆಳಗಿನ ತಿಂಡಿ ಮುಗಿಸಿ ಸಿದ್ದರಾಗುವ ಹೊತ್ತಿಗೆ ಅವರ ಕ್ಲಬ್ಬಿನ ಇನ್ನಿತರ ಸದಸ್ಯರು ನಮ್ಮನ್ನು ಕೂಡಿಕೊಂಡರು. ನಮ್ಮ ಲಗ್ಗೇಜುಗಳನ್ನು ಹೊತ್ತು ರೈಲು ನಿಲ್ದಾಣದ ಕಡೆಗೆ ಹೊರಟೆವು. ಛಾಯಗ್ರಾಹಕ ಗೆಳೆಯ ಅಭಿಜಿತ್ ಮನೆಯಿಂದ ಒಂದು ಕಿಲೋಮೀಟರ್ ದೂರ ರೈಲು ನಿಲ್ದಾಣಕ್ಕೆ ಹೋಗಲು ಸೈಕಲ್ ರಿಕ್ಷಾ ಹತ್ತಿದೆವು. ಸ್ವಲ್ಪ ದೂರದ ಮುಖ್ಯರಸ್ತೆಗೆ ಹೋಗುತ್ತಿದ್ದಂತೆ ಒಂದರ ಹಿಂದೆ ಒಂದು ಎದುರಿಗೆ ಪಕ್ಕದಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಲ್ ಹೊಡೆಯುತ್ತಾ ಸಾಗುವ ಸೈಕಲ್ ರಿಕ್ಷಾಗಳು ಆ ಕ್ಷಣದಿಂದ ನನಗೆ ಕುತೂಹಲದ ವಸ್ತುಗಳಾದವು. ನೂರಾರು ವರ್ಷಗಳ ಇತಿಹಾಸವುಳ್ಳ ಕೊಲ್ಕತ್ತದ ಪಳಯುಳಿಕೆಯ ಭಾಗವಾಗಿರುವ ಇಲ್ಲಿನ ಸೈಕಲ್ ರಿಕ್ಷಾಗಳು ಮುಂಜಾನೆ ಐದು ಗಂಟೆಗೆ ಪ್ರಾರಂಭವಾದರೆ ರಾತ್ರಿ ಹನ್ನೊಂದುಗಂಟೆಯವರೆಗೆ ನಿಮ್ಮನ್ನು ಒಂದು ಕಿಲೋಮೀಟರಿನಿಂದ ಐದಾರು ಕಿಲೋಮೀಟರ್ ದೂರದವರೆಗೆ ಲಗ್ಗೇಜು ಸಮೇತ ನಿಮ್ಮನ್ನು ಸಾಗಿಸುತ್ತವೆ. +ಇಪ್ಪತ್ತರೊಳಗಿನ ಯುವಕರಿಂದ ಹಿಡಿದು ಎಪ್ಪತ್ತು ದಾಟಿದ ವಯಸ್ಸಾದ ಮುದುಕರವರೆಗೂ ಅನೇಕರಿಗೆ ಜೀವನಕ್ಕೆ ದಾರಿಯಾಗಿರುವ ಇವುಗಳನ್ನು ಎತ್ತರದ ಕಟ್ಟಡದ ತುದಿಯಿಂದ ಕೆಳಗೆ ಇಣುಕಿ ನೋಡಿದರೆ ಹದಿನೈದು ಅಡಿ ಅಗಲದ ಪುಟ್ಟ ಪುಟ್ಟ ರಸ್ತೆಯಲ್ಲಿ ಬೆಲ್ ಮಾಡುತ್ತಾ ಸಾಗುವಾಗುತ್ತಿದ್ದರೆ ನೆಲದ ಮೇಲೆ ಬ್ಯುಸಿಯಾಗಿ ಹರಿದಾಡುವ ಇರುವೆಗಳನ್ನು ನೆನಪಿಸುತ್ತವೆ. ಎಲ್ಲೆಂದರಲ್ಲಿ ಕೈತೋರಿಸಿದರೆ ನಿಲ್ಲಿಸಿ ನಮ್ಮನ್ನು ಕರೆದೊಯ್ಯುವ ಈ ಸೈಕಲ್ ರಿಕ್ಷಾವಾಲಗಳು ಶ್ರಮಜೀವಿಗಳು. ಒಂದೆರಡು ಕಿಲೋಮೀಟರ್ ಸಾಗಿದರೂ ಅವರು ಪಡೆದುಕೊಳ್ಳುವ ಹಣ ಐದರಿಂದ ಹತ್ತು ರೂಪಾಯಿ ಅಷ್ಟೆ. ನಮ್ಮಲ್ಲಿ ಕಾಣುವ ಆಟೋರಿಕ್ಷಾಗಳಿಗೆ ಪರ್ಯಾಯವಾಗಿರುವ ಅವು ಇಡೀ ಕೊಲ್ಕತ್ತ ನಗರದಲ್ಲಿ ಲಕ್ಷಾಂತರವಿರಬಹುದೆಂದುಕೊಳ್ಳುವಾಗಲೇ ಭಾರಕ್ಪುರ್ ರೈಲು ನಿಲ್ದಾಣ ಬಂತು. ಕೊಲ್ಕತ್ತ ನಗರದ ಭಾಗವಾಗಿರುವ ಭಾರಕ್ಪುರ ಪೂರ್ವದ ಕೊನೆಯಲ್ಲಿದೆ. +(ಮುಂದುವರೆಯುವುದು…) \ No newline at end of file diff --git a/PanjuMagazine_Data/article_1085.txt b/PanjuMagazine_Data/article_1085.txt new file mode 100644 index 0000000000000000000000000000000000000000..91ccff4dcef39d49072ace43d22d37ccafe34e81 --- /dev/null +++ b/PanjuMagazine_Data/article_1085.txt @@ -0,0 +1,16 @@ +ಯಾವುದೇ ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳೆಂದರೆ ಒಂದು ನೈಸರ್ಗಿಕ ಸಂಪನ್ಮೂಲ ಇನ್ನೊಂದು ಮಾನವ ಸಂಪನ್ಮೂಲ. ಯಾವ ದೇಶದಲ್ಲಿ ವಿಪುಲವಾಗಿ ನೈಸರ್ಗಿಕ ಸಂಪನ್ಮೂಲವಿದೆಯೋ ಆ ದೇಶವು ಅಭಿವೃದ್ಧಿಶೀಲ ದೇಶವೆಂದು ಹೇಳಲು ಸಾಧ್ಯವಿಲ್ಲ, ಆ ನೈಸರ್ಗಿಕ ಸಂಪನ್ಮೂಲವನ್ನು ಅಲ್ಲಿನ ಮಾನವ ಸಂಪನ್ಮೂಲವು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆಯೋ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಹಾಗಾಗಿ ನೈಸರ್ಗಿಕ ಸಂಪನ್ಮೂಲವನ್ನು ಮಿತವ್ಯಯವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಾನವ ಸಂಪನ್ಮೂಲವು ಈ ದೇಶಕ್ಕೆ ಬೇಕಾಗಿದೆ. ಅದು ಅಲ್ಲದೆ ಇಂದು ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ಮಾನವೀಯತೆಯ ನೆಲೆಗಟ್ಟಿನಲ್ಲಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳುವ ಮಾನವ ಸಂಪನ್ಮೂಲ ಬೇಕಾಗಿದೆ. ಇಂತಹ ಮಾನವ ಸಂಪನ್ಮೂಲವನ್ನು ನಿರ್ಮಾಣ ಮಾಡುವ ಜವಾಬ್ದಾರಿಯು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ನೀಡುವ ಶಾಲೆ, ಕುಟುಂಬ ಹಾಗೂ ಸಮುದಾಯದ ಮೇಲಿದೆ. ಜೀವಜಗತ್ತಿನ ಪ್ರತಿಯೊಂದು ಜೀವಿಗೂ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಜವಾಬ್ದಾರಿಯೊಂದಿಗೆ ನೈಸರ್ಗಿಕ ಸಂಪನ್ಮೂಲವನ್ನು ಉಳಿಸಿಕೊಳ್ಳುವುದರೊಂದಿಗೆ ಅದನ್ನು ಸಂರಕ್ಷಿಸುವದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. +ಏಕೆಂದರೆ ಇಂದು ಜೀವಜಗತ್ತಿನಲ್ಲಿ ಶ್ರೇಷ್ಠನಾದ ಮಾನವನ ಸ್ವಾರ್ಥತೆಯು ಹೆಚ್ಚಾಗಿದೆ. ವಿಫುಲ ಸಂಪನ್ಮೂಲಗಳಿಂದ ತುಂಬಿದ್ದ ವಸುಂಧರೆಯನ್ನು “ಹೇ ವಸುಂಧರೆ ನೀನೆಷ್ಟು ಸುಂದರೆ” ಎಂದು ಹಾಡಿ ಹೊಗಳಿದವರು, ಇಂದು ಅದೇ ವಸುಂಧರೆಯನ್ನು ನೋಡಿ “ಹೇ ವಸುಂಧರೆ ನೀನೆನಾ ಆ ಸುಂದರೆ” ? ಎಂದು ಹೇಳುವಷ್ಟರ ಮಟ್ಟಿಗೆ ಭೂಮಿಯ ಒಡಲನ್ನು ಬಗೆದು ಭೂತಾಯಿಗೆ ದ್ರೋಹ ಬಗೆಯುತ್ತಿದ್ದಾನೆ. ತಾನು ನೆಮ್ಮದಿಯಿಂದ ಬದುಕದೆ, ಇತರರಿಗೂ ನೆಮ್ಮದಿಯನ್ನು ನೀಡದೆ ಮಾನವನಾಗಬೇಕಾದವನು ದಾನವನಾಗಿ ಜೀವ ಜಗತ್ತಿಗೆ ಸಂಚಕಾರ ತಂದಿದ್ದಾನೆ. ಮಾನವ ಪದದ ಅರ್ಥ ಬಹಳ ಶ್ರೇಷ್ಠವಾದುದು. ‘ಮಾ’ ಎಂದರೆ ಸೌಜನ್ಯಯುತವಾಗಿ ಮಾತನಾಡುವುದು, ‘ನ’ ಎಂದರೆ ‘ತುಸು ನಗುತ ಬಂದೇವ ತುಸು ನಗುತ ಬಾಳೋಣ’ ಎಂಬಂತೆ ನಗುವುದು, ‘ವ’ ಎಂದರೆ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬಂತೆ ಹಿರಿಯರು ಕಿರಿಯರೆಲ್ಲರನ್ನು ಗೌರವದಿಂದ ನಡೆದುಕೊಂಡು ವಂದಿಸುವುದು. ಈ ಗುಣ ಸ್ವಭಾವ ಮಾನವನಿಗಲ್ಲದೆ ಮತ್ತಾವ ಜೀವಿಗಳಿಗೆ ಇದೆ ಹೇಳಿ. ಆದರೆ ಇಂದಿನ ಆಧುನಿಕ ‘ಮಾನವ’ ಪದವು ಅರ್ಥ ಕಳೆದುಕೊಂಡಿದೆ, ‘ಮಾ’ ಎಂದರೆ ಮಾನವೀಯತೆ ಹೀನನಾದವನು, ‘ನ’ ಎಂದರೆ ನಗುವುದರ ಬದಲು ನರಕ ಸೃಷ್ಟಿಸುವವನು, ‘ವ’ ಎಂದರೆ ವಂದಿಸುವ ಬದಲು ವಧಿಸುವವನಾಗಿದ್ದಾನೆ. ಈ ರೀತಿಯ ಮಾನವನ ವರ್ತನೆಯಲ್ಲಾದ ಬದಲಾವಣೆಯನ್ನು ಕಂಡ ಡಿವ್ಹಿಜಿಯವರ ಕಗ್ಗದ ಸಾಲುಗಳನ್ನು ನೆನಪಿಸಿಕೊಳ್ಳುವುದಾದರೆ. +ಮಾನವರೋ ದಾನವರೋ ಭೂಮಾತೆಯನು ತಣಿಸೆ | +ಶೋಣಿತವನೆರೆಯುವರು ಬಾಷ್ಪ ಸಲುವುದಿರೆ ? || +ಏನು ಹಗೆ ! ಏನು ದಗೆ ! ಏನು ಹೊಗೆ ! ಯೀ ಧರಣಿ ! | +ಸೌನಿಕನ ಕಟ್ಟೆಯೇಂ – ಮಂಕುತಿಮ್ಮ || +ಜೀವಜಂತುಗಳಲ್ಲಿಯೇ ಶ್ರೇಷ್ಠ ಹಾಗೂ ಬುದ್ಧಿವಂತನೆಂದು ಗುರುತಿಸಲ್ಪಟ್ಟ ಮಾನವನು ತನ್ನ ಅಸಹ್ಯ ವ್ಯಕ್ತಿತ್ವದ ಮೂಲಕ ಮನುಷ್ಯತ್ವ ಬದಲಾಗಿ ರಾಕ್ಷಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು, ಈ ಭೂಮಾತೆಯನ್ನು ತೃಪ್ತಿಪಡಿಸಲು, ಕಣ್ಣೀರು ಸುರಿಸುವ ಬದಲಾಗಿ, ರಕ್ತವನ್ನು ಸುರಿಸುತ್ತಿದ್ದಾನೆ. ಈ ಪ್ರಪಂಚದಲ್ಲಿರುವ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇದು ಕಟುಕನ ಜಗಲಿಯಂತೆ ಕಾಣುತ್ತದೆ. ದಯಾಗುಣದ ದಾರಿಹಿಡಿದು ಅಪರಾಧ ಕೃತ್ಯಗಳನ್ನು ತಗ್ಗಿಸಬೇಕಾದ ಶುಶಿಕ್ಷಿತರೆನಿಸಿಕೊಂಡವರೆ ಅತಿ ಹೆಚ್ಚು ಅಪರಾಧ ಕೃತ್ಯವನ್ನೆಸಗುತ್ತಿದ್ದಾರೆ. ಕೊಲೆ, ಸುಲಿಗೆ, ಅನ್ಯಾಯ, ಅತ್ಯಾಚಾರ, ಅನೀತಿ, ಭ್ರಷ್ಟಾಚಾರ, ಭಯೋತ್ಪಾದನೆಗಳಂತಹ ಕೃತ್ಯಗಳು ನಿರಂತರ ನಡೆಯುತ್ತಿರುವುದು ತುಂಬಾ ಖೇದಕರ ಎನಿಸುತ್ತದೆ. ಅವಿದ್ಯಾವಂತರಿಗಿಂತ ವಿದ್ಯಾವಂತರ ಪಾತ್ರವೇ ಇದರಲ್ಲಿ ಹೆಚ್ಚಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಅಂತೆಯೇ ಸಂಸ್ಕøತದಲ್ಲಿ ಹೇಳುವಂತೆ ಇಂದಿನ ವಿದ್ಯಾವಂತರು ಹೇಗಿದ್ದಾರೆ ಎಂದರೆ “ಸಾಕ್ಷರೋ ವಿಪರಿತೇಶ್ಚ ರಾಕ್ಷಸೋ ಭವೆಯಂ” ಎನ್ನುವಂತೆ ಸಾಕ್ಷರಾ ಅನ್ನುವ ಪದವನ್ನು ವಿಲೋಮ ಮಾಡಿ ಓದಿ ನೋಡಿ, ಏನಾಯಿತು ? ಅದು ರಾಕ್ಷಸಾ ಎಂದಾಗುತ್ತದಲ್ಲವೆ. +ಹೀಗಾಗಿ ವಿದ್ಯಾವಂತರೆ ಇಂದು ರಾಕ್ಷಸೀಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಹೀನ ಕೃತ್ಯಗಳನ್ನು ಮಾಡುತ್ತ ಅಮಾಯಕ ಜೀವಿಗಳ ದೃಷ್ಟಿಯಲ್ಲಿ ಕಟುಕರಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ದಯೆ, ಪ್ರೀತಿ, ಕರುಣೆ, ಶಾಂತಿ, ಸಹನೆ, ವಿನಯ, ಪ್ರಾಮಾಣಿಕತೆ, ಮಾನವೀಯತೆಯಂತಹ ಮೌಲ್ಯಗಳು ಕುಸಿದು ಹೋಗಿವೆ. ಇವುಗಳ ಬದಲಾಗಿ ಎಲ್ಲೆಲ್ಲೂ ಅಶಾಂತಿಯ ವಾತಾವರಣ ನಿರ್ಮಿಸಿದ್ದಾರೆ. ದ್ವೇಷ ದಳ್ಳುರಿಯಲ್ಲಿ ಬೆಂದು ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಿದ್ಧಯ್ಯ ಪುರಾಣಿಕರು ಹೇಳುವಂತೆ ಇಂದಿನ ಆಧುನಿಕ ಜಗತ್ತು ತುಂಬಾ ಬದಲಾವಣೆಯನ್ನು ಕಂಡಿದೆ ನಿಜ, ಆದರೆ ಅದು ನಮ್ಮಲ್ಲಿ ಎಂತಹ ಬದಲಾವಣೆ ತಂದಿದೆಯೆಂದರೆ, ವಿದ್ಯೆ ಬಂತು ವಿನಯ ಹೋಯಿತು, ಬುದ್ಧಿ ಬಂತು ಶ್ರದ್ಧೆ ಹೋಯಿತು, ಸಮೃದ್ಧಿ ಬಂತು ಸಂಸ್ಕøತಿ ಹೋಯಿತು, ವಿಜ್ಞಾನ ಬಂತು ಸಮಾಧಾನ ಹೋಯಿತು, ದೀರ್ಘಾಯುಷ್ಯ ಬಂತು ಜೀವನ ಸ್ವಾರಸ್ಯ ಹೋಯಿತು, ಬೋಧನೆ ಬಂತು ಸಾಧನೆ ಹೋಯಿತು, ಮಾತು ಬಂತು ಕೃತಿ ಹೋಯಿತು, ಜಾತಿ ಬಂತು ಪ್ರೀತಿ ಹೋಯಿತು,ಸ್ವಾತಂತ್ರ್ಯ ಬಂತು ಸೌಜನ್ಯ ಹೋಯಿತು ಎಂದು ಹೇಳುವ ಅವರ ಧ್ವನಿಯಲ್ಲಿನ ನೋವು ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಆಧುನಿಕತೆಯ ಸೋಗಿನಲ್ಲಿ ಬದಲಾವಣೆಯ ಗಾಳಿ ಬೀಸಿದರೂ ಸಹ ಹಳೆಯ ನೀರು ಹೋಗಿ ಹೊಸ ನೀರು ಬಂದಂತೆ ಒಂದು ಸಿಕ್ಕಿದೆಯೆಂದರೆ ಮತ್ತೊಂದನ್ನು ಕಳೆದುಕೊಂಡು ಧಾವಂತದ ಬದುಕು ಸಾಗಿಸುತ್ತಿದ್ದೇವೆ. ಇಂತಹ ಬದುಕು ಕೊನೆಯಾಗಿ ಭಾವೈಕ್ಯತಾ ಬದುಕು ನಮ್ಮದಾಗ ಬೇಕಾದರೆ ? ಭೂಮಾತೆಯನ್ನು ಸಂರಕ್ಷಿಸಬೇಕಾದರೆ ? ಮಾನವೀಯ ಮೌಲ್ಯಗಳ ಪುನರ್ಜನ್ಮವಾಗಬೇಕಾದರೆ ? ನಾವೇನು ಮಾಡಲು ಸಾಧ್ಯ ? ಎಂದು ಕೈಕಟ್ಟಿ ಕುಳಿತುಕೊಂಡರೆ ಬದಲಾವಣೆ ಸಾಧ್ಯವಿಲ್ಲ. ಇದಕ್ಕೆಲ್ಲ ಕಾರಣಗಳನ್ನು ಕಂಡುಕೊಳ್ಳಬೇಕು. +ನಮ್ಮ ಮಕ್ಕಳಿಗೆ ಇಂದು ಯಾವ ರೀತಿಯ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂಬುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಭವ್ಯ ಭಾರತದ ಭವಿಷ್ಯದ ರೂವಾರಿಗಳಾದ ನಮ್ಮ ಮಕ್ಕಳಿಗೆ ಕೇವಲ ಪುಸ್ತಕ ಜ್ಞಾನ ಪಡೆದು ನೂರಕ್ಕೆ ನೂರು ಅಂಕ ಸಂಪಾದಿಸಿ, ದೊಡ್ಡ ದೊಡ್ಡ ಉದ್ಯೋಗ ಪಡೆದುಕೊಳ್ಳುವ ಶಿಕ್ಷಣದ ಬೆನ್ನು ಹತ್ತಿದ್ದೇವೆ. ಶಿಕ್ಷಣಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡಿ ಅದನ್ನು ಬಡ್ಡಿ ಸಮೇತ ಪಡೆಯುವುದು ಹೇಗೆಂದು ಯೋಚಿಸುತ್ತಿದ್ದೇವೆ ವಿನಃ, ನಮ್ಮ ಮಕ್ಕಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರೋಪಕಾರದಿ ಬದುಕುವ ಕಲೆಯನ್ನು ಕಲಿಯುತ್ತಿದ್ದಾರೆಯೇ?.