e6f3b966ee8a5eebddac1e797f89d4e56d1701535b39331bb4c290dd52a3ad43
Browse files- eesanje/url_47_133_4.txt +7 -0
- eesanje/url_47_133_5.txt +7 -0
- eesanje/url_47_133_6.txt +4 -0
- eesanje/url_47_133_7.txt +7 -0
- eesanje/url_47_133_8.txt +10 -0
- eesanje/url_47_133_9.txt +7 -0
- eesanje/url_47_134_1.txt +6 -0
- eesanje/url_47_134_10.txt +8 -0
- eesanje/url_47_134_11.txt +7 -0
- eesanje/url_47_134_12.txt +6 -0
- eesanje/url_47_134_2.txt +5 -0
- eesanje/url_47_134_3.txt +5 -0
- eesanje/url_47_134_4.txt +6 -0
- eesanje/url_47_134_5.txt +6 -0
- eesanje/url_47_134_6.txt +5 -0
- eesanje/url_47_134_7.txt +4 -0
- eesanje/url_47_134_8.txt +4 -0
- eesanje/url_47_134_9.txt +7 -0
- eesanje/url_47_135_1.txt +7 -0
- eesanje/url_47_135_10.txt +5 -0
- eesanje/url_47_135_11.txt +7 -0
- eesanje/url_47_135_12.txt +6 -0
- eesanje/url_47_135_2.txt +5 -0
- eesanje/url_47_135_3.txt +5 -0
- eesanje/url_47_135_4.txt +5 -0
- eesanje/url_47_135_5.txt +7 -0
- eesanje/url_47_135_6.txt +8 -0
- eesanje/url_47_135_7.txt +8 -0
- eesanje/url_47_135_8.txt +6 -0
- eesanje/url_47_135_9.txt +7 -0
- eesanje/url_47_136_1.txt +7 -0
- eesanje/url_47_136_10.txt +8 -0
- eesanje/url_47_136_11.txt +5 -0
- eesanje/url_47_136_12.txt +5 -0
- eesanje/url_47_136_2.txt +4 -0
- eesanje/url_47_136_3.txt +10 -0
- eesanje/url_47_136_4.txt +5 -0
- eesanje/url_47_136_5.txt +5 -0
- eesanje/url_47_136_6.txt +7 -0
- eesanje/url_47_136_7.txt +6 -0
- eesanje/url_47_136_8.txt +5 -0
- eesanje/url_47_136_9.txt +5 -0
- eesanje/url_47_137_1.txt +6 -0
- eesanje/url_47_137_10.txt +5 -0
- eesanje/url_47_137_11.txt +8 -0
- eesanje/url_47_137_12.txt +7 -0
- eesanje/url_47_137_2.txt +9 -0
- eesanje/url_47_137_3.txt +6 -0
- eesanje/url_47_137_4.txt +5 -0
- eesanje/url_47_137_5.txt +4 -0
eesanje/url_47_133_4.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಡಿಎಂಕೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
|
2 |
+
ನವದೆಹಲಿ, ಆ.1 (ಪಿಟಿಐ)-ಹಿಂದಿನ ತಮಿಳುನಾಡು ಸರ್ಕಾರವು ಕಚ್ಚತೀವು ದ್ವೀಪವನ್ನು ಶ್ರಿಲಂಕಾಗೆ ಬಿಟ್ಟುಕೊಡಲು ಸಮ್ಮತಿಸಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಡಳಿತರೂಢ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
|
3 |
+
ತಮಿಳುನಾಡಿನ ಆಡಳಿತ ಪಕ್ಷವು ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು ಏನನ್ನೂ ಮಾಡಿಲ್ಲ ಎಂದು ಅವರು ಎಕ್ಸ್ ಮಾಡಿದ್ದಾರೆ. ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರಿಸುವ ವಿಷಯದ ಕುರಿತು ಹೊರಹೊಮ್ಮುತ್ತಿರುವ ಹೊಸ ವಿವರಗಳು ಡಿಎಂಕೆಯ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಹಿಂದಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ಒಪ್ಪಂದಕ್ಕೆ ಒಪ್ಪಿಗೆ ನೀಡಿದ್ದರು ಎನ್ನುವುದನ್ನು ಮೋದಿ ಬಹಿರಂಗಪಡಿಸಿದ್ದಾರೆ.
|
4 |
+
ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಭಾರತ ಮತ್ತು ಲಂಕಾ ನಡುವಿನ 1974 ರ ಒಪ್ಪಂದದ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಕೇಳಿದ ಪ್ರಶ್ನೆಗಳಿಗೆ RTIಉತ್ತರವನ್ನು ಆಧರಿಸಿ ಮಾಧ್ಯಮ ವರದಿಯಾಗಿದೆ.
|
5 |
+
, ’ . # ’ . . . ’ …
|
6 |
+
ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ಡಿಎಂಕೆ ಏನನ್ನೂ ಮಾಡಿಲ್ಲ. ಕಚ್ಚತೀವುನಲ್ಲಿ ಹೊರಹೊಮ್ಮುತ್ತಿರುವ ಹೊಸ ವಿವರಗಳು ಡಿಎಂಕೆಯ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆ ಎಂದು ಮೋದಿ ಹೇಳಿದರು. ಡಿಎಂಕೆ ಕುಟುಂಬ ಘಟಕಗಳು. ಅವರು ತಮ್ಮ ಸ್ವಂತ ಪುತ್ರರು ಮತ್ತು ಹೆಣ್ಣುಮಕ್ಕಳು ಬೆಳೆಯಲು ಮಾತ್ರ ಕಾಳಜಿ ವಹಿಸುತ್ತಾರೆ.
|
7 |
+
ಅವರು ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಚ್ಚತೀವು ಮೇಲಿನ ಅವರ ನಿರ್ದಯತೆ ನಮ್ಮ ಬಡ ಮೀನುಗಾರರು ಮತ್ತು ವಿಶೇಷವಾಗಿ ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು. ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು 75 ವರ್ಷಗಳಿಂದ ಕಾಂಗ್ರೆಸ್ನ ಕೆಲಸವಾಗಿದೆ ಎಂದು ಅವರು ಆರೋಪಿಸಿದ್ದಾರೆ.
|
eesanje/url_47_133_5.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಸಿಯೆರಾ ಲಿಯೋನ್ ಪ್ರಜೆ ಹೊಟ್ಟೆಯಲ್ಲಿತ್ತು 11 ಕೋಟಿ ಮೌಲ್ಯದ ಕೊಕೇನ್
|
2 |
+
ಮುಂಬೈ, ಎ.1 (ಪಿಟಿಐ)– ಸುಮಾರು 11 ಕೋಟಿ ರೂ.ಮೌಲ್ಯದ 74 ಕೊಕೇನ್ ಕ್ಯಾಪ್ಸುಲ್ಗಳನ್ನು ತನ್ನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಸಿಯೆರಾ ಲಿಯೋನ್ ಪ್ರಜೆಯೊಬ್ಬನನ್ನು ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
|
3 |
+
1,108 ಗ್ರಾಂ ತೂಕದ ಡ್ರಗ್ ಕ್ಯಾಪ್ಸುಲ್ಗಳನ್ನು ಇಲ್ಲಿನ ಸರ್ಕಾರಿ ಜೆಜೆ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ದೇಹದಿಂದ ಹೊರ ತೆಗೆದು ಪೊಲೀಸರಿ ನೀಡಿದ್ದಾರೆ ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
|
4 |
+
ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಮಾರ್ಚ್ 28 ರಂದು ನಗರಕ್ಕೆ ಆಗಮಿಸಿದ ನಂತರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಂಡವು ವ್ಯಕ್ತಿಯನ್ನು ಬಂಧಿಸಿದೆ ಎಂದು ಕಳ್ಳಸಾಗಣೆ ವಿರೋಧಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
|
5 |
+
ವಿಚಾರಣೆಯ ಸಮಯದಲ್ಲಿ, ನಿಷೇಧಿತ ಮಾದಕವಸ್ತುವನ್ನು ಭಾರತಕ್ಕೆ ನುಸುಳುವ ಪ್ರಯತ್ನದಲ್ಲಿ ತಾನು ಕೊಕೇನ್ ಕ್ಯಾಪ್ಸುಲ್ಗಳನ್ನು ಸೇವಿಸಿದ್ದೇನೆ ಎಂದು ವ್ಯಕ್ತಿ ಡಿಆರ್ಐ ಅಧಿಕಾರಿಗಳಿಗೆ ತಿಳಿಸಿದ್ದಾನೆ.
|
6 |
+
ನಂತರ ನ್ಯಾಯಾಲಯದ ಆದೇಶ ಪಡೆದು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಂಡವು ಅವರ ಹೊಟ್ಟೆಯಿಂದ 74 ಕೊಕೇನ್ ಕ್ಯಾಪ್ಸುಲ್ಗಳನ್ನು ಹೊರತೆಗೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಂತರ ವ್ಯಕ್ತಿಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ( ) ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಆರ್ಐ ಹೇಳಿಕೆ ತಿಳಿಸಿದೆ.
|
7 |
+
ಕಳೆದ ಮಾರ್ಚ್ 24 ರಂದು 19.79 ಕೋಟಿ ಮೌಲ್ಯದ 1,979 ಗ್ರಾಂ ಕೊಕೇನ್ನೊಂದಿಗೆ ಆಫ್ರಿಕನ್ ರಾಷ್ಟ್ರದ ಮಹಿಳೆಯನ್ನು ಬಂಧಿಸಲಾಗಿತ್ತು. ಶೂಗಳು, ಮಾಯಿಶ್ಚರೈಸರ್ ಮತ್ತು ಶಾಂಪೂ ಬಾಟಲಿಗಳು ಮತ್ತು ಆಂಟಿಪೆಸ್ರ್ಪಿರಂಟ್ಗಳಲ್ಲಿ ಮಾದಕವಸ್ತುವನ್ನು ಸಾಗಿಸಲಾಗುತ್ತಿತ್ತು.
|
eesanje/url_47_133_6.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 30ರೂ.ಇಳಿಕೆ
|
2 |
+
ನವದೆಹಲಿ, ಏಪ್ರಿಲ್. 1-ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ,ಇದಲ್ಲದೆ 5 ಕೆಜಿ ಎಫ್ಟಿಎಲ್ (ಫ್ರೀ ಟ್ರೇಡ್ ಎಲ್ಪಿಜಿ)ಸಿಲಿಂಡರ್ ಬೆಲೆಯೂ ಕೂಡ 7.50 ರೂಪಾಯಿ ಕಡಿಮೆಯಾಗಿದ್ದು ಹೊಸ ಹಣಕಾಸು ವರ್ಷದ 2024-25 ಮೊದಲ ದಿನ ಎಲ್ಪಿಜಿ ದರವನ್ನು ಕಡಿಮೆ ಮಾಡಲಾಗಿದ್ದು, ಇದರಿಂದ ವಾಣಿಜ್ಯ ಗ್ಯಾಸ್ ಬಳಕೆದಾರರಿಗೆ ಸಿಹಿ ಸುದ್ದಿಯಾಗಿದೆ.ಈ ಪರಿಷ್ಕೃತ ದರ ಇಂದು (ಏಪ್ರಿಲ್ 01) ರಿಂದಲೇ ಅನ್ವಯವಾಗಲಿದೆ.
|
3 |
+
ದೇಶದ ಹಲವು ರಾಜ್ಯಗಳಲ್ಲಿ ತೆರಿಗೆ ಅನುಗುಣವಾಗಿ ದರ ಪರಸ್ಕರಣೆ ಮಾಡಲಾಗಿದ್ದು ರಾಜಧಾನಿ ದೆಹಲಿಯಲ್ಲಿ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 30.50 ರೂ, ಮುಂಬೈನಲ್ಲಿ 31.50 ರೂ. ಚೆನ್ನೈನಲ್ಲಿ 30.50 ರೂ. ಮತ್ತು ಕೋಲ್ಕತ್ತಾದಲ್ಲಿ 32 ರೂ. ಕಡಿಮೆಯಾಗಿದೆ. ಬೆಲೆ ಇಳಿಕೆ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್1764.50 ರೂ. ಗಳಿಗೆ ಲಭ್ಯವಾಗಲಿದೆ.
|
4 |
+
ಇನ್ನು ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1717.50 ರೂ. ಇದೆ. ಕೋಲ್ಕತ್ತಾದಲ್ಲಿ 1879 ರೂ. ಮತ್ತು ಚೆನ್ನೈನಲ್ಲಿ 1930 ರೂ. ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ಬೆಲೆ 1830 ರೂಗೆ ಇಳಿದಿದೆ. 14 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
|
eesanje/url_47_133_7.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಸಂವಿಧಾನ ಉಳಿಸಲು ಅಲ್ಲ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಇಂಡಿಯಾ ರ್ಯಾಲಿ : ಸುಧಾಂಶು ತ್ರಿವೇದಿ
|
2 |
+
ನವದೆಹಲಿ,ಮಾ.31-ಪ್ರಜಾಪ್ರಭುತ್ವವನ್ನು ರಕ್ಷಿಸಿ, ಕುಟುಂಬಗಳನ್ನು ಉಳಿಸಿ, ಭ್ರಷ್ಟಾಚಾರವನ್ನು ಮುಚ್ಚಿಹಾಕಿ ಎಂಬ ಕಾರಣಕ್ಕೆ ಇಂಡಿಯಾ ರಾಜಕೀಯ ಘಟಬಂಧನ್ ಬೃಹತ್ ರ್ಯಾಲಿ ನಡೆಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
|
3 |
+
ಬಿಜೆಪಿಯ ವಕ್ತಾರ ಸುಧಾಂಶು ತ್ರಿವೇದಿ ರ್ಯಾಲಿಯನ್ನು ಆಯೋಜಿಸುತ್ತಿರುವ ನಾಯಕರುಗಳ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿವೆ. ಕಾಂಗ್ರೆಸ್, ಡಿಎಂಕೆ, ಆರ್ಜೆಡಿ ಪಕ್ಷಗಳ ನಾಯಕರು ವಿವಿಧ ಹಗರಣಗಳಲ್ಲಿ ಬಂಧನಕ್ಕೊಳಗಾಗಿದ್ದಾರೆ.
|
4 |
+
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಕಾರಕ್ಕೆ ಬರುವ ಹಿಂದಿನಿಂದಲೂ ಈ ನಾಯಕರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಂತೆ ಮೋದಿ ಸರ್ಕಾರದ ವಿರುದ್ಧ ರಾಜಕೀಯ ದ್ವೇಷ ಎಂಬ ಟೀಕೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
|
5 |
+
ಈ ಮೊದಲು ಅಣ್ಣಾ ಹಜಾರೆ ನೇತೃತ್ವದಲ್ಲಿ ಭಾರತ ಭ್ರಷ್ಟಾಚಾರದ ವಿರುದ್ಧ ಎಂಬ ಆಂದೋಲನ ನಡೆಯಿತು. ಇಂದು ಪ್ರತಿಯೊಬ್ಬರೂ ಭ್ರಷ್ಟಾಚಾರದ ಜೊತೆಯಲ್ಲಿ ಎಂಬ ಸಮಾವೇಶ ಮಾಡಲಾಗುತ್ತಿದೆ. ಕಳ್ಳರು, ಮೋಸಗಾರರ ಜೊತೆ ಕೈಜೋಡಿಸಿರುವ ನಾಯಕರು ಒಟ್ಟಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
|
6 |
+
ಆಮ್ಆದ್ಮಿ ಪರವಾಗಿ ಜೊತೆಯಾಗಿ ಬಂದಿದ್ದಾರೆ ಎಂದು ಕಿಡಿಕಾರಿದರು. ಲಾಲೂ ಪ್ರಸಾದ್ ಯಾದವ್ ಹಲವು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಅವರೆಲ್ಲರೂ ತಮ್ಮ ಹಳೆಯ ಪಾಪಗಳನ್ನು ಮುಚ್ಚಿಡಲು ಬಯಸುತ್ತಿದ್ದಾರೆ. ರಾಮಮಂದಿರದ ನಿರ್ಮಾಣದ ವಿರುದ್ಧವಾಗಿ ಮಾತನಾಡಿದ್ದರು. ಕೆಲವರಂತೂ ಹಿಂದುತ್ವವನ್ನು ನಿರ್ಮೂಲನೆ ಮಾಡುವ ಹೇಳಿಕೆ ನೀಡಿದ್ದರು ಎಂದು ಸುಧಾಂಶು ತ್ರಿವೇದಿವಿವರಿಸಿದ್ದಾರೆ.
|
7 |
+
ಇಂತಹ ರಾಜಕೀಯ ಪಕ್ಷಗಳು ಜನರ ನಂಬಿಕೆ ಕಳೆದುಕೊಂಡರೆ ಬಿಜೆಪಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವಾಸ ಹಾಗೂ ನಂಬಿಕೆಗೆ ಪಾತ್ರವಾಗಿದೆ. ಚುನಾವಣಾ ಕಾಲದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಇದನ್ನು ಸಹಿಸಲಾಗದೆ ವಿರೋಧಪಕ್ಷಗಳ ನಾಯಕರು ವಂಶಪಾರಂಪರ್ಯ ರಾಜಕಾರಣವನ್ನು ಮುಂದುವರೆಸಲು ಮತ್ತು ಭ್ರಷ್ಟಾಚಾರವನ್ನು ಮುಚ್ಚಿಟ್ಟುಕೊಳ್ಳಲು ಒಟ್ಟಾಗಿ ಸಮಾವೇಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
|
eesanje/url_47_133_8.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
400 ಸ್ಥಾನ ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ : ಠಾಕ್ರೆ
|
2 |
+
ನವದೆಹಲಿ,ಮಾ.31-ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಶಿವಸೇನೆಯ ಠಾಕ್ರೆ ಬಣದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.
|
3 |
+
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಘಟಬಂಧನ್ನ ಸಮಾವೇಶದಲ್ಲಿ ಮಾತನಾಡಿದ ಅವರು, ಸುಳ್ಳು ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರವಾಗಿ ಅವರ ಪತ್ನಿ ಸುನೀತಾ, ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಅವರು ಹೋರಾಟ ನಡೆಸುತ್ತಿದ್ದಾರೆ. ಅವರ ಬೆಂಬಲಕ್ಕೆ ದೇಶದ ಎಲ್ಲಾ ಸಹೋದರರೂ ಇದ್ದಾರೆ ಎಂದು ಹೇಳಿದರು.
|
4 |
+
ಈ ಸಮಾವೇಶವನ್ನು ಬಿಜೆಪಿಯವರು ಕೊಲೆಗಡುಕರ ಕಾರ್ಯಕ್ರಮ ಎಂದಿದ್ದಾರೆ. ನೀವೆಲ್ಲಾ ಕೊಲೆಗಡುಕರೇ ಎಂದು ಪ್ರಶ್ನಿಸಿದ ಉದ್ಧವ್ ಠಾಕ್ರೆ, ರೈತರನ್ನು ಭಯೋತ್ಪಾದಕರು ಎಂದು ಭಾವಿಸಿ ದೆಹಲಿಗೆ ಬಾರದಂತೆ ತಡೆಯಲಾಗಿದೆ. ದೇಶಾದ್ಯಂತ ರೈತರು ಬಿಜೆಪಿಯನ್ನು ದೆಹಲಿಗೆ ಬರದಂತೆ ತಡೆಯಬೇಕಿದೆ ಎಂದರು.
|
5 |
+
ಬಿಜೆಪಿಗೆ ಸೇರಿದರೆ ಎಲ್ಲರೂ ಸ್ವಚ್ಛಗೊಳ್ಳುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರು ಪ್ರತಿಪಕ್ಷವನ್ನು ಹತ್ತಿಕ್ಕಲು ಮಾತ್ರ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಜೊತೆಗೆ ಇಡಿ, ಆದಾಯ ತೆರಿಗೆ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
|
6 |
+
ಇದು ಚುನಾವಣೆಯ ಪ್ರಚಾರದ ಸಭೆಯಲ್ಲ. ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ದೇಶಕ್ಕೆ ಇಂದು ಧಕ್ಕೆಯಾಗುತ್ತಿದೆ. ನಾವು ಬಲಿಷ್ಠ ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಸರ್ವತೋಮುಖ ಅಭಿವೃದ್ಧಿ ಹಾಗೂ ಭಾವೈಕ್ಯತೆಯ ಸರ್ಕಾರ ಬೇಕಿದೆ ಎಂದರು.
|
7 |
+
ಇದೇ ವೇಳೆಯಲ್ಲಿ ಮಾತನಾಡಿದ ಜಮ್ಮು-ಕಾಶ್ಮೀರದ ಮೆಹಬೂಬಾ ಮುಫ್ತಿ, ಬಿಜೆಪಿ ಸಂವಿಧಾನ ಮತ್ತು ನಿಯಮಾವಳಿಗಳನ್ನು ಬದಿಗಿಟ್ಟು ಪ್ರಶ್ನೆ ಮಾಡುವವರನ್ನು ಜೈಲಿನಲ್ಲಿಡುತ್ತದೆ. ಜಮ್ಮು-ಕಾಶ್ಮೀರವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದೆ. ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದ್ದಾರೆ. ಅವರು ಬಿಜೆಪಿ ಸೇರಿದರೆ ಇದೇ ಮಾಧ್ಯಮಗಳು ಕೇಜ್ರಿವಾಲ್ ಪ್ರಾಮಾಣಿಕ ವ್ಯಕ್ತಿ ಎಂದು ಹೊಗಳಲಾರಂಭಿಸುತ್ತವೆ ಎಂದು ಹೇಳಿದರು.
|
8 |
+
ಬಿಜೆಪಿ ಚುನಾವಣೆಯ ಬಾಂಡ್ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ಮಾಡಿದೆ. ಆದರೆ ವಿರೋಧಪಕ್ಷಗಳನ್ನು ಭ್ರಷ್ಟರು ಎಂದು ಜನರನ್ನು ದಾರಿ ತಪ್ಪಿಸುತ್ತಿದೆ. ವಂಶಪಾರಂಪರ್ಯದ ಬಗ್ಗೆ ಮಾತನಾಡುವ ಬಿಜೆಪಿಯವರು ತಮ್ಮಲ್ಲಿರುವ ಕುಟುಂಬ ರಾಜಕಾರಣದ ಬಗ್ಗೆ ಸತ್ಯ ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.
|
9 |
+
ಸುನೀತಾ ಕೇಜ್ರಿವಾಲ್ ಮಾತನಾಡಿ, ಅರವಿಂದ್ ಕೇಜ್ರಿವಾಲ್ರನ್ನು ಸುಳ್ಳು ಪ್ರಕರಣದಲ್ಲಿ ಜೈಲಿನಲ್ಲಿಡಲಾಗಿದೆ. ಅವರು ಜನರ ಪರವಾಗಿ ಕೆಲಸ ಮಾಡಿದ್ದೇ ತಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ. ಅವರು ಸಿಂಹವಿದ್ದಂತೆ, ಹೆಚ್ಚು ದಿನ ಜೈಲಿನಲ್ಲಿಡಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿ ಬಲಿದಾನವಾದಂತೆ ತಮ್ಮ ಪತಿ ಅರವಿಂದ್ ಕೇಜ್ರಿವಾಲ್ ದೇಶಕ್ಕಾಗಿ ಮುಡುಪಾಗಿದ್ದಾರೆ ಎಂದರು.
|
10 |
+
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ರವಾನಿಸಿದ್ದ ಸಂದೇಶವನ್ನು ಸುನೀತಾ ಕೇಜ್ರಿವಾಲ್ ಓದಿ ಹೇಳಿದರು. ಈ ವೇಳೆ ಅವರು ಭಾವೋದ್ವೇಗಕ್ಕೆ ಒಳಗಾದ ಪ್ರಸಂಗವೂ ನಡೆಯಿತು.ಲೋಕಸಭಾ ಚುನಾವಣೆಯಲ್ಲಿ ಆಮ್ಆದ್ಮಿ ಪಕ್ಷ ನೀಡುವ ಭರವಸೆಗಳನ್ನು ಕೇಜ್ರಿವಾಲ್ ಪರವಾಗಿ ಸುನೀತಾ ಓದಿ ಹೇಳಿದರು.ಸಿಪಿಐಎಂಎಲ್ನ ದೀಪಂಕರ್ ಭಟ್ಟಾಚಾರ್ಯ ಮಾತನಾಡಿ, ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.
|
eesanje/url_47_133_9.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಮನೆಗೆ ತೆರಳಿ ಎಲ್.ಕೆ.ಅಡ್ವಾಣಿಯವರಿಗೆ ಭಾರತರತ್ನ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು
|
2 |
+
ನವದೆಹಲಿ,ಮಾ.31-ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನವನ್ನು ಪ್ರದಾನ ಮಾಡಿದರು.ಅಡ್ವಾಣಿಯವರ ಮನೆಗೆ ತೆರಳಿದ ರಾಷ್ಟ್ರಪತಿಯವರು ಹಿರಿಯ ನಾಯಕರಿಗೆ ಗೌರವ ಸಲ್ಲಿಸಿದರು. ಈ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹಸಚಿವ ಅಮಿತ್ ಷಾ ಹಾಗೂ ಅಡ್ವಾಣಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
|
3 |
+
ದೇಶದ ರಾಜಕಾರಣದಲ್ಲಿ ಅಡ್ವಾಣಿಯವರು 7 ದಶಕಗಳ ಕಾಲ ಅಚಲವಾದ ಸಮರ್ಪಣೆ ಮತ್ತು ವಿಭಿನ್ನತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಇಂದು ರಾಷ್ಟ್ರಪತಿಯವರು ಭಾರತರತ್ನ ಪ್ರದಾನ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
|
4 |
+
1927 ರಲ್ಲಿ ಕರಾಚಿಯಲ್ಲಿ ಜನಿಸಿದ ಅಡ್ವಾಣಿಯವರು, 1947 ರಲ್ಲಿ ರಾಷ್ಟ್ರ ವಿಭಜನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದರು. ಸಾಂಸ್ಕøತಿಕ ರಾಷ್ಟ್ರೀಯತೆಯ ದೃಷ್ಟಿಯೊಂದಿಗೆ ಅವರು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಶ್ರಮಿಸಿದರು.
|
5 |
+
ಸಾಮಾಜಿಕ-ರಾಜಕೀಯ ಭೂದೃಶ್ಯದಲ್ಲಿ ರೂಪಾಂತರವನ್ನು ತಂದರು. ತುರ್ತು ಪರಿಸ್ಥಿತಿಯಲ್ಲಿ ಭಾರತದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದಾಗ, ಸರ್ವಾಕಾರಿ ಧೋರಣೆಯ ವಿರುದ್ಧ ಅವಿರತವಾದ ಹೋರಾಟ ನಡೆಸಿದರು ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
|
6 |
+
ಸಂಸದರಾಗಿ ಸಂವಾದಕ್ಕೆ ಅವರು ನೀಡಿದ ಒತ್ತು ಸಂಸದೀಯ ಸಂಪ್ರದಾಯಗಳನ್ನು ಪುಷ್ಟೀಕರಿಸಿದೆ. ಗೃಹ ಸಚಿವರಾಗಿರಲಿ ಅಥವಾ ಉಪಪ್ರಧಾನಿಯಾಗಿರಲಿ, ಅವರು ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದರು, ಪಕ್ಷಾತೀತವಾಗಿ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿದರು. ಭಾರತದ ಸಾಂಸ್ಕøತಿಕ ಪುನರುತ್ಥಾನಕ್ಕಾಗಿ ಅವರ ಸುದೀರ್ಘ ಮತ್ತು ದಣಿವರಿಯದ ಹೋರಾಟವು ಸೂರ್ತಿದಾಯಕ ಎಂದಿದ್ದಾರೆ.
|
7 |
+
ಅಡ್ವಾಣಿಯವರ ಹೋರಾಟದ ಪ್ರತಿಫಲವಾಗಿಯೇ 2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪುನರ್ನಿರ್ಮಾಣವಾಗಿದೆ ಎಂದು ತಿಳಿಸಲಾಗಿದ್ದು, ರಾಷ್ಟ್ರೀಯ ಕಾರ್ಯಸೂಚಿಯನ್ನು ಮರುರೂಪಿಸುವಲ್ಲಿ ಮತ್ತು ಅದನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವಲ್ಲಿ ಯಶಸ್ವಿಯಾದ ಬೆರಳೆಣಿಕೆಯ ನಾಯಕರಲ್ಲಿ ಅಡ್ವಾಣಿ ಪ್ರಮುಖರು.ಸ್ವಾತಂತ್ರ್ಯೋತ್ತರದ ರಾಜಕೀಯ ನಾಯಕತ್ವದಲ್ಲಿ ಅವರ ಸಾಧನೆಗಳು ಭಾರತದ ಪ್ರತಿಭೆ ಮತ್ತು ಅದರ ಅಂತರ್ಗತ ಸಂಪ್ರದಾಯಗಳ ಅತ್ಯುತ್ತಮ ಅಭಿವ್ಯಕ್ತಿಯಾಗಿವೆ ಎಂದು ವಿವರಿಸಲಾಗಿದೆ.
|
eesanje/url_47_134_1.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಕಾಂಗ್ರೆಸ್ ಪ್ರಣಾಳಿಕೆ ಸಿದ್ದಗೊಂಡ ಬೆನ್ನಲ್ಲೇ, ತರಾತುರಿಯಲ್ಲಿ ಬಿಜೆಪಿ ಪ್ರಣಾಳಿಕಾ ಸಮಿತಿ ರಚನೆ
|
2 |
+
ನವದೆಹಲಿ,ಮಾ.31-ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗಾಗಿ ದೇಶದ ಜನರಿಗೆ ಭರವಸೆ ನೀಡುವ ಪ್ರಣಾಳಿಕೆಯನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ಮುಂದಾಗುತ್ತಿದ್ದಂತೆ ಬಿಜೆಪಿ ತರಾತುರಿಯಲ್ಲಿ ಪ್ರಣಾಳಿಕಾ ಸಮಿತಿಯನ್ನು ರಚಿಸಿದೆ.ಶನಿವಾರ ಬಿಜೆಪಿ 27 ಸದಸ್ಯರ ಪ್ರಣಾಳಿಕಾ ಸಮಿತಿಯನ್ನು ರಚಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಮಿತಿಯಲ್ಲಿ ಹಲವು ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿದ್ದಾರೆ.ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಂಚಾಲಕರಾಗಿದ್ದು, ಕೇಂದ್ರ ಸಚಿವ ಪಿಯುಷ್ ಘೋಯಲ್ ಸಹ ಸಂಚಾಲಕರಾಗಿದ್ದಾರೆ.
|
3 |
+
ಗುಜರಾತ್, ಅಸ್ಸಾಂ, ಮಧ್ಯಪ್ರದೇಶದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಭೂಪೇಂದ್ರ ಯಾದವ್, ಕಿರಣ್ ರೀಜೀಜು, ಅರ್ಜುನ್ ಮುಂದ, ಅರ್ಜುನ್ ರಾಮ್ ಮೇಘವಾಲ್, ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್ ಸದಸ್ಯರಾಗಿದ್ದಾರೆ.
|
4 |
+
ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಈಗಾಗಲೇ ಸಿದ್ಧಪಡಿಸಿದೆ. ಆ ಪಕ್ಷದ ಪ್ರಧಾನ ಕಾರ್ಯದರ್ಶಿ ಜಯರಾಂ ರಮೇಶ್, ಈಗಾಗಲೇ ನಮ್ಮ ಪಕ್ಷ ಪಂಚನ್ಯಾಯ್, 50 ಗ್ಯಾರಂಟಿಗಳನ್ನು ಮಾ.16 ರಂದು ಬಿಡುಗಡೆ ಮಾಡಿದೆ. ಇದನ್ನು ಆಧಾರವಾಗಿಟ್ಟುಕೊಂಡು ಮನೆಮನೆಗೆ ಗ್ಯಾರಂಟಿ ಎಂಬ ಪ್ರಚಾರ ನಡೆಯುತ್ತಿದೆ. ದೇಶಾದ್ಯಂತ 8 ಕೋಟಿ ಗ್ಯಾರಂಟಿ ಕಾರ್ಡುಗಳನ್ನು ಹಂಚುವ ಅಭಿಯಾನ ಏ.3 ರಿಂದ ಆರಂಭಗೊಳ್ಳಲಿದೆ. ಏ.5 ರಂದು ಪಕ್ಷದ ಪ್ರಣಾಳಿಕೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
|
5 |
+
ಬಿಜೆಪಿ ಕೊನೆಕ್ಷಣದಲ್ಲಿ ತನ್ನ ಪ್ರಣಾಳಿಕೆ ತಯಾರಿಸಲು ಮುಂದಾಗಿದೆ. ಇದು ಕೇವಲ ಜನರನ್ನು ಮರಳು ಮಾಡುವ ಪ್ರಯತ್ನ. ಇದರಿಂದಾಗಿಯೇ ಬಿಜೆಪಿಗೆ ಜನರ ಮೇಲೆ ಎಷ್ಟು ಕಾಳಜಿ ಇದೆ ಎಂದು ಅರ್ಥವಾಗುತ್ತದೆ ಎಂದು ಕಿಡಿಕಾರಿದ್ದಾರೆ.
|
6 |
+
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ತಯಾರಿಸುವ ಮುನ್ನ ಹಲವು ತಿಂಗಳುಗಳ ಕಾಲ ವಿವಿಧ ಸಮಾಲೋಚನೆಯನ್ನು ನಡೆಸಿತ್ತು. ಇ-ಮೇಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಲಹೆಗಳನ್ನು ಪಡೆಯಲಾಗಿತ್ತು. ಭಾರತದ ಧ್ವನಿ ಎಂಬ ವೆಬ್ಸೈಟ್ ಮೂಲಕವೂ ಜನರಿಗೆ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ನಮ್ಮ ಪ್ರಣಾಳಿಕೆ ಜನರ ಧ್ವನಿಯಾಗಿದೆ. ಬಿಜೆಪಿಯವರದು ಮುಚ್ಚಿದ ಪೆಟ್ಟಿಗೆಯಲ್ಲಿನ ಕಡತವಾಗಿದೆ ಎಂದು ಲೇವಡಿ ಮಾಡಿದ್ದಾರೆ.
|
eesanje/url_47_134_10.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಸಂಸತ್ ಚುನಾವಣೆ ಬಹಿಷ್ಕರಿಸಿದ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್
|
2 |
+
ಕೋಹಿಮಾ,ಮಾ.30-ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿಸುವವರೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಬೆದರಿಕೆ ಹಾಕಿದೆ.
|
3 |
+
ನಾಗಾಲ್ಯಾಂಡ್ನ ಆರು ಜಿಲ್ಲೆಗಳನ್ನು ಒಳಗೊಂಡಿರುವ ಪ್ರತ್ಯೇಕ ಆಡಳಿತ ಅಥವಾ ರಾಜ್ಯಕ್ಕೆ ನಮ್ಮ ಒತ್ತಾಯವಿದೆ. ಕೇಂದ್ರದಿಂದ ತನ್ನ ಬೇಡಿಕೆಯನ್ನು ಈಡೇರಿಸುವವರೆಗೆ ನಾಗಾಲ್ಯಾಂಡ್ನ ಏಕೈಕ ಲೋಕಸಭಾ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅದು ಹೇಳಿದೆ.
|
4 |
+
ತುಯೆನ್ಸಾಂಗ್ನಲ್ಲಿ 20 ಶಾಸಕರು ಮತ್ತು ವಿವಿಧ ಸಂಘಟನೆಗಳೊಂದಿಗೆ ನಡೆದ ಸಮನ್ವಯ ಸಭೆಯ ನಂತರ ಸಂಘಟನೆ ನಾಯಕರು ಏಪ್ರಿಲ್ 19 ರ ಸಂಸತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದರು.20 ಶಾಸಕರನ್ನು ಒಳಗೊಂಡ ಪೂರ್ವ ನಾಗಾಲ್ಯಾಂಡ್ ಶಾಸಕರ ಒಕ್ಕೂಟವು ಈ ಹಿಂದೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಂಘಟನೆಗ ಮನವಿ ಮಾಡಿತ್ತು.
|
5 |
+
ಸಾರ್ವಜನಿಕ ತುರ್ತುಸ್ಥಿತಿ ಸಮಯದಲ್ಲಿ, ಪ್ರದೇಶದ ಏಳು ನಾಗಾ ಬುಡಕಟ್ಟುಗಳ ಮುಖಂಡರುಗಳು ಯಾವುದೇ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡುತ್ತಿಲ್ಲ.
|
6 |
+
ಆರು ಜಿಲ್ಲೆಗಳ ಪ್ರಮುಖ ನಾಗಾ ಸಂಸ್ಥೆ ಮತ್ತು ಅದರ ಸಂಬಂ„ತ ಸಂಘಟನೆಗಳು, ಅದರ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸಿ, ಕಳೆದ ವರ್ಷದ (ಫೆಬ್ರವರಿ 27) ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿದ್ದವು ಆದರೆ ನಂತರ ಕೇಂದ್ರ ಗೃಹ ಸಚಿವ ಅಮಿತ್ ಅವರ ಭರವಸೆಯ ನಂತರ ಅದನ್ನು ಹಿಂತೆಗೆದುಕೊಂಡಿದ್ದವು.
|
7 |
+
ಇವರ ಬೇಡಿಕೆ ಈಡೇರಿಕೆಗೆ ಸ್ಪಂದಿಸಿದ ಕೇಂದ್ರ ಗೃಹ ಸಚಿವಾಲಯ ಕಳೆದ ವರ್ಷ ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದು, ಈಶಾನ್ಯ ಸಲಹೆಗಾರ ಎ.ಕೆ. ಮಿಶ್ರಾ ಅವರ ಬೇಡಿಕೆಯನ್ನು ಅಧ್ಯಯನ ಮಾಡಲು, ಮತ್ತು ಸಮಿತಿಯು ನಾಗಾಲ್ಯಾಂಡ್ಗೆ ಹಲವಾರು ಬಾರಿ ಭೇಟಿ ನೀಡಿ ಎಲ್ಲಾ ಕಡೆಯೊಂದಿಗೆ ಮಾತುಕತೆ ನಡೆಸಿತು.
|
8 |
+
ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಇತ್ತೀಚೆಗೆ ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ, ಪೂರ್ವ ಪ್ರದೇಶಕ್ಕೆ ಸೇರಿದ ಜನರಿಗೆ ಸ್ವಾಯತ್ತ ಪ್ರದೇಶವನ್ನು ಸ್ಥಾಪಿಸಬೇಕು ಎಂದು ಹೇಳಿದ್ದರು.
|
eesanje/url_47_134_11.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ರೋಜಗಾರ್ ಕ್ರಾಂತಿಗೆ ನಾಂದಿ ಹಾಡಲಿದೆ ಕಾಂಗ್ರೆಸ್ ಗ್ಯಾರಂಟಿ : ಖರ್ಗೆ
|
2 |
+
ನವದೆಹಲಿ, ಮಾ.30 (ಪಿಟಿಐ) –ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಸಕ್ರಿಯಗೊಳಿಸಲು ಮತ್ತು ಯುವಕರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಮೂಲಕ ಕಾಂಗ್ರೆಸ್ ರೋಜ್ಗಾರ್ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.
|
3 |
+
ಯುವಕರ ಭವಿಷ್ಯವು ಕತ್ತಲಿನಿಂದ ಉಜ್ವಲವಾಗುವುದನ್ನು ಕಾಂಗ್ರೆಸ್ ಖಾತರಿಪಡಿಸುತ್ತದೆ ಎಂದು ಹೇಳಿರುವ ಅವರು ಪಕ್ಷವು ಅಧಿಕಾರಕ್ಕೆ ಬಂದರೆ ಅದನ್ನು ಜಾರಿಗೊಳಿಸುವ ಯುವ ನ್ಯಾಯ ಭರವಸೆಗಳನ್ನು ನೀಡಲಾಗುವುದು ಎಂದು ಪುನರುಚ್ಚರಿಸಿದರು.
|
4 |
+
ಕಾಂಗ್ರೆಸ್ ಪಕ್ಷವು ಯುವ ನ್ಯಾಯ್ ಖಾತರಿಯ ಮೂಲಕ ರೋಜ್ಗಾರ್ ಕ್ರಾಂತಿ (ಉದ್ಯೋಗ ಕ್ರಾಂತಿ)ಗೆ ನಾಂದಿ ಹಾಡಲಿದೆ! ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಸಕ್ರಿಯಗೊಳಿಸಲು ಮತ್ತು ನಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ನಾವು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಎಕ್ಸ್ ಮಾಡಿದ್ದಾರೆ.
|
5 |
+
ಭಾರತಿ ಭರೋಸಾ ಗ್ಯಾರಂಟಿ ಅಡಿಯಲ್ಲಿ, ತಮ್ಮ ಪಕ್ಷವು ಉದ್ಯೋಗ ಕ್ಯಾಲೆಂಡರ್ ಪ್ರಕಾರ 30 ಲಕ್ಷ ಹೊಸ ಕೇಂದ್ರ ಸರ್ಕಾರದ ಉದ್ಯೋಗಗಳನ್ನು ನೀಡುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು. ಪೆಹ್ಲಿ ನೌಕ್ರಿ ಪಕ್ಕಿ ಅಂಗವಾಗಿ ಪಕ್ಷವು ಎಲ್ಲಾ ವಿದ್ಯಾವಂತ ಯುವಕರಿಗೆ ವರ್ಷಕ್ಕೆ 1 ಲಕ್ಷ ರೂ.ಗಳಂತೆ ಒಂದು ವರ್ಷದ ಅಪ್ರೆಂಟಿಸ್ಶಿಪ್ ಹಕ್ಕನ್ನು ನೀಡುತ್ತದೆ ಎಂದು ಖರ್ಗೆ ಹೇಳಿದರು.
|
6 |
+
ಪೇಪರ್ ಲೀಕ್ ಸೆ ಮುಕ್ತಿ ಖಾತ್ರಿಯಡಿ, ಎಲ್ಲಾ ಪೇಪರ್ ಸೋರಿಕೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಪಕ್ಷವು ಕಾನೂನನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಪಕ್ಷವು ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಗಿಗ್ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಮತ್ತು ಯುವಕರಿಗೆ 5,000 ಕೋಟಿ ರೂಪಾಯಿಗಳ ಆರಂಭಿಕ ನಿ„ಯನ್ನು ಭರವಸೆ ನೀಡಿದೆ ಎಂದು ಖರ್ಗೆ ತಿಳಿಸಿದರು.
|
7 |
+
ನಾರಿ ನ್ಯಾಯ್ ಯುವ ನ್ಯಾಯ್ , ಶ್ರಮಿಕ್ ನ್ಯಾಯ್ , ಕಿಸಾನ್ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ಎಂಬ ಐದು ನ್ಯಾಯಗಳ ಅಡಿಯಲ್ಲಿ 25 ಭರವಸೆಗಳ ಮೇಲೆ ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣೆಯನ್ನು ಪಿಚ್ ಮಾಡಿದೆ. ಅಧಿಕಾರಕ್ಕೆ ಬಂದರೆ ಕೂಡಲೇ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
|
eesanje/url_47_134_12.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಕಳೆದುಹೋದ ಪಾನ್ಕಾರ್ಡ್ನಿಂದ 46ಕೋಟಿ ರೂ. ವ್ಯವಹಾರ..!
|
2 |
+
ಗ್ವಾಲಿಯರ್,ಮಾ.30-ಪಾನ್ ಕಾರ್ಡ್ ದುರುಪಯೋಗದ ಪರಿಣಾಮ ವಿದ್ಯಾರ್ಥಿಯೊಬ್ಬನಿಗೆ 46 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ವಾಲಿಯರ್ ನಿವಾಸಿಯಾಗಿರುವ ವಿದ್ಯಾರ್ಥಿ ಪ್ರಮೋದ್ ಕುಮಾರ್ ದಂಡೋಟಿಯಾ ಎಂಬಾತನಿಗೆ ಐಟಿ ಇಲಾಖೆಯಿಂದ ನೋಟೀಸ್ ಬಂದಾಗಲೇ ನನ್ನ ಬ್ಯಾಂಕ್ ಖಾತೆಯಿಂದ 46 ಕೋಟಿ ರೂ.ಗಳ ವ್ಯವಹಾರ ನಡೆಸಿರುವುದು ಗೊತ್ತಾಗಿರುವುದು.
|
3 |
+
ತಕ್ಷಣ ಎಚ್ಚೆತ್ತುಕೊಂಡ ವಿದ್ಯಾರ್ಥಿ ನನ್ನ ಪಾನ್ ಕಾರ್ಡ್ ಕಳೆದುಹೋಗಿದೆ. ಅದನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ತನ್ನ ಪಾನ್ ಕಾರ್ಡ್ ಮೂಲಕ ಕಂಪನಿಯನ್ನು ನೋಂದಾಯಿಸಲಾಗಿದೆ ಮತ್ತು ಮುಂಬೈ ಮತ್ತು ದೆಹಲಿಯಲ್ಲಿ 2021 ರಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ.
|
4 |
+
ನಾನು ಗ್ವಾಲಿಯರ್ನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದೇನೆ. ಆದಾಯ ತೆರಿಗೆ ಮತ್ತು ಜಿಎಸ್ಟಿಯ ಸೂಚನೆಯ ನಂತರ, ಮುಂಬೈ ಮತ್ತು ದೆಹಲಿಯಲ್ಲಿ 2021 ರಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಪಾನ್ ಕಾರ್ಡ್ ಮೂಲಕ ಕಂಪನಿಯೊಂದು ನೋಂದಾಯಿಸಲಾಗಿದೆ ಎಂದು ನನಗೆ ತಿಳಿಯಿತು. ಹೇಗೆ ಎಂದು ನನಗೆ ತಿಳಿದಿಲ್ಲ. ನನ್ನ ಪಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ವಹಿವಾಟುಗಳನ್ನು ಹೇಗೆ ಮಾಡಲಾಗಿದೆ ಎಂಬುದೇ ತಿಳಿದಿಲ್ಲ ಎಂದಿದ್ದಾನೆ.
|
5 |
+
ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದ ಕೂಡಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು. ಬಳಿಕ ಹಲವು ಬಾರಿ ಪೊಲೀಸರಿಗೆ ದೂರು ನೀಡಲು ಯತ್ನಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಹೀಗಾಗಿ ಮತ್ತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಮತ್ತೆ ದೂರು ದಾಖಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
|
6 |
+
ಯುವಕನಿಂದ ರೂ.46 ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರವನ್ನು ತನ್ನ ಬ್ಯಾಂಕ್ ಖಾತೆಯಿಂದ ಮಾಡಲಾಗಿದೆ ಎಂದು ಅರ್ಜಿ ಸ್ವೀಕರಿಸಲಾಗಿದೆ, ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪಾನ್ ಕಾರ್ಡ್ ದುರುಪಯೋಗಪಡಿಸಿಕೊಂಡಿದೆ, ಅದರ ಮೂಲಕ ಕಂಪನಿಯನ್ನು ನೋಂದಾಯಿಸಲಾಗಿದೆ ಮತ್ತು ಇಷ್ಟು ದೊಡ್ಡ ಮೊತ್ತದ ವ್ಯವಹಾರಗಳನ್ನು ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಶಿಯಾಜ್ ಕೆಎಂ ತಿಳಿಸಿದ್ದಾರೆ.
|
eesanje/url_47_134_2.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಹುಟ್ಟುಹಬ್ಬದ ಕೇಕ್ ತಿಂದ 10 ವರ್ಷದ ಬಾಲಕಿ ಸಾವು
|
2 |
+
ನವದೆಹಲಿ, ಮಾ.31-ಪಂಜಾಬ್ನ ಪಟಿಯಾಲಾದಲ್ಲಿ ಹತ್ತು ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ಕೇಕ್ ತಿಂದ ನಂತರ ಶಂಕಿತ ಆಹಾರ ವಿಷದಿಂದಾಗಿ ಸಾವನ್ನಪ್ಪಿದ್ದಾಳೆ.