ಎಂದು ಯೋಚಿಸುವುದಿಲ್ಲ. ಅದು ನಮಗೆ ಬೇಕಾಗಿಲ್ಲ ಅಲ್ಲವೆ ?. ಅನ್ಯಾಯ ಮಾರ್ಗದಿ ನಮ್ಮ ಬದುಕಿನ ಬಂಡಿಯನ್ನು ಎಳೆಯುತ್ತಿದ್ದೇವೆ ಎಂಬುದು ನಮಗೆ ಅರಿವಾಗುವುದರಲ್ಲಿ ಈ ಜಗತ್ತು ವಿನಾಶದ ಅಂಚಿಗೆ ಬಂದು ಬಿಡುತ್ತದೆ. ತಮ್ಮ ಮಕ್ಕಳನ್ನು ಏನನ್ನಾದರೂ ಮಾಡಿ, ಆದರೆ ಮೊದಲು ಮಾನವರನ್ನಾಗಿ ಮಾಡಿ, ಮಾನವ ಮಾನವನಾಗಿ ಬದುಕಲು ಅಗತ್ಯವಾದ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಿ. ಈ ದೇಶದ ಭವಿಷ್ಯವು ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ ಎಂಬುದನ್ನು ಅರಿತಿರುವ ನಾವು ನಮ್ಮ ಮಕ್ಕಳಿಗೆ ಪುಸ್ತಕದ ಜ್ಞಾನದೊಂದಿಗೆ ವಾಸ್ತವಿಕ ಜ್ಞಾನವನ್ನು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಬೇಕಾಗಿದೆ. ಕೇವಲ ಅಂಕಗಳೇ ಜೀವನದ ಭವಿಷ್ಯವನ್ನು ರೂಪಿಸುತ್ತವೆ ಎಂಬ ಭ್ರಮೆಯ ಪರದೆಯನ್ನು ಕಳಚಿ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಬೇಕು. ಮಕ್ಕಳನ್ನು ರೋಬೋಟ್ ಯಂತ್ರದಂತೆ ಮಾಡದೆ ಅವರನ್ನು ದೈಹಿಕವಾಗಿ, ಭೌದ್ಧಿಕವಾಗಿ ಮಾನಸಿಕವಾಗಿ, ಭಾವನಾತ್ಮಕವಾಗಿ, ಹಾಗೂ ಸಾಮಾಜಿಕವಾಗಿ ಬಲಾಢ್ಯರನ್ನಾಗಿ ಮಾಡಲು ಬೇಕಾದ ಪೂರಕ ಶಿಕ್ಷಣವು ಕುಟುಂಬ, ಶಾಲೆ ಮತ್ತು ಪರಿಸರದಿಂದ ದೊರೆಯಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರಯುತ ಶಿಕ್ಷಣವನ್ನು ಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಾಲಕ, ಪಾಲಕ, ಶಿಕ್ಷಕ ಮತ್ತು ಸಮುದಾಯವು ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸುವ ಶಿಕ್ಷಕರ ಕರೆಗೆ ಕಿವಿಯಾಗಿ, ಮಕ್ಕಳ ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ಸಂಸ್ಕಾರವನ್ನು ಮಕ್ಕಳಿಗೆ ಹೇಳುವ ಮೊದಲು ನಾವೆಲ್ಲರೂ ಸಂಸ್ಕಾರಯುತ ಬದುಕಿನಲಿ ಸಾಗುತ್ತ ಸಂಸ್ಕಾರದ ಜ್ಞಾನವನ್ನು ಸಂಸಾರದ ಪ್ರಾಣವೆಂದು ಅರಿಯೋಣ. +“ವಿದ್ಯಾ ದದಾತಿ ವಿನಯಂ, +ವಿನಯಾದ್ಯಾತಿ ಪಾತ್ರತಾಂ +ಪಾತ್ರತ್ವಾತ್ ಧನಮಾಪ್ನೋತಿ +ಧನಾತ್ ಧರ್ಮಂ ತತಃ ಸುಖಂ|| +ಎಂಬಂತೆ ವಿದ್ಯೆಯೊಂದಿಗೆ ವಿನಯವು ಎಳೆಯ ಮಕ್ಕಳಲಿ ಎಳೆ ಎಳೆಯಾಗಿ ಬಂದು ಸಂಸ್ಕಾರಯುತ ಅರಿವು ಮೊಳೆತು ಬೆಳೆಯುವುದನು ನೋಡಿ ಸಂತೋಷ ಪಡೋಣ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ. +-ರವಿ ರಾ ಕಂಗಳ + \ No newline at end of file diff --git a/PanjuMagazine_Data/article_1086.txt b/PanjuMagazine_Data/article_1086.txt new file mode 100644 index 0000000000000000000000000000000000000000..338ff9475620da358077654c22b34c4052a0d9f2 --- /dev/null +++ b/PanjuMagazine_Data/article_1086.txt @@ -0,0 +1,5 @@ + + + + + \ No newline at end of file diff --git a/PanjuMagazine_Data/article_1087.txt b/PanjuMagazine_Data/article_1087.txt new file mode 100644 index 0000000000000000000000000000000000000000..5661d410fa52bf0002c10128be89c01e6bd954de --- /dev/null +++ b/PanjuMagazine_Data/article_1087.txt @@ -0,0 +1,34 @@ +ಹಾಳೂರಿನ ಫುಲ್‍ಟೈಟು ಪಾರ್ಟಿಗಳಾದ ನೈಂಟಿ, ಫೋರ್‍ಟ್ವೆಂಟಿ ಮತ್ತು ಪಂಟಿ ಕರುಳ ತಳಮಳ ತಾಳಲಾರದೇ ‘ಕಿಕ್ಕೇಶ್ವರ’ ಲಿಕ್ಕರ್ ಶಾಪಿನೆಡೆಗೆ ದಾಪುಗಾಲಿಟ್ಟರು. +ನೈಂಟಿ: ಸಿದ್ರಾಮಣ್ಣ ನಮ್ ಕಷ್ಟ ಅರ್ಥ ಮಾಡ್ಕಂದು ಚೀಪ್ ಅಂಡ್ ಬೆಸ್ಟು ಹೆಂಡನಾ ನಮ್ಗೆಲ್ಲ ಕುಡ್ಸೋಕೆ ಹೊಂಟಿತ್ತಪ್ಪ. ಯಾರ್ಯಾರೋ ಸೇರ್ಕಂದು ಅದ್ಕೆ ಕಲ್ಲಾಕ್ಬುಟ್ರು. +ಫೋರ್‍ಟ್ವೆಂಟಿ: ಈಗಿರೋ ಸಿಸ್ಟಮ್ಮೇ ಸರ್ಯಾಗೈತೆ ಸುಮ್ಕಿರಪ್ಪ. ಈಗೆಂಗೋ ದಿನಾ ದುಡ್ಕಂದು ಸಂಜೆ ಹೊತ್ ಮಾತ್ರ ಕುಡ್ಕಂದು ನ್ಯಾಯ್ವಾಗಿ ಬದುಕ್ತಿದ್ದೀವಿ. ಚೀಪಾಗಿರೋ ಹೆಂಡನಾ ಮಾರ್ಕೆಟ್ಟಿಗೆ ಬಿಟ್ರೆ ವಾರ್ದಲ್ಲಿ ಮೂರ್ದಿನ ದುಡ್ದು ಏಳ್ದಿನಾನೂ ಕುಡ್ದು ಕಳ್ಳು ಬೋಟಿ ಎಲ್ಲಾ ಹೊಗೆ ಹಾಕುಸ್ಕಳೋವಂಗೆ ಮಾಡ್ಕೊಬುಟ್ತೀವಿ. +ಪಂಟಿ: ಚೀಪಾದ್ರೂ ಹೈಕ್ಲಾಸ್ ಕ್ವಾಲಿಟಿನೂ ಕೊಡ್ತೀವಿ ಅಂದಿದ್ರಪ್ಪ. ಈ ಓಸಿ ಕುಡ್ದು ಪುಟ್ಗೋಸಿ ಆಗೋದ್ರು ಬದ್ಲು, ಓಲ್ಡ್ ಮಾಂಕ್ ಹಿಗ್ಗಿ ಮಂಕಾಗೋ ಬದ್ಲು ಸರ್ಕಾರುದ್ ಹೆಂಡ ಕುಡ್ದು ಸಾವ್ಕಾರ್ರು ಥರ ಮೆರಿಬೌದಿತ್ತು. +ನೈಂಟಿ: ಈಗ ಯೋಚ್ನೆ ಮಾಡಿ ಏನ್ಲಾ ಪ್ರಯೋಜ್ನ? ಸಿದ್ರಾಮಣ್ಣ, ಚೀಪಾಗಿ ಹೆಂಡ ತಯಾರ್ಸೋ ಪ್ಲ್ಯಾನುನ್ನ ಫ್ಯಾನಿಗೆ ನೇತಾಕಿದೀವಿ ಅಂತ ಘೋಷ್ಣೆನೇ ಮಾಡೈತೆ. +ಪಂಟಿ: ಕುಡುಕ್ರೆಲ್ಲ ಸೇರ್ಕಂದು ಒಂದು ಸಂಘಟ್ನೆ ಅಂತ ಮಾಡ್ಕಂದಿದ್ರೆ ಈ ರಾಜ್ಕಾರ್ಣಿಗಳ್ನ ನಮ್ ಕೈ ಬೆಳ್ನಾಗೆ ಕುಣುಸ್ಬಹುದಿತ್ತು. +ಫೋರ್‍ಟ್ವೆಂಟಿ: ದೇವುಸ್ಥಾನ ಬಂತು ಇವತ್ತಿನ್ ಪ್ರಸಾದ ಯಾರ್ದಪ್ಪಾ? +ನೈಂಟಿ: ನಿಂದೇ ಕನ್ಲಾ. +ಫೋರ್‍ಟ್ವೆಂಟಿ: ನನ್ತಾವ ಕಾಸಿಲ್ಲ. +ನೈಂಟಿ: ಈ ನವ್‍ರಂಗಿ ಆಟ್ವೆಲ್ಲ ನಮ್ತಾವ ಬೇಡ. ಅಮಿಕಂದು ಚೆಡ್ಡಿ ಜೇಬ್ನಾಗಿರೋದ್ನ ಹೊರಿಕ್ ತೆಗಿ. +ಫೋರ್‍ಟ್ವೆಂಟಿ: ನನ್ತಾವ ಇರೋದೆ ಐವತ್ ರೂಪಾಯಿ ತಗಳಪ್ಪಾ. +ಪಂಟಿ: ಈ ನನ್ಮಗುನ್ದು ಇದೇ ಕಥೆ. ತಗಳಪ್ಪಾ ನನ್ ಶೇರು. +ನೈಂಟಿ: ಯಾವ್ದು ತಗಳಾಣ ಓಸಿನಾ ಓಲ್ಡ್ ಮಾಂಕಾ? +ಫೋರ್‍ಟ್ವೆಂಟಿ: ಯಾವ್ದಾದ್ರೂ ಒಂದೇಯ. ಗಬ್ವಾಸ್ನೆ! ನಾವೆಲ್ಲ ಆರ್ಸಿನೋ ಆರೆಸ್ಸೋ ಕುಡ್ಯೋದು ಯಾವಾಗ? +ಪಂಟಿ: ನಿನ್ತಾವ ಇರೋ ಕಳ್ಗಂಟುನ್ನ ಕರ್ಗುಸುದ್ರೆ ಈಗ್ಲೇ ಕುಡಿಬೌದಪ್ಪಾ. +ಫೋರ್‍ಟ್ವೆಂಟಿ: ನಾನು ಅದ್ಯಾರ್ ಮನೆ ಕೊಳ್ಳೆ ಹೊಡ್ದಿದ್ದೀನಪ್ಪಾ? +ಪಂಟಿ: ಎಲೆಕ್ಷನ್ ಟೈಮ್ನಾಗೆ ಊರ್ನವ್ರಿಗೆ ಹಂಚ್ತೀನಿ ಅಂತ ಲೀಡ್ರುಗಳ್‍ತಾವ ಕಾಸು ಇಸ್ಕಂದು ಜೇಬಿಗೆ ಇಳೆ ಬುಟ್ಕಂದಿದ್ನ ಬಿಚ್ಚಪ್ಪ ಸಾಕು. +ಫೋರ್‍ಟ್ವೆಂಟಿ: ಎಲ್ಲನೂ ಹಂಚಾಯ್ತು. ನಡೀರಿ ನಿಂತು ನಿಂತೂ ಕಾಲು ಬಿದ್ದೋಯ್ತಾವೆ. ಕಟ್ಟೆ ಮೇಲೆ ಕುಂತ್ಕಂದು ಕುಡ್ಯೋಣಂತೆ. +ನೈಂಟಿ: ಏನೇ ಆಗ್ಲಿ ನಮ್ ಸಿದ್ರಾಮಣ್ಣುನ್ನ ಸುಮ್ನಿರೋಕೆ ಬಿಡ್ಬಾರ್ದು. +ಪಂಟಿ: ಯಾಕ್ಲಾ? ಏನ್ಲಾ ಮಾಡ್ಬೇಕು? +ನೈಂಟಿ: ನಮ್ಗೆಲ್ಲ ಚೀಪ್ ಅಂಡ್ ಬೆಸ್ಟು ಹೆಂಡ ಕೊಡ್ಸು ಅಂತ ಕೈ ಕಾಲು ಹಿಡ್ಕಬೇಕು. +ಪಂಟಿ: ಸಿದ್ರಾಮಣ್ಣುಂಗೆ ನಮ್ಮಂಥ ಕಾಸಿಲ್ದಿರೋ ಕುಡುಕ್ರು ಕಷ್ಟ ಏನೂಂತ ಗೊತ್ತೈತೆ. ಆದ್ರೆ ಜನುದ್ ಕಾಟ ತಡ್ಯೋಕಾಗ್ದಲೇ ಹಿಂದೆ ಸರ್‍ದೈತೆ. +ನೈಂಟಿ: ಏನೇ ಹೇಳು ಪಾಕೀಟಿನ್ಮುಂದೆ ಓಸಿ ಪಾಸಿಯೆಲ್ಲ ಪುಟ್ಗೋಸಿ ಇದ್ದಂಗೆ. ಕಿಕ್ಕೂ ಇಲ್ಲ, ಜಾಸ್ತಿ ಕುಡ್ಯೋಣ ಅಂದ್ರೆ ಕಕ್ಕಳೋವಷ್ಟು ವಾಸ್ನೆ ಹೊಡ್ಯುತ್ತೆ. +ಫೋರ್‍ಟ್ವೆಂಟಿ: ನಾವ್ತಾನೆ ಮೂಗ್‍ಮುಚ್ಕಂದು ಈ ಪಾಟಿ ಕಷ್ಟ ಪಟ್ಕಂದು ಯಾಕಾದ್ರೂ ಹೆಂಡ ಕುಡಿಬೇಕು ಅಂತ? +ನೈಂಟಿ: ನೀನೂ ಸರ್ಯಾದ್ ನನ್ಮಗನೇ ಕನ್ಲಾ. ಕುಡ್ಯೋದೂ ಅಲ್ದೇ ಕುಡುದ್ಮೇಲೆ ಯಾಕಾದ್ರೂ ಕುಡಿಬೇಕು ಅಂತ ಬೇರೆ ಪಿಟೀಲ್ ಕುಯ್ತೀಯ. +ಪಂಟಿ: ಫೋರ್‍ಟ್ವೆಂಟಿ ಹೇಳ್ತಿರೋದ್ರಾಗೂ ಅರ್ಥ ಐತೆ. ಆದ್ರೆ ಕರ್ಳು ಚುರ್ ಅಂದ್ರೆ ಹೆಂಗ್ ತಡ್ಕಳಾದು? +ಫೋರ್‍ಟ್ವೆಂಟಿ: ನಮ್ಗೂ ಹೆಂಡ್ರು ಮಕ್ಳು ಅಂತ ಆದ್ರೆ ಕುಡ್ತಾನ ಕಂಟ್ರೋಲ್ ಮಾಡ್ಕಬಹ್ದು. +ನೈಂಟಿ: ನಮ್ ಹೊಟ್ಟೆ ಸಾಕಳಾದೆ ಕಷ್ಟ ಆಗಿರೋವಾಗ ಚಿಳ್ಳೆ ಪಳ್ಳೆಗಳ್ನೆಲ್ಲ ಹುಟ್ಟುಸ್ಕಳ್ತಾ ಹೋದ್ರೆ ನಮ್ ಪಾಡು ನಾಯಿ ಪಾಡಾಗೋಗುತ್ತೆ. +ಪಂಟಿ: ವರ್‍ದಕ್ಷಿಣೆ ಅಂತ ಒಂದಷ್ಟು ಕಾಸು ಸಿಕ್ರೆ ಏನಾರ ಮಾಡ್ಬಹ್ದು. +ನೈಂಟಿ: ನಮ್ ಮುಖುಕ್ಕೆ ಹುಡ್ಗಿ ಸಿಗೋದೆ ಕಷ್ಟ. ಅಂಥದ್ರಾಗೆ ವರ್‍ದಕ್ಷಿಣೆ ಅಂತ ಬೇರೆ ಕೊಡ್ತಾರೇನ್ಲಾ? +ಪಂಟಿ: ಯಾಕ್ ಒಂದ್ಕಿತ ಮದ್ವೆ ಆಗೋಕೆ ಟ್ರೈ ಮಾಡ್ಬಾರ್ದು? +ನೈಂಟಿ: ನೀನ್ ಮೊದ್ಲು ಹಳ್ಳುಕ್ ಬಿದ್ದು ಆಳ ಎಷ್ಟೈತೆ ಅಂತ ಹೇಳಪ್ಪ. ಆಮ್ಯಾಕೆ ನಾನು ಅದ್ರೊಳಿಕೆ ಕಾಲು ಮಡುಗ್ತೀನಿ. +ಫೋರ್‍ಟ್ವೆಂಟಿ: ಯಾರ್ತಾವನಾದ್ರೂ ಕಾಸಿದ್ರೆ ಮಡ್ಗಿ ಇನ್ನೊಂದ್ ಕ್ವಾಟ್ರು ತರ್ತೀನಿ. +ನೈಂಟಿ: ಇವತ್ತಿನ್ ಕೋಟಾ ಮುಗೀತು. ಮುಚ್ಕಂದು ಮನೆ ಕಡಿಕೆ ನಡ್ಯೋಣ ಬಾರಪ್ಪ. \ No newline at end of file diff --git a/PanjuMagazine_Data/article_1088.txt b/PanjuMagazine_Data/article_1088.txt new file mode 100644 index 0000000000000000000000000000000000000000..d2e76f4f0e156f33fa97a5bef6d32a218d92e5db --- /dev/null +++ b/PanjuMagazine_Data/article_1088.txt @@ -0,0 +1,8 @@ +ನನ್ನ ಒಲವೆ ಹೇಳೇ ಚೆಲುವೆ ಪ್ರೀತಿಯೊಂದೆ ಗೆಲ್ಲದೇ +ನಾನು ನೀನು ಕೂಡಿ ಕಳೆದ ಬದುಕೆ ನಮ್ಮ ಕಾಯದೇ +ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ +ಕೊಟ್ಟದೆಷ್ಟೋ ಪಡೆದದೆಷ್ಟೋ ನಮ್ಮ ನಂಟೆ ಹೇಳಲಿ +ಜಯತೀರ್ಥ ಎಂಬುವರ ಕವಿವಾಣಿಯನ್ನು ನಾನು ಡೈರಿಯಲ್ಲಿ ಬರೆದಂದಿನಿಂದ ಅದೆಷ್ಟು ಬಾರಿ ಓದುತ್ತಿರುತ್ತೇನೋ ನನಗೆ ತಿಳಿಯದು. ಬೆಟ್ಟದಷ್ಟು ಇಷ್ಟಪಟ್ಟ ಈ ಸಾಲುಗಳಿಂದ ನನ್ನ ಹೃದಯಕ್ಕೆ ಏನೋ ಅರಿವಾಗದ ಆಪ್ತತೆ ಮತ್ತು ಕಕ್ಕುಲತೆ. ಇದಕ್ಕೊಂದು ಬಲವಾದ ಕಾರಣವಿದೆ. ನನ್ನ ಮದುವೆಯ ಆಮಂತ್ರಣ ಪತ್ರಿಕೆಗೆ ಪತ್ರಕರ್ತ ಗೆಳೆಯರೊಬ್ಬರಿಂದ ಸಲಹೆ ಮತ್ತು ಕವಿವಾಣಿಯನ್ನು ಕೇಳಿದಾಗ ಸಿಕ್ಕಿದ ಸಾಲುಗಳಿವು. ಇವೀಗ ನನಗೆ ಕೇವಲ ಸಾಲುಗಳು ಮಾತ್ರವಲ್ಲ ಜೀವಬಂಧನದ ನೆರಳಾಗಿವೆ. ಕಣ್ಣುರೆಪ್ಪೆ ಪೋಷಿಸಿದ ಪ್ರೀತಿಯನ್ನು ನಿಯತ್ತಿನಿಂದ ಪೋಣಿಸುತ್ತಾಹೋಗಲು ಈ ಸಾಲುಗಳು ಜೀವಜಲವಾಗಿದೆ. ಆಮಂತ್ರಣ ಪತ್ರಿಕೆಗೆ ಇಂತಹ ಅಧ್ಬುತ ಸಾಲುಗಳು ಬಿದ್ದ ಮೇಲೆ ಕೊಟ್ಟದೆಷ್ಟೋ ಪಡೆದದೆಷ್ಟೋ ನಮ್ಮ ನಂಟು ಹೇಳಬೇಕು ತಾನೆ? ನನ್ನ ಗೆಳತಿಯರ ಮದುವೆಗೆ ಉಡುಗೊರೆ ಕೊಡುವಾಗ ಶುಭಾಶಯ ಕೋರಿ ಈ ರೀತಿಯ ಸಾಲುಗಳನ್ನು ಬರೆಯುವುದು ನನಗೆ ಬಲು ಸಂತಸದ ವಿಚಾರ. ಉಡುಗೊರೆಗಿಂತ ಇಂತಹ ಸಾಲುಗಳನ್ನು ಮೆಚ್ಚಿದವರೆ ಹೆಚ್ಚು. ನನ್ನ ಈ ರೀತಿಯ ಹಾರೈಕೆಯಿಂದ ಅವರ ಪ್ರೀತಿ ಬೆಚ್ಚಗಿರುತ್ತೆ ಎಂಬ ಹುಚ್ಚು ಹುರುಪು. ಮದುವೆಯಾದ ಮೇಲೆ ಮುಂಚಿನಂತಹ ಪ್ರೀತಿ ಇರಲ್ಲ ಕಣೇ ಅಥವ ಪ್ರೀತಿಗೆ ಸಮಯವೇ ಇಲ್ಲ ಕಣೇ ಎನ್ನುವ ಗೆಳತಿಯರ ಮಾತಿಗೆ ನಾನು ತುಟಿಯಂಚಲ್ಲಿ ಸಣ್ಣಗೆ ನಗುತ್ತೇನೆ! ಇರುತ್ತೆ ಕಣೇ ಎಂದು ಅವರಿಗೆ ಕೇಳಿಸದಂತೆ ನಾನು ಹೇಳುತ್ತೇನೆ. ಮೌನದಲ್ಲಿ ಮಾತಾಗುವ ಪಕ್ಷಿ ಸಂಕುಲಕ್ಕೆ ನನ್ನ ಪ್ರೀತಿ ಅರುಹುತ್ತೇನೆ!ಯಾಕೆಂದರೆ ಈ ಗೆಳತಿಯರು ಮದುವೆಯಾಚೆಗಿನ ನಿಷ್ಕಲ್ಮಶ ಪ್ರೀತಿನ ನಂಬಲ್ಲ ನೋಡಿ..! ಮನಸು ಮನಸುಗಳ ಪಿಸುಮಾತಿಗೆ ವಿವಾಹ ಬಂಧನ ಅತ್ಯುತ್ತಮ ವೇದಿಕೆ ಎಂಬುದನ್ನು ಯಾರ್‍ಜೊತೆ ಹಂಚಿಕೊಳ್ಳಲಿ? +ಬೆಳಗಾಗೆದ್ದು ಉರಿಸಿದ ಬೆಂಕಿಯೊಂದಿಗೆ ಸುಟ್ಟುಹೋಗುವ ಕನಸುಗಳಿಂದಾಗಿ ನಿಮ್ಮ ಪ್ರೀತಿ ಎಲ್ಲಿ ಉಳಿಯುತ್ತೆ?