|
3 |
+
ಕುಟುಂಬದವರ ಪ್ರಕಾರ ಮಾನ್ವಿ ಮತ್ತು ಆಕೆಯ ಸಹೋದರಿ ಹುಟ್ಟುಹಬ್ಬ ಆಚರಣೆಗಾಗಿ ಆನ್ಲೈನ್ನಲ್ಲಿ ಆರ್ಡರ್ ಮಾಡಿ ತರಿಸಲಾಗಿದ್ದ ಕೇಕ್ ಅನ್ನು ತಿಂದಿದ್ದರು. ರಾತ್ರಿ ಅಸ್ವಸ್ಥರಾಗಿದ್ದರು. ವಾಂತಿಭೇದಿ ನಿಯಂತ್ರಣಕ್ಕೆ ಬಾರದೆ ನಿತ್ರಾಣರಾದ ಕಾರಣಕ್ಕೆ ಮುಂಜಾನೆ 3 ಗಂಟೆಗೆ ಅವರಿಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾನ್ವಿ ತಾತ ತಿಳಿಸಿದ್ದಾರೆ.
|
4 |
+
ಆಸ್ಪತ್ರೆಯಲ್ಲಿ ಮಾನ್ವಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕಿರಿಯ ಸಹೋದರಿ ತಕ್ಷಣ ವಾಂತಿ ಮಾಡಿಕೊಂಡಿದ್ದರಿಂದ ಬಹುಶಃ ಬದುಕುಳಿದಿರಬಹುದು ಎಂದು ಆಕೆಯ ಮನೆಯವರು ಹೇಳಿದ್ದಾರೆ. ಮಾನ್ವಿ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
|
5 |
+
ಕೇಕ್ ತಯಾರಿಸಿದವರ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಹುಟ್ಟುಹಬ್ಬದ ಆಚರಣೆಯ ವಿಡಿಯೋದಲ್ಲಿ ಹುಡುಗಿಗೆ ಆಕೆಯ ಕುಟುಂಬ ಸದಸ್ಯರು ಕೇಕ್ ತಿನ್ನಿಸುತ್ತಿರುವುದನ್ನು ತೋರಿಸಲಾಗಿದೆ. ಕೇಕ್ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
|
eesanje/url_47_134_3.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಪತ್ನಿ ಆತ್ಮಹತ್ಯೆ ಸುದ್ದಿಕೇಳಿ ಹೃದಯಾಘಾತದಿಂದ ಪ್ರಾಣಬಿಟ್ಟ ಪತಿ
|
2 |
+
ಮೈಸೂರು,ಮಾ31-ಸಾವಿಗೆ ಶರಣಾದ ಪತ್ನಿಯ ಸಾವಿನ ಸುದ್ದಿ ತಿಳಿದು ಪತಿ ಶಾಕ್ಗೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರದಲ್ಲಿ ನಡೆದಿದೆ.ವಿಜಯಲಕ್ಷ್ಮಿ(52) ಸಾವಿಗೆ ಶರಣಾದ ಪತ್ನಿಯಾಗಿದ್ದು ಪತಿ ಮಂಜುನಾಥ್(58) ಹೃದಯ ಘಾತದಿಂದ ಸಾವನ್ನಪ್ಪಿದ್ದಾರೆ.
|
3 |
+
ಕಳೆದ ಹಲವು ದಿನಗಳಿಂದ ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದರು.ಚಿಕಿತ್ಸೆಯಿಂದ ಗುಣಮುಖರಾಗದ ಹಿನ್ನಲೆ ನಿನ್ನೆ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
|
4 |
+
ಪತ್ನಿಯ ಅಗಲಿಕೆ ಸುದ್ದಿ ಅರಿತ ಪತಿ ಮಂಜುನಾಥ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಮಂಜುನಾಥ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಸಾವಿನಲ್ಲೂ ಪತ್ನಿಯ ಜೊತೆ ಪತಿ ಒಂದಾಗಿದ್ದಾರೆ.
|
5 |
+
ಅಶೋಕಾಪುರಂ ನಲ್ಲಿರುವ ರೈಲ್ವೆ ವರ್ಕ್ ಷಾಪ್ ನಲ್ಲಿ ಮಂಜುನಾಥ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.ದಂಪತಿಗೆ ಇಬ್ಬರು ಮಕ್ಕಳಿದ್ದ ಮಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಗಳು ಮೈಸೂರಿನಲ್ಲಿ ವಿಧ್ಯಾಭ್ಯಾಸ ಮುಂದೆವರೆಸಿದ್ದಾರೆ.ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
|
eesanje/url_47_134_4.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಶಾರ್ಟ್ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ಬಿದ್ದು ಉಸಿರುಗಟ್ಟಿ ಕುಟುಂಬದ 4 ಮಂದಿ ಸಾವು
|
2 |
+
ದ್ವಾರಕಾ, ಮಾ.31 (ಪಿಟಿಐ) –ಗುಜರಾತ್ನ ದೇವಭೂಮಿ ದ್ವಾರಕಾ ನಗರದಲ್ಲಿ ಇಂದು ಬೆಳಿಗ್ಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ತೀವರ ಹೊಗೆಯಿಂದ ಶಿಶು ಸೇರಿದಂತೆ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
|
3 |
+
ದ್ವಾರಕಾ ನಗರದ ಆದಿತ್ಯ ರಸ್ತೆಯಲ್ಲಿರುವ ಮನೆಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಕುಟುಂಬ ಸದಸ್ಯರು ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪಟೇಲ್ ತಿಳಿಸಿದ್ದಾರೆ.
|
4 |
+
ಮೃತರನ್ನು ಪವನ್ ಉಪಾಧ್ಯಾಯ (39), ಅವರ ಪತ್ನಿ ತಿಥಿ (29), ಮಗಳು ಧ್ಯಾನ ಮತ್ತು ತಾಯಿ ಭವಾನಿಬೆನ್ (69) ಎಂದು ಗುರುತಿಸಲಾಗಿದೆ ಎರಡಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿದೆ.ನಂತರ ಮನೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಇದರಿಂದಾಗಿ ಕುಟುಂಬ ಸದಸ್ಯರು ನಂತರ ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
|
5 |
+
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮನೆ ಪ್ರವೀಶಿಸಿದ್ದಾಗ ದಂಪತಿಗಳು, ಅವರ 8 ತಿಂಗಳ ಮಗಳು ಮತ್ತು ಮನೆಯ ಮೊದಲ ಮಹಡಿಯಲ್ಲಿ ಹಿರಿಯ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡುಹಿಡಿದರು.ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|
6 |
+
ಮನೆಯ ನೆಲ ಅಂತಸ್ತಿನ ಕೊಠಡಿಯಲ್ಲಿ ಮಲಗಿದ್ದ ವ್ಯಕ್ತಿಯ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.ಅಕ ಬಿಸಿಯಾದ ನಂತರ ಏರ್ ಕಂಡಿಷನರ್ನಲ್ಲಿ ಸ್ಪೋಟಗೊಂಡ ಕಾರಣ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ ವಿವಿಜ್ಞಾನ ತಜ್ಞರು ಬೆಂಕಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತೊಡಗಿದ್ದಾರೆ ಎಂದು ಅವರು ಹೇಳಿದರು.
|
eesanje/url_47_134_5.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ವನ್ಯಜೀವಿ ಟ್ರೋಫಿಯನ್ನು ಅಕ್ರಮವಾಗಿ ಸಾಗಿಸಲೆತ್ನಿಸಿದ ಎನ್ಆರ್ಐ ಬಂಧನ
|
2 |
+
ನವದೆಹಲಿ,ಮಾ.3-ವನ್ಯಜೀವಿ ಟ್ರೋಫಿಯನ್ನು ದೇಶದಿಂದ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ಅನಿವಾಸಿ ಭಾರತೀಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 60 ವರ್ಷದ ಪಾಲ್ಜಿತ್ಸಿಂಗ್ ಪಾಲ್ ಲಾಲ್ವಾನಿ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
|
3 |
+
ಪಾಲ್ಜಿತ್ ಸಿಂಗ್ ಪಾಲ್ ಲಾಲ್ವಾನಿ ಬಳಿ ಇದ್ದ ಟ್ರೋಫಿಯನ್ನು ಬೇಟೆಯಾಡಿದ ಪ್ರಾಣಿಯ ತಲೆ ಅಥವಾ ಚರ್ಮದಿಂದ ತಯಾರಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಒಳಗೊಂಡಿರುವ ಹುಲ್ಲೇ ಎಂಬ ಪ್ರಾಣಿಯ ಅಂಗಗಳಿಂದ ಟ್ರೋಫಿ ತಯಾರಿಸಲಾಗಿರುವುದ ಅನುಮಾನ ವ್ಯಕ್ತವಾಗಿದೆ.
|
4 |
+
ಅರಣ್ಯ ಮತ್ತು ವನ್ಯಜೀವಿ ಇಲಾಖೆ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಮಾರ್ಚ್ 26 ರಂದು ಅಮೆರಿಕದ ನ್ಯೂಯಾರ್ಕ್ ನಿವಾಸಿ ಲಾಲ್ವಾನಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
|
5 |
+
ವಿಮಾನ ನಿಲ್ದಾಣದಲ್ಲಿ ಲಾಲ್ವಾನಿ ಅವರ ಸಾಮಾನು ಸರಂಜಾಮುಗಳನ್ನು ಸ್ಕ್ಯಾನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ ಮತ್ತು ಅವರ ಸೂಟ್ಕೇಸ್ ಒಂದರಲ್ಲಿ ಅನುಮಾನಾಸ್ಪದ ವಸ್ತುವನ್ನು ಗಮನಿಸಲಾಯಿತು ಎಂದು ಎಫ್ ಐಆರ್ನಲ್ಲಿ ತಿಳಿಸಲಾಗಿದೆ. ಲಾಲ್ವಾನಿ ಅವರನ್ನು ಆರಂಭದಲ್ಲಿ ಕಸ್ಟಮ್ಸ ಆಕ್ಟ್ 1962 ರ ಅಡಿಯಲ್ಲಿ ದಾಖಲಿಸಲಾಯಿತು, ಆದರೆ ನಂತರ ಪ್ರಕರಣವನ್ನು ವನ್ಯಜೀವಿ ಇಲಾಖೆಗೆ ವರ್ಗಾಯಿಸಲಾಗಿದೆ.
|
6 |
+
ಲಾಲ್ವಾನಿ ಅವರನ್ನು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಮ್ಸ್ ಕಾಯಿದೆಗಳ ಅಡಿಯಲ್ಲಿ ಜಾಮೀನು ನೀಡಲಾಗಿದೆ. ಈ ಕಾಯಿದೆಯು ವನ್ಯಜೀವಿ (ರಕ್ಷಣೆ) ಕಾಯಿದೆಯ ಹಲವಾರು ವಿಭಾಗಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿದುಬಂದಿದೆ.
|
eesanje/url_47_134_6.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು
|
2 |
+
ನವದೆಹಲಿ, ಮಾ 30 (ಪಿಟಿಐ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಮತ್ತು ಎರಡು ಬಾರಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾಗಿದದ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮೃತರ ಕುಟುಂಬ ವರ್ಗದವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
|
3 |
+
ಮಾಜಿ ಪ್ರಧಾನಿ ರಾವ್ ಅವರ ಪುತ್ರ ಪಿ ವಿ ಪ್ರಭಾಕರ್ ರಾವ್ ಅವರು ರಾಷ್ಟ್ರಪತಿಗಳಿಂದ ತಮ್ಮ ತಂದೆಗೆ ಪ್ರದಾನ ಮಾಡಿದ ಪ್ರಶಸ್ತಿಯನ್ನು ಸ್ವೀಕರಿಸಿದರು.ಸಿಂಗ್ ಅವರ ಮೊಮ್ಮಗ ಮತ್ತು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಅಧ್ಯಕ್ಷ ಜಯಂತ್ ಚೌಧರಿ ಅವರು ಮುರ್ಮು ಅವರಿಂದ ಗೌರವವನ್ನು ಸ್ವೀಕರಿಸಿದರು.
|
4 |
+
ಸ್ವಾಮಿನಾಥನ್ ಅವರ ಪುತ್ರಿ ನಿತ್ಯಾ ರಾವ್ ಮತ್ತು ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
|
5 |
+
ಸರ್ಕಾರವು ಈ ವರ್ಷ ಐದು ಭಾರತ ರತ್ನ ಪ್ರಶಸ್ತಿಗಳನ್ನು ಘೋಷಿಸಿದೆ, ಇದರಲ್ಲಿ ಒಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) „ೀಮಂತ ಮತ್ತು ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಯವರಿಗೆ ಸೇರಿದೆ.
|
eesanje/url_47_134_7.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಇವಿಎಂ ತಿದ್ದಲು ಲಾಕ್ಡೌನ್ ಘೋಷಣೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿ ಬಂಧನ
|
2 |
+
ತಿರುವನಂತಪುರಂ,ಮಾ.30-ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿದ್ದಲು ಮೂರು ವಾರಗಳ ಕಾಲ ದೇಶದಲ್ಲಿ ಲಾಕ್ಡೌನ್ ಘೋಷಿಸಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
|
3 |
+
ಬಂಧಿತ ವ್ಯಕ್ತಿ ಎಂವಿ ಶರಫುದ್ದೀನ್ ಎಂಬಾತನನ್ನು ಮಲಪ್ಪುರಂ ಜಿಲ್ಲೆಯವರು ಎಂದು ರಾಜ್ಯ ಪೊಲೀಸ್ ಮಾಧ್ಯಮ ಕೋಶ ಹೇಳಿಕೆಯಲ್ಲಿ ತಿಳಿಸಿದೆ. ಆ ವ್ಯಕ್ತಿ ತನ್ನ ಪ್ರಚಾರದ ಭಾಗವಾಗಿ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಪ್ರಕಟವಾದ ಸುದ್ದಿಯ ಸ್ಕ್ರೀನ್ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
|
4 |
+
ಕೇರಳ ಪೊಲೀಸ್ನ ಕೊಚ್ಚಿ ಸೈಬರ್ಡೋಮ್ ಶಾಖೆಯು ನಡೆಸಿದ ಸಾಮಾಜಿಕ ಮಾಧ್ಯಮ ಗಸ್ತು ಸಮಯದಲ್ಲಿ ಇದು ಪತ್ತೆಯಾಗಿದೆ ಎಂದು ಹೇಳಿಕೆ ತಿಳಿಸಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಪೊಸ್ಟ್ ಮಾಡುವ ಮತ್ತು ಹರಡುವವರನ್ನು ಪತ್ತೆಹಚ್ಚಲು ಸೈಬರ್ ವಿಭಾಗದ ನೇತೃತ್ವದಲ್ಲಿ ಸೈಬರ್ ಪೊಲೀಸ್ ಪ್ರಧಾನ ಕಚೇರಿ, ಎಲ್ಲಾ ಶ್ರೇಣಿಗಳು ಮತ್ತು ಎಲ್ಲಾ ಪೊಲೀಸ್ ಜಿಲ್ಲೆಗಳಲ್ಲಿ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶಗಳನ್ನು ರಚಿಸಲಾಗಿದೆ ಎಂದು ಅದು ಹೇಳಿದೆ.
|
eesanje/url_47_134_8.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ದೆಹಲಿಯ ಮತ್ತೊಬ್ಬ ಸಚಿವರಿಗೆ ಇಡಿ ನೋಟೀಸ್
|
2 |
+
ನವದೆಹಲಿ, ಮಾ.30 (ಪಿಟಿಐ) :ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಸಚಿವ ಕೈಲಾಶ್ ಗಹ್ಲೋಟ್ ಅವರನ್ನು ಇಂದು ವಿಚಾರಣೆಗೆ ಕರೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
|
3 |
+
ನಜಾಫ್ ಗಢದ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಗಹ್ಲೋಟ್ (49), ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ಸಾರಿಗೆ, ಗೃಹ ಮತ್ತು ಕಾನೂನು ಸಚಿವರಾಗಿದ್ದಾರೆ.ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಗಹ್ಲೋಟ್ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
|
4 |
+
ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ, ನಂತರ ಅದನ್ನು ರದ್ದುಗೊಳಿಸಲಾಯಿತು. ಈ ಪ್ರಕರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಈ ಹಿಂದೆಯೇ ಇಡಿ ಬಂಧಿಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
|
eesanje/url_47_134_9.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
|
2 |
+
ನವದೆಹಲಿ, ಮಾ.30 (ಪಿಟಿಐ) :ಹದಿನಾಲ್ಕು ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ಪಡೆಯುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪರಿಹಾರ ನೀಡುವ ಬದಲು ಸರಕಾರ ಜನರನ್ನು ಏಕೆ ಸಾಲದಲ್ಲಿ ಮುಳುಗಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
|
3 |
+
ಕಳೆದ ತಿಂಗಳು ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದಲ್ಲಿ ಆದಾಯ ಕೊರತೆಯನ್ನು ಪೂರೈಸಲು ದಿನಾಂಕದ ಭದ್ರತೆಗಳನ್ನು ನೀಡುವ ಮೂಲಕ 14.13 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿ ಘೋಷಿಸಿರುವುದನ್ನು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
|
4 |
+
ಎಕ್ಸ್ನಲ್ಲಿ ಹಿಂದಿಯಲ್ಲಿ ಬರೆದ ಪೊಸ್ಟ್ನಲ್ಲಿ ಗಾಂಧಿ ಅವರು, ಪ್ರಸ್ತುತ ಹಣಕಾಸು ವರ್ಷದಲ್ಲಿ ಸರ್ಕಾರವು 14 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸಾಲವನ್ನು ಪಡೆಯಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಏಕೆ?ಸ್ವಾತಂತ್ರ್ಯದ ನಂತರ 2014 ರವರೆಗಿನ 67 ವರ್ಷಗಳಲ್ಲಿ ದೇಶದ ಒಟ್ಟು ಸಾಲವು 55 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಅದನ್ನು 205 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ ಎಂದು ಅವರು ಆರೋಪಿಸಿದ್ದಾರೆ.
|
5 |
+
ಇಂದು, ದೇಶದ ಪ್ರತಿಯೊಬ್ಬ ಪ್ರಜೆಯು ಸರಾಸರಿ 1.5 ಲಕ್ಷ ರೂ. ಸಾಲವನ್ನು ಹೊಂದಿದ್ದಾನೆ. ಈ ಹಣವನ್ನು ರಾಷ್ಟ್ರ ನಿರ್ಮಾಣದ ಯಾವ ಅಂಶಕ್ಕಾಗಿ ಬಳಸಲಾಗಿದೆ? ಎಂದು ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ಗಾಂಧಿ ಪ್ರಶ್ನಿಸಿದ್ದಾರೆ.
|
6 |
+
ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿದೆಯೇ ಅಥವಾ ಉದ್ಯೋಗಗಳು ಕಣ್ಮರೆಯಾಗಿವೆಯೇ ಎಂದು ಕೇಳಿರುವ ಅವರು, ರೈತರ ಆದಾಯ ದ್ವಿಗುಣಗೊಂಡಿದೆಯೇ? ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಹೊಸ ರೂಪ ನೀಡಲಾಗಿದೆಯೇ? ಸಾರ್ವಜನಿಕ ವಲಯವನ್ನು ಬಲಪಡಿಸಲಾಗಿದೆಯೇ ಅಥವಾ ದುರ್ಬಲಗೊಳಿಸಲಾಗಿದೆಯೇ? ದೊಡ್ಡ ಕಾರ್ಖಾನೆಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆಯೇ? ಎಂದು ಕೇಳಿದ್ದಾರೆ. ಇದು ಸಂಭವಿಸದಿದ್ದರೆ, ಆರ್ಥಿಕತೆಯ ಪ್ರಮುಖ ಕ್ಷೇತ್ರಗಳು ದುರವಸ್ಥೆಯ ಸ್ಥಿತಿಯಲ್ಲಿದ್ದರೆ, ಕಾರ್ಮಿಕ ಶಕ್ತಿ ಕುಸಿದಿದ್ದರೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಾಶವಾಗಿದ್ದರೆ,? ಹಾಗಾದರೆ ಈ ಹಣ ಎಲ್ಲಿ ಹೋಯಿತು ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರು.
|
7 |
+
ಯಾರಿಗೆ ಖರ್ಚಾಗಿದೆ? ಇದರಲ್ಲಿ ಎಷ್ಟು ಹಣ ಬರೆಯಲಾಗಿದೆ? ದೊಡ್ಡ ಕೋಟ್ಯಾ„ಪತಿಗಳ ಸಾಲ ಮನ್ನಾಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ? ಈಗ ಕೇಂದ್ರವು ಸಾಲ ಮಾಡಲು ತಯಾರಿ ನಡೆಸುತ್ತಿರುವಾಗ, ಕಳೆದ 10 ವರ್ಷಗಳಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಬಿಕ್ಕಟ್ಟಿನ ಹೊರೆ ಹೆಚ್ಚುತ್ತಲೇ ಇರುವಾಗ ಬಿಜೆಪಿ ಸರ್ಕಾರ ಜನರಿಗೆ ಪರಿಹಾರ ನೀಡುವ ಬದಲು ಅವರನ್ನು ಸಾಲದ ಸುಳಿಯಲ್ಲಿ ಮುಳುಗಿಸುತ್ತಿರುವುದು ಏಕೆ ಎಂದು ಅವರು ಕೇಳಿದ್ದಾರೆ.
|
eesanje/url_47_135_1.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಕಡಲ್ಗಳ್ಳರಿಂದ 23 ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ
|
2 |
+
ನವದೆಹಲಿ,ಮಾ.30-ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ನೌಕಾಪಡೆಯು 12 ಗಂಟೆಗಳ ಕಾಲ ನಡೆದ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯಲ್ಲಿ ಇರಾನ್ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಪ್ರಜೆಗಳ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
|
3 |
+
ಮಾ. 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ಅಲ-ಕಂಬಾರ್ 786 ನಲ್ಲಿ ಸಂಭಾವ್ಯ ಕಡಲ್ಗಳ್ಳತನ ಘಟನೆಯ ಒಳಹರಿವಿನ ಆಧಾರದ ಮೇಲೆ, ಎರಡು ಭಾರತೀಯ ನೌಕಾಪಡೆಯ ಹಡಗುಗಳು ಪಾಕ್ ಪ್ರಜೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
|
4 |
+
12 ಗಂಟೆಗಳಿಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಂತರ ಹಡಗಿನಲ್ಲಿದ್ದ ಕಡಲ್ಗಳ್ಳರನ್ನು ಶರಣಾಗುವಂತೆ ಸೂಚಿಸಲಾಯಿತು. ಅವರು ಶರಣಾದ ನಂತರ 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನೌಕಾಪಡೆ ಹೇಳಿದೆ.
|
5 |
+
ನೌಕೆಯು ಹಿಂದೂ ಮಹಾಸಾಗರದ ಯೆಮೆನ್ ದ್ವೀಪವಾದ ಸೊಕೊಟ್ರಾದ ನೈಋತ್ಯಕ್ಕೆ ಸುಮಾರು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದು ಒಂಬತ್ತು ಶಾಸ್ತ್ರಸಜ್ಜಿತ ಕಡಲ್ಗಳ್ಳರು ಹಡಗನ್ನು ಲೂಟಿ ಮಾಡಲು ನಿರ್ಧರಿಸಿದ್ದರು.ಈ ತಿಂಗಳ ಆರಂಭದಲ್ಲಿ, ಭಾರತೀಯ ನೌಕಾಪಡೆಯು ಮತ್ತೊಂದು ಧೈರ್ಯಶಾಲಿ ಕಾರ್ಯಾಚರಣೆಯನ್ನು ನಡೆಸಿತ್ತು ಮತ್ತು ಕಡಲ್ಗಳ್ಳರು ದಾಳಿ ಮಾಡಿದಾಗ ಭಾರತೀಯ ಕರಾವಳಿ ತೀರದಿಂದ ಸುಮಾರು 2,600 ಕಿಮೀ ದೂರದಲ್ಲಿ ಸಾಗುತ್ತಿದ್ದ ರುಯೆನ್ ಎಂಬ ಹಡಗನ್ನು ತಡೆಹಿಡಿಯಿತು. ನೌಕಾಪಡೆಯು ಕಡಲುಗಳ್ಳರ ಹಡಗನ್ನು ಮಾಪನಾಂಕ ನಿರ್ಣಯದ ಕ್ರಮಗಳ ಮೂಲಕ ನಿಲ್ಲಿಸಲು ಒತ್ತಾಯಿಸಿತು.