ಮಿಲನ ಮಹೋತ್ಸವದಲ್ಲೇ ಕಣ್ಬೆಳಕು ತೋರಿ ಬೆಳಗಾದರೆ ಕತ್ತಲಾಗುವ ಹೊಂಗಿರಣಗಳ ನಡುವೆ ಪ್ರೇಮ ಇರುತ್ತಾ? ಎಂದು ಕಿಚಾಯಿಸುವ ಗೆಳತಿಗೆ ಉಸಿರಿನಲ್ಲೇ ನಕ್ಕು ಹಗುರಾಗುತ್ತೇನೆ. ಗಂಡನ ಕಾಯುವಿಕೆಯೊಂದಿಗೆ ಆತನ ನವಿರು ಬೆವರನ್ನು ಆಸ್ವಾದಿಸುವ ನನ್ನೆದೆಯಲ್ಲಿ ಪ್ರೀತಿ ಬೆಚ್ಚಗೆ ಮನೆಮಾಡಿದ್ದನ್ನು ವಿವಾಹದಾಚೆಗಿನ ಅಚ್ಚ ಪ್ರೀತಿಯ ನಂಬದೆ ಇರೋ ನಿಮ್ಗೆಲ್ಲಾ ಹೇಗೆ ಹೇಳಲಿ? ಯಾವಗಲೂ ನೀರಿನಲ್ಲಿರುವ ಮೀನಿಗೆ ಬಾಯಾರಿಕೆ ಆಗುತ್ತಾ? ಅದು ನೀರು ಕುಡಿಯುತ್ತದೆಯೋ, ಇದಕ್ಕೆಲ್ಲಾ ಎಲ್ಲಿದೆ ಉತ್ತರ? ಇದ್ದರೆ ನಮ್ಮ ಪ್ರೀತಿಗು ಉತ್ತರ ಇದೆ ಅರ್ಥವು ಇದೆ! ಉಳಿಸಿದ ಸಮಯವನ್ನು ಅಕ್ಷರಗಳ ಸುಪ್ಪತ್ತಿಗೆಯಲ್ಲಿ ಕಳೆಯುವ ಜಾಯಮಾನದ ನನಗೆ ಪ್ರೀತಿಸಲು ಬಿಡುವು ಬಿಗಡಾಯಿಸಿದೆ ಎಂದಾಗ ನಗುವ ನನ್ನ ಆತ್ಮಸಖಿಗೆ ಚಂದದ ಕಥೆಯನ್ನು ಕರೆ ಮಾಡಿ ತಿಳಿಸುತ್ತೇನೆ. ಎಳೆಎಳೆಯಾಗಿ ಮಳೆಯಂತೆ ತಂಪನ್ನೀಯುವ ನನ್ನ ಕಥನ ಕುಸುರಿಗೆ ಶರಣೆಂದು ಅಲ್ಲಿಂದಲೇ ಸೊಂಟಕ್ಕೆ ಚಿವುಟುತ್ತಾಳೆ! ಕಳೆದ ವಸಂತಗಳ ಚೆಲುವೆಲ್ಲಾ ಒಟ್ಟುಗೂಡಿ ಈಗ ಮನಸೊಳಗೆ ಮುನಿಸುಗಳ ಹಸಿ ಪ್ರೀತಿ ಎಂದರೆ…..!? ನಾನು ಸೇರಿದಂತೆ, ನನ್ನೊಡಲ ಮಿಹಿರ ಜತನದಿಂದ ಕಾಪಿಟ್ಟ ಲಕ್ಷಾಂತರ ಪದಗಳು ಭಾವಗೀತೆಯಾಗಿ ಹಾಡಿದ ಮಳೆಬಿಲ್ಲು ಹಿಂದಿನಂತೆ ಇಂದಿಗು ಮಿಂಚುತ್ತಿದೆ. ಮುಂದೆಯು ಬಿಕ್ಕಟ್ಟುಗಳ ನೆಪಗಳನ್ನು ಬದಿಗಿರಿಸಿ ಬಿಸಿ ಪ್ರೀತಿಯನ್ನು ಆರಲು ಬಿಡದಂತೆ ಜನ್ಮಾಂತರಕ್ಕೆ ಕೈ ಹಿಡಿದು ನಡೆಸುತ್ತೇನೆ ಪ್ರಾಮಿಸ್ ಗೆಳತಿ…. +ಏಖಮುಖ ನಿರ್ಧಾರಗಳನ್ನು ಸೆರೆಹಿಡಿಯುವ ನಮ್ಮಿಬ್ಬರ ಒಂದೇ ತೆರನಾದ ಆಲೋಚನೆಗಳು ಈಗ ನಿನ್ನ ನಿಲುವುಗಳಲ್ಲಿ ಯಾಕೆ ವಿಮುಖವಾಗಿದೆ ಗೆಳತೀ? ವಿವಾಹ ಬಂಧನದ ಪ್ರೀತಿಗೆ ನೀವೆಲ್ಲಾ ಯಾಕೆ ರಾಜಿಯಾಗುವುದಿಲ್ಲ ಎಂಬುವುದು ನಿಗೂಢವಾಗಿದೆ. ನನ್ನದೆ ಕವನದ ಸಾಲೊಂದು ಹೇಳುವೆ ಕೇಳು "ತೊಡಗಿಸಿಕೊಂಡರದೆಷ್ಟು ಸಲೀಸು ನೋಡಿ! ನನ್ನಿರುವಿಕೆಗೆ ಕಾದಂತೆ ಈ ಅಡುಗೆ ಮನೆಯ ಸಂಧಿ, ಗೊಂದು, ಡಬ್ಬಗಳು ಪರಮಾಪ್ತವಾಯಿತೆನಗೆ/ ಸಾಸಿವೆ ಸಿಡಿದ ಪರಿಗು ಬೆಚ್ಚಿ ಬೀಳುವ ಕನಸುಗಳು ಸಾವರಿಸಿಕೊಂಡಾಗಿವೆ.” ನಿರ್ಜೀವ ಅಡುಗೆ ಮನೆಗೆ ಹೊಂದಿಕೊಂಡ ನಮಗೆ ಮತ್ತಿನ್ನೇನು ತೊಡಕು ಹೇಳು? ಕಾಯಾ, ವಾಚ , ಮನಸಾ ತೊಡಗಿಸಿಕೊಂಡರೆ ಗಂಡನ ಸಖ್ಯವೆ ಅಧ್ಬುತ ಅಲ್ವೇ? ಮೊನ್ನೆ ತಾನೆ ಸಿಲ್ಲಿ ಕಾರಣಕ್ಕೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಗೆಳತಿಗೆ ಹಲವು ರೀತಿಯಲ್ಲಿ ಹೇಳಿ ಸಮಜಾಯಿಷಿಕೆ ನೀಡಿದ್ದೇನೆ. ಬಿಡುವಿಲ್ಲದ ಕೆಲಸದ ನಡುವೆಯು ದಕ್ಕಿಸಿಕೊಂಡ ಪ್ರೀತಿಯನ್ನು ಉಳಿಸಿಕೊಂಡ ರೀತಿಯನ್ನು ಹೇಳಿದ ವೈಖರಿಗೆ ಆಕೆ ಡಿವೋರ್ಸ್ ಅರ್ಜಿಯನ್ನು ಹಿಂತೆಗೆಯುವಳೆಂದು ನಂಬಿದ್ದೇನೆ. ಕಾರಣವೆ ಇಲ್ಲದೆ ಪ್ರೀತಿ ಶುರುವಿಟ್ಟು ಹಲವು ಕಾರಣ ನೀಡಿ ಅದೇ ಪ್ರೀತಿಯನ್ನು ದಿಕ್ಕರಿಸುವುದು ಪ್ರಜ್ಣಾವಂತ ಮನುಜನ ಲಕ್ಷಣ ಖಂಡಿತ ಅಲ್ಲ. ಪ್ರಜ್ಣಾವಂತ ನಾಗರಿಕನ ನೆಲೆಯಲ್ಲಿ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳುವುದು ಬಹು ದೊಡ್ಡ ಕರ್ತವ್ಯ. ಉದ್ಯೋಗದೊಂದಿಗೆ ಈ ದಿಶೆಯಲ್ಲು ಭಡ್ತಿ ಹೊಂದುತ್ತಾ ಹೋಗುವುದೇ ನಿಜವಾದ ಜೀವನ ಭಾಂಧವ್ಯ ಗೆಳತಿ. +****** \ No newline at end of file diff --git a/PanjuMagazine_Data/article_1089.txt b/PanjuMagazine_Data/article_1089.txt new file mode 100644 index 0000000000000000000000000000000000000000..0f8c428a42c7065e3832a4be63669094db66166f --- /dev/null +++ b/PanjuMagazine_Data/article_1089.txt @@ -0,0 +1,12 @@ + +ಇಂದು ಬೇರೆಯವರನ್ನು , ಭ್ರಷ್ಟರನ್ನು ಸರಿಮಾಡುವುದೆಂದರೆ ನಾವು ಕೆಟ್ಟುಹೋಗುವುದು ಅಂಥ ಅರ್ಥ! ಅಥವಾ ಅತಿ ದುಷ್ಟರಾಗುವುದು ಅಂಥ! ಏಕೆಂದರೆ ಅವರಿಗೆ ನಾವು ಸರಿಯಿಲ್ಲ ಅನ್ನಿಸುವುದರಿಂದ ನಮ್ಮನ್ನು ಅವರು ಅವರಂತೆ ಆಗಿಸಿಬಿಡುತ್ತಾರೆ! +ಪುರಾಣಗಳಲ್ಲಿ ದುಷ್ಟರ ದೌಷ್ಟ್ಯ ಹೆಚ್ಚಾದಾಗ ಭಗವಂತ ಬಂದು ದುಷ್ಟರ ಸಂಹರಿಸುವುದನ್ನು ಓದಿರುತ್ತೇವೆ. ಅಂದರೆ ಸಾಮಾನ್ಯರು ಇವರನ್ನು ಮಟ್ಟ ಹಾಕಲು ಅಸಮರ್ಥರು ಎಂಬ ಸತ್ಯ ಅಲ್ಲಿ ಅಡಗಿದೆ! ದುಷ್ಟರ ನಾಶ ಮಾಡುವುದಕ್ಕೆ ಭಗವಂತನೇ ಅವತರಿಸಬೇಕಾಗುತ್ತದೆ. ಅವನೆ ಸಮರ್ಥ! ಭ್ರಷ್ಟತೆಯನ್ನು ನಿರ್ನಾಮ ಮಾಡುವವರೆ ಮಹಾಭ್ರಷ್ಟರಾಗಿರುವುದರಿಂದ ಎಲ್ಲಾ ಕಡೆ ಭ್ರಷ್ಟಾಚಾರ, ಅನೀತಿ ತಾಂಡವವಾಡುತ್ತಿದೆ! ಇಂದು ಎಲ್ಲಾ ಕಡೆ ಭ್ರಷ್ಟರು, ದುಷ್ಟರು, ಅನೀತಿವಂತರು ಹೆಚ್ಚಿ ಸಮಾಜ ಅಧಃಪತನ ಹೊಂದುತ್ತಿರುವುದನ್ನು ಕಂಡ ಕೆಲವೇ ಉತ್ತಮರು ಅವರ ತಿದ್ದಲು ಪ್ರಯತ್ನಿಸಿ ಆಗದೆ ಅವರೂ ಭ್ರಷ್ಟರಾಗಿ ಪರಿವರ್ತನೆಯಾಗಿರುವುದನ್ನು ಕಂಡಿರುತ್ತೇವೆ! ಇನ್ನೂ ಕೆಲವರು ಕೈಚೆಲ್ಲಿದ್ದಾರೆ! ಇದು ವಿಪರ್ಯಾಸ! ಆದರೂ ಸತ್ಯ! ಅಷ್ಟರಮಟ್ಟಿಗೆ ಭ್ರಷ್ಟತೆ ಕಬಂಧ ಬಾಹುಗಳು ಎಲ್ಲ ಕಡೆ ಸುತ್ತುವರಿದಿವೆ. ಉತ್ತಮರಾಗುವುದರಿಂದ ಏನು ಲಾಭ? ಎಂಬ ಪ್ರಶ್ನೆ ಎದುರಾಗುತ್ತದೆ. ಬದುಕಲು ಹಣ ಬೇಕು. ಉತ್ತಮರೆಂಬ ಪ್ರಮಾಣ ಪತ್ರದಿಂದ ಬದುಕು ಸಾಗಿಸಲು ಇಂದು ಸಾಧ್ಯವಿಲ್ಲ! ಹಿಂದೆ ಏನೆಲ್ಲ ಸಾಧ್ಯವಿತ್ತು! ಉತ್ತಮರೆಂಬ ಪ್ರಮಾಣ ಪತ್ರ ಪಡೆಯುವುದು ಅತಿ ಕಷ್ಟ! ಆದರೂ ಅದರಿಂದ ಹಣ ಸಂಪಾದಿಸಲಾಗದು! ಪ್ರಯೋಜನಕ್ಕೆ ಬಾರದು! ಹಣವಿಲ್ಲದೆ ಬದುಕು ದುಸ್ತರವಾಗಿದೆ. ಹಣವೇ ಜಗವ ಆಳುತ್ತಿದೆ! ಆದ್ದರಿಂದ ಉತ್ತಮರೆಂಬ ನಡೆ ರೂಪಿಸಿಕೊಳ್ಳಲು