|
6 |
+
40 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ, ಐಎನ್ಎಸ್ ಕೋಲ್ಕತ್ತಾ ಎಲ್ಲಾ 35 ಕಡಲ್ಗಳ್ಳರನ್ನು ಯಶಸ್ವಿಯಾಗಿ ಶರಣಾಗುವಂತೆ ಒತ್ತಾಯಿಸಿತು ಮತ್ತು ಯಾವುದೇ ಗಾಯಗಳಿಲ್ಲದೆ ಹಡಗಿನಿಂದ 17 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿತ್ತು.
|
7 |
+
ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಸಮುದ್ರಯಾನಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಅದು ಹೇಳಿದೆ.
|
eesanje/url_47_135_10.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
300 ಅಡಿ ಆಳದ ಕಮರಿಗೆ ಕಾರು ಉರುಳಿ ಬಿದ್ದು 10 ಮಂದಿ ಸಾವು
|
2 |
+
ಬನಿಹಾಲ್/ಜಮ್ಮು, ಮಾ.29-ಜಮ್ಮು-ಶ್ರೀನಗರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಕಾರೊಂದು 300 ಅಡಿ ಕಮರಿಗೆ ಬಿದ್ದು 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
|
3 |
+
ಐಷಾರಾಮಿ ಕಾರು ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿತ್ತಾಗ ಬ್ಯಾಟರಿ ಚೆಶ್ಮಾ ಪ್ರದೇಶದ ಬಳಿ ಮುಂಜಾನೆ 1.15 ರ ಸುಮಾರಿಗೆ 300 ಅಡಿ ಕಮರಿಗೆ ಬಿದ್ದಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.
|
4 |
+
ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭಾರೀ ಮಳೆಯ ಸುರಿದಿದ್ದು ಇದರ ನಡುವೆಯೇ 10 ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|
5 |
+
ಪ್ರಾಥಮಿಕ ಮಾಹಿತಿ ಪ್ರಕಾರ ಕಾರಿನ ಚಾಲಕ ಜಮ್ಮುವಿನ ಅಂಬ್ ಘೋಥಾದ ಬಲ್ವಾನ್ ಸಿಂಗ್ (47) ಮತ್ತು ಬಿಹಾರದ ಪಶ್ಚಿಮ ಚಂಪಾರಣ್ನ ವಿಪಿನ್ ಮುಖಿಯಾ ಭೈರಗಾಂಗ್ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದರು. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಮೃತರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದರು.
|
eesanje/url_47_135_11.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಜಗನ್ ಜನ್ಮ ಜಾಲಾಡಿದ ನಾಯ್ಡು
|
2 |
+
ಪಲಮನೇರು, ಮಾ 28 (ಪಿಟಿಐ) :ವೈಎಸ್ಆರ್ಸಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದ ರಾಯಲಸೀಮಾ ಪ್ರದೇಶದ ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ ಎಂದು ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
|
3 |
+
ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಎಕರೆಗೂ ನೀರು ಸರಬರಾಜು ಮಾಡಿಲ್ಲ ಎಂದು ಆರೋಪಿಸಿದ ನಾಯ್ಡು, ರೆಡ್ಡಿ ಅವರು ಪ್ರತಿ ಹಳ್ಳಿಯಲ್ಲಿ ನಕಲಿ ಮದ್ಯ, ಗಾಂಜಾ (ಗಾಂಜಾ) ಮತ್ತು ಇತರ ಮಾದಕ ದ್ರವ್ಯಗಳನ್ನು ಮುಕ್ತವಾಗಿ ಹರಿಯುವಂತೆ ಪೊ್ರೀತ್ಸಾಹಿಸಿದರು ಎಂದು ಆರೋಪಿಸಿದರು.
|
4 |
+
ಪಲಮನೇರುವಿನಲ್ಲಿ ನಡೆದ ಪ್ರಜಾಗಳಂ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬರ ಆಸ್ತಿಯನ್ನು ಸೃಷ್ಟಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು ನನ್ನ ದೃಷ್ಟಿಯಾಗಿದೆ, ಆದರೆ ಜಗನ್ ಯಾವಾಗಲೂ ತನ್ನ ಜೇಬು ತುಂಬಲು ಜನರನ್ನು ಲೂಟಿ ಮಾಡುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.
|
5 |
+
ಇದಲ್ಲದೆ, ವೈಎಸ್ಆರ್ಸಿಪಿಯ ಆಪಾದಿತ ದುಷ್ಟ ಮತ್ತು ಕ್ರೂರ ಶಕ್ತಿಗೆ ಅಂತ್ಯ ಹಾಡುವ ಸಮಯ ಬಂದಿದೆ ಎಂದು ನಾಯ್ಡು ಹೇಳಿದರು. ಆಡಳಿತ ಪಕ್ಷವನ್ನು ಸೋಲಿಸಲು ಯಾವುದೇ ಕೃಷಿ ಉತ್ಪನ್ನಕ್ಕೆ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಸಹ ಪಡೆಯದ ರೈತರು ಸೇರಿದಂತೆ ಎಲ್ಲರೂ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
|
6 |
+
ಸಮಾಜದ ವಿವಿಧ ವರ್ಗಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ ನಾಯ್ಡು, ರಾಜ್ಯದಲ್ಲಿ ಎನ್ಡಿಎ ಸರ್ಕಾರ ರಚಿಸುವ ಇತರ ಭರವಸೆಗಳಲ್ಲಿ ತಕ್ಷಣವೇ ವಿದ್ಯುತ್ ಶುಲ್ಕವನ್ನು ಕ್ರಮಬದ್ಧಗೊಳಿಸಲಾಗುವುದು ಎಂದು ಭರವಸೆ ನೀಡಿದರು.
|
7 |
+
ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ದಕ್ಷಿಣ ರಾಜ್ಯದಲ್ಲಿ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಪಾಲುದಾರರಾಗಿದ್ದಾರೆ.
|
eesanje/url_47_135_12.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಮತ್ತೆ ಕೇಜ್ರಿವಾಲ್ ವಿಚಾರ ಕೆದಕಿದ ಅಮೆರಿಕ
|
2 |
+
ನವದೆಹಲಿ,ಮಾ.28-ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಕುರಿತು ಅಮೆರಿಕ ಮತ್ತೆ ಮಾತನಾಡಿದೆ. ಕೇಜ್ರಿವಾಲ್ ಬಂಧನ ಕುರಿತಂತೆ ಅಮೆರಿಕ ಮಾತನಾಡಿದ್ದನ್ನು ಪ್ರಶ್ನಿಸಿ ಭಾರತವು ಅಮೆರಿಕದ ರಾಜತಾಂತ್ರಿಕರನ್ನು ಕರೆಸಿ ಎಚ್ಚರಿಕೆ ನೀಡಿದ ನಂತರವೂ ಅಮೆರಿಕ ಮತ್ತೆ ಕೇಜ್ರಿವಾಲ್ ಬಂಧನದಲ್ಲಿ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ನಡೆಸುವಂತೆ ಪುನರುಚ್ಚರಿಸಿದೆ.
|
3 |
+
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಸೇರಿದಂತೆ ಈ ಕ್ರಮಗಳನ್ನು ನಾವು ನಿಕಟವಾಗಿ ಅನುಸರಿಸುತ್ತಿದ್ದೇವೆ ಎಂದು ಯುಎಸ್ ಸ್ಟೇಟ್ ಡಿಪಾಟ್ರ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ. ಭಾರತವು ನವದೆಹಲಿಯಲ್ಲಿನ ಯುಎಸ್ ಆಕ್ಟಿಂಗ್ ಡೆಪ್ಯುಟಿ ಚೀಫ್ ಆಫ್ ಮಿಷನ್ ಗ್ಲೋರಿಯಾ ಬರ್ಬೆನಾ ಅವರನ್ನು ಭಾರತಕ್ಕೆ ಸಮನ್ಸ್ ಮಾಡಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
|
4 |
+
ವಿದೇಶಾಂಗ ಸಚಿವಾಲಯದ ಸೌತ್ ಬ್ಲಾಕ್ ಕಛೇರಿಯಲ್ಲಿ ನಿನ್ನೆ ನಡೆದ ಸಭೆಯು ಸುಮಾರು 40 ನಿಮಿಷಗಳ ಕಾಲ ನಡೆದಿದ್ದು, ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕದ ಹೇಳಿಕೆಗಳಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
|
5 |
+
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಿಲ್ಲರ್, ಮುಂಬರುವ ದಿನಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸವಾಲಾಗುವ ರೀತಿಯಲ್ಲಿ ತೆರಿಗೆ ಅಧಿಕಾರಿಗಳು ತಮ್ಮ ಕೆಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳ ಬಗ್ಗೆಯೂ ನಮಗೆ ತಿಳಿದಿದೆ ಎಂದಿದ್ದಾರೆ.
|
6 |
+
ಈ ಪ್ರತಿಯೊಂದು ಸಮಸ್ಯೆಗಳಿಗೆ ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಅಮೆರಿಕ ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದರು. ನಿಮ್ಮ ಮೊದಲ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಯಾವುದೇ ಖಾಸಗಿ ರಾಜತಾಂತ್ರಿಕ ಸಂಭಾಷಣೆಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಆದರೆ ನಾವು ಸಾರ್ವಜನಿಕವಾಗಿ ಹೇಳಿರುವುದು ನಾನು ಇಲ್ಲಿಂದ ಹೇಳಿದ್ದೇನೆ, ನಾವು ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ. ಮನೀಷ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ನಂತರ ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಂತರ ಕೇಜ್ರಿವಾಲ್ ಅವರನ್ನು ಇಡಿ ಕಳೆದ ವಾರ ಬಂಧಿಸಿತ್ತು.
|
eesanje/url_47_135_2.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಕಾಂಗ್ರೆಸ್ಗೆ 1700 ಕೋಟಿ ರೂ.ಗಳ ಐಟಿ ನೋಟೀಸ್
|
2 |
+
ನವದೆಹಲಿ,ಮಾ.29-ತೆರಿಗೆ ನೋಟಿಸ್ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಕಾಂಗ್ರೆಸ್ ಪಕ್ಷ ಆದಾಯ ತೆರಿಗೆ ಇಲಾಖೆಯಿಂದ 1,700 ಕೋಟಿ ರೂ.ಗಳ ನೋಟಿಸ್ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
|
3 |
+
ಹೊಸ ಸೂಚನೆಯು 2017-18 ರಿಂದ 2020-21 ರ ಮೌಲ್ಯಮಾಪನ ವರ್ಷಗಳಿಗೆ ಮತ್ತು ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.ಕಳೆದ ಫೆಬ್ರವರಿಯಲ್ಲಿ ಐಟಿ ಇಲಾಖೆಯು ಪಕ್ಷದ ತೆರಿಗೆ ರಿಟನ್ರ್ಸ್ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ 200 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿತ್ತು. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಪಕ್ಷಕ್ಕೆ ಬಾಕಿ ಪಾವತಿಸಲು ಮತ್ತು ಅವರ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೇಳಿತ್ತು.
|
4 |
+
ಲೋಕಸಭೆ ಚುನಾವಣೆಗೆ ಮುನ್ನ ಈ ಆದೇಶ ಬಂದಿರುವುದರಿಂದ ತೆರಿಗೆ ನ್ಯಾಯಮಂಡಳಿ ತನ್ನ ಹಣವನ್ನು ಸ್ಥಗಿತಗೊಳಿಸಿದ ಆದೇಶವು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ದೆಹಲಿ ಹೈಕೋರ್ಟ್ ನಾಲ್ಕು ವರ್ಷಗಳ ಅವಧಿಗೆ ತನ್ನ ವಿರುದ್ಧ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿತ್ತು.
|
5 |
+
ರಾಜಕೀಯ ಪಕ್ಷಗಳಿಗೆ ಧನಸಹಾಯವು ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ, ವಿಶೇಷವಾಗಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಗಳನ್ನು ರದ್ದುಗೊಳಿಸಿದ ನಂತರ ಇದು ವ್ಯಕ್ತಿಗಳು ಅಥವಾ ವ್ಯವಹಾರಗಳಿಗೆ ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳನ್ನು ನೀಡಲು ಅವಕಾಶ ನೀಡುತ್ತದೆ ಇದು ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಸಿದಂತೆ ಎಂದು ಅಭಿಪ್ರಾಯಪಟ್ಟಿತ್ತು.
|
eesanje/url_47_135_3.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಚುನಾವಣಾ ಕಾರ್ಯತಂತ್ರದ ಮಾಹಿತಿಗಾಗಿ ಕೇಜ್ರಿ ಫೋನ್ ಹಿಂದೆ ಬಿದ್ದಿದೆಯಂತೆ ಇಡಿ
|
2 |
+
ನವದೆಹಲಿ, ಮಾ 29 (ಪಿಟಿಐ): ಜಾರಿ ನಿರ್ದೇಶನಾಲಯವು ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ -ಫೋನ್ ಅನ್ನು ಪ್ರವೇಶಿಸುವ ಮೂಲಕ ಎಎಪಿಯ ಲೋಕಸಭಾ ಚುನಾವಣಾ ಕಾರ್ಯತಂತ್ರದ ವಿವರಗಳನ್ನು ಪಡೆಯಲು ಅದು ಬಯಸಿದೆ ಎಂದು ಎಎಪಿ ಸಚಿವೆ ಅತಿಶಿ ಆರೋಪಿಸಿದ್ದಾರೆ.
|
3 |
+
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಾರ್ಚ್ 21 ರಂದು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿತ್ತು.ಜಾರಿ ನಿರ್ದೇಶನಾಲಯ (ಇಡಿ) ಕೇಜ್ರಿವಾಲ್ ಅವರ ಮೊಬೈಲ್ -ಫೋನ್ ಅನ್ನು ಪರಿಶೀಲಿಸಲು ಒತ್ತಾಯಿಸುತ್ತದೆ, ಅದು ಕೆಲವು ತಿಂಗಳ ಹಳೆಯದು ಮತ್ತು ನೀತಿಯನ್ನು ರೂಪಿಸಿ ಜಾರಿಗೆ ತಂದಾಗ ಅಸ್ತಿತ್ವದಲ್ಲಿಲ್ಲ, ಈ ಸಂಸ್ಥೆ ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
|
4 |
+
ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿರುವ ಅತಿಶಿ ವಾಸ್ತವವಾಗಿ ಇದು ಬಿಜೆಪಿಯೇ ಹೊರತು ಕೇಜ್ರಿವಾಲ್ ಅವರ -ಫೋನ್ನಲ್ಲಿ ಏನಿದೆ ಎಂದು ತಿಳಿಯಲು ಇಡಿ ಬಯಸುವುದಿಲ್ಲ ಎಂದು ಹೇಳಿದರು.ಅಬಕಾರಿ ನೀತಿಯನ್ನು 2021-22ರಲ್ಲಿ ಜಾರಿಗೆ ತರಲಾಗಿದ್ದು, ಮುಖ್ಯಮಂತ್ರಿಯವರ ಪ್ರಸ್ತುತ -ಫೋನ್ ಕೆಲವೇ ತಿಂಗಳು ಹಳೆಯದು ಎಂದು ಅವರು ಹೇಳಿದ್ದಾರೆ. ಆ ಅವಧಿಯ ಕೇಜ್ರಿವಾಲ್ ಅವರ -ಫೋನ್ ಲಭ್ಯವಿಲ್ಲ ಎಂದು ಇಡಿ ಹೇಳಿದೆ ಮತ್ತು ಈಗ ಅವರ ಹೊಸ -ಫೋನ್ನ ಪಾಸ್ವರ್ಡ್ ಬೇಕು ಎಂದು ಅತಿಶಿ ಹೇಳಿದರು.
|
5 |
+
ಅವರು ಅದನ್ನು ಬಯಸುತ್ತಾರೆ ಏಕೆಂದರೆ ಅವರು ಅದರಲ್ಲಿ ಎಎಪಿಯ ಲೋಕಸಭಾ ಚುನಾವಣಾ ಕಾರ್ಯತಂತ್ರ, ಪ್ರಚಾರ ಯೋಜನೆಗಳು, ಇಂಡಿಯಾ ಬ್ಲಾಕ್ ನಾಯಕರೊಂದಿಗಿನ ಮಾತುಕತೆಗಳು ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಕಾಣಬಹುದು ಎಂದು ಅವರು ಹೇಳಿದರು.
|
eesanje/url_47_135_4.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಯುಪಿಯಲ್ಲಿ ಮತ್ತೊಂದು ಅತ್ಯಾಚಾರ
|
2 |
+
ಶಹಜಹಾನ್ಪುರ, ಮಾ 29 (ಪಿಟಿಐ) :ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಆಕೆಯ ಗ್ರಾಮದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
|
3 |
+
ಮೀರನ್ಪುರ ಕತ್ರಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಮನೋಜ್ ಅವಸ್ತಿ ತಿಳಿಸಿದ್ದಾರೆ.
|
4 |
+
ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಆಕೆಯನ್ನು ಜಮೀನಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ.
|
5 |
+
ಆಕೆ ವಿರೋಧಿಸಿದಾಗ ಆರೋಪಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ ಎಂದು ಅವಸ್ತಿ ಹೇಳಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ
|
eesanje/url_47_135_5.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಪನ್ನುನ್ ವಿಚಾರದಲ್ಲಿ ಚೀನಾ ಮೂಗು ತೂರಿಸುವುದು ಬೇಡ : ಭಾರತ
|
2 |
+
ನವದೆಹಲಿ,ಮಾ.29-ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚು ವಿಫಲವಾದ ಪ್ರಕರಣದ ತನಿಖೆಯ ಕುರಿತು ಚೀನಾ ಹೇಳಿಕೆಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವಾಲಯ ಭಾರತ ಮತ್ತು ಅಮೆರಿಕ ಉಭಯ ದೇಶಗಳ ನಡುವಿನ ಯಾವುದೇ ಸಮಸ್ಯೆಗಳನ್ನು ನಿಭಾಯಿಸಲು ಸಮರ್ಥವಾಗಿವೆ ಎಂದು ಹೇಳಿಕೊಂಡಿದೆ.
|
3 |
+
ಎಂಇಎ ವಕ್ತಾರ ರಣಭೀರ್ ಜೈಸ್ವಾಲ್ ಅವರು, ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳ ಯಾವುದೇ ಊಹಾತ್ಮಕ ಕಾಮೆಂಟ್ಗಳು ಮತ್ತು ಅನಪೇಕ್ಷಿತ ಸಲಹೆಗಳಿಗೆ ಯಾವುದೇ ಮಹತ್ವವಿಲ್ಲ ಎನ್ನುವ ಮೂಲಕ ಚೀನಾಗೆ ತಿರುಗೇಟು ನೀಡಿದ್ದಾರೆ.
|
4 |
+
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಪತ್ರಿಕಾಗೋಷ್ಠಿಯಲ್ಲಿ, ಸಂಬಂಧಿತ ದೇಶಗಳು ಅಂತರರಾಷ್ಟ್ರೀಯ ಕಾನೂನು ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ನಿಯಂತ್ರಿಸುವ ಮೂಲ ಮಾನದಂಡಗಳನ್ನು ಗಮನಿಸಬೇಕು ಎಂದು ಹೇಳಿದ ನಂತರ ಭಾರತದ ಈ ಹೇಳಿಕೆ ಹೊರಬಿದ್ದಿದೆ.
|
5 |
+
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರರು, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ , ಕಾನೂನು ನಿಯಮಕ್ಕೆ ಬದ್ಧವಾಗಿರುವ ಎರಡು ದೇಶಗಳು, ನಮ್ಮ ನಡುವೆ ಇರುವ ಯಾವುದೇ ಸಮಸ್ಯೆಗಳನ್ನು ಎದುರಿಸಲು ಸಮರ್ಥವಾಗಿವೆ. ಯಾವುದೇ ಊಹಾಪೊಹದ ಪಾತ್ರವಿಲ್ಲ. ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳಿಂದ ಕಾಮೆಂಟ್ಗಳು ಮತ್ತು ಅನಪೇಕ್ಷಿತ ಸಲಹೆ ಬೇಕಿಲ್ಲ ಎಂದಿದ್ದಾರೆ.
|
6 |
+
ಪನ್ನುನ್ ಭಾರತದಿಂದ ಗೊತ್ತುಪಡಿಸಿದ ಭಯೋತ್ಪಾದಕರಾಗಿದ್ದು, ಅವರು ಅಮೇರಿಕನ್ ಮತ್ತು ಕೆನಡಾದ ಪೌರತ್ವವನ್ನು ಹೊಂದಿದ್ದಾರೆ. ಯುಎಸ್ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯ ಪ್ರಕಾರ, ಪ್ರಸ್ತುತ ಬಂಧನದಲ್ಲಿರುವ ಭಾರತೀಯ ನಿಖಿಲ್ ಗುಪ್ತಾ ಎಂಬಾತನ ಮೇಲೆ ಪನ್ನುನ್ ಹತ್ಯೆಯ ಆರೋಪ ಹೊರಿಸಲಾಗಿದೆ.
|
7 |
+
ಸಲ್ಲಿಸಿದ ದೋಷಾರೋಪಣೆಯಲ್ಲಿ ಗುರುತಿಸಲ್ಪಡದ ಭಾರತೀಯ ಸರ್ಕಾರಿ ಉದ್ಯೋಗಿಯೊಬ್ಬರು, ಪನ್ನುನ್ ಹತ್ಯೆಯನ್ನು ನಡೆಸಲು ಹಿಟ್ಮ್ಯಾನ್ ಅನ್ನು ನೇಮಿಸಿಕೊಳ್ಳಲು ಭಾರತೀಯ ಪ್ರಜೆಯನ್ನು ನೇಮಿಸಿಕೊಂಡಿದ್ದಾರೆ ಎಂದು ಯುಎಸ್ ನ್ಯಾಯಾಂಗ ಇಲಾಖೆ ಹೇಳಿಕೊಂಡಿದೆ, ಇದನ್ನು ಯುಎಸ್ ಅಧಿಕಾರಿಗಳು ನಿರಾಕರಿಸಿದ್ದರು.
|
eesanje/url_47_135_6.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಬಿಲ್ ಗೇಟ್ಸ್-ಮೋದಿ ಭೇಟಿ, ಸ್ವಾರಸ್ಯಕರ ಮಾತುಕತೆ
|
2 |
+
ನವದೆಹಲಿ,ಮಾ.29-ಇತ್ತಿಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ತಮ್ಮ ಭಾಷಣಗಳನ್ನು ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನ ಸಹಾಯ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
|
3 |
+
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ಮಾತನಾಡಿದ ಪ್ರಧಾನಿ, ಇಂದಿನ ಜಗತ್ತಿನಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತದೆ. ಎಐ ಬಹಳ ಮುಖ್ಯ, ಕೆಲವೊಮ್ಮೆ, ನಾನು ತಮಾಷೆಯಾಗಿ ಹೇಳುತ್ತೇನೆ, ನಮ್ಮ ದೇಶದಲ್ಲಿ ನಾವು ನಮ್ಮ ತಾಯಿಯನ್ನು ಆಯಿ ಎಂದು ಕರೆಯುತ್ತೇವೆ. ಈಗ ನಾನು ಹೇಳುತ್ತೇನೆ ಅದರ ಜೊತೆಗೆ ಈಗಿನ ಮಕ್ಕಳು ಎಐ ಎಂದು ಕರೆಯುತ್ತಾರೆ ಎಂದಿದ್ದಾರೆ.