ಶ್ರಮಿಸುವ ಅವಶ್ಯಕತೆ ಇದೆಯೆ? ಇಲ್ಲ! ಉತ್ತಮರಾಗುವುದರಿಂದ ಏನೂ ಅನುಕೂಲವಿಲ್ಲ ಎಂದಾದ ಮೇಲೆ ಹಾಗೂ ಅದರಿಂದ ಅನಾನುಕೂಲವೇ ಹೆಚ್ಚು ಎಂದಾದುದರಿಂದಾಗಿ ಜನ ಉತ್ತಮರಾಗುವ ತೊಂದರೆ ತೆಗೆದುಕೊಳ್ಳುತ್ತಿಲ್ಲ! ಏಕೆ ತೆಗೆದುಕೊಳ್ಳಬೇಕು? +ಉತ್ತಮರಾಗುವುದು ಸುಲಭವಲ್ಲ. ಅನೀತಿ, ಭ್ರಷ್ಟಾಚಾರಗಳ ಗುಡುಗು ಸಿಡಿಲುಗಳ, ಬಿರುಗಾಳಿ, ಮಳೆ ಎದುರಿಸುತ್ತ ಉತ್ತಮಿಕೆಯ ಜ್ಯೋತಿಯ ಆರದಂತೆ ಬೆಳಗಿಸಬೇಕಾಗಿರುವುದು ಸುಲಬವಲ್ಲ! ವ್ರತಗಳೆಂದರೆ ಕಷ್ಟ. ಉತ್ತಮರಾಗಲು ಭ್ರಷ್ಟರೂ, ದುಷ್ಟರೂ ಅನೀತಿವಂತರೂ ಆಗದ ವ್ರತ ಪಾಲಿಸುವುದು ತುಂಬಾ ಕಷ್ಟ. ಅದರಿಂದ ಕಛೇರಿ, ಮನೆ, ಸಂಬಂಧೀಕರು, ಸಮಾಜದ ಪ್ರಮುಖರ ಸಂಬಂಧ ಕೆಡಿಸಿಕೊಂಡು ಶತೃಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಎಲ್ಲರಿಂದ ಬಾರಿ ಸತ್ಯಹರಿಶ್ಚಂದ್ರ! ಗಾಂಧಿ ತುಂಡು! ಎಂಬ ಮುೂದಲಿಕೆಗಳ, ಸಹೋದ್ಯೋಗಿಗಳಲ ವಿಲನ್ ನೋಡಿದಂತೆ ನೋಡುವುದನ್ನು ಹೆಜ್ಜೆ ಹೆಜ್ಜೆಗೂ ಸಹಿಸಬೇಕಾಗುತ್ತದೆ. ಎಲ್ಲರಿಗೆ ವಿಚಿತ್ರ ಪ್ರಾಣಿಯಂತೆ ಕಾಣಬೇಕಾಗುತ್ತದೆ! ಇಷ್ಟೆಲ್ಲ ಆಗಿ ಸುಖವಾಗಿರಲು ಸಾಧ್ಯವೆ? ನೆಮ್ಮದಿಯಿಂದ ಇರಲು ಸಾಧ್ಯವಾಗದು. ಇಷ್ಟು ಪ್ರಮಾಣಿಕರಾಗಿದ್ದು, ಇಷ್ಟು ಶ್ರಮಪಟ್ಟು ಉತ್ತಮರಾಗುವುದರಿಂದ ಏನು ಲಾಭ? ಉತ್ತಮರಾಗಲು ಎಲ್ಲರ ಶತೃಗಳ ಮಾಡಿಕೊಳ್ಳಬೇಕಿದೆ! ಜತೆಗೆ ಉತ್ತಮ ಜೀವನ ನಡೆಸಲೂ ಸಾಧ್ಯವಾಗದಂತಾಗುತ್ತದೆ! ಕಷ್ಟಪಟ್ಟರೂ ಭ್ರಷ್ಟರಂತೆ ಸುಖಪಡಲಾಗದು. ಹಾಗೆ ಉತ್ತಮರೂ, ಪ್ರಾಮಾಣಿಕರೂ, ಆದರ್ಶ ವ್ಯಕ್ತಿಗಳು ಕೆಲವು ಇಲಾಖೆಗಳಲ್ಲಿ ಕೆಲಸಮಾಡುವುದು ಕಷ್ಟ. ಹಾಗೇ ರಾಜಕಾರಣದಲ್ಲಿ ಇರಲಾಗದು! ಮುಖ್ಯಮಂತ್ರಿ, ಮಂತ್ರಿಯುಗಿಯಂತೂ ಕೆಲಸಿಸಲು ಸಾಧ್ಯವಿಲ್ಲ. ಅಲ್ಲಿ ಕೆಲಸಮಾಡಲು ಬೇಕಾಗುವ ಅರ್ಹತೆಗಳೆಂದರೆ ಅಪ್ರಾಮಾಣಿಕತೆ, ದುಷ್ಟತೆ, ಅತಿ ಭ್ರಷ್ಟತೆ! +ಹಾಗೆ ಭ್ರಷ್ಟರಾದರೆ ಎಲ್ಲರೂ ಸ್ನೇಹಿತರಾಗುತ್ತಾರೆ. ಹಣ ಹರಿದು ಬರುತ್ತದೆ. ಬಯಸಿದುದ ಪಡೆದು ಸುಖಿಸಬಹುದು. ಎಲ್ಲಾ ಕಡೆಗೆ ಆಹ್ವಾನಿಸುತ್ತಾರೆ. ಗೌರವ ನೀಡುತ್ತಾರೆ. ಭ್ರಷ್ಟರಾಗಲು ಶ್ರಮಿಸಬೇಕಿಲ್ಲ! ಹಣ ವ್ಯಯಿಸಬೇಕಿಲ್ಲ! ವ್ರತಗಳ ಆಚರಿಸುವ ಅವಶ್ಯಕತೆಯಿಲ್ಲ! ಆದರೂ ನೆಮ್ಮದಿ ಜೀವನ ನಡೆಸಬಹುದು! ಎಂದಾದರೂ ಒಮ್ಮೆ ಇದು ಬಯಲಾಗಬಹುದು. ಆಗ ಇದೇ ಭ್ರಷ್ಟ ವ್ಯವಸ್ಥೆ ಬೆನ್ನಿಗಿದ್ದು ಕಳಂಕ ತೊಳೆದು ಪವಿತ್ರವಾಗಿಸುತ್ತದೆ! ಆಶ್ಚರ್ಯ !ಆದರೂ ಸತ್ಯ! ಇಲ್ಲಿ ಕಷ್ಟಪಡದಿದ್ದರೂ ಸುಖಪಡಬಹುದು! ಇಂದಿನ ಸಮಾಜ ಹೀಗಾಗಿದೆ! ಇದೇ ಮೌಲ್ಯಯುತವೂ, ಗೌರವಯುತವೂ, ಆದರ್ಶ ಬದುಕೆಂದು ಒಪ್ಪಿತವಾಗುತ್ತಿದೆ! +ಮೇಲಿನ ಎರಡರಲ್ಲಿ ಎರಡನೆಯದನ್ನು ಆಯ್ಕೆ ಮಾಡಿಕೊಂಡವನನ್ನು ಬುದ್ದಿವಂತ ಎಂದು ಸಮಾಜ ಭಾವಿಸುತ್ತಿದೆ. ಸರ್ಕಾರದ ಯಾವುದೇ ಕೆಲಸಕ್ಕೆ ಸೇರಿದೊಡನೆ ಕಾರು, ಸೈಟ್, ಬಂಗ್ಲೆ … ಒಡೆಯನಾದವನನ್ನು ಸಮಾಜ ಗೌರವಿಸಿ ಸತ್ಕರಿಸುತ್ತಿದೆ! ಆ ಬದುಕಿಗೆ ಬೆಲೆ ಕೊಡುತ್ತಿದೆ! ಅಂದರೆ ಎಲ್ಲರೂ ಹಾಗೆ ಆಗಬೇಕೆಂಬ ಸಂದೇಶ ರವಾನಿಸುತ್ತಿದೆ. ಅವನ ಮೇಲೆ ಅರೋಪಗಳು ಬಂದೊಡನೆ ಸಹಾಯಕ್ಕೆ ನಿಲ್ಲುತ್ತಿದೆ! ಹೀಗೆ ರಕ್ಷಣೆ ಮಾಡುವ ಸಂದೇಶ ಈ ಸಮಾಜ, ಜನ ಮತ್ತು ವ್ಯವಸ್ಥೆ ಒಪ್ಪಿಕೊಂಡು ಪೋಷಿಸುತ್ತಿದೆ! ಆದ್ದರಿಂದು ಇದು ಮೌಲ್ಯವಾಗಿದೆ! ಇದನ್ನ ಸಮಾಜ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಪ್ರಮಾಣಿಕತೆ, ಸುನೀತಿಗಳಿಗೆ ಸ್ಥಾನ ಕೊಡದಿರುವುದರಿಂದ ಅದಕ್ಕೆ ಬೆಲೆಯಿಲ್ಲ ಎಂಬ ಸಂದೇಶ ರವಾನಿಸುತ್ತಿದೆ! ಪ್ರಯುಕ್ತ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ನಾವು ಸುಲಭವಾಗಿ ಗ್ರಹಿಸಬಹುದಾಗಿದೆ! ಇಂದು ಭ್ರಷ್ಟರು ಸಮಾಜದಲ್ಲಿ ಶ್ರಮಪಡದೆ ಸುಖವಾಗಿ ಬದುಕುವುದನ್ನು, ಪ್ರಮಾಣಿಕರು ಬದುಕಲು ಕಷ್ಟಪಡುವುದನ್ನು, ಕಷ್ಟಪಟ್ಟರು ಸುಖವಾಗಿರಲು ಸಾಧ್ಯ ಆಗದಿರುವುದನ್ನು ಕಾಣುತ್ತಿದ್ದೇವೆ. +ಪೂರ್ಣಚಂದ್ರ ತೇಜಸ್ವಿಯವರ ತಬರನ ಕತೆಯ ತಬರ ಭ್ರಷ್ಟ ವ್ಯವಸ್ಥೆಯ ಬಲಿಪಶು, ಪ್ರಾಮಾಣಿಕರಿಗೆ ದೊರೆತ ಕೊಡುಗೆಗೆ ಸಾಕ್ಷಿಯಾಗಿದೆ! ಪ್ರಾಮಾಣಿಕರ ಕೆಲಸ ಕಾರ್ಯಗಳು ಯಾವ ಕಛೇರಿಗಳಲ್ಲಿ ಕಾನೂನು ರೀತಿಯಿಂದಿದ್ದರೂ ಆಗದಿರುವುದನ್ನು, ಭ್ರಷ್ಟರ ಕೆಲಸ ಕಾರ್ಯಗಳು ಕಾನೂನುಬಾಹಿರವಾದರೂ ಕ್ಷಣಾರ್ದದಲ್ಲಿ ಆಗುವುದನ್ನು ನೋಡಿರುತ್ತೇವೆ! ಇದು ಭ್ರಷ್ಟ ವ್ಯವಸ್ಥಗೆ ಹಿಡಿದ ಕನ್ನಡಿಯಲ್ಲವೆ? +ಮನವರಿಯದ ಕಳ್ಳತನವಿಲ್ಲ ಮರುಳೇ … ಲೇಖನದಲ್ಲಿ ಮಹದೇವ್ ಪ್ರಕಾಶ್ ರವರು ೧೯೮೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರ ಪ್ರಾಮಾಣಿಕತೆ ಬಗ್ಗೆ ಹೀಗೆ ಹೇಳುತ್ತಾರೆ. ಎಐಸಿಸಿ ಅದ್ಯಕ್ಷರಾಗಿದ್ದ ರಾಜೀವಗಾಂಧಿ ಚೆನೈನಲ್ಲಿ ಎಐಸಿಸಿ ಅಧಿವೇಶನ ನಡೆಯಿಸಲು ತೀರ್ಮಾನಿಸಿ ಅದರ ಖರ್ಚು – ವೆಚ್ಚಕ್ಕಾಗಿ ಹಣ ಕೊಡಬೇಕೆಂದು ಪಾಟೀಲರನ್ನು ಕೇಳುತ್ತಾರೆ. ಪಾಟೀಲರು ಭ್ರಷ್ಟಾಚಾರ ಮಾಡಿ ಹಣ ಕೊಡಲು ಇಷ್ಟಪಡದೆ ನಿರಾಕರಿಸುತ್ತಾರೆ. ಕೊಡಲೇಬೇಕೆಂಬ ಒತ್ತಡ ಉಂಟಾದಾಗ ಪಾರ್ಶ್ವವಾಯು ್ ಪೀಡಿತರಾಗಿ ತೊಂದರೆಗೊಳಗಾಗುವುದನ್ನು ಕಾಣುತ್ತೇವೆ. ಭ್ರಷ್ಟಾಚಾರ ಮತ್ತು ಅಧಿಕಾರದ ಗದ್ದುಗೆ ಒತ್ತಡಕ್ಕೆ ಸಿಲುಕಿ ಭ್ರಷ್ಟಾಚಾರ ಮಾಡಲು ಇಷ್ಟವಾಗದೆ ಅನಾರೋಗ್ಯ ಪೀಡಿತರಾಗಿ ಆರೋಗ್ಯ ಮತ್ತು ಅಧಿಕಾರ ಎರಡನ್ನೂ ಕಳೆದುಕೊಳ್ಳುತ್ತಾರೆ! ಇದು