|
4 |
+
ಅವರು ತಮ್ಮ ನಮೋ ಅಪ್ಲಿಕೇಶನ್ ಮೂಲಕ ಸೆಲ್ಫಿ ತೆಗೆದುಕೊಳ್ಳಲು ಬಿಲ್ ಗೇಟ್ಸ್ಗೆ ಕೇಳಿದರು ಮತ್ತು ನಂತರ ಅದನ್ನು ಮುಖ ಗುರುತಿಸುವ ತಂತ್ರಜ್ಞಾನದ ಮೂಲಕ ಹೇಗೆ ಕಂಡುಹಿಡಿಯಬಹುದು ಎಂಬುದನ್ನು ತೋರಿಸಿದರು. ವಿವಿಧ ಎಐ ಪರಿಕರಗಳ ಮೂಲಕ ಉತ್ಪತ್ತಿಯಾಗುವ ಡೀಪ್ ಫೇಕ್ ವಿಷಯವನ್ನು ಸಹ ಪ್ರಧಾನಿ ಸೂಚಿಸಿದರು ಮತ್ತು ತಂತ್ರಜ್ಞಾನದ ದುರುಪಯೋಗವನ್ನು ನಿಭಾಯಿಸಲು ಕ್ರಮಗಳಿಗೆ ಕರೆ ನೀಡಿದರು.
|
5 |
+
ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ, ಯಾರಾದರೂ ಡೀಪ್ ಫೇಕ್ ಅನ್ನು ಬಳಸಬಹುದು. ಡೀಪ್ ಫೇಕ್ ವಿಷಯವು ಎಐನಿಂದ ರಚಿತವಾಗಿದೆ ಎಂದು ಒಪ್ಪಿಕೊಳ್ಳುವುದು ನಿರ್ಣಾಯಕವಾಗಿದೆ. ನಾವು ಕೆಲವು ಮಾಡಬೇಕಾದ ಮತ್ತು ಮಾಡಬಾರದ ಕೆಲಸದ ಬಗ್ಗೆ ಯೋಚಿಸಬೇಕಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ ಎಐ ಬಗ್ಗೆ ಜನರನ್ನು ತಪ್ಪುದಾರಿಗೆಳೆಯಬಾರದು ಎಂದು ಅವರು ಕೇಳಿಕೊಂಡರು.
|
6 |
+
ನಾವು ಎಐ ಅನ್ನು ಮಾಂತ್ರಿಕ ಸಾಧನವಾಗಿ ಬಳಸಿದರೆ, ಅದು ಬಹುಶಃ ಘೋರ ಅನ್ಯಾಯಕ್ಕೆ ಕಾರಣವಾಗಬಹುದು. ಸೋಮಾರಿತನದಿಂದ ಎಐ ಅನ್ನು ಅವಲಂಬಿಸಿದ್ದರೆ ಅದು ತಪ್ಪು ದಾರಿ ಎಂದು ಪ್ರಧಾನಿ ಸೇರಿಸಿದರು.ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ನನಗೆ ನಂಬಿಕೆಯಿದೆ, ಅದು ಎಲ್ಲರಿಗೂ ಸಮಾನ ಅವಕಾಶವನ್ನು ನೀಡುತ್ತದೆ ಮತ್ತು ಅವರು ತಂತ್ರಜ್ಞಾನವನ್ನು ಹಳ್ಳಿಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
|
7 |
+
ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ನಾನು ಕೇಳಿದಾಗ, ನನ್ನ ದೇಶದಲ್ಲಿ ಅಂತಹದ್ದನ್ನು ನಾನು ಅನುಮತಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಸ್ವತಃ ಪ್ರಮುಖ ಅವಶ್ಯಕತೆಯಾಗಿದೆ ಎಂದು ಅವರು ಹೇಳಿದರು.ಭಾರತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮಹಿಳೆಯರು ಹೆಚ್ಚು ಮುಕ್ತರಾಗಿದ್ದಾರೆ ಎಂದು ಅವರು ಹೇಳಿದರು.
|
8 |
+
ನಾನು ನಮೋ ಡ್ರೋನ್ ದೀದಿ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ಇದು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ, ನಾನು ಅವರೊಂದಿಗೆ ಸಂವಹನ ನಡೆಸುತ್ತೇನೆ, ಅವರು ಸಂತೋಷಪಡುತ್ತಾರೆ, ಅವರು ಬೈಸಿಕಲ್ ಓಡಿಸಲು ತಿಳಿದಿರಲಿಲ್ಲ ಆದರೆ ಅವರು ಈಗ ಪೈಲಟ್ ಆಗಿದ್ದಾರೆ ಮತ್ತು ಡ್ರೋನ್ಗಳನ್ನು ಹಾರಿಸಬಹುದು ಎಂದು ಅವರು ಹೇಳುತ್ತಾರೆ. ಮನಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದರು
|
eesanje/url_47_135_7.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಭರದಿಂದ ಸಾಗುತ್ತಿದೆ ಬುಲೆಟ್ ರೈಲು ಯೋಜನೆ, ವಿಡಿಯೋಗಳನ್ನು ಹಂಚಿಕೊಂಡ ರೈಲ್ವೆ ಸಚಿವ
|
2 |
+
ನವದೆಹಲಿ,ಮಾ.29-ದೇಶದ ಪ್ರಪ್ರಥಮ ಬುಲೆಟ್ ರೈಲು ಯೋಜನೆಯ ಕೆಲವು ವಿಡಿಯೋಗಳನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಮುಂಬೈ ಮತ್ತು ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಭಾರತದ ಮೊದಲ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ನ ವೀಡಿಯೊವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
|
3 |
+
320 ಕಿಮೀ ವೇಗದ ತಡೆಗೋಡೆ ಹೊಂದಿರುವ ಬುಲೆಟ್ ರೈಲಿಗೆ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಸಚಿವರು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, 295.5 ಕಿಮೀ ಪಿಯರ್ಗಳು ಮತ್ತು 153 ಕಿಮೀ ವಯಡಕ್ಟ್ಗಳು ಈಗಾಗಲೇ ಪೂರ್ಣಗೊಂಡಿವೆ.
|
4 |
+
’ #!✅320 ✅153 ✅295.5 3.0pic../YV6vP4tbXS
|
5 |
+
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅದೇ ವೀಡಿಯೊವನ್ನು ಪೊಸ್ಟ್ ಮಾಡಿದ್ದಾರೆ ಮತ್ತು ಬುಲೆಟ್ ಟ್ರೈನ್ಗಾಗಿ ಭಾರತ್ನ ಮೊದಲ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ 320 ಕಿಮೀ ವೇಗದ ಮಿತಿ, 153 ಕಿಮೀ ವಯಡಕ್ಟ್ ಪೂರ್ಣಗೊಂಡಿದೆ, 295.5 ಕಿಮೀ ಪಿಯರ್ ಕೆಲಸ ಪೂರ್ಣಗೊಂಡಿದೆ. ಇದರ ಜೊತೆಗೆ ಮೋದಿ 3.0 ರಲ್ಲಿ ಮತ್ತಷ್ಟು ಯೋಜನೆಗಳು ಬರಲಿವೆ ಎಂದು ಬರೆದುಕೊಂಡಿದ್ದಾರೆ.
|
6 |
+
ನಿಲುಭಾರವಿಲ್ಲದ ಟ್ರ್ಯಾಕ್ ಅಥವಾ ಸ್ಲ್ಯಾಬ್ ಟ್ರ್ಯಾಕ್ ಕೆಲವು ದೇಶಗಳಲ್ಲಿ ಹೆಚ್ಚಿನ ವೇಗದ ಮಾರ್ಗಗಳಿಗಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಗಮನಾರ್ಹವಾಗಿ, ಇದು ಮೊದಲ ಬಾರಿಗೆ, ಭಾರತದಲ್ಲಿ ಜೆ-ಸ್ಲ್ಯಾಬ್ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ. ನವೀನ ಟ್ರ್ಯಾಕ್ ವ್ಯವಸ್ಥೆಯು ಪೂರ್ವ-ಕಾಸ್ಟ್ಟ್ರ್ಯಾಕ್ ಸ್ಲ್ಯಾಬ್ಗಳನ್ನು ನಿಖರವಾಗಿ ಜೋಡಿಸುವ ಸಾಧನಗಳು ಮತ್ತು ಹಳಿಗಳನ್ನು ಹೊಂದಿದೆ.
|
7 |
+
ಬುಲೆಟ್ ಟ್ರೈನ್ ಯೋಜನೆಯನ್ನು ಸಮಗ್ರ ಆರ್ಥಿಕತೆಯ ದೃಷ್ಟಿಕೋನದಿಂದ ನೋಡಬೇಕು. ಭಾರತೀಯ ರೈಲ್ವೆ ಮಾಡುತ್ತಿರುವ ಮೊದಲ ಕಾರಿಡಾರ್ನಲ್ಲಿ ಮುಂಬೈ, ಥಾಣೆ, ವಾಪಿ, ಬರೋಡಾ, ಸೂರತ್ , ಆನಂದ್ ಮತ್ತು ಅಹಮದಾಬಾದ್ – ಈ ಎಲ್ಲಾ ಆರ್ಥಿಕತೆಗಳು ಒಂದೇ ಆರ್ಥಿಕತೆಯಾಗುತ್ತವೆ. ನೀವು ಸೂರತ್ನಲ್ಲಿ ಉಪಹಾರ ಸೇವಿಸಬಹುದು, ಹೋಗಿ ಮುಂಬೈನಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ ಮತ್ತು ರಾತ್ರಿಯಲ್ಲಿ ನಿಮ್ಮ ಕುಟುಂಬದೊಂದಿಗೆ ಹಿಂತಿರುಗಬಹುದಾಗಿದೆ ಎಂದಿದ್ದಾರೆ.
|
8 |
+
ಅಂದಾಜು ರೂ. 1.08 ಲಕ್ಷ ಕೋಟಿ ವೆಚ್ಚವಾಗಿದ್ದು, ಇದರಲ್ಲಿ ರೂ. 10,000 ಕೋಟಿ ನೀಡಲು ಕೇಂದ್ರ ಬದ್ಧವಾಗಿದ್ದರೆ, ಗುಜರಾತ್ ಮತ್ತು ಮಹಾರಾಷ್ಟ್ರ ತಲಾ ರೂ. 5,000 ಕೋಟಿ ನೀಡಲಿವೆ. ಉಳಿದ ಹಣವನ್ನು ಜಪಾನ್ನಿಂದ ಶೇ.0.1 ಬಡ್ಡಿ ದರದಲ್ಲಿ ಸಾಲ ಮಾಡಲಾಗಿದೆ.
|
eesanje/url_47_135_8.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಗ್ಯಾಂಗಸ್ಟರ್ ಅನ್ಸಾರಿ ಸಾವನ್ನಪಿದ ಬೆನ್ನಲ್ಲೇ, ಉತ್ತಪ್ರದೇಶದಲ್ಲಿ ಹೈ ಅಲರ್ಟ್
|
2 |
+
ಲಖ್ನೋ,ಮಾ.29-ರಾಜಕಾರಣಿಯಾಗಿ ಪರಿವರ್ತತರಾಗಿದ್ದ ಗ್ಯಾಂಗಸ್ಟರ್ ಮುಖ್ತರ್ ಅನ್ಸಾರಿ ಬಂಡಾದ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದ ಒಂದು ದಿನದ ಬಳಿಕ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಕಟ್ಟೆಚ್ಚರದಲ್ಲಿರಸಲಾಗಿದೆ.
|
3 |
+
ರಾಜ್ಯಾದ್ಯಂತ ಸೆಷನ್ 144 ಅಡಿ ನಿಷೇಧಾಜ್ಞೆ ವಿಧಿಸಲಾಗಿದ್ದು, ಬಂಡಾ, ಮಾಉ, ಫಾಜಿಪುರ್ ಮತ್ತು ವಾರಾಣಾಸಿಯಲ್ಲಿ ಸ್ಥಳೀಯ ಪೊಲೀಸರೊಂದಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ಕುಮಾರ್ ತಿಳಿಸಿದರು.
|
4 |
+
ಫಾಜಿಪುರದ ಅನ್ಸಾರಿ ಅವರ ಮನೆಯ ಮುಂದೆ ಜನರು ಗುಂಪುಗೂಡಲಾರಂಭಿಸಿದ್ದರು ಮತ್ತು ಮನೆಯ ಸುತ್ತ ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬಂಡಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಲಿದೆ ಮತ್ತು ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಪೊಲೀಸ್ ಕೇಂದ್ರಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
|
5 |
+
63 ವರ್ಷ ವಯಸ್ಸಿನ ಅನ್ಸಾರಿಯವರನ್ನು ಜಿಲ್ಲಾ ಕಾರಾಗೃಹದಿಂದ ಬಂಡಾದಲ್ಲಿನ ರಾಣಿ ದುರ್ಗಾವ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಗುರುವಾರ ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆತರಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ನಿಧನರಾದರು ಎಂದು ಕಾಲೇಜು ಪ್ರಾಂಶುಪಾಲ ಸುನೀಲ್ ಕೌಶಲ್ ಹೇಳಿದರು.
|
6 |
+
ಪುತ್ರ ಉಮರ್ ಅನ್ಸಾರಿ ಸೇರಿದಂತೆ ಅನ್ಸಾರಿ ಕುಟುಂಬದ ಸದಸ್ಯರು ಇಂದು ಮುಂಜಾನೆ ಆಸ್ಪತ್ರೆಗೆ ತಲುಪಿದರು. ಜೈಲಿನಲ್ಲಿ ಅನ್ಸಾರಿಗೆ ನಿಧಾನ ವಿಷಪ್ರಾಶನ ಮಾಡಲಾಗಿದೆ ಎಂದು ಉಮರ್ ಅನ್ಸಾರಿ ಆರೋಪಿಸಿದ್ದಾರೆ. ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.
|
eesanje/url_47_135_9.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಯಾರಾಗ್ತಾರೆ ಕಾಂಗ್ರೆಸ್ ಅಭ್ಯರ್ಥಿ..?
|
2 |
+
ನವದೆಹಲಿ,ಮಾ.29-ಉತ್ತರಪ್ರದೇಶದಲ್ಲಿ ಸ್ಪರ್ಧಿಸಲಿರುವ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಬಾಕಿ ಉಳಿದಿರುವ ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಕ್ಕೆ ಏಪ್ರಿಲ್ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಮೂಲಗಳು ಹೇಳಿವೆ. ಐದನೇ ಹಂತದ ಮತದಾನದಲ್ಲಿ ಬರುವ ಈ ಕ್ಷೇತ್ರಗಳಿಗೆ ಏಪ್ರಿಲ್ 26ರಿಂದ ಚುನಾವಣಾ ಅಧಿಸೂಚನೆ ಜಾರಿಗೆ ಬರಲಿದೆ. ಈ ಹಿನ್ನಲೆ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
|
3 |
+
ಮೂಲಗಳ ಪ್ರಕಾರ ರಾಯ್ ಬರೇಲಿ ಮತ್ತು ಅಮೇಥಿ ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ಯಾವುದೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗಿಲ್ಲ. ಉತ್ತರಪ್ರದೇಶದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವಾಗ ಐದನೇ ಹಂತದ ಮತದಾನದ ಕಾರಣ ರಾಯ್ಬರೇಲಿ ಮತ್ತು ಅಮೇಥಿಯ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
|
4 |
+
ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ರಾಯ್ಬರೇಲಿಯಲ್ಲಿ ಗಾಂಧಿ ಕುಟುಂಬದ ಸದಸ್ಯರೊಬ್ಬರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಮೂಲಗಳ ಪ್ರಕಾರ ಈ ಎರಡು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸಲು ಗಾಂಧಿ ಕುಟುಂಬದಿಂದ ಯಾರೂ ಮುಂದೆ ಬಂದಿಲ್ಲ. ಆದರೆ ರಾಯ್ ಬರೇಲಿ ಕ್ಷೇತ್ರದಲ್ಲಿ ಮೂರು ಬಾರಿ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ವೈಯಕ್ತಿಕವಾಗಿ ದೂರವಾಣಿ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ಗಾಂಧಿ ಕುಟುಂಬಕ್ಕೆ ಈ ಸ್ಥಾನ ಎಷ್ಟು ಪ್ರಬಲವಾಗಿದೆ ಎಂಬುದನ್ನು ಸಮೀಕ್ಷೆಯಲ್ಲೂ ಪರಿಶೀಲಿಸಿದೆ.
|
5 |
+
ರಾಯ್ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿಂದೆಂದೂ ಇಷ್ಟೊಂದು ವಿಳಂಬ ಆಗಿರಲಿಲ್ಲ. ಈ ಬಾರಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಪತ್ರ ಬರೆದ ಕೂಡಲೇ ಗಾಂಧಿ ಕುಟುಂಬದಿಂದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಊಹಾಪೋಹ ಶುರುವಾಗಿದೆ. ಇದಲ್ಲದೆ ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋತ ನಂತರ ಅಮೇಥಿಯಲ್ಲಿ ರಾಹುಲ್ ಮತ್ತೆ ಸ್ರ್ಪಧಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಗಳಿವೆ.
|
6 |
+
ಉತ್ತರಪ್ರದೇಶದಲ್ಲಿ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಸ್ಥಾನಗಳನ್ನು ಈಗ ನಿರ್ಧರಿಸಲಾಗಿದ್ದು, ಕಾಂಗ್ರೆಸ್ ಈಗಾಗಲೇ 17 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸದಿದ್ದರೆ ಅದು ಕಾರ್ಯಕರ್ತರ ನೈತಿಕತೆಯ ಮೇಲೆ ಪರಿಣಾಮ ಬೀರುವುದು ಖಚಿತ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲಿ ಒಬ್ಬರು ಅಥವಾ ಇಬ್ಬರೂ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂ���ು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
|
7 |
+
ಗೆಲುವು ಅಥವಾ ಸೋಲು ತನ್ನದೇ ಆದ ಸ್ಥಾನವನ್ನು ಹೊಂದಬಹುದು. ಆದರೆ ಚುನಾವಣಾ ಕಣಕ್ಕೆ ಪ್ರವೇಶಿಸುವ ಮೂಲಕ, ಸಕಾರಾತ್ಮಕ ಸಂದೇಶವು ಖಂಡಿತವಾಗಿಯೂ ಕಾರ್ಯಕರ್ತರನ್ನು ತಲುಪುತ್ತದೆ ಎಂದು ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ
|
eesanje/url_47_136_1.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಭೂಮಿ ತಿರುಗುವಿಕೆಯನ್ನೇ ನಿಧಾನಗೊಳಿಸಿದ ಏರುತ್ತಿರುವ ತಾಪಮಾನ..!
|
2 |
+
ನವದೆಹಲಿ,ಮಾ.28-ಜಾಗತೀಕ ತಾಪಮಾನ ಏರಿಕೆಯಿಂದಾಗಿ ಭೂಮಿಯು ನಿಧಾನವಾಗಿ ತಿರುಗುತ್ತಿದೆ ಮತ್ತು ಈ ಬದಲಾವಣೆಯು ನಮ್ಮ ಗಡಿಯಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನೇಚರ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವರದಿ ಬಹಿರಂಗಗೊಂಡಿದೆ ಆದರೆ ಗಡಿಯಾರದ ಮೇಲೆ ಪರಿಣಾಮ ಬೀರುವುದು ಕೇವಲ ಒಂದು ಸೆಕೆಂಡ್ ಮಾತ್ರ ಹೀಗಾಗಿ ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ.
|
3 |
+
ಏರುತ್ತಿರುವ ತಾಪಮಾನವು ಧ್ರುವೀಯ ಮಂಜುಗಡ್ಡೆಯನ್ನು ಕರಗಿಸಲು ಕಾರಣವಾಗಿದೆ, ಇದರಿಂದಾಗಿ ಭೂಮಿಯು ಇತರರಿಗಿಂತ ಕಡಿಮೆ ವೇಗವಾಗಿ ತಿರುಗುತ್ತಿದೆ. ಇದು 2029 ರ ವೇಳೆಗೆ ನಮ್ಮ ಗಡಿಯಾರಗಳಿಂದ ಸೆಕೆಂಡ್ ಅನ್ನು ಕಳೆಯುವುದನ್ನು ಪರಿಗಣಿಸಲು ವಿಶ್ವ ಸಮಯಪಾಲಕರು ಕಾರಣವಾಗಬಹುದು ಎಂದು ಅಧ್ಯಯನವು ಹೇಳಿದೆ.
|
4 |
+
ಇದು ಕಂಪ್ಯೂಟರ್ ನೆಟ್ವರ್ಕ್ ಟೈಮಿಂಗ್ಗೆ ಅಭೂತಪೂರ್ವ ಸಮಸ್ಯೆಯನ್ನು ಉಂಟುಮಾಡುತ್ತದೆ ಮತ್ತು ಯುಟಿಸಿಯಲ್ಲಿ ಯೋಜಿಸಿರುವುದಕ್ಕಿಂತ ಮುಂಚೆಯೇ ಬದಲಾವಣೆಗಳನ್ನು ಮಾಡಬೇಕಾಗಬಹುದು ಎಂದು ಬರೆಯಲಾಗಿದೆ.
|
5 |
+
ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಸ್ಕ್ರಿಫ್ಸ್ ಇನ್ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯಲ್ಲಿ ಭೂ ಭೌತಶಾಸಜ್ಞರಾಗಿರುವ ಅಧ್ಯಯನದ ಲೇಖಕರಾದ ಡಂಕನ್ ಆಗ್ನ್ಯೂ ಅವರು, ಧ್ರುವಗಳಲ್ಲಿನ ಮಂಜುಗಡ್ಡೆ ಕರಗಿದಂತೆ, ಭೂಮಿಯ ದ್ರವ್ಯರಾಶಿಯು ಕೇಂದ್ರೀಕೃತವಾಗಿರುವ ಸ್ಥಳದಲ್ಲಿ ಅದು ಬದಲಾಗುತ್ತದೆ. ಬದಲಾವಣೆಯು ಗ್ರಹದ ಕೋನೀಯ ವೇಗದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
|
6 |
+
ಧ್ರುವೀಯ ಮಂಜುಗಡ್ಡೆ ಕರಗುತ್ತಿರುವುದರಿಂದ, ಭೂಮಿಯ ಸಮಭಾಜಕದ ಸುತ್ತಲಿನ ದ್ರವ್ಯರಾಶಿಯು ಹೆಚ್ಚುತ್ತಿದೆ, ಇದು ಗ್ರಹದ ತಿರುಗುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಅಂಟಾಕ್ರ್ಟಿಕಾ ಮತ್ತು ಗ್ರೀನ್ಲ್ಯಾಂಡ್ನಂತಹ ಸ್ಥಳಗಳಲ್ಲಿ ಘನೀಕರಿಸಿದ ನೀರನ್ನು ನೀವು ತೆಗೆದುಕೊಳ್ಳುತ್ತಿರುವಿರಿ ಮತ್ತು ಹೆಪ್ಪುಗಟ್ಟಿದ ನೀರು ಕರಗುತ್ತಿದೆ ಮತ್ತು ನೀವು ದ್ರವಗಳನ್ನು ಗ್ರಹದ ಇತರ ಸ್ಥಳಗಳಿಗೆ ವರ್ಗಾಯಿಸುತ್ತೀರಿ. ನೀರು ಹರಿಯುತ್ತದೆ. ಸಮಭಾಜಕದ ಕಡೆಗೆ ಎಂದು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆ-ï ಟೆಕ್ನಾಲಜಿಯಲ್ಲಿ ಜಿಯೋಫಿಸಿಕ್ಸ್ನ ಪ್ರಾಧ್ಯಾಪಕ ಥಾಮಸ್ ಹೆರಿಂಗ್ ಅವರು ತಿಳಿಸಿದ್ದಾರೆ.
|
7 |
+
ಇದು ಒಂದು ರೀತಿಯ ಪ್ರಭಾವಶಾಲಿಯಾಗಿದೆ, ನನಗೂ ಸಹ, ಭೂಮಿಯು ಎಷ್ಟು ವೇಗವಾಗಿ ತಿರುಗುತ್ತದೆ ಎಂಬುದನ್ನು ಅಳೆಯುವ ರೀತಿಯಲ್ಲಿ ಬದಲಾಯಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಅಭೂತಪೂರ್ವವಾದ ಸಂಗತಿಗಳು ಸಂಭವಿಸುತ್ತಿವೆ, ಆಗ್ನ್ಯೂ ಹೇಳಿದರು.
|
eesanje/url_47_136_10.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ರದ್ದು ; ಅಮಿತ್ ಶಾ
|
2 |
+
ನವದೆಹಲಿ,ಮಾ.27-ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಕೇಂದ್ರಾಡಳಿತ ಪ್ರದೇಶದಲ್ಲಿ ಸಶಸ್ತ್ರ ಪಡೆಗಳನ್ನು ಹಿಂತೆಗೆದುಕೊಳ್ಳಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಮಾತ್ರ ಬಿಡಲು ಸರ್ಕಾರವು ಯೋಜಿಸಿದೆ ಎಂದು ಶಾ ಹೇಳಿದರು.
|
3 |
+
ನಾವು ಸೈನ್ಯವನ್ನು ಹಿಂದೆಗೆದುಕೊಳ್ಳಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಮಾತ್ರ ಬಿಡಲು ಯೋಜಿಸಿದ್ದೇವೆ. ಮೊದಲು ಜಮ್ಮು ಮತ್ತು ಕಾಶ್ಮೀರ ಪೊಲೀಸರನ್ನು ನಂಬಲಾಗಲಿಲ್ಲ ಆದರೆ ಇಂದು ಅವರು ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
|
4 |
+
ವಿವಾದಾತ್ಮಕ ಕುರಿತು ಗೃಹ ಸಚಿವರು, ನಾವು ರದ್ದುಗೊಳಿಸುವ ಬಗ್ಗೆಯೂ ಯೋಚಿಸುತ್ತೇವೆ ಎಂದು ಹೇಳಿದರು. ಸಶಸ್ತ್ರ ಪಡೆಗಳ ಸಿಬ್ಬಂದಿಗೆ, ತೊಂದರೆಗೊಳಗಾದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ ಗಾಗಿ ಅವರು ಅಗತ್ಯವೆಂದು ಭಾವಿಸಿದರೆ ಹುಡುಕಲು, ಬಂಧಿಸಲು ಮತ್ತು ಗುಂಡು ಹಾರಿಸಲು ವ್ಯಾಪಕ ಅಧಿಕಾರವನ್ನು ನೀಡುತ್ತದೆ.
|
5 |
+
ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಾನೂನಿನಡಿಯಲ್ಲಿ ತೊಂದರೆಗೊಳಗಾದ ಪ್ರದೇಶ ಅಥವಾ ಜಿಲ್ಲೆಗೆ ಸೂಚನೆ ನೀಡಲಾಗುತ್ತದೆ. ಈ ಯೋಜನೆ ಕಣಿವೆಯಲ್ಲಿ ಜಾರಿಯಲ್ಲಿದ್ದರೂ ಈಶಾನ್ಯ ರಾಜ್ಯಗಳಲ್ಲಿ ಶೇ.70 ರಷ್ಟು ಪ್ರದೇಶಗಳಲ್ಲಿ ಎಎಫ್ ಎಸ್ಪಿಎ ತೆಗೆದುಹಾಕಲಾಗಿದೆ ಎಂದು ಶಾ ಈ ಹಿಂದೆ ಹೇಳಿದ್ದರು.
|
6 |
+
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿಷ್ಠಾಪಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಮತ್ತು ಅದನ್ನು ಈಡೇರಿಸಲಾಗುವುದು. ಆದರೆ, ಈ ಪ್ರಜಾಪ್ರಭುತ್ವವು ಕೇವಲ ಮೂರು ಕುಟುಂಬಗಳಿಗೆ ಸೀಮಿತವಾಗುವುದಿಲ್ಲ ಮತ್ತು ಜನರ ಪ್ರಜಾಪ್ರಭುತ್ವವಾಗಲಿದೆ, ಎಂದು ಅವರು ಹೇಳಿದರು. ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಯನ್ನು ಸೆಪ್ಟೆಂಬರ್ಗೆ ಮುನ್ನ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
|
7 |
+
ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಮೀಸಲಾತಿಯ ಸುತ್ತ ಉದ್ಭವಿಸಿರುವ ವಿಷಯಗಳ ಕುರಿತು, ಶಾ ಅವರು ಮೊದಲ ಬಾರಿಗೆ, ಜೆ-ಕೆ ಯ ಒಬಿಸಿಗಳಿಗೆ ಮೋದಿ ಸರ್ಕಾರದಿಂದ ಮೀಸಲಾತಿ ನೀಡಲಾಗಿದೆ ಮತ್ತು ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲಾಗಿದೆ ಎಂದು ಹೇಳಿದರು.
|
8 |
+
ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ನೀಡಲಾಗಿದೆ. ಎಸ್ಸಿ ಮತ್ತು ಎಸ್ಟಿಗಳಿಗೆ ನಾವು ಜಾಗ ನೀಡಿದ್ದೇವೆ. ಗುಜ್ಜರ್ ಮತ್ತು ಬಕರ್ವಾಲ್ಗಳ ಪಾಲನ್ನು ಕಡಿಮೆ ಮಾಡದೆ ಪಹಾಡಿಗಳಿಗೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ ಮತ್ತು ವಿಶೇಷ ನಿಬಂಧನೆಗಳನ್ನು ನೀಡಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡ ಜನರಿಗೆ ವಸತಿ ಕಲ್ಪಿಸಲು ಮಾಡಲಾಗಿದೆ, ಎಂದು ಅವರು ಹೇಳಿದರು. ಈ ಸವಲತ್ತುಗಳು ತಳ ಮಟ್ಟಕ್ಕೆ ತಲುಪುವಂತೆ ಮಾಡಲು ಕೇಂದ್ರ ನಿರ್ಧರಿಸಿದೆ ಎಂದರು.
|
eesanje/url_47_136_11.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಬಂಧನ ಪ್ರಶ್ನಿಸಿದ ಕೇಜ್ರಿವಾಲ್ ಮನವಿ ಉತ್ತರಿಸಲು ಕಾಲಾವಕಾಶ ಕೇಳಿದ ಇಡಿ
|
2 |
+
ನವದೆಹಲಿ, ಮಾ.27 (ಪಿಟಿಐ) :ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿರುವ ಮನವಿಗೆ ಉತ್ತರಿಸಲು ಸಮಯಾವಕಾಶ ನೀಡುವಂತೆ ಜಾರಿ ನಿರ್ದೇಶನಾಲಯ ಬುಧವಾರ ದೆಹಲಿ ಹೈಕೋರ್ಟ್ ಅನ್ನು ಕೇಳಿಕೊಂಡಿದೆ.
|
3 |
+
ಏಜೆನ್ಸಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು, ಬೃಹತ್ ಅರ್ಜಿಯನ್ನು ಮಂಗಳವಾರವಷ್ಟೇ ಅವರಿಗೆ ಸಲ್ಲಿಸಲಾಗಿದ್ದು, ತಮ್ಮ ನಿಲುವನ್ನು ದಾಖಲಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಎಎಪಿ ನಾಯಕನ ಪರ ವಾದ ಮಂಡಿಸಿದ ಹಿರಿಯ ವಕೀಲ ಎಎಂ ಸಂಗ್ವಿ , ಪ್ರತಿಕ್ರಿಯೆ ಸಲ್ಲಿಸಲು ಕೋರಿರುವುದು ವಿಳಂಬ ತಂತ್ರ ಎಂದು ಆರೋಪಿಸಿದರು.
|
4 |
+
ಬಂಧನದ ಅಡಿಪಾಯಕ್ಕೆ ಸವಾಲು ಇದೆ ಮತ್ತು ಹಲವಾರು ಪ್ರಜ್ವಲಿಸುವ ಸಮಸ್ಯೆಗಳು ಇವೆ, ಎರಡೂ ರೀತಿಯಲ್ಲಿ ಹೈಕೋರ್ಟ್ನಿಂದ ತಕ್ಷಣದ ನಿರ್ಧಾರದ ಅಗತ್ಯವಿದೆ ಎಂದು ಹಿರಿಯ ವಕೀಲರು ಹೇಳಿದರು.
|
5 |
+
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ, ಬಂಧನ ಮತ್ತು ನಂತರದ ಇಡಿ ರಿಮಾಂಡ್ ಖಾತೆಯಲ್ಲಿ ಅವರನ್ನು ತಕ್ಷಣ ಬಿಡುಗಡೆ ಮಾಡಲು ಕೋರಿದ್ದಾರೆ, ಅವರನ್ನು ಮಾರ್ಚ್ 21 ರಂದು ಬಂಧಿಸಲಾಯಿತು ಮತ್ತು ನಂತರ ದೆಹಲಿ ನ್ಯಾಯಾಲಯವು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿತು.
|
eesanje/url_47_136_12.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಚೀನಿಯರ ಬಂಧನ
|
2 |
+
ಸಿದ್ದಾರ್ಥನಗರ,ಮಾ.27-ಭಾರತ-ನೇಪಾಳ ಗಡಿಯಲ್ಲಿರುವ ಸಿದ್ಧಾರ್ಥನಗರದ ಕಕ್ರಾವಾ ಪೊಸ್ಟ್ ಮೂಲಕ ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಇಬ್ಬರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ. ಬಂದಿತರನ್ನು ಚೀನಾದ ಸಿಚುವಾನ್ ಮೂಲದ ಝೌ ಪುಲಿನ್ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಚೀನಾದ ಚಾಂಗ್ಕಿಂಗ್ ಮೂಲದ ಯುವಾನ್ ಯುಹಾನ್ ಎಂದು ಗುರುತಿಸಲಾಗಿದೆ.
|
3 |
+
ಎರಡು ಚೈನೀಸ್ ಪಾಸ್ಪೋರ್ಟ್ ಗಳು , ನೇಪಾಳಕ್ಕೆ ಪ್ರವಾಸಿ ವೀಸಾ, ಮೊಬೈಲ್ -ಫೋನ್ ಗಳು , ಎರಡು ಚೀನಾದ ಸಿಮ್ ಕಾರ್ಡ್ಗಳು ಮತ್ತು ಎರಡು ಸಣ್ಣ ಚೀಲಗಳಲ್ಲಿ ಒಟ್ಟು ಒಂಬತ್ತು ವಿವಿಧ ರೀತಿಯ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
|
4 |
+
ನಿನ್ನೆ ಇಬ್ಬರು ಚೀನೀ ಪ್ರಜೆಗಳನ್ನು (ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ) ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವಾಗ ಬಂಧಿಸಲಾಯಿತು. ವಿದೇಶಿಯರ ಕಾಯಿದೆ 1946 ರ ಸೆಕ್ಷನ್ 14 (ಎ) ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
|
5 |
+
ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಆರೋಪಿಗಳನ್ನು ಗೌರವಾನ್ವಿತ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಸಂಬಂಧಪಟ್ಟ ಅಧಕಾಧಿರಿಗಳು ಮಾಹಿತಿ ನೀಡಿದ್ದಾರೆ. ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
|
eesanje/url_47_136_2.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಅರುಣಾಚಲ ಪ್ರದೇಶ : ವಿಧಾನಸಭೆಗೆ ಐವರು ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆ
|
2 |
+
ಇಟಾನಗರ,ಮಾ.28-ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಡೆಡ್ಲೈನ್ ಇಂದು ಮುಕ್ತಾಯವಾಗಿದ್ದು, 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
|
3 |
+
ಚುನಾವಣಾ ಆಯೋಗ ಇನ್ನೂ ಅಧಿಕೃತವಾಗಿ ಐವರು ವಿಜಯಿ ಆಗಿದ್ದಾರೆ ಎಂದು ಘೋಷಣೆ ಮಾಡಿಲ್ಲ. ಹಲವು ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ದುರ್ಬಲಗೊಂಡಿದ್ದು ಈ ಬಾರಿ ಆಡಳಿತ ಸರ್ಕಾರ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಯಿದೆ.
|
4 |
+
ಕೇಂದ್ರ ಸಚಿವ ಕಿರಣ್ ರಿಜಿಜು ಎಕ್ಸ್ನಲ್ಲಿ ಪೋಸ್ಟ್ ಮಾಡಿ, ರಾಷ್ಟ್ರದ ಚಿತ್ತವನ್ನು ತೋರಿಸುವಲ್ಲಿ ಅರುಣಾಚಲ ಪ್ರದೇಶ ಮುಂದಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನ ಸಿಎಂ ನೇತೃತ್ವದಲ್ಲಿ ಬಿಜೆಪಿ 5 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಅಗಾಧ ಅಭಿವೃದ್ಧಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
|
eesanje/url_47_136_3.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಓವೈಸಿ ವಿರುದ್ಧ ಸಾನಿಯಾ ಮಿರ್ಜಾ..? : ಕಾಂಗ್ರೆಸ್ ಮಾಸ್ಟರ್ ಪ್ಲಾನ್
|
2 |
+
ಹೈದರಾಬಾದ್,ಮಾ.28-ಲೋಕಸಭಾ ಚುನಾವಣೆಯ ರಂಗು ಕಾವೇರಿದೆ. ಎತ್ತ ನೋಡಿದರತ್ತ ಎಲ್ಲಾ ಪಕ್ಷಗಳ ಪ್ರಚಾರದ ಕಾರ್ಯ ಭರದಿಂದ ನಡೆಯುತ್ತಿದೆ. ಒಂದೊಂದು ಲೋಕಸಭಾ ಕ್ಷೇತ್ರವೂ ಒಂದಿಲ್ಲೊಂದು ಕಾರಣಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆ. ಏತನ್ಮಧ್ಯೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸ್ರ್ಪಧಿಸುವ ಕ್ಷೇತ್ರ ಭಾರೀ ರಂಗು ಪಡೆಯುವ ಸಾಧ್ಯತೆ ಇದೆ.
|
3 |
+
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಮಣಿಸಲು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಪ್ರಯತ್ನ ಪಡುತ್ತಿವೆ. ಹೀಗಾಗಿ ಓವೈಸಿಯನ್ನು ಸೋಲಿಸಲು ದೇಶದ ಹಿರಿಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಕಣಕ್ಕಿಳಿಸಿ ಹೈದರಾಬಾದ್ನಲ್ಲಿ ನೇರಾನೇರಾ ಫೈಟ್ಗೆ ದಾರಿ ಮಾಡಿಕೊಡಲು ರಾಜಕೀಯ ಪಕ್ಷವೊಂದು ಪ್ಲಾನ್ ಮಾಡಿದೆ.
|
4 |
+
ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜನಪ್ರಿಯತೆಯ ಲಾಭ ಪಡೆದು ಓವೈಸಿಗೆ ಟಕ್ಕರ್ ನೀಡಲು ಪಕ್ಷವೊಂದು ಮುಂದಾಗಿದ್ದು, ಹೀಗಾಗಿ ಹೈದರಾಬಾದ್ನಲ್ಲಿ ಈ ಬಾರಿ ಕದನ ಕುತೂಹಲ ಸೃಷ್ಟಿಸುವ ಸಾಧ್ಯತೆ ಇದೆ. ಸಾನಿಯಾ ಮಿರ್ಜಾ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿಗೆ ನೇರ ಸ್ಪರ್ಧೆ ನೀಡುವ ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷವು ಸಾನಿಯಾ ಮಿರ್ಜಾ ಅವರ ಜನಪ್ರಿಯತೆಯ ಲಾಭವನ್ನು ಪಡೆಯಲು ಬಯಸಿದೆ.
|
5 |
+
ಸಾನಿಯಾ ಮಿರ್ಜಾ ಅವರನ್ನು ಹೈದರಾಬಾದ್ನಿಂದ ಅಸಾದುದ್ದೀನ್ ಓವೈಸಿ ವಿರುದ್ಧ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದು, ಇದಕ್ಕಾಗಿ ಸಾನಿಯಾ ಮಿರ್ಜಾ ಅವರನ್ನು ಒಪ್ಪಿಸಲು ಕಾಂಗ್ರೆಸ್ ನಾಯಕರು ಮನೆ ಬಾಗಿಲ ಕದ ತಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಸಾದುದ್ದೀನ್ ಓವೈಸಿ ಕಳೆದ ನಾಲ್ಕು ಚುನಾವಣೆಗಳಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಕಾರಣ ಹೈದರಾಬಾದ್ನಿಂದ ಸ್ಪರ್ಧೆ ಕುತೂಹಲ ಮೂಡಿಸಲಿದೆ.
|
6 |
+
ಇತ್ತೀಚೆಗಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದರಲ್ಲಿ ಲೋಕಸಭಾ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಸಭೆಯಲ್ಲಿ ಮೊಹಮ್ಮದ್ ಅಜರುದ್ದೀನ್ ಅವರು ಹೈದರಾಬಾದ್ನಿಂದ ಸಾನಿಯಾ ಮಿರ್ಜಾಗೆ ಟಿಕೆಟ್ ನೀಡಲು ಮುಂದಾಗಿದ್ದರು.
|
7 |
+
ಮೊಹಮ್ಮದ್ ಅಜರುದ್ದೀನ್ ಅವರು ಸಾನಿಯಾ ಮಿರ್ಜಾ ಅವರೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದ್ದಾರೆ. ಅಜರುದ್ದೀನ್ ಅವರ ಪುತ್ರ ಅಸಾದುದ್ದೀನ್ ಅವರು ಸಾನಿಯಾ ಮಿರ್ಜಾ ಅವರ ತಂಗಿ ಅನಮ್ ಮಿರ್ಜಾ ಅವರನ್ನು ವಿವಾಹವಾಗಿದ್ದಾರೆ. ಹೈದರಾಬಾದ್ನ ಲೋಕಸಭಾ ಸ್ಥಾನವು ವಿಶೇಷ ಪ್ರಾಮುಖ್ಯತೆ ಹೊಂದಿದೆ. ಈ ಕ್ಷೇತ್ರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯಮಯ ಜನಸಂಖ್ಯಾ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
|
8 |
+
ಈ ಸ್ಥಾನವು ಅನೇಕ ವರ್ಷಗಳಿಂದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ-ಮುಸ್ಲಿಮೀನ್ (ಎಐಎಂಐಎಂ) ನ ಭದ್ರಕೋಟೆಯಾಗಿದೆ. ಆದಾಗ್ಯೂ, ಇತ್ತೀಚೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆಯೂ ಉಂಟಾಗಿದೆ ಎಂದು ಸಾಬೀತಾಗಿದೆ, ಇಲ್ಲಿ ಕಾಂಗ್ರೆಸ್ ಮತ್ತು ಎಐಎಂಐಎಂ ಮಧ್ಯೆ ಪ್ರಬಲ ಸವಾಲು ಎಲ್ಲಾ ಚುನಾವಣೆಗಳಲ್ಲಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಹೈದರಾಬಾದ್ ಮೈದಾನ ಈ ಬಾರಿ ವಿಶೇಷ ಎನಿಸಿಕೊಂಡಿದೆ.
|
9 |
+
ಕಾಂಗ್ರೆಸ್ ಪಕ್ಷ ಸಾನಿಯಾ ಮಿರ್ಜಾ ಜನಪ್ರಿಯತೆಯ ಲಾಭ ಪಡೆಯಲು ಬಯಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾನಿಯಾ ಮಿರ್ಜಾ ಅವರು ಭಾರತ್ ರಾಷ್ಟ್ರ ಸಮಿತಿ ಅಡಿಯಲ್ಲಿ ಹೈದರಾಬಾದ್ ನಗರದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅವರು ಮಹಿಳೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಿನ್ನೆಲೆ ಇರುವ ಕಾರಣ, ಈ ವಿಷಯದಲ್ಲಿ ಅವರು ಕಾಂಗ್ರೆಸ್ ಆಹ್ವಾನವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಆದರೆ, ಸಾನಿಯಾ ಮಿರ್ಜಾ ಕುರಿತ ಚರ್ಚೆಯ ನಂತರ ಎಐಎಂಐಎಂ ನಾಯಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
|
10 |
+
ಸಾನಿಯಾ ಮಿರ್ಜಾ ಹೆಸರು ಕೇಳಿ ಬಂದ ಮೇಲೆ ನಗರದ ಜನರಲ್ಲಿ ಕುತೂಹಲ ಮೂಡಿದೆ. ನಿಸ್ಸಂಶಯವಾಗಿ, ಅವರು ಸಾಕಷ್ಟು ಜನಪ್ರಿಯರಾಗಿದ್ದಾರೆ. ಆದರೆ ಅವರು ರಾಜಕೀಯ ಕ್ಷೇತ್ರಕ್ಕೆ ಬಂದರೆ ಅದು ಅವರಿಗೆ ಹೊಸದು ಮತ್ತು ಅವರು ಅನುಭವಿಯೊಬ್ಬರನ್ನು ಎದುರಿಸಲಿದ್ದಾರೆ. ಆದ್ದರಿಂದ ಇದು ಸಾಕಷ್ಟು ಸವಾಲಾಗಬಹುದು.
|
eesanje/url_47_136_4.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಗಡಿ ಸಮಸ್ಯೆ ಕುರಿತಂತೆ ಭಾರತ-ಚೀನಾ ಮಹತ್ವದ ಚರ್ಚೆ
|
2 |
+
ನವದೆಹಲಿ, ಮಾ 28 (ಪಿಟಿಐ) :ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯಾಚರಣಾ ಕಾರ್ಯವಿಧಾನದ 29ನೇ ಸಭೆಯನ್ನು ನಡೆಸಲಾಯಿತು ಮತ್ತು ಎರಡು ಕಡೆಯವರು ಸಂಪೂರ್ಣ ನಿರ್ಲಿಪ್ತತೆಯನ್ನು ಸಾಧಿಸುವುದು ಮತ್ತು ಗಡಿ ಸಮಸ್ಯೆ ಪರಿಹರಿಸುವುದು ಹೇಗೆ ಎಂಬದು ಕುರಿತಂತೆ ಮಹತ್ವದ ಚರ್ಚೆ ನಡೆಸಿದರು.
|
3 |
+
ನಿನ್ನೆ ಬೀಜಿಂಗ್ನಲ್ಲಿ ನಡೆದ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪಶ್ಚಿಮ ವಲಯದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಸಂಪೂರ್ಣ ನಿರ್ಲಿಪ್ತತೆಯನ್ನು ಸಾಧಿಸುವುದು ಮತ್ತು ಉಳಿದ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂಬುದರ ಕುರಿತು ಉಭಯ ಕಡೆಯವರು ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
|
4 |
+
ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ಭಾರತೀಯ ನಿಯೋಗವನ್ನು ಮುನ್ನಡೆಸಿದರು. ಚೀನಾದ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವಿಭಾಗದ ಮಹಾನಿರ್ದೇಶಕರು ಚೀನಾದ ನಿಯೋಗವನ್ನು ಮುನ್ನಡೆಸಿದರು ಎಂದು ಹೇಳಿಕೆ ತಿಳಿಸಿದೆ.
|
5 |
+
ಮಧ್ಯಂತರದಲ್ಲಿ, ಎರಡೂ ಕಡೆಯವರು ರಾಜತಾಂತ್ರಿಕ ಮತ್ತು ಮಿಲಿಟರಿ ಚಾನೆಲ್ಗಳ ಮೂಲಕ ನಿಯಮಿತ ಸಂಪರ್ಕವನ್ನು ಕಾಪಾಡಿಕೊಳ್ಳಲು ಮತ್ತು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರೊಟೋಕಾಲ್ಗಳಿಗೆ ಅನುಗುಣವಾಗಿ ಗಡಿ ಪ್ರದೇಶಗಳಲ್ಲಿ ನೆಲದ ಮೇಲೆ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯುವ ಅಗತ್ಯತೆಯ ಬಗ್ಗೆ ಒಪ್ಪಿಕೊಂಡರು ಎಂದು ಅದು ಹೇಳಿದೆ. ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಂನ 28 ನೇ ಸಭೆಯು ಕಳೆದ ವರ್ಷ ನವೆಂಬರ್ 30 ರಂದು ನಡೆದಿತ್ತು.
|
eesanje/url_47_136_5.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಆತ್ಮಹತ್ಯೆಗೆ ಯತ್ನಿಸಿದ ಈರೋಡ್ ಸಂಸದ ಎ.ಗಣೇಶಮೂರ್ತಿ ಸಾವು
|
2 |
+
ಈರೋಡ್ ಮಾ 28 (ಪಿಟಿಐ) :ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ ಈರೋಡ್ ಕ್ಷೇತ್ರದ ಸಂಸದ ಎ.ಗಣೇಶಮೂರ್ತಿ( 77) ಬೆಳಗ್ಗೆ ಚಿಕಿತ್ಸೆ ಫಲಿಸದೆ ಕೊಯಮತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಮಾರ್ಚ್ 24 ರಂದು ಈರೋಡ್ನಲ್ಲಿನ ತಮ್ಮ ಮನೆಯಲ್ಲಿ ಕೆಲವು ವಿಷಯುಕ್ತ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಎ.ಗಣೇಶಮೂರ್ತಿ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
|
3 |
+
ಈರೋಡ್ ಟೌನ್ ಪೊಲೀಸರು ಈಗಾಗಲೇ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು ಈಗ ಆಸ್ಪತ್ರೆ ವೈದ್ಯಾಧಿಕಾರಿಗಳು ಶವವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಶವಪರೀಕ್ಷೆಗಾಗಿ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್ಪೋರ್ಟ್ (ಐಆರ್ಟಿ) ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತರಲಾಗಿದೆ.
|
4 |
+
ಮರಣೋತ್ತರ ಪರೀಕ್ಷೆ ಬಳಿಕ ಇಲ್ಲಿಂದ 15 ಕಿ.ಮೀ ದೂರದ ಕುಮಾರವಲಸು ಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ. ಗಣೇಶಮೂರ್ತಿ ಅವರು 2019 ರಲ್ಲಿ ಡಿಎಂಕೆ ಪಕದಷದಿಂದ ಸ್ರ್ಪಧಿಸಿ ಸಂಸದರಾಗಿ ಆಯ್ಕೆಯಾದರು. ಅವರು ಈ ಹಿಂದೆ 1998 ರಲ್ಲಿ ಪಳನಿ ಮತ್ತು 2009 ರಲ್ಲಿ ಈರೋಡ್ನಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು.ಗಣೇಶಮೂರ್ತಿ ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
|
5 |
+
ಘಟನೆ ಸಂಬಂಧ ಹಲವಾರು ಮಾತುಗಳು ಕೇಳಿಬರುತ್ತಿದೆ.ಈರೋಡ್ ಟೌನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎ.ಗಣೇಶಮೂರ್ತಿ ಅಕಾಲಿಕ ನಿಧನಕ್ಕೆ ಸಿಎಂ ಸ್ಟಾಲೀನ್ ,ಮಾಜಿ ಸಿಎಂ ಪಳನಿಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
|
eesanje/url_47_136_6.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
2ನೇ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ
|
2 |
+
ನವದೆಹಲಿ, ಮಾ.28 (ಪಿಟಿಐ)– ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ 12 ರಾಜ್ಯಗಳ 88 ಸಂಸದೀಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.
|
3 |
+
ಏಪ್ರಿಲ್ 26 ರಂದು ನಡೆಯಲಿರುವ ಸಂಸತ್ತಿನ ಎರಡನೇ ಹಂತದ ಚುನಾವಣೆಗೆ ಇಂದು ಮುಂಜಾನೆ ರಾಷ್ಟ್ರಪತಿಗಳ ಪರವಾಗಿ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕೊನೆಯ ದಿನವಾಗಿದೆ.
|
4 |
+
ಏಪ್ರಿಲ್ 5 ರಂದು, ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 6 ರಂದು ಪರಿಶೀಲನೆ ನಡೆಯಲಿದೆ.
|
5 |
+
ಈ ಹಂತದಲ್ಲಿ ಹೊರ ಮಣಿಪುರ ಲೋಕಸಭಾ ಕ್ಷೇತ್ರದ ಒಂದು ಭಾಗದಲ್ಲಿ ಮತದಾನವೂ ನಡೆಯಲಿದೆ. ಹೊರ ಮಣಿಪುರ ಕ್ಷೇತ್ರದ ಚುನಾವಣೆಯ ಅಧಿಸೂಚನೆಯನ್ನು ಮಾರ್ಚ್ 20 ರಂದು ಮೊದಲ ಹಂತದ ಗೆಜೆಟ್ ಅಧಿಸೂಚನೆಯಲ್ಲಿ ಸೇರಿಸಲಾಗಿದೆ.
|
6 |
+
ಹೊರ ಮಣಿಪುರ ಲೋಕಸಭಾ ಕ್ಷೇತ್ರದ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಕ್ಷೇತ್ರದ ಹದಿಮೂರು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.
|
7 |
+
ಅಸ್ಸಾಂ, ಬಿಹಾರ, ಛತ್ತೀಸ್ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹೊರ ಭಾಗದ ಹೊರತಾಗಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿವೆ.
|
eesanje/url_47_136_7.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಒಡಿಶಾದಲ್ಲಿ ಕಚ್ಚಾ ಬಾಂಬ್ ಸ್ಫೋಟ, ಇಬ್ಬರಿಗೆ ಗಾಯ
|
2 |
+
ಸಂಬಲ್ಪುರ, ಮಾ.27 (ಪಿಟಿಐ) :ಒಡಿಶಾದ ಸಂಬಲ್ಪುರ ನಗರದಲ್ಲಿ ಅಪರಿಚಿತರು ಕಚ್ಚಾ ಬಾಂಬ್ಗಳನ್ನು ಎಸೆದ ಪರಿಣಾಮ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಡರಾತ್ರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿರಬಾಬ ಚಕ್ ಎಂಬಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಕಚ್ಚಾ ಬಾಂಬ್ಗಳನ್ನು ಎಸೆದ ಪರಿಣಾಮ ವಾಹನದ ಬಳಿ ನಿಂತಿದ್ದ ಇಬ್ಬರಿಗೆ ಗಾಯಗಳಾಗಿವೆ.
|
3 |
+
ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ವಿವರವಾದ ತನಿಖೆ ನಡೆಯುತ್ತಿದೆ ಎಂದು ಸಂಬಲ್ಪುರ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಕುಮಾರ್ ಭಾಮೂ ಸುದ್ದಿಗಾರರಿಗೆ ತಿಳಿಸಿದ್ದಾರೆ.
|
4 |
+
ಸಂಬಲ್ಪುರ ಜಿಲ್ಲಾಧಿಕಾರಿ ಅಕ್ಷಯ್ ಸುನಿಲ್ ಅಗರ್ವಾಲ್ ಜನರು ಶಾಂತಿ ಕಾಪಾಡುವಂತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಭಯಪಡಬೇಡಿ ಮತ್ತು ಆಡಳಿತದೊಂದಿಗೆ ಸಹಕರಿಸಿ ಎಂದು ಕಲೆಕ್ಟರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
|
5 |
+
ಘಟನೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ ಮತ್ತು ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೋಟಾರ್ಸೈಕಲ್ನ ಮೇಲೆ ಬಾಂಬ್ ಬಿದ್ದಿದ್ದರಿಂದ ಸೀಟು ಸುಟ್ಟು ಕರಕಲಾಗಿದೆ.ಭಾಮೂ ಹಾಗೂ ಉತ್ತರ ವಲಯದ ಐಜಿ ಹಿಮಾಂಶುಕುಮಾರ್ ಲಾಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
|
6 |
+
ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳವನ್ನು ಸುತ್ತುವರಿಯಲಾಗಿದೆ ಮತ್ತು ಕೇಂದ್ರ ಪಡೆಗಳನ್ನು ಸಹ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಏಪ್ರಿಲ್ 2023 ರಲ್ಲಿ ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ನಗರವು ಕೋಮು ಘರ್ಷಣೆಗೆ ಸಾಕ್ಷಿಯಾಯಿತು. ಗಲಭೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವಾರು ಅಂಗಡಿಗಳು ಸುಟ್ಟು ಕರಕಲಾಗಿದ್ದವು.
|
eesanje/url_47_136_8.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಆರು ನಕ್ಸಲರ ಎನ್ಕೌಂಟರ್
|
2 |
+
ಬಿಜಾಪುರ, ಮಾ.27 (ಪಿಟಿಐ) :ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ಕೌಂಟರ್ ನಲ್ಲಿ ಮಹಿಳಾ ಕೇಡರ್ ಸೇರಿದಂತೆ ಆರು ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|
3 |
+
ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕುರಭಟ್ಟಿ ಮತ್ತು ಪುಸ್ಬಾಕ ಗ್ರಾಮಗಳ ಕಾಡಿನಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ರೇಂಜï) ಸುಂದರರಾಜ್ ಪಿಟಿಐಗೆ ತಿಳಿಸಿದರು.
|
4 |
+
ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್, ಸೆಂಟ್ರಲ್ ರಿಸರ್ವ್ ಪೊಲೀಸ್ -ಫೋರ್ಸ್ ಮತ್ತು ಅದರ ಗಣ್ಯ ಘಟಕ ಕಮಾಂಡೋ ಬೆಟಾಲಿಯನ್ -ಫಾರ್ ರೆಸಲ್ಯೂಟ್ ಆಕ್ಷನ್ಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
|
5 |
+
ಗುಂಡಿನ ಚಕಮಕಿ ನಿಲ್ಲಿಸಿದ ನಂತರ, ಮಹಿಳೆ ಸೇರಿದಂತೆ ಆರು ನಕ್ಸಲೀಯರ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು. ಬಿಜಾಪುರ ಜಿಲ್ಲೆಯು ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ
|
eesanje/url_47_136_9.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಸುಖ ಸಮೃದ್ಧಿಗಾಗಿ ಪುರುಷರು ಮಹಿಳೆ ವೇಷದಲ್ಲಿ ಕಾಮದೇವನನ್ನು ಪೂಜಿಸಬೇಕಂತೆ..!
|
2 |
+
ಕರ್ನೂಲ್, ಮಾ.27-ಕಾಮದೇವನನ್ನು ಪುರುಷರು ಮಹಿಳೆಯರ ವೇಷಭೂಷಣದಲ್ಲಿ ಪೂಜಿಸಿದರೆ ಅವರಿಗೆ ಸುಖ ಸಮೃದ್ಧಿ ಸಿಗುತ್ತದ್ದಂತೆ. ಏನಪ್ಪಾ ಇದು ಹೊಸ ಐಡಿಯಾ ಅಂದುಕೊಂಡೀರಾ…. ಇದು ಕೇವಲ ಐಡಿಯಾ ಅಲ್ಲಿ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಅದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದ ಜನರ ನಂಬಿಕೆ.
|
3 |
+
ಹೌದು ಈ ಗ್ರಾಮದ ಜನರು ಅನಾದಿ ಕಾಲದಿಂದಲೂ ಪ್ರತಿ ಹೋಳಿ ಹಬ್ಬದ ಸಂದರ್ಭದಲ್ಲಿ ಈ ವಿಶಿಷ್ಟ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.ಇಲ್ಲಿನ ಪುರುಷರು ಹೋಳಿ ಹಬ್ಬದ ದಿನ ಮಹಿಳೆಯರಂತೆ ಆಕರ್ಷಕವಾಗಿ ಸೀರೆ, ರವಿಕೆ ತೊಟ್ಟು ಒಡವೆ ಹಾಕಿಕೊಂಡು ಮಹಿಳೆಯರು ನಾಚುವಂತೆ ರೆಡಿಯಾಗಿ ಕಾಮದೇವನನ್ನು ವಿಧ ವಿಧವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ.
|
4 |
+
ಪುರುಷರು ಮಹಿಳೆಯರ ವೇಷಭೂಷಣದಲ್ಲಿ ರತಿ ಮನ್ಮಥ ದೇವರಿಗೆ ಗೌರವ ಸಲ್ಲಿಸುವ ದೃಶ್ಯವು ಸಂಪ್ರದಾಯ ಮತ್ತು ನಂಬಿಕೆಯ ನಿರಂತರ ಮನೋಭಾವವನ್ನು ಸಂಕೇತಿಸುತ್ತದೆ ಎಂದು ಅಲ್ಲಿನವರು ಹೇಳಿಕೊಂಡಿದ್ದಾರೆ.ಹೋಳಿ ಹಬ್ಬದಂದು ಕಾಮದೇವನನ್ನು ಪುರುಷರು ಮಹಿಳೆಯರ ವೇಷಭೂಷಣದಲ್ಲಿ ಪೂಜಿಸಿದರೆ, ಕುಟುಂಬವು ಸಂತೋಷ ಮತ್ತು ಸಮೃದ್ಧಿಯನ್ನು ಭಗವಂತನಿಂದ ಆಶೀರ್ವದಿಸುತ್ತದೆ ಎಂದು ಅಲ್ಲಿನ ಜನ ನಂಬಿದ್ದಾರೆ.
|
5 |
+
ಅನಾದಿ ಕಾಲದಿಂದಲೂ ಈ ವಿಶಿಷ್ಠ ಆಚರಣೆ ನಡೆಸಿಕೊಂಡು ಬರುತ್ತಿದ್ದೇವೆ ಆಧುನಿಕ ಕಾಲದಲ್ಲೂ ನಮ್ಮ ಸಂಪ್ರದಾಯಗಳನ್ನು ಬಿಟ್ಟುಕೊಡಲು ನಾವು ಸಿದ್ದರಿಲ್ಲ. ಹೀಗಾಗಿ ಈಗಲೂ ನಾವು ಹೋಳಿ ಹಬ್ಬದ ಸಮಯದಲ್ಲಿ ಕಾಮದೇವನನ್ನು ಪೂಜಿಸಿಕೊಂಡು ಬರುತ್ತಿದ್ದೇವೆ ಮುಂದಿನ ದಿನಗಳಲ್ಲೂ ನಮ್ಮ ಈ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಸಂತೆಕೂಡ್ಲೂರು ಗ್ರಾಮದ ಜನ.
|
eesanje/url_47_137_1.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಮದ್ರಾಸ್ ಐಐಟಿ ವಿದ್ಯಾರ್ಥಿ ಈಗ ಮೈಕ್ರೋಸಾಫ್ಟ್ ವಿಂಡೋಸ್ನ ಮುಖ್ಯಸ್ಥ
|
2 |
+
ನವದೆಹಲಿ,ಮಾ.27-ಐಐಟಿ ಮದ್ರಾಸಿನ ಹಳೆಯ ವಿದ್ಯಾರ್ಥಿಯಾಗಿರುವ ಪವನ್ ದಾವುಲೂರಿ ಅವರು ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೆಸ್ ನ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅವರು ಗೂಗಲ್ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲಾ ಅವರಂತಹ ಬಿಗ್ ಟೆಕ್ ಕಂಪನಿಯಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ.
|
3 |
+
ಕಳೆದ ವರ್ಷ ಅಮೆಜಾನ್ಗೆ ಸೇರಲು ಇಲಾಖೆಯನ್ನು ತೊರೆದ ದೀರ್ಘಕಾಲದ ಉತ್ಪನ್ನ ಮುಖ್ಯಸ್ಥ ಪನೋಸ್ ಪನಾಯ್ ಅವರಿಂದ ದಾವುಲುರಿ ಅಧಿಕಾರ ವಹಿಸಿಕೊಂಡರು. ಈ ಹಿಂದೆ, ದಾವುಲುರಿ ಸರ್ಫೆಸ್ ಗುಂಪನ್ನು ಮೇಲ್ವಿಚಾರಣೆ ಮಾಡಿದ್ದರೆ, ಮಿಖಾಯಿಲ್ ಪರಾಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಪರಖಿನ್ ಮತ್ತು ಪನಾಯ್ ಅವರು ಸಂಸ್ಥೆ ತೊರೆದ ನಂತರ ಅವರು ವಿಂಡೋಸ್ ಮತ್ತು ಸರ್ಫೆಸ್ ವಿಭಾಗಗಳನ್ನು ವಹಿಸಿಕೊಂಡಿದ್ದಾರೆ.
|
4 |
+
ಮೈಕ್ರೋಸಾಫ್ಟ್ ನ ಅನುಭವಗಳು ಮತ್ತು ಸಾಧನಗಳ ಮುಖ್ಯಸ್ಥ ರಾಜೇಶ್ ಝಾ ಅವರ ಆಂತರಿಕ ಜ್ಞಾಪಕವನ್ನು ದಿ ವರ್ಜ್ನಿಂದ ಪ್ರವೇಶಿಸಲಾಗಿದೆ, ಸಂಸ್ಥೆಯಲ್ಲಿನ ಹೊಸ ಶ್ರೇಣಿಯನ್ನು ವಿವರಿಸಿದೆ. ಈ ನಿರ್ಧಾರವು ಸಂಸ್ಥೆಯು ತನ್ನ ಸಾಧನಗಳು ಮತ್ತು ಅನುಭವಗಳನ್ನು ಅಐ ಯುಗದಲ್ಲಿ ನಿರ್ಮಿಸಲು ಸಮಗ್ರ ವಿಧಾನವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
|
5 |
+
ಈ ಬದಲಾವಣೆಯ ಭಾಗವಾಗಿ, ನಾವು ಅನುಭವಗಳು + ಸಾಧನಗಳು ವಿಭಾಗದ ಪ್ರಮುಖ ಭಾಗವಾಗಿ ವಿಂಡೋಸ್ ಅನುಭವಗಳು ಮತ್ತು ವಿಂಡೋಸ್ + ಸಾಧನಗಳ ತಂಡಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ಇದು ಸಿಲಿಕಾನ್, ಸಿಸ್ಟಮ್ಗಳನ್ನು ನಿರ್ಮಿಸಲು ಸಮಗ್ರ ವಿಧಾನವನ್ನು ತೆಗೆದುಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
|
6 |
+
ದಾವುಲುರಿ ಮೈಕ್ರೋಸಾಫ್ಟ್ ನಲ್ಲಿ 23 ವರ್ಷಗಳಿಂದ ಕೆಲಸ ಮಾಡಿದ್ದಾರೆ ಮತ್ತು ಸ-ಸರ್ಫೆಸ್ ಗಾಗಿ ಪೊ್ರಸೆಸರ್ಗಳನ್ನು ರಚಿಸಲು ಕ್ವಾಲ್ಕಾಮ್ ಮತ್ತು ಎಎಮ್ಡಿಯೊಂದಿಗೆ ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಗೂಗಲ್ ಡೀಪ್ಮೈಂಡ್ ಸಹ-ಸಂಸ್ಥಾಪಕ ಮತ್ತು ಮಾಜಿ ಇನ್ ಫ್ಲೇಕ್ಷನ್ ಎಐ ಸಿಇಒ ಮುಸ್ತಫ್ ಸುಲೇಮಾನ್ ಮೈಕ್ರೋಸಾಫ್ಟ್ ತನ್ನ ಹೊಸ ಎಐ ತಂಡದ ಸಿಇಒ ಆಗಿ ಸೇರಿದ ಕೆಲವು ದಿನಗಳ ನಂತರ ಮರುಸಂಘಟನೆಯ ಪ್ರಕಟಣೆ ಬಂದಿದೆ.
|
eesanje/url_47_137_10.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಪ್ರಧಾನಿ ಮೋದಿ ನಿವಾಸಕ್ಕೆ ಭದ್ರತೆ ಹೆಚ್ಚಳ
|
2 |
+
ನವದೆಹಲಿ,ಮಾ.26-ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಎಎಪಿ ಘೇರಾವ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಭದ್ರತೆಯನ್ನು ಹೆಚ್ಚಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಾವು ಭದ್ರತೆಯ ಪದರಗಳನ್ನು ಸ್ಥಾಪಿಸಿದ್ದೇವೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|
3 |
+
ಪ್ರಧಾನಿ ನಿವಾಸದ ಸುತ್ತಲೂ ಈಗಾಗಲೇ ಸೆಕ್ಷನ್ 144 (ಸಿಆರ್ಪಿಸಿ) ವಿಧಿಸಲಾಗಿದೆ ಮತ್ತು ಯಾರಿಗೂ ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ದೆಹಲಿ ಸಚಿವ ಗೋಪಾಲ್ ರೈ ಅವರು ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಇಂದು ಪ್ರಧಾನಿ ನಿವಾಸಕ್ಕೆ ಘೇರಾವ್ ಮಾಡುವ ಯೋಜನೆಯನ್ನು ಘೋಷಿಸಿದ್ದರು. ರಾಷ್ಟ್ರವ್ಯಾಪಿ ಮೆಗಾ ಪ್ರತಿಭಟನೆ ನಡೆಸಲಾಗುವುದು ಎಂದೂ ರೈ ಹೇಳಿದ್ದಾರೆ.
|
4 |
+
ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ರದ್ದುಪಡಿಸಿದ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಅವರು ಗುರುವಾರದವರೆಗೆ ಏಜೆನ್ಸಿಯ ಕಸ್ಟಡಿಯಲ್ಲಿದ್ದಾರೆ. ಎಎಪಿ ರಾಷ್ಟ್ರೀಯ ಸಂಚಾಲಕರು ಮದ್ಯದ ವ್ಯಾಪಾರಿಗಳಿಂದ ಲಾಭಕ್ಕಾಗಿ ಕಿಕ್ಬ್ಯಾಕ್ಗಳನ್ನು ಕೋರಿದ್ದಾರೆ ಎಂದು ಕೇಂದ್ರೀಯ ಸಂಸ್ಥೆ ಹೇಳಿಕೊಂಡಿದೆ.
|
5 |
+
ಕೇಜ್ರಿವಾಲ್ ಅವರು ಕೆಲ ಸಚಿವರು ಮತ್ತು ಇತರ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಈಗ ರದ್ದಾದ ನೀತಿಯಲ್ಲಿ ಪ್ರಮುಖ ಕಿಂಗ್ ಪಿನ್ ಮತ್ತು ಪಿತೂರಿದಾರರಾಗಿದ್ದಾರೆ ಎಂದು ಇಡಿ ಆರೋಪಿಸಿದೆ. ಕೇಜ್ರಿವಾಲ್ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರವು ರಾಜಕೀಯ ಉದ್ದೇಶಗಳಿಗಾಗಿ ತನಿಖಾ ಸಂಸ್ಥೆಗಳನ್ನುದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ, ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ವಾಹನಗಳ ಸುಗಮ ಸಂಚಾರಕ್ಕಾಗಿ ದೆಹಲಿ ಟ್ರಾಫಿಕ್ ಪೊಲೀಸರು ಏಳು ಡೈವರ್ಶನ್ ಪಾಯಿಂಟ್ಗಳನ್ನು ವ್ಯವಸ್ಥೆ ಮಾಡಿದ್ದಾರೆ.
|
eesanje/url_47_137_11.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಕೆ.ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
|
2 |
+
ನವದೆಹಲಿ,ಮಾ.26-ದೆಹಲಿ ಅಬಕಾರಿ ನೀತಿ ಪರಿಷ್ಕರಣೆ ಪ್ರಕರಣದಲ್ಲಿ ಜಾರಿನಿರ್ದೇಶನಾಲಯದಿಂದ ಬಂಧನಕ್ಕೊಳಪಟ್ಟಿರುವ ಬಿಆರ್ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರ ಬಂಧನದ ಅವಧಿಯನ್ನು ನ್ಯಾಯಾಲಯ ಏಪ್ರಿಲ್ 9ರವೆಗೆ ವಿಸ್ತರಿಸಿದೆ.