ಪ್ರಾಮಾಣಿಕ ಬದುಕಿಗೆ ದೊರೆತ ಪ್ರತಿಫಲ! +ಬದುಕು ಮುಖ್ಯವಾಗಿರುವುದರಿಂದ ಬದುಕುವುದು ಎಲ್ಲರ ಮೊದಲ ಆಧ್ಯತೆಯಾಗಿರುತ್ತದೆ. ಸುಖವಾಗಿ ಬದುಕುವ ದಾರಿಯಿದ್ದರೂ ಕಷ್ಟಪಟ್ಟು ಬದುಕುವ ದಾರಿಯನ್ನು ಆಯ್ದುಕೊಳ್ಳುವವನನ್ನು ಮೂರ್ಖ ಎನ್ನುವುದಿಲ್ಲವೆ? ಆದ್ದರಿಂದ ಸುಖಪಡುವ ದಾರಿಯಲ್ಲಿ ಎಲ್ಲರೂ ನಡೆಯಲು ಬಯಸುವುದು ತಪ್ಪಾ? ಇದಕ್ಕೆ ಇಂದಿನ ಸಮಾಜ, ವ್ಯವಸ್ಥೆ ಕಾರಣವಲ್ಲವೆ? ಈ ವ್ಯವಸ್ಥೆಗೆ ನಾಡನ್ನು ಆಳುತ್ತಿರುವ ರಾಜಕಾರಣಿಗಳೆ ಕಾರಣಗಳಾಗಿಲ್ಲವೆ? ಈ ವ್ಯವಸ್ಥೆ ಹೇಗಾಗಿದೆಯೆಂದರೆ ಬಸ್ಮಾಸುರನ ತಪಸ್ಸಿಗೆ ಮೆಚ್ಚಿ ಬಸ್ಮಾಸುರನಾಗುವಂತೆ ವರ ಕರುಣಿಸಿದ ಪರಶಿವನಿಗೆ ಅವನನ್ನು ನಿಗ್ರಹಿಸುವುದು ಕಷ್ಡವಾಗಿ ದೇವತೆಗಳೆಲ್ಲಾ ಇವನನ್ನು ಕಂಡು ಓಡಿದರೂ ರಕ್ಷಿಸಲಾಗದೆ ನಿಸ್ಸಹಾಯಕನಾಗಿ, ಮೂಕ ಪ್ರೇಕ್ಷಕನಾಗಿ ನೋಡುವಂತಾಯಿತು. ಹಾಗೆ ಭ್ಬ್ರಷ್ಟತೆ ಬೆಳೆದುನಿಂತಿದೆ! +ಭ್ರಷ್ಟಾಚಾರದ ವಿರುದ್ದ ಹೋರಾಡುವುದೆಂದರೆ ಪ್ರವಾಹದ ವಿರುದ್ದ ಈಜುವುದು ಅಂತ! ಭ್ರಷ್ಟಾಚಾರ ಪ್ರವಾಹದೋಪಾದಿಯಲ್ಲಿ ಪ್ರವಹಿಸುತ್ತಿದೆ! ಇದಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಎಲ್ಲರೂ ಕಾರಣರಾಗಿದ್ದೇವೆ! ಭ್ರಷ್ಟಾಚಾರದಲ್ಲಿ ತೊಡಗುವವರಷ್ಟೇ ಅಲ್ಲ ಅದನ್ನು ತಡೆಯದೆ ಮೌನ ವೀಕ್ಷಕರಾಗಿರುವುದೂ ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸಿದಂತೆ! ಭ್ರಷ್ಟಾಚಾರ ಮಟ್ಟ ಹಾಕಬೇಕಾದವರೇ ಮಹಾ ಭ್ರಷ್ಟಾಚಾರದ ಕೂಪದಲ್ಲಿರಬೇಕಾದರೆ ಭ್ರಷ್ಟಾಚಾರ ತಡೆಯುವವರು ಯಾರು? ಅಂದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಯಕ್ಷ ಪ್ರಶ್ನೆಗೆ ಉತ್ತರ ದೊರೆಯದೆ ಕಂಗಾಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ! ಇದರ ಜವಾಬ್ದಾರಿ ಯಾರೂ ಹೊರದಿರುವುದು ,ಹೊರಲು ಬಿಡದಿರುವುದ ಕಾಣುವಂತಾಗಿದೆ! ಇದಕ್ಕೆ ಉತ್ತಮ ಉದಾಹರಣೆ ಲೋಯುಕ್ತಕ್ಕೆ ಲೋಕಾಯುಕ್ತರ ನೇಮಿಸದೆ ವಿಳಂಬಿಸಿದುದು! ಹಾಗೂ ಎಸಿಬಿ ರಚಿಸಿದುದು! ಎಲ್ಲರೂ ಈ ಭ್ರಷ್ಟ ವ್ಯವಸ್ಥೆಯ ಆಶ್ರಯಿಸಿರುವುದರಿಂದ ಇದನ್ನು ಇಲ್ಲವಾಗಿಸಲು ಹೇಗೆ ಬಿಟ್ಟಾರು? ಕೊಟ್ಟಕೊನೆಗೆ ಉಳಿವುದೊಂದೇ ಆಶಾಭಾವ ' ಅತಿಹತ ' . ಇದು ಹತವಾಗಲು ಇನ್ನೆಷ್ಟು ಅತಿಯಾಗಬೇಕೋ? +* ಕೆ ಟಿ ಸೋಮಶೇಖರ ಹೊಳಲ್ಕೆರೆ. + \ No newline at end of file diff --git a/PanjuMagazine_Data/article_109.txt b/PanjuMagazine_Data/article_109.txt new file mode 100644 index 0000000000000000000000000000000000000000..9e14105d163989ffc7c5f902978e2d4e694a5b75 --- /dev/null +++ b/PanjuMagazine_Data/article_109.txt @@ -0,0 +1,15 @@ + ಇಡೀ ಮಳೆಗಾಲ ಇವರು ಬಾರದೇ ಇದ್ದಾಗ ಸಿಟ್ಟು ಉಕ್ಕೇರುತ್ತಿತ್ತು. ಅಲ್ಲಾ.. ದೂರದಲ್ಲಿ ಕಂಡರೂ ಗುರುತಿಲ್ಲದವರಂತೆ ಕತ್ತು ಕೊಂಕಿಸಿ, ಮುಖ ಕುಣಿಸಿ ಮಾಯವಾಗುತ್ತಿದ್ದರಲ್ಲದೇ ಮನೆ ಕಡೆಗೆ ಸುಳಿಯುತ್ತಿರಲಿಲ್ಲ.. ಎಷ್ಟು ಸೊಕ್ಕು ಅಂದುಕೊಂಡರೂ ಹಾಗೇನಿರಲಾರದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಲೂ ಇದ್ದೆ. ಅಯ್ಯೋ.. ನಿಮಗೆ ಇವರು ಯಾರು ಅಂತ ಮೊದಲು ಪರಿಚಯ ಮಾಡಿಕೊಡದೆ ನನ್ನ ಗೋಳು ತೋಡ್ಕೊಳ್ತಾ ಇದ್ದೀನಲ್ಲಾ.. ಇವರು ಅಂದರೆ ಹಕ್ಕಿಗಳು ಸ್ವಾಮೀ.. ಮಳೆಗಾಲದಲ್ಲಿ ಹೊರಗೆ ನೀರಿನ ಲಭ್ಯತೆ ಇರುವ ಕಾರಣ ಇವರ ಹಾರಾಟ ಕೂಗಾಟವೆಲ್ಲಾ ದೂರದಲ್ಲೇ .. +ಬಿಸಿಲಿನ ಝಳ ಹೆಚ್ಚುತ್ತಿದ್ದ ಹಾಗೆ ಮನೆಯ ಅಡುಗೆ ಕೋಣೆಯ ಹತ್ತಿರ ಬಂದು ಗಲಾಟೆ ಶುರು ಮಾಡುತ್ತಿದ್ದವು. ಅಡುಗೆ ಕೋಣೆಯ ಕಿಟಕಿಯ ನೇರಕ್ಕೆ ಒಂದು ಪುಟ್ಟ ನೀರಿನ ಹೊಂಡ ಇವರ ಆಕರ್ಷಣೆಯ ಕೇಂದ್ರ. ಅದಕ್ಕೆ ನೀರಿನ ಟ್ಯಾಂಕಿನಿಂದ ಹೊರ ಚೆಲ್ಲಿದ ನೀರು ಬಂದು ತುಂಬಿಕೊಂಡು ಅದೊಂದು ಪುಟ್ಟ ಕೊಳವಾಗಿ ಪರಿವರ್ತನೆಗೊಳ್ಳುತ್ತಿತ್ತು. ಈ ಸಲ ಯಾಕೋ ಅಲ್ಲಿಯೂ ಹಕ್ಕಿಗಳ ಸುಳಿವಿಲ್ಲ ಅನ್ನಿಸಿದಾಗಲೇ ನಾನು ಆ ಕಡೆಗೆ ಗಮನ ಕೊಡಲು ಹೊರಟೆ. +ನೀರಿನ ಹೊಂಡ, ಪಕ್ಕದಲ್ಲಿದ್ದ ಬರೆ ಜರಿದ ಕಾರಣ ಬಿದ್ದ ಮಣ್ಣಿನಿಂದ ತುಂಬಿಕೊಂಡಿತ್ತು. ಅದರಲ್ಲಿ ನೀರು ನಿಲ್ಲುತ್ತಲೇ ಇರಲಿಲ್ಲ. ಸುತ್ತ ಮುತ್ತಲಿನ ಕಳೆಗಿಡಗಳನ್ನೆಲ್ಲಾ ತೆಗೆದು ಸ್ವಚ್ಚತಾ ಆಂಧೋಲನ ನಡೆಸಿ ನೀರಿನ ಗುಂಡಿಯ ಹೂಳೆತ್ತುವಿಕೆಯ ಕಾಮಗಾರಿ ನಡೆಯಿತು. ಇನ್ನು ಎಲ್ಲಾ ಸರಿಯಾದೀತು ಎಂದು ನೆಮ್ಮದಿಯಿಂದ ಇದ್ದೆ. ಮರುದಿನ ಬೆಳಗ್ಗೆ ಸ್ವಲ್ಪ ಹೊತ್ತು ಹಕ್ಕಿಗಳು ಕಾಣಿಸಿದರೂ ಮತ್ತೆ ಬಂದವುಗಳೆಲ್ಲಾ ನಿರಾಶೆಯಿಂದ ಹಾರುತ್ತಿರುವಂತೆ ಕಾಣಿಸಿತು. +ಅರ್ರೇ.. ಮತ್ತೇನು ಹೊಸಾ ಸಮಸ್ಯೆ ಎಂದು ತಲೆ ಕೆರೆದುಕೊಂಡು ಸ್ಥಳ ಪರಿಶೀಲನೆ ನಡೆಸಿದೆ. ಹೋಗಿ ನೋಡಿದರೆ ಅಲ್ಲಿ ಏಡಿಯೋ, ಹೆಗ್ಗಣವೋ ಕೊರೆದ ಬಿಲದೊಳಗೆ ನೀರು ನುಗ್ಗಿ ಬೇಗನೇ ಇಂಗಿ ಹೋಗುತ್ತಿತ್ತು. ಹಕ್ಕಿಗಳು ಬಿಸಿಲೇರಿದ ನಂತರವೇ ಬರುವವುಗಳಾಗಿದ್ದರಿಂದ ಅವು ಬರುವಾಗ ನೀರಿಲ್ಲದ ಹೊಂಡವಷ್ಟೇ ಸ್ವಾಗತಿಸುತ್ತಿದ್ದುದು. +ಈ ಸಮಸ್ಯೆಯ ಪರಿಹಾರಕ್ಕಾಗಿ ಅದೇ ದಿನ ಸಂಜೆ ಸ್ವಲ್ಪ ಮಣ್ಣು ತಂದು ಆ ಬಿಲಗಳನ್ನೆಲ್ಲಾ ಮುಚ್ಚಿದ್ದಾಯಿತು. ಬೆಳಗ್ಗೆ ಹೋಗಿ ನೋಡಿದರೆ ಮುಚ್ಚಿದ್ದ ಅಷ್ಟೂ ಮಣ್ಣು ಮತ್ತೆ ಕೆದರಿಕೊಂಡು ಹೊರಬಿದ್ದು ಯಥಾಪ್ರಕಾರ ಬಿಲ ಕಾಣಿಸುತ್ತಿತ್ತು. ಈ ಸಲ ಸ್ವಲ್ಪ ಗಟ್ಟಿಯಾದ ಕಲ್ಲುಗಳನ್ನು ಜಡಿದು ಕೂರಿಸಿ ಮತ್ತೊಮ್ಮೆ ಮಣ್ಣಿನ ತೇಪೆ ಹಾಕಿ ಅದನ್ನು ಮುಚ್ಚಿ ಸಮಾಧಾನದ ಉಸಿರು ಬಿಟ್ಟೆ. ಮರುದಿನ ನೋಡಿದರೆ ಕಲ್ಲು ಮಣ್ಣು ಹೊರ ಚೆಲ್ಲಿದ್ದು ಮಾತ್ರವಲ್ಲದೆ ಬಿಲದ ಬಾಯಿಯೂ ದೊಡ್ಡದಾಗಿತ್ತು. +ಇದಕ್ಕೊಂದು ಕೊನೆ ಕಾಣಿಸಲೇ ಬೇಕು ಕಾವಲು ಕಾದಾದರೂ ಆ ಹೆಗ್ಗಣವನ್ನು ಬಡಿಯುತ್ತೇನೆ ಎಂದೆಲ್ಲಾ ರಾಜಾರೋಷವಾಗಿ ಭಾಷಣ ಬಿಗಿದು ಆ ದಿನ ರಾತ್ರಿ ಸರ್ವ ಸನ್ನದ್ಧಳಾಗಿ ನಿಂತೆ. +ಯಾವ ಪ್ರಾಣಿಯೂ ಸದ್ದು ಮಾಡದೇ ಬರುವುದಿಲ್ಲ ತಾನೇ? ಮತ್ತು ನಾವು ಎದುರಿದ್ದರೂ ಬರಲಾರದು. ಹಾಗಾಗಿ ಅಡುಗೆ ಕೋಣೆಯನ್ನೇ ನನ್ನ ಅಡಗುತಾಣವಾಗಿ ಮಾಡಿಟ್ಟುಕೊಂಡು, ಕಾಯುವ ಕೆಲಸವಿದ್ದಾಗ ನಿದ್ರೆ ಬಾರದಿರಲಿ ಎಂದು ಲ್ಯಾಪ್ ಟಾಪ್, ಮೊಬೈಲ್, ಹುರಿಗಾಳು, ಚಕ್ಕುಲಿ, ಚಿಪ್ಸುಗಳಿಂದ ಸರ್ವಸಜ್ಜಿತಳಾಗಿ ಕುಳಿತೆ. ನನ್ನ ಪ್ರಯತ್ನ ಪಲಿಸಿತು. ಆ ಬದಿಯಿಂದ ಪರ ಪರನೆ ಮಣ್ಣನ್ನು ಕೆರೆಯುವ ಶಬ್ಧ ಕೇಳಿಸತೊಡಗಿತು. ಟಾರ್ಚ್ ಬೆಳಕಿಗೆ ಮಾಯವಾದರೆ ಎಂಬ ಹೆದರಿಕೆಯಿಂದ ಪರಿಚಿತ ಜಾಗವಾದ ಕಾರಣ ಕತ್ತಲಲ್ಲೇ ಹೆಜ್ಜೆ ಹಾಕಿ ಹತ್ತಿರ ಹೋಗಿ ಅದರ ಮುಖ ದರ್ಶನ ಮಾಡೋಣವೆಂದು ಬೆಳಕು ಚೆಲ್ಲಿದೆ. ಅಲ್ಲಿ ಬಾಲವಾಡಿಸುತ್ತಾ ಮಣ್ಣು ಕೆರೆಯುತ್ತಿದ್ದುದು ನಮ್ಮನೆ ನಾಯಿ ಟೈಗರ್. ಅದು ಕತ್ತಲಿನಲ್ಲಿ ಹೆಗ್ಗಣ ಇಲಿಗಳನ್ನು ಬೇಟೆಯಾಡಿ ಹೊತ್ತು ತಂದು ಮನೆಯೆದುರಿನ ಅಂಗಳದಲ್ಲಿ ಹಾಕಿ ನಮ್ಮ ಶಹಬ್ಬಾಸ್ ಗಿರಿ ಪಡೆಯುವುದರಲ್ಲಿ ನೈಪುಣ್ಯ ಹೊಂದಿದ ನಾಯಿ. ಸ್ವಲ್ಪ ಸಂಶಯ ಬಂದರೂ ಸಾಕು ಈ ಮಹಾಶಯ ಉದ್ದುದ್ದ ಕನ್ನ ಕೊರೆಯುವುದರಲ್ಲಿ ನಿಸ್ಸೀಮ. ಅದನ್ನು ತಡೆಯುವುದಂತೂ ಸಾಧ್ಯವಿಲ್ಲದ ಮಾತು. +ಹಕ್ಕಿಗಳ ನೀರಿನ ಸಮಸ್ಯೆಗೆ ಬೇರೇಯೇ ವ್ಯವಸ್ಥೆ ಮಾಡುವ ಅನಿವಾರ್ಯತೆಯೀಗ ನನಗೆ. +ಅಗಲ ಬಾಯಿಯ ಪ್ಲಾಸ್ಟಿಕ್ ಟಬ್ ಒಂದನ್ನು ಕೊಂಡುತಂದು ಅದರೊಳಗೆ ನೀರು ತುಂಬಿ ಅಲ್ಲೇ ಮೇಲ್ಭಾಗದಲ್ಲಿ ಇಟ್ಟಾಯಿತು. ಇದರಲ್ಲಿ ಸೋರುವಿಕೆಯ ಸಮಸ್ಯೆ ಇಲ್ಲದ್ದುದರಿಂದ ನೀರಿಗಿನ್ನು ತೊಂದರೆಯಿಲ್ಲ ಎಂದು ನಿರಾಳವಾದೆ. ಆದರೆ ಹಕ್ಕಿಗಳು ನೀರಿನ ಹೊಂಡಕ್ಕೆ ಸುತ್ತು ಹೊಡೆಯುವುದಲ್ಲದೆ ಈ ನೀರಿನ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಅರ್ರೇ.. ಇದೇನಪ್ಪಾ ಈ ಹೊಂಡವೇನು ತಮ್ಮ ಸ್ವಂತದ್ದು ಅಂದುಕೊಂಡು ಬಿಟ್ಟಿದ್ದಾವೋ ಎಂದು ತಲೆ ಬಿಸಿ ಆಯ್ತು. +ಆಗಲೇ ಅತ್ಯದ್ಭುತ ಆಲೋಚನೆಯೊಂದು ಹೊಳೆಯಿತು. ಆ ಹೊಂಡವನ್ನೇ ಸ್ವಲ್ಪ ಅಗಲ ಮಾಡಿ, ಅದರೊಳಗೆ ಈ ಪ್ಲಾಸ್ಟಿಕ್ ಟಬ್ಬನ್ನು ಹೂತರೆ.. ಕೂಡಲೇ ಕಾರ್ಯಗತವಾಯಿತು ಈ ಹೊಸಾ ಉಪಾಯ.ಅದೇ ಜಾಗದಲ್ಲಿ ತುಂಬಿದ ಸ್ವಚ್ಚ ನೀರು ಈಗ ಹಕ್ಕಿಗಳನ್ನಾಕರ್ಷಿಸಿದವು. ದೊಡ್ಡ ಹಕ್ಕಿಗಳು ಚಿಂವ್ ಚಿಂವ್ ಎನ್ನುತ್ತಾ, ಅತ್ತಿತ್ತ ನೋಡುತ್ತಾ ನಾಚಿಕೆಯಿಂದ ಹತ್ತಿರ ಬಂದು ನೀರು ಕುಡಿಯ ತೊಡಗಿದವು ಆದರೆ ಪುಟ್ಟ ಹಕ್ಕಿಗಳು ನೀರಿನ ಆಳಕ್ಕೆ ಹೆದರಿ ಅಲ್ಲೇ ಬದಿಯಲ್ಲಿರುವ ಬಸಳೆ ಚಪ್ಪರದಲ್ಲಿ ಸಾಲಾಗಿ ಕುಳಿತುಕೊಳ್ಳುತ್ತಿದ್ದವು. ಮತ್ತೆ ಮತ್ತೆ ಅವು ಮಾಡುತ್ತಿದ್ದ ನೀರಿಗಿಳಿಯುವ ಪ್ರಯತ್ನ ಫಲಕಾರಿಯಾಗುತ್ತಲೇ ಇರಲಿಲ್ಲ. ಸ್ವಲ್ಪ ತಲೆ ಓಡಿಸಿ ನೀರಿನಿಂದ ಮೇಲಕ್ಕೆ ಕಾಣುವಂತಿರುವಷ್ಟು ದೊಡ್ಡದಾದ ಕಲ್ಲನ್ನು ಓರೆಯಾಗಿ ನೀರಿನೊಳಗೆ ಮುಳುಗಿಸಿಟ್ಟೆ. ಅದರ ಬದಿಯಿಂದಾಗಿ ನಿಂತರೆ ಅವುಗಳಿಗೆ ನೀರಿಗಿಳಿಯಲು ಸಾಧ್ಯವಾಗಬಹುದು ಎಂಬ ನನ್ನ ಆಲೋಚನೆ ಸರಿಯಾಯಿತು. ಮರುದಿನದಿಂದ ಒಬ್ಬೊಬ್ಬರಾಗಿ ನೀರಿಗಿಳಿದವು. ಗುಂಪು ಗುಂಪಾಗಿಯೂ ಇಳಿದವು. ಕೆಲವಂತೂ ಇಡೀ ದಿನ ಸ್ನಾನ ಮಾಡುವುದನ್ನೇ ಕೆಲಸ ಮಾಡಿಕೊಂಡವು. ದೊಡ್ಡ ಹಕ್ಕಿಗಳು ಬಂದಾಗ ಗೌರವಕ್ಕೋ, ಹೆದರಿಕೆಗೋ ಕೊಂಚ ದೂರ ಹಾರಿ ಅವು ಹೋದೊಡನೇ ಮತ್ತೆ ನೀರಿನ ಸುತ್ತ ಪಟ್ಟಾಂಗ ಶುರು ಮಾಡುತ್ತಿದ್ದವು. +ಈಗ ನನ್ನ ಅಡುಗೆ ಮನೆ ಮತ್ತೆ ಹಕ್ಕಿ ವೀಕ್ಷಣಾ ತಾಣ ವಾಗಿ ಬದಲಾಗಿದೆ. ಹಗಲಿನ ಇಡೀ ಹೊತ್ತು ಅವುಗಳ ಕಚ್ಚಾಟ, ಪ್ರೀತಿ, ಹುಚ್ಚಾಟವನ್ನು ನೋಡುತ್ತಾ ಕಾಲ ಕಳೆಯಬಹುದು. ಬೇಸಿಗೆಯ ಬಿಸಿಯಲ್ಲೂ ಅವರ ಆಟ ನೋಡುತ್ತಾ ಕಣ್ಣು ತಂಪಾಗಿಸಬಹುದು. +ಇದು ನಾವು ಹಕ್ಕಿಗಳಿಗೆ ಮಾಡಬಹುದಾದ ಮಹದುಪಕಾರ ಎಂದು ಬೆನ್ನು ತಟ್ಟಿಕೊಳ್ಳಬೇಕಿಲ್ಲ. ಇವುಗಳ ಕಲರವ ಕೇಳುವುದರಿಂದ, ಇವುಗಳ ಆಟವನ್ನು ನೋಡುವುದರಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯುವುದರ ಜೊತೆಗೆ ನಮಗೀಗ ತುಂಬಾ ಅಗತ್ಯವಾಗಿರುವ ಮಾನಸಿಕ ನೆಮ್ಮದಿಯನ್ನು ಇವುಗಳಿಂದ ಪಡೆಯಬಹುದು. ಅವಸರದ ಬದುಕಿನಲ್ಲಿ ಒಂದಿಷ್ಟು ಇಂತಹ ಸಂತಸದ ಗಳಿಗೆಗಳು ಇಡೀ ಜೀವನದ ಸವಿ ನೆನಪಿನ ಬುತ್ತಿಯಾಗಿ ಕೊನೆಯವರೆಗೂ ನಮ್ಮೊಡನೆ ಉಳಿದುಬಿಡುತ್ತವೆ. + ಕೊನೆ ಹನಿ : ಪ್ರಾಕೃತಿಕವಾಗಿ ಸಿಗುತ್ತಿದ್ದ ನೀರಿನ ಸೆಲೆಗಳು ನಮ್ಮಿಂದಾಗಿ ಅವುಗಳ ಅಗತ್ಯ ಇರುವ, ಅವುಗಳ ಹಕ್ಕುದಾರರೂ ಆದ ಪ್ರಾಣಿ ಪಕ್ಷಿಗಳಿಗೆ ಸಿಗುತ್ತಿಲ್ಲ. ಸಾಧ್ಯವಾದಷ್ಟೂ ಪರಿಸರ ಹಾಳು ಮಾಡದೇ ಅವುಗಳನ್ನು ಉಳಿಸುವುದಕ್ಕೆ ಪ್ರಯತ್ನಿಸಿ. ಕೊನೇ ಪಕ್ಷ ಹನಿ ನೀರು ನೀಡಿ ಸಮುದ್ರದಷ್ಟು ಪ್ರೀತಿ ಪಡೆಯಬಹುದಾದ ಇಂತಹ ಪುಟ್ಟ ಕೆಲಸಗಳನ್ನಾದರೂ ಮಾಡಿ. +-ಅನಿತಾ ನರೇಶ್ ಮಂಚಿ +***** \ No newline at end of file