|
3 |
+
ಬಂಧನದ ಅವಧಿ ಮುಗಿದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಏಪ್ರಿಲ್ 1ರಂದು ವಿಚಾರಣೆ ನಡೆಸಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆಗೆ ಕವಿತಾ ಅವರನ್ನು ವಿಚಾರಣೆಗೊಳಪಡಿಸಲು ಅವಧಿಯನ್ನು ವಿಸ್ತರಿಸುವಂತೆ ಇಡಿ ಅಧಿಕಾರಿಗಳು ಮನವಿ ಮಾಡಿಕೊಂಡರು.
|
4 |
+
ಇದನ್ನು ಮನ್ನಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಏ.1ಕ್ಕೆ ನಿಗದಿಪಡಿಸಿ 9ರವರೆಗೂ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿತು. ಇದಕ್ಕೂ ಮುನ್ನ ಕವಿತಾ ಅವರ ಪರ ವಕೀಲರು, ನಮ್ಮ ಕಕ್ಷಿದಾರರ ಅಪ್ರಾಪ್ತ ಮಗುವಿನ ಪರೀಕ್ಷೆಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿದರು.
|
5 |
+
ರಿಮಾಂಡ್ ಅವಧಿಯಲ್ಲಿ ಇಡಿ ಬಿಆರ್ಎಸ್ ನಾಯಕಿ ಕವಿತಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ, ಅವರನ್ನು ವಿಚಾರಣೆಗೊಳಪಡಿಸಿದ್ದು, ಹಲವಾರು ವ್ಯಕ್ತಿಗಳು ಮತ್ತು ಡಿಜಿಟಲ್ ದಾಖಲೆಗಳೊಂದಿಗೆ ವಿಚಾರಣೆಯನ್ನು ನಡೆಸಲಾಗಿದೆ ಎಂದು ಇಡಿ ನ್ಯಾಯಾಲಯದ ಗಮನಕ್ಕೆ ತಂದಿತು. ಈ ಹಿಂದೆ ವಿಶೇಷ ನ್ಯಾಯಾೀಧಿಶ ಕಾವೇರಿ ಬವೇಜಾ ಅವರು ಇಡಿ ವಿಚಾರಣೆಗೆ ಅವಕಾಶ ನೀಡಿದ್ದರು.
|
6 |
+
ಕವಿತಾ ಬಂಧನ:ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಾವತಿಸಿದ ಆರೋಪ ಎದುರಿಸುತ್ತಿರುವ ಸೌತ್ ಗ್ರೂಪ್ನ ಪ್ರಮುಖ ಸದಸ್ಯೆ ಎಂದು ಇಡಿ ಆರೋಪಿಸಿದೆ.
|
7 |
+
ಇದಕ್ಕೂ ಮುನ್ನ ಕೋರ್ಟ್ ಹಾಲ್ಗೆ ಪ್ರವೇಶಿಸಿದ ಬಿಆರ್ಎಸ್ ಎಂಎಲ್ಸಿ, ಇದು ಅಕ್ರಮ ಹಣ ವರ್ಗಾವಣೆ ಪ್ರಕರಣವಲ್ಲ, ರಾಜಕೀಯ ಅಕ್ರಮ ಹಣ ವರ್ಗಾವಣೆ ಪ್ರಕರಣ. ಇದೊಂದು ಕಪೊಲಕಲ್ಪಿತ ಮತ್ತು ಸುಳ್ಳು ಪ್ರಕರಣ. ನಾವು ಸ್ವಚ್ಛವಾಗಿ ಹೊರಬರುತ್ತೇವೆ ಎಂದು ವಿಶ್ವಾಸದಿಂದ ಹೇಳಿದ್ದರು.
|
8 |
+
ಮಾರ್ಚ್ 23ರಂದು ಕವಿತಾ ಅವರ ಸೋದರಳಿಯ ಮೇಕಾ ಶ್ರೀ ಶರಣ್ ರಾವ್ ಮತ್ತು ಸೊಸೆ ಅಖಿಲಾ ಅವರ ಮನೆಗಳ ಮೇಲೆ ಇಡಿ ದಾಳಿ ನಡೆಸಿತ್ತು. ಮೂಲಗಳ ಪ್ರಕಾರ ಇಡಿ ಕವಿತಾ ಅವರ ಕುಟುಂಬ ಸದಸ್ಯರನ್ನೂ ಬಂಧಿಸುವ ಸಾಧ್ಯತೆಯಿದೆ.
|
eesanje/url_47_137_12.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಶಕ್ತಿ ಅನಾವರಣ
|
2 |
+
ನವದೆಹಲಿ,ಮಾ.26-ಅರಬ್ಬಿ ಸಮುದ್ರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸಮರಾಭ್ಯಾಸದಲ್ಲಿ ಎಂಟು ಜಲಾಂತರ್ಗಾಮಿ ನೌಕೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿ ರುವುದಕ್ಕೆ ಪಶ್ಚಿಮ ಸಮುದ್ರ ತೀರವು ಸಾಕ್ಷಿಯಾಗಿತ್ತು. ಇದು ತಮ್ಮ ಉನ್ನತ ಮಟ್ಟದ ಕಾರ್ಯಾಚರಣೆಯ ಸಿದ್ಧತೆಗೆ ಶಕ್ತಿ ತುಂಬಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
|
3 |
+
ವೆಸ್ಟರ್ನ್ ನೇವಲ್ ಕಮಾಂಡ್ನ ವೈಸ್ ಅಡ್ಮಿರಲ್ ಸಂಜಯ್ ಜೆ ಸಿಂಗ್ ಅವರು ಸಮುದ್ರದ ಹಲವಾರು ಘಟಕಗಳನ್ನು ಪ್ರಾರಂಭಿಸಿದರು ಮತ್ತು ವ್ಯಾಯಾಮದ ನಡವಳಿಕೆಯನ್ನು ಪರಿಶೀಲಿಸಿದರು. ಅವರ ವೃತ್ತಿಪರತೆ ಮತ್ತು ಅದ್ಭುತ ನಡವಳಿಕೆ ಗಮನ ಸೆಳೆಯಿತು ಎಂದು ನೌಕಾಪಡೆ ಎಕ್ಸ್ ಮಾಡಿದೆ.
|
4 |
+
ಪ್ರದರ್ಶನದ ಭಾಗವಾಗಿ, ವೈಸ್ ಅಡ್ಮಿರಲ್ ಅವರು ಜಲಾಂತರ್ಗಾಮಿ ನೌಕೆಯ ತಳಹದಿಯನ್ನು ವೀಕ್ಷಿಸಿದರು ಮತ್ತು ಜಲಾಂತರ್ಗಾಮಿ ಸಂಪ್ರದಾಯದ ಪ್ರಕಾರ ಸಮುದ ನೀರಿನ ರುಚಿ ನೋಡಿದರು ಎಂದು ಪೊಸ್ಟ್ನಲ್ಲಿ ಸೇರಿಸಲಾಗಿದೆ.
|
5 |
+
ಗಲ ಆ ಅಡೆನ್, ಅರೇಬಿಯನ್ ಸಮುದ್ರ ಮತ್ತು ಕೆಂಪು ಸಮುದ್ರದಲ್ಲಿ ಡ್ರೋನ್ ವಿರೋಧಿ, ಕ್ಷಿಪಣಿ ವಿರೋಧಿ ಮತ್ತು ಕಡಲ್ಗಳ್ಳತನ ವಿರೋಧಿ ದಾಳಿಯ ಕಾರ್ಯಾಚರಣೆಗಳ ವಿರುದ್ಧ ನೌಕಾಪಡೆಯ ನೂರು ದಿನಗಳ ಕಾರ್ಯಾಚರಣೆಯನ್ನು ಶನಿವಾರ ಪೂರ್ಣಗೊಳಿಸಿದ ಕುರಿತು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಹರಿ ಅಂತಹ ಘಟನೆಗಳನ್ನು ತಡೆಯಲು ನೌಕಾಪಡೆಯು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
|
6 |
+
ಈ ಪ್ರದೇಶದಲ್ಲಿನ ಅಸ್ವಸ್ಥತೆಯಿಂದ ಲಾಭ ಪಡೆಯಲು ಕಡಲ್ಗಳ್ಳತನವು ಒಂದು ಉದ್ಯಮವಾಗಿ ಮರುಕಳಿಸಿದೆ. ಅದನ್ನು ತಡೆಯಲು ನಾವು ದೃಢವಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ನೌಕಾಪಡೆಯ ಮುಖ್ಯಸ್ಥರು ಹೇಳಿದರು.
|
7 |
+
ಆಪರೇಷನ್ ಸಂಕಲ್ಪ ಸಣ್ಣ ಮತ್ತು ಕ್ಷಿಪ್ರ ಕಾರ್ಯಾಚರಣೆಗಳ ಪುರಾಣವನ್ನು ಮುರಿದಿದೆ ಮತ್ತು ಸಾಗರಗಳಲ್ಲಿ ಸುರಕ್ಷತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಕಾರ್ಯಾಚರಣೆಗಳ ಅಗತ್ಯವನ್ನು ಒತ್ತಿಹೇಳಿದೆ. ಕಾರ್ಯಾಚರಣೆಗಳ ವೇಗವು ಸಾಕಷ್ಟು ಹೆಚ್ಚಾಗಿದೆ ಮತ್ತು ನಾವು 11 ಜಲಾಂತರ್ಗಾಮಿ ನೌಕೆಗಳು ಮತ್ತು 30 ಯುದ್ಧನೌಕೆಗಳು ಸಾಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
|
eesanje/url_47_137_2.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಮೂರು ರಾಜ್ಯಗಳಿಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
|
2 |
+
ನವದೆಹಲಿ,ಮಾ.27-ಲೋಕಸಭೆ ಚುನಾವಣೆಯ ಮತ ಸಮರಕ್ಕೆ ದಿನಗಣನೆ ಆರಂಭವಾಗಿರುವಂತೆ ಬಿಜೆಪಿ ಮೂರು ರಾಜ್ಯಗಳಿಗೆ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂರು ಪಟ್ಟಿಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ರಾಜ್ಯ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದ್ದಾರೆ.
|
3 |
+
ಆಯಾ ರಾಜ್ಯಗಳ ಅನೇಕ ಪ್ರಮುಖ ಬಿಜೆಪಿ ನಾಯಕರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ. ವಿಶೇಷ ಅಂದ್ರೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮತ್ತು ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೂಡ ಸಿಗದ ಕೆಲವು ನಾಯಕರ ಹೆಸರು ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇದೆ.
|
4 |
+
ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ 25 ದಿನಗಳು ಬಾಕಿ ಉಳಿದಿರುವುದು ಗಮನಾರ್ಹ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ದೇಶದ ವಿವಿಧೆಡೆ ನಡೆಯಲಿದೆ. ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸ್ಟಾರ್ ಪ್ರಚಾರಕರ ಹೆಸರನ್ನು ಬಿಡುಗಡೆ ಮಾಡಲಾಗಿದ್ದು, ಬಿಹಾರದ ಪಟ್ಟಿ ಗಮನಿಸುವುದಾದರೆ, ಇಲ್ಲಿ ಅಶ್ವನಿ ಚೌಬೆ ಸ್ಟಾರ್ ಪ್ರಚಾರಕರಾಗಿದ್ದಾರೆ. ಚುನಾವಣೆಗೆ ಟಿಕೆಟ್ ಸಿಗದಿದ್ದರೂ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅನೇಕ ಹೆಸರುಗಳು ಸೇರಿದೆ. ಇನ್ನು ಇತರ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಸೈಯದ್ ಶಾನವಾಜ್ ಹುಸೇನ್ ಬಿಹಾರದಿಂದ ಸ್ಟಾರ್ ಪ್ರಚಾರಕರಾಗಿದ್ದಾರೆ.
|
5 |
+
ಪ್ರಮುಖ ಕೇಂದ್ರ ನಾಯಕರಲ್ಲದೆ, ಬಿಹಾರದ ನಾಯಕರಾದ ಸುಶೀಲ್ಕುಮಾರ್ ಮೋದಿ, ಮಂಗಲ್ ಪಾಂಡೆ, ಸಂಜಯ್ ಜೈಸ್ವಾಲ್, ರೇಣುದೇವಿ, ಸಾಮ್ರಾಟ್ ಚೌಧರಿ, ವಿಜಯ್ಕುಮಾರ್ ಸಿನ್ಹಾ, ಅನಿಲ್ ಶರ್ಮಾ, ನಿವೇದಿತಾ ಸಿಂಗ್ ಮತ್ತು ನಿಕ್ಕಿ ಹೆಂಬ್ರೆನ್ ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
|
6 |
+
ಕಳೆದ 10 ವರ್ಷಗಳಿಂದ ದೆಹಲಿ ಸಂಸದರಾಗಿರುವ ಭೋಜ್ಪುರಿ ನಟ ಮನೋಜ್ ತಿವಾರಿ ಕೂಡ ಬಿಹಾರದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಕೂಡ ಬಿಹಾರದಲ್ಲಿ ಸ್ಟಾರ್ ಪ್ರಚಾರಕರಾಗಿದ್ದಾರೆ.ಮಧ್ಯಪ್ರದೇಶದಿಂದ ಬಿಜೆಪಿ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ನರೋತ್ತಮ್ ಮಿಶ್ರಾ ಅವರ ಹೆಸರೂ ಸೇರಿದೆ. ಇದರೊಂದಿಗೆ ಇತರ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಮಧ್ಯಪ್ರದೇಶದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ.
|
7 |
+
ಮಧ್ಯಪ್ರದೇಶದಲ್ಲಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ವಿಶ್ವ ಶರ್ಮಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹ ಸ್ಟಾರ್ ಪ್ರಚಾರಕರು. ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದ ಸುರೇಶ್ ಪಚೌರಿ ಕೂಡ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿದ್ದಾರೆ.
|
8 |
+
ಮಿಥುನ್ ಚಕ್ರವರ್ತಿ-ಅಮಿತ್ ಮಾಳವೀಯ ಸ್ಟಾರ್ ಪ್ರಚಾರಕರುಬಿಜೆಪಿಗೆ ಸವಾಲಿನ ರಾಜ್ಯವಾಗಿರುವ ಪಶ್ಚಿಮ ಬಂಗಾಳದಲ್ಲಿ ಪಕ್ಷವು ತನ್ನ ಸಂಸದರ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದೆ. ಹೀಗಾಗಿ, ಬಿಜೆಪಿ ಬಿಡುಗಡೆ ಮಾಡಿರುವ ಪಶ್ಚಿಮ ಬಂಗಾಳದ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಚಲನಚಿತ್ರ ನಟ ಮಿಥುನ್ ಚಕ್ರವರ್ತಿ ಮತ್ತು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಹೆಸರೂ ಸೇರಿದೆ. ಪ್ರಧಾನಿ ಮೋದಿ ಮತ್ತು ಪ್ರಮುಖ ಕೇಂದ್ರ ನಾಯಕರಲ್ಲದೆ, ಶುವೇಂದು ಅಕಾರಿ, ದಿಲೀಪ್ ಘೋಷ್, ಸ್ವಪನ್ ದಾಸ್ ಗುಪ್ತಾ, ಮುಫುಜಾ ಖಾತೂನ್, ರುದ್ರನೀಲ್ ಘೋಷ್, ಅಮಿತಾಬ್ ಚಕ್ರವರ್ತಿ, ಸುಕುಮಾರ್ ರೈ, ಸಿದ್ಧಾರ್ಥ್ ಟಿರ್ಕಿ, ದೇವಶ್ರೀ ಚೌಧುರಿ ಸೇರಿದಂತೆ ಅನೇಕ ದೊಡ್ಡ ನಾಯಕರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಸ್ಟಾರ್ ಪ್ರಚಾರಕರಾಗಿದ್ದಾರೆ.
|
9 |
+
ಈ ಮೂರು ಪಟ್ಟಿಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ರಾಜ್ಯ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದ್ದಾರೆ.
|
eesanje/url_47_137_3.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ರಷ್ಯಾ ಸೇನೆಯಲ್ಲಿದ್ದ ಇಬ್ಬರು ಭಾರತೀಯರು ಶೀಘ್ರ ವಾಪಸ್ ; ವಿ.ಮುರಳೀಧರನ್
|
2 |
+
ತಿರುವನಂತಪುರಂ, ಮಾ 27 (ಪಿಟಿಐ) :ಖಾಸಗಿ ಏಜೆನ್ಸಿಗಳಿಂದ ರಷ್ಯಾದ ಸೇನೆಗೆ ನೇಮಕಗೊಂಡ ನಂತರ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಿದ ಕೇರಳ ಮೂಲದ ನಾಲ್ವರು ಯುವಕರ ಪೈಕಿ ಇಬ್ಬರು ಶೀಘ್ರದಲ್ಲೇ ತಮ್ಮ ಕುಟುಂಬಗಳಿಗೆ ಮರಳಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.
|
3 |
+
ಭಾರತೀಯ ರಾಯಭಾರ ಕಚೇರಿಯು ರಷ್ಯಾದಿಂದ ಮರಳಲು ಅವರ ಪ್ರಯಾಣದ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅವರು ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಟ್ಟಿಂಗಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಸುಧಿತ್ತಿರುವ ಮುರಳೀಧರನ್ ಸುದ್ದಿಗಾರರಿಗೆ ತಿಳಿಸಿದರು.
|
4 |
+
ರಾಜ್ಯದ ಉಳಿದ ಇಬ್ಬರು ನಿವಾಸಿಗಳಿಗೆ ಸಂಬಂಧಿಸಿದಂತೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅವರನ್ನೂ ಮರಳಿ ಕರೆತರಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.ಅವರು ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಖಚಿತವಾಗಿರಿ ಎಂದು ಅವರು ಹೇಳಿದರು.
|
5 |
+
ಮೂವರ ಸಂಬಂಧಿಕರ ಪ್ರಕಾರ, 2.5 ಲಕ್ಷ ರೂಪಾಯಿಗಳ ದೊಡ್ಡ ಸಂಬಳದ ಭರವಸೆಯೊಂದಿಗೆ ನೇಮಕಾತಿ ಏಜೆನ್ಸಿಯಿಂದ ರಷ್ಯಾಕ್ಕೆ ಕರೆದೊಯ್ದು ಯುದ್ಧಕ್ಕೆ ದೂಡಲಾಗಿದೆ ಎಂದು ಆರೋಪಿಸಲಾಗಿದೆ. ರಷ್ಯಾದಲ್ಲಿ ಲಾಭದಾಯಕ ಉದ್ಯೋಗಗಳ ಭರವಸೆಯೊಂದಿಗೆ ಭಾರತೀಯರನ್ನು ಯುದ್ಧ ಪೀಡಿತ ಉಕ್ರೇನ್ಗೆ ಹೋಗಲು ನೇಮಿಸಿದ ಏಜೆನ್ಸಿಗಳ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಮುರಳೀಧರನ್ ಈ ಹಿಂದೆ ಹೇಳಿದ್ದರು.
|
6 |
+
ಸಂಘರ್ಷ ವಲಯದಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅವರನ್ನು ನೇಮಕ ಮಾಡಿದ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
|
eesanje/url_47_137_4.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮ ಹಕ್ಕು ; ಪ್ರಕಾಶ್ ಜಾವಡೇಕರ್
|
2 |
+
ತಿರುವನಂತಪುರಂ, ಮಾ 27 (ಪಿಟಿಐ) :ನಾವು ಸಮಾಜವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ನೋಡುವುದಿಲ್ಲ ನಾವು ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಕೂಗುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ತಿರುಗೇಟು ನೀಡಿದ್ದಾರೆ.
|
3 |
+
ಸಿಎಎ ವಿರುದ್ಧ ಮಲಪ್ಪುರಂನಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯನ್ ಅವರು ಭಾರತ್ ಮಾತಾ ಕಿ ಜೈ ಮತ್ತು ಜೈ ಹಿಂದ್ ಎಂಬ ಘೋಷಣೆಗಳ ಸೃಷ್ಟಿಕರ್ತರು ಮುಸಲ್ಮಾನರು. ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಮುಸ್ಲಿಂ ಕವಿಯೊಬ್ಬರು ರಚಿಸಿದ್ದಾರೆ ಎಂದು ತಿಳಿದ ನಂತರ ಬಿಜೆಪಿಯವರು ಭಾರತ್ ಮಾತಾ ಕಿ ಜೈ ಘೋಷಣೆ ಕೂಗುತ್ತಾರೆಯೇ ಎಂದು ಕೇರಳ ಸಿಎಂ ಬಿಜೆಪಿಯನ್ನು ಪ್ರಶ್ನಿಸಿದ್ದರು.
|
4 |
+
ಪಿಣರಾಯಿ ನಾವು ಸಮಾಜವನ್ನು ಜಾತಿ, ಧರ್ಮ ಅಥವಾ ಧರ್ಮದ ಪರಿಧಿಯಿಂದ ನೋಡುವುದಿಲ್ಲ. ನಾವು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮಾಡುತ್ತೇವೆ. ನೀವು ಜಪ ಮಾಡುತ್ತೀರಾ? ಎಂದು ಪಕ್ಷದ ಕೇರಳ ಉಸ್ತುವಾರಿಯೂ ಆಗಿರುವ ಜಾವಡೇಕರ್ ಅವರು ಎಕ್ಸ್ ಮಾಡಿದ್ದಾರೆ.
|
5 |
+
ನಮಗೆ ದೇಶದಲ್ಲಿರುವ ಜನರೆಲ್ಲಾ ಒಂದೇ ಎಂಬ ಭಾವನೆಯಿಂದ ಬದುಕುತ್ತಿದ್ದೇವೆ ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಯಾರೇ ಸೃಷ್ಟಿಸಿರಲಿ ಅದು ನಮ್ಮ ತಾಯ್ನಾಡಿಗೆ ನೀಡಿರುವ ಗೌರವ ಅದನ್ನು ನಾವು ಗೌರವಿಸುತ್ತೇವೆ ಎಂದು ಅವರು ಹೇಳಿಕೊಂಡಿದ್ದಾರೆ.
|
eesanje/url_47_137_5.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಫೋನ್ನಲ್ಲಿ ಜೋರಾಗಿ ಮಾತಾಡಿದ ಮಗನನ್ನು ಕೊಂದ ತಂದೆ
|
2 |
+
ನಾಗ್ಪುರ, ಮಾ 27-ಫೋನ್ನಲ್ಲಿ ಜೋರಾಗಿ ಮಾತನಾಡುವ ವಿಚಾರದಲ್ಲಿ ನಡೆದು ಜಗಳದಲ್ಲಿ ತಂದೆಯೇ ತನ್ನ ಮಗನನ್ನು ಕೊಂದಿರುವ ಘಟನೆ ಪಿಪ್ರಾ ಗ್ರಾಮದಲ್ಲಿ ನಡೆದಿದೆ.ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಪಿಪ್ರಾ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಆರೋಪಿ ರಾಮರಾವ್ ಕಾಕ್ಡೆಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
|
3 |
+
ಕಳೆದ ರಾತ್ರಿ ಜೋರಾಗಿ ಫೋನ್ನಲ್ಲಿ ಮಾತನಾಡುತ್ತಿದ್ದ ಮಗ ಸೂರಜ್ಗೆ ಸ್ಟೀಲ್(22)ಗೆ ತಂದೆ ರಾಮರಾವ್ ಮೆತ್ತಗೆ ಮಾತಾಡು ಎಂದು ಗದರಿದ್ದಾರೆ.ಇದರಿಂದ ತಂದೆ -ಮಗನ ನಡುವೆ ವಾಗ್ವಾದ ಮಡೆದು ಅದು ಬಡಿದಾಟಗೆ ಹೋಗಿದೆ.ಈ ವೇಳೆ ರಾಡ್ನಿಂದ ಸೂರಜ್ ತಲೆಗೆ ಹೊಡೆದಾಗ ಆತ ಕುಸಿದುಬಿದ್ದಿದ್ದಾನೆ ನಂತರ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಎಂದು ಬೇಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. .
|
4 |
+
ಘಟನೆ ವೇಳೆ ತಂದೆ-ಮಗ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಖಲಿಸಲಾಗಿದ್ದು,ರಾಮರಾವ್ ಕಾಕ್ಡೆಯನ್ನು ಬಂಧಿಸಲಾಗಿದೆ,ